Skip to content

April 17, 2012

86

ದನ ತಿಂದ್ರೆ ತಪ್ಪು ಜನಾನ್ ಬೇಕಾದ್ರೆ ತಿವ್ಕೊಳ್ಳಿ! …

by ನಿಲುಮೆ

-ಅಶೋಕ್ ಕೆ.ಆರ್

ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾನಿಲಯದಲ್ಲಿ ಅದೇನೋ ಬೀಫ್ ಫೆಸ್ಟಿವಲ್ ಅಂತ ಮಾಡ್ತಾರಂತೆ. ದನದ ಮಾಂಸ ಮಾಡಿ ಹಬ್ಬವನ್ನಾಚರಿಸುತ್ತಾರಂತೆ. ‘ಊಟ ನಮ್ಮಿಷ್ಟದಂತಿರಬೇಕು’ ಎಂಬುದ್ದಿಶ್ಯದಿಂದ ಆರಂಭವಾದ ಹಬ್ಬವಂತೆ. ಈ ಸಂದರ್ಭದಲ್ಲಿ ಹಬ್ಬದ ಪರವಾಗಿದ್ದ ವಿದ್ಯಾರ್ಥಿಯೊಬ್ಬನಿಗೆ ಚೂರಿ ಇರಿತವಾಗಿರುವ ಸುದ್ದಿ ಬಂದಿದೆ. ದನದ ರಕ್ಷಕರು ಜನರನ್ನು ಭಕ್ಷಿಸುತ್ತಿರುವ ಕಥೆಯಿದು!
          ಭಾರತದಲ್ಲಿ ಗೋಮಾಂಸ ಸೇವನೆಯ ಬಗ್ಗೆ ಇರುವ ಇತಿಹಾಸ ಆಸಕ್ತಿಕರವಾಗಿದೆ. ಧರ್ಮದ ಇತಿಹಾಸಕಾರರ ಲೇಖನಗಳ ಪ್ರಕಾರ ಸನಾತನ ಹಿಂದೂ ಧರ್ಮದಲ್ಲಿ ಬ್ರಾಹ್ಮಣರಲ್ಲೂ ಮಾಂಸ ಸೇವನೆ ಸಾಮಾನ್ಯವಾಗಿತ್ತು. ಗೋಮಾಂಸವೂ ಅದಕ್ಕೆ ಹೊರತಾಗಿರಲಿಲ್ಲ (ಇತ್ತೀಚೆಗೆ ಬಲಪಂಥೀಯತೆಯ ಪಟ್ಟ ಹೊತ್ತಿರುವ ಎಸ್.ಎಲ್. ಭೈರಪ್ಪನವರ ಉತ್ತಮ ಕೃತಿಗಳಲ್ಲೊಂದಾದ ‘ಪರ್ವ’ದಲ್ಲೂ ಗೋಮಾಂಸ ಸೇವಿಸುವ ಹಿಂದೂಗಳಿದ್ದಾರೆ). ಹಿಂದೂ ಧರ್ಮದಲ್ಲಿ ಗೋಮಾಂಸ ಸೇವನೆಗೆ ವಿರೋಧ ವ್ಯಕ್ತವಾಗಿ ನಿಷೇಧಕ್ಕೊಳಗಾಗಿದ್ದು ಬುದ್ಧ ಧರ್ಮದಿಂದ! ಅಹಿಂಸಾ ತತ್ವವನ್ನು ಭೋದಿಸುವ ಬುದ್ಧ ಧರ್ಮ ಹೆಚ್ಚೆಚ್ಚು ಪ್ರಚಲಿತಗೊಳ್ಳುತ್ತಿದ್ದಂತೆ ಗಾಬರಿಗೊಳಗಾದ ಹಿಂದೂ ಪಂಡಿತರು ಮಾಂಸ ಸೇವನೆ ನಿಷೇಧಿಸುವ ತೀರ್ಮಾನ ಕೈಗೊಳ್ಳುತ್ತಾರೆ. ಮಾಂಸದ ಸವಿಯಾದ ರುಚಿಯನ್ನುಂಡವರು ಅಷ್ಟು ಸುಲಭವಾಗಿ ಬಿಟ್ಟಾರೆಯೇ?! ಬ್ರಾಹ್ಮಣರು ಎಲ್ಲ ಮಾಂಸ ತೊರೆದು ಉಳಿದ ಕೆಲವರು ಗೋಮಾಂಸ ತೊರೆಯುತ್ತಾರೆ. ಹಿಂದೂ ಧರ್ಮದಿಂದ ಶೋಷಣೆಯನ್ನಷ್ಟೇ ಪಡೆದುಕೊಂಡಿದ್ದ ಬಹಳಷ್ಟು ಸಮುದಾಯಗಳು ಯಾವ ಮಾಂಸ ಸೇವನೆಯನ್ನೂ ತೊರೆಯುವುದಿಲ್ಲ.
ಗೋಸಂತತಿ ಪೂಜ್ಯನೀಯವೇ?
          ಹೌದು ಪೂಜ್ಯನೀಯ. ಕೃಷಿಯೇ ಮೂಲಕಸುಬಾಗಿದ್ದ ಭಾರತದಲ್ಲಿ ಗೋವು ದೇವರ ಸ್ಥಾನ ಪಡೆದಿದ್ದರಲ್ಲಿ ಅಚ್ಚರಿಯಿಲ್ಲ. ವ್ಯವಸಾಯಕ್ಕೆ, ಹಾಲಿಗೆ, ಗೊಬ್ಬರಕ್ಕೆ ಉಪಯೋಗಕ್ಕೆ ಬರುತ್ತಿದ್ದ ಗೋವು ಕಾಮಧೇನುವೇ ಸರಿ. ಅದರ ಬಗ್ಗೆ ಎರಡು ಮಾತಿಲ್ಲ. ಆದರೆ ಇವುಗಳನ್ನೇ ನೆಪವಾಗಿಟ್ಟುಕೊಂಡು ಇವತ್ತಿನ ಸಾಮಾಜಿಕ ಪರಿಸರದ ಅಧ್ಯಯನ ನಡೆಸದೆ ಗೋಹತ್ಯೆ ನಿಷೇಧ ಮಸೂದೆಯನ್ನು ಜಾರಿಗೆ ತರುವಲ್ಲಿ ಬಹಳಷ್ಟು ರಾಜ್ಯ ಸರ್ಕಾರಗಳು ಆಸಕ್ತಿ ತೋರುತ್ತಿರುವುದು ಎಷ್ಟರಮಟ್ಟಿಗೆ ಸರಿ? ಈ ಮಸೂದೆಯನ್ನು ಬೆಂಬಲಿಗರಲ್ಲಿ ವಿದ್ಯಾವಂತರು ಅದರಲ್ಲೂ ನಗರವಾಸಿಗಳು ಮುಂದಿದ್ದಾರೆ. ನಗರಗಳಲ್ಲಿ ಸೆಗಣಿ ಕಂಡರೆ ಮೂಗು ಮುರಿಯುವ, ಹಸುವನ್ನೆಂದಿಗೂ ಸಾಕಿ ಅಭ್ಯಾಸವಿಲ್ಲದ, ಪ್ಯಾಕೆಟ್ ಹಾಲನ್ನವಲಂಭಿಸಿದ ನಾವುಗಳು ಗೋಹತ್ಯೆ ನಿಷೇಧದ ಪರವಾಗಿ ಮಾತನಾಡುವುದು ಅಪಹಾಸ್ಯದ ಸಂಗತಿಯಲ್ಲವೇ?
          ನಗರೀಕರಣದ ಫಲವಾಗಿ ಹಳ್ಳಿಯಲ್ಲಿರುವವರ ಸಂಖ್ಯೆಯೇ ಕ್ಷೀಣಿಸುತ್ತಿದೆ. ಇನ್ನು ಹಸು, ಎತ್ತು ಸಾಕುವವರ ಸಂಖ್ಯೆಯಂತೂ ಮತ್ತಷ್ಟು ಕಡಿಮೆ. ವ್ಯವಸಾಯಕ್ಕಿಂತ ಹೆಚ್ಚಾಗಿ ಹಾಲಿಗಾಗಿ ಹಸುವನ್ನು ಸಾಕುವವರ ಸಂಖ್ಯೆ ಹೆಚ್ಚಿದೆ. ಒಂದೆರಡು ಹಸುಗಳನ್ನು ಸಾಕಿ ಹಾಲು ಮಾರಿ ಜೀವನೋಪಾಯ ನಡೆಸುವ ವ್ಯಕ್ತಿಗೆ “ಹಸುವಿಗೆ ವಯಸ್ಸಾದರೂ ಹಾಲು ಕೊಡದಿದ್ದರೂ ನೀನದನ್ನು ಸಾಕಲೇಬೇಕು. ಆ ಮೂಲಕ ಹಿಂದೂ ಧರ್ಮದ ಉಳಿವಿಗೆ ಕಾರಣಕರ್ತನಾಗಬೇಕು. ಅಪ್ಪಿತಪ್ಪಿ ಮಾಂಸಕ್ಕೋಸ್ಕರ ದುಡ್ಡಿಗೋಸ್ಕರ ಮಾರಿದರೆ ಜೈಲಿಗಾಗ್ತೀವಿ ನೋಡು” ಎಂದು ಹೇಳುವುದು ಕ್ರೌರ್ಯವಲ್ಲವೇ?
          ವಯಸ್ಸಾದ ಹಸುಗಳನ್ನು ಮಾಂಸಕ್ಕಾಗಿ ಸಾಯಿಸಿದರೆ ಏನು ತಪ್ಪು? ಎಂದು ಕೇಳಿದಾಕ್ಷಣ ಗೋಹತ್ಯೆ ವಿರೋಧಿಗಳು ಅಕಟಕಟಾ ಎಂದು ಮುರಕೊಂಡು ಬೀಳುತ್ತಾರೆ. “ವಯಸ್ಸಾಯಿತು ಅಂತ ನಿಮ್ಮ ತಂದೆತಾಯಿಯನ್ನೂ ಸಾಯಿಸಿಬಿಟ್ತೀರೇನ್ರೀ?” ಅನ್ನೋ ಅಸಂಬದ್ಧ ಪ್ರಶ್ನೆ ಕೇಳ್ತಾರೆ. ಹಸು ಸಾಕೋದು ವ್ಯವಹಾರಿಕ, ತಂದೆ ತಾಯಿ ವ್ಯಾಪಾರದ ವಸ್ತುಗಳಲ್ಲ ಅನ್ನೋದು ಅವರಿಗೆ ತಿಳಿಯೋದೇ ಇಲ್ಲವೇ? ಕೃಷಿಯಿಂದ ನಾವೆಲ್ಲ ವಿಮುಖರಾಗಿರುವ ಈ ಹೊತ್ತಿನಲ್ಲಿ ಇಂಥ ಕಾಯ್ದೆಗಳಿಂದ ಇರೋ ಚೂರೂ ಪಾರೂ ಕೃಷಿಕರನ್ನೂ ಅಲ್ಲಿಂದ ಓಡಿಸುತ್ತಿದ್ದೀವಷ್ಟೇ.
          ಬರ ಬಿದ್ದಿರುವ ಉತ್ತರ ಕರ್ನಾಟಕದಲ್ಲಿ ಹಾಲು ಕೊಡುವ ಹಸುಗಳಿಗೇ ಮೇವು ಸಿಗುವುದು ದುಸ್ತರ. ಇನ್ನು ಧರ್ಮ ಸಂರಕ್ಷಣೆಯ ಹೆಸರಿನಲ್ಲಿ ಹಸುಗಳನ್ನು ಮಾರಲೂ ಆಗದೆ ಮೇವು ದೊರಕಿಸಲೂ ಆಗದೆ ದನ ಮತ್ತು ಜನ ಒಟ್ಟಿಗೆ ಉಪವಾಸ ಬೀಳಬೇಕೆ? ಭಾರತದಲ್ಲಿ ಮಾಂಸಕ್ಕಾಗಿ ಯಾರೂ ಹಸುಗಳನ್ನು ಸಾಕಿ ಬೆಳೆಸುವುದಿಲ್ಲ. ವಯಸ್ಸಾದ ದನಗಳನ್ನು ಸಾಕುವುದು ಕಷ್ಟವೆನ್ನಿಸಿದಾಗ ಮಾರುತ್ತಾರಷ್ಟೇ. ಅವರಿಗೂ ತಮ್ಮ ಜಾನುವಾರುಗಳೊಂದಿಗೆ ಭಾವನಾತ್ಮಕ ಸಂಬಂಧಗಳಿದೆ. ಭಾವನೆ ಮತ್ತು ಜೀವನದ ಪ್ರಶ್ನೆ ಬಂದಾಗ ಅವರು ಯಾವುದನ್ನು ಆರಿಸಿಕೊಳ್ಳಬೇಕು?
          ನಾಳೆ ಒಬ್ಬ ಕಟ್ಟರ್ ಮುಸ್ಲಿಮ್ ಅಧಿಕಾರವಿಡಿದು ಹಂದಿ ಮಾಂಸ ನಿಷೇಧಿಸಬಹುದು ಅಥವಾ ಒಬ್ಬ ಕಟ್ಟರ್ ಬ್ರಾಹ್ಮಣನೋ ಲಿಂಗಾಯಿತನೋ ಅಧಿಕಾರಕ್ಕೆ ಬಂದು ಎಲ್ಲ ಮಾಂಸ ನಿಷೇಧಿಸುವ ಕಾನೂನು ಮಾಡಬಹುದು ಅಥವಾ ಕಟ್ಟರ್ ಮಾಂಸಪ್ರಿಯನೊಬ್ಬ ಎಲ್ಲರೂ ಎಲ್ಲ ಮಾಂಸವನ್ನೂ ಸೇವಿಸಲೇಬೇಕು, ಇಲ್ಲವಾದರೆ ಶಿಕ್ಷಿಸುತ್ತೇವೆ ಎಂಬ ಕಾನೂನು ಮಾಡಿಬಿಡಬಹುದು. ಅವುಗಳನ್ನೂ ಒಪ್ಪಿಕೊಳ್ಳಬೇಕಾ?
          ಇವೆಲ್ಲ ಅತ್ಲಾಗಿರಲಿ ಬಿಡಿ. ನಮ್ಮ ಮನೆಯಲ್ಲಿ ಕೋಳಿ, ಕುರಿ, ಮೀನು ಮಾತ್ರ ಬೇಯಿಸೋದು. ದನದ ಮಾಂಸದ ನಿಷೇಧದಿಂದಾಗಿ ಕುರಿ ರೇಟು ಮುನ್ನೂರು ರುಪಾಯಿ ದಾಟಿದೆ. ನಮ್ಮಂಥೋರಿಗೇನಾದ್ರೂ ಸಬ್ಸಿಡಿ ಕೊಡ್ತಾರಾ ಈ ಧರ್ಮ ರಕ್ಷಕರು?!!
**************
coloringpages7.com
About these ads
86 Comments Post a comment
  1. sandeepnilume
    Apr 17 2012

    ಪ್ಯಾಕೆಟ್ ಹಾಲನ್ನವಲಂಭಿಸಿದ ನಾವುಗಳು ಗೋಹತ್ಯೆ ನಿಷೇಧದ ಪರವಾಗಿ ಮಾತನಾಡುವುದು ಅಪಹಾಸ್ಯದ ಸಂಗತಿಯಲ್ಲವೇ?
    **********************************************
    hasu, yemme halanne pocket nalli haaki nagaradhalli maaruvudhu embudu nimage thiladilla ansuthe.. :P

    nimma ee Article bahala haasyaspada aagu baalishavaagide..

    Reply
    • Apr 17 2012

      ಸಂದೀಪ್ ನಿಲುಮೆಯವರ ಅಭಿಪ್ರಾಯವನ್ನು ಒಪ್ಪುತ್ತೀನಿ… ಲೇಖನ ಕೊಂಚ ಬಾಲಿಶವಾಗಿದೆಯೆಂದು ನನಗೇ ಅನ್ನಿಸಿದೆ! ಆತುರದಲ್ಲಿ ಬರೆದ ಲೇಖನ. ಬಾಲಿಶ ಅಂಶಗಳನ್ನು ಮುಂದೆ ಖಂಡಿತ ತಿದ್ಕೋತೀನಿ

      Reply
  2. Ajay
    Apr 17 2012

    “ನಗರಗಳಲ್ಲಿ ಸೆಗಣಿ ಕಂಡರೆ ಮೂಗು ಮುರಿಯುವ, ಹಸುವನ್ನೆಂದಿಗೂ ಸಾಕಿ ಅಭ್ಯಾಸವಿಲ್ಲದ, ಪ್ಯಾಕೆಟ್ ಹಾಲನ್ನವಲಂಭಿಸಿದ ನಾವುಗಳು ಗೋಹತ್ಯೆ ನಿಷೇಧದ ಪರವಾಗಿ ಮಾತನಾಡುವುದು ಅಪಹಾಸ್ಯದ ಸಂಗತಿಯಲ್ಲವೇ?”

    ಗೋಹತ್ಯೆ ನಿಷೇದದ ಪರವಾಗಿರುವವರು ಸಗಣಿ ತುಳ್ಕಂಡೇ ಓಡಾಡಬೇಕು, ಹಸು ಸಾಕಿರಲೇ ಬೇಕು, ಹಸು ಕೆಚ್ಚಲಿಂದಲೇ ಹಾಲು ಕುಡಿದಿರಬೇಕು ಅಂತ ಏನಾದ್ರೂ ಇದೆಯಾ? ಹಸು ಹಾಲನ್ನೇ ಪ್ಯಾಕೆಟ್ ನಲ್ಲಿ ತುಂಬಿಸೋದಲ್ವಾ? ಪರ್ವದಲ್ಲಿ ಮಾಂಸ ತಿನ್ನೋರಿದ್ರೆ ಅದಕ್ಕೇನಂತೆ? ಪರ್ವ ಮಹಾಭಾರತದ ಮರುಸೃಷ್ಟಿ ಅಂತ ಲೇಖಕರು ಬರೆದಿರೋದು. ಆವಾಗ ವರ್ಣಪದ್ಧತಿ ಇತ್ತು ಅಂತ ಈಗ್ಲೂ ಒಪ್ಕೋತೀರಾ? ಅಷ್ಟಕ್ಕೂ ಗೋಹತ್ಯೆ ನಿಷೇದ ಕಾನೂನಿನಲ್ಲಿ ‘ವಯಸ್ಸಾದ’ ರಾಸುಗಳ ಹತ್ಯೆಗೆ ಅನುಮತಿ ಇರುತ್ತದೆ. ವಿಶ್ವವಿದ್ಯಾಲಯದಂತಹ ಜಾಗದಲ್ಲಿ ದನದ ಮಾಂಸ ತಿನ್ನುವ ಹಬ್ಬ ಆಚರಿಸುವ ಅಗತ್ಯವೇನು? ಆಹಾರ ಪದ್ಧತಿ ವೈಯಕ್ತಿಕ ಆಯ್ಕೆ, ಹಕ್ಕು ಅಂದಮೇಲೆ ಅಲ್ಲಿ ‘ಆಚರಣೆ’ ಮಾಡುವ ಕೆಲಸ ಏಕೆ ನಡೆಯಬೇಕು?

    Reply
    • Apr 17 2012

      ಅಜಯ್ ರವರು ಹಕ್ಕು ಮತ್ತು ಆಚರಣೆಯ ಬಗ್ಗೆ ಮಾತನಾಡುತ್ತಿದ್ದಾರೆ! ಆ ವಿಶ್ವವಿದ್ಯಾಲಯದಲ್ಲಿ ಸಸ್ಯಾಹಾರ ಊಟವನ್ನು ಕಡ್ಡಾಯ ಮಾಡಿದ ಕಾರಣದಿಂದಲೇ ಈ ಆಚರಣೆ ಜಾರಿಗೆ ಬಂದಿದೆ ಎನ್ನುತ್ತವೆ ಪತ್ರಿಕಾ ವರದಿಗಳು.ವಯಸ್ಸಾದ ರಾಸುಗಳ ಹತ್ಯೆಗೆ ಅವಕಾಶವಿರುವುದಾದ್ರೆ ಸಂತೋ‍ಷ. ಆದರೆ ಎಷ್ಟು ವಯಸ್ಸಿಗೆ ಮಾರಬೇಕು ಎಂದು ನಿರ್ಧರಿಸುವವರು ಯಾರು? ಸಾಕುವವರೋ ಅಥವಾ ಸರಕಾರವೋ ಅಥವಾ ಧರ್ಮ ರಕ್ಷಕರೋ?
      ಪದಗಳನ್ನು ಅದರ ಅರ್ಥದಂತೆಯೇ ತೆಗೆದುಕೊಂಡುಬಿಟ್ಟಿದ್ದೀರ. ನಾನೇಳಲು ಹೊರಟಿದ್ದು ಗೋಹತ್ಯೆ ನಿಷೇಧದ ಪರವಾಗಿ ಮಾತನಾಡುವುದಕ್ಕೆ ಮೊದಲು ಕಡೇಪಕ್ಷ ಗೋಸಾಕುವುದರ ಕಷ್ಟ ಸುಖಗಳಾದರೂ ಗೊತ್ತಿರಬೇಕಲ್ಲವೇ ಎಂದು

      Reply
      • Ajay
        Apr 17 2012

        ಸಸ್ಯಾಹಾರ ಊಟವನ್ನು ಕಡ್ಡಾಯ ಮಾಡಿದರೆ ಅದಕ್ಕೆ ಬೀಫ್ ಫೆಸ್ಟಿವಲ್ ಯಾಕೆ ಮಾಡುತ್ತಾರೆ!! ಕಡ್ಡಾಯ ಮಾಡಿದ್ದರೆ ಅದು ತಪ್ಪೇನಲ್ಲ. ಎಲ್ಲಾ ಜಾತಿ ಜನಾಂಗದವರು ಇರುವ ಕಡೆ ಎಲ್ಲರಿಗೂ ಸಹ್ಯವಾಗುವ ಆಹಾರ ಇರುವುದೂ ಅಗತ್ಯ. ಮಾಂಸ ತಿನ್ನುವವರು ಖಾಸಗಿಯಾಗಿ ತಿಂದುಕೊಳ್ಳಬಹುದು.ಇಲ್ಲದಿದ್ದರೆ ಅದು ಕೂಡ ಮತ್ತೊಬ್ಬರ ಆಹಾರ ಪದ್ಧತಿ, ಭಾವನೆಗಳಿಗೆ ತೊಂದರೆ ಮಾಡಿದಂತೆಯೇ ಆಗುತ್ತದೆ. ನಿಮ್ಮ ಗೋಹತ್ಯೆ ಪರ ವಾದವನ್ನು ಇದಕ್ಕೆ ಸಮೀಕರಿಸಿ ನೋಡಿ. ಆಗ ತಿಳಿಯುತ್ತದೆ.

        Reply
        • Apr 17 2012

          ಜಾತಿ ಜನಾಂಗದವರು ಇರುವ ಕಡೆ ಎಲ್ಲರಿಗೂ ಸಹ್ಯವಾಗುವ ಆಹಾರ ಇರುವುದೂ ಅಗತ್ಯ……… ತಮ್ಮ ಅಭಿಪ್ರಾಯ ಒಪ್ತೀನಿ. ನಾವು ಕೂಡ ಜೊತೆಯಲ್ಲೊಬ್ಬ ಸಸ್ಯಹಾರಿ ಸ್ನೇಹಿತನಿದ್ದರೆ ಸಸ್ಯಾಹಾರವೂ ಸಿಗುವ ಹೋಟೆಲ್ಲಿಗೇ ಹೋಗೋದು. ಆದರೆ ಅದೇ ಸ್ನೇಹಿತ ಮಾಂಸಹಾರದ ಬಗ್ಗೆ ನಮ್ಮ ಆಹಾರ ಪದ್ಧತಿಯ ಬಗ್ಗೆ ತುಚ್ಛವಾಗಿ ಮಾತನಾಡಿದರೆ ಅದನ್ನು ಸಹಿಸುವುದು ನಮಗೂ ಕಷ್ಟವಾಗುವುದಲ್ಲವೇ?

          Reply
  3. sridharbandri
    Apr 17 2012

    ಸ್ವಾಮಿ ಬುದ್ಧಿ ಜೀವಿಗಳೆ,
    ಬೀಫ್ ಪೆಸ್ಟಿವಲ್ ಅನ್ನು ಆಚರಿಸಿದಂತೆ ಪೋರ್ಕ್ ಫೆಸ್ಟಿವಲ್ ಆಚರಿಸಿದರೆ ಹೇಗೆ? ಇದೇನಾದರೂ ನಡೆದಲ್ಲಿ ನಿಮ್ಮ ವಿಚಾರವಂತರ ವೇದಿಕೆ ಇನ್ನೊಬ್ಬ ಧರ್ಮದವರ ನಂಬಿಕೆಗಳನ್ನು ಅವಹೇಳನ ಮಾಡಬಾರದು ಅಥವಾ ಅವರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರಬಾರದು ಎನ್ನುವ ಮಾನವೀಯ ದೃಷ್ಟಿಕೋನ ಹೊಂದುತ್ತೀರ. ಇದೇ ದೃಷ್ಟಿಕೋನವನ್ನು ಈ ದೇಶದ ಬಹಳಷ್ಟು ಜನ ಗೌರವಿಸುವ ಹಸುವಿನ ಬಗ್ಗೆ ಅಥವಾ ಧರ್ಮದವರ ಬಗ್ಗೆ ಏಕಿಲ್ಲ? ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು ಎಂದು ಬಯಸುವ ನೀವು ಎಲ್ಲರನ್ನೂ ಗೌರವಿಸುವ ಸಮಾನ ದೃಷ್ಟಿಯಿಂದ ನೋಡಬೇಕಾದ ಚಿಂತನೆಯನ್ನು ಬೆಳೆಸಿಕೊಳ್ಳುವುದು ಅವಶ್ಯವಿಲ್ಲವೆ.

    ನಿಮ್ಮ ಅಭಿಪ್ರಾಯದಂತೆ ಹಿಂದೂಗಳು ಅಂದು ಗೋಮಾಂಸ ತಿನ್ನುತ್ತಿದ್ದರೆಂದು ಒಪ್ಪಿಕೊಳ್ಳೋಣ. ಆದರೆ ಅವರು ಬೌದ್ಧ ಧರ್ಮದಿಂದ ಪ್ರಭಾವಿತರಾಗಿ ಅದನ್ನು ನಿಲ್ಲಿಸಿದರು ಎಂದು ಹೇಳಿದರೆ ಇನ್ನೊಬ್ಬರಲ್ಲಿರುವ ಒಳ್ಳೆಯ ಗುಣಗಳನ್ನು ಸ್ವೀಕರಿಸುವ ದೊಡ್ಡ ಗುಣ ಹಿಂದೂಗಳಿಗೆ ಇದೆ ಎಂತಾಗಲಿಲ್ಲವೆ ಮತ್ತು ಆ ಮೂಲಕ ಅವರು ಮಾಡುತ್ತಿದ್ದ ತಪ್ಪನ್ನು ತಿದ್ದಿಕೊಂಡಂತಾಗಲಿಲ್ಲವೆ. ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸೋಣ ಅದನ್ನು ಬಿಟ್ಟು ಅವರನ್ನು ನಿಂದಿಸುವ ಕೆಲಸವೇನಿದೆ?

    ಇಷ್ಟಕ್ಕೂ ಅವರ ಉದ್ದೇಶ ದನದ ಮಾಂಸವನ್ನು ತಿನ್ನುವುದೇ ಆಗಿದ್ದರೆ ಅದನ್ನು ಖಾಸಗಿಯಾಗಿ ಹಮ್ಮಿಕೊಳ್ಳಲಿ ಅದು ಬೇರೆ ವಿಷಯ. ಆದರೆ ಹೀಗೆ ಸಾರ್ವಜನಿಕ ಸಂಸ್ಥೆಯ ಆವರಣದಲ್ಲಿ ಮಾಡುವುದರ ಉದ್ದೇಶದ ಹಿಂದೆ ಯಾವ ಸ್ವಾರ್ಥವೂ ಇಲ್ಲವೇ? ಹೀಗೆ ಬೇಕೆಂದೇ ಶಾಂತಿ ಸೌಹಾರ್ದತೆಗಳನ್ನು ಕದಡುವ ಕೆಲಸ ಮಾಡಿ ಆಮೇಲೆ ನಮಗೆ ರಕ್ಷಣೆಯಿಲ್ಲ ಅಂತಾ ಬೊಬ್ಬೆ ಹೊಡೆಯುವುದು ಯಾವ ನ್ಯಾಯ. ಈಗಾಗಲೇ ವ್ಯವಸಾಯಕ್ಕೆ ಎತ್ತುಗಳೇ ಸಿಗುತ್ತಿಲ್ಲ; ಒಂದು ಸಾಮಾನ್ಯ ಜೊತೆಯ ಎತ್ತುಗಳೂ ಕೂಡ ೪೦ರಿಂದ ೫೦ಸಾವಿರ ಬೆಲೆ ಬಾಳುತ್ತಿವೆ. ಅಂಥಾದ್ದರಲ್ಲಿ ದನದ ಮಾಂಸ ಅಗ್ಗವಾಗಿ ಸಿಗುವ ಆಹಾರವೆಂದು ಹೇಗೆ ಹೇಳುತ್ತೀರಿ. ಯಾವುದೋ ರಾಜಕೀಯ ದುರುದ್ದೇಶ ಪ್ರೇರಿತ ಇಂತಹ ಫೆಸ್ಟಿವಲ್ಲುಗಳನ್ನು ಬೆಂಬಲಿಸುವುದೂ ಕೂಡ ಪರೋಕ್ಷವಾಗಿ ಶಾಂತಿಪ್ರಿಯರಾದವರನ್ನು ಕೆರಳಿಸುವವರಿಗೆ ಕುಮ್ಮಕ್ಕು ಕೊಟ್ಟಂತೆ.

    Reply
    • Apr 17 2012

      ಏನೋಪ್ಪ ಗೋಹತ್ಯೆ ನಿ‍ಷೇಧಿಸುವ ಮಸೂದೆಯ ವಿರುದ್ಧವಾಗಿ ಮಾತನಾಡಿದ್ದಕ್ಕೆ ಮಾನ್ಯ ಶ್ರೀಧರ್ ಅವರು ವಿನಾಕಾರಣ ಬುದ್ಧಿಜೀವಿಯ ಪಟ್ಟ ಕೊಟ್ಟುಬಿಟ್ಟಿದ್ದಾರೆ! ಕಾರಣ ಅವರೇ ತಿಳಿಸಬೇಕು! ನಾನು ಕೊನೆಯ ಸಾಲಿನಲ್ಲಿ ತಿಳಿಸಿದಂತೆ ಆಹಾರ್ ಪದ್ಧತಿಯ ಬಗ್ಗೆ ಕಟ್ಟಳೆಗಳನ್ನು ವಿಧಿಸುವುದು ತಪ್ಪು. ಬೀಫ್ ಫೆಸ್ಟಿವಲ್ಲೋ ಪೋರ್ಕ್ ಫೆಸ್ಟಿವಲ್ಲೋ – ಯಾವುದಾದರೂ ಸರಿ ನಡೆಯುವಂತಾಗಬಾರದು. ಗೋಮಾಂಸ ಸೇವಿಸದಿರುವುದು ಒಳ್ಳೆತನದ ಲಕ್ಷಣವಾದರೆ ಪ್ರಪಂಚದ ಬಹುತೇಕರು ಕೆಟ್ಟವರಾಗಿಬಿಡುತ್ತಾರಲ್ಲವೇ?
      ಇಲ್ಲಿ ನಾನು ಹೇಳಬೇಕೆಂದಿದ್ದು ಆಹಾರ ವಿ‍ಷಯದಲ್ಲಿ ಹಸ್ತಕ್ಷೇಪ ಮಾಡುವ ಸರಕಾರಗಳ ಬಗ್ಗೆಯೇ ಹೊರತು ವಿಶ್ವವಿದ್ಯಾಲಯದ ಫೆಸ್ಟಿವಲ್ ಬಗ್ಗೆ ಖಂಡಿತ ಅಲ್ಲ.

      Reply
  4. Apr 17 2012

    Chennagide. Lekhana.

    Reply
  5. ಬುದ್ದಿಜೀವಿ???
    Apr 17 2012

    ರೀ ಅಶೋಕ್ ರೆ ,
    ಗೋ ಹತ್ಯಾ ನಿಷೇಧ ಕಾನೂನು ಜಾರಿಗೆ ಬಂದರೆ , ಆಹಾರ ಪದ್ದತಿಗೆ ಧಕ್ಕೆ ಅನ್ನುತ್ತೀರಲ್ಲಾ? ಅದಕ್ಕೆ ಅರ್ಥ ಇದೆಯೇ? ಅದೇ ಓರ್ವ ಹಿಂದೂ ಕೋಟಿ ಕೋಟಿ ದೇವತೆಗಳ ಅವಾಸಸ್ಥಾನ ಎಂದು ನಂಬಿರುವ ಗೋವನ್ನು ಮಾಂಸಕ್ಕಾಗಿ ವಧಿಸುವುದು ತಪ್ಪಲ್ಲವೇ / ಅವನ ಭಾವನೆಗೆ ಧಕ್ಕೆ ತಂದಂತಲ್ಲವೇ? ಅವನ ಪದ್ದತಿಗೆ ಧಕ್ಕೆ ತಂದಂತಲ್ಲವೇ? ಚೀನೀಯರು ಜಿರಳೆಗಳನ್ನು ಕೂಡಾ ತಿನ್ನುತ್ತಾರೆ! ಅದು ಅವರ ಆಹಾರ ಪದ್ಧತಿ ಅಂತ ಸುಮ್ಮನಿದ್ದು ಬಿಡಲಾದೀತೆ? ವನವಾಸಿ /ಆದಿವಾಸಿಗಳು ನರಭಕ್ಷಣೆಯನ್ನೂ ಮಾಡುತ್ತಾರೆ ,ಅದೂ ಅವರ ಆಹಾರ ಪದ್ಧತಿ ಎನ್ನಲಾದೀತೇ?

    ಇನ್ನೊಂದು ಮುಖ್ಯ ವಿಚಾರ ,
    ಹುಲಿ , ನವಿಲು ,ಇತ್ಯಾದಿಗಳ ಭೇಟೆ ಯನ್ನ ಯಾಕೆ ನಿಷೇಧಿಸಬೇಕು ? ಅವುಗಳ ಭೇಟೆ ನಿಷೇಧ ಕೂಡ ಆದಿವಾಸಿಗಳ ಆಹಾರ ಪದ್ದತಿಗೆ ಧಕ್ಕೆ ತಂದಂತೆ ಅಲ್ಲವೇ? ಅವಕ್ಕೂ ಕೂಡ ಒಂದು ಫೆಸ್ಟಿವಲ್ ಅಂತ ಮಾಡಿ ” ಮಾಂಸ ಮುಕ್ಕುವುದನ್ನು” ಸಮರ್ತಿಸಿಕೊಳ್ಳುವ ಎದೆಗಾರಿಕೆ ಇದೆಯಾ ನಿಮ್ಮಲ್ಲಿ ? ಅಥವಾ “ಮುಖ್ಯವಾಗಿ ಫೋರ್ಕ್ ಫೆಸ್ಟಿವಲ್” ಅಂತ ಮಾಡಿ ಹಂದಿ ಮಾಂಸ ಮುಕ್ಕುವ ಧೈರ್ಯ ಇದ್ದರೆ ಮಾಡಿ ಆವಾಗ ನಾನು ನೀವು ಹೇಳಿದ್ದನ್ನ ಒಪ್ಪಿಕೊಳ್ಳುವೆ.”" ಅದು ಬಿಟ್ಟು ಏನೇನೋ ಹೇಳಿ ಕುತರ್ಕ ಮುಂದಿಟ್ಟು ಇಲ್ಲಿ ನಿಮ್ಮ “ಶಿಟ್” ತಿನ್ನುವ ಅಭ್ಯಾಸದ ಪ್ರದರ್ಶನ ಬೇಡ!
    ಹಾಗೆಯೇ ಧನದ ಮಾಂಸ ಸೇವನೆಯೂ ಕೂಡ ತುಂಬಾ ಜನರ ಭಾವನೆಗಳಿಗೆ /ಪದ್ದತಿಗೆ ಧಕ್ಕೆ ತರುತ್ತಿದೆ (ಬುದ್ದಿಜೀವಿಗಳನ್ನು ಬಿಟ್ಟು), ಕೆಲವರು ತಿನ್ನ ಬಹುದು , ತಿನ್ನುವವರು ಏನನ್ನ್ನು ಬೇಕಾದರೂ ತಿನ್ನುತ್ತಾರೆ ಬಿಡಿ.! ಅದು ಪದ್ಧತಿ ಹಾಗಾಗಿ ನಿಷೇಧ ತಪ್ಪು ಅನ್ನುವುದಾದರೆ , ಈಗ ಗೋ ಮಾಂಸ ತಿನ್ನುವವರು “ಗೋ ಮಾಂಸವನ್ನು ಬಿಟ್ಟು ” ಬೇರೇನನ್ನೂ ತಿನ್ನದಿದ್ದರೆ ಅಥವಾ ವರುಷದ ಹೆಚ್ಚಿನ ದಿನ ( ಕನಿಷ್ಠ 300 ದಿನ) ನಾನೂ ಒಪ್ಪಿಕೊಳ್ಳುವೆ ಅದು ಅವರ ಆಹಾರ ಪದ್ಧತಿ ಎಂದು! ಇಲ್ಲವಾದರೆ ಅದು ನಿಮ್ಮಂತಹವರು ಪ್ರಚಾರ ಗಿಟ್ಟಿಸಿಕೊಳ್ಳಲು / ಬೋಬ್ಬಿರಿಯಲು/ಮಾಡಲು ಬೇರೆ ಕೆಲಸವಿಲ್ಲದೇ ಇಲ್ಲ ಸಲ್ಲದ ಕೆಲಸ ಮಾಡಿ , ಶಿಟ್ ತಿನ್ನುವ “ಬುದ್ದಿಜೀವಿಗಳು” ಆಗಿರಬೇಕಷ್ಟೇ !

    Reply
    • Apr 17 2012

      ಯಾಕೋ ಹೆಸರಿಲ್ಲದ ಬುದ್ಧಿಜೀವಿ??ಗಳು ನನ್ನ ಮೇಲೆ ತುಂಬಾ ಕೋಪಗೊಂಡಿದ್ದಾರೆ!! ಹುಲಿ ನವಿಲುಗಳ ಭೇಟೆಯನ್ನು ನಿಷೇಧಿಸಿರುವುದು ಆದಿವಾಸಿಗಳ ಆಹಾರ ಪದ್ಧತಿಗೆ ಧಕ್ಕೆ ತಂದಂತೆ ಕಂಡಿತ ಅಲ್ಲ. ಹುಲಿ ನವಿಲು ಮತ್ತಿತರ ಕಾಡು ಪ್ರಾಣಿ ಪಕ್ಷಿಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡು ಅವುಗಳು ಅಳಿವಿನಂಚಿಗೆ ತಲುಪಿದ ಕಾರಣದಿಂದಷ್ಟೇ ಅವುಗಳ ಭಕ್ಷಣೆಗೆ ನಿಷೇಧಹೇರಲಾಗಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಈ ಕಾಡುಪ್ರಾಣಿಗಳ ಸಂಖ್ಯೆ ಅಗಾಧವಾಗಿ ಕ್ಷೀಣಿಸುವುದರ ಹಿಂದೆ ಆದಿವಾಸಿಗಳ ಕೈವಾಡವಿಲ್ಲ ಬದಲಾಗಿ ನಮ್ಮಂಥ ನಗರವಾಸಿಗಳ ಕೈಚಳಕವಿದೆ [ನಿಮ್ಮಂಥ ಪ್ರಚಾರ ಬಯಸದ ಬುದ್ಧಿಜೀವಿಗಳೂ ಮತ್ತು ನನ್ನಂಥ ‘ಶಿಟ್’ ತಿನ್ನುವ ಬುದ್ಧಿಜೀವಿಗಳೂ ಈ ನಗರವಾಸಿಗಳ ಪಟ್ಟಿಯಲ್ಲಿದ್ದೇವೆ]. ಆದಿವಾಸಿಗಳನ್ನೆಲ್ಲ ನರಭಕ್ಷಕರೆಂದು ಕರೆಯುವ ತಮ್ಮ ಉತ್ಸಾಹದ ಹಿಂದಿನ ತರ್ಕ ಅರ್ಥವಾಗಲಿಲ್ಲ.
      ಪೋರ್ಕ್ ಫೆಸ್ಟಿವಲ್ ಬಗ್ಗೆ ಮಾತನಾಡುವ ಮುನ್ನ ದಯವಿಟ್ಟು ಮಡಿಕೇರಿ ಸಕಲೇಶಪುರದೆಡೆಗೆ ಬನ್ನಿ ಇಲ್ಲಿ ಪ್ರತಿನಿತ್ಯವೂ ಪೋರ್ಕ್ ಫೆಸ್ಟಿವಲ್ ನಡೆಯುತ್ತದೆ!
      ಯಾವ ಮಾಂಸಹಾರಿಯೂ ವರ್ಷ ಪೂರ್ತಿ ಮಾಂಸ ತಿನ್ನಲಾರ, ತಿನ್ನಲೂಬಾರದು. ಅದು ಆರೋಗ್ಯಕ್ಕೆ ಒಳ್ಳೆಯದಲ್ಲ! ಯಾವ ಸಸ್ಯಹಾರಿಯೂ ವರ್ಷ ಪೂರಾ ಒಂದೇ ತರಕಾರಿ ಅಥವಾ ಸೊಪ್ಪು ತಿನ್ನುತ್ತಾನೆಯೇ?!
      ನೀವು ತರಕಾರಿ ಇಟ್ಕೊಳ್ಳಿ ನಾನು ಯಾವುದೋ ಒಂದು ಮಾಂಸ ಇಟ್ಕೋತೀನಿ ಸುಸ್ತಾಗೋವರೆಗೂ ಕಿತ್ತಾಡೋಣ! ಆದರೆ ಈ ಶಿಟ್ ಅನ್ನೋ ಪದಗಳೆಲ್ಲ ಯಾಕೆ ಸ್ವಾಮಿ? ಆ ಪದಗಳೆಲ್ಲ ನಮ್ಮ ನಮ್ಮ ಸ್ನೇಹಿತರ ವಲಯದಲ್ಲಿ ಉಪಯೋಗಿಸೋಕ್ಕೆ ಚೆಂದವೇ ಹೊರತು ವೆಬ್ ಸೈಟುಗಳಲ್ಲಿ ಪ್ರಕಟಿಸಲಲ್ಲ ಅನ್ನೋದು ನನ್ನ ಅಭಿಪ್ರಾಯ. ಇದನ್ನು ನೀವು ಶಿಟ್ ಅಭಿಪ್ರಾಯಕ್ಕೆ ಸೇರಿಸುವುದಾದರೆ ತಮ್ಮಿಚ್ಛೆ.

      Reply
  6. ಸವಿತಾ ಬಿ ಎ.
    Apr 17 2012

    ಉತ್ತರ ಕರ್ನಾಟಕ ಮತ್ತಿತೆರೆಡೆ ಬರವಿರುವೆಡೆಗಳಲ್ಲಿ ಮೇವಿಗೂ ತತ್ವಾರವಿದೆ. ತಮ್ಮ ಮಕ್ಕಳಿಗೆ ಕೂಳು ತಿನ್ನಿಸಬೇಕೋ ದನಕ್ಕೆ ಮೇವು ಹಾಕಬೇಕೋ ಎನ್ನುವ ಪ್ರಶ್ನೆ ಬಂದಾಗ ಮಕ್ಕಳಿಗೆ ಕೂಳನ್ನೇ ಜನ ಆರಿಸಿಕೊಳ್ಳುವುದು. ಎ ಸಿ ರೂಮಲ್ಲಿ ಕೂತವರು ಗೋಮಾತೆಯನ್ನು ಮನೆಯಲ್ಲಿ ಸಾಕಿಕೊಂಡು ಮೇವನ್ನೇಕೆ ನೀಡಬಾರದು? ಅಥವಾ ಒಂದೆರಡು ತಿಂಗಳು ರಜೆ ಹಾಕಿ ಹಳ್ಳಿಗಳಿಗೆ ತೆರಳಿ ಗೋವನ್ನು ಸಾಕಲು ಸಹಾಯ ಏಕೆ ಮಾಡಬಾರದು? ಇಷ್ಟು ದಿನ ಕೂಡಿಟ್ಟ ಹಣದಲ್ಲಿ ಒಂದಷ್ಟು ಭಾಗವನ್ನು ಈ ಎರಡು ತಿಂಗಳಲ್ಲಿ ಏಕೆ ವಿನಿಯೋಗಿಸಬಾರದು?
    ಹಾಲಿನ ದರ ಎರಡು ರೂಪಾಯಿ ಏರಿದರೆ ಹೌಹಾರುವವರು, ಸರಕಾರವನ್ನು ಶಪಿಸುವವರು ಬ್ಲಾಗ್ ಬರೆದರೆ ಸಾಕೆ? ಒಂದು ಲೀಟರ್ ಹಾಲಿನ ಬೆಲೆ ರೈತರ (ಆಳಿನ) ದಿನಗೂಲಿಯ ಪ್ರಕಾರ ಲೆಕ್ಕ ಹಾಕಿದರೆ ಅರವತ್ತು ರೂಪಾಯಿ ದಾಟುತ್ತದೆ. ದಿನಗೂಲಿಯ
    ಲೆಕ್ಕ ಬಿಟ್ಟು ಕೇವಲ ಮೇವಿನ ಮೇಲೆ ಲಾಭ ಪಡೆಯುತ್ತಿರುವುದರಿಂದ ನಮಗೆ ಇಷ್ಟು ಅಗ್ಗದಲ್ಲಿ ಹಾಲು ಸಿಗುತ್ತದೆ. (ಒಬ್ಬ ಕೂಲಿಯಾಳಿನ ದಿನದ ಕನಿಷ್ಟ ವೇತನ ಲೆಕ್ಕ ಹಾಕಿ). ಇನ್ನು ಮುಂದೆ ಲೀಟರ್ ಹಾಲಿಗೆ ಹತ್ತು ರೂಪಾಯಿಯಾದರೂ ಹೆಚ್ಚು ಕೊಡೋಣ.
    ಗೋಮಾತೆಯ ಮೇಲೆ ಇರುವಷ್ಟೇ ಕರುಣೆ, ಪ್ರೀತಿ ನಮಗಾಗಿ ಇಷ್ಟೆಲ್ಲ ತ್ಯಾಗ ಮಾಡುತ್ತಿರುವ ರೈತನ ಬಗ್ಗೆಯೂ ಕೊಂಚ ಇರಲಿ.

    Reply
    • Kumar
      Apr 18 2012

      ಸವಿತಾ ಬಿ ಎ.> ಗೋಮಾತೆಯ ಮೇಲೆ ಇರುವಷ್ಟೇ ಕರುಣೆ, ಪ್ರೀತಿ ನಮಗಾಗಿ ಇಷ್ಟೆಲ್ಲ ತ್ಯಾಗ ಮಾಡುತ್ತಿರುವ ರೈತನ ಬಗ್ಗೆಯೂ ಕೊಂಚ ಇರಲಿ.
      ವಿಶ್ವವಿದ್ಯಾಲಯದಲ್ಲಿರುವ “ರೈತರ” ಕುರಿತಾಗಿ ನಿಮಗಿರುವ ಕರುಣೆ, ಪ್ರೀತಿ ಕಂಡು ನನ್ನ ಹೃದಯ ಕರಗುತ್ತಿದೆ.

      ಸವಿತಾ ಬಿ ಎ.> ಎ ಸಿ ರೂಮಲ್ಲಿ ಕೂತವರು ಗೋಮಾತೆಯನ್ನು ಮನೆಯಲ್ಲಿ ಸಾಕಿಕೊಂಡು ಮೇವನ್ನೇಕೆ ನೀಡಬಾರದು?
      ಸವಿತಾ ಬಿ ಎ.> ಅಥವಾ ಒಂದೆರಡು ತಿಂಗಳು ರಜೆ ಹಾಕಿ ಹಳ್ಳಿಗಳಿಗೆ ತೆರಳಿ ಗೋವನ್ನು ಸಾಕಲು ಸಹಾಯ ಏಕೆ ಮಾಡಬಾರದು?
      ಸವಿತಾ ಬಿ ಎ.> ಇಷ್ಟು ದಿನ ಕೂಡಿಟ್ಟ ಹಣದಲ್ಲಿ ಒಂದಷ್ಟು ಭಾಗವನ್ನು ಈ ಎರಡು ತಿಂಗಳಲ್ಲಿ ಏಕೆ ವಿನಿಯೋಗಿಸಬಾರದು?
      ನಿಮಗೆ ಇದನ್ನೆಲ್ಲಾ ಮಾಡಬೇಡಿರೆಂದು ಯಾರು ಹೇಳಿದರು? ಇಂದೇ ಕೆಲಸವನ್ನು ಪ್ರಾರಂಭಿಸಿರಿ.

      Reply
      • ಸವಿತಾ ಬಿ ಎ.
        Apr 18 2012

        ಶ್ರೀಯುತ ಕುಮಾರರೇ.
        ಗೋಹತ್ಯೆ ನಿಷೇಧ ಮಾಡಿ ಅಂತ ಬೊಬ್ಬೆ ಹೊಡೆಯುತ್ತಿರುವುದು ತಾವು.. !(ಅದೂ ನೆಟ್ ನಲ್ಲಿ! ಬೀದಿಯಲ್ಲಿ ಕೂಗುವ ಧೈರ್ಯ ತಮಗಿಲ್ಲ ಅಂತ ಗೊತ್ತು). ಇವೆಲ್ಲ ಕೆಲಸಗಳನ್ನು ಮಾಡಬೇಕಾಗಿರುವುದು ತಾವು… ಮುದಿಹಸುಗಳನ್ನು ಮಾರುವ ರೈತರ ಹಕ್ಕನ್ನು ನಾನು ಸಮರ್ಥಿಸುತ್ತೇನೆ…
        ನಿಮ್ಮಂತಹ ಸ್ವಯಂ ಘೋಷಿತ ದೇಶಭಕ್ತರ ಬಣ್ಣ ಬಯಲಾಗುವುದು ಇಲ್ಲಿಯೇ..!!!

        Reply
        • ರವಿ
          Apr 20 2012

          ವಾಹ್ ಒಳ್ಳೆ ಎರಡು ಆಯ್ಕೆಗಳು – ಒಂದೋ ಗೋವಿನ ಸೇವೆ ಮಾಡಿ, ಮಾಡದವರು ತಿಂದು ತೇಗಿ. :)

          Reply
  7. Kumar
    Apr 18 2012

    > ಇತ್ತೀಚೆಗೆ ಬಲಪಂಥೀಯತೆಯ ಪಟ್ಟ ಹೊತ್ತಿರುವ ಎಸ್.ಎಲ್. ಭೈರಪ್ಪನವರ ಉತ್ತಮ ಕೃತಿಗಳಲ್ಲೊಂದಾದ ‘ಪರ್ವ’ದಲ್ಲೂ ಗೋಮಾಂಸ ಸೇವಿಸುವ ಹಿಂದೂಗಳಿದ್ದಾರೆ
    ಅದೇ ಭೈರಪ್ಪನವರ “ತಬ್ಬಲಿಯು ನೀನಾದೆ ಮಗನೆ” ಪುಸ್ತಕವನ್ನೂ ಒಮ್ಮೆ ಓದಿ – ಗೋವಿನ ಕಣ್ಣೀರಿನ ಕಥೆಯೂ ತಿಳಿಯುತ್ತದೆ.

    > ಧರ್ಮದ ಇತಿಹಾಸಕಾರರ ಲೇಖನಗಳ ಪ್ರಕಾರ ಸನಾತನ ಹಿಂದೂ ಧರ್ಮದಲ್ಲಿ ಬ್ರಾಹ್ಮಣರಲ್ಲೂ ಮಾಂಸ ಸೇವನೆ ಸಾಮಾನ್ಯವಾಗಿತ್ತು.
    > ಗೋಮಾಂಸವೂ ಅದಕ್ಕೆ ಹೊರತಾಗಿರಲಿಲ್ಲ
    ಇದನ್ನು ಹೇಳುತ್ತಿರುವುದರ ಉದ್ದೇಶ? ಅಂದು ಗೋಭಕ್ಷಣೆ ನಡೆದಿತ್ತು; ಹೀಗಾಗಿ ಇಂದು ಅದನ್ನು ನಿಷೇಧಿಸುವುದು ಅಥವಾ ಗೋಹತ್ಯೆಯನ್ನು ವಿರೋಧಿಸುವುದು ಸರಿಯಲ್ಲ; ಇದಲ್ಲವೇ ನಿಮ್ಮ ವಾದ?
    ಹಿಂದೆ ಒಬ್ಬ ಹೆಂಗಸಿಗೆ ಒಬ್ಬರಿಗಿಂತ ಹೆಚ್ಚು ಗಂಡಂದಿರು, ಒಬ್ಬ ಗಂಡಸಿಗೆ ಒಬ್ಬಳಿಗಿಂತ ಹೆಚ್ಚು ಹೆಂಡತಿಯರು ಇರುತ್ತಿದ್ದುದನ್ನೂ ಧರ್ಮದ ಇತಿಹಾಸಕಾರರು ತಿಳಿಸಿದ್ದಾರೆ.
    ದಯವಿಟ್ಟು ನಿಮ್ಮ ಮನೆಯಲ್ಲೂ ಇದನ್ನೇ ಪ್ರೋತ್ಸಾಹಿಸಿ – ಏಕೆಂದರೆ, ಅಂದು ಮಾಡುತ್ತಿದ್ದುದನ್ನೇ ಇಂದೂ ಮಾಡಬೇಕು.
    ಹಿಂದೆ ಮಕ್ಕಳಾಗದಿದ್ದಾಗ “ನಿಯೋಗ” ಪದ್ಧತಿಯನ್ನು ಪಾಲಿಸುತ್ತಿದ್ದರು – In-virto-Fertilization ಬದಲು “ನಿಯೋಗ” ಪದ್ಧತಿಯನ್ನೇ ಪ್ರೋತ್ಸಾಹಿಸಿ – ಏಕೆಂದರೆ, ಅಂದು ಮಾಡುತ್ತಿದ್ದುದನ್ನೇ ಇಂದೂ ಮಾಡಬೇಕು.

    > ಆ ವಿಶ್ವವಿದ್ಯಾಲಯದಲ್ಲಿ ಸಸ್ಯಾಹಾರ ಊಟವನ್ನು ಕಡ್ಡಾಯ ಮಾಡಿದ ಕಾರಣದಿಂದಲೇ ಈ ಆಚರಣೆ ಜಾರಿಗೆ ಬಂದಿದೆ
    ಸಸ್ಯಾಹಾರ ಊಟ ಕಡ್ಡಾಯ ಮಾಡಿದ್ದರಲ್ಲಿ ತಪ್ಪೇನಿದೆ?
    ಬಡ ರೈತರಿಗೆ ರಾಸುಗಳನ್ನು ಸಾಕಲು, ಅವುಗಳಿಗೆ ಮೇವು ಹಾಕಲು ಆಗದೆ ಮಾರುತ್ತಿದ್ದಾರೆ ಎನ್ನುವುದು ಗೋಹತ್ಯಾ ನಿಷೇಧದ ವಿರೋಧಕ್ಕೆ ನೀವು ನೀಡುತ್ತಿರುವ ಕಾರಣ.
    ಈ ವಿಶ್ವವಿದ್ಯಾಲಯದಲ್ಲಿ ಗೋಮಾಂಸ ಅಪೇಕ್ಷಿಸುತ್ತಿರುವವರು ರೈತರಲ್ಲ, ಬಡವರಲ್ಲ, ಗೋಮಾಂಸವಿಲ್ಲದೆ ಜೀವನ ಸಾಗದು ಎನ್ನುತ್ತಿರುವವರಲ್ಲ.
    ಹೀಗಿರುವಾಗ ಗೋಮಾಂಸಕ್ಕೇಕೆ ಇಲ್ಲಿ ಒತ್ತಾಯ? ಮತ್ತು ಅವರನ್ನು ನೀವು ಸಮರ್ಥಿಸುತ್ತಿರುವುದಕ್ಕೆ ಕಾರಣವೇನು?
    ವಿಶ್ವವಿದ್ಯಾಲಯ ಒಂದು ಸಾರ್ವಜನಿಕ ಸ್ಥಳ. ಅಲ್ಲಿ ನೀಡುವ ಆಹಾರ, ಎಲ್ಲರೂ ಸೇವಿಸುವಂತಿರಬೇಕು. ಮಾಂಸಾಹಾರ ಅನೇಕರಿಗೆ ನಿಷಿದ್ಧ.
    ಅದನ್ನು ವಿಶ್ವವಿದ್ಯಾಲಯದಂತಹ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸುವುದರಿಂದ ಆಗುವ ತೊಂದರೆಯೇನು?
    ಇದರ ಹಿಂದೆ ಇರುವುದು ರಾಜಕೀಯ ಅಲ್ಲವೇ!?

    ಇದನ್ನೆಲ್ಲಾ ಯೋಚಿಸುವಾಗ ನನಗೆ ಒಂದು ಸಂಗತಿ ಗಮನಕ್ಕೆ ಬರುತ್ತಿದೆ.
    ಇಲ್ಲಿ ವಿರೋಧವಿರುವುದು “ಗೋಹತ್ಯಾ ನಿಷೇಧ”ಕ್ಕಲ್ಲ. ಬದಲಾಗಿ, ಅದನ್ನು ಒತ್ತಾಯಿಸುತ್ತಿರುವವರಿಗೆ.
    ನೀವು ಒಂದು ಗುಂಪಿನ ಜನಕ್ಕೆ “ಧರ್ಮರಕ್ಷಕರು”, “ಬಲಪಂಥೀಯರು” ಎಂದು ಹಣೆಪಟ್ಟಿಕೊಟ್ಟಿರುವಿರಿ. ಅವರೇನೇ ಮಾಡಿದರೂ ನಿಮಗದು ತಪ್ಪಾಗಿ ಕಾಣುತ್ತದೆ.
    ಅವರು “ಗೋಹತ್ಯಾ ನಿಷೇಧ” ಒತ್ತಾಯಿಸಿದ್ದರಿಂದ ಅದು ತಪ್ಪಾಯಿತು. ಅವರು “Common Civil Code” ಒತ್ತಾಯಿಸಿದರೆ, ಅದನ್ನೂ ಕೋಮುವಾದದ ಹೆಸರಿನಲ್ಲೇ ವಿರೋಧಿಸಲಾಗುತ್ತದೆ.
    ಅದೇ, ಈ ವಿಷಯಗಳನ್ನು “ಜಾತ್ಯಾತೀತವಾದಿಗಳು” ಮಾಡಿದರೆ ಅದಕ್ಕೆ ನಿಮ್ಮದೇನೂ ತಕರಾರು ಇರುವುದಿಲ್ಲ.
    ಈ ವಿಷಯವಿರಲಿ, “ಜಾತ್ಯಾತೀತವಾದಿಗಳು” ಅಪ್ಜಲ್ ಗುರುವಿನಂತಹ ದೇಶದ್ರೋಹಿಯನ್ನು ಬೆಂಬಲಿಸಿದರೂ ನೀವದನ್ನು ತಪ್ಪೆನ್ನುವುದಿಲ್ಲ – ಏಕೆಂದರೆ, ಜಾತ್ಯಾತೀತವಾದಿಗಳು ಏನು ಮಾಡಿದರೂ ಸರಿಯೇ! ಅದು ದೇಶದ್ರೋಹವಾದರೂ ಸರಿ…..!

    Reply
    • manju
      Apr 18 2012

      > ಧರ್ಮದ ಇತಿಹಾಸಕಾರರ ಲೇಖನಗಳ ಪ್ರಕಾರ ಸನಾತನ ಹಿಂದೂ ಧರ್ಮದಲ್ಲಿ ಬ್ರಾಹ್ಮಣರಲ್ಲೂ ಮಾಂಸ ಸೇವನೆ ಸಾಮಾನ್ಯವಾಗಿತ್ತು.
      > ಗೋಮಾಂಸವೂ ಅದಕ್ಕೆ ಹೊರತಾಗಿರಲಿಲ್ಲ
      ಇದನ್ನು ಹೇಳುತ್ತಿರುವುದರ ಉದ್ದೇಶ? ಅಂದು ಗೋಭಕ್ಷಣೆ ನಡೆದಿತ್ತು; ಹೀಗಾಗಿ ಇಂದು ಅದನ್ನು ನಿಷೇಧಿಸುವುದು ಅಥವಾ ಗೋಹತ್ಯೆಯನ್ನು ವಿರೋಧಿಸುವುದು ಸರಿಯಲ್ಲ; ಇದಲ್ಲವೇ ನಿಮ್ಮ ವಾದ?
      ಹಿಂದೆ ಒಬ್ಬ ಹೆಂಗಸಿಗೆ ಒಬ್ಬರಿಗಿಂತ ಹೆಚ್ಚು ಗಂಡಂದಿರು, ಒಬ್ಬ ಗಂಡಸಿಗೆ ಒಬ್ಬಳಿಗಿಂತ ಹೆಚ್ಚು ಹೆಂಡತಿಯರು ಇರುತ್ತಿದ್ದುದನ್ನೂ ಧರ್ಮದ ಇತಿಹಾಸಕಾರರು ತಿಳಿಸಿದ್ದಾರೆ.
      ದಯವಿಟ್ಟು ನಿಮ್ಮ ಮನೆಯಲ್ಲೂ ಇದನ್ನೇ ಪ್ರೋತ್ಸಾಹಿಸಿ – ಏಕೆಂದರೆ, ಅಂದು ಮಾಡುತ್ತಿದ್ದುದನ್ನೇ ಇಂದೂ ಮಾಡಬೇಕು.
      ಹಿಂದೆ ಮಕ್ಕಳಾಗದಿದ್ದಾಗ “ನಿಯೋಗ” ಪದ್ಧತಿಯನ್ನು ಪಾಲಿಸುತ್ತಿದ್ದರು – In-virto-Fertilization ಬದಲು “ನಿಯೋಗ” ಪದ್ಧತಿಯನ್ನೇ ಪ್ರೋತ್ಸಾಹಿಸಿ – ಏಕೆಂದರೆ, ಅಂದು ಮಾಡುತ್ತಿದ್ದುದನ್ನೇ ಇಂದೂ ಮಾಡಬೇಕು.

      ಹೇಳುವವರೆ … ಹೇಳಿದಂತೆ ನಡೆದುಕೋಳ್ಳಬೇಕು.. ಅದು ನಿಮ್ಮ ಮನೆಯಿಂದಲೇ ಪ್ರಾಂಭವಾಗಲಿ….. ನಿಮಗೆ ಶುಭವಾಗಲಿ…..

      Reply
      • Kumar
        Apr 18 2012

        manju> ಹೇಳುವವರೆ … ಹೇಳಿದಂತೆ ನಡೆದುಕೋಳ್ಳಬೇಕು
        ಯಾರು ಹೇಳಿದರು? ಏನು ಹೇಳಿದರು?
        ಲೇಖಕರ ಇಂಗಿತವನ್ನಷ್ಟೇ ನಾನು ಹೇಳಿದ್ದು. ಧರ್ಮದ ಇತಿಹಾಸಕಾರರು ಹಿಂದೆ ಗೋಹತ್ಯೆ ಅಥವಾ ಗೋಭಕ್ಷಣೆ ನಡೆಸಿದ್ದನ್ನು, ಇಂದು ಗೋಹತ್ಯೆ ನಡೆಸಲು ಸಮರ್ಥನೆಯನ್ನಾಗಿ ಬಳಸಿದ್ದರ ಅರ್ಥವೇನು?
        ಅದನ್ನು ಗೋಹತ್ಯೆಯ ಸಮರ್ಥನೆಗೆ ಬಳಸುತ್ತಿರುವವರು ಯಾರು? ಅವರು ತಾನೆ, ಹಿಂದಿನದನ್ನು ಇಂದೂ ಮುಂದುವರೆಸಬೇಕೆಂದು ಬಯಸುತ್ತಿರುವವರು?
        ಅಂತಹವರಿಗೇ ಹಿಂದೆ ನಡೆಯುತ್ತಿದ್ದ ಇನ್ನೂ ಕೆಲವು ಸಂಗತಿಗಳನ್ನು ತಿಳಿಸಿ ಮುಂದುವರೆಸಲು ತಿಳಿಸಿದೆ.
        ಗೋಹತ್ಯೆ ಮಾತ್ರ ಬೇಕು, ನಿಯೋಗ ಬೇಡ ಎಂದರೆ ಹೇಗೆ?
        ಅದನ್ನು ಒಪ್ಪುವವರು ಇದನ್ನೂ ಒಪ್ಪಬೇಕು ಅಲ್ಲವೇ?
        ಈಗ ಹೇಳಿ, ಯಾರು ಹೇಳುವವರು ಮತ್ತು ಯಾರು ನುಡಿದಂತೆ ನಡೆಯಬೇಕಾದವರು?

        Reply
        • Apr 18 2012

          ಶ್ರೀಯುತ ಕುಮಾರ್ ರವರೇ,
          ಇಲ್ಲಿ ನಾನು ಇತಿಹಾಸದ ಉದಾಹರಣೆ ಕೊಟ್ಟಿದ್ದು ಇತಿಹಾಸವಿದ್ದಂತೆಯೇ ನಾವೂ ಬದುಕಬೇಕು ಎಂಬುದಕ್ಕಲ್ಲ. ಇತಿಹಾಸದಂತೆಯೇ ನಾವು ಇಂದೂ ಬದುಕಬೇಕು ಎಂಬುದೇ ನನ್ನುದ್ದಿಶ್ಯವಾದರೆ ಈ ಲ್ಯಾಪ್ ಟಾಪ್ ಉಪಯೋಗಿಸಿ ಟೈಪಿಸುವ ಕೆಲಸವನ್ನೇ ಮಾಡಬಾರದಿತ್ತಲ್ಲವೇ?! ಗೋಹತ್ಯೆಯ ಪರವಾಗಿರುವವರು ಹಿಂದೂ ಧರ್ಮದಲ್ಲಿ ಗೋಹತ್ಯೆ ಮಾಡುವುದು ಮಹಾಪಾಪ ವೆಂದು ಪದೇ ಪದೇ ಹೇಳುತ್ತಾರಲ್ಲ ಾ ಕಾರಣಕ್ಕೆ ಆ ವಾಕ್ಯವನ್ನು ಬರೆದಿದ್ದು ಅಷ್ಟೇ…. ಆಹಾರ ಪದ್ಧತಿಗೆ ಧರ್ಮದ ಸಮೀಕರಣ ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ…. ನೀವದಕ್ಕೆ ಮದುವೆ ನಿಯೋಗ ಅಂತ ೇನೇನೋ ಹೇಳಿಬಿಟ್ಟಿರಿ!! ಇರಲಿ ಅದಕ್ಕೆಲ್ಲ ಪ್ರತಿಕ್ರಿಯಿಸಿ ಚರ್ಚೆಗಳನ್ನು ಈ ಲೇಖನದ ಮೂಲಉದ್ದೇಶದಿಂದ ದೂರ ತೆಗೆದುಕೊಂಡು ಹೋಗುವ ಾಸೆ ನನಗಿಲ್ಲ

          Reply
          • Kumar
            Apr 18 2012

            ಸವಿತಾ ಬಿ ಎ> ಮುದಿಹಸುಗಳನ್ನು ಮಾರುವ ರೈತರ ಹಕ್ಕನ್ನು ನಾನು ಸಮರ್ಥಿಸುತ್ತೇನೆ
            ವಿಶ್ವವಿದ್ಯಾಲಯದಲ್ಲಿ ನಡೆದ “Beef Festival” ಕುರಿತಾಗಿ ಬರೆದಿರುವ ಲೇಖನ ಮತ್ತು ಅದರ ಸಮರ್ಥನೆಗಾಗಿ ಉಪಯೋಗಿಸುತ್ತಿರುವುದು “ನಾನು ರೈತರ ಪರ” ಎಂಬ ನಿಲುವು.
            ಇಲ್ಲಿ ಯಾರೂ ರೈತರ ವಿರೋಧಿಗಳಿಲ್ಲ. ಯಾರೂ ರೈತರ ಹಕ್ಕನ್ನು ಕಿತ್ತಿಕೊಳ್ಳಲು ನಿಂತಿಲ್ಲ.
            ಆದರೆ, ವಿಶ್ವವಿದ್ಯಾಲಯದಲ್ಲಿ ಈ ರೀತಿಯ ಹಬ್ಬ ಆಚರಿಸುವುದು ಆವಶ್ಯಕವೇ?
            ಅವರ ಈ ಕೃತ್ಯ ಕೇವಲ ಕೋಮುಸಾಮರಸ್ಯ ಕೆಡಿಸುವುದೇ ಅಲ್ಲವೆ?
            ಮತ್ತು “ಗೋಹತ್ಯಾ ನಿಷೇಧ”ದ ಕುರಿತಾಗಿ ಸಾಕಷ್ಟು ಸಮಯದಿಂದ ಚರ್ಚೆ ನಡೆಯುತ್ತಿದೆ.
            “ನಮ್ಮ ಹಕ್ಕನ್ನು ಕಿತ್ತುಕೊಳ್ಳಬೇಡಿ” ಎಂದು ಇಲ್ಲಿಯವರೆಗೂ ಯಾವ ರೈತರೂ ಪ್ರತಿಭಟನೆ ನಡೆಸಿಲ್ಲದಿರುವುದು ಏನನ್ನು ತೋರಿಸುತ್ತದೆ?
            ನಿಜಕ್ಕೂ ಅವರಿಗೆ ಅದು ದೊಡ್ಡ ವಿಷಯವಾಗಿದ್ದರೆ, ಅವರು ಪ್ರತಿಭಟನೆ ನಡೆಸದೆ ಇರುತ್ತಿದ್ದರೇನು?
            ನಗರಗಳಲ್ಲಿ ಕುಳಿತಿರುವ ಕೆಲವು ಡೋಂಗಿ ಜಾತ್ಯಾತೀತವಾದಿಗಳು ರೈತರ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರಷ್ಟೇ.

            ashok k r> ಹಿಂದೂ ಧರ್ಮದಲ್ಲಿ ಗೋಹತ್ಯೆ ಮಾಡುವುದು ಮಹಾಪಾಪ ವೆಂದು ಪದೇ ಪದೇ ಹೇಳುತ್ತಾರಲ್ಲ
            ಹೌದು. ಹಿಂದು ಧರ್ಮದಲ್ಲಿ ಗೋಹತ್ಯೆ ಮಾಡುವುದು ಮಹಾಪಾಪ ಎಂದೇ ಪರಿಗಣಿತವಾಗಿದೆ. ತಾಯಿಯನ್ನು ಕೊಲ್ಲುವುದು ಪಾಪವಲ್ಲದೆ ಮತ್ತೇನು?
            “ತಾಯಿಯನ್ನು ಕೊಲ್ಲುವುದು ಪಾಪವಲ್ಲ”, “ಮುದುಕಿಯಾದ ತಾಯಿ ನಮಗೆ ಹೊರೆ; ಆದ್ದರಿಂದ ಆಕೆಯನ್ನು ಮಾರುವುದು ನಮ್ಮ ಹಕ್ಕು” ಎಂದು ಹೇಳಿಕೊಳ್ಳುವವರೂ ಇರಬಹುದೇನೋ – ಅಂತಹವರನ್ನು ಅನಾಗರೀಕರು ಎನ್ನುತ್ತಾರೆ.
            ಪ್ರಾಣಿಗಳಲ್ಲಿ ಬೆಳೆದಂತೆ ತಾಯಿ-ಮಗುವಿನ ಸಂಬಂಧ ದೂರವಾಗುತ್ತದೆ. ಮನುಷ್ಯರಲ್ಲಿ ಸಾಯುವ ತನಕವೂ ಈ ಸಂಬಂಧ ಇರುತ್ತದೆ.
            ಈ ರೀತಿಯ ಅಂತಃಕರಣಕ್ಕೇ ಅಲ್ಲವೇ ಮನುಷ್ಯತ್ವ ಎನ್ನುವುದು?
            ಇದೇ ಮುಂದುವರೆದು ತನ್ನ ಸುತ್ತಲಿನ ಪ್ರಕೃತಿಯನ್ನೂ ತಾಯಿಯಂತೆ ಕಾಣುವುದು, ತನಗೆ ಹಾಲು ನೀಡುವ ಗೋವನ್ನೂ ತಾಯಿಯಂತೆ ಕಾಣುವುದು, ಮನುಷ್ಯನ ವಿಕಾಸದ ಲಕ್ಷಣ. ಒಂದು ನಾಯಿ ಸಹ ತನಗೆ ಅನ್ನ ಹಾಕಿದವನನ್ನು ಸಾಯುವ ತನಕ ನೆನಪಿಡುತ್ತದೆ, ಪ್ರೀತಿಯಿಂದ ನೋಡುತ್ತದೆ. ನಮಗೆ ಜೀವನ ಪೂರ್ತಿ ಹಾಲು ನೀಡಿ ಉಪಕಾರ ಮಾಡುವ ಪ್ರಾಣಿಯನ್ನು ತಾಯಿಯಂತೆ ಕಂಡರೆ ನಿಮಗೇಕೆ ಅಪಹಾಸ್ಯವೆನಿಸುತ್ತದೆ?
            ನೆನಪಿಡಿ. ಮನುಷ್ಯನಿಗೆ ಮಾಂಸಾಹಾರ ಅನಿವಾರ್ಯವಲ್ಲ. ಪ್ರಾಣಿಗಳು ಮೂಕವಾಗಿರಬಹುದು; ಅವುಗಳಿಗೆ ತಮ್ಮ ನೋವನ್ನು ತಿಳಿಸಲು ಸಾಧ್ಯವಾಗದಿರಬಹುದು. ಆದರೆ, ಅವುಗಳು ಮೂಕವೇದನೆ ಅನುಭವಿಸುತ್ತವೆ. ಅದನ್ನು ತಿಳಿದೂ ಪ್ರಾಣಿಹತ್ಯೆಯನ್ನು ಸಮರ್ಥಿಸುವವನು ಮನುಷ್ಯನಾಗಲಾರ.

            ಆದರೆ, ಹಿಂದು ಧರ್ಮದಲ್ಲಿ ಹಿಂದೆ ಹೇಳಿದ್ದು ಮಾತ್ರ ಧರ್ಮ ಎಂದೇನೂ ಹೇಳಿಲ್ಲ. ಅದು ನಿಂತ ನೀರಲ್ಲ. ಅದು ಸದಾ ಹರಿಯುವ, ತನ್ನನ್ನು ತಾನು ಶುದ್ಧೀಕರಿಸಿಕೊಳ್ಳುವ ನದಿ.
            ಹಿಂದೆ ಗೋಹತ್ಯೆ ನಡೆಯುತ್ತಿದ್ದಿರಬಹುದು. ಅದು ತಪ್ಪೆಂದು ಅರಿವಾದಾಗ, ಅದನ್ನು ನಿಲ್ಲಿಸಿ ತನ್ನ ತಪ್ಪನ್ನು ತಿದ್ದಿಕೊಂಡಿದೆ ಹಿಂದು ಧರ್ಮ.
            ಹೀಗಾಗಿ, ಹಿಂದೆ ನಡೆಯುತ್ತಿತ್ತು ಎಂಬ ಉದಾಹರಣೆಯನ್ನೇ ಹಿಡಿದು ನೀವು ವಾದಿಸಿರುವುದು ಸರಿಯಲ್ಲ.
            ಮತ್ತು ನಿಮ್ಮ ವಾದಕ್ಕೆ ಅನುಕೂಲವೆಂದು ಭೈರಪ್ಪನವರ ಕಾದಂಬರಿಯ ಉದಾಹರಣೆ ತೆಗೆದುಕೊಂಡಿರಿ.
            ಅದೇ ಭೈರಪ್ಪನವರು ಗೋವಿನ ಕುರಿತಾಗಿಯೇ ಒಂದು ಕಾದಂಬರಿ ಬರೆದಿರುವರಲ್ಲ; ಅದು ನಿಮಗೇಕೆ ಕಾಣಲಿಲ್ಲ? ಅದಲ್ಲವೇ ಜಾಣ ಕುರುಡು!!?

            ನಿಮ್ಮ ಆಹಾರದ ಆಯ್ಕೆ ನಿಮ್ಮಿಷ್ಟ. ಆದರೆ, ಅದನ್ನು ವಿಶ್ವವಿದ್ಯಾಲಯದಂತಹ ಸಾರ್ವಜನಿಕ ಸ್ಥಳಗಳಲ್ಲಿ ಒತ್ತಾಯಿಸುವುದು ಸಲ್ಲದು. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರಿಗೂ ಸರಿಹೊಂದುವುದನ್ನೇ ಮಾಡಬೇಕಾಗುತ್ತದೆ. ನೀವು ಮನೆಯಲ್ಲೋ ಅಥವಾ ನಿಮ್ಮ ಕೋಣೆಯಲ್ಲೋ ಮಾಡುವುದನ್ನೆಲ್ಲಾ ಸಾರ್ವಜನಿಕವಾಗಿ ಮಾಡುವುದು ಸಾಧ್ಯವಿಲ್ಲ.

            Reply
            • Apr 19 2012

              ಖಂಡಿತವಾಗಿಯೂ ಭೈರಪ್ಪನವರ ಮತ್ತೊಂದು ಕಾದಂಬರಿಯ ಬಗ್ಗೆ ಪ್ರಸ್ತಾಪಿಸದಿರುವುದು ಜಾಣ ಕುರುಡಲ್ಲ. ಆ ಕಾದಂಬರಿಯನ್ನು ನಾನು ಓದಿಲ್ಲ ಕುಮಾರ್ ರವರೇ. ಸಾಧ್ಯವಾದಲ್ಲಿ ಖಂಡಿತವಾಗಿ ಓದ್ತೀನಿ.
              ಎಲ್ಲ ಪ್ರಾಣಿ ಹತ್ಯೆಯನ್ನು ನಿಲ್ಲಿಸಬೇಕು ಎಂದು ವಾದಿಸಿದರೆ ಅರ್ಥವಿದೆ. ಬೇರೆ ಪ್ರಾಣಿಗಳಿಗೆ ಕೊಡದ ಮಹತ್ವ ಹಸುವಿಗೆ ಮಾತ್ರ ಯಾಕೆ ಎಂಬುದಷ್ಟೇ ನನ್ನ ಪ್ರಶ್ನೆ. ಹಸುವಿಗಿಂತ ಬೇರೆ ಪ್ರಾಣಿಗಳು ಕೀಳಲ್ಲವಲ್ಲವೇ?
              ನೀವು ಹೇಳಿದ ಒಂದು ಮಾತು ಒಪ್ಪಲೇಬೇಕು. ವಿಶ್ವವಿದ್ಯಾಲಯದಲ್ಲಿ ಇಂಥ ಆಚರಣೆಗಳು ನಡೆಯುವಂಥಾಗಬಾರದು. ಅದು ತಪ್ಪು. ಆದರೆ ಇಲ್ಲಿ ಎರಡೂ ಬಣದ ರಾಜಕೀಯ ಚಾಲ್ತಿಯಲ್ಲಿದೆಯಲ್ಲವೇ?
              ಮತ್ತೆ ಮನುಷ್ಯನಿಗೆ ಮಾಂಸದ ಅವಶ್ಯಕತೆಯಿಲ್ಲ ಎಂದಿದ್ದೀರಿ. ಒಪ್ಪುವ ಮಾತೇ ಹೌದು. ಅದೇ ರೀತಿ ಮನುಷ್ಯನಿಗೆ ಹಸುವಿನ ಹಾಲಿನ ಅವಶ್ಯಕತೆಯೂ ಇಲ್ಲ. ಬೇರೆ ಯಾವುದಾದರೂ ಪ್ರಾಣಿ ಮತ್ತೊಂದು ಪ್ರಾಣಿಯ ಮಗುವಿಗೆ ಮೀಸಲಾಗಿದ್ದ ಹಾಲನ್ನು ಕುಡಿಯುವುದನ್ನು ನೋಡಿದ್ದೀರಾ?! ವಾದಕ್ಕಾಗಿ ಮಾಂಸಹಾರವನ್ನೇ ಕೀಳೆಂಬ ಭಾವನೆ ಹೊತ್ತ ನಿಮ್ಮ ಕಮೆಂಟ್ ಗೆ ಪ್ರತಿಯಾಗಿ ಈ ರೀತಿ ಬರೆದೆ! ಹಾಲು ಮಾಂಸ ಎಲ್ಲ ನಮ್ಮ ಆಹಾರ ವಿಧಾನಗಳಷ್ಟೇ. ಕೀಳು ಮೇಲು ಸಲ್ಲದು

              Reply
              • Kumar
                Apr 19 2012

                ashok k r> ಸಾಧ್ಯವಾದಲ್ಲಿ ಖಂಡಿತವಾಗಿ ಓದ್ತೀನಿ.
                ನಿಜಕ್ಕೂ ಪ್ರತಿಯೊಬ್ಬ ಭಾರತೀಯನೂ ಓದಲೇಬೇಕಾದ ಕಾದಂಬರಿಯಿದು.
                ನಮ್ಮ ಹಳ್ಳಿಗಳು ಹೇಗಿದ್ದವು; ರೈತನ ಹಾಗೂ ಹಸುವಿನ ನಡುವಣ ಸಂಬಂಧ ಹೇಗಿರುತ್ತದೆ; ಆಧುನಿಕತೆಯ ಆಕ್ರಮಣದಿಂದ ಹಳ್ಳಿಗಳು ಹೇಗೆ ಹಾಳಾಗುತ್ತಿವೆ; ಇವುಗಳ ಮಧ್ಯೆ ಹಸುಗಳು ಯಾವರೀತಿ ಕಸಾಯಿಕಾನೆಗಳ ಪಾಲಾಗುತ್ತಿವೆ – ಇತ್ಯಾದಿಗಳೆಲ್ಲಾವನ್ನೂ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.
                “ಗೋವಿನ ಹಾಡು – ಧರಣಿ ಮಂಡಲ ಮಧ್ಯದೊಳಗೆ” – ಈ ಹಾಡಿನ ಸುತ್ತ ಹೆಣೆದಿರುವ ಅದ್ಭುತ ಕಾದಂಬರಿಯಿದು.
                ಖಂಡಿತ ಮನಸ್ಸು ಮಾಡಿ ಓದಿ.

                Reply
              • vk
                Apr 19 2012

                ಹಾಲು ಮಾಂಸ ಎಲ್ಲ ನಮ್ಮ ಆಹಾರ ವಿಧಾನಗಳಷ್ಟೇ. ಕೀಳು ಮೇಲು ಸಲ್ಲದು
                ಹಸು ಕರುಗಳ ಬಗ್ಗೆ ಗೌರವ ಇರುವ ಯಾರೂ, ಕರುವಿಗೆ ಮಿಗಿಸದೆ ಹಾಲೂ ಕರೆಯುವುದಿಲ್ಲ. ಕರುವಿಗೆ ಇಲ್ಲದಿರುವ ತರಹ ಹಾಲು ಕರೆದಿದ್ದರೆ ಯಾವ ಕರುವೂ ಬದುಕಿ ಉಳಿಯುತ್ತಿರಲಿಲ್ಲ. ಹಾಲು ಕರೆದಷ್ಟೂ ಪುನರುತ್ಪಾದನೆಯಾಗುತ್ತದೆ. ಹಾಲು ಕರೆಯುವುದರಿಂದ ಯಾವ ಹಿಂಸೆಯೂ ಇಲ್ಲ. ಹಿಂಸೆಯಾಗುತ್ತಿದ್ದರೆ ಯಾವ ಹಸುವೂ ಹಾಲು ಕರೆಯಲು ಬಿಡುತ್ತಿರಲಿಲ್ಲ. ಆದರೆ ಹಸುವನ್ನು ಕಡಿಯುವುದರಿಂದ ಸಾವಿರಾರು ಮಕ್ಕಳಿಗೆ ಹಾಲಿನ ಮೂಲವನ್ನೇ ಕಡಿದಂತೆ. ಹೋಗಿರುವ ಹಸುವಿನ ಪ್ರಾಣವನ್ನು ಮತ್ತೆ ತರಲಾಗದು. ಅಮಾನವೀಯ ಕೃತ್ಯ…

                Reply
                • T.M.Krishna
                  Apr 24 2012

                  ಹುಲ್ಲು ಬಯಲಿನಲ್ಲಿ ದನಗಳು ಹುಲ್ಲು ಮೇಯ್ದರೆ, ಅವುಗಳಿಗಾಗಿ ಮನುಷ್ಯ ಹುಲ್ಲು ಕತ್ತರಿಸಿದರೆ ಮತ್ತೆ ಹುಲ್ಲು ಬೆಳೆಯುತ್ತದೆ. ಇದು ನಿರಂತರ. ದನಗಳ ನಿರಂತರ ಉಳಿವಿಗಾಗಿ ಸಂದರ್ಬೋಚಿತವಾಗಿ ಅವುಗಳನ್ನು ಮಾರುವುದು, ತಿನ್ನುವುದು ಕೂಡ ಇದೇ ತತ್ವದಡಿ ಬರುತ್ತದೆ. ಆದರೆ ಅದು ಸಂಕೀರ್ಣವಾಗಿದೆ. ಅದನ್ನು ಅರ್ಥಮಾಡಿಕೊಳ್ಳುವ ವಿವೇಕ ಬೇಕಷ್ಟೆ. ದನಗಳು ಲಾಭದಾಯಕವಾಗಿವೆ ಎಂದಷ್ಟೇ ಮನುಷ್ಯ ಅವನ್ನು ಪೋಷಿಸುತ್ತಿದ್ದಾನೆ ಮತ್ತು ದನಗಳೂ ಉಳಿದಿವೆ. ಪುಣ್ಯ ಬರುತ್ತದೆ ಎಂದಾಗಲೀ, ಅಯ್ಯೋ ಪಾಪ ಎಂದಾಗಲೀ ಅವನ್ನು ಸಾಕುತ್ತಿಲ್ಲ. ಗೋ ಸಂರಕ್ಷಣೆಯ ಬಗ್ಗೆ ಪುಂಗಿ ಊದುತ್ತಿರುವ ಕಾವಿದಾರಿಯೊಬ್ಬ ಕೂಡ ಆ ವಿಷಯವನ್ನು ತನ್ನ ಅಭಿವೃದ್ಧಿಗೆ ಬಳಸಿಕೊಳ್ಳುತ್ತಿದ್ದಾನೆಂಬುದು ನಿಮಗೆ ನೆನಪಿರಲಿ.

                  Reply
            • Apr 19 2012

              “ಮುದುಕಿಯಾದ ತಾಯಿ ನಮಗೆ ಹೊರೆ” ಎಂದು ಬರೆದಿದ್ದೀರಿ. Ofcourse ವ್ಯಂಗ್ಯದಿಂದ. ಅದರ ಬಗ್ಗೆ ಲೇಖನದಲ್ಲೇ ತಿಳಿಸಲಾಗಿದೆ. ತಾವು ಗಮನಿಸಲಿಲ್ಲವೇನೋ?! – ಹಸು ಸಾಕೋದು ವ್ಯವಹಾರಿಕ, ತಂದೆ ತಾಯಿ ವ್ಯಾಪಾರದ ವಸ್ತುಗಳಲ್ಲ

              Reply
              • Kumar
                Apr 19 2012

                ashok k r> ಹಸು ಸಾಕೋದು ವ್ಯವಹಾರಿಕ, ತಂದೆ ತಾಯಿ ವ್ಯಾಪಾರದ ವಸ್ತುಗಳಲ್ಲ
                ಜಗತ್ತಿನಲ್ಲಿರುವುದೆಲ್ಲಾ ನಮ್ಮ ಭೋಗಕ್ಕೆ ಎನ್ನುವ ಭೋಗವಾದ (Materialistic World View)ದಿಂದ ಹುಟ್ಟಿರುವ ಆಲೋಚನೆ ಇದು.
                ಮತ್ತು ನೀವು ನಮ್ಮ ಹಳ್ಳಿಯ ರೈತರನ್ನು ಹತ್ತಿರದಿಂದ ನೋಡಿಲ್ಲ ಎನ್ನುವುದೂ ಇದರಿಂದ ವೇದ್ಯವಾಗುತ್ತದೆ.
                ಹಳ್ಳಿಯ ರೈತ ತನ್ನ ಮನೆಯಲ್ಲಿರುವ ಹಸು-ಎತ್ತು-ಎಮ್ಮೆಗಳನ್ನು ವ್ಯಾಪಾರದ ವಸ್ತುಗಳೆಂದು ಎಂದೂ ನೋಡುವುದಿಲ್ಲ.
                ಆತನಿಗೆ ಅದು ಮಾತೆ; ಮನೆಯೊಡತಿ ಬೆಳಗಾಗಿ ಎದ್ದ ತಕ್ಷಣ ಮಾಡುವ ಮೊದಲ ಕೆಲಸ, ದೊಡ್ಡಿಗೆ ಹೋಗಿ, ಹಸುವಿಗೆ ಪ್ರದಕ್ಷಿಣೆ ಹಾಕಿ, ಅದರ ಬಾಲವನ್ನು ಮುಟ್ಟಿ ಕಣ್ಣಿಗೆ ಒತ್ತಿಕೊಂಡು, ಅದಕ್ಕೆ ನಮಸ್ಕರಿಸುತ್ತಾಳೆ. ನಂತರ ಹಾಲು ಕರೆದು, ದೊಡ್ಡೊಯನ್ನು ಶುಚಿ ಮಾಡಿಯೇ, ಮುಂದಿನ ತನ್ನ ಸ್ವಂತ ಕೆಲಸಗಳನ್ನು ಮಾಡಿಕೊಳ್ಳುತ್ತಾಳೆ.
                ರೈತನ ಮನೆಯವರು ಹಸುಗಳನ್ನು ತನ್ನ ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ನೋಡುತ್ತಾರೆ! ತೀರಿಸಲಾಗದ ಸಾಲದಲ್ಲಿ ಬಿದ್ದಿರುವ ರೈತರು ಮಕ್ಕಳನ್ನೂ ಮಾರಿರುವ ಉದಾಹರಣೆಗಳಿವೆ – ಇಂತಹ ದಾರುಣ ಸ್ಥಿತಿಯಲ್ಲಿ ರೈತರು ತಮ್ಮ ದನಗಳನ್ನು ಮಾರಾಟ ಮಾಡುವ ಯೋಚನೆ ಮಾಡಬಹುದೇ ಹೊರತು, ಇನ್ಯಾವ ಕಾರಣಕ್ಕೂ ಅವರ ಕನಸು-ಮನಸಿನಲ್ಲೂ ಅದು ಸುಳಿಯುವುದಿಲ್ಲ.
                ಮಾರಾಟ ಮಾಡುವಾಗಲೂ, “ನಿನ್ನನ್ನು ಆದಷ್ಟು ಬೇಗ ಮನೆಗೆ ವಾಪಸ್ ಒಯ್ಯುವೆ” ಎಂದು ಅದಕ್ಕೆ ವಚನವನ್ನಿತ್ತೇ ಮಾಡುತ್ತಾರೆ.
                ರೈತನ ಮತ್ತು ದನದ ಸಂಬಂಧ ಬಹಳ ಭಾವಪೂರ್ಣವಾದ ಸಂಬಂಧ.
                ತನ್ನ ತಾಯಿಯಂತೆ ಕಾಣುವ ಗೋವನ್ನು ಮಾರುವುದು ತನ್ನ ಹಕ್ಕೆಂದು ಯಾವ ರೈತನೂ ಹೇಳಲಾರ, ಹೇಳಿಲ್ಲ.
                ಆ ರೀತಿ ಹೇಳುತ್ತಾ ರೈತನ ಪರವಾಗಿ ತಾವೆಂಬ ಸೋಗು ಹಾಕುತ್ತಾ ವಾದಿಸುತ್ತಿರುವವರು ವಾಸ್ತವ ಸ್ಥಿತಿ ಅರಿತಿಲ್ಲ ಮತ್ತು ಅವರು ಬೇರಾವುದೋ ಕಾಣದ ಉದ್ದೇಶವನ್ನು ಹೊಂದಿದ್ದಾರೆ!

                Reply
                • vk
                  Apr 19 2012

                  ಇಂತಹ ಭಾವನಾತ್ಮಕ ಸಂಬಂಧಗಳ ಬಗ್ಗೆ ಇಲ್ಲಿ ಹೇಳುವುದು ವ್ಯರ್ಥ… ಇಂತಹ ಸಂಬಂಧಗಳ ಅರಿವಿದ್ದರೆ ಈ ಲೇಖಕ ಈ ತರಹದ ಲೇಖನ ಬರೆಯುತ್ತಿರಲಿಲ್ಲ. ಭಾವನೆಗಳನ್ನು ಮಾರಾಟಕ್ಕಿಟ್ಟು ಪ್ರಚಾರ ಗಿಟ್ಟಿಸಿಕೊಳ್ಳುವ ಕೀಳು ಅಭಿರುಚಿ ಅಷ್ಟೆ!

                  Reply
                  • Apr 19 2012

                    ಧರ್ಮ ಸಂರಕ್ಷಣೆಯ ಹೆಸರಿನಲ್ಲಿ ಹಸುಗಳನ್ನು ಮಾರಲೂ ಆಗದೆ ಮೇವು ದೊರಕಿಸಲೂ ಆಗದೆ ದನ ಮತ್ತು ಜನ ಒಟ್ಟಿಗೆ ಉಪವಾಸ ಬೀಳಬೇಕೆ? ಭಾರತದಲ್ಲಿ ಮಾಂಸಕ್ಕಾಗಿ ಯಾರೂ ಹಸುಗಳನ್ನು ಸಾಕಿ ಬೆಳೆಸುವುದಿಲ್ಲ. ವಯಸ್ಸಾದ ದನಗಳನ್ನು ಸಾಕುವುದು ಕಷ್ಟವೆನ್ನಿಸಿದಾಗ ಮಾರುತ್ತಾರಷ್ಟೇ. ಅವರಿಗೂ ತಮ್ಮ ಜಾನುವಾರುಗಳೊಂದಿಗೆ ಭಾವನಾತ್ಮಕ ಸಂಬಂಧಗಳಿದೆ. ಭಾವನೆ ಮತ್ತು ಜೀವನದ ಪ್ರಶ್ನೆ ಬಂದಾಗ ಅವರು ಯಾವುದನ್ನು ಆರಿಸಿಕೊಳ್ಳಬೇಕು? – if u consider even these lines as a way to get publicity then i cant help vk sir! for me life and livelihood comes first and then the emotions

                    Reply
                  • ರವಿ
                    Apr 20 2012

                    ಭಾವನಾತ್ಮಕ ಸಂಬಂಧ ಎಲ್ಲರಿಗೂ ಇರುವುದಿಲ್ಲ. ಇರಬೇಕೆಂದೇನೂ ಇಲ್ಲ. ನೀರು ಕತ್ತಿನ ಮಟ್ಟ ದಾಟಿದಾಗ ಮರಿಯನ್ನು ಕೆಳಗೆ ಹಾಕಿ ಅದರ ಮೇಲೆ ನಿಂತ ಮಂಗನ ಕಥೆ ಓದಿಲ್ಲವೇ. ಉಳಿವಿನ ಪ್ರಶ್ನೆ ಬಂದಾಗ “ತಾನು” ಯಾವತ್ತೂ ಮೊದಲು. ಹಾಗೆ ಮುಪ್ಪಿನ ದನಗಳನ್ನು ಸದ್ದಿಲ್ಲದೇ ಕಟುಕರಿಗೆ ಕಳುಸಿಕೊಟ್ಟ ರೈತರೂ ಇದ್ದಾರೆ. ಅದರಲ್ಲಿ ತಪ್ಪೇನು ಇಲ್ಲ. ಆದರೆ, ಮುಪ್ಪಾಗಿಲ್ಲದ, ಹಾಲನ್ನೀಯುವ ಹಸುಗಳು ಮೇಯಲು ಬಿಟ್ಟಾಗ ಮಾಯವಾಗುವುದು ಮಾತ್ರ ಎಷ್ಟೋ ಕಡೆ ಸತ್ಯ. ಕದ್ದಿರುವುದಕ್ಕೆ ರುಚಿ ಹೆಚ್ಚೇನೋ. ಇದೆ ಕಾರಣಕ್ಕೆ ಗೋ ಹತ್ಯೆ ನಿಷೇಧವನ್ನು ಬೆಂಬಲಿಸುವವರು ಇದ್ದಾರೆ. ನಿಷೇಧದ ಕಾನೂನು ಬರುವುದು – ಬರದಿರುವುದು ಎಲ್ಲ ವೋಟಿನ ರಾಜಕಾರಣದ ಮೇಲೆ ಅವಲಂಬಿತ. ರೈತನ ಮೇಲೂ ಅಲ್ಲ ನಮ್ಮಂಥ ಬ್ಲಾಗಿಗರ ಮೇಲೂ ಅಲ್ಲ. :)

                    Reply
                    • taralesubba
                      Apr 20 2012

                      “ಹಾಲನ್ನೀಯುವ ಹಸುಗಳು ಮೇಯಲು ಬಿಟ್ಟಾಗ ಮಾಯವಾಗುವುದು ಮಾತ್ರ ಎಷ್ಟೋ ಕಡೆ ಸತ್ಯ. ಕದ್ದಿರುವುದಕ್ಕೆ ರುಚಿ ಹೆಚ್ಚೇನೋ. ಇದೆ ಕಾರಣಕ್ಕೆ ಗೋ ಹತ್ಯೆ ನಿಷೇಧವನ್ನು ಬೆಂಬಲಿಸುವವರು ಇದ್ದಾರೆ. ”

                      ಹಸುಗಳನ್ನು ಮೆಯ್ಯಲು ಯಾರದೋ ಹೊಲಕ್ಕೆ ಇಲ್ಲವೇ ಬೀದಿಗೆ ಬಿಡುವುದಲ್ಲ. ಅದನ್ನು ಸಾಕುವವರು ಅದರ ಮೇವು ಹಾಗು ಕೊಟ್ಟಿಗೆಯನ್ನು ಒದಗಿದಬೇಕು.

                      ಅದನ್ನು ಬಿಟ್ಟು ರಾಸುಗಳು ಹಾದಿ ಬೀದಿಯಲ್ಲಿ ಕಸ ತಿನ್ನಲು ಬಿಟ್ಟು ಸಂಜೆ ಹೋಗಿ ಹಾಲು ಕರೆದುಕೊಂಡು ಬರುವ ಆಸೆಬುರುಕರೂ ಇದ್ದಾರೆ. ಅಂತಹ ರಾಸು-ಗಳನ್ನೂ ಸರಕಾರವೇ ಆ ಅಸೆಬುರುಕರಿಂದ ಕಸಿದು ಕೊಳ್ಳಬೇಕು…

                      ಅಂದ ಹಾಗೆ ನಮ್ಮ ನಾಡಿನ ಆಕಳು ಸರಾಸರಿ ಕೊಡುವರ ಹಾಲಿನ ಪ್ರಮಾಣ ಬೇರೆ ದೇಶದವಕ್ಕಿಂತ ತುಂಬಾ ಕಡಮೆ. ಅದಕ್ಕೆ ರೈತರು ಹೆಚ್ಚು ಹಸುಗಳನ್ನು ಸಾಕಿ ಕಡಮೆ ಹಾಲು ಕರೆಯುವರು ಬೇರೆ ದೇಶಗಳಿಗೆ ಹೋಲಿಸಿದರೆ. ಇದರ ಜತೆ ಇಂದು ರಾಸುಗಳಿಗೆ ಬರುವ ರೋಗಗಳು ಅದಕ್ಕೆ ಔಷದಿ, ಮೇವಿನ ಬೆಲೆ ಎಲ್ಲ ಹೆಚ್ಚಾಗಿದೆ. ಎತ್ತು ಕಟ್ಟಿ ಉಳ್ಳುವ ರೈತರೂ ಕಡಮೆ. ಹೆಚ್ಚಿನವರು ತ್ರಕ್ಟೊರ್ಗಳನ್ನು ಬಳಸುತ್ತಾರೆ. ಎತ್ತಿನ ಬಂಧಿಗಳು ಕಡಮೆಯಾಗುತ್ತಿವೆ.

                      ಹೀಗೆ ಹಾಲು ಕೃಷಿ ನಷ್ಟಕ್ಕೆ ಹೋಗುತ್ತಾ ಇದ್ದು.. ಅದೇ ಕಾರಣದಿಂದ ಹಾಲಿನ ಬೆಲೆಯೂ ಏರುತ್ತಿದೆ.

                      ಅದೇ ಯುರೋಪಿನಲ್ಲಿ ದನಗಳನ್ನೂ ಮಾಂಸಕ್ಕೂ ಬಳಸುವುದರಿಂದ ಅಲ್ಲಿ ಹಾಲಿನ ದರವೂ ಕಡಮೆ. ಇಷ್ಟೆಲ್ಲಾ ಮಾತಾಡುವ ಮಡಿವಂತರು ಯಾಕೆ ತಾವೇ ಹಾಲಿನ ಡೈರಿ ತೆಗೆಯಬಾರದು. ಆಗ ತಾನೇ ತಿಳಿಯುವುದು ಆ ವ್ಯವಹಾರದ ಲಾಭ-ನಷ್ಟ !

                    • ರವಿ
                      Apr 23 2012

                      ಯಾರ್ಯಾರ ಹೊಲಕ್ಕೆ ಬಿಡೋದಲ್ಲ ಸ್ವಾಮಿ, ಮೇವಿರೋ ಗುಡ್ಡಗಳಲ್ಲಿ. ಅಂದ ಹಾಗೆ ಕೊಟ್ಟಿಗೆಯಿಂದಲೂ ರಾತ್ರೋ ರಾತ್ರಿ ದನಗಳನ್ನು ಸದ್ದಿಲ್ಲದೇ ಹಾರಿಸೋ ನಿಪುಣರಿದ್ದಾರೆ. “ಅದನ್ನು ಸಾಕುವವರು ಅದರ ಮೇವು ಹಾಗು ಕೊಟ್ಟಿಗೆಯನ್ನು ಒದಗಿದಬೇಕು.” ಅಂತೆಲ್ಲ ಬಿಟ್ಟಿ ಸಲಹೆ ಕೊಡೋದು ಸುಲಭ. ಹಾಲಿನ ರೇಟು ಹೆಚ್ಚಾದರೆ ಮಾತ್ರ ಕಷ್ಟ. ಅಲ್ವಾ?

                • Apr 19 2012

                  kumar sir,
                  i am totally confused! ಇನ್ನು ಧರ್ಮ ಸಂರಕ್ಷಣೆಯ ಹೆಸರಿನಲ್ಲಿ ಹಸುಗಳನ್ನು ಮಾರಲೂ ಆಗದೆ ಮೇವು ದೊರಕಿಸಲೂ ಆಗದೆ ದನ ಮತ್ತು ಜನ ಒಟ್ಟಿಗೆ ಉಪವಾಸ ಬೀಳಬೇಕೆ? ಭಾರತದಲ್ಲಿ ಮಾಂಸಕ್ಕಾಗಿ ಯಾರೂ ಹಸುಗಳನ್ನು ಸಾಕಿ ಬೆಳೆಸುವುದಿಲ್ಲ. ವಯಸ್ಸಾದ ದನಗಳನ್ನು ಸಾಕುವುದು ಕಷ್ಟವೆನ್ನಿಸಿದಾಗ ಮಾರುತ್ತಾರಷ್ಟೇ. ಅವರಿಗೂ ತಮ್ಮ ಜಾನುವಾರುಗಳೊಂದಿಗೆ ಭಾವನಾತ್ಮಕ ಸಂಬಂಧಗಳಿದೆ. ಭಾವನೆ ಮತ್ತು ಜೀವನದ ಪ್ರಶ್ನೆ ಬಂದಾಗ ಅವರು ಯಾವುದನ್ನು ಆರಿಸಿಕೊಳ್ಳಬೇಕು? – even i said the same thing in the article allva!

                  Reply
        • manju....
          May 30 2012

          kumar……. ರವರೆ ನಾವು ಗೋ ಭಕ್ಷಣೆ ಬಗ್ಗೆ ಹೇಳಿದ್ದೆವೆ ಹೊರತು ನಿಯೋಗದ ಬಗ್ಗೆ ಅಲ್ಲ ……. ತಾವು ಇಲ್ಲಿ ನಿಯೋಗದ ಬಗ್ಗೆ ಮಾತಾನಾಡಿದ್ದಿರಿ…… ಅಂದರೆ ತಾವೇ ತಿಳಿದು ಕೋಳ್ಳಿ ಯಾರು ಅ ಕೇಲಸಕ್ಕೆ ಮುಂದಗಬೇಕು ಅಂತ…………………… ನಾವು ನೊಡಿರುವ ಮಟ್ಟಿಗೆ ಇದು ಹೆಚ್ಚು ಬ್ರಾಹ್ಮಣ ಕುಟುಂಬಗಳಲ್ಲೆ ಕಂಡು ಬರುತ್ತದೆ………

          Reply
          • Kumar
            May 31 2012

            manju….> ರವರೆ ನಾವು ಗೋ ಭಕ್ಷಣೆ ಬಗ್ಗೆ ಹೇಳಿದ್ದೆವೆ ಹೊರತು ನಿಯೋಗದ ಬಗ್ಗೆ ಅಲ್ಲ
            ಮಂಜು ಅವರೆ, ನಿಮಗೆ ತರ್ಕ ಎಂದರೇನೆಂದು ತಿಳಿದಿದ್ದರೆ ಈ ಪ್ರಶ್ನೆಯನ್ನು ಕೇಳುತ್ತಿರಲಿಲ್ಲ.
            ಮತ್ತೊಮ್ಮೆ ಲೇಖನವನ್ನು ಮತ್ತು ಜೊತೆಗೆ ಬಂದಿರುವ ಪ್ರತಿಕ್ರಿಯೆಗಳನ್ನು ನಿಧಾನವಾಗಿ ಓದಿ, ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
            ಆಗಲೂ ನಿಮಗೆ ಅರ್ಥವಾಗದಿದ್ದರೆ, ದಯವಿಟ್ಟು ತರ್ಕವೇನೆಂದು ಅರ್ಥಮಾಡಿಕೊಂಡು ನಂತರ ಇಲ್ಲಿ ಚರ್ಚೆಗೆ ಬನ್ನಿ.

            Reply
  8. Apr 18 2012

    Grow up Ashok. You’ll go a very long way, but in a wrong direction.
    ಸತ್ಯ ಹೇಳಲೇ,
    ಸಣ್ಣಾಗಿದ್ದಾಗಿನಿಂದ ಇತರರು ನಿಮ್ಮ ಮೇಲೆ ಗಮನ ಕೊಟ್ಟಿಲ್ಲವೆಂಬ ಕೊರಗು ನಿಮ್ಮಲ್ಲಿದೆ.
    ಪ್ರೀತಿ, ಅಕ್ಕರೆ, ಆಸರೆ ಮತ್ತು ಗಮನದ ಕೊರೆತೆಯನ್ನು ತುಂಬಿಕೊಳ್ಳಲು ನೀವು ಕಂಡುಕೊಂಡ ಮಾರ್ಗ – ಹಾಸ್ಯ ಚುಟುಕು ಮತ್ತು ಗಹನ ವಿಷಯಗಳನ್ನು.
    ಹೆಚ್ಚು ಜನರು ವಿರೋಧಿಸುವ ಅಥವಾ ಇಷ್ಟವಾಗದ ವಿಷಯಗಳನ್ನು ತೆಗೆದುಕೊಂಡು – ಸತ್ಯಕ್ಕೆ ವಿಪರೀತವಾಗಿ ಅದ್ಯಯನ ಮಾಡಿ ವಾದ ಮಂಡಿಸುವವರು ನೀವು.
    ಇತರರ ಗಮನವನ್ನು ನಿಮ್ಮೆಡೆಗೆ ಹೇಗಾದರೂ ಸೆಳೆಯಬೇಕೆಂಬ ಧಾವಂತದಲ್ಲಿ, ಹೆಸರಿನ ಆಶೆಗೆ ತಪ್ಪುದಾರಿ ತುಳಿಯುತ್ತಿದ್ದೀರಿ.
    ಪ್ರೀತಿಯಿಂದ ಹೇಳುತ್ತಿರುವೆ,
    ನಿಮ್ಮನ್ನು ನೀವೊಮ್ಮೆ ಅವಲೋಕಿಸುವಿರಾ..?? :)

    Reply
  9. Apr 18 2012

    ತತ್ವ ನೀತಿಗಳ ಬಗ್ಗೆ ಹೇಳಲಾರೆ.ಗೋವನ್ನು ಪೂಜಿಸಿ ಆರಾದಿಸೋಣ.ಅದನ್ನು ಆಹಾರವಾಗಿಸಿಕೊಳ್ಳುವುದು ಬೇಡ.

    Reply
  10. Apr 18 2012

    ಏನೋಪ್ಪ ಇಲ್ಲಿ ಕಮೆಂಟ್ ಹಾಕುವವರು ವಿ‍‍ಷಯಕ್ಕೆ ಅನುಗುಣವಾಗಿ ಮಾತನಾಡುತ್ತಾರೆ ಎಂದು ಭಾವಿಸಿದ್ದೆ! ಎಲ್ಲರಿಗೂ ವೈಯಕ್ತಿಕ ಮಟ್ಟದಲ್ಲಿ ಬೈಯುವುದರಲ್ಲೇ ಸುಖ ಸಿಗುತ್ತಿದೆ. ಈ ಕಮೆಂಟುಗಳಿಗೆ ಉತ್ತರ ಕೊಡುವ ಧಾವಂತದಲ್ಲಿ ನಾನು ಕೂಡ ವೈಯಕ್ತಿಕ ಟೀಕೆಗೆ ತೊಡಗಿಕೊಂಡುಬಿಟ್ಟರೆ ಎಂಬ ಭಯವಾಗುತ್ತಿದೆ! ಒಂದ‍ಷ್ಟು ಕಮೆಂಟುಗಳನ್ನು ಓದಿದ ನಂತರ ನನಗೇ ನನ್ನ ವಿಚಾರದ ಬಗ್ಗೆ ಸಂಶಯ ಬಂತು. ತಡಿಯಪ್ಪ ರೈತಾಪಿ ಜನರನ್ನೇ ಕೇಳೋಣ ಎಂದಾಗ ಅವನು ಮೆಸೇಜಿನಲ್ಲಿ ಹೇಳಿದ್ದಿಷ್ಟು – adella fake problems… created by financiallyupper middle class. raitha varga r villagers adanna thadediro bagge keliddiya atava odiddiya? this happens from highly selfish urban peoples…

    Reply
  11. Apr 18 2012

    >>ಹಿಂದೂ ಧರ್ಮದಲ್ಲಿ ಗೋಮಾಂಸ ಸೇವನೆಗೆ ವಿರೋಧ ವ್ಯಕ್ತವಾಗಿ ನಿಷೇಧಕ್ಕೊಳಗಾಗಿದ್ದು ಬುದ್ಧ ಧರ್ಮದಿಂದ! ಅಹಿಂಸಾ >>>ತತ್ವವನ್ನು ಭೋದಿಸುವ ಬುದ್ಧ ಧರ್ಮ ಹೆಚ್ಚೆಚ್ಚು ಪ್ರಚಲಿತಗೊಳ್ಳುತ್ತಿದ್ದಂತೆ ಗಾಬರಿಗೊಳಗಾದ ಹಿಂದೂ ಪಂಡಿತರು ಮಾಂಸ
    >>>ಸೇವನೆ ನಿಷೇಧಿಸುವ ತೀರ್ಮಾನ ಕೈಗೊಳ್ಳುತ್ತಾರೆ.

    ಈ ವಿಷಯದ ಬಗ್ಗೆ ಹೆಚ್ಚು ಬೆಳಕು ಚೆಲ್ಲುತ್ತೀರಾ? ನಾ ತಿಳಿದಂತೆ ಜೈನರು ಪ್ರಾಣಿಹಿಂಸೆ ಮಾಡಬಾರದು ಕೊಲ್ಲಬಾರದು ಎಂದರೇ ಹೊರತು ಬೌದ್ಧರಲ್ಲ. ಹಾಗೆ ಯಾರೇ ಅಂದಿದ್ದರೂ, ನೀವು ವಿವರಿಸುವಂತೆ “ಹಿಂದೂ ಪಂಡಿತರು” ಒಟ್ಟುಗೂಡಿ ಠರಾವು ತೆಗೆದುಕೊಂಡಿದ್ದು ಯಾವಾಗ ಅಂತ ತಿಳಿಸಿದರೆ ಚೆನ್ನಾಗಿರುತ್ತೆ.

    Reply
    • Apr 19 2012

      ನಾನು ಇತಿಹಾಸಕಾರನಲ್ಲ! ಲೇಖನದಲ್ಲೇ ತಿಳಿಸಿದಂತೆ ಹಿಂದೊಮ್ಮೆ ಓದಿದ ಕೆಲವು ಇತಿಹಾಸದ ಪುಸ್ತಕಗಳ ಆಧಾರದಿಂದ ಆ ಮಾತು ಹೇಳಿದ್ದೇನೆ. ಜೈನರಿಂದಲೂ ಆಗಿರಬಹುದು. ತಾವೇ ಅದರ ಬಗ್ಗೆ ಬೆಳಕು ಚೆಲ್ಲಿದರೆ ಉಪಯೋಗವಾಗುತ್ತದೆ.

      Reply
      • taralesubba
        Apr 20 2012

        ಅಶೋಕ
        ಒಮ್ಮೆ ಬ್ಲಾಗ್ ಓದಿ. ಆಮೇಲೆ ನಿಮಗೆ ಅವರು ಯಾವ ದೃಷ್ಟಿ ಕೋನದಿಂದ ಮಾತಾಡುತ್ತಿದ್ದಾರೆ ಏನು ಅರಿವಾಗುತ್ತೆ.

        Reply
  12. vasanth
    Apr 19 2012

    ಅಹಿಂಸೆಯೆಂಬುದು ಸಕಲಮತಗಳಿಂತ ಪ್ರಾಚೀನವಾದ ವೇದಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಇದೇ ತತ್ವವನ್ನು ತದನಂತರ ಎಲ್ಲಾ ಧರ್ಮಗಳು ಅನುಸರಿಸಿವೆ.

    ವೇದ ಧರ್ಮವು ಪರಮ ಅಹಿಂಸಾಧರ್ಮ:
    ವೇದದಲ್ಲಿ ಅಹಿಂಸಾ ಪ್ರತಿಪಾದನೆಯನ್ನು ಇನ್ನು ಮುಂದೆ ನೋಡೋಣ.
    ಆಧಾರ: ಋಗ್ವೇದ [1.1.4]
    ಅಗ್ನೇ ಯಂ ಯಜ್ಞಮಧ್ವರಂ ವಿಶ್ವತ: ಪರಿಭೂರಸಿ |
    ಸ ಇದ್ ದೇವೇಷು ಗಚ್ಚತಿ|
    ಅಗ್ನೇ= ಓ ಜ್ಯೋತಿರ್ಮಯ
    ಯಂ ಅಧ್ವರಂ ಯಜ್ಞಮ್ = ಯಾವ ಹಿಮ್ಸಾರಹಿತವಾದ ಯಜ್ಞವನ್ನು
    ತ್ವಂ ವಿಶ್ವತ: ಪರಿಭೂರಸಿ= ನೀನು ಎಲ್ಲೆಡೆಯಿಂದ ಅಧ್ಯಕ್ಷನಾಗಿ ಆವರಿಸುತ್ತೀಯೋ
    ಸ ಇತ್ = ಅದೇ
    ದೇವೇಷು ಗಚ್ಚತಿ = ದಿವ್ಯತತ್ವಗಳನ್ನು ಸೇರುತ್ತದೆ. [ ನನ್ನ ಮಾತು: ಭಗವಂತನನ್ನು ಸೇರುತ್ತದೆ]
    —————————————-
    ಆಧಾರ: ಯಜುರ್ವೇದ [1.1]
    ಯಜಮಾನಸ್ಯ ಪಶೂನ್ ಪಾಹಿ =ಯಜ್ಞ ಕರ್ತನ ಪಶುಗಳನ್ನು ಪಾಲಿಸು
    —————————————-
    ಆಧಾರ: ಯಜುರ್ವೇದ [13.41]
    ಅಶ್ವಂ ಮಾ ಹಿಂಸೀ = ಕುದುರೆಯನ್ನು ಹಿಂಸಿಸಬೇಡ
    ———————————————-
    ಆಧಾರ: ಯಜುರ್ವೇದ [13.43]
    ಗಾಂ ಮಾ ಹಿಂಸೀ = ಹಸುವನ್ನು ಹಿಂಸಿಸಬೇಡ
    ———————————————–
    ಆಧಾರ: ಯಜುರ್ವೇದ [13.44]
    ಅವಿಂ ಮಾ ಹಿಂಸೀ = ಮೇಕೆಯನ್ನು ಹಿಂಸಿಸಬೇಡ
    ——————————————-
    ಆಧಾರ: ಯಜುರ್ವೇದ [13.47]
    ಇಮಂ ಮಾ ಹಿಂಸೀದ್ವಿರ್ ಪಾದಂ ಪಶುಮ್ =
    ದ್ವಿಪಾದ ಪಶುವನ್ನು ಹಿಂಸಿಸಬೇಡ
    ——————————————
    ಆಧಾರ: ಅಥರ್ವ ವೇದ [10.1.29]
    ಅನಾಗೋ ಹತ್ಯಾ ವೈ ಭೀಮಾ = ನಿಷ್ಪಾಪವಾದ ಪ್ರಾಣಿಯನ್ನು ಕೊಲ್ಲುವುದು
    ಭಯಂಕರ ಪಾಪ
    ———————————————–
    ಆಧಾರ: ಅಥರ್ವ ವೇದ [8.2.25]
    ಸರ್ವೋವೈ ತತ್ರ ಜೀವತಿ
    ಗೌರಶ್ವ: ಪುರುಷ: ಪಶು:|
    ಯತ್ರೆದಂ ಬ್ರಹ್ಮ ಕ್ರಿಯತೇ
    ಪರಿಧಿರ್ಜೀವನಾಯ ಕಮ್||
    ಯತ್ರ = ಎಲ್ಲಿ
    ಇದಂ ಬ್ರಹ್ಮ = ಈ ವೇದವು
    ಕಮ್ = ಒಳಿತಾಗಿ
    ಜೀವನಾಯ = ಜೀವನಕ್ಕೆ
    ಪರಿಧಿ: ಕ್ರಿಯತೇ = ಆವರಣವಾಗಿ ಮಾಡಲ್ಪದುತ್ತದೋ ಅಲ್ಲಿ
    ಗೌ: = ಹಸುವು
    ಅಶ್ವ: = ಕುದುರೆ
    ಪುರುಷ: = ಮಾನವನು
    ಪಶು: = ಇತರ ಮೃಗಗಳು
    ಸರ್ವ: = ಎಲ್ಲವೂ
    ವೈ = ನಿಜವಾಗಿ
    ಜೀವತಿ = ಬದುಕುತ್ತವೆ.
    ಎಲ್ಲಿ ಈ ವೇದವು ಸರ್ವ ಜೀವಿಗಳ ಒಳಿತಿಗಾಗಿ ಆವರಣವಾಗಿ ಮಾಡಲ್ಪದುತ್ತದೋ ಅಲ್ಲಿ ಎಲ್ಲಾ ಜೀವಿಗಳೂ ನಿಜವಾಗಿ ಬದುಕುತ್ತವೆ. ಅಂದರೆ ಇಲ್ಲಿ “ಆವರಣ” ಎಂಬ ಪದವನ್ನು ಆಳವಾಗಿ ಅರ್ಥಮಾಡಿಕೊಳ್ಳಬೇಕು. ” ಸರ್ವಜೀವಿಗಳ ಒಳಿತಿಗಾಗಿ ಎಲ್ಲಿ ವೇದವು ಆವರಣವಾಗಿ ಮಾಡಲ್ಪದುತ್ತದೋ” ಅಂದರೆ ವೇದವು ಎಲ್ಲಾ ಜೀವಿಗಳಿಗೆ ರಕ್ಷಣೆಯಾಗಿ ಎಲ್ಲಿ ಸುತ್ತು ಗೋಡೆ ಯಾಗಿ ನಿಲ್ಲುತ್ತದೋ ಅಲ್ಲಿ ಎಲ್ಲಾ ಜೀವಿಗಳು ನಿಜವಾಗಿ ಬದುಕುತ್ತವೆ” . ಎಷ್ಟು ವಿಶಾಲವಾದ ಅರ್ಥವಿದೆ!
    ಅಂದರೆ ವೇದವು ಎಲ್ಲಾ ಜೀವಿಗಳ ನೆಮ್ಮದಿಯ,ನಿರ್ಭೀತ ಬದುಕಿಗಾಗಿ ಕರೆಕೊದುತ್ತದೆಯೇ ಹೊರತೂ ಯಾವ ಜೀವಿಗಳ ಹಿಂಸೆಗೆ ಆಸ್ಪದವೇ ಇಲ್ಲ ಎಂದು ಭಾವಿಸಬಹುದಲ್ಲವೇ?

    Courtesy : (www.vedashudhe.com)

    Reply
    • taralesubba
      Apr 20 2012

      ಅದೇ ವೇದ ಮನುಷ್ಯರನ್ನು ಮೇಲು ಕೀಳು ಏನು ಭೇದ ಬಾವ ಮಾಡು ಅನ್ನುತ್ತಂತೆ. 

      ಅಂಬೇಡ್ಕರ್ ಈ ವೇದ ಮನುಸ್ಮೃತಿ ಯನ್ನ ಸುಟ್ಟಿ ಹಾಕಿದ್ರಲ್ವ !

      Reply
      • Apr 20 2012

        {ವೇದ ಮನುಷ್ಯರನ್ನು ಮೇಲು ಕೀಳು ಏನು ಭೇದ ಬಾವ ಮಾಡು ಅನ್ನುತ್ತಂತೆ} – ಇಲ್ಲ. ವೇದ ಹಾಗೆ ಹೇಳಿಲ್ಲ.

        Reply
        • taralesubba
          Apr 20 2012

          ವೇದ ಹಾಗೆ ಹೇಳಿದ್ಯೋ ಇಲ್ವೋ.

          ಬ್ರಾಹ್ಮಣರ ಮಾತು ನಂಬಕ್ಕಾಗಲ್ಲ.!

          Reply
          • Apr 20 2012

            ನೀವೇ ಕಲಿತರಾಯ್ತು.
            ಶುಭವಾಗಲಿ. :)

            Reply
            • taralesubba
              Apr 20 2012

              ಏನ್ ನಮ್ ಜನಕ್ಕೆ  ಕಂಪ್ಯೂಟರ್ ಬಳಸಕ್ಕೆ ಬರಲ್ಲ ಅಂತಾನ ನೀನ್ ಹೇಳೋದು?

              ನೀನು ಒಂದ್ ಕಂತೆ ಕಾಮೆಂಟ್-ಗಳನ್ ಒಂದೇ ದಪ ಹಾಕ್ತಾ ಇದ್ದೀ. ನಮಗೂ ನೋಡ್ ನೋಡ ಬೇಸೋತ್ತಿತು.

              “ಈಗ ಗೊತ್ತಾಯ್ತು ಬಿಡಿ, ” ಸರಿ.. ನೀನ್ ಏನ್ ಮಾಡೋ ಹಾಗಿದ್ದಿ? ನಿಲುಮೆ ಏನ್ ನಿನ್ ಅಗ್ರಹಾರವ?

              Reply
  13. ಮನಸ್ಸು
    Apr 20 2012

    ಹಸುವನ್ನು ರಕ್ಷಿಸುವ ಎಲ್ಲರ ಅಹಿಂಸಾ ಧೋರಣೆ ಏನೋ ಸರಿ. ಆದರೆ ನನಗೆ ಕುರಿ ಮೆಕೆಗಳಲ್ಲಿ ೬೬ ಕೋತಿ ದೇವತೆಗಳಿರುಂತೆ ಕಾಣಿಸುತ್ತದೆ. ಎಷ್ಟು ಜನ ಹಿಂದೂಗಳು/ಅಥವಾ ಇತರ ಧರ್ಮಿಗಳು ನನ್ನ Mutton ತಿನ್ನುವದನ್ನು ನಿಲ್ಲಿಸಲು ತಯಾರಿದ್ದಾರೆ?

    Reply
  14. Apr 20 2012

    ಕುರಿ ಮಾಂಸ ತಿನ್ನುತ್ತಿದ್ದೀರಿ ಎಂದಾಗಲೇ,
    ನಿಜವಾಗಿ ನಿಮಗೆ ಕುರಿಯಲ್ಲಿ ೬೬ ಕೋಟಿ ದೇವತೆಗಳು ಕಂಡಿಲ್ಲ ಎಂದು ಸಾಬೀತಾಯಿತಲ್ಲ?
    ಮಾಂಸಾಹಾರ ಮನುಷ್ಯ ದೇಹಕ್ಕೆ ಹೇಳಿ ಮಾಡಿಸಿದ್ದಲ್ಲ ಎಂಬುದು ವೈಜ್ನಾನಿಕವಾಗಿ ಧೃಢಒಪಟ್ಟಿದೆ.
    http://www.godsdirectcontact.com/quanyin/vegetarian.html ನಲ್ಲಿ ಓದಿಕೊಳ್ಳಬಹುದು.
    ನಿಜವಾಗಿ ಮಾಂಸಾಹಾರ ತ್ಯಜಿಸುವ ಇಚ್ಛೆ ಇದ್ದರೆ ತಿಳಿಸಿ. ಖಂಡಿತಾ ಸಹಾಯ ಮಾಡುವೆ.
    ಶುಭವಾಗಲಿ. :)

    Reply
    • Apr 20 2012

      maamsaahaara dinakke nalku baari tindarashte aarogyakke haanikaaraka! naavu astondu tinnodu illa mattu biduva yochaneyallu illa!!

      Reply
      • ಬುದ್ದಿಜೀವಿ???
        Apr 20 2012

        ಒಳ್ಳೆದಾಗಲಿ ತಮಗೆ ! ಏನಾದರೂ ತಿನ್ನಿ ,ಯಾವಾಗಲಾದರೂ ಬಿಡಿ , ನಿಮ್ಮಿಷ್ಟ ! ಹೇಳೋಕೆ ನಾವ್ಯಾರು? ಕೇಳೋಕೆ ನೀವ್ಯಾರು? ಸಿಗರೇಟು ಸೇದಬೇಡಿ ಕ್ಯಾನ್ಸೆರ್ ಬರತ್ತೆ ಅಂದಾಗ , ನಮ್ಮಜ್ಜ ದಿನಕ್ಕೆ 24 ರಂತೆ 75 ವರುಷ ಸೇದಿದ್ದಾರೆ ,ಈಗಲೂ ಗಟ್ಟಿಮುತ್ತಾಗಿದ್ದಾರೆ ಕ್ಯಾನ್ಸೆರೋ ಬಂದಿಲ್ಲ , ಅಂತ ಉದಾಹರಣೆ ಸಹಿತ ಹೇಳೋರಿಗೆ ಏನು ಮಾಡಲಾದೀತು? ಅಲ್ಲವೇ?

        Reply
        • taralesubba
          Apr 20 2012

          ಹಾಗಾದರೆ ಸರಕಾರ ‘ಮಾಂಸಾಹಾರ ಆರೋಗ್ಯಕ್ಕೆ ಹಾನಿಕರ’ ಅಂತ ಯಾಕೆ ಮಾಂಸದ ಅಂಗಡಿ ಮುಂದೆ ಹಾಕಿಲ್ಲ? 

          ನಮ್ಮ ಮಿಲಿಟರಿಯಲ್ಲಿ ಮಾಂಸಾಹಾರವಿದೆ. ಹಾಗಾದರೆ ನಮ್ಮ ಸೈನಿಕರಿಗೆ ‘ವಿಷ’ ಕೊಡ್ತಾ ಇದ್ದೀಯ ನಮ್ ದೇಶ ?

          Reply
          • Apr 20 2012

            ಮಾಂಸಾಹಾರ ಎಲ್ಲರಿಗೂ ವರ್ಜ್ಯ ಅಲ್ಲ.
            ಕಾಲ-ದೇಶಕ್ಕೆ ಸಂಬಂಧಿಸಿದಂತೆ ಇದರಲ್ಲಿ ಬದಲಾವಣೆಗಳು ಬರುತ್ತವೆ. :)

            Reply
      • Apr 20 2012

        naavu astondu tinnodu illa mattu biduva yochaneyallu illa!! – ಆ comment ನಿಮ್ಮ ಲೇಖನಕ್ಕಲ್ಲ. ಅದು ಮನಸು ಅವರಿಗೆ ಮಾಡಿದ ಪ್ರತಿ-ಪ್ರತಿಕ್ರಿಯೆ. ನೀವು ಉತ್ತರಿಸುವ ಅಗತ್ಯವೂ ಇರಲಿಲ್ಲ. :)

        Reply
    • T.M.Kraishna
      Apr 21 2012

      ವೈಜ್ಞಾನಿಕವಾಗಿ ಇನ್ನೂ ಏನೇನೋ ದೃಡಪಟ್ಟಿದೆ. ಮನುಷ್ಯ ಈ ಭೂಮಿಗೆ ಮಾರಕವಾಗಿದ್ದಾನೆ ಎಂದು ಕೂಡ ಸಾಬೀತಾಗಿದೆ.
      ಹಾಗಾಗಿ ತಾವುಗಳು ಮೊದಲು ಇಲ್ಲಿಂದ ….. ಮೂಲಕ ಮೇಲ್ಪಂಕ್ತಿ ಹಾಕಿಕೊಟ್ಟರೆ ಧರೆಯ ದಗೆ ಒಂದಷ್ಟು ಕಡಿಮೆಯಾದೀತು. ಕೂಡಲೇ ಆ ಕೆಲಸ ಮಾಡಿ ಪುಣ್ಯ ಕಟ್ಟಿಕೊಳ್ಳಿ.

      Reply
      • Apr 21 2012

        T M Kraishnaರೇ,
        {ಮನುಷ್ಯ ಈ ಭೂಮಿಗೆ ಮಾರಕವಾಗಿದ್ದಾನೆ ಎಂದು ಕೂಡ ಸಾಬೀತಾಗಿದೆ.} – ನನಗೆ ತಿಳಿದಂತೆ ಇಲ್ಲ.
        {ಹಾಗಾಗಿ ತಾವುಗಳು ಮೊದಲು ಇಲ್ಲಿಂದ ….. ಮೂಲಕ ಮೇಲ್ಪಂಕ್ತಿ ಹಾಕಿಕೊಟ್ಟರೆ ಧರೆಯ ದಗೆ ಒಂದಷ್ಟು ಕಡಿಮೆಯಾದೀತು. ಕೂಡಲೇ ಆ ಕೆಲಸ ಮಾಡಿ ಪುಣ್ಯ ಕಟ್ಟಿಕೊಳ್ಳಿ.} – ನಾನು ಇಲ್ಲಿಂದ ಹೊರಟರೆ, ಧರೆಯ ಧಗೆ ಕಡಿಮೆಯಾಗುವುದು ಹೇಗೋ ಕಾಣೆ? ;)

        Reply
        • T.M.Kraishna
          Apr 23 2012

          ನಿಮ್ಮದೇ ಏನಾದರೂ ಇದ್ದರೆ ಹೇಳ್ರಿ. ನಾನು ಹೇಳಿದ್ದನ್ನೇ ನನಗೆ ಹೇಳಲು ಬರುತ್ತೀರಲ್ಲಾ!!!

          Reply
  15. taralesubba
    Apr 20 2012

    ಬೀಫ್ ತಿನ್ನೋ ಗೆಳೆಯರೇ ಯಾಕೆ ಗಲಾಟೆ? ಭಾರತೀಯ ಜನತಾ ಪಾರ್ಟಿ ಮತ್ತೆ ಮುಂದಿನ ಸಲ ಅಧಿಕಾರಕ್ಕೆ ಬರೋ ಲಕ್ಷಣಗಳಿಲ್ಲ.

    ಇದರ ಹಿಂದೆ ಸಸ್ಯಾಹಾರಿ ಮೇಲುಜಾತಿಯವರ  ಕಿತಾಪತಿ ಇದೆ.! ಅದಕ್ಕೆ  ನಾವೆಲ್ಲಾ ಮೇಲುಜಾತಿಯವರ ಒಡೆತನದ ‘ಸಸ್ಯಾಹಾರಿ ಹೋಟೆಲ್’ ಗಳಲ್ಲಿ ತಿನ್ನೋದು ಬಿಟ್ಟು. ನಮ್ಮದೇ ‘ಬೀಫ್ ಬಿರಿಯಾನಿ ಹೋಟೆಲ್’ ನಡೆಸಿದ್ರಾಯ್ತು. ಸುಮ್ನೆ ಆವರ ವಡೆ, ದೋಸೆ ತಿಂದು ನಮ್ಮ ಆರೋಗ್ಯ ಹಾಳು.

    Reply
    • T.M.Kraishna
      Apr 21 2012

      ದನದ ಮಾಂಸ, ನಾಯಿ ಮಾಂಸ ಭಕ್ಷಣೆಗಿಂತಲೂ ನೂರಾರು ಪಟ್ಟು ಕೀಳಾದುದು ನಿಮ್ಮ ಅಸಹ್ಯ ಬೈಗುಳ.
      -ಟಿ.ಎಂ.ಕೃಷ್ಣ

      Reply
  16. ಕುರಿ ಮಾಂಸ 300 ರೂಪಾಯಿ ಅಂತ ಚಿಂತಿಸೋ ನಿಮಗೆ ಗೋವಿನ ಮಾಂಸದ ಕಡೆ ಒಲವಿದ್ದರೆ, ನಾನು ಇನ್ನೂ ಒಳ್ಳೆಯ ಸಲಹೆ ಕೊಡ್ತೇನೆ… ಬೀದಿ ನಾಯಿ ಮಾಂಸ ತಿನ್ರಿ… ಉಚಿತವಾಗಿ… ಸಮಾಜವನ್ನು ಶುಚಿ ಮಾಡಿದಹಾಗೂ ಆಗುತ್ತೆ

    Reply
  17. Kumar
    Apr 21 2012

    ನೀವು ದನ ಬೇಕಾದರೂ ತಿನ್ನಿ, ಅಥವಾ ಅದನ್ನು ಸಾಕುವವನನ್ನೇ ತಿನ್ನಿ; ಅದು ನಿಮ್ಮಿಷ್ಟ. ನಿಮ್ಮನ್ನು ತಡೆಯಲು ನಾವೇನೂ ಪೊಲೀಸರಲ್ಲ ಅಥವಾ ನ್ಯಾಯಾಲಯವಲ್ಲ.
    ಮತ್ತು ಇದಕ್ಕೆಲ್ಲಾ ನೀವು ಕೊಡುತ್ತಿರುವ ಸಮರ್ಥನೆ “ಬಡ ರೈತನಿಗಾಗಿ”!!
    ಗೋವಿನ ಕುರಿತಾಗಿ ನಿಮಗೆ ಕೆಲವು ಪ್ರಮುಖ ವಿಷಯಗಳು ತಿಳಿದಿದೆಯೇ? ಗೋವಿನಿಂದ ಉತ್ಪತ್ತಿಯಾಗುವ ಸಾಮಾಗ್ರಿಗಳಿಗಾಗಿ ಅವನ್ನು ಪೇಟೆಂಟ್ ಮಾಡಿಕೊಳ್ಳಲು ಜಗತ್ತಿನಲ್ಲಿ ಪೈಪೋಟಿ ನಡೆದಿದೆ ಎಂಬುದು ತಿಳಿದಿದೆಯೇ? ಅದನ್ನೆಲ್ಲಾ ತಿಳಿಯಲು ಈ ಕೊಂಡಿ ನೋಡಿ: http://ssnarendrakumar.blogspot.in/2012/04/facts-about-holy-cow.html

    ಪ್ರಪಂಚ ಮುಳುಗಲಿ, ಜಗತ್ತೇ ನಾಶವಾಗಲಿ, ಬೇಕಾದ್ದಾಗಲಿ, ನೀವು ಗೋವನ್ನು ತಿನ್ನುವುದನ್ನು ನಿಲ್ಲಿಸಬೇಡಿ – ಏಕೆಂದರೆ, ನಿಮ್ಮ ತಾಯನ್ನು ಕೊಂದು ತಿನ್ನಲು ನಿಮಗಲ್ಲದೆ ಬೇರಾರಿಗೂ ಹಕ್ಕಿಲ್ಲ!!

    Reply
    • ದೇವರು
      May 30 2012

      oooo kumar avre neevu hasu hotteyalli huttidhira….?

      hasu nim thaayina….?

      Reply
      • ಮಾಯ್ಸ
        May 30 2012

        ಈ ಮಾತಿಗೆ ತಪ್ಪು ತಿಳೀಬೇಡಿ ..

        ನಿಮ್ಮ ಲಾಜಿಕ್ಕನ್ನೇ ಬಳಸೋಣ.

        ತಾವು ನಾಯಿಯ ಹೊಟ್ಟೆಯಲ್ಲಿ ಹುಟ್ಟಿಲ್ಲ, ತಮ್ಮ ತಾಯಿ ನಾಯಿಯಲ್ಲ, ಕೋತಿಯಲ್ಲ, ಹಾಗಂತ ತಾವು ನಾಯಿ, ಇಲ್ಲವೇ ಕೋತಿ ತಿನ್ತೀರಾ?

        ಜಗತ್ತಿನಲ್ಲಿ ನಿಮ್ಮ ತಂದೆ ತಾಯಿ ಬಿಟ್ಟು ಮಿಕ್ಕವರು, ಮಿಕ್ಕ ಪ್ರಾಣಿ/ಪಕ್ಷಿ/ಗಿಡ ಎಲ್ಲವನ್ನು ತಿನ್ತೀರಾ?

        Reply
        • ದೇವರು
          May 30 2012

          ಈ ಮಾತಿಗೆ ತಪ್ಪು ತಿಳೀಬೇಡಿ ..

          ನಿಮ್ಮ ಲಾಜಿಕ್ಕನ್ನೇ ಬಳಸೋಣ.

          ತಾವು ನಾಯಿಯ ಹೊಟ್ಟೆಯಲ್ಲಿ ಹುಟ್ಟಿಲ್ಲ, ತಮ್ಮ ತಾಯಿ ನಾಯಿಯಲ್ಲ, ಕೋತಿಯಲ್ಲ, ಹಾಗಂತ ತಾವು ನಾಯಿ, ಇಲ್ಲವೇ ಕೋತಿ ತಿನ್ತೀರಾ?

          ಜಗತ್ತಿನಲ್ಲಿ ನಿಮ್ಮ ತಂದೆ ತಾಯಿ ಬಿಟ್ಟು ಮಿಕ್ಕವರು, ಮಿಕ್ಕ ಪ್ರಾಣಿ/ಪಕ್ಷಿ/ಗಿಡ ಎಲ್ಲವನ್ನು ತಿನ್ತೀರಾ?

          ನಾವು ಎಲ್ಲವನ್ನು ತಿನ್ತೀವಿ ಅಂತ ಎಲ್ಲೂ ಹೇಳಿಲ್ಲಾ ಮಾಯ್ಸ್ ರವರೆ……

          ನಮಗೆ ಇಷ್ಟವಾದ ಆಹಾರನ ಮಾತ್ರ ತಿನ್ತೀವಿ ಅಷ್ಟೇ……….. ತಾವು ನಾಯಿ ಕೋತಿನಾ ತಿನ್ದೀದಿರಾ….? ಎನೋ ಯಾರಿಗೆ ಗೋತ್ತು ಅವರವರ ಅನುಬವ ಅವರದ್ದು

          Reply
      • Kumar
        May 30 2012

        ದೇವರು ಪ್ರಶ್ನೆ ಕೇಳ್ತಿದಾರೆ!
        ನನ್ನ ಮನಸ್ಸನ್ನೆಲ್ಲಾ ತಿಳಿದಿರೋ ದೇವರು ನನ್ನನ್ನು ಪರೀಕ್ಷಿಸುತ್ತಿದ್ದಾರೆ ಅನ್ಸುತ್ತೆ!!
        ದೇವ್ರು, ನೀನೇ ನನ್ನ ತಂದೆ, ತಾಯಿ………ಅಂದ್ಮೇಲೆ ಹಸು ಬಗ್ಗೆ ಏನ್ಹೇಳ್ಲಿ!?
        ನೀನು ಬೇಕಾದ್ರೆ ಹಸು ತಿಂದ್ಕೋ, ನಾಯಿ ತಿಂದ್ಕೋ, ಕೋತಿ ತಿಂದ್ಕೋ, ಕತ್ತೆ ತಿಂದ್ಕೋ, ಹಂದಿ ತಿಂದ್ಕೋ,
        ಬೇಕಾದ್ರೆ ಚೈನಾದವರ ತರಹ ಜಿರಳೆ ತಿಂದ್ಕೋ, ಹಲ್ಲಿ ತಿಂದ್ಕೋ….. ಬರೇ ಪ್ರಾಣಿಗಳನ್ನ ಮಾತ್ರ ಅಲ್ಲ, ಬೇಕಾದ್ರೆ ಪ್ರಾಣಿಗಳು ತಿಂದ ಮೇಲೆ ಹೊರಗೆ ಹಾಕೋದನ್ನೂ ತಿಂದ್ಕೋ……..ನನಗೆ ಯಾವ ಅಭ್ಯಂತರವೂ ಇಲ್ಲ. ಯಾಕಂದ್ರೆ ನೀನು ದೇವ್ರು. ಹುಟ್ಸಿದ್ ದೇವ್ರು ಹುಲ್ಲು ಬೇಕಾದ್ರೂ ತಿನ್ಬೋದು, ಏನು ಬೇಕಾದ್ರು ತಿನ್ಬೋದು…..
        ಈ ತರಹ ಇಷ್ಟೊಂದು ಜನರನ್ನ, ಪ್ರಾಣಿಗಳನ್ನು, ಇನ್ನೂ ಏನೇನನೋ ಹುಟ್ಟಿಸೋದಕ್ಕೆ ನೀನು ಏನೇನೋ ತಿಂದಿರಲೇ ಬೇಕಲ್ವೆ?
        ಆದ್ರೆ, ನನ್ನನ್ನ ತಿನ್ಬೇಡ, ನನ್ನ್ ತಲೆನಂತೂ ತಿನ್ಲೇಬೇಡ!

        Reply
        • ದೇವರು
          May 30 2012

          ಕುಮಾರ್ ರವರೆ ಗೋವಿನಲ್ಲಿ 33 ಕೋಟಿ ದೇವರುಗಳು ಇವೆ ಅಂತಿರ …… ಅದರೆ ಅದನ್ನ ಕಡಿಯುವಾಗ ಒಂದೇ ಒಂದು ದೇವರಾದರು ಕೇಳಲಿಲ್ಲಾ ಯಾಕಪ್ಪ ಕುಮಾರಾ………………

          ಆ ನೀನ್ನ ದೇವರುಗಳು ಎನ್ ಮಾಡ್ತೀದ್ದಾರೆ ಹೇಳು ಮಗು…….?

          ಯಾಕೆ ಸುಮ್ನೆ ದೇವರು ದಿಂಡ್ರು ಅಂತ ಹೇಳಿ ಜನಗಳನ್ನಾ ಮೊಸ ಮಾಡ್ತೀರಾ………. ಹೆಂಡ್ತಿನಾ ಕಾಡಿಗೆ ಕಳುಹಿಸಿದ ಅ ನಿನ್ನ ರಾಮನು ದೇವರ …….. ಹೇಳು ಕುಮಾರ್…….

          ನೀನು ಬೇಕಾದ್ರೆ ಹಸು ತಿಂದ್ಕೋ, ನಾಯಿ ತಿಂದ್ಕೋ, ಕೋತಿ ತಿಂದ್ಕೋ, ಕತ್ತೆ ತಿಂದ್ಕೋ, ಹಂದಿ ತಿಂದ್ಕೋ,
          ಬೇಕಾದ್ರೆ ಚೈನಾದವರ ತರಹ ಜಿರಳೆ ತಿಂದ್ಕೋ, ಹಲ್ಲಿ ತಿಂದ್ಕೋ….. ಬರೇ ಪ್ರಾಣಿಗಳನ್ನ ಮಾತ್ರ ಅಲ್ಲ, ಬೇಕಾದ್ರೆ ಪ್ರಾಣಿಗಳು ತಿಂದ ಮೇಲೆ ಹೊರಗೆ ಹಾಕೋದನ್ನೂ ತಿಂದ್ಕೋ……..ನನಗೆ ಯಾವ ಅಭ್ಯಂತರವೂ ಇಲ್ಲ..?

          ಇದು ನಿಮ್ಮ ಸಂಸ್ಕ್ರತಿನಾ………?

          Reply
          • Kumar
            May 31 2012

            ದೇವರು> ಇದು ನಿಮ್ಮ ಸಂಸ್ಕ್ರತಿನಾ………?
            ಸ್ವಾಮಿ ದೇವ್ರೇ, ಏನ್ ಬೇಕಾದ್ರೂ ತಿಂತೀನಿ, ಅದು ನನ್ನಿಷ್ಟ, ಅಂತಿರುವವರು ನೀವು. ಹೀಗಾಗಿ, ನಿಮ್ಮ ಸಂಸ್ಕೃತಿ ಏನಂತ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
            ನಿಮಗೆ ಇಷ್ಟ ಪಟ್ಟು ತಿನ್ನಬಹುದಾದ ಇನ್ನೂ ಕೆಲವು ವಸ್ತುಗಳನ್ನು ಹೆಸರಿಸಿದೆ ಅಷ್ಟೆ. ಅಷ್ಟಕ್ಕೇ ಇಷ್ಟು ಕೋಪ ಮಾಡಿಕೊಂಡರೆ ಹೇಗೆ?
            ಹಸು ತಿಂದಿದೀರ, ಇಷ್ಟ ಆಗಿದೆ. ಪಾಪ, ನಾಯಿ ಏನು ಮಾಡಿದೆ ತಪ್ಪು? ಜಿರಳೆ, ಕಪ್ಪೆ, ಹಲ್ಲಿಗಳು ಏನು ತಪ್ಪು ಮಾಡಿವೆ?
            ದೇವ್ರು ಹುಟ್ಟಿಸಿದ ಪ್ರಾಣಿಗಳ ನಡುವೆ ಭೇದಭಾವ ಮಾಡೋದು ಎಷ್ಟರಮಟ್ಟಿಗೆ ಸರಿ?
            ತಿನ್ನೋದಿದ್ರೆ ಎಲ್ಲಾ ಪ್ರಾಣೀನೂ ತಿನ್ನಿ, ಇಲ್ಲದಿದ್ದರೆ ಯಾವುದನ್ನೂ ತಿನ್ನಬೇಡಿ.

            ದೇವರು> ಅದರೆ ಅದನ್ನ ಕಡಿಯುವಾಗ ಒಂದೇ ಒಂದು ದೇವರಾದರು ಕೇಳಲಿಲ್ಲಾ
            ದೇವರು> ಹೆಂಡ್ತಿನಾ ಕಾಡಿಗೆ ಕಳುಹಿಸಿದ ಅ ನಿನ್ನ ರಾಮನು ದೇವರ
            ಹಿಂದುಗಳ ದೇವರ ಕುರಿತಾಗಿ ಬಾಯಿಗೆ ಬಂದ ಹಾಗೆ ಹರಟುತ್ತಿದ್ದೀಯಲ್ಲ, ನಿಜಕ್ಕೂ ನೀನು ಗಂಡಸಾಗಿದ್ದರೆ ಉಳಿದ ಮತ-ಧರ್ಮಗಳ ದೇವರ ಕುರಿತಾಗಿಯೂ ಇದೇ ರೀತಿ ಹಗುರವಾದ ಮಾತುಗಳನ್ನಾಡು ನೋಡೋಣ?

            Reply
            • ದೇವರು
              May 31 2012

              ಗಂಡಸ್ತನದ ಬಗ್ಗೆ ಮಾತಾಡಬೇಡ ಕುಮಾರಾ…. ನೀನ್ನಂತ 7 ಜನ ಮಕ್ಕಳು ಇದರೆ ನಂಗೆ…….

              ಇನ್ನೂ ದೇವರುಗಳ ಮೇಲೆ ನನಗೆ ನಂಬಿಕೆನೆ ಇಲ್ಲ ಅದು ರಾಮನಾಗಿರಬಹುದು, ಯೇಸು (ಏಸು) ಅಗಿರಬಹುದು, ಅಲ್ಲಾ ಅಗಿರಬಹುದು, ಅದರೆ ನಾನು ದೇವರನ್ನು ನಂಬುವುದಕಿಂತ ಹೆಚ್ಚು ಜನಗಳನ್ನ ನಂಬುತ್ತೇನೆ. ಕಾಣದ ದೇವರುಗಳಿಗಿಂತ ಕಾಣುವ ಮನುಷ್ಯರೇ ಮೇಲು. ಅ ನೀನ್ನ ದೇವರಿಗೆ ಹೇಳು ಕುಮಾರ್ ಸಮಾಜದಲ್ಲಿರು ಮೇಲು ಕೀಳು, ಭ್ರಷ್ಟಚಾರ, ಮೂಡನಂಬಿಕೆ, ಅನಾಚರ ತೋಲಗಿಸುವುದಕ್ಕೆ. ಸುಮ್ಮನೆ ಯಾಕೆ ಬೊಗಳೇ ಬೀಡುತ್ತೀರಾ ದೇವರು ದಿಂಡ್ರು ಅಂತ, ಮೂಡನಂಬಿಕೆ ಅನ್ನುವುದು ಎಲ್ಲ ಮತ-ಧರ್ಮಗಳಲ್ಲು ಇದೆ ನಾನು ವಿರೋದಿಸುವುದು ಅದನ್ನೇ ….. ಕುಮಾರ್

              Reply
              • Kumar
                May 31 2012

                ದೇವರು> ಗಂಡಸ್ತನದ ಬಗ್ಗೆ ಮಾತಾಡಬೇಡ ಕುಮಾರಾ…. ನೀನ್ನಂತ 7 ಜನ ಮಕ್ಕಳು ಇದರೆ ನಂಗೆ.
                ಯಾರದೋ ಮಕ್ಕಳನ್ನು ನಿನ್ನ ಮಕ್ಕಳು ಎಂದುಕೊಳ್ಳೋದಕ್ಕೆ ನಾಚಿಕೆಯಾಗಲ್ವ!?
                ಎನ್.ಡಿ.ತಿವಾರಿಗೆ ಮಾಡಿಸ್ದಂಗೆ ನಿಂಗೂ ರಕ್ತ ತೆಗೆದು ಡಿ.ಎನ್.ಎ ಟೆಸ್ಟ್ ಮಾಡ್ಸಿದ್ರೆ ಗೊತ್ತಾಗತ್ತೆ, ನಿನ್ನ ಆ ೭ ಮಕ್ಕಳ ತಂದೆ ಯಾರೂಂತ!
                ನಿನ್ನ ಗಂಡಸ್ತನ ತೋರಿಸಿಕೊಳ್ಳೋದಕ್ಕೆ ಈ ಮಟ್ಟಕ್ಕೆ ನೀನಿಳೀತೀಯಾ ಅಂತ ನಾನಂದ್ಕೊಂಡಿರ‍್ಲಿಲ್ಲ.

                ನಿನ್ನ ನಿಜವಾದ ಹೆಸರನ್ನೂ ಹೇಳಿಕೊಳ್ಳೋ ಧೈರ್ಯ ಸಾಲದೆ “ದೇವರು” ಎಂಬ ಸುಳ್ಳುಹೆಸರಿನೊಂದಿಗೆ ಇಲ್ಲಿ ಪ್ರತಿಕ್ರಿಯೆ ನೀಡ್ತಿರೋದನ್ನ ನೋಡಿದ್ರೇನೇ ಗೊತ್ತಾಗಲ್ವ, ನೀನೊಬ್ಬ ಶಿಖಂಡಿ ಅಂತ?

                ನನ್ನ ಸವಾಲನ್ನ ಸ್ವೀಕರಿಸೋ ಗಂಡಸ್ತನ ನೀನು ತೋರಿಸ್ಲಿಲ್ಲ ಅನ್ನೋದು ಸಹ ನಿನ್ನ ಪ್ರತಿಕ್ರಿಯೆಯಿಂದ ಗೊತ್ತಾಯ್ತು.
                ಹಿಂದು ದೇವರ ಹೆಸರನ್ನು ಹಿಡಿದು ಬೇಕಾದಂಗೆ ಮಾತಾಡಿದ್ಯಲ್ಲ, ಅನ್ಯರ ದೇವರ ಹೆಸರನ್ನು ಹಿಡಿದು ಇದೇ ರೀತಿ “ಕೀಳು ಅಭಿರುಚಿ”ಯ ಒಂದೇ ಒಂದು ಕಾಮೆಂಟ್ ಹಾಕು ನೋಡೋಣ, ಆಗ ನಿನ್ನನ್ನ ಗಂಡು ಅಂತ ಒಪ್ಕೋತೀನಿ.
                ಅದು ಬಿಟ್ಟು, ಮಕ್ಕಳನ್ನ ತೋರಿಸ್ತಾನಂತೆ. ನೀನು ೭ ಮಕ್ಕಳಲ್ಲ, ೧೦೦ ಮಕ್ಕಳು ತೋರಿಸಿದ್ರೂ ನಿನ್ನ ಗಂಡಸ್ತನಾನ ಯಾರೂ ಇಲ್ಲಿ ಒಪ್ಪಲ್ಲ.

                ದೇವರು> ಮೂಡನಂಬಿಕೆ ಅನ್ನುವುದು ಎಲ್ಲ ಮತ-ಧರ್ಮಗಳಲ್ಲು ಇದೆ ನಾನು ವಿರೋದಿಸುವುದು ಅದನ್ನೇ
                ನಿನ್ನಂತ ಹಿಜಡಾಗಳಿಗೆ, ಹಿಂದುಗಳಂತ ಶಾಂತಿಪ್ರಿಯರ ದೇವರನ್ನು ಮಾತ್ರ ಟೀಕಿಸಲು ಬರುತ್ತೆ; ಯಾಕಂದ್ರೆ, ಯಾವ ಹಿಂದೂನು ಇದನ್ನ ಉಗ್ರವಾಗಿ ಪ್ರತಿಭಟಿಸಲ್ಲ.
                “ಎಲ್ಲಾ ಮತಧರ್ಮಗಳನ್ನೂ ವಿರೋಧಿಸುತ್ತೇನೆ” ಅಂತ ಎಷ್ಟು ಚೆನ್ನಾಗಿ ತಿಪ್ಪೆ ಸಾರ‍್ಸಿದೀಯಾ ನೋಡು.
                ಹಿಂದು ದೇವರ ವಿಷಯ ಬಂದಾಗ, ದೇವರ ಹೆಸರು, ಯಾವುದೋ ಒಂದು ಪ್ರಸಂಗ, ಇತ್ಯಾದಿಗಳನ್ನೆಲ್ಲಾ ತೆಗೆದು ಪ್ರಶ್ನಿಸೊಕ್ಕೆ ಆಗುತ್ತೆ.
                ಅನ್ಯ ದೇವರು ಅಂದ ಕೂಡಲೇ, ಬಾಲನ ಹಿಂದಿನ ಎರಡು ಕಾಲ್ಗಳ ಹಿಂದೆ ಸಿಕ್ಕಿಸಿಕೊಂಡು ಓಡಿಹೋಗೋ ನಾಯಿ ತರಹ ಹೇಡಿತನ!!
                ವಾರೆಹ್ ವಾಹ್! ಎಂತಹ ಗಂಡಸ್ತನ!?

                ದೇವರು> ಸಮಾಜದಲ್ಲಿರು ಮೇಲು ಕೀಳು, ಭ್ರಷ್ಟಚಾರ, ಮೂಡನಂಬಿಕೆ, ಅನಾಚರ ತೋಲಗಿಸುವುದಕ್ಕೆ.
                ನಿನ್ನಂತ ಬೊಗಳೋ ನಾಯಿಗ್ಳು ಮಾಡ್ಕೊಂಡಿರೋದು ಈ ಭ್ರಷ್ಟಾಚಾರ, ಮೂಡನಂಬಿಕೆ, ಅನಾಚಾರಗಳು.
                ಅದಕ್ಕೆ ದೇವರ ಹೆಸರು ಹಾಕಿ ತಪ್ಪಿಸ್ಕೊಳ್ಳೋಕೆ ನೋಡ್ತಿದೀಯಾ ಅಷ್ಟೇ. ನಿನ್ನಂತ ಹಿಜಡಾಗಳ ಕೈಯ್ಯಲ್ಲಿ ಮತ್ತೇನು ಮಾಡಕ್ಕಾಗತ್ತೆ ಹೇಳು!?

                Reply
                • ಗುರುಮೂರ್ತಿ
                  May 31 2012

                  ಕನ್ನಡಿ ಮುಂದೆ ನಿಂತ್ತು ತನ್ನನು ತಾನು ಬೈದುಕೊಂಡಂಗಿ ಇದೆ ತಮ್ಮ ಪರಿಸ್ಥಿತಿ…..

                  ನಿಮ್ಮ ಪದ ಬಳಕೆಯೇ ನೀಮ್ಮ ಸಂಸ್ಕೃತಿ ಎಂತಹದು ಎಂದು ತಿಳಿಸುತ್ತದೆ… ಇನ್ನೂ ತಾವೆನು ಹೇಳಾಬೇಕಾಗಿಲ್ಲ….

                  ಅವರ ಬಗ್ಗೆ ಅವರಿಗೆ ಗೋತ್ತು… ನಿನ್ನ ನೋವು ನನಗೆ ಆರ್ಥವಾಗುತ್ತದೆ ನಿನ್ನಂತಹವರು ಈ ಸಮಾಜದಲ್ಲಿ ಬದುಕುತ್ತಿದ್ದಾರೆ ……. ನಾನು ನೀನ್ನನು ಎನಾಂತ ಕರೆಯಲಿ… ಗೆಳೆಯ ಅಥವ ಗೆಳತಿ.. ಓಓಓಓಓಓ ನೀನು ಅದು ಅಲ್ವಾ………………….

                  ನಮ್ಮ ಕೈಲಾದ ಸಹಾಯ ಮಾಡುವೆ…. ಇಂತಿ ನಿಮ್ಮ ಗುರುಮೂರ್ತಿ…….

                  Reply
                  • Kumar
                    May 31 2012

                    ಗುರುಮೂರ್ತಿ> ಕನ್ನಡಿ ಮುಂದೆ ನಿಂತ್ತು ತನ್ನನು ತಾನು ಬೈದುಕೊಂಡಂಗಿ ಇದೆ ತಮ್ಮ ಪರಿಸ್ಥಿತಿ….
                    ಹೌದಾ? ಬೈಯ್ಯಬೇಕಾದಾಗ ಕನ್ನಡಿ ಮುಂದೆ ನಿಂತ್ಕೋಬೇಡಿ ಅಷ್ಟೇ. ಅದಕ್ಯಾಕೆ ಅಷ್ಟೊಂದು ವ್ಯಥೆ ಪಡ್ತೀರಿ?

                    ನಿಜಕ್ಕೂ ನೀವು ಎಷ್ಟು ಪಕ್ಷಾತೀತರು, ತಟಸ್ಥರು, ನ್ಯಾಯಪ್ರೇಮಿಗಳು ಎನ್ನೋದು ಗೊತ್ತಾಯ್ತು ಬಿಡಿ.
                    ಒಬ್ಬರ ದೇವರನ್ನು ಬಾಯಿಗೆ ಬಂದ ಹಾಗೆ ಆಡಿಕೊಂಡಾಗ ನಿಮಗೆ “ಸಂಸ್ಕೃತಿ” ಅರಿವಾಗ್ಲಿಲ್ಲ!
                    ಗಂಡಸ್ತನ ಮಾತಾಡಿದ ಕೂಡಲೇ ನಿಮಗೆ ಎಚ್ಚರಿಕೆ ಆಗಿಬಿಟ್ಟಿತು….!!
                    “ಕುಂಬಳಕಾಯಿ ಕಳ್ಳ ಎಂದರೆ…..” ಅನ್ನೋ ಗಾದೆ ಮಾತಿನ ಹಾಗಾಯಿತು ನಿಮ್ಮ ಕಥೆ.
                    ಅಷ್ಟೊಂದು confuse ಆಗ್ಬೇಡಿ – ನಿಮ್ಮನ್ನು ನಾನು “ಗೆಳೆಯ” ಅಂತಾನೂ ಕರೆಯೋಲ್ಲ, “ಗೆಳತಿ” ಅಂತಾನೂ ಕರೆಯೋಲ್ಲ; “ಅದು” ಅಂತಾನೇ ಕರೆಯೋದು.
                    ಸಂತೋಷ ತಾನೆ.

                    ಗುರುಮೂರ್ತಿ> ನಿನ್ನ ನೋವು ನನಗೆ ಆರ್ಥವಾಗುತ್ತದೆ
                    ಗುರುಮೂರ್ತಿ> ನಿನ್ನಂತಹವರು ಈ ಸಮಾಜದಲ್ಲಿ ಬದುಕುತ್ತಿದ್ದಾರೆ
                    ಪರಿಚಯನೇ ಇಲ್ದೇ ಇರೋರ ಜೊತೆ, ಮೊದಲ ಸಲ ಮಾತನಾಡುವಾಗಲೇ “ಏಕವಚನ” ಬಳಸುವ “ಅತ್ಯುಚ್ಛ ಸಂಸ್ಕೃತಿ” ತಮ್ದು ಅಂತ ನನಗೆ ಗೊತ್ತಿರಲಿಲ್ಲ.
                    ನೀವು ಎಷ್ಟು ದೊಡ್ಡೋರು, ಎಷ್ಟೆಲ್ಲಾ ದೊಡ್ಡ ಕೆಲ್ಸ ಮಾಡ್ತಿದೀರ. ಮುಂದ್ವರೆಸಿ ನಿಮ್ಮ ಕೆಲ್ಸಾನ; ಬರೇ ಗಂಡಸ್ರು, ಹೆಂಗಸ್ರು ಎರಡೇ ತರ ಮಾತ್ರ ಯಾಕಿರ‍್ಬೇಕು ಅಂತ ದೇವ್ರು ನಿಮ್ಮಂತೋರ‍್ನೂ ಹುಟ್ಸಿದಾನೆ. ನೀವೂ ಬದುಕ್ಬೇಬು.

                    ಗುರುಮೂರ್ತಿ> ನಮ್ಮ ಕೈಲಾದ ಸಹಾಯ ಮಾಡುವೆ
                    ಹಸು ತಿನ್ಬೇಕು, ಸಮಯ ಬಂದಾಗ ಹೆಣಾನೂ ತಿನ್ಬೇಕು. ದೇವ್ರು ನಿಮ್ಗೆ ಬರೋ ತಿನ್ನೋ ಕೆಲ್ಸ ಕೊಟ್ಬಿಟ್ಟಿದ್ದಾನೆ ಅನ್ಸುತ್ತೆ.
                    ಜನ ಹೇಗೇಗೋ ತಿಂದು ಎಲ್ಲಾ ಹೊಲ್ಸುಮಾಡ್ಬಿಡ್ತಾರೆ – ಪಾಪ ನೀವಿಲ್ದಿದ್ರೆ ಪ್ರಪಂಚದಲ್ಲೆಲ್ಲಾ ಹೊಲ್ಸೇ ತುಂಬಿರ‍್ತಿತ್ತು. ನೀವು ಬಂದು ಎಲ್ಲಾ ಹೊಲ್ಸನ್ನೂ ಹೊಟ್ಟೆಗ್ ಹಾಕ್ಕೊಂಡ್ಬಿಡ್ತೀರ! ಮೆಚ್ಬೇಕಾದ್ ಕೆಲ್ಸಾನೆ ಮಾಡ್ತಿದೀರ. ಪಾಪ ತುಂಬಾ ಕೆಲಸ ಮಾಡಿ ಆಯಾಸ ಆಗ್ಬಿಡ್ತು ಅನ್ಸುತ್ತೆ.
                    ಸ್ವಲ್ಪ ವಿಶ್ರಾಂತಿ ತೊಗೊಳಿ.

                    Reply
                    • ಗುರುಮೂರ್ತಿ
                      May 31 2012

                      ಹೌದೌದು ಕುಮಾರ್ ನೀನು ಯಾವ ಪಂಗಡಕ್ಕೆ ಸೇರುತ್ತಿಯಾ ಅಂತ ಎಲ್ಲರಿಗೂ ಗೊತ್ತು…. ನಿನ್ತನವನ್ನ ಇನ್ಬ್ರಾಲ್ಲಿ ಯಾಕೆ ನೋಡಿಕೊಳ್ತೀಯಾ,,,,,,

                    • Kumar
                      May 31 2012

                      ಗುರುಮೂರ್ತಿ> ನಾನು ಒಬ್ಬ ಬ್ರಾಹ್ಮಣನಾಗಿ ಹೇಳುತ್ತಿರು(ಕೇಳುತ್ತೀರುವ) ಮಾತಿದು
                      ಒಬ್ಬರ ದೇವರ ಕುರಿತಾಗಿ ಅವಹೇಳನದ ಮಾತನಾಡುವವರನ್ನು ಖಂಡಿಸದ ನೀವು ಬ್ರಾಹ್ಮಣರಾದರೇನು, ಯಾವ ಜಾತಿಯಾದರೇನು?

                      ಗುರುಮೂರ್ತಿ> ಹೌದೌದು ಕುಮಾರ್ ನೀನು ಯಾವ ಪಂಗಡಕ್ಕೆ ಸೇರುತ್ತಿಯಾ ಅಂತ ಎಲ್ಲರಿಗೂ ಗೊತ್ತು…. ನಿನ್ತನವನ್ನ ಇನ್ಬ್ರಾಲ್ಲಿ ಯಾಕೆ ನೋಡಿಕೊಳ್ತೀಯಾ
                      ಮತ್ತೊಬ್ಬರ ಜೊತೆ ಚರ್ಚಿಸುವಾಗ “ಬಹುವಚನ”ವನ್ನು ಪ್ರಯೋಗಿಸುವ ಸೌಜನ್ಯವೂ ಇಲ್ಲದವರಿಗೆ ಯಾವ ಪಂಗಡವಾದರೇನು?
                      ಹೊಟ್ಟೆಗೆ ಹಾಕಿಕೊಂಡದ್ದೇ ಬಾಯಿಯಿಂದ ಹೊರಗೆ ಬರುತ್ತಿದೆ ಅಷ್ಟೇ! ಪಾಪ, ಅದು ನಿಮ್ಮ ತಪ್ಪಲ್ಲದಿರಬಹುದು.

      • Kumar
        May 31 2012

        ದೇವರು> ದೇವರುಗಳ ಮೇಲೆ ನನಗೆ ನಂಬಿಕೆನೆ ಇಲ್ಲ
        ನಂಬಿಕೆ ಇರೋದು, ಇಲ್ದೇ ಇರೋದು ನಿನ್ನ ವೈಯಕ್ತಿಕ ವಿಷಯ. ಅದನ್ನ ನಿನ್ನ ಮನೆಲಿ, ಮನಸ್ಸಲ್ಲಿ ಇಟ್ಕೋ.
        ಅದು ಬಿಟ್ಟು, ನಿನಗೆ ನಂಬಿಕೆ ಇರ್ದೇ ಇರೋ ದೇವರ ಕುರಿತಾಗಿ ಹುಚ್ಚುನಾಯಿ ತರಹ ಇಲ್ಲಿ ಕಾಮೆಂಟ್ ಹಾಕ್ಬೇಡ.
        ರಾಮನ ಕುರಿತಾಗಿ ಬರ‍್ದಿದೀಯಾ. ರಾಮ ಒಬ್ಬ ಆದರ್ಶಪುರುಷ ಅಂತ ನಮ್ಮ ಸಂವಿಧಾನದಲ್ಲೇ ಬರೆದಿದೆ. ಸಂವಿಧಾನ ಬರ‍್ದವ್ರು ನಿನ್ನಂತ ಹೇಡಿಗಳಲ್ಲ.
        ರಾಮನ ಗುಣಗಳಲ್ಲಿ ಲಕ್ಷಕ್ಕೊಂದು ಪಾಲು ಇದ್ದಿದ್ರೂ ನೀನು ಹೀಗಾಡ್ತಿರ್ಲಿಲ್ಲ.

        ದೇವರು> ಮೇಲು ಕೀಳು, ಭ್ರಷ್ಟಚಾರ, ಮೂಡನಂಬಿಕೆ, ಅನಾಚರ ತೋಲಗಿಸುವುದಕ್ಕೆ
        ಈ ವಿಷಯಗಳ ಕುರಿತಾಗಿ ನಿನಗೆ ಕಾಳಜಿ ಇದ್ದಿದ್ದರೆ ನೀನು ರಾಮನ ಕುರಿತಾಗಿ ಹೀಗೆ ಮಾತನಾಡ್ತಿರ‍್ಲಿಲ್ಲ.
        ಎಲ್ಲರನ್ನೂ ಸಮಾನವಾಗಿ ಕಂಡವನು ರಾಮ, ರಾಮನ ಜೀವನದಲ್ಲಿ ಭ್ರಷ್ಟಾಚಾರದ ಸೋಂಕೂ ಇರಲಿಲ್ಲ. ಮೂಡನಂಬಿಕೆ, ಅನಾಚಾರಗಳಿಗೆ ಹೊರತಾಗಿದ್ದವನು ರಾಮ.
        ಈ ಎಲ್ಲಾ ಆದರ್ಶ ಗುಣಗಳೂ ನಿನಗೆ ಕಾಣೋದಿಲ್ಲ. ಆಕಾಶದಲ್ಲಿ ಹಾರ‍್ತಾ ಇರೋ ಹದ್ದಿನ ಕಣ್ಣು ಭೂಮಿ ಮೇಲಿರೋ ಹೆಣದ ಮೇಲೇ ಇರುತ್ತೆ. ಅದಕ್ಕೆ ಬೇರೆ ಯಾವುದೂ ಒಳ್ಳೇದು ಕಾಣ್ಸೋದಿಲ್ಲ. ಅವ್ರವ್ರ ಮಟ್ಟದಲ್ಲೇ ಅವ್ರವ್ರು ಯೋಚ್ನೆ ಮಾಡ್ತಾರೆ.

        ದೇವ್ರು ಬಗ್ಗೆ ನಂಬಿಕೆ ಇದ್ಯೋ ಇಲ್ವೋ ಅನ್ನೋಕ್ ಮುಂಚೆ, ನಿಂಗೆ ನಿನ್ನ್ ಬಗ್ಗೆ ನಂಬ್ಕೆ ಇದ್ಯಾ ಅಂತ ಕೇಳ್ಕೋ.

        Reply
        • ಗುರುಮೂರ್ತಿ
          May 31 2012

          ಕುಮಾರ್ ರವರೆ ನಿಮ್ಮ ಬರಹದಲ್ಲೇ ತಿಳಿಯುತ್ತೆ ಹುಚ್ಚು ನಾಯಿ ಯಾರು ಅಂತ…… ಎಲ್ಲೋ ಕಲೇಕ್ಷನ್ ಕಡಿಮೆ ಅಗಿರಬೇಕು ಅದಕ್ಕೆ ಇ ರೀತಿ ವರ್ತೀಸುತ್ತಿದ್ದಿರಾ……….. ಮಾತು ಮಾತಿಗೂ ರಾಮ ರಾಮ ಅಂತಿದಿರಲ್ಲಾ ನೀಮ್ದು ಯಾವುದಾದರು ಮಠ ಇದಿಯಾ…? ಸಂವೀಧಾನದಲ್ಲಿ ರಾಮನ ಪೋಟೊ ಅಕಿದ್ದರಾಂತೆ ಹೌದ………. ಹೇಡಿ (ಶಿಖಂಡಿ)ಯಾವತ್ತು ಬೇರೆಯಾವರನ್ನ ವಲಂಬಿಸಿರುತ್ತಾನೆ (ದೇವರು, ದೆವ್ವ,(ರಾಮ -ಕೃಷ್ಣ, ಏಸು- ಗೀಸು, ಅಲ್ಲಾ-ಮುಲ್ಲಾ ಅಂತ)). ಯಾಕೆ ಅಂದರೆ ಅವನ ಮೇಲೆ ಅವನಿಗೆ ನಂಬಿಕೆ ಇರಲ್ಲ… ಅದರೆ ಗಂಡು (ಧೀರರು) ಅವರನ್ನೇ ನಂಬುತ್ತಾರೆ ಅದಕ್ಕೆ ಅವರು ಚರಿತ್ರೆಯಾಲ್ಲಿ ಉಳಿಯುತ್ತಾರೆ……

          ನಿನ್ನಂತ ————ಗಳಿಗೆ ಅರ್ಥ ಅಗಲ್ಲ ಬೀಡಿ,

          Reply
          • Kumar
            May 31 2012

            ಗುರುಮೂರ್ತಿ> ತಿಳಿಯುತ್ತೆ ಹುಚ್ಚು ನಾಯಿ ಯಾರು ಅಂತ
            ಅಯ್ಯೋ! ನೀವು ನಾಯಿ ಡಾಕ್ಟರು ಅಂತ ಗೊತ್ತಿರ‍್ಲಿಲ್ಲ. ಊರು ಸ್ವಚ್ಚ ಮಾಡೋದ್ರ ಜೊತೆಗೆ, ಹುಚ್ಚು ನಾಯೀನೂ ಹಿಡೀತೀರ ಅಂದ್ರೆ, ತುಂಬಾನೇ ಕೆಲ್ಸ ಮಾಡ್ತಿದೀರ!!

            ಗುರುಮೂರ್ತಿ> ಸಂವೀಧಾನದಲ್ಲಿ ರಾಮನ ಪೋಟೊ ಅಕಿದ್ದರಾಂತೆ ಹೌದ
            ಪಾಪ, ನೀವು ಅದೆಷ್ಟು ಕೆಲ್ಸ ಮಾಡ್ಬೇಕು. ಹೀಗಿರೋವಾಗ ಸಂವಿಧಾನ ಓದೋಕ್ಕೆ ಪುರುಸೊತ್ತು ಎಲ್ಲಿ? ನೀವು ಅದರ ಬಗ್ಗೆ ಏನೂ ತಲೆ ಕೆಡಿಸ್ಕೋಬೇಡಿ.
            ಸಂವಿಧಾನದಲ್ಲಿ ಏನಿರ‍್ಲಿ, ಬಿಡ್ಲಿ; ನಿಮ್ಮ ಕೆಲ್ಸ ಕಡ್ಮೆ ಆಗೋತ್ತಾ? ನಿಮ್ಮ್ ಕೆಲ್ಸ ಮುಂದ್ವರ‍್ಸಿ.

            ಗುರುಮೂರ್ತಿ> ಕಲೇಕ್ಷನ್ ಕಡಿಮೆ ಅಗಿರಬೇಕು
            ತುಂಬಾ ಕೆಲ್ಸ ಮಾಡೋವಾಗ “ನ” ಬದ್ಲು “ಲ” ಬಂದ್ಬಿಟ್ಟಿದೆ ಅನ್ಸುತ್ತೆ. “ಲ” ಬೇಕಾದ್ರೂ ಬರ‍್ಲಿ, “ರ” ಬೇಕಾದ್ರೂ ಬರ‍್ಲಿ ತಲೆ ಯೋಚ್ನೆ ಮಾಡ್ಬೇಡಿ. ಪಾಪ, ನೀವು ಎಲ್ಲಾನೂ ಹೊಟ್ಟೆಗೆ ಹಾಕ್ಕೋಳೋವ್ರು. ನಾವು ಇಷ್ಟೂ ಅಡ್ಜಸ್ಟ್ ಮಾಡ್ಕೋಳ್ದೆ ಇದ್ರೆ ಹೇಗೆ!?

            ಗುರುಮೂರ್ತಿ> ಅದಕ್ಕೆ ಅವರು ಚರಿತ್ರೆಯಾಲ್ಲಿ ಉಳಿಯುತ್ತಾರೆ……
            ಗುರುಮೂರ್ತಿ> ————ಗಳಿಗೆ ಅರ್ಥ ಅಗಲ್ಲ ಬೀಡಿ,
            ಅಯ್ಯೋ! ನೀವು ಇದನ್ನೆಲ್ಲಾ ಇಷ್ಟೊಂದು ಮನಸ್ಸಿಗೆ ಹಚ್ಕೊಂಡು ಬಿಟ್ರಾ? ನಾನೂ ಇದನ್ನ ಗಮನಿಸಿರ‍್ಲಿಲ್ಲ. ಚರಿತ್ರೆ ತುಂಬಾ “ಗಂಡುಸ್ರು” ಅಥ್ವಾ “ಹೆಂಗುಸ್ರು” ಮಾತ್ರಾ ಇದಾರೆ.
            ನಿಮ್ಮಂಥೋರಿಗೆ ಅಲ್ಲಿ ಒಂದು ಸ್ವಲ್ಪಾನೂ ಬರ‍್ದಿಲ್ಲ (ಮಹಾಭಾರತ ಯುದ್ಧದಲ್ಲಿ ಭೀಷ್ಮನ ಎದುರು ನಿಂತ್ಕೊಂಡಿದ್ದು ಬಿಟ್ರೆ)……ತುಂಬಾನೇ ಅನ್ಯಾಯ ಆಗ್ಬುಟ್ಟುದೆ.
            ಯಾಕೆ ಹೀಗೆ ಅಂಥ ನಿಮ್ಮಂಥ “……ಗಳಿಗೆ ಅರ್ಥ ಆಗಲ್ಲ ಬಿಡಿ” ಅಂಥ ತುಂಬಾನೆ ನೊಂದ್ಕೊಂಡುಬಿಟ್ಟೀದೀರ. ಬಹಳ ಬೇಜಾರಾಗುತ್ತೆ.
            ಕಪಿಲ್ ಸಿಬಾಲ್ ಅವ್ರಿಗೆ ಹೇಳಿ, RTEನಲ್ಲಿ ನಿಮ್ಮಂಥೋರಿಗೂ ಏನಾದ್ರೂ ಅವ್ಕಾಶ ಕೊಡೋಕ್ಕೆ ಹೇಳೋಣ ಬಿಡಿ.

            Reply
            • ಗುರುಮೂರ್ತಿ
              May 31 2012

              ನೀಮ್ಮಂತ ಅವಿವೇಕಿಗಳಿಂದಲೆ ನಮ್ಮಂತ ನಿಷ್ಠವಂತ ಬ್ರಾಹ್ಮಣರನ್ನು ಈ ಸಮಾಜದಲ್ಲಿ ಇಂದಿಗೂ ದೂರುತ್ತಾರೆ…… ನಾವು ಇರುವುದು ಬೆರಳೆಣಿಕೆಯಷ್ಟು… ಅದರೆ ಸಸ್ಯಹಾರದ ಜೋತೆ ಮಾಂಸಹಾರ ಸೇವಿಸುವವರ ಸಂಖ್ಯೆ ಹೆಚ್ಚು ಇದೆ…. ಅಂದರೆ ಶೇ.75 ರಷ್ಟು ಮಂದಿ ಮಾಂಸಆಹಾರ ಸೇವಿಸ್ಸುತ್ತಾರೆ… ಅದರಲ್ಲಿ ಶೇ40 ರಷ್ಟು ಮಂದಿ ಗೋ ಭಕ್ಷಣೆ ಮಾಡುತ್ತಾರೆ,,,, ಅದು ಅವರವರ ಆಹಾರ ಪದ್ದತಿ…. ನಾನು ಸಸ್ಯಹಾರಿ ಅಂತ ಅವರ ಮೇಲೆ ನಮ್ಮ ಪದ್ದತಿ ಹೇರುವುದು ಎಷ್ಟೂ ಸರಿ…..? ಸಮಸಮಾಜದ ನಿರ್ಮಾಣದತ್ತ ನಡೆಯೋಣ……. ನಾನು ಒಬ್ಬ ಸಸ್ಯಹಾರಿ…… ಅದು ನಿಮಗೆ ತಿಳಿಯಾಲಿ…….ನಾನು ಕೇಲವು ಸಾರಿ ನನ್ನ ಅನ್ಯ ಜಾತಿ ಸ್ನೇಹಿತರ ಜೊತೆಯಲ್ಲಿಯೇ ಊಟ ಮಾಡುತ್ತೇನೆ ಅವರು ಮಾಂಸಹಾರಿಗಳಾದರು….. ನಾವು ಅನ್ನ್ಯೂನ್ಯದಿಂದ ಇರುತ್ತೇವೆ. ಅದರು ಈ ಪ್ರಜ್ಙಾವಂತ ಸಮಾಜದಲ್ಲಿ ಜಾತಿ ಯಾಕೆ ಎಂಬುದು ನ್ನ ಪ್ರಶ್ನೆ…. ನಾನು ಒಬ್ಬ ಬ್ರಾಹ್ಮಣನಾಗಿ ಹೇಳುತ್ತಿರು(ಕೇಳುತ್ತೀರುವ) ಮಾತಿದು

              Reply
              • Kumar
                May 31 2012

                ಗುರುಮೂರ್ತಿ> ನೀಮ್ಮಂತ ಅವಿವೇಕಿಗಳಿಂದಲೆ ನಮ್ಮಂತ ನಿಷ್ಠವಂತ ಬ್ರಾಹ್ಮಣರನ್ನು
                ಸ್ವಾಮಿ, ನಿಮ್ಮ ಜಾತಿಯನ್ನು ಯಾರು ಕೇಳಿದರು?

                ಗುರುಮೂರ್ತಿ> ಅದರು ಈ ಪ್ರಜ್ಙಾವಂತ ಸಮಾಜದಲ್ಲಿ ಜಾತಿ ಯಾಕೆ ಎಂಬುದು ನ್ನ ಪ್ರಶ್ನೆ
                ನಿಮಗೆ ಜಾತಿಯ ಪ್ರಶ್ನೆ ಎಲ್ಲಿಂದ ಉದ್ಭವಿಸಿತು ಅನ್ನೋದು ತಿಳೀತಿಲ್ಲ!
                ನಿಜಕ್ಕೂ ಜಾತಿಯನ್ನು ಮನೆಯಲ್ಲೇ ಮರೆತು, “ನಾವೆಲ್ಲಾ ಒಂದು” ಎನ್ನುವ ಏಕತೆಯ ಭಾವ ಮೂಡಿ ಬಂದಾಗಲೇ, ನಾವೊಂದು “ಸುಂದರ ಸಮಾಜ”ವಾಗಬಹುದು.
                ಆದರೆ, ನಾವು ಅರ್ಥ ಮಾಡಿಕೊಳ್ಳಬೇಕಾದ ಮುಖ್ಯ ವಿಷಯವೆಂದರೆ, ಜಾತಿ ಎಂಬುದು ಪ್ರಕೃತಿ. ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲಿಯೂ ಜಾತಿಯಿದೆ, ಸಸ್ಯಗಳಲ್ಲಿಯೂ ಜಾತಿಗಳಿವೆ. ಮತ್ತು ಜಾತಿಯಿರುವುದೇ ಸಮಸ್ಯೆಯಲ್ಲ. ಬದಲಿಗೆ ಜಾತೀಯತೆ ಎನ್ನುವುದು ಸಮಸ್ಯೆ – ಜಾತಿಯ ಹೆಸರಿನಲ್ಲಿ ಮೇಲು-ಕೀಳು, ಸ್ಪೃಷ್ಯ-ಅಸ್ಪೃಷ್ಯ, ಇತ್ಯಾದಿಗಳು ಸಮಸ್ಯೆ. ಜಾತಿಯನ್ನು ಹೋಗಿಸಲು ಸಾಧ್ಯವಿಲ್ಲ; ಅದಕ್ಕೆ ಪ್ರಯತ್ನಿಸಿದವರೆಲ್ಲಾ ಹೊಸ ಜಾತಿಗಳನ್ನು ಹುಟ್ಟುಹಾಕಿದರು ಎನ್ನುವುದು ಗಮನಿಸಬೇಕಾದ ಸಂಗತಿ – ಬುದ್ಧನಿಂದ ಬೌದ್ಧಮತ, ಬಸವಣ್ಣನವರಿಂದ ಲಿಂಗಾಯತ ಮತ, ನಾನಕರಿಂದ ಸಿಖ್ಖ ಪಂಥ, ಇತ್ಯಾದಿಗಳು ಹುಟ್ಟಿಕೊಂಡವು. ಇವರೆಲ್ಲರೂ “ಜಾತಿರಹಿತ ಸಮಾಜ”ವನ್ನು ಸೃಷ್ಟಿಮಾಡಲು ಹೊರಟಿದ್ದರು. ಇದರಿಂದ, ನಾವು ಕಲಿಯಬೇಕಾದ ಪಾಠವೆಂದರೆ, ಜಾತಿಯನ್ನು ಹೊಡೆದೋಡಿಸಲು ಸಾಧ್ಯವಿಲ್ಲ. ಬದಲಿಗೆ ಜಾತಿಯ ಅಸ್ತಿತ್ವವನ್ನು ಒಪ್ಪಿಕೊಂಡು, ಜಾತೀಯತೆಯ ನಿರ್ಮೂಲನೆಗಾಗಿ ಪ್ರಯತ್ನಿಸೋಣ.

                ಗುರುಮೂರ್ತಿ> ಅದರಲ್ಲಿ ಶೇ40 ರಷ್ಟು ಮಂದಿ ಗೋ ಭಕ್ಷಣೆ ಮಾಡುತ್ತಾರೆ,,,, ಅದು ಅವರವರ ಆಹಾರ ಪದ್ದತಿ.
                ಇದು ಕೇವಲ ಆಹಾರಪದ್ಧತಿಯ ಪ್ರಶ್ನೆಯಲ್ಲ. ನಾವು ತೆಗೆದುಕೊಳ್ಳುವ ಆಹಾರ ಮತ್ತೊಬ್ಬರ ನಂಬಿಕೆಗೆ ಆಘಾತವಾಗುವಂತಿರಬಾರದು ಎನ್ನುವುದೂ ಮುಖ್ಯ.
                ಮತ್ತು “ಗೋಮಾಂಸ” ಮನುಷ್ಯನಿಗೆ ಅನಿವಾರ್ಯವಲ್ಲ. ನಮಗೆ ಜೀವನ ಪೂರ್ತಿ ಹಾಲನ್ನು ಕೊಡುವ ಗೋವನ್ನು ತಾಯಿಯಂತೆ ಕಾಣುವುದು ತಪ್ಪೇನು?
                ಮಹಾತ್ಮಾ ಗಾಂಧಿಯವರೂ “ಗೋಹತ್ಯಾ ನಿಷೇಧ”ವನ್ನು ಮಾಡಬೇಕೆಂದು ಆಗ್ರಹಿಸಿದ್ದರು.
                ಅಕ್ಬರನ ಕಾಲದಲ್ಲಿ ಗೋಹತ್ಯೆಯನ್ನು ನಿಷೇಧಿಸಲಾಗಿತ್ತು.
                ಇದೆಲ್ಲಾ ಏನನ್ನು ಸೂಚಿಸುತ್ತದೆ? ನಮ್ಮ ದೇಶದ ಬಹುಸಂಖ್ಯಾತ ಸಮಾಜಕ್ಕೆ ಗೋವು ಪೂಜ್ಯ ವಸ್ತು ಎಂದಲ್ಲವೇ? ಇಲ್ಲದಿದ್ದರೆ, ಮುಸಲ್ಮಾನನಾಗಿದ್ದ ಅಕ್ಬರನು ಗೋಹತ್ಯೆಯನ್ನು ನಿಷೇಧಿಸುವ ಆವಶ್ಯಕತೆ ಏನಿತ್ತು (ಉಳಿದ ಯಾವ ಮುಸಲ್ಮಾನ ರಾಜರ ರಾಜ್ಯದಲ್ಲೂ ಆ ನಿಷೇಧವಿರಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ)?
                ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಜಾತೀಯತೆಯನ್ನು ವಿರೋಧಿಸಿದ, ಎಲ್ಲರನ್ನೂ ಸಮಾನರನ್ನಾಗಿ ಕಂಡ, ಸರಳತೆಯ ಸಾಕಾರಮೂರ್ತಿ ಎನಿಸಿದ್ದ ಗಾಂಧೀಜಿಯವರು “ಗೋಹತ್ಯಾ ನಿಷೇಧ”ವನ್ನು ಏತಕ್ಕಾಗಿ ಆಗ್ರಹಿಸಿದರು?

                ನಮ್ಮ ಸಂವಿಧಾನದ ಆಶಯದಲ್ಲೂ “ಗೋಹತ್ಯಾ ನಿಷೇಧ”ದ ಪ್ರಸ್ತಾಪವಾಗಿದೆ ಎಂಬುದು ತಿಳಿದಿರಲಿ. ಈ ಸಂವಿಧಾನದ ರಚನೆಯಲ್ಲಿ ಡಾ||ಅಂಬೇಡ್ಕರ್ ಪ್ರಮುಖ ಪಾತ್ರ ವಹಿಸಿದ್ದರು. ಅವರೇನೂ ಸಸ್ಯಾಹಾರದ ಹಿನ್ನೆಲೆಯಿಂದ ಬಂದವರಲ್ಲ. ಅಂದಿನ ಕಾಲದಲ್ಲಿ ನಮ್ಮ ದೇಶದಲ್ಲಿದ್ದ ಅತ್ಯಂತ ಬುದ್ಧಿವಂತ ಮತ್ತು ಪ್ರಜ್ಞಾವಂತ ವ್ಯಕ್ತಿ ಅಂಬೇಡ್ಕರ್. ಅಂತಹವರೂ “ಗೋಹತ್ಯಾ ನಿಷೇಧ”ವನ್ನು ಸಂವಿಧಾನದ ಆಶಯವನ್ನಾಗಿ ಸೇರಿಸಿದ್ದಾರೆಂದರೆ, ಅದು ಬಹಳ ಮುಖ್ಯವಾದ ವಿಷಯವೇ ಆಗಿರಬೇಕಲ್ಲವೆ? ಮತ್ತು ಸಂವಿಧಾನದ ಆಶಯವನ್ನು ಪೂರೈಸುವುದು ಈ ದೇಶದ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಲ್ಲವೇ?

                Reply
  18. T.M.Kraishna
    Apr 21 2012

    ನೀವು ಯಾರಿಗೂ ಸಹಾಯ ಮಾಡುವ ಅಗತ್ಯವಿಲ್ಲ. ಮಾಂಸಹಾರಕ್ಕಿಂತಲೂ ಬದುಕುವ ವಿವೇಕಗಳು ಬಹಳಷ್ಟಿವೆ. ನೀವು ಅತ್ತ ಗಮನ ಕೊಡಿ.
    -ಟಿ.ಎಂ.ಕೃಷ್ಣ

    Reply
    • Apr 21 2012

      ಅಗತ್ಯ ಇದೆಯೋ ಇಲ್ಲವೋ ಅನ್ನೋದು ‘ಮನಸು’ ಅವರಿಗೆ ಬಿಟ್ಟಿದ್ದು.
      ನೀವು ದಯವಿಟ್ಟು ಹೊರಗಿರಿ :)

      ಈ comment ನನ್ನ {ನಿಜವಾಗಿ ಮಾಂಸಾಹಾರ ತ್ಯಜಿಸುವ ಇಚ್ಛೆ ಇದ್ದರೆ ತಿಳಿಸಿ. ಖಂಡಿತಾ ಸಹಾಯ ಮಾಡುವೆ.
      ಶುಭವಾಗಲಿ. } ಎನ್ನುವ ಪ್ರತಿಕ್ರಿಯೆಗೆ ಎಂದು ತಿಳಿದು ಬರೆಯುತ್ತಿದ್ದೇನೆ.
      ಅಲ್ಲದಿದ್ದರೆ ಕ್ಷಮೆಯಿರಲಿ. :)

      Reply
      • T.M.Kraishna
        Apr 23 2012

        ನಿಜವಾಗಿ ಮಾಂಸಾಹಾರ ತ್ಯಜಿಸುವ ಇಚ್ಛೆ ಇದ್ದರೆ ತಿಳಿಸಿ. ಖಂಡಿತ ಸಹಾಯ ಮಾಡುವೆ- ಎಂಬುದಕ್ಕೆ ನನ್ನ ಪ್ರತಿಕ್ರಿಯೆ ಸರಿಯಾಗಿದೆ. ನೀವು ಹೊರಗಿರಿ ಎಂದಿದ್ದೀರಿ. ಹೊರಗಿಡುವುದು ನಿಮಗೆ ಪರಂಪರೆಯಿಂದ ಬಂದ ಕಸುಬು ಎಂಬುದು ನಮಗೆ ಗೊತ್ತಿದೆ. ಹಾಗೆಯೇ ಹೊರಗಿಡಲು ಪ್ರಯತ್ನಿಸುವವರು ಇವತ್ತು ಮುಖ್ಯ ವಾಹಿನಿಯಿಂದ ಹೊರಕ್ಕೋಗುತ್ತಿರುವುವುದನ್ನು ನೀವು ಆದಷ್ಟು ಬೇಗ ಗ್ರಹಿಸಿದರೆ ಒಳ್ಳೆಯದು.

        Reply
  19. ಕೈ-ಕಾಲು ಏನಿಲ್ಲ.ಲೇಖಕರು ಅವರ ಅನಿಸಿಕೆ ಹೇಳಿದ್ದಾರೆ ನಿಲುಮೆ ಅದಕ್ಕೆ ವೇದಿಕೆಯಾಗಿದೆ

    Reply
  20. ವಿಶ್ಲೇಷಣೆಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿದ್ದರೂ ಎಲ್ಲೋ ಒಂದು ಕಡೆ ಗಮನಿಸಿದಾಗ ಇಲ್ಲಿ ನಡೆಯುತ್ತಿರುವ ಅಥವಾ ಪ್ರಕಟಗೊಳ್ಳುತ್ತಿರುವ ಅಭಿಪ್ರಾಯಗಳು ವೈಯಕ್ತಿಕ ಆರೋಪ-ಪ್ರತ್ಯಾರೋಪಗಳಾಗಿರುವುದು ಖೇದಕರ ಸಂಗತಿ! “ನಿಲುಮೆ”ಯ ನಿಜವಾದ ಉದ್ದೇಶಕ್ಕೆ ಇದು ಧಕ್ಕೆಯಾಗಬಹುದು ಎಂಬುವುದನ್ನು ಮನಗಾಣಬೇಕಾದ ಅಗತ್ಯತೆ ತುಂಬಾ ಇದೆ..

    Reply
  21. Apr 23 2012

    “ನಿಲುಮೆ”..ಅತ್ಯುತ್ತಮವಾದ ಸಂವಾದ ಕಾರ್ಯಕ್ರಮ ಮತ್ತು ಉತ್ತಮವಾದ ವೇದಿಕೆ..
    ಅಭಿನಂದನೆಗಳು!!

    Reply
  22. ಮಾಯ್ಸ 
    Apr 23 2012

    ” ಹಿಂದೂ ಧರ್ಮದಿಂದ ಶೋಷಣೆಯನ್ನಷ್ಟೇ ಪಡೆದುಕೊಂಡಿದ್ದ ಬಹಳಷ್ಟು ಸಮುದಾಯಗಳು ಯಾವ ಮಾಂಸ ಸೇವನೆಯನ್ನೂ ತೊರೆಯುವುದಿಲ್ಲ.ಗೋಸಂತತಿ ಪೂಜ್ಯನೀಯವೇ?”

    ಹೌದು. ಈ ಮುಂಚೆ ಹೇಗೆ ಪೂಜನೀಯ ಏನು ಹಲವಾರು ಧರ್ಮ-ಗ್ರಂಥಗಳ ಉಲ್ಲೇಖದಿಂದ ತೋರಿಸಿಕೊಟ್ಟಿದ್ದಾರೆ.

    ^ಗೋ ಭಕ್ಷಣೆ^ ಹಿಂದೂ ಧರ್ಮದಲ್ಲಿ ನಿಶಿದ್ದ, ಅದರಲ್ಲಿ ಎರಡು ಮಾತಿಲ್ಲ. 

    ಇವೊತ್ತಿನ ಚರ್ಚೆ ಇರಬೇಕಾಗಿರುವುದು, ಹಿಂದೂ ಧರ್ಮದಲ್ಲಿ ನಿಶಿದ್ಧವಾದುದು ಕೂಡ ಸಾರ್ವಜನಿಕ ಸ್ಥಾನಗಳಲ್ಲಿ ಮಾನ್ಯವೇ ಎಂದು?

    Reply

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Note: HTML is allowed. Your email address will never be published.

Subscribe to comments

Follow

Get every new post delivered to your Inbox.

Join 1,254 other followers