ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 1, 2012

ಕತ್ತಿ ಕತೆ

‍ನಿಲುಮೆ ಮೂಲಕ

-ಉಮೇಶ್ ದೇಸಾಯಿ

ಅವರ ಕೈಯ್ಯಲ್ಲಿನ ಕತ್ತಿ ಮಿನುಗಿತ್ತು..

ತುದಿಗೆ ಕೇಕಿನ ಬೆಣ್ಣೆ ಮೆತ್ತಿತ್ತು..

ಹಿಂದಿರುವ ನೊಣ , ಕಾವಿ ಧರಿಸಿತ್ತು

ಗುಂಯ್ಗುಡುತ್ತಿತ್ತು…

ವಂಧಿಮಾಗಧರ ಬೋ ಪರಾಕು

ನಿಕಟಪೂರ್ವ ದೊರೆಯ ಮುಖದತುಂಬ

ಕವಿದ ಕಾರ್ಮೋಡ..

ಜಾತಿ ಒಂದೇ ವಲಂ ಎಂದು ಬಡಬಡಿಸಿದವನ

ಮುಖ ಸಪ್ಪೆ.. ಅಂತೆಯೇ ಆ ಕತ್ತಿ ನಾಲಿಗೆಗೆ

ಇಳಿದಿತ್ತು..

ಅವರೇನೋ ಕುರುಡರು ..ಚೂರಿ ಅಲಗನ್ನು

ಗುರುತಿಸಲಿಲ್ಲ… ನಾವು ನೀವು

ಕಣ್ಣಿದ್ದವರು..ಅದೆಷ್ಟೋ ಚೂರಿಗಳು ನಮ್ಮೆದೆ

ಎದೆಬಗೆದು ನೆತ್ತರ ಉಂಡರೂ ಮುಖದಿಂದಿನ್ನೂ

ಚೀತ್ಕಾರ ಬಂದಿಲ್ಲ..

ಈ ಕಾವಿ, ಖಾದಿಯ ನಡುವೆ ನಮ್ಮ ಬದುಕು

ಬರಡಾಯಿತಲ್ಲ….!!

* * * * * * *

Read more from ಕವನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments