Skip to content

Archive for April 20th, 2012

20
Apr

ಯುವ ಪೀಳಿಗೆಗೆ ಬದುಕುವ ಕಲೆಯನ್ನು ಕಲಿಸಿ !

ಒಂದು ಕೆ.ಜಿ ಹಣ್ಣುಗಳೊಂದಿಗೆ ವೃದ್ಧ ದಂಪತಿಯನ್ನು ಭೇಟಿಯಾದೆ. ಬೆಂಗಳೂರಿನ ಮಲ್ಲೇಶ್ವರದ ಅಪಾರ್ಟ್ ಮೆಂಟ್ ಒಂದರಲ್ಲಿ ಅವರ ವಾಸ. ಯಜಮಾನರಿಗೆ  ಅಜಮಾಸು ೯೩-೯೪ ವರ್ಷ, ಯಜಮಾನರ ಯಜಮಾನತಿಯವರಿಗೆ ಒಂದೈದು ಕಮ್ಮಿ ಇರಬಹುದು. ಒಂದು ಚಿಕಿತ್ಸಾಲಯದಲ್ಲಿ, ಅವರು ಮುಪ್ಪಿನ ನೋವಿನ ತೊಂದರೆಗಳಿಗೆ ಅಲ್ಲಿಗೆ ಬಂದಾಗ, ನಾನು ಇನ್ನವುದೋ ಕಾರಣದಿಂದ ಅದೇ ಸಮಯಕ್ಕೆ ಅಲ್ಲಿಗೆ ತೆರಳಿದ್ದಾಗ, ವೈದ್ಯರ ಸಂದರ್ಶನಕ್ಕೆ ಸರದಿಯಲ್ಲಿ ಕಾಯುವಾಗ  ಆದ ಚಿಕ್ಕ ಪರಿಚಯ. ಗಂಟೆಯ ಕಾಲ ಮಾತನಾಡಿ ನಮಗೇ ಯಾವುದೋ ಜನ್ಮದ ಋಣವೆಂಬಂತೇ ಹರಟಿದ್ದು ವಿಶೇಷ! ಆ ವೃದ್ಧರ ಜೊತೆಯಲ್ಲಿ ಮನೆಯಲ್ಲಿ ಯಾರೂ ಇಲ್ಲ. ಅವರೇ ಸಾಮಾನು ತಂದುಕೊಳ್ಳಬೇಕು, ಅವರೇ ಅಡಿಗೆ ಮಾಡಿಕೊಳ್ಳಬೇಕು, ಅವರೇ ಪರಸ್ಪರ ಮಾತನಾಡಿ ಕಾಲವ್ಯಯಿಸಬೇಕು, ಅವರೀರ್ವರ ನೋವಿಗೂ-ನಲಿವಿಗೂ ಅವರೇ ಅವರೇ ಮತ್ತು ಅವರೇ! ಯಾಕೆ ಸಂತನಭಾಗ್ಯ ಇಲ್ಲವೇ? ಇದೆಯಪ್ಪಾ, ಎಲ್ಲವೂ ಇದೆ; ಮಗ ಅಮೇರಿಕದಲ್ಲಿ ದೊಡ್ಡ ವೈದ್ಯ, ಮಗಳು ಬೆಂಗಳೂರಿನಲ್ಲೇ ಇದ್ದು ಆಕೆ ಇವರಿಗಿಂತಾ ಮುಪ್ಪಾದವರಂತೇ ಇದ್ದಾಳಂತೆ-ಗೂರಲು ಉಬ್ಬಸ ರೋಗದ ಅವಳ ಯಜಮಾನರನ್ನೂ ಅವಳ ಮಕ್ಕಳನ್ನೂ ಸಂಭಾಳಿಸುವುದೇ ಅವಳಿಗೆ ಕಷ್ಟವಾಗಿ ಈ ಕಡೆ ತಲೆಹಾಕಲು ಆಗುತ್ತಿಲ್ಲವಂತೆ. ವೈದ್ಯ ಮಗ ಅಮೇರಿಕಾದಿಂದ ಎರಡೋ ಮೂರೋ ವರ್ಷಗಳಿಗೊಮ್ಮೆ ಫ್ಲೈಯಿಂಗ್ ವಿಸಿಟ್ ಕೊಡುತ್ತಿರುತ್ತಾನಂತೆ. ಮಗನ ಜೀವನ ಅಲ್ಲಿ ಸುಖಕರವಾಗಿದೆ ಎಂಬ ಮಾನಸಿಕ ಸಂತೋಷದಲ್ಲೇ ತಮ್ಮ ಕಷ್ಟಗಳನ್ನು ಮರೆಯುತ್ತಾ ಕಾಲಹಾಕುತ್ತಿದ್ದಾರೆ. ಇಬ್ಬರೂ ಹುಷಾರಿಲ್ಲದೇ ಏಳಲಾಗದಿದ್ದರೆ ದೂರವಾಣಿಯ ಮುಖಾಂತರ ಔಷಧ ಅಂಗಡಿಯ ಮಾಲೀಕನಿಗೆ ಅಥವಾ ಗೊತ್ತಿರುವ ಚಿಕಿತ್ಸಾಲಯದ ವೈದ್ಯರ ಸಹಾಯಕರಿಗೆ ದುಂಬಾಲು ಬೀಳುತ್ತಾರೆ; ಒಲ್ಲದ ಮನಸ್ಸಿನಲ್ಲೇ ಅವರು ಅಲ್ಪಸ್ವಲ್ಪ ಸಹಕಾರ ನೀಡಿದರೆ ಉಂಟು ಇಲ್ಲದಿದ್ದರೆ ಇಲ್ಲ.

Read more »

Follow

Get every new post delivered to your Inbox.

Join 1,254 other followers