ಕತ್ತಿ ಕತೆ
-ಉಮೇಶ್ ದೇಸಾಯಿ
ಅವರ ಕೈಯ್ಯಲ್ಲಿನ ಕತ್ತಿ ಮಿನುಗಿತ್ತು..
ತುದಿಗೆ ಕೇಕಿನ ಬೆಣ್ಣೆ ಮೆತ್ತಿತ್ತು..
ಹಿಂದಿರುವ ನೊಣ , ಕಾವಿ ಧರಿಸಿತ್ತು
ಗುಂಯ್ಗುಡುತ್ತಿತ್ತು…
ವಂಧಿಮಾಗಧರ ಬೋ ಪರಾಕು
ನಿಕಟಪೂರ್ವ ದೊರೆಯ ಮುಖದತುಂಬ
ಕವಿದ ಕಾರ್ಮೋಡ..
ಜಾತಿ ಒಂದೇ ವಲಂ ಎಂದು ಬಡಬಡಿಸಿದವನ
ಮುಖ ಸಪ್ಪೆ.. ಅಂತೆಯೇ ಆ ಕತ್ತಿ ನಾಲಿಗೆಗೆ
ಇಳಿದಿತ್ತು..
ಅವರೇನೋ ಕುರುಡರು ..ಚೂರಿ ಅಲಗನ್ನು
ಗುರುತಿಸಲಿಲ್ಲ… ನಾವು ನೀವು
ಕಣ್ಣಿದ್ದವರು..ಅದೆಷ್ಟೋ ಚೂರಿಗಳು ನಮ್ಮೆದೆ
ಎದೆಬಗೆದು ನೆತ್ತರ ಉಂಡರೂ ಮುಖದಿಂದಿನ್ನೂ
ಚೀತ್ಕಾರ ಬಂದಿಲ್ಲ..
ಈ ಕಾವಿ, ಖಾದಿಯ ನಡುವೆ ನಮ್ಮ ಬದುಕು
ಬರಡಾಯಿತಲ್ಲ….!!
* * * * * * *