Skip to content

February 18, 2012

1

ಮುಳುಗದಿರು ಕರುವೇ!

by ನಿಲುಮೆ

-ಪುಷ್ಪರಾಜ್ ಚೌಟ

ಎರಡು ದಿನವಾಗಿಲ್ಲ ನಿನ್ನೆ ಕಣ್ಣು ಬಿಟ್ಟ ಕರು
ಅದರ ಕಿವಿಯೊಳಗೆ ಜಗದ ಗಾಳಿ ಸೋಕಿ
ಕೊರಳಿಗೆ ಕಟ್ಟಿದ ನಯವಾದ ಬಟ್ಟೆಯ
ಉರುಳು ಬಿಚ್ಚಿ ನೆಗೆದಾಡಿತ್ತು ಕೈಗೆ ಸಿಗದೇ

ಹುಡುಕ ಹೊರಟೆ ತಪ್ಪಿಸಿಕೊಂಡ ಮುಗ್ಧತೆಯ,
ಎಲ್ಲಿ ಓಡಿತೋ ಎಲ್ಲಿ ಜಾರಿತೋ ಕಣ್ಣು ತಪ್ಪಿಸಿ
ಮಳೆ ಬಿದ್ದ ಇಳೆಯ ನಗುವ ನಾಲಿಗೆಯ
ಹಸಿರು ಇಣುಕುವ ಹುಲ್ಲಿನ ಪರಿಚಯವಿಲ್ಲವದಕೆ!

ಮುಂಜಾನೆಯ ಹೊಂಗಿರಣದ ಹಿತವ ಉಂಡು
ಕಣ್ಣು ತಂಪುಗೊಳಿಸಲು ಬರದದಕೆ
ಅಲ್ಲಿರಲಿಲ್ಲ ಹುಲ್ಲ ಹೊದಿಕೆಯ ಮೈದಾನದೊಳಗೆ
ಕಣ್ಣರಳಿಸಿ ಸವಿಯ ಉಣಬರದದಕೆ!

ಬರಡು ಆಲದ ಬುಡದ ಬಾವಿಯಲಿ ಇಣುಕಿದೆ
ಇಲ್ಲ, ಸುಳಿವಿಲ್ಲ ಕಲ್ಲು ಮುಳ್ಳಿನ ಕಾಡು ದಾರಿಯಲೂ
ಎತ್ತ ಓಡಿದೆ? ಅದೆಷ್ಟೂ ದೂರ? ಒಂಟಿಯದು
ನಿನ್ನೆ ಹುಟ್ಟಿದಷ್ಟೇ ಇನ್ನೂ ಬಲಿತಿಲ್ಲ ಹಲ್ಲುಗಳು!

ಮೊನ್ನೆ ಗರ್ಭದೊಳಗಿತ್ತು, ಇಂದು ಜಗದೊಳಗೆ
ಹೊಟ್ಟೆಯೊಳಗೆ ಕಾಲು ಅಲ್ಲಾಡಿಸುತ್ತಿರಲಿಲ್ಲ
ಇಂದು ಕೈಕಾಲು ನೆಗೆದಿದೆ, ಬಾಲ ನಿಗುರಿದೆ
ಓಟ, ಹರಿವ ನದಿಯ ಮೇಲೆ, ನೀರು ಬಂಡೆಯೇ?
ಮುಳುಗದಿರಲಷ್ಟೇ ಸಾಕು, ಕರಗದಿರಲಿ ಉತ್ಸುಕ!

ಚಿತ್ರಕೃಪೆ: en.wikipedia.org

Read more from ಕವನಗಳು
1 Comment Post a comment
  1. Feb 24 2012

    ನಿಮ್ಮ ಕವನ ಚೆನ್ನಾಗಿದೆ. ಒಂದರ್ಥದಲ್ಲಿ ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು ಕವನವನ್ನು ನೆನಪಿಸುತ್ತದೆ

    Reply

Leave a comment

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Note: HTML is allowed. Your email address will never be published.

Subscribe to comments

Follow

Get every new post delivered to your Inbox.

Join 265 other followers