ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 5, 2012

137

ಮಂಗನಿಂದ ಮಾನವನಾದ ಎನ್ನುವುದು ಬರೇ ಅಪವಾದ !

‍maatmaatalli ಮೂಲಕ

ಇಷ್ಟಕ್ಕೂ ನಾವು ಓದಿದ ಜೀವಶಾಸ್ತ್ರದಲ್ಲಿ ಅಥವಾ ಸಮಾಜಶಾಸ್ತ್ರಲ್ಲಿ ಮಾನವನ  ಹುಟ್ಟಿನ ಬಗೆಗೆ ನಾವು ತಿಳಿದುಕೊಂಡ ಸತ್ಯ ಎಂಬುದು ಸುಳ್ಳು. ಅದೊಂದು ಹೋಲಿಕೆಯ ಕಥೆ ಅಷ್ಟೇ! ಯಾಕೆ ಎಂದು ಯಾರೂ ಚಿಂತಿಸಿದವರಿಲ್ಲ. ಹರಪ್ಪ ಮತ್ತು ಮೊಹೆಂಜೊದಾರೋ ಸ್ಥಳ ಮಂಗನಿಂದ ಮಾನವನಾದ ಎನ್ನುವುದು ಬರೇ ಅಪವಾದ !ಸಂಶೋಧನೆಗಳಲ್ಲಿ ಸಿಕ್ಕಿದವು ಎನ್ನಲಾದ ಕಲ್ಲಿನ ಆಯುಧಗಳು, ಉಪಯೋಗಿಸಿರಬಹುದಾದ ಮಣ್ಣಿನ ಮಡಕೆ-ಕುಡಿಕೆಗಳು, ಗುಹೆಗಳಲ್ಲಿನ ಗೋಡೆ ಚಿತ್ರಗಳು ಕೇವಲ ಇವುಗಳನ್ನೇ ಅವಲಂಬಿಸಿ ಕಟ್ಟಿದ ಅಂದಾಜು ಕಥೆಯೇ ಮಂಗನಿಂದ ಮಾನವ ಎಂಬುದಾಗಿದೆ!ಇದಕ್ಕೆ ಇದಮಿತ್ಥಂ ಎಂದು ಸಾಕ್ಷೀಕರಿಸುವ ಯಾವುದೇ ಪುರಾವೆಗಳು ಇರುವುದಿಲ್ಲ. ಆದಿ ಮಾನವ ಕಾಡೊಳಗೇ ವಾಸವಾಗಿದ್ದನೆಂದೂ ಮೊದಲು ಹಸಿ ಮಾಂಸವನ್ನಷ್ಟೇ ತಿಂದು ಬದುಕಿದ್ದನೆಂದೂ ನಂತರ ಬೆಂಕಿಯನ್ನು ಕಂಡುಹಿಡಿದನೆಂದೂ ಹಲವಾರು ಮೈನವಿರೇಳಿಸುವ ರೋಚಕ ಕಥೆಗಳನ್ನು ಕೇಳುತ್ತೇವೆ. ಕಲ್ಲಿನ ಚೂಪಾದ ಆಯುಧಗಳಿಂದ ಪ್ರಾಣಿಗಳನ್ನು ವಧಿಸುತ್ತಿದ್ದ ಮಾನವ ಕ್ರಮೇಣ ಲೋಹವನ್ನೂ ಕಂಡುಕೊಂಡು ಚಿಕ್ಕಪುಟ್ಟ ಲೋಹದ ಆಯುಧಗಳನ್ನು ತಯಾರಿಸಿಕೊಂಡ ಎಂದು ನಮಗೆ ಹೇಳಿದ ಕಥೆಗಳು ಸಾರುತ್ತವೆ. ನನಗನಿಸುತ್ತಿದೆ ಅವೆಲ್ಲಾ ಬರೇ ಕಟ್ಟುಕಥೆಗಳಾಗಿವೆ; ಅವುಗಳಲ್ಲಿ ಯಾವುದೇ ಹುರುಳಿಲ್ಲ.

ಭಾರತೀಯ ಆಯುರ್ವೇದಕ್ಕೆ ೩೦೦೦ ವರ್ಷಗಳ ದಾಖಲೆಯಿದೆ. ಎಷ್ಟೋಕಡೆ ೫೦೦೦ ವರ್ಷಗಳಷ್ಟು ಹಳೆಯ ದಾಖಲೆಗಳೂ ಸಿಗುತ್ತಿವೆ. ಒಂದೊಮ್ಮೆ ಹಾಗೆ ಮಂಗನಿಂದ ಮಾನವ ಎಂದಾದರೆ ನಮ್ಮ ಪೂರ್ವಜರು ಅಷ್ಟೊಂದು ಹಿಂದೆಯೇ ಬರೆದಿದ್ದ ಗ್ರಂಥಗಳು, ಪುರಾಣೇತಿಹಾಸಗಳು, ಮಹಾಕಾವ್ಯಗಳು, ವೇದ-ವೇದಾಂತಗಳೆಲ್ಲಾ ಸುಳ್ಳೇ?

ಅವರು ಆ ಕಾಲದಲ್ಲೇ ಕಂಡುಕೊಂಡಿದ್ದ ಆಕಾಶಕಾಯಗಳು ಮತ್ತು ಅವುಗಳ ಚಲನೆಯ ಕರಾರುವಾಕ್ಕಾದ ಗಣಿತಗಳೆಲ್ಲಾ ಹೇಗೆ ಜನಿಸಿದವು ? ಕಾಂಬೋಡಿಯಾದಂತಹ ದೇವಾಲಯದಂತಹ ನಿರ್ಮಾಣಗಳು ಹಲವುಸಾವಿರ ವರ್ಷಗಳಿಂದ ತಾವಿರುವ ಗುರುತನ್ನು ತೋರಿಸುತ್ತವೆ. ಪಂಚಭೂತಗಳೆನಿಸಿದ ಭೂಮಿ, ಆಕಾಶ, ವಾಯು, ಬೆಂಕಿ[ಅಗ್ನಿ]ಮತ್ತು ನೀರು ಇವುಗಳ ಆವಿಷ್ಕಾರದ ಬಗ್ಗೆ ಅವು ಅನುಕ್ರಮವಾಗಿ ಒಂದರ ನಂತರ ಒಂದು ಹೇಗೆ ಸೃಷ್ಟಿಗೊಂಡವು ಎಂಬ ಬಗ್ಗೆ ವೇದದಲ್ಲಿ ತಿಳಿಸಲಾಗಿದೆ. ಪ್ರಪಂಚ ಪರಿಕಲ್ಪನೆಯಲ್ಲಿರುವ ಮೂರುಪಾಲು ನೀರು ಮತ್ತು ಒಂದುಪಾಲು ನೆಲ ಎಂಬ ತತ್ವವನ್ನೂ ಅಲ್ಲಿ ತಿಳಿಸಲಾಗಿದೆ. ಹೀಗಿರುವಾಗ ಮಹತ್ತರವಾದ ಈ ಉದ್ಗ್ರಂಥಗಳು ಮಂಗನಿಂದಾದ ಮಾನವನ ಮೂಲಕ ಬರೆಯಲ್ಪಟ್ಟಿದ್ದವೆಂದರೆ ಅದು ಅಸಾಧ್ಯವೆಂಬುದು ಸ್ಪಷ್ಟವಾಗುತ್ತದೆ.

ಹಾಗೆ ನೋಡಿದರೆ ಈಗಲೂ ಆದಿವಾಸಿಗಳೂ ಕಾಡುವಾಸಿಗಳೂ ಪ್ರಪಂಚದಲ್ಲಿ ಅಲ್ಲಲ್ಲಿ ಕಾಣಸಿಗುತ್ತಾರೆ. ಮಂಗಗಳ ರೂಪಕ್ಕೂ ಅವರುಗಳ ರೂಪಕ್ಕೂ ಬಹಳ ಹತ್ತಿರದ ಸಾಮ್ಯ ಈಗಲೂ ಕಾಣುತ್ತದೆ. ಅದೂ ಅಲ್ಲದೇ ನಾಗರಿಕ ಜನಾಂಗದ ಮಧ್ಯೆಯೇ ವಸಿಸುತ್ತಿರುವ ಅದೆಷ್ಟೋ ಜನರನ್ನು ನೋಡುವಾಗ ಮಂಗಗಳ ’ಋಣಾನುಬಂಧ’ವಿರುವಹಾಗೇ ಕಾಣುವ ಅವರ ಆಕಾರ, ವಿಕಾರ, ವರ್ತನೆ ಇವುಗಳ ’ದಿವ್ಯಾನುಭೂತಿ’ ಯಾವ ತಪಸ್ಸೂ ಇಲ್ಲದೇ, ಆಗಾಗ ಪುಕ್ಕಟೆಯಾಗಿ ನಮಗೆ ಲಭಿಸುತ್ತಿರುತ್ತದೆ. ಆಗೆಲ್ಲಾ ನನ್ನೊಳಗೇ ನಾನು ಅಂದುಕೊಳ್ಳುವುದಿದೆ ಮಂಗನಿಂದ ಮಾನವನಾದುದು ಹೌದೇ? ಎಂದು. ಪ್ರಪಂಚದಲ್ಲಿ ೮೦ ಕೋಟಿಗೂ ಅಧಿಕ ಜೀವ ಪ್ರಭೇದಗಳನ್ನು ಸೃಜಿಸಿದ್ದೇನೆ ಎಂಬ ಭಗವಂತನ ಹೇರ್‍ಳಿಕೆಯನ್ನು ತೆಗೆದುಕೊಂಡರೆ ಮಾನವ ವಿಜ್ಞಾನಿಗಳು ಗುರುತಿಸಿದ ಒಟ್ಟೂ ಪ್ರಭೇದಗಳೆಷ್ಟು ಕಮ್ಮಿ ಎಂಬುದೂ ಅರಿವಾಗುತ್ತದೆ. ನಿಸರ್ಗದಲ್ಲಿ ಮಳೆಗಾಲದಲ್ಲಿ ಅಲ್ಲಲ್ಲಿ ಕಾಣುವ ಚಿತ್ರ-ವಿಚಿತ್ರ ಪ್ರಾದೇಶಿಕ ಹುಳುಹುಪ್ಪಟೆಗಳೆಲ್ಲವನ್ನೂ ವೈಜ್ಞಾನಿಕವಾಗಿ ಗುರುತಿಸಲಾಗಿಲ್ಲ. ವಿಜ್ಞಾನಿಗಳಿಗೆ ಸಿಕ್ಕಷ್ಟನ್ನಷ್ಟೇ ದಾಖಲಿಸಿದ್ದಾರೆ-ಹೆಸರು ಕೊಟ್ಟಿದ್ದಾರೆ, ಇನ್ನೂ ಆ ಕಾರ್ಯ ನಡೆಯುತ್ತಲೇ ಇದೆಯೇ ಹೊರತು ಅದು ಮುಗಿದ ಕೆಲಸವಲ್ಲ!

ಬುದ್ಧಿವಂತ ಮಾನವ ನಿಯಂತ್ರಣ ತಪ್ಪಿ ಹಾರುವಾಗ ಹೊಸ ಹೊಸ ಕಾಯಿಲೆಗಳನ್ನು ಹುಟ್ಟಿಸುವ ಈ ನಿಸರ್ಗದ ಆಂಗ್ಲ ಔಷಧೀಯ ಪದ್ಧತಿಯಲ್ಲಿ ಕೆಲವಕ್ಕಂತೂ ಔಷಧಗಳೆನಿಸಿದ ಕೆಮಿಕಲ್ ಗಳು ಇಲ್ಲವೇ ಇಲ್ಲ! ಇನ್ನು ಎಷ್ಟೋ ಕಾಯಿಲೆಗಳ ಮೂಲಸ್ವರೂಪ ಮತ್ತು ಕಾರಣಗಳು ಆ ಪದ್ಧತಿಗೆ ಅರಿವಿಲ್ಲ. ಕ್ಯಾಸನೂರು ಕಾಡಿನ ಕಾಯಿಲೆ ಅಥವಾ ಮಂಗನ ಕಾಯಿಲೆ ಎಂಬ ವಿಚಿತ್ರ ರೋಗವೊಂದು ಕರ್ನಾಟಕದ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಕಂಡುಬಂದಿದೆ. ಇದಕ್ಕೆ ಔಷಧಗಳೇ ಇಲ್ಲ. ಹಣೆಬರಹ ಗಟ್ಟಿ ಇದ್ದರೆ ಬದುಕಬೇಕಷ್ಟೇ. ಆದರೆ ಇದಕ್ಕೆ ಔಷಧಗಳನ್ನು ಆಯುರ್ವೇದೀಯ ಕ್ರಮದಲ್ಲಿ ಹೇಳಲಾಗಿದೆ-ಅದು ನಮ್ಮಲ್ಲಿನ ಆಧುನಿಕ ಆಯುರ್ವೇದ ಪ್ರಾಚಾರ್ಯರುಗಳಿಗೆ ಅರ್ಥವಾಗಿಲ್ಲ. ಆಯುರ್ವೇದದ ಚರಕ ಮತ್ತು ಸುಶ್ರುತರೆಂಬ ಆಚಾರ್ಯ ವೈದ್ಯರುಗಳು ಬರೆದ ಗ್ರಂಥಗಳ ಸಮಗ್ರ ಅಧ್ಯಯನ ಇಂದಿನ ಯಾವ ವೈದ್ಯರಿಂದಲೂ ಆಗುತ್ತಿಲ್ಲ; ಓದಿದರೂ ಸರಿಯಾಗಿ ಅರ್ಥೈಸಿಕೊಳ್ಳಲು ಆಗುತ್ತಿಲ್ಲ! ಆಂಗ್ಲ ಔಷಧೀಯ ಪದ್ಧತಿ ಉಚ್ಛ್ರಾಯ ಸ್ಥಿತಿಗೆ ಬರುವ ಮುನ್ನವೇ ಸುಮಾರು ೩೦೦೦ ವರ್ಷಗಳ ಹಿಂದೆಯೇ ಈ ಅಯುರ್ವೇದ ಪಂಡಿತರು ಭಾರತದಲ್ಲಿ ಶಸ್ತ್ರಕ್ರಿಯೆಯನ್ನು ನಡೆಸಿ ಯಶಸ್ವಿಯಾದ ದಾಖಲೆಗಳು ಕಾಣಸಿಗುತ್ತವೆ. ಅವುಗಳ ಅನುಸರಣೆಯ ಕ್ರಮಗಳನ್ನೂ ತಿಳಿಯಬಹುದಾಗಿದೆ. ಆದರೆ ಆಧುನಿಕತೆಯ ಭರದಲ್ಲಿ ಅವೆಲ್ಲಾ ಮೂಲೆಗುಂಪಾಗಿವೆ. ಓದುವವರೂ ಇಲ್ಲ, ತಿಳಿದು-ತಿಳಿಸುವ ವಿದ್ವಾಂಸರೂ ಇಲ್ಲ.

ನಮ್ಮ ಈ ನೆಲದಲ್ಲಿ ಅಗೆದಷ್ಟೂ ಮೊಗೆವಷ್ಟು ಐತಿಹಾಸಿಕ ಕುರುಹುಗಳು ಸಿಗುತ್ತಿವೆ. ಪುರಾತನ ವಿಗ್ರಹಗಳು, ದೇಗುಲಗಳ ಅವಶೇಷಗಳು, ಪ್ರಾಚೀನರ ಬಳಕೆಯ ಸಾಮಾನುಗಳು, ಪ್ರಾಚೀನ ಭಾರತದ ಸಂಸ್ಕೃತಿ ಸಾರುವ ಲೋಹದ ಎರಕದ ವಸ್ತುಗಳು, ಶಾಸನಗಳು, ಕಟ್ಟಡಗಳ ಅವಶೇಷಗಳು ಹೂಳುತುಂಬಿ ಇತಿಹಾಸದ ಆಳಗರ್ಭದಲ್ಲಿ ಸೇರಿಹೋಗಿವೆ. ಅಚ್ಚರಿಯೆಂದರೆ ಬೆಂಗಳೂರಿನಂತಹ ಮಹಾನಗರದ ಮಧ್ಯೆ ಮಣ್ಣಲ್ಲಿ ಹುದುಗಿದ್ದ ದೇವಸ್ಥಾನವೊಂದು ಅನಿರೀಕ್ಷಿತವಾಗಿ ಅನಾವರಣಗೊಂಡಿದ್ದು ತೀರಾ ಇತ್ತೀಚೆಗೆ! ಅಲ್ಲೂ ಕೂಡ ಆ ದೇವಸ್ಥಾನದಲ್ಲಿ ನಂದಿಯ ಬಾಯಿಂದ ಸತತವಾಗಿ ಶುದ್ಧ ನೀರು ಬೀಳುವ ವ್ಯವಸ್ಥೆ, ಬಿದ್ದ ನೀರು ಎದುರಿಗಿರುವ ಕಲ್ಯಾಣಿ ಸೇರಿ ನಂತರದಲ್ಲಿ ಮತ್ತೆಲ್ಲೋ ಹರಿದುಹೋಗುವ ಪರಿ ಅಲ್ಲಿನ ವಾಸ್ತುಶಾಸ್ತ್ರದ ಮಹತ್ವವನ್ನು ತೋರಿಸುತ್ತದೆ. ಆ ಕಾಲದ ರಥಗಳು, ಅವುಗಳ ಭಾರಹೊತ್ತ ಚಲನೆಗೆ ಲೆಕ್ಕಚಾರದ ತಕ್ಕ ಚಕ್ರಗಳು, ಜನಪದ ಕಲೆಯಲ್ಲಿ ಬಳಸಲ್ಪಡುವ ಹಲವು ವಸ್ತುಗಳು ಇವೆಲ್ಲಾ ನಮ್ಮ ಪ್ರಾಚೀನ ಸಂಸ್ಕೃತಿ ನಡೆದುಬಂದ ರೀತಿಯನ್ನು ಪ್ರತಿಬಿಂಬಿಸುತ್ತವೆ. ತನ್ನದೇ ದೇಹದ ಭಾರಕ್ಕೆ ಕಾಲುಗಳು ಚಿಕ್ಕವೇನೋ ಎನಿಸುವ ಸಲಗದ ಬೆನ್ನಮೇಲೆ ೭೫೦ ಕ್ವಿಂಟಾಲು ತೂಕದ ಅಂಬಾರಿಯನ್ನು ಇಟ್ಟು ಮೈಲುಗಟ್ಟಲೆ ನಡೆಸುವ ಲೆಕ್ಕಾಚಾರವನ್ನೂ ಕಂಡಿದ್ದೇವೆ. ಅಂದರೆ ಹಿಂದಿನ ಜನರಲ್ಲಿ ತಂತ್ರಜ್ಞಾನಕ್ಕೇನೂ ಕಮ್ಮಿ ಇರಲಿಲ್ಲ. ನಮ್ಮ ರಾಮಾಯಣದಲ್ಲೇ ಪುಷ್ಪಕ ವಿಮಾನದ ಪರಿಕಲ್ಪನೆ ಇತ್ತೆಂದರೆ ಜಗತ್ತಿಗೆ ಮೊದಲಾಗಿ ವಿಮಾನವನ್ನು ಪರಿಚಯಿಸಿದ ಹೆಚ್ಚುಗಾರಿಕೆ ಭಾರತದ್ದಾಗಿದೆ!

ಮೊನ್ನೆಯಷ್ಟೇ ಯುಗಾದಿ ಕಳೆಯಿತು. ಇದು ಯಾವ ಯುಗದ ಆದಿ? ಕೃತ, ತ್ರೇತ, ದ್ವಾಪರ, ಕಲಿ ಇವುಗಳಲ್ಲಿ ಯಾವುದರ ಆದಿ ಎಂದರೆ ಈ ಯುಗಾದಿ ಇವುಗಳ ಆದಿಯಲ್ಲಾ ಬದಲಾಗಿ ಈ ಬ್ರಹ್ಮಾಂಡ ಹುಟ್ಟಿದ ದಿನ ಎಂಬುದು ಸ್ಪಷ್ಟವಾಗುತ್ತದೆ ಯಾಕೆಂದರೆ ಕಲಿಯುಗ ಆರಂಭಗೊಂಡಿದ್ದು ಮಾಘ ಪೌರ್ಣಮಿಯ ದಿನ! ದಿನವೊಂದಕ್ಕೆ ಇಷ್ಟು ಜಾವ, ಇಂತಹ ನಕ್ಷತ್ರದ ಸಾಂಗತ್ಯ, ಇಂಥಾ ರಾಶಿ, ಇಂಥಾ ಮಾಸ, ಘಳಿಗೆ-ಲಿಪ್ತಿ, ತಿಥಿ-ಮಿತಿಗಳ ಲೆಕ್ಕ, ಗ್ರಹಣ ನಡೆಯುವ ಲೆಕ್ಕ ಮುಂತಾದ ಲೆಕ್ಕಗಳನ್ನು ಯಾವ ಉಪಕರಣಗಳೂ ಇಲ್ಲದ ಪುರಾತನ ಹಿಂದೂಸ್ಥಾನವೇ ಅರಿತಿತ್ತು ಎಂದಮೇಲೆ ಅವರಲ್ಲಿನ ವಿದ್ಯೆ ಎಂಥದ್ದಿತ್ತು ? ಯುಗವೊಂದಕ್ಕೆ ಇಂತಿಷ್ಟು ವರ್ಷಗಳು, ಸೃಷ್ಟಿಕರ್ತನ ಹಗಲು-ರಾತ್ರಿಗಳ ಲೆಕ್ಕ, ಕಲ್ಪ ಎಂಬುದರ ಕಲ್ಪನೆ, ಸೂರ್ಯನನ್ನೂ ಚಂದ್ರನನ್ನೂ ಅವಲಂಬಿಸಿ ಋತುಮಾನಗಳು, ಅಯನಗಳು ಇವುಗಳನ್ನೆಲ್ಲಾ ಲೆಕ್ಕಹಿಡಿದು ಹೇಳುವ ಅವರ ಚಾತುರ್ಯ ಬಹಳ ದೊಡ್ಡದಾಗಿತ್ತಲ್ಲವೇ? ಶೃಂಗೇರಿಯ ವಿದ್ಯಾಶಂಕರ ದೇಗುಲದಲ್ಲಿ ಮಾಸಕ್ಕೆ ತಕ್ಕಂತೇ ಸೂರ್ಯ ಆಯಾಯ ಗತಿಯಲ್ಲಿ ಆ ಯಾ ಕಂಬಗಳಮೇಲೆ ತನ್ನ ಪ್ರಕಾಶ ಬೀರುವುದು, ಬೆಂಗಳೂರಿನ ಗುಹಾಂತರ ಗವಿಗಂಗಾಧರೇಶ್ವರ ಲಿಂಗದಮೇಲೆ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಸೂರ್ಯ ಉಪಕ್ರಮಿಸುವ ಮಕರಸಂಕ್ರಾಂತಿಯ ದಿನ ತನ್ನ ಕಿರಣಗಳಿಂದ ಅಭಿಷೇಚಿಸುವುದು ಪುರಾತನರ ಬುದ್ಧಿ ಸೂತ್ರಕ್ಕೆ ಹಿಡಿದ ಕನ್ನಡಿಯಲ್ಲವೇ?

ಜೀವರಾಶಿಗಳಲ್ಲಿ ಹಲವು ಪ್ರಭೇರ್‍ದಗಳಿರುವಂತೇ ಮಂಗವೂ ಒಂದು ಮತ್ತು ಮಂಗಗಳ ಜಾತಿಯಲ್ಲೇ ಹಲವು ಪ್ರಭೇದಗಳನ್ನು ಕಾಣುತ್ತೇವಲ್ಲಾ? ಮಂಗಗಳಿಗೂ ಬುದ್ಧಿ ಜಾಸ್ತಿ ಇತ್ತು ಎಂಬುದನ್ನು ರಾಮಾಯಣದಲ್ಲಿ ಕಾಣುತ್ತೇವಲ್ಲವೇ? ಅಂದಮೇಲೆ ಮಂಗಗಳು ಮನುಷ್ಯನಿಗಿಂತ ಬೇರೇಯೇ ಆಗಿವೆಯೇ ಹೊರತು ಅವುಗಳು ಕ್ರಮೇಣ ನಿಲ್ಲಲು ಪ್ರಯತ್ನಿಸಿದವು, ಬಾಲ ಕಳೆದುಕೊಂಡವು, ಆಮೇಲೆ ನಡೆದಾಡಿದವು, ನಂತರದ ಶತಮಾನಗಳಲ್ಲಿ ನಿಧಾನವಾಗಿ ರೂಪದಲ್ಲೂ ಬದಲಾಗುತ್ತಾ ಮೈಮೇಲಿನ ಕೂದಲುಗಳು ಮಾಯವಾಗಿ ಮಾನವರಾದವು ಎಂಬ ’ಸಂಶೋಧಕ ಮಂಗ’ಗಳಿಗೆ ಏನನ್ನೋಣ ? ಇಂದಿಗೂ ಚಿಂಪಾಂಜಿ ಮತ್ತು ಗೋರಿಲ್ಲಾಗಳು ನೋಡಸಿಗುತ್ತವಲ್ಲಾ ಅವುಗಳೂ ಕ್ರಮೇಣ ಬದಲಾಗಿ ಬದಲಾಗಿ ಮುಂದೆ ಹುಟ್ಟುವ ತಳಿ ಮಾನವರಾಗಬಹುದಿತ್ತಲ್ಲಾ ಆಗುವುದಿಲ್ಲ ಯಾಕೆ? ಜೀವಿಗಳಲ್ಲಿ ಸಹಜವಾಗಿ ಇರುವ ಪ್ರಭೇದಗಳ ಮಧ್ಯೆ ಮನುಷ್ಯ ಮನುಷ್ಯನಾಗಿಯೇ ಹುಟ್ಟಿದನೇ ಹೊರತು ಮಂಗನಿಂದ ಮಾನವ ಎಂಬ ತತ್ವವನ್ನು ನಾನು ಒಪ್ಪುವುದಿಲ್ಲ! ನಮ್ಮ ಅಂಧಕಾರದಿಂದ ಯಾರೋ ಬ್ರಿಟಿಷರು ಹೇಳಿಕೊಟ್ಟ ’ರೀ-ಸರ್ಚ್’ ಎಂಬ ಕೀಳು ಪದ್ಧತಿಯಲ್ಲಿ ನಾವು ಮಂಗನಿಂದ ಮಾನವ ಎಂದು ಹೇಳುತ್ತಾ ಅದನ್ನೇ ನಮ್ಮ ಮನಸ್ಸಿಗೆ ಒಪ್ಪಿಸುತ್ತಾ ಬಂದೆವೇ ವಿನಃ ಮಾನವ ಆವಿಷ್ಕಾರದ ಬಗ್ಗೆಯಾಗಲೀ ಬೇರೇ ಜೀವವೈವಿಧ್ಯಗಳ ಆವಿಷ್ಕಾರದ ಬಗ್ಗೆಯಾಗಲೀ ನಿರ್ದಿಷ್ಟವಾದ ಯಾವ ಮೂಲವನ್ನೂ ಕಾಣಲಾಗಲಿಲ್ಲ. ಜಗತ್ತಿನಲ್ಲಿ ಮೊಟ್ಟೆಮೊದಲೋ ಕೋಳಿಮೊದಲೋ? ಬೀಜ ಮೊದಲೋ ಸಸ್ಯಮೊದಲೋ?- ಎಂಬುದಕ್ಕೆ ಇವತ್ತಿನ ಯಾವ ವಿಜ್ಞಾನವೂ ಸಮರ್ಪಕ ಉತ್ತರವನ್ನು ಹೇಳದಲ್ಲ !

ಜೀವ ಪ್ರಭೇದಗಳಲ್ಲಿ ಹುಟ್ಟುವ ಜೀವಿಗಳಿಗೆ ಆಯಾಯ ಜನ್ಮಕ್ಕೆ ತಕ್ಕಂತೇ ಪಂಚೇಂದ್ರಿಯಗಳನ್ನೂ ಅಥವಾ ಸಂವೇದನಾ ಅಂಗಾಂಗಗಳನ್ನೂ ಸಾಂಪರ್ಕಿಕ ಮತ್ತು ಪ್ರತಿರೋಧಕ ಅವಯವಗಳನ್ನೂ ಕೊಟ್ಟು ನಡೆಸುವ ಸೃಷ್ಟಿಕರ್ತನಿಗೆ ಮಿಗಿಲಾದ ಮ್ಯಾನುಫ್ಯಾಕ್ಚರರ್ ಯಾರಾದರೂ ಇದ್ದಾರೆಯೇ ? ಮಾನವ ಶರೀರವನ್ನೇ ತೆಗೆದುಕೊಳ್ಳಿ: ಎಲ್ಲೆಲ್ಲೂ ಒಂದೂ ಗಂಟೂ ಕಾಣಿಸುತ್ತಿಲ್ಲ! [ಕೆಲವರ ಕೈಮೇಲೋ ಮೈಮೇಲೋ ಡೈಮಂಡ್ ಸ್ಟಡ್ಡೆಡ್ ಅನ್ನೋಹಾಗೇ ಗಂಟುಗಳ ಉದ್ಭವವಾಗಿರಬಹುದು, ಅದು ಅವರ ಕರ್ಮ]ಆದರೆ ಚರ್ಮ ಎಂಬ ಹೊದಿಕೆಯಿಂದ ಎಲ್ಲವನ್ನೂ ಬೈಂಡ್ ಮಾಡಲಾಗಿದೆ. ಶರೀರದ ಒಳಕ್ಕೆ ಆಹಾರ ಸ್ವೀಕೃತಿಗೆ ಬಾಯಿ ಇದೆ. ಸುಖ-ದುಃಖಗಳ ಬಾಷ್ಪವನ್ನು ಹೊರಹಾಕಲಿಕ್ಕೂ ನೋಡಲಿಕ್ಕೂ ಕಣ್ಣು ಎಂಬ ಅಂಗ ಇದೆ. ಮಲವಿಸರ್ಜನೆಗೆ ತಕ್ಕುದಾದ ಅಂಗಗಳಿವೆ. ಕೇಳಲು ಕಿವಿ, ನೋಡಲು ಕಣ್ಣು, ರುಚಿಸಲು ನಾಲಿಗೆ, ಆಘ್ರಾಣಿಸಲು ಮೂಗು, ಸ್ಪರ್ಶಿಸಲು ಚರ್ಮ ಇವುಗಳನ್ನು ನೀಡಿ ಮೆದುಳೆಂಬ ಅಂಗದಿಂದ ಎಲ್ಲವನ್ನೂ ನಿಯಂತ್ರಿಸುವ ಯಂತ್ರವನ್ನು ಸೃಜಿಸಿದ ಎಂಜಿನೀಯರಿಂಗ್ ಅದ್ಭುತವಲ್ಲವೇ? ಮನುಷ್ಯರಲ್ಲೇ ಕೆಲವರಂತೆಯೇ ಕಂಡರೂ ಮನುಷ್ಯ ಮೆದುಳನ್ನೂ ಮತ್ತು ಶರೀರ ಸೌಷ್ಟವಗಳನ್ನೂ ಹೊಂದಿರದ ಚಿಂಪಾಂಜಿಗಳನ್ನು ನೋಡಿದರೆ ಅವುಗಳಿಂದ ಮಾನವ ಹುಟ್ಟಿದನೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಾಗೊಮ್ಮೆ ಹೌದಾದರೆ ಮುಂದುವರಿದ ಚಿಂಪಾಂಜಿಯ ಅಥವಾ ಗೋರಿಲ್ಲಾದ ವಂಶಗಳು ಮನುಷ್ಯರೇ ಆಗಿ ಆ ಜೀವ ಪ್ರಭೇದಗಳು ಕಾಣದಾಗಬೇಕಿತ್ತಲ್ಲಾ?

ಪಂಚಭೂತಗಳ ಆವಿಷ್ಕಾರ ಹೇಗಾಯ್ತು ಎಂಬುದಕ್ಕೆ ನಮ್ಮಲ್ಲಿ ಉತ್ತರವಿಲ್ಲ. ಉಪಗ್ರಹಗಳನ್ನು ಸೃಷ್ಟಿಸಿ ಹಾರಿಸಿ ನಿಯಂತ್ರಿಸಿದರೂ ನಿಸರ್ಗದ ಆಕಾಶ ಕಾಯಗಳ ಪರಿಪೂರ್ಣ ಅಧ್ಯಯನ ಸಾಧ್ಯವಾಗುತ್ತಿಲ್ಲ. ಆಕಾಶದಲ್ಲಿರುವ ಗುರುತ್ವ ಪೊಳ್ಳುಗಳ ಆಚೆ ಏನಿದೆ ಎಂದು ಯಾರೂ ಹೇಳುವುದಿಲ್ಲ; ಹೇಳಲು ಅರಿಯಲಾಗಬೇಕಲ್ಲ? ಸೂರ್ಯನಲ್ಲಿ ಅಪರಿಮಿತ ಹೀಲಿಯಂ ಇದೆಯೆಂದು ದೂರದ ಲೆಕ್ಕಾಚಾರವೇ ಬಿಟ್ಟರೆ ಸೂರ್ಯನ ಹತ್ತಿರಕ್ಕೆಂದಾದರೂ ಹೋಗಲು ಸಾಧ್ಯವೇ? ಕೋಟ್ಯಂತರ ಮೈಲಿ ದೂರದಿಂದ ಹಾಯ್ದುಬಂದು, ದುರ್ಬೀನಿನ ಮೂಲಕ ಹಾಯುವ ಸೂರ್ಯ ಕಿರಣ ವಸ್ತುಗಳಲ್ಲಿ ಬೆಂಕಿಯ ಜನನಕ್ಕೆ ಕಾರಣವಾಗುತ್ತದೆ ಎಂದಮೇಲೆ ಸೂರ್ಯನ ಮಹತ್ತಾದರೂ ಎಂಥದ್ದು ಅಲ್ಲವೇ? ಮರಗಿಡಗಳು ತಮ್ಮ ಆಹಾರಗಳನ್ನು ನಿಂತಲ್ಲಿ ತಾವೇ ತಯಾರಿಸಿಕೊಳ್ಳುವ ಹಾಗೇ ಪತ್ರಹರಿತ್ತನ್ನು ಅವುಗಳಲ್ಲಿಟ್ಟು ಮೇಲಿಂದ ಸೂರ್ಯಪ್ರಕಾಶ ಹರಿಸುವುದು ಯಾರು ಮಾಡಿದ ನಿಯಮ ? ಮನುಷ್ಯನಿಗೂ ಮುಂಚಿನ ಮಂಗ ಮಾಡಿತೆ?

ಕಾಲವೊಂದರಲ್ಲಿ ವಾಹನಗಳ ಸೌಕರ್ಯವೇ ಇಲ್ಲದಾಗ ಪ್ರಪಂಚದಾದ್ಯಂತ ಇರುವ ಭೂಖಂಡಗಳು ಇಷ್ಟು, ಆಯಾ ಭೂಖಂಡಗಳ ವ್ಯಾಪ್ತಿ-ಪ್ರಾಪ್ತಿ, ಅವುಗಳ ವೈಶಿಷ್ಟ್ಯಗಳು, ಸಪ್ತ ಸಾಗರಗಳು ಇವುಗಳನ್ನೆಲ್ಲಾ ಇಷ್ಟಿಷ್ಟೇ ಎಂದು ಮಂಗ ನಿರ್ಧರಿಸಿತೇ? ದಶದಿಕ್ಕುಗಳು ಅವುಗಳ ಮಹತ್ವ, ಭೂಮಿ ಕಾಂತದ ಪರಿಣಾಮ ಇವುಗಳನ್ನೆಲ್ಲಾ ತಿಳಿದದ್ದು ಹೇಗೆ? ಭೂಮಿಯೆಂಬುದು, ಮಹಾಸ್ಫೋಟದಿಂದ ಸೂರ್ಯನ ಕಿಡಿ ಸಿಡಿದು ಆಮೇಲೆ ತಣ್ಣಗಾಗುತ್ತಾ ತಯಾರಾಯ್ತು ಎನ್ನುತ್ತೇವೆ. ಸಿಡಿದ ಸೂರ್ಯನ ತುಣಿಕಿನ ಮೇಲೆ ಎಷ್ಟೋ ಸಾವಿರ ವರ್ಷಗಳು ಮಳೆಸುರಿದು ಭೂಮಿ ತಣ್ಣಗಾಯ್ತು ಎನ್ನುತ್ತೇವೆ. ಭೂಮಿಯ ಮೇಲೆಯೇ ಸಮುದ್ರಗಳಿವೆಯಲ್ಲಾ ಸಮುದ್ರಗಳ ನೀರು ಆವಿಯಾಗಿ ಮಳೆಯಾಗಬೇಕಲ್ಲಾ? ಆಗ ಇಲ್ಲದಿದ್ದ ಸಮುದ್ರಗಳಿಂದ ಆವಿಯಾದರೂ ಹೇಗಾಯ್ತು? ಎಲ್ಲಿಂದ ಮಳೆ ಬಂತು? ಸಾವಿರಗಟ್ಟಲೆ ವರ್ಷಗಳು ಮಳೆ ಸುರಿದ ನಂತರ ತಣ್ಣಗಾದ ಭೂಮಿಯ ಅತೀ ಒಳಭಾಗದಲ್ಲಿ ಇನ್ನೂ ಲಾವಾರಸ ಹಾಗೇ ಇದೆ ಎನ್ನುತ್ತೇವೆ, ಅದೇ ಜ್ವಾಲಾಮುಖಿಯಾಗಿ ಆಗಾಗ ಭೋರ್ಗರೆದು ಹರಿಯುತ್ತದೆ ಎನ್ನುತ್ತೇವೆ. ಹಾಗಾದರೆ ಕಂಡಲ್ಲೆಲ್ಲಾ ಜ್ವಾಲಾಮುಖಿ ಯಾಕೆ ಸ್ಫೋಟಿಸುವುದಿಲ್ಲ? ಭೂಮಿ ಸೂರ್ಯನ ತುಣುಕು ಎಂದಮೇಲೆ ಅಲ್ಲೂ ಮಣ್ಣು-ಕಲ್ಲುಗಳು ಬೆಂಕಿಯ ರೂಪದಲ್ಲಿರಬೇಕಲ್ಲ ? ಇದು ಕೇವಲ ಅಂದಾಜಿಸಿದ್ದು, ಮಾನವ ಊಹೆ. ಊಹೆಗೆ ನಿಲುಕದ ವಿಚಾರಗಳೇ ಹಲವು!

ವಿಚಾರಮಾಡಿದರೆ ಮನುಷ್ಯ ಬಾವಿಯೊಳಗಿನ ಕಪ್ಪೆ; ಕೂಪ ಮಂಡೂಕ. ತನ್ನ ಜಗತ್ತನ್ನು ಬಿಟ್ಟರೆ ಬೇರೇ ಜಗತ್ತು ಇಲ್ಲಾ ಎನ್ನುತ್ತದಂತೆ ಕಪ್ಪೆ. ಅದರಂತೇ ತನ್ನ ಜಗತ್ತನ್ನು ಬಿಟ್ಟರೆ ಬೇರೇ ಜಗತ್ತನ್ನು ಅರಿಯಲಾರದ ಮಿತಿಯನ್ನು ಹೇರಿದೆ ಮಾನವನಿಗೆ ಆ ಸೃಷ್ಟಿ; ಆದನ್ನು ಮೀರುವುದಕ್ಕೆ ಒಂದು ಹೊಸ ಆಯಾಮದ ಕೀಲೀಕೈ ಇಟ್ಟಿದೆ, ಆದರೆ ಎಲ್ಲರಿಂದಲೂ ಆ ಕೀಲಿ ತಿರುಗಿಸುವುದು ಸಾಧ್ಯವಿಲ್ಲ! ಕೀಲಿ ತಿರುಗಿಸಲಾರದ ನಮಗೆ ನಮ್ಮದೇ ವ್ಯಾಪ್ತಿ, ನಮ್ಮ ಪ್ರಯತ್ನಕ್ಕೆ ತಕ್ಕಹಾಗೇ ಫಲಪ್ರಾಪ್ತಿ. ಸಾಮಾನ್ಯರು ಸಾದಾ ಕೀಲಿ ಹೊಂದಿದ್ದರೆ ವಿಜ್ಞಾನಿಗಳು ಸ್ವಲ್ಪ ಹೊಸರೀತಿಯ ಕೀಲಿ ಪಡೆದಿರುತ್ತಾರೆ. ಮುಮುಕ್ಷುಗಳು ಮತ್ತು ಭಾರತೀಯ ಸಾಧನಾ-ಪರಮೋಚ್ಚ ಸನ್ಯಾಸಿಗಳು ಮಾತ್ರ ಮಾಸ್ಟರ್ ಕೀಲಿ ಹೊಂದಿರುತ್ತಾರೆ. ಹೊರಜಗತ್ತಿನ ಪರಿವೆ ತೆರೆದುಕೊಳ್ಳುವುದು ಕೇವಲ ಮಾಸ್ಟರ್ ಕೀಲಿಯಿಂದ ಮಾತ್ರ ಸಾಧ್ಯ! ವಿಜ್ಞಾನಿಗಳು ಇದೇ ಜಗತ್ತಿನ ಉನ್ನತ ಸ್ತರಗಳ ವರೆಗೆ ಹಾರುವ/ತಲ್ಪುವ ಅನುಮತಿಯನ್ನು ಪಡೆದಿರುತ್ತಾರೆ!-ಹಾಗಾಗಿ ಚಂದ್ರಲೋಕಗಳಂತಹ ಕೆಲವು ಭಾಗಗಳಿಗೆ ಹೋಗಲು ಸಾಧ್ಯ, ವಿಮಾನ-ಹಡಗು-ರೈಲು ಮುಂತಾದ ಪರಿಕರಗಳನ್ನು ತಯಾರಿಸಲು ಸಾಧ್ಯ. ಅದರಿಂದಾಚೆಗಿನ ವ್ಯಾಪ್ತಿ ವಿಜ್ಞಾನಿಗಳಿಗೆ ಕಾಣಿಸುವುದಿಲ್ಲ; ಕಾಣಲು ನಡೆಸುವ ಪ್ರಯತ್ನವೂ ಸಫಲವಾಗುವುದಿಲ್ಲ.

ಇತಿಹಾಸದಲ್ಲಿ, ’ಮಂಗನಿಂದ ಮಾನವ’ ಎಂದಂತೇ ಹಲವು ತಪ್ಪುದಾಖಲೆಗಳನ್ನೇ ಸರಿಯೆಂದು ನಮಗೆ ಬೋಧಿಸಲಾಗಿದೆ. ತಾವು ಕಂಡಿದ್ದೇ ಸತ್ಯ ಎಂದು ತಿಳಿದ ಕೆಲವು ಮಾನವರು ಅದನ್ನೇ ಮಿಕ್ಕವರಿಗೂ ಉಣಬಡಿಸಿದ್ದಾರೆ. ಕಾಲಕಾಲಕ್ಕೆ ಈ ’ಸತ್ಯ’ ಸುಳ್ಳಾಗಿ ಹೊಸ ’ಸತ್ಯ’ ಹೊರಬರುತ್ತಲೇ ಇರುತ್ತದೆ. ಆದರೆ ಇವಾವುವೂ ಸತ್ಯವೇ ಅಲ್ಲ ಎಂಬುದನ್ನು ಮಾನವ ಬುದ್ಧಿ ಅರಿಯುವ ಮಟ್ಟಕ್ಕೆ ಹೋಗುವುದೇ ಇಲ್ಲ; ಇಲ್ಲೇ ಮಾನವ ಮಂಗನಾಗುತ್ತಾನೆ ಬಿಟ್ಟರೆ ಮಂಗನಿಂದ ಮಾನವ ಎಂಬುದು ಸುಳ್ಳು. ಆಯುರ್ವೇದದಲ್ಲಿ ಹೇಳಿದಂತೇ ಮಾನವ ಚರ್ಮದಲ್ಲಿ ಏಳು ಪದರಗಳಿವೆ ಎಂಬುದನ್ನು ಈಗೀಗ ಆಂಗ್ಲ ವಿಜ್ಞಾನಿಗಳು ಒಪ್ಪಿದ್ದಾರೆ;ಯಾಕೆಂದರೆ ಏಳು ಪದರಗಳನ್ನು ವಿಂಗಡಿಸಲು ಅವರಿಂದ ಇದುವರೆಗೆ ಸಾಧ್ಯವಾಗಿರಲಿಲ್ಲ. ಇಲ್ಲಿಯವರೆಗೆ ಚರ್ಮ ಒಂದೇ ಪದರದಿಂದಾಗಿದೆ ಎಂದು ನಮಗೆ ಜೀವಶಾಸ್ತ್ರ ಹೇಳುತ್ತಿತ್ತು! ಈಗ ’ಏಳುಪದರಗಳಿಂದಾಗಿದೆ’ ಎಂದು ತಿದ್ದಿಕೊಳ್ಳುವ ಅನಿವಾರ್ಯತೆ ಬಂದಿದೆ ಹೇಗೋ ಹಾಗೆಯೇ ಮಂಗನಿಂದ ಮಾನವನಲ್ಲ, ಮಂಗಗಳ ಪ್ರಭೇದವೇ ಬೇರೆ ಮತ್ತು ಮಾನವ ಪ್ರಭೇದವೇ ಬೇರೆ ಎಂಬುದನ್ನು ಸಂಶೋಧಕರು ಬಿಡುವುಮಾಡಿಕೊಂಡು ಹುಡುಕಬೇಕಾಗಿದೆ. ಇದು ಹೊಸದಾಗಿ ಪಿ.ಎಚ್.ಡಿ ಮಾಡುವ ಜೀವರಸಾಯನ ಶಾಸ್ತ್ರದ/ ಇತಿಹಾಸದ ವಿದ್ಯಾರ್ಥಿಗಳಿಗೆ ನಾನೊಡ್ಡುವ ಸವಾಲಾಗಿದೆ. ಈ ತಿರುವಿನಲ್ಲಿ ನನಗೆ ಸಂಸ್ಕೃತ ಪ್ರಾರ್ಥನೆಯೊಂದು ಹೀಗೆ ರಸವತ್ತಾಗಿ ಕಾಣಿಸುತ್ತದೆ :

ಓಂ
ಅಸತೋಮಾ ಸದ್ಗಮಯ |
ತಮಸೋಮಾ ಜ್ಯೋತಿರ್ಗಮಯ |
ಮೃತ್ಯೋರ್ಮಾ ಅಮೃತಂಗಮಯ |

ಓಂ ಶಾಂತಿಃ ಶಾಂತಿಃ ಶಾಂತಿಃ ||

ಚಿತ್ರಋಣ: ಅಂತರ್ಜಾಲ

137 ಟಿಪ್ಪಣಿಗಳು Post a comment
  1. Suraj B Hegde
    ಏಪ್ರಿಲ್ 5 2012

    ತುಂಬಾ ಮೆಚ್ಚಿಗೆಯಾಯ್ತು 🙂
    Fictions of science ಅನ್ನು ನಮ್ಮಂತಹವರಿಗೆ ಸರಳ ಪದಬಳಕೆ ಮತ್ತು ಹೌದೆನ್ನುವ ಉದಾಹರಣೆಗಳೊಂದಿಗೆ ತೋಸಿಕೊಟ್ಟಿದ್ದಕ್ಕೆ.

    ಉತ್ತರ
  2. Ananda Prasad
    ಏಪ್ರಿಲ್ 6 2012

    ವಿಜ್ಞಾನದ ಬಗ್ಗೆ ತಿಳುವಳಿಕೆ ಇಲ್ಲದೆ ಬರೆದ ಲೇಖನ ಇದು. ಜೀವದ ಉಗಮ ಹಾಗೂ ವಿಕಾಸದ ಬಗೆಗೆ ವಿಜ್ಞಾನದ ಬಳಿ ಬಲವಾದ ಸಾಕ್ಷ್ಯಗಳು ಇವೆ. ಇದನ್ನು ತಿಳಿಯಲು ಸೂಕ್ಷ್ಮಜೀವಿಶಾಸ್ತ್ರ (microbiology), ಜೀವರಸಾಯನಶಾಸ್ತ್ರ (biochemistry), ಪಳೆಯುಳಿಕೆ ವಿಜ್ಞಾನ (palaeontology), ಜೀವಕೋಶ ವಿಜ್ಞಾನ (cell biology), ಅನುವಂಶೀಯ ವಿಜ್ಞಾನ (genetics), ಅಣುಜೀವಶಾಸ್ತ್ರ (molecular biology), ಭ್ರೂಣಶಾಸ್ತ್ರ (embryology) ಇವುಗಳನ್ನು ಅಧ್ಯಯನ ಮಾಡಿರಬೇಕು. ಮಂಗನಿಂದ ಮಾನವ ವಿಕಾಸ ಆಗಿದೆ ಎಂಬುದು ಸರಳವಾಗಿ ಹೇಳುವ ಮಾತು. ಮಂಗನಿಂದ ಮಾನವನ ನಡುವೆ ಕೆಲವು ವಾನರ ಜೀವಿಗಳು ಇವೆ. ಜೀವ ವಿಕಾಸ ಸಿದ್ದಾಂತವನ್ನು ಪ್ರತಿಪಾದಿಸಿದ ಮಹಾನ್ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಚಿಂತನೆಯನ್ನು ಚರ್ಚ್ ಬಹಿಷ್ಕರಿಸಿತ್ತು. ಆದರೆ ಇಂದು ಚರ್ಚ್ ಕೂಡ ಡಾರ್ವಿನ್ ಚಿಂತನೆಯ ಜೀವ ವಿಕಾಸ ಸಿದ್ಧಾಂತವನ್ನು ಒಪ್ಪಿಕೊಂಡಿದೆ. ಸರಿಯಾಗಿ ಅಧ್ಯಯನ ಮಾಡದೆ ತಪ್ಪು ತಿಳುವಳಿಕೆ ಕೊಡುವ ಲೇಖನ ಇದು ಎನ್ನಲು ಅಡ್ಡಿ ಇಲ್ಲ.

    ಉತ್ತರ
  3. T.M.Kraishna
    ಏಪ್ರಿಲ್ 6 2012

    ಒಬ್ಬ ಪೂರ್ವಗ್ರಹಪೀಡಿತ ಮೂರ್ಖ ಮಾತ್ರ ಇಂತಹ ಲೇಖನ ಬರೆಯಬಲ್ಲ. ಯಾವುದೋ ಗೊಡ್ಡು ಸಿದ್ಧಾಂತಕ್ಕೆ ನೇತುಹಾಕಿಕೊಂಡು ವಾಸ್ತವವನ್ನು ಮರೆತಾಗ ಇಂಥವೆಲ್ಲಾ ತೆಲೆಗೆ ಹತ್ತುತ್ತವೆ. ವಿಜ್ಞಾನ ಅಂದರೆ ಊಹಾಪೋಹಗಳಾಗಲೀ, ಆಧಾರರಹಿತ ಉಡಾಪೆಗಳಾಗಲೀ ಅಲ್ಲ. ಅದಕ್ಕೆ ಸತ್ಯದ ಹಿನ್ನೆಲೆ ಮಾತ್ರ ಇರುತ್ತದೆ. ವಾಸ್ತವದ ಮತ್ತು ಶೋಧನೆಯ ಮೂಶೆಯಲ್ಲಿ ಬಟ್ಟಿ ಇಳಿದಿರುತ್ತದೆ. ಬರೀ ಮನಸ್ಸಿನ ಬೇಕಾಬಿಟ್ಟಿ ನಿರ್ಣಯ ಅದಲ್ಲ. ಅರೆಬೆಂದದ್ದನ್ನೆಲ್ಲಾ ಈ ರೀತಿ ಬರವಣಿಗೆಗೆ ಇಳಿಸಬಾರದು. ಅದನ್ನು ಅತಿಬುದ್ಧಿವಂತಿಕೆ ಅಂತಾರೆ.

    ಉತ್ತರ
  4. charles bricklayer
    ಏಪ್ರಿಲ್ 6 2012

    ಇದು ಖಂಡಿತವಾಗಿಯೂ ಯಾವುದೋ ಗಣಿಯ ಆಳದಲ್ಲಿರುವ ಮಂಡೂಕವೇ ಬರೆದಿರುವ ಲೇಖನ. ಕನಿಷ್ಟಪಕ್ಷ ಮಂಗವಾದರೂ ಬರೆದಿದ್ದರೆ ಇನ್ನೂ ಉತ್ತಮವಾಗಿರುತ್ತಿತ್ತು.

    ಉತ್ತರ
  5. ಏಪ್ರಿಲ್ 6 2012

    ಪ್ರಿಯರೇ, ನಿಮ್ಮ ಅನಿಸಿಕೆಗೆ ಲೇಖನದಲ್ಲೇ ಪ್ರತಿಕ್ರಿಯೆಯೂ ಅಡಕವಾಗಿದೆ. ಈ ಲೇಖನವನ್ನು ಅದಿಭೌತಿಕ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಈ ಮೂರೂ ದೃಷ್ಟಿಕೋನದಿಂದ ಅವಲೋಕಿಸಿ ಬರೆದಿದ್ದೇನೆ. ಇದು ನನ್ನ ವೈಯ್ಯಕ್ತಿಕ ಅಭಿವ್ಯಕ್ತಿ. ಅಣುವಿಜ್ಞಾನದ ಅರಿವಿಲ್ಲದೇ ಬರೆದ ಲೇಖನವಂತೂ ಅಲ್ಲ. ನಮ್ಮ ಇಂದಿನ ವಿಜ್ಞಾನ ಎನ್ನುವ ವಿಷಯಸಂಗ್ರಹಕ್ಕಿಂತಾ ಹೆಚ್ಚಿನ ಗಹನವಾದ ವಿಷಯ ಮೊದಲಿನವರಿಗೆ ಗೊತ್ತಿತ್ತು ಎಂಬುದು ನನ್ನ ಪ್ರತಿಪಾದನೆ. ಅಂದಹಾಗೇ ನಿಮ್ಮ ವಿಜ್ಞಾನದಲ್ಲಿ :

    ೧. ಮೊಟ್ಟೆಮೊದಲೋ ಕೋಳಿ ಮೊದಲೋ ? ಅಥವಾ ಬೀಜಮೊದಲೋ ಸಸ್ಯ ಮೊದಲೋ ?

    ೨. ಶರೀರದಲ್ಲಿ ’ಆತ್ಮ’ ಎಂಬ ಅದ್ಭುತ ಚೈತನ್ಯ ಇರುವುದೆಂದು ನೀವು ಒಪ್ಪುವುದಾದರೆ[ಒಪ್ಪಲೇಬೇಕೆಂದೇನೂ ಇಲ್ಲ, ತಲೆ ಜಾಸ್ತಿ ಇದ್ದವರು ಒಪ್ಪದಿರಲೂ ಸಾಧ್ಯವಿದೆ! ] ಆತ್ಮ ಎಲ್ಲಿಂದ ಮತ್ತು ಹೇಗೆ ಬರುತ್ತದೆ? ಸತ್ತನಂತರ ಎಲ್ಲಿಗೆ ಹೋಗುತ್ತದೆ?

    ೩. ನಾವು ಕಾಣುವ ಸೌರ ಮಂಡಲದ ಆಕಾಶ ಕಾಯಗಳನ್ನು ನಿರ್ದಿಷ್ಟವಾದ ಅಂತರದಲ್ಲಿ ಹಿಡಿದು ನಿಲ್ಲಿಸಿ ನಿರ್ದಿಷ್ಟ ಗತಿಯ ಚಲನೆಯಲ್ಲಿಡುವ ಮತ್ತು ಸೂರ್ಯ-ಚಂದ್ರರನ್ನು ನಿತ್ಯ ಇಂತಿಂಥಾ ದಿಕ್ಕಿನಲ್ಲೇ ಒಡಮೂಡಿಸಿ ನಡೆಸುವ ಶಕ್ತಿ ಯಾವುದು ? ಗ್ರಹಗಳ/ಆಕಾಶಕಾಯಗಳ ಮಧ್ಯೆ ಇರುವ ಗುರುತ್ವಾಕರ್ಷಣ ಶಕ್ತಿ ಎಲ್ಲಿಂದ ಬಂತು ?

    ಇದಕ್ಕೆಲ್ಲಾ ತಮ್ಮ ಅಣುವಿಜ್ಞಾನ, ಭೌತ ವಿಜ್ಞಾನ, ಖಗೋಳ ವಿಜ್ಞಾನ ಮತ್ತಿನ್ಯಾವುದೋ ವಿಜ್ಞಾನ ಸಮರ್ಪಕ ಉತ್ತರ ಕೊಡುವವರೆಗೆ ನಾನು ಮಂಗನಿಂದ ಮಾನವನಾದ ಎನ್ನುವುದನ್ನಾಗಲೀ ಅಧುನಿಕ ವಿಜ್ಞಾನವನ್ನಾಗಲೀ ಸಂಪೂರ್ಣವಾಗಿ ಒಪ್ಪುವುದಿಲ್ಲ.

    ಈ ವಿಷಯದಲ್ಲಿ ಯಾರು ಯಾವತಲೆ ಅಂದುಕೊಂಡರೂ ಅದಕ್ಕೆ ಬೇಸರವಾಗಲೀ ಹಿಂಜರಿಕೆಯಾಗಲೀ ನನಗಂತೂ ಇಲ್ಲ!

    ನಿಮ್ಮ ಅನಿಸಿಕೆಗೆ ಧನ್ಯವಾದಗಳು.

    ಉತ್ತರ
    • ಏಪ್ರಿಲ್ 8 2012

      ಹೀಗೆ ಅಭಿಗಾರವೆಂಬ ಚಂದದ ಹೆಸರಲ್ಲಿ – ಓದುಗರ ಎಲೆಯಲ್ಲಿ ತಮ್ಮ ಪೂರ್ವಾಗ್ರಹ ಮತ್ತು ಅಜ್ಞಾನಗಳನ್ನು ಕಾರಿಕೊಳ್ಳುವ ಬದಲು ಕನಿಷ್ಠಪಕ್ಷ ಪೂರ್ಣಚಂದ್ರತೇಜಸ್ವಿಯವರ “ಮಿಸ್ಸಿಂಗ್ ಲಿಂಕ್” (ಮತ್ತು ಸಾಧ್ಯವಾದರೆ ‘ಮಿಲೆನಿಯಂ ಸರಣಿ’ಯ ಎಲ್ಲ ೧೬ ಪುಸ್ತಕಗಳನ್ನೂ) ಒದಬಾರದೇಕೆ.. ನಿಮ್ಮ ತಿಳುವಳಿಕೆಯೊಳಗಣ ದೊಡ್ಡ ಮಿಸ್ಸಿಂಗ್ ಲಿಂಕ್ ಪ್ರಾಯಶಃ ಅಲ್ಲಿ ದೊರಕಬಹುದು..

      ಉತ್ತರ
    • ಏಪ್ರಿಲ್ 11 2012

      ೧) ಉತ್ತರ ನನ್ನ ಇನ್ನೊಂದು (ಸಮಗ್ರ) ಪ್ರತಿಕ್ರಿಯೆಯಲ್ಲಿದೆ.
      ೨) ವಿಜ್ಞಾನವೇನೂ ಶರೀರದಲ್ಲಿ ಆತ್ಮ-ಗೀತ್ಮ ಇದೆ ಅಂತ ಹೇಳುವುದಿಲ್ಲ. ವಿಜ್ಞಾನದ ಪ್ರಕಾರ ಜೀವ ಮತ್ತು ಜೀವನ್ಮರಣಗಳು ಹೇಗೆ ಸಂಭವಿಸುತ್ತವೆ ಅನ್ನುವುದು ಸರಿಯಾಗಿ ಇನ್ನೂ ನಿರ್ಧಾರಿತವಾಗಿಲ್ಲ. ಪ್ರಜ್ಞೆ (consciousness) ಎಂಬುದೂ ಸಹ ಇನ್ನೂ ಚರ್ಚೆಗೊಳಗಾಗುತ್ತಿರುವ ಅಸ್ಪಷ್ಟ ವಿಷಯವೇ.
      ೩) ಎಲ್ಲಿಂದಲೂ ಬರಬೇಕಾಗಿಲ್ಲ. ಅದೂ ನಿಮ್ಮ ಭಗವಂತನಿದ್ದಂತೆ! ಇರುವು ಇರುವಿನೊಳಿತ್ತು, ಅರಿವು ಅರಿವಿನೊಳಿತ್ತು!

      ಉತ್ತರ
      • ಏಪ್ರಿಲ್ 14 2012

        ’ಓದುಗ’ ಎಂಬ ಹೆಸರಲ್ಲಿ ತನ್ನ ’ಪಾಂಡಿತ್ಯ’ವನ್ನು ಬಹಳವಾಗಿ ಹೊರಚೆಲ್ಲಿದ ಮಹನೀಯನಿಗೆ ವಂದನೆಗಳು! ಶಿಖಂಡಿಯಾಗಿ ಬಾಣಬಿಡುವುದಕ್ಕಿಂತಾ ನೇರವಾಗಿ ನಿಮ್ಮ ಹೆಸರನ್ನು ಕಾಣಿಸಬಹುದಿತ್ತು. ನೀವೇ ಉತ್ತರಿಸಿದ ನಿಮ್ಮ ಪ್ರತಿಕ್ರಿಯೆಯಲ್ಲಿ ’ಇನ್ನೂ ನಿರ್ಧರಿತವಾಗಿಲ್ಲ ಎಂಬ ಅಂಶಗಳೇ ಅಪಾರ’ವಾಗಿವೆ. ನಾವು ಒಪ್ಪಿರುವ ವೇದಗಳಲ್ಲಿ ಎಲ್ಲವನ್ನೂ ಇದಮಿತ್ಥಂ-ಇದು ಹೀಗೇ ಇರುತ್ತದೆ ಎಂದು ಕರಾರುವಾಕ್ಕಾಗಿ ಹೇಳಿದ್ದಾರೆ; ಅಲ್ಲಿ ಇನ್ನೂ ನಿರ್ಧರಿತವಾಗಬೇಕಾದ ಹುಡುಕಾಟದ ಅಂಶಗಳಿಲ್ಲ ಎಂಬುದನ್ನು ’ಓದುಗ’ ಎನ್ನುವ ಮಹಾಮಹೋಪಾಧ್ಯಾಯರಿಗೆ ತಿಳಿಸುತ್ತಿದ್ದೇನೆ. ತಮಗೂ ಜೀವನದಲ್ಲಿ ಒಂದಲ್ಲಾ ಒಂದುದಿನ ಬೆಳಕು ಸಿಗಲಿ ಎಂದು ಆಶಿಸುತ್ತೇನೆ!

        ಉತ್ತರ
        • ಏಪ್ರಿಲ್ 15 2012

          ಅಂದಹಾಗೆ ನಾನು ಯಾರ ಮೇಲೂ ವೈಯಕ್ತಿಕ/ಸ್ವಪ್ರತಿಷ್ಟೆಯ ಯುದ್ಧ ಮಾಡುತ್ತಿಲ್ಲ. ಯಾರನ್ನು ಘಾತಿಸಲು ಯಾವ ಬಾಣ ಬಿಡುವ ಉಮ್ಮೇದೂ (ತಾಖತ್) ನನಗಿಲ್ಲ. ನಾನೇನು ಇದನ್ನು ಯುದ್ಧಭೂಮಿ ಎಂದು ಭಾವಿಸಿಲ್ಲ. ಒಂದು ಲೇಖನ ಎಲ್ಲೆಲ್ಲಿ ಹೇಗೆ ಹೇಗೆ ಎಡವಿದೆ ಎಂಬುದನ್ನ ಎತ್ತಿ ತೋರಿಸುವ ಪ್ರಯತ್ನ ಮಾತ್ರಾ ಮಾಡಿದ್ದೇನೆ. ವಿಶಯಾಂತರ ಮಾಡದೇ ದಯವಿಟ್ಟು ಅದಷ್ಟರ ಕುರಿತು ಮಾತ್ರ ಮಾತಾಡಿ. ಅಷ್ಟಕ್ಕೆ ಮಾತ್ರ ನಾನು ಭಾಧ್ಯಸ್ಥನಿರುವೆ.

          ಉತ್ತರ
  6. ಗಿರೀಶ್
    ಏಪ್ರಿಲ್ 8 2012

    ಆನಂದಪ್ರಸಾದ, ಕ್ರೈಶ್ಣ ಮತ್ತು ಚಾರ್ಲ್ಸ್ ಅವರೆ ಆನೆಯಿಂದ ಮನುಷ್ಯನಾದ ಎಂದು ನೀವು ಹುಡುಕಿಕೊಂಡು ಹೋಗಿ ನಿಮಗೂ ಬೇಕಾದಷ್ಟು ಆಧಾರಗಳು ಸಿಗುತ್ತವೆ. ನೋಡಲು ಕೋತಿಯಂತೆ ಇರುವುದರಿಂದ ಹತ್ತಿರದ ಹೋಲಿಕೆಯಿರುವುದರಿಂದ ಯಾವನೋ ಮೂರ್ಖ ಮಂಗನಿಂದ ಮಾನವ ಎಂದ ಅವರು ವೈಜ್ಞಾನಿಕ ಪುರೋಹಿತಶಾಹಿ ಹೇಳಿದರು ನಾವು ನಂಬಬೇಕು. ದೈವ ಆತ್ಮ ಇವಕ್ಕೆಲ್ಲ ಕೊಡುವಂತೆಯೆ ವಿಜ್ಞಾನಿಗಳೂ ಕೂಡ ಎಲ್ಲೂ ಒಂದೆ ಬಾರಿ ಪರಿವರ್ತನೆಯಾಗುವುದಿಲ್ಲ ಸಾವಿರಾರು ಲಕ್ಷಾಂತರ ವರ್ಶಗಳಲ್ಲಿ ಆಗುವ ಬದಲಾವಣೆಯೆಂದು ಬಿಟ್ಟ ಬುರುಡೆಯನ್ನು ನಂಬಲೆಂದೆ ಮಾಡಿರುವುದು ಸುಸ್ಪಷ್ಟ. ನಾಯಿ ಯಾವುದರಿಂದ ಆಯಿತು. ಪ್ರಮಾರ್ಡಿಯಲ್ ಸೂಪ್ ಎಲ್ಲಿಂದ ಬಂತು. ಹೊಟ್ಟೆ ಹುಣ್ಣಾಗುವಷ್ಟು ನಗು ಬರುತ್ತೆ, ಲಕ್ಷಾಂತರ ವರ್ಷಗಳಲ್ಲಿ ಆಗಿರುವ ಬದಲಾವಣೆಯನ್ನು ಕೇವಲ ೭೦ ವರ್ಷ ಬದುಕಿದ್ದ ವ್ಯಕ್ತಿಗೆ ಕಂಡಿದ್ದು. ಆಫ್ರಿಕಾದಲ್ಲಿ ಮಾತ್ರ ಜೀವಿಗಳ ಉದಯವಾಯಿತು ಎನ್ನುವ ಮೂರ್ಖರ ಗುಂಪು ಜೀವಿಸಲು ಅತ್ಯಂತ ಪ್ರಶಸ್ಥವಾದ ಸ್ಥಳಗಳಲ್ಲಿ ಆದ ಪ್ರಾಣಿಯ ಉಗಮದ ಬಗ್ಗೆ ಏನು ಹೇಳುತ್ತಾರೆ. ಶುದ್ದ ಅಪ್ಪದ್ದ ವಿಕಾಸವಾದವನ್ನು ವಿಜ್ಞಾನದ ಹೆಸರಿನಲ್ಲಿ ವೈಜ್ಞಾನಿಕ ಪುರೋಹಿತಶಾಹಿಗಳು ಹೇರುತ್ತಿರುವುದು ಸುಸ್ಪಷ್ಟ.

    ಉತ್ತರ
  7. Kumar
    ಏಪ್ರಿಲ್ 9 2012

    ಡಾರ್ವಿನ್ನನ “ವಿಕಾಸ ವಾದ” ತರ್ಕದ ಆಧಾರದ ಮೇಲೆ ನಿಂತಿರುವುದು. ಅದಕ್ಕೆ ವೈಜ್ಞಾನಿಕ ಆಧಾರಗಳಾಗಲೀ, ಸಾಕ್ಷಿಗಳಾಗಲೀ ಇರುವುದಿಲ್ಲ.
    ಡಾರ್ವಿನ್ನನು “ವಿಕಾಸ ವಾದ”ವನ್ನು ಹುಟ್ಟುಹಾಕುವ ಮೊದಲು, ಸೂಕ್ಷ್ಮಜೀವಿಶಾಸ್ತ್ರ (microbiology), ಜೀವರಸಾಯನಶಾಸ್ತ್ರ (biochemistry), ಪಳೆಯುಳಿಕೆ ವಿಜ್ಞಾನ (palaeontology), ಜೀವಕೋಶ ವಿಜ್ಞಾನ (cell biology), ಅನುವಂಶೀಯ ವಿಜ್ಞಾನ (genetics), ಅಣುಜೀವಶಾಸ್ತ್ರ (molecular biology), ಭ್ರೂಣಶಾಸ್ತ್ರ (embryology) ಇವುಗಳನ್ನು ಅಧ್ಯಯನ ಮಾಡಿರಲಿಲ್ಲ. ಇವೆಲ್ಲವೂ ನಂತರದ ಕಾಲಖಂಡದಲ್ಲಿ ಬೆಳವಣಿಗೆಯಾಗಿರುವ ವಿಜ್ಞಾನದ ಶಾಖೆಗಳಷ್ಟೇ.

    ವಾದಕ್ಕಾಗಿ “ಮಂಗನಿಂದ ಮಾನವ” ಎಂಬ ವಾದವನ್ನು ಸಧ್ಯಕ್ಕೆ ನಿಜ ಎಂದು ಒಪ್ಪೋಣ.
    ವಿಕಾಸ ಏತಕ್ಕೆ “ಮಾನವ”ನಿಗೇ ನಿಂತು ಹೋಯಿತು?
    ಮಂಗ ಮತ್ತು ಮಾನವನ ನಡುವೆ ಇರುವ ಹಲವು ಹಂತದ ವಿಕಾಸದ ಪ್ರಾಣಿಗಳು ಯಾವುದೂ ನಮಗೇಕೆ ಕಾಣಸಿಗುವುದಿಲ್ಲ?
    ಹಿಂದೆ ಇಂತಹದು ಇದ್ದವೆಂದವಾದರೆ, ಅವುಗಳ ಪಳೆಯುಳುವಿಕೆಯಾದರೂ ಸಿಗಲೇಬೇಕಲ್ಲ? ಈ ರೀತಿಯ ಪಳೆಯುಳಿಕೆಗಳು ಸಿಗದಿದ್ದರೆ, ಮತ್ಯಾವ ಸಾಕ್ಷಿಯಿದೆ, ಈ ವಾದವನ್ನು ಪುಷ್ಟೀಕರಿಸಲು?
    ಇನ್ನು “ಮಂಗನಿಂದ ಮಾನವ” ಆದ ಹಾಗೆಯೇ, ಬೇರಿನ್ನಾವ ಪ್ರಾಣಿಯಿಂದ ಹೊಸ ಪ್ರಾಣಿಗಳು “ವಿಕಾಸ” ಹೊಂದಿದವು?
    ಕೇವಲ “ಮಂಗನಿಂದ ಮಾನವ” ಮಾತ್ರ ಏಕೆ?
    “ವಿಕಾಸ”ವು ನಿರಂತರ ಅಲ್ಲವೇ? ಹಾಗಿದ್ದರೆ, ನಾವು ಯಾವ ವಿಕಾಸವನ್ನು ಕಾಣುತ್ತಿಲ್ಲವಲ್ಲ, ಏಕೆ?

    ಡಾರ್ವಿನ್ ಪಶ್ಚಿಮದ ಕೆಂಪು (ಅಥವಾ ಬಿಳಿ) ಚರ್ಮದ ವ್ಯಕ್ತಿ ಅಂದ ಮಾತ್ರಕ್ಕೆ, ಆತ ಹೇಳಿದ್ದೆಲ್ಲವನ್ನೂ ಪ್ರಶ್ನಿಸದೆ “ವೈಜ್ಞಾನಿಕ” ಎಂದು ಒಪ್ಪಿಕೊಳ್ಳಬೇಕೆ?
    ಹಾಗೆ ಒಪ್ಪಿಕೊಳ್ಳದಿದ್ದರೆ, ನೀವು ಕೊಡುವ ಪ್ರತಿಕ್ರಿಯೆಗಳು: “ಒಬ್ಬ ಪೂರ್ವಗ್ರಹಪೀಡಿತ ಮೂರ್ಖ ಮಾತ್ರ ಇಂತಹ ಲೇಖನ ಬರೆಯಬಲ್ಲ.”; “ಕನಿಷ್ಟಪಕ್ಷ ಮಂಗವಾದರೂ ಬರೆದಿದ್ದರೆ ಇನ್ನೂ ಉತ್ತಮವಾಗಿರುತ್ತಿತ್ತು.”; “ಇದು ಖಂಡಿತವಾಗಿಯೂ ಯಾವುದೋ ಗಣಿಯ ಆಳದಲ್ಲಿರುವ ಮಂಡೂಕವೇ ಬರೆದಿರುವ ಲೇಖನ.”!!!!

    ಪ್ರಶ್ನಿಸುವುದೇ ವಿಜ್ಞಾನದ ಮೂಲ ಆಸರೆ. ಆದರೆ, ನೀವು ಪ್ರಶ್ನಿಸುವುದನ್ನೇ ಖಂಡಿಸುತ್ತಿದ್ದೀರಿ, ಅದೂ ವಿಜ್ಞಾನದ ಹೆಸರಿನಲ್ಲಿ. ಇದೆಂತಹ ವೈಜ್ಞಾನಿಕತೆ ಸ್ವಾಮಿ!?
    ಹಳೆಯದನ್ನು ಪ್ರಶ್ನಿಸದೆ ಹೊಸದು ಹುಟ್ಟಲಾರದು. ಪ್ರಶ್ನಿಸುವುದನ್ನು ತುಳಿಯುವುದು Semetic ಮನೋಭಾವನೆ ಎನಿಸಿಕೊಳ್ಳುತ್ತದೆ.
    ಆ ಮನೋಭಾವನೆಯೇ, ವಿಜ್ಞಾನವನ್ನು ತುಳಿಯಲು ಪ್ರಯತ್ನಿಸಿದ್ದು! ಆ ಮನೋಭಾವನೆಯೇ, ಸ್ಥಾಪಿತ ಸಿದ್ಧಾಂತಗಳನ್ನು ಪ್ರಶ್ನಿಸುವುದನ್ನು ಒಪ್ಪಲಿಲ್ಲ!!
    ಭಾರತದಲ್ಲಿ ಪ್ರಶ್ನೆಗೆ, ತರ್ಕಕ್ಕೆ ಸದಾ ಸ್ವಾಗತವಿದೆ. ಇಲ್ಲಿ ಹುಟ್ಟಿರುವ ಪ್ರತಿಯೊಂದು ಸಿದ್ಧಾಂತವನ್ನೂ ಪ್ರಶ್ನಿಸಲಾಗಿದೆ; ತರ್ಕದ ಒರೆಗೆ ಹಚ್ಚಲಾಗಿದೆ. ಆ ರೀತಿ ಪ್ರಶ್ನಿಸಿದವರನ್ನು, ಸರಕಾರದ ದಮನ ಶಕ್ತಿ ಹೊಸಕಿಹಾಕಿದ ಉದಾಹರಣೆಗಳು ಇಲ್ಲಿಲ್ಲ. ಈ ಭಾರತೀಯ ಮನಸ್ಸು “ವಿಕಾಸ ವಾದ”ವನ್ನು ಪ್ರಶ್ನಿಸುತ್ತಿದೆ. ಇದನ್ನೇಕೆ, “ಹೊಸಕಿ ಹಾಕಲು” ಪ್ರಯತ್ನಿಸುತ್ತಿರುವಿರಿ? ಚರ್ಚೆಯಿಂದ, ಪ್ರಶ್ನೆಯಿಂದ ಹೊಸದೇನಾದರೂ ಹುಟ್ಟಿದರೆ ಹುಟ್ಟಲಿ; ನಿಮಗೇನು ತೊಂದರೆ?

    ಪ್ರಶ್ನಿಸಿದವರ ಮೇಲೆ, ಮೈಮೇಲೆ ಬಂದವರಂತೆ ಏಕೆ ಹಾಯುತ್ತಿರುವಿರಿ? ಇದು ನಿಮ್ಮ “ಹುಟ್ಟು ಗುಣವೇ”!?

    ಉತ್ತರ
    • ಏಪ್ರಿಲ್ 11 2012

      >>>”ಡಾರ್ವಿನ್ನನ “ವಿಕಾಸ ವಾದ” ತರ್ಕದ ಆಧಾರದ ಮೇಲೆ ನಿಂತಿರುವುದು. ಅದಕ್ಕೆ ವೈಜ್ಞಾನಿಕ ಆಧಾರಗಳಾಗಲೀ, ಸಾಕ್ಷಿಗಳಾಗಲೀ ಇರುವುದಿಲ್ಲ…”
      ತಪ್ಪು ತಿಳುವಳಿಕೆ. ನಿಮ್ಮ ಆರೋಪಗಳು ಇಂದು ಚಾಲ್ತಿಯಲ್ಲಿರುವ ಆಧುನಿಕ ವಿಕಾಸವಾದಕ್ಕೆ ಅನ್ವಯಿಸದು. ಕೆಳಗೆ ಇನ್ನೊಂದು ಪ್ರತಿಕ್ರಿಯೆಯಲ್ಲಿನ ವಿಕಿಪೀಡಿಯಾದ ಲಿಂಕುಗಳನ್ನಾದರೂ ನೋಡಿ.

      >>> “ವಿಕಾಸ ಏತಕ್ಕೆ “ಮಾನವ”ನಿಗೇ ನಿಂತು ಹೋಯಿತು? … “ವಿಕಾಸ”ವು ನಿರಂತರ ಅಲ್ಲವೇ?…”
      ವಿಕಾಸವೆಂಬುವುದು ಮಿಲಿಯಾಂತರ ವರ್ಷಗಳ ಕಾಲಾವಧಿಯಲ್ಲಿ ಸಂಭವಿಸುವಂತಹದು. ಅದು ನಿಂತು ಹೋಗಿದೆ ಎಂದು ಯಾವ ಆಧಾರದ ಮೇಲೆ ಹೇಳುತ್ತಿದ್ದೀರಿ? ನಡುವಿನ ಪ್ರಾಣಿಗಳು ವಿನಾಶವಾಗ ಬಾರದೆಂದೇನೂ ಇಲ್ಲವಲ್ಲ.
      ಅಲ್ಲದೆ ಈಗಿರುವ ತಳಿಗಳೆಲ್ಲಾ ದಾಯಾದಿಗಳು (cousins). ನೋಡಿ: http://en.wikipedia.org/wiki/Evolution:_A_Theory_in_Crisis#Molecular_equidistance

      >>>”…ಪ್ರಶ್ನಿಸಿದವರ ಮೇಲೆ, ಮೈಮೇಲೆ ಬಂದವರಂತೆ ಏಕೆ ಹಾಯುತ್ತಿರುವಿರಿ? ಇದು ನಿಮ್ಮ “ಹುಟ್ಟು ಗುಣವೇ”!?..”
      ರೀ, ಸುಖಾ ಸುಮ್ಮನೆ ಪೆದ್ದು ಪೆದ್ದಾಗಿ ಮೇಲಿನ ‘ಅಭಿಗಾರ’ಕ್ಕೆ ವೈಜ್ಞಾನಿಕ ವಾದದ ಸ್ಥಾನಮಾನ ನೀಡ್ತೀರಲ್ರೀ… ಪ್ರಶ್ನಿಸುವುದಕ್ಕೆ ಒಂದು ರೀತಿ ನೀತಿ, ಸೌಜನ್ಯ, ಔಚಿತ್ಯಪ್ರಜ್ಞೆ ಬೇಡವಾ? ಬೇಕಾಬಿಟ್ಟಿ ಪ್ರಶ್ನಿಸುವುದಾ? ಮೊದಲು ಬರೆದವರ ಭಾಷೆಯನ್ನ ಗಮನಿಸಿ, ಅವರು ಪ್ರಶ್ನಿಸುತ್ತಿಲ್ಲ, ತೀರ್ಪು ನೀಡುತ್ತಿದ್ದಾರೆ. ಹ್ಯಾಗೆ ಹ್ಯಾಗೆ ಇಡೀ ಸಂಶೋಧಕ ಸಮೂಹದ ಮೇಲೆ ಹರಿಹಾಯ್ದಿದ್ದಾರೆ ಅಂತ ಮೊದಲು ಗಮನಿಸಿ. ಹ್ಯಾಗೆ ಬೇಕಾದರೆ ಹಾಗೆ ಪ್ರಶ್ನಿಸುವುದನ್ನ ತರ್ಕಶಸ್ತ್ರವಾಗಲೀ, ವೈಜ್ಞಾನಿಕ ಪದ್ದತಿಯಾಗಲೀ ಅನುಮೋದಿಸದು. ವಿತಂಡವಾದ ಅದು.

      ಉತ್ತರ
  8. Kumar
    ಏಪ್ರಿಲ್ 9 2012

    ಭಾರತೀಯರ ಜ್ಞಾನದ ಹೆಗ್ಗಳಿಕೆಯನ್ನು ತಿಳಿಸಿದ ಕೂಡಲೇ, ಅದನ್ನು ಖಂಡಿಸುವುದು ಕಂಡರೆ ಆಶ್ಚರ್ಯವೆನಿಸುತ್ತದೆ.
    ಈ ಗುಂಪು ಯಾವುದೋ ಒಂದು “ಪಂಥ”ದ ಸಿದ್ಧಾಂತಕ್ಕೆ ಕಟ್ಟುಬಿದ್ದಿರಬೇಕು. ಅವರಿಗೆ, ತಮ್ಮ ಸಿದ್ಧಾಂತವೇ ಹೆಚ್ಚೇ ಹೊರತು, ಸತ್ಯವು ಹೆಚ್ಚಲ್ಲ.
    ಸತ್ಯವು ಹೊರ ಬಂದರೆ, ತಮ್ಮ ಸಿದ್ಧಾಂತವೆಲ್ಲಿ ಮುಳುಗಿ ಬಿಡುವುದೋ ಎಂಬ ಭಯ ಅವರನ್ನು ಆವರಿಸಿದೆ ಎನಿಸುತ್ತದೆ.
    ಈ ಕಾರಣದಿಂದಾಗಿಯೇ ಇವರು, ಪ್ರಶ್ನಿಸುವುದನ್ನೇ ಖಂಡಿಸುತ್ತಾರೆ, ಸತ್ಯವನ್ನೇ ಮುಚ್ಚಿ ಹಾಕಲೂ ಹೇಸುವುದಿಲ್ಲ ಮತ್ತು “ಇದಮಿತ್ಥಂ” ಎಂದು ಎಂದೂ ಹೇಳದ ವಿಜ್ಞಾನವನ್ನೇ “ಇದಮಿತ್ಥಂ”ನ ಸಾಲಿಗೆ ಸೇರಿಸಿಬಿಡುತ್ತಾರೆ!!

    ಉತ್ತರ
  9. ಈ ಲೇಕನ ನಿಲುಮೆಯ ಹೊಸ ತಳ! ನಿಲುಮೆ ಇನ್ನೂ ತಳ ಇಡಿಯಬೇಕೆಂದರೆ ನಾನು ‘ಮಗುವಿನ ಬೆಳವಣಿಗೆ ಎಂಬ ಸುಳ್ಳು’ ಎಂಬ ಲೇಕನವನ್ನ ಬರೆದುಕೊಡುತ್ತೇನೆ. ಹತ್ತು ನಿಮಿಷ ನನ್ನ ಮಗಳನ್ನ ದಿಟ್ಟಿಸಿ ನೋಡಿದೆ. ಅವಳು ಇದ್ದ ಹಾಗೆ ಇದಾಳೆ! ಮತ್ತೆ ನನಗೆ ವಸಿ ತಲೆ ಕೆಟ್ಟಿದೆ. ನಿಲುಮೆಗೆ ಒಳ್ಳೆಯ ಲೇಕನ ಸಿಗಬಹುದು!
    ಗಂಬೀರವಾಗ್ ಮತಾಡ್ಬೇಕಂದ್ರೆ, ಈ ಲೆಕನದ ಒಂದೊಂದು ಬರಿಗೆಗಳೂ (ಅಕ್ಷರಗಳೂ) ನಗು ತರಿಸಿದರೆ, ಕನ್ನಡಿಗರಲ್ಲಿ ಹೆಚ್ಚುತ್ತಿರುವ ಮೌಡ್ಯ ನೆನೆದು ಬಯವೂ ಆಯ್ತು. ವಿಕಸನ ವಾದ ಮಂಗನಿಂದ ಮಾನವ ಅನ್ನೋದಿಲ್ಲ. ಅದು ತಪ್ಪು. ಬದಲಿಗೆ ಮಂಗ ಮತ್ತು ಮಾನವ ಒಂದೇ ಪೂರ್ವಜರಿಂದ ಬಂದವರು ಅನ್ನುತ್ತದೆ. ಈ ಲೇಕನ ಒಂದು ಅಕ್ಷರ ಸಂಕರವೇ ವರ್ತು ಮತ್ತಿನ್ನೆನಿಲ್ಲ. ಸಮಯ ಹಾಳು.

    ಉತ್ತರ
    • Kumar
      ಏಪ್ರಿಲ್ 10 2012

      ಸಿದ್ದರಾಜು ವಳಗೆರೆಹಳ್ಳಿ ಬೋರೇಗೌಡ> ಈ ಲೇಕನ ಒಂದು ಅಕ್ಷರ ಸಂಕರವೇ ವರ್ತು ಮತ್ತಿನ್ನೆನಿಲ್ಲ.
      ಹಳಗನ್ನಡವಿದ್ದದ್ದು ಹೊಸಗನ್ನಡವಾಗಿ ವಿಕಸಿತವಾಯಿತೆಂದು ನಾವೆಲ್ಲಾ ಓದಿದ್ದೇವೆ.
      ಆದರೆ, ಈಗ ನಿಮ್ಮ “ಖನ್ನಢ”ವನ್ನು ನೋಡಿದ ಮೇಲೆ ಅದು “ಎನ್ನಡ”ವಾಗುತ್ತಿರುವುದು ಅರಿವಿಗೆ ಬಂದಿತು.
      ಕನ್ನಡಕ್ಕೇ ಈ ಗತಿ ತರುವವರು ಇರುವಾಗ, ಮಾನವನನ್ನೇ ಮಂಗ ಮಾಡುವುದೂ ಅವರಿಗೆ ತಿಳಿದಿರಬಹುದು!!

      ಪ್ರಶ್ನಿಸುವುದೇ ವೈಜ್ಞಾನಿಕ ಮನೋಭಾವದ ಅತ್ಯಂತ ಪ್ರಮುಖ ತಳಹದಿ. ಪ್ರತಿಯೊಂದನ್ನೂ ಪ್ರಶ್ನಿಸಬೇಕು.
      ಆದರೆ, ನೀವು ಆ ತಳಹದಿಯನ್ನೇ ಹಾಳುಮಾಡಿ, ವೈಜ್ಞಾನಿಕ ಮನೋಭಾವನೆಯನ್ನೇ ಮಟ್ಟಹಾಕಲು ಪ್ರಯತ್ನಿಸುತ್ತಿರುವುದು ಕಂಡು ಖೇದವಾಗುತ್ತಿದೆ.

      ಲೇಖಕರು ಸ್ಥಾಪಿತ ವಾದವೊಂದನ್ನು ಕೆಲವು ಕಾರಣ ನೀಡಿ ತಪ್ಪೆನ್ನಲು ಹೊರಟಿದ್ದಾರೆ.
      ಅವರು ಹೇಳಿದ್ದು ಸರಿಯಿರಬಹುದು, ಅಥವಾ ತಪ್ಪೇ ಇರಬಹುದು – ಅದನ್ನು ಸಾಧಿಸುವುದು, ಅವರ ವಾದದಲ್ಲಿನ ಹುಳುಕುಗಳನ್ನು ಹೊರತೆಗೆದು.
      ಆದರೆ ನೀವು ನೀಡಿರುವ ಪ್ರತಿಕ್ರಿಯೆಯ ಕೆಲವು ತುಣುಕುಗಳನ್ನು ನೋಡಿ:
      ಸಿದ್ದರಾಜು ವಳಗೆರೆಹಳ್ಳಿ ಬೋರೇಗೌಡ> “ಕನ್ನಡಿಗರಲ್ಲಿ ಹೆಚ್ಚುತ್ತಿರುವ ಮೌಡ್ಯ”
      Oduga> ” ಓದುಗರ ಎಲೆಯಲ್ಲಿ ತಮ್ಮ ಪೂರ್ವಾಗ್ರಹ ಮತ್ತು ಅಜ್ಞಾನಗಳನ್ನು ಕಾರಿಕೊಳ್ಳುವ ಬದಲು”
      charles bricklayer> “ಗಣಿಯ ಆಳದಲ್ಲಿರುವ ಮಂಡೂಕವೇ ಬರೆದಿರುವ ಲೇಖನ”
      T.M.Kraishna> “ಪೂರ್ವಗ್ರಹಪೀಡಿತ ಮೂರ್ಖ ಮಾತ್ರ ಇಂತಹ ಲೇಖನ ಬರೆಯಬಲ್ಲ”
      charles bricklayer> “ಕನಿಷ್ಟಪಕ್ಷ ಮಂಗವಾದರೂ ಬರೆದಿದ್ದರೆ”
      ಇವು ನಿಮ್ಮ ಬುದ್ಧಿಮಟ್ಟವನ್ನು ತಿಳಿಸುತ್ತಿದೆ ಅಷ್ಟೇ.

      ಗೆಲಿಲಿಯೋ “ಭೂಮಿ ಸೂರ್ಯನ ಸುತ್ತ ಸುತ್ತಿತ್ತಿದೆ” ಎಂದು “ಸ್ಥಾಪಿತ ವಾದ”ದ ವಿರುದ್ಧ ಹೇಳಿದಾಗ ಅವನನ್ನು ಜೈಲಿಗೆ ಹಾಕಿದವರು, ಬ್ರೂನೋ ಎಂಬ ಮತ್ತೊಬ್ಬ ವಿಜ್ಞಾನಿಯನ್ನು ಜೀವಸಹಿತ ಸುಟ್ಟವರು, ತಮ್ಮ ಮತವನ್ನು ಒಪ್ಪದವರನ್ನು ನಿರ್ದಯವಾಗಿ ಕೊಂದವರು, ಇಂತಹವರ ಮಾನಸಿಕತೆಯೇ ಇಲ್ಲಿಯೂ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ.
      “ಇರುವುದು ಒಂದೇ ಪುಸ್ತಕ”; “ಅದರಲ್ಲಿರುವುದನ್ನು ಒಪ್ಪಲೇಬೇಕು”; “ಅದನ್ನು ಒಪ್ಪದವರಿಗೆ ಬದುಕುವ ಹಕ್ಕಿಲ್ಲ”; “ಅದನ್ನು ಪ್ರಶ್ನಿಸುವವರನ್ನು ಕೊಂದುಹಾಕಿದರೆ ಪುಣ್ಯ ಸಿಗುತ್ತದೆ” – ಈ ರೀತಿಯಾದ “ಸೆಮೆಟಿಕ್” ಮಾನಸಿಕತೆಯೇ “ಪ್ರಶ್ನಿಸುವ ಮನೋಭಾವವನ್ನು ಅಥವಾ ವೈಜ್ಞಾನಿಕತೆಯನ್ನು” ತುಳಿಯಲು ಯತ್ನಿಸುತ್ತದೆ.

      ನೀವು ನಿಜಕ್ಕೂ ಪ್ರಜ್ಞಾವಂತರಾಗಿದ್ದರೆ, ನಿಮ್ಮ ವರ್ತನೆ ಈ ಮೇಲೆ ತಿಳಿಸಿದಂತೆ ಆಗಿಹೋಗುತ್ತಿದೆಯೇ ಎಂಬುದನ್ನೊಮ್ಮೆ ಪ್ರಶ್ನಿಸಿಕೊಂಡು, ಆತ್ಮಾವಲೋಕನ ಮಾಡಿಕೊಂಡು ನಿರ್ಧಾರಕ್ಕೆ ಬನ್ನಿ.

      ಉತ್ತರ
  10. Kumar
    ಏಪ್ರಿಲ್ 10 2012

    ಡಾರ್ವಿನ್ನನ ವಿಕಾಸ ವಾದವನ್ನು ಆಧುನಿಕ ವಿಜ್ಞಾನಿಗಳು ಪ್ರಶ್ನಿಸುತ್ತಿದ್ದಾರೆ.
    ಈ ಕೆಳಗಿನ ಕೊಂಡಿಯನ್ನೊಮ್ಮೆ ಓದಿ ನೋಡಿ:
    http://www.wasdarwinright.com/

    ಈ ಕೆಳಗಿನ ಪುಸ್ತಕದ ಕೊಂಡಿಯಲ್ಲಿ ಬರೆದಿರುವ ಪುಸ್ತಕದ ಸಾರಾಂಶ ನೋಡಿ:
    http://astore.amazon.co.uk/wasdarwrigh-21/detail/091756152X

    ೮೦೦ ಜನ ವಿಜ್ಞಾನಿಗಳು ಡಾರ್ವಿನ್ನನ ವಿಕಾಸ ವಾದವನ್ನು ತಿರಸ್ಕರಿಸಿ ಸಹಿ ಸಂಗ್ರಹಿಸಿದ್ದಾರೆ. ಅದರ ಕುರಿತಾಗಿ ಮಾಹಿತಿಯನ್ನು ಈ ಕೆಳಗಿನ ಕೊಂಡಿಯಲ್ಲಿ ನೋಡಿ:
    http://www.dissentfromdarwin.org/index.php

    ಉತ್ತರ
  11. Kumar
    ಏಪ್ರಿಲ್ 10 2012

    ಡಾರ್ವಿನ್ನನು ಹುಟ್ಟುಹಾಕಿದ್ದು “ವಿಕಾಸ ವಾದ” (Theory of Evolution – ಗಮನಿಸಿ, ಇದು ಕೇವಲ “Theory”).
    ಮುಂದೆ ಅದನ್ನು “ನವ ವಿಕಾಸ ವಾದ” ಅಥವಾ “Neo Darvinism” ಎಂದು ಬದಲಾವಣೆ ಮಾಡಲಾಯಿತು.
    ಹೀಗಾಗಿ ಇಂದು ನಾವು ಪಠ್ಯಗಳಲ್ಲಿ ನೋಡುತ್ತಿರುವುದು ಡಾರ್ವಿನ್ನನ ವಿಕಾಸ ವಾದವೇ ಅಲ್ಲ.

    ಕಳೆದ ಹಲವು ದಶಕಗಳ ಸಂಶೋಧನೆಯಿಂದ ಅನೇಕ ಹೊಸ ಸಂಗತಿಗಳು ತಿಳಿದು ಬಂದಿದೆ ಮತ್ತು ಅನೇಕ ಅವಿಷ್ಕಾರಗಳೂ ಆಗಿವೆ.
    ಡಾರ್ವಿನ್ನನ ಕಾಲದಲ್ಲಿ “ಜೀನ್” ಅಥವಾ ವಂಶವಾಹಿ (DNA/RNA or Genes in general) ಕುರಿತಾಗಿ ತಿಳಿದಿರಲಿಲ್ಲ.
    ಈಗ ನಮಗೆ ತಿಳಿದಿರುವಂತೆ, ಜೀವಿಯೊಂದಕ್ಕೆ ತನ್ನ “ಜೀನ್”ನಿಂದ ಗುಣಗಳು ಬರುತ್ತವೆ.
    ಈ “ಜೀನ್”ಗಳು ಪೂರ್ವಜರಿಂದ ಮುಂದಕ್ಕೆ ನೀಡಲ್ಪಡುತ್ತವೆ.
    ಈ “ಜೀನ್”ಗಳ ವಿಶೇಷವೆಂದರೆ, ತಲೆಮಾರಿನಿಂದ ತಲೆಮಾರಿಗೆ ಹೋಗುವಾಗ, ಈ “ಜೀನ್”ಗಳು ಯಾವುದೇ ಪರಿವರ್ತನೆ ಹೊಂದುವುದಿಲ್ಲ.
    ತಾಯಿಯಿಂದ ಮಗುವಿಗೆ ಕೊಡಲ್ಪಡುವ “ಜೀನ್” ತಾಯಿಯ “ಜೀನ್”ನ ತದ್ರೂಪ – ಒಂದು ಸಣ್ಣ ಬದಲಾವಣೆಯೂ ಇದರಲ್ಲಿ ಇರುವುದಿಲ್ಲ.
    ಡಾರ್ವಿನ್ನನ “ವಿಕಾಸ ವಾದ”ವನ್ನು ಪ್ರಶ್ನಿಸುತ್ತಿರುವುದು ಈ ಹೊಸ ಸಂಶೋಧನೆಯೇ.
    “ಜೀನ್”ಗಳಿಂದ ಜೀವಿಗಳು ಗುಣಗಳನ್ನು ಪಡೆಯುವುದಾದರೆ ಮತ್ತು “ಜೀನ್”ಗಳು ತಲೆಮಾರಿನಿಂದ ತಲೆಮಾರಿಗೆ ಪಯಣಿಸುವಾಗ ಬದಲಾವಣೆ ಹೊಂದುವುದಿಲ್ಲವಾದರೆ,
    “ವಿಕಾಸ ವಾದ” ಸುಳ್ಳಾಗಿರಲೇಬೇಕು.

    ಆದರೆ, ಈ “ಜೀನ್”ಗಳು ತಲೆಮಾರಿನಿಂದ ತಲೆಮಾರಿಗೆ ಹೋಗುವಾಗ ಬದಲಾವಣೆ ಹೊಂದದಿದ್ದರೂ, ಅವು ಇದ್ದಕ್ಕಿದ್ದಂತೆ ಬದಲಾವಣೆ ಹೊಂದಿಬಿಡುತ್ತವೆ (Mutation).
    ಮತ್ತು ಅನೇಕ ತಳಮಟ್ಟದ ಜೀವಿಗಳಲ್ಲಿ, ಒಂದು ಪ್ರಭೇದದ ಜೀವಿಯು ಮತ್ತೊಂದು ಪ್ರಭೇದದ ಜೀವಿಗೆ “ಜೀನ್” ಹಸ್ತಾಂತರಿಸುವ ಸಾಮರ್ಥ್ಯ ಹೊಂದಿವೆ.
    ಈ ಎರಡು ಜೀವಿಗಳ ನಡುವೆ ತಾಯಿ-ಮಗುವಿನ ಸಂಬಂಧವಿಲ್ಲ – ಅದಿಲ್ಲದೆಯೂ “ಜೀನ್”ಗಳನ್ನು ಅವು ನೀಡುತ್ತವೆ!
    ಇದಕ್ಕೆ ಸಂಬಂಧಿಸಿದಂತೆ ಸ್ವೀಡನ್ನಿನಲ್ಲಿ ನಡೆಸಿರುವ ಈ ಪ್ರಯೋಗದ ಮಾಹಿತಿ ನೋಡಿ:
    Three years ago, researchers led by a professor at the university of Linköping in Sweden created a henhouse that was specially designed to make its chicken occupants feel stressed. The lighting was manipulated to make the rhythms of night and day unpredictable, so the chickens lost track of when to eat or roost. Unsurprisingly, perhaps, they showed a significant decrease in their ability to learn how to find food hidden in a maze.

    The surprising part is what happened next: the chickens were moved back to a non-stressful environment, where they conceived and hatched chicks who were raised without stress – and yet these chicks, too, demonstrated unexpectedly poor skills at finding food in a maze. They appeared to have inherited a problem that had been induced in their mothers through the environment. Further research established that the inherited change had altered the chicks’ “gene expression” – the way certain genes are turned “on” or “off”, bestowing any given animal with specific traits. The stress had affected the mother hens on a genetic level, and they had passed it on to their offspring.

    The Swedish chicken study was one of several recent breakthroughs in the youthful field of epigenetics
    ಈ ಸಂಶೋಧನೆಯೂ “ವಿಕಾಸ ವಾದ”ಕ್ಕೆ ಬಹಳ ದೊಡ್ಡ ಪೆಟ್ಟು ನೀಡಿವೆ.

    ಮತ್ತು ವಿಜ್ಞಾನಿಗಳ ಅನೇಕ ಸಂದೇಹಗಳಿಗೆ ಡಾರ್ವಿನ್ನನ ವಿಕಾಸ ವಾದ ಉತ್ತರ ನೀಡುವುದರಲ್ಲಿ ಸೋತಿದೆ! ಉದಾಹರಣೆಗೆ, “ಮಂಗನಿಂದ ಮಾನವ” ಆಗುವಾಗ ಬಹಳ ಹಂತಗಳಲ್ಲಿ ವಿಕಾಸವಾಗಿರಬೇಕು. ಇಂದು ನಾವು ಮಂಗನನ್ನು ನೋಡುತ್ತೇವೆ; ಮಾನವನನ್ನು ನೋಡುತ್ತೇವೆ; ಆದರೆ, ಇವೆರಡರ ನಡುವಣ ಹಂತದ ಜೀವಿಗಳು ಎಲ್ಲಿಯೂ ಕಾಣಸಿಗುವುದಿಲ್ಲ; ಏಕೆ?
    “ಮಂಗನಿಂದ ಮಾನವ” ಎನ್ನುವುದು ಮುಂದುವರೆದು “ಮಾನವನಿಂದ….” ಏನು? ಏಕೆ ವಿಕಾಸ ಮಾನವನಿಗೇ ನಿಂತು ಹೋಗಿದೆ?
    ಇನ್ನು ಲಕ್ಷಾಂತರ ರೀತಿಯ ಜೀವಿಗಳಿವೆ; ಅವುಗಳು ಯಾವುದರಲ್ಲೂ ವಿಕಾಸದ ಚಿಹ್ನೆಗಳೇ ಕಾಣುವುದಿಲ್ಲವಲ್ಲ; ಏಕೆ?
    ಈ ರೀತಿಯ ಅನೇಕ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ!!

    ಹೀಗಾಗಿ, ಇನ್ನು ಕೆಲವು ವರ್ಷಗಳಲ್ಲಿ ಡಾರ್ವಿನ್ನನ ವಿಕಾಸ ವಾದವನ್ನು ವಿಜ್ಞಾನ ಸಂಪೂರ್ಣವಾಗಿ ತಿರಸ್ಕರಿಸಿದರೆ ಆಶ್ಚರ್ಯವಿಲ್ಲ.

    ಉತ್ತರ
    • ಏಪ್ರಿಲ್ 11 2012

      ಒಂದೇ ಮಾತಲ್ಲಿ ಹೇಳಬೇಕಂದರೆ, ಇವತ್ತಿನ ವಿಜ್ಞಾನಕ್ಕೆ ಇನ್ನೂ ಬಗೆಹರಿಸಲಾರದ (ವೈಜ್ಞಾನಿಕ ಚೌಕಟ್ಟಿನೊಳಗೇ ಕೇಳಲ್ಪಟ್ಟ) ಪ್ರಶ್ನೆಗಳು ಇರುವುದು ಸತ್ಯ ಸಂಗತಿಯಾದರೂ, ಅದಕ್ಕಾಗಿ ಇರುವ ಎಲ್ಲ ವೈಜ್ಞಾನಿಕ ಸಿದ್ಧಾಂತಗಳನ್ನು ಸಂಪೂರ್ಣವಾಗಿ ತಳ್ಳಿಹಾಕುವುದು ಸಮಂಜಸವಲ್ಲ. ಇವತ್ತಿನ ವಿಜ್ನಾನವೇನೂ ಮುಚ್ಚಿದ, ಎಲ್ಲವುದರಬಗ್ಗೆಯೂ ಸಂಪೂರ್ಣವಾಗಿ ನಿಖರ/ನಿರ್ದಿಷ್ಟ ತೀರ್ಪು ನೀಡುವ ವಿಷಯವಲ್ಲ. ಆದರೆ ಇವತ್ತಿನ ವಿಜ್ಞಾನದ ಈ ಕೊರತೆಗಳು ಅವೈಜ್ಞಾನಿಕ ವಾದಗಳಿಗೆ ಸಮರ್ಥನೆಗಳಾಗಲಾರವು!

      ವಿಕಾಸವಾದವು ಬಿದ್ದು ಹೋದರಷ್ಟೇ ಅಲ್ಲ, ತಿರುಗಿ ಇನ್ನೂ ಸಮರ್ಥವಾಗಿ ಎದ್ದು ನಿಂತರೂ ಸಹಾ ಆಶ್ಚರ್ಯವಿಲ್ಲ! ಆದ ಕಾರಣ ಸಾರ್ವಜನಿಕ ವೇದಿಕೆಗಳಲ್ಲಿ ಈ ಥರ ಕವಡೆ ಭವಿಷ್ಯ ಹೇಳುವುದು ನಿಲ್ಲಿಸಿ ಅಂತ ವಿನಂತಿ!

      ಉತ್ತರ
      • Balachandra
        ಏಪ್ರಿಲ್ 11 2012

        {“ಆದರೆ ಇವತ್ತಿನ ವಿಜ್ಞಾನದ ಈ ಕೊರತೆಗಳು ಅವೈಜ್ಞಾನಿಕ ವಾದಗಳಿಗೆ ಸಮರ್ಥನೆಗಳಾಗಲಾರವು!”}
        Exatly. ‘Reductio ad absurdum’ logical fallacy doesn’t prove the ‘truth’, just because it negates contemporary facts.

        ಉತ್ತರ
  12. Ananda Prasad
    ಏಪ್ರಿಲ್ 10 2012

    ಮಂಗನಿಂದ ಮಾನವರ ನಡುವೆ ಕೆಲವು ವಾನರ ಜೀವಿಗಳು ಈಗಲೂ ಅಸ್ತಿತ್ವದಲ್ಲಿವೆ. ಉದಾಹರಣೆಗೆ ಗೊರಿಲ್ಲ, ಚಿಂಪಾಂಜಿ, ಒರಂಗುಟಾನ್. ಪೂರ್ಣಚಂದ್ರ ತೇಜಸ್ವಿಯವರ ಮಿಸ್ಸಿಂಗ್ ಲಿಂಕ್ ಪುಸ್ತಕದಲ್ಲಿ ಮಂಗನಿಂದ ಮಾನವ ವಿಕಾಸದ ನಡುವೆ ನಿರ್ನಾಮವಾದ ವಾನರ ಪ್ರಭೇದದ ಕುರಿತು ವಿವರಣೆ ಇದೆ. ಡಾರ್ವಿನ್ ವಂಶವಾಹಿಗಳ ಪರಿಕಲ್ಪನೆ ಇಲ್ಲದ ಕಾಲದಲ್ಲಿ ವಿಕಾಸವಾದವನ್ನು ಮುಂದಿಟ್ಟದ್ದು ನಂತರದ ಸಂಶೋಧನೆಗಳಿಂದ ಅದರಲ್ಲಿ ಅಗತ್ಯ ಮಾರ್ಪಾಡನ್ನು ವಿಜ್ಞಾನಿಗಳು ಮಾಡುತ್ತ ಬಂದಿದ್ದಾರೆ. ಆದರೆ ಜೀವ ವಿಕಾಸದ ಸಿದ್ಧಾಂತವನ್ನು ಮತ್ತು ಡಾರ್ವಿನ್ ಮುಂದಿಟ್ಟ ಅದರ ಮೂಲಭೂತ ನಿಯಮಗಳನ್ನು ಇಂದಿಗೂ ವಿಜ್ಞಾನಿಗಳು ಒಪ್ಪುತ್ತಾರೆ. ಮಾನವನಿಂದ ಮುಂದೆ ಏಕೆ ವಿಕಾಸ ಆಗಿಲ್ಲ ಎಂಬುದಕ್ಕೆ ಉತ್ತರ ಮಾನವ ತನ್ನ ಬುದ್ದಿಶಕ್ತಿಯಿಂದ ತನ್ನ ಪರಿಸರವನ್ನು ತನಗೆ ಅನುಕೂಕರ ರೀತಿಯಲ್ಲಿ ಬದಲಾಯಿಸಬಲ್ಲವನಾದುದರಿಂದ ಜೀವ ವಿಕಾಸವನ್ನು ಮುಂದಕ್ಕೆ ಕೊಂಡೊಯ್ಯಲು ಅಗತ್ಯ ಪರಿಸರದ ಒತ್ತಡ ಇಲ್ಲವಾಗಿರುವುದು ಕಾರಣ. ಆದರೆ ಮಾನವ ಜೀವಿಯ ಮೆದುಳಿನ ವಿಕಾಸ ಆಗುತ್ತ ಇದೆ ಎಂಬುದನ್ನು ನಾವು ಗಮನಿಸಬೇಕು. ಆದಿಮಾನವನ ಬುದ್ಧಿಶಕ್ತಿಗೆ ಹೋಲಿಸಿದರೆ ಇಂದಿನ ಮಾನವನ ಬುದ್ಧಿಶಕ್ತಿ, ತಾರ್ಕಿಕ ಸಾಮರ್ಥ್ಯದಲ್ಲಿ ಬಹಳಷ್ಟು ವಿಕಾಸ ಆಗಿದೆ, ಇನ್ನು ಬರುವ ಮುಂದಿನ ಪೀಳಿಗೆ ನಮಗಿಂತ ಹೆಚ್ಚು ಬುದ್ಧಿಶಲಿಯಗಿರುತ್ತದೆ ಎಂಬುದನ್ನು ಗಮನಿಸಬೇಕು. ಇದು ಮೆದುಳಿನ ವಿಕಾಸದ ಕಾರಣ ಆಗುತ್ತಿರುವುದು. ಸಾವಿರಾರು ವರ್ಷಗಳ ಹಿಂದೆ ಸೂಕ್ಷ್ಮ ದರ್ಶಕ, ಎಲೆಕ್ಟ್ರಾನ್ ಸೂಕ್ಷ್ಮದರ್ಶಕದ ತಂತ್ರಜ್ಞಾನ ಇಲ್ಲದಿದ್ದ ಕಾಲಕ್ಕೂ ಅದು ಇರುವ ಇಂದಿನ ಕಾಲಕ್ಕೂ ಜ್ಞಾನದಲ್ಲಿ ಮಹತ್ತರ ಮುನ್ನಡೆ ಆಗಿದೆ. ಹೀಗಾಗಿ ಸಾವಿರಾರು ವರ್ಷಗಳ ಹಿಂದಿನ ನಮ್ಮ ಪೂರ್ವಜರು ಹೇಳಿದ್ದೆ ಸತ್ಯ ಎಂಬ ಮೂಢ ನಂಬಿಕೆಯಿಂದ ನಾವು ಹೊರಬರದೆ ನಮ್ಮ ಚಿಂತನೆಯ ವಿಕಾಸ ಆಗಲಾರದು. ಈ ಕುರಿತು ತೆರೆದ ಮನಸ್ಸು ಇರಬೇಕು.

    ಉತ್ತರ
    • Kumar
      ಏಪ್ರಿಲ್ 10 2012

      Ananda Prasad> ಉದಾಹರಣೆಗೆ ಗೊರಿಲ್ಲ, ಚಿಂಪಾಂಜಿ, ಒರಂಗುಟಾನ್……
      ಇವೆಲ್ಲವೂ ಒಂದೇ ಪ್ರಭೇದದ ವಿಕಾಸವೆಂಬುದನ್ನು ನಿರೂಪಿಸಲು ಸಾಧ್ಯವಾಗಿಲ್ಲ.
      ಇವುಗಳ “ಜೀನ್”ಗಳಲ್ಲಿ ಸಾಮ್ಯತೆ ಕಾಣದಿರುವುದು, ಅವು ವಿಕಾಸದ ಕೊಂಡಿಯಲ್ಲ ಎನ್ನುವ ಪ್ರಮುಖ ವಾದ.

      Ananda Prasad> ನಮ್ಮ ಪೂರ್ವಜರು ಹೇಳಿದ್ದೆ ಸತ್ಯ ಎಂಬ ಮೂಢ ನಂಬಿಕೆಯಿಂದ ನಾವು ಹೊರಬರದೆ…..
      ನಾನೂ ಅದನ್ನೇ ಹೇಳುತ್ತಿರುವುದು. ಡಾರ್ವಿನ್ನನ ವಾದವೇ ಅಂತಿಮ ಸತ್ಯವೆಂದು ಪರಿಗಣಿಸಬೇಕಾಗಿಲ್ಲ.
      ವಿಕಾಸವಾಗಲು ಪ್ರಶ್ನಿಸುವ ಮನೋಭಾವವಿರಬೇಕು. ಪ್ರಶ್ನಿಸುವ ಮನೋಭಾವವನ್ನೇ ಚಿವುಟಿಹಾಕಿದರೆ ವಿಕಾಸವು ನಿಂತಿತೆಂದೇ ಅರ್ಥ.

      ಮತ್ತು ನಾನು ಈಗಾಗಲೇ ಹಿಂದಿನ ಪ್ರತಿಕ್ರಿಯೆಗಳಲ್ಲಿ ತಿಳಿಸಿದಂತೆ, ಪಶ್ಚಿಮದ ಸಾಕಷ್ಟು ವಿಜ್ಞಾನಿಗಳು “ವಿಕಾಸ ವಾದ”ವನ್ನು ಪ್ರಶ್ನಿಸುತ್ತಿದ್ದಾರೆ ಮತ್ತು ತಿರಸ್ಕರಿಸಲಾರಂಭಿಸಿದ್ದಾರೆ.
      ಈ ವಿಡಿಯೋವನ್ನೊಮ್ಮೆ ನೋಡಿ: http://www.youtube.com/watch?v=q1iCjKWzeEE

      ಪ್ರತಿಯೊಂದನ್ನೂ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ. ಪ್ರಶ್ನೆಗಳನ್ನು, ಟೀಕೆಗಳನ್ನು ಸ್ವಾಗತಿಸಿ. “ಹಳೆಯದಕ್ಕೇ” ಅಂಟಿಕೊಳ್ಳಬೇಡಿ.
      ನಮ್ಮ ಪೂರ್ವಜರು ತಿಳಿಸಿದರೆಂಬ ಕಾರಣಕ್ಕೆ ಅಥವಾ ನಡೆಸುತ್ತಿದ್ದರೆಂಬ ಕಾರಣಕ್ಕೆ, ನಾವದನ್ನು ಒಪ್ಪಬೇಕಿಲ್ಲ.
      ಅದೇ ರೀತಿ, ನಮ್ಮ ಪೂರ್ವಜರ ವಿಚಾರವೆಂಬ ಏಕೈಕ ಕಾರಣಕ್ಕೆ ಅವನ್ನು ತಿರಸ್ಕರಿಸಲೂ ಬೇಕಾಗಿಲ್ಲ.
      ಪ್ರತಿಯೊಂದನ್ನೂ ಸತ್ಯದ ಒರೆಗೆ ಹಚ್ಚಿ ನೋಡಿ. ಇಂದಿಗೆ ಅವು ಪ್ರಸ್ತುತವೆನಿಸಿದರೆ, ಸತ್ಯದ ಪ್ರಕಾಶದಲ್ಲೂ “ಆ ವಿಚಾರ”ಗಳು ಹೊಳೆದರೆ, ಅವನ್ನಿಟ್ಟುಕೊಳ್ಳಿ. ಇಲ್ಲದಿದ್ದರೆ, ಅವುಗಳನ್ನು ತೆಗೆದೆಸೆಯಿರಿ.
      ಹೊಸಹೊಸ ವಿಚಾರಗಳನ್ನು ಸ್ವಾಗತಿಸಿ. ಆಗ, ಹೊಸಹೊಸ ಆವಿಷ್ಕಾರಗಳು ನಮ್ಮಿಂದಲೂ ಸಾಧ್ಯವಾಗುತ್ತದೆ.

      ಉತ್ತರ
  13. noname
    ಏಪ್ರಿಲ್ 10 2012

    vijnaanada prakaara kOmadallirO vyaktiya mannassu, namma nimmantavariginta hecchu santrupti inda iruttante.anda haage ii vikaasavaadada bagge innishtu charcheyaadare…

    ಉತ್ತರ
  14. Balachandra
    ಏಪ್ರಿಲ್ 10 2012

    ವಿಕಾಸವಾದವನ್ನು 100% ಪ್ರೊವ್ ಮಾಡಲು ಸಾಧ್ಯವಾಗಿಲ್ಲ. ಇನ್ನು first living organism ಹೇಗೆ ಬಂದಿತೆಂಬುದರ ಬಗ್ಗೆ ೧% ಕೂಡ ಸಾಧಿಸಿಲ್ಲ ಎನ್ನಬಹುದು. ಆದಾಗ್ಯೂ ‘ವಿಕಾಸವಾದ’ ಸತ್ಯತೆಗೆ ಸಮೀಪವಾಗಿದೆ ಎನ್ನಬಹುದಷ್ಟೇ. ಡಾರ್ವಿನ್ ಆಗಲೀ ಅಥವಾ ಮತ್ಯಾವುದೋ scientist ಆಗಲಿ, ಅವರು ಪರಿಪೂರ್ಣ ಸತ್ಯ ಕಂಡು ಹಿಡಿದವರೆಂದು ವಿಜ್ಞಾನವೂ ಹೇಳಿಕೊಳ್ಳುತ್ತಿಲ್ಲ. ಆದರೆ ಅವರೆಲ್ಲರೂ ಸತ್ಯದ ಹಾದಿಯಲ್ಲಿ ನಡೆದವರು ಎನ್ನಬಹುದು. ಇದರ ಬಗ್ಗೆ ಈಗಲೂ ಕೂಡ ಸಂಶೋಧನೆ ನಡೆಯುತ್ತಲೇ ಇದೆ.
    ಆದರೆ ‘ವಿಕಾಸವಾದವನ್ನು’ ಸಂಪೂರ್ಣವಾಗಿ ತಿರಸ್ಕರಿಸಲು ಕಾರಣಗಳೆನಿವೆ? ಅದಕ್ಕಿಂತಲೂ ಉತ್ತಮವಾದ ವಾದಗಳು ಪ್ರಯೋಗದ ಮೂಲಕ ಸಾಬೀತಾದರೆ ವಿಕಾಸವಾದವನ್ನು ತಿರಸ್ಕರಿಸಬಹುದು ಅಷ್ಟೇ. ಅದೇನೇ ಇರಲಿ ವಿಕಾಸವಾದ ಸತ್ಯಕ್ಕೆ ಸಮೀಪ ಎನ್ನುವದಕ್ಕೆ ಬಹಳಷ್ಟು ವೈಜ್ಞಾನಿಕ ಆಧಾರಗಳಿವೆ. ಉದಾರಣೆಗೆ microbes ಗಳಲ್ಲಿ ನಾವು ಸೂಕಷ್ಮದರ್ಶಕಗಳ ಮೂಲಕ ವಿಕಾಸತ್ವವನ್ನು ದರ್ಶಿಸಲು ಸಾಧ್ಯವಿದೆ. ವಿಜ್ಞಾನವು ಮುಂದುವರಿದಂತೆ ಎಷ್ಟೋ ಪ್ರಶ್ನೆಗಳು ಪರಿಹಾರವಾಗಬಹುದು ಕೂಡ.
    Dalton, ರುದರ್ ಫೋರ್ಡ್, ನ್ಯೂಟನ್, Einstein ಎಲ್ಲರ ಪ್ರಯೋಗದಲ್ಲಿಯೂ ನ್ಯೂನ್ಯತೆ ಇದೆ. ಹಾಗೆಂದು ಅವರೆಲ್ಲರೂ ಹೇಳಿದ್ದು ಅಸತ್ಯ ಎಂದಾಗಲೀ, ಅಥವಾ ಬೌತಿಕ ವಿಜ್ಞಾನ ತಪ್ಪೆಂದಾಗಲೀ ಅಲ್ಲ. ಇವತ್ತಿಗೂ ಎಲ್ಲ ವಿಜ್ಞಾನದ ಭಾಗಗಳಲ್ಲಿ, ಅದೆಷ್ಟೋ ಪ್ರಶ್ನೆಗಳು ಉಳಿದುಕೊಂಡಿವೆ. ಅವೆಲ್ಲವೂ ಕಾಲಕ್ರಮೇಣ ಪರಿಹಾರವಾಗಲೂ ಬಹುದು. ಡಾರ್ವಿನ್ ನ ವಾದವನ್ನು ಕಣ್ಣು ಮುಚ್ಚಿಕೊಂಡು ನಂಬಬೇಕಾಗಿಲ್ಲ, ಆದರೆ ಆತನ ವಾದ ಉಳಿದ ವಿಜ್ಞಾನಿಗಳನ್ನು ಸಂಶೋಧನೆಗೆ ಎಡೆ ಮಾಡಿಕೊಟ್ಟವು. ಸತ್ಯದ ಹತ್ತಿರಕ್ಕೆ ಕೊಂಡೊಯ್ದವು. ಹಾಗೆಯೇ, ಯಾವುದೇ ಸಂಶೋಧನೆಯನ್ನು ಪ್ರಶ್ನಿಸುವದು ಒಳ್ಳೆಯ ಬೆಳವಣಿಗೆ. ಆದ್ರೆ, ಒಂದು ನ್ಯೂನ್ಯತೆಯನ್ನು ನೀಡಿ ಆ ವಾದ ಸಂಪೂರ್ಣ ಸುಳ್ಳು ಎಂದು ವಾದಿಸುವದು ಅರ್ಥವಿಲ್ಲದ್ದು. ‘ವಿಕಾಸವಾದ’ ಅಪ್ಪಟ ಸುಳ್ಳು ಎಂದು ಯಾರೂ ಬೇಕಾದರೂ ಅನ್ನಲಿ, ಆದರೆ ಹಾಗೆ ಹೇಳುವ ಮೊದಲು, ಅದಕ್ಕಿಂತಲೂ ಉತ್ತಮವಾದ, ತಾರ್ಕಿಕವಾದ, ಪ್ರಾಯೋಗಿಕ ವಾದವನ್ನು ಮಂಡಿಸಬೇಕು ಅಷ್ಟೇ.

    ಉತ್ತರ
    • Kumar
      ಏಪ್ರಿಲ್ 10 2012

      ಬಾಲಚಂದ್ರ ಅವರೆ,
      ನಿಮ್ಮ ಮಾತು ಸರಿಯಾಗಿದೆ.
      ಪ್ರಶ್ನಿಸುವುದು ತಪ್ಪಲ್ಲ. ಮತ್ತು ಪ್ರಶ್ನಿಸದೆ ಹೊಸ ಹೊಳಹು ಸಿಗದು.
      ಪ್ರಸ್ತುತ ಲೇಖನದ ಲೇಖಕರು ಹೊಸ ವಾದವನ್ನು ಮುಂದಿಟ್ಟಿದ್ದಾರೆ. ಅವರ ವಾದವು, ವಿಕಾಸ ವಾದವನ್ನು ಪ್ರಶ್ನಿಸುತ್ತಿದೆ.
      ಅದನ್ನು ತರ್ಕದಿಂದಲೋ ಅಥವಾ ವೈಜ್ಞಾನಿಕ ಆಧಾರಗಳ ಮೇಲೋ ತಳ್ಳಿ ಹಾಕುವುದು ಬಿಟ್ಟು, ಪ್ರಶ್ನಿಸಿದ್ದೇ ತಪ್ಪೆಂದು ಹರಿಹಾಯುವುದು ಏನನ್ನು ತೋರಿಸುತ್ತದೆ?
      ಅವರಿಗೆ ಉತ್ತರಿಸಲು, ವಿಕಾಸ ವಾದವನ್ನು ತಿರಸ್ಕರಿಸುತ್ತಿರುವ ವಿಜ್ಞಾನಿಗಳ ಕುರಿತಾಗಿ ತಿಳಿಸಬೇಕಾಯಿತು.

      ಉತ್ತರ
      • Balachandra
        ಏಪ್ರಿಲ್ 10 2012

        ಲೇಖಕರು ಪ್ರಶ್ನಿಸಿದ್ದರಲ್ಲಿ ತಪ್ಪೇನಿಲ್ಲ. ಬರೇ ಲೇಖಕರಲ್ಲದೆ ಇನ್ನೂ ಆ ಪ್ರಶ್ನೆ ವಿಜ್ಞಾನಿಗಳ ವೃಂದ ದಲ್ಲೇ ಇದೆ. ಆದರೆ ಪ್ರಶ್ನೆಯನ್ನು ಲೇಖಕರು ಇನ್ನೂ ತಾರ್ಕಿಕವಾಗಿ ಮಂದಿಸಬಹುದಿತ್ತೆಂಬುದು ನನ್ನ ಅನಿಸಿಕೆ. ಉದಾರಣೆಗೆ ಅವರು ಹೇಳಿದ ಹಾಗೆ “ಅದೊಂದು ಹೋಲಿಕೆಯ ಕಥೆ ಅಷ್ಟೇ” ಎಂದು ಹೇಳುವುದು ಸರಿಯಲ್ಲ. ಮತ್ತು ಅವರು ಹೇಳಿದ ಹಾಗೆ “ಹರಪ್ಪ ಮತ್ತು ಮೊಹೆಂಜೊದಾರೋ ಸ್ಥಳ ಮಂಗನಿಂದ ಮಾನವನಾದ ಎನ್ನುವುದು ಬರೇ ಅಪವಾದ” ಎನ್ನುವದೂ ತಾರ್ಕಿಕ ಅಲ್ಲ. ಯಾಕೆಂದರೆ ಯಾವ ವಿಜ್ಞಾನಿಗಳೂ ಹರಪ್ಪ ಮತ್ತು ಮೊಹೆಂಜೊದಾರೋಗಳಲ್ಲಿ ಮಂಗನಿಂದ ಮಾನವನಾದ ಎಂದು ಹೇಳಿಲ್ಲ ಮತ್ತು ಆಫ್ರಿಕಾದಲ್ಲಿ ಉಗಮವಾಯಿತೆಂದು ಅಭಿಪ್ರಾಯ ಪಡುತ್ತಾರೆ. ಅಲ್ಲಿಯೂ ಕೂಡ ಭಿನ್ನ ಅಭಿಪ್ರಾಯಗಳು ಇರಬಹುದು. ಮತ್ತು ಅವರ ಅಭಿಪ್ರಾಯ “ಕಲ್ಲಿನ ಆಯುಧಗಳು, ಉಪಯೋಗಿಸಿರಬಹುದಾದ ಮಣ್ಣಿನ ಮಡಕೆ-ಕುಡಿಕೆಗಳು, ಗುಹೆಗಳಲ್ಲಿನ ಗೋಡೆ ಚಿತ್ರಗಳು ಕೇವಲ ಇವುಗಳನ್ನೇ ಅವಲಂಬಿಸಿ ಕಟ್ಟಿದ ಅಂದಾಜು ಕಥೆ” ಎನ್ನುವದೂ ಸುಳ್ಳು.
        ನಂತರ ಹೇಳುತ್ತಾ ಸಾಗುತ್ತಾರೆ.”ಭಾರತೀಯ ಆಯುರ್ವೇದಕ್ಕೆ ೩೦೦೦ ವರ್ಷಗಳ ದಾಖಲೆಯಿದೆ. ಎಷ್ಟೋಕಡೆ ೫೦೦೦ ವರ್ಷಗಳಷ್ಟು ಹಳೆಯ ದಾಖಲೆಗಳೂ ಸಿಗುತ್ತಿವೆ. ಒಂದೊಮ್ಮೆ ಹಾಗೆ ಮಂಗನಿಂದ ಮಾನವ ಎಂದಾದರೆ ನಮ್ಮ ಪೂರ್ವಜರು ಅಷ್ಟೊಂದು ಹಿಂದೆಯೇ ಬರೆದಿದ್ದ ಗ್ರಂಥಗಳು, ಪುರಾಣೇತಿಹಾಸಗಳು, ಮಹಾಕಾವ್ಯಗಳು, ವೇದ-ವೇದಾಂತಗಳೆಲ್ಲಾ ಸುಳ್ಳೇ?” ಎಂದು. ವೇದ, ಆಯುರ್ವೇದ ೫೦೦೦ ವರ್ಷದ ಹಿಂದೆ ಇದ್ದದ್ದು ಸುಳ್ಳಲ್ಲದಿರಬಹುದು. ವಿಕಾಸವಾದ ಇವುಗಳನ್ನು ಅಲ್ಲಗೆಳೆಯುವದೂ ಇಲ್ಲ. ಯಾಕೆಂದರೆ ವಿಜ್ಞಾನದ ಪ್ರಕಾರ ಮನುಷ್ಯ ವಿಕಾಸವಾದ ಕಾಲಮಾನ ಸುಮಾರು ೫೦೦,೦೦೦ ವರ್ಷಗಳಿಗೂ ಹಿಂದೆ. ೫೦೦೦ ವರ್ಷದ ಹಿಂದೆ ಮಹತ್ತರವಾದ ನಾಗರಿಕ ವ್ಯವಸ್ತೆ ಇತ್ತೆಂಬುದು ವೈಜ್ಞಾನಿಕವಾಗಿ ಕೂಡ ಸತ್ಯ.
        ಇನ್ನು ಲೇಖಕರು ಮಂಡಿಸಿದ ಹಲವಾರು ಪ್ರಶ್ನೆಗಳನ್ನು ತಿಳಿದುಕೊಳ್ಳಲು ಅವರೇ ಸೂಕ್ತ ಅಧ್ಯಯನ ಮಾಡಬೇಕು. ಯಾಕೆಂದರೆ ಅವು ವಿಸ್ತಾರವಾದ್ದು.
        ಒಂದು ವೇಳೆ, ವಿಕಾಸವಾದ ಸಂಪೂರ್ಣ ಸುಳ್ಳು ಎಂದಾದರೆ ‘ಮಾನವ ಹೇಗೆ ಬಂದ? ಯಾವಾಗ ಬಂದ?’ ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕಾಗಿತ್ತು.
        ಇನ್ನೊಂದು ವಿಚಾರವೆಂದರೆ ವಿಜ್ಞಾನ ಸಂಪೂರ್ಣ ಸತ್ಯವೆಂದು ವಿಜ್ಞಾನವೂ ಹೇಳಿಕೊಳ್ಳುವದಿಲ್ಲ. ಅಪೂರ್ಣವಾದ್ದನ್ನು ಪೂರ್ಣಗೊಳಿಸಲು ಅವಕಾಶ ನೀಡುತ್ತದೆ. ಸತ್ಯವನ್ನು ಮಂಡಿಸಲು ಅವಕಾಶ ನೀಡುತ್ತದೆ. ಯಾರಾದರೂ ಆ ಕೆಲಸವನ್ನು ಮಾಡಬಹುದು. ಆದ್ರೆ ಅಲ್ಲಿಯ ತನಕ ಈಗ ನಡೆದಿರುವ ಸಂಶೋಧನೆಯನ್ನು ಅಧ್ಯಯನ ನಡೆಸುವದು ಅಗತ್ಯ. ಅದರ ಅಧ್ಯಯನ ನಡೆಸದೆ ‘ಸುಳ್ಳು’ ಎದು ನಿರೂಪಿಸಲಾಗದು. ಉದಾರಣೆಗೆ ಮಂಗನಿಂದ ಮಾನವ ಅಲ್ಲ ಎಂದಾಕ್ಷಣ ದೇವರು ಬಂದು ಹುಟ್ಟಿಸಿದ ಎಂದು ಸಾಭೀತಾಗದು.

        ಉತ್ತರ
      • @ ಕುಮಾರ್, ಅಬಿಗಾರ ಹೊಸ ವಾದವನ್ನ ಮುಂದಿಟ್ಟಿಲ್ಲ. ಕ್ರೈಸ್ತವಾದಿಗಳು ಮುಂದಿಡುವ ತಂಗಳು ಅವೈಗ್ನಾನಿಕ ವಾದವನ್ನ ಕದ್ದಿದ್ದಾರೆ. ಅದರಲ್ಲೂ ಸ್ವಂತಿಕೆ ಇಲ್ಲ. ಸತ್ಯ ಒಂದು, ಸುಳ್ಳು ಹಲವು. ವಿಗ್ನಾನ ಒಂದು ಮತ ಹಲವು. ವಿಗ್ನಾನ ನಿಂತಿರುವುದೇ ಹೊಸ ಪ್ರಶ್ನೆಗಳ ಮೇಲೆ. ಮತಗಳು ಅಪಪ್ರಚಾರದ ಮೇಲೆ ನಿಂತಿರುವ ಹಾಗೆ. ಆದರೆ, ಅವು ವೈಗ್ನಾನಿಕ ಪ್ರಶ್ನೆಗಳಾಗಿರಬೇಕು. ಅಪಪ್ರಚಾರಕರೆಲ್ಲಾ ವಿಗ್ನಾನದ ವಿರುದ್ದ ಒಂದಾಗೋ ಕಾಲ ಬರ್ತಿದೆ ಅನ್ಸತ್ತೆ. ವಿಗ್ನಾನ ಎಲ್ಲರಲ್ಲೂ ಮೌಡ್ಯ ತೊಲಗಿಸಿ ಸಬಲರನ್ನಾಗಿ ಮಾಡುತ್ತೆ. ವಿಗ್ನಾನ ಅಪಪ್ರಚಾರ ಮಾಡಿ ಮೌಡ್ಯ ಹೆಚ್ಚಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವವರ ತೊಳ್ಳೆ ನಡುಗಿಸುತ್ತೆ. ಅಬಿಗಾರರಿಗೆ ವಿಕಾಸವಾದದ ವಿಶಯದಲ್ಲಿ ತಿಳುವಳಿಕೆಯ ಕೊರತೆ ಇದೆ. ಆ ಮಾತ್ ಬೇರೆ. ನಿಮ್ಮಲ್ಲಿ ಬಾಶಾವಿಗ್ನಾನದ ತಿಳುವಳಿಕೆಯಲ್ಲಿ ಕೊರತೆ ಇರುವ ಹಾಗೆ.

        ಉತ್ತರ
        • Kumar
          ಏಪ್ರಿಲ್ 12 2012

          Balachandra> ಯಜುರ್ ವೇದ ೩೨.೮ ಹಾಗೆ ಹೇಳುತ್ತದೆ
          ಯಹುರ್ವೇದದ ಪ್ರತಿ ಇಲ್ಲಿದೆ: http://www.aryasamajjamnagar.org/yajurveda/yajurveda.htm
          ನೀವು ತಿಳಿಸುತ್ತಿರುವ ಶ್ಲೋಕವನ್ನು ದಯವಿಟ್ಟು ತೋರಿಸಿ.
          ನನಗೆ ತಿಳಿದಿರುವಂತೆ, ಕೆಲವು ಪಾಶ್ಚಾತ್ಯ ಟೀಕಾಕಾರರು ಕೆಲವು ಶ್ಲೋಕಗಳನ್ನು ತಮಗಿಷ್ಟ ಬಂದಂತೆ ಅನುವಾದಿಸಿ ಈ ರೀತಿಯ ಅರ್ಥವನ್ನು ತೆಗೆದಿದ್ದಾರೆ.
          ಆದರೆ, ವೇದದಲ್ಲಿ ಎಲ್ಲಿಯೂ ಭೂಮಿಯು ಚಪ್ಪಟೆಯಾಗಿದೆ ಎಂದು ತಿಳಿಸಿಲ್ಲ.
          ವೇದವನ್ನು ಅರ್ಥಮಾಡಿಕೊಳ್ಳಲು ಕೇವಲ ಸಂಸ್ಕೃತ ತಿಳಿದಿದ್ದರೆ ಸಾಲದು; ವೇದದ ಭಾಷೆಯೂ ಅರ್ಥವಾಗಬೇಕು.
          ಅನೇಕ ಪದಗಳಿಗೆ ಸಂಸ್ಕೃತಕ್ಕಿಂತ ಭಿನ್ನ ಅರ್ಥ ವೇದದಲ್ಲಿದೆ.
          ನೀವು ನಿಜಕ್ಕೂ ಮೇಲೆ ತಿಳಿಸಿದ ಶ್ಲೋಕವನ್ನು ತಿಳಿದಿದ್ದರೆ, ಯಜುರ್ವೇದದ ಶ್ಲೋಕವನ್ನು ಇಲ್ಲಿ ದಾಖಲಿಸಿ – ನಾವು ಅದರ ಅರ್ಥ ಚರ್ಚಿಸೋಣ.

          ಭೂಮಿಯು ಗುಂಡಾಗಿದೆ, ಅದು ಧೃವ ಪ್ರದೇಶಗಳಲ್ಲಿ ಚಪ್ಪಟೆಯಾಗಿದೆ, ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ, ಭೂಮಿಯ ಆಯಸ್ಸೆಷ್ಟು, ಯಾವ ಕಾರಣಕ್ಕೆ ಭೂಮಿಯು ತನ್ನ ಮೇಲಿನ ವಸ್ತುಗಳನ್ನು ಹಿಡಿದಿಡುತ್ತದೆ (ಗುರುತ್ವಾಕರ್ಷಣ) ಇತ್ಯಾದಿಗಳೆಲ್ಲವನ್ನೂ ಋಗ್ವೇದದಲ್ಲಿ ನೋಡಬಹುದು.

          Balachandra> ಆದರೆ ವಿಜ್ಞಾನದ ವಿಷಯ ಬಂದಾಗ ವಿಜ್ಞಾನ ಮತ್ತು ವೇದಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವದು ಸರಿಯಲ್ಲ ಎಂದು ನನಗನ್ನಿಸುತ್ತದೆ.
          ವೇದಗಳಲ್ಲಿ ಎರಡು ಭಾಗಗಳಿವೆ – ಆಧ್ಯಾತ್ಮದ ಕುರಿತಾಗಿ ಚರ್ಚಿಸುವ ಮೂಲವೇದಗಳು ಮತ್ತು ಐಹಿಕ (ಅರ್ಥಾತ್ ವಿಜ್ಞಾನ, ಗಣಿತ, ಇತ್ಯಾದಿ) ಚರ್ಚಿಸುವ ಉಪವೇದಗಳು.
          ಪ್ರತಿಯೊಂದು ವೇದಕ್ಕೂ ಒಂದು ಉಪವೇದವಿದೆ. ಆಯುರ್ವೇದ, ಧನುರ್ವೇದ, ಗಾಂಧರ್ವವೇದ ಮತ್ತು ಸ್ಥಾಪತ್ಯವೇದಗಳು ಉಪವೇದಗಳು.
          ಇವು ವೇದಕ್ಕಿಂತ ಪ್ರತ್ಯೇಕವಲ್ಲ; ಇವು ವೇದಗಳ ಭಾಗಗಳೇ. ಇವುಗಳಲ್ಲಿ ಕೇವಲ ಗಣಿತ, ವಿಜಾನ, ತಂತ್ರಜ್ಞಾನಗಳೇ ತುಂಬಿವೆ.
          ಇಂದಿನ ಗಣಿತದ ಎಲ್ಲ ಶಾಖೆಗಳಿಗೂ ಮೂಲ ಸ್ಥಾಪತ್ಯವೇದವೇ. ಪೈಥಾಗೊರಸ್‌ಗಿಂತ ಹಲವು ಸಹಸ್ರಮಾನದ ಮೊದಲೇ ಗುರುತ್ವಾಕರ್ಷಣ ಬಲ, ರೇಖಾಗಣಿತದ ಪೈಥಾಗೊರಸ್‌ನ ಸೂತ್ರಗಳು, ಮುಂತಾದವೆಲ್ಲವೂ ದಾಖಲಾಗಿವೆ.

          ಸಿದ್ದರಾಜು ವಳಗೆರೆಹಳ್ಳಿ ಬೋರೇಗೌಡ> ವಿಗ್ನಾನ ಎಲ್ಲರಲ್ಲೂ ಮೌಡ್ಯ ತೊಲಗಿಸಿ ಸಬಲರನ್ನಾಗಿ ಮಾಡುತ್ತೆ
          “ಜ್ಞಾನಂ ವಿಜ್ಞಾನ ಸಹಿತಂ” ಎನ್ನುವಂತೆ, ವಿಜ್ಞಾನವು ಜ್ಞಾನದ ಒಂದು ಶಾಖೆಯೇ. ಅದು ಮೌಢ್ಯವನ್ನು ತೊಲಗಿಸದಿದ್ದರೆ ಅದರ ಅಗತ್ಯವೇನಿದೆ.
          ಆದರೆ, ಮೌಢ್ಯವು ಯಾವುದೆಂದು ಮೊದಲು ನಿರ್ಧಾರವಾಗಬೇಕಲ್ಲ. ಪ್ರತಿಯೊಬ್ಬರಿಗೂ ಮತ್ತೊಬ್ಬರದು ಮೌಢ್ಯವೆಂದೆನಿಸುತ್ತದೆ.

          ಸಿದ್ದರಾಜು ವಳಗೆರೆಹಳ್ಳಿ ಬೋರೇಗೌಡ> ನಿಮ್ಮಲ್ಲಿ ಬಾಶಾವಿಗ್ನಾನದ ತಿಳುವಳಿಕೆಯಲ್ಲಿ ಕೊರತೆ
          ಪ್ರತಿಯೊಬ್ಬರಲ್ಲೂ ಒಂದೊಂದು ಕೊರತೆ ಇರುತ್ತದೆ. ನಿಮ್ಮ ಕನ್ನಡ ಏಕೆ ಹೀಗಾಗಿದೆ ಎನ್ನುವುದು ನನಗೆ ಚೆನ್ನಾಗಿ ತಿಳಿದಿದೆ.
          ಕನ್ನಡವನ್ನು ಬದಲಾಯಿಸಲು ನೀವು “ಭಾಷಾವಿಜ್ಞಾನ”ದ ಲೇಪವನ್ನು ನೀಡುತ್ತಿದ್ದೀರಿ. ಆದರೆ, ನೀವು ಮಾಡುತ್ತಿರುವುದು “ಭಾಷಾವಿಜ್ಞಾನ”ವಲ್ಲ, ಭಾಷೆಯ ಕೊಲೆ ಅಷ್ಟೇ.
          ಕನ್ನಡದ ಅಕ್ಷರಗಳನ್ನು ಬದಲಾಯಿಸಿ ನೀವು ಸಾಧಿಸಬೇಕಾದ್ದೇನೂ ಇಲ್ಲ.
          ಪ್ರತಿಯೊಂದು ಭಾಷೆಯೂ ಹಲವು ಶತಮಾನ ಅಥವಾ ಸಹಸ್ರಮಾನಗಳ ಪಯಣದಲ್ಲಿ ರೂಪಿತಗೊಂಡಿರುತ್ತದೆ. ಅದಕ್ಕೆ ಬೇಕಾದ ಲಿಪಿಯೂ ಹಾಗೆಯೇ.
          ಅದಕ್ಕೆ ಸುತ್ತಲಿನ ಸಮಾಜ, ಅನ್ಯ ಭಾಷೆಗಳು, ಇತ್ಯಾದಿಗಳೆಲ್ಲಾ ಪ್ರಭಾವ ಬೀರಿರುತ್ತವೆ.
          ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಕೇವಲ “Negation” ಮನಃಸ್ಥಿತಿಯಲ್ಲೇ ಮುಂದುವರೆದರೆ ನಿಮ್ಮ ಸ್ವಂತಿಕೆಯನ್ನೇ ಮರೆತು, ಕೇವಲ ಬೇರೆ ಯಾರೋ ಹೇಳಿದ್ದನ್ನೇ ಮಾಡುತ್ತಿರುತ್ತೀರಿ ಎನ್ನುವ ಎಚ್ಚರಿಕೆ ಇರಲಿ.
          ಭಾಷೆಯೊಂದು ಸಮಾಜದ ಶಿಶು – ಅದನ್ನು ನೀವಂದುಕೊಂಡಂತೆ ಬದಲಾಯಿಸಲು ಬರುವುದಿಲ್ಲ ಮತ್ತು ಕನ್ನಡಕ್ಕದು ಅಗತ್ಯವೂ ಇಲ್ಲ.

          ಉತ್ತರ
          • Balachandra
            ಏಪ್ರಿಲ್ 12 2012

            ಎಷ್ಟೋ ಅವೈಜ್ಞಾನಿಕ ಹಿನ್ನೆಲೆಯುಳ್ಳ ವೇದದ ಸಾಲುಗಳು ಈ ಕೆಳಗಿನ ಕೊಂಡಿಯಲ್ಲಿ ಕಾಣಬಹುದು.http://mathomathis.blogspot.in/2011/09/earth-is-falt-as-per-vedas-part-1.html
            ನಾನು ಬರೇ ವೇದ ಸುಳ್ಳು ಎಂದು ಸಾಧಿಸುವದಕ್ಕೆ ಹೊರಟಿಲ್ಲ. ಅದು ಕುರಾನ್ ಆಗಲೀ, bible ಆಗಲೀ, ವೇದಗಲಾಗಲೀ ಅಲ್ಲಿ ಉಪಯುಕ್ತ ಮಾಹಿತಿಗಳು ಇರಬಹುದು, ಇಲ್ಲವೆನ್ನುತ್ತಿಲ್ಲ. ಆದರೆ ಅವು ಯಾವೂ ವೈಜ್ಞಾನಿಕ, ಹಾಗೂ ತಾರ್ಕಿಕ ಮನೋಭಾವವನ್ನು ಬೆಳೆಸುವದರಲ್ಲಿ ಹಿಂದೆ ಬೀಳುತ್ತದೆ. ತುಂಬಾ ಕಡಿಮೆ ಪ್ರಮಾಣದ ಜನರಷ್ಟೇ ತಿಳಿದುಕೊಂಡವರಿದ್ದರು ಅಷ್ಟೇ. ಉದಾರಣೆಗೆ ಇಬ್ಬರು ಬಾಲಕರನ್ನು ಕೂಡಿಸಿ ಶಿಕ್ಷಣ ಕೊಡಿರಿ. ಒಬ್ಬನಿಗೆ ವೇದಾಭ್ಯಾಸ, ಇನ್ನೊಬ್ಬನಿಗೆ ವಿಜ್ಞಾನ. ಒಂದೈದು ವರ್ಷಗಳ ನಂತರ ಯಾರು ಹೆಚ್ಚಿನ ಬುದ್ಧಿವಂತಿಕೆಯನ್ನು ಪ್ರದರ್ಶಿಸುತ್ತಾರೆ? ವೇದದಲ್ಲಿ ಸೂರ್ಯನ ಚಲನೆಯ ಬಗ್ಗೆ ಭೂಮಿಯ ಚಲನೆಯ ಬಗ್ಗೆ ಹೇಳಿರಬಹುದು. ಆದರೆ ಮಾಹಿತಿ ವಸ್ತುನಿಷ್ಟವಾಗಿಲ್ಲ, ನಿಖರವಾಗಿಲ್ಲ. ಅದೇ ವಿಜ್ಞಾನ ನಿಖರ ಮತ್ತು ವಸ್ತುನಿಷ್ಟವಾಗಿ ಕಂಡುಹಿಡಿಯುವತ್ತ ಸಾಗುತ್ತದೆ. ಅದೇನೇ ಇರಲಿ, ಈಗ ವೇದ ವಿಜ್ಞಾನ ಇವುಗಳ ತರ್ಕದ ಅವಶ್ಯಕತೆ ಇಲ್ಲ. ಲೇಖಕರ ವಾದ ಎಷ್ಟು ತಪ್ಪು ಮಾಹಿತಿಗಳಿಂದ ಕೂಡಿದೆ ಎಂದು ಹೇಳಿದೆ ಅಷ್ಟೇ. ಸರಿ, ಈಗ ವಿಕಾಸವಾದ ಸುಳ್ಳಾದರೆ ಸರಿಯಾದ್ದು ಯಾವುದು ಎಂದು ಅವರು ಸ್ಪಷ್ಟ ಪಡಿಸಿಲ್ಲ. ಹಾಗೆ ಮಂಡಿಸಿದ್ದರೆ ನೂತನ ವಿಕಾಸವಾದ ಸಾಧ್ಯವಾಗುತ್ತಿತ್ತೇನೋ ಅಲ್ಲವ? ಇನ್ನು ದೇವರು ಇದ್ದಕ್ಕಿದ್ದಂತೆ ಎಲ್ಲ ಪ್ರಭೇದಗಳನ್ನು ಹುಟ್ಟಿಸಿದ ಎಂದಾದರೆ ನಾವು ಕೇಳಬಹುದು ಯಾಕೆ ಹುಟ್ಟಿಸಿದ, ಈ ಸೃಷ್ಟಿಯ ಉದ್ದೇಶವೇನು ಎಂದು. ಯಾವ ಧರ್ಮ ಗ್ರಂಥಗಳು ಇವುಗಳ ಬಗ್ಗೆ ಸ್ಪಷ್ಟತೆಯನ್ನು ಕೊಡುತ್ತವೆ?ಒಂದು ಲೋಟ ಹಾಲನ್ನು ತೆಗೆದುಕೊಳ್ಳಿ. ಸ್ವಲ್ಪ ದಿನಗಳ ನಂತರ ಹೀಗೆ ಬಿಡಿ. ಸ್ವಲ್ಪ ದಿನಗಳ ನಂತರ ಅವುಗಳಲ್ಲಿ ಹುಳುಗಳು ಆಗುವದನ್ನು ಕಾಣಬಹುದು. ಒಂದು ವೇಳೆ ಅದೇ ಹಾಲನ್ನು ಕಾಲಕಾಲಕ್ಕೆ ಕಾಯುಸುತ್ತಿರಿ. ಆಗ ಯಾವ ಜೀವಿಗಳೂ ಅದರೊಳಗೆ ಕಂಡುಬರಲಾರವು. ಇದು ಏನನ್ನು ತೋರಿಸುತ್ತದೆ? ಜೀವಿಯ ಉದ್ಭವ ಯಾರೋ ಒಬ್ಬನ ಸ್ವ-ಇಚ್ಚೆಯಿಂದ ಸೃಷ್ಟಿಯಾಗಿಲ್ಲ, ಬದಲು ಸೃಷ್ಟಿ ಎನ್ನುವದು ಆಯಾ ಸಂದರ್ಭಗಳಲ್ಲಿ ಸಂಭವಿಸಿದ natural phenomena. ಅಲ್ಲವ?
            ಸೃಷ್ಟಿಕಿಂತ ಮನುಷ್ಯ ಹೆಚ್ಚು ಎಂದು ಹೇಳುತ್ತಿಲ್ಲ. ವಿಜ್ಞಾನ ಮಾನವನ ಸ್ವತ್ತೂ ಅಲ್ಲ. ಮಾನವನು ಇಲ್ಲದಿದ್ದರೂ ವಿಜ್ಞಾನ ಅಸ್ತಿತ್ವದಲ್ಲಿರುತ್ತಿತ್ತು. ನಾವು ಅದನ್ನು ತಿಳಿದುಕೊಳ್ಳಬೇಕೆ ವಿನಃ, ಅದು ದಂತಕತೆ ಇದು ದಂತಕತೆ ಎಂದು ಹೇಳಿದರೆ ಅದು ಅವರ ನಿರ್ಲಕ್ಷ್ಯತನವನ್ನು ತೋರಿಸುತ್ತದೆ. ಈ ರೀತಿಯ ನಿರ್ಲಕ್ಷ್ಯ, ಅಜ್ಞಾನ, ಸಿದ್ಧಾಂತಕ್ಕೆ ಕಟ್ಟು ಬಿದ್ದಿದ್ದರಿಂದಲೇ ಪರಕೀಯರು ನಮ್ಮ ಮೇಲೆ ದಾಳಿ ಮಾಡಿದ್ದು. ಅದನ್ನು ಕೆಲವರು ಇನ್ನೂ ಮುಂದುವರೆಸುವ ಹಾಗೆ ಕಾಣುತ್ತದೆ.

            ಉತ್ತರ
            • Kumar
              ಏಪ್ರಿಲ್ 13 2012

              ನಾನು ಹಿಂದೆ ಕೇಳಿದ ಪ್ರಶ್ನೆಗೆ ಉತ್ತರಿಸಿಲ್ಲ. ಮತ್ತೊಂದು ಕೊಂಡಿಯನ್ನು ನೀಡಿ ಓದಲು ಹೇಳುತ್ತಿರುವಿರಿ.
              ಆ ರೀತಿಯ ಅಸಂಖ್ಯಾತ ಕೊಂಡಿಗಳನ್ನು ನಾನೂ ನೀಡಬಲ್ಲೆ.
              ಆದರೆ, ಆ ಕೊಂಡಿಯ ಕರ್ತೃ ಯಾರು? ಆ ವಿಷಯಕ್ಕೆ ಸಂಬಂಧಿಸಿದಂತೆ ಆತನ ಪರಿಶ್ರಮವೇನು? ಇತ್ಯಾದಿಗಳೆಲ್ಲಾ ನಿಮಗೆ ತಿಳಿದಿದೆಯೇ?
              ಆತನು ಏತಕ್ಕಾಗಿ ಈ ವಿಷಯದ ಕುರಿತಾಗಿ ಕೊಂಡಿಯನ್ನು ಸೃಷ್ಟಿ ಮಾಡಿರುವನು?
              ವೇದಗಳಲ್ಲಿ ಬರೆದಿರುವುದು ಸುಳ್ಳೆನ್ನುವುದನ್ನೇ ಎತ್ತಿ ತೋರಿಸಲು ಕೊಂಡಿ ಸೃಷ್ಟಿ ಮಾಡಿರುವವನು ಪೂರ್ವಾಗ್ರಹಪೀಡಿತ ಎನ್ನಲು ಮತ್ತಿನ್ನೇನು ಪುರಾವೆ ಬೇಕು?
              ಆ ರೀತಿಯ ವ್ಯಕ್ತಿಯ ಮಾತನ್ನು ನಾವು ಹೇಗೆ ನಂಬುವುದು?

              ಇರಲಿ, ಒಟ್ಟಿನಲ್ಲಿ ನೀವು ಸ್ವತಃ ವೇದಗಳನ್ನು ಕುರಿತು ತಿಳಿದುಕೊಳ್ಳಲು ಪ್ರಯತ್ನಿಸದೆ, ನಿಮ್ಮ ವಾದಕ್ಕೆ ಸರಿಹೊಂದುವ ಕೊಂಡಿಯನ್ನಷ್ಟೇ ನೀಡುವಿರಿ, ಎನ್ನುವುದೂ ಇದರಿಂದ ಸಾಬೀತಾಗುತ್ತಿದೆ.

              ವೇದಗಳನ್ನು ಅರ್ಥಮಾಡಿಕೊಳ್ಳಲು, ಕೇವಲ ಸಂಸ್ಕೃತ ತಿಳಿದಿದ್ದರೆ ಸಾಲದು. ಮತ್ತು ಪ್ರತಿಯೊಂದು ಪದದ ಅರ್ಥವೂ ಸಂಬಂಧಕ್ಕೆ ತಕ್ಕಂತೆ ಬದಲಾಗಿರುತ್ತದೆ.
              ಜೊತೆಗೆ ಅನೇಕ ಒಳ ಅರ್ಥಗಳೂ ಇರುತ್ತವೆ. ಇವೆಲ್ಲವನ್ನೂ ತಿಳಿಯದೆ, ಕೇವಲ ಪದಶಃ ಅರ್ಥ ಬರೆದು (ಅದರಲ್ಲೂ ತನಗೆ ಬೇಕಾದ ಕೆಲವು ಪದಗಳನ್ನು ಕೆಂಪುಶಾಯಿಯಲ್ಲಿ ಎತ್ತಿತೋರಿಸಿ), ತಾನು ವೇದವನ್ನು ತಿಳಿದಿರುವೆ, ಅದರಲ್ಲಿರುವ ತಪ್ಪುಗಳನ್ನು ತೋರಿಸುವೆ ಎನ್ನುವ ನೀವು ನೀಡಿರುವ ಈ ಕೊಂಡಿ, ಕೇವಲ ಬಾಲಿಶ ಎನ್ನಿಸುತ್ತದೆ ಅಷ್ಟೇ.
              ಮತ್ತು ಅದನ್ನು ನಂಬುವವರ ಕುರಿತಾಗಿ ನಾನೇನು ಹೇಳಲಿ?

              Balachandra> ನಾನು ಬರೇ ವೇದ ಸುಳ್ಳು ಎಂದು ಸಾಧಿಸುವದಕ್ಕೆ ಹೊರಟಿಲ್ಲ.
              ನೀವು ನೀಡಿರುವ ಕೊಂಡಿ ನೋಡಿದ ಮೇಲೆ, ನಿಮ್ಮ ಉದ್ದೇಶದ ಕುರಿತಾಗಿ ಈ ರೀತಿಯ ಸಮರ್ಥನೆ ಅಗತ್ಯವಿರಲಿಲ್ಲ.

              Balachandra> ಉದಾರಣೆಗೆ ಇಬ್ಬರು ಬಾಲಕರನ್ನು ಕೂಡಿಸಿ ಶಿಕ್ಷಣ ಕೊಡಿರಿ. ಒಬ್ಬನಿಗೆ ವೇದಾಭ್ಯಾಸ, ಇನ್ನೊಬ್ಬನಿಗೆ ವಿಜ್ಞಾನ.
              Balachandra> ಒಂದೈದು ವರ್ಷಗಳ ನಂತರ…..
              ನಿಮ್ಮ ಈ ತರ್ಕವನ್ನು ನೋಡಿ ನಗವು ಬರುತ್ತಿದೆ. ಇದನ್ನು ಕುತರ್ಕ ಎನ್ನಲೋ ಅಥವಾ ತರ್ಕರಾಹಿತ್ಯವೆನ್ನಲೋ ನಿರ್ಧರಿಸಲಾಗುತ್ತಿಲ್ಲ!
              ವೇದಾಧ್ಯಯನವೆನ್ನುವುದು ಕೆಲವು ದಿನಗಳಲ್ಲೋ, ವಾರಗಳಲ್ಲೋ ಮುಗಿಯುವುದಲ್ಲ. ಪ್ರಾಯಶಃ ನಿಮ್ಮ ಜೀವಮಾನವಿಡೀ ಅಧ್ಯಯನ ಮಾಡಿದರೂ ಮುಗಿಯದಷ್ಟು ವಿಷಯಗಳಿವೆ. ಹೀಗಾಗಿ ಈ ರೀತಿಯ ಹೋಲಿಕೆಯೇ ಸಾಧ್ಯವಿಲ್ಲ.
              ಎರಡನೆಯದಾಗಿ, ವಿಷಯವು ಕಲಿಸುವವರ ಮತ್ತು ಕಲಿಯುವವರ ಮೇಲೂ ಹೋಗುತ್ತದೆ.
              ವೇದವನ್ನು ಕಲಿಸುವ ಸಮರ್ಥ ವ್ಯಕ್ತಿಯಿದ್ದರೆ, ವೇದವನ್ನು ಕಲಿತವನು ಹೆಚ್ಚಿನ ಬುದ್ಧಿವಂತಿಕೆಯನ್ನು ಪ್ರದರ್ಶಿಸಬಲ್ಲ.

              > ವೇದದಲ್ಲಿ ಸೂರ್ಯನ ಚಲನೆಯ ಬಗ್ಗೆ ಭೂಮಿಯ ಚಲನೆಯ ಬಗ್ಗೆ ಹೇಳಿರಬಹುದು. ಆದರೆ ಮಾಹಿತಿ ವಸ್ತುನಿಷ್ಟವಾಗಿಲ್ಲ, ನಿಖರವಾಗಿಲ್ಲ.
              ನಾನಾಗಲೇ ಹೇಳಿದಂತೆ, ನೀವು ತಿಳಿದುಕೊಂಡಿರುವುದು ಅಪೂರ್ಣ ಮತ್ತು ಅರೆಬೆಂದ ಮಾಹಿತಿಗಳನ್ನು. ಬೇರಾರೋ ಬರೆದಿಟ್ಟಿರುವ ಪೂರ್ವಾಗ್ರಹಪೀಡಿತ ದಾಖಲೆಗಳೇ ನಿಮಗೆ ಆಧಾರ. ಹೀಗಿರುವಾಗ, ನಿಮ್ಮ ಮಾಹಿತಿ ಸರಿಯಾಗಿರಲು ಹೇಗೆ ಸಾಧ್ಯ?

              > ಈ ಸೃಷ್ಟಿಯ ಉದ್ದೇಶವೇನು ಎಂದು. ಯಾವ ಧರ್ಮ ಗ್ರಂಥಗಳು ಇವುಗಳ ಬಗ್ಗೆ ಸ್ಪಷ್ಟತೆಯನ್ನು ಕೊಡುತ್ತವೆ?
              ಈ ವಿಷಯವಾಗಿ ವಿಜ್ಞಾನವೂ ನಿಖರ ಮಾಹಿತಿ ನೀಡಲಾಗಿಲ್ಲ ಮತ್ತು ಆಗುವುದೂ ಇಲ್ಲ – ಅಂದ ಮಾತ್ರಕ್ಕೆ ವಿಜ್ಞಾನವೂ “ಸುಳ್ಳು” ಎನ್ನೋಣವೇ?
              ಸೃಷ್ಟಿ ಯಾರು ಮಾಡಿದರು, ಎಂದು ಮಾಡಿದರು ಎನ್ನುವುದೇ ತಿಳಿಯದಿರುವಾಗ, “ಉದ್ದೇಶವೇನು” ಎನ್ನುವುದು ತಿಳಿಯಲು ಅಸಾಧ್ಯದ ಮಾತೇ.

              > ಇದು ಏನನ್ನು ತೋರಿಸುತ್ತದೆ? ಜೀವಿಯ ಉದ್ಭವ ಯಾರೋ ಒಬ್ಬನ ಸ್ವ-ಇಚ್ಚೆಯಿಂದ ಸೃಷ್ಟಿಯಾಗಿಲ್ಲ,
              ನಾವು ಚರ್ಚಿಸುತ್ತಿರುವ ವಿಷಯಕ್ಕೂ, ನೀವು ಕೊಡುತ್ತಿರುವ ಉದಾಹರಣೆಗೂ ಯಾವ ಸಂಬಂಧವೋ ತಿಳಿಯುತ್ತಿಲ್ಲ.

              ನಮ್ಮ ಚರ್ಚೆಗೆ ಅರ್ಥವೇ ಇಲ್ಲ ಎಂದು ನನಗೆ ಅನ್ನಿಸುತ್ತಿದೆ. ವೇದಗಳ ಕುರಿತಾಗಿ ಚರ್ಚಿಸು ಅರ್ಹತೆಯನ್ನು ನಾವು ಮೊದಲು ಸಂಪಾದಿಸಬೇಕು. ಇಲ್ಲಿ ಆಗುತ್ತಿರುವುದು ನಮ್ಮ ಅರೆಬೆಂದ ಜ್ಞಾನದ ಪ್ರದರ್ಶನವಷ್ಟೇ!
              ಆದರೆ, ನಿಮಗೆ ಸ್ವಲ್ಪವೂ ತಿಳಿಯದ ವಿಷಯದ ಕುರಿತಾಗಿ “ಅದರಲ್ಲಿ ಹೇಳಿರುವುದು ಸುಳ್ಳು ಅಥವಾ ತಪ್ಪು” ಎಂದು ನೀವು ಅಷ್ಟು ಸುಲಭಾವಾಗಿ ಹೇಳುತ್ತಿರುವುದು ಕಂಡು ನನಗೆ ಆಶ್ಚರ್ಯವೆನಿಸುತ್ತಿದೆ. ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವದ ಕುರಿತು ಮಾತನಾಡುವವರು, ತಮಗೆ ತಿಳಿಯದ ವಿಷಯದ ಕುರಿತಾಗಿ “ನನಗದು ತಿಳಿಯದು” ಎನ್ನುವ ಬದಲು “ಅದು ಸುಳ್ಳು” ಎಂದು ಹೇಳಿಬಿಡುತ್ತಾರೆ ಎಂದರೆ, ವೈಜ್ಞಾನಿಕ ಮನೋಭಾವ ಎಂದರೇನೆಂದು ಮೊದಲು ಚರ್ಚಿಸಬೇಕಷ್ಟೇ!

              ಖಗೋಳವಿಜ್ಞಾನದ ಕುರಿತಾಗಿ ಏನೂ ತಿಳಿಯದ ವ್ಯಕ್ತಿಗಳಿಬ್ಬರು, ತಮಗೆ ದೊರೆತ ಅಲ್ಪಸ್ವಲ್ಪ ಮಾಹಿತಿಗಳನ್ನೇ ಪೂರ್ಣವೆಂದು ನಂಬಿ, ತಮ್ಮ ಬಳಿಯಿರುವ ಹೆಚ್ಚು ಶಕ್ತಿಯಿಲ್ಲದ ದೂರದರ್ಶಕದಿಂದ ಆಕಾಶವನ್ನು ಅಧ್ಯಯನ ಮಾಡಿದರಂತೆ. ಅವರಿಗೆ ಯಾವುದೇ ಗೆಲಾಕ್ಸಿಗಳು ಕಾಣಲಿಲ್ಲವಂತೆ. ಹಾಗಾಗಿ ಗೆಲಾಕ್ಸಿ ಎಂಬುದು ಸುಳ್ಳು ಎಂಬ ನಿರ್ಧಾರಕ್ಕೆ ಬಂದರಂತೆ! 😉

              ಉತ್ತರ
              • Balachandra
                ಏಪ್ರಿಲ್ 13 2012

                {ನಾನು ಹಿಂದೆ ಕೇಳಿದ ಪ್ರಶ್ನೆಗೆ ಉತ್ತರಿಸಿಲ್ಲ. ಮತ್ತೊಂದು ಕೊಂಡಿಯನ್ನು ನೀಡಿ ಓದಲು ಹೇಳುತ್ತಿರುವಿರಿ.}
                ದಯವಿಟ್ಟು ವಿಷಯಾಂತರ ಬೇಡ. ವೇದ ಹಾಗೂ ವಿಜ್ಞಾನದ ಬಗ್ಗೆ ಇನ್ನೊಮ್ಮೆ ತರ್ಕಿಸೋಣ. ವೇದಗಳಲ್ಲಿನ ವಿಜ್ಞಾನದ ಬಗ್ಗೆ ನನಗೂ ತರ್ಕಿಸುವ ಆಸೆ ಇದೆ. ಈಗಿನ ವಿಜ್ನಾನಕ್ಕಿಂತಲೂ ಮಿಗಿಲಾದ್ದು ಇದ್ದರೆ ಕಲಿಯೋಣ. ಈಗ ಈ ಟಾಪಿಕ್ ಬಗ್ಗೆ ಮಾತಾಡೋಣ. ನೀವು ನಾನು ಮೊದಲು ಹಾಕಿದ ಕಾಮೆಂಟ್ ಗಳಿಗೆ ಉತ್ತರಿಸಿ. ಹೇಗೆ ಲೇಖನ ಅರ್ಥಪೂರ್ಣ ಎಂದು. ಅವರೇ ಹೇಳಿದ ಹಾಗೆ ವಿಕಾಸವಾದವನ್ನು ಇನ್ನೂ ಚೆನ್ನಾಗಿ ತಿಳಿದುಕೊಳ್ಳಲು ವೇದ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ವಿವರಿಸಿ.

                ಉತ್ತರ
                • Kumar
                  ಏಪ್ರಿಲ್ 13 2012

                  ಈ ಲೇಖನಕ್ಕೆ ಬಂದ ಪ್ರಾರಂಭದ ಕೆಲವು ಪ್ರತಿಕ್ರಿಯೆಗಳನ್ನು ಒಮ್ಮೆ ಓದಿ ನೋಡಿ.
                  ವಿಷಯಕ್ಕೆ ಉತ್ತರಿಸುವುದಕ್ಕಿಂತ, ವೈಯಕ್ತಿಕ ನೆಲೆಯಲ್ಲಿ ಪ್ರತಿಕ್ರಿಯೆ ಬಂದಿತ್ತು. “ವಿಕಾಸವಾದ”ವನ್ನು ಪ್ರಶ್ನಿಸಿದ್ದೇ ತಪ್ಪೆಂದು ಮೈಮೇಲೆ ಎರಗುವ “ಮತಾಂಧ”ರಂತೆ ಪ್ರತಿಕ್ರಿಯಿಸುತ್ತಿದ್ದರು. ಮತ್ತು ಅವುಗಳ ಹಿಂದಿನ ಉದ್ದೇಶ ವೇದಗಳನ್ನು ಹಳಿಯುವುದಾಗಿತ್ತು ಎಂದೆನಿಸಿತು.
                  ಅವುಗಳಲ್ಲಿ ಕೆಲವು ಹೀಗಿವೆ:
                  > “ಕನ್ನಡಿಗರಲ್ಲಿ ಹೆಚ್ಚುತ್ತಿರುವ ಮೌಡ್ಯ”
                  > ” ಓದುಗರ ಎಲೆಯಲ್ಲಿ ತಮ್ಮ ಪೂರ್ವಾಗ್ರಹ ಮತ್ತು ಅಜ್ಞಾನಗಳನ್ನು ಕಾರಿಕೊಳ್ಳುವ ಬದಲು”
                  > “ಗಣಿಯ ಆಳದಲ್ಲಿರುವ ಮಂಡೂಕವೇ ಬರೆದಿರುವ ಲೇಖನ”
                  > “ಪೂರ್ವಗ್ರಹಪೀಡಿತ ಮೂರ್ಖ ಮಾತ್ರ ಇಂತಹ ಲೇಖನ ಬರೆಯಬಲ್ಲ”
                  > “ಕನಿಷ್ಟಪಕ್ಷ ಮಂಗವಾದರೂ ಬರೆದಿದ್ದರೆ”

                  ನನ್ನ ಪ್ರತಿಕ್ರಿಯೆ ಇವರ ವರ್ತನೆಯನ್ನು ಖಂಡಿಸುವುದಷ್ಟೇ ಆಗಿತ್ತು. ನಾನು ಲೇಖನದ ವಿಷಯವನ್ನು ಸಮರ್ಥಿಸುತ್ತಿಲ್ಲ ಅಥವಾ ತಿರಸ್ಕರಿಸುತ್ತಲೂ ಇಲ್ಲ.
                  “ವಿಕಾಸ ವಾದ”ವನ್ನು ವೈಜ್ಞಾನಿಕ ನೆಲೆಯ ಮೇಲೆ ತಿರಸ್ಕರಿಸುತ್ತಿರುವ ವಿಜ್ಞಾನಿಗಳ ಸಮೂಹವೂ ಇದೆ.
                  ವಿಜ್ಞಾನದ ಪ್ರತಿಯೊಂದನ್ನೂ ಪ್ರಶ್ನಿಸಬಹುದು ಮತ್ತು ಪ್ರಶ್ನಿಸಬೇಕು. ಅದಾಗದಿದ್ದರೆ ಹೊಸ ಆವಿಷ್ಕಾರಗಳು ಸಾಧ್ಯವಿಲ್ಲ. ಪ್ರಶ್ನಿಸುವುದೇ ತಪ್ಪೆಂದಾದರೆ, ಅದಲ್ಲವೆ ಮತಾಂಧತೆ?

                  ಯಾರಾದರೂ ಸ್ಥಾಪಿತ ಸಿದ್ಧಾಂತವೊಂದನ್ನು ಪ್ರಶ್ನಿಸಿದರೆ ಅದೇಕೆ ಅಷ್ಟು ಕೋಪ? ಅದೇಕೆ ಇಷ್ಟೊಂದು ಅಸಹಿಷ್ಣುತೆ? ನಮ್ಮ ಹಿಂದಿನದರ ಕುರಿತಾಗಿ ಒಂದೆರಡು ಒಳ್ಳೆಯ ಮಾತನಾಡಿದರೆ, ಅದನ್ನು ಮೌಢ್ಯವೆನ್ನಲು ಅಷ್ಟೇಕೆ ಆತುರ ಮತ್ತು ಉತ್ಸಾಹ? ಅಷ್ಟೊಂದು ಕೀಳರಿಮೆ ಏತಕ್ಕೆ?
                  ಈ ರೀತಿ ಮಾಡುತ್ತಿರುವವರು, ಹಿಂದಿನದ್ದನ್ನೆಲ್ಲಾ ಓದಿ ಅರಗಿಸಿಕೊಂಡುಬಿಟ್ಟಿದ್ದಾರೆಂದೇನಿಲ್ಲ! ಹಾಗೆ ನೋಡಿದರೆ, ಅವರಲ್ಲನೇಕರಿಗೆ ಹಿಂದಿನ ವಿಷಯಗಳ ಜ್ಞಾನ ಸೊನ್ನೆ!!
                  ಹಾಗಿದ್ದೂ ಪಂಡಿತರಂತೆ ಸೋಗು ಹಾಕಿಕೊಂಡು ಮಾತನಾಡಿಬಿಡುತ್ತಾರೆ! ಇದಲ್ಲವೇ ಮೌಢ್ಯ!?

                  ಈ ರೀತಿಯ ವರ್ತನೆ ನೋಡಿದಾಗ ಖೇದವೆನಿಸುತ್ತದೆ. ಅಂತಹ ವರ್ತನೆಗೆ ಪ್ರತಿಕ್ರಿಯೆ ನೀಡಿ ಉಪಯೋಗವಿಲ್ಲ ಎಂದು ತಿಳಿದಿದ್ದರೂ, ಕೆಲವೊಮ್ಮೆ ತಡೆಯಲಾಗುವುದಿಲ್ಲ.

                  ಉತ್ತರ
                  • Balachandra
                    ಏಪ್ರಿಲ್ 13 2012

                    {ನನ್ನ ಪ್ರತಿಕ್ರಿಯೆ ಇವರ ವರ್ತನೆಯನ್ನು ಖಂಡಿಸುವುದಷ್ಟೇ ಆಗಿತ್ತು. ನಾನು ಲೇಖನದ ವಿಷಯವನ್ನು ಸಮರ್ಥಿಸುತ್ತಿಲ್ಲ ಅಥವಾ ತಿರಸ್ಕರಿಸುತ್ತಲೂ ಇಲ್ಲ.}
                    ಅವರಿವರ ವರ್ತನೆ ಬಿಡಿ. ಅವರ ವರ್ತನೆಗೆ ಪರೋಕ್ಷವಾಗಿ ಕಾರಣ ಲೇಖಕರೆ. ಕಾರಣವನ್ನು ನಾನು ಮತ್ತು ‘oduga’ ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಅವರು ಪ್ರಶ್ನಿಸಿದ್ದು ನಮ್ಮಲ್ಲಿ ಅಸಹನೆಯನ್ನು ಹುಟ್ಟು ಹಾಕಿಲ್ಲ. ಆದರೆ ಬರೆದ ವೈಖರಿ. ಅವರು ತಾರ್ಕಿಕ ಹಾಗೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಪ್ರಶ್ನೆಯನ್ನು ಮುಂದಿಟ್ಟಿದ್ದರೆ ಸತ್ಯದ ಆಳವನ್ನು ಅರಿಯಲು, ಅನುಕೂಲವಾಗಿರುತ್ತಿತ್ತು. ಹಾಗೆಯೇ ವೈಜ್ಞಾನಿಕವಾಗಿ ಬಹಳಷ್ಟು ವಿಚಾರಗಳನ್ನು ಇಲ್ಲಿಯ ಓದುಗರು ತಿಳಿದುಕೊಳ್ಳುತ್ತಿದ್ದರು. ಉದಾರಣೆಗೆ, ‘ವಿಕಾಸವಾದಕ್ಕೆ’ ಪುಷ್ಟಿಕೊಡುವ ಅಂಶಗಳು, ಕೊಡದ ಅಂಶಗಳು, ಅದರ ಮುಂದಿರುವ ಸವಾಲುಗಳು, ಇಲ್ಲಿಯ ವರೆಗೆ ವಿಕಾಸವಾದ ನಡೆದು ಬಂದ ಹಾದಿ ಇವುಗಳೆಲ್ಲವನ್ನು ಈಗ ಲಭ್ಯವಿರುವ ಮಾಹಿತಿಗಳ ಬುನಾದಿಯ ಮೇಲೆ ಲೇಖನ ಚರ್ಚಿಸಬಹುದಾಗಿತ್ತು. ಆದರೆ ಅವರು ‘ವಿಕಾಸವಾದ ಅಪವಾದ’ ಎಂಬುದಕ್ಕೆ ಅರುಹಿದ ಮಾಹಿತಿಗಳು ಸತ್ಯಾಸತ್ಯತೆಯಿಂದ ಕೂಡಿಲ್ಲ ಹಾಗೂ ಅದರ ಪ್ರಾಥಮಿಕ ಜ್ಞಾನವೂ ಲೇಖಕರಿಗಿಲ್ಲ ಎಂಬುದು ಯಾರಿಗಾದರೂ ತಿಳಿಯುತ್ತದೆ. ಇದು ಕೆಲ ಓದುಗರಲ್ಲಿ ಅಸಹನೆಯನ್ನು ಹುಟ್ಟುಹಾಕದೇ ಇನ್ನೇನು ಮಾಡಲು ಸಾಧ್ಯ? ಈ ತರಹದ ಪ್ರಾಥಮಿಕ ಜ್ಞಾನವನ್ನು ಹೊಂದಿರದ ಲೇಖನ ಇದರ ಬಗ್ಗೆ ಮಾಹಿತಿಯಿರದ ಅದೆಷ್ಟು ಜನರಲ್ಲಿ ಅಜ್ಞಾನವನ್ನು ತುಂಬಬಹುದು? ಹೀಗೆ ತೋಡಿಕೊಂಡ ಅಸತ್ಯ ಮಾಹಿತಿಗಳನ್ನು ನೀವು ಹೇಗೆ ತಿರಸ್ಕಲಾರಿರೋ ನಮಗೂ ಅರ್ಥವಾಗುತ್ತಿಲ್ಲ. ಅವರು ವಿಕಾಸವಾದ ಸುಳ್ಳು ಎಂದು ನಿರೂಪಿಸಲು ಈ ಲೇಖನ ಬರೆದಂತೆ ಇಲ್ಲ. ಅದರ ಬದಲು ಈ ವಿಜ್ಞಾನವೇ ಸುಳ್ಳು, ವೇದ ಪುರಾಣಗಳೇ ಸತ್ಯ ಎಂಬ ಭಾವನೆಯನ್ನು ತೋರಿಸುತ್ತವೆ. ಸರಿ ತೋರಿಸಲಿ ಬಿಡಿ, ನಮಗೇನು, ಆದರೆ ವಿಕಾಸವಾದದ ಬದಲು ಸತ್ಯ ಏನೆಂಬುದನ್ನು ಹೇಳಬಹುದಿತ್ತಲ್ವ?ಅದರಿಂದಲೂ ವಿಜ್ಞಾನಕ್ಕೆ ಹೊಸ ಆಯಾಮ ಸಿಗುತ್ತಿತ್ತು ಅಲ್ವ?
                    ನೋಡಿ ಈ ವಿಜ್ಞಾನ ಯುಗದಲ್ಲೂ ದೇವರ ಹೆಸರು ಹೇಳಿ exploit ಮಾಡುವ ಬಹಳಷ್ಟು ಮಂದಿಯನ್ನು ನಾವು ಇವತ್ತು ನೋಡ್ತಿದ್ದೀವಿ. ಆದರೆ ಒಂದು ವೇಳೆ ಇಂತಹ ಲೇಖನಗಳಿಗೆ sponsorship ಸಿಕ್ಕುಬಿಟ್ರೆ, ಗಲ್ಲಿ, ಗಲ್ಲಿಗಳಲ್ಲಿ, ಮಾರಮ್ಮ ದೇವಮ್ಮನ ಹೆಸರು ಹೇಳಿಕೊಂಡು ಬೇಳೆ ಬೇಯಿಸಿಕೊಳ್ಳೋರು ತಾಂಡವ ಆಡ್ತಾರೆ ಅಷ್ಟೇ. ‘ವಿಜ್ಞಾನ’ ಸುಳ್ಳು ಅಂದ್ರೆ ಸುಳ್ಳಾಗಲಿ ಬಿಡಿ, ಆದರೆ ವೈಜ್ಞಾನಿಕವಾಗಿ ಆಲೋಚಿಸುವ ಮನೋಭಾವ ಬೇಕು ಅಲ್ವ?ಅದೇ ಇಲ್ದೆ ಇದ್ರೆ ಬೇರೆಯವರು ನಮ್ಮ ಉಪಯೋಗ ತಗೋತಾರೆ ಅಷ್ಟೇ. ಈಗಲೇ ಬ್ರಿಟಿಷರಿಂದ, ಅರಬ್ಬರಿಂದ ಹೆಚ್ಚು ಕಡಿಮೆ 500-600 ವರ್ಷ exploit ಆಗಿದ್ದೀವಿ. ಇನ್ನು ಇಂತಹ ಮನೋಭಾವನ ಮುಂದುವರೆಸಿದರೆ ಏನಾಗಬಹುದು?

                    ಉತ್ತರ
                    • oduga
                      ಏಪ್ರಿಲ್ 14 2012

                      I would say explicitely that I agree with the above comment of ‘Balachandra’

          • @ಕುಮಾರ, ಬಾಶಾವಿಗ್ನಾನದ ರವಶ್ಟಾದರೂ ತಿಳಿದಿದ್ದರೆ ಕನ್ನಡಿಗನೊಬ್ಬನಿಗೆ ಕನ್ನಡ ಹೇಳಿಕೊಡೋ ಸಾಹಸ ಮಾಡುತ್ತಿದ್ದಿರಾ? ಕಪ್ಪೆ ಸಾವುರ್ಕಾಲಿಗೆ ಕುಪ್ಪಳಿಸಿ ನಡಿಗೆ ಹೇಳಿಕೊಟ್ಟಂತೆ. ನೀವು ಬಾಶೆಯ ವಿಶಯದಲ್ಲಿ ನನ್ನನ್ನ ಆಡಿಕೊಂಡಿದ್ದೂ, ಅಬಿಗಾರರು ಕಟ್ಟೆಪುರಾಣಗಳನ್ನ ಮುಂದಿಟ್ಟು ವಿಗ್ನಾನವನ್ನ ಆಡಿಕೊಂಡಿದ್ದೂ ಎರಡೂ ಒಂದೇ. ಅದಿರಲಿ, ವೇದ ತಿಳಿಯೋದಿಕ್ಕೆ ಸಂಸ್ಕೃತದ ತಿಳುವಳಿಕೆ ಇರಬೇಕೆ? ಅದೂ ಸಾಕಲ್ಲವೇ? ಬಾಶಾಂತರ ಅನ್ನೋದಿದೆ ಗೊತ್ತಿದೆಯೇ? ಬಾಶಾವಿಗ್ನಾನದ ಬಗ್ಗೆ ಬಹಳ ಹೇಳಿದಿರಿ? ಸಂಸ್ಕೃತವೂ ಸಾಕಾಗದು ಅಂದರೆ ಎನರ್ತ? ವೇದದ ಬಾಶೆ ಸಂಕೀರ್ಣ ಅಂತಲೇ? ಹಲವು ಅರ್ತಗಳು ಬರುತ್ತವೆ ಅಂತಲೇ? ಜೋತಿಸ್ಯದ ಬಗ್ಗೆ ಮೊನ್ನೆ ಟೀವಿಯಲ್ಲಿ ಜೋತಿಸಿ ಒಬ್ಬ ಹೀಗೆ ಹೇಳಿದ! (ಇರಬಹುದು! ಇಲ್ಲವಾದಲ್ಲಿ ಕಾಲಕ್ಕೆ ತಕ್ಕಂತೆ, ಅನೂಕೂಲಕ್ಕೆ ಅನುವಾಗುವಂತೆ ಅರ್ತೈಸಲು ಸಾದ್ಯವಾಗುತ್ತಿರಲಿಲ್ಲ.) ವೇದ ಸಂಸ್ಕೃತಗಳ ಬಗ್ಗೆ ನೀವೇಳುವುದೇ ನಿಜವಾದಲ್ಲಿ, ಸಂಸ್ಕೃತ ಬಳಕೆಗೆ ಯೋಗ್ಯವಲ್ಲದ ಬಾಶೆ ಎಂದೂ, ಅದನ್ನ ಕಲಿಯುವುದು ವ್ಯರ್ತ ಎಂದೂ, ವೇದಗಳು ಆದುನಿಕ ವಿಗ್ನಾನದಂತೆ ಸರಳ ಸುಂದರ ಅಲ್ಲವೆಂದೂ ಆಯಿತು. ಕಿವಿಯಲ್ಲಿ ಮಂತ್ರ ಹೇಳಿಕೊಡುತ್ತಿದ್ದವರಿಂದ ವೇದ-ಪುರಾಣಗಳೆಂಬ ಅಪ್ಪ ಹಾಕಿದ ಆಲದ ಮರ ಬಳುವಳಿಯಾಗಿ ಬಂದಿದೆ. ನೇಣಿಗ ಮಾತ್ರ ಬಳಕೆಯಾಗಬಲ್ಲ ಸಂಸ್ಕೃತ ಎಂಬ ಹಗ್ಗ ಇದೆ. ನಿಮ್ಮ ಸ್ವಂತ ಬುದ್ದಿಯನ್ನ ನೇಣು ಹಾಕಿಬಿಡಿ. ಮಾಡಿದ್ದುಣ್ಣೋ ಮಾರಾಯ. ನಾನಂತೂ ವಿಗ್ನಾನದ ದೀವಿಗೆ ಹಿಡಿಯುತ್ತೇನೆ.

            ಉತ್ತರ
            • ಏಪ್ರಿಲ್ 13 2012

              ಸಿದ್ದೇಗೌಡ ವಳೆಗೆರೆಹಳ್ಳಿ ಬೋರೇಗೌಡರೇ,

              ಅಪ್ಪಟ ಕನ್ನಡ ಯಾವುದೆಂದು ನಿಮ್ಮಿಂದ ಕಲಿಯಬೇಕಾಗಿದೆ, ತಮ್ಮದು ಹಳಗನ್ನಡವೋ ನಡುಗನ್ನಡವೋ ಹೊಸಗನ್ನಡವೋ ಅರಿಯೆ! ಇರಲಿ ನಿಮಗೆ ನಿಮ್ಮ ’ವಿಗ್ನಾನ’ವೇ ದೊಡ್ಡದು, ನಮಗೆ ನಮ್ಮ ವೇದವಿಜ್ಞಾನವೇ ದೊಡ್ಡದು. ವೇದಗಳನ್ನು ಯಾರೂ ಕಿವಿಯಲ್ಲಿ ಹೇಳುತ್ತಾ ಬಂದಿಲ್ಲ, ವೇದಕಾಲದಿಂದ ನಡೆದುಬಂದ ಪ್ರತಿಯೊಂದೂ ಸಂಸ್ಕಾರಕ್ಕೂ ಅದರದ್ದೇ ಆದ ರೀತಿರಿವಾಜುಗಳನ್ನು ಋಷಿಮುನಿಗಳು ಅಪ್ಪಣೆಕೊಡಿಸಿದ್ದಾರೆ. ನಾನು ಎದೆತಟ್ಟಿ ಹೇಳಬಲ್ಲೆ ಏನೆಂದರೆ: ಆರ್ಷೇಯವಾದ ವೇದವಿಜ್ಞಾನದ ಮುಂದೆ ಇಂದಿನ ವಿಜ್ಞಾನ ನಗಣ್ಯ. ಅರ್ಥಮಾಡಿಕೊಳ್ಳಲಾಗದ್ದಕ್ಕೆ ಸಂಸ್ಕೃತವನ್ನು ಸತ್ತಭಾಷೆ ಎಂದು ಅದೆಷ್ಟೋ ಜನ ಆಡಿಕೊಳ್ಳುತ್ತಿದ್ದಾರೆ. ನಾನು ನಿಮಗೆ ಉತ್ತರಿಸುವ ಪ್ರಮೇಯ ಇರಲಿಲ್ಲ, ಈ ವಿಷಯದಲ್ಲಿ ನಾನು ಯಾರಿಗೂ ಉತ್ತರಿಸುವುದನ್ನೂ ನಿಲ್ಲಿಸಿದ್ದೆ, ಆದರೆ ಮತ್ತೆ ನನ್ನ ಹೆಸರನ್ನು ನಿಮ್ಮ ಪ್ರತಿಕ್ರಿಯೆಯಲ್ಲಿ ಅಡಕಮಾಡಿ ಆಡಿದ್ದೀರಿ. ಲೇಖನ ಬರೆಯುವಾಗ ಏನು ಬರೆಯುತ್ತಿದ್ದೇನೆಂಬ ಅರಿವಿರದ ಶಿಶುವಾಗಿ ಬಾಯಲ್ಲಿ ಬೆರಳಿಟ್ಟುಕೊಂಡು ಬರೆದಿಲ್ಲಾ ಎಂಬುದನ್ನು ತಿಳಿದು ನಿಮ್ಮ ನಾಲಿಗೆಗೆ ಸ್ವಲ್ಪ ಕಡಿವಾಣಹಾಕಿ ಮಾತಾಡಿ. ಅಷ್ಟಕ್ಕೂ ತಾವು ಎಷ್ಟು ವೇದಗಳ ಯಾವಯಾವ ಭಾಗಗಳನ್ನು ಓದಿದ್ದೀರಿ, ಸಂಸ್ಕೃತದ ಒಂದೆರಡು ಪದಗಳಿಗೆ ನನಗೆ ಅರ್ಥಹೇಳಬಲ್ಲಿರೇ? ಯಾಕೆ ವ್ರಥಾ ನಿಮ್ಮಂಥವರಿಗೆ ಉತ್ತರಿಸಬೇಕು? ನಮ್ಮ ಸಮಯ, ಸಂಯಮ ಎರಡನ್ನೂ ಕೆಡಿಸಿಕೊಂಡು ಅನವಶ್ಯಕವಾಗಿ ಹಾಗೆ ಮಾಡಬೇಕೆ ? ನಿಮ್ಮ ಮಾತುಗಳನ್ನೇ ಲಕ್ಷ್ಯಿಸದಿದ್ದರಾಯ್ತು!

              ನಿಮಗೆ ತಾಕತ್ತಿದ್ದರೆ ನಾನು ಒಡ್ಡಿದ ಪ್ರಶ್ನೆಗಳಿಗೆ ಉತ್ತರಿಸಿ, ಅದನ್ನು ಬಿಟ್ಟು ಬಾವಿಯ ಕಪ್ಪೆ ನೀವಾಗಿದ್ದೀರಿ ಎಂದು ಯಾಕೆ ಬಹಿರಂಗವಾಗಿ ಎಲ್ಲರೆದುರು ತೋರಿಸಿಕೊಳ್ಳುತ್ತೀರಿ? ಲೇಖನವನ್ನು ಬರೆದಿದ್ದು ಒಂದು ಧನಾತ್ಮಕ ಅವಲೋಕನದಿಂದ. ಹೇಳಿ ನಿಮ್ಮ ’ವಿಗ್ನಾನ’ಕ್ಕೆ ಮಾನವ ಚರ್ಮದಲ್ಲಿ ಏಳುಪದರಗಳಿವೆ ಎಂದು ಮೊದಲೇ ಯಾಕೆ ತಿಳಿಯಲಿಲ್ಲ; ಅದನ್ನು ವೇದ ವೇದಯುಗದಲ್ಲೇ ಹೇಳಿತ್ತಲ್ಲಾ?

              ಸುಮ್ನೇ ಕುತರ್ಕಕ್ಕೆ ನಾಂದಿಹಾಡಿಕೊಂಡು ಹಾರಾಡಬೇಡಿ. ಕುಮಾರ್ ಹೇಳುವುದರಲ್ಲಿ ಏನಿದೆ ಅಂತ ಗ್ರಹಿಸಿನೋಡಿ. ಸಗಣಿಯಪ್ಪಾ ಅದು ತಿನ್ನಬೇಡ ಎಂದರೆ ಇಲ್ಲಾ ಇಲ್ಲಾ ಕೇಸ್ರೀಬಾತು ಎಂದು ತಿಂದನಂತೆ ಅನ್ನೋ ಹಾಗೇ ನಿಮ್ಮ ದಾರಿಗೆ ನಮ್ಮನ್ನು ಎಳೆಯಬೇಡಿ,ನಮ್ಮ ಚಿಂತನೆ ನಮಗಿರಲಿ. ನೀವು ತಿಳಕೊಂಡರೆಷ್ಟು ಬಿಟ್ಟರೆಷ್ಟು. ಇಷ್ಟು ಸಾಕು.

              ಉತ್ತರ
              • ನಾನು ಯಾರಿಗೂ ಕನ್ನಡವನ್ನ ಕಲಿಸಿಕೊಡಲಿಲ್ಲ. ಯಾರ ಕನ್ನಡವನ್ನೂ ಈಗಳೆಯಲಿಲ್ಲ. ಕನ್ನಡಿಗರಾಡುವ, ಬರೆಯುವ ಎಲ್ಲಾ ಕನ್ನಡವೂ ಸರಿಯೇ, ಸಮವೇ. ಅದು ಆದುನಿಕ ಬಾಶಾವಿಗ್ನಾನದ ನಿಲುವು. ಅಂತೆಯೇ ನನ್ನ ನಿಲುವು ಕೂಡ. ಆದುನಿಕ ವಿಗ್ನಾನವು ಹಿಂದಿನ ಎಲ್ಲಾ ತಿಳುವಳಿಕೆಗಳಿಂದ ಬೆಳೆದು ಬಂದಿದೆ. ವೇದಗಳಲ್ಲಿ ವಿಗ್ನಾನ ಇದ್ದಲ್ಲಿ ಆದುನಿಕ ವಿಗ್ನಾನ ಅದರಿಂದಲೂ ಪಡೆದಿರುತ್ತದೆ. ವೇದ-ವಿಗ್ನಾನ ಬೇರೆ ಎಂಬುದಿಲ್ಲ. ವಿಗ್ನಾನ ಒಂದೇ. ವೇದಗಳಲ್ಲಿ ಎಶ್ಟರಮಟ್ಟಿಗೆ ವಿಗ್ನಾನ ಇದೇ ಎಂಬುದು ಪ್ರಶ್ನೆ. ನನ್ನ ಆಶಕ್ತಿ ವಿಗ್ನಾನ. ವೇದಗಳಲ್ಲಿ ವಿಗ್ನಾನ ಇದ್ದಲ್ಲಿ ಅದು ನನಗೆ ಎಟುಕಿಯೇ ಇರುತ್ತದೆ. ರೇಕಾಗಣಿತ ಕಲಿಯುತ್ತಿದ್ದಾಗ ಆರ್ಯಬಟ ಎಟುಕಿದ ಹಾಗೆ. ವೇದ-ವಿಗ್ನಾನ ಮೇಲು ಎಂದು ಬೇಕಿದ್ದರೆ ಎದೆ ತಟ್ಟಿ ಹೇಳಿ. ಆದರೆ, ಎದೆ ನೋವಾದರೆ ಮಾತ್ರ ಆದುನಿಕ ವಿಗ್ನಾನದಿಂದ ಬಂದ ಮದ್ದನ್ನೇ ತಿನ್ನಿ! ನಿಮ್ಮ ಒಳಿತಿಗೇ ಹೇಳುತ್ತಿದ್ದೇನೆ! ಸಂಸ್ಕೃತ ನನಗೆ ಬರದು. ನನಗೆ ಸಂಸ್ಕೃತದಿಂದ ಆಗಬೇಕಾದ್ದು ಏನೂ ಇಲ್ಲ. ಸಂಸ್ಕೃತದ ಮಂತ್ರ ಕಲಿತು ನಾನ್ ತಟ್ಟೆ ಕಾಸಿಗೆ ಗಂಟೆ ಬಾರಿಸಬೇಕಿಲ್ಲ. ಜೋತಿಸ್ಯದ ಸುಳ್ಳು ಹೇಳಿ ವಂಚನೆಯಿಂದ ಹೊಟ್ಟೆ ಹೊರೆಯಬೇಕಾಗೂ ಇಲ್ಲ. ನನ್ನ ತಿಳುವಳಿಕೆಗೆ, ಕಲಿಕೆಗೆ, ಅನ್ನ ಹುಟ್ಟಿಸೋಕೆ, ನಾಡು ಕಟ್ಟೋಕೆ, ತಾಯ್ನುಡಿ ಕನ್ನಡ ಮತ್ತು ಇಂಗ್ಲಿಶ್ ಕಲಿತಿದ್ದೇನೆ. ಜಗತ್ತಿನಲ್ಲಿ ಎಲ್ಲಿಗೊದರೂ ಆಯಾ ಜಾಗದ ನುಡಿಯನ್ನ ಕಲಿಯುತ್ತೇನೆ. ಇದುವರೆಗೆ ನಾ ಕಂಡ ಪ್ರಪಂಚದಲ್ಲಿ ಸಂಸ್ಕೃತವೆಲ್ಲೂ ಕಂಡಿಲ್ಲ. ಸತ್ತ ಮೇಲೆ ಸಂಸ್ಕೃತ ಮಾತಾಡುವ ದೇವರು-ದಿಂಡಿರನ್ನು ಕಾಣಲು ಅದರಲ್ಲಿ ನಂಬಿಕೆಯೂ ಇಲ್ಲ. ಆದರೂ ನೀವು ಎರಡು ಪದ ಕೇಳಿದಿರಿ. ಹೇಳಲೇ ಬೇಕು,
                ಸಂಸ್ಕೃತಂ = ನಾಮಪದ. ಸತ್ತನುಡಿ
                ಕನ್ನಡ = ನಾಮಪದ. ಚೆನ್ನುಡಿ
                ಚರ್ಮದಲ್ಲಿ ಏಳು ಪದರುಗಳಿವೆ ಅನ್ನೋದು ಪೂರ್ಣ ಮಾಹಿತಿ ಅಲ್ಲ. ತಪ್ಪು ಅನ್ನಲೂಬಹುದು. ಚರ್ಮವನ್ನ ಅಡ್ಡ ಕತ್ತರಿಸಿ, ಬಣ್ಣ ಬಳಿದು, ಸಾದಾರಣ ಸೂಕ್ಸ್ಮದರ್ಶಕದಲ್ಲಿ ನೋಡಿದಾಗ ಮೂರು, ಅತವಾ ಏಳು ಅತವಾ ಎಂಟು ಪದರಗಳು ಇವೆ ಅನ್ನಿಸುತ್ತದೆ. ಆದರೆ, ಇನ್ನೂ ಶಕ್ತಿಶಾಲಿ ಸೂಕ್ಶ್ಮದರ್ಶಕಗಳನ್ನ ಉಪಯೋಗಿಸಿದರೆ ಇನ್ನೂ ಹೆಚ್ಚು ಪದರಗಳು ಕಾಣುತ್ತವೆ. ಅದು ಸಾವಿರಾರು ಸಂಕ್ಯೆಯಲ್ಲಿ ಇದೆ! ಮುಕ್ಯವಾಗಿ, ಇದೇ ಸಂಕ್ಯೆಯ ಪದರುಗಳಿವೆ ಅಂತ ಹೇಳಲು ಆಗುವುದೇ ಇಲ್ಲ. ಯಾಕೆಂದರೆ ಒಂದೊಂದು ಜಾಗದಲ್ಲೂ ಬೇರೆ ಬೇರೆ ಸಂಕ್ಯೆಯ ಪದರುಗಲಿದ್ದು, ಯಾವ ಒಂದು ಪದರೂ ತಾನಾಗೇ ಇಡೀ ದೇಹವನ್ನ ಸುತ್ತುವುದಿಲ್ಲ. ಇದು ವಿಗ್ನಾನ. ಈಗ ಹೇಳಿ ಸಗಣಿ ತಿನ್ನುತ್ತಾ ಇರೋರು ಯಾರು!? ಸಗಣಿ ವಿಶಯ ಬಿಡಿ, ಗಂಜ್ಲ ಕುಡಿಯೋರು ಯಾರು ಅಂತ ಮಾತ್ರ ಎಲ್ಲರಿಗೂ ಗೊತ್ತು!

                ಉತ್ತರ
                • odugaoduga
                  ಏಪ್ರಿಲ್ 14 2012

                  ಸಿದ್ದರಾಜ್ ನೀಮು ಹೆಂತ ಏಳಿದರು ಕನ್ನಡವೆ ಅದಕೆ ಕುಸಿಯಗುತಿದೆ ನಗೆಬರುತಿದೆ ಬಾಯಿತುಂಬ ಹಗೆ ನಿಮ್ಮಜೊತೆ ಅರಟಲು ಮನಸಗ್ತಿದೆ.ನಿವು ನಿಜವದ ಕನ್ನಡ ಕುವರ ಹೆಮ್ಬೊದರಲಿ ಸಮ್ಸೆಯವೆ ಹಿಲ್ಲಾ.ಬಾಶೆ ಏಗೇ ಬರೆದರು ಬಾಶೆ ಎಣ್ಣೆಕುಡಿದು ಬರೆದರು ಬಾಶೆಯೆ ಅದು ಬಿಟ್ಟು ಹಾ ಸಂಸ್ಕ್ರುತ ಹೆಲ್ಲಾ ಯಾಕೆ. ನಿಮ್ಮ ಬಾಶೆಯ ಬಹಳ ಮೆಚ್ಚಿದ್ದನೆ. ನಾನು ನಿಮ್ಮಂತೆ ಒಬ ಕನ್ನಡದ ಅಬಿಮಾನಿ ಬಾಶೆಯ ಪದಗಳ ಬಳಸಿರೊದು ನೊಡಿದೆ ಅಣಾ ಬಳ ಸಮ್ತೊಸ. ನಿಮ್ಮಂತಾ ಜನ ಕನ್ನಡ ಬಾಶೆಯ ಹುದ್ದಾರಕ್ಕೆ ಬೆಕು. ನಿಮಗೆ ಸಾಯ ಬೆಕಿದ್ದರೆ ಏಳಿ ನನು ಕೊಡುವೆ. ಅವರಿಗೆಲಾ ವಿಗ್ನಾನ ಗೊತ್ತಿಲ್ಲ್ ನಿವು ತುಂಬ ಓದಿದವರು ಹನ್ಸುತ್ತೆ. ಅಣೊ ನಮುಸ್ಕರ

                  ಉತ್ತರ
                  • ಪಾಪ, ಸಂಸ್ಕೃತ ಇದ್ವಾಮ್ಸುರ್ಗೆ ಬಲ್ ಬೇಜಾರಾಗೊಗದೆ. ಅಂಗೆ ಮರೆಲ್ ನಿಂತ್ ಮಾತಾಡ್ತಾ ಇರಿ. ಕನ್ನಡನ ನೀವ್ ಯಂಗೆ ಯಕ್ಕುಡ್ಸ್ ಮಾತಾಡುದ್ರೂ ಸಂಸ್ಕ್ರುತುದ್ ಸ್ಲೋಕಗಳ್ಗಿಂತ ೭ ಪದರ ವಾಸಿ! ಸಾಯಾ ಮಾಡಿರ ನೊಂದವರೇ? ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯನ ಮುಚ್ಚಿ ಅದ್ರು ದುಡ್ಡ ಕನ್ನಡ, ಕೊಡವ, ತುಳು ನುಡಿಗಳ ಸಂಸೋದನೆಗೆ ತಿರುಗ್ಸಿ. ಸಂಸ್ಕ್ರುತುದ್ ಇದ್ವಾಮ್ಸರಿಗೆನ್ ತಾಪತ್ರೆ ಆಗುದಿಲ್ಲ. ಪರ್ಪಂಚ್ದಲ್ ಇನ್ನೂ ೧೦೦ ಸಂಸ್ಕೃತ ಇಸ್ವ ಇದ್ಯಾಲಯ ಅವೇ. ಗುಳೆ ಒಯ್ತರೆ. ಇಲ್ಲಾಂದ್ರು ಜ್ಯೋತಿಸ್ಯ ಮಾಡ್ಕೊಂಡ್ ಕಾಸ್ ಮಾಡ್ಕೊತಾರೆ. ಬಾಯ್ ಬುಟ್ರೆ ಸುಳ್ ಹೇಳೋರ್ ಹೊಟ್ಟೆಗೆನ್ ಕಮ್ಮಿ ಆಗುದಿಲ್ಲ. ನೀವ್ ಇಸ್ಟ್ ಸಾಯಾ ಮಾಡುದ್ರೆ ಕನ್ನಡ, ತುಳು, ಕೊಡವನೂ ಉಳೀತವೆ, ಸತ್ಯನೂ ಉಳಿತದೆ.

                    ಉತ್ತರ
                    • ಏಪ್ರಿಲ್ 14 2012

                      ಸಂಸ್ಕೃತ ಎಂಬುದು ಭಾಷೆಗಳೆಲ್ಲದರ ತಾಯಿ ಎಂದು ಹೇಳುತ್ತಾರೆ. ಅದು ಸರ್ವಭಾಷಾಮಯೀ ಭಾಷಾ ಎಂದೇ ಖ್ಯಾತವಾಗಿದೆ. ಅದನ್ನರಿತೇ ತರಳಬಾಳು ಸ್ವಾಮಿಗಳು ಸಂಸ್ಕೃತವನ್ನು ಬಹಳವಾಗಿ ಅಧ್ಯಯನ ಮಾಡಿ ಅದನ್ನು ಗಣಕಯಂತ್ರಕ್ಕೆ ಅಳವಡಿಸುವಲ್ಲೂ ಮುಂದಾದರು! ಅವರ ಆ ಪ್ರಯತ್ನ ಶ್ಲಾಘನೀಯ. ಅವರು ಪ್ರತೀವಾರ ವಿಜಯಕರ್ನಾಟಕದಲ್ಲಿ ’ಬಿಸಿಲು ಬೆಳದಿಂಗಳು’ ಅಂಕಣವನ್ನು ಸಂಸ್ಕೃತ ಶ್ಲೋಕಗಳನ್ನೋ ಪದಗಳನ್ನೋ ಅಡಕವಾಗಿಸಿಯೇ ಬರೆಯುವುದನ್ನು ನೋಡಿದ್ದೇನೆ; ಲೇಖನ ಸಮೃದ್ಧವಾಗಿರುತ್ತದೆ.

                      ಸಂಸ್ಕೃತ ಭಾಷೆಯನ್ನು ಕಲಿಯಲಾಗದಕ್ಕೆ ಈ ಸಿದ್ದರಾಜು ಎಂಬ ವ್ಯಕ್ತಿ ಒದ್ದಾಡುತ್ತಾ ಆ ಭಾಷೆಯನ್ನೂ ಮತ್ತು ಅದನ್ನು ಬಳಸಿ ಪೂಜೆ ನಡೆಸಿ ಲೋಕದ ಕ್ಷೇಮವನ್ನು ಬಯಸುವ ಪುರೋಹಿತವರ್ಗವನ್ನು ಅತಿಯಾಗಿ ಆಡಿಕೊಳ್ಳುತ್ತಿರುವುದು ಆತನ ಮನಸ್ಸೆಷ್ಟು ’ಪ್ರಾಂಜಲ’ ಎಂಬುದನ್ನು ತೋರಿಸುತ್ತದೆ. ರಾಜರುಗಳ ಕಾಲದಲ್ಲಿ ಅವರು ಯಾವುದೇ ವರ್ಗಕ್ಕೆ ಸೇರಿದ್ದರೂ ಅವರುಗಳಿಗೆ ಸಂಸ್ಕೃತದ ಬಗ್ಗೆ ಅಪಾರ ಗೌರವವಿತ್ತು; ವೇದ-ಶಾಸ್ತ್ರಗಳ ಬಗ್ಗೆ ಶ್ರದ್ಧೆಯೂ ಇತ್ತು. ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜ ಒಡೆಯರ್ ಸೇರಿದಂತೇ ಹಲವು ಅರಸರು ಸಂಸ್ಕೃತವನ್ನು ಓದಿದ್ದರು. ಲೋಕಹಿತಬಯಸಿದ ಮಹಾರಾಜರುಗಳು ಸಂಸ್ಕೃತ ಪಂಡಿತರಿಗೆ ವಿದ್ವತ್ತನ್ನವಲಂಬಿಸಿ ಬೆಂಬಲ ಕೊಡುತ್ತಿದ್ದರು, ಆಸ್ಥಾನಗಳಲ್ಲಿ ಪಂಡಿತರುಗಳನ್ನು ನೇಮಿಸಿಕೊಳ್ಳುತ್ತಿದ್ದರು.

                      ದೇವಸ್ಥಾನಗಳಲ್ಲಿ ಆರತಿ ಬೆಳಗಿ ಅದನ್ನು ಭಕ್ತರ ಮುಂದೆ ಹಿಡಿಯುವಾತ ಭಿಕ್ಷುಕನಂತೇ ಈ ವ್ಯಕ್ತಿಗೆ ಕಂಡಿದ್ದು ಹಾಸ್ಯಾಸ್ಪದವಾಗಿದೆ ಮತ್ತು ಈತನ ಕೆಟ್ಟ ಮನೋಸ್ಥಿತಿಯ ದ್ಯೋತಕವಾಗಿದೆ. ಇನ್ನು ಜ್ಯೋತಿಷ್ಕರು “ಬನ್ನಿ” ಎಂದು ಯಾರನ್ನೂ ಕರೆದಿದ್ದು ನಾನಂತೂ ನೋಡಿಲ್ಲ, ಯಾರೋ ಒಂದೆರಡು ಅರೆಕಲಿತ ಜ್ಯೋತಿಷ್ಕರು ಮಾಧ್ಯಮಗಳಲ್ಲಿ ಕೂತು ತಪ್ಪು ಹೇಳಿಕೆಗಳನ್ನು ನೀಡಿದ ಮಾತ್ರಕ್ಕೆ ಸುಳ್ಳುಹೇಳಿ ದುಡ್ಡುಮಾಡುವವರು ಎನ್ನುವ ಈತ ಎಷ್ಟರ ಮಟ್ಟಿಗೆ ಸಾಚಾ ಎಂಬುದು ನನಗಂತೂ ತಿಳಿಯುತ್ತಿಲ್ಲ. ಅಷ್ಟಾಗಿ ದೇವಸ್ಥಾನಕ್ಕೋ ಜ್ಯೋತಿಷರ ಬಳಿಗೋ ಇಂಥವರು ಹೋಗದಿದ್ದರೆ ಆಗುತ್ತಿತ್ತಲ್ಲ ಅಲ್ಲವೇ?

                      ಸಂಸ್ಕೃತವನ್ನು ಓದುವುದು ಬರೇ ಹೊಟ್ಟೆಪಾಡಿಗೆ ಎಂಬ ಹೊಲಸು ಹೇಳಿಕೆಯನ್ನು ನೀಡಿದ ಈತನಿಗೆ ’ವಿದ್ವಾನ್’ ಪದವಿ ನೀಡಬಹುದಾಗಿದೆ. ಲೇಖನ ಮುಖ್ಯ ಭೂಮಿಕೆ ಬಿಟ್ಟು ಬ್ರಾಹ್ಮಣಶಾಹಿ ಮತ್ತು ಪುರೋಹಿತಶಾಹಿ ಎಂಬುದನ್ನು ಪ್ರಸ್ತಾಪಿಸಿ ದೇವಸ್ಥಾನ ಮತ್ತು ಗಂಟೆಗಳು ಎಂದೆಲ್ಲಾ ಹೇಳಿ ತಮ್ಮ ತೆವಲು ತೀರಿಸಿಕೊಳ್ಳುವ ಹಲವು ಜನರಿಗೆ ಲೇಖನದ ಸಂದೇಶವೇನು ಎಂಬುದನ್ನು ಅರ್ಥಮಾಡಿಕೊಳ್ಳಲಾಗದ ಅಪರಿಮಿತ ಸಾಮರ್ಥ್ಯ! ನಾನು ಪ್ರತಿಕ್ರಿಯಿಸುವುದನ್ನೇ ನಿಲ್ಲಿಸಿದ್ದರೂ ಇಂತಹ ಮೂರ್ಖರು ತೋರಿದ ಜನಾಂಗ ದ್ವೇಷದ, ಭುಗಿಲೆದ್ದ ಪ್ರತಿಕ್ರಿಯೆಗಳಿಗೆ ಅನಿವಾರ್ಯವಾಗಿ ಉತ್ತರಿಸಿದ್ದೇನೆ. ನಾಲಿಗೆ ಸಿಗಿದರೆ ನೆಟ್ಟಗೆ ನಾಲ್ಕಕ್ಷರ ಇಲ್ಲದ ಮೂರ್ಖರನ್ನು ತಿದ್ದುವುದು, ತೆನ್ನಾಲಿ ರಾಮ ’ಕರಿನಾಯಿಯನ್ನು ತೊಳೆದು ಬಿಳಿನಾಯಿ’ ಮಾಡಿದಂತೇ ಎನಿಸುತ್ತಿದೆ! ದೇವರೇ ಅಂಥವರ ಅಂಧಕಾರವನ್ನು ಕಳೆಯಲಿ ಎಂದು ಪ್ರಾರ್ಥಿಸುತ್ತಾ, ಏನಾದರೂ ಬರೆದುಕೊಳ್ಳಲಿ ಎಂದು ಇಲ್ಲಿಗೆ ಇದಕ್ಕೆ ಇತಿಶ್ರೀ ಹಾಡುತ್ತಿದ್ದೇನೆ.

                    • ಮಾತ್ಮಾತಲ್ಲಿಗಳೇ,
                      ಸಂಸ್ಕೃತ ಎಂಬುದು ಬಾಶೆಗಳ ತಾಯಿ?? ಸುಳ್ಳು!! ಅದಕ್ಕೆ ಹೇಳಿದ್ದು, ಬಾಯಿ ತೆಗೆದರೆ ಸುಳ್ಳು ಅಂತ. ಮಣ ಸುಳ್ ಮಾತಾಡ್ತೀರಲ್ಲ, ಎಕರೆ ಅಗಲ ಸುಳ್ ಬರೀತೀರಲ್ಲ, ಮಾಡಿದ್ದನ್ನೇ ಮಾಡಿ ಬೇಜಾರಾಗುದಿಲ್ವೆ? ೧೦೦ ವರ್ಷದ ತಟ್ಟೆ ಕಾಸ್ ಕೊಡ್ತೀನಿ ಅಂದ್ರೂ ಸಂಸ್ಕೃತ ಕಲಿಯೋಕೆ ನಾ ವಲ್ಲೆ. ಬಿಕ್ಸುಕನನ್ನ ಕೀಳು ಅನ್ನಬೇಡಿ. ಬಿಕ್ಸುಕ ಸತ್ಯವಂತ, ಬಿಕ್ಶೆ ಕೇಳ್ ಬಿಕ್ಶೆ ಈಸ್ಕೊತನೆ. ದೇವ್ರುಗ್ ಕಾಸಾಕಿ ಅಂತೇಳಿ ಜೋಬ್ಗೆ ಇಳ್ಸೋನಲ್ಲ. ಜೋತಿಸಿಗಳಲ್ಲಿ ಯಾರಾದ್ರೂ ಒಂದು ಸತ್ಯ ಹೇಳಿದ್ರೆ ಅಂಚ್ಕೋಳಿ ಅಯ್ನೋರೆ.
                      ಬರೀ ಹೊಟ್ಟೆ ಪಾಡಿಗೆ ಅಂದೇ ಅಂದುಕೊಂಡ್ರ? ಇಲ್ಲಾ ಇಲ್ಲಾ, ವಸಿ ದುರಂಕಾರ ಮೆರೆಯೋಕೂ ಬಳಸಬೋದು! ನಾನ್ ಲೇಕನದ್ ಬಗ್ಗೆಯೇ ಮಾತಾಡಿದ್ದು. ನಿಮ್ಮಂತವರು ಯಾರೋ ನನ್ನ ಕನ್ನಡವನ್ನ ಈಗೆಳೆದದ್ದು ಬೂಮಿಕೆಯಿಂದ ಆಚೆ ಹೋಗಿದ್ದು. ಸಮಾನತೆ ಬಯಸೋದು ಜನಾಂಗ ದ್ವೇಶ ಅಲ್ಲ ಮಡಿವಂತ್ರೆ. ಜನಾಂಗ ದ್ವೇಶ ಏನಿದ್ರೂ ನಿಮ್ ಸ್ವತ್ತು. ಕರಿನಾಯಿ ಕೀಳು, ಬಿಳಿನಾಯಿ ಮೇಲು ಮಾಡಿದ ಮಾಹಾನುಬಾವ್ರು ನೀವು. ಯಾವುದನ್ ಬಿಟ್ಟೀರಿ? ನೀವು ನನ್ನ ನಾಲಿಗೆಯನ್ನ ಕೊಡಲಿಯಿಂದಲೂ ಸಿಗಿಯಲಾರಿರಿ, ಸಂಸ್ಕೃತ ಕಲಿಸಿಯೂ ಸಿಗಿಯಲಾರಿರಿ.

    • ಏಪ್ರಿಲ್ 11 2012

      ಬಾಲಚಂದ್ರ ಅವರೇ, ನಿಮ್ಮೀ ಮಾತು ೧೦೦% ಒಪ್ಪಬಹುದಾದಂತಹದು!

      ಉತ್ತರ
  15. sourav
    ಏಪ್ರಿಲ್ 10 2012

    illina charchegalu adhbuthavagive, bahalashtu vishayagala bagge tilidantayitu. intaha sukshma lekhanavannu abhigaradalli badisida v r bhat avarige abhinandanegalu, charche maduttiruva ellarigu dhanyavadagalu namage mattashtu vishaya tiliyali,

    ಉತ್ತರ
  16. ಏಪ್ರಿಲ್ 10 2012

    ಪ್ರಿಯ ಓದುಗರೇ, ನಿಮ್ಮ ಯಾವುದೇ ತರ್ಕಕ್ಕೆ ಸ್ವಾಗತ, ಪ್ರತಿಕ್ರಿಯೆ ವೈಯ್ಯಕ್ತಿಕ ಮಟ್ಟಕ್ಕೆ ಇಳಿದು ಕುತರ್ಕವಾಗದಿರಲಿ ಅಷ್ಟೇ! ನನ್ನ ವಾದವನ್ನು ನಾನು ಮಂಡಿಸಿದ್ದೇನೆ, ನನ್ನಲ್ಲಿರುವ ಪ್ರಶ್ನೆಗಳಿಗೆ [ಮೇಲೆ ಹೇಳಿದ] ಉತ್ತರಿಸಿದರೆ ನಿಮ್ಮವಾದವನ್ನು ಸಾರಾಸಗಾಟಾಗಿ ಒಪ್ಪಿಕೊಳ್ಳುತ್ತೇನೆ. ಇದರ ಹೊರತು ನನ್ನಲ್ಲಿ ನಿಮಗೆ ಬೇರೇ ಉತ್ತರವಿಲ್ಲ! ಅಭಿವ್ಯಕ್ತಿ ನನ್ನದು, ಸ್ವೀಕರಿಸುವುದು-ಬಿಡುವುದು ನಿಮ್ಮದು!

    ಉತ್ತರ
    • Balachandra
      ಏಪ್ರಿಲ್ 11 2012

      ನಿಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕೊಡುವ ಅಲ್ಪ ಪ್ರಯತ್ನವನ್ನು ಮಾಡಿರುತ್ತೇನೆ. ಆದರೆ ಅದನ್ನು ವಿವರವಾಗಿ ತಿಳಿದುಕೊಳ್ಳಲು ನೀವು ಅಣು ವಿಜ್ಞಾನ, ಭೌತ ವಿಜ್ಞಾನ, ರಾಸಾಯನ ಶಾಸ್ತ್ರ, ಹಾಗೂ biology ಯನ್ನು ವಿವರವಾಗಿ ತಿಳಿದುಕೊಂಡಿರಲೇ ಬೇಕು.

      {೧. ಮೊಟ್ಟೆಮೊದಲೋ ಕೋಳಿ ಮೊದಲೋ ? ಅಥವಾ ಬೀಜಮೊದಲೋ ಸಸ್ಯ ಮೊದಲೋ ? }

      ಇದಕ್ಕೆ ಉತ್ತರ ಕೂಡ ವಿಕಾಸವಾದದ ಮೂಲವನ್ನೇ ಅಡಿಪಾಯವನ್ನಾಗಿರಿಸಿರುತ್ತದೆ. ನೀವು ದಯವಿಟ್ಟು “abiogenesis” ಬಗ್ಗೆ ಓದಿ. ಈ ವಿಷಯ ಹೇಗೆ ನಿರ್ಜೀವ ವಸ್ತುಗಳಿಂದ ಒಂದು ‘ಜೀವಕೋಶ’ ಉಗಮವಾಯಿತೆಂಬುದನ್ನು ವಿವರಿಸುತ್ತದೆ. ಹಾಗೂ ಆ ಉಗಮವಾದ ಜೀವಕೋಶ ಹೇಗೆ ವಿಕಾಸವಾಯಿತು ಎಂಬುದನ್ನೂ ತಿಳಿದುಕೊಳ್ಳಬಹುದು.

      {೨. ಶರೀರದಲ್ಲಿ ’ಆತ್ಮ’ ಎಂಬ ಅದ್ಭುತ ಚೈತನ್ಯ ಇರುವುದೆಂದು ನೀವು ಒಪ್ಪುವುದಾದರೆ[ಒಪ್ಪಲೇಬೇಕೆಂದೇನೂ ಇಲ್ಲ, ತಲೆ ಜಾಸ್ತಿ ಇದ್ದವರು ಒಪ್ಪದಿರಲೂ ಸಾಧ್ಯವಿದೆ! ] ಆತ್ಮ ಎಲ್ಲಿಂದ ಮತ್ತು ಹೇಗೆ ಬರುತ್ತದೆ? ಸತ್ತನಂತರ ಎಲ್ಲಿಗೆ ಹೋಗುತ್ತದೆ?}

      ವಿಜ್ಞಾನದ ಪ್ರಕಾರ ‘ಆತ್ಮ(consciousness)’ ಹುಟ್ಟಿನಿಂದ ಬರುತ್ತದೆ ಮತ್ತು ಮನುಷ್ಯ ಸತ್ತ ನಂತರ ಸತ್ತು ಹೋಗುತ್ತದೆ.

      {೩. ನಾವು ಕಾಣುವ ಸೌರ ಮಂಡಲದ ಆಕಾಶ ಕಾಯಗಳನ್ನು ನಿರ್ದಿಷ್ಟವಾದ ಅಂತರದಲ್ಲಿ ಹಿಡಿದು ನಿಲ್ಲಿಸಿ ನಿರ್ದಿಷ್ಟ ಗತಿಯ ಚಲನೆಯಲ್ಲಿಡುವ ಮತ್ತು ಸೂರ್ಯ-ಚಂದ್ರರನ್ನು ನಿತ್ಯ ಇಂತಿಂಥಾ ದಿಕ್ಕಿನಲ್ಲೇ ಒಡಮೂಡಿಸಿ ನಡೆಸುವ ಶಕ್ತಿ ಯಾವುದು ? ಗ್ರಹಗಳ/ಆಕಾಶಕಾಯಗಳ ಮಧ್ಯೆ ಇರುವ ಗುರುತ್ವಾಕರ್ಷಣ ಶಕ್ತಿ ಎಲ್ಲಿಂದ ಬಂತು ?}

      ಗುರುತ್ವಾಕರ್ಷಣ ಶಕ್ತಿ ಎಲ್ಲಿಂದಲೂ ಬಂದಿಲ್ಲ, ಎಲ್ಲಿಗೂ ಹೋಗುವದೂ ಇಲ್ಲ. ಗುರುತ್ವಾಕರ್ಷಣ ಶಕ್ತಿ ಪ್ರತಿಯೊಂದು ವಸ್ತುಗಳ ನಡುವೆ ಇರುವಂತಾದ್ದು. ಎರಡು ಸೇಬು ಹಣ್ಣುಗಳ ನಡುವೆಯೂ ಇರುತ್ತದೆ. ಆದರೆ ಅವುಗಳ ತೂಕ ಕಡಿಮೆ ಆದ್ದರಿಂದ ಅವುಗಳ ಪರಿಮಾಣ ತುಂಬಾ ಕಡಿಮೆ. ಗುರುತ್ವಾಕರ್ಷಣ ಶಕ್ತಿ ನೈಸರ್ಗಿಕವಾದ್ದು. ಎರಡು ಸೇಬು ಹಣ್ಣುಗಳ ನಡುವಿನ ಗುರುತ್ವಾಕರ್ಷಣ ಶಕ್ತಿಯನ್ನು ಹೀಗೆ ಬರೆಯ ಬಹುದು.

      F=G*(m1*m2)/square of ‘d’

      F=ಗುರುತ್ವಾಕರ್ಷಣ ಬಲ.

      m1, m2= ಸೇಬು ಹಣ್ಣುಗಳ ಪರಿಮಾಣ.

      ‘d’= ಎರಡು ಸೇಬು ಹಣ್ಣುಗಳ ನಡುವೆ ಇರುವ ಅಂತರ.

      G= Constant.

      ಉತ್ತರ
  17. Selective reasoning
    ಏಪ್ರಿಲ್ 10 2012
  18. ಸವಿತಾ ಬಿ ಎ.
    ಏಪ್ರಿಲ್ 11 2012

    ಲೇಖನವು ಅಧ್ಯಯನದ ತೀವ್ರ ಕೊರತೆಯಿಂದ ಬಳಲುತ್ತಿದೆ ಎನ್ನಬಹುದು. ವೈಜ್ಞಾನಿಕ ತರ್ಕಗಳೇ ಇಲ್ಲದ ಬಾಲಿಶವಾದ ವಾದಗಳನ್ನು ಮಂಡಿಸಲಾಗಿದೆ. ಉದಾಹರಣೆಗಳನ್ನು ಕೆಳಗಿನಂತೆ ಹೆಕ್ಕಬಹುದು..
    1. ಭಾರತೀಯ ಆಯುರ್ವೇದಕ್ಕೆ ೩೦೦೦ ವರ್ಷಗಳ ದಾಖಲೆಯಿದೆ. ಎಷ್ಟೋಕಡೆ ೫೦೦೦…., ಮಹಾಕಾವ್ಯಗಳು, ವೇದ-ವೇದಾಂತಗಳೆಲ್ಲಾ ಸುಳ್ಳೇ?
    ಉ: ನಿಯಾಂಡರ್ಥಾಲ್ ಮಾನವ ಈಗಿನ ಸ್ವರೂಪದ ಮಾನವ ಸ್ವರೂಪದ ಮೊದಲ ಮಾದರಿ ಎಂದುಕೊಳ್ಳಲಾಗಿದೆ. ಇವರು ಬದುಕಿದ್ದುದು 30 ರಿಂದ 40 ಸಾವಿರ ವರುಷಗಳ ಹಿಂದೆ. ಮಾನವ ಸಂಪೂರ್ಣವಾಗಿ ಈಗಿನ ಸ್ವರೂಪ ಪಡೆದು ಇಪ್ಪತ್ತು ಸಾವಿರ ವರುಷಗಳಾಯಿತು. ಆಯುರ್ವೇದ ದಾಖಲೆಗಳು ಮಾನವ ರೂಪ ತಳೆದು ಹದಿನೈದು ಸಾವಿರ ವರುಷಗಳ ನಂತರದ್ದು. ಅಂದರೆ ಮಾನವ ರೂಪ ತಳೆದ ಹತ್ತಿರ ಹತ್ತಿರ 45 ಸಾವಿರ ತಲೆಮಾರುಗಳ ನಂತರ. (ನೂರು ವರುಷಕ್ಕೆ ಮೂರು ತಲೆಮಾರುಗಳ ಲೆಕ್ಕದಲ್ಲಿ) ವೈದ್ಯ ಮತ್ತು ಮನೆ ಕಟ್ಟುವಿಕೆಯ ವಿಜ್ಞಾನ, ಆಕಾಶ ವಿಜ್ಞಾನ, ಗಣಿತ, ಎಣಿಕೆ, ಲೆಕ್ಕ ಇತ್ಯಾದಿ ರೂಪ ತಳೆಯಲು ಇಷ್ಟು ಸಮಯ/ತಲೆಮಾರು ಸಾಕಲ್ಲವೇ? ವಿಕಾಸವಾದ ತಾರ್ಕಿಕವಾಗಿದೆ.
    2. ಕಾಂಬೋಡಿಯಾದಂತಹ ದೇವಾಲಯದಂತಹ ನಿರ್ಮಾಣಗಳು ಹಲವುಸಾವಿರ ವರ್ಷಗಳಿಂದ ತಾವಿರುವ ಗುರುತನ್ನು ತೋರಿಸುತ್ತವೆ.
    ಉ: ಕೊಂಚ ಗೂಗಲಿಸಿದರೆ ಆಗುತ್ತಿತ್ತು… ಕಾಮಬೋಡಿಯಾ ನಿರ್ಮಾಣವಾದದ್ದು ಹನ್ನೆರಡನೆಯ ಶತಮಾನದ ನಂತರ.

    3. ಇವೆಲ್ಲಾ ನಮ್ಮ ಪ್ರಾಚೀನ ಸಂಸ್ಕೃತಿ ನಡೆದುಬಂದ ರೀತಿಯನ್ನು ಪ್ರತಿಬಿಂಬಿಸುತ್ತವೆ. ತನ್ನದೇ ದೇಹದ .. ಹೆಚ್ಚುಗಾರಿಕೆ ಭಾರತದ್ದಾಗಿದೆ!
    ಉ : ಇದು ವಿಕಾಸವಾದವನ್ನು ಹೇಗೆ ನಿರಾಕರಿಸುತ್ತದೆ ಅಂತ ತಿಳಿಯಲಿಲ್ಲ.

    4. ಮೊನ್ನೆಯಷ್ಟೇ ಯುಗಾದಿ ಕಳೆಯಿತು. ಇದು ಯಾವ ಯುಗದ ಆದಿ? ಕೃತ, ತ್ರೇತ, ದ್ವಾಪರ, ಕಲಿ ..
    ಯಾಕೆಂದರೆ ಕಲಿಯುಗ ಆರಂಭಗೊಂಡಿದ್ದು ಮಾಘ ಪೌರ್ಣಮಿಯ ದಿನ! ದಿನವೊಂದಕ್ಕೆ ಇಷ್ಟು ಜಾವ, …. ತನ್ನ ಕಿರಣಗಳಿಂದ ಅಭಿಷೇಚಿಸುವುದು ಪುರಾತನರ ಬುದ್ಧಿ ಸೂತ್ರಕ್ಕೆ ಹಿಡಿದ ಕನ್ನಡಿಯಲ್ಲವೇ?

    ಉ: 45000 ತಲೆಮಾರುಗಳ ಜೀವನದಲ್ಲಿ ಇಷ್ಟು ಕಲಿಯಲು ಮಾನವನಿಗೆ ಅಸಾಧ್ಯವೇ? ಗವಿಗಂಗಾಧರೆಶ್ವರ ಗುಡಿ 17ನೆಯ ಶತಮಾನದ್ದು. ಶಾರದಾ ಗುಡಿ ಹತ್ತನೆಯ ಶತಮಾನದ್ದು. ಅಂದರೆ ಒಂದು ಸಾವಿರ ವರುಷ ಹಳೆಯದು. ಮಾನವ ವಿಕಾಸ ವಾಗಿದ್ದು ಮೂವತ್ತು ಸಾವಿರ ವರುಷಗಳ ಹಿಂದೆ. ಎಲ್ಲಿಂದ ಎಲ್ಲಿಗೆ ಲಿಂಕು ಮಾರಾಯರೇ?

    5. ಭವ್ಯ ಭಾರತದ ಸಂಸ್ಕೃತಿಯನ್ನು ಸಾರುವ ಚರಕ ಶುಶ್ರುತ ಇತ್ಯಾದಿ ವಿದ್ವಜ್ಜನರ ಸಂಹಿತೆಗಳು ಹೇಗೆ ವಿಕಾಸವಾದವನ್ನು ನಿರಾಕರಿಸಿವೆ ಎಂಬುದನ್ನು ತಿಳಿಸುವ ಯತ್ನವನ್ನೇ ಮಾಡಲಾಗಿಲ್ಲ.

    6. ಜೀವರಾಶಿಗಳಲ್ಲಿ ಹಲವು ಪ್ರಭೇರ್‍ದಗಳಿರುವಂತೇ ಮಂಗವೂ ಒಂದು ಮತ್ತು ಮಂಗಗಳ ಜಾತಿಯಲ್ಲೇ ಹಲವು ಪ್ರಭೇದಗಳನ್ನು ಕಾಣುತ್ತೇವಲ್ಲಾ? ಮಂಗಗಳಿಗೂ ಬುದ್ಧಿ … ಜಗತ್ತಿನಲ್ಲಿ ಮೊಟ್ಟೆಮೊದಲೋ ಕೋಳಿಮೊದಲೋ? … ಸಮರ್ಪಕ ಉತ್ತರವನ್ನು ಹೇಳದಲ್ಲ !
    ಉ: ವಿಕಾಸವಾದವನ್ನು ಖಂಡಿಸುವ ಮುನ್ನ ಲೇಖಕರು ಕೊಂಚವೂ ಅಧ್ಯಯಯನ ಮಾಡಿಲ್ಲ ಎಂಬುದಕ್ಕೆ ಈ ಪ್ಯಾರಾಗಿಂತ ಹೆಚ್ಚಿನ ನಿದರ್ಶನ ಬೇಕಿಲ್ಲ. ಈ ರೀತಿಯಾಗಿ ವಿಕಾಸವಾದದಲ್ಲಿ ಹೇಳಿಲ್ಲ. ರಾಮಾಯಣ ಮಹಾಕಾವ್ಯವನ್ನು ಇತಿಹಾಸವೆಂದು ಬಗೆದು ಅದರ ಪ್ರಕಾರ ಮಂಗಗಳು ಮನುಷ್ಯರಷ್ಟೇ ಬುದ್ದಿವಂತರಾಗಿದ್ದವು ಎಂಬ ನಿಲುವಿಗೆ ಬಂದ ಲೇಖಕರ ವೈಜ್ಞಾನಿಕ ಪ್ರಶ್ನೆ ಪ್ರಶ್ನಾರ್ಹ. ಅಷ್ಟು ಬುದ್ದಿವಂತ ಕಪಿಗಳು ಎಲ್ಲಿ ಮಾಯವಾದವು ಎಂದು ತಿಳಿಸುವ ಗೋಜಿಗೇ ಲೇಖಕರು ಹೋಗಿಲ್ಲ.

    7 .ಪತ್ರಹರಿತ್ತನ್ನು ಮಾನವ ಸೃಷ್ಟಿಸಿದ ಎಂದು ಯಾರು ಹೇಳಿದರು ಸ್ವಾಮಿ..? ಭೂಮಿಯ ಮೇಲೆ ಖಂಡಗಳನ್ನು ಮಾನವ ಸೃಷ್ಟಿಸಿದ್ದು ಅಂತ ಯಾರು ಹೇಳಿದ್ದು? ಅದು ಪ್ರಕೃತಿಯಿಂದ ಆದದ್ದು. ಮನುಷ್ಯನ ವಿಕಾಸವೂ ಪ್ರಕೃತಿಯಿಂದ ಆದದ್ದೇ..!!
    ಮಂಗ ಯಾವುದನ್ನೂ ಮಾಡಿಲ್ಲ ಸ್ವಾಮಿ.. ಪ್ರಕೃತಿಯೇ ಮಾಡಿದೆ. ಮಂಗನನ್ನು, ಮಾನವನನ್ನು, ಬಂಡೆಯನ್ನು, ಜ್ವಾಲಾಮುಖಿಯನ್ನು ಎಲ್ಲವನ್ನೂ. ಪ್ರೈಮರಿ ಶಾಲೆಯ ಮಕ್ಕಳಿಗೂ ಇದು ಗೊತ್ತು.
    ವೈಜ್ಞಾನಿಕ ಚಿಂತನೆಯಿಂದ ಮೈಲಿಮೈಲಿ ದೂರವಿರುವ ಇಂತಹ ಲೇಖನಗಳು ಮುಂದಿನ ಪೀಳಿಗೆಯನ್ನು ತಪ್ಪು ದಾರಿಗೆಳೆಯುವುದರಲ್ಲಿ ಸಂಶಯವೇ ಇಲ್ಲ.
    ಹಾಗೆಯೇ ವೈಜ್ಞಾನಿಕ ಪುರೋಹಿತರು, ಕೂಪಮಂಡೂಕಗಳು ಇತ್ಯಾದಿ ಪದಬಳಕೆ ಮಾಡಿರುವ ನುಡಿವಿದ್ವಾಂಸರು ಒಮ್ಮೆ ತಮ್ಮ ಜೀವನದಲ್ಲಿ ಒಬ್ಬ ವಿಜ್ಞಾನಿಯನ್ನಾದರೂ ಮಾತನಾಡಿಸಲು ಪ್ರಯತ್ನಿಸಿ. ಒಂದು ಅಂತರ್ರಾಷ್ಟ್ರೀಯ ಮನ್ನಣೆ ಪಡೆಯಬೇಕಾದ ಸಂಶೋಧನೆ ನಡೆಸಬೇಕೆಂದರೆ ಅದ್ಯಾವ ಪರಿ ರಕ್ತ ಬೆವರು ಒಂದು ಮಾಡಿರುತ್ತಾರೆ ಎಂಬುದನ್ನು ಅರಿಯಿರಿ.

    ಉತ್ತರ
    • noname
      ಏಪ್ರಿಲ್ 11 2012

      Homo sapiens iddiddu 30-40 saavira varshada hinde, annodu nijavE aadaroo, Homo sapiens gaLu pratyEka species mattu Adunika maanavana species separate.

      ಉತ್ತರ
      • noname
        ಏಪ್ರಿಲ್ 11 2012

        Correction : Homo sepiens alla, neandartal galu.

        haagaagi ee arthadalli, neandartal mattu aadunika maanavananna holike maadodu, hunase maravannu bEvina marakke holisida haagaagutte.

        ಉತ್ತರ
  19. ಏಪ್ರಿಲ್ 11 2012

    ಮೇಲಿನ ಬರಹ ಎಲ್ಲೆಲ್ಲಿ ಹೇಗೆ ಹೇಗೆ ಎಡವಿದೆ ಎಂಬುದನ್ನ ತೋರಿಸಿಕೊಡುವ (ವೇದಿಕೆಯ ಮತ್ತು ನನ್ನ ಮಿತಿಯಲ್ಲಿನ) ಪ್ರಯತ್ನವಿದು.

    ಮೊದಲಲ್ಲೇ ಹೇಳಿಬಿಡಬೇಕು : ಡಾರ್ವಿನ್-ವಾದವು ಈಗ ಸಾಕಷ್ಟು ‘ನವೀಕೃತ’ (update) ಗೊಂಡು, ‘ಆಧುನಿಕ ವಿಕಾಸವಾದ’ (‘modern evolution’) ಎಂದೇ ಚಾಲ್ತಿಯಲ್ಲಿದೆ. ಆದರಿಂದ ಡಾರ್ವಿನ್ನ (ಅಥವಾ ಅವನ ವಾದದ) ಮೇಲೆ ಆಪಾದನೆಗಳನ್ನು ಹೊರಿಸುವುದು ನಿರರ್ಥಕ. ಪ್ರಶ್ನೆಗಳು ಆಧುನಿಕ ವಿಕಾಸವಾದ ಮೇಲಿದ್ದರೆ ಉತ್ತಮ.

    ‘ವಿಕಾಸವಾದ’ವನ್ನು ಒಂದು ”ಐತಿಹಾಸಿಕ ಸಂಗತಿ’ ಎಂದು ತಿಳಿಯುವುದಕ್ಕಿಂತಲೂ, ಒಂದು ”ವೈಜ್ಞಾನಿಕ ಸಿದ್ದಾಂತ’ವೆಂದು ನೋಡುವುದು ಹೆಚ್ಚು ಸಮಂಜಸ. ಅದಾಗಿಯೂ, ವಿಜ್ಞಾನದ ಸಿದ್ಧಾಂತವೊಂದನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲೇ ಪ್ರಶ್ನಿಸಬೇಕೇ ಹೊರತೂ ‘ಅದಿಭೌತಿಕ’, ‘ಆಧ್ಯಾತ್ಮಿಕ’ ಯಾ ಇನ್ಯಾವುದೇ ನೆಲೆಗಟ್ಟಿನಲ್ಲ. ವೈಜ್ಞಾನಿಕ ಸಿದ್ಧಾಂತಗಳು ಯಾವ ಭಗವಂತನ/ ಭಗವದ್ಗೀತೆಯ ಹೇಳಿಕೆಗಳಿಗೂ ಭಾಧ್ಯಸ್ಥವಾಗಿರಬೇಕಿಲ್ಲ. ಒಂದು ವೈಜ್ಞಾನಿಕ ಸಿದ್ಧಾಂತವನ್ನು ಇನ್ನೊಂದು ವೈಜ್ಞಾನಿಕ ಸಿದ್ದಾಂತವು ಮಾತ್ರಾ ಬದಿಗೆ ಸರಿಸಬಲ್ಲದೇ ಹೊರತೂ ಅವೈಜ್ಞಾನಿಕ ಸಿದ್ಧಾಂತಗಳಲ್ಲ.

    ಮೇಲಿನ ಲೇಖನವೇನೂ (ಕುಮಾರ್ ಅವರು ಅಭಿಪ್ರಾಯಪಟ್ಟಂತೆ) ಯಾವುದೇ ಹೊಸ ಪ್ರಶ್ನೆಗಳನ್ನು ಎತ್ತಿಲ್ಲ. ಅದಕ್ಕೆ ಬದಲಾಗಿ, ವಿಷಯದ ಕುರಿತು ಸುಲಭದಲ್ಲಿ ಸಾಧ್ಯವಾಗುವ ಅಧ್ಯಯನ, ಪ್ರಶ್ನಿಸುವ ಶಿಸ್ತು/ಸೌಜನ್ಯ, ವೇದಿಕೆ/ಮಾಧ್ಯಮದ ಕುರಿತು ಔಚಿತ್ಯಪ್ರಜ್ಞೆ.., ಎಲ್ಲಾ ಮರೆತು ಬರೆದ ಲೇಖನದಂತೆ ಇದೆ. ವಿಷಯದ ಮೇಲೆ ಅಧ್ಯಯನ, ತಜ್ಞರೊಂದಿಗೆ ಚರ್ಚೆ ಇತ್ಯಾದಿಗಳನ್ನೆಲ್ಲಾ (ವೈಜ್ಞಾನಿಕ ಕ್ರಮದಲ್ಲಿ) ಮಾಡಿ, ಒಂದು ವೈಜ್ಞಾನಿಕ ಪತ್ರಿಕೆ/ವೇದಿಕೆಯಲ್ಲಿ ಪ್ರಶ್ನೆಗಳನ್ನು ಇಟ್ಟಿದ್ದರೆ ಒಪ್ಪಿಕೊಳ್ಳುವ. ಅದುಬಿಟ್ಟು ಸಾಮಾನ್ಯ ಜನರು ಓದುವಂಥಾ ಒಂದು ವೇದಿಕೆಯಲ್ಲಿ, ವಿಷಯತಜ್ಞನ ಧಾಟಿಯಲ್ಲಿ, ಅರೆಬೆಂದಜ್ಞಾನಜನ್ಯವಾದ, ಸರಿಯಾಗಿ ನಿರೂಪಿತವೂ ಅಲ್ಲದ ‘ಸಂಶಯದ ಬೀಜಗಳನ್ನು ಬಿತ್ತುವುದರ’ ಔಚಿತ್ಯವೇನು?

    ಲೇಖನದಲ್ಲಿ ಮತ್ತು ಅದರ ಶೀರ್ಷಿಕೆಯಲ್ಲಿ ‘ಅಪವಾದ’ ಎಂಬ ಶಬ್ದ ತಪ್ಪು ಅರ್ಥದಲ್ಲಿ ಬಳಕೆಯಾಗಿದೆ. ‘ಅಪವಾದ’ ಎಂದರೆ ‘ತಪ್ಪು ವಾದ’ ಎಂದರ್ಥವಲ್ಲ, ‘ನಿಯಮಕ್ಕೆ ಹೊರತಾದುದು’ (‘exception’) ಎಂದರ್ಥ.

    >>”ಹರಪ್ಪ ಮತ್ತು ಮೊಹೆಂಜೊದಾರೋ ಸ್ಥಳ (ದಲ್ಲಿ) ಮಂಗನಿಂದ ಮಾನವನಾದ… ” -ಇದು ತಪ್ಪು ತಿಳುವಳಿಕೆ. ಯಾವ ಆಕರಗ್ರಂಥದಲ್ಲಿಯೂ ಹಾಗೆ ಹೇಳಿದಂತಿಲ್ಲವಲ್ಲ..

    >>”…ನನಗನಿಸುತ್ತಿದೆ ಅವೆಲ್ಲಾ ಬರೇ ಕಟ್ಟುಕಥೆಗಳಾಗಿವೆ…”
    –ವಿಕಾಸವಾದಕ್ಕೆ ಅನುಕೂಲಕರವಾಗಿರುವ ಪುರಾವೆಗಳು ಈಗ ಸಾಕಷ್ಟಿವೆ. ನೋಡಿ:
    http://en.wikipedia.org/wiki/Evolution
    http://en.wikipedia.org/wiki/Introduction_to_evolution
    ಅದಾಗಿಯೂ, ಡಾರ್ವಿನ್ ಏನೂ ಸುಮ್ಮಸುಮ್ಮನೆ ಪುರಾವೆಗಳಿಲ್ಲದೇ ‘origin of species …’ ಬರೆದಿದ್ದಲ್ಲ. ಗಮನಿಸಿ:
    http://en.wikipedia.org/wiki/Second_voyage_of_HMS_Beagle
    http://en.wikipedia.org/wiki/Inception_of_Darwin's_theory

    >> “ಭಾರತೀಯ ಆಯುರ್ವೇದಕ್ಕೆ ೩೦೦೦ ವರ್ಷಗಳ ದಾಖಲೆ… …ವೇದ-ವೇದಾಂತಗಳೆಲ್ಲಾ ಸುಳ್ಳೇ?”
    –ಯಾವ ಯಾವ ಗ್ರಂಥಗಳು? ನಿಖರವಾಗಿ ಎಷ್ಟು ವರ್ಷ ಹಳೆಯದು? ಏನು ಪುರಾವೆ?
    ಅಂದಹಾಗೆ ವಿಕಾಸವಾದದ ಪ್ರಕಾರ ಮನುಷ್ಯ ಜಾತಿ ಭೂಮಿಯಮೇಲೆ ೮೫ ಮಿಲಿಯನ್ ವರ್ಷಗಳಷ್ಟು ಹಿಂದೆಯೇ ಕಾಣಿಸಲು ಶುರುವಾಯ್ತು. ಇಲ್ಲಿ ನೋಡಿ:
    http://en.wikipedia.org/wiki/Human_evolution

    >>”….ಮಹತ್ತರವಾದ ಈ ಉದ್ಗ್ರಂಥಗಳು ಮಂಗನಿಂದಾದ ಮಾನವನ ಮೂಲಕ ಬರೆಯಲ್ಪಟ್ಟಿದ್ದವೆಂದರೆ ಅದು ಅಸಾಧ್ಯವೆಂಬುದು ಸ್ಪಷ್ಟವಾಗುತ್ತದೆ.”
    –ಯಾಕೆ ಸ್ವಾಮಿ ಹೀಗೆ ತಮ್ಮ ವೈಯಕ್ತಿಕ ಅಭಿಪ್ರಾಯ/ಬೆರಗುಗಳನ್ನ ನಮ್ಮ ಮೇಲೆ ಹೇರುವುದು?
    ಬಹುಷಃ ನಿಮ್ಮ ಬೆರಗು ಈ ಕುರಿತಾಗಿರಬೇಕಿತ್ತು: http://en.wikipedia.org/wiki/Origin_of_language

    >>”…ಪ್ರಪಂಚದಲ್ಲಿ ೮೦ ಕೋಟಿಗೂ ಅಧಿಕ ಜೀವ ಪ್ರಭೇದಗಳನ್ನು ಸೃಜಿಸಿದ್ದೇನೆ ಎಂಬ ಭಗವಂತನ ಹೇಳಿಕೆಯನ್ನು….”
    –ಈ ಸಾಲುಗಳು ಏನನ್ನೂ ನಿರೂಪಿಸಲಾರವು. ಮೊದಲೇ ಹೇಳಿದಂತೆ ವೈಜ್ಞಾನಿಕ ಸಿದ್ಧಾಂತಗಳು ಯಾವ ಪುರಾಣ/ಭಗವಂತ/ಧರ್ಮಗ್ರಂಥಗಳಿಗೂ ಭಾಧ್ಯಸ್ಥವಾಗಿರಬೇಕಿಲ್ಲ.

    >>”…ದಿನವೊಂದಕ್ಕೆ ಇಷ್ಟು ಜಾವ,… ಇಂಥಾ ಮಾಸ, ಘಳಿಗೆ-ಲಿಪ್ತಿ, ತಿಥಿ-ಮಿತಿಗಳ ಲೆಕ್ಕ, ಗ್ರಹಣ ನಡೆಯುವ ಲೆಕ್ಕ…. ಪುರಾತನರ ಬುದ್ಧಿ ಸೂತ್ರಕ್ಕೆ ಹಿಡಿದ ಕನ್ನಡಿಯಲ್ಲವೇ?”
    ಖಂಡಿತ ಹೌದು. ಅಂದಮಾತ್ರಕ್ಕೆ ‘ಪುರಾತನವಾದದ್ದೆಲ್ಲಾ ಸರಿ’ ಅಥವಾ ‘ಪೂರ್ವಿಕರಿಗೆ ಎಲ್ಲಾ ಗೊತ್ತಿತ್ತು’ ಅಂತಲೇನೂ ಅಲ್ಲವಲ್ಲ!

    >>”…ಸಂಶೋಧಕ ಮಂಗ’ಗಳಿಗೆ ಏನನ್ನೋಣ? ನಮ್ಮ ಅಂಧಕಾರದಿಂದ ಯಾರೋ ಬ್ರಿಟಿಷರು ಹೇಳಿಕೊಟ್ಟ ’ರೀ-ಸರ್ಚ್’ ಎಂಬ ಕೀಳು ಪದ್ಧತಿಯಲ್ಲಿ…”
    ನೀವು ಸಂಶೋಧಕರನ್ನು, ಮತ್ತು ಸಂಶೋಧನೆಯನ್ನೂ, research methodology ಯನ್ನೂ ಹೀಗೆ ಹೀಗೆಳೆಯಲು ಮುಂದಾಗಿದ್ದು ನಿಮ್ಮ ಅಜ್ಞಾನ ಮತ್ತು ಪೂರ್ವಾಗ್ರಹಗಳಿಂದಲ್ಲದೇ ಮತ್ತಿನ್ನೇನು?
    ಇದು ಕೂಪಮಂಡೂಕತನವಲ್ಲದೇ ಮತ್ತೇನು?

    >>”…ಇಂದಿಗೂ ಚಿಂಪಾಂಜಿ ಮತ್ತು ಗೋರಿಲ್ಲಾಗಳು ನೋಡಸಿಗುತ್ತವಲ್ಲಾ ಅವುಗಳೂ ಕ್ರಮೇಣ ಬದಲಾಗಿ ಬದಲಾಗಿ ಮುಂದೆ ಹುಟ್ಟುವ ತಳಿ ಮಾನವರಾಗಬಹುದಿತ್ತಲ್ಲಾ ಆಗುವುದಿಲ್ಲ ಯಾಕೆ?”
    ಯಾಕೆಂದರೆ ಬದಲಾವಣೆ/ವಿಕಾಸ ಲಕ್ಷವಾರು ವರ್ಷಗಳಲ್ಲಿ ಆಗುವಂತದು, ನೂರಾರು ವರ್ಷಗಳಲ್ಲಲ್ಲ. ಹಲವಾರು ಪೂರ್ವಿಕ ಜೀವಿಗಳು ವಿನಾಶವಾಗಿರುವುದು, ಮತ್ತು ಈಗಿನ ಚಿಂಪಾಂಜಿ ಇತ್ಯಾದಿಗಳು ನಮ್ಮ ಪೂರ್ವಿಕರಿಗಿಂತಲೂ ‘ದಾಯಾದಿ’ಗಳಾಗಿರುವುದು.., ಇತ್ಯಾದಿ ಎಲ್ಲವುದೂ ಈ ಮೊದಲೇ ಕೊಟ್ಟಂಥ ಕೆಲವು ವಿಕಿಪೀಡಿಯದ ಕೊಂಡಿಗಳಲ್ಲಿ ಆಧಾರ ಸಮೇತ ವಿವರಿತವಾಗಿದೆ; ಗಮನಿಸಿ. ಹತ್ತು ನಿಮಿಷ ನಿಮ್ಮ ಮಗುವನ್ನು ನೋಡಿ “ಅದು ಬೆಳೆಯುತ್ತಿಲ್ಲ, ಬೆಳವಣಿಗೆ ಎಂಬುದೇ ಇಲ್ಲ…” ಅಂತೆಲ್ಲಾ ಅಂದರೆ ಹೇಗೆ ಸ್ವಾಮಿ? ಅಂದಹಾಗೆ ವಿಕಾಸವು ಮನುಷ್ಯನಿಗೇ ನಿತ್ತು ಹೋಗಿದೆ ಅಂತಲೇನೂ ಅಲ್ಲ, ಇನ್ನೊಂದು ಮಿಲಿಯ ವರ್ಷ ಕಾದು ನೋಡಿ! -ಮನುಷ್ಯರೂ ವಿಕಾಸವಾಗುವರೆನೋ…

    >>”..ಜೀವಿಗಳಲ್ಲಿ ಸಹಜವಾಗಿ ಇರುವ ಪ್ರಭೇದಗಳ ಮಧ್ಯೆ ಮನುಷ್ಯ ಮನುಷ್ಯನಾಗಿಯೇ ಹುಟ್ಟಿದನೇ ಹೊರತು ಮಂಗನಿಂದ ಮಾನವ ಎಂಬ ತತ್ವವನ್ನು ನಾನು ಒಪ್ಪುವುದಿಲ್ಲ!..”
    ಇದೇನೂ ಹೊಸ ನಿಲುವಲ್ಲ. ಇಂಥಹ ನಿಲುವಿನ ಸಾರ್ಥಕ್ಯ-ವೈಫಲ್ಯಗಳು ಇಲ್ಲಿ ಚರ್ಚಿತವಾಗಿವೆ, ಗಮನಿಸಿ:
    http://en.wikipedia.org/wiki/Intelligent_design_movement
    http://en.wikipedia.org/wiki/Creationism

    >>”…ಜಗತ್ತಿನಲ್ಲಿ ಮೊಟ್ಟೆಮೊದಲೋ ಕೋಳಿಮೊದಲೋ? ಬೀಜ ಮೊದಲೋ ಸಸ್ಯಮೊದಲೋ?- ಎಂಬುದಕ್ಕೆ ಇವತ್ತಿನ ಯಾವ ವಿಜ್ಞಾನವೂ ಸಮರ್ಪಕ ಉತ್ತರವನ್ನು ಹೇಳದಲ್ಲ!”
    –ವಿಜ್ಞಾನವಷ್ಟೇ ಏಕೆ, ಯಾವ ಪುರಾಣ, ಉಪನಿಷತ್, ಧರ್ಮಗ್ರಂಥಗಳೂ ಇದಕ್ಕೆ ಉತ್ತರ ಹೇಳಲಾರವು! ಏಕೆಂದರೆ ಇದು “ನೀನು ಹೇಲುತಿನ್ನುವುದನ್ನು ಈಗಲಾದರೂ ಬಿಟ್ಟಿದ್ದೀಯೋ ಇಲ್ಲವೋ, ಹೇಳು?” ಎಂಬ ತರಹದ ಪ್ರಶ್ನೆ! ಜಗತ್ತಿಗೆ ಆದಿ-ಕೊನೆ ಎಂಬುದು ಇದೆ, ಮತ್ತು ಮೊದಲಲ್ಲಿ ಎರಡರಲ್ಲಿ ಒಂದು ಮಾತ್ರಾ ಇರಬೇಕು ಎನ್ನುವ, ಅಷ್ಟು ಸಮಂಜಸವಲ್ಲದ, ಪೂರ್ವಾಗ್ರಹದಿಂದ ಬಂದ ಪ್ರಶ್ನೆ ಇದು. ಸಾಮಾನ್ಯ ಜ್ಞಾನ ಮತ್ತು ವಿಜ್ಞಾನ -ಎರಡೂ ಹೇಳುವುದು ಇಷ್ಟೇ – “ಬೀಜವೊಂದರಿಂದ ಸಸ್ಯ ಬರಬಲ್ಲದು, ಮತ್ತು ಸಸ್ಯದಲ್ಲಿ ಬೀಜಗಳು ಹುಟ್ಟುತ್ತವೆ” – ಅಂತ. ಅದರಾಚೆ ಏನನ್ನು ಹೇಳಲೂ ಪುರಾವೆಗಳಿಲ್ಲ. ಆದರೆ ‘mutation’ ಅನ್ನುವುದು ಲೈಂಗಿಕಜೀವಕೋಶ -ವಿಭಜನೆಯ (meiosis) ಅಥವಾ ಅಂಡದ ಜನನದ ಹೊತ್ತಲ್ಲಿ ಆಗುವಂತಹದು ಎಂಬುದನ್ನ ಗಮನಿಸಿದರೆ, ಪ್ರತಿಯೊಂದು ತಳಿಯ ಮೊದಲಲ್ಲಿ ಬೀಜವೇ ಅಂಕುರವಾಗುವುದು ಎನ್ನಬಹುದೇನೋ…

    >>”…ಯಾರು ಮಾಡಿದ ನಿಯಮ?…”
    –ಸರಳವಾಗಿ ಹೇಳಬೇಕೆಂದರೆ ಇದು ವಿಜ್ಞಾನದಲ್ಲಿ ಅಪ್ರಸ್ತುತವಾದ ಪ್ರಶ್ನೆ. ಪ್ರಪಂಚ ಮತ್ತು ಅದರ ನಿಯಮಗಳ ಇರುವಿಕೆ ಮಾತ್ರಾ ಸಾಬೀತಾಗಿರುವುದೇ ಹೊರತೂ ಅದಕ್ಕೊಬ್ಬ ಸೃಷ್ಟಿಕರ್ತನೂ ಇರುವುದಲ್ಲ. ಸೃಷ್ಟಿಕರ್ತನನ್ನು ಯಾರು ನಿರ್ಮಿಸಿದರು? To quote Laplace, “I do not require that hypothesis, my lord!” (google it out!).
    ಇನ್ನೂ ಹೇಳಬೇಕೆಂದರೆ ತತ್ವಶಾಸ್ತ್ರದ ದೃಷ್ಟಿಯಿಂದ ‘ಇದು ಬೇಡುವ ಪ್ರಶ್ನೆ’ (Begging the question, -leading to an infinite regression).
    http://en.wikipedia.org/wiki/Begging_the_question
    ಅಂಬಿಕಾತನಯದತ್ತನಂದಂತೆ ‘ಇರುವು ಇರುವಿನೊಳಿತ್ತು, ಅರಿವು ಅರಿವಿನೊಳಿತ್ತು’. ಇದ್ದಿದ್ದಕ್ಕೆಲ್ಲಾ ಒಂದು ಹುಟ್ಟು, ಮತ್ತು ಹುಟ್ಟಿಗೆಲ್ಲಾ ಓರ್ವ ಸೃಷ್ಟಿಕರ್ತ ಇರಬೇಕೆಂದೇನೂ ಇಲ್ಲ.

    >> “… ಸಾಮಾನ್ಯರು ಸಾದಾ ಕೀಲಿ ಹೊಂದಿದ್ದರೆ ವಿಜ್ಞಾನಿಗಳು……ಅದರಿಂದಾಚೆಗಿನ ವ್ಯಾಪ್ತಿ ವಿಜ್ಞಾನಿಗಳಿಗೆ ಕಾಣಿಸುವುದಿಲ್ಲ; ಕಾಣಲು ನಡೆಸುವ ಪ್ರಯತ್ನವೂ ಸಫಲವಾಗುವುದಿಲ್ಲ…”
    ನಿಮ್ಮಲ್ಲಿ ಒಂದು ಮನವಿ. ನೀವು ನಿಮ್ಮ ಬಗ್ಗೆ ಮಾತ್ರ ಬಡಬಡಿಸಿ, ಮಂದಿಯ ಬಗೆಗಲ್ಲ! ಸಂಪೂರ್ಣವಾಗಿ ನಿಮ್ಮ ವ್ಯಾಪ್ತಿಯಾಚೆಗಿರುವ ವಿಷಯಗಳ ಮತ್ತು ಅವುಗಳ ತಜ್ಞರ ಬಗ್ಗೆ ಉಡಾಫೆಯಾಗಿ ನಿಂದಿಸುವುದು, ಅದೂ ಒಂದು ಸಾರ್ವಜನಿಕ ವೇದಿಕೆಯಲ್ಲಿ, -ಇದು ನಿಮಗೆ ಖಂಡಿತಾ ಶೋಭೆತರುವ ವಿಷಯವಲ್ಲ.

    ಇದಕ್ಕೂ ಮಿಕ್ಕಿ ಗೊಂದಲಗಳಿದ್ದಲ್ಲಿ ದಯವಿಟ್ಟು ಸೌಜನ್ಯದ ಭಾಷೆಯಲ್ಲೇ ಮಂಡಿಸಿ. ಉಡಾಫೆಯ ಧಾಟಿ ಬೇಡ.

    (ಅಯ್ಯೋ! ಇಷ್ಟೆಲ್ಲಾ ಸಮಯ ವ್ಯಯ ಮಾಡಿ ಕುಳಿತು ಕನ್ನಡದಲ್ಲಿ ಪ್ರತಿಕ್ರಿಯೆಯನ್ನು ಕೀಲಿಸಿ ಆ’ಮೇಲೆ’ ನೋಡಿದರೆ ಸವಿತಾರವರು ಎಷ್ಟು ಚೆನ್ನಾಗಿ ನಾನು ಹೇಳುವ ವಿಷಯಗಳನ್ನೇ ಹೇಳಿದ್ದಾರೆ! 😥

    ಉತ್ತರ
  20. ಏಪ್ರಿಲ್ 11 2012

    ಕೊನೆಯಲ್ಲಿ, ಮೊನ್ನೆ ಬಂದ ಸಂದೇಶವೊಂದು ನೆನಪಾಗುತ್ತಿದೆ. ” If evolution is just a theory, so is gravity. So why don’t I see people jumping outside the window, subscribing to the theory of intelligent falling! ”

    http://en.wikipedia.org/wiki/Intelligent_falling

    😀 😀 😀

    ಉತ್ತರ
  21. ಏಪ್ರಿಲ್ 11 2012

    ಮಹನೀಯ ಓದುಗ ಮಿತ್ರರೇ,

    ನಿಮ್ಮ ತಾತ್ವಿಕ ಅಭಿವ್ಯಕ್ತಿಗಳು ಸರಿಯಾಗಿಯೇ ಇವೆ. ಆದರೆ ವಿಜ್ಞಾನದ ವಿಕಾಸ ವಾದ ಒಂದು ವಾದವಷ್ಟೇ ಎಂಬುದನ್ನು ಮರೆಯಬಾರದು ! ವಾದ ಬೇರೆ ಸಿದ್ಧಪಡಿಸಿದ ಸೂತ್ರ ಬೇರೆ. ೪೫, ೦೦೦ ವರ್ಷಗಳು ಎಂದು ಒಬ್ಬರು, ೫೦೦,೦೦೦ ವರ್ಷಗಳು ಇನ್ನೊಬ್ಬರು ವಿಕಾಸ ವಾದದ ಪ್ರಾಚೀನತೆಯನ್ನು ನನ್ನ ಗಮನಕ್ಕೆ ತರಲು ಯತ್ನಿಸಿದ್ದೀರಿ. ಅಧ್ಯಯನ ಮಾಡುವಾಗ ವೇದಗಳು ಪೊಳ್ಳು ಅಥವಾ ಪುರೋಹಿತಶಾಹಿ ಎಂಬ ಹಳದಿ ಕನ್ನಡಕ ತೆಗೆದಿಟ್ಟು ವೇದದಲ್ಲಿ ಪೂರ್ವಜರು ನಮಗೇನು ಕೊಟ್ಟರು ? ವೇದಕ್ಕೆ ಅಷ್ಟೆಲ್ಲಾ ಮಹತ್ವ ನೀಡಿದ್ದೇಕೆ ? ಎಂಬುದನ್ನು ಕೆದಕುತ್ತಾ, ಇವತ್ತು ಹಲವು ಮಾರ್ಗಗಳಿಂದ ಓದಲು ಲಭ್ಯವಿರುವ ವೇದಗಳ ಸರಿಯಾದ ಹೊತ್ತಗೆಗಳನ್ನು ತೆರೆದು ಓದಿ, ಅರ್ಥಮಾಡಿಕೊಂಡರೆ ಜೀವ ವಿಕಾಸ ಹೇಗೆ ಆಯ್ತು ? ಎಂಬುದಕ್ಕೆ ಗಮನಾರ್ಹ ಉತ್ತರ ಸಿಗುತ್ತದೆ. ಒಂದು ಮಾತನ್ನು ನೆನಪಿಡಿ : ಸೃಷ್ಟಿಯಲ್ಲಿ ನಮಗೆ ಸಾಕ್ಷಾತ್ ಕಾಣಸಿಗುವ, ಜೀವನದ ಭಾಗಗಳೇ ಆಗಿರುವ ಪಂಚಭೂತಗಳ ನಿರ್ಮಾಣ, ನಿರ್ವಹಣೆ, ಚಾಲನೆ ಇನ್ನೂ ನಮ್ಮ ವಿಜ್ಞಾನಕ್ಕೆ ಅರ್ಥವಾಗಿಲ್ಲ! ಯಾವುದೋ ವಿಜ್ಞಾನಿ ತನ್ನ ಸಿದ್ಧಾಂತದಂತೇ ‘ಎಚ್ ಟೂ ಓ’ ಫಾರ್ಮ್ಯುಲಾ ಹಾಕುತ್ತಾ ಕೂತರೆ ಜೀವಜಗತ್ತಿಗೆ ಬೇಕಾಗುವ ನೀರನ್ನು ಸಂಪೂರ್ಣ ಸರಬರಾಜು ಮಾಡಲಾಗುತ್ತಿತ್ತೇ? ಈ ಸೃಷ್ಟಿ ನಮಗೆ ಪ್ರಯತ್ನಿಸಿ ಪಡೆಯುವ ಹಲವು ಸುಫಲಗಳನ್ನು ನೀಡಿದ ಮಾತ್ರಕ್ಕೆ ನಮ್ಮ ಬದುಕು ನೆಟ್ಟಗಿದೆ! ನೀರಿನಿಂದ ವಿದ್ಯುತ್ತು, ಕಲ್ಲಿದ್ದಲಿನಿಂದಲೂ ವಿದ್ಯುತ್ತು, ಭೂಗರ್ಭದಲ್ಲಿ ಕಲ್ಲಿದ್ದಲು, ಪೆಟ್ರೋಲಿಯಂ ಎಲ್ಲವನ್ನೂ ಸೃಷ್ಟಿಯೇ ನೀಡಿದೆ, ಹುಡುಕಿ ಬಳಸಲು ಸವಾಲನ್ನೂ ಎಸೆದಿದೆ! ಪೆಟ್ರೋಲ್ ಎಂಬ ದ್ರವವನ್ನು ವಿಜ್ಞಾನಿಗಳು ಕೃತಕವಾಗಿ ತಯಾರಿಸಲು ಸಾಧ್ಯವೇ ?

    ವಾಯುವಿನಲ್ಲಿಯೇ ನೀರೂ ಇದೆ ಎಂಬ ಅಂಶ ವೆದದಲ್ಲೇ ಹೇಳಲ್ಪಟ್ಟಿದೆ! || ಅಗ್ನೌರಾಪಃ || ಅಗ್ನಿಯ ಸಹಾಯದಿಂದಲೇ ನೀರಿನ ಉತ್ಫತ್ತಿ ಆಯ್ತು ಎನ್ನುತ್ತಾರೆ ! ಇಂತಹ ಮೂಲಗಳನ್ನು ಹುಡುಕದೆ ಯಾರೋ ಹೇಳಿದ್ದಾರೆ ಎಂದು ಬ್ಲೈಂಡ್ ಫಾಲೋವರ್ಸ್ ಆಗಬಾರದು ಎಂಬುದು ನನ್ನ ಅನಿಸಿಕೆ. ನಾನು ನನಗೆ ದೊರೆತ ಕೆಲವು ಉದಾಹರಣೆಗಳನ್ನೂ, ಪರಿಹಾರ ಸಿಗದ ಪ್ರಶ್ನೆಗಳನ್ನೂ ನಿಮ್ಮೆಲ್ಲರ ಮುಂದೆ ಇರಿಸಿದ್ದೇನೆ, ಚರ್ಚಿಸುವುದರಲ್ಲಿ ತಪ್ಪೇನಿಲ್ಲ, ಆದರೆ ಮಂಗನಿಂದಲೇ ಮಾನವನಾದ ಎಂಬ ವಾದಕ್ಕೆ ಯಾವುದೇ ಸ್ಪಷ್ಟ ಪುಷ್ಟೀಕರಣ ಸಿಗುವುದಿಲ್ಲವದ್ದರಿಂದಲೇ ಅದು ‘ಮಿಸ್ಸಿಂಗ್ ಲಿಂಕ್ ‘ ಆಗಿದೆ ! ಭಾರತೀಯ ಆಕರ ಗ್ರಂಥಗಳಾದ ವೇದಗಳನ್ನು ಕೊನೇಪಕ್ಷ ನಮ್ಮಲ್ಲಿನ ವಿಜ್ಞಾನಿಗಳು ಬಳಸಿಕೊಂಡರೆ ಉತ್ತಮ ಅಂಶಗಳು ಬೆಳಕಿಗೆ ಬರಬಹುದು. ನನ್ನ ಪ್ರತಿಕ್ರಿಯೆಗಳನ್ನು ಇಲ್ಲಿಗೇ ನಿಲ್ಲಿಸುತ್ತಿದ್ದೇನೆ, ಎಲ್ಲರಿಗೂ ಧನ್ಯವಾದಗಳು.

    ಉತ್ತರ
    • ಏಪ್ರಿಲ್ 12 2012

      “The problem with several established religions is not in their unfalsifiable claims ; it is with their falsifiable and falsified claims.” (google it out!) 🙂

      ಉತ್ತರ
  22. Balachandra
    ಏಪ್ರಿಲ್ 11 2012

    1 . {ಆದರೆ ವಿಜ್ಞಾನದ ವಿಕಾಸ ವಾದ ಒಂದು ವಾದವಷ್ಟೇ ಎಂಬುದನ್ನು ಮರೆಯಬಾರದು ! ವಾದ ಬೇರೆ ಸಿದ್ಧಪಡಿಸಿದ ಸೂತ್ರ ಬೇರೆ.}
    ವಿಜ್ಞಾನದಲ್ಲಿ ಸಿದ್ಧಪಡಿಸಿದ ಸೂತ್ರಗಳೂ ಲಭ್ಯ, ಹಾಗೂ ವಾದಗಳೂ ಇವೆ. ವಿಕಾಸವಾದ 100% ನಿಜ ಎಂದು ವಿಜ್ಞಾನಿಗಳೂ ಹೇಳುತ್ತಿಲ್ಲ ಮತ್ತು ಸತ್ಯವನ್ನು ಕಂಡುಹಿಡಿಯಲು ಈ ವಾದಗಳು ಪ್ರೇರೇಪಿಸುತ್ತವೆ. ‘ದಂತಕತೆ’ ಎಂದು ಬದಿಗಿಟ್ಟರೆ ಅದು ನಿರ್ಲಕ್ಶತನ ಅಷ್ಟೇ. Dalton ನ ಪರಮಾಣು ವಾದ ಕೂಡ ಬರೇ ವಾದವಷ್ಟೇ ಆಗಿತ್ತು. ಅದರಲ್ಲಿಯೂ ಬಹಳಷ್ಟು ನ್ಯೂನ್ಯತೆಗಳಿವೆ. ಅದನ್ನು ಬರೇ ‘ದಂತಕತೆ’ ಹೀಗೆಳೆದಿದ್ದರೆ ಇವತ್ತು ಅಧುನಿಕ ಪರಮಾಣು ವಿಜ್ಞಾನ ಅಸ್ತಿತ್ವದಲ್ಲಿರುತ್ತಿರಲಿಲ್ಲ. ಹಾಗೆಯೇ ವಿಕಾಸವಾದದಲ್ಲಿಯೂ ಸತ್ಯವೂ ಇದೆ, ನ್ಯೂನ್ಯತೆಗಳೂ ಇದೆ. ನ್ಯೂನ್ಯತೆಗಳನ್ನು ಪರಿಹರಿಸಲು ಈಗ ನಡೆದಿರುವ ಅಧ್ಯಯನಗಳ ಕೂಲಂಕುಷ ಅಧ್ಯಯನಗಳ ಮುಖಾಂತರವೇ ಹೊರತು ‘ದಂತಕತೆಯೆಂದು’ ಬದಿಗೊತ್ತುವ ನಿರ್ಲಕ್ಷತನದಿಂದ ಸಾಧ್ಯವಿಲ್ಲ.

    2. {೪೫, ೦೦೦ ವರ್ಷಗಳು ಎಂದು ಒಬ್ಬರು, ೫೦೦,೦೦೦ ವರ್ಷಗಳು ಇನ್ನೊಬ್ಬರು ವಿಕಾಸ ವಾದದ ಪ್ರಾಚೀನತೆಯನ್ನು ನನ್ನ ಗಮನಕ್ಕೆ ತರಲು ಯತ್ನಿಸಿದ್ದೀರಿ)
    ಅದು ಬೇರೆ ಬೇರೆ ಪ್ರಭೇದಗಳ ಕುರಿತಾಗಿ ಹಾಗೂ ಬೇರೆ ಬೇರೆ ಹಂತಗಳನ್ನು ಆಧರಿಸಿ ಹೇಳಿದ್ದು. ಅವುಗಳಲ್ಲಿಯೂ ಭಿನ್ನಾಭಿಪ್ರಾಯಗಳು ಇದ್ದಿರಬಹುದು. ಆದರೆ ಅವುಗಳ ಸತ್ಯಾಸತ್ಯತೆಗೆ ವಿಜ್ಞಾನದ ಅಭ್ಯಾಸ ಮುಖ್ಯವೇ ಹೊರತು ನಿರ್ಲಕ್ಶತನ ಅಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕನ್ನು ಕ್ಲಿಕ್ಕಿಸಿ: http://en.wikipedia.org/wiki/Human_evolution

    3. {ಅಧ್ಯಯನ ಮಾಡುವಾಗ ವೇದಗಳು ಪೊಳ್ಳು ಅಥವಾ ಪುರೋಹಿತಶಾಹಿ ಎಂಬ ಹಳದಿ ಕನ್ನಡಕ ತೆಗೆದಿಟ್ಟು ವೇದದಲ್ಲಿ ಪೂರ್ವಜರು ನಮಗೇನು ಕೊಟ್ಟರು ? ವೇದಕ್ಕೆ ಅಷ್ಟೆಲ್ಲಾ ಮಹತ್ವ ನೀಡಿದ್ದೇಕೆ ? ಎಂಬುದನ್ನು ಕೆದಕುತ್ತಾ, ಇವತ್ತು ಹಲವು ಮಾರ್ಗಗಳಿಂದ ಓದಲು ಲಭ್ಯವಿರುವ ವೇದಗಳ ಸರಿಯಾದ ಹೊತ್ತಗೆಗಳನ್ನು ತೆರೆದು ಓದಿ, ಅರ್ಥಮಾಡಿಕೊಂಡರೆ ಜೀವ ವಿಕಾಸ ಹೇಗೆ ಆಯ್ತು ? ಎಂಬುದಕ್ಕೆ ಗಮನಾರ್ಹ ಉತ್ತರ ಸಿಗುತ್ತದೆ. }
    ಹಾಗಾದರೆ ಪುರೋಹಿತರುಗಳೇ ವಿಕಾಸವಾದವನ್ನು ಮಂಡಿಸಬಹುದಾಗಿತ್ತಲ್ಲ? ಈಗಲೂ ಕಾಲ ಮಿಂಚಿಲ್ಲ. ಮಿಸ್ಸಿಂಗ್ ಲಿಂಕ್ಸ್ ಬಗ್ಗೆ ವೇದ ಏನು ಹೇಳುತ್ತದೆ ಎಂದು ನೀವು ತಿಳಿಸಬಹುದು.
    4. {ಸೃಷ್ಟಿಯಲ್ಲಿ ನಮಗೆ ಸಾಕ್ಷಾತ್ ಕಾಣಸಿಗುವ, ಜೀವನದ ಭಾಗಗಳೇ ಆಗಿರುವ ಪಂಚಭೂತಗಳ ನಿರ್ಮಾಣ, ನಿರ್ವಹಣೆ, ಚಾಲನೆ ಇನ್ನೂ ನಮ್ಮ ವಿಜ್ಞಾನಕ್ಕೆ ಅರ್ಥವಾಗಿಲ್ಲ……}
    ಸೃಷ್ಟಿ ವಿಜ್ಞಾನದ ಭಾಗವೇ ಆಗಿದೆ. ಸೃಷ್ಟಿ ವಿಜ್ಞಾನದ ನಿಯಮದಂತೆ ನಡೆಯುತ್ತದೆ. ವಿಜ್ಞಾನಕ್ಕೆ ಎಲ್ಲವೂ ಅರ್ಥವಾಗಿದೆ, ಆದರೆ ಅದನ್ನು ತಿಳಿದುಕೊಳ್ಳುವ ಮನುಷ್ಯರಿಗೆ ಅರ್ಥವಾಗಿಲ್ಲ ಅಷ್ಟೇ. ವಿಜ್ಞಾನ ಯಾರ ಸ್ವತ್ತೂ ಅಲ್ಲ. ಮಾನವ ಹುಟ್ಟುವದಕ್ಕಿಂತ ಮೊದಲೂ ಇತ್ತು, ನಂತರವೂ ಇರುತ್ತದೆ. ಈ ಪ್ರಥ್ವಿ ‘ವೇದದಲ್ಲಿ’ ಹೇಳಿರುವಂತೆ Flat ಆಗಿ ಕೂಡ ಇಲ್ಲ.
    5. {ಇಂತಹ ಮೂಲಗಳನ್ನು ಹುಡುಕದೆ ಯಾರೋ ಹೇಳಿದ್ದಾರೆ ಎಂದು ಬ್ಲೈಂಡ್ ಫಾಲೋವರ್ಸ್ ಆಗಬಾರದು ಎಂಬುದು ನನ್ನ ಅನಿಸಿಕೆ.}
    ವಿಜ್ಞಾನದ ಮೂಲ ಉದ್ದೇಶವೇ blind followers ಆಗದಿರುವದು.
    6. {ಅಗ್ನಿಯ ಸಹಾಯದಿಂದಲೇ ನೀರಿನ ಉತ್ಫತ್ತಿ ಆಯ್ತು ಎನ್ನುತ್ತಾರೆ !}
    ಹಾಗಾದರೆ ಸಾವಿರಾರು ವರ್ಷಗಳ ಹಿಂದೆಯೇ ಈಗಿನ ವಿಜ್ಞಾನವನ್ನು ವೇದಗಳನ್ನು ಅಭ್ಯಸಿಸಿದವರು ಕಂಡುಹಿಡಿಯಬಹುದಿತ್ತಲ್ಲ?
    7. {ನಾನು ನನಗೆ ದೊರೆತ ಕೆಲವು ಉದಾಹರಣೆಗಳನ್ನೂ, ಪರಿಹಾರ ಸಿಗದ ಪ್ರಶ್ನೆಗಳನ್ನೂ ನಿಮ್ಮೆಲ್ಲರ ಮುಂದೆ ಇರಿಸಿದ್ದೇನೆ}
    ನಾವು ಉತ್ತರಿಸಿದ್ದೇವೆ ಕೂಡ. ಅದನ್ನು ಕಿಂಚಿತ್ ತಿಳಿದುಕೊಳ್ಳಲು ಸಮಗ್ರ ಅಧ್ಯಯನ ನಡೆಸುವದು ನಮ್ಮ ಕರ್ತವ್ಯ. ಅದನ್ನು ನೀವು ಸುಳ್ಳೇ ಸುಳ್ಳು ಎಂದು ಎಂದು ಮಂಡಿಸುವದಾದರೆ ನಮಗೆ ಬಹಳ ಸಂತೋಷ. ಯಾಕೆಂದರೆ ಸರಿಯಾದ್ದು ಯಾವುದು
    ಎಂದು ನೀವು ವಿವರಿಸಿದರೆ ವಿಜ್ಞಾನದ ಹೊಸ ಅವಿಷ್ಕಾರ ನಿಮ್ಮಿಂದ ಸಾಧ್ಯವಾಗಬಹುದು. ಇನ್ನೊಂದು ವಿಷಯ ದಯವಿಟ್ಟು ನೆನಪಿಡಿ. ಇವತ್ತಿನ ವಿಜ್ಞಾನ ಸುಳ್ಳು ಎಂದಾಕ್ಷಣ ಇನ್ನೂ ಸರಿಯಾದ ವಿಜ್ಞಾನದ ಅವಿಷ್ಕಾರ ಸಾಧ್ಯವಾಗುತ್ತದೆಯೇ ವಿನಃ ಪುರಾಣ ವೇದಗಳು ಸತ್ಯ ಎಂದು ಅಲ್ಲ.
    8. {ಆದರೆ ಮಂಗನಿಂದಲೇ ಮಾನವನಾದ ಎಂಬ ವಾದಕ್ಕೆ ಯಾವುದೇ ಸ್ಪಷ್ಟ ಪುಷ್ಟೀಕರಣ ಸಿಗುವುದಿಲ್ಲವದ್ದರಿಂದಲೇ ಅದು ‘ಮಿಸ್ಸಿಂಗ್ ಲಿಂಕ್ ‘ ಆಗಿದೆ}
    ಪುರಾಣಗಳಲ್ಲಿರುವ ವಾದಗಳಿಗಿಂತ ‘ವಿಕಾಸವಾದಕ್ಕೆ’ ಜಾಸ್ತಿ ಪುಷ್ಟೀಕರಣ ಸಿಗುವದರಿಂದ ಅದನ್ನು ಅಧ್ಯಯನ ಮಾಡದೆ ವಿಧಿಯಿಲ್ಲ.
    9. {ಭಾರತೀಯ ಆಕರ ಗ್ರಂಥಗಳಾದ ವೇದಗಳನ್ನು ಕೊನೇಪಕ್ಷ ನಮ್ಮಲ್ಲಿನ ವಿಜ್ಞಾನಿಗಳು ಬಳಸಿಕೊಂಡರೆ ಉತ್ತಮ ಅಂಶಗಳು ಬೆಳಕಿಗೆ ಬರಬಹುದು.}
    ಸಾವಿರಾರು ವರ್ಷಗಳಿಂದ ಅವುಗಳ ಅಧ್ಯಯನ ನಡೆಸಿದ ಪುರೋಹಿತರುಗಳ್ಯಾಕೆ ಯಾವ ವಿಜ್ಞಾನವನ್ನೂ ಬೆಳಕಿಗೆ ತಂದಿಲ್ಲ?

    ಉತ್ತರ
    • Kumar
      ಏಪ್ರಿಲ್ 11 2012

      Balachandra> ಈ ಪ್ರಥ್ವಿ ‘ವೇದದಲ್ಲಿ’ ಹೇಳಿರುವಂತೆ Flat ಆಗಿ ಕೂಡ ಇಲ್ಲ.
      ವೇದದಲ್ಲಿ ಎಲ್ಲಿ ಪೃಥ್ವಿಯು ಚಪ್ಪಟೆಯಾಗಿದೆ ಎನ್ನುವುದನ್ನು ದಯವಿಟ್ಟು ತಿಳಿಸಿ.
      “ಖಗೋಳ”, “ಭೂಗೋಳ”, ಇತ್ಯಾದಿ ಪದಗಳು ಗೋಳವಾಗಿರುವ ವಸ್ತುವಿನ ಕುರಿತಾಗಿಯೇ ಮಾತನಾಡುತ್ತವೆ.

      Balachandra> ಪುರಾಣ ವೇದಗಳು ಸತ್ಯ ಎಂದು ಅಲ್ಲ
      ಪುರಾಣಗಳನ್ನೂ ವೇದಗಳನ್ನೂ ಒಂದೇ ತಕ್ಕಡಿಯಲ್ಲಿ ತೂಗಬೇಡಿ. ಇವೆರಡೂ ಪ್ರತ್ಯೇಕ ವಿಷಯಗಳು.
      ಪ್ರಸ್ತುತ ಲೇಖನದ ಲೇಖಕರು ವಿಜ್ಞಾನದ ಅಧ್ಯಯನ ನಡೆಸದೆಯೇ “ವಿಕಾಸವಾದ”ದ ಕುರಿತಾಗಿ ಬರೆಯುತ್ತಿದ್ದಾರೆ ಎಂದು ನೀವು ಆರೋಪಿಸುತ್ತಿರುವಂತೆಯೇ,
      ನೀವು ಕೂಡಾ ವೇದಾಧ್ಯಯನ ಮಾಡದೆಯೇ, ಯಾವುದೇ ಪುರಾಣಗಳನ್ನೂ ಓದದೆಯೇ ಪೂರ್ಣ ವಿಚಾರ ತಿಳಿದವರಂತೆ ಮಾತನಾಡುತ್ತಿದ್ದೀರಿ ಎಂಬುದು ತಿಳಿಯುತ್ತಿದೆ.

      Balachandra> ಸಾವಿರಾರು ವರ್ಷಗಳಿಂದ ಅವುಗಳ ಅಧ್ಯಯನ ನಡೆಸಿದ ಪುರೋಹಿತರುಗಳ್ಯಾಕೆ ಯಾವ ವಿಜ್ಞಾನವನ್ನೂ ಬೆಳಕಿಗೆ ತಂದಿಲ್ಲ?
      ನೀವು ಯಾವ ಪುರೋಹಿತರ ಕುರಿತಾಗಿ ಮಾತನಾಡುತ್ತಿದ್ದೀರೆಂದು ತಿಳಿಯುತ್ತಿಲ್ಲ.
      ವೇದಗಳು ವಿಜ್ಞಾನದ ಅನೇಕ ಶಾಖೆಗಳಿಗೂ ಮೂಲವಾಗಿದೆ.
      ಉದಾಹರಣೆಗೆ, ಗಣಿತದಲ್ಲಿ ನಾವಿಂದು ಕಲಿಯುತ್ತಿರುವ ಅನೇಕ ಸಂಗತಿಗಳ ಉಗಮವನ್ನು ವೇದದಲ್ಲೇ ಕಾಣಬಹುದು.
      ಆಯುರ್ವೇದದಂತಹ ಜೀವನಕಲೆ/ವೈದ್ಯಕೀಯಕ್ಕೂ ವೇದವೇ ಮೂಲ.
      ವೃಕ್ಷಾಯುರ್ವೇದದಲ್ಲಿ ಇಂದಿನ Botonyಯ ಅನೇಕ ವಿಷಯಗಳನ್ನು ತಿಳಿಸಿರುವುದನ್ನು ಕಾಣಬಹುದು.
      ಚರಕ, ಸುಶ್ರುತ, ಭಾಸ್ಕರಾಚಾರ್ಯ, ಆರ್ಯಭಟ, ವರಾಹಮಿಹಿರ, ಶ್ರೀಧರಾಚಾರ್ಯ ಇತ್ಯಾದಿ ವ್ಯಕ್ತಿಗಳು ವಿಜ್ಞಾನದ ಕುರಿತಾಗಿ ಬರೆದಿರುವ ಗ್ರಂಥಗಳು ಇಂದಿಗೂ ಲಭ್ಯವಿದೆ.
      ಇವರು ಪ್ರಾಚೀನ ಭಾರತೀಯರು; ಇಂದು ನಾವು ಕಾಣುತ್ತಿರುವ ಯಾವ ಆಧುನಿಕ ಸಲಕರಣೆಗಳು ಇಲ್ಲದಿರುವ ಕಾಲದಲ್ಲೇ ಸಂಶೋಧನೆ ನಡೆಸಿದ್ದರು; ವಿಜ್ಞಾನವು (ಪಶ್ಚಿಮದಲ್ಲಿ) “ಮುಂದುವರೆಯದೆ” ಇದ್ದ ಕಾಲದಲ್ಲಿ ಇವರು ಇದ್ದವರು.

      > ಮಿಸ್ಸಿಂಗ್ ಲಿಂಕ್ಸ್ ಬಗ್ಗೆ ವೇದ ಏನು ಹೇಳುತ್ತದೆ
      ಮಿಸ್ಸಿಂಗ್ ಲಿಂಕ್ಸ್ ಬಗ್ಗೆ ವೇದ ತಿಳಿಸುವ ಅಗತ್ಯವಿಲ್ಲ. ಏಕೆಂದರೆ, “ಮಂಗನಿಂದ ಮಾನವ ವಿಕಾಸ”ದ ಕುರಿತಾಗಿ ವೇದವು ತಿಳಿಸಿಲ್ಲ. ಅದನ್ನು ತಿಳಿಸಿರುವ ವಿಜ್ಞಾನದ ಶಾಖೆಯೇ ಅದರ ಕುರಿತಾಗಿ ತಿಳಿಸಬೇಕು.

      ಉತ್ತರ
      • Balachandra
        ಏಪ್ರಿಲ್ 11 2012

        1. {ವೇದದಲ್ಲಿ ಎಲ್ಲಿ ಪೃಥ್ವಿಯು ಚಪ್ಪಟೆಯಾಗಿದೆ ಎನ್ನುವುದನ್ನು ದಯವಿಟ್ಟು ತಿಳಿಸಿ.}
        ಯಜುರ್ ವೇದ ೩೨.೮ ಹಾಗೆ ಹೇಳುತ್ತದೆ.
        2. {ಪ್ರಸ್ತುತ ಲೇಖನದ ಲೇಖಕರು ವಿಜ್ಞಾನದ ಅಧ್ಯಯನ ನಡೆಸದೆಯೇ “ವಿಕಾಸವಾದ”ದ ಕುರಿತಾಗಿ ಬರೆಯುತ್ತಿದ್ದಾರೆ ಎಂದು ನೀವು ಆರೋಪಿಸುತ್ತಿರುವಂತೆಯೇ,
        ನೀವು ಕೂಡಾ ವೇದಾಧ್ಯಯನ ಮಾಡದೆಯೇ, ಯಾವುದೇ ಪುರಾಣಗಳನ್ನೂ ಓದದೆಯೇ ಪೂರ್ಣ ವಿಚಾರ ತಿಳಿದವರಂತೆ ಮಾತನಾಡುತ್ತಿದ್ದೀರಿ ಎಂಬುದು ತಿಳಿಯುತ್ತಿದೆ.}
        ಲೇಖಕರು ವಿಜ್ಞಾನ ಅಧ್ಯಯನ ಮಾಡದೆ ವಾದ ಮುಂದಿಡುತ್ತಿದ್ದಾರೆಂದು ಅವರ ಪ್ರಶ್ನೆಗಳಲ್ಲಿಯೇ ಸುಸ್ಪಷ್ಟ. ಇನ್ನು ನಾನು ಪೂರ್ತಿಯಾಗಿ ವೇದ ಪುರಾಣ ಅಧ್ಯಯನ ಮಾಡದಿದ್ದದ್ದು ನಿಜ. ಆದ್ರೆ ಅಲ್ಪ-ಸ್ವಲ್ಪ ಮಾಡಿದ್ದೇನೆ. ನಾನು ವೇದ ಪುರಾಣಗಳ ಬಗ್ಗೆ ತಾತ್ಸಾರ ಮಾಡುವಷ್ಟು ಪೂರ್ವಗ್ರಹಪೀಡಿತನಾಗಿಲ್ಲ. ನಿಜ ಹೇಳಬೇಕೆಂದರೆ ಉಪನಿಷತ್ತುಗಳಲ್ಲಿರುವ ಅದ್ವೈತ ತತ್ವ ನನಗೂ ಇಷ್ಟ. ಆದರೆ ವಿಜ್ಞಾನದ ವಿಷಯ ಬಂದಾಗ ವಿಜ್ಞಾನ ಮತ್ತು ವೇದಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವದು ಸರಿಯಲ್ಲ ಎಂದು ನನಗನ್ನಿಸುತ್ತದೆ. ಯಾಕೆಂದರೆ ಆಧ್ಯಾತ್ಮ ಮತ್ತು ವಿಜ್ಞಾನ ಇವೆರಡರ ‘objective’ ಭಿನ್ನ ಭಿನ್ನ. ಎರಡರ ಅಗತ್ಯ, ಪ್ರಾಮುಖ್ಯತೆ ಮನುಷ್ಯನಿಗೆ ಇರಲೂ ಬಹುದು. ಅದನ್ನು ನಾನು ಅಲ್ಲಗೆಳೆಯುವದಿಲ್ಲ. ಆದರೆ ವಿಜ್ಞಾನವನ್ನು ತಾರ್ಕಿಕವಾಗಿಯೂ ಹಾಗೂ ಅಧ್ಯಾತ್ಮವನ್ನು spiritual ಮಾರ್ಗಗಳ ಮೂಲಕ ಕಂಡುಕೊಳ್ಳಬೇಕು. ವೇದ, ಪುರಾಣಗಳ ಬಗ್ಗೆ ನಾನು ಯಾಕೆ ವಿಷಯವನ್ನು ಎತ್ತಿದನೆಂದರೆ ಲೇಖಕರ ವಾದ ಸರಣಿ ಹಾಗೆ ಇತ್ತು. He used ‘Reductio ad absurdum’ logical fallacy to prove his point. ಅಂದರೆ ಅವರ ತಾರ್ಕಿಕ ವಾದ ಹೇಗಿದೆಯೆಂದರೆ ‘ವಿಜ್ಞಾನ ಸುಳ್ಳು ಆದ್ದರಿಂದ ವೇದಗಳು ಸರಿ’ ಎಂಬಂತಿವೆ.
        ಇನ್ನು ಪ್ರಾಚೀನ ಭಾರತ ಮುಂದುವರೆದಿಲ್ಲ ಎಂದು ನಾನು ವಾದಿಸುತ್ತಿಲ್ಲ. ಸಿಂಧು ನಾಗರೀಕತೆ ಬಹಳಷ್ಟು ರೀತಿಯಲ್ಲಿ ಮುಂದುವರೆದಿತ್ತು. ಆದರೆ ಅವುಗಳೆಲ್ಲದಕ್ಕೂ ವೇದಗಳೇ ಕಾರಣವಲ್ಲ. ಚರಕ ಬೌದ್ಧ ನಾಗಿದ್ದ. ಹಾಗೆಂದು ವೇದಗಳಲ್ಲಿನ ಉಪಯುಕ್ತ ಮಾಹಿತಿಗಳನ್ನು ಅಲ್ಲಗೆಳೆಯುವದೂ ಇಲ್ಲ. ಆದ್ರೆ ವೇದಗಳೇ eternal ಎಂದು ಹೇಳಿದ್ದರ ಬಗ್ಗೆ ಹೇಳಿದೆ ಅಷ್ಟೇ.
        3. {ಮಿಸ್ಸಿಂಗ್ ಲಿಂಕ್ಸ್ ಬಗ್ಗೆ ವೇದ ತಿಳಿಸುವ ಅಗತ್ಯವಿಲ್ಲ. ಏಕೆಂದರೆ, “ಮಂಗನಿಂದ ಮಾನವ ವಿಕಾಸ”ದ ಕುರಿತಾಗಿ ವೇದವು ತಿಳಿಸಿಲ್ಲ.}
        ‘ವೇದವು ವಿಕಾಸದ ಕುರಿತಾಗಿ ತಿಳಿಸುತ್ತದೆ’ ಎಂದು ಅವರೇ ಹೇಳಿದ್ದು. ಅವರ ಕಾಮೆಂಟ್ ಈ ಕೆಳಗೆ ಹೀಗೆ ಇದೆ, ನೀವೇ ಓದಿ.
        “ಇವತ್ತು ಹಲವು ಮಾರ್ಗಗಳಿಂದ ಓದಲು ಲಭ್ಯವಿರುವ ವೇದಗಳ ಸರಿಯಾದ ಹೊತ್ತಗೆಗಳನ್ನು ತೆರೆದು ಓದಿ, ಅರ್ಥಮಾಡಿಕೊಂಡರೆ ಜೀವ ವಿಕಾಸ ಹೇಗೆ ಆಯ್ತು ? ಎಂಬುದಕ್ಕೆ ಗಮನಾರ್ಹ ಉತ್ತರ ಸಿಗುತ್ತದೆ.”

        ಉತ್ತರ
  23. Balachandra
    ಏಪ್ರಿಲ್ 11 2012

    @Maatmaatalli,
    ನಿಮಗೆ ಸಮಯವಿದ್ದರೆ ದಯವಿಟ್ಟು ಈ ಕೆಳಗಿನ ಮಾಹಿತಿಯನ್ನು ಓದಿ. ಪ್ರಯೋಗಶಾಲೆಯಲ್ಲಿ ‘ವಿಕಾಸವಾದಕ್ಕೆ’ ಪುಷ್ಟಿ ಕೊಡುವ ಪ್ರಯೋಗವನ್ನು ನಡೆಸಲಾಯಿತು. ಸೂಕ್ಷ್ಮದರ್ಶಕದ ಮೂಲಕವೇ microbes ಗಳಲ್ಲಿ ಜೀವ ಹೇಗೆ ವಿಕಾಸವಾದ ಆಗುತ್ತವೆ ಎಂಬುದನ್ನು ದರ್ಶಿಸಲಾಯಿತು. ಹೇಗೆ Escherichia coli ಎಂಬ ಬ್ಯಾಕ್ಟೀರಿಯ 31500 generation ಬಳಿಕ ಬೇರೆಯ specimen ಆಗಿ ವಿಕಾಸ ಹೊಂದಿತೆಂದು ಕಣ್ಣುಮುಂದೆಯೇ ವೀಕ್ಷಿಸಲಾಯಿತು. ಹಳದಿ ಕಣ್ಣುಗಳನ್ನು ಹೊಂದಿದವರು ಮೊದಲು ಇಂತಹ ಆವಿಷ್ಕಾರಗಳ ಬಗ್ಗೆ ಓದಬೇಕು. ಈ ಬಗ್ಗೆ ಬಹಳಷ್ಟು ಪ್ರಯೋಗಗಳು ನಡೆದಿವೆ. ದಯವಿಟ್ಟು ಓದಿ.
    http://www.newscientist.com/article/dn14094-bacteria-make-major-evolutionary-shift-in-the-lab.html

    ಉತ್ತರ
  24. Sandeep
    ಏಪ್ರಿಲ್ 11 2012

    ಲೋಕಾಯತ ವಾದ(ನಾಸ್ತಿಕವಾದ)ದ ಚಾರ್ವಾಕನ ಕಾಲವೂ ೩೦೦೦ ವರ್ಷಗಳ ಹಿಂದೇಯೇ… ದೇವರುಗಳು ಭೂಮಿಯ ಮೇಲೆ ನಡೆದಾಡುತ್ತಿದ್ದರೆನ್ನಲಾದ ಸಮಯದಲ್ಲೇ ನಾಸ್ತಿಕವಾದವೂ ಪ್ರಚಲಿತವಾಗಿತ್ತೆಂದರೆ ನಾವು ಬರೀ ವೇದಗಳನ್ನ ಯಾಕೆ ನಂಬಬೇಕು ಮತ್ತು ಲೋಕಾಯತ ವಾದವನ್ನೇಕೆ ತಳ್ಳಿ ಹಾಕಬೇಕು? ಅಷ್ಟೊಂದು ವರ್ಷಗಳ ಹಿಂದೆಯೇ ನಾಸ್ತಿಕವಾದವೂ ಇತ್ತೆಂದರೆ ಅದಕ್ಕೊಂದು ಅರ್ಥ ಇರಲೇಬೇಕಲ್ಲವೇ…

    ಉತ್ತರ
    • ಏಪ್ರಿಲ್ 12 2012

      ಒಪ್ಪಬಹುದಾದಂತಹ ಮಾತು ಹೇಳಿದ್ದೀರಿ ಸಂದೀಪ್ ಅವರೇ…
      http://en.wikipedia.org/wiki/C%C4%81rv%C4%81ka

      ಉತ್ತರ
    • Kumar
      ಏಪ್ರಿಲ್ 12 2012

      Sandeep> ಲೋಕಾಯತ ವಾದ(ನಾಸ್ತಿಕವಾದ)ದ ಚಾರ್ವಾಕ
      Sandeep> ಲೋಕಾಯತ ವಾದವನ್ನೇಕೆ ತಳ್ಳಿ ಹಾಕಬೇಕು?
      ಯಾರು ತಳ್ಳಿಹಾಕಿದ್ದಾರೆ? ನೀವು ಅದನ್ನು ಅಧ್ಯಯನ ಮಾಡಿದ್ದರೆ, ಅದರಲ್ಲಿ “ಸತ್ಯ”ವನ್ನು ತಿಳಿಸಿದ್ದಾರೆಂದು ಕಂಡರೆ, ಅದನ್ನೂ ಚರ್ಚಿಸಬಹುದು.
      ಚಾರ್ವಾಕನು ಹೇಳಿದ್ದಕ್ಕೆ “ಚಾರ್ವಾಕ ಸಿದ್ಧಾಂತ”ವೆಂದು ಸ್ಥಾನ ನೀಡಿದ್ದಾರೆ; ಚಾರ್ವಾಕನಿಗೆ ಮುನಿಯ ಸ್ಥಾನ ನೀಡಿದ್ದಾರೆ.
      ಕೆಲವರಂತೂ “ಚಾರ್ವಾಕ ಸಿದ್ಧಾಂತ”ನ್ನು ಷಡ್ದರ್ಶನದ ಭಾಗವನ್ನಾಗಿಯೇ ಕಂಡಿದ್ದಾರೆ.
      ಕೇವಲ ಚಾರ್ವಾಕ ಮಾತ್ರ ನಾಸ್ತಿಕನಾಗಿದ್ದನೆಂದು ಭಾವಿಸಬೇಡಿ.
      ಜಗತ್ತಿದೆ ಮೊಟ್ಟಮೊದಲ ಬಾರಿಗೆ ಅಣು, ಪರಮಾಣುಗಳನ್ನು ಪರಿಚಯಿಸಿದ ಕಣಾದನೂ ನಾಸ್ತಿಕನಾಗಿದ್ದ.
      ಷಡ್ದರ್ಶನದ ಭಾಗವಾದ ಸಾಂಖ್ಯದ ಕರ್ತೃ ಕಪಿಲ ಮುನಿಗಳೂ ನಾಸ್ತಿಕರಾಗಿದ್ದರು.
      ಇವೆಲ್ಲಕ್ಕೂ ಹಿಂದುಧರ್ಮದಲ್ಲಿ ಉನ್ನತ ಸ್ಥಾನ ನೀಡಲಾಗಿದೆ. ನಾಸ್ತಿಕರಿಗೂ ಅಸ್ತಿಕರಿಗಿರುವ ಸ್ಥಾನಮಾನವೇ ಇದೆ. ಯಾವ ಸಿದ್ಧಾಂತವನ್ನೂ ಇಲ್ಲಿ ತಳ್ಳಿಹಾಕಲಾಗಿಲ್ಲ.

      ಆದರೆ, ಪ್ರಸ್ತುತ ಚರ್ಚೆಗೂ “ಚಾರ್ವಾಕ ಸಿದ್ಧಾಂತ”ಕ್ಕೂ ಏನು ಸಂಬಂಧ ಎಂದು ತಿಳಿಸಿದರೆ, ನಿಮ್ಮ ಬುದ್ಧಿಮಟ್ಟವನ್ನು ಪ್ರಶಂಸಿಸಬಹುದು.
      ಇಲ್ಲದಿದ್ದರೆ…….!

      ಉತ್ತರ
  25. Ananda Prasad
    ಏಪ್ರಿಲ್ 12 2012

    ಬಾವಿಯ ಒಳಗೆ ಇರುವವನು ಬಾವಿಯ ಸೀಮಿತ ಲೋಕವನ್ನು ಮಾತ್ರ ನೋಡಲು ಸಾಧ್ಯ, ಬಾವಿಯಿಂದ ಮೇಲೆ ಬಂದರೆ ಸುತ್ತಮುತ್ತಲಿನ ನೆಲ ಬಯಲಾದರೆ ಕೆಲವು ಕಿಲೋಮೀಟರ್ ದೂರ ನೋಡಬಹುದು. ನೋಡುವ ವ್ಯಕ್ತಿಯ ಬಳಿ ದೂರದರ್ಶಕ ಇದ್ದರೆ ಕೆಲವು ಕಿಲೋಮೀಟರ್ ದೂರದ ದೃಶ್ಯಗಳನ್ನೂ ಸ್ಪಷ್ಟವಾಗಿ ನೋಡಬಹುದು. ಸಮತಟ್ಟಾದ ನೆಲದಲ್ಲಿ ನಿಂತ ವ್ಯಕ್ತಿ ನೋಡುವುದಕ್ಕಿಂತ ಹೆಚ್ಚು ದೂರದ ಪ್ರದೇಶ ಬೆಟ್ಟದ ಮೇಲೆ ನಿಂತರೆ ಕಾಣುತ್ತದೆ. ವಿಮಾನ ಅಥವಾ ಹೆಲಿಕಾಪ್ಟರ್ ಹಾರುವ ಎತ್ತರದಿಂದ ನೋಡಿದರೆ ತುಂಬಾ ದೂರದ ಪ್ರದೇಶಗಳು ಕಾಣುತ್ತವೆ. ಅದೇ ರೀತಿ ಭೂಸ್ಥಿರ ಕಕ್ಷ್ಯೆಯಲ್ಲಿ ಇರುವ ಉಪಗ್ರಹವು ಭೂಮಿಯ ಬಹಳ ವಿಸ್ತಾರವಾದ ಪ್ರದೇಶವನ್ನು ಚಿತ್ರಿಸಿ ಕಳುಹಿಸಬಲ್ಲುದು. ಹೀಗಾಗಿ ನಾವು ಇತ್ತೀಚಿನ ವಿಜ್ಞಾನದ ಮುನ್ನಡೆಯನ್ನು ನಿರ್ಲಕ್ಷಿಸಿ ಎಲ್ಲವನ್ನೂ ವೇದದಲ್ಲಿ ಹೇಳಿದ್ದಾರೆ ಎಂದು ಹೇಳುವುದು ಸಮಂಜಸವಾಗುವುದಿಲ್ಲ. ನೂರಾರು ಅಥವಾ ಸಾವಿರಾರು ವರ್ಷಗಳ ಹಿಂದೆ ದೂರದರ್ಶಕ, ಸೂಕ್ಷ್ಮದರ್ಶಕ, ಎಲೆಕ್ಟ್ರಾನ್ ಸೂಕ್ಷ್ಮದರ್ಶಕ, ರಾಕೆಟ್, ಉಪಗ್ರಹ, ರೇಡಿಯೋ ದೂರದರ್ಶಕ ಇತ್ಯಾದಿ ವೈಜ್ಞಾನಿಕ ಉಪಕರಣಗಳು ಲಭ್ಯವಿಲ್ಲದೆ ಇದ್ದಾಗ ರೂಪಿಸಲ್ಪಟ್ಟ ವೇದಗಳೇ ಪರಮಶ್ರೇಷ್ಠ ಜ್ಞಾನದ ಭಂಡಾರ ಎಂದು ಹೇಳುವುದು ಒಪ್ಪಲಾಗದು. ವೇದಗಳ ಜ್ಞಾನ ಇಂದಿನ ಜ್ಞಾನಭಂಡಾರಕ್ಕೆ ಹೋಲಿಸಿದರೆ ಅತ್ಯಂತ ಸೀಮಿತ ಜ್ಞಾನ ಎಂಬುದರಲ್ಲಿ ಸಂದೇಹವಿಲ್ಲ. ಅದನ್ನೇ ವೈಭವೀಕರಿಸುವುದು ಸಲ್ಲದು. ಇಂದಿನ ಲಭ್ಯ ಜ್ಞಾನ ಭಂಡಾರವನ್ನು ಅಧ್ಯಯನ ಮಾಡಿ ವಿಶಾಲ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು ಉತ್ತಮ.

    ಉತ್ತರ
    • Kumar
      ಏಪ್ರಿಲ್ 12 2012

      Ananda Prasad> ಬಾವಿಯ ಒಳಗೆ ಇರುವವನು ಬಾವಿಯ ಸೀಮಿತ ಲೋಕವನ್ನು ಮಾತ್ರ ನೋಡಲು ಸಾಧ್ಯ,
      ಭಾವಿಯ ಒಳಗಿರುವವರು ಯಾರು ಎಂಬುದಷ್ಟೇ ನಿಶ್ಚಯವಾಗಬೇಕಾದ್ದು!

      Ananda Prasad> ಇತ್ತೀಚಿನ ವಿಜ್ಞಾನದ ಮುನ್ನಡೆಯನ್ನು ನಿರ್ಲಕ್ಷಿಸಿ ಎಲ್ಲವನ್ನೂ ವೇದದಲ್ಲಿ ಹೇಳಿದ್ದಾರೆ ಎಂದು ಹೇಳುವುದು
      ಯಾರೂ ಆ ರೀತಿ ಹೇಳುತ್ತಿಲ್ಲ.
      ಆದರೆ, ವೇದದಲ್ಲಿ ವಿಜ್ಞಾನವನ್ನು ತಿಳಿಸಿಲ್ಲ ಎಂದೋ ಅಥವಾ ತಪ್ಪು ತಿಳಿಸಿದ್ದಾರೆ ಎಂದೋ ಹೇಳಿದಾಗ, ಅದರ ಕುರಿತಾಗಿ ಚರ್ಚಿಸಬೇಕಾಗುತ್ತದೆ.

      Ananda Prasad> ವೇದಗಳ ಜ್ಞಾನ ಇಂದಿನ ಜ್ಞಾನಭಂಡಾರಕ್ಕೆ ಹೋಲಿಸಿದರೆ ಅತ್ಯಂತ ಸೀಮಿತ ಜ್ಞಾನ ಎಂಬುದರಲ್ಲಿ ಸಂದೇಹವಿಲ್ಲ
      ನಿಮ್ಮ ಈ “ಅಜ್ಞಾನ”ದ ಕುರಿತಾಗಿಯೇ ನಾನು ಹೇಳುತ್ತಿರುವುದು.
      ವೇದಗಳ ಜ್ಞಾನವನ್ನು ಇಂದಿನ ಜ್ಞಾನಭಂಢಾರಕ್ಕೆ ಹೋಲಿಸಲು ನೀವು ವೇದವನ್ನು ಚೆನ್ನಾಗಿ ತಿಳಿದಿರಬೇಕಲ್ಲ?
      ವೇದವನ್ನೇ ಅಭ್ಯಸಿಸದೆ, ಬೇರಾರೋ ಅವರ ಮೂಗಿನ ನೇರಕ್ಕೆ ಬರೆದ ಟೀಕೆಯನ್ನೇ ಸಂಪೂರ್ಣ ಅಥವಾ ಯತಾರ್ಥವೆಂದು ಭಾವಿಸಿ, ಅದರ ಆಧಾರದ ಮೇಲೆ ವೇದಗಳ ಜ್ಞಾನ ಸೀಮಿತ ಎಂದಾಗ, ನೀವು ಹೇಳಿದ “ಭಾವಿಯ ಕಪ್ಪೆ” ನೆನಪಾಗಿ ನಗು ಬರುತ್ತದೆ.
      ಒಟ್ಟಿನಲ್ಲಿ ನಿಮ್ಮ ವೇದ (ಅ)ಜ್ಞಾನ ಕುರಿತು ಕನಿಕರ ಹುಟ್ಟುತ್ತದೆ ಮತ್ತು ಖೇದವೂ ಆಗುತ್ತದೆ.

      Ananda Prasad> ಅದನ್ನೇ ವೈಭವೀಕರಿಸುವುದು ಸಲ್ಲದು.
      ಖಂಡಿತ ವೈಭವೀಕರಿಸಬೇಕಾಗಿಲ್ಲ. ಆದರೆ, ವೇದವನ್ನು ಹಳಿದಾಗ ಅದನ್ನು ಸಮರ್ಥಿಸುವುದೇ ವೈಭವಿಕರಿಸಿದಂತೆ ಕಂಡರೆ ಏನೂ ಮಾಡಲಾಗದು.

      Ananda Prasad> ಇಂದಿನ ಲಭ್ಯ ಜ್ಞಾನ ಭಂಡಾರವನ್ನು ಅಧ್ಯಯನ ಮಾಡಿ ವಿಶಾಲ ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು ಉತ್ತಮ
      ಯಾರು ಬೇಡವೆಂದರು? ವೇದ ಎನ್ನುವುದರ ಅರ್ಥ ಜ್ಞಾನ ಎಂದೇ.
      ಜ್ಞಾನಕ್ಕೆ ಸೀಮೆಯಿಲ್ಲ ಮತ್ತು ಅದು ನಿಂತ ನೀರೂ ಅಲ್ಲ. ಅದು ನಿರಂತರ ಹರಿಯುತ್ತಿರುತ್ತದೆ ಮತ್ತು ಹೊಸ ಹೊಸ ವಿಚಾರಗಳು ಹುಟ್ಟುತ್ತಿರುತ್ತವೆ, ಹೊಸಹೊಸ ಸಂಶೋಧನೆಗಳು ಆಗುತ್ತಿರುತ್ತವೆ. ಆದರೆ, ಹೊಸ ಸಂಶೋಧನೆ ಆಯಿತೆಂದ ಮಾತ್ರಕ್ಕೆ ಹಳತು ಬೇಡವೆನ್ನುವುದು ಸಲ್ಲದು. ಮಗ ಎಷ್ಟೇ ದೊಡ್ಡವನಾದರೂ ತಾಯಿಗೆ ಮಗನೇ.
      ಆಧುನಿಕ ವಿಜ್ಞಾನ ಕಲಿಯುತ್ತಾ, ನಮ್ಮ ಪ್ರಾಚೀನರ ಕುರಿತಾಗಿಯೂ ಹೆಮ್ಮೆ ಬೆಳೆಸಿಕೊಳ್ಳೋಣ.
      ನೀವೇ ಹೇಳಿದಂತೆ, ” ನೂರಾರು ಅಥವಾ ಸಾವಿರಾರು ವರ್ಷಗಳ ಹಿಂದೆ ದೂರದರ್ಶಕ, ಸೂಕ್ಷ್ಮದರ್ಶಕ, ಎಲೆಕ್ಟ್ರಾನ್ ಸೂಕ್ಷ್ಮದರ್ಶಕ, ರಾಕೆಟ್, ಉಪಗ್ರಹ, ರೇಡಿಯೋ ದೂರದರ್ಶಕ ಇತ್ಯಾದಿ ವೈಜ್ಞಾನಿಕ ಉಪಕರಣಗಳು ಲಭ್ಯವಿಲ್ಲದೆ ಇದ್ದಾಗ ರೂಪಿಸಲ್ಪಟ್ಟ ವೇದಗಳೇ” – ಯಾವ ಸಾಧನಗಳಿಲ್ಲದಾಗ್ಯೂ ಅವರು ಸಂಶೋಧನೆ ನಡೆಸಿದರಲ್ಲ, ವಿಜ್ಞಾನವನ್ನು ಮುನ್ನಡೆಸಿದರಲ್ಲ.
      ಪಶ್ಚಿಮದಲ್ಲಾದಂತೆ, ನಮ್ಮ ಪೂರ್ವಜರೆಂದೂ ಹಿಂದಿನದಕ್ಕೇ ಕಟ್ಟುಬಿದ್ದಿಲ್ಲ, ಅಥವಾ ಪುಸ್ತಕದಲ್ಲಿ ಹೇಳಿದ್ದಕ್ಕಿಂತ ಭಿನ್ನವಾದದ್ದನ್ನು ಹೇಳಿದ್ದಕ್ಕೆ ಶಿಕ್ಷಿಸಿಲ್ಲ, ಕೊಲ್ಲಿಸಿಲ್ಲ. ಹೊಸದನ್ನು ಸದಾ ಸ್ವಾಗತಿಸಿದ್ದಾರೆ. ಅದೂ ನಮಗೆ ಹೆಮ್ಮೆ ತರುವ ವಿಷಯವೇ ಅಲ್ಲವೆ?

      ಉತ್ತರ
      • Ananda Prasad
        ಏಪ್ರಿಲ್ 12 2012

        ಹೊಸ ಸಂಶೋಧನೆಗಳಿಂದ ಹಳೆಯ ಕಾಲದಲ್ಲಿ ಸತ್ಯ ಎಂದು ನಂಬಿದ್ದ, ನಂಬಿಸಿದ್ದ ವಿಷಯಗಳು ಅಸತ್ಯ ಎಂದಾದಾಗ ಅದನ್ನು ಬಿಟ್ಟು ಬಿಡುವುದರಲ್ಲಿ ಏನು ತಪ್ಪಿದೆ? ಹಿಂದಿನ ಕಾಲದ ಜ್ಞಾನ ಬಹಳ ಸೀಮಿತ, ಆಗ ವೈಜ್ಞಾನಿಕ ಸಲಕರಣೆಗಳು ಇರಲಿಲ್ಲ. ವೈಜ್ಞಾನಿಕ ಸಲಕರಣೆ ಇಲ್ಲದೆ ಜ್ಞಾನ ರೂಪುಗೊಳ್ಳುವುದು ಹೇಗೆ? ಉದಾಹರಣೆಗೆ ನಮ್ಮ ಸುತ್ತಮುತ್ತ ಲಕ್ಷಾಂತರ ಬ್ಯಾಕ್ಟೀರಿಯಗಳು ಇವೆ. ನಮ್ಮ ಬಾಯಿಯಲ್ಲೂ, ಕರುಳಿನಲ್ಲಿಯೂ ಮಿಲಿಯಗಟ್ಟಲೆ ಬ್ಯಾಕ್ಟೀರಿಯಗಳೆಂಬ ಕಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿಗಳು ಇವೆ. ಇದನ್ನು ಸೂಕ್ಷ್ಮ ದರ್ಶಕ ಇಲ್ಲದೆ ಇದ್ದ ವೇದದ ಕಾಲದಲ್ಲಿ ರೂಪಿಸಲ್ಪಟ್ಟ ವೇದಗಳಲ್ಲಿ ಹೇಳಿಲ್ಲ ಎಂದು ಹೇಳಲು ವೇದದ ಅಧ್ಯಯನ ಮಾಡಬೇಕಾದ ಅಗತ್ಯ ಇಲ್ಲ. ಮೇಲ್ನೋಟಕ್ಕೆ ಯಾರೂ ಊಹಿಸಬಹುದು. ಇದೇ ರೀತಿ ಇತ್ತೀಚಿನ ವಿಜ್ಞಾನ ಕಂಡುಕೊಂಡ ಹಲವಾರು ಸತ್ಯಗಳು ವೇದಗಳಲ್ಲಿ ಹೇಳಿಲ್ಲ ಎಂದು ಹೇಳಲು ಬಹಳ ಪಾಂಡಿತ್ಯವಾಗಲಿ, ವೇದಗಳ ಅಧ್ಯಯನವಾಗಲಿ ಬೇಕಾಗಿದೆ ಎನಿಸುವುದಿಲ್ಲ. ಅಧುನಿಕ ವಿಜ್ಞಾನದ ಅವಿಷ್ಕಾರಗಳಾದ ವಿದ್ಯುತ್, ಮೋಟರ್, ರೇಡಿಯೋ, ಮೊಬೈಲ್, ಕಂಪ್ಯೂಟರ್, ಟಿವಿ, ಇಂಟರ್ನೆಟ್, ಮೋಟಾರು ವಾಹನಗಳು, ವಿಮಾನ, ಜಲಂತರ್ಗಾಮಿ ನೌಕೆಗಳು, ರಾಕೆಟುಗಳು, ದೂರದರ್ಶಕಗಳು, ಸೂಕ್ಷ್ಮದರ್ಶಕಗಳು ಇತ್ಯಾದಿಗಳ ಬಗ್ಗೆ ವೇದಗಳಲ್ಲಿ ಏನನ್ನೂ ಹೇಳಿಲ್ಲ ಎಂದು ಹೇಳಲು ವೇದಗಳ ಅಧ್ಯಯನ ಮಾಡಬೇಕು ಎಂದು ಅನಿಸುವುದಿಲ್ಲ ಏಕೆಂದರೆ ಇಂಥ ಅವಿಷ್ಕಾರಗಳು ಹಾಗೂ ಜ್ಞಾನಗಳು ಕಾಲಾನುಕ್ರಮವಾಗಿ ನಡೆದ ಆವಿಷ್ಕಾರ ಹಾಗೂ ಜ್ಞಾನದ ಆಧಾರದ ಮೇಲೆ ರೂಪುಗೊಂಡಿರುವುದು. ಮೊದಲಿನ ಜ್ಞಾನ ಹಾಗೂ ಆವಿಷ್ಕಾರದ ಆಧಾರ ಇಲ್ಲದೆ ನಂತರದ ಆವಿಷ್ಕಾರ ಬರಲು ಸಾಧ್ಯವೇ ಇಲ್ಲ. ಹೀಗಾಗಿ ವೇದಗಳ ಕಾಲದಲ್ಲಿ ಇಂದು ವಿಜ್ಞಾನದ ಮೂಲಕ ಕಂಡುಕೊಂಡ ಬಹುತೇಕ ಜ್ಞಾನ ಮಾಹಿತಿಯನ್ನು ಹೇಳಿಲ್ಲ ಎಂದು ಮೇಲ್ನೋಟಕ್ಕೆ ಹೇಳಲು ಸಾಧ್ಯ.

        ಉತ್ತರ
        • Kumar
          ಏಪ್ರಿಲ್ 12 2012

          > ಹೊಸ ಸಂಶೋಧನೆಗಳಿಂದ ಹಳೆಯ ಕಾಲದಲ್ಲಿ ಸತ್ಯ ಎಂದು ನಂಬಿದ್ದ, ನಂಬಿಸಿದ್ದ ವಿಷಯಗಳು ಅಸತ್ಯ ಎಂದಾದಾಗ ಅದನ್ನು ಬಿಟ್ಟು ಬಿಡುವುದರಲ್ಲಿ ಏನು ತಪ್ಪಿದೆ?
          ಅಸತ್ಯವೆಂದು ಕಂಡದ್ದನ್ನು ಬಿಡದಿರುವುದು ತಪ್ಪು.
          ಆದರೆ, ನಿಮ್ಮ ತರ್ಕವನ್ನು ಕಂಡ ನಂತರ, ನೀವು ಕೆಲವು ಊಹೆಗಳ ಆಧಾರದ ಮೇಲೆಯೇ ಹಿಂದೆ ಹೇಳಿದ್ದು ತಪ್ಪಿರಬೇಕು ಎಂದು ನಿಶ್ಚಯಿಸಿದಂತಿದೆ.
          ಮತ್ತು ಹಿಂದಿನದ್ದನ್ನು ಬಿಡಲೇಬೇಕೆಂದು ತೀರ್ಮಾನಿಸಿದಂತಿದೆ.
          ನಿಮ್ಮ ಮನಸ್ಸಿನಲ್ಲಿದ್ದದ್ದನು ತೆರೆದಿಟ್ಟದ್ದಕ್ಕೆ ಧನ್ಯವಾದಗಳು.
          ನಿಮ್ಮ ಊಹೆಗಳ ಬಗ್ಗೆ ನನಗೆ ಒಪ್ಪಿಗೆ ಇಲ್ಲ. ಈ ರೀತಿಯ ಊಹೆಗಳು ವೈಜ್ಞಾನಿಕವಲ್ಲ ಎಂದಷ್ಟೇ ನಾನು ಹೇಳಬಹುದು.
          ನಿಮ್ಮ ಮಾತಿನ ಪ್ರಕಾರ ಹೋದರೆ, ಇತಿಹಾಸ ಎನ್ನುವುದಕ್ಕೆ ಅರ್ಥವೇ ಇರದು; ಹೀಗಾಗಿ ಅದರ ಅಧ್ಯಯನದ ಅಗತ್ಯವೇ ಇಲ್ಲ.
          ಮತ್ತು ಹಳತಾದದ್ದನ್ನೆಲ್ಲಾ ಬಿಡುತ್ತಾ ಹೋಗಬಹುದು. ಬೆಂಕಿಯೂ ಹಳತಾಯಿತು, ಚಕ್ರವೂ ಹಳತಾಯಿತು, ’೦’ ಮತ್ತು ಇನ್ನಿತರ ಅಂಕೆಗಳೂ ಹಳತಾದವು – ಇಂದು ನಾವು ಬಹಳ ಮುಂದುವರೆದಿದ್ದೇವೆ. ಯಾವುದೇ ಸಾಧನ-ಸಲಕರಣೆಗಳು ಇಲ್ಲದ ಹಲವು ಸಹಸ್ರ ವರ್ಷಗಳ ಹಿಂದೆ ಕಂಡು ಹಿಡಿದ ಇವುಗಳು “ಅಸತ್ಯ”ವೇ ಇರಬೇಕು. ಹೀಗಾಗಿ, ಇದನ್ನೆಲ್ಲ ಬಿಡುವುದೊಳ್ಳೆಯದು, ಮತ್ತು ಇಂದು ನಮಗಿದರ ಅಗತ್ಯವಿಲ್ಲ; ಮೇಲ್ನೋಟಕ್ಕೇ ಇದೆಲ್ಲ ಸ್ಪಷ್ಟ, ಅದನ್ನು ತಿಳಿಯಲು ಹಿಂದಿನವರು ಮಾಡಿದ್ದನ್ನು ಅಭ್ಯಸಿಸುವ ಅಗತ್ಯವಿಲ್ಲ. – ನೀವು ಹೇಳುತ್ತಿರುವ ತರ್ಕದ ಒಟ್ಟು ಸಾರಂಶವಿದು.

          ಉತ್ತರ
          • Ananda Prasad
            ಏಪ್ರಿಲ್ 12 2012

            ನೀವು ನನ್ನ ಅಭಿಪ್ರಾಯವನ್ನು ತಪ್ಪಾಗಿ ತೆಗೆದುಕೊಂಡಿರುವಂತೆ ಕಾಣುತ್ತದೆ. ಹಳತು ಎಂದು ಸತ್ಯವನ್ನು ಬಿಡಬೇಕು ಎಂದು ನಾನು ಹೇಳಿಲ್ಲ. ಬೆಂಕಿಯ ಆವಿಷ್ಕಾರವಾಗಲಿ, ಚಕ್ರದ ಅವಿಷ್ಕಾರವಾಗಲಿ ಯಾವ ಕಾಲಕ್ಕೂ ಪ್ರಸ್ತುತ. ಅದೇ ರೀತಿ ಸೊನ್ನೆ ಹಾಗೂ ಇತರ ಅಂಕೆಗಳೂ. ಇದನ್ನು ಇಂದಿನ ವಿಜ್ಞಾನವು ಅಸತ್ಯವೆಂದು ಹೇಳುವುದಿಲ್ಲ, ಇದು ಎಂದಿದ್ದರೂ ಸತ್ಯವೇ.

            ಉತ್ತರ
  26. sriramvdongre
    ಏಪ್ರಿಲ್ 12 2012

    ಹೊಸಚಿಗುರು ಹಳೆಬೇರು ಕೂಡಿರಲು ಮರ ಸೊಬಗು ।
    ಹೊಸಯುಕ್ತಿ ಹಳೆ ತತ್ತ್ವದೊಡಗೂಡೆ ಧರ್ಮ । ।
    ಋಷಿವಾಕ್ಯದೊಡನೆ ವಿಜ್ಞಾನ ಮೇಳವಿಸೆ ।
    ಜಸವು ಜನಜೀವನಕೆ – ಮಂಕುತಿಮ್ಮ । ।

    ಉತ್ತರ
    • sriramvdongre
      ಏಪ್ರಿಲ್ 12 2012

      ಹೊಸಚಿಗುರು ಹಳೆಬೇರು ಕೂಡಿರಲು ಮರ ಸೊಬಗು ।
      ಹೊಸಯುಕ್ತಿ ಹಳೆ ತತ್ತ್ವದೊಡಗೂಡೆ ಧರ್ಮ । ।
      ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ।
      ಜಸವು ಜನಜೀವನಕೆ – ಮಂಕುತಿಮ್ಮ । ।

      ಉತ್ತರ
  27. Kumar
    ಏಪ್ರಿಲ್ 14 2012

    > ನೀವು ಬಾಶೆಯ ವಿಶಯದಲ್ಲಿ ನನ್ನನ್ನ ಆಡಿಕೊಂಡಿದ್ದೂ,
    ನೀವು ನೀಡಿದ ಉತ್ತರವನ್ನು ಮತ್ತೊಮ್ಮೆ ಓದಿಕೊಳ್ಳಿ. ಅದರಲ್ಲಿನ ಭಾಷೆಗೆ ಬೇರಾವ ರೀತಿಯ ಪ್ರತಿಕ್ರಿಯೆ ನೀಡಬೇಕಿತ್ತು ನೀವೇ ಹೇಳಿ?

    > ಬಾಶಾವಿಗ್ನಾನದ ರವಶ್ಟಾದರೂ ತಿಳಿದಿದ್ದರೆ
    > ಆದುನಿಕ ಬಾಶಾವಿಗ್ನಾನದ ನಿಲುವು.
    ನಿಮಗಿಷ್ಟ ಬಂದದ್ದಕ್ಕೆ ಭಾಷಾವಿಜ್ಞಾನ ಎಂದು ಹಣೆಪಟ್ಟಿಹಾಕಿಕೊಂಡರೆ, ಅದನ್ನೆಲ್ಲಾ ಕನ್ನಡಿಗರು ಒಪ್ಪಬೇಕೆಂದು ತಿಳಿಯಬೇಡಿ.
    ಭಾಷೆಯ ಬೆಳವಣಿಗೆ ಎನ್ನುವುದು, ಯಾರೋ ಕೆಲವರು ಹಾಕಿಕೊಂಡ “Hidden Agenda” ಮೇಲೆ ಆಗುವಂತಹುದಲ್ಲ.
    ನೀವು ಹೇಳುವುದು ನೋಡಿದರೆ, ಇಂದಿನವರೆಗೆ ಬೆಳೆದು ಬಂದಿರುವ ಕನ್ನಡವು ಭಾಷಾವಿಜ್ಞಾನಕ್ಕೆ ಅನುಗುಣವಾಗಿಲ್ಲ; ಹೀಗಾಗಿ ನೀವು ಕನ್ನಡವನ್ನು ತಿದ್ದುವ “ಭಾರ”ದ ಕೆಲಸವನ್ನು ಎಲ್ಲ ಕನ್ನಡಿಗರ ಪರವಾಗಿ ಹೊತ್ತಿರುವಿರಿ; ಹೀಗಾಗಿ ಎಲ್ಲರೂ ಅದನ್ನು ಒಪ್ಪಿಬಿಡಬೇಕು!

    > ಬಾಶಾಂತರ ಅನ್ನೋದಿದೆ ಗೊತ್ತಿದೆಯೇ?
    > ಸಂಸ್ಕೃತವೂ ಸಾಕಾಗದು ಅಂದರೆ ಎನರ್ತ?
    ಅಂದರೆ, ವೇದದ ಭಾಷೆ ಸಂಸ್ಕೃತವಲ್ಲ ಎಂದು.
    ಆಕಾಶದಲ್ಲಿ ಹಾರಾಡುವ ವಿಮಾನದ ಹಿಂದಿನ ವಿಜ್ಞಾನವನ್ನು ಒಂದು ವರ್ಷದ ಮಗುವಿಗೆ ಅರ್ಥ ಮಾಡಿಸುವುದು ಕಷ್ಟ. ಅದು ಪ್ರೌಢಶಾಲೆಗೆ ಬಂದಾಗ ಅಥವಾ ಕಾಲೇಜಿಗೆ ಬಂದಾಗ ಅರ್ಥವಾಗುತ್ತದೆ. ಅದು ಆ ಮಟ್ಟಕ್ಕೆ ಬೆಳೆಯಲೆಂದು ಆಶಿಸಬೇಕು ಮತ್ತು ಕಾಯಬೇಕು; ಬೇರೆ “Shortcut” ಇಲ್ಲ.

    > ನೇಣಿಗ ಮಾತ್ರ ಬಳಕೆಯಾಗಬಲ್ಲ ಸಂಸ್ಕೃತ ಎಂಬ ಹಗ್ಗ ಇದೆ
    ಕೈಯ್ಯಲ್ಲಿರುವ ಸಾಧನ ಅವರವರ ಸಾಮರ್ಥ್ಯಕ್ಕೆ, ತಿಳುವಳಿಕೆಗೆ ತಕ್ಕಂತೆ ಬಳಕೆಯಾಗುತ್ತದೆ.
    ವೈದ್ಯರ ಕೈಯ್ಯಲ್ಲಿನ ಚಾಕು ರೋಗಿಯನ್ನು ಉಳಿಸಲು ಬಳಕೆಯಾಗುತ್ತದೆ; ಅದೇ ಚಾಕು ಕೊಲೆಗಾರನ ಕೈ ಸೇರಿದಾಗ, ಜೀವವನ್ನು ತೆಗೆಯುತ್ತದೆ.
    ಪಾಪ, ನಿಮ್ಮ ಕೈಗೆ ಸಿಕ್ಕಿರುವ ಹಗ್ಗಕ್ಕೆ ನಿಮಗೆ ತಿಳಿದಿರುವುದಕ್ಕಿಂತ ಬೇರೆಯ ಉಪಯೋಗ ಹೇಗೆ ತಾನೆ ಸಾಧ್ಯ?
    ಆಧುನಿಕ ವಿಜ್ಞಾನದ ಮೇರುಸದೃಶ ಸಾಧನೆಯೆಂದೇ ಬಿಂಬಿತವಾಗುತ್ತಿರುವ ಕಂಪ್ಯೂಟರ್‌ಗಳಿಗೆ ಅತ್ಯುತ್ತಮವಾಗಿ ಹೊಂದುವ ಭಾಷೆ ಸಂಸ್ಕೃತವಂತೆ.
    ಪಾಪ, ಸಂಸ್ಕೃತದ ಧ್ವೇಷಿಗಳು ಕಂಪ್ಯೂಟರ್ ಉಪಯೋಗವನ್ನೇ ನಿಲ್ಲಿಸುವ ಕಾಲ ಬರುತ್ತಿದೆಯೇನೊ!?

    > ವೇದ-ವಿಗ್ನಾನ ಬೇರೆ ಎಂಬುದಿಲ್ಲ.
    > ವೇದಗಳಲ್ಲಿ ವಿಗ್ನಾನ ಇದ್ದಲ್ಲಿ ಆದುನಿಕ ವಿಗ್ನಾನ ಅದರಿಂದಲೂ ಪಡೆದಿರುತ್ತದೆ
    > ವೇದಗಳಲ್ಲಿ ಎಶ್ಟರಮಟ್ಟಿಗೆ ವಿಗ್ನಾನ ಇದೇ
    ನಿಮ್ಮ ಮಾತಿನಲ್ಲಿ ಅದೆಷ್ಟು ದ್ವಂದ್ವ ಇದೆ ನೋಡಿ.
    ಕುರುಡರು ಆನೆಯನ್ನು ವಿವರಿಸಿದರಂತೆ – ಒಬ್ಬ ಅದನ್ನು ಕೊನೆಯಿಲ್ಲದ ಆಗಸದಂತೆ ಎಂದನಂತೆ; ಮತ್ತೊಬ್ಬ ಅದು “Fan”ನಂತೆ ತಿರುಗುತ್ತದೆ ಎಂದನಂತೆ; ಮತ್ತೊಬ್ಬ ಆನೆಯೆಂದರೆ ಕಂಬ ಎಂದನಂತೆ; ಮತ್ತೊಬ್ಬ ಅದು ಹಗ್ಗ ಎಂದನಂತೆ!!

    > ಸಂಸ್ಕೃತದ ಮಂತ್ರ ಕಲಿತು ನಾನ್ ತಟ್ಟೆ ಕಾಸಿಗೆ ಗಂಟೆ ಬಾರಿಸಬೇಕಿಲ್ಲ. ಜೋತಿಸ್ಯದ ಸುಳ್ಳು ಹೇಳಿ ವಂಚನೆಯಿಂದ ಹೊಟ್ಟೆ ಹೊರೆಯಬೇಕಾಗೂ ಇಲ್ಲ.
    ನಿಮಗೆ ಸಂಸ್ಕೃತ ಬೇಕಿಲ್ಲದಿದ್ದರೆ ಬಿಡಿ. ಆದರೆ, ಸಂಸ್ಕೃತ ಕಲಿತವರೆಲ್ಲರೂ ಜ್ಯೋತಿಷ್ಯವನ್ನೇ ಹೇಳುತ್ತಾರೆ ಎನ್ನುವುದನ್ನು ಹೇಳಬೇಡಿ.
    ಇತ್ತೀಚೆಗೆ ತೀರಿಕೊಂಡ ಮತ್ತೂರು ಕೃಷ್ಣಮೂರ್ತಿಯವರು ಸಂಸ್ಕೃತದ ಪಂಡಿತರಾಗಿದ್ದರು; ಅವರೆಂದೂ ಜ್ಯೋತಿಷ್ಯ ಹೇಳಲಿಲ್ಲ.
    ಸುಳ್ಳು ಜ್ಯೋತಿಷ್ಯವನ್ನು ಹೇಳುವವರು ಎಲ್ಲ ಕಾಲದಲ್ಲೂ, ಎಲ್ಲ ಪ್ರದೇಶಗಳಲ್ಲೂ ಇದ್ದಾರೆ. ಅವರಿಗೆ ಭಾಷೆಯ ಹಂಗೇನಿಲ್ಲ; ಕನ್ನಡವನ್ನಷ್ಟೇ ತಿಳಿದು “ಕವಡೆ ಹಾಕಿ” ಇಲ್ಲವೇ “ಗಿಣಿ ಜ್ಯೋತಿಷ್ಯ” ಹೇಳುವವರೂ ಇದ್ದಾರೆ.
    ಸಂಸ್ಕೃತವನ್ನು ಕಲಿತವರು ಇನ್ಯಾವ ಭಾಷೆಯನ್ನೂ ಕಲಿಯಬಾರದೆಂದೇನೂ ಇಲ್ಲವಲ್ಲ. ಜ್ಞಾನಕ್ಕಾಗಿ ಸಂಸ್ಕೃತ, ಹೊಟ್ಟೆಪಾಡಿಗಾಗಿ ಕನ್ನಡ ಅಥವಾ ಇಂಗ್ಲಿಷ್ ಅಥವಾ ಉರ್ದು ಕಲಿಯಬಹುದು.

    > ತಾಯ್ನುಡಿ ಕನ್ನಡ ಮತ್ತು ಇಂಗ್ಲಿಶ್ ಕಲಿತಿದ್ದೇನೆ. ಜಗತ್ತಿನಲ್ಲಿ ಎಲ್ಲಿಗೊದರೂ ಆಯಾ ಜಾಗದ ನುಡಿಯನ್ನ ಕಲಿಯುತ್ತೇನೆ.
    > ಇದುವರೆಗೆ ನಾ ಕಂಡ ಪ್ರಪಂಚದಲ್ಲಿ ಸಂಸ್ಕೃತವೆಲ್ಲೂ ಕಂಡಿಲ್ಲ.
    ಇಂದು ಸಂಸ್ಕೃತ ತಾಯ್ನುಡಿಯಿರುವ ಜನರಾರೂ ಇಲ್ಲ ಅಷ್ಟೇ.
    ಆದರೆ, ಇಷ್ಟೆಲ್ಲಾ ಸಂಸ್ಕೃತದ “ಗುಣಗಾನ” ಮಾಡಿ, ಇದ್ದಕ್ಕಿದ್ದಂತೆ ಸಂಸ್ಕೃತವೇ ಕಂಡಿಲ್ಲವೆಂದು ನೀವು ಹೇಳುತ್ತಿರುವುದು ನೋಡಿದರೆ, ಕಣ್ಣಿನ ಸಮಸ್ಯೆಯೋ ಅಥವಾ ಕಿವಿಯ ಸಮಸ್ಯೆಯೋ ಅಥವಾ ಮೆದುಳಿನ ಸಮಸ್ಯೆಯೋ ತಿಳಿಯುತ್ತಿಲ್ಲ. ಸರಿಯಾದ “ಆದುನಿಕ ವಿಗ್ನಾನದಿಂದ ಬಂದ ಮದ್ದನ್ನು” ಪಡೆದು ತೊಂದರೆಯನ್ನು ನಿವಾರಿಸಿಕೊಳ್ಳಿ.

    > ಕಿವಿಯಲ್ಲಿ ಮಂತ್ರ ಹೇಳಿಕೊಡುತ್ತಿದ್ದವರಿಂದ
    “ವೇದಘೋಷ” ಎಂದರೆ ವೇದವನ್ನು ಗಟ್ಟಿಯಾಗಿ ಪಠಿಸುವುದು.

    ಉತ್ತರ
  28. Kumar
    ಏಪ್ರಿಲ್ 14 2012

    Balachandra> ಅವರು ತಾರ್ಕಿಕ ಹಾಗೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಪ್ರಶ್ನೆಯನ್ನು ಮುಂದಿಟ್ಟಿದ್ದರೆ ಸತ್ಯದ ಆಳವನ್ನು ಅರಿಯಲು, ಅನುಕೂಲವಾಗಿರುತ್ತಿತ್ತು
    ಪ್ರಶ್ನಿಸುವುದೇ ವಿಜ್ಞಾನದ ತಳಹದಿ. ಲೇಖಕರ ವಿಚಾರವನ್ನು ವೈಚಾರಿಕ ಮಟ್ಟದಲ್ಲೇ ಉತ್ತರಿಸಬಹುದಿತ್ತು.

    Balachandra> ಇದು ಕೆಲ ಓದುಗರಲ್ಲಿ ಅಸಹನೆಯನ್ನು ಹುಟ್ಟುಹಾಕದೇ ಇನ್ನೇನು ಮಾಡಲು ಸಾಧ್ಯ?
    ಉದಾಸೀನ ಎಂಬ ಮದ್ದಿಲ್ಲವೇ?

    Balachandra> ಈ ತರಹದ ಪ್ರಾಥಮಿಕ ಜ್ಞಾನವನ್ನು ಹೊಂದಿರದ ಲೇಖನ ಇದರ ಬಗ್ಗೆ ಮಾಹಿತಿಯಿರದ ಅದೆಷ್ಟು ಜನರಲ್ಲಿ ಅಜ್ಞಾನವನ್ನು ತುಂಬಬಹುದು?
    ನಿತ್ಯ ದೂರದರ್ಶನದಲ್ಲಿ ಬೆಳಗಿನ ಹೊತ್ತು “ಭವಿಷ್ಯ” ಹೇಳುವ, ದೇವರ ಹೆಸರು ಹೇಳಿ ಜನರ ದಿಕ್ಕುತಪ್ಪಿಸುವ ಕಾರ್ಯಕ್ರಮ ಬರುತ್ತದೆ. ಅದೆಷ್ಟು ಜನರಿಗೆ ದಾರಿತಪ್ಪಿಸುವುದಿಲ್ಲ ಹೇಳಿ.
    ನಂತರ ಬರುವ ಎಲ್ಲಾ ಧಾರವಾಹಿಗಳೂ ಜನರ ತಲೆ ಕೆಡಿಸುವಂತಹವೇ; ಅನೇಕ ಜಾಹಿರಾತುಗಳೂ ನೈತಿಕತೆಯ ಮಟ್ಟ ಮೀರಿರುತ್ತವೆ; ರಾತ್ರಿ ಬರುವ ಕ್ರೈಮ್‌ಸ್ಟೋರಿ ಮುಂತಾದ ಕಾರ್ಯಕ್ರಮಗಳೂ ಜನರ ಮನಸ್ಸಿನಲ್ಲಿ ಭಯವನ್ನೇ ಹುಟ್ಟುಹಾಕುವ ಸಾಧ್ಯತೆ ಹೆಚ್ಚು. ಜನರ ಕೀಳು ಅಭಿರುಚಿಯನ್ನು ಬೆಳೆಸುವ, ಕೇವಲ ನಕಾರಾತ್ಮಕವಾಗಿಯೇ ಪ್ರಪಂಚವನ್ನು ನೋಡುವ “ಪೀತ ಪತ್ರಿಕೆ”ಗಳೂ ನಿಮಗೆ ತಿಳಿದಿರುತ್ತವೆ.
    ಹೀಗಿರುವಾಗ, ಕೇವಲ ಒಂದು ಲೇಖನವನ್ನೇ ಗುರಿಯಾಗಿಸಿ, ಅಜ್ಞಾನವನ್ನು ತೊಲಗಿಸಿಬಿಡಲು ಸಾಧ್ಯವೇ?
    ಮತ್ತು ಅಜ್ಞಾನವನ್ನು ತೊಲಗಿಸಲು ಜ್ಞಾನದ ಪ್ರಚಾರವಾಗಬೇಕು. ಅವರ ಲೇಖನದಲ್ಲಿರುವ ತಪ್ಪು ಮಾಹಿತಿಗಳನ್ನು ಬಿಡಿಸಿಟ್ಟಿದ್ದರೆ, ಓದುಗರು ತಮಗೆ ಸರಿಕಂಡದ್ದನ್ನು ತೆಗೆದುಕೊಳ್ಳುತ್ತಿದ್ದರು. ಕೇವಲ ಲೇಖಕರನ್ನು ಟೀಕಿಸುವುದರಿಂದ ಅಜ್ಞಾನ ತೊಲಗುವುದಿಲ್ಲ ಅಲ್ಲವೇ?

    Balachandra> ಆದರೆ ಒಂದು ವೇಳೆ ಇಂತಹ ಲೇಖನಗಳಿಗೆ sponsorship ಸಿಕ್ಕುಬಿಟ್ರೆ,
    ಆಗ ಅಲ್ಲಿ ಹಣದ ಪ್ರಶ್ನೆ ಬರುತ್ತದೆ. ಹಣವನ್ನು ಹಣದಿಂದಲೇ ಸೋಲಿಸಬೇಕಾಗುತ್ತದೆ. ಈಗೇನು, “Paid News” ಇಲ್ಲವೇ?
    ಸುದ್ದಿಪತ್ರಿಕೆಗಳಲ್ಲಿ ಬರುವ, ದೃಶ್ಯಮಾಧ್ಯಮಗಳಲ್ಲಿ ಬರುವ ವಿಚಾರಗಳು ಯಾವುದೇ sponsorship ಹೊಂದಿಲ್ಲ ಎಂದು ಹೇಳಲು ಸಾಧ್ಯವೇ?

    Balachandra> ಈಗಲೇ ಬ್ರಿಟಿಷರಿಂದ, ಅರಬ್ಬರಿಂದ ಹೆಚ್ಚು ಕಡಿಮೆ 500-600 ವರ್ಷ exploit ಆಗಿದ್ದೀವಿ. ಇನ್ನು ಇಂತಹ ಮನೋಭಾವನ ಮುಂದುವರೆಸಿದರೆ ಏನಾಗಬಹುದು?
    ಬ್ರಿಟಿಷರು ತೊಲಗಿದ ನಂತರ, ಬ್ರಿಟಿಷರಿಂದ ಪಾಠ ಕಲಿತವರು ಶೋಷಣೆ ಮುಂದುವರೆಸಿದ್ದಾರೆ ಅಷ್ಟೇ.
    ಇದನ್ನೆಲ್ಲಾ ಕೇವಲ “ಅಸಹನೆ”ಯಿಂದ ಸರಿಪಡಿಸಲು ಸಾಧ್ಯವಿಲ್ಲ.
    ಸಮಾಜದ ಎಲ್ಲ ವ್ಯಕ್ತಿಗಳನ್ನೂ ತಿದ್ದುವ, ಸರಿಪಡಿಸುವ ಕೆಲಸ ಮಾಡಬೇಕು. ಅದು ಬಹಳ ಸಮಯ ಹಿಡಿಯುವ ಕೆಲಸ; ಹಲವು ಶತಮಾನಗಳೇ ಬೇಕಾಗಬಹುದು.
    ಇಲ್ಲದಿದ್ದರೆ, ಕ್ರಾಂತಿಯಿಂದ ಬದಲಾವಣೆ ತರಬೇಕು. ಆದರೆ, ಕ್ರಾಂತಿ ನಡೆಸಿದವರು ಸರಿಯಾಗಿಲ್ಲದಿದ್ದರೆ, ಅಥವಾ ಮುಂದೆ ಶೋಷಣೆ ನಡೆಸಲು ಪ್ರಾರಂಭಿಸಿದರೆ ಅದಕ್ಕೇನು ಮಾಡುವುದು? ನನಗೇನೋ ಸಮಾಜವನ್ನು ತಿದ್ದುವ “ನಿಧಾನ”ದ ಮಾರ್ಗವೇ ಸೂಕ್ತ ಎನಿಸುತ್ತದೆ. ಆ ದಾರಿಯಲ್ಲಿ ಸಾಗಲು ಸಾಕಷ್ಟು ಸಹನೆ ಬೇಕು ಮತ್ತು ನಮ್ಮ ಕಣ್ಮುಂದೆ ಬದಲಾವಣೆ ಬರದೇ ಹೋಗಬಹುದು!

    ಆದರೆ ನಿಮ್ಮ ಉತ್ತರಗಳನ್ನು ಓದುತ್ತಿದ್ದರೆ, ನಿಮಗೆ ಸಾಕಷ್ಟು ಸಹನೆ ಇದೆ ಎಂದೇ ನನಗನ್ನಿಸುತ್ತದೆ.

    ಉತ್ತರ
    • Balachandra
      ಏಪ್ರಿಲ್ 14 2012

      {ಪ್ರಶ್ನಿಸುವುದೇ ವಿಜ್ಞಾನದ ತಳಹದಿ. ಲೇಖಕರ ವಿಚಾರವನ್ನು ವೈಚಾರಿಕ ಮಟ್ಟದಲ್ಲೇ ಉತ್ತರಿಸಬಹುದಿತ್ತು.}
      ವೈಚಾರಿಕ ಮಟ್ಟದಲ್ಲಿಯೇ ಪ್ರಶ್ನಿಸಬೇಕಾಗಿತ್ತು ಎಂದು ನಾನು ಹೇಳಿದ್ದು. ಅಡ್ನಾಡಿ ಪ್ರಶ್ನೆಗಳಿಗೆ ವೈಚಾರಿಕ ಮಟ್ಟದಲ್ಲಿ ಉತ್ತರಿಸಲು ಸಾಧ್ಯವಿಲ್ಲ.
      {ನಿತ್ಯ ದೂರದರ್ಶನದಲ್ಲಿ ಬೆಳಗಿನ ಹೊತ್ತು “ಭವಿಷ್ಯ” ಹೇಳುವ, ದೇವರ ಹೆಸರು ಹೇಳಿ ಜನರ ದಿಕ್ಕುತಪ್ಪಿಸುವ ಕಾರ್ಯಕ್ರಮ ಬರುತ್ತದೆ. ಅದೆಷ್ಟು ಜನರಿಗೆ ದಾರಿತಪ್ಪಿಸುವುದಿಲ್ಲ ಹೇಳಿ.}
      ಅದನ್ನು ನಾವೆಲ್ಲಿ support ಮಾಡಿದ್ದೀವಿ?ಅವುಗಳಿಗೆ ಇನ್ನೂ ಹಿಡಿಶಾಪ ಹಾಕ್ತೀವಿ.
      {ಅವರ ಲೇಖನದಲ್ಲಿರುವ ತಪ್ಪು ಮಾಹಿತಿಗಳನ್ನು ಬಿಡಿಸಿಟ್ಟಿದ್ದರೆ, ಓದುಗರು ತಮಗೆ ಸರಿಕಂಡದ್ದನ್ನು ತೆಗೆದುಕೊಳ್ಳುತ್ತಿದ್ದರು.}
      ಆ ಕೆಲಸವನ್ನೂ ಕೂಡ ಮಾಡಿದ್ದೀವಿ, ನೀವೇ ನೋಡಿ ಲೇಖಕರ ತಲೆಯ ಒಳಗೆ ಎಷ್ಟು ಹೋಗಿದೆ ಎಂದು.
      {“Paid News” ಇಲ್ಲವೇ?}
      paid news ಗಳಿಗೆ ನಾವು ಧಿಕ್ಕಾರ ಹೇಳಿದೀವಲ್ಲ.
      {ಸಮಾಜದ ಎಲ್ಲ ವ್ಯಕ್ತಿಗಳನ್ನೂ ತಿದ್ದುವ, ಸರಿಪಡಿಸುವ ಕೆಲಸ ಮಾಡಬೇಕು. ಅದು ಬಹಳ ಸಮಯ ಹಿಡಿಯುವ ಕೆಲಸ; ಹಲವು ಶತಮಾನಗಳೇ ಬೇಕಾಗಬಹುದು.}
      ಇರಬಹುದು. ಆದ್ರೆ ಜನರಲ್ಲಿ ಇಂತಹುದನ್ನು ಬಿತ್ತುವ ಲೇಖನಗಳು ಸರ್ವೇ ಸಾಮನ್ಯವಾದರೆ ಸಹಸ್ರಾರು ವರ್ಷಗಳು ತೆಗೆದುಕೊಂಡರೂ ಪರಿಹಾರವಾಗಲಾರದು.
      {ಇಲ್ಲದಿದ್ದರೆ, ಕ್ರಾಂತಿಯಿಂದ ಬದಲಾವಣೆ ತರಬೇಕು.}
      ಕ್ರಾಂತಿಯೇನೂ ಬೇಕಾಗಿಲ್ಲ. ಇಂತಹ ಲೇಖನಗಳಿಗೆ ನೀರೆರೆಯುವದನ್ನು ಕಡಿಮೆ ಮಾಡುವದರಿಂದ ಹಾಗೂ ಇಂತಹ ಲೇಖನ ಬರೆಯುವವರನ್ನು ಕಡ್ಡಾಯವಾಗಿ LKG ಗೆ ಸೇರಿಸಿದರೆ ಶತಮಾನಗಳಲ್ಲಾದರೂ ಸುಧಾರಣೆ ಸಾಧ್ಯವಿದೆ.

      {ಆದರೆ ನಿಮ್ಮ ಉತ್ತರಗಳನ್ನು ಓದುತ್ತಿದ್ದರೆ, ನಿಮಗೆ ಸಾಕಷ್ಟು ಸಹನೆ ಇದೆ ಎಂದೇ ನನಗನ್ನಿಸುತ್ತದೆ.}
      Yes. ಅದಕ್ಕಾಗಿಯೇ ಲೇಖಕರಿಗೆ ಮನವರಿಕೆ ಮಾಡಿಕೊಡುವದಕ್ಕಾಗಿಯೇ ಸಂಯಮದಿಂದಲೇ ಉತ್ತರಿಸಿದೆ. ಆದರೆ ನಂತರ ತಿಳಿಯಿತು, ನನ್ನ ತಿಳುವಳಿಕೆ ತಪ್ಪು ಎಂದು. ಅವರಿಗೆ ಯಾವುದನ್ನೂ ತಲೆಗೆ ಹಾಕಿಕೊಳ್ಳುವ ವ್ಯವಧಾನ ಇಲ್ಲ. ಹಾಗಾಗಿ, ನಾನು ಇನ್ನು ಅವರಿಗೆ ವಿವರಿಸುವ ಯತ್ನ ಮಾಡುವದಿಲ್ಲ. ಅವರ ಲೇಖನಗಳನ್ನು ಗಂಭೀರವಾಗಿ ತೆಗೆದುಕೊಳ್ಳುವದರಲ್ಲಿ ಅರ್ಥವಿಲ್ಲ ಎನಿಸಿತು. ಬಹುಷಃ ಮನರಂಜನೆಗೊಸ್ಕರವಾದರೂ ಅವರ ಲೇಖನಗಳನ್ನು ಓದುತ್ತಿರುತ್ತೇನೆ. ಕಡೇಪಕ್ಷ ಅವರ ಅಭಿಮಾನದ ವೇದಗಳು, ಅವರ ದೆಸೆಯಿಂದಲೇ ಟೀಕೆಗೆ ಗುರಿಯಾಗುತ್ತಿವೆ ಎಂದು ಅವರು ತಿಳಿದುಕೊಂಡರೆ ಒಳ್ಳೆಯದು.

      ಉತ್ತರ
      • ಏಪ್ರಿಲ್ 14 2012

        ಅಪ್ರತಿಮ ಮೇಧಾವಿ ಬಾಲಚಂದ್ರ ಭಟ್ಟರೇ, ನಿಮ್ಮ ಮಹತ್ತರ ಮೇಧಾ ಶಕ್ತಿಗೆ ಕುಳಿತಲ್ಲೇ ನಿಮಗೆ ಗಿನ್ನೆಸ್ ದಾಖಲೆ ಬರೆಯುವ ತಾಕತ್ತಿದೆ! ನಿಮ್ಮನ್ನು ’ಅತ್ಯಧುನಿಕ ವಿಜ್ಞಾನ ಪಿತಾಮಹ’ ಎಂದು ಹೆಸರಿಸಿ ನೋಬೆಲ್ ಪ್ರಶಸ್ತಿಗೆ ಶಿಫಾರಸ್ಸು ಮಾಡುವುದು ಒಳ್ಳೆಯದು! ಬಹಳ ತಿಳಕೊಂಡಿದ್ದೀರಿ ಮಾರಾಯ್ರೆ! ನನಗೆ ಲಕ್ಷ್ಯಕ್ಕೇ ಇರಲಿಲ್ಲ. ನೀವು ನನ್ನ ಲೇಖನಗಳನ್ನು ದಯಮಾಡಿ ಓದಬೇಡಿ, ನಿಮ್ಮನ್ನು ನಾನು ಕರೆಯಲೂ ಇಲ್ಲ, ಯಾಕೆಂದರೆ ನಮ್ಮದೆಲ್ಲಾ ಬರೇ ಹಳೇಕಾಲದ ತಿಟ್ಟು, ಹಾದಿಯಲ್ಲಿ ಹಾದುಹೋಗುವಾಗ ಕಂಡರೂ ಕಾಣದಹಾಗೇ ಓದದೇ ಹೋಗಿಬಿಡಿ ನೀವೋ ಮಹಾನ್ ವಿಜ್ಞಾನಿ! ಪ್ರಜ್ಞಾವಂತ ಸಮಾಜದ ಭಾಗವಾದ ನಿಮ್ಮ ಕೆಟ್ಟ ಪ್ರತಿಕ್ರಿಯೆಗಳಿಗೆ ನನ್ನ ಧಿಕ್ಕಾರವಿದೆ. ನಿಮ್ಮ ಜೊತೆಗೆ ಇನ್ನೂ ಕೆಲವು ಜನ ’ಓದುಗ’ರಂತಹ ಶಿಖಂಡಿಗಳೂ ಇದ್ದಾರೆ ಎಂಬುದೇ ನನಗೆ ಖುಷಿಯಾಗಿದೆ.

        ಉತ್ತರ
        • Balachandra
          ಏಪ್ರಿಲ್ 14 2012

          ವಿ.ಆರ್.ಭಟ್ರೆ,
          ನಾನು ಎಲ್ಲಿಯೂ ಬುದ್ಧಿವಂತ ಎಂದೂ ಹೇಳಿಕೊಂಡಿಲ್ಲ, ಅಥವಾ ನಿಮ್ಮನ್ನು ದಡ್ಡ ಎಂದೂ ಹೇಳಿಲ್ಲ. ಆದರೆ ನಿಮ್ಮ ಲೇಖನದಲ್ಲಿನ ತಪ್ಪು ಮಾಹಿತಿಗಳ ಬಗ್ಗೆ ಹೇಳಿದರೂ ನೀವು ಸತ್ಯವನ್ನು ಒಪ್ಪಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ ಎಂದು ಹೇಳಿದೆನಷ್ಟೇ. ನಾನು ನಿಮ್ಮ ಮೇಲಿನ ವೈಯಕ್ತಿಕ ದ್ವೇಷದಿಂದ ನಿಮ್ಮ ಬಗ್ಗೆ ಹೇಳಿಲ್ಲ. ನಾನು ಮೊದಲ ಸಲ ಪ್ರತಿಕ್ರಯಿಸುವಾಗ ಎಷ್ಟು ಸಂಯಮದಿಂದ ಪ್ರತಿಕ್ರಯಿಸಿದೆ ಎಂದು ನೀವೇ ನೋಡಿ. ನೀವು ಪ್ರಯತ್ನ ಪಟ್ಟಿದ್ದರೆ ನೀವು ಅರ್ಥೈಸಿಕೊಳ್ಳಬಹುದಾಗಿತ್ತು ಅಲ್ವ?ನಿಮಗೆ ವೇದ, ಸನಾತನ ಸಂಸ್ಕ್ರತಿಯ ಬಗೆಗಿನ ಮಮತೆ ಅರ್ಥವಾಗುತ್ತದೆ, ಅದರಲ್ಲಿ ತಪ್ಪೇನಿಲ್ಲ ಆದರೆ ಆ ಧಾವಂತದಲ್ಲಿ ಆಲೋಚಿಸುವದನ್ನೇ ಬಿಟ್ಟಿರಿ. ಯಾಕೆ?ವಿಜ್ಞಾನ ಅಂದ ತಕ್ಷಣ ನಿಮ್ಮ ದ್ರಷ್ಟಿಯಲ್ಲಿ ಪ್ರಕ್ರತಿಯನ್ನು ಮೀರುವುದು ಎಂದುಕೊಂಡಿದ್ದೀರಿ. ಅದು ತಪ್ಪು. ಮೊದಲೇ ಹೇಳಿದಂತೆ ನಾನು ಕೂಡ ಆಸ್ತಿಕನೆ. ಹಾಗೆಂದು ಕಣ್ಣಿಗೆ ಕಂಡ ಸತ್ಯವನ್ನು ಅಲ್ಲಗೆಳೆಯುವದು ತರವಲ್ಲ. ಸತ್ಯವನ್ನು ಬೇರೆ ಬೇರೆ dimension ನಿಂದ ನೋಡಬಹುದೇನೋ. ಒಂದು dimension ಲಿ ನಮಗೆ ಕಂಡ ಸತ್ಯವನ್ನು ವ್ಯವಹರಣೆಗೆ ತಾತ್ಕಾಲಿಕವಾಗಿಯಾದರೂ ನಂಬಲೇ ಬೇಕು. ನಾನು ಅರ್ಥ ಮಾಡಿಕೊಂಡ ಹಾಗೆ ಒಂದೇ ಸತ್ಯವು ಮೂರು ವಿಭಿನ್ನ dimension ಗಳಲ್ಲಿ ನಮಗೆ ಗೋಚರಿಸುತ್ತವೆ.
          1. ಪಾರಮಾರ್ಥಿಕ ಸತ್ಯ(absolute reality[oneness])
          2. ವ್ಯಾವಹಾರಿಕ ಸತ್ಯ.(empirical reality)
          3. ವೈಭಾಷಿಕ ಸತ್ಯ. (subjective reality)
          ವ್ಯಾವಹಾರಿಕ ಸತ್ಯವೆಂದರೆ ನಾವು ವ್ಯವಹರಿಸುತ್ತಿರುವ ಲೌಕಿಕ ಜಗತ್ತಿನಲ್ಲಿ ನಡೆಯುವ ವಿದ್ಯಾಮಾನಗಳು. ಅದನ್ನೇ ನಾವು ‘ವಿಜ್ಞಾನ’ ಎಂದು ಕರೆಯುತ್ತೇವೆ. ವೈಭಾಷಿಕ ಸತ್ಯವೆಂದರೆ ಕನಸಿನಲ್ಲಿ, ಮನಸಿನಲ್ಲಿ ನಡೆಯುವ ವಿದ್ಯಾಮಾನಗಳು. ಪಾರಮಾರ್ಥಿಕ ಸತ್ಯದ ಬಗ್ಗೆ ಹೇಳಲಾರೆ. ಯಾಕೆಂದರೆ ನನ್ನ ಅನುಭವಕ್ಕೆ ಬಂದಿಲ್ಲ. ಇದನ್ನು ಯಾಕೆ ಹೇಳಬೇಕಾಯಿತೆಂದರೆ ನೀವು ಯಾವುದನ್ನು ‘ವಿಜ್ಞಾನ’ ಎಂದು ತಿರಸ್ಕರಿಸುತ್ತೀರೋ, ಅದು ವ್ಯಾವಹಾರಿಕ ಸತ್ಯ ಆಗಿದ್ದು, ಮೂಲ ಪರಮತತ್ವದ, ಪಾರಮಾರ್ಥಿಕ ಸತ್ಯದ ಒಂದು ಬಗೆಯ ಅವಲೋಕನವೇ ಆಗಿರುತ್ತದೆ. ಇದು ನಾನು ಕತೆ ಕಟ್ಟಿ ಹೇಳದ್ದಲ್ಲ. ‘ಅದ್ವೈತ’ ಸಿದ್ಧಾಂತದ ಮೂಲ ಅರ್ಥ. ನಾನು ನಿಮಗೆ ಕಲಿಸುವಷ್ಟು ದೊಡ್ದವನಲ್ಲದಿರಬಹುದು. ಆದರೆ ನೀವು ಮೂಲತಹ ಅರ್ಥ ಮಾಡಿಕೊಳ್ಳಬೆಕಾಗಿರುವದೆಂದರೆ ‘ವಿಜ್ಞಾನ’ ಎಂಬುವದೂ ಕೂಡ ಪಾರಮಾರ್ಥಿಕ ಸತ್ಯದ ಒಂದು ಅವಲೋಕನ, ಆದರೆ ಕ್ರತಕ ಅಲ್ಲ. ಹಾಗೆಯೇ ವೈಭಾಷಿಕ ಸತ್ಯವೂ ಕೂಡ ಒಂದೇ ಸತ್ಯದ ಇನ್ನೊಂದು reflection ಆಗಿರುತ್ತದೆ. ಉದಾರಣೆಗೆ ಒಬ್ಬ ಮನುಷ್ಯನನ್ನು ನೀವು ನೆನಪಿಸಿಕೊಳ್ಳುತ್ತೀರಿ ಎಂದುಕೊಳ್ಳೋಣ. ಆ ಮನುಷ್ಯ ಅಲ್ಲಿ ಇರದಿದ್ದರೂ ನಿಮ್ಮ ಮನಸ್ಸಿನಲ್ಲಿ ಆತನ ಚಿತ್ರ ನೆಲೆಯೂರಿರುತ್ತದೆ. ಅಂದರೆ ವ್ಯವಹಾರಿಕ ಸತ್ಯದ ಮುಖ, ವೈಭಾಷಿಕ ಸತ್ಯದಲ್ಲಿ ತೆರೆ ಕಾಣುತ್ತದೆ. ಹಾಗೆಯೇ ವ್ಯವಹಾರಿಕ ಸತ್ಯ(ವಿಜ್ಞಾನ) ಕೂಡ ಮೂಲ ಸತ್ಯದ(ಪಾರಮಾರ್ಥಿಕ ಸತ್ಯದ) ಒಂದು ಅವಲೋಕನ ಎನ್ನಬಹುದು. ನೀವು ಎಲ್ಲಿಯವರೆಗೆ ಲೌಕಿಕ ಪ್ರಾಪಂಚ್ಯದಲ್ಲಿ ವ್ಯವಹರಿಸುತ್ತೀರೋ ಅಲ್ಲಿಯ ವರೆಗೂ ಈ ಸತ್ಯವನ್ನು ಹುಡುಕುತ್ತಸಾಗಲೇಬೇಕು.
          ಇನ್ನು ನಿಮ್ಮ ಬ್ಲಾಗ್ ಗೆ ಬಂದು ನಿಮ್ಮ ಲೇಖನ ಓದಿಲ್ಲ. ನಿಲುಮೆಯಲ್ಲಿ ಅಕಸ್ಮಾತ್ ಆಗಿ ಓದಿದೆ ಅಷ್ಟೇ. ಹಾಗೆ ಓದಿದ ನಂತರ ಅದರ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುವದೂ ಸದಸ್ಯನಾಗಿ ‘ನೈತಿಕ ಜವಾಬ್ದಾರಿ’ :D. ಇನ್ನು ನಿಮ್ಮನ್ನು ಕಂಡರೂ ಕಾಣದ ಹಾಗೆ ಹೋಗುವದು ನಂಗೆ ಬರದು. ಯಾಕೆಂದರೆ ಕಂಡದ್ದನ್ನು ಕಂಡಂತೆ, ಕಾಣದ್ದನ್ನು ಕಾಣದೆ ಹೋಗುವದೆ ಸತ್ಯದ ಮಜಲು ಅಲ್ಲವೇ. ಒಂದು ವೇಳೆ ನೀವು ಕಾಣದಂತೆ ಹೋದರೂ ನಾನು ಹಾಗೆ ಸುಮ್ನೆ ಬಿಡುವ ಆಸಾಮಿ ಅಲ್ಲ.
          ಅದೇನೇ ಇರಲಿ, ವೈಯಕ್ತಿಕವಾಗಿ ಇದನ್ನು ತೆಗೆದುಕೊಳ್ಳಬೇಡಿ ಅಷ್ಟೇ(ವ್ಯಾವಹಾರಿಕವಾಗಿ ತೆಗೆದುಕೊಳ್ಳಿ :D). ನಿಮ್ಮ ಮನಸ್ಸನ್ನು ನೋಯಿಸಿದರೆ ಕ್ಷಮಿಸಿಬಿಡಿ.

          ಉತ್ತರ
          • ಏಪ್ರಿಲ್ 15 2012

            ಬಾಲಚಂದ್ರರೇ,

            ನಿಮ್ಮ ಹೇಳಿಕೆಯಲ್ಲಿ ನಿಮ್ಮ ಆಲೋಚನಾ ಸರಣಿಯ ವ್ಯಾಪ್ತಿಯನ್ನು ಹೇಳಿದ್ದೀರಿ. ನಾನು ನಿಮಗೆ ಅದಾಗಲೇ ಉತ್ತರಿಸಿದ್ದೇನೆ. ಮತ್ತೆ ಅದನ್ನೇ ಹೇಳಿದರೆ ಅದು ಇನ್ನುಳಿದ ಓದುಗರಿಗೆ ಕಿರಿಕಿರಿಯಾಗಲೂ ಬಹುದು, ಅನರ್ಥವಾಗಲೂ ಬಹುದು. ನಾನು ಈ ಲೇಖನವನ್ನು ಮೂರು ರೀತಿಯ ಹಿನ್ನೆಲೆಯನ್ನು ಆಧರಿಸಿ ಬರೆದಿದ್ದೇನೆ.

            ೧. ಆಧ್ಯಾತ್ಮಿಕ
            ೨. ಆದಿಭೌತಿಕ
            ೩. ಪಾಕೃತಿಕ [ಲೌಕಿಕ ವಿಜ್ಞಾನ]

            ನನ್ನ ಜೀವನದ ಅನೇಕ ವರ್ಷಗಳಲ್ಲಿ, ಪಾರಮಾರ್ಥಿಕ ಲೋಕವನ್ನು ಕಂಡ ಕೆಲವು ಸಾಧು-ಸಂತರ ಅನುಭವಗಳನ್ನು ಕೇಳಿ ಪಡೆದಿದ್ದೇನೆ; ನೋಡಲು ಸಾಧ್ಯವಾಗಿಲ್ಲ ಯಾಕೆಂದರೆ ನಾನು ಆ ಮಟ್ಟಕ್ಕೆ ಏರಿದವನಲ್ಲ.

            ವೇದವಿಜ್ಞಾನದಲ್ಲಿ ತಿಳಿಸಲಾಗಿರುವ ಮಾಹಿತಿಗಳನ್ನು ಅರಿಯಲು ಯತ್ನಿಸಿದ್ದೇನೆ.

            ವಿಜ್ಞಾನದ ಹಲವು ಪುಸ್ತಕಗಳನ್ನು ಅವಲೋಕಿಸಿದ್ದೇನೆ, ಸತ್ಯಕ್ಕಾಗಿ ತಡಕಾಡಿದ್ದೇನೆ.

            ಮಹರ್ಷಿ ಮಹೇಶ್ ಯೋಗಿಗಳು ಜನ್ಮದಿಂದ ಬ್ರಾಹ್ಮಣರಾಗಿರಲಿಲ್ಲ, ಆದರೆ ಈ ಯುಗದಲ್ಲಿ, ಎರಡು ವರ್ಷಗಳ ಹಿಂದೆ ದೇಹತ್ಯಜಿಸಿದ ಅವರು ತಮ್ಮ ಸತತ ಪರಿಶ್ರಮ ಮತ್ತು ಕಠಿಣ ತಪಸ್ಸಿನಿಂದ ಮಹರ್ಷಿ ಎನಿಸಿದರು! ಇಂದಿನ ಶ್ರೀ ರವಿಶಂಕರ್ ಅವರಿಗೆ ಗುರುವೂ ಆಗಿದ್ದರು! ಈ ಲೋಕದ ಅಚ್ಚರಿ ಹುಟ್ಟಿಸುವ ಮಹಾನ್ ಸಂತರಲ್ಲಿ ಗಜಾನನ ಮಹಾರಾಜರು, ಸಮರ್ಥ ಶ್ರೀಧರಸ್ವಾಮಿಗಳು ಹೀಗೇ ಇನ್ನೂ ಹಲವಾರು ಸನ್ಯಾಸಿಗಳು ಹಂಚಿದ/ಬರೆದ ಅನುಭವಗಳನ್ನು ಅವಲೋಕಿಸಿದ್ದೇನೆ. ಶಿರಡಿ ಸಾಯಿಬಾಬಾ ದೀಪಾವಳಿಯಲ್ಲಿ ನೀರಿನಿಂದಲೇ ಹಣತೆಗಳನ್ನು ಉರಿಸಿದ ದಾಖಲೆ ಸಿಗುತ್ತದೆ; ಇಂದಿನ ಆಸ್ತಿಕ ಜನ ಮೂಢರಲ್ಲ ಆದರೆ ಸ್ವಾರ್ಥಿಗಳು ಎಂಬುದನ್ನು ಮರೆಯಬೇಡಿ!

            ಅಧುನಿಕ ವಿಜ್ಞಾನವೆಂಬ ನಾವು ನಂಬಿರುವ ವಿಜ್ಞಾನದಲ್ಲಿ ಕಣ್ಣಿಗೆ ಕಂಡಿದ್ದು ಮಾತ್ರ ಒಪ್ಪಿತವಾಗುತ್ತದೆ. ಅದರಾಚೆಗಿನ ಲೋಕವನ್ನು ಅದು ಅಲ್ಲಗಳೆಯುತ್ತದೆ. ಅದರ ಪರಿಮಿತಿ ಸೀಮಿತವಾಗಿದೆ. ಅದರಿಂದ ಪಡೆದ ಲೌಕಿಕ ಲಾಭಗಳನ್ನು ನಾನು ಅಲ್ಲಗಳೆಯುತ್ತಿಲ್ಲ. ಆದರೆ ಅದಕ್ಕಿಂತಲೂ ಹೆಚ್ಚಿನ ಮಟ್ಟದ ಜ್ಞಾನ ವೇದದಲ್ಲಿದೆ ಎಂಬುದು ನನ್ನ ಹೇಳಿಕೆ. ಉದಾಹರಣೆಗೆ: ಇಂದು ನಾವು ಕಾಣುವ ವಿಮಾನದ ಪರಿಷ್ಕರಣೆ ನಮ್ಮ ರಾಮಾಯಣದಲ್ಲೇ ಕಾಣಸಿಗುತ್ತದೆ ಮತ್ತು ನಮ್ಮ ವಿಜ್ಞಾನಿಗಳು ಅದನ್ನು ಕಾಣುವ ಮೊದಲೇ ಬೆಂಗಳೂರಿನ ಅನೇಕಲ್ ಕಡೆಗೆ ವಾಸವಿದ್ದ ಯೋಗಿಯೊಬ್ಬರು ವಿಮಾನದ ಪರಿಪೂರ್ಣ ರೂಪರೇಷೆಯನ್ನು ಚಿತ್ರಿಸಿದ ಬಗ್ಗೆ ದಾಖಲೆ ಇದೆ-ಅದು ವಾರಪತ್ರಿಕೆಗಳಲ್ಲೂ ಮಾಧ್ಯಮಗಳಲ್ಲೂ ಅದಾಗಲೇ ಪ್ರಸಾರಗೂಂಡಿದೆ!

            ಔಷಧವೆಂದು ಜನ ಸೇವಿಸುವ ಕೆಮಿಕಲ್ ಎಷ್ಟರಮಟ್ಟಿಗೆ ಪರಿಹಾರ ಎಂದು ನೀವೇ ತಿಳಿದುಕೊಳ್ಳಿ. ರೋಗದ ಮೂಲಕಾರಣವನ್ನು ಹುಡುಕುವ ಬದಲು ತಾತ್ಕಾಲಿಕವಾಗಿ ಅದಕ್ಕೆ ಪರಿಣಾಮನೀಡುತ್ತಾ ಅಡ್ಡ ಪರಿಣಾಮ ಬೀರುವ ವ್ಯವಸ್ಥೆ ಆಂಗ್ಲ ಅಲೋಪಥಿ ಪದ್ಧತಿಯಲ್ಲಿದೆ. ಆದರೆ ಆಯುರ್ವೇದದಲ್ಲಿ ರೋಗದ ಮೂಲಕಾರಣಕ್ಕೆ ಪರಿಹಾರವಿದೆ! ಇತ್ತೀಚೆಗೆ ವಾರಪತ್ರಿಕೆಯೊಂದರಲ್ಲಿ ದೊಡ್ಡವೈದ್ಯರೊಬ್ಬರು ತಮ್ಮ ಮಗಳ ಅರ್ಬುದರೋಗದ ಬಗ್ಗೆ ಬರೆದಿದ್ದರು, ಪ್ರಪಂಚದಲ್ಲಿರುವ ಎಲ್ಲಾ ಉನ್ನತ ಅಸ್ಪತ್ರೆಗಳಿಗೂ ಭೇಟಿನೀಡಿ ಕೀಮೋಥೆರಪಿ ಪಡೆದರೂ ವಾಸಿಯಾಗದ್ದನ್ನು ಹೇಗೆ ಆಯುರ್ವೇದದಲ್ಲಿ ಹೇಳಲಾದ ಅರಿಶಿನ ಮತ್ತು ಕಾಳುಮೆಣಸಿನ ಸಹಾಯದಿಂದ ನಿವಾರಿಸಿಕೊಂಡು ವಿದೇಶೀ ವೈದ್ಯರುಗಳಿಗೂ ಅಚ್ಚರಿಹುಟ್ಟಿಸಿದರೆಂಬುದರ ಬಗ್ಗೆ ತಿಳಿಸಿದ್ದರು! ಇದರಂತೇ ಇಂದು ಮೊದಲಾಗಿ ನಾವು ಮುಖಮಾಡುವುದು ವಿದೇಶೀ ಪದ್ಧತಿಯ ಕೊಡುಗೆಗಳಿಗೆ, ಕೈಲಾಗದ ಸ್ಥಿತಿ ಬಂದರೆ ಹುಡುಕುವುದು ಭಾರತೀಯ ಮೂಲದ ಪರಿಹಾರಕ್ಕೆ!

            ಬಹಳ ಬೇಸರದ ಸಂಗತಿಯೆಂದರೆ ನಿಮ್ಮಂತಹ ಪ್ರಜ್ಞಾವಂತರೆನಿಸಿಕೊಂಡ ಜನ ಪೂರ್ತಿಯಾಗಿ ಅರಿಯಲೂ ಹೋಗದೇ ತನ್ನ ಸೀಮಿತದಲ್ಲೇ ಎಲ್ಲವನ್ನೂ ಸಮರ್ಥಿಸಿಕೊಳ್ಳುವುದು ಮತ್ತು ಗಂಟೆ-ಜಾಗಟೆ-ದೇವಸ್ಥಾನ-ಜ್ಯೋತಿಷಿಗಳನ್ನು ಹಳಿಯುವುದು! ಮಾನವ ಜೀವನದಲ್ಲಿ ’ತಾಪ-ತ್ರಯ’ಗಳಂತೆ : ಅದಿಭೌತಿಕ, ಅದಿದೈವಿಕ ಮತ್ತು ಆಧ್ಯಾತ್ಮಿಕ ಮಜಲುಗಳಿಂದ ಅವುಗಳ ವ್ಯುತ್ಫತ್ತಿ ಎಂದು ತಿಳಿಸಿದ್ದಾರೆ. ಈ ಮೂರೂ ಬಹಳ ಆಳವಾಗಿವೆ-ಕಾರಣಗಳನ್ನು ಮತ್ತೆ ವಿಭಜಿಸಲಾಗುತ್ತದೆ. ನನಗೆ ಗೊತ್ತಿರುವ ಆಲೋಪಥಿ ವೈದ್ಯದಂಪತಿಗಳಿಗೆ ಒಬ್ಬಳು ’ಆಟಿಸಮ್’ ನಿಂದ ಬಳಲುವ ಮಗಳಿದ್ದಾಳೆ. ಪಾಲಕರೇ ವೈದ್ಯರಾದರೂ ಅವಳನ್ನು ಗುಣಪಡಿಸಲಾರರು-ಮಾಮೂಲೀ ಮಕ್ಕಳಂತೇ ಮಾಡಲಾರರು!—ಇದಕ್ಕೆ ಲೌಕಿಕ ವಿಜ್ಞಾನ ಕೊಡುವ ಉತ್ತರ ಸೀಮಿತವಾಗಿರುತ್ತದೆ. ಸಮರ್ಥ ಶ್ರೀಧರರು ಮೂಕನೊಬ್ಬನನ್ನು ಮಾತನಾಡಿಸಿ, ಕಾರಣಗಳನ್ನು ಆತನ ತಂದೆಗೆ ತಿಳಿಹೇಳಿದ ದಾಖಲೆ ಕಾಣಸಿಗುತ್ತದೆ; ವಿಜ್ಞಾನದ ಶಸ್ತ್ರಚಿಕಿತ್ಸೆಗಳು ಮಾತು ಬರಿಸುತ್ತಿದ್ದವೇ? ಸಾಧ್ಯವಿರಲಿಲ್ಲ!

            ಸರಿಯಾದ ಓದಿನ ತಳಹದಿಯಿಲ್ಲದ ನಿಮ್ಮಂಥ ಬಹುತೇಕ ಭಾರತೀಯರು ಭಾರತೀಯ ಮೂಲದ ಆರ್ಷೇಯ ವಿದ್ಯೆಗಳನ್ನು ಅಲ್ಲಗಳೆಯುತ್ತಾರೆ. ಅದರಲ್ಲಿ ಮಂಗನಿಂದ ಮಾನವನಾದ ಎಂಬ ಅಪವಾದವೂ ಒಂದಾಗಿದೆ. ಮಂಗನಿಂದ ಮಾನವನಾದ ಎಂಬುದು ಒಂದು ಊಹೆಯಷ್ಟೇ ಹೊರತಾಗಿ ಅದಿ ನಿರ್ಧರಿತವಾಗಿಲ್ಲ! ಲೌಕಿಕ ವಿಜ್ಞಾನದಲ್ಲಿ ನಿರ್ಧರಿತವಾಗದ ವಿಷಯಗಳೇ ಹೆಚ್ಚಾಗಿವೆ ಆದರೆ ವೇದಗಳು ನಿಖರವಾಗಿ ಮಾಹಿತಿಗಳನ್ನು ನೀಡುತ್ತವೆ! ಇಷ್ಟುಸಾಕು-ಇನ್ನು ನೀವು ಯಾರ್ಯಾರನ್ನು ಎಲ್.ಕೆ.ಜಿ ಕಳುಹಿಸಬೇಕಾಗುತ್ತದೋ ತಿಳಿದುನೋಡಿ, ಉತ್ತರ ಹೊಳೆಯುವಷ್ಟರಲ್ಲಿ ನೀವು ಮುದುಕಾಗಲೂ ಬಹುದು!

            ಉತ್ತರ
            • Balachandra
              ಏಪ್ರಿಲ್ 15 2012

              ನೀವು ಪಾರಮಾರ್ಥಿಕ ಸತ್ಯವನ್ನು ದರ್ಶಿಸಿದವರ ಬಗ್ಗೆ ಹಾಗೂ, ಅನೇಕ ಪವಾಡ ಪುರುಷರ ಬಗ್ಗೆ ಕೇಳಿರಬಹುದು. ನಾನೂ ಕೂಡ ಅಂತವರ ಬಗ್ಗೆ ಬಹಳಷ್ಟು ಕೇಳಿದ್ದೇನೆ. ಆದರೆ ಅಂತದ್ದನ್ನೆಂದೂ ನೋಡಲು ಸಾಧ್ಯವಾಗಿಲ್ಲ. ‘ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು’ ಎನ್ನುವಂತಾ ಕಾಲದಲ್ಲಿ ಈ ಕೇಳಿದ, ಹೇಳಿದ ಸಂಗತಿಗಳು ಕಾಲಕಾಲಕ್ಕೆ ಭಿನ್ನ ರೂಪವನ್ನು ಪಡೆದುಕೊಳ್ಳುವದನ್ನೂ ನೋಡಿದ್ದೇನೆ. ಉದಾರಣೆಗೆ ಸತ್ಯ ಸಾಯಿ ಬಾಬಾರ ಪವಾಡದ ಬಗ್ಗೆ ಅದೆಷ್ಟೋ ಜನರು ‘ಬರಿಗೈಯಲ್ಲಿ ವಿಭೂತಿ, ಚಿನ್ನ ಸ್ರಷ್ಟಿಸಿದ್ದು’ ಕತೆಗಳನ್ನು ಹೇಳಿದ್ದಾರೆ. ಆದರೆ ಅದೇ ಬಾಬಾರು ಇಂತಹ ಪವಾಡಗಳನ್ನು ಮಾಡಿ ತೋರಿಸುವಂತೆ challenge ಮಾಡಿದಾಗ ಪರಾರಿಯಾದ್ದೂ ನಮಗೆ ತಿಳಿದ ವಿಷಯವೇ. ಅದೇನೇ ಇರಲಿ, ಈ ಪವಾಡ ಪುರುಷರುಗಳು ನಮ್ಮ ದೇಶ ದುರವಸ್ತೆಯಲ್ಲಿದ್ದಾಗ ಏಕೆ ರಕ್ಷಿಸಲಿಲ್ಲ? ಬ್ರಿಟಿಷರ ಇನ್ನೂರು ವರ್ಷಗಳ ಆಡಳಿತದಲ್ಲಿ ಹಾಗೂ ಅದಕ್ಕೂ ಮೊದಲು ಅದೆಷ್ಟೋ ಪವಾಡ ಪುರುಷರು ಜನಿಸಿರಲಿಲ್ಲ?ಅವರ್ಯಾರೂ ತಮ್ಮ ಪವಾಡಗಳ ಮೂಲಕವೇಕೆ ಬ್ರಿಟಿಷರನ್ನು ಹಿಮ್ಮೆಟ್ಟಲಿಲ್ಲ?ಮುಸ್ಲೀಮರು ಅದೆಷ್ಟೋ ದೇವಸ್ತಾನಗಳನ್ನು ಒಡೆದು ಹಾಕಿದಾಗ ಇವರು ಎಲ್ಲಿದ್ದರು? ಅದಕ್ಕೂ ಮೊದಲು ಇದ್ದ ಜ್ಯೋತಿಶಿಗಳೆಕೆ ಇವುಗಳ ಬಗ್ಗೆ ಮೊದಲೇ ತಿಳಿಸಲಿಲ್ಲ? ನನಗೆ ಗೊತ್ತು, ಇಂತಹ ಪ್ರಶ್ನೆಗಳು ನಿಮಗೆ ಕುತರ್ಕ, ವಿತಂಡ ಎನಿಸುತ್ತವೆ ಎಂದು.
              ಇನ್ನು ನಾನು ಆಯುರ್ವೇದ, ಯೋಗದ ಬಗ್ಗೆ ಎಲ್ಲಿಯೂ ಚಕಾರವೆತ್ತಿಲ್ಲ. ಅವೂ ಕೂಡ ವಿಜ್ಞಾನದ ಭಾಗವೇ. ವಿಜ್ಞಾನ ಎಲ್ಲವನ್ನೂ ಕಂಡುಹಿಡಿದಿಲ್ಲ ಹಾಗು ಸದ್ಯದಲ್ಲಿ ಒಂದು ಪರಿಮಿತಿಯಲ್ಲಿದೆ ನಿಜ. ಆದರೆ ನೀವು ಆ ಪರಿಮಿತಿಯ ವೈಶಾಲ್ಯತೆಯನ್ನು ಅವಲೋಕಿಸದೆ, ಅಭ್ಯಸಿಸದೆ, ಅರಿಯದೆ ತೀರ್ಮಾನ ಕೊಟ್ಟಿರಿ ಅಷ್ಟೇ. ಅದನ್ನು ನಾವು ಇಲ್ಲಿ ಹೇಳುತ್ತಿರುವದು.

              ಉತ್ತರ
              • ಏಪ್ರಿಲ್ 15 2012

                ಬಾಲಚಂದ್ರರೇ, ನಿಮ್ಮ ದೃಷ್ಟಿಕೋನ ಅಧುನಿಕ ವಿಜ್ಞಾನಕ್ಕೆ ಮಾತ್ರ ಸೀಮಿತವಾಗಿದೆ ಎಂಬುದು ನಿಮ್ಮ ಉಕ್ತಿಗಳಲ್ಲೇ ಸ್ಪಷ್ಟವಾಗುತ್ತದೆ. ನಿಮ್ಮೆಲ್ಲಾ ಪ್ರಶ್ನೆಗಳಿಗೂ ನಾನು ಉತ್ತರ ಹೇಳುವುದಕ್ಕಿಂತಾ ನೀವೇ ಕಂಡುಕೊಳ್ಳುವುದು ಒಳ್ಳೇದು. ನೀವು ಅಧ್ಯಯನ ಮುಖಿಯಾದರೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀವೇ ಕಂಡುಕೊಳ್ಳುತ್ತೀರಿ. ಆದರೂ ನಿಮಗೆ ಕಿಂಚಿತ್ ಉತ್ತರ ಸಂಕ್ಷಿಪ್ತವಾಗಿ ನೀಡುತ್ತಿದ್ದೇನೆ:

                ೧. ಪವಾಡ ಪುರುಷರೆಲ್ಲರೂ ಸನ್ಯಾಸಿಗಳಲ್ಲ, ಸಂತರಲ್ಲ. ಸಂತರಿಂದ ನಡೆದ ಸಹಜ ಅತಿಮಾನುಷ ಕೆಲಸಗಳಿಗೆ ಅಘಟಿತ ಘಟನಾ ಶಕ್ತಿ ಎಂದು ಕರೆಯುತ್ತಾರೆ. ಉದಾಹರಣೆಗೆ ಸಮರ್ಥ ಶ್ರೀಧರ ಸ್ವಾಮಿಗಳಿಗೆ ಆ ಹೆಸರಿದೆ, ಯಾಕೆಂದರೆ ಯಾವ ಕೆಲಸವನ್ನು ಅವರು ಸಂಕಲ್ಪಿಸುತ್ತಿದ್ದರೋ ಅವರ ಸಂಕಲ್ಪಮಾತ್ರದಿಂದ ಕೆಲಸಗಳು ಘಟಿಸಿಬಿಡುತ್ತಿದ್ದವು. ಇನ್ನೊಂದು ಉದಾಹರಣೆ ರಾಮಕೃಷ್ಣ ಪರಮಹಂಸರು ಶಕ್ತಿಪಾತ ಯೋಗಸಿದ್ಧಿಯನ್ನು ಪಡೆದಿದ್ದು ತಾನು ಮರಣಿಸುವಾಗ ಸ್ವಾಮಿ ವಿವೇಕಾನಂದರನ್ನು ಕರೆದು ಅವರ ತಲೆಯಮೇಲೆ ಹಸ್ತವಿಟ್ಟು ತನ್ನ ಸಾಧನಾಫಲವನ್ನು ಶಕ್ತಿಪಾತ ಯೋಗದ ಮೂಲಕ ವಿವೇಕಾನಂದರಿಗೆ ವರ್ಗಾಯಿಸಿದರು ಎನ್ನುವುದನ್ನು ಕೇಳಿದ್ದೇವಲ್ಲವೇ? ನಿಮ್ಮ ವಿಜ್ಞಾನ ಕಾಣದ ಅಥವಾ ಕಾಣಲಿಕ್ಕಾಗದ ಯಾವುದೋ ವೈಶಿಷ್ಟ್ಯ ಅಲ್ಲವೇ ಅಲ್ಲ ಎಂದು ಅಲ್ಲಗಳೆಯುತ್ತೀರಿ ಹೇಗೆ? ವಿದ್ಯುತ್ತು ತಂತಿಯಲ್ಲಿ ಪ್ರವಹಿಸುವುದು ಕಾಣುತ್ತದೆಯೇ? ದೀಪ ಉರಿದಾಗಲೋ, ಫ್ಯಾನು ತಿರುಗಿದಾಗಲೋ ನಮಗೆ ಅದರ ಇರುವಿಕೆ ತಿಳಿಯುವುದಲ್ಲವೇ? ೪ ವರ್ಷದ ಮಗುವಿಗೆ, ತಂತಿಯಲ್ಲಿ ವಿದ್ಯುತ್ತಿನ ಅಸ್ತಿತ್ವ ಹೇಗೆ ಎಂದು ಅರ್ಥವಿಸುವುದು ಕಷ್ಟ ಹೇಗೋ ಜನಸಾಮಾನ್ಯರಾದ ನಮಗೆ ಆಧ್ಯಾತ್ಮ ಸಾಧಕರ ಅಘಟಿತ ಘಟನಾ ಸಾಮರ್ಥ್ಯ ಸುಳ್ಳು ಎಂಬಂತೇ ಕಾಣುತ್ತದೆ. ಯೋಗಿಯೂ ಭೋಗಿಯಂತೇ ಸಂಸಾರಿಯಂತೇ ಕಾಣುತ್ತಾನೆ; ಇದನ್ನು ಅರಿತೇ ಡೀವೀಜಿಯವರು “ಯೋಗಿಯವನ್ ಅಂತರದಿ” ಎಂದಿದ್ದಾರೆ. ಇವತ್ತು ನಾವು ಕಾಣುವ ಸುಂದರ ಮುರುಡೇಶ್ವರ, ನಾವು ಚಿಕ್ಕವರಿದ್ದಾಗ ಹರಿದುಬೀಳುವ ಹಳೆಯ ಹಾವಸೆಗಟ್ಟಿದ ಗೋಪುರಗಳಿಂದ ಕೂಡಿತ್ತು, ಭಗವಾನ್ ಶ್ರೀಧರರು ಅಲ್ಲಿಗೆ ಹೋಗಿದ್ದಾಗ[ನಾವೆಲ್ಲಾ ಹುಟ್ಟುವುದಕ್ಕಿಂತಲೂ ಮುನ್ನವೇ] ಯಾರೋ ಅದರ ಜೀರ್ಣೊದ್ಧಾರದ ಕುರಿತು ಪ್ರಸ್ತಾಪಿಸಿದಾಗ ಕ್ಷಣ ನಿಂತ ಶ್ರೀಧರರು, ” ಈ ದೇವಸ್ಥಾನದ ಬಗ್ಗೆ ನೀವು ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ, ೩೦ ವರ್ಷಗಳ ನಂತರ ಅದು ಭವ್ಯವಾಗಿ ನಿರ್ಮಾಣಗೊಳ್ಳುತ್ತದೆ” ಎಂದು ತಿಳಿಸಿದ್ದರಂತೆ. ಆಗ ಅಲ್ಲಿ ಆರ್. ಎನ್ ಶೆಟ್ಟರ ವಸಾಹತು ಅಥವಾ ಕಚೇರಿ ಯಾವುದೂ ಇರಲಿಲ್ಲ! ಈಗ ಅದು ಹೇಗಿದೆ ಎಂಬುದು ನಿಮಗೇ ಗೊತ್ತಿದೆ. ಕಾವಿ ಉಟ್ಟವರೆಲ್ಲಾ ಸನ್ಯಾಸಿಗಳಲ್ಲ, ಟೈ ತೊಟ್ಟವರೆಲ್ಲಾ ವಿಜ್ಞಾನಿಗಳಲ್ಲ. ಹುಲಿಕಲ್ ನಟರಾಜರಂತಹ ಪವಾಡ ಭಂಜಕರು ಕಣ್ಕಟ್ಟು-ಜಾದೂ ಮಾಡುವವರ ಕೃತ್ಯಗಳನ್ನು ಕಂಡು ಹಿಡಿಯಬಹುದೇ ಹೊರತು ತಪಸ್ಸಿದ್ಧಿಯನ್ನು ಪಡೆದ ಮಹಾಪುರುಷರ ಅಘಟಿತ ಘಟನಾ ಶಕ್ತಿಯಿಂದುಂಟಾಗುವ ಫಲಗಳನ್ನಲ್ಲ. ಇನ್ನು ಸಾಯಿಬಾಬಾರ ವಿಷಯ ಇಲ್ಲಿ ಬೇಡ ಬಿಡಿ.

                ೨. ಸನ್ಯಾಸಿಗಳು, ಸಾಧಕರು ಲೋಕ ಹಿತಚಿಂತಕರಾಗಿರುತ್ತಾರೆ. ತಂದೆ-ತಾಯಿಗೆ ತಮ್ಮ ಮಕ್ಕಳು ಹೇಗೋ ಅವರಿಗೆ ಲೋಕದ ಜನರೆಲ್ಲಾ-ಜೀವಿಗಳೆಲ್ಲಾ ಒಂದೇ. ಯಾರನ್ನೋ ಜಯಿಸುವ, ಮರ್ಧಿಸುವ, ಗೆಲ್ಲುವ, ಕೊಲ್ಲುವ ಸಲುವಾಗಿ ತಪಸ್ಸು ಮಡುವವರು ರಕ್ಕಸರು ಮಾತ್ರ. ಬ್ರಿಟಿಷರು ಭಾರತಕ್ಕೆ ಬಂದಿರಬಹುದು, ಮೊಘಲರು ದೇವಸ್ಥಾನಗಳನ್ನೂ ನಾಶಪಡಿಸಿರಬಹುದು, ಜಗನ್ನಿಯಾಮಕನ ಪರೋಕ್ಷ ಆಡಳಿತದಲ್ಲಿರುವ ಈ ಬ್ರಹ್ಮಾಂಡ ವ್ಯವಸ್ಥೆಯಲ್ಲಿ ಆಗುವುದನ್ನೆಲ್ಲಾ ತಡೆಯುವುದು ಅವರ ಅಪೇಕ್ಷಿತ ನಡೆಯಲ್ಲ. ಇಷ್ಟೇ ಏಕೆ? ಸನ್ಯಾಸಿಗಳು ತಮ್ಮ ಭೌತಿಕ ಕಾಯಗಳಿಗೆ ಬರುವ ಕಾಯಿಲೆಯನ್ನು ಅನುಭವಿಸಿ ಜನ್ಮಕ್ಕೆ ಇರುವ ಋಣವನ್ನು ತೀರಿಸುತ್ತಾರೆಯೇ ವಿನಃ ಅದಕ್ಕೆ ಸ್ವಯಂ ತಪಸ್ಸು ಮಾಡಿ ಪರಿಹರಿಸಿಕೊಳ್ಳುವುದಿಲ್ಲ! ಇದಕ್ಕೆ ಕ್ಯಾನ್ಸರ್ ಕಾಯಿಲೆಯಿಂದ ಹುಣ್ಣಾಗಿ ಹುಳವಾಗಿ ಕೊಳೆಯುತ್ತಿದ್ದ ಕೈಯ್ಯನ್ನು ಹಾಗೇ ಸಂಭಾಳಿಸಿಕೊಂಡ ರಮಣಮಹರ್ಷಿಗಳೇ ಸಾಕ್ಷಿ. ಹಾಗಂತ ರಮಣರಲ್ಲಿ ಸಾಮರ್ಥ್ಯ ಇರಲಿಲ್ಲವೇ? ಇತ್ತು; ಬಳಸಲಿಲ್ಲ! ರಮಣರ ಸುತ್ತ ನೂರಾರು ವೈದ್ಯರಿದ್ದರೂ ವೈದ್ಯರಿಗೇ ಕನಸಿನಲ್ಲಿ ವೈದ್ಯರಾಗಿ ಕಾಣಿಸಿ ಇಂತಹ ಗಿಡಮೂಲಿಕೆ ಉಪಯೋಗಿಸಿ ತನ್ನ ನಿಲ್ಲದ ಬಿಕ್ಕಳಿಕೆಗೆ ಎಂದು ತರಿಸಿಕೊಂಡವರು ರಮಣರು! ಹೀಗೆಲ್ಲಾ ಇರುವಾಗ ಈ ಭೂಮಿಯಲ್ಲಿ ಅನೇಕ ರಾಜಮಹಾರಾಜರು ಆಳಿ-ಅಳಿದರು, ಅದೆಷ್ಟೋ ಚಿಕ್ಕಪುಟ್ಟ ಮತಗಳು ಹುಟ್ಟಿ ಸತ್ತವು, ಕೆಲವು ಮಾತ್ರ ಜೀವಂತ ಇವೆ. ಆದರೆ ಯಾರು ಎಷ್ಟೇ ಹೋರಾಡಿದರೂ ಕೊನೆಗೆ ಉಳಿಯುವುದು ಮಾನವ ಸಹಜ ಜೀವನಧರ್ಮವನ್ನು ಪ್ರತಿಪಾದಿಸುವ ಸನಾತನ ಧರ್ಮ ಮಾತ್ರ ಎಂಬುದು ನಿಮಗೆ ತಿಳಿದಿರಲಿ. ಇದು ಯಾವುದೋ ದಾರ್ಶನಿಕ ಸ್ಥಾಪಿಸಿದ್ದಲ್ಲ; ಅತಿರಂಜಿತ ಪ್ರಚಾರವನ್ನಂತೂ ಬಯಸುವುದೂ ಇಲ್ಲ. ನದಿ ಹುಟ್ಟಿ ತನ್ನ ಸಹಜಗತಿಯಲ್ಲಿ ಹೇಗೆ ಪ್ರವಹಿಸುತ್ತದೋ ಹಾಗೇ ಅಲ್ಲಲ್ಲಿ ಸನಾತನಿಗಳು ಹುಟ್ಟಿತ್ತಾರೆ; ಉತ್ತಮ ಸಂಸ್ಕೃತಿಯ ಬೋಧನೆಮಾಡಿ ಗಮ್ಯಕ್ಕೆ ಮರಳುತ್ತಾರೆ!

                ಇಲ್ಲೊಂದಿ ಕೊನೆಮಾಟು ಹೇಳುತ್ತೇನೆ:

                ಒಮ್ಮೆ ಭಗವಾನ್ ಶ್ರೀಧರರು ಇರುವಾಗ ಭಾರತ-ಪಾಕಿಸ್ತಾನದ ನಡುವೆ ಯುದ್ಧಘಟಿಸಿತು. ಕೆಲವರು ಭಾರತಕ್ಕೇ ಜಯಲಭಿಸಲೆಂದು ಶ್ರೀಧರರಲ್ಲಿ ಬೇಡಿದರು. ಯೋಚಿಸಿದ ಶ್ರೀಧರರು “ಅನಾಯಾಸವಾಗಿ ಹಾಗೇ ಆಗಲಿ” ಎಂದರು. ನಂತರ ಯುದ್ಧದಲ್ಲಿ ಅತಿ ಕಡಿಮೆ ಸಮಯದಲ್ಲಿ ಭಾರತಕ್ಕೇ ಜಯವಾಯ್ತು; ಸಾವು-ನೋವುಗಳು ಜಾಸ್ತಿಯಾಗಿ ಆಗದಿರುವುದು ವಿಶೇಷ!

                ಇನ್ನು ಸರಿಯಾದ ಜ್ಯೋತಿಷಿಗಳು ಆಗುವುದನ್ನು ತಿಳಿಸಬಹುದೇ ಹೊರತು, ನಿಯಂತ್ರಿಸಲು ಅವರು ಸಮರ್ಥರಲ್ಲ; ಅವರಿಗೆ ಈ ಲೋಕದ ಅಧಿಕಾರದ ಕೀಲೀಕೈ ಕೊಡಲಿಲ್ಲ!

                ನಿಮ್ಮ ಅಧ್ಯಯನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡರೆ ನಿಮಗೂ ಅದರಿಂದ ಹೊಸಬೆಳಕು ಸಿಗಬಹುದು, ನಿಮ್ಮ ದೃಷ್ಟಿಕೋನ ಬದಲಾಗಲೂ ಬಹುದು. ಇದನ್ನೇ ನಾನು ಇನೊಬ್ಬ ಪ್ರತಿಕ್ರಿಯೆದಾರರಾದ ’ಓದುಗ’ ಎನ್ನುವ ಅನಾಮಿಕರಿಗೂ ತಿಳಿಸುತ್ತಿದ್ದೇನೆ. ತರ್ಕಕ್ಕೆ ಕೇವಲ ತರ್ಕವಾಗಿದ್ದರೆ ಸಲ್ಲ; ತರ್ಕದವೊಂದೇ ನಿರ್ಣಾಯಕವಲ್ಲ: ಗಣಿತದ ಒಂದು ಲೆಕ್ಕ ಹೀಗಿದೆ. ಹತ್ತು ಜನ ಕೆಲಸದವರು ಒಂದು ಮನೆಯನ್ನು ೬ ತಿಂಗಳಲ್ಲಿ ಕಟ್ಟಿ ಮುಗಿಸುತ್ತಾರೆ, ಜನರ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋಗಿ ಕಟ್ಟುವ ಕೈಗಳಿಗೆ ಕೆಲಸವೇ ಇರದ ಸ್ಥಾನಕ್ಕೆ ತಲ್ಪುತ್ತೀರಿ-ಇದು ಗಣಿತದ ರೀತ್ಯಾ ತರ್ಕ!

                ಈ ಜಗದಲ್ಲಿ ಸನಾತನವಾಗಿ ಷಟ್‍ಶಾಸ್ತ್ರಗಳನ್ನು ನೀಡಿದ್ದಾರೆ. ಮೀಮಾಂಸೆ, ತರ್ಕ, ನ್ಯಾಯ …ಈ ರೀತಿ. ಅವೆಲ್ಲವುಗಳ ಸಮನ್ವಯವೇ ಈ ಲೋಕದ ಬದುಕಾಗಿದೆ. ಇಂದಿನ ಜನಾಂಗದಲ್ಲಿ ನಿಮ್ಮಂತಹ ಅನೇಕರು ಕೇವಲ ಅಧುನಿಕ ವಿಜ್ಞಾನವೆಂದು ಕುಣಿಯುತ್ತಾರೆ ಬಿಟ್ಟರೆ ಯಾವುದನ್ನೂ ವಿಸ್ತೃತದೃಷ್ಟಿಕೋನದಿಂದ ನೋಡುವುದೇ ಇಲ್ಲ! ಒಬ್ಬ ಹರೆಯದ ಹುಡುಗ ತನ್ನ ಪಕ್ಕದಲ್ಲೆಲ್ಲೋ ನಿಂತ ಹುಡುಗಿಯನ್ನು ಮಾತ್ರ ನೋಡುತ್ತಾನಂತೆ; ಅದೇ ಹರೆಯದ ಹುಡುಗಿ ತಾನು ನಿಂತಿರುವ ಸ್ಥಳದಲ್ಲಿ ೩೬೦ ಡಿಗ್ರೀ ಗಳಷ್ಟು ವ್ಯಾಪಕವಾಗಿ ತನ್ನ ದೃಷ್ಟಿಕೋನವನ್ನು ದಶದಿಕ್ಕುಗಳಲ್ಲೂ ಪಸರಿಸುತ್ತಾ ತನಗೆ ಅಪಾಯವಿದೆಯೇ/ಯಾರಾದರೂ ತನ್ನ ಸೌಂದರ್ಯವನ್ನು ಗಮನಿಸುತ್ತಿದ್ದಾರೆಯೇ ಎಂದು ತಿಳಿದುಕೊಳ್ಳುತ್ತಾಳಂತೆ! –ಇದೇ ರೀತಿ ಅಧ್ಯಯನಶೀಲನಾದ ವ್ಯಕ್ತಿ ತನ್ನ ಓದಿನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಾಗ ಇಲ್ಲಿ ಮೇಲೆ ಕೊಟ್ಟಿರುವ ಲಿಂಕುಗಳೆಲ್ಲಾ ಗೌಣವಾಗಿ ಕಾಣುತ್ತವೆ. ಹೇಳಿದ್ದೇನಲ್ಲಾ, ಅಣುವಿಜ್ಞಾನಿ ಡಾ|ರಾಜಾರಾಮಣ್ಣ ಅವರೇ ಪ್ರಪಂಚದ ಅದ್ವೈತ ತತ್ವವನ್ನು ಪರಮಾಣು ವಿಭಜನೆಯ ಹಂತದಲ್ಲಿ ಪ್ರಾಯೋಗಿಕವಾಗಿ ಕಂಡಿದ್ದೇನೆ ಎಂದಿದ್ದಾರೆ.

                ನನಗೆ ಉತ್ತರಿಸಿ ಸಾಕಾಗಿದೆ, ತಿಳಿದುಕೊಳ್ಳುವುದು ಬಿಡುವುದು ನಿಮ್ಮಿ ನಿಮ್ಮ ವ್ಯಾಪ್ತಿಗೆ ಬಿಟ್ಟಿದ್ದು. ಇನ್ನು ಮೇಲೆ ವ್ರಥಾ ನನ್ನ ಸಮಯ ಹಾಳುಮಾಡಲಾರೆ, ಇಷ್ಟುಸಾಕು.

                ಉತ್ತರ
  29. ಏಪ್ರಿಲ್ 14 2012

    ಸಂಸ್ಕೃತ ಎಂಬುದು ಭಾಷೆಗಳೆಲ್ಲದರ ತಾಯಿ ಎಂದು ಹೇಳುತ್ತಾರೆ. ಅದು ಸರ್ವಭಾಷಾಮಯೀ ಭಾಷಾ ಎಂದೇ ಖ್ಯಾತವಾಗಿದೆ. ಅದನ್ನರಿತೇ ತರಳಬಾಳು ಸ್ವಾಮಿಗಳು ಸಂಸ್ಕೃತವನ್ನು ಬಹಳವಾಗಿ ಅಧ್ಯಯನ ಮಾಡಿ ಅದನ್ನು ಗಣಕಯಂತ್ರಕ್ಕೆ ಅಳವಡಿಸುವಲ್ಲೂ ಮುಂದಾದರು! ಅವರ ಆ ಪ್ರಯತ್ನ ಶ್ಲಾಘನೀಯ. ಅವರು ಪ್ರತೀವಾರ ವಿಜಯಕರ್ನಾಟಕದಲ್ಲಿ ’ಬಿಸಿಲು ಬೆಳದಿಂಗಳು’ ಅಂಕಣವನ್ನು ಸಂಸ್ಕೃತ ಶ್ಲೋಕಗಳನ್ನೋ ಪದಗಳನ್ನೋ ಅಡಕವಾಗಿಸಿಯೇ ಬರೆಯುವುದನ್ನು ನೋಡಿದ್ದೇನೆ; ಲೇಖನ ಸಮೃದ್ಧವಾಗಿರುತ್ತದೆ.

    ಸಂಸ್ಕೃತ ಭಾಷೆಯನ್ನು ಕಲಿಯಲಾಗದಕ್ಕೆ ಈ ಸಿದ್ದರಾಜು ಎಂಬ ವ್ಯಕ್ತಿ ಒದ್ದಾಡುತ್ತಾ ಆ ಭಾಷೆಯನ್ನೂ ಮತ್ತು ಅದನ್ನು ಬಳಸಿ ಪೂಜೆ ನಡೆಸಿ ಲೋಕದ ಕ್ಷೇಮವನ್ನು ಬಯಸುವ ಪುರೋಹಿತವರ್ಗವನ್ನು ಅತಿಯಾಗಿ ಆಡಿಕೊಳ್ಳುತ್ತಿರುವುದು ಆತನ ಮನಸ್ಸೆಷ್ಟು ’ಪ್ರಾಂಜಲ’ ಎಂಬುದನ್ನು ತೋರಿಸುತ್ತದೆ. ರಾಜರುಗಳ ಕಾಲದಲ್ಲಿ ಅವರು ಯಾವುದೇ ವರ್ಗಕ್ಕೆ ಸೇರಿದ್ದರೂ ಅವರುಗಳಿಗೆ ಸಂಸ್ಕೃತದ ಬಗ್ಗೆ ಅಪಾರ ಗೌರವವಿತ್ತು; ವೇದ-ಶಾಸ್ತ್ರಗಳ ಬಗ್ಗೆ ಶ್ರದ್ಧೆಯೂ ಇತ್ತು. ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜ ಒಡೆಯರ್ ಸೇರಿದಂತೇ ಹಲವು ಅರಸರು ಸಂಸ್ಕೃತವನ್ನು ಓದಿದ್ದರು. ಲೋಕಹಿತಬಯಸಿದ ಮಹಾರಾಜರುಗಳು ಸಂಸ್ಕೃತ ಪಂಡಿತರಿಗೆ ವಿದ್ವತ್ತನ್ನವಲಂಬಿಸಿ ಬೆಂಬಲ ಕೊಡುತ್ತಿದ್ದರು, ಆಸ್ಥಾನಗಳಲ್ಲಿ ಪಂಡಿತರುಗಳನ್ನು ನೇಮಿಸಿಕೊಳ್ಳುತ್ತಿದ್ದರು.

    ದೇವಸ್ಥಾನಗಳಲ್ಲಿ ಆರತಿ ಬೆಳಗಿ ಅದನ್ನು ಭಕ್ತರ ಮುಂದೆ ಹಿಡಿಯುವಾತ ಭಿಕ್ಷುಕನಂತೇ ಈ ವ್ಯಕ್ತಿಗೆ ಕಂಡಿದ್ದು ಹಾಸ್ಯಾಸ್ಪದವಾಗಿದೆ ಮತ್ತು ಈತನ ಕೆಟ್ಟ ಮನೋಸ್ಥಿತಿಯ ದ್ಯೋತಕವಾಗಿದೆ. ಇನ್ನು ಜ್ಯೋತಿಷ್ಕರು “ಬನ್ನಿ” ಎಂದು ಯಾರನ್ನೂ ಕರೆದಿದ್ದು ನಾನಂತೂ ನೋಡಿಲ್ಲ, ಯಾರೋ ಒಂದೆರಡು ಅರೆಕಲಿತ ಜ್ಯೋತಿಷ್ಕರು ಮಾಧ್ಯಮಗಳಲ್ಲಿ ಕೂತು ತಪ್ಪು ಹೇಳಿಕೆಗಳನ್ನು ನೀಡಿದ ಮಾತ್ರಕ್ಕೆ ಸುಳ್ಳುಹೇಳಿ ದುಡ್ಡುಮಾಡುವವರು ಎನ್ನುವ ಈತ ಎಷ್ಟರ ಮಟ್ಟಿಗೆ ಸಾಚಾ ಎಂಬುದು ನನಗಂತೂ ತಿಳಿಯುತ್ತಿಲ್ಲ. ಅಷ್ಟಾಗಿ ದೇವಸ್ಥಾನಕ್ಕೋ ಜ್ಯೋತಿಷರ ಬಳಿಗೋ ಇಂಥವರು ಹೋಗದಿದ್ದರೆ ಆಗುತ್ತಿತ್ತಲ್ಲ ಅಲ್ಲವೇ?

    ಸಂಸ್ಕೃತವನ್ನು ಓದುವುದು ಬರೇ ಹೊಟ್ಟೆಪಾಡಿಗೆ ಎಂಬ ಹೊಲಸು ಹೇಳಿಕೆಯನ್ನು ನೀಡಿ ’ವಿದ್ವಾನ್’ ಪದವಿ ನೀಡಬಹುದಾಗಿದೆ. ಲೇಖನ ಮುಖ್ಯ ಭೂಮಿಕೆ ಬಿಟ್ಟು ಬ್ರಾಹ್ಮಣಶಾಹಿ ಮತ್ತು ಪುರೋಹಿತಶಾಹಿ ಎಂಬುದನ್ನು ಪ್ರಸ್ತಾಪಿಸಿ ದೇವಸ್ಥಾನ ಮತ್ತು ಗಂಟೆಗಳು ಎಂದೆಲ್ಲಾ ಹೇಳಿ ತಮ್ಮ ತೆವಲು ತೀರಿಸಿಕೊಳ್ಳುವ ಹಲವು ಜನರಿಗೆ ಲೇಖನದ ಸಂದೇಶವೇನು ಎಂಬುದನ್ನು ಅರ್ಥಮಾಡಿಕೊಳ್ಳಲಾಗದ ಅಪರಿಮಿತ ಸಾಮರ್ಥ್ಯ! ನಾನು ಪ್ರತಿಕ್ರಿಯಿಸುವುದನ್ನೇ ನಿಲ್ಲಿಸಿದ್ದರೂ ಇಂತಹ ಮೂರ್ಖರು ತೋರಿದ ಜನಾಂಗ ದ್ವೇಷದ, ಭುಗಿಲೆದ್ದ ಪ್ರತಿಕ್ರಿಯೆಗಳಿಗೆ ಅನಿವಾರ್ಯವಾಗಿ ಉತ್ತರಿಸಿದ್ದೇನೆ. ನಾಲಿಗೆ ಸಿಗಿದರೆ ನೆಟ್ಟಗೆ ನಾಲ್ಕಕ್ಷರ ಇಲ್ಲದ ಮೂರ್ಖರನ್ನು ತಿದ್ದುವುದು, ತೆನ್ನಾಲಿ ರಾಮ ’ಕರಿನಾಯಿಯನ್ನು ತೊಳೆದು ಬಿಳಿನಾಯಿ’ ಮಾಡಿದಂತೇ ಎನಿಸುತ್ತಿದೆ! ದೇವರೇ ಅಂಥವರ ಅಂಧಕಾರವನ್ನು ಕಳೆಯಲಿ ಎಂದು ಪ್ರಾರ್ಥಿಸುತ್ತಾ, ಏನಾದರೂ ಬರೆದುಕೊಳ್ಳಲಿ ಎಂದು ಇಲ್ಲಿಗೆ ಇದಕ್ಕೆ ಇತಿಶ್ರೀ ಹಾಡುತ್ತಿದ್ದೇನೆ.

    ———

    ಮುಗಿಸುವ ಮುನ್ನ ಓದುಗ ಎಂಬ ಹೆಸರಲ್ಲಿ ತನ್ನ ’ಪಾಂಡಿತ್ಯ’ವನ್ನು ಬಹಳವಾಗಿ ಹೊರಚೆಲ್ಲಿದ ಮಹನೀಯನಿಗೆ ವಂದನೆಗಳು! ಶಿಖಂಡಿಯಾಗಿ ಬಾಣಬಿಡುವುದಕ್ಕಿಂತಾ ನೇರವಾಗಿ ನಿಮ್ಮ ಹೆಸರನ್ನು ಕಾಣಿಸಬಹುದಿತ್ತು. ನೀವೇ ಉತ್ತರಿಸಿದ ನಿಮ್ಮ ಪ್ರತಿಕ್ರಿಯೆಯಲ್ಲಿ ’ಇನ್ನೂ ನಿರ್ಧರಿತವಾಗಿಲ್ಲ ಎಂಬ ಅಂಶಗಳೇ ಅಪಾರ’ವಾಗಿವೆ. ನಾವು ಒಪ್ಪಿರುವ ವೇದಗಳಲ್ಲಿ ಎಲ್ಲವನ್ನೂ ಇದಮಿತ್ಥಂ-ಇದು ಹೀಗೇ ಇರುತ್ತದೆ ಎಂದು ಕರಾರುವಾಕ್ಕಾಗಿ ಹೇಳಿದ್ದಾರೆ; ಅಲ್ಲಿ ಇನ್ನೂ ನಿರ್ಧರಿತವಾಗಬೇಕಾದ ಹುಡುಕಾಟದ ಅಂಶಗಳಿಲ್ಲ ಎಂಬುದನ್ನು ’ಓದುಗ’ ಎನ್ನುವ ಮಹಾಮಹೋಪಾಧ್ಯಾಯರಿಗೆ ತಿಳಿಸುತ್ತಿದ್ದೇನೆ. ತಮಗೂ ಜೀವನದಲ್ಲಿ ಒಂದಲ್ಲಾ ಒಂದುದಿನ ಬೆಳಕು ಸಿಗಲಿ ಎಂದು ಆಶಿಸುತ್ತೇನೆ!

    ಉತ್ತರ
    • ಸವಿತಾ ಬಿ ಎ
      ಏಪ್ರಿಲ್ 15 2012

      ಆಹಾ..!! ಎಂತಹ ನುಡಿಸ್ಪುರಣ..!!!
      ವೇದಗಳು ವಿ ಆರ್ ಭಟ್ಟರಿಗೆ ಅದ್ಭುತ ಸಂಸ್ಕಾರಗಳನ್ನು ಕೊಟ್ಟಿದೆ. ಏಕವಚನದಲ್ಲಿ ಮಾತನಾಡುವುದು, ಒಪ್ಪದವರನ್ನು ಶಿಖಂಡಿ ಎಂದು ಜರೆಯುವುದು ಇತ್ಯಾದಿ. ಯಾವುದಕ್ಕೂ ನಮ್ಮ ಪೀಳಿಗೆಯನ್ನು ಇಂತಹ ವೈದಿಕ ಸಂಸ್ಕಾರಗಳಿಂದ ದೂರ ಇಡುವುದು ಒಳಿತು.
      ಈಗಾಗಲೇ ವೇದಗಳನ್ನು ಕುರುಡಾಗಿ ನಂಬಿ ಸಾಕಷ್ಟು ಕಳೆದುಕೊಂಡಿದ್ದೇವೆ..!! ಕೆಲ ಕೂಪಮಂಡೂಕಗಳನ್ನು ನಂಬಿ ಇನ್ನೆಷ್ಟು ಕಳೆದುಕೊಳ್ಲುವುದು?

      ಉತ್ತರ
      • odugaoduga
        ಏಪ್ರಿಲ್ 15 2012

        ಯಕ್ಕೋ ಸವಿತಕ ನಿನ್ ಮಾತ್ ಕೇಳ್ತಿದ್ರೆ ನಮ್ಮೆಂಡ್ರು ಹೇಳ್ದಂಗೆ ಐತೆ ಕಣಕ. ಸುಮ್ಕೇ ಈ ವೇದಸಾಸ್ತ್ರನೆಲ್ಲ ನಂಬಿ ಒಂದಸ್ಟ್ ನ ಕಳಕಂಡಿವಿ ಮತ್ಯಾಕೆ ಇಂತವ್ರ ಉಸಾಬ್ರಿ. ಬಿಡ್ತು ಅನ್ರಕೋ. ನೀವ್ ತುಂಬ ಓದ್ಕಂಡವ್ರಲ್ಲವ್ರಾ ಅದ್ಕೇಯ ಈ ಪಾಟಿ ಸಂದಾಕಿ ಇಂಗ್ ಬರಿತಿರಿ ನಮ್ಮ್ ಸಿದ್ರಜಣ್ಣೊರ್ ತಾವ ಬಾಶೆ ಸಾಸ್ತ್ರ ಐತೆ.ಅದನ್ನೂ ಒಸಿ ತಿಳ್ಕಳವ.ದ್ಯಾವ್ರು ನಿಮ್ನೂ ನೂರೊರ್ಸ್ ಇಂಗೇ ಇಟ್ಟಿರ್ಲಿ ಕಣಕ.

        ಉತ್ತರ
    • ಏಪ್ರಿಲ್ 15 2012

      ‘ಬಹುದಾಗಿತ್ತು’ಗಳು ಹಲವಿವೆ; ಲೇಖಕರೂ ಸಹಾ ವೇದಿಕೆಯ ಸಭ್ಯತೆಯ ಮಿತಿಯಲ್ಲೇ ಉಳಿಯಬಹುದಿತ್ತು, ತಾರ್ಕಿಕ ಚೌಕಟ್ಟಿನಲ್ಲೇ, ವಿಷಯಾಂತರಮಾಡದೇ, ತಪ್ಪುಗಳಿಲ್ಲದೇ, ಸಾಧಾರ ಸಮೇತ ಬರೆಯಬಹುದಿತ್ತು…ಇತ್ಯಾದಿಯಾಗಿ ಇನ್ನೂ ಹಲವು ‘ಬಹುದಾಗಿತ್ತು’ಗಳು ಇವೆ. ನಾವೂ ಸಹ ‘ಕುಮಾರ್’ ಅವರ ಸಲಹೆಯಂತೆ ಈ ಲೇಖನವನ್ನು ನಿರ್ಲಕ್ಷಿಸಿ ಉದಾಸೀನ ಮಾಡಬಹುದಿತ್ತು. ಆದರೆ ಪ್ರತಿಕ್ರಿಯಿಸಲು ಪ್ರೇರೇಪಿಸಿದ ಅಂಶವೊಂದಿದೆ : ‘ವಿಕಾಸವಾದ’ವನ್ನು ವಿವರಿಸುವ ಲೇಖನವನ್ನು ಕನ್ನಡ-ವಿಕಿಪೀಡಿಯಾದಲ್ಲಿ ತರಲು ಇನ್ನೂ ಸಾಧ್ಯವಾಗಿಲ್ಲದ ಈ ಸಮಯದಲ್ಲಿ ತಪ್ಪುಮಾಹಿತಿ – ತಪ್ಪುತಿಳುವಳಿಕೆಗಳಿಂದ ಕೂಡಿದ, ಬರೀ ಅಪಪ್ರಚಾರವನ್ನು ನಡೆಸುವ ಲೇಖನವೊಂದು ಅಂತರ್ಜಾಲದಲ್ಲಿ ‘ನಿಲುಮೆ’ ಎಂಬ -ಸಾಮಾನ್ಯ ಜನರು ಓದುವ (೧,೮೧,೨೯೪ ಕ್ಕೂ ಹೆಚ್ಚು ವೀಕ್ಷಣೆಗಳ) ಮುಖ್ಯವಾಹಿನಿಯಲ್ಲಿಯೇ ಬಂದಿರುವುದು…

      ಲೇಖಕರು ಪ್ರಶ್ನಿಸುವ ಭರದಲ್ಲಿ/ಹೆಸರಲ್ಲಿ ವಿಷಯದ ಪ್ರಾಥಮಿಕ ಅಧ್ಯಯನವೂ ಇಲ್ಲದೇ, ಕೇವಲ ಭಾವನಾತ್ಮಕವಾಗಿ, ವಿಜ್ಞಾನಿಗಳ ಸಂಕುಲದ ಮೇಲೆ, ವೈಜ್ಞಾನಿಕ ಪದ್ದತಿಯ ಮೇಲೆ, ವಿಕಾಸವಾದದಂಥಾ ಸಿದ್ಧಾಂತದ ಮೇಲೆ ಹರಿಹಾಯ್ದಿರುವುದನ್ನೆಲ್ಲಾ ನಾವು ಈ ಮೊದಲಲ್ಲೇ ಎತ್ತಿ ತೋರಿಸಿದ್ದಾಗಿದೆ. ಇನ್ನು ಲೇಖಕರ ಸಾರಾಸಗಟು ತೀರ್ಪಿನ ಭಾಷೆಯಾದರೂ ಹೇಗಿದೆ? ಮೇಲು-ಕೀಳು, ಸಗಣಿ-ಕೇಸರಿಭಾತು, ಕರಿನಾಯಿ-ಬಿಳಿನಾಯಿ, ನಾಲಿಗೆ ಸಿಗಿದರೆ ನೆಟ್ಟಗೆ ನಾಲ್ಕಕ್ಷರ ಇಲ್ಲದ ಮೂರ್ಖ, ಮಂಗ, … ಶಿಖಂಡಿ?? -ಇಷ್ಟೊಂದು ಉಡಾಫೆಯೇ? ನಮ್ಮ ಅಫರಾಧವಾದರೂ ಏನು? ಇವರ ವಾದದಲ್ಲಿನ ದೋಷಗಳನ್ನು ಎತ್ತಿ ತೋರಿಸಿದ್ದೇ? ‘ತಪ್ಪುಮಾಹಿತಿ, ಅತಾರ್ಕಿಕ ವಾದಗಳು ಏನನ್ನೂ ನಿರೂಪಿಸುವುದಿಲ್ಲ;’ ಎಂದು ಹೇಳಿದ್ದೇ? ಇದ್ದಿದ್ದು ಇದ್ದ ಹಾಗೆ ಹೇಳಿದುದೆ? ಸಾರ್ವಜನಿಕ ವೇದಿಕೆಯಲ್ಲಿನ ವಿದ್ಯಮಾನಗಳಲ್ಲಿನ ತಪ್ಪ ತಿದ್ದುವುದು ನಮ್ಮ ನೈತಿಕ ಹೊಣೆ ಅಂತ ಅಂದುಕೊಂಡು ಪ್ರತಿಕ್ರಿಯಿಸಿದ್ದು ಅದು ಹೇಗೆ ‘ಪಾಂಡಿತ್ಯ ಪ್ರದರ್ಶನ’ ಅಂತ ಕರೆಯಲ್ಪಟ್ಟಿತು? ಇವರ ಲೇಖನಗಳಿಗೆ ಹಾಗಾದರೆ ಯಾರೂ ಪ್ರತಿಕ್ರಿಯಿಸಬಾರದೆ? ಪ್ರತಿಕ್ರಿಯಿಸಬಾರದೆನ್ನಲು ಇವರೇನು ಯಾರೂ ಓಡಾಡದ ಕಾಡಿನ ಮಧ್ಯೆ ತಮ್ಮ ಲೇಖನವನ್ನು ಹಾಕಿದ್ದಾರೇನು? ಇವರೇನು ಅಂತರ್ಜಾಲದ ‘ಬೃಹತ್ ಬ್ರಹ್ಮಾಂಡ’ವೇ?

      ನನ್ನ ಪ್ರತಿಕ್ರಿಯೆಗಳಲ್ಲಿ ಲೇಖಕರಿಗೆ ಅಥವಾ ಇತರ ಓದುಗರಿಗೆ ನನ್ನಿಂದ ಬೇಕಾಗಬಹುದಾದುದೆಲ್ಲವೂ ಇವೆ. ನನ್ನ ಹೆಸರನ್ನು ತೆಗೆದುಕೊಂಡು ಯಾರು ಏನು ಮಾಡುವರಿದ್ದಾರೆ? ನನ್ನ ಹೆಸರೀಗ ‘ರಮೇಶ್ ತ್ರಿವೇದಿ’ ಎಂದಿದ್ದಾರೆ ಏನಾಯ್ತು? ಮೊಲ್ಲೆಯ ಹೂವನು ಕಳ್ಳಿಯ ಹೂವೆನೆ ಕಂಪೇನು ಕಡಿಮೆಯಾದೀತೇ? ಅನಾಮಧೇಯನಾದ ಮಾತ್ರಕ್ಕೆ ‘ಶಿಖಂಡಿ’ ಅಂತಲೇ? ಹಾಗಾದರೆ ತಮ್ಮ ಹೆಸರು ವಿಳಾಸಗಳನ್ನು ಇನ್ನೂ ಗೌಪ್ಯವಾಗಿಟ್ಟಿರುವ ‘ನಿಲುಮೆ’ ತಂಡದವರೂ ಲೇಖಕರ ಪ್ರಕಾರ ಶಿಖಂಡಿಗಳಂತಲೇ? ಲೇಖಕರು ತಮ್ಮ ಈತರಹದ ಅಸಭ್ಯ ವೈಯಕ್ತಿಕ ನಿಂದನಾ ಪ್ರತಿಕ್ರಿಯೆಗಳಿಂದ ಏನನ್ನು ಸಾಧಿಸ ಬಯಸುತ್ತಾರೆ?

      ವಿಷಯಗ್ರಹಿಕೆಯಲ್ಲಿನ ಪ್ರಮಾದಗಳನ್ನು ಮರೆಯಬಹುದು, ಆದರೆ ಪ್ರಾಥಮಿಕವಾಗಿ ಲೇಖಕರ ಭಾಷೆಯೇ ಸೌಜನ್ಯ-ಸಭ್ಯತೆಯ ಎಲ್ಲೆ ಮೀರಿದರೆ ಹೇಗೆ ಸ್ವಾಮೀ? ಲೇಖನದಲ್ಲಿನ ಉಡಾಫೆಯ, ನಿಂದನೆಯ, ಕೀಳುಭಾಷಾ ಬಳಕೆಯನ್ನೆಲ್ಲಾ ಎತ್ತಿ ತೋರಿಸಿದರೂ ಲೇಖಕರು ತಿದ್ದಿ ಕೊಳ್ಳುವ/ಕ್ಷಮೆಯಾಚಿಸುವ ಗೊಡವೆಗೂ ಹೋಗುವುದಿಲ್ಲವೆಂದರೆ, ಅದೇ ಕೀಳುಭಾಷಾ ಪ್ರಹಾರವನ್ನು ಮುಂದುವರಿಸುತ್ತಾರೆಂದರೆ ಏನರ್ಥ? ವೇದಿಕೆಗೆಯ ಮೇಲೆ ಇವರಿಗೆ ಗೌರವವಿಲ್ಲವೆಂದೋ? ಅಥವಾ ಇವುಗಳ ಮಧ್ಯ ಪ್ರವೇಶಿಸದ ‘ನಿಲುಮೆ’-ತಂಡಕ್ಕೆ ಸಭ್ಯತೆ-ಗೌರವಗಳ ಗೊಡವೆಯಿಲ್ಲವೆಂದೋ??

      @ನಿಲುಮೆ: ನಿಲುಮೆ ತಂಡದವರು ದಯಮಾಡಿ ಇಲ್ಲಿ ಮಧ್ಯ ಪ್ರವೇಶಿಸಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿ ವಿನಂತಿ. ತಾವು ತಮ್ಮ ನಿಲುವುಗಳನ್ನು ಮತ್ತಷ್ಟು ಸ್ಪಷ್ಟಪಡಿಸುವ ಅಗತ್ಯ ಎದುರಾಗಿದೆ.

      ೧) ನಿಮ್ಮಲ್ಲಿ ಯಾರು ಯಾವ ಲೇಖನವನ್ನು ಹೇಗೆ ಬರೆದು ಕಳಿಸಿದರೂ ಹಾಕುತ್ತೀರೇನು? ಪ್ರಕಟಣೆಗೆ ಲೇಖನ ಯೋಗ್ಯವೋ ಅಲ್ಲವೋ, ಸರಣಿ ಮುಂದುವರಿಕೆಗೆ ಲೇಖಕ ಯೋಗ್ಯನೋ ಅಲ್ಲವೋ ಎಂದು ನಿರ್ಧರಿಸುವ ಯಾವ ಮಾನದಂಡಗಳೂ ನಿಮ್ಮಲ್ಲಿ ಇರುವುದಿಲ್ಲವೇ?

      ೨) ‘ಲೇಖನಗಳಲ್ಲಿ ವ್ಯಕ್ತವಾದ ಅಭಿಪ್ರಾಯಗಳಿಗೆ ಆಯಾ ಲೇಖಕರೇ ಹೊಣೆ’ ಎಂದರೇನೋ ಸರಿ, ಆದರೆ ಲೇಖನಗಳ ಮತ್ತು ಅವುಗಳಲ್ಲಿನ ಭಾಷೆಯ ಗುಣಮಟ್ಟದ ಕುರಿತೂ ನಿಲುಮೆ ತಂಡಕ್ಕೆ ಬದ್ಧತೆ-ಜವಾಬ್ದಾರಿ ಇರುವುದಿಲ್ಲವೇ?

      ೩) ‘ಅಂತರ್ಜಾಲ-ಅನಾಮಿಕತ್ವ’ದ ಬಗ್ಗೆ, ಮತ್ತು ಓದುಗರ ಬಗ್ಗೆ ‘ನಿಲುಮೆ’ ತಂಡಕ್ಕೆ ಗೌರವವಿರುವುದಿಲ್ಲವೇ? ಇರುವುದಿಲ್ಲವೆಂದಾದರೆ ತಮ್ಮ ಇತ್ಯೋಪರಿಗಳನ್ನೂ ಬಹಿರಂಗ ಪಡಿಸುವಿರೇ?
      ೪) ಅಂದಹಾಗೆ ಎಷ್ಟು ಸಮಯಕ್ಕೊಮ್ಮೆ ‘ಕಾಮೆಂಟುಗಳನ್ನು ಮಾಡರೇಟ್ ‘ ಮಾಡುವಿರಿ? ಇದೇ ಲೇಖನದ ಮೇಲಿನ ನನ್ನ ಒಂದು (ಖಂಡಿತವಾಗಿಯೂ ಸಭ್ಯತೆಯ ಎಲ್ಲೆ ಮೀರದ, ನಿರುಪದ್ರವಿ) ಪ್ರತಿಕ್ರಿಯೆ ಏಕೆ ಇನ್ನೂ ಪ್ರಕಟಣೆಗೆ ಕಾಯುತ್ತಲೇ ಕುಳಿತಿದೆ? ಅದರಲ್ಲಿ ‘ಕುಮಾರ್’ ಅವರು ಓದಲೇ ಬೇಕಾದ ಮೂರು ಅತಿ ಮುಖ್ಯ ಕೊಂಡಿಗಳಿದ್ದವಲ್ಲ…

      ಉತ್ತರ
    • ಏಪ್ರಿಲ್ 15 2012

      ಅಂದಹಾಗೆ ಲೇಖಕರ ತಪ್ಪುಮಾಹಿತಿ ನೀಡುವ, ಅಡ್ಡಾದಿಡ್ಡಿ ತೀರ್ಪು ನೀಡುವ ಚಾಳಿ ಈಗ ವೇದಗಳೆಡೆಗೆ ತಿರುಗಿದೆ.

      ವೇದಗಳಲ್ಲಿ ನಿಜಕ್ಕೂ (‘ಅಭಿಗಾರ’ಗಳ ತರಹ) ಎಲ್ಲದರ ಕುರಿತೂ ‘ಇದಮಿತ್ಥಂ’ ಎಂದು ತೀರ್ಪು ಕೊಟ್ಟಿದ್ದಾರೆಯೇ? ಹಾಗಿದ್ದರೆ ಮೂರ್ಮೂರು ವೇದಾಂತ ದರ್ಶನಗಳು, ಶಂಕರ-ಮಂಡನಮಿಶ್ರ ವಾದ ವಿವಾದಗಳು, ದ್ವೈತ-ಅದ್ವೈತ ವಾದ ವಿವಾದಗಳು ಏಕಾದವು? ಭಗವದ್ಗೀತೆಗೆ ಹಲವಾರು ವಿಭಿನ್ನವಾದ ಮತ್ತು ಪರಸ್ಪರ ವಿರುದ್ಧವಾದ ಅರ್ಥ/ಭಾಷ್ಯ ಬರೆಯಲಾಗಿದೆಯಲ್ಲವೇ? ವೇದಗಳು ವಾಸ್ತವದಲ್ಲಿ ನಿರೀಶ್ವರ ವಾದವನ್ನು ಎತ್ತಿ ಹಿಡಿಯುತ್ತವೆ ಎಂಬ (ನಮ್ಮ ಮನೆಗೆ ಬಂದಿದ್ದ ನಾಲ್ವರು ಪುರೋಹಿತರ) ಒಂದು ಚರ್ಚೆಗೆ ನಾನು ಒಮ್ಮೆ ಪ್ರೇಕ್ಷಕನಾಗಿದ್ದೆ. ನಿಮ್ಮ ಪ್ರಕಾರವಾದರೋ, ಅದು ಈಶ್ವರ ವಾದ. ‘ಬ್ರಾಹ್ಮಣಃ ಗೋ-ಘೃತಃ’ ಮುಂತಾದ ವಿವಾದಾತ್ಮಕ ಹೇಳಿಕೆಗಳಿಗೂ ಬೇರೆ ಬೇರೆಯಾದ ಅರ್ಥಗಳಿವೆಯಲ್ಲವೇ? ಹಾಗಾದರೆ ಎಲ್ಲಿಂದ ‘ಇದಮಿತ್ಥಂ’? ‘ನಾಸದೀಯಸೂಕ್ತ’ದಲ್ಲಿ ‘ಇದಮಿತ್ಥಂ’ ಎಂದು ಹೇಳಲಾಗದು ಎಂದೇ ಇದೆ. ಎಲ್ಲವುದೂ ಹಾಗೆ ವೇದಗಳ ಕಾಲಕ್ಕೇ ಇದಮಿತ್ಥಂ ಎಂದು ಸಿದ್ಧವಾದ ವಿಷಯವೇ ಆಗಿದ್ದರೆ ಉಪನಿಷತ್, ಕಲೆ, ಸಾಹಿತ್ಯ, ಪುರಾಣ, ರಾಮಾಯಣ-ಮಹಾಭಾರತ, ವಿಜ್ಞಾನ, ಹೊಸಮತ, ಹೊಸ ದರ್ಶನ.. ಇತ್ಯಾದಿಗಳು ಬರುತ್ತಲೇ ಇರಲಿಲ್ಲ. ಕಪಿಲನು ‘ಸಾಂಖ್ಯ’ದ ಯೋಚನೆ ಮಾಡುತ್ತಿರಲೇ ಇಲ್ಲ.
      ಇವುಗಳೆಲ್ಲರಲ್ಲೂ ಸಹಾ ಹುಡುಕಾಟದ ಅಂಶಗಳು ಹೇರಳವಾಗಿದೆ. ಆದಕಾರಣವೇ ವೇದಕಾಲದ ವಿಶ್ವಾಮಿತ್ರ, ಗಾರ್ಗೇಯಿ, ಯಾಜ್ನವಲ್ಕ್ಯ, ಶಂಕರರಿತ್ಯಾದಿಯಾಗಿ ಇಂದಿನ ವಿವೇಕಾನಂದ, ರಮಣ, ಸ್ವಾಮಿರಾಮ, ಅರವಿಂದ, ರಜನೀಶ, ಕೃಷ್ಣಮೂರ್ತಿ ಇತ್ಯಾದಿಗಳೆಲ್ಲರೂ ಹುಡುಕಾಟದಲ್ಲಿ ತೊಡಗಿಯೇ ಸಾಧಕರಾದರು.

      ವೈಜ್ಞಾನಿಕ ಪದ್ದತಿಯಾದರೋ ವಿಷಯವನ್ನು ಗೊಂದಲಕಾರಿಯಲ್ಲದ ನೇರವಾದ ಸರಳವಾದ ಭಾಷೆಯಲ್ಲಿ ಮಂಡಿಸಿ ಅನ್ನುತ್ತದೆ. ಆಳವಾದ ಅಧ್ಯಯನ ಬೇಡುವ ಸಹನೆ-ಪರಿಶ್ರಮಗಳಿಂದ ದೂರ ಓಡುವವರು ಮಾತ್ರಾ ‘ಇದಮಿತ್ಥಂ’ ಎನ್ನುವ ‘ಕೈ-ತುತ್ತು’ (ಸ್ಪೂನ್ ಫೀಡಿಂಗ್)ಗೆ ಮೊರೆ ಹೋಗುತ್ತಾರೆ. ‘ಇದಮಿತ್ಥಂ’ ಎಂದರೆ ಅಲ್ಲಿಗೆ ಎಲ್ಲ ಕಥೆಯೂ ಮುಗಿಯುತ್ತದೆ, ಮುಂದೆ ಯಾವ ತರ್ಕ/ಸಂಶೋಧನೆಗೂ ಅವಕಾಶಗಳಿಲ್ಲದಿರುವುದಿಲ್ಲ. ವೈಜ್ಞಾನಿಕ ಮನೋಭಾವವು ಎಲ್ಲ ಸಿದ್ದ ಉತ್ತರಗಳನ್ನೂ (ಪ್ರಶ್ನಿಸುವ ವಿಧಾನ -ಶಿಸ್ತಿನೊಳಗೇ) ಪ್ರಶ್ನಿಸಿ ಎನ್ನುತ್ತದೆ.

      ಉತ್ತರ
    • ಮಾತ್ಮಾತಲ್ಲಿ ಎಂಬ ನೇರ ಹೆಸರಿನವರೇ,
      ಕರಾರುವಕ್ಕಾಗಿ ಸುಳ್ಳನ್ನು ಅತವಾ ತಪ್ಪನ್ನು ಮಾತ್ರ ಹೇಳಲು ಸಾದ್ಯ! ವೇದ-ಪುರಾಣಗಳ ವಿರೋದಾಬಾಸಗಳನ್ನ ಓದಿ ಓದಿ ನಿಮ್ಮ ಬುದ್ದಿ ಒಳಗೊಳಗೇ ಗುದ್ದಾಡಿ-ಒದ್ದಾಡಿ ನಶಿಸಿರಬೇಕು! ಮಾತಾಡಿ ಮಾತಾಡಿ. ವೇದಗಳನ್ನ ಓದುವುದರ ಪರಿಣಾಮಗಳ ಬಗ್ಗೆ ಇನ್ನೂ ಹೆಚ್ಚು ತಿಳಿಯಲಿ! ಅದಿರಲಿ, ವೇದಗಳಲ್ಲಿ ಹಸುವಿನ ಗಂಜಲ ಆರೋಗ್ಯಕ್ಕೆ ಒಳ್ಳೆಯದು ಎಂದಿದೆ. ನಿಮ್ಮ ಮಾನಸಿಕ ಆರೋಗ್ಯದ ಗುಟ್ಟು ಅದೇ ಹೌದೇ? ದಿವಸಕ್ಕೆ ಎಶ್ಟ್ ಚೊಂಬು ಗಂಜಲ ಸ್ವಾಹ??

      ಉತ್ತರ
      • odugaoduga
        ಏಪ್ರಿಲ್ 15 2012

        ಅಣೋ ನಿಮ್ಮನ್ನು ನೋಡಿಯೇ ವಿಗ್ನಾನಿಗಳು ಮಂಗನಿಂದ ಮಾನವ ಎಂಬುದನ್ನು ಸಾಬೀತು ಪಡಿಸಿದರು ಎಂಬುದರಲ್ಲಿ ಸಂಸೆಯವೇ ಹಿಲ್ಲ ಕಣಣೊ.ಹೆಂತಾ ಮಾತು ಮುತ್ತಿನಂಗೈತೆ. ಸಿದ್ರಾಜಣ ನಿಮ್ಮದು ಹಪ್ಪಟ ಪಾಂಡಿತ್ಯ ಕಣಣ ಸುಮ್ಕೇ ವೇಶ್ಟ್ ಮಾಡ್ಕಬ್ಯಾಡ್ರಿ ಯೋಳಿದೀನಿ.ನಿಮ್ಮ್ ನಾಲೆಡ್ಜ್ ಐತಲ್ಲಾ ಅದ್ರಿಂದ ಜಗತ್ಗೇ ಬೇಳಕಾಗೋ ಕಾಲ ಬರತೈತೆ.ಆಗ ಈ ವೇದಸಾಸ್ತ್ರ ಎಲ್ಲಾ ಒಳೀಕ್ ಬುಟ್ಟು ಎಲ್ಲಾ ನಿಮ್ಮಿಂದೇ ಬತ್ತರೆ.ಒಸಿ ದಿನ ಕಾಯ್ರಿ. ನೀಮು ನಿಮ್ಮಳ್ಳಿ ಜಗಲಿಕಟ್ಟೆ ತಾವ ಕೂತ್ಗಬ್ಯಾಡ್ರಿ ಮತ್ತೆ.ಅಲ್ಲೆಲ್ಲಾ ಜನೀನ್ ಜೊತೆ ಮಾತಾಡ್ಬುಟ್ಟು ನಿಮ್ಮ ನಾಲೆಡ್ಜ್ ಎಲ್ಲಾ ಆಳಾಗೊದ್ರೆ ಕಸ್ಟ.ನಮ್ಮಂತಾ ಜನೀಕೆ ನಿವೊಬ್ರು ಕನ್ನಡದ ಆಸ್ತಿ.ಬಗವಂತ ನೂರ್ ವರ್ಸ ನಿಮ್ಮುನ್ನ ಇಂಗೇ ಇಟ್ಟಿರ್ಲಿ ಕಣಣೊ

        ಉತ್ತರ
        • ಓದೋದುಗ,
          ವಿಕಾಸವಾದ ‘ಮಂಗನಿಂದ ಮಾವನ’ ಅನ್ನೋದಲ್ಲ ತಮ್ಮ. ಮಂಗ ಮತ್ತು ಮಾನವ ಒಂದೇ ಬಗೆಯ ಪೂರ್ವಜರಿಂದ ಬಂದವರು ಅಂತ ಇರೋದು. ಇವೆರಡರ ಮದ್ಯೆ ತಿರುಪತಿ ತಿಮ್ಮಪ್ಪುನ್ ದುಡ್ಡಶ್ಟ್ ಯತ್ವಾಸ ಅದೇ. ಇಶ್ಟು ಸಣ್ಣ ಮಾಹಿತಿ ನಿನ್ ತಲೆಗೆ ಯಾಕ್ ಒಗ್ತಿಲ್ಲ ವೇದ ಓದಿದವನೇ? ವೇದವನ್ನ ಪಾಲಿಸಿ ಕುಡಿದ ಗಂಜಲ ಕಮ್ಮಿಯಾಯ್ತೋ ಯಂಗೆ? ನನ್ ಮೇಲೆ ಕ್ವಾಪ ಮಾಡ್ಕೋಬೇಡ ತಮ್ಮ. ನೀನ್ ಪೂಜೆ ಮಾಡೋ ಹಸುವನ್ನ ನಾನ್ ಸಾಕ್ತೀನಿ. ನಿನ್ ವಿಳಾಸ ಕೊಡು, ನಿನಗೆ ಗಂಜಲದ ಏರ್ಪಾಟು ಮಾಡ್ತೀನಿ. ಹೊಟ್ಟೆ ತುಂಬಾ ಕುಡ್ದು ಕ್ವಾಪ ಕಮ್ಮಿ ಮಾಡ್ಕೊವಂತೆ.
          ನಮ್ಮಳ್ಳಿ ಜಗಲಿ ಕಟ್ಟೆ!? ನಿಲುಮೆ ಅನ್ನೋದ್ ಇದ್ಯಾವ್ ಊರು ಶಿವ? ಈ ಊರಲ್ಲಿ ದುಡಿಯೋರ್ಗಿಂತ ಆಡ್ಕೊಳ್ಲೋ ಅಯ್ನೋರೆ ಹೆಚ್ಚಾಗವ್ರೆ??
          @ನಿಲುಮೆ, ನಿಮ್ ಹೆಸರು ಬದಲಾಯ್ಸಿ ಅಗ್ರಹಾರ ಅಂತ ಮಾಡ್ಕೊಂದ್ಬುಡಿ.

          ಉತ್ತರ
          • odugaoduga
            ಏಪ್ರಿಲ್ 16 2012

            ಅಣೋ ಯಾಕೆ ತುಂಬ ರೇಗಾಡ್ತೀರಲ್ಲಣೋ ನಾನು ನಿಮ್ದೆ ಪಾಲ್ಟಿ ತಿಳಿಯಾಕಿಲ್ವ. ಒಂದ್ ಕಿತಾ ಇಚಾರ ಮಾಡಿ. ನನ್ ವಿಳಾಸ ಯಾಕೆ ಬುಡುಣ ನಿನ್ನ್ ವಿಳಾಸ ಕೊಡಣ ನಾನೇ ಬತ್ತಿನಿ. ಔದೌದು ಹಿವ್ರು ಇಂಗೆಯ ಕಣನ. ತಿರುಪತಿ ತಿಮ್ಮಪ್ಪುನ್ ದುಡ್ಡು ನಿಂಗ್ ಸಿಕ್ತಾ ಹೆಲ್ಲೋ ಎಡವಟ್ಟಾಗದೆ ಕಣಣ ನೀಯಾಕೊ ಗಂಜಲ ಕುಡ್ದ್ಬುತ್ಯೊ ಅಂತಾವ ಹನುಮಾನ. ಅಗ್ರುಹಾರದ ಜನಗೊಳ್ ತರಾವ ನೀನೂ ಗಂಜಲ ಕುಡ್ದಂಗೈತೆ. ಇ ಪಾಟಿ ನನ್ನ ಮ್ಯಾಲೆ ಆರಾಡ್ತೀಯ. ಯಾಕ್ ನೀನು ಹಸ ಪೂಜೆ ಮಾಡಲ್ವ ಅಣ??ಕ್ವಾಪ ಮಾಡ್ಕಬ್ಯಾಡ್ರಿ ನಿಮ್ ತಲ್ಯಾಗಿರೊ ನಾಲೆಡ್ಜು ಅಳಿಸಿ ಓದ್ರೆ ಆಮ್ಯಾಕೆ ಮತ್ತೆ ಬರಂಗಿಲ್ಲ. ಹೀ ವೈಸ್ನಾಗೆ ಕ್ವಾಪಮಾಡ್ಕಬಾರ್ದು. ಕ್ವಾಪಕ್ಕೆ ಔಸ್ದಿ ಐತೆ ನನ್ ತಾವ ಹಲ್ಲೀಗ್ ಬತ್ತೀನಲ್ಲ ಬಂದಾಗ ಕೊಡ್ತಿನಿ ತಗೊಳೊರಂತೆ.

            ಉತ್ತರ
            • ಓ ಗಂಜಲ-ಕುಡುಕ ಓದೋದುಗ,
              ಯಾಕೋ ನಿಂಗೆ ವಿಗ್ನಾನ ತಲುಪ್ತಾ ಇಲ್ಲ. ನಿಂಗೆ ಅರ್ತವಾಗೋ ತರದಲ್ಲೇ ಹೇಳ್ಕೊಡ್ತೀನಿ. ತಮ್ಮ, ನೀನೇನಾದ್ರೂ ಮಾನವ ಮೇಲು ಮಂಗ ಕೀಳು ಅಂದ್ರೆ ಅಂಜನೇಯ ನಿನಗೆ ಶಾಪ ಕೊಟ್ಬುಡ್ತಾನೆ ಎಚ್ಚರ!! ಅಂಜನೇಯ ಕಲಿಯುಗ ಬ್ರಮ್ಮ. ಉತ್ತರಪ್ರದೇಶದ ಶ್ರೀರಾಮರೇ ಕರ್ನಾಟಕದ ಆಂಜನೇಯನಿಗೆ ಆ ಪಟ್ಟ ಕೊಟ್ಟಿದ್ದಾರೆ. ಬಿಜೆಪಿ, ಕಾಂಗ್ರೆಸ್ ಹೈಕಮಾಂಡು ಕರ್ನಾಟಕದ ಸಿಎಂ ಆರಿಸುವಂಗೆ. ನೀನ್ ಓದೋದುಗ ಅಂತ ಹೆಸರಿಟ್ಕೊಂದು ನನ್ ಕಣ್ ತಪ್ಪಿಸ್ಬೋದು. ಆದ್ರೆ ಆಂಜನೇಯನ ಕಣ್ ತಪ್ಪಿಸೋಕ್ ಆಗಲ್ಲ. ಆದ್ರಿಂದ ಹೇಳ್ತೀನಿ ಗಂಜಲ ಕುಡಿದು ಸಮಾದಾನ ಮಾಡ್ಕೊಳ್ಳಿ. ಸಮಾದಾನ ಆಗ್ಲಿಲ್ಲ ಅಂದ್ರೆ ಇನ್ನೊಂದಶ್ಟ್ ಗಂಜಲ ಕುಡಿರಿ. ವೇದಗಳನ್ನ ಪಾಲಿಸಿ. ವೇದಗಳನ್ನ ಸುಮ್ಮನೆ ಹೊಗಳಿದರೆ ಸಾಕಾಗುದಿಲ್ಲ. ವೇದಗಳನ್ನ ಪಾಲಿಸಿ, ಗಂಜಲ ಕುಡಿಯಿರಿ. ನಾನ್ ವಿಗ್ನಾನ ಪಾಲಿಸಿ ನೀರು ಕುಡೀತೀನಿ.
              ಹುಂಡಿ ದುಡ್ ತಿನ್ನೋಕೆ ನನಗೇನ್ ಸಂಸ್ಕೃತ ಬರುತ್ತದೆಯೇ? ನಾನ್ ಕನ್ನಡ ಮಾತಾಡ್ತೀನಿ. ಹುಂಡಿಗೆ ದುಡಿದ ದುಡ್ ಹಾಕ್ತೀನಿ.
              ನೀವ್ ವೇದ ಓದಿ, ಹಸುವನ್ನ ಪೂಜೆ ಮಾಡಿ, ಗಂಜಲ ಕುಡೀತೀರ. ಬದಲಿಗೆ ನಾನು ವಿಗ್ನಾನ ಓದಿ, ಹಸುವನ್ನ ಸಾಕಿ, ಕುಡಿಸಿ ಆರಿಸಿದ ಹಾಲು ಕುಡೀತೀನಿ. ಯತ್ವಾಸ ಮತದ ಹೊಟ್ಟು ಮತ್ತು ವಿಗ್ನಾನ ದೀವಿಗೆಯ ನಡುವಿನಶ್ಟ್ ಇದೆ!!

              ಉತ್ತರ
              • odugaoduga
                ಏಪ್ರಿಲ್ 16 2012

                ಬಲೇ ಸಂದಾಕ ಯೋಳೀದಿಯ ಕಣಣೋ. ಯಂತಾ ಮಂಗಾರು ತಿಳ್ಕಬೇಕು ಹೆಂಗೆ ಮಾನವ ಅಗ್ಬೈದು ಹಂತಾವ. ನಾನ್ ಇ ಪಾಟಿ ಬಡ್ಕೋತಿವ್ನಿ ನಾ ಗಂಜ್ಲ ಕುಡಿಬೆಕು ಹಂತ್ಯಾ? ಅಣೊ ನಾನೂ ನಿನ್ ಜೊತೆ ಹಾಲ್ನೆ ಕುಡ್ಯದು. ನಾನೂ ಹಸ ಕಟ್ಟಿವ್ನಿ ನಿಂಗೊತಾಯಾಕಿಲ್ವ. ನಾನೆನು ಗಂಜ್ಲ ಕುಡಿಯೊ ಪೈಕಿ ಅಲ್ಲ ತಿಳ್ಕರಿ. ಯೇನೊ ನೀನಂದ್ರೆ ಸಾನೆ ಪ್ರೀತಿ ಆಗ್ಬುಟ್ಟೈತೆ ಹದ್ಕೆಯ ಹುತ್ತರ್ಸ್ತಾ ಇವ್ನಿ. ಬರೇ ತಾನ್ ಮಾತ್ರ ಹಸು ಸಾಕ್ತಿನಿ ಅಂಬೊದು ನಂಗಿಸ್ಟಾಯಾಕಿಲ್ಲ. ಉಂಡಿ ದುಡ್ ನ ಅವರ್ ತಗಳ್ಲಿ ಬುಡು ಅದ್ಕ್ಯಾಕೆ ನಾವ ತಲೆ ಕೆಡಿಸ್ಕ್ಯಳನ. ಹಾಕ್ವರ ಹಾಕ್ತರೆ ತಿಂಬೊರ್ ತಿಂತರೆ ನಾನು ನೀನು ಇಲ್ಲಿ ಒಸಿ ಸಾಇತ್ಯ ಮಾತಾಡವ. ನಿನ್ ಇಂದೆ ಸದಾ ಬತ್ತೀನಿ ಬುಡಣ. ಮತ್ತೇನಣ ಇಸ್ಯ? ನಿಮ್ಮೊರಾಗೆ ಮಳೆ ಬಂತ?

                ಉತ್ತರ
  30. ಏಪ್ರಿಲ್ 15 2012

    Let’s try to agree to disagree on one point.

    The author says “ನಮ್ಮ ಇಂದಿನ ವಿಜ್ಞಾನ ಎನ್ನುವ ವಿಷಯಸಂಗ್ರಹಕ್ಕಿಂತಾ ಹೆಚ್ಚಿನ ಗಹನವಾದ ವಿಷಯ ಮೊದಲಿನವರಿಗೆ ಗೊತ್ತಿತ್ತು ಎಂಬುದು ನನ್ನ ಪ್ರತಿಪಾದನೆ.”

    I have not seen a better logically sound statement in his line of arguments.

    And, weather the author agrees or not, all of the arguments proposed here in support of this statement so far has been disputed by some of us readers, according to me at least.

    Nevertheless, one may yet would like to claim some yet clever arguments in support of such a subjective statement.

    However, I do not believe in arguing without evidences.

    So, let us agree to disagree on this point, and leave the chat room with permission, with dignity?

    ಉತ್ತರ
    • ಏಪ್ರಿಲ್ 15 2012

      ಸನ್ಮಾನ್ಯ ಶ್ರೀಮಾನ್ ’ಓದುಗ’ ಶಿಖಾಮಣಿಗಳೇ, ಈಗಷ್ಟೇ ಬಾಲಚಂದ್ರ ಎನ್ನುವವರಿಗೆ ಉತ್ತರಿಸಿದ್ದೇನೆ, ಅದನ್ನೇ ನಿಮಗೂ ಓದಿಕೊಳ್ಳಲು ತಿಳಿಸುತ್ತಿದ್ದೇನೆ. ನನಗೆ ’ನಿಲುಮೆ’ಯಲ್ಲಿ ಬರೆಯಲು ಜಾಗ ಕೊಟ್ಟಿದ್ದಾರೆ ಎಂಬ ಬಗ್ಗೆ ನಿಮ್ಮ ಪ್ರಾಥಮಿಕ ಈರ್ಷ್ಯೆಯೂ ತಕರಾರೂ ಇರುವುದು ಸ್ಪಷ್ಟ ಮತ್ತು ಅನವಶ್ಯಕ ಹೂರಣಗಳಿಂದ ಸಮಯ ವ್ಯರ್ಥಮಾಡಿಸುವಲ್ಲಿ ತಾವು ಮುಂದಾಗಿದ್ದೀರಿ ಎಂಬುದೂ ಕಾಣುತ್ತಿದೆ. ನಿಮ್ಮ ’ಒರಿಜಿನಲ್’ ಮಾಹಿತಿ ನನಗೆ ಲಭ್ಯವಾಗಿದೆ! ನಿಮ್ಮಂತಹ ಮಹಾನ್ ಮೇಧಾವಿಗಳು ಬರೆಯಬೇಕಾದುದು ಬಹಳ ಇದೆ ಬಿಡಿ- ಹೇಗೂ ನೀವು ಅದೇ ಕೆಲಸದವರು! ಬನಶಂಕರಿ ಬನಶಂಕರಿಯೇ ಬಾದಾಮಿ ಬಾದಾಮಿಯೇ!! ಇರಲಿ, ದ್ವೈತ-ಅದ್ವೈತಗಳೆಲ್ಲಾ ಯಾಕೆ ಹುಟ್ಟಿಕೊಂಡವು ಎಂದರೆ ಶಂಕರರ ನಂತರ ಕೆಲವರು ನಿಮ್ಮಂತೆಯೇ ವಿತಂಡವಾದಿಗಳಿದ್ದರು, ಮೊಲಕ್ಕೆ ಮೂರೇ ಕಾಲು ಎನ್ನುವ ಅವರಿಗೆ ಕಂಡಿದ್ದನ್ನು ಹೇಳಿದರು, ಸಮಾಜದಲ್ಲಿ ಹೂಮಾರುವವನಿಗೂ ಅಭಿಮಾನಿಗಳಿರುತ್ತಾರೆ-ಅದರಂತೇ ಅವರಿಗೂ ಅಭಿಮಾನಿಗಳು, ಆರಾಧಕರು ತಯಾರಾದರು. ಸ್ವತಃ ಶ್ರೀಕೃಷ್ಣ ಬೋಧಿಸಿ ಗೀತೆಯೇ ’ಅದ್ವೈತಾಮೃತವರ್ಷಿಣೀಂ ಭಗವತೀಂ ’ ಎಂದು ತನ್ನ ಧ್ಯಾನಶ್ಲೋಕದಲ್ಲಿ ಸಾರುತ್ತದೆ; ಜೊತೆಗೆ ಗೀತೆಯ ಪರಿಪೂರ್ಣತೆ ಸಿಗುವುದೇ ಅ-ದ್ವೈತವೆಂದು! ಅಂಥದ್ದರಲ್ಲೂ ಭಿನ್ನ ಮತಗಳು ಹುಟ್ಟಿವೆ-ಹುಟ್ಟುತ್ತಿವೆ-ಹುಟ್ಟುತ್ತವೆ. ನಿಮ್ಮೆ ಇಂತಹ ಉಡಾಫೆಯ ಪ್ರಶ್ನೆಗಳನ್ನು ಕೆಲವು ವಿದ್ವಾಂಸರ ಮುಂದೆ ಹೇಳಿ-ಉತ್ತರ ಸರಿಯಾಗಿ ಸಿಗುತ್ತದೆ!

      ಡಾ| ರಾಜಾರಾಮಣ್ಣ ಎಂಬ ಅಣುವಿಜ್ಞಾನಿ ಹುಟ್ಟಿನಿಂದ ವಿಶಿಷ್ಟಾದ್ವೈತಿಗಳು ಆದರೆ ಅವರು ತಮ್ಮ ಪ್ರಯೋಗದ ಕೊಟ್ಟಕೊನೆಯಲ್ಲಿ ಅಣು ವಿಭಜನೆಯ ಹಂತದಲ್ಲಿ ಅ-ದ್ವೈತವನ್ನು ಕಂಡೆ ಎಂದು ಉದ್ಗರಿಸಿದ್ದಾರೆ! ಲೌಕಿಕ ವಿಜ್ಞಾನದ ಅರಿವಿಲ್ಲದೇ ಬರೆಯುತ್ತಿಲ್ಲಾ ಎಂಬುದರ ಬಗ್ಗೆ ತಮಗೆ ಸೂಕ್ಷ್ಮವಾಗಿ ತಿಳಿಸಿದ್ದೇನೆ. ನಿಮಗೆ ಈ ವಿಷಯ ನೆನಪಿರಲೂ ಸಾಕು ಎಂದುಕೊಂಡಿದ್ದೇನೆ.

      ನಿಲುಮೆಯಲ್ಲಿ ಜಾಗ ಹಿಡಿದು ಠಿಕಾಣಿ ಹೂಡಿಲ್ಲ ಎಂಬುದನ್ನು ತಾವು ಮನಗಾಣಬೇಕು. ನನಗೆ ನನ್ನದೇ ಸ್ವತಂತ್ರ ಜಾಗವೂ ಇದೆ, ಆಧಾರವೂ ಇದೆ ಎಂಬುದರ ಬಗ್ಗೆ ತಮಗೆ ತಿಳಿದೇ ಇದೆಯಲ್ಲಾ? ಅಲ್ಲಿಂದ ಆಹ್ವಾನಿತನಾಗಿ ಬಂದ ನನಗೆ ಬರೆಯಲೇಬೇಕೆಂಬ ತಹತಹ ಎಂದುಕೊಳ್ಳಬೇಡಿ. ಸಾಧ್ಯವಾದರೆ ಬರೀತೇನೆ-ಇಲ್ಲದಿದ್ದರೆ ಅನುಕೂಲವಾದಲ್ಲಿ ಬರೀತೇನೆ. ನನ್ನನ್ನು ಓಡಿಸುವ ನಿಮ್ಮ ಸಾಹಸಕ್ರೀಡೆಗೆ ದೊಡ್ಡನಮಸ್ಕಾರ ಮಾರಾಯ್ರೆ!

      ಉತ್ತರ
  31. Balachandra
    ಏಪ್ರಿಲ್ 15 2012

    {ದ್ವೈತ-ಅದ್ವೈತಗಳೆಲ್ಲಾ ಯಾಕೆ ಹುಟ್ಟಿಕೊಂಡವು ಎಂದರೆ ಶಂಕರರ ನಂತರ ಕೆಲವರು ನಿಮ್ಮಂತೆಯೇ ವಿತಂಡವಾದಿಗಳಿದ್ದರು, ಮೊಲಕ್ಕೆ ಮೂರೇ ಕಾಲು ಎನ್ನುವ ಅವರಿಗೆ ಕಂಡಿದ್ದನ್ನು ಹೇಳಿದರು,}
    ಪ್ರಶ್ನೆ ಕೇಳುವದನ್ನು ಹಾಗೂ ತರ್ಕಿಸುವದನ್ನು ನೀವು ವಿತಂಡವಾದ ಎನ್ನುತ್ತೀರಿ. ಹಾಗಾಗಿ ವಾದ ಮಾಡುವದರಲ್ಲಿ ಅರ್ಥವಿಲ್ಲ. ವೇದಗಳು ‘ಇದಮಿತ್ಥಂ’ ಎಂದು ಎಲ್ಲಿಯೂ ಹೇಳಿಲ್ಲ. ಮತ್ತು ಅವುಗಳನ್ನು ಅರಿಯಲು ಸಾಧಕನಿಗೆ ಬಿಡುತ್ತವೆ. ಹಾಗೆಯೇ ದ್ವೈತ ಅದ್ವೈತಗಳೂ ಕೂಡ. ನಾನೂ ಸ್ವತಹ ಅದ್ವೈತವನ್ನು ಬಹಳ ಮಟ್ಟಿಗೆ ನಂಬುತ್ತೆನಾದರೂ, ಅದ್ವೈತದಲ್ಲೂ ಕೂಡ ತರ್ಕಿಸಲಾದ್ದು ಇದೆ. ಅದೇ ‘ಮೂಲ ಮಾಯೆ'(Root ignorance). ಅದ್ವೈತದಲ್ಲಿ ಈ ‘ಮೂಲ ಮಾಯೆ’ಯು ‘ಅನಿರ್ವಚನೀಯವೆಂದು'(untenable) ಎಂದು ಹೇಳಲಾಗಿದೆ. ಇದನ್ನೇ ಗುರಿಯಾಗಿಸಿ ವೈಷ್ಣವರು(ದ್ವೈತರು) ಬಹಳಷ್ಟು ಅದ್ವೈತಿಗಳನ್ನು ದ್ವೈತ ಮತಕ್ಕೆ ಶರಣಾಗುವಂತೆ ಮಾಡಿದುದು ಐತಿಹಾಸಿಕವಾಗಿ ಸತ್ಯ. ಈಗಲೂ ಕೂಡ ಅದ್ವೈತ ಇದನ್ನು ಉತ್ತರಿಸಲಾರದು. ಹಾಗೆಯೇ ದ್ವೈತ ಮತದಲ್ಲೂ ಕೂಡ ಅಪವಾದಗಳು ಇವೆ. ಇನ್ನು ಭಾರತದಲ್ಲಿ ಬಹಳ ಹಿಂದಿನ ಕಾಲದಿಂದಲೂ ಅದ್ವೈತಕ್ಕಿಂತ ಹೊರತಾಗಿ ಬಹಳಷ್ಟು philosophy ಗಳು ಪ್ರಚಲಿತದಲ್ಲಿದ್ದವು. ಸಾಂಖ್ಯ, ನ್ಯಾಯಕ, ವೈಶೇಷಿಕ, ಚಾರ್ವಾಕ, ಬೌದ್ಧ ಜೈನ ಹೀಗೆ. ಇವೆಲ್ಲವೂ ನಾಸ್ತಿಕ ಧರ್ಮಗಳೇ. ಬುದ್ಧನೂ ವೇದಗಳ ‘infallibility’ ಯನ್ನು ಅಲ್ಲಗೆಳೆದ. ಮಹಾವೀರನು ಹುಟ್ಟಿನಿಂದ ವೈದಿಕನಾದರೂ ವೇದ ಮತವನ್ನು ತೊರೆದ.
    ಇದೆಲ್ಲವನ್ನು ನಾನು ವೇದ ಸುಳ್ಳು ಅಥವಾ ಸತ್ಯ ಎಂದು ನಿರೂಪಿಸಲು ಹೇಳುತ್ತಿಲ್ಲ. ಅದರ ಅಗತ್ಯವೂ ಈಗ ಇಲ್ಲ. ಆದರೆ ನೀವು ಹೇಳಿದಂತೆ ವೇದಗಳು ‘ಇದಮಿತ್ಥಂ’ ಎಂಬಂತಾಗಿದ್ದರೆ ಇಂತಹ ಅಪವಾದಗಳು ಇರುತ್ತಲೇ ಇರಲಿಲ್ಲ. ಆದರೆ ಇದನ್ನೇ ವಿತಂಡವಾದ ಎಂದರೆ ಇನ್ನೇನು ಹೇಳಲು ಸಾಧ್ಯ?
    ಒಂದು ವೇಳೆ ನೀವು ಹೇಳಿದಂತೆ ವೇದಗಳು ‘ಇದಮಿತ್ಥಂ’ ಎಂದು ನಿಖರವಾಗಿ ಹೇಳುವಂತಿದ್ದರೆ, ಮನುಷ್ಯ ಜೀವಿಗಳ ಉಗಮದ ಬಗ್ಗೆ ಏನು ಹೇಳುತ್ತವೆ? ಯಾವ ಕಾಲದಲ್ಲಿ ಜೀವಿಗಳು ಹುಟ್ಟಿಕೊಂಡವು ಎಂದು ಹೇಳುತ್ತವೆ? ಹೀಗೆ ಹುಟ್ಟಿನ ಹಿಂದಿರುವ ಉದ್ದೇಶ ಏನು? ಇದನ್ನು ನಾವು ಮೊದಲೇ ಕೇಳಿದರೂ ನೀವೇಕೆ ಉತ್ತರಿಸುವ ಗೋಜಿಗೆ ಹೋಗಿಲ್ಲ? ಈಗಲೂ ಸಮಯ ಮೀರಿಲ್ಲ ಉತ್ತರಿಸಿ.

    ಉತ್ತರ
    • ಏಪ್ರಿಲ್ 15 2012

      ವೇದಗಳಲ್ಲಿ ಯುಗಗಳನ್ನು ಹೇಳಿದ್ದಾರೆ, ಪರಿವರ್ತನೆ ಜಗದ ನಿಯಮವೆಂದಂತೇ ಯುಗದ ನಿಯಮವೂ ಕೂಡ. ಯುಗಗಳ ಆರಂಭವಾಗಿದ್ದನ್ನು ಲೆಕ್ಕಹಾಕುವಾಗ ಸತ್ಯಯುಗದ ಆರಂಭವೆಂದು ತೋರುತ್ತದೆ. ಸತ್ಯಯುಗ ಅಥವಾ ಕೃತಯುಗ ಯಾವಾಗ ಆರಂಭವಾಯ್ತೋ ಆಲಾಗಾಯ್ತು ಈ ಭೂಮಿಯೂ ಜೀವಪ್ರಭೇದಗಳೂ ಆವಿರ್ಭವಿಸಿದವು ಎಂದಾಗುತ್ತದೆ. ಯುಗಗಳು ನಾಲ್ಕು ಮತ್ತು ಅವು ಮತ್ತೆ ಪುನರಾವರ್ತಿತ ಎಂದು ತಿಳಿಸಲ್ಪಟ್ಟಿದೆಯಷ್ಟೇ? ಪ್ರಕೃತ ಕೃತಯುಗವೇ ಆರಂಭ ಎಂದುಕೊಂಡರೂ ಅದಕ್ಕೂ ಮುನ್ನ ಅದೆಷ್ಟು ಸೈಕ್ಲಿಂಗ್ ಆಗಿದೆ ಎಂಬುದು ನಮ್ಮ ಇತಿಮಿತಿಯನ್ನು ಮೀರುತ್ತದೆ. ಆದರೆ ಒಂದು ಸತ್ಯ ಏನೆಂದರೆ ಈ ಭೂಮಿಯನ್ನು ನೀರಿನಿಂದ ಮುಳುಗಿಸಬಹುದಾದಷ್ಟು ನೀರು ಹಿಮವಾಗಿ ಶೇಖರಣೆಗೊಂಡಿದೆ. ಭೂಮಿಯಲ್ಲಿ ಆಗಾಗ ಬೇಕಷ್ಟು ಭಾಗಗಳಿಗೆ ಮಾತ್ರ ಸುನಾಮಿಯ ರೀತಿಯಲ್ಲೂ ಪ್ರವಹಿಸಬಹುದಾಗಿದೆ. ಮಹಾಪ್ರಳಯ ಎಂಬುದನ್ನು ನೀವು ಒಪ್ಪುವುದಾದರೆ ಅದಕ್ಕಿಂತಲೂ ಮೊದಲು ಹಲವು ಚಿಕ್ಕ ಪುಟ್ಟ ಪ್ರಳಯಗಳು ಘಟಿಸಿವೆ, ಹಟಿಸುತ್ತಿವೆ, ಘಟಿಸುತ್ತವೆ. ಮಂಗಳನನ್ನು ಭೌಮ ಎಂದೇ ಕರೆದಿದ್ದಾರೆ. ಮಂಗಳ ಭೂಮಿಯಿಂದಲೇ ಭಾಗವಾದ ಗ್ರಹ ಎಂದು ತಿಳಿಯುತ್ತದೆ. ಹದಿನಾಲ್ಕು ಲೋಕಗಳನ್ನು ಹೆಸರಿಸಿದ್ದಾರೆ, ಈ ಲೋಕದ ಹೊರತು ನಾವು ಮಿಕ್ಕಿದ್ದನ್ನು ಕಾಣಲಾಗುತ್ತಿಲ್ಲ. ಆಕಾಶವೆಂಬ ವ್ಯವಸ್ಥೆಗೆ ಬುಡ-ತಲೆ ಇಲ್ಲ ಎಂಬುದನ್ನೂ ಹೇಳಿದ್ದಾರೆ-ಅದು ಕಣ್ಣಿಗೆ ಕಾಣುವ ಸತ್ಯವೂ ಆಗಿದೆ. ಯುಗಗಳ ನಡುವೆ ನಡೆದಿರಬಹುದಾದ ಪ್ರಳಯಗಳಲ್ಲಿ ಮಾನವಜೀವಿ ಅಳಿದು ಮರುಹುಟ್ಟು ಸಾಧ್ಯವಾಗಿರಬಹುದು. ನಮ್ಮ ಅಧುನಿಕ ವಿಜ್ಞಾನ ಅದನ್ನು ಅಂದಾಜಿಸುತ್ತಿದೆ ಅಷ್ಟೇ.

      ರೂಟ್ ಇಗ್ನೋರನ್ಸ್ ಬಗೆಗೆ ಕೇಳಿದ್ದೀರಿ, ಇದು ಸ್ವಾನುಭವಕ್ಕೆ ನಿಲುಕುವಂಥದ್ದೇ ಹೊರತು ಕಣ್ಣಿಗೆ ಗೋಚರವಾಗುವ ದೃಶ್ಯಾವಳಿಯಲ್ಲ. ಇದನ್ನೇ ಎಲ್ಲರೂ ಅಟೇನ್ ಮಾಡಲು ಪ್ರಯತ್ನಪಡುತ್ತಿರುವುದು. ಮೂಲಮಾಯೆ ತನ್ನನ್ನು ಬಹಿರಂಗಪಡಿಸಿಕೊಂಡರೆ ಅಗ ಜಗದ ರಹಸ್ಯ ಎಲ್ಲಿ ಉಳಿದೀತು? ವಿವೇಕಾನಂದರು, ದೇವರನ್ನು ತೋರಿಸು ಎಂದಿದ್ದಕ್ಕೆ ನಿವೇದಿತಾರ ಕೆನ್ನೆಗೆ ಒಂದು ಬಿಟ್ಟರೆಂದೂ ಆಕೆ ನೋವೆಂದು ಅತ್ತಾಗ “ನೋವನ್ನು ತೋರಿಸು” ಎಂದರೆಂತಲೂ ಕೇಳಿದ್ದೀರಲ್ಲಾ ಮೂಲ ಮಾಯೆ ಕೂಡ ಹಾಗೇ! ಅದನ್ನು ಅನುಭವಿಸುವ ಹಂತಕ್ಕೆ ನಾವು ಏರಬೇಕೇ ವಿನಃ ಅದು ಓದಿನ ಅಥವಾ ದೃಶ್ಯದ ಪರಿಮಿತಿಗೆ ಲಭ್ಯವಲ್ಲ! ಏಕ->ಅನೇಕ ಮತ್ತು ಅನೇಕ->ಏಕ ಆಗುವುದೇ ಇಲ್ಲಿನ ತತ್ವವಾಗಿದೆ. ಇದನ್ನು ಅರಿಯಲಾಗದವರು ದ್ವೈತವೆಂದರು ವಿಶಿಷ್ಟಾದ್ವೈತವೆಂದರು ಅಷ್ಟೇ.

      ಈ ಮೂರನ್ನೂ ಸ್ಥೂಲವಾಗಿ ನೋಡಿ

      ಅದ್ವೈತ : ಆತ್ಮ ಮತ್ತು ಪರಮಾತ್ಮ ಒಂದೇ, ಆತ್ಮ ಪರಮಾತ್ಮನದೇ ಭಾಗ.

      ವಿಶಿಷ್ಟಾದ್ವೈತ : ಆತ್ಮ ಮತ್ತು ಪರಮಾತ್ಮ ಒಂದೇ ಆದರೂ ಆತ್ಮ ಪರಮಾತ್ಮನ ಸನ್ನಿಧಾನದಲ್ಲಿರುತ್ತದೆ.

      ದ್ವೈತ : ಆತ್ಮವೇ ಬೇರೆ, ಪರಮಾತ್ಮವೇ ಬೇರೆ. ಪರಮಾತ್ಮನ ಸೇವೆ ಮಾಡುವುದೇ ಆತ್ಮದ ಕೆಲಸ.

      ಅಂದರೆ ಮೂಲ ಮಾಯೆ ಎಂಬುದು ಎಲ್ಲಾಕಡೆಗೂ ಇದೆ! ಆದರೆ ಪ್ರತಿಪಾದಿತ ಮಾರ್ಗ ಬೇರೆಯಾಗಿದೆ ಅಷ್ಟೇ. ಮೂಲಮಾಯೆ ಇದೆಯೆಂಬುದನ್ನು ಎಲ್ಲರೂ ಒಪ್ಪಿದ್ದಾರೆ ಎಂದಾಯ್ತು. ಶಂಕರರು ಅಷ್ಟು ಚಿಕ್ಕವಯಸ್ಸಿನಲ್ಲಿ ಸನಾತನ ವೇದ-ಶಾಸ್ತ್ರ-ಪುರಾಣ-ಉಪನಿಷತ್ತುಗಳನ್ನೆಲ್ಲಾ ಮಥಿಸಿ ಅದ್ವೈತವೆಂಬ ನವನೀತವನ್ನು ತೆಗೆದರು ಮತ್ತು ಅದನ್ನೇ ಪರ್ತಿಪಾದಿಸಿದರು ಎಂಬುದು ಕಾಣುತ್ತದೆ. ವಿಜ್ಜಾನದ ದೃಷ್ಟಿಯಲ್ಲಿ ಅತಿಚಿಕ್ಕ ಬಾಲಕನೊಬ್ಬ ಅಷ್ಟೆಲ್ಲಾ ಅರಿಯುವುದು ಸಾಧ್ಯವೇ? ಅದೂ ಪ್ರಶ್ನೆಯೇ ಆಗಿಬಿಡಬಹುದು ನಿಮಗೆ, ಆದರೆ ಅದೆಲ್ಲಾ ಇತಿಹಾಸದಲಿ ದಾಖಲಾದ ಭಾಗ! ಮಂಡನಮಿಶ್ರರಂತಹ ಜನರೊಡನೆ ನೀವು ಹೇಳಿದ ಮೂಲಮಾಯೆಯೂ ಸೇರಿದಂತೇ ಹಲವು ವಿಷಯಗಳ ಬಗೆಗೆ ಶಂಕರರು ವಾದಿಸಿದ್ದಾರೆ. ಶಂಕರರ ಮತ್ತು ಮಂಡನಮಿಶ್ರರ ವಾದ ಸರಣಿಯನ್ನು ನೀವು ಹುಡುಕಿ ಲಿಖಿತ ಪುಸ್ತಕ ದೊರೆತರೆ ಓದಿ ತಿಳಿದುಕೊಳ್ಳಬಹುದಾಗಿದೆ. ಮೂಲಮಾಯೆಯನ್ನು ಕಾಣುವಲ್ಲಿ ಇಡುವ ಹೆಜ್ಜೆಯೇ ’ನಿದಿಧ್ಯಾಸನ ಕ್ರಿಯೆ’-ಈ ಕುರಿತು ಹಿಂದೆ ’ಅಭಿಗಾರ’ದಲ್ಲಿ ಬರೆದಿದ್ದೇನೆ. ಈ ಕಾಲದಲ್ಲೇನಿದ್ದರೂ ’ನಿಧಿಧ್ಯಾನ ಕ್ರಿಯೆ’ಯೇ ನಡೆಯುತ್ತದೆ ಹೊರತು ನಿದಿಧ್ಯಾಸನವಲ್ಲ.

      ಉತ್ತರ
  32. Balachandra
    ಏಪ್ರಿಲ್ 16 2012

    {ಪ್ರಕೃತ ಕೃತಯುಗವೇ ಆರಂಭ ಎಂದುಕೊಂಡರೂ ಅದಕ್ಕೂ ಮುನ್ನ ಅದೆಷ್ಟು ಸೈಕ್ಲಿಂಗ್ ಆಗಿದೆ ಎಂಬುದು ನಮ್ಮ ಇತಿಮಿತಿಯನ್ನು ಮೀರುತ್ತದೆ.}
    ಹಾಗಾದರೆ ಅದೆಷ್ಟು ಸೈಕ್ಲಿಂಗ್ ಆಗಿದೆ, ಹಾಗೂ creation ಮೊದಲ ಬಾರಿಗೆ ನಡೆದು ಕಾಲ ಎಷ್ಟಾಯಿತು ಎಂದು ನಿಖರವಾಗಿ ವೇದಗಳು ತಿಳಿಸುವದಿಲ್ಲ ಎಂದಾಯ್ತಲ್ಲ?

    ಉತ್ತರ
    • ಏಪ್ರಿಲ್ 16 2012

      ಅದನ್ನೇ ನಾನು ಲೇಖನದಲ್ಲಿ ಪರ್ಯಾಯವಾಗಿ ಹೇಳಿದ್ದೇನೆ. ಈ ಜಗತ್ತಿನ ಸಂಪೂರ್ಣ ರಹಸ್ಯ ನಮಗೆ ಅಲಭ್ಯ. ಆದರೆ ಸಿಗುವ ವೇದಗಳೆಂಬ ಆಕರಗಳ ಮೂಲಗಳಿಂದ ತಿಳಿಯುವುದನ್ನು ಪ್ರಸ್ತುತಪಡಿಸಿದ್ದೇನೆ. ಯುಗಗಳಿಗೂ ಮುನ್ನ ಅಂದರೆ ಪ್ರಸಕ್ತ ನಡೆಯುತ್ತಿರುವ ಸೈಕಲ್ ಗೂ ಮುನ್ನ ಬ್ರಹ್ಮಾಂಡ ಯಾವಾಗ ಉದ್ಭವವಾಯ್ತೋ ಆ ದಿನವನ್ನು ಚಾಂದ್ರಮಾನ ಯುಗಾದಿ ಎಂದು ಆಚರಿಸುತ್ತೇವೆ. ಅಧುನಿಕ ವಿಜ್ಞಾನವನ್ನು ತೆಗೆದುಕೊಂಡರೆ ಅದು ಅಷ್ಟೂ ಸಹಿತ ಆಳಕ್ಕೆ ಹೋಗುವುದಿಲ್ಲ. ಇನ್ನು ನನ್ನಂತಹ ಅಲ್ಪಮತಿಗೆ ಎಟುಕಿದ್ದಿಷ್ಟು, ನಿಮಗೆ ಕಾರಾರುವಾಕ್ಕಾಗಿ ಬೇಕಾದರೆ ಪಾವಗಡ ಪ್ರಕಾಶ್ ರಾವ್, ಕೆ.ಜಿ.ಸುಬ್ರಾಯ ಶರ್ಮ, ಶತಾವಧಾನಿ ಡಾ| ಆರ್. ಗಣೇಶ್ ರಂತಹ ವೇದ ಸಂಶೋಧಕರನ್ನು ಅವಲಂಬಿಸಬಹುದು; ಉತ್ತರ ದೊರೆಯುತ್ತದೆ. ಅದು ಬಿಟ್ಟು ವೇದದಲ್ಲಿ ಹುರುಳಿಲ್ಲ ಎನ್ನುವುದು ತಿರುಳಿಲ್ಲದ ಮಾತು. ಕುಮಾರ್ ಅವರು ಹೇಳಿದ ಹಾಗೇ ವೇದದ ಅರ್ಥಗ್ರಹಿಕೆಯೂ ಅಷ್ಟೆಲ್ಲಾ ಸುಲಭದ್ದಲ್ಲ, ಪದಪದದ ಅರ್ಥವಿಶ್ಲೇಷಣೆ ಬಹಳ ವಿಸ್ತಾರ ವ್ಯಾಪ್ತಿಯದ್ದಾಗಿದೆ. ಮೇಲಾಗಿ ಗಿಡಮರಗಳು, ಜೀವಿಗಳು ಇವೆಲ್ಲಾ ಅನುಕ್ರಮವಾಗಿ ಹುಟ್ಟಿದ ಬಗ್ಗೆ ಮಾಹಿತಿ ಲಭ್ಯ. ಈಗಿರುವ ಮನುಕುಲವನ್ನು ಬಿಟ್ಟು [ಮನುವಿನಿಂದ ಆರಂಭವಾದ ಕುಲ]ಅದಕ್ಕೂ ಹಿಂದಿನ ಸೈಕಲ್ ನಲ್ಲೂ ಕೂಡ ಇನ್ನಾವುದೋ ಮನುಷ್ಯಕುಲ, ಜೀವಕುಲ ಇದ್ದಿತ್ತು ಎಂಬುದು ಸ್ಪಷ್ಟ. ಪೂರ್ವಾಗ್ರಹಗಳನ್ನು ಬಿಟ್ಟು ನೀವು ಮಥಿಸುವುದಾದರೆ ವೇದಗಳನ್ನೇ ಉಸಿರಾಡುವ ಕೆಲವು ವಿದ್ವಾಂಸರಿದ್ದಾರೆ, ಅವರನ್ನು ಕಾಣಬಹುದಾಗಿದೆ. ಎಲ್ಲವನ್ನೂ ಬಿಟ್ಟು ಅಧುನಿಕ ವಿಜ್ಞಾನ ಹೇಳಿದ್ದು ಮಾತ್ರ ಸತ್ಯ ಎಂದರೆ ಅದು ತಪ್ಪಾಗುತ್ತದೆ, ನಾವು ಇನ್ನೂ ಹುಡುಕುತ್ತಿದ್ದೇವೆ ಎಂದರೆ ಪರವಾಗಿಲ್ಲ. ಕಣ್ಣಿಗೆ ಕಾಣುವ ಈ ಲೋಕವನ್ನೇ ’ಮಾಯೆ’ ಎನ್ನುತ್ತದೆ ನಮ್ಮ ವೇದಸಾರ. ಸೂರ್ಯನಿಂದ ವೇದ-ಶಾಸ್ತ್ರ-ನವವ್ಯಾಕರಣಗಳನ್ನು ಹನುಮ ಕಲಿತ ಎನ್ನುತ್ತಾರೆ. ಸೂರ್ಯ ಬರೇ ಹೀಲಿಯಂ ಮೊದಲಾದ ಹೊಳೆವ ಲೋಹಧಾತು ಪುಂಜ ಎನ್ನುತ್ತದೆ ವಿಜ್ಞಾನ, ಸೂರ್ಯಯನ್ನು ಸೂರ್ಯನಾರಾಯಣನೆನ್ನುವ ನನ್ನಂತಹ ಜನ ಆ ಶಕ್ತಿಯಲ್ಲಿ ವಿಶೇಷತೆ ಎಂಬುದನ್ನು ಅರ್ಥವಿಸಿಕೊಂಡಿದ್ದೇವೆ. ಸೂರ್ಯ ಬರೇ ಲೋಹಧಾತುಗಳ ಪುಂಜವಲ್ಲ ಎಂಬುದನ್ನೂ ಮನಗಂಡಿದ್ದೇವೆ. ಮಾನವನ ಪ್ರಯತ್ನಕ್ಕೆ ಫಲ ಎಂಬುದು ಇದ್ದೇ ಇದೆ; ಅದು ನಿಯಾಮಕನ ನಿಯಮ. ಕೆಟ್ಟಪ್ರಯತ್ನಕ್ಕೆ ಕೆಟ್ಟ ಫಲವೂ ಒಳ್ಳೆಯ ಪ್ರಯತ್ನಕ್ಕೆ ಒಳ್ಳೆಯ ಫಲವೂ ಸಿಗುತ್ತದೆ. ಬಹಳವಾಗಿ ಪ್ರಯತ್ನಿಸಿದ್ದರಿಂದ ಕೆಲವು ಪ್ರತಿಶತ ಮಾಹಿತಿಯನ್ನು ನಿಯಾಮಕ ಫಲವೆಂದು ನೀಡಿದ್ದಾನೆ. ಪರಿಪೂರ್ಣತೆಯನ್ನು ನೀಡುವ ಹಂತದ ಪ್ರಯತ್ನ ವಿಜ್ಞಾನಿಗಳಿಂದ ನಡೆಯುವುದಿಲ್ಲ-ಯಾಕೆಂದರೆ ಅದು ಸಂಶೋಧಿಸಿ ಮುಗಿಸಲಾಗದಷ್ಟು ಅಗಾಧ. ಅದನ್ನು ತಮ್ಮ ತಪೋಬಲದಿಂದ ಅರಿತು ಅದರೊಳಗೆ ಒಂದಾಗುವವರು ಸಿದ್ಧಿ ಪಡೆದವರು; ಅಲ್ಲೂ ಹಂತಗಳಿವೆ-ಎಲ್ಲಾ ಸನ್ಯಾಸಿಗಳೂ ಏಕ್ ದಂ ಅದನ್ನು ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಅಧುನಿಕ ವಿಜ್ಞಾನ ಹೇಳುವ ಎಲ್ಲವನ್ನೂ ನಾವು ಒಪ್ಪಲಾರೆವು; ಒಪ್ಪುವಂತಹ ಆಧಾರಗಳನ್ನು ಕೊಟ್ಟರೆ ಒಪ್ಪದೇ ಇರಲಾರೆವು! — ಚರ್ಚೆ ದೀರ್ಘವಾಗಿದೆ, ನನ್ನ ಸಮಯಮಿತಿಗೆ ಮೀರಿದ್ದಾಗಿದೆ. ಇಲ್ಲಿಗೆ ನನ್ನ ಪ್ರತ್ಯುತ್ತರಗಳನ್ನು ನಿಲ್ಲಿಸುತ್ತಾ ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.

      ಉತ್ತರ
      • Balachandra
        ಏಪ್ರಿಲ್ 16 2012

        ಇಲ್ಲಿಯ ವರೆಗೆ ವೇದವನ್ನು ಅಭ್ಯಸಿಸಿದ ಯಾವ ವಿಧ್ವಾನ್ ಕೂಡ ಸೃಷ್ಟಿಯ ಕಾಲಮಾನದ ಬಗ್ಗೆ ಮಾಹಿತಿ ನೀಡಿಲ್ಲ. ಸರಿ ಇನ್ನು ಸೃಷ್ಟಿಯ ವಿಷಯಕ್ಕೆ ಬರೋಣ. ಉಪನಿಷತ್ತುಗಳು, ಹೇಳುವದೆನೆಂದರೆ ಮೂಲಭೂತವಾಗಿ ಈ ಪ್ರಕೃತಿ, ಅವಕಾಶ (space), ಅಂತೆಯೇ ಕಾಲ ಸೃಷ್ಟಿಯಾದದ್ದು “Brahman” ನಿಂದ ಎನ್ನುತ್ತದೆ. ಹಾಗೂ ಈ ಪ್ರಕೃತಿ ಒಂದು ‘ಮಾಯೆಯಿಂದ’ ವಿವಿಧ ರೂಪಗಳನ್ನು, ಅನೆಕತೆಗಳನ್ನು ಪಡೆದುಕೊಂಡಿತು ಎನ್ನುತ್ತದೆ. ಅಂದರೆ ನೀವು ಹೇಳಿದಂತೆ ಏಕ(Brahman) ದಿಂದ ಅನೇಕತೆ ಸೃಷ್ಟಿಯಾಯ್ತು ಎಂದಾಯ್ತು. ಆದ್ರೆ ಇಲ್ಲಿಯೇ ವಿರೋಧಾಭಾಸವನ್ನು(paradox) ನಾವು ಗಮನಿಸುತ್ತೇವೆ. ಅದೇನೆಂದರೆ ಅನೇಕತೆ ಸೃಷ್ಟಿಯಾಗುವ ಮೊದಲು ‘ಮಾಯೆ’ ಇರಲಿಲ್ಲ. ಕೇವಲ Brahman ಮಾತ್ರ ಇತ್ತು. ಈ “Brahman” ಎಂಬುದು ಅಕರ್ತ(non-doer), ಅಭೋಕ್ತ(non-enjoyer) ಆಗಿದೆ. ಮತ್ತು knower ಕೂಡ ಅಲ್ಲ. ಹಾಗಿದ್ದಾಗ್ಯೂ ಈ “ಏಕ” ಎನ್ನುವದು ಅನೇಕವಾಗಿ ಮಾರ್ಪಟ್ಟದ್ದು ಹೇಗೆ? “ಮಾಯೆ” ಎನ್ನುತ್ತದೆ ವೇದಾಂತ. ಅಗೋ ನೋಡಿ ಅಲ್ಲಿಯೇ ವಿರೋಧಾಬಾಸ ಇರುವದು. brahman ಕಿಂತ ಮಿಗಿಲಾಗಿ ಯಾವುದೂ ಇರಲಿಲ್ಲವೆಂದರೆ “ಮಾಯೆ” ಎಲ್ಲಿಂದ ಬಂತು? ಕೆಲವರು ‘ಮಾಯೆ’ ಎಂಬುದು “part of brahman” ಎಂದು ಕರೆಯುತ್ತಾರೆ. ಆಗಲೂ ವಿರೋದಾಭಾಸ ತಪ್ಪಿದ್ದಲ್ಲ. ಮಾಯಾ ಶಕ್ತಿ ಎಂಬುದು part of Brahman ಆಗಿದ್ದರೆ Brahman ಕರ್ತನಾಗಿಬಿಡುತ್ತದೆ(doer). ಹಾಗೂ Brahman ಪರಿಣಾಮಕ್ಕೆ ಒಳಪಟ್ಟಂತೆ ಆಯ್ತು. ಒಂದು ವೇಳೆ “ಮಾಯೆ” ಎಂಬುದು Brahman ನಿಂದ ಹೊರತಾಗಿದ್ದಲ್ಲಿ, ಅದ್ವೈತ ಹೋಗಲಾಗಿ ದ್ವೈತ duality ಕಾಣಿಸಿಕೊಳ್ಳುತ್ತದೆ.
        ಇನ್ನು ‘ಜೀವಿಯ’ ವಿಷಯಕ್ಕೆ ಬಂದರೆ ಜೀವಿಯ ಅಸ್ತಿತ್ವ(ಬೌದ್ಧಿಕ, ಮಾನಸಿಕ ಲಕ್ಷಣಗಳು, ಗುಣಗಳು) ಪೂರ್ವಜನ್ಮದ ಕರ್ಮ ಫಲದಿಂದ ನಿರ್ಧರಿಸಲ್ಪಡುತ್ತದೆ ಎನ್ನುತ್ತದೆ ಆಸ್ತಿಕವಾದ. ಆದರೆ ಮೊತ್ತಮೊದಲ ಬಾರಿಗೆ ಜನಿಸುವಾಗ-ಅಂದರೆ ಸೃಷ್ಟಿಯ ಪ್ರಾರಂಭದಲ್ಲಿ- ಯಾವ ಆಧಾರದ ಈ ಪ್ರತಿಯೊಂದು ಜೀವಿಯ ‘ಜೀವನ’ ನಿರ್ಧರಿಸಲ್ಪಟ್ಟಿತು?ಅಂದರೆ ಅದಕ್ಕೂ ಮುನ್ನ ಯಾವುದೇ ಜನ್ಮ ಇರದಿದ್ದ ಕಾರಣ, ‘ಪೂರ್ವಜನ್ಮದ ಕರ್ಮಫಲ’ ಎಂಬುದು ಪ್ರಪ್ರಥಮವಾಗಿ ಉದಯಿಸಿದ ಜೀವಿಗಳಲ್ಲಿ ಇರದಿದ್ದ ಕಾರಣ ಪ್ರತಿಯೊಂದು ಜೀವಿಯ ‘individuality’ ಹೇಗೆ ಅಸ್ತಿತ್ವವನ್ನು ಪಡೆದಿತ್ತು? ಇವುಗಳ ಬಗ್ಗೆ ವೇದ ಉಪನಿಷತ್ತುಗಳು ನಿಖರವಾಗಿ ಏನು ಹೇಳುತ್ತವೆ?
        ಹೀಗೆಯೇ ಒಂದಿಲ್ಲೊಂದು ವಿಧದಲ್ಲಿ ಬರೇ ಅದ್ವೈತವಲ್ಲ, ದ್ವೈತ ಮತ್ತಿತರ ಆಸ್ತಿಕ ವಾದಗಳೂ ಕೂಡ ಅವುಗಳದೇ ಆದ ಹಿನ್ನೆಡೆಯನ್ನು ಅನುಭವಿಸುತ್ತಿವೆ.
        ಮುಖ್ಯವಾಗಿ ನಾನಿಲ್ಲಿ ಹೇಳಬಯಸುವದೆನೆಂದರೆ ಆಸ್ತಿಕ ವಾದವೂ ಕೂಡ ಸೃಷ್ಟಿಯ ರಹಸ್ಯವನ್ನು ತಿಳಿಸುವಲ್ಲಿ ಅಸಫಲವಾಗುತ್ತದೆ, ಹಾಗೆಯೇ ಅದನ್ನು ತಿಳಿದುಕೊಳ್ಳಲು ಮುಮುಕ್ಷುವಿಗೆ ಬಿಡುತ್ತದೆ.
        ಮೊದಲೇ ಹೇಳಿದಂತೆ ನಾನು ಸತ್ಯವನ್ನು ತಿಳಿಯಲು ಯಾವುದರ ಅಧ್ಯಯನವನ್ನು ಮಾಡಲು ಪೂರ್ವಗ್ರಹ ಪೀಡಿತನಾಗಿಲ್ಲ. ತಕ್ಕ ಮಟ್ಟಿಗಿನ ಉಪನಿಷತ್ತು ವೇದಾಧ್ಯಯನವನ್ನು ಮಾಡಿದ್ದೇನೆ. ಉಪನಿಷತ್ತುಗಳಲ್ಲಿನ ಕೆಲವು ತತ್ವಗಳನ್ನು ಇಷ್ಟಪಡುತ್ತೇನೆ ಕೂಡ. ಆದರೆ ಯಾವುದನ್ನೇ ಆಗಲಿ ಅದನ್ನು “eternal” ಅನ್ನಲು ನಮಗೆ ಪೂರ್ಣ ಪ್ರಮಾಣದ ಅನುಭವವಾಗಬೇಕು. ಅಲ್ಲಿಯ ತನಕ ಸತ್ಯ ಶೋಧನೆ ಮುಂದುವರಿಸೋಣ. ಕಣ್ಣಿಗೆ ಕಂಡದ್ದನ್ನು ನಂಬದೆ ಹೋದಲ್ಲಿ ಕಾಣದ್ದನ್ನು ನಂಬಲು ಹೇಗೆ ಸಾಧ್ಯ?ಕೆಲವೊಂದು ಪ್ರಶ್ನೆಗೆ ಉತ್ತರ ಇರದಿದ್ದ ಮಾತ್ರಕ್ಕೆ ಅದು ಸುಳ್ಳು ಎಂದಾದಲ್ಲಿ ಆಸ್ತಿಕವಾದವೂ ಸುಳ್ಳಾಗುವದಲ್ಲವೇ?

        ಉತ್ತರ
  33. Balachandra
    ಏಪ್ರಿಲ್ 16 2012

    {ಯುಗಗಳಿಗೂ ಮುನ್ನ ಅಂದರೆ ಪ್ರಸಕ್ತ ನಡೆಯುತ್ತಿರುವ ಸೈಕಲ್ ಗೂ ಮುನ್ನ ಬ್ರಹ್ಮಾಂಡ ಯಾವಾಗ ಉದ್ಭವವಾಯ್ತೋ ಆ ದಿನವನ್ನು ಚಾಂದ್ರಮಾನ ಯುಗಾದಿ ಎಂದು ಆಚರಿಸುತ್ತೇವೆ. ಅಧುನಿಕ ವಿಜ್ಞಾನವನ್ನು ತೆಗೆದುಕೊಂಡರೆ ಅದು ಅಷ್ಟೂ ಸಹಿತ ಆಳಕ್ಕೆ ಹೋಗುವುದಿಲ್ಲ.}

    “ಬಿಗ್ ಬ್ಯಾಂಗ್” ಸಿದ್ಧಾಂತದಲ್ಲಿ ಸೃಷ್ಟಿಯು ಉದಯಿಸಿದ ಕಾಲವನ್ನು ಹೇಳಲಾಗಿದೆ.

    ಉತ್ತರ
  34. ಏಪ್ರಿಲ್ 16 2012

    ಬಾಲಚಂದ್ರರೇ, ನಿಮ್ಮ ಪ್ರಶ್ನೆಗಳು ಸರಿಯೇ ಇವೆ. ಆದರೆ ಪ್ರಶ್ನೆಗಳಿಗೆ ಉತ್ತರ ಸಿಗುವಷ್ಟು ಆಳದ ಅಧ್ಯಯನಕ್ಕೆ ನೀವಿನ್ನೂ ಇಳಿದಿಲ್ಲ ಎಂದರೆ ಬೇಸರಪಡಬೇಡಿ. ಒಂದಿ ಕೈಲಿ ವೇದ ಇನ್ನೊಂದು ಕೈಲಿ ವಿಜ್ಞಾನ ಹಿಡಿದುಕೊಂಡು ಎರಡನ್ನೂಪ್ ಏಕಕಾಲದಲ್ಲಿ ಮುನ್ನಡೆಸುವಾಗ ನಿಮಗೆ ಆಸ್ತಿಕರ ಹಿನ್ನಡೆ ಎನಿಸಬಹುದು. ಆದರೆ ಈ ಮೊದಲೇ ಹೇಳಿದಂತೇ ನಮ್ಮ ವ್ಯಾಪ್ತಿ ಸೀಮಿತ; ವೇದಗಳಲ್ಲಿ ಹೇಳಿದ ಹಲವು ಅಂಶಗಳು ಅಪರಿಮಿತ! ಉದಾಹರಣೆಗೆ ನೀವು ಬ್ರಹ್ಮನ್ ಅಥವಾ ಬ್ರಹ್ಮ ಎಂದಿರಿ ಆ ಬ್ರಹ್ಮ ಎಂದರೇ ಮಾಯೆ. ಇಲ್ಲಿ ಬ್ರಹ್ಮನ್ ಎಂದರೆ ಪರಬ್ರಹ್ಮ, ಅವನೇ ಪರಮಾತ್ಮ. ಪರಮಾತ್ಮ ಯಾಕೆ ಸೃಷ್ಟಿಕ್ರಿಯೆಯಲ್ಲಿ ತೊಡಗಿದ ಎಂದು ಆತ ಹೇಳಬರುವುದಿಲ್ಲ. ಮೊದಲಾಗಿ ಆತನಿಂದ ಜನಿಸಿದ ಜೀವಿಗಳೋ ಇನ್ನೇನೋ ಕರ್ಮಫಲಗಳನ್ನು ಪಡೆದುಕೊಂಡೇ ಇದ್ದಿರಲೂ ಬಹುದು. ಉದಾಹರಣೆಗೆ ಪ್ರಳಯವಾಗಿ ಎಲ್ಲರೂ ಸತ್ತರೂ ಸನಾತನ ಧರ್ಮದ ಪ್ರಕಾರ ಆತ್ಮಕ್ಕೆ ಸಾವಿರುವುದಿಲ್ಲವಲ್ಲ! ಆತ್ಮ ಹುಟ್ಟೂ ಇಲ್ಲ ಸಾವೂ ಇಲ್ಲ! ಅದು ಚಲಾವಣೆಯಲ್ಲಿರುವ ಚೈತನ್ಯ. ಅದು ಬೇರೆ ಬೇರೇ ಕಾಯಗಳನ್ನು ಪಡೆದುಕೊಳ್ಳುತ್ತದೆ. ತನ್ನದೇ ಭಾಗವನ್ನು ಹಲವಾಗಿ ವಿಭಜಿಸಿದ ಬ್ರಹ್ಮ ಅವುಗಳಿಗೆ ಕಾಲಕ್ರಮದಲ್ಲಿ ತನ್ನೊಳಗೇ ಐಕ್ಯವಾಗುವ ಅಥವಾ ತನ್ನ ಹೊರಗಿನ ಕಕ್ಷೆಯಲ್ಲೇ ಇದ್ದು ಮಿಥ್ಯಾ ಲೋಕದಲ್ಲಿ ವಿಹರಿಸುವ ಆಪ್ಶನ್ಸ್ ನೀಡುತ್ತಾನೆ. ಯಾರು ಮುಮುಕ್ಷುಗಳೋ ಅವರು ಸಾಧನೆಮಾಡಿದಾಗ ’ಆನಂದಘನ’ ರೂಪವನ್ನು ಪಡೆಯುತ್ತಾರೆ ಅರ್ಥಾತ್ ಮೂಲ ಬ್ರಹ್ಮನ್ ಅಥವಾ ಪರಬ್ರಹ್ಮನಲ್ಲಿ ವಿಲೀನಗೊಳ್ಳುತ್ತಾರೆ ಅಂದರೆ ಸದ್ಯಕ್ಕೆ ಮಿಥ್ಯಾಲೋಕದ ವಿಹಾರಗಳಿಂದ ಮುಕ್ತಿಪಡೆಯುತ್ತಾರೆ ಎಂದರ್ಥ.

    ಇನ್ನು ಆತ್ಮಗಳೆಂಬ ಆತನ ತುಣುಕುಗಳನ್ನು ಹೊರಕಕ್ಷೆಗೆ ಕಳುಹಿಸುವಾಗಲೂ ಅಲ್ಲಿ ವಿವಿಧ ತರಗತಿಗಳನ್ನು ಮಾಡುತ್ತಾನೆ[ಗ್ರೇಡೆಡ್]. ತನ್ನದೇ ಅವತಾರಗಳಲ್ಲೂ ಪೂರ್ಣಾವತಾರ, ಅಂಶಾವತಾರ, ಅಂಶಾಂಶಾವತಾರ ಎಂದೆಲ್ಲಾ ಇರುವಂತೇ ಆತ್ಮಸ್ವರೂಪದಲ್ಲೂ ಜೀವಾತ್ಮ, ಕೇವಲಾತ್ಮ ಹೀಗೆಲ್ಲಾ ಭೇದಗಳು ಇವೆ. ಇದಕ್ಕೆ ಉದಾಹರಣೆಯಾಗಿ ಶೇಂಗಾ ಅಥವಾ ಕಡಲೇಬೀಜವನ್ನು ತೆಗೆದುಕೊಳ್ಳೋಣ. ಬೀಜ ಹಸಿ ಇದ್ದರೆ ಹಾಳಾಗುತ್ತದೆ, ಒಣಗಿಸಿದರೆ ಕೆಲಕಾಲ ಹಾಗೇ ಇರುತ್ತದೆ. ಬಿತ್ತಿದರೆ ಸಸ್ಯ ಜನಿಸುತ್ತದೆ[ಮರು ಹುಟ್ಟಿಗೆ ಕಾರಣವಾಗುತ್ತದೆ], ಹುರಿದರೆ/ಕರಿದರೆ ತಿನ್ನಲಷ್ಟೇ ಉಪಯುಕ್ತವಾಗಿ ತನ್ನ ಮೂಲ ಗುಣವನ್ನು ಕಳೆದುಕೊಳ್ಳುತ್ತದೆ. ಇಲ್ಲಿ ಮುಮುಕ್ಷುಗಳನ್ನು ಹುರಿದ ಶೇಂಗಾಕ್ಕೆ ಹೋಲಿಸಬಹುದಾಗಿದೆ.

    ಮತ್ತೂ ಒಂದು : ಈ ಗ್ರೇಡೆಡ್ ಆತ್ಮಗಳಿಗೂ ಕಾಲದ ಪರಿಮಿತಿ ನೀಡುತ್ತಾನೆ. ಒಮ್ಮೆ ಮುಮುಕ್ಷು ಮುಕ್ತಿಯನ್ನು ಪಡೆದು ಪರಮಾತ್ಮನಲ್ಲಿ ವಿಲೀನಗೊಂಡರೂ ಮಿಥ್ಯಾಲೋಕದ ವಿಹಾರಕ್ಕೆ ತಾನಿಷ್ಟಪಟ್ಟರೆ ಕಳುಹಿಸಬಹುದು, ಅಥವಾ ಮಿಥ್ಯಾಲೋಕದ ಯಾವುದೋ ಕಾರ್ಯನಿಮಿತ್ತ ಮತ್ತೆ [ಕಾಯಪ್ರವೇಶ]ಜನಿಸಬಹುದಾಗಿದೆ. ಕೆಲವು ಆತ್ಮಗಳು ತಮ್ಮ ಸಿದ್ಧಿಯಿಂದ ಪುಣ್ಯಲೋಕವನ್ನು ಪಡೆದು ಆಗಸದಲ್ಲಿ ನಕ್ಷತ್ರಗಳಾಗುತ್ತವೆ ಎಂಬುದೂ ತಿಳಿಯುತ್ತದೆ; ತಮಗೆ ಕೊಡಲ್ಪಟ್ಟ ಅವಧಿ ಮುಗಿದಮೇಲೆ ಅವು ಉಲ್ಕೆಗಳಾಗಿ ಭೂಮಿಗೆ ಬರುತ್ತವೆ, ಮತ್ತೆ ಯಾವುದೋ ಕಾಯ ಪ್ರವೇಶಿಸುತ್ತವೆ.

    ಆಂಜನೇಯ ಚಿರಂಜೀವಿ ಎಂದು ಕೇಳಿದ್ದೇವೆ. ಮುಂದಿನ ಕಲ್ಪದಲ್ಲಿ ಆತ ಬ್ರಹ್ಮನ ಸ್ಥಾನವನ್ನು ಪಡೆಯುತ್ತಾನೆ. ಅಂದರೆ ಪರಬ್ರಹ್ಮನಿಂದ ರಚಿಸಲ್ಪಟ್ಟ ಸೃಷ್ಟಿ-ಸ್ಥಿತಿ-ಲಯ ಕಾರಣೀಕರ್ತರೂ ಕೂಡ ಬದಲಾಗುವ ಪ್ರಮೇಯವಿದೆಯೆಂಬುದು ಅರ್ಥವಾಗುತ್ತದೆ! [ಅದು ನಮ್ಮ ರಾಜಕೀಯದ ಕುರ್ಚಿಗಳಂತೇ ಅವಧಿಗೆ ಸೀಮಿತವಾಗಿರುತ್ತದೆ ಎಂಬುದು ಗೋಚರವಾಗುತ್ತದೆಯಾದರೂ ರಾಜಕೀಯದ ಡೊಂಬರಾಟಕ್ಕೆ ಹೋಲಿಸಿದರೆ ಅಪಮೌಲ್ಯವಾಗುತ್ತದೆ!] ನೀವು ಹೇಳುವ ಬ್ರಹ್ಮನ್ ಈ ಬ್ರಹ್ಮಸ್ಥಾನವಲ್ಲ ಬದಲಾಗಿ ಅದು ಮೂಲ ಬ್ರಹ್ಮನ್ ! ಮೂಲ ಬ್ರಹ್ಮನ್ ಕೆಳಗೆ ಹಲವು ಕುರ್ಚಿಗಳಿವೆ ! ಆಡಳಿತ ವ್ಯವಸ್ಥೆಗೆ ಆ ಯಾ ಮಂತ್ರಿಮಹೋದಯರಂತೇ ವಿಭಿನ್ನ ಡಿಪಾರ್ಟ್‍ಮೆಂಟ್ ಹೇಳಲ್ಪಟ್ಟಿದೆ. ಅಷ್ಟಾ ವಸುಗಳು. ಅಷ್ಟದಿಕ್ಪಾಲಕರು ಇವೆಲ್ಲಾ ನೀವು ಕೇಳಿದ್ದೀರಲ್ಲ. ಒಟ್ಟಾರೆ ನಾವು ತಿಳಿದಷ್ಟು ಸುಲಭದ ಮಂಡಲ ಅಥವಾ ಯಂತ್ರ ಅದಲ್ಲ!! ಅದನ್ನು ಚಿತ್ರರೂಪದಲ್ಲಿ ಕಾಣುವವರು ಮುಮುಕ್ಷುಗಳು ಮಾತ್ರ! ಅವರೂ ಕೂಡ ಕೆಲವೊಮ್ಮೆ ಕೆಲವು ಸ್ತರಗಳಿಗೆ ಹೋಗಿ ಮತ್ತೆ ಮರಳುತ್ತಿರುತ್ತಾರೆ! ಯಾವಾಗ ಹೆಡ್ ಆಫೀಸ್ ತಲ್ಪುತ್ತಾರೋ ಆಗ ಅಲ್ಲಿಂದ ಅವರು ಮರಳುವುದಿಲ್ಲ-ಅದೇ ವಿಲೀನಕಾರ್ಯ. ಇಂತಹ ಕಾಂಪ್ಲೆಕ್ಸಿಟಿಯನ್ನು ನಾವು ಅರಿಯಬೇಕಾದರೆ ಆಳವಾದ ಅಧ್ಯಯನ ಅಗತ್ಯ.

    ಇನ್ನು ನೀವು ಹೇಳಿದ ಬಿಗ್ ಬ್ಯಾಂಗ್ ಥಿಯರಿ ಕಾಲಗಣನೆ ಮತ್ತದೇ ಅಂದಾಜಿನ ಕ್ರಮವಾಗಿದೆ! ಅದು ಆಗಿರಲೂ ಬಹುದು ಆಗದೇ ಇರಲೂ ಬಹುದು. ಬಿಗ್ ಬ್ಯಾಂಗ್ ಆದುದು ಎಲ್ಲಿಂದ ? ಸೂರ್ಯನಿಂದ. ಸೂರ್ಯ ಯಾರು? ಆಕಾಶ ಕಾಯ-ವಿಜ್ಞಾನದ ಪ್ರಕಾರ ಒಂದು ನಕ್ಷತ್ರ. [ಸೂರ್ಯನಂತಹ ಅನೇಕ ಕೋಟಿ ಸೂರ್ಯರು ಇದ್ದಾರಂತೆ ನಮಗೆ ಕಾಣುವವೇ ? ಇಲ್ಲ.] ಇರಲಿ, ಸೂರ್ಯನಕ್ಷತ್ರ ಸಿಡಿಯಿತು, ಕಾರಣವೇನು ? ಗೊತ್ತಿಲ್ಲ! ಸಿಡಿಯಿತು ಎಂಬಲ್ಲಿಂದ ನಮ್ಮ ಊಹೆ ಶುರುವಾಗುತ್ತದೆ. ಬಿಗ್ ಬ್ಯಾಂಗ್ ಆದಮೇಲೆ ಮತ್ತೆ ಚಿಕ್ಕ ಚಿಕ್ಕ ಬ್ಯಾಂಗ್ ಗಳಾದವು ! ಈಗ ಯಾಕೆ ಬ್ಯಾಂಗ್ ನಿಂತು ಹೋಗಿದೆ? ಗೊತ್ತಿಲ್ಲ! ಸಿಡಿದ ಸೂರ್ಯನ ಉರಿವ ತುಣುಕಿನಮೇಲೆ ಹಲವು ಸಾವಿರ ವರ್ಷಗಳು ಮಳೆ ಸುರಿದ ನಂತರ ಜೀವಜಗತ್ತು ಹುಟ್ಟಿತು ಎನ್ನುತ್ತದೆ ವಿಜ್ಞಾನ. ಭೂಮಿಯ ಮೇಲೇ ಸಮುದ್ರವಿದೆಯೆಂಬುದೂ ನಮಗೆ ಗೊತ್ತು! ಮಳೆಯಾಗಲು ಮೋಡಗಳು ಬೇಕು-ಮೋಡಗಳಾಗಲು ನೀರಾವಿ ಬೇಕು ಎಲ್ಲಿಂದ ಬಂತು ? -ವಾತಾವರಣದಿಂದ! ವಾತಾವರಣ ಎಲ್ಲಿಂದ ಬಂತು? ಗೊತ್ತಿಲ್ಲ! ವಾಯು ಎಂಬುದರ ಉತ್ಫತ್ತಿ ಹೇಗಾಯ್ತು? ಗೊತ್ತಿಲ್ಲ! ಹೀಗೇ ಗೊತ್ತಿಲ್ಲದೇ ಇರುವ ಊಹೆಗೊಳಗಾಗಿರುವ ಸಂಗತಿಗಳೇ ಹಲವು. ಅದಕ್ಕಾಗಿ ನಮಗೆ ಅರಿವಿಗೆ ಬಾರದ್ದೆಲ್ಲವನ್ನೂ ಅಲ್ಲ ಎನ್ನಲಾಗಲೀ ಅದು ವಿಜ್ಞಾನವಲ್ಲ ಎನ್ನಲಾಗಲೀ ಆಗುವುದಿಲ್ಲ.

    ನಿಮ್ಮ ಪ್ರಶ್ನೆಗಳನ್ನು ಕಂಡಾಗ ಸ್ವಪ್ಲವಾದರೂ ಸ್ಪಂದಿಸುವ ಮನಸ್ಸಾಗುತ್ತದೆ; ಆದರೆ ಕಾಲಮಿತಿ ಇದೆಯಲ್ಲಾ ನಮ್ಮ ಜೀವನಕುರ್ಚಿಯೂ ಕೂಡ ಶಾಶ್ವತವೇ? ಕರ್ತವ್ಯವನ್ನು ಅಲ್ಲಗಳೆಯಲಾಗುವುದಿಲ್ಲವಾಗಿ ಸಾಧ್ಯವಾದಾಗ ಸಾಧ್ಯವಾದಷ್ಟು ನಿಮಗೆ ಉತ್ತರಿಸಿದ್ದೇನೆ ಎಂಬ ಅನಿಸಿಕೆ ನನ್ನದಾಗಿದೆ. ಹೆಚ್ಚಿನ ವಿವರಗಳಿಗೆ ದಯಮಾಡಿ ನಾನು ಮೇಲೆ ಹೆಸರಿಸಿದ ವ್ಯಕ್ತಿಗಳನ್ನು ಸಂಪರ್ಕಿಸಿ: ನಿಮಗೆ ಸಮರ್ಪಕ ಆಧಾರ ಸಹಿತ ಉತ್ತರ ಸಿಕ್ಕೇ ಸಿಗುತ್ತದೆ ಎಂದು ನಿಸ್ಸಂಶಯವಾಗಿ ಹೇಳುತ್ತಾ ಇಲ್ಲಿಗೆ ನಾನು ವಿರಮಿಸುತ್ತಿದ್ದೇನೆ, ದಯಮಾಡಿ ಬೇಸರಿಸಬೇಡಿ.

    ಉತ್ತರ
    • Balachandra
      ಏಪ್ರಿಲ್ 16 2012

      ನಾನು ಹೇಳಿದ “ಬ್ರಹ್ಮನ್’ ಪರಬ್ರಹ್ಮನ ಕುರಿತಾಗಿಯೇ ಹೇಳಿದ್ದು. ಪೌರಾಣಿಕ ಹಿನ್ನೆಲೆಯ ‘ಬ್ರಹ್ಮ’ನಲ್ಲ. ಆದ್ದರಿಂದಲೇ ‘ಅಕರ್ತ’, ‘ಅಭೋಕ್ತ’ ಎಂದು ಅದರ ಗುಣಲಕ್ಷಣಗಳನ್ನು ವಿವರಿಸಿದೆ. ಅಂದರೆ ಈ ಪರಬ್ರಹ್ಮ ಎಂಬುದು ‘changeless’. ಪರಿಣಾಮಕ್ಕೆ ಒಳಪಡದಂತಾದ್ದು. ಆದ್ದರಿಂದ ಕರ್ತ(cause) ಕೂಡ ಆಗಲಾರದು. ಆದರೆ ಪ್ರಥಮಬಾರಿಗೆ, ಮೊದಲನೆ ಕ್ರತಯುಗದಲ್ಲಿ ಈ ಲೋಕ, ಜೀವಿಗಳ ಸೃಷ್ಟಿ ಯಾಗುವದಕ್ಕೂ ಮೊದಲು ಪರಬ್ರಹ್ಮ ಮಾತ್ರ ಇದ್ದಿದ್ದ ನೆಂದಾಯಿತಲ್ಲವೇ?ಈ ಪರಬ್ರಹ್ಮ ‘ಅಕರ್ತ’ ನಾಗಿದ್ದಾಗ್ಯೂ ಹೇಗೆ ತಾನೇ ಸೃಷ್ಟಿಸಲು ಸಾಧ್ಯವೆಂಬುದು ನನ್ನ ಪ್ರಶ್ನೆಯಾಗಿತ್ತು. ಉಪನಿಷತ್ತುಗಳು ಮಾಯಾಕ್ರತ ಪರಬ್ರಹ್ಮನಾದ(ಉಪಾದಿಯುತ ಪರಬ್ರಹ್ಮ) ‘ಈಶ್ವರನು’ ಸೃಷ್ಟಿಕರ್ತ ಎನ್ನುತ್ತದೆ. ಅಂದರೆ ‘ಮಾಯೆ’ಯಿಂದ ಆವ್ರತನಾದ ಈಶ್ವರನು ಕರ್ತನೆನಿಸಿಕೊಳ್ಳುತ್ತಾನೆ. ಆದರೆ ಉಗಮಕ್ಕೆ, ಸೃಷ್ಟಿಯ ಅನೇಕತೆಗೆ ಕಾರಣವಾದರೆ ‘ಮಾಯೆ’ ಎಲ್ಲಿಂದ ಬಂತೆಂದು ಬಗೆ ಹರಿಯದ ವಿಷಯ. ಹಾಗಿದ್ದಾಗ ಮಾಯೆಯು ಪರಬ್ರಹ್ಮನ ಭಾಗವೇ ಎಂದುಕೊಂಡರೂ ಅಲ್ಲಿಯೂ ಸಂದಿಗ್ದ ಸ್ತಿತಿ ನಿಶ್ಚಿತ. ಮಾಯೆ ಪರಬ್ರಹ್ಮನಿಂದ ಹೊರತಾದ್ದು ಎಂದುಕೊಂಡರೂ ‘ಅದ್ವೈತದ’ ಅರ್ಥ ಕೆಡುತ್ತದೆ. ಅದನ್ನೇ ನಾನು ‘paradox’ ಎಂದು ಕರೆದದ್ದು. ಈ paradox ನ್ನು ಮೊದಲ ಬಾರಿಗೆ ನಾನು ಹೇಳಿದ್ದಲ್ಲ. ಶಂಕರರ ಕಾಲದಿಂದಲೂ ಈ paradox ಹಾಗೆಯೇ ಉಳಿದುಕೊಂಡು ಬಂದಿದೆ. ಬಹಳ ಜನ ಅದ್ವೈತಿಗಳು ಮಾಯೆ ಪರಬ್ರಹ್ಮನ ಶಕ್ತಿ ಎನ್ನುತ್ತಾರೆ. ಆದರೆ ಅದನ್ನು ಶಂಕರರೂ ಸೇರಿದಂತೆ ಅದನ್ನು ಬಹಳ ಮಂದಿ ಅದ್ವೈತರು ಒಪ್ಪಿಲ್ಲ. ಹಾಗೆ ಒಪ್ಪಿಕೊಂಡಲ್ಲಿ ‘ಪರಬ್ರಹ್ಮನ’ ಅರ್ಥವೇ ಕೆಡುತ್ತದೆ.
      {ಮೊದಲಾಗಿ ಆತನಿಂದ ಜನಿಸಿದ ಜೀವಿಗಳೋ ಇನ್ನೇನೋ ಕರ್ಮಫಲಗಳನ್ನು ಪಡೆದುಕೊಂಡೇ ಇದ್ದಿರಲೂ ಬಹುದು. ಉದಾಹರಣೆಗೆ ಪ್ರಳಯವಾಗಿ ಎಲ್ಲರೂ ಸತ್ತರೂ ಸನಾತನ ಧರ್ಮದ ಪ್ರಕಾರ ಆತ್ಮಕ್ಕೆ ಸಾವಿರುವುದಿಲ್ಲವಲ್ಲ!}
      ನಾನು ಕೇಳಿದ್ದು ಮೊದಲ ಬಾರಿಗೆ ಪ್ರಳಯವಾಗುವದಕ್ಕಿಂತಲೂ ಮೊದಲು. ಅಂದರೆ ಮೊದಲನೇ ಸೈಕ್ಲಿಂಗ್ ನಲ್ಲಿ. ಅಂದರೆ ಮೊದಲ ಬಾರಿಗೆ ‘ಏಕ’ ಎಂಬುದು ‘ಅನೇಕವಾಗುವ’ ಸಂದರ್ಭದಲ್ಲಿ, ಮೊದಲ ಬಾರಿಗೆ ಜೀವಿಗಳ ಉಗಮವಾಗುವಾಗ. ಆಗ ಪ್ರತಿಯೊಂದು ಜೀವಿಗೂ ಹಿಂದಿನ ಜನ್ಮ ಎಂಬ ಪ್ರಶ್ನೆಯೇ ಇರುವದಿಲ್ಲ. ಆಗ ಪ್ರತಿಯೊಂದು ಜೀವಿಯೂ ಮೊದಲ ಬಾರಿಗೆ ಜನಿಸಿರುವದರಿಂದ ಹಿಂದಿನ ಜನ್ಮ ಅದಕ್ಕಿರುವದೆ ಇಲ್ಲವಲ್ಲ. ಆಗ ಪ್ರತಿಯೊಂದು ಜೀವಿಯ ‘individuality’ ಯಾವ ಆಧಾರದ ಮೇಲೆ ರೂಪುಗೊಳ್ಳುತ್ತದೆ ಎಂಬುದು ನನ್ನ ಪ್ರಶ್ನೆಯಾಗಿತ್ತು.
      ಇನ್ನು ನೀವು ಹೇಳಿದಂತೆ ಬಹಳಷ್ಟು ವಿದ್ವಾನ್ ರೊಡನೆ ಚರ್ಚಿಸಲು ಪ್ರಯಿತ್ನಿಸುತ್ತೇನೆ. ಆದ್ರೆ ನಮ್ಮ ಸುತ್ತಲಿನ ಜಗತ್ತು ‘ಮಾಯೆ’ ಎಂದ ತಕ್ಷಣ ಅದು ಸಂಪೂರ್ಣ ಸುಳ್ಳು ಎಂದಲ್ಲ. ‘ಬದಲಾಗುವ ಸತ್ಯ'(relative truth) ಎಂದರ್ಥ. ಶ್ರೀಯುತ ರಮಣರೆ ಹೇಳಿಲ್ಲವೇ, ‘ಮಾಯೆಯು ಪಾರಮಾರ್ಥಿಕ ಸತ್ಯದತ್ತ ಕೊಂಡೊಯ್ಯುತ್ತದೆ’ ಎಂದು?

      ಉತ್ತರ
      • ಏಪ್ರಿಲ್ 16 2012

        ಸ್ಥೂಲವಾಗಿ ನಾನು ನಿಮಗಿದನ್ನು ಆಗಲೇ ಹೇಳಿಯೇ ಇದ್ದೇನೆ. ಆದರೂ ಮತ್ತೆ ಮತ್ತೆ ಕೆದಕುವ ಸಂಶಯಗಳಿಗೆ ದಯವಿಟ್ಟು ಹಿರಿಯ ವಿದ್ವಾಂಸರನ್ನು ಸಂಪರ್ಕಿಸಿ. ಮೊದಲನೇ ಸೈಕ್ಲಿಂಗ್ ಆರಂಭಗೊಳ್ಳುವುದೇ ಪರಬ್ರಹ್ಮನ ಇಚ್ಛಾಶಕ್ತಿಯಿಂದ. ಪರಬ್ರಹ್ಮನ ಭಾಗಗಳೇ ಜೀವಿಗಳಾದವು=ಜೀವಾತ್ಮಗಳಾಗಿ ಹೊರನಡೆದವು. ಹೊಸ ವ್ಯವಸ್ಥೆಯ ರೂಪುಗೊಂಡಿದ್ದು ಅಲ್ಲಿಯೇ. ಆಗ ಕರ್ಮಾಕರ್ಮಗಳ ವಿವೇಚನೆ ಬರುವುದಿಲ್ಲ. ಅಲ್ಲಿ ಪರಬ್ರಹ್ಮನ ಸಂಕಲ್ಪ ಅದಾಗಿರುತ್ತದೆ ಅಷ್ಟೇ. ನಂತರದ ಸೈಕಲ್ ಗಳಲ್ಲಿ ಕರ್ಮಬಂಧನ ಆರಂಭಗೊಂಡಿತು. ನೀವೇ ವಿಚಾರಮಾಡಿ: ಯಾಕಾಗಿ ಭಗವಂತ ಹಾಗೆ ಸೃಷ್ಟಿ ಮಾಡುತ್ತಾ ನಡೆದ? ಇದನ್ನು ನಾನೂ ಹುಡುಕುತ್ತಿದ್ದೇನೆ; ಕೆಲವರನ್ನು ಕೇಳಿ ತಿಳಿಯಬೇಕಾಗಿದೆ. ಸೃಷ್ಟಿಯ ನಿಯಾಮಕನ ಸೂತ್ರಗಳನ್ನು ಅರಿಯುವುದು ಕಷ್ಟ. ಅದಕ್ಕೇ ಬ್ರಹ್ಮಸೂತ್ರ ಎಂದು ಕರೆಯುತ್ತಾರಲ್ಲಾ ? ಪರಬ್ರಹ್ಮ ಪರಿಣಾಮಕ್ಕೆ ಒಳಪಡದೇ ಇದ್ದರೂ ತನ್ನ ಇಚ್ಛಾಶಕ್ತಿಯಿಂದ ತನ್ನಿಂದಲೇ ಹಲವನ್ನು ಸೃಜಿಸಿತು.

        ಆಕಾಶಾತ್ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ |
        ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ ||

        ಎಂದಿದ್ದಾನಲ್ಲವೇ ? ಶಿವನೂ ಅವನೇ ಕೇಶವನೂ ಅವನೇ ಆಗಿರುವಾಗ ಅಲ್ಲಿ ಕೋರ್ ಕಮಿಟಿ ಎಂಬುದು ನೆಪಮಾತ್ರಕ್ಕಷ್ಟೇ ಎಂದರ್ಥ! ಮಾಯೆ ಪರಬ್ರಹ್ಮನ ಭಾಗವೇ ಆಗಿದೆ! ಪರಬ್ರಹ್ಮ ಎಂಬ ಶಕ್ತಿ ಈ ವಿಶ್ವವನ್ನು [ಬರೇ ನಮ್ಮ ಭೂಮಿಯಲ್ಲ, ಬ್ರಹ್ಮಾಂಡವನ್ನು] ಧರಿಸಿಯೂ ಮತ್ತು ಅದರೊಳಗೇ ಹೊಕ್ಕೂ ನಿಂತಿದೆ! ಇದನ್ನೇ ವಿಶ್ವಂಭರ ಸ್ಥಿತಿ ಎನ್ನುತ್ತೇವೆ. ಮಹಾಭಾರತದಲ್ಲಿ ಪೂತನಿಯನ್ನು ಕೊಂದ ಶ್ರೀಕೃಷ್ಣ, ಅಮ್ಮನಿಗೆ ಹೆದರುತ್ತಿದ್ದ ಏಕೆ ? ಬಾಯಿಯನ್ನು ತೆರೆದು [ಅಮ್ಮನನ್ನೇ ಹೆದರಿಸುವಂತೇ] ಮೂಜಗವನ್ನೇ ತೋರಿಸಿದ್ದೇಕೆ? ಮನುಷ್ಯನಾಗಿ ಹುಟ್ಟಿದ ಭಗವಂತ ತನ್ನಲ್ಲಿ ಶಕ್ತಿ ಇದೆ ಎಂದು ಕಂಡುಕೊಳ್ಳುವುದು ಯಾವಾಗ? ಬೇಕಷ್ಟು ಶಕ್ತಿಯಿದ್ದೂ ಕುಳಿತಲ್ಲಿಂದಲೇ ರಕ್ಕಸ ಶಕ್ತಿ[ ಹಾಗೆ ನೋಡಿದರೆ ಅದೂ ಆತನ ಭಾಗವೇ!]ಯನ್ನು ದಮನಿಸಲಾಗುತ್ತಿರಲಿಲ್ಲವೇ? ರಾಮಾಯಣದಲ್ಲಿ ಹನುಮ-ರಾಮರ ಭೇಟಿ ರಾಮ ಇನ್ನೂ ಚಿಕ್ಕ ಹುಡುಗನಾಗಿದ್ದಾಗ ಅಯೋಧ್ಯೆಯಲ್ಲೇ ಆಗಿತ್ತು. ಆಡುವ ಮಂಗವಾಗಿ ಹನುಮ ಅಲ್ಲಿಗೆ ಬಂದಿದ್ದ; ರಾಮನ ಆಡುವ ಸಂಗಾತಿಯಾಗಿದ್ದ! ಆಡುವ ಮಂಗವನ್ನು ಕರೆತಂದವನು ಆಡಿಸುವವನ ವೇಷದ ಪರಶಿವ! ಹನುಮನೂ ಪರಶಿವನೇ!! ಕುಣಿಯುವವನೂ ಕುಣಿಸುವವನೂ ಪರಶಿವನೇ ಆಗಿ ಬಾಲರಾಮನ ಸಂತಸಕ್ಕಾಗಿ ಅಯೋಧ್ಯೆಗೆ ಹನುಮ ಬಂದಿದ್ದ. ವಿಶ್ವಾಮಿತ್ರರು ಕಾಡಿಗೆ ಕರೆದೊಯ್ಯಲು ಬಂದಾಗ, ಸಭೆಯಿಂದ ಪಕ್ಕಕ್ಕೆ ಕರೆದು ಗೌಪ್ಯವಾಗಿ ಹನುಮನಿಗೆ ರಾಮ ಹೇಳುತ್ತಾನೆ”ಹನುಮಾ ನಿನ್ನ ಅಂತರಂಗವನ್ನು ಬಲ್ಲೆ, ನಾನು ಋಷಿಗಳೊಡನೆ ತೆರಳುತ್ತಿರುವುದಕ್ಕೆ ಬೇಸರಿಸಬೇಡ. ತಡಮಾಡದೇ ಋಷ್ಯಮೂಕ ಪರ್ವತದೆಡೆಗೆ ನಡೆದು ಸುಗ್ರೀವನನ್ನು ಸಂಪರ್ಕಿಸು. ಮುಂದೊಂದು ದಿನ ಕಾಲ ಕೂಡಿಬಂದಾಗ ನನಗೆ ವಾನರ ಸೇನೆಯ ಅಗತ್ಯ ಬೀಳುತ್ತದೆ. ಅಲ್ಲಿಯವರೆಗೆ ಎದುರಾಗುವ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸಿಕೊಳ್ಳುತ್ತಾ ನಾನು ಋಷ್ಯಮೂಕದೆಡೆಗೆ ಬರುತ್ತೇನೆ. ಪಂಪಾ ಸರೋವರದ ತೀರದಲ್ಲಿ ನಾವು ಮರಳಿ ಭೇಟಿಯಾಗೋಣ. ರಾವಣ ವಾಲಿಯನ್ನು ಸೇರಿ ಸುಗ್ರೀವನಿಗೆ ತೊಂದರೆನೀಡುತ್ತಿದ್ದಾನೆ. ವಾಲಿಯನ್ನೂ ರಾವಣನನ್ನೂ ವಧಿಸಿ ನನ್ನ ಅವತಾರದ ಕೆಲಸವನ್ನು ಪೂರ್ಣಗೊಳಿಸುತ್ತೇನೆ.

        ಅಂದರೆ ಬಾಲರಾಮನಿಗೆ ಮುಂದೆ ನಡೆಯುವ ಎಲ್ಲಾ ಘಟನೆಗಳ ಬಗ್ಗೆ ತಿಳಿದೇ ಇತ್ತು ಎಂದಾಯ್ತು! ರಾಮ ಯಾರು ಎಂಬುದು ಹನುಮನಿಗೆ ಗೊತ್ತಿತ್ತು, ಹನುಮ ಯಾರೆಂಬುದು ರಾಮನಿಗೆ ಗೊತ್ತಿತ್ತು! ಈ ಎರಡೂ ಶಕ್ತಿಗಳ ಮೂಲ ಒಂದೇ ಎಂಬುದು ನಮಗೆ ತೋರಿಬರುತ್ತದಲ್ಲವೇ? ಹಾಗೆಯೇ ಪರಬ್ರಹ್ಮನನ್ನೂ ಅವನು ಮಾಯೆಯೋ ಅಥವಾ ಮಾಯೆಯಿಂದ ಹೊರಗೋ ಎಂದು ಅರಿಯಲೆಂದೇ ನಾವು ನಮ್ಮ ’ಮಟ್ಟ’ವನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಟಿ.ಸಿ.ಎಚ್. ಮುಗಿಸಿದವರು ಪ್ರಾಥಮಿಕ ಶಾಲೆಗೆ ಶಿಕ್ಷರಾಗಬಹುದು, ಬಿ.ಎಡ್ ಮಾಡಿದವರು ಹೈಸ್ಕೂಲಿಗೆ ಆಗಬಹುದು ಆದರೆ ಉಪನ್ಯಾಸಕರಾಗಲು ವಿದ್ವತ್ ಪದವಿ[ಮಾಸ್ಟರ್ ಡಿಗ್ರೀ] ಪಡೆದಿರಬೇಕು ಅಲ್ಲವೇ? ಅದರಂತೇ ಪರಬ್ರಹ್ಮ ವಿಷಯವನ್ನು ನಾವು ಪರಿಪೂರ್ಣ ಅರಿಯುವ ಹಂತದ ವಿದ್ಯೆ ನಮಗೆ ಲಭ್ಯವಾಗಿಲ್ಲ; ನಾವು ಸ-ನ್ಯಾಸ ಎಲ್ಲವನ್ನೂ ತ್ಯಜಿಸಿ ನಮ್ಮನ್ನೇ ಅರ್ಪಿಸಿಕೊಂಡು ತಲ್ಲೀನವಾದರೆ ಆಗ ಸಮಾಧಿ ಸ್ಥಿತಿಯಲ್ಲಿ ಅದು ಅರಿವಿಗೆ ಬರುತ್ತದೆ ಎಂದು ಮನೀಷಿಗಳೂ ಸಾಧಕರೂ ತಿಳಿಸಿದ್ದಾರೆ.

        ನಿಮ್ಮ ಪ್ರಶ್ನೆ ಪುರಂದರ ದಾಸರನ್ನೂ ಕಾಡಿತ್ತು! ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ? ನೀ ದೇಹದೊಳಗೋ ನಿನ್ನೊಳು ದೇಹವೋ? –ಎಂಬ ಹಾಡು ಹುಟ್ಟಿದ್ದೇ ಈ ಸ್ಥಿತಿಯಲ್ಲಿ! ಅಂದಹಾಗೇ ನಾನು ಕೇಳಿದ ಪ್ರಶ್ನೆಯ ಸನಿಹಕ್ಕೆ ಬಂದಿದ್ದೇವೆ: ಮೊಟ್ಟೆ ಮೊದಲೋ ಕೋಳಿಮೊದಲೋ ..ಬೀಜ ಮೊದಲೋ ಸಸ್ಯಮೊದಲೋ ಅಲ್ಲವೇ ? ಮಾಯೆ ಪರಬ್ರಹ್ಮನ ಭಾಗವಾಗಿಯೂ ಮತ್ತು ಮಾಯೆಯ ಭಾಗ ಪರಬ್ರಹ್ಮವಾಗಿಯೂ ಇರುವಂತಹ ಸ್ಥಿತಿ ಇದು-ಗಹನವಾಗಿದೆ, ಗಂಭೀರವಾಗಿದೆ. ಈಗ ಅದ್ವೈತದಾರ್ಥವೂ ಕೆಡುವುದಿಲ್ಲ; ಪರಬ್ರಹ್ಮನ ಸ್ಥಾನಪಲ್ಲಟವೂ ಆಗುವುದಿಲ್ಲ.

        ಪುನರಪಿ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ನಡೆಸಿದ್ದೇನೆ. ಕೇವಲ ಒಂದು ಚಿಕ್ಕ ಲೇಖನ ಇಷ್ಟು ಉದ್ದಕ್ಕೆ ಎಳೆಯಿತು ಎಂದರೆ ನಮ್ಮ ಇಂದಿನ ಯುವಕರಿಗೆ ಈ ಚಿಂತನೆಯನ್ನು ಹಚ್ಚಿಬಿಟ್ಟರೆ ಸತ್ಯಾಸತ್ಯತೆಯನ್ನು ಅವರೂ ಮನಗಂಡಾರು, ಭಾರತೀಯ ಸಂಸ್ಕೃತಿಯನ್ನು ಉಳಿಸಿ, ಬಳಸಿ ಬಾಳಿಯಾರು ಎಂಬುದು ನನ್ನ ಅನಿಸಿಕೆಯಾಗಿದೆ. ಇನ್ನೂ ನಿಮ್ಮಲ್ಲಿ ಸಂದೇಹಗಳಿದ್ದಲ್ಲಿ ಮೇಲೆ ಹೇಳಿದ ಘನವಿದ್ವಾಂಸರನ್ನು ಸಂಪರ್ಕಿಸಲು ವಿನಂತಿಸುತ್ತಿದ್ದೇನೆ.

        ಉತ್ತರ
        • Balachandra
          ಏಪ್ರಿಲ್ 17 2012

          {ಮೊದಲನೇ ಸೈಕ್ಲಿಂಗ್ ಆರಂಭಗೊಳ್ಳುವುದೇ ಪರಬ್ರಹ್ಮನ ಇಚ್ಛಾಶಕ್ತಿಯಿಂದ. ಪರಬ್ರಹ್ಮನ ಭಾಗಗಳೇ ಜೀವಿಗಳಾದವು=ಜೀವಾತ್ಮಗಳಾಗಿ ಹೊರನಡೆದವು. ಹೊಸ ವ್ಯವಸ್ಥೆಯ ರೂಪುಗೊಂಡಿದ್ದು ಅಲ್ಲಿಯೇ. ಆಗ ಕರ್ಮಾಕರ್ಮಗಳ ವಿವೇಚನೆ ಬರುವುದಿಲ್ಲ. ಅಲ್ಲಿ ಪರಬ್ರಹ್ಮನ ಸಂಕಲ್ಪ ಅದಾಗಿರುತ್ತದೆ ಅಷ್ಟೇ.}
          ಪರಬ್ರಹ್ಮನಿಗೆ ಯಾವ ಇಚ್ಚೆ, ಸಂಕಲ್ಪವೂ ಇರುವದಿಲ್ಲ. ಯಾಕೆಂದರೆ ಮೊದಲೇ ಹೇಳಿದಂತೆ ಪರಬ್ರಹ್ಮ ಎಂಬುದು ಸಾಮಾನ್ಯ ಮನುಷ್ಯನಂತೆ ಭಾವನೆಗೆ ಒಳಗಾಗದ ಭಾವನಾತೀತ. ಆದ್ದರಿಂದಲೇ ಆತನು ಬಯಕೆ, ರೋಷ, ಮೋಹ ಇದೆಲ್ಲವುಗಳನ್ನು ಮೀರಿದ ‘ಸಚ್ಚಿದಾನಂದ'(Total bliss) ಎನ್ನುತ್ತದೆ ಉಪನಿಷತ್ತುಗಳು. ಇನ್ನು ಜೀವ ವ್ಯವಸ್ತೆಯ ‘ಕರ್ತ’ ಮೊದಲೇ ಹೇಳಿದಂತೆ ‘ಈಶ್ವರ'(ಮಾಯಾಕೃತ ಪರಬ್ರಹ್ಮ) ಎಂದೂ ಹೇಳುತ್ತದೆ. ಆದರೆ ‘ಮಾಯೆ’ ಎನ್ನುವದು ಕಗ್ಗಂಟಾಗಿಯೇ ಉಳಿಯುತ್ತದೆ. ಅದು ಪರಬ್ರಹ್ಮನ ಭಾಗವೇ ಎಂದೂ ಕೂಡ ಹೇಳಲಾಗದು ಎಂದು ಅದ್ವೈತಿಗರಾದ ಡಿ.ಕೃಷ್ಣ ಐಯ್ಯರ್ ಅವರೇ ಹೇಳಿದ್ದಾರೆ. ಅವರ ಮಾತುಗಳು ಈ ರೀತಿಯಾಗಿವೆ. “It is also not possible to say whether Maya is a part of Brahman or is separate from Brahman. If we say that Maya is a part of Brahman, we are faced with two logical problems.
          1. One problem is that Brahman is part-less and Maya cannot be accepted to be even a part of Brahman .
          2. The other problem is that when a part undergoes change, the whole will also undergo change. Maya does change from the unevolved condition to the evolved differentiated condition of names and forms. So, Brahman will also have to undergo change. This cannot be, because Brahman is changeless. So, we say that Maya is “anirvacaniya” (i.e., undefinable)”.
          ಅದೇನೇ ಇರಲಿ ಇದೆಲ್ಲ ಯಾಕೆ ಹೇಳಬೇಕಾಯಿತೆಂದರೆ ಸಂಪೂರ್ಣ ಸತ್ಯವನ್ನು ‘ಇದಮಿತ್ಥಂ’ ಎಂದು ಯಾವುದೂ ಕೂಡ ಹೇಳಲಾರದು. ಅದನ್ನು ನಾವು ಕಂಡುಕೊಳ್ಳಬೆಕಷ್ಟೇ. ಮಾರ್ಗ ಬೇರೆ-ಬೇರೆಯದಾಗಿದ್ದರೂ dedication ಇದ್ದಲ್ಲಿ ಅದು ಲಭಿಸಬಹುದು.
          ಇನ್ನು ಜಗತ್ತು ‘ಮಾಯೆ’ ನಿಜ. ಆದರೆ ಸ್ವತಃ ಈ ಮಾಯಾ ಲೋಕದಲ್ಲಿ ಬದುಕಬೇಕಾದರೆ ಮಾಯೆಯನ್ನು ಅರ್ಥೈಸಿಕೊಳ್ಳಲೂ ಬೇಕು.
          ಉದಾರಣೆಗೆ ಗುರುಗಳು ಶಿಷ್ಯರಿಗೆ ಪಾಠ ಮಾಡುತ್ತಿರುತ್ತಾರೆ. ಈ ಲೋಕವೆಲ್ಲ ‘ಮಾಯೆ’ ಎಂಬುದಾಗಿ ತಿಳಿಸಿಕೊಡುತ್ತಿರುತ್ತಾರೆ. ಅಷ್ಟರಲ್ಲಿ ಒಂದು ‘ಸಿಂಹ’ ಪ್ರತ್ಯಕ್ಷವಾಗುತ್ತದೆ. ಆಗ ಗುರುಗಳು ಓಟಕ್ಕಿತ್ತುತ್ತಾರೆ. ಆಗ ಶಿಷ್ಯರಿಗೆ ಗಲಿಬಿಲಿಯಾಗಿ ಕೇಳುತ್ತಾರೆ. “ಗುರುಗಳೇ ಈ ಸಿಂಹ ಮಾಯೇಯಲ್ಲವೇ?ಮತ್ಯಾಕೆ ಓಡುತ್ತೀರಿ?” ಆಗ ಗುರುಗಳು ಉತ್ತರಿಸುತ್ತಾರೆ.”ಶಿಷ್ಯರೇ ಸಿಂಹವೂ ಮಾಯೆಯೇ, ನಾನು ಓಡುತ್ತಿರುವದೂ ಮಾಯೆಯೇ” ಎಂದು ಹೇಳಿ ಓಡಿ ಮಾಯವಾಗುತ್ತಾರೆ.
          ಇದರ ಒಟ್ಟಾರೆ ಅರ್ಥವನ್ನು ನಾನು ಹೀಗೆ ಹೇಳಬಯಸುತ್ತೇನೆ. ಈ ವ್ಯಾವಹಾರಿಕ ಸತ್ಯ(ತರ್ಕ,ವಿಜ್ಞಾನ), ದಿನ ನಿತ್ಯದ ಕರ್ಮಗಳಲ್ಲಿ ಅವಶ್ಯವಿದೆ. ಈ ತರ್ಕ ಎಂಬುದಿಲ್ಲದಿದ್ದರೆ ಯಾವುದನ್ನೂ ಕ್ರಮಬದ್ಧವಾಗಿ ಅಭ್ಯಸಿಸಲು, ಜೀವನ ನಡೆಸಲು ಸಾಧ್ಯವಾಗದು. ಇನ್ನು ವಿಕಾಸವಾದದ ಬಗ್ಗೆ ಬಂದರೆ ಈಗಾಗಲೇ ನಾನು Escherichia coli ಎಂಬ ಬ್ಯಾಕ್ಟೀರಿಯ ಹೇಗೆ 31500 generation ಬಳಿಕ ಬೇರೆಯ specimen ಆಗಿ ವಿಕಾಸ ಹೊಂದಿತೆಂದು ಕಣ್ಣುಮುಂದೆಯೇ ವೀಕ್ಷಿಸಿದ ಬಗ್ಗೆ ಹೇಳಿದ್ದೆ. ಒಂದು ವೇಳೆ ವಿಕಾಸವಾದ ಸುಳ್ಳು ಎಂದಾಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಅಲ್ಲವೇ?
          ಒಂದು ವೇಳೆ ಇಲ್ಲಿ ‘ವಿಕಾಸವಾದ’ ಸಂಪೂರ್ಣ ಸುಳ್ಳು ಎಂದು ಹೇಳಲು ನೂರಾರು ಕಾರಣಗಳಿರಬಹುದು. ಆದರೆ ‘ಸತ್ಯ’ ಯಾವುದೆಂದು ಮಂಡಿಸಲು ಅಧ್ಯಾತ್ಮಗಳ ಮೂಲಕವೂ ತಾರ್ಕಿಕವಾಗಿ ಅಸಾಧ್ಯ ಎಂದು ನಾವೀಗಾಗಲೇ ತಿಳಿದುಕೊಂಡಿದ್ದೇವೆ. ಇನ್ನು ಆಧ್ಯಾತ್ಮ ವೆಂಬುದು ತರ್ಕಕ್ಕೆ ಮೀರುದುದಾಗಿದೆ ಎಂದು ನೀವು ಹೇಳಿದರೆ ‘ಇದೇ ಸರಿ, ಅದು ತಪ್ಪು’ ಎಂದೂ ತರ್ಕಿಸಲಾಗದು. ಇನ್ನು ಈ ವಿಷಯದಲ್ಲಿ ಮತ್ತೆ ತರ್ಕಿಸಿ ಪ್ರಯೋಜನವಿಲ್ಲ ಎಂದು ನಾನೂ ಇಲ್ಲಿಗೆ ವಿರಮಿಸುತ್ತಿದ್ದೇನೆ.

          ಉತ್ತರ
          • ಏಪ್ರಿಲ್ 17 2012

            ಬಾಲಚಂದ್ರರೇ, ನೀವು ತರ್ಕದೊಳಗೇ ಎಲ್ಲವೂ ಬರಬೇಕೆಂದು ನಿರೀಕ್ಷಿಸುತ್ತೀರಿ. ತರ್ಕವೇ ಎಲ್ಲವೂ ಅಲ್ಲ. ನಾನು ನಿಮಗೆ ಗಣಿತದ ಉದಾಹರಣೆ ಕೊಟ್ಟಿದ್ದೇನೆ. ನಮ್ಮ ಲೌಕಿಕ ಶರೀರ ಜಾಗೃತ್, ಸುಷುಪ್ತಿ ಮತ್ತು ಸ್ವಪ್ನ ಎಂಬ ಅವಸ್ಥಾತ್ರಯಗಳನ್ನು ಅನುಭವಿಸುತ್ತಿರುತ್ತದೆ. ಸ್ವಪ್ನದಲ್ಲಿ ನಾವು ಅನುಭವಿಸಿದ್ದು ಸುಳ್ಳೇ? ಅಲ್ಲ, ಅದು ಆಗ ನಿಜವೇ ಆಗಿರುತ್ತದೆ, ಆದರೆ ಎಚ್ಚರಗೊಂಡಾಗ ಅದು ಭ್ರಾಂತಿ ಎಂಬುದರ ಅರಿವಾಗುತ್ತದೆ. ಹಾಗಾದರೆ ಸ್ವಪ್ನ ಮಿಥ್ಯೆ ಎಂಬ ಅರಿವು ನಾವು ಎಚ್ಚರಗೊಂಡಾಗ ಬರುತ್ತದೆ. ಅದೇ ರೀತಿ ನಾವು ಜಾಗೃತರಾದಾಗ ಅಂದರೆ ನಮ್ಮೊಳಗಿನ ದಿವ್ಯ ಚಿತನ್ಯ ಈ ಲೋಕದ ಇತಿಮಿತಿಗಳನ್ನು ಮೀರಿನಿಂತಾಗ ಈ ಲೋಕವೇ ಒಂದು ಭ್ರಾಂತಿ ಅಥವಾ ಮಿಥ್ಯೆ ಎಂಬುದರ ಅರಿವಾಗುತ್ತದೆ! ಅಲ್ಲಿಯವರೆಗೂ ನೀವು ಹೇಳಿದ್ದೆಲ್ಲಾ ಸತ್ಯವೇ: ಸಿಂಹವೂ ಹುಲಿಯೂ ಹಾವು ಕರಡಿ ಮುಂಗುಸಿಗಳೂ ಬರುತ್ತವೆ ಗುರುಗಳೂ ಶಿಷ್ಯರೂ ಓಟಕೀಳುತ್ತಾರೆ! ಇದನ್ನೆಲ್ಲಾ ಮೀರಿ ನೋಡುವ ಮಟ್ಟಕ್ಕೆ ನಾವು ಬೆಳೆಯಬೇಕಾಗಿದೆ; ಆಗ ಮಾತ್ರ ತರ್ಕದ ಮಿತಿ ಇಷ್ಟೇ ಎಂಬುದರ ಅರಿವು ಮೂಡುತ್ತದೆ.

            ಇನ್ನು ಅಯ್ಯರ್ ಅವರ ದೃಷ್ಟಿಗೆ ಗೋಚರವಾಗಿದ್ದನ್ನು ಹೇಳಿದ್ದಾರೆ ಎಂದಮಾತ್ರಕ್ಕೆ ಅವರು ಹೇಳಿದ್ದೇ ಪರಮೋಚ್ಚ ಎಂದರ್ಥವಲ್ಲ, ಮಾಯೆಯ ಬಗೆಗೆ ನಿಮಗೆ ಆಗಲೇ ಹೇಳಿದ್ದೇನೆ. ಮತ್ತೆ ಹೇಳಿದರೆ ಪುನರುಕ್ತಿಯಾಗುತ್ತದೆ. ಪರಬ್ರಹ್ಮನಲ್ಲಿಯೇ ಇರುವ ಮಾಯೆ ಮೂರು ರೂಪಗಳನ್ನು ತಳೆದು ಸೃಷ್ಟಿ, ಸ್ಥಿತಿ, ಲಯ ಗಳಿಗೆ ಕರ್ತೃವೆನಿಸುತ್ತದೆ. ಮಾಯೆ ಎಂದರೆ ಮಿಥ್ಯೆ ಎಂದರ್ಥವಲ್ಲ! ಇಲ್ಲಿ ಅದಕ್ಕೆ ಅರ್ಥವ್ಯಾಪ್ತಿ ಬೇರೇನೆ ಇರುತ್ತದೆ. ನಮ್ಮ ಜನಸಾಮಾನ್ಯರ ಪ್ರಾಪಂಚಿಕ ವ್ಯವಹಾರದಲ್ಲಿ ಮಾಯೆ ಅಂದರೆ ಮಾಯವಾಗುವುದು, ನಶಿಸುವುದು, ಜಾದು, ಕಣ್ಕಟ್ಟು, ಇಂದ್ರಜಾಲ ಈ ರೀತಿ ವಿವಿಧ ಅರ್ಥಗಳಿವೆ, ಆದರೆ ಪರಾವಸ್ತುವಿನ ಬಗ್ಗೆ ನಾವು ಚಿಂತನೆ ನಡೆಸುವಾಗ ಕಾಣುವ ಮಾಯೆ ಎಂದರೆ ಸ್ಥೂಲವಾಗಿ ಶಕ್ತಿ ಎಂದೇ ಅರ್ಥ. ಜಗವನ್ನಾಳುವ ನಿರಾಕಾರ ಶಕ್ತಿ ಹೆಣ್ಣೂ ಅಲ್ಲ ಗಂಡೂ ಅಲ್ಲದ, ಆಕಾರ-ವಿಕಾರಗಳಿಲ್ಲದ ಶಕ್ತಿಯಾಗಿರುವುದರಿಂದ ಅದನ್ನು ಮಾಯೆ ಎಂದಿದ್ದಾರೆ. ಅದನ್ನೇ ಕೆಲವೊಮ್ಮೆ ದೇವಿ ಅಥವಾ ಅಮ್ಮನವರಲ್ಲಿ ಅಮ್ಮನ ರೂಪವನ್ನು ಕಾಣುತ್ತಾ ನಾವು ’ಮಹಾಮಾಯೆ’ ಎನ್ನುತ್ತೇವೆ. ಇದಮಿತ್ಥಂ ಎಂಬುದು ತಾರ್ಕಿಕವಾಗಿ ಸಿದ್ಧವಾಗಿಲ್ಲ ಎಂತ ನಿಮಗನ್ನಿಸಿದರೂ ನಾವು ನಿಮ್ಮೆಲ್ಲರೊಡನೆ ಹಂಚಿಕೊಂಡ ಈ ಎಲ್ಲಾ ಮಾಹಿತಿಗಳನ್ನು ಕರುಣಿಸಿದ ಸಾಧಕರಿಗೆ, ಸಿದ್ಧರಿಗೆ ಅದು ಗೋಚರವಾದ ವಿಷಯವಾಗಿದೆ. ನಮಗೆ ಆತ್ಮಜ್ಞಾನವೇ ಆಗುವುದಿಲ್ಲ ನಾವು ಮಾಯೆಯ ಬಗ್ಗೆ ತರ್ಕಿಸುವುದಾಗಲೀ ಮಂಡಿಸುವುದಾಗಲೀ ದೂರದ ಮಾತಾಗುತ್ತದೆ. ಮೌಂಟ ಎವರೆಷ್ಟ್ ಏರಿದವರಿಗೆ ಅಲ್ಲಿಂದ ಕಾಣುವ ದೃಶ್ಯಗಳ ಅರಿವಿರಲು ಸಾಧ್ಯವೇ ಹೊರತು ಗಣಿತದಲ್ಲೋ ತರ್ಕದಲ್ಲೋ ಅದನ್ನು ನಿರ್ಧರಿಸಲಾಗುವುದಿಲ್ಲವಲ್ಲ!

            ಈ ಲೋಕದಲ್ಲಿ ಇರುವ ವರೆಗೆ ಲೌಕಿಕವಾದ ತರ್ಕ, ವ್ಯಾಕರಣ, ಗೋತ್ರ-ಸೂತ್ರ ಎಲ್ಲವೂ ನಮಗೆ ಬಾಧ್ಯವೇ. ಆದರೆ ವಿಕಾಸವಾದ ಎಂಬುದು ಒಂದು ತರ್ಕವಷ್ಟೇ ಬಿಟ್ಟರೆ ನಿಷ್ಕರ್ಷೆಯಲ್ಲ, ನಿರ್ಧರಿತ ವಿಷಯವಲ್ಲ! ನೀವು ಕೇವಲ ವಿಜ್ಞಾನದ ದೃಷ್ಟಿಯಿಂದ ಆ ಕಡೆಗೇ ವಾಲಿದರೂ ನಾನು ಸಮಷ್ಟಿಯಿಂದ ಎಲ್ಲವನ್ನೂ ಗಮನಿಸುತ್ತೇನೆ. ಆದಕ್ಕೇ ಆರಂಭದಲ್ಲೇ ಹೇಳಿದ್ದೇನೆ: ಈ ಲೇಖನ ಅದಿಭೌತಿಕ, ಆಧ್ಯಾತ್ಮಿಕ ಮತ್ತು ಐತಿಹಾಸಿಕ[ವೈಜ್ಞಾನಿಕ] ಈ ಮೂರೂ ಆಯಾಮಗಳನ್ನು ಆಧರಿಸಿ ಬರೆದಿದ್ದಿರುತ್ತದೆ. ಇದರ ವ್ಯಾಪ್ತಿಯ ಅರಿವು ನಿಮಗೆ ಬಾರದೇ ಇದ್ದ ಮಾತ್ರಕ್ಕೆ ಲೇಖನ ಪೊಳ್ಳಾಗುವುದಿಲ್ಲ; ಲೇಖನದಲ್ಲಿ ಇರುವುದೆಲ್ಲಾ ಲೋಪಗಳೇ ಎಂದಾಗುವುದಿಲ್ಲ. ನಿಮ್ಮ ಓದಿನ ಹರವು ನೋಡುವ ಜ್ಞಾನಚಕ್ಷು ತೆರೆದುಕೊಂಡರೆ ನೀವೊಂದೇ ಅಲ್ಲ ಯಾರಿಗೇ ಆಗಲಿ ಆಗ ನಾನು ಹೇಳಿದ್ದರ ಅರಿವು ಉಂಟಾಗುತ್ತದೆ; ಅಲ್ಲಿಯವರೆಗೆ ಇದು ಸುಳ್ಳಾಗಿಯೂ ಠೊಳ್ಳಾಗಿಯೂ ಕಾಣಿಸುತ್ತದೆ ಎನ್ನುವುದರೊಂದಿಗೆ ನನ್ನ ಕಡೆಯಿಂದ ವಾದ ಸರಣಿಗೆ ಸಂಪೂರ್ಣ ವಿರಾಮ ಹಾಕುತ್ತಿದ್ದೇನೆ!

            ಉತ್ತರ
    • ಮಾತ್ಮಾತಲ್ಲಿಗಳೇ,
      ನಾನು ಏಳು ಪದರಕ್ಕೆ ಕೊಟ್ಟ ಉತ್ತರಕ್ಕೆ ಜಾಣ ಕಿವುಡು ತೋರಿಸಿದಿರಿ. ನೀವು ಎತ್ತಿದ ಹಲವು ಪ್ರಶ್ನೆಗಳಿಗೂ ಬೇರೆಯವರು ಉತ್ತರ ಕೊಟ್ಟಿದ್ದಾರೆ. ಮೇಲಿನ ಪ್ರತಿಕ್ರಿಯೆಯನ್ನೇ ತೆಗೆದುಕೊಂಡರೆ, ನೀವು ಬಿಗ್ ಬ್ಯಾಂಗ್ ಸೂರ್ಯನಿಂದ ಆಯಿತು ಎಂದು ತಿಳಿದಿರೋ ಹಾಗಿದೆ. ಅದು ತಪ್ಪು. ಕೋಟಿ ಸೂರ್ಯರು ಕಾಣುವುದಿಲ್ಲ ಎಂದಿರಿ. ಅದೂ ತಪ್ಪು. ನಮ್ಮ ಕಣ್ಣಿಗೇ ಹಲವು ನಕ್ಷತ್ರಗಳು ಕಾಣುತ್ತವೆ, ಅವು, ಎಲ್ಲಾ ಗಾತ್ರದವಾಗಿದ್ದು ಅವೂ ಕೂಡ ಸೂರ್ಯನ ಹಾಗೆ ನಕ್ಷತ್ರಗಳೇ. ಹಬಲ್ ದೂರದರ್ಶಕವಂತೂ ಬಿಲಿಯಾಂತರ ವರ್ಶಗಳ ಹಿಂದಕ್ಕೂ ಇಣುಕಿ ನೋಡಿ ನಮಗೆ ಗ್ಯಾಲಾಕ್ಷಿಗಲ ಎಳೆವೆಯ, ನಕ್ಷತ್ರಗಳ, ಸೌರಮಂಡಳಗಳ ಹುಟ್ಟಿನ ಹಂತಗಳ ಸಚಿತ್ರವನ್ನೇ ಉಣಬಡಿಸಿದೆ! ಬಿಗ್ ಬ್ಯಾಂಗ್ ನಿಂತು ಹೋಗಿದೆ ಅಂದಿರಿ. ಅದೂ ತಪ್ಪು. ಬಿಗ್ ಬ್ಯಾಂಗ್ ಈಗಲೂ ನಡೆಯುತ್ತಿದ್ದು, ಗ್ಯಾಲಕ್ಷಿಗಳು ಈಗಲೂ ಒಂದರಿಂದ ಒಂದು ದೂರ ಸರಿಯುತ್ತಲೇ ಇವೆ. ಪ್ರತಿಯೊಂದು ಎಲಿಮೆಂಟ್ಗಳ ಮೂಲ ಸಮ್ಮಿಳನ ಕ್ರಿಯೆ ಅನ್ನುತ್ತದೆ ವಿಗ್ನಾನ. ಈ ಕೊಂಡಿಗೆ ಹೋದರೆ ಅವರು ಸರಳವಾಗಿ, ಎಲ್ಲರಿಗೂ ಅರ್ತವಾಗುವಂತೆ ವಿವಿರಿಸಿದ್ದಾರೆ. http://www.bighistoryproject.com/. ಇಶ್ಟು ತಪ್ಪುಗಳನ್ನಿಟ್ಟು ವಾದ ಮಂಡಿಸುವುದು ತಪ್ಪು!

      ಉತ್ತರ
      • odugaoduga
        ಏಪ್ರಿಲ್ 16 2012

        ಅಣೊ ಯಂತಾ ವಿಗ್ನಾನ ಯೇಳ್ಬುಟೆ ಕಣಣ. ಬಿಗ್ ಬ್ಯಾಂಗು ಹಿನ್ನೂ ನಡೀತೈತೆ ಅಂಬೋ ಸತ್ಯಾ ಮಡ್ಗಿ ಎಲ್ಲಾರ್ನೂ ಸುಮ್ನಾಗಿಸ್ಬುಟ್ಯಲ ನೀ ಎಂಥಾ ಉಸಾರು ನೊಡು. ಬಿಗ್ ಬ್ಯಾಂಗು ಸೂರಪ್ಪನಿಂದಾಗದೆ ಹಂತಾವ ಅವರ್ಯೇಳಿದ್ದು ನಂಗೂ ಸರಿಕಾಳ್ಳಿಲ್ಲ ಕಣನ. ಎಂತೆಂತಾ ಗೆಲಾಕ್ಸಿಗಳವೆ ನೊಡಕೆ ಎಲ್ಡೂ ಕಣ್ಣು ಸಾಲ್ದು ಅಂತಾದ್ರಾಗೆ ಈವಯ್ಯ ಅಂಗಂತಾರಲ್ಲ. ನೀ ಸುಮ್ಕಿರಣ ಅವರೇನಾರಾ ಯೇಳ್ಕಳ್ಲೀ ನೀ ಸುಮ್ನಾಕ್ಕಬುಡು. ನಾನು ನೀನು ಒಂದ್ ಕಿತಾ ಸಿಕ್ಬುಟ್ಟು ಹೆಲ್ಲಾ ಮಾತಾಡೋಮಿ.

        ಉತ್ತರ
        • ಓದುಗೊದುಗ ಎಂಬ ಮತದ ಹೊಟ್ಟೇ,
          ಉಫ್ ಉಫ್.. ತೂರಿ ಹೋಗು. ಹೋಗಿ ಮಾತ್ಮಾತಲ್ಲಿಯ ಬಾಯಲ್ಲಿ ತುಂಬಿಕೊ. ತಪ್ಪು-ಸುಳ್ಳು ಕೇಳುವುದಾದರೂ ಕಡಿಮೆಯಾಗಲಿ. ವಿಗ್ನಾನ ದೀವಿಗೆ ತರ್ತಾ ಅವನಿ. ತಾಕಿಸಿದರೆ ಪುರುಪುರು ಅಂತ ಹುರಿದೊಗ್ತೀಯ. ಹೆದರಿಕೋ..

          ಉತ್ತರ
          • odugaoduga
            ಏಪ್ರಿಲ್ 17 2012

            ಐತ್ ಲಕಡಿ ಅಣೋ ಒಳ್ಳೆ ಜೋಕರ್ ಕಣಣೊ ನೀನು. ತುಂಬ ಸಂದಾಕ್ ಜೊಕ್ ಮಾಡ್ತೀಯ. ಹದ್ಕೇ ನಂಗೆ ನೀನಂದ್ರೆ ಬಲ್ ಇಷ್ಟ. ಅದ್ಯಾಕಣ ನನ್ ಕಂಡ್ರೆ ಅಂಗಾಡೀಯ? ಹಿನ್ನೂ ಗೊತಾಯಾಕಿಲ್ವ? ನಾನ್ ಕಣಣೊ ನಿನ್ ಪ್ರೆಂಡು ಕಣಣೊ. ಮತ್ತೆ ಮತ್ತೆ ಮತ್ತೆ ನಿನ್ನ ಜಗಳ ಓದ್ದೋರೆಲ್ಲ ನಿಂಗೆ ಜೋಕರ್ ಅಂದ್ಬುಟ್ರೆ ಕಸ್ಟ ಕಣಣ ಅದೇ ಒಸಿ ಬೇಜಾರು. ನೀನು ವಿಗ್ನಾನ ದೀವಿಗೆಯವ್ನು ಹಂತಾವ ನಂಗಂತ್ಲೂ ಗೊತಾಗ್ಬುಟದೆ ಹದ್ಕೇ ಯೋಳ್ತಿರದು ಕಣಣ. ಸುಮ್ನಾಕ್ಕಬುಡು. ನಿನ್ನಲ್ಲಿರೋ ಜಗತ್ತೇ ಬೆರ್ಗಾಗೋ ನಾಲೆಡ್ಜ್ ಆಳ್ಮಾಡ್ಕಬ್ಯಾಡ್ ಕಣಣ. ನಿಂಗೆ ಅದೇನೋ ಹಂತಾರಲ ಗೌರವ ಡಾಕ್ತರ ಹದ್ನ ಕೊಡ್ತರೆ ಕಣಣ.

            ಉತ್ತರ
  35. Ananda Prasad
    ಏಪ್ರಿಲ್ 16 2012

    ವೇದಗಳಲ್ಲಿ ಮಹತ್ತರ ಜ್ಞಾನ ವಿಶ್ವದ ಬಗ್ಗೆ ಅಥವಾ ಜೀವದ ಉಗಮ, ವಿಕಾಸದ ಬಗ್ಗೆ ಇದ್ದೀತು ಎಂದು ನನಗೆ ಅನಿಸುವುದಿಲ್ಲ ಅಥವಾ ಆಧುನಿಕ ವೈಜ್ಞಾನಿಕ ಆವಿಷ್ಕಾರಗಳ ಬಗ್ಗೆ ವೇದಗಳಲ್ಲಿ ಇದ್ದೀತು ಎಂದು ಕೂಡ ಅನಿಸುತ್ತಿಲ್ಲ. ಯಾರು ದೇವರನ್ನು ನಂಬುತ್ತಾರೋ ಅಂಥವರಿಗೆ ಅಂಥ ನಂಬಿಕೆ ಇರಬಹುದು. ದೇವರನ್ನು ನಂಬದವರಿಗೆ ಇಂಥ ಅನಿಸಿಕೆ ಮೂಡುವುದಿಲ್ಲ ಏಕೆಂದರೆ ವೇದಗಳು ಬಹಳ ಹಿಂದೆ ವೈಜ್ಞಾನಿಕ ಉಪಕರಣಗಳು ಇಲ್ಲದಿದ್ದ ಕಾಲದಲ್ಲಿ ರೂಪುಗೊಂಡಿರುವಂಥದ್ದು. ವೈಜ್ಞಾನಿಕ ಉಪಕರಣಗಳು, ಸಾಧನಗಳ ಮೂಲಕ ನಮ್ಮ ಜ್ಞಾನ ವಿಸ್ತರಿಸುತ್ತದೆ. ಅದಿಲ್ಲದೆ ಜ್ಞಾನ ವಿಸ್ತಾರ ಸಾಧ್ಯವಿದೆ ಎಂದು ನನಗೆ ಅನಿಸುವುದಿಲ್ಲ. ದೇವರನ್ನು ನಂಬುವವರು ವೇದಗಳಲ್ಲಿ ಎಲ್ಲ ಜ್ಞಾನವೂ ಇದೆ ಎಂದು ಹೇಳುತ್ತಾರೆ ಏಕೆಂದರೆ ವೇದಗಳ ಜ್ಞಾನ ದೇವರಿಂದಲೇ ಮನುಷ್ಯನಿಗೆ ತಪಸ್ಸಿನ ಮೂಲಕ ಲಭ್ಯವಾಗಿದೆ ಎಂಬುದು ಅವರ ನಂಬಿಕೆ. ಆದರೆ ದೇವರನ್ನು ನಂಬದವರಿಗೆ ಇದನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನದೆ ವಿಧಿಯಿಲ್ಲ. ಹೀಗಾಗಿ ವಿಜ್ಞಾನಿಗಳು ವೇದಗಳಲ್ಲಿ ಮಹತ್ತರ ಜ್ಞಾನ ಲಭ್ಯವಿದೆ ಎಂಬುದನ್ನು ಒಪ್ಪಿಕೊಳ್ಳುವುದು ಸಾಧ್ಯವಾಗಲಿಕ್ಕಿಲ್ಲ.

    ಉತ್ತರ
    • Kumar
      ಏಪ್ರಿಲ್ 16 2012

      Ananda Prasad> ವೈಜ್ಞಾನಿಕ ಉಪಕರಣಗಳು, ಸಾಧನಗಳ ಮೂಲಕ ನಮ್ಮ ಜ್ಞಾನ ವಿಸ್ತರಿಸುತ್ತದೆ. ಅದಿಲ್ಲದೆ ಜ್ಞಾನ ವಿಸ್ತಾರ ಸಾಧ್ಯವಿದೆ ಎಂದು ನನಗೆ ಅನಿಸುವುದಿಲ್ಲ.
      ದೆಹಲಿಯ ಮೆಹ್ರೌಲಿಯಲ್ಲಿ ಕಬ್ಬಿಣದ ಸ್ಥಂಭವಿದೆ. ಅದನ್ನು ವಿಷ್ಣುಸ್ಥಂಭ ಎನ್ನುತ್ತಾರೆ. ೧೬೦೦ ವರ್ಷಗಳಷ್ಟು ಹಳೆಯದಾದ ಆ ಸ್ಥಂಭ ಹಗಲಿರುಳೂ, ವರ್ಷದ ೩೬೫ ದಿವಸವೂ ಎಲ್ಲ ರೀತಿಯ ಹವಾಮಾನ ವೈಪರೀತ್ಯಗಳನ್ನೆದುರಿಸಿಯೂ ನಿಂತಿದೆ – ಆಶ್ಚರ್ಯದ ಸಂಗತಿಯೆಂದರೆ, ಅದು ಒಂದಿನಿತೂ ತುಕ್ಕು ಹಿಡಿದಿಲ್ಲ. ೭.೨ ಮೀಟರ್ ಎತ್ತರದ ಆ ಸ್ಥಂಭ ಒಂದು ಟನ್ ಭಾರವಿದೆ. ಯಾವುದೇ ವೈಜ್ಞಾನಿಕ ಉಪಕರಣಗಳು, ಸಾಧನಗಳೂ ಇರುವುದು ನಮಗಿಂದು ತಿಳಿಯದ ಆ ಕಾಲದಲ್ಲಿ, ಅಷ್ಟು ದೊಡ್ಡ ಕಂಬವನ್ನು ಯಾವ ರೀತಿ ಎರಕ ಹುಯ್ಯಲಾಯಿತು? ಅಷ್ಟೊಂದು ಕಬ್ಬಿಣವನ್ನು ಹೇಗೆ ಕರಗಿಸಿದರು? ತುಕ್ಕೇ ಹಿಡಿಯದಷ್ಟು ಶುದ್ಧತೆಯನ್ನು ಹೇಗೆ ಸಾಧಿಸಿದರು?
      ಇದರ ವಿಷಯದ ಕೊಂಡಿ: http://www.indiastudychannel.com/resources/55639-Iron-Pillar-at-Mehrauli-at-Delhi-s-has-mystery.aspx
      http://hitxp.wordpress.com/2007/03/15/iron-pillar-great-ancient-indian-metallurgy/

      ಇದೇ ರೀತಿ, ಕರ್ನಾಟಕದ ಕೊಡಚಾದ್ರಿಯ ಮೂಕಾಂಬಿಕಾ ದೇವಸ್ಥಾನದೆದುರು ಮತ್ತೊಂದು ಸ್ಥಂಭವೊಂದು ನಿಂತಿದೆ. ಅದೂ ಅತ್ಯಂತ ಪ್ರಾಚೀನವಾದದ್ದೇ.
      ಇದಕ್ಕೆ ಸಂಬಂಧಿಸಿದ ಕೊಂಡಿ ನೋಡಿ: http://inae.org/metallurgy/archives_pdf/TRA1.pdf
      ಇವೆರಡೇ ಅಲ್ಲದೆ, ಇನ್ನೂ ಅನೇಕ ಸ್ಥಳಗಳಲ್ಲಿ ಈ ರೀತಿಯ ಸ್ಥಂಭಗಳಿರುವುದು ವರದಿಯಾಗಿದೆ.

      ಕೇವಲ ಕಬ್ಬಿಣದ ಸ್ಥಂಭಗಳೇ ಅಲ್ಲದೆ, ಇನ್ನೂ ಅನೇಕ ಲೋಹಗಳ ಮತ್ತು ಮಿಶ್ರಲೋಹಗಳ ಸ್ಥಂಭಗಳೂ, ವಿಗ್ರಹಗಳೂ ದೇಶಾದ್ಯಂತ ಸಿಕ್ಕಿವೆ.

      ಹೊಸಪೇಟೆಯ ಹಂಪಿಯ ಪುರಂದರ ಮಂಟಪದಲ್ಲಿ ಕಲ್ಲಿನ ಕಂಬಗಳಲ್ಲಿ ಎಲ್ಲ ರೀತಿಯ ವಾದ್ಯಗಳ ಶಬ್ದ ಉತ್ಪನ್ನವಾಗುತ್ತದೆ.
      ಆ ಪರಿಸರದಲ್ಲಿ ಆ ರೀತಿಯ ಕಲ್ಲುಗಳು ಲಭ್ಯವಿಲ್ಲ. ಈ ಕೊಂಡಿ ನೋಡಿ: http://hampi.in/vittala-temple
      ಇಂದಿನ ಆಧುನಿಕ ವಿಜ್ಞಾನದ ಸಾಧನ, ಸಲಕರಣೆಗಳನ್ನು ಉಪಯೋಗಿಸಿಯೂ ಈ ರೀತಿಯ ಶಬ್ದವನ್ನು ಉತ್ಪತ್ತಿ ಮಾಡುವುದು ಸುಲಭವಲ್ಲ ಎನ್ನುವುದು ನಿಮಗೆ ತಿಳಿದಿರಬಹುದು.

      ಪ್ರಾಚೀನ ಭಾರತೀಯರ ಲೋಹಶಾಸ್ತ್ರದ ಸಾಧನೆಯ ಕುರಿತಾಗಿ ಇಲ್ಲಿ ಓದಿರಿ: http://www.eshiusa.org/Articles/09765.pdf

      ಎತ್ತಿನ ಗಾಡಿಗಳಲ್ಲಿ ಸಾಗಿಸಬಹುದಾದಂತಹ ಕಬ್ಬಿಣದ ಕುಲುಮೆಗಳನ್ನು ನಮ್ಮಲ್ಲಿ ಉಪಯೋಗಿಸುತ್ತಿದ್ದರೆಂಬುದು ತಿಳಿದು ಬಂದಿದೆ. ಈ ರೀತಿಯ ಕುಲುಮೆಗಳು ಅನೇಕ ಸ್ಥಳಗಳಲ್ಲಿ ಪತ್ತೆಯಾಗಿವೆ. ಈ ಸಣ್ಣ ಕುಲುಮೆಗಳಲ್ಲಿ ಟನ್‌ಗಟ್ಟಲೆ ಕಬ್ಬಿಣ ಮತ್ತು ಉಕ್ಕನ್ನು ತಯಾರಿಸುತ್ತಿದ್ದರು. ಇಂದಿನ ಆಧುನಿಕ ವಿಜ್ಞಾನವೂ ಇಷ್ಟು ಸಣ್ಣ ಕುಲುಮೆಗಳನ್ನು ರಚಿಸುವುದು ಕಷ್ಟದ ಮಾತೇ ಸರಿ.

      ನೆನಪಿಡಿ, ಇವೆಲ್ಲವೂ “ಸಾಧನಗಳು ಮತ್ತು ವೈಜ್ಞಾನಿಕ ಸಲಕರಣೆಗಳು” ಇಲ್ಲವೆಂದು ನಾವು ತಿಳಿದಿರುವ ಸಹಸ್ರಾರು ವರ್ಷಗಳ ಹಿಂದೆ ನಡೆದಿರುವ ಸಂಗತಿಗಳು.
      ಇನ್ನು ಗಣಿತ ಮತ್ತು ಖಗೋಳಶಾಸ್ತ್ರಗಳ ಕುರಿತು, ಆಯುರ್ವೇದ ಹಾಗೂ ವೃಕ್ಷಾಯುರ್ವೇದಗಳ ಕುರಿತು ಚರ್ಚಿಸತೊಡಗಿದರೆ, ಅದಕ್ಕೆ ಕೊನೆಯೇ ಇರುವುದಿಲ್ಲ.

      ಮತ್ತು ಈ ಎಲ್ಲ ವಿಷಯಗಳ ಪ್ರಾರಂಭವೂ ವೇದದಲ್ಲೇ ಆಗಿದೆ ಎನ್ನುವುದು ಮುಖ್ಯ ಸಂಗತಿ.

      ಉತ್ತರ
      • Ananda Prasad
        ಏಪ್ರಿಲ್ 17 2012

        ಪ್ರಾಚೀನ ಭಾರತದಲ್ಲಿ ಕುಲುಮೆ ಹಾಗೂ ಲೋಹಶಾಸ್ತ್ರದ ಬಗ್ಗೆ ತಿಳುವಳಿಕೆ ಇದ್ದಿರಬಹುದು ಒಪ್ಪಿಕೊಳ್ಳಬಹುದು. ಅದೇ ರೀತಿ ಸಂಖ್ಯಾಶಾಸ್ತ್ರದಲ್ಲಿಯೂ ಹಾಗೂ ಖಗೋಳಶಾಸ್ತ್ರದಲ್ಲಿಯೂ ಸಾಕಷ್ಟು ಚಿಂತನೆಗಳು ನಡೆದಿರಬಹುದು. ಇದನ್ನು ಕೂಡ ಒಪ್ಪಿಕೊಳ್ಳಬಹುದು. ಸಂಖ್ಯಾಶಾಸ್ತ್ರದ ಅವಿಷ್ಕರಗಳಿಗೆ ಅಧುನಿಕ ವಿಜ್ಞಾನದ ಉಪಕರಣಗಳ ಅವಶ್ಯಕತೆ ಇಲ್ಲ. ಇದು ಚಿಂತನೆಯಿಂದಲೇ ರೂಪುಗೊಳ್ಳುವಂಥದ್ದು. ಖಗೋಳ ಶಾಸ್ತ್ರದ ಲೆಕ್ಕಾಚಾರಗಳೂ ನಿರಂತರ ವೀಕ್ಷಣೆ ಹಾಗೂ ಅದರ ತರ್ಕಬದ್ಧ ವಿಶ್ಲೇಷಣೆಯಿಂದ ರೂಪುಗೊಂದಿರುವಂಥದ್ದು. ಅದರೂ ಖಗೋಳ ಶಾಸ್ತ್ರದ ಇಂದಿನ ಬೆಳವಣಿಗೆಗಳು ಹಿಂದೆ ಹೇಳಲ್ಪತ್ತಿವೆ ಎಂದು ಅನಿಸುವುದಿಲ್ಲ. ಕುಲುಮೆ ಹಾಗೂ ಲೋಹಶಾಸ್ತ್ರದ ಬೆಳವಣಿಗೆಗಳು ಪ್ರಯೋಗ ಮತ್ತು ತಪ್ಪಿನಿಂದ ಕಲಿಯುವ ವಿಧಾನದಿಂದ (trial and error) ರೂಪುಗೊಂಡಿರಬಹುದಾದರೂ ಇಂದಿನ ಲೋಹಶಾಸ್ತ್ರ, ಅದರ ತರ್ಕಬದ್ಧ ವಿಶ್ಲೇಷಣೆ ಹಿಂದಿನ ಕಾಲದ ಜ್ಞಾನದಲ್ಲಿ ಲಭ್ಯವೆಂದು ಅನಿಸುವುದಿಲ್ಲ. ಆಯುರ್ವೇದ ಕೂಡ ಪ್ರಯೋಗ ಹಾಗೂ ತಪ್ಪಿನಿಂದ ಕಲಿಯುವ ವಿಧಾನದ ಮೂಲಕ ರೂಪುಗೊಂಡಿರಬಹುದಾದರೂ ಅದರಲ್ಲಿ ರೋಗಗಳನ್ನು ಹೀಗೆಯೆ ಗುಣಪಡಿಸುತ್ತದೆ ಎಂಬುದಕ್ಕೆ ಇಂದೂ ಕೂಡ ತರ್ಕಬದ್ಧ ವಿಶ್ಲೇಷಣೆ ಲಭ್ಯವಿಲ್ಲ. ಆಧುನಿಕ ಔಷಧಿ ವಿಜ್ಞಾನ ಔಷಧಿಗಳು ಹೇಗೆ ರೋಗಗಳನ್ನು ಗುಣ ಪಡಿಸುತ್ತದೆ ಎಂಬ ಬಗ್ಗೆ ಸ್ಪಷ್ಟ ವಿವರಣೆ ನೀಡುತ್ತದೆ. ವೇದಗಳ ಕಾಲದಲ್ಲಿ ಸೂಕ್ಷದರ್ಶಕ, ಎಲೆಕ್ಟ್ರಾನ್ ಸೂಕ್ಷದರ್ಶಕದಂಥ ಉಪಕರಣಗಳು ಲಭ್ಯವಿಲ್ಲದ ಕಾರಣ ಅವರಿಗೆ ಜೀವದ ಮೂಲವಾದ ಜೀವಕೋಶಗಳು, ಅದರ ಒಳಗೆ ಇರುವ ಕೋಶಕೆಂದ್ರ, ಕೋಶಕೇಂದ್ರದ ಒಳಗೆ ಇರುವ ವರ್ಣತಂತುಗಳು, ವರ್ಣತಂತುಗಳಲ್ಲಿ ಅಡಕವಾಗಿರುವ ವಂಶವಾಹಿಗಳು, ವಂಶವಾಹಿಗಳಿಗೆ ಮೂಲವಾದ ಡಿ.ಎನ್.ಎ. ಅಣುಗಳು ಇವುಗಳ ಬಗ್ಗೆ ಆಧುನಿಕ ವಿಜ್ಞಾನದ ಸಹಾಯ ಇಲ್ಲದೆ ವೇದಕಾಲದಲ್ಲಿ ಜ್ಞಾನ ರೂಪುಗೊಂಡಿರುವ ಸಾಧ್ಯತೆ ಇಲ್ಲ. ಅದೇ ರೀತಿ ಹೆಚ್ಚಿನ ಸಾಮರ್ಥ್ಯದ ರೇಡಿಯೋ ದೂರದರ್ಶಕ ಇಲ್ಲದೆ ಬಹಳ ದೂರದ ಆಕಾಶಕಾಯಗಳನ್ನು ನೋಡುವುದು ಸಾಧ್ಯವೇ ಇಲ್ಲ. ಹೀಗಾಗಿ ವೇದ ಕಾಲದ ಜ್ಞಾನ ಇಂದಿನ ಜ್ಞಾನಕ್ಕೆ ಹೋಲಿಸಿದರೆ ಸೀಮಿತ ಎಂದೇ ಕಾಣುತ್ತದೆ. ದೇವರನ್ನು ನಂಬುವವರು ಮಾತ್ರ ಎಲ್ಲ ಜ್ಞಾನವೂ ದೇವರಿಂದಲೇ ತಪಸ್ಸಿನ ಮೂಲಕ ಲಭ್ಯವಾಗಿದೆ ಎಂದು ನಂಬುವ ಕಾರಣ ಎಲ್ಲ ಜ್ಞಾನವೂ ವೇದಗಳಲ್ಲಿ ಅಡಕವಾಗಿದೆ ಎಂದು ನಂಬುತ್ತಾರೆ. ದೇವರ ನಂಬಿಕೆಯಂತೆ ಇದು ಕೂಡ ಒಂದು ನಂಬಿಕೆ. ಹೀಗಾಗಿ ನಂಬುವವರಿಗೆ ಅರ್ಥ ಮಾಡಿಸಲು ಸಾಧ್ಯವಿಲ್ಲ. ಏಕೆಂದರೆ ನಂಬಿಕೆಗೆ ಆಧಾರ ಬೇಡ. ಆದರೆ ವಿಜ್ಞಾನಕ್ಕೆ ಆಧಾರ ಬೇಕು. ಎಲ್ಲ ಜ್ಞಾನವೂ ದೇವರಿಂದಲೇ ವೇದಗಳಲ್ಲಿ ಲಭ್ಯವಾಗಿದೆ ಎಂದು ನಾವು ಚಿಂತನೆ ನಡೆಸುವುದನ್ನು ಬಿಟ್ಟ ಕಾರಣ ಭಾರತವು ವಿಜ್ಞಾನದಲ್ಲಿ, ಆಧುನಿಕ ವೈಜ್ಞಾನಿಕ ಆವಿಷ್ಕಾರಗಳಲ್ಲಿ ಹಿಂದುಳಿದಿದೆ, ಪಾಶ್ಚಾತ್ಯರು ನಮಗಿಂತ ಬಹಳ ಮುಂದೆ ಹೋಗಿದ್ದಾರೆ. ಹಾಗಾಗಿ ಅವರು ಅರ್ಥಿಕವಾಗಿಯೂ ಬಹಳ ಮುಂದುವರಿದಿದ್ದಾರೆ.

        ಉತ್ತರ
        • ಏಪ್ರಿಲ್ 17 2012

          ತಮ್ಮ ಮಾತಿಗೆ ಉತ್ತರಿಸದಿರುವುದೇ ವಾಸಿ, ಎಲ್ಲವನ್ನೂ ತಾರ್ಕಿಕವಾಗಿ ನಿರ್ಣಯಿಸಲು ಆಗುವುದಿಲ್ಲ ಎಂಬುದಕ್ಕೆ ಬಾಲಚಂದ್ರರಿಗೆ ಉತ್ತರಿಸಿದ್ದೇನೆ ಅವುಗಳನ್ನು ಓದಿಕೊಳ್ಳಬಹುದಾಗಿದೆ. ಖಗೋಳ ಕಾಯಗಳು ಬರಿಗಣ್ಣಿಗೆ ಹಾಗೆ ಕಾಣುವುದಾದರೆ ಇವತ್ತು ದೂರದರ್ಶಕಗಳೇ ಬೇಕಾಗಿರಲಿಲ್ಲ. ಪಂಚಾಂಗದಲ್ಲಿ ಆಕಾಶ ಕಾಯಗಳ ಚಲನವಲನ ನಿರ್ಧರಿಸಲ್ಪಡುತ್ತಿದೆ-ಅದು ಅಧುನಿಕ ವಿಜ್ಞಾನದಿಂದಲ್ಲ. ಆಯುರ್ವೇದ ರೂಟ್ ಕಾಸ್ [ಮೂಲ ಕಾರಣ]ವನ್ನು ತಿಳಿಸಿ ಔಷಧ ನೀಡುತ್ತದೆ ಮತ್ತು ಅದು ನಿರ್ದಿಷ್ಟವಾಗಿ ಪರಿಣಾಮಗಳನ್ನೂ ಹೇಳುತ್ತದೆ-ನೀವು ಆಯುರ್ವೇದವನ್ನು ತಿಳಿದುಕೊಂಡಿಲ್ಲ ಎಂಬುದು ಸ್ಪಷ್ಟ! ಆಂಗ್ಲ ಔಷಧಿಗಳೆಲ್ಲಾ ಸೈಡ್ ಇಫೆಕ್ಟ್ ಇರುವ ಮತ್ತು ತಾತ್ಕಾಲಿಕವಾಗಿ ಶಮನ ನೀಡುವ ಕೆಮಿಕಲ್ ಗಳಾಗಿವೆಯೇ ಹೊರತು ಅವು ಮಾನವ ಶರೀರಕ್ಕೆ ಹಿತವಾದವುಗಳಲ್ಲ-ಈ ಬಗ್ಗೆಯೂ ಆಯುರ್ವೇದ ಹೇಗೆ ರಕ್ತದ ಕ್ಯಾನ್ಸರ್ ಗುಣಪಡಿಸಿ ವಿದೇಶೀ ವೈದ್ಯರಿಂದಾಗದೇ ಕೈಚೆಲ್ಲಿದ ರೋಗಿಯನ್ನು ಬದುಕಿಸಿತು[ಅದೂ ಅಲೋಪಥಿ ವೈದ್ಯರೊಬ್ಬರ ಮಗಳನ್ನೇ!] ಎಂಬುದನ್ನೂ ಮೇಲೆ ತಿಳಿಸಿದ್ದೇನೆ. ಅದು ವಾರಪತ್ರಿಕೆಯೊಂದರಲ್ಲಿ ಇತ್ತೀಚೆಗೆ ಬಂದಿರುತ್ತದೆ!

          ಇಷ್ಟು ಮಾತ್ರ ಹೇಳುತ್ತೇನೆ: ಸೀಮಿತ ಪರಿಮಿತಿಯುಳ್ಳದ್ದು ಅಧುನಿಕ ವಿಜ್ಞಾನವೇ ಹೊರತು, ವೇದವಿಜ್ಞಾನವಲ್ಲ. ವೇದವನ್ನು ಓದುವವರೆಲ್ಲಾ ದೇವರನ್ನು ನಂಬಲೇಬೇಕೆಂದಿಲ್ಲ. ವೇದಗಳೇ ಬೇರೆ- ದೇವರೇ ಬೇರೆ. ವೇದಗಳು ಮಾನವ ಸಹಜ ಬದುಕಿನ ಧರ್ಮವನ್ನು ಹೇಳುತ್ತವೆ. ಆಸ್ತಿಕರು ವೇದವನ್ನು ಓದುವುದರ ಜೊತೆಗೆ ಅದನ್ನು ಕರುಣಿಸಿದ ದೇವರನ್ನೂ ನಂಬಿರಬಹುದು ಅಷ್ಟೇ. ವೇದಗಳನ್ನು ಒಮ್ಮೆ ಕೊನೇಪಕ್ಷ ಈ ಕೆಳಗೆ ಕುಮಾರ್ ಅವರು ಕೊಟ್ಟಿರುವ ಲಿಂಕ್ ಗಳನ್ನು ಬಳಸಿ ಓದಿಕೊಳ್ಳಿ, ಆಗ ಅವುಗಳ ಬಗ್ಗೆ ಅಲ್ಪವಾದರೂ ತಮಗೆ ತಿಳಿದೀತು. ಬರಿದೇ ವೇದವೆಲ್ಲಾ ಹಳೆಯದು, ಸೀಮಿತವಾದದ್ದು ಎಂಬ ಅಪವಾದ ನಿಮ್ಮ ಮನಸ್ಸಿನಿಂದ ದೂರವಾಗಬಹುದು.

          ನಾವೇನೂ ಹಿಂದೆ ಬಿದ್ದಿಲ್ಲ, ನಾವು ಹಾಗೆ ತಿಳಿದುಕೊಂಡಿದ್ದೇವೆ. ನಮ್ಮಲ್ಲಿ ಜನಸಂಖ್ಯೆ ಹೆಚ್ಚಿದೆ; ಮಕ್ಕಳನ್ನು ತಯಾರಿಸುವ ಕಾರ್ಖಾನೆ ನಮ್ಮದು! ಅಲ್ಲಿ ಅದಲ್ಲ, ಹಾಗಾಗಿ ಅವರು ಶ್ರೀಮಂತರಂತೇ ಕಾಣುತ್ತಾರೆ. ನಮ್ಮಲ್ಲಿನವರ ಹಣ ಸ್ವಿಸ್ ಬ್ಯಾಂಕ್ ನಲ್ಲಿದೆ! ಇದ್ದವರು ಹೇಳುವುದಿಲ್ಲ; ಇಲ್ಲದವರು ಹೇಳಿಕೊಳ್ಳುತ್ತಾರೆ. ಇಲ್ಲಿ ಬಡತನ ಇರಬಹುದು ಅದಕ್ಕೆ ಕಾರಣ ವಿಜ್ಞಾನವನ್ನು ಬಳಸದೇ ಇರುವುದು ಅಲ್ಲ. ವಿಜ್ಞಾನ ಬಳಸಿ ಮುಂದುವರಿದವರು ಶಾಂತಿಯನ್ನರಸಿ ಭಾರತಕ್ಕೆ ಬರುತ್ತಾರೆ! –ಯಾಕೆ? ನೀವೇ ಚಿಂತಿಸಿ.

          ಭಾರತದಲ್ಲಿ ಹುಟ್ಟಿದ ಯಾವುದೇ ಶಾಸ್ತ್ರಕೂ ಆಧಾರಗಳಿವೆ. ಆಯುರ್ವೇದಕ್ಕೂ ಸಹಿತ; ಅವು ಟ್ರಯಲ್ ಅಂಡ್ ಎರರ್ ಗಳಿಂದ ಶೋಧಿಸಿದ್ದಲ್ಲ! ಇದನ್ನು ಈ ಪ್ರಪಂಚದ ಹಲವು ಅಲೋಪಥಿ ಮಾಷ್ಟರ್ ಡಿಗ್ರಿಗಳನ್ನು ಪಡೆದು ಕೊನೆಯದಾಗಿ ಭಾರತದ ಆಯುರ್ವೇದವನ್ನೇ ಮೆಚ್ಚಿಕೊಂಡ ಪ್ರಖ್ಯಾತ ಹೃದಯತಜ್ಞ ಪ್ರೊ. ಬಿ.ಎಂ ಹೆಗ್ಡೆ ಹೇಳುತ್ತಾರೆ! ಇನ್ನು ನೀವುಂಟು-ನಿಮ್ಮ ಅಭಿಪ್ರಾಯಗಳುಂಟು.

          ಉತ್ತರ
          • Ananda Prasad
            ಏಪ್ರಿಲ್ 17 2012

            ನಂಬಿಕೆಯವರದ್ದು ಒಂದು ದೊಡ್ಡ ಗುಂಪು, ನಂಬದವರದ್ದು ಒಂದು ಸಣ್ಣ ಗುಂಪು. ನಾವು ಇಂದು ಉಪಯೋಗಿಸುವ ಹೆಚ್ಚಿನೆಲ್ಲ ಸಲಕರಣೆಗಳು ಅಧುನಿಕ ವಿಜ್ಞಾನದ ಕೊಡುಗೆ. ಯಾವುದೂ ಕೂಡ ವೇದದ ಕೊಡುಗೆ ಅಲ್ಲ. ಉದಾಹರಣೆಗೆ ವಿಮಾನ, ಮೊಟರು ವಾಹನಗಳು, ಹಡಗು, ಜಲಾಂತರ್ಗಾಮಿ ನೌಕೆಗಳು, ವಿದ್ಯುತ್, ಕಂಪ್ಯೂಟರ್, ಇಂಟರ್ನೆಟ್ , ಮೊಬೈಲ್ ಫೋನ್, ರೇಡಿಯೋ, ಟಿವಿ, ಸಿಮೆಂಟ್, ಪ್ಲಾಸ್ಟಿಕ್, ಪೆಟ್ರೋಲಿಯಂ ಉತ್ಪನ್ನಗಳು, ವಾಶಿಂಗ್ ಮೆಷಿನ್, ಫ್ರಿಜ್ ಇತ್ಯಾದಿ. ಇಂದು ಲಕ್ಷಾಂತರ ಜನ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆಗೆ ಹೋಗುವುದು ಅಧುನಿಕ ವಿಜ್ಞಾನದ ವಿಧಾನಗಳಿಗೆ. ಆಯುರ್ವೇದ ವಿಧಾನದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಹೋಗುವವರು ಒಂದು ಶೇಕಡಾ ಕೂಡ ಇರಲಿಕ್ಕಿಲ್ಲ. ಈ ಮೊದಲೆ ಹೇಳಿದಂತೆ ನಂಬುವವರಿಗೆ ಅರ್ಥ ಮಾಡಿಸಲು ಸಾಧ್ಯವಿಲ್ಲ. ಹಾಗಾಗಿ ನಂಬುವವರು ಹಾಗೂ ನಂಬದವರು ಒಮ್ಮತಕ್ಕೆ ಬರುವುದು ಸಾಧ್ಯವಿಲ್ಲ. ಅವೆರಡೂ ವಿರುದ್ಧವಾದ ಬೇರೆ ಬೇರೆ ಧ್ರುವಗಳು, ಒಂದಾಗಲು ಸಾಧ್ಯವಿಲ್ಲ. ನೀವು ಉತ್ತರಿಸಬೇಕೆಂದು ನಾನು ಬಯಸುವುದಿಲ್ಲ, ನಿಮ್ಮ ಉತ್ತರಗಳನ್ನು ಒಪ್ಪಿಕೊಳ್ಳಲು ಸಾಧ್ಯವೂ ಇಲ್ಲ.

            ಉತ್ತರ
        • Kumar
          ಏಪ್ರಿಲ್ 17 2012

          Ananda Prasad> ಖಗೋಳ ಶಾಸ್ತ್ರದ ಲೆಕ್ಕಾಚಾರಗಳೂ ನಿರಂತರ ವೀಕ್ಷಣೆ ಹಾಗೂ ಅದರ ತರ್ಕಬದ್ಧ ವಿಶ್ಲೇಷಣೆಯಿಂದ
          Ananda Prasad> ರೂಪುಗೊಂದಿರುವಂಥದ್ದು. ಅದರೂ ಖಗೋಳ ಶಾಸ್ತ್ರದ ಇಂದಿನ ಬೆಳವಣಿಗೆಗಳು ಹಿಂದೆ ಹೇಳಲ್ಪತ್ತಿವೆ ಎಂದು ಅನಿಸುವುದಿಲ್ಲ.
          ಆ ರೀತಿಯ ವೀಕ್ಷಣೆಯನ್ನು ಜಗತ್ತಿನ ಎಲ್ಲ ಭಾಗಗಳ ಜನರೂ ಎಲ್ಲ ಕಾಲದಲ್ಲಿಯೂ ಮಾಡಿರಲೇಬೇಕಲ್ಲವೆ?
          ಆದರೆ, ಎಲ್ಲ ದೇಶಗಳಲ್ಲಿಯೂ ಒಂದೇ ರೀತಿಯ ಆವಿಷ್ಕಾರಗಳು ಆಗಿಲ್ಲ ಎನ್ನುವುದು ತಿಳಿದಿರುವ ವಿಷಯವೇ.
          ಜೊತೆಗೆ, ನಮ್ಮಲ್ಲಿ ಆಗಿರುವ ಆವಿಷ್ಕಾರಗಳು ಆಧುನಿಕ ವಿಜ್ಞಾನಕ್ಕೆ ಅತ್ಯಂತ ಸಮೀಪವಾಗಿದೆ ಎನ್ನುವುದೂ ಎಲ್ಲರೂ ತಿಳಿದಿರುವ ಸಂಗತಿ – ವಿಜ್ಞಾನದ ಎಲ್ಲ ಶಾಖೆಗಳಲ್ಲೂ ಈ ರೀತಿ ಆಗಿರಬೇಕಾದರೆ, ಅದು ಕಾಕತಾಳೀಯವಾಗಿರಲಾರದು.
          ಗ್ರಹಣಗಳ ಕರಾರುವಾಕ್ಕು ಲೆಕ್ಕಾಚಾರ ನಮ್ಮ ಪಂಚಾಂಗಗಳಲ್ಲಿ ಸಹಸ್ರಮಾನಗಳಿಂದ ನಮೂದಾಗುತ್ತಾ ಬಂದಿದೆ.
          ಕೇವಲ ಆಕಾಶವನ್ನೇ ನೋಡುತ್ತಾ ಗ್ರಹಣದ ಲೆಕ್ಕಾಚಾರ ಹಾಕಬಹುದೆಂದು ನೀವು ತಿಳಿದಿರುವಿರೇನು? ಹಾಗೆ ಸಾಧ್ಯವಿದ್ದರೆ, ಮುಂದಿನ ಗ್ರಹಣದ ಲೆಕ್ಕಾಚಾರವನ್ನು ಯಾವುದೇ ಸಾಧನದ ಸಹಾಯವಿಲ್ಲದೆ ಹಾಕಲು ಪ್ರಯತ್ನಿಸಿ.
          ಕೇವಲ ಸೂರ್ಯ ಮತ್ತು ಚಂದ್ರ ಗ್ರಹಣ ಮಾತ್ರವಲ್ಲ, ಮಂಗಳದ ಗ್ರಹಣ, ಶುಕ್ರ ಗ್ರಹಣಗಳ ಕುರಿತಾಗಿಯೂ ತಿಳಿಸಿರುವುದು ಗ್ರಂಥಗಳಲ್ಲಿ ನಮೂದಾಗಿದೆ.

          Ananda Prasad> ಜೀವದ ಮೂಲವಾದ ಜೀವಕೋಶಗಳು, ಅದರ ಒಳಗೆ ಇರುವ ಕೋಶಕೆಂದ್ರ, ಕೋಶಕೇಂದ್ರದ ಒಳಗೆ
          Ananda Prasad> ಇರುವ ವರ್ಣತಂತುಗಳು, ವರ್ಣತಂತುಗಳಲ್ಲಿ ಅಡಕವಾಗಿರುವ ವಂಶವಾಹಿಗಳು,
          Ananda Prasad> ವಂಶವಾಹಿಗಳಿಗೆ ಮೂಲವಾದ ಡಿ.ಎನ್.ಎ. ಅಣುಗಳು ಇವುಗಳ ಬಗ್ಗೆ ಆಧುನಿಕ ವಿಜ್ಞಾನದ ಸಹಾಯ
          Ananda Prasad> ಇಲ್ಲದೆ ವೇದಕಾಲದಲ್ಲಿ ಜ್ಞಾನ ರೂಪುಗೊಂಡಿರುವ ಸಾಧ್ಯತೆ ಇಲ್ಲ
          ನೀವು ಸ್ವತಃ ಈ ವಿಷಯವಾಗಿ ತಿಳಿದಿಲ್ಲ ಮತ್ತು ಹುಡುಕುವ ಪ್ರಯತ್ನವನ್ನೂ ಮಾಡಿಲ್ಲ. ಕೇವಲ “ನಿರಾಕರಣೆ”ಯ ವಾದವನ್ನು ಹಿಡಿದು ಮಾತನಾಡುತ್ತಿದ್ದೀರಿ!
          ಇದೊಂದು ರೀತಿ ಮತಾಂಧತೆ ಎಂಬುದನ್ನು ಅರಿಯಿರಿ. ನಮಗೆ ತಿಳಿದಿರದ ಸಾಕಷ್ಟು ಸಂಗತಿಗಳು ಜಗತ್ತಿನಲ್ಲಿವೆ ಎಂಬುದನ್ನು ಒಪ್ಪುಕೊಳ್ಳುವಲ್ಲಿಂದ ನಮ್ಮ ಕಲಿಕೆ ಪ್ರಾರಂಭವಾಗುತ್ತದೆ.
          ಜೀವಶಾಸ್ತ್ರದ ಜೀವಕೋಶ, ಕೋಶಕೇಂದ್ರ, ಇತ್ಯಾದಿ ವಿಷಯಗಳ ಕುರಿತಾಗಿ ವೇದಗಳು ಬಹಳ ವಿಸ್ತೃತವಾಗಿ ಚರ್ಚಿಸಿವೆ.
          ನಿಮಗೆ ನಿಜಕ್ಕೂ ಆಸಕ್ತಿಯಿದ್ದರೆ, ಆ ಕುರಿತಾಗಿ ಇಲ್ಲಿ ಓದಿರಿ: http://openlibrary.org/books/OL16296500M/Vedic_cell_biology_with_life_energy_rebirth

          Ananda Prasad> ಆಯುರ್ವೇದ ಕೂಡ ಪ್ರಯೋಗ ಹಾಗೂ ತಪ್ಪಿನಿಂದ ಕಲಿಯುವ ವಿಧಾನದ ಮೂಲಕ ರೂಪುಗೊಂಡಿರಬಹುದಾದರೂ
          ಗಿಡಮೂಲಿಕೆಗಳ ಕುರಿತಾಗಿ ಪ್ರಯೋಗದ ಮೂಲಕ ಮತ್ತು ಸರಿ-ತಪ್ಪುಗಳ ಮೂಲಕ ಕಲಿಯಬಹುದು.
          ಆದರೆ, ಶಸ್ತ್ರಚಿಕಿತ್ಸೆಯ ಕುರಿತಾಗಿಯೂ ಹೀಗೇ ಹೇಳುವಿರೇನು? ರಕ್ತಪರಿಚಲನೆಯ ಕುರಿತಾಗಿಯೂ ಇದು ಸಾಧ್ಯವೇನು?

          Ananda Prasad> ಆಧುನಿಕ ಔಷಧಿ ವಿಜ್ಞಾನ ಔಷಧಿಗಳು ಹೇಗೆ ರೋಗಗಳನ್ನು ಗುಣ ಪಡಿಸುತ್ತದೆ ಎಂಬ ಬಗ್ಗೆ ಸ್ಪಷ್ಟ ವಿವರಣೆ ನೀಡುತ್ತದೆ.
          ಆಧುನಿಕ ಔಷಧ ವಿಜ್ಞಾನದ ಕುರಿತಾಗಿ ನಾನು ಮಾತನಾಡಲೇಬೇಕಾಗಿಲ್ಲ. ಆಧುನಿಕ ವೈದ್ಯರುಗಳನ್ನೇ ಕೇಳಿ ನೋಡಿ, ವಿಷಯ ತಿಳಿಸುತ್ತಾರೆ.
          ಆಧುನಿಕ ಔಷಧ ವಿಜ್ಞಾನವು, ಅನೇಕ ರೋಗಗಳಿಗೆ ಔಷಧಗಳನ್ನೇ ಹೊಂದಿಲ್ಲ. ಉದಾಹರಣೆಗೆ ಇತ್ತೀಚೆಗೆ ಬಂದಿರುವ ಚಿಕನ್‌ಗುನ್ಯಾ ಮತ್ತು H1N1ಗೆ ಆಧುನಿಕ ಔಷಧ ವಿಜ್ಞಾನದಲ್ಲಿ ಔಷಧವಿಲ್ಲ. ಆ ರೋಗಗಳು ಬಂದರೆ, ಆಯುರ್ವೇದ ಅಥವಾ ಹೋಮಿಯೋಪತಿಗಳೇ ಗತಿ.
          ಹೆಚ್ಚಿನ ರೋಗಗಳಿಗೆ ಅಲೋಪತಿ ವೈದ್ಯರು Antibiotics ನೀಡುತ್ತಾರೆ. ಏಕೆ ಗೊತ್ತೇ?
          ಅವರ ಬಳಿ ಆ ರೋಗಕ್ಕೆ ಬೇರಾವ ಮದ್ದೂ ಇಲ್ಲ! Antibiotics ನೀಡಿದಾಗ ಹೊಟ್ಟೆಯಲ್ಲಿ ಮತ್ತು ರಕ್ತದಲ್ಲಿರುವ ಎಲ್ಲ ಜಂತುಗಳೂ ನಾಶಗೊಳ್ಳುತ್ತವೆ. ಜೊತೆಗೆ ನಮ್ಮ ದೇಹದ ಜೀವಕೋಶಗಳೂ ಮತ್ತು ನಮಗೆ ಅನುಕೂಲವಾಗಿರುವ ಜಂತುಗಳೂ ಕೊಲ್ಲಲ್ಪಡುತ್ತವೆ. ಏಕೆಂದರೆ, Antibiotics ಒಂದು ರೀತಿಯ ವಿಷ! ಹಾಗಾಗಿಯೇ ಅದನ್ನು ಒಂದೆರಡು ದಿನ ತೆಗೆದುಕೊಂಡ ರೋಗಿ ನಿತ್ರಾಣನಾಗುತ್ತಾನೆ.

          ಪ್ರಾಚೀನಗ್ರಂಥಗಳಲ್ಲಿ ವಿಮಾನಶಾಸ್ತ್ರದ ಕುರಿತಾಗಿ ವಿಸ್ತ್ರತವಾಗಿ ಚರ್ಚಿಸಿದ್ದಾರೆ. ಅನೇಕ ಸಂಸ್ಕೃತ ಗ್ರಂಥಗಳು ದೊರಕಿವೆ. ಚಿತ್ರಮುಖೇನವೂ ವಿವರಿಸಿದ್ದಾರೆ.
          ವಿಮಾನಗಳ ವಿವರಣೆ, ಅವುಗಳಿಗೆ ಉಪಯೋಗಿಸಬೇಕಾದ ಇಂದನಗಳ ವಿವರಣೆ, ಅದನ್ನು ತಯಾರಿಸಲು ಬೇಕಾದ ಲೋಹ ಅಥವಾ ಮಿಶ್ರಲೋಹಗಳ ವಿವರಣೆ, ವಿಮಾನವನ್ನು ಹಾರಿಸುವ ವ್ಯಕ್ತಿಗೆ ಬೇಕಾದ ಪ್ರಶಿಕ್ಷಣಗಳ ವಿವರಣೆ, ಇತ್ಯಾದಿ ಸಾಕಷ್ಟು ವಿಷಯಗಳನ್ನು ಅವುಗಳಲ್ಲಿ ವಿವರಿಸಿದ್ದಾರೆ. ವಿಮಾನವನ್ನು ಹಾರಿಸುವ ರೀತಿ, ಅವುಗಳ ವೇಗ, ಎಷ್ಟು ಎತ್ತರದಲ್ಲಿ ಹಾರಿಸಬೇಕು ಎನ್ನುವುದನ್ನೂ ಚರ್ಚಿಸಲಾಗಿದೆ. ಜೊತೆಗೆ, ಅನೇಕ ರೀತಿಯ ವಿಮಾನಗಳ ವಿವರಣೆಗಳಿವೆ.
          ನಮಗಿಂದು ಆಗಿನ ಕಾಲದ ವಿಮಾನದ ಅವಶೇಷಗಳು ದೊರೆತಿಲ್ಲ. ಹಾಗಾಗಿ, ವಿಮಾನಗಳು ಇರಲಿಲ್ಲ ಎಂದು ನಿಮ್ಮಂತಹವರು ನಿರ್ಧಾರಕ್ಕೆ ಬರಬಹುದು.
          ಅವರು ವಿಮಾನವನ್ನು ತಯಾರಿಸಲೇ ಇಲ್ಲವೆಂದು ಇಟ್ಟುಕೊಳ್ಳೋಣ.
          ಹಾಗಿದ್ದರೆ, ಅವರು ಅವುಗಳ ಕುರಿತಾಗಿ ಏಕೆ ಚರ್ಚಿಸಿದರು?
          ಅವರಿಗೆ AeroDynamics ಕುರಿತಾಗಿ ತಿಳಿದಿತ್ತೇನು? ಇಲ್ಲದಿದ್ದಲ್ಲಿ ವಿಮಾನದ ಚಿತ್ರಗಳನ್ನು (ಆಧುನಿಕ ವಿಮಾನಗಳ ಆವಿಷ್ಕಾರಕ್ಕೂ ಮೊದಲೇ) ಆ ರೀತಿ ಹೇಗೆ ಚಿತ್ರಿಸಿದರು?
          ಅದು ಕೂಡಾ ಕಾಕತಾಳೀಯವೇ ಇರಬೇಕಲ್ಲವೇ?

          ಉತ್ತರ
          • Ananda Prasad
            ಏಪ್ರಿಲ್ 17 2012

            ನೀವು ತಿಳಿಸಿದಂತೆ ವೇದಗಳಲ್ಲಿ ಆಧುನಿಕ ಜೀವ ವಿಜ್ಞಾನದ ಬಗ್ಗೆ ತಿಳಿಸಿದ್ದರೆ ಕೆಲವು ನೊಬೆಲ್ ಬಹುಮಾನಗಳು ವೇದಗಳಿಗೆ ಸಿಗಬೇಕಾಗಿತ್ತು. ಆದರೆ ಇದುವರೆಗೆ ವೇದಗಳಿಗೆ ಯಾವುದೇ ನೊಬೆಲ್ ಬಹುಮಾನ ಬಂದ ಬಗ್ಗೆ ನನಗೆ ತಿಳಿದಿಲ್ಲ.

            ಉತ್ತರ
            • Kumar
              ಏಪ್ರಿಲ್ 17 2012

              ನೊಬೆಲ್ ಪಾರಿತೋಷಕ ಪಡೆಯಲು ಲಾಬಿ ನಡೆಸಬೇಕು. ನಿಮ್ಮ ಪರವಾಗಿ ಮಾತನಾಡುವವರು ಇರಬೇಕು. ಅದಕ್ಕಾಗಿ ಅರ್ಜಿ ಸಲ್ಲಿಸಬೇಕು.
              ರೇಡಿಯೋವನ್ನು ಮೊದಲಿಗೆ ಕಂಡುಹಿಡಿದ ಜಗದೀಶ ಚಂದ್ರ ಬೋಸರಿಗೆ ಏಕೆ ನೋಬೆಲ್ ಪಾರಿತೋಷಕ ಸಿಗಲಿಲ್ಲ?
              ೦ ಕಂಡು ಹಿಡಿದವರಿಗೂ ನೋಬೆಲ್ ಪಾರಿತೋಷಕ ಸಿಗಬೇಕು – ಕಳೆದ ೧೦,೦೦೦ ವರ್ಷಗಳಲ್ಲಿ ’೦’ಗಿಂತ ದೊಡ್ಡ ಆವಿಷ್ಕಾರ ನಡೆದಿಲ್ಲ!
              ಸೊನ್ನೆ ಇಲ್ಲದಿದ್ದಿದ್ದರೆ ಇಂದಿನ ಕಂಪ್ಯೂಟರ್ ಅನ್ನು ಕಲ್ಪಿಸಲೂ ಸಾಧ್ಯವಿಲ್ಲ.
              ಭಾಷೆಗಳಲ್ಲೇ ಅತ್ಯಂತ ವೈಜ್ಞಾನಿಕ ಭಾಷೆ ಸಂಸ್ಕೃತ. ಕಂಪ್ಯೂಟರ್‌ಗೆ ಹೊಂದಿಸಬಹುದಾದ ಭಾಷೆಯೊಂದಿದ್ದರೆ ಅದು ಸಂಸ್ಕೃತ ಮಾತ್ರ.
              ಅದಕ್ಕೂ ನೋಬೆಲ್ ಪಾರಿತೋಷಕ ಸಿಗಬೇಕಲ್ಲವೇ?
              ಕಣಾದ, ಚರಕ, ಸುಶ್ರುತ, ಭಾಸ್ಕರ, ಆರ್ಯಭಟ……ಹೀಗೆ ನಮ್ಮಲ್ಲಿ ನೋಬೆಲ್ ಪಾರಿತೋಷಕ ನೀಡಬೇಕಾದ ಪಟ್ಟಿಗೆ ಕೊನೆಯೇ ಇಲ್ಲ!

              ನೋಬೆಲ್ ಪಾರಿತೋಷಕ ಸಿಕ್ಕರೆ ಮಾತ್ರ ಅಂತಿಮ ಸತ್ಯ, ಇಲ್ಲದಿದ್ದರೆ ಮಿಥ್ಯ ಎನ್ನುವುದು ಕೇವಲ ಬಾಲಿಶ.
              ನಿಮ್ಮ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಕ್ಕಿದೆ, ಇನ್ಯಾವ ಪ್ರಶ್ನೆಯೂ ಉಳಿದಿಲ್ಲ; ಆದರೂ ಸತ್ಯವನ್ನು ಒಪ್ಪುವ ಪ್ರಾಂಜಲ ಮನಸ್ಸಿಲ್ಲ ಎಂಬುದು ನಿಮ್ಮ ಈ ರೀತಿಯ ಪ್ರತಿಕ್ರಿಯೆಯ ಸೂಚನೆಯೇ?

              ಸತ್ಯವನ್ನು ಒಪ್ಪಿಕೊಳ್ಳಲು ನಾಚಿಕೆ ಏಕೆ? ಅದರಲ್ಲಿ ಸೋಲು ಗೆಲುವಿನ ಪ್ರಶ್ನೆ ಎಲ್ಲಿದೆ?
              ನಮ್ಮದನ್ನು ಒಪ್ಪಿಕೊಳ್ಳಲೂ ಅಥವಾ ನನಗಿಷ್ಟು ಮಾತ್ರ ತಿಳಿದಿದೆ ಎಂದೋ, ಅಥವಾ ನನಗೆ ತಿಳಿದಿಲ್ಲ ಎಂದೋ ತಿಳಿಸಲು ಸಹ, ನಿಮ್ಮ ಅಹಂ ಇಷ್ಟೊಂದು ಅಡ್ಡ ಬರುತ್ತದೆಯೇ!?

              ಉತ್ತರ
              • Ananda Prasad
                ಏಪ್ರಿಲ್ 17 2012

                ವೇದಗಳಲ್ಲಿ ಅಷ್ಟು ಜ್ಞಾನ ಇದ್ದರೆ ವೇದಗಳ ಬಗ್ಗೆ ಅಭಿಮಾನ ಇರುವವರು ಈಗಲೂ ಅದನ್ನು ಸಾಬೀತು ಪಡಿಸಿ ಹೊಸ ಶೋಧನೆಗಳನ್ನು ಮಾಡಿ ನಮ್ಮ ಜೀವನವನ್ನು ಯಾಕೆ ಉತ್ತಮ ಪಡಿಸಬಾರದು? ಯಾಕೆ ನಾವು ಇಂಟರ್ನೆಟ್, ಟಿವಿ, ರೇಡಿಯೋ, ವಿಮಾನ, ವಿದ್ಯುತ್ ಇತ್ಯಾದಿಗಳನ್ನು ಪಾಶ್ಚಾತ್ಯರು ಕಂಡು ಹಿಡಿಯುವವರೆಗೆ ತೆಪ್ಪಗೆ ಕೂತುಕೊಂಡದ್ದು? ನಾವೇ ಅದನ್ನು ಮೊದಲು ಕಂಡುಹಿಡಿಯಲು ಯಾಕೆ ಸಾಧ್ಯವಾಗಲಿಲ್ಲ. ನಿಮಗೆ ಏಕೆ ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ?

                ಉತ್ತರ
                • Kumar
                  ಏಪ್ರಿಲ್ 17 2012

                  ಅಭಿಮಾನ ಇರಲು ಪಂಡಿತರಾಗಿರಬೇಕಿಲ್ಲವಲ್ಲ?
                  ಇಂದು ನಾವು ವೇದಾಧ್ಯಯನದಲ್ಲಿ ಹಿಂದೆ ಬಿದ್ದಿದ್ದೇವೆ, ಅದಕ್ಕೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿಲ್ಲ.
                  ಅಷ್ಟೇ ಅಲ್ಲ, ಪೇದಾಧ್ಯಯನವೆಂದರೆ “ಅದು ಅವೈಜ್ಞಾನಿಕ, ದೇವರಿಗೆ ಸಂಬಂಧಿಸಿದ್ದು ಮಾತ್ರ,” ಇತ್ಯಾದಿಯಾಗಿ ಅಡ್ಡಗಾಲು ಹಾಕುವವರೇ ಹೆಚ್ಚಾಗಿದ್ದಾರೆ.
                  ಆದರೆ, ಈ ರೀತಿಯ ಪ್ರಯತ್ನಗಳು ನಡೆಯುತ್ತಿಲ್ಲವೆಂದೇನಿಲ್ಲ. ಆ ಕುರಿತು ಸಾಕಷ್ಟು ಸಂಶೋಧನೆಗಳು ಭಾರತದಲ್ಲಿ ಮತ್ತು ಭಾರತದ ಹೊರಗೆ ನಡೆದಿದೆ.

                  ನಿಮಗೆ ಸಂಸ್ಕೃತ ತಿಳಿಯದು; ವೇದಾಧ್ಯಯನ ಮಾಡಿಲ್ಲ; ತಿಳಿದುಕೊಳ್ಳುವ ಮನಸ್ಸೂ ಇಲ್ಲ – ಇಷ್ಟಾಗಿಯೂ ನೀವು ಹೇಳುವ ಮಾತು ನೋಡಿ: “ನಿಮಗೆ ಏಕೆ ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ?”
                  ಆಸ್ಟ್ರಿಚ್ ಪಕ್ಷಿಯು ಆಕಾಶ ತಲೆಮೇಲೆ ಬೀಳುತ್ತದೆ ಎಂದು ಮರಳಿನಲ್ಲಿ ತಲೆಯನ್ನು ಹುದುಗಿಸುತ್ತದೆ. ಆಗ ಆಕಾಶ ತನ್ನ ತಲೆಯ ಮೇಲೆ ಬೀಳಲಾರದು ಎಂದು ಅದು ನಂಬುತ್ತದೆ.
                  ಬೆಕ್ಕು ಕಣ್ಮುಚ್ಚಿ ಹಾಲು ಕುಡಿಯುತ್ತದೆ – ಕಣ್ಮುಚ್ಚಿದಾಗ ತನ್ನನ್ನು ಯಾರೂ ನೋಡುತ್ತಿಲ್ಲ ಎಂದು ಅದರ ನಂಬಿಕೆ.
                  ಅದೇ ರೀತಿ, ವೇದವೇ ತಿಳಿಯದ, ಸಂಸ್ಕೃತವೇ ಗೊತ್ತಿಲ್ಲದ ನೀವು, “ವೇದದಲ್ಲಿ ವಿಜ್ಞಾನ ಇರಲು ಸಾಧ್ಯವಿಲ್ಲ; ಏಕೆಂದರೆ ನನಗೆ ಕಾಣುತ್ತಿಲ್ಲ” ಎನ್ನುತ್ತಿರುವಿರಿ!!

                  ನಿಮ್ಮಿಷ್ಟ. ನಿಮಗಾರೂ ವೇದವನ್ನು ತಿಳಿಯುವಂತೆ ಒತ್ತಾಯಿಸುತ್ತಿಲ್ಲ.
                  ವೇದವು ವಿಜ್ಞಾನ ವಿರೋಧಿಯಲ್ಲ. ವಿಜ್ಞಾನವು ನಿಂತ ನೀರಲ್ಲ. ವೇದಕಾಲದಲ್ಲೇ ಎಲ್ಲ ಅನ್ವೇಷಣೆಗಳೂ ಆಗಿಬಿಟ್ಟಿವೆ, ಮತ್ತೇನೂ ಆಗಬೇಕಾಗಿಲ್ಲ ಎಂದು “ವೇದಾಭಿಮಾನಿಗಳು’ ಯಾರೂ ಹೇಳುತ್ತಿಲ್ಲ. ಗಣಿತಕ್ಕೆ ಸೊನ್ನೆಯಿಂದ ೯ರವರೆಗೆನ ಅಂಕೆಗಳು ಮೂಲ, ವಾಹನಕ್ಕೆ ಚಕ್ರವು ಮೂಲ. ಗಣಿತ-ವಿಜ್ಞಾನದ ಮೂಲಗಳು ವೇದದಲ್ಲಿವೆ. ಆದರೆ, ಮೂಲವೇ ಅಂತ್ಯವಲ್ಲ. ವಿಜ್ಞಾನ ಎಂಬುದು ನಿರಂತರ ಹುಡುಕುವಿಕೆ. ಈ ರೀತಿ ಹುಡುಕುತ್ತಾ ನಾವಿಂದು ಹತ್ತನೇ ಮಹಡಿಗೆ ಬಂದಿರಬಹುದು. ನಮಗೀಗ ನೆಲಮಹಡಿ ಕಾಣುತ್ತಿಲ್ಲ. ಆದರೆ, “ನಮಗೆ ನೆಲಮಹಡಿ ಕಾಣುತ್ತಿಲ್ಲ; ಹೀಗಾಗಿ ನೆಲಮಹಡಿ ಇರಲಾರದು” ಎಂದು ಹೇಳಿದರೆ, ನೆಲಮಹಡಿಗೇನೂ ನಷ್ಟವಿಲ್ಲ.
                  ವೇದವನ್ನು ನೀವು ತಿಳಿಯದಿರುವುದರಿಂದ ವೇದಕ್ಕೇನೂ ನಷ್ಟವಿಲ್ಲ.

                  ಆದರೆ, ನಿಮ್ಮ ಚರ್ಚೆಯು ವೈಜ್ಞಾನಿಕ ಮನೋಭಾವನೆಯನ್ನು ತೋರಿಸುತ್ತಿಲ್ಲ. ಹಿಂದಿನದನ್ನು ನಿರಾಕರಿಸುವುದೇ ವಿಜ್ಞಾನವಲ್ಲ.

                  ಆಲ್ಬರ್ಟ್ ಐನ್ಸ್‌ಟೈನ್ ಹೀಗೆ ಹೇಳಿದ್ದರು: “We owe to the Indians for they taught us to count without which no scientific discovery was ever possible”.
                  ಅದೇ ರೀತಿ, ಚೀನಾದ ರಾಯಭಾರಿ ಹು ಶೀ ಹೀಗೆ ಹೇಳಿದ್ದರು: “India conquered and dominated China culturally for 20 centuries without ever having to send a single soldier across her border”.

                  Voltaire: the famous French writer and philosopher stated; “Pythagorus went to the Ganges to learn geometry.” A statue of Pythagoras is seen in Varanasi. Abraham Seidenberg, author of the authoritative “History of Mathematics,” credits the Sulba Sutras as inspiring all mathematics of the ancient world from Babylonia to Egypt to Greece. The theorem bearing the name of the Greek mathematician Pythagorus is found in the Shatapatha Brahmana as well as the Sulba Sutra, the Bharatian mathematical treatise, written centuries before Pythagorus was born.

                  French astronomer Jean-Claude Bailly corroborated the antiquity and accuracy of the Vedic astronomical measurements as “more ancient than those of the Greeks or Egyptians.” And that, “the movements of the stars calculated 4,500 years ago, does not differ by a minute from the tables of today.”

                  Chinese scholar and author Lin Yutang wrote that, “Ancient Bharata was China’s teacher in trigonometry, quadratic equations, grammar, phonetics and philosophy”.

                  Julius Robert Oppenheimer: the principle developer of the atomic bomb, stated; “The Vedas are the greatest privilege of this century. “During the explosion of the first atomic bomb, Oppenheimer quoted from Bhagavad-Gita: 12th & 32nd verses from the 11th chapter: “If the radiance of a thousand suns were to burst at once into the sky, that would be like the splendor of the mighty one.” and “Time I am become the Death, the destroyer of worlds”.

                  “ಐನ್ಸ್‌ಟೈನ್ ಹಳಬರು. ಹಾಗಾಗಿ ಇಂದಿನಷ್ಟು ತಿಳುವಳಿಕೆ ಇರಲಿಲ್ಲ. ಅಥವಾ ಅರಳುಮರಳಿನಲ್ಲಿ ಹೀಗೆ ಹೇಳಿರಬೇಕು”, ಎಂದು ನೀವನ್ನಬಹುದು.
                  ಅದಕ್ಕೆ ನಾನೇನೂ ಉತ್ತರ ನೀಡಲಾರೆ!

                  ಉತ್ತರ
                  • Ananda Prasad
                    ಏಪ್ರಿಲ್ 17 2012

                    ಸೊನ್ನೆ ಹಾಗೂ ಕೆಲವು ಸಂಖ್ಯಾಶಾಸ್ತ್ರದ ಆವಿಷ್ಕಾರ ಭಾರತದಲ್ಲಿ ಆಗಿಲ್ಲ ಎಂದು ಇಂದಿನ ವಿಜ್ಞಾನ ಹೇಳುತ್ತಿಲ್ಲ. ಇದನ್ನು ವಿಜ್ಞಾನ ಒಪ್ಪಿಕೊಂಡಿದೆ. ವೇದಗಳಲ್ಲಿ ಎಲ್ಲ ಹೇಳಿದೆ ಎಂಬುದು ಇಲ್ಲಿನ ವಾದ ವಿವಾದಕ್ಕೆ ಕಾರಣವಾದ ಮೂಲ ಲೇಖನದ ಸಾರ ಆದ ಕಾರಣ ಚರ್ಚೆಗೆ ಬರಬೇಕಾಯಿತು. ಮೂಲ ಲೇಖನದಲ್ಲಿ ಸಾಕಷ್ಟು ಲೋಪಗಳಿವೆ. ವೇದಗಳಲ್ಲಿ ಸಾಕಷ್ಟು ಜ್ಞಾನ ಇದ್ದರೆ ಮತ್ತು ಇಂದಿನ ಅವಿಷ್ಕಾರಗಳು ಅದರಲ್ಲಿ ಮೊದಲೇ ಹೇಳಲಾಗಿದ್ದರೆ ಅದನ್ನು ಉಪಯೋಗಿಸಿ ಅಧುನಿಕ ಆಯುಧಗಳನ್ನು ನಿರ್ಮಿಸಿ ನಾವು ಬ್ರಿಟಿಷರನ್ನು ಸುಲಭವಾಗಿ ಓಡಿಸಬಹುದಿತ್ತಲ್ಲ? ಏಕೆ ಯಾರೂ ಈ ಬಗ್ಗೆ ಪ್ರಯತ್ನಿಸಲಿಲ್ಲ? ಈಗಲೂ ಕೂಡ ಅಷ್ಟೇ ವೇದಗಳಲ್ಲಿ ಅಸಂಪ್ರದಾಯಿಕ ಇಂಧನವನ್ನು ಪೆಟ್ರೋಲಿಯಂಗಿಂತ ಅಗ್ಗವಾಗಿ ರೂಪಿಸುವ ಯಾವುದಾದರೂ ತಂತ್ರಜ್ಞಾನ ಇದ್ದರೆ ಅದನ್ನು ಈಗಲೇ ಬಳಸಿ ದೇಶದ ಇಂಧನ ಸಮಸ್ಯೆಯನ್ನು ನೀಗಿಸಿ ಪರಿಸರ ಮಾಲಿನ್ಯವನ್ನು ತಡೆಯಬಹುದು ಹಾಗೂ ಅಪಾರ ವಿದೇಶಿ ವಿನಿಮಯವನ್ನು ಉಳಿಸಬಹುದು. ಈ ಬಗ್ಗೆ ಪಾಶ್ಚಾತ್ಯರು ವಿಧಾನ ಕಂಡುಕೊಂಡ ನಂತರ ಇದು ವೇದಗಳಲ್ಲಿ ಮೊದಲೇ ಹೇಳಲಾಗಿದೆ ಎಂದು ಹೇಳುವ ಬದಲು ಈಗಲೇ ಅಂಥದೇನಾದರೂ ಇದ್ದರೆ ವೇದಜ್ಞಾನಿಗಳು ಮುಂದೆ ಬಂದರೆ ಉತ್ತಮ ಎಂದು ಅನಿಸುತ್ತದೆ.

                    ಉತ್ತರ
                    • ಏಪ್ರಿಲ್ 17 2012

                      ಆನಂದ ಪ್ರಸಾದರೇ, ವೇದಗಳಲ್ಲಿ ಏನೂ ಹೇಳಿಲ್ಲವೆಂಬ ನಿಮ್ಮಂಥವರ ಕಾಣದೇ ಆಡುವ ರೀತಿಯಲ್ಲೇ ನಮ್ಮ ವಿಜ್ಞಾನಿಗಳು ವೇದಗಳನ್ನು ಬಳಸಲಿಲ್ಲ, ತಿಳಿದುಕೊಳ್ಳಲೂ ಇಲ್ಲ, ತಿಳಿಯಲು ಪ್ರಯತ್ನಿಸಲೂ ಇಲ್ಲ. ವೇದಗಳು ಸುಮ್ಮನೇ ಪೂಜೆಗೆ ಮತ್ತು ಹಳೇಕಾಲದ ಅಂಧಾನುಕರಣೆಗೆ ಅಂತ ಅದನ್ನು ಹಾಗೇ ಇಟ್ಟಿದ್ದರ ಫಲವನ್ನು ನಾವೀಗ ಅರಿಯುತ್ತಿದ್ದೇವೆ, ವರ್ಷಗಳ ಕಾಲ ಹಾಗೇ ಬಿಟ್ಟ ಕಾಲೀಸೈಟಿಗೆ ಯಾರೋ ಬಂದು ಬೇಲಿ ಹಾಕಿದಾಗ ಯಜಮಾನ ಒದ್ದಾಡುವಂತೇ ವಿದೇಶೀಯರು ವೇದಗಳು ತಮ್ಮದೆಂದು ವಾದಮಾಡಲು ಆರಂಭಿಸುತ್ತಿರುವಾಗ ನಾವು ಸ್ವಲ್ಪ ಎಚ್ಚೆತ್ತುಕೊಂಡಿದ್ದೇವೆ. ಅವರು ಹಾಗೆ ಹೇಳುತ್ತಿದ್ದರೂ ಏನೂ ತಲೆಕೆಡಿಸಿಕೊಳ್ಳದ ’ಸಣ್ಣಗುಂಪು’ ಇವತ್ತು ದೊಡ್ಡಗಾತ್ರಕ್ಕೆ ಬೆಳೆಯುತ್ತಿದೆ! ವೇದಗಳೆಲ್ಲಾ ಏನೂ ಅಲ್ಲಾ ಎಂಬುದೇ ಆ ಗುಂಪಿನ ಕುರುಡು ವಾದ, ಓದಲು ಅವರ್ಯಾರೂ ಸಿದ್ಧರೇ ಇಲ್ಲ.

                      ಕುಮಾರ್ ಅವರೇ, ತಮ್ಮಲ್ಲಿ ಒಂದು ವಿಷಯ ಹೇಳಬೇಕಾಗಿದೆ, ನನಗೆ ಗೊತ್ತಿರುವ ಒಬ್ಬ ವ್ಯಕ್ತಿ ಅಕಸ್ಮಾತ್ ನನಗೆ ಮಲ್ಲೇಶ್ವರದಲ್ಲಿ ಸಿಕ್ಕರು, ” ಏನಿಲ್ಲಿ?” ಎಂದು ಕೇಳಿದಾಗ “ನಮ್ಮ ಡಾಕ್ಟರು ಇಲ್ಲೇ ಇರೋದು” ಎನ್ನುತ್ತಾ ತನ್ನ ಹೆಂಡತಿಗೆ ಬ್ರೆಸ್ಟ್ ಕ್ಯಾನ್ಸರ್ ಇದ್ದಿತ್ತಾಗಿಯೂ ನೋಡೋಣ ಎಂದು ಈ ವೈದ್ಯರನ್ನು ಸಂಪರ್ಕಿಸಿದ್ದಾಗಿಯೂ ತಿಳಿಸಿದ್ದೂ ಅಲ್ಲದೇ ಕೇವಲ ಒಂದೇ ವರ್ಷದಲ್ಲಿ ಯಾವುದೇ ಆಪರೇಶನ್ ಇಲ್ಲದೇ ಕ್ಯೂರ್ ಮಾಡಿದ ಆ ವೈದ್ಯರ ಬಗ್ಗೆಯೂ ಹೇಳಿದರು. ಆ ವೈದ್ಯರ ಹೆಸರು : ಡಾ| ಗಿರಿಧರ ಕಜೆ. ಅವರ ಚಿಕಿತ್ಸೆಯಿಂದ ಹಲವು ವಿಧದ ರೋಗಗಳ ಅನೇಕ ರೋಗಿಗಳು ಗುಣಮುಖರಾಗಿದ್ದಾರೆ. ಆಯುರ್ವೇದದಲ್ಲಿ ಅವರೊಬ್ಬ ನಿಷ್ಣಾತ ವೈದ್ಯ!

                      ಆಯುರ್ವೇದ ಯಾಕೆ ತೀರಾ ಬೆಳೆದಿರಲಿಲ್ಲ ಎಂದರೆ ಅಲೋಪಥಿಯ ಅಬ್ಬರದ ನಡುವೆ ಮತ್ತು ಶೀಘ್ರಗಾಮಿಗಳ ಅರ್ಜೆಂಟ್ ಗಳಿಗನುಗುಣವಾಗಿ ಆಯುರ್ವೇದ ಕಲಿತ ವೈದ್ಯರುಗಳೇ ಅಲೋಪಥಿಯ ಮಾತ್ರೆಗಳ ಪ್ರಯೋಗ ಮಾಡುತ್ತಿದ್ದರು. ನನಗೆ ಗೊತ್ತಿರುವಂತೇ ಹಲವು ಆಯುರ್ವೇದ ವೈದ್ಯರುಗಳು ಇದೇ ರೀತಿ ಮಾಡುತ್ತಾರೆ. ಅದರಿಂದ ರೋಗಿಗಳಿಗೆ ಅಲೋಪಥಿಗೂ ಆಯುರ್ವೇದಕ್ಕೂ ವ್ಯತ್ಯಾಸ ಕಾಣಲಿಲ್ಲ! ಕೆಲವರಿಗೆ ರೋಗಗಳು ವಾಸಿಯಾಗಲೂ ಇಲ್ಲ. ಆದರೆ ಆಯುರ್ವೇದವನ್ನು ಸರಿಯಾಗಿ, ಆಳವಾಗಿ ಅಭ್ಯಸಿಸಿ ಅದನ್ನೇ ಆತುಕೊಂಡು ನೀಡುವ ವೈದ್ಯರುಗಳು ಬೆರಳೆಣಿಕೆಯಷ್ಟಿದ್ದಾರೆ, ಅವರು ಯಶಸ್ಸನ್ನೂ ಕಂಡಿದ್ದಾರೆ! ಆಯುರ್ವೇದ ವೈದ್ಯರುಗಳ ಸಂಖ್ಯೆ ಈಗೀಗ ಜಾಸ್ತಿ ಆಗುತ್ತಿದೆ ಏಕೆಂದರೆ ಅಲೋಪಥಿಯ ಅಡ್ಡಪರಿಣಾಮಗಳನ್ನು ಜನ ಮನಗಂಡಿದ್ದರ ಜೊತೆಗೆ ನಿಜವಾದ ಅಯುರ್ವೇದ ಪರಿಣಾಮಕಾರಿ ಎಂಬುದನ್ನೂ ಅರಿತಿದ್ದಾರೆ. ಆಯುರ್ವೇದದ ಔಷಧ ತಯಾರಿಕಾ ಕಂಪನಿಗಳೂ ಜಾಸ್ತಿಯಾಗಿವೆ. ಅಲೋಪಥಿಯಲ್ಲಿ ಬೇಸ್ ಫಾರ್ಮ್ಯುಲಾ ಇರುವುದು ಬರೇ ೨೮ ಎಂದು ನನಗೊಬ್ಬ ವೈದ್ಯರೇ ಹೇಳಿದ್ದಾರೆ; ಆದರೆ ಅಯುರ್ವೇದದಲ್ಲಿ ಹಾಗಲ್ಲ.

                      ಹೆಂಗಸರು ಗರ್ಭನಿರೋಧಕ ಮಾತ್ರೆಗಳನ್ನು ಸತತವಾಗಿ ತೆಗೆದುಕೊಳ್ಳುವುದು ಜಾಸ್ತಿಯಾಗಿದೆ. ಯಾರು ಅವುಗಳ ಬಳಕೆಯನ್ನು ಅತಿಯಾಗಿ ಮಾಡುತ್ತಾರೋ ಅವರಿಗೆ ಬ್ರೆಸ್ಟ್ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ! ಇದು ಆಧುನಿಕ ವಿಜ್ಞಾನದ ಔಷಧಿಯ ಕೊಡುಗೆ! ೪೦ ವರ್ಷಗಳ ನಂತರ ಮಮ್ಮೋಗ್ರಫಿ ಮಾಡಿಸಲೇ ಬೇಕು ಎನ್ನುವ ಅಲೋಪಥಿ ವೈದ್ಯರುಗಳು ಅದನ್ನೇ ದಂಧೆ ಮಾಡಿಕೊಂಡಿರುತ್ತಾರೆ! ಹಿಂದೆ ನಮ್ಮ ಆಜಿಯಂದಿರು, ತಾಯಂದಿರು ಎಲ್ಲಾ ಬದುಕಿಬರಲಿಲ್ಲವೇ? ಎಲ್ಲರೂ ಮಮ್ಮೋಗ್ರಫಿ ಮಾಡಿಸಿದ್ದರೇ? ಇಲ್ಲವಲ್ಲ! ಇಂದಿನ ಮನುಷ್ಯ ಬಹುತೇಕ ಕಾಯಿಲೆಗಳಿಗೆ ದೇಹದೊಳಗೆ ಸೇರುವ ವಿಷಕಾರೀ ಕೆಮಿಕಲ್ ಗಳೇ ಕಾರಣ! ಯಾವುದೇ ರಾಸಾಯನಿಕ ಗೊಬ್ಬರಗಳು, ಕ್ರಿಮಿನಾಶಕಗಳು ಎಲ್ಲವೂ ವಿಷಮಯವೇ! ಅವುಗಳನ್ನು ಉಪಯೋಗಿಸಿ ಬೆಳೆದ ಬೆಳೆಗಳು ನಮ್ಮ ಆಹಾರವಲ್ಲವೇ? ಅಲ್ಲಿಂದಲೇ ಕಾಯಿಲೆಯ ಮೂಲ ಆರಂಭ. ಈಗೀಗ ಮತ್ತೆ ಭಾರತೀಯ ಮೂಲದ ಆರ್ಗ್ಯಾನಿಕ್ ಕೃಷಿ ಅಲ್ಲಲ್ಲಿ ಕಾಣಸಿಗುತ್ತದೆ. ಆರ್ಗ್ಯಾನಿಕ್ ಕೃಷಿ ಮಾಡುವಾಗ ನೈಸರ್ಗಿಕ ಗೊಬ್ಬರ, ಗಂಜಲ ಎಲ್ಲವೂ ಬೇಕು. ಇದಲ್ಲವೇ ನಮ್ಮ ಪೂರ್ವಜರು ನಮಗೆ ಕಲಿಸಿದ್ದು?

                      ಇರಬಹುದು, ಮೋಟಾರು-ಯಂತ್ರ-ಕಂಪ್ಯೂಟರ್-ದೂರವಾಣಿ ಇಂಥದ್ದೆಲ್ಲಾ ಅಧುನಿಕ ವಿಜ್ಞಾನದ ಕೊಡುಗೆಗಳೇ. ಆದರೆ ಅವುಗಳ ಆವಿಷ್ಕಾರಗಳ ಬಗ್ಗೆಯೂ ಮೊದಲಿನವರಿಗೆ ಗೊತ್ತಿರಲಿಲ್ಲ ಎಂಬುದು ತಪ್ಪು; ಈಗ ಮನುಷ್ಯ ಮಾಡುತ್ತಿರುವುದು ರೀ-ಸರ್ಚ್ ಅಷ್ಟೇ! ಅದು ಒಮ್ಮೆ ಸರ್ಚ್ ಆಗಿದ್ದೇ ಆಗಿದೆ. ನೀವು ಕೇಳಬಹುದು: ಯಾರೋ ಒಬ್ಬಾತನಿಗೆ ಆಕ್ಸಿಡೆಂಟ್ ಆದರೆ ಆಗ ಅವನನ್ನು ಮೊದಲು ಬದುಕಿಸುವುದು ಅಲೋಪಥಿಯಲ್ಲವೇ? ಹೌದು! ನೋ ಡೌಟ್, ಆದರೆ ಅಲೋಪಥಿಯಲ್ಲಿ ಬಳಸುವ ಉಪಕರಣಗಳ ಬಗ್ಗೆ ಆಯುರ್ವೇದದಲ್ಲೂ ಹೇಳಿದೆ, ಆ ಕಾಲದಲ್ಲೇ ಚರಕ ಮತ್ತು ಸುಶ್ರುತರು ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ಬಗ್ಗೆ ದಾಖಲೆ ಇದೆ-ವಿವರಣೆಯೂ ಇದೆ. ಆದರೆ ನಡುವಿನ ಕಾಲದಲ್ಲಿ ನಮ್ಮಲ್ಲಿನ ಜನರ ಮೌಡ್ಯದಿಂದ ಆ ವಿದ್ಯೆಗಳು ಕೈಬಿಟ್ಟು ಹೋದವು! ಈಗ ನಿಧಾನವಾಗಿ ಮತ್ತೆ ಆಯುರ್ವೇದ ಚೇತರಿಸಿಕೊಳ್ಳುತ್ತಿದೆ.

                      ಪ್ರಸಕ್ತ ನಾವು ವಿಜ್ಞಾನ ಮತ್ತು ವೇದವಿಜ್ಞಾನಗಳ ಸಮನ್ವಯತೆ ಕಾಣಬೇಕು. ವೇದ ಸುಳ್ಳು ಅಥವಾ ವೇದ ಸೀಮಿತ ಜ್ಞಾನಭಂಡಾರ ಅಥವಾ ಕೆಲಸಕ್ಕೆ ಬಾರದ ಮಂತ್ರಭಂಡಾರ ಎಂಬ ಹುಳುಕು ಮನೋಭಾವ ತೊರೆದು ಹಾಗಾದರೆ ವೇದಗಳಲ್ಲಿ ಏನಿದೆಯಪ್ಪಾ ಎಂದು ಕಣ್ತೆರೆದು ನೋಡುವಂತಾಗಬೇಕು. ಸ್ಥೂಲವಾಗಿ ಹೇಳಬೇಕೆಂದರೆ ವೇದದ ಥಿಯರಿಯನ್ನೇ ವಿಜ್ಞಾನ ಪರೋಕ್ಷವಾಗಿ ಪ್ರಾಕ್ಟಿಕಲ್ ಆಗಿ ಮಾಡುತ್ತಿದೆ; ಪ್ರಾಕ್ಟಿಕಲ್ ಮಾಡುವ ಹಂತದಲ್ಲಿ ತನಗೆ ಕಂಡಿದ್ದೇ ಸತ್ಯ ಎನ್ನುತ್ತದೆ-ಅದು ಸಲ್ಲ, ಪ್ರಾಕ್ಟಿಕಲ್ ಪಕ್ಕಾ ಆಗಲು ವಿಜ್ಞಾನಕ್ಕೆ ಸಮಯ ಹಿಡಿಯುತ್ತದೆ. ಯಾವಾಗ ಪ್ರಾಕ್ಟಿಕಲ್ ಪಕ್ಕಾ ಆಗುತ್ತದೋ ಆಗ ಹೋಲಿಸಿನೋಡಿದರೆ ವೇದಗಳಲ್ಲಿ ಹೇಳಿದ್ದು ರೂಢಿಗತವಾಗಿ ಬಳಕೆಗೆ ಬಂದಿರುತ್ತದೆ! ಅಂದರೆ ವೇದ ಕಂಡಿದೆ-ಅದರ ಅರಿವು ನಮಗಿಲ್ಲ, ವಿಜ್ಞಾನ ಹುಡುಕುತ್ತಿರುವಾಗಲೇ ಅರ್ಧಜ್ಞಾನದಿಂದ ಕಂಡಿದ್ದನ್ನು ಸತ್ಯ ಎನ್ನದೇ ನಾವು ಇರೊಲ್ಲ!– ಈ ರಿವಾಜು ಹೋಗಬೇಕು, ವೇದಗಳ ಆಕರಣೆ ಅಥವಾ ಬಳಕೆ ಸಾಧ್ಯವಾಗಬೇಕು. ಹಾಗಾದಾಗಲೇ ಇಂದಿನ ನತದೃಷ್ಟ ಸ್ಥಿತಿ ನಿವಾರಣೆಯಾಗುತ್ತದೆ!

                    • namdu Godsege maataadtaite
                      ಏಪ್ರಿಲ್ 19 2012

                      niivu aaudha hiDitiivi anta hOdre, naanu upavasa satyaagrha maadtiini, saayaganta, anta heLi heLi taDiitidrallana, rashrapita Gandhiiji, adE bereyavru himse maaDidre nanige adellaa gottilla anta gOLaadtidralla namma Rashrtapita.
                      yakkanna niinu itihaasa odlilva? oh nimdooke vignanad myage pyaarge aagbuttaite?

                    • Hutatma, Pundit Godse
                      ಏಪ್ರಿಲ್ 19 2012

                      niivu aayudha hiDitiivi anta hOdre, naanu upavasa satyaagrha maadtiini, saayaganta, anta heLi heLi taDiitidrallana, Rashrapita Gandhiiji. adE bereyavru himse maaDidre nanige adellaa gottilla antidralla?.
                      yakkanna niinu itihaasa odlilva? oh nimdooke vignanad myage pyaarge aagbuttaite?

    • ಏಪ್ರಿಲ್ 16 2012

      ಮಾನ್ಯ ಆನಂದ ಪ್ರಸಾದರೇ, ನಿಮ್ಮ ಮಾತುಗಳನ್ನು ಒಪ್ಪುತ್ತೇನೆ. ಆದರೆ ನಾನು ಪ್ರಾಥಮಿಕವಾಗಿ ಕೆಲವು ಪ್ರಶ್ನೆಗಳನ್ನು ಕೇಳಿದ್ದೆ, ಅದಕ್ಕೆ ವಿಜ್ಞಾನಿಗಳು ನಿರುತ್ತರರಾಗುತ್ತಾರೆ! ಆತ್ಮ ಎಂದರೆ ಜೀವ ಎಂದು ಅವರ ಹೇಳಿಕೆ, ಒಂದು ಸೂಕ್ಷ್ಮ ನೋಡಿ : ಆತ್ಮ ಹೊರಟುಹೋದಮೇಲೂ ಕಣ್ಣುಗಳಿಗೆ ಜೀವ ಇರುತ್ತದೆ! ಅದನ್ನು ವಾರಸುದಾರರ ಮುಖಾಂತರ ದಾನಮಾಡಿಸುವವರಿದ್ದಾರೆ. ಸತ್ತ ಬಹುಸಮಯದವರೆಗೂ ಜೀವಕೋಶಗಳು ಇನ್ನೂ ಸತ್ತಿರುವುದಿಲ್ಲ! ಇಂಥದ್ದಕ್ಕೆ ಏನೆನ್ನುತ್ತೀರಿ ? ಆಯ್ತು ಹೋಗಲಿ, ಸತ್ತ ಜೀವವನ್ನು ಮತ್ತೆ ಬದುಕಿಸಲು ಆಗುವುದಿಲ್ಲ ಯಾಕೆ? ಎಷ್ಟೇ ವಸ್ತುಗಳು, ಉಪಕರಣಗಳು ಲಭ್ಯವಿದ್ದರೂ ರಕ್ತ-ಮಾಂಸಗಳನ್ನು ಕೃತ್ರಿಮವಾಗಿ ತಯಾರಿಸಲಾಗುತ್ತಿಲ್ಲವಲ್ಲ ಯಾಕೆ ?

      ಮನುಷ್ಯನ ಈ ಶರೀರ ಅಥವಾ ಯಾವುದೇ ಜೀವಿಯ ಶರೀರ ಪಂಚಭೂತಳಿಂದಲೇ ಆಗಿದೆ!-ಅದಕ್ಕೆ. ಆಕಾಶ, ಭೂಮಿ, ವಾಯು, ನೀರು, ಅಗ್ನಿ ಈ ಐದು ತತ್ವಗಳಿಂದಲೇ ಶರೀರದ ವ್ಯುತ್ಫತ್ತಿಯಾಗುತ್ತದೆ. ಅದರ ಹರಹು ಬಹಳ ವೈಜ್ಞಾನಿಕವಾಗಿದ್ದನ್ನು ಸರಿಯಾಗಿ ನೀವು ವೇದದ ಸಾರ ಅರಿತರೆ ತಿಳಿದುಕೊಳ್ಳಬಲ್ಲಿರಿ. ಈ ಪ್ರಪಂಚದ ಪ್ರತಿಯೊಂದೂ ವಸ್ತುಗಳೂ ಪಂಚಭೂತಾತ್ಮಕವೇ! ಮೂಲವನ್ನು ಶೋಧಿಸುತ್ತಾ ಹೊರಟವರಿಗೆ ಅವೇ ಪಂಚಭೂತಗಳ ದರ್ಶನವಾಗುತ್ತದೆ!! ನೀವು ನಾಸ್ತಿಕವಾದಿಯೇ ಇರಬಹುದು, ನಿಮಗೆ ವೇದಗಳಲ್ಲಿ ನಂಬಿಕೆ ಇಲ್ಲದಿರಬಹುದು-ಅದು ಬೇರೇ ಪ್ರಶ್ನೆ. ಮೇಲೆ ಕೆಲವು ಪಂಡಿತರನ್ನು ಹೆಸರಿಸಿದ್ದೇನೆ ನೋಡಿ: ಅವರಲ್ಲಿ ಡಾ| ಆರ್. ಗಣೇಶ್ ರ ಬಗ್ಗೆ ತಾವು ಕೇಳಿರಬಹುದು. ನಡೆದಾಡುವ ಆ ವಿಶ್ವಕೋಶವನ್ನು ಮೆದುಳಲ್ಲೇನಿದೆ ಎಂದು ನಿಮ್ಹಾನ್ಸ್ ನಲ್ಲಿ ಕೂರಿಸಿ ವಿಜ್ಞಾನಿಗಳು ಪರೀಕ್ಷಿಸಿದ ದಾಖಲೆಗಳಿವೆ; ಅದೂ ಅವರು ವಿಜ್ಞಾನಿಗಳಿಗಾಗಿಯೇ ಅಲ್ಲಿ ಅಷ್ಟಾವಧಾನ ನಡೆಸಿಕೊಡುತ್ತಿರುವಾಗಲೇ ನಡೆದಿರುವ ಕೆಲಸ! ಪರಿಣಾಮ : ಮೆದುಳಿನಲ್ಲಿಸ ಏನೂ ವ್ಯತ್ಯಾಸ ಕಾಣಲಿಲ್ಲವಂತೆ! ನಿರಾಸೆಯಿಂದ ಕೈಬಿಟ್ಟಿದ್ದಾರೆ. ಅಂತಹ ಮಹನೀಯರು ಪ್ರವಚನ ನೀಡುವಾಗ ನೀವು ಕೆಲವು ಸಮಯ ಅಲ್ಲಿ ಕುಳಿತುಕೊಳ್ಳಿ. ನೀವು ನಂಬಿ ಎಂದು ನಾನೆನ್ನುವುದಿಲ್ಲ, ಪರೀಕ್ಷಾರ್ಥ ಕುಳಿತುಕೊಳ್ಳಿ, ಯಾವುದೇ ಪ್ರಶ್ನೆ ಕೇಳಿ-ನಿಮಗೆ ಉತ್ತರ ಸಿಗದಿದ್ದರೆ ನನಗೆ ತಿಳಿಸಿ!! ಇಂತಹ ದಿವ್ಯ ಮೆದುಳನ್ನು ಅವರು ಹೇಗೆ ಪಡೆದರು? ವಿಜ್ಞಾನಕ್ಕೇ ಸವಾಲಾಗಿದೆ! ಇನ್ನೂ ಒಂದು ಮಾತು ಹೇಳುತ್ತೇನೆ: ಯಾವುದೋ ಜನರು ಅರ್ಧಂಬರ್ದ ಜ್ಞಾನದಲ್ಲಿ ಹೇಳಿದ ಮಾತುಗಳಿಗೂ ವಿದ್ವಾಂಸರ ಮಾತುಗಳಿಗೂ ವ್ಯತ್ಯಾಸವಿರುತ್ತದೆ, ಗಣೇಶ್ ಅವರು ಹಳೇಕಾಲದ ಪಂಡಿತರಲ್ಲ; ಅವರು ಪ್ರಾಥಮಿಕವಾಗಿ ಮೆಕಾನಿಕಲ್ ಎಂಜಿನೀಯರ್, ಆಮೇಲೆ ಡಾಕ್ಟರೇಟ್ ಪಡೆದವರು, ಹುರುಳಿಲ್ಲದೇ ಯಾವುದನ್ನೂ ಒಪ್ಪುವ ಜನ ಅಲ್ಲ! ಅವರ ಮಾತುಗಳನ್ನು ನೀವು ಕೇಳಿದ್ದಾದರೆ ನಿಮ್ಮಲ್ಲಿನ ನಾಸ್ತಿಕತೆ ಬದಲಾಗಲೂ ಬಹುದು; ಅದು ಕನವರ್ಷನ್ ಅಲ್ಲ ಬೌದ್ಧಿಕ ಚಿಂತನಾ ಮಟ್ಟ ಅಷ್ಟೇ. ನೀವು ಬದಲಾಗಲೇಬೇಕು ಎಂದೂ ನಾನು ಒತ್ತಾಯಿಸುತ್ತಿಲ್ಲ, ಬದಲಾವಣೆ ಆಗಬಹುದು ಎಂದೆ ಅಷ್ಟೇ.

      ಮೇಲೆ ಬಾಲಚಂದ್ರರಿಗೆ ನೀಡಿದ ನನ್ನ ಪ್ರತ್ಯುತ್ತರಗಳನ್ನು ಗಮನಿಸಿ, ಅವುಗಳಲ್ಲಿ ತಕ್ಕಮಟ್ಟಿಗೆ ಘಟನೆಗಳ ಉದಾಹರಣೆ ನೀಡಿದ್ದೇನೆ. ಅದರಿಂದಲೂ ನಿಮಗೆ ವಿಜ್ಞಾನವಷ್ಟೇ ಸತ್ಯ ಎಂಬ ಅನಿಸಿಕೆ ದೂರವಾಗಬಹುದು! ಕೊನೆಯಲ್ಲಿ ನಿಮ್ಮಲ್ಲಿ ಹೇಳುವುದಿಷ್ಟೇ : ನಾವು ಕಾಣುತ್ತಿರುವ ಲೋಕವಷ್ಟೇ ಅಲ್ಲ ಹಲವು ಆಯಾಮಗಳಿವೆ ಅವು ನಮಗೆ ಕಾಣಲಾರವು; ಅವುಗಳನ್ನು ಕೇವಲ ವೈಜ್ಞಾನಿಕವಾಗಿ ತಿಳಿಯಲು ಸಾಧ್ಯವಾಗದು[ ಇದಕ್ಕೆ ನಿಮಗೊಂದು ಚಿಕ್ಕ ಉದಾಹರಣೆ ಕೊಟ್ಟು ಮಾತು ಮುಗಿಸುತ್ತೇನೆ: ಡಾ| ಪದ್ಮಿನಿ ಪ್ರಸಾದ್ ಪ್ರಸಿದ್ಧ ಸ್ತ್ರೀರೋಗ, ಪ್ರಸೂತಿ ಮತ್ತು ಇನ್ಫಟಿಲಿಟಿ ಸ್ಪೆಶಲಿಷ್ಟ್, ಸುವರ್ಣ ನ್ಯೂಸ್ ನಲ್ಲಿ ವಾರದ ಕೆಲವುದಿನ ರಾತ್ರಿ ೧೧:೩೦ ರಿಂದ ೧೨ರ ತನಕ ಅವರಿರುತ್ತಾರೆ. ಒಮ್ಮೆ ಅವರು ವಾಹಿನಿಯೊಂದರಲ್ಲಿ ಮಾತನಾಡಿದ್ದು ನೋಡುತ್ತಿದ್ದೆ. ಆಗ ಅವರು ಒಬ್ಬರಿಗೆ ಹೇಳಿದ್ದು ” ಗಂಡ-ಹೆಂಡಿರು ಇಬ್ಬರಲ್ಲೂ ಮಕ್ಕಳಾಗಬಹುದಾದ ಎಲ್ಲಾ ಅನುಕೂಲತೆಗಳಿದ್ದು, ಯಾವುದೇ ತೊಂದರೆ ಕಾಣಿಸದಿದ್ದರೂ ಮಕ್ಕಳಾಗದೇ ಇರಬಹುದು-ಅದು ಸೃಷ್ಟಿಯ ನಿಯಮ.” –ಎಂದರೆ ಎಲ್ಲವೂ ನಮ್ಮ ಕೈಯ್ಯಲ್ಲಿಲ್ಲ ನಮ್ಮದಲ್ಲದ ಇನ್ನೊಂದು ಹಿಡಿತ ಇದೆ ಎಂಬುದು ಸ್ಪಷ್ಟವಾಗುತ್ತದೆ! ಅನೇಕ ನಾಸ್ತಿಕರು ತಮ್ಮ ಬಿ ಸೈಡ್ ಅಂದರೆ ೫೦ ವಯಸ್ಸಿನ ನಂತರ ಆಸ್ತಿಕರಾಗಿದ್ದಾರೆ-ದಾಖಲೆಗಳಿವೆ] ವಿಜ್ಞಾನಿಗಳೂ ಸನ್ಯಾಸಿಗಳಾದರೆ ಅಥವಾ ಸನ್ಯಾಸಿಗಳೂ ವೈಜ್ಞಾನಿಕವಾಗಿ ಮಾಹಿತಿಯನ್ನು ನೀಡಲು ಮುಂದಾದರೆ ಆಗ ಸಮನ್ವಯತೆ ಕಾಣಬಹುದೇನೋ! ಆದರೆ ಅದು ಬೆಕ್ಕಿಗೆ ಗಂಟೆ ಕಟ್ಟುವ ವಿಚಾರ!! ಪಾರಮಾರ್ಥಿಕ ಚಿಂತನೆಯಲ್ಲೇ ಸದಾ ಇರುವ ಸನ್ಯಾಸಿಗಳಿಗೆ ಅದು ಬೇಕಾಗಿಲ್ಲ; ವಿಜ್ಞಾನಿಗಳು ವೇದಗಳನ್ನು ಓದುವುದಿಲ್ಲ! ಬಹಳ ಹದದಲ್ಲಿ ನೋವಾದೀತೆಂದು ತಿಳಿದು ಜಾಗರೂಕತೆಯಲ್ಲಿ ಪ್ರತಿಕ್ರಿಯಿಸಿದ್ದೀರಿ, ನಿಮ್ಮ ಮನಸ್ಸನ್ನು ನಿಮ್ಮ ಪ್ರತಿಕ್ರಿಯೆಯಿಂದಲೇ ಓದಿದ್ದೇನೆ; ನೀವು ಅಧ್ಯಯನದಿಂದ ಹಲವನ್ನು ಮನಗಾಣಲು ಮುಂದಾಗುತ್ತೀರಿ ಎಂಬ ವಿಶ್ವಾಸ ನನ್ನಲ್ಲಿದೆ, ಧನ್ಯವಾದಗಳು.

      ಉತ್ತರ
  36. Kumar
    ಏಪ್ರಿಲ್ 16 2012

    Read about “Scientific Verification of Vedic Knowledge” at:
    http://www.archaeologyonline.net/artifacts/scientific-verif-vedas.html

    ಉತ್ತರ
  37. Kumar
    ಏಪ್ರಿಲ್ 16 2012

    ಸೃಷ್ಟಿಗೆ ಸಂಬಂಧಿಸಿದಂತೆ ಆಧುನಿಕ ವಿಜ್ಞಾನ ಮತ್ತು ವೇದಗಳ ನಡುವಣ ತುಲನಾತ್ಮಕ ಅಧ್ಯಯನವದ ಕುರಿತಾಗಿ ಇಲ್ಲಿ ತಿಳಿದುಕೊಳ್ಳಿ:

    Click to access science%20of%20creation.pdf

    ಉತ್ತರ
  38. Kumar
    ಏಪ್ರಿಲ್ 16 2012

    ಪ್ರಕೃತಿ ವಿಜ್ಞಾನದ ಉಗಮವಾಗಿದ್ದು ವೇದದಲ್ಲಿ. ಜಗತ್ತಿನ ಇನ್ನಾವ ನಾಗರೀಕತೆಗಳೂ ಆ ವಿಷಯದ ಕುರಿತಾಗಿ ಚಿಂತಿಸದೇ ಇದ್ದ ಕಾಲದಲ್ಲೇ ನಮ್ಮವರು ಅದರ ಕುರಿಗಾಗಿ ಅಧ್ಯಯನ ನಡೆಸಿದ್ದರು ಮತ್ತು ನಿತ್ಯಜೀವನದಲ್ಲಿ ಅನುಸರಿಸಬಹುದಾದ ಸೂತ್ರಗಳನ್ನು ಹಾಕಿಕೊಟ್ಟು, ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬಾಳುವಂತೆ ಮಾಡಿದರು.
    ಪ್ರಕೃತಿ ವಿಜ್ಞಾನದ ಕುರಿತಾಗಿ ವೇದವೇನು ಹೇಳುತ್ತದೆ ಎನ್ನುವುದನ್ನು ಇಲ್ಲಿ ಓದಿ: http://www.sanskrit.nic.in/svimarsha/v2/c17.pdf

    ಉತ್ತರ
  39. Kumar
    ಏಪ್ರಿಲ್ 16 2012

    ರಾಜಾ ರಾಮ್ ಮೋಹನ ರಾಯ್ ವಿರಚಿತ “Vedic Physics: Scientific Origin of Hinduism” ಪುಸ್ತಕದಲ್ಲಿ ಸೃಷ್ಟಿಯ ಕುರಿತಾಗಿ ವೇದಗಳು ಏನು ಹೇಳುತ್ತವೆ ಮತ್ತು ಅವೆಷ್ಟು ವೈಜ್ಞಾನಿಕ ಎನ್ನುವ ಕುರಿತಾದ ಚರ್ಚೆಯಿದೆ.
    ಆ ಪುಸ್ತಕ ಇಲ್ಲಿ ಲಭ್ಯವಿದೆ: http://www.amazon.com/dp/0968412009?tag=worldmyster07-20&link_code=as3&creativeASIN=0968412009&creative=373489&camp=211189

    ವೇದದಲ್ಲಿ ಬರುವ ಭೌತವಿಜ್ಞಾನದ ಸಂಕ್ಷಿಪ್ತ ಚರ್ಚೆ ಇಲ್ಲಿದೆ: http://www.world-mysteries.com/sci_12.htm#Vedic%20Physics

    ಉತ್ತರ
  40. Kumar
    ಏಪ್ರಿಲ್ 16 2012

    ವೇದದಲ್ಲಿರುವ ವಿಜ್ಞಾನದ ಕುರಿತಾಗಿ ತಿಳಿದುಕೊಳ್ಳಲು ಈ ಲೇಖನ ಸಹಾಯಕಾರಿ: http://agniveer.com/663/science-in-vedas/

    ಉತ್ತರ
  41. Kumar
    ಏಪ್ರಿಲ್ 16 2012

    ಆಧುನಿಕ ಗಣಿತ ಮತ್ತು ವಿಜ್ಞಾನಕ್ಕೆ ಭಾರತದ ಕೊಡುಗೆ ಏನು?
    ಅದರ ಕುರಿತಾಗಿ ಸುಪ್ರಸಿದ್ಧ ವಿಜ್ಞಾನಿಗಳು ಏನು ಹೇಳಿದ್ದಾರೆ?
    ಅದರ ಕುರಿತಾಗಿ ಇಲ್ಲಿ ಓದಿ: http://www.hitxp.com/articles/science-technology/modern-science-ancient-india/

    ಉತ್ತರ
  42. Kumar
    ಏಪ್ರಿಲ್ 16 2012

    ವೇದ ಸಂಹಿತೆಗಳಲ್ಲಿರುವ ಗಣಿತದ ಕುರಿತಾಗಿ: http://www.vedah.com/essays-on-veda-upanishad-etc/advanced-topics/85-mathematics-in-veda/493-mathematics-in-veda

    ಉತ್ತರ
  43. Kumar
    ಏಪ್ರಿಲ್ 16 2012

    ಭಾರತೀ ಕೃಷ್ಣ ತೀರ್ಥರ ವೇದಗಣಿತದ ೧೬ ಸೂತ್ರಗಳು: http://en.wikipedia.org/wiki/Bharati_Krishna_Tirtha's_Vedic_mathematics

    ಇದೇ ಇಂದು “ವೇದ ಗಣಿತ” ಎಂಬ ಹೆಸರಿನಲ್ಲಿ ಪ್ರಸಿದ್ಧಿ ಪಡೆದಿದೆ.
    ಜಗತ್ತಿನ ಎಲ್ಲೆಡೆ ಇದಕ್ಕೆ “ವೇಗ ಗಣಿತ” ಎಂದೂ ಕರೆಯುತ್ತಿದ್ದಾರೆ ಮತ್ತು ಇದನ್ನು ಕಲಿಸುವುದಕ್ಕೆ ಬಹಳ ಬೇಡಿಕೆಯಿದೆ.

    ಉತ್ತರ
    • ಏಪ್ರಿಲ್ 16 2012

      ಕುಮಾರ್ ಅವರೇ, ನಿಮ್ಮ ಪ್ರಯತ್ನ ಸ್ತುತ್ಯಾರ್ಹ, ಅವು ಬರೇ ಆನ್ ಲೈನ್ ಮಾಹಿತಿಗಳು. ವೇದಗಳನ್ನು ಆಮೂಲಾಗ್ರ ಅರಿತರೆ ಮಾತ್ರ ಅಗಾಧತೆ ತಿಳಿಯುತ್ತದೆ. ವೇದವೇ ವಿಜ್ಞಾನ ಎಂಬ ಮನೋಭೂಮಿಕೆ ಸಿದ್ಧವಾಗುವುದು ಸುಲಭವಲ್ಲ ಯಾಕೆಂದರೆ ಅದು ಸದ್ಯಕ್ಕೆ ಸಂಸ್ಕೃತದಲ್ಲಿ ಹೊತ್ತಗೆಗಳ ರೂಪದಲ್ಲಿ ಇರುವುದರಿಂದ ಯಾರೂ ಅದನ್ನು ಸರಿಯಾಗಿ ಓದುತ್ತಿಲ್ಲ. ಅಪೌರುಷೇಯವಾದ ವೇದಗಳನ್ನು ಯಾರು ಬೇಕಾದರೂ ಓದಬಹುದು: ಕೆಲವರು ಅದು ಕೇವಲ ಬ್ರಾಹ್ಮಣರಿಗೆ ಮೀಸಲು ಎಂದುಕೊಳ್ಳುತ್ತಾ ವಿಚಿತ್ರಗತಿಯಲ್ಲಿ ನೋಡುತ್ತಾರೆ. ನಾನು ಎಲ್ಲರಲ್ಲೂ ವಿನಂತಿಸುವುದಿಷ್ಟೇ ವೇದಗಳು ಎಲ್ಲರಿಗೂ ಮೀಸಲು, ಅಲ್ಲಿ ಜಾತಿ-ವರ್ಗಗಳ ಭೇದಗಳಿಲ್ಲ. ಓದುವ ಆಸಕ್ತಿಯೊಂದೇ ಬೇಕಾದದ್ದು! ನಮ್ಮ ವೇದಗಳನ್ನು ಎಲ್ಲಾ ಭಾರತೀಯರೂ ಓದುವಂತಾಗಲಿ ಮತ್ತು ನಮ್ಮ ಮೂಲ ಸಂಸ್ಕೃತಿ ಉಳಿಯಲಿ ಎಂಬುದಷ್ಟೇ ನನ್ನ ಆಶಯವಾಗಿದೆ. ಮೂಲದಲ್ಲಿ ವೇದಗಳಿಗೇ ವೇದ ಭಾಷೆಯೇ ಇತ್ತಂತೆ, ಆದರೆ ಮಹರ್ಷಿ ವ್ಯಾಸರಿಂದ ವರ್ಗೀಕರಿಸಲ್ಪಟ್ಟು ನಮಗೆ ಸಂಸ್ಕೃತ ಭಾಷೆಯಲ್ಲಿ ಅವು ಲಭ್ಯವಾಗಿವೆ.

      ಏನೇ ಇರಲಿ ಇಂತಿಂತಹ ಟಾಪಿಕ್ ಇಲ್ಲಿಲ್ಲಿ ಇದೆ ಎಂದು ಕಾಣಿಸಿದ್ದೀರಿ, ನಿಮಗೆ ಧನ್ಯವಾದಗಳು.

      ಉತ್ತರ
      • Kumar
        ಏಪ್ರಿಲ್ 16 2012

        V.R.BHAT> ನಿಮ್ಮ ಪ್ರಯತ್ನ ಸ್ತುತ್ಯಾರ್ಹ, ಅವು ಬರೇ ಆನ್ ಲೈನ್ ಮಾಹಿತಿಗಳು.
        V.R.BHAT> ವೇದಗಳನ್ನು ಆಮೂಲಾಗ್ರ ಅರಿತರೆ ಮಾತ್ರ ಅಗಾಧತೆ ತಿಳಿಯುತ್ತದೆ
        “ಆಧುನಿಕ ವೈಜ್ಞಾನಿಕ ಆವಿಷ್ಕಾರಗಳ ಬಗ್ಗೆ ವೇದಗಳಲ್ಲಿ ಇದ್ದೀತು ಎಂದು ಕೂಡ ಅನಿಸುತ್ತಿಲ್ಲ. ಏಕೆಂದರೆ ವೇದಗಳು ಬಹಳ ಹಿಂದೆ ವೈಜ್ಞಾನಿಕ ಉಪಕರಣಗಳು ಇಲ್ಲದಿದ್ದ ಕಾಲದಲ್ಲಿ ರೂಪುಗೊಂಡಿರುವಂಥದ್ದು. ವೈಜ್ಞಾನಿಕ ಉಪಕರಣಗಳು, ಸಾಧನಗಳ ಮೂಲಕ ನಮ್ಮ ಜ್ಞಾನ ವಿಸ್ತರಿಸುತ್ತದೆ. ಅದಿಲ್ಲದೆ ಜ್ಞಾನ ವಿಸ್ತಾರ ಸಾಧ್ಯವಿದೆ ಎಂದು ನನಗೆ ಅನಿಸುವುದಿಲ್ಲ.” ಎಂಬ ಹೇಳಿಕೆಗೆ ಮಾತ್ರ ನನ್ನ ಉತ್ತರ.
        ಸಹಸ್ರಾರು ವರ್ಷಗಳ ಹಿಂದೆ, ಅಂದರೆ “ವೈಜ್ಞಾನಿಕ ಉಪಕರಣಗಳು, ಸಾಧನಗಳು ಇರಲಿಲ್ಲ” ಎಂದು ಇಂದಿನ ಚಿಂತಕರು ಅಂದುಕೊಂಡಿರುವ ಕಾಲದಲ್ಲಿ, ಎಷ್ಟೆಲ್ಲಾ ಸಾಧನೆಗಳಾಗಿತ್ತು ಮತ್ತು ಅವುಗಳೆಲ್ಲಕ್ಕೂ ವೇದವೇ ಮೂಲ ಎಂಬುದರ ಕಡೆ ಗಮನ ಸೆಳೆಯಲು ಮಾತ್ರ ನಾನು ಪ್ರಯತ್ನಿಸಿರುವೆ ಅಷ್ಟೇ.

        ಉದಾಹರಣೆಗೆ, ನಮ್ಮವರು ಅತ್ಯಂತ ದೊಡ್ಡ ಸಂಖ್ಯೆಗಳನ್ನು ಕಲ್ಪಿಸಿಕೊಂಡು ಹೆಸರು ನೀಡಿದರು:
        1025 – ನಾಗಬಾಲ
        1056 – ಅಬ್ಬುದ
        10105 – ಕುಮುದ
        1037218383881977644441306597687849648128 – ಬೋಧಿಸತ್ವ.
        ನಮ್ಮವರು ಇಂತಹ ಬೃಹತ್ ಸಂಖ್ಯೆಗಳನ್ನು ಸೃಷ್ಟಿಸುವಾಗ, ಜಗತ್ತಿನ ಇತರ ದೇಶಗಳ ಜನ ಸಂಖ್ಯಾಶಾಸ್ತ್ರದಲ್ಲಿ ಎಲ್ಲಿದ್ದರು?
        ಪಶ್ಚಿಮದಲ್ಲಿ ಅತ್ಯಂತ ಮುಂದುವರೆದ ರಾಷ್ಟ್ರವೆಂದು ಹೆಸರಾಗಿದ್ದ ರೋಮ್ನಲ್ಲಿ, ಮಿಲ್ಲಿ (103) ದೊಡ್ಡ ಸಂಖ್ಯೆಯಾಗಿತ್ತು.
        ಅದೇ ರೀತಿ ಮತ್ತೊಂದು ಮುಂದುವರೆದ ರಾಷ್ಟ್ರವಾಗಿದ್ದ ಗ್ರೀಸ್ನವರು ಉಪಯೋಗಿಸಿದ್ದ ದೊಡ್ಡ ಸಂಖ್ಯೆ ಮಿರಿಯಡ್ (104)!
        ಚೈನೀಸರು ಉಪಯೋಗಿಸಿದ್ದ ದೊಡ್ಡ ಸಂಖ್ಯೆ 10,000 ಮತ್ತು ಅರಬ್ಬರು ಉಪಯೋಗಿಸಿದ್ದು 1000 ಮಾತ್ರ.

        ಇನ್ನು ನಮ್ಮವರು ಅತಿ ಸಣ್ಣ ಸಂಖ್ಯೆಗಳನ್ನೂ ಉಪಯೋಗಿಸಿದ್ದರು:
        ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ನಿಮೇಶ ಎನ್ನುವ ಉಲ್ಲೇಖ ಬರುತ್ತದೆ. ಅದು ಒಂದು ದಿನದ 1/3,60,000 ಭಾಗವೆಂದು ಹೇಳಲಾಗಿದೆ.
        ಪ್ರಪಂಚದ ಉಳಿದ ಭಾಗದ ಯಾವ ಜನರೂ ಭಿನ್ನರಾಶಿಯನ್ನಾಗಲೀ, ಸ್ಥಾನಬೆಲೆಯನ್ನಾಗಲೀ, ದಶಮಾಂಶ ಪದ್ಧತಿಯನ್ನಾಗಲೀ, ಸೊನ್ನೆಯನ್ನಾಗಲೀ, ಇಂದು ನಾವು ಉಪಯೋಗಿಸುವ ಅಂಕೆಗಳನ್ನಾಗಲೀ ಉಪಯೋಗಿಸಿದ ಉದಾಹರಣೆಗಳಿಲ್ಲ.
        ಹಾಗಿದ್ದರೆ, ಭಾರತದಲ್ಲಿ ಮಾತ್ರ ಈ ರೀತಿ ಗಣಿತ ಮತ್ತು ವಿಜ್ಞಾನಗಳು ಏಕೆ ಬೆಳೆದವು?
        ಕೇವಲ ಪೂಜೆ, ಹವನ ಮಾಡಿಕೊಂಡಿರುವುದಕ್ಕೆ, ಭಿಕ್ಷೆ ಎತ್ತಿ ಊಟ ಮಾಡುವುದಕ್ಕೆ ಇಷ್ಟೆಲ್ಲಾ ಗಣಿತ, ವಿಜ್ಞಾನಗಳ ಆವಶ್ಯಕತೆ ಇಲ್ಲವಲ್ಲವೆ?

        ಪಶ್ಚಿಮದ ಜನರು 17ನೇ ಶತಮಾನದಲ್ಲಿ ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ ಎಂದದ್ದಕ್ಕೆ ವಿಜ್ಞಾನಿಗಳಿಗೆ ಶಿಕ್ಷಿಸಿದರು.
        ನಮ್ಮಲ್ಲಿ ಭೂಮಿಯು ಸೂರ್ಯನ ಸುತ್ತ ಸುತ್ತಲು 364.25 ದಿನ ತೆಗೆದುಕೊಳ್ಳುತ್ತದೆ ಎಂದು ಸುಮಾರು 1500 ವರ್ಷಗಳ ಹಿಂದೆಯೇ ತಿಳಿದಿದ್ದ ದಾಖಲೆಗಳಿವೆ.
        ಪಶ್ಚಿಮದಲ್ಲಿ ಭೂಮಿಯು ಸೃಷ್ಟಿಯಾದದ್ದು ಕೇವಲ 4000-5000 ವರ್ಷಗಳ ಹಿಂದೆ ಆಯಿತೆಂದು ತಿಳಿದಿದ್ದರು.
        ಭೂಮಿಯ ಸೃಷ್ಟಿಗೆ ಸಂಬಂಧಿಸಿದಂತೆ ನಮ್ಮ ಖಗೋಳಶಾಸ್ತ್ರಜ್ಞರು ಹೇಳಿರುವುದು ಇಂದಿನ ವಿಜ್ಞಾನ ಹೇಳುತ್ತಿರುವುದಕ್ಕೆ ಅತ್ಯಂತ ಸಮೀಪದಲ್ಲಿದೆ.
        ನಮ್ಮವರಿಗೂ ಮತ್ತು ಪಶ್ಚಿಮದವರಿಗೂ ಏಕಿಷ್ಟು ಅಂತರ?
        ಮತ್ತು ಇದನ್ನೆಲ್ಲಾ ನಮ್ಮವರು ಯಾವುದೇ ಆಧುನಿಕ ವೈಜ್ಞಾನಿಕ ಸಲಕರಣೆ, ಸಾಧನೆಗಳು ಇಲ್ಲದೆ ಮಾಡಿದ್ದು ಎಂದು ತಿಳಿದಾಗ, ಮತ್ತೂ ಆಶ್ಚರ್ಯವೆನಿಸುತ್ತದೆ.

        ಅವರು ಜಿಜ್ಞಾಸುಗಳಾಗಿಲ್ಲದಿದ್ದಲ್ಲಿ, ಇಷ್ಟೆಲ್ಲಾ ಮಾಡುತ್ತಿರಲಿಲ್ಲ.
        ಹುಡುಕುವುದು ಮತ್ತು ಚರ್ಚಿಸುವುದು ಇಲ್ಲಿನ ಜನರ ಸ್ವಭಾವ. ಅವರೆಂದೂ ಯಾವುದನ್ನೂ ಸುಲಭಕ್ಕೆ ಒಪ್ಪಿಲ್ಲ.
        ವೇದದಲ್ಲಿರುವುದನ್ನೆಲ್ಲಾ ಹಾಗೆಯೇ ಒಪ್ಪಬೇಕೆಂದು ವ್ಯಾಸರೂ ಅಪೇಕ್ಷಿಸಿಲ್ಲ. ಚೆನ್ನಾಗಿ ಅರ್ಥ ಮಾಡಿಕೊಂಡು, ಸರಿಕಂಡರೆ ಮಾತ್ರ ಒಪ್ಪು ಎನ್ನುತ್ತದೆ ವೇದೋಪನಿಷತ್ತುಗಳು.
        ಹಾಗಿಲ್ಲದಿದ್ದಲ್ಲೆ, “ಪ್ರಶ್ನೋಪನಿಷತ್ತು” ಹುಟ್ಟುತ್ತಲೇ ಇರಲಿಲ್ಲ.

        ಪ್ರಾಯಶಃ ಕಳೆದ 1000 ವರ್ಷಗಳಲ್ಲಿ ನಮ್ಮ ಈ ವಿದ್ಯಾಸಂಪತ್ತೆಲ್ಲಾ ನಶಿಸಿ ಹೋಗಿದೆ. ಪರಕೀಯರ ಆಳ್ವಿಕೆ, ಅವರ ಮೇಲೆ ನಡೆಯುತ್ತಿದ್ದ ಯುದ್ಧಗಳು, ಇದರಿಂದಾಗಿ ವಿದ್ಯೆಗೆ ಗಮನ ನೀಡಲಾಗಿಲ್ಲ. ಜೊತೆಗೆ, ಕಡೆಯಲ್ಲಿ ಬಂದ ಬ್ರಿಟಿಷರು ಹುಟ್ಟುಹಾಕಿದ ಒಡೆದು ಆಳುವ ನೀತಿಗೆ ಸಿಕ್ಕಿ, ಮೇಲು-ಕೀಳು, ಸ್ಪೃಷ್ಯ-ಅಸ್ಪೃಷ್ಯ, ಉತ್ತರ-ದಕ್ಷಿಣ, ವಿವಿಧ ಭಾಷೆಗಳು, ವಿವಿಧ ಪ್ರಾಂತಗಳು, ಹೀಗೆ ಎಲ್ಲ ರೀತಿಯಲ್ಲಿ ಒಡೆದು, ನಮ್ಮನಮ್ಮಲ್ಲೇ ಕಚ್ಚಾಡುತ್ತಾ, ಅವರು ನಮ್ಮನ್ನು ದೋಚುತ್ತಿದ್ದರೂ ತಿಳಿಯದ ಸ್ಥಿತಿಗೆ ಹೋಗಿಬಿಟ್ಟೆವು. ಇನ್ನೂ ಆ ಸ್ಥಿತಿಯಿಂದ ಹೊರಬರಲಾಗದೆ, ನಮ್ಮನ್ನೇ ನಾವು ಅರಿಯದೆ ಒದ್ದಾಡುತ್ತಿದ್ದೇವೆ.

        ಉತ್ತರ
        • ಏಪ್ರಿಲ್ 16 2012

          ಪರೋಕ್ಷವಾಗಿ ನಾನು ಲೇಖನದಲ್ಲಿ ಹೇಳಹೊರಟಿದ್ದನ್ನು ಇಲ್ಲಿ ಹೇಳಿದ್ದೀರಿ. ಇಷ್ಟು ಬಿಡಿಸಿ ಆಧಾರ ಸಹಿತವಾಗಿ ವಿವರಿಸಿದರೂ ಅನೇಕರಿಗೆ ವೇದಗಳೆಂದರೆ ಬ್ರಾಹ್ಮಣ ಭಿಕ್ಷುಕರು/ತಟ್ಟೆಕಾಸಿಗೆ ಕೈಗಿಂಜುವವರು ಮಾಡಿಕೊಂಡ ಶಾಸ್ತ್ರ ಎಂದುಕೊಂಡಿದಕ್ಕೆ ಏನನ್ನೋಣ. ಒಂದು ಮಾತು ನೆನಪಾಗುತ್ತದೆ ಕುಮಾರ್ ಅವರೇ, ಬ್ರಿಟಿಷರು ಒಡೆದು ಆಳಿದರೂ ಅವರಿಗೆ ಒಳಗೊಳಗೇ ಅಂಜಿಕೆಯಿತ್ತು. ಅವರು ಇಲ್ಲಿರುವಾಗ ವೇದಗಳನ್ನು ಅಲ್ಲಗಳೆಯಲಿಲ್ಲ! ಆದರೆ ಹೋಗುವಾಗ ಭಾರತೀಯರಲ್ಲಿ ವಿಷಬೀಜ ಬಿತ್ತಿದರು. ಬರುಬರುತ್ತಾ ಜಾತಿಗೊಂದರಂತೇ ಮಠ ಮಾನ್ಯಗಳು. ರಾಜಕೀಯ ರುಷುವತ್ತು ಬೆಳೆದವೇ ಹೊರತು ರಾಜಾಶ್ರಯ ತಪ್ಪಿದ ನಂತರದ ಭಾರತದಲ್ಲಿ ವೇದಗಳ ಕುರಿತಾದ ಆದರವಾಗಲೀ ಮನ್ನಣೆಯಾಗಲೀ ಉಳಿದಿಲ್ಲ. ಸಂಸ್ಕೃತವನ್ನೂ ವೇದಗಳನ್ನೂ ಕೇವಲ ಒಂದು ವರ್ಗಕ್ಕೆ ಸೀಮಿತ ಎಂದು ಹಲವು ಮೂಢರು ಹಣೆಪಟ್ಟಿ ಹಚ್ಚಿದ್ದರಿಂದ ಹಳದಿ ಕಣ್ಣಿಂದಲೇ ಎಲ್ಲರೂ ನೋಡುವವರಾದರೇ ವಿನಃ ವೇದದಲ್ಲೇನಿದೆ ಎಂಬುದನ್ನು ತಿಳಕೊಳ್ಳುವ ಅವಕಾಶವನ್ನೇ ನಿರಾಕರಿಸುವ ’ಬುದ್ಧಿವಂತ’ರಾಗಿಬಿಟ್ಟರು. ಇಂದು ವೇದ, ಆಯುರ್ವೇದ ಇವೆಲ್ಲಾ ವಿದೇಶೀಯರ ಗಮನ ಸೆಳೆದಿವೆ; ಅವರು ಓದಿಕೊಂಡು, ಇವೆಲ್ಲಾ ತಮ್ಮದೆಂದು ಪೇಟೆಂಟ್ ಪಡೆಯಲು ಮುಂದಾಗುತ್ತಿದ್ದಾರೆ; ಯಾಕೆಂದರೆ ಭಾರತೀಯ ಸಂಸ್ಕೃತಿಯ ಆಕರಗ್ರಂಥಗಳು ಬಹಳ ಅಮೂಲ್ಯ ಎಂಬುದನ್ನು ಅವರು ಆಗಲೇ ಮನಗಂಡಿದ್ದಾರೆ. ನಮ್ಮವರು ಅವರು ಹೇಳಿಕೊಟ್ಟ ಗಿಣಿಪಾಠವನ್ನು ಕಲಿಯುತ್ತಾ ನಮ್ಮತನವನ್ನು ಕಳೆದುಕೊಂಡಿದ್ದಾರೆ. ವೇದವಿದ್ವಾಂಸರ ಮಕ್ಕಳು, ಸಮಾಜದಲ್ಲಿ ಜೀವನ ನಡೆಸುವುದು ಕಷ್ಟಕರವಾಗಿರುವುದರಿಂದ, ವೇದಗಳನ್ನು ಓದುತ್ತಾ ಕೂರುವ ಬದಲು ಅಧುನಿಕ ಕಾಲೇಜು ವಿದ್ಯೆಯನ್ನು ಕಲಿತು ಉದರಂಭರಣೆಗೆ ಮುಂದಾಗಿರುವುದರಿಂದ ಬೆರಳೆಣಿಕೆಯಷ್ಟು ಜನ ವೇದಗಳನ್ನು ಕಾಪಿಟ್ಟಿದ್ದಾರೆ. ಕೈಲಾಗದವರು ಮತ್ಸರದಿಂದ ಸಂಸ್ಕೃತ ಭಾಷೆಯನ್ನೂ ಮತ್ತು ವೇದಗಳನ್ನೂ ಕೊಲ್ಲಲು ಟೊಂಕಕಟ್ಟಿ ನಿಂತಿದ್ದಾರೆ. ವೇದ ಅಪೌರುಷೇಯವಾದ್ದರಿಂದ ನಶಿಸುವುದಿಲ್ಲ. ಆದರೆ ನಮ್ಮ ಸಂಸ್ಕೃತಿಯ ಉಳಿವುಮಾತ್ರ ಶಿವನೇ ಬಲ್ಲ! ಇದು ಇಂದಿನ ನಮ್ಮ ಭಾರತ!

          ಉತ್ತರ
  44. Kumar
    ಏಪ್ರಿಲ್ 17 2012

    ನನ್ನ ೫ ವರ್ಷದ ಮಗಳಿಗೆ ಹಲ್ಲಿನ ತೊಂದರೆ ಇದೆ. ಅವಳಿಗೆ ಪ್ರಾರಂಭದಲ್ಲಿ ಬಂದ ಹಲ್ಲು ಬಹಳ ಚೆನ್ನಾಗಿತ್ತು. ಆದರೆ, ನಿಧಾನವಾಗಿ ಹಲ್ಲುಗಳು ಪುಡಿಯಾಗಲಾರಂಭಿಸಿದುವು.
    ದಂತವೈದ್ಯರನ್ನು ಸಂಪರ್ಕಿಸಿದೆವು.
    “ಹಲ್ಲುಗಳು ಆ ರೀತಿ ಆಗಲು ಕಾರಣಗಳೇನು ಎಂದು ತಿಳಿದಿಲ್ಲ. ಮತ್ತು ಅನೇಕ ಮಕ್ಕಳಿಗೆ ಆ ರೀತಿ ಆಗುತ್ತವೆ. ಅದಕ್ಕೆ ಉಪಶಮನವೆಂದರೆ Root Canal Treatment ಮಾಡುವುದು. ಆದರೆ, ಅಷ್ಟು ಚಿಕ್ಕ ಮಗುವಿಗೆ ಅದನ್ನು ಮಾಡಲಾಗುವುದಿಲ್ಲ. ನೀವು ಮಾಡಲೇಬೇಕೆಂದರೆ ಮಾಡುತ್ತೇವೆ.
    ಮತ್ತು ಮುಂದೆ ಬರುವ ಹಲ್ಲುಗಳಿಗೆ ಆ ರೀತಿಯ ತೊಂದರೆ ಆಗದಂತೆ ಮಾಡಲು ನಮ್ಮ ಬಳಿ ಯಾವುದೇ ಔಷಧಗಳಿಲ್ಲ” ಎಂದರು!
    ನಾಲ್ಕಾರು ದಂತವೈದ್ಯರನ್ನು ವಿಚಾರಿಸಿದ ನಂತರ, ಬೆಂಗಳೂರಿನ ಗಂಗಾನಗರದ ದಂತವೈದ್ಯರೊಬ್ಬರು (ಮಹಿಳೆ), “ನನ್ನ ಮಗನಿಗೂ ಇದೇ ರೀತಿ ಆಗಿತ್ತು. ನಾನೇ ಸ್ವತಃ ದಂತವೈದ್ಯೆ. ಇದಕ್ಕೆ ನಮ್ಮ ವೈದ್ಯಶಾಸ್ತ್ರದ ಪ್ರಕಾರ Root Canal Treatment ಬಿಟ್ಟು ಅನ್ಯ ಉಪಾಯವಿಲ್ಲ. ಆದರೆ, ಹೋಮಿಯೋಪತಿಯಲ್ಲಿ Root Canal Treatment ಇಂದ ಸಿಗುವ ಲಾಭವನ್ನೇ ನೀಡುವ ಔಷಧಗಳಿವೆ. ಹಾಗಾಗಿ, ನಾನು ಬನಶಂಕರಿ ೧ನೇ ಹಂತದ ಸಮೀಪ ಇರುವ ಶ್ರೀನಗರದ ಅಶ್ವಿನಿ ಹೋಮಿಯೋ ಚಿಕಿತ್ಸಾಲಯದ ಡಾ||ಮದನ್ ಅವರ ಬಳಿ ಔಷಧಿ ಕೊಡಿಸಿದೆ. ಅವರ ಔಷಧದಿಂದ, Root Canal Treatment ನೀಡಿ ನೋವುಣ್ಣುವುದು ತಪ್ಪಿತು, ಪಕ್ಕದ ಹಲ್ಲುಗಳಿಗೆ ರೋಗ ತಗುಲಲಿಲ್ಲ ಮತ್ತು ಮುಂದೆ ಬರುವ ಹಲ್ಲುಗಳಿಗೂ ರೋಗ ತಗುಲದಂತೆ ಔಷಧ ನೀಡಿದರು” ಎಂದು ಹೇಳಿದರು.
    ನಾವೂ ಅದೇ ಹೋಮಿಯೋ ವೈದ್ಯರ ಬಳಿ ಔಷಧ ಕೊಡಿಸಿದೆವು. ಹಲ್ಲುಗಳು ಪುಡಿಯಾಗುವುದು, ರಕ್ತಸ್ರಾವ, ಕೀವಾಗುವುದು ಇತ್ಯಾದಿಗಳು ನಿಂತಿತು. ಇನ್ಮುಂದೆ ಅವಳಿಗೆ ಹಾಲುಹಲ್ಲುಗಳು ಬಿದ್ದು ಹೊಸ ಹಲ್ಲುಗಳು ಬರಬೇಕಷ್ಟೆ.

    ಅದೇ ರೀತಿ, ಮಕ್ಕಳಾಗದವರಿಗೆ “in vitro fertilization” ಮಾಡುವುದು ತಿಳಿದಿದೆಯಷ್ಟೇ.
    ಅದೂ ವಿಫಲವಾದರೆ, ಮಕ್ಕಳಾಗಲು ಸಾಧ್ಯವಿಲ್ಲ ಎನ್ನುತ್ತದೆ ಆದುನಿಕ ವೈದ್ಯವಿಜ್ಞಾನ.
    ಈ ರೀತಿ ವಿಫಲವಾದ ಅದೆಷ್ಟೋ ಜನರಿಗೆ ಬೆಂಗಳೂರಿನ ಗಾಂಧಿ ಬಜಾರಿನಲ್ಲಿರುವ ಡಾ||ರುದ್ರೇಶ್ ಎನ್ನುವ ಹೋಮಿಯೋಪತಿ ವೈದ್ಯರು ಔಷಧ ನೀಡಿ, ಮಕ್ಕಳಾಗುವಂತೆ ಮಾಡಿದ್ದಾರೆ!

    ಅಂದರೆ, ಆಧುನಿಕ ವೈದ್ಯಕೀಯ ವಿಜ್ಞಾನ ಇನ್ನೂ ಪಕ್ವತೆಯನ್ನು ಹೊಂದಿಲ್ಲ ಮತ್ತು ಅದಕ್ಕೆ ನಿಲುಕದ ಹಲವು ಸಂಗತಿಗಳಿವೆ.
    ಆದರೆ, ಅದು ವಿಫಲವಾದ ಕಡೆ, ಆಯುರ್ವೇದವೋ, ಹೋಮಿಯೋಪತಿಯೋ ಯಶಸ್ವಿಯಾಗಿ ಕೆಲಸ ಮಾಡುತ್ತಿದೆ.
    ಕೇವಲ “ಅಡ್ಡೇಟಿನ ಮೇಲೆ ಗುಡ್ಡೇಟು” ಎಂಬಂತೆ ಆ ಔಷಧ ವಿಜ್ಞಾನಗಳು ಬೆಳೆದಿದ್ದರೆ ಇದು ಸಾಧ್ಯವಾಗುತ್ತಿತ್ತೇ!?

    ಒಂದು ವಿಷಯದ ಕುರಿತಾಗಿ ಅರಿಯದೇ ಏನು ಬೇಕಾದರೂ ಹೇಳಿಬಿಡಬಹುದು. ಅವೆಲ್ಲಾ ನಿಮ್ಮ ಅನುಭವಕ್ಕೂ ಬಂದಿರುವುದಿಲ್ಲ, ಅವುಗಳ ಕುರಿತಾಗಿ ನಿಮಗೆ ಯಾವ ಜ್ಞಾನವೂ ಇರುವುದಿಲ್ಲ. ಕೇವಲ ನಿಮ್ಮ ವಾದವನ್ನು ಗೆಲ್ಲಿಸುವ ಉದ್ದೇಶ ಹೊಂದಿದ್ದವರಿಂದ ಮಾತ್ರ ಇದು ಸಾಧ್ಯ.

    ಉತ್ತರ
    • @ಕುಮಾರ್, ದಯಮಾಡಿ ಇನ್ನು ಮುಂದೆ ನೀವು ಹೋಮಿಯೋಪತಿ, ಇಲ್ಲಾ ಆಯುರ್ವೇದದ ಚಿಕಿತ್ಸೆ ಪಡೆಯಿರಿ. ಬೇಡ ಬೇಡ. ನೀವು ನಮಗೆ ಒಳ್ಳೇ ಮನರಂಜನೆ ಕೊಡುತ್ತಿರುವಿರಿ. ನೀವು ಬದುಕಿ ಬಾಳಬೇಕು. ಹಾಗಾಗಿ ವೈಗ್ನಾನಿಕ ಚಿಕಿತ್ಸೆಯನ್ನೇ ಪಡೆಯಿರಿ. ಹೋಮಿಯೋಪತಿಗೆ ಕಳಿಸಿಕೊಟ್ಟ ದಂತವೈದ್ಯೆ ತರದ ಮೂರ್ಕರ ಸಹವಾಸ ನಿಮ್ಮ ಕುಟುಂಬದ ಆರೋಗ್ಯಕ್ಕೆ ಒಳ್ಳೆಯದಲ್ಲ. ನಾನು ಓದಿದ ಹೆಬ್ಬಾಳದ ವೆಟರಿನರಿ ಕಾಲೇಜಿನಲ್ಲಿ ಒಬ್ಬ ಪ್ರೊಫೆಸ್ಸರ್ ಕೂಡ ತಮ್ಮ ಸಾದಾರಣ ರೋಗವನ್ನ ಆಯುರ್ವೇದದಲ್ಲಿ ಗುಣಪಡಿಸಿಕೊಳ್ಳುವೆ ಎಂದು ಆಯುರ್ವೇದ ಔಶದಿ ತಿಂದು ಸತ್ತರು. ನಿಮ್ಮ ಮಗುವಿನ ಒಳಿತಿಗಾಗೆ ಹೇಳುತ್ತಿದ್ದೇನೆ, ಆಯುರ್ವೇದ ಮತ್ತು ಹೋಮಿಯೋಪತಿಯಿಂದ ಮಗುವನ್ನು ದೂರವಿರಿಸಿ.

      ಉತ್ತರ
      • odugaoduga
        ಏಪ್ರಿಲ್ 20 2012

        ಎಂತಾ ಮಾತಾಡ್ಬುಟ್ಟೆ ಜೋಕರಣ. ನೀನಿಲ್ದೆ ನಿಲುಮೆ ಬಣಬಣ ಹಂತಿತ್ತು. ನೀನು ಬಂದಿದ್ದೇ ಬಂದಿದ್ದು ನೋಡು ಹಿಡೀ ಪ್ರಪಂಚಕ್ಕೇ ಮಿಂಚೊಡದಂಗಾಗದೆ. ನಾ ಯೇಳಿಲ್ವ ಸಿವ ಹವ್ರು ಅಂಗೇಯ ಕೇಳಾಕಿಲ್ಲ ಹಾಯುರ್ವೇದ ಹೋಮಿಪತಿ ಅಂತರೆ. ನಿಂಗ್ಯಾಕ್ಲ ಅಣ ನೀ ಸುಮ್ಕೇ ಕೂಗೀ ಕೂಗೀ ರಕ್ತ ಕರ್ಚು ಮಾಡಕಬ್ಯಾಡ್ ಕಣಣ. ನಿನ್ನ ಇತೈಸಿಯಾಗಿ ನಾನು ಎಸ್ಟೋಕಿತ ಯೇಳಿವ್ನಿ. ನನ್ ಮಾತಿಗೆ ಕವಡೆ ಕಾಸಿನ ಕಿಮ್ಮತ್ತೂ ಕೊಡಂಗಿಲ್ಲ ನೋಡು ನೀನು. ಹೇನೇ ಆಗ್ಲಿ ಬಲ್ ತಮಾಶೆ ಕಣಣ ನೀನು. ಮದ್ಯ ನೀನಿಲ್ದೇ ಹಿದ್ದಿದ್ರೆ ಈಸ್ಟುದ್ದಾ ಓದಕೇ ಆಯ್ತಾ ಯಿರ್ಲಿಲ್ಲ.

        ಉತ್ತರ
  45. ಏಪ್ರಿಲ್ 18 2012

    >>ಭಾರತೀಯ ಆಯುರ್ವೇದಕ್ಕೆ ೩೦೦೦ ವರ್ಷಗಳ ದಾಖಲೆಯಿದೆ. ಎಷ್ಟೋಕಡೆ ೫೦೦೦ ವರ್ಷಗಳಷ್ಟು ಹಳೆಯ ದಾಖಲೆಗಳೂ ಸಿಗುತ್ತಿವೆ. ಒಂದೊಮ್ಮೆ ಹಾಗೆ ಮಂಗನಿಂದ ಮಾನವ ಎಂದಾದರೆ ನಮ್ಮ ಪೂರ್ವಜರು ಅಷ್ಟೊಂದು ಹಿಂದೆಯೇ ಬರೆದಿದ್ದ ಗ್ರಂಥಗಳು, ಪುರಾಣೇತಿಹಾಸಗಳು, ಮಹಾಕಾವ್ಯಗಳು, ವೇದ-ವೇದಾಂತಗಳೆಲ್ಲಾ ಸುಳ್ಳೇ?

    ಒಂದು ವಿಷಯ ಹೇಳಬೇಕೆನ್ನಿಸಿತು – ಮಂಗನಿಂದ ಮಾನವ ಅನ್ನೋದೊಂದು ಓವರ್-ಸಿಂಪ್ಲಿಫಿಕೇಶನ್ – it isn’t such a single transformation. ಅಲ್ಲದೆ, ಐದುಸಾವಿರ ವರ್ಷದ ಹಿಂದೆ ಇದು ಆಗಿರಬೇಕು ಅನ್ನುವ ತೀರ್ಮಾನಕ್ಕೆ ಹೇಗೆ ಬಂದಿರಿ (ಹಾಗಾಗಿದ್ದರೆ ತಾನೇ ಮೂರು-ನಾಲ್ಕು-ಐದು ಸಾವಿರ ವರ್ಷಗಳ ಹಿಂದಿನ ದಾಖಲೆಗಳಿಗೆ ಧಕ್ಕೆ ಬರುವುದು) ?ವಿಕಾಸವಾದದ ಕಾಲಪ್ರಮಾಣವೇ ಬೇರೆ, ನಮ್ಮ ಚರಿತ್ರೆಯ ಕಾಲಪ್ರಮಾಣವೇ ಬೇರೆ ಅಲ್ಲವೆ?ಹಾಗಿದ್ದ ಮೇಲೆ ನೀವು ಈ ಪ್ರಶ್ನೆ ಹಾಕುವ ಕಾರಣವೇ ಇಲ್ಲ.

    ಉತ್ತರ
  46. Ananda Prasad
    ಏಪ್ರಿಲ್ 19 2012

    ಹುತಾತ್ಮ ಪಂಡಿತ ಗೋಡ್ಸೆ ಎಂಬವರ ಪ್ರತಿಕ್ರಿಯೆಗೆ – “ಆಯುಧ ಉಪಯೋಗ ಮಾಡಲು ಹೋದರೆ ಗಾಂಧೀಜಿ ಉಪವಾಸ ಸತ್ಯಾಗ್ರಹ ಮಾಡಿ ತಡೆಯುತ್ತಿದ್ದರಲ್ಲ ಮತ್ತು ಬೇರೆಯವರು ಹಿಂಸೆ ಮಾಡಿದರೆ ಅದೆಲ್ಲ ನನಗೆ ಗೊತ್ತಿಲ್ಲ ಎಂದು ಗೋಳಾಡುತ್ತಿದ್ದರಲ್ಲ” ಎಂದು ಹೇಳಿದ್ದಾರೆ ಮತ್ತು ಇತಿಹಾಸ ಗೊತ್ತಿಲ್ವಾ ಎಂದು ಕೇಳಿದ್ದಾರೆ. ಇತಿಹಾಸ ಗೊತ್ತಿದೆ. ಗಾಂಧೀಜಿ ಹುಟ್ಟುವುದಕ್ಕೂ ಮೊದಲು ಬ್ರಿಟಿಷರು ಇಲ್ಲಿ ದೇಶವನ್ನು ಅಳುತ್ತಿದ್ದರಲ್ಲ, ಆಗ ಆಯುಧ ಹಿಡಿಯುವುದನ್ನು ತಡೆಯಲು ಯಾರೂ ಇರಲಿಲ್ಲ ಎಂದು ಕಾಣುತ್ತದೆ. ವೇದಜ್ಞಾನ ಉಪಯೋಗಿಸಿ ಬಲಶಾಲಿ ಆಯುಧಗಳನ್ನು ನಿರ್ಮಿಸಿ ಬ್ರಿಟಿಷರನ್ನು ಆಗಲೇ ಹೊಡೆದು ಓಡಿಸಬಹುದಿತ್ತಲ್ಲ? ಯಾಕೆ ಯಾರೂ ವೇದಜ್ಞಾನಿಗಳು ಈ ಕುರಿತು ದೇಶಕ್ಕೆ ಮಾರ್ಗದರ್ಶನ ನೀಡಲಿಲ್ಲ?

    ಉತ್ತರ
    • ಏಪ್ರಿಲ್ 19 2012

      ನಾನು ನನ್ನ ಪ್ರತಿಕ್ರಿಯೆಗಳಿಗೆ ಸಂಪೂರ್ಣವಿರಾಮ ಹಾಕಿದ್ದೆ, ಯಾರೋ ಹುತಾತ್ಮ ಗೋಡ್ಸೆಯ ಹೆಸರಿನಲ್ಲಿ ಬರೆದ ಪ್ರತಿಕ್ರಿಯೆಗೆ ಆನಂದ ಪ್ರಸಾದರು ಉತ್ತರಿಸದ್ದಾರೆ. ಇಲ್ಲಿ ನನ್ನ ನಿಲುವನ್ನು ಸ್ಪಷ್ಟಪಡಿಸುತ್ತೇನೆ: ಭರತ ಭೂಮಿಯ ಮೂಲ ಸಂಸ್ಕಾರ ಕತ್ತಿ ಹಿರಿಯುವುದನ್ನೋ ಸಂಘರ್ಷವನ್ನೋ ಹಿಂಸೆಯನ್ನೋ ಅನುಮೋದಿಸುವುದಲ್ಲ. ದಶಾವತಾರಗಳಲ್ಲಿ [ಹತ್ತನೇ ಅವತಾರ ಇನ್ನೂ ಆಗಬೇಕಿದೆ ಬಿಡಿ]ಎಲ್ಲಾ ಅವತಾರಗಳೂ ಒಂದಲ್ಲ ಒಂದು ರಕ್ಕಸ ಜೀವವನ್ನು ದಮನ ಮಾಡುವುದಕ್ಕೆಂತಲೇ ಭೂಮಿಗೆ ಬಂದರೂ, ಇಂದಿನ ಕಾಲದಲ್ಲಿ ಜಗನ್ನಿಯಾಮಕನೇ ಕೊಟ್ಟ ಬುದ್ಧಿಶಕ್ತಿಯಿಂದ ವೈರಿ ಮನೋಭಾವದವರನ್ನು ಅಹಿಂಸಾತ್ಮಕವಾಗಿ ಪರಿವರ್ತಿಸುವುದಾಗಿದೆ. ಇದನ್ನೇ ಪರಶಿವನ ಇನ್ನೊಂದು ರೂಪವಾದ ಆದಿ ಶಂಕರರೂ ಕೂಡ ಮಾಡಿದ್ದಾರೆ. ಶಂಕರರು ಸನ್ಯಾಸಿಯಾದಾಗ ಇನ್ನೂ ಚಿಕ್ಕ ಬಾಲಕ. ಅಂತಹ ಬಾಲಕ ಹಲವು ಸವಾಲುಗಳನ್ನು ಎದುರಿಸಬೇಕಾಯ್ತು. ಬೌದ್ಧಧರ್ಮದಲ್ಲಿ ಕ್ಲೀಷೆಗಳು ಹುಟ್ಟಿಕೊಂಡು ಪ್ರಾಣಿಹಿಂಸೆ, ಬಲಿಗಳೆಲ್ಲಾ ನಡೆಯಹತ್ತಿದ್ದವು; ಕಠ್ಮಂಡುವಿನ ಪಶುಪತಿನಾಥ ದೇವಸ್ಥಾನದಲ್ಲಂತೂ ನರಬಲಿಗಳು ಹೇರಳವಾಗಿ ನಡೆಯುತ್ತಿದ್ದವು. ಕಾಪಾಲಿಕರೆಂಬ ಒಂದು ಪಂಥ ಶ್ರೀಶೈಲದಲ್ಲಿ ಸ್ವತಃ ಶಂಕರರನ್ನೇ ಬಲಿಹಾಕಲು ಮೋಸದ ತಯಾರಿ ನಡೆಸಿತ್ತು! ಎಲ್ಲದಕ್ಕೂ ಶಂಕರರು ನೀಡಿದ್ದು ಅಹಿಂಸಾತ್ಮಕ ಉತ್ತರವನ್ನೇ. ನಾನು ಮೊದಲೇ ನಿಮ್ಮ ಪ್ರಶ್ನೆಗೆ ಉತ್ತರಿಸಿದ್ದೇನೆ: ಸನ್ಯಾಸಿಗಳು, ದಾರ್ಶನಿಕರು ಈ ಜಗದಲ್ಲಿ ಸಾವು-ನೋವುಗಳಿಗೆ ಕಾರಣರಾಗುವುದಿಲ್ಲ; ಅವರ ಉದ್ದೇಶ || ಲೋಕಾಃ ಸಮಸ್ತಾಃ ಸುಖಿನೋ ಭವಂತು || ಎಂಬುದಾಗಿರುತ್ತದೆ. ಅದೇ ನಮ್ಮ ವೇದಗಳಲ್ಲೇ || ವಸುಧೈವ ಕುಟುಂಬಕಮ್ || ಎಂತಲೂ ಹೇಳಿದ್ದಾರೆ-ಇದರರ್ಥ ತಮಗೆ ಎಷ್ಟರಮಟ್ಟಿಗೆ ಆಗಿದೆ ಎನ್ನುವುದು ನನ್ನರಿವಿಗಿಲ್ಲ. ವೇದಜ್ಞಾನ ಬಲಶಾಲೀ ಆಯುಧಗಳನ್ನು ತಯಾರಿಸಿ ವಿರೋಧಿಗಳನ್ನೋ ಜೀವಿಗಳನ್ನೋ ಹಿಂಸಿಸಲಿಕ್ಕಿರುವುದಲ್ಲ; ಬದಲಾಗಿ ಎಲ್ಲರಲ್ಲೂ ಜ್ಞಾನದ ದೀವಿಗೆಯನ್ನು ಬೆಳಗಿಸಿ ಜ್ಞಾತರನ್ನಾಗಿ ಮಾಡಲಿಕ್ಕೆ ಎಂಬುದನ್ನು ತಮ್ಮ ಗಮನಕ್ಕೆ ಇನ್ನೊಮ್ಮೆ ತರುತ್ತಿದ್ದೇನೆ. ಬಹುತೇಕ ನಮ್ಮನ್ನು ವಿರೋಧಿಸುವವರು ಯಾವುದೋ ಅಜ್ಞಾನದಲ್ಲಿ ಇರುತ್ತಾರೆ ಎಂದರ್ಥ, ನಾವು ಮಾಡಿದ ಕೆಲಸ ಉತ್ತಮವಾಗಿದ್ದರೆ[ದೈವ ಸಮ್ಮತವಾಗಿದ್ದರೆ]ಆಗ ನಾವು ಅದನ್ನು ಅವರಿಗೆ ತಿಳಿಸಿ ಹೇಳಬಹುದಾಗಿದೆ. ಅದೇ ಮಾರ್ಗವನ್ನು ಗಾಂಧೀಜಿ ಅನುಸರಿಸಿದ್ದರು! ಹಿಂಸೆಯಿಂದ ಆಗದ ಕೆಲಸಕ್ಕೆ ಅಹಿಂಸೆಯ ಅಸ್ತ್ರ ಪ್ರಯೋಗಿಸಿದಾಗ ಬ್ರಿಟಿಷರು ಬೆರಗಾಗಿದ್ದು ನಿಜ.

      ಉತ್ತರ
    • Hutatma, Pundit Godse
      ಏಪ್ರಿಲ್ 19 2012

      sikkidde shiva anta vishayaantara maaDodu beda. niivu “swatantra hOrata”da bagegina nimma gnaananavannu bekiddre separate baredu, ‘nilume’ge kaLuyisi. aaga naavu niivu alli savistaaravaagi adara bagge maataDkoLl. AAgONavE?

      ಉತ್ತರ
  47. ಏಪ್ರಿಲ್ 20 2012

    i think it will be better if you read charles darwin’s book the origin of species. it is not that the monkeys have become man! it is a process of gradual change where one species because of modifications over a long period gets transformed into another species. as an human anatomist i have read briefly about the comparative anatomy. i hav read about all the bones, muscles, organs from fishes to man. surprisingly there are numerous similarities. recently we dissected a rat for its skeleton. we did not require any book on rat anatomy to identify its bones. the shape, situation and form of those bones are so similar to humans that we identified its bones with ease. these things suggest that the process of evolution of various species is interlinked with each other.

    and regarding ayurveda and allopathic medicine. ayurveda is a better option for chronic diseases but allopathy is needed in acute conditions. and most of the ayurvedic medicine and especially folk medicine are disregarded not because they are useless but mainly because of the people who practise it who rarely share what they are using and rarely disclose the source of the plants they use.

    any medicine is not complete. its not easier to understand the complex human body.

    and regarding sushrutha, he is considered as father of indian surgery. he has described various structures of the body about 400. some of them are true but others are wrong observations. ofcourse it is not his mistake, he has put his max effort to describe the parts with the limited facilities available at that period. his important contribution is surgical instruments. and he is not the only one who has described the things in a wrong way. there is one more guy called gallen who has done numerous mistakes in describing human anatomy. but in the end they are great scholars of their time and they are respected inspite of their mistakes. Mistakes do happen in new findings also and science takes its own time to rectify those things.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments