ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 1, 2013

102

ವಚನ ಸಾಹಿತ್ಯವು ಜಾತಿವ್ಯವಸ್ಥೆಯ ವಿರುದ್ಧ ಮಾತನಾಡುತ್ತದೆಯೆ?

‍ನಿಲುಮೆ ಮೂಲಕ

(ಪ್ರಜಾವಾಣಿಯಲ್ಲಿ CSLC ಯ ಡಂಕಿನ್ ಝಳಕಿ ಮತ್ತು ಎಸ್.ಎನ್. ಬಾಲಗಂಗಾಧರ ’ವಚನ ಸಾಹಿತ್ಯವು ಜಾತಿವ್ಯವಸ್ಥೆಯ ವಿರುದ್ಧ ಮಾತನಾಡುತ್ತದೆಯೆ?’ ಅನ್ನುವ ಲೇಖನದ ಬಗ್ಗೆ ಚರ್ಚೆ ಹುಟ್ಟುಹಾಕಿದವರು ಎಚ್.ಎಸ್. ಶಿವಪ್ರಕಾಶ್.ಆದರೆ ಸುಮಾರು ೧೫ ದಿನಗಳ ಈ ಇಡಿ ಚರ್ಚೆಯಲ್ಲಿ ಮೂಲ ಲೇಖನದ ವಿರುದ್ಧವಾದ ದನಿಗಳಿಗೆ ಮಾತ್ರ ಇದುವರೆಗೆ ವೇದಿಕೆ ಕಲ್ಪಿಸಿ, ಲೇಖಕರ ಅಭಿಪ್ರಾಯ ಮಂಡನೆಗೆ ಅವಕಾಶವನ್ನೇ ನೀಡಲಾಗಿಲ್ಲ ..!

ಡಂಕಿನ್ ಝಳಕಿ ಯವರ ಮೂಲ ಲೇಖನ ಇಲ್ಲಿದೆ. ಈ ಚರ್ಚೆಯ ಎಲ್ಲಾ ರೀತಿಯ ಅಭಿಪ್ರಾಯಗಳಿಗೂ “ನಿಲುಮೆ” ಮುಕ್ತ ವೇದಿಕೆಯಾಗಲಿದೆ – ನಿಲುಮೆ)

 – ಡಂಕಿನ್ ಝಳಕಿ, ಎಸ್.ಎನ್. ಬಾಲಗಂಗಾಧರ

Balu - Jalaki

[ಇದು ಚಿಂತನ ಬಯಲು ಸಂಪುಟ ೧, ಸಂಚಿಕೆ ೩ರಲ್ಲಿ ಪ್ರಕಟಗೊಂಡ ಮೂಲ ಲೇಖನದ ಸಂಕ್ಷಿಪ್ತ ಪಾಠ. ಲೇಖನದ ಪೂರ್ಣ ಪಾಠ, ಆಕರ ಗ್ರಂಥಗಳ ಪಟ್ಟಿ ಮತ್ತು ಅಡಿಟಿಪ್ಪಣಿಗಳಿಗಾಗಿ ಮೂಲ ಲೇಖನವನ್ನು ನೋಡಿ ಅಥವಾ ಇವರನ್ನು ಸಂಪರ್ಕಿಸಿ: dunkinjalkiAToutlookDOTcom]

ವಚನಗಳ ಆಧುನಿಕ ಅಧ್ಯಯನಗಳ ಒಂದು ಮರು ಪರಿಶೀಲನೆ

ಕನ್ನಡ ಸಾಹಿತ್ಯದ ಬಹು ಮುಖ್ಯ ಭಾಗವಾಗಿರುವ ವಚನಗಳನ್ನು ‘ಲಿಂಗಾಯತ/ವೀರಶೈವ ಚಳುವಳಿ’ ಅಥವಾ ‘ವಚನ ಚಳುವಳಿ’ ಎಂಬ ಹನ್ನೆರಡನೇ ಶತಮಾನದ ಒಂದು ಆಂದೋಲನದ ಭಾಗವೆಂದು ನೋಡುವುದು ಇಂದು ಒಂದು ವಾಡಿಕೆಯಾಗಿ ಬಿಟ್ಟಿದೆ. ಹನ್ನೆರಡನೇ ಶತಮಾನದ ಈ ಆಂದೋಲನವನ್ನು, ಬುದ್ಧಿಸಂನ ಬಳಿಕ ಭಾರತ ಕಂಡ ಅತ್ಯಂತ ಪ್ರಮುಖ ಜಾತಿ ವಿರೋಧೀ ಚಳುವಳಿ ಎಂಬಂತೆ ಬಿಂಬಿಸಲಾಗಿದೆ. ಇಪ್ಪತ್ತನೇ ಶತಮಾನದ ಹೊತ್ತಿಗೆ ಈ ವಚನಗಳನ್ನು ಭಾರತ ಕಂಡ ಜಾತಿಯ ವಿರುದ್ಧ ಹೋರಾಡಿದ ಮೊಟ್ಟಮೊದಲ ಚಳುವಳಿಯ ಭಾಗವೆಂದು ಗುರುತಿಸಲಾಯಿತು. ಪ್ರಸ್ತುತ ಬಹುಮತಾಭಿಪ್ರಾಯದ ಪ್ರಕಾರ ಜಾತಿ ವಿರೋಧಿ ವಿಚಾರವು ವಚನ ಚಳುವಳಿಯ ಮತ್ತು ವಚನಗಳ ಮೂಲ ಆಶಯ. ಈ ಪ್ರಸಿದ್ಧ ವಾದಕ್ಕೆ ತರ್ಕದ ಅಥವಾ ನಿಜಾಂಶಗಳ ಯಾವುದೇ ಆಧಾರವಿಲ್ಲ ಎಂಬುದನ್ನು ತೋರಿಸುವುದೇ ಈ ಲೇಖನದ ಉದ್ದೇಶ.

ಈ ವಾದವನ್ನು ನಾವು ಬೆಳೆಸಿಕೊಂಡು ಹೋಗಲು ಹೀಗೊಂದು ಊಹಾಸಿದ್ಧಾಂತವನ್ನು ಮಾಡೋಣ: ವಚನಗಳು ಜಾತಿಯ ವಿರುದ್ಧದ ಚಳುವಳಿಯನ್ನು ಪ್ರತಿನಿಧಿಸುತ್ತವೆ ಎಂಬ ಪ್ರಚಲಿತ ಜನಪ್ರಿಯ ನಂಬಿಕೆಯು ನಿಜವೇ ಆಗಿದ್ದರೆ, ಬಹುತೇಕ ವಚನಗಳು ಜಾತಿಯ ಕುರಿತು ಮಾತನಾಡಲೇಬೇಕು. ಏಕೆಂದರೆ ಜಾತಿ ವಿರುದ್ಧದ ಚಳುವಳಿಯ ಭಾಗವಾಗಿದ್ದುಕೊಂಡೂ ವಚನಗಳು ಜಾತಿಯ ವಿರುದ್ಧ ಮಾತನಾಡದೆ ಊಳಿದಿರಬಹುದಾದ ಪರಿಸ್ಥಿತಿ ಸಾಧ್ಯವಿಲ್ಲದ ಮಾತು. ಈ ಊಹಾಸಿದ್ಧಾಂತದ ಪ್ರಕಾರ, ಒಂದುವೇಳೆ ನಾವು ವಚನಗಳು ಜಾತಿಯ ವಿರುದ್ಧ ಮಾತನಾಡುವುದಿಲ್ಲ ಅಥವಾ ಜಾತಿಯ ವಿಚಾರ ವಚನಗಳಿಗೆ ಮಹತ್ವದ ವಿಚಾರವೇ ಅಲ್ಲವೆಂದು ತೋರಿಸಿದರೆ, ವಚನಗಳು ಜಾತಿವಿರೋಧಿ ಸಾಹಿತ್ಯವೆಂಬ ಪ್ರಚಲಿತ ವಾದವನ್ನು ತಳ್ಳಿ ಹಾಕಿದಂತಾಗುತ್ತದೆ.

ಇಲ್ಲಿದೆ ಪೂರ್ಣ ಲೇಖನ

102 ಟಿಪ್ಪಣಿಗಳು Post a comment
  1. ಪ್ರಶಾಂತ ಸೊರಟೂರ
    ಏಪ್ರಿಲ್ 1 2013

    ಹೊಸ ಬಗೆಯ ಚಿಂತನೆ. ಈ ಬಗೆಯ ಒರೆಗೆಹಚ್ಚುವಿಕೆ ಕನ್ನಡಕ್ಕೆ ಒಳ್ಳೆಯದು. ಇಲ್ಲಿ ವಚನ ಸಾಹಿತ್ಯ ಮತ್ತು ಜಾತಿಯನ್ನು ಎಣಿಕೆಗಳಿಂದ ನೋಡುವುದು ಒಂದೆಡೆಯಾದರೆ ಅದರಾಚೆಗೆ ವಚನಗಳಿಂದ ಕನ್ನಡದ ಕೂಡಣದಲ್ಲಿ ಉಂಟಾದ ಬದಲಾವಣೆಗಳು ನಮಗೆ ಇಂದಿಗೂ ಎದ್ದುಕಾಣುತ್ತವೆ. ಅಂದಿಗಿಂತ ಇಂದು ಎಶ್ಟೋ ಮಂದಿ “ಕೀಳು” ಜಾತಿಯವ ಅನ್ನುವುದನ್ನು ತೊಳೆದುಕೊಂಡಿದ್ದಾರೆ. ಇದು ಸಾದ್ಯವಾಗಿರುವುದು ಬಸವಣ್ಣ ಮತ್ತು ಇನ್ನೂ ಹಲವು ಶರಣರು ಮಾಡಿದ ಕೆಲಸದಿಂದಾಗಿ. ನುಡಿಯ ಬಳಕೆಯಲ್ಲೂ ವಚನ ಸಾಹಿತ್ಯ ಮೇಲ್ಜಾತಿಯವರ ಸೊತ್ತಾಗಿದ್ದ ಬರಹವನ್ನು ಬಿಟ್ಟು ಆಡುನುಡಿಗೆ ಹತ್ತಿರವಾಗಿದ್ದನ್ನೂ ಗಮನಿಸಬಹುದು ಹಾಗಾಗಿ ಬರೀ ಜಾತಿಯ ಕುರಿತು ಎಶ್ಟು ವಚನಗಳಿವೆ ಎಲ್ಲೆಲ್ಲಿ ಮೇಲ್ಜಾತಿಯವರನ್ನು ತೆಗಳಲಾಗಿದೆ ಅನ್ನುವುದಕ್ಕಿಂತ ವಚನದ ನಡೆಗಳು ಕನ್ನಡದ ಕೂಡಣದಲ್ಲಿ ಹಲವು ಬದಲಾವಣೆಗಳನ್ನು ಮಾಡಿದವು ಅನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.(ಇಂದಿನ ಲಿಂಗಾಯತರು / ಮಟಗಳು ಅಂದಿನ ವಚನ ನಡೆಗಳ ಬಯಕೆಗಿಂತ ತುಂಬಾ ಬೇರೆಯಾಗಿವೆ ಅಂತಾನೂ ಇಲ್ಲಿ ಹೇಳಬೇಕಾಗುತ್ತದೆ)

    ಉತ್ತರ
    • ಏಪ್ರಿಲ್ 2 2013

      “ವಚನದ ನಡೆಗಳು ಕನ್ನಡದ ಕೂಡಣದಲ್ಲಿ ಹಲವು ಬದಲಾವಣೆಗಳನ್ನು ಮಾಡಿದವು” ಎನ್ನುವುದನ್ನು ಒಪ್ಪಿಕೊಳ್ಳಲು ಅದನ್ನು ಮೊದಲು ತೋರಿಸಿಕೊಡಬೇಕು. ಅದನ್ನು ಬರೀ ಹೇಳಿದರೆ ಸಾಲದು. ಒಂದು ಭಾಷಣ ಮಾಡಬಹುದು ಆದರೆ ಅದನ್ನು ಒಂದು ಅಧ್ಯಯನದ ವಿಚಾರ ಮಾಡಬೇಕಾದರೆ ಅದನ್ನು ಸಾಧಿಸಿ ತೋರಿಸಬೇಕು. ಹೀಗೆ ಸಾಧಿಸಿತೊರಿಸುತ್ತೇವೆ ಎಂದು ಹೊರಡುವ ಲೇಖಕರು, ಪುರಾವೆಯಾಗಿ ಕೊಡುವುದು ಆಯ್ದ ಬೆರಳೆಣಿಕೆಯಷ್ಟು ವಚನಗಳನ್ನು ಮಾತ್ರ. ನನ್ನ ಲೇಖನದ ವಾದ ಈ ಪುರಾವೆಗಳು ಸಾಲುವುದಿಲ್ಲ ಮತ್ತು ಸರಿಯಿಲ್ಲ ಎಂದು. ಹೆಚ್ಚಿನ ಪುರಾವೆಗಳು ನಿಮ್ಮಲ್ಲಿದ್ದರೆ ಹೊರತನ್ನಿ ಚರ್ಚೆ ಮಾಡೋಣ. ಏನಂತೀರ?

      ಉತ್ತರ
  2. ಬಸವಯ್ಯ
    ಏಪ್ರಿಲ್ 3 2013

    ಈ ನಿಮ್ಮ ಲೇಖನ ನಿರೀಕ್ಷೆಯಷ್ಟು ವಿವಾದ ಸೃಷ್ಡಿ ಮಾಡಲಿಲ್ಲ. ಕಾರಣ ಎರಡು.. ೧) ನೀವು ಬ್ರಾಹ್ಮಣರಲ್ಲ ೨) ಚಿದಾನಂದ ಮೂರ್ತಿಗಳ ವಿರುದ್ದ ನಿಮ್ಮ ವಾದವಿದೆ. ‘ಪ್ರಗತಿಪರ’ ರಿಗೆ ಯಾವ ಕಡೆ ಯುದ್ಧ ಮಾಡಬೇಕು..ಯಾರತ್ತ ಕತ್ತಿ ಬೀಸಬೇಕು ಎಂಬ ಗೊಂದಲ ಉಂಟಾಗುತ್ತಿದೆ . ಇದೇ ಸಮಸ್ಯೆ ಅವರಿಗೆ ನರೇಂದ್ರ ಮೋದಿಗೆ ಅಮೇರಿಕ ವಿಸಾ ಕೊಡದ ವಿಷಯದಲ್ಲೂ ಆಗುತ್ತೆ. ಮೋದಿ ದ್ವೇಶಕ್ಕೆ, ಅಮೇರಿಕಾ ಪರವಾಗಿ ಚಪ್ಪಾಳೆ ತಟ್ಟೋಣವೆಂದರೆ ಅದನ್ನೂ ಮಾಡುವಂತಿಲ್ಲ! 🙂

    ಉತ್ತರ
    • ಏಪ್ರಿಲ್ 3 2013

      ನೀವು ಹೇಳುತ್ತಿರುವುದನ್ನು ಬರೀಯ ತಮಾಷೆ ಎಂದು ನೋಡುವ ಹಾಗಿಲ್ಲ. ಅದರಲ್ಲೊಂದು point ಇದೆ. ಇಂದಿನ ಚಳುವಳಿಗಳೆಲ್ಲಾ (ideological) issue based ಚಳುವಳಿಗಳು. ಯಾವುದೇ ಪಕ್ಷ ವಹಿಸದೆ ಹೊರಾಟಮಾಡುವುದು ನಾವು ಭಕ್ತಿಯುಗ ಮುಗಿಯುತ್ತಿದ್ದಂತೆ ಮರೆತು ಬಿಟ್ಟಿದ್ದೇವೆ ಅನಿಸುತ್ತದೆ.

      ಉತ್ತರ
  3. Umesh
    ಏಪ್ರಿಲ್ 3 2013

    this is a new thinking which ought to be seriously discussed and debated. If vachanakaras only aim was against casteism (as all of the so called pseudo-intellectuals are claiming to be via their articles in Prajavani) then why would there be a caste called Lingayats or Veerashaivas?

    ಉತ್ತರ
  4. ಏಪ್ರಿಲ್ 3 2013

    ಡಂಕಿನ್,
    ತಮ್ಮ ಲೇಖನದ ಪೂರ್ಣ ಪಾಠ ಓದಿದೆ. ತಮ್ಮ ಲೇಖನವು ಬಹಳ ಇಷ್ಟವಾಯಿತು. ಮುಖ್ಯವಾಗಿ ತಮ್ಮ ಸಂಶೋಧನ ವಿಧಾನ. ಮಾನವೀಯ ವಿಷಯಗಳಲ್ಲಿ ಈ ರೀತಿ ವೈಙ್ಞಾನಿಕವಾಗಿ ಮಾಡಿದ ಸಂಶೋಧನೆಯನ್ನ ಮೊದಲ ಬಾರಿ ಓದುತ್ತಿದ್ದೇನೆ. ನನಗೆ ಆಶ್ಚರ್ಯವಾಯಿತು. ಹಲವು ಜನ, ನನ್ನನ್ನೂ ಸೇರಿಸಿಕೊಂಡು ಯಾವ ರೀತಿ ವಚನಗಳು ಜಾತಿ ವಿನಾಶದ ಚಳುವಳಿಯನ್ನ ಮಾಡಿದ್ದವು ಹಾಗು ಅದೆ ಅವುಗಳ ಮುಖ್ಯ ವಿಷಯವಾಗಿತ್ತು ಎಂದು ಹೇಗೆ ನಂಬಿದ್ದೆವು ಅಂತ. ತಮ್ಮ ಈ ಲೇಖನ ಸದ್ಯ ನಮ್ಮಲ್ಲಿರುವ ಹಲವು ವಿವಿದ ಸಂಗತಿಗಳನ್ನ ಮರು ಪರೀಕ್ಷೆಗೆ ಒಳಪಡಿಸಬೇಕೆನ್ನುವ ಸತ್ಯ ಅರಿವಾಯಿತು.
    ಧನ್ಯವಾದಗಳು

    ಉತ್ತರ
    • ಏಪ್ರಿಲ್ 4 2013

      ಅರವಿಂದರೇ,

      ನಿಮ್ಮ comment ನೋಡಿ ಖುಷಿಯಾಯಿತು. Social Scienceನಲ್ಲೂ ಕೂಡ scientificಆದ ಸಂಶೋಧನೆಯನ್ನು ಖಂಡಿತಾ ಮಾಡಬಹುದು. ಆದರೆ ಇಂದು ನಮಗೆ ಅಂಟಿಕೊಂಡಿರುವ ವಸಾಹತು ಪ್ರಜ್ಞೆ ಹೋಗುವುದು ಮಾತ್ರ ಬಹಳ ಅನಿವಾರ್ಯ. ಯಾವುದನ್ನು ನಾವು ‘ಆದ್ಯಾತ್ಮ’ ಎಂದು ಕರೆಯುತ್ತೇವೋ ಅದು ಭಾರತೀಯ ಚಿಂತಕರು ಹಿಂದೆ ಬೆಳೆಸಿದ್ದ ಸಮಾಜ ವಿಜ್ಞಾನ ಅನ್ನುತ್ತಾರೆ ಎಸ್.ಎನ್. ಬಾಲಗಂಗಾಧರರು. ಈ ಆದ್ಯಾತ್ಮವನ್ನು ಅರ್ಥ ಮಾಡಿಕೊಳ್ಳುವುದು ಅಂತಹ ಒಂದು ಸಂಶೋಧನೆಗೆ ಬಹಳ ಅವಶ್ಯಕವಾದುದು.

      ನಮ್ಮಂಥ ಸಂಶೋಧನೆ ಮಾಡುವವರಿಗೆ ಇಂದಿನ ಸಮಾಜ/ಸರ್ಕಾರ ಕೊಡುವುದು ಪ್ರಗತಿ ವಿರೋಧಿ ಮುಂತಾದ ಹಣೆಪಟ್ಟಿಗಳನ್ನು; ಕೆಲಸ, fellowship ಮುಂತಾದವುಗಳಲ್ಲ. ನಿಮ್ಮಂತವರ ಈ commentಗಳೇ ನಮ್ಮ ಸಂಶೋಧನೆಯ ಆಸ್ತಿ. ಮತ್ತೆ ಬರೆಯುತ್ತಾ ಇರಿ.

      ಧನ್ಯವಾದಗಳು,

      ಡಂಕಿನ್

      ಉತ್ತರ
  5. ಏಪ್ರಿಲ್ 5 2013

    ನಿಮ್ಮ ಸಂಶೊಧನೆ ನಿಜಕ್ಕೂ ಮನ್ನಿಸಲ್ಪಡತಕ್ಕದ್ದು. ಇವತ್ತು academics ಗಳಲ್ಲಿ ನಾವು ಓದಿದ ಹಾಗೂ ಓದುತ್ತಿರುವ ಸಾಹಿತ್ಯ ವಸಾಹತುಶಾಹಿ ಹಾಗೂ ಮಾರ್ಕ್ಸ್ ವಾದ ಪ್ರೇರಿತವಾಗಿದ್ದು ಎಂಬುದು ಕಟು ಸತ್ಯ. ಇಂತಹ ನಡೆಯಲ್ಲಿ ಸಾಹಿತ್ಯದ ಮೂಲ ಉದ್ದೆಶವನ್ನು ಸಮಾಜಕ್ಕೆ ತಲುಪಿಸಬೇಕಾಗಿರುವದಕ್ಕಿಂತಲೂ, ತಮಗೆ ಬೇಕಾದಂತೆ ಧ್ವನಿಸುವ ಸಾಹಿತ್ಯವನ್ನು cherry-picking ಮೂಲಕ ಇಂದು ಸಮಾಜಕ್ಕೆ ಸೆಕ್ಯುಲರಿಷ್ಟ್ ಎಂದು ಹಣೆ ಪಟ್ಟಿ ಕಟ್ಟಿಕೊಂಡಿರುವರಿಂದ ಪರಿಚಯಿಸಲ್ಪಡುತ್ತಿರುವದಂತೂ ಸ್ಪಷ್ಟ.
    ಆದರೆ ಒಂದು ಸಂದೆಹ, ವಚನ ಸಾಹಿತ್ಯಗಳು ಜಾತಿವ್ಯವಸ್ಥೆಯ ವಿರುದ್ಧ ಮಾತನಾಡದೆ ಇರಬಹುದು, ಆದರೆ ಶರಣರಿಂದ ನಡೆದ ಅನೇಕ ಚಳುವಳಿಗಳು ಜಾತಿವ್ಯವಸ್ಥೆಯ ವಿರುದ್ಧವಾಗಿಯೆ ಇದೆಯಲ್ಲ? ಉದಾರಣೆಗೆ ಅಂತರ್ಜಾತೀಯ ವಿವಾಹ.

    ಉತ್ತರ
    • ಏಪ್ರಿಲ್ 5 2013

      ಮಾನ್ಯ ಬಾಲಚಂದ್ರ, “ವಚನ ಸಾಹಿತ್ಯಗಳು ಜಾತಿವ್ಯವಸ್ಥೆಯ ವಿರುದ್ಧ ಮಾತನಾಡದೆ ಇರಬಹುದು” ಎಂದು ಒಪ್ಪಿಕೊಂಡ ಮೇಲೆ “ಶರಣರಿಂದ ನಡೆದ ಅನೇಕ ಚಳುವಳಿಗಳು ಜಾತಿವ್ಯವಸ್ಥೆಯ ವಿರುದ್ಧವಾಗಿಯೆ ಇದೆಯಲ್ಲ” ಎಂದು ಹೇಳಲು ವಚನಗಳಲ್ಲದ ಬೇರೆ ಪುರಾವೆಗಳು ಬೇಕು. ಅಂತಹ ಯಾವ ಪುರಾವೆಗಳೂ ಇಲ್ಲ. ಹಾಗಾದರೆ, ಈ ಕಥೆ ಹುಟ್ಟಿ, ಇಷ್ಟೊಂದು ನಮ್ಮ ಮನಸ್ಸಿನಲ್ಲಿ ತಳ ಊರಲು ಏನು ಕಾರಣ ಎನ್ನುವ ಪರಶ್ನೆಯನ್ನು ನಾವು ಎತ್ತಬೇಕು. ಉದಾಹರಣೆಗೆ, ಅಂತರ್ಜಾತೀಯ ವಿವಾಹದ ಕುರಿತು ನಮಗೆ ಸಿಗುವ ಮೊದಲ ಉಲ್ಲೇಖ ೧೭ನೆಯ ಶತಮಾನದ ಅಂತ್ಯದಲ್ಲಿ. ಮತ್ತೊಮ್ಮೆ ಅದು ಉಲ್ಲೇಖವಾಗುವುದು ೧೮ನೆಯ ಶತಮಾನದ ಮಧ್ಯ ಭಾಗದಲ್ಲಿ. ೨೦ನೆಯ ಶತಮಾನದ ಹೊತ್ತಿಗೆ ಇದು ಇತಿಹಾಸವಾಗಿ ಬಿಟ್ಟಿದೆ. ಹೇಗೆ ಮತ್ತು ಏಕೆ ಎನ್ನುವುದು ನಾವು ಕೇಳಬೇಕಾದ ಮತ್ತೊಂದು ದೊಡ್ಡ ಪ್ರಶ್ನೆ.

      ಉತ್ತರ
      • ಏಪ್ರಿಲ್ 5 2013

        ಆದ್ರೆ ಬಸವಣ್ಣನವರು ಅಂತರ್ಜಾತೀಯ ವಿವಾಹಗಳನ್ನು ಪ್ರೋತ್ಸಾಹಿಸಿದರು ಎಂದು academics ಗಳಲ್ಲಿ ನಾವು ಓದಿದ ನೆನಪು. ಹಾಗೆ ಇದ್ದಲ್ಲಿ ಐತಿಹಾಸಿಕ ಪುರಾವೆಗಳೂ ಇರಬೆಕಲ್ಲವೆ?(ಇದೆಯೊ ಇಲ್ಲವೊ ಎಂದು ನನಗೂ ಸ್ಪಷ್ತ್ಟವಿಲ್ಲ)

        ಉತ್ತರ
        • ಏಪ್ರಿಲ್ 6 2013

          ಇಲ್ಲ ಅದಕ್ಕೆ ಐತಿಹಾಸಿಕ ಪುರಾವೆಗಳು ಇಲ್ಲ. ಹಾಗಿದ್ದೂ ಈ ಕಥೆಯನ್ನು ನಾವು ಒಪ್ಪಿಕೊಂಡದ್ದು ಏಕೆ ಎಂಬ ಪ್ರಶ್ನೆಗೆ ಉತ್ತರ ಬೇಕಾದರೆ ಹಿಚ್ಚಿನ ಸಂಶೋಧನೆ ಬೇಕು.

          ಉತ್ತರ
  6. ಸವಿತಾ ಬಿ ಎ
    ಏಪ್ರಿಲ್ 5 2013

    ನನಗೆ ವಾದ ಮಂಡಿಸಲು ಅವಕಾಶ ಕೊಟ್ಟಿಲ್ಲ ಅಂತ ಡಂಕಿನ್ ಅವರು ಗೋಳಾಡಿದ್ದೂ, ಗೋಳಾಟಕ್ಕೆ ನಿಲುಮೆಯ ಬ್ರಾಹ್ಮಣರು ದನಿಗೂಡಿಸಿದ್ದೂ ನಂತರ ಪ್ರಜಾವಾಣಿಯ ಲೇಖನದಲ್ಲಿ ಲೇಖಕರು “ನಮ್ರ ವಂದನೆ”ಯನ್ನು ಸಲ್ಲಿಸಿದ್ದೂ ಒಂದು ಮನರಂಜನೆಯ ವಿಷಯವೇ! ಬಲಪಂಥೀಯರ ಬಲಿಷ್ಠ ತಾತ್ವಿಕ ಬೆಂಬಲದೊಂದಿಗೆ ಮುನ್ನುಗ್ಗುತ್ತಿರುವ ಝಳಕಿಯವರಿಗೆ ಅಭಿನಂದನೆಗಳು.

    ಶೇಕಡಾವಾರುಗಳು ಎಕಾನಾಮಿಕ್ಸ್ ನಲ್ಲಿ ಡೀಮೋಗ್ರಫಿಯಲ್ಲಿ ಬಳಕೆಯಾಗಿ ಕೆಲಮಟ್ಟಿಗೆ ಸರಿ ಹಾಗೂ ಕೆಲಮಟ್ಟಿಗೆ ತಪ್ಪು ಎನ್ನಿಸಿಕೊಡವು. ಸ್ವತಃ ಮಹನೋಲೋಬಿಸ್ ರವರೇ ಈ ಶೇಕಡಾವಾರು ಸಮಾಜಶಾಸ್ತ್ರದಲ್ಲಿ ಎಡವಿದರು. ಝಳಕಿಯವರು ಒಂದು ಅಂದೋಲನ ಅಥವಾ ಚಳುವಳಿನ್ನು ಶೇಕಡಾವಾರು ಲೆಕ್ಕಗಳಲ್ಲಿ ಅಳೆಯಲು ಹೊರಟಿರುವ ಪದ್ಧತಿಯೇ ಪ್ರಶ್ನಾರ್ಹ. ಈ ಪದ್ಧತಿಯಲ್ಲಿ ನೊಡುವುದಾದರೆ ಭಾರತದಲ್ಲಿ ಸ್ವತಂತ್ರ ಸಂಗ್ರಾಮ ನಡೆದಿಲ್ಲ, ವಿವೇಕಾನಂದರು ಯುವಕರ ಪರವಾಗಿ ನಿಂತಿಲ್ಲ, ಗಾಂಧೀಜಿ ಕುಡಿತದ ವಿರುದ್ಧ ಹೋರಾಡಿಲ್ಲ ಎಂಬುದನ್ನೂ ಒಪ್ಪಬೇಕಾಗುತ್ತದೆ. (ಶೇಕಡಾವಾರು ಶಬ್ದಗಳನ್ನು ಗಣಿಸಿ ತಾಳೆ ನೊಡಬಹುದು).

    ಮೂಲತಃ ಲೇಖಕರು ವಚನ ಸಾಹಿತ್ಯದ ಬಗ್ಗೆ ಹೇಳುತ್ತಿದ್ದಾರೋ, ಶರಣ ಚಳುವಳಿಯ ಬಗ್ಗೆ ಹೇಳುತ್ತಿದ್ದಾರೊ ಎಂಬ ಗೊಂದಲ ನನ್ನಲ್ಲಿ ಹುಟ್ಟುತ್ತಿದೆ. ಶರಣ ಚಳುವಳಿ ನಡೆದಿದ್ದು ಯಾತಕ್ಕಾಗಿ ಯಾರ ವಿರುದ್ಧ ಎಂಬುದರ ವಿವರ ಕಿರು ಲೇಖನದಲ್ಲಿ ಲಭ್ಯವಿಲ್ಲ.ಈ ಬಗ್ಗೆ ಕೇಳಿದರೆ ನನ್ನ ಇತರೆ ಹೊತ್ತಗೆಗಳನ್ನು ಓದಿಲ್ಲವೇ ? ಅಂತ ಹರಿಹಾಯುತ್ತಾರೆ ಲೇಖಕರು. ಆದರೂ ಸಾಧ್ಯವಾದಷ್ಟು ಇವರ ‘ಇತರ’ ಕೃತಿಗಳನ್ನು ಓದುತ್ತಾ ಇಲ್ಲಿ ಬ್ರಾಹ್ಮಣರ ಸಹಕಾರದಿಂದ ನಡೆಯುತ್ತಿರುವ ಝಳಕಿಯವರ ಯುದ್ಧವನ್ನೂ, ಕಮೆಂಟುಗಳನ್ನು ಹಿಂಬಾಲಿಸುತ್ತಾ ಇರುತ್ತೇನೆ. ನಂತರ ಝಳಕಿಯವರ ವಾದದಲ್ಲಿ ಹುರುಳಿದೆ ಎನ್ನಿಸಿದರೆ ಒಪ್ಪುತ್ತೇನೆ. ಇಲ್ಲವೇ ಇದೊಂದು ಶರಣ ಚಳುವಳಿನ್ನು ಡೈಲ್ಯೂಟ್ ಮಾಡುವ ಅಪಾಯಕಾರೀ ಯತ್ನವೆಂದು ಕಂಡುಬಂದ ಪಕ್ಷದಲ್ಲಿ ವಿರೋಧಕ್ಕೆ ನಿಲ್ಲುತ್ತೇನೆ.

    ಉತ್ತರ
    • ನವೀನ
      ಏಪ್ರಿಲ್ 5 2013

      ಬ್ರಾಹ್ಮಣರ ಮೇಲಿನ ದ್ವೇಷವೇ ಜಾತಿ ವಿರೋಧಿ ಚಳುವಳಿ ಅಂದುಕೊಂಡಿದ್ದಿರೇನು? ನಿಮ್ಮ ನಂಬಿಕೆಯ ವಿರುದ್ಧ ನಿಂತವರೆಲ್ಲರನ್ನೂ ಸಾರಾಸಗಟಾಗಿ ಬ್ರಾಹ್ಮಣರು ಅನ್ನುವುದು ನಿಮ್ಮ ನಂಬಿಕೆಯೇ ಇರಬೇಕು…!

      ಉತ್ತರ
    • ಏಪ್ರಿಲ್ 5 2013

      >>”ನಿಲುಮೆಯ ಬ್ರಾಹ್ಮಣರು ದನಿಗೂಡಿಸಿದ್ದು” ಅಂದಿದ್ದೀರಿ.
      ನಮ್ಮನ್ನು ನಿಲುಮೆಯ ಬ್ರಾಹ್ಮಣರು ಅಂತಾದರೂ ಕರೆಯಿರಿ,ದಲಿತರು,ಶೂದ್ರರು,ಹಿಂದೂ,ಪಾರ್ಸಿ,ಕ್ರೈಸ್ತ,ಮುಸಲ್ಮಾನ,ಬೌದ್ದ ಅಥವಾ ಯಾರ ಪೈಕಿಯಾದರೂ ಸೇರಿಸಿ ಸವಿತಾ.ನಾವು ಎಲ್ಲರೊಳಗೊಂದಾಗುತ್ತೇವೆ.

      ಉತ್ತರ
    • ಏಪ್ರಿಲ್ 6 2013

      @Savitaa BA: ಮೆಡಮ್, ಬಸವಣ್ಣನವರು ಹೇಳಿದ ಈ ಮಾತು: “ಹೊಲಸು ತಿಂದವನು ಹೊಲೆಯ” ಬಲಪಂಥೀಯತೆಯನ್ನು ಪ್ರತಿಧ್ವನಿಸುತ್ತದೆಯೊ ಅಥವಾ ಎಡಪಂಥೀಯತೆಯನ್ನೊ ಅಥವ ಇದಾವುದೂ ಅಲ್ಲದೆ ಅವರ ಇಂಡಿಪೆಂಡೆಂಟ್ ಡೊಕ್ಟ್ರೈನ್ ಅನ್ನೊ? ವಚನಗಳಲ್ಲಿರುವ ಪರಧೈವ ದೂಷಣೆ, ಜೈನರ ಧೂಷಣೆ, ವಚನಗಳ egalitarian ಮನೊಭಾವವನ್ನು ಪ್ರತಿಧ್ವನಿಸುತ್ತವೆಯೊ?

      ಉತ್ತರ
      • santosh ananad
        ಏಪ್ರಿಲ್ 7 2013

        I have given a reply below. pl read

        ಉತ್ತರ
    • ಬಸವಯ್ಯ
      ಏಪ್ರಿಲ್ 8 2013

      @ಸವಿತಾ..
      ಒಹ್..ಗೊತ್ತೆ ಇರಲಿಲ್ಲ!. ಅಂತರಜಾಲದಲ್ಲಿ ಕೂಡ ನಿಲುಮೆಯ ಬ್ರಾಹ್ಮಣರು, ವರ್ತಮಾನದ ಶೂದ್ರರು, ಕೆಂಡಸಂಪಿಗೆಯ ಮುಸಲರು ಇತ್ಯಾದಿ ಇರುತ್ತಾರೆಂದು!. ಒಳ್ಳೆಯ ಮನರಂಜನಾತ್ಮಕ ಸಂಶೋಧನೆ. ಅಭಿನಂದನೆಗಳು

      ಉತ್ತರ
      • ಏಪ್ರಿಲ್ 8 2013

        ಬಸವಯ್ಯ ಸರ್,
        ಎಲ್ಲರಿಗೂ ತಿಳಿದಂತೆ ಪ್ರಗತಿಪರರು ಎಂದು ತಿಳಿದ ಚಿಂತಕರು ಬಾಲು ಹಾಗೂ ಡಂಕಿನ್ ಝಳಕಿ ಅವರ ಲೇಖನಕ್ಕೆ ಪ್ರತಿಕ್ರಿಯೆಗಳ ರೂಪದ ಲೇಖನಗಳನ್ನು ಪ್ರಜಾವಾಣಿ ಪತ್ರಿಕೆಯು ಪ್ರಕಟಿಸಿದೆ. ಪ್ರತಿಕ್ರಿಯೆಗಳ ರೂಪದಲ್ಲಿರುವ ಲೇಖನಗಳಲ್ಲಿ ಬಹುತೇಕ ಪ್ರಗತಿಪರ ಚಿಂತಕರು ಬಾಲು, ಡಂಕಿನ್ ಝಳಕಿ ಹಾಗೂ ಅವರ ಸಂಶೋಧನೆಯ ಕೇಂದ್ರವಾದ ಸಿ ಎಸ್ ಎಲ್ ಸಿ ಕುರಿತು ಬಳಸಿದ ನಿಂದನಾತ್ಮಕ ಶಬ್ದಗಳನ್ನು ನೀಡಿದ್ದಾರೆ. ಇಂತಹ ಶಬ್ದಗಳನ್ನು ಇಟ್ಟುಕೊಂಡು ಮಾನನಷ್ಟ ಮೊಕದ್ದಮೆಯನ್ನು ಹಾಕಬಹುದೇ? (ಸುಮ್ಮನೆ ತಮಾಷೆಗಾಗಿ ಹೇಳಿದೆ ಅಷ್ಟೆ).

        ಉತ್ತರ
        • ಬಸವಯ್ಯ
          ಏಪ್ರಿಲ್ 10 2013

          ಇನ್ನು ಮುಂದೆ ಬ್ರಾಹ್ಮಣ, ಪುರೋಹಿತರು ಎಂದು ಯಾರನ್ನಾದರು ಕರೆದರೆ ಮಾನನಷ್ಟ ಮೊಕದ್ದಮೆ ಹಾಕುವ ಸಂದರ್ಭ ಬರಬಹುದು! 🙂

          ಉತ್ತರ
  7. veena
    ಏಪ್ರಿಲ್ 5 2013

    ಸವಿತಾರವರೆ,

    ಝಳಕಿಯವರು ವಚನ ಸಾಹಿತ್ಗದ ಕುರಿತಾದ ವಾದಗಳಲ್ಲಿನ ಸಮಸ್ಯೆಯನ್ನು ಕೇವಲ ಶೇಕಡವಾರು ಅಂಶದಿಂದ ಮಾತ್ರ ವಿವರಿಸುತ್ತಿಲ್ಲ,ಅದರಲ್ಲಿನ ಸಮಸ್ಯೆಯನ್ನು ಗುರಿತಿಸಲು ಬಳಸಿಕೊಂಡಿರುವ ಒಂದು ಅಂಶವಾಗಿದೆಯಷ್ಟೆ.ಲೇಖಕರ ವಾದಕ್ಕೆ ಬಂದ ಪ್ರತಿಕ್ರಿಯೆಯನ್ನು ಗಮನಿಸಿದರೇ ಅವರ ಲೇಖನವನ್ನು ಓದಿ ವಾದದಲ್ಲಿನ ಸಮಸ್ಯೆಯನ್ನು ತೋರಿಸದೇ ಕೇವಲ ಅಂಕಿ ಸಂಖ್ಯೆಯ ನೆಪವನ್ನು ಇಟ್ಟುಕೊಂಡು ಆರೋಪಗಳನ್ನು ಪಟ್ಟಿ ಮಾಡುತ್ತಿರುವುದು ಮತ್ತು ಅಂತಹದೇ ಪ್ರಶ್ಣೆಯನ್ನು ಕೇಳುವುದು ಕಂಡುಬರುತ್ತದೆ. ಅಲ್ಲದೇ ವಾದಕ್ಕೆ ಸಂಭಂದಿಸಿದಂತೆ ಇದನ್ನು ಹುರುಳಿದ್ದರೇ ಒಪ್ಪುತ್ತೇನೆ ಇಲ್ಲವೇ ವಿರೋಧಿಸುತ್ತೇನೆ ಎಂದು ಪ್ರತಿಕ್ರಿಯಿಸುತ್ತೀರಿ. ವಾದದಲ್ಲಿನ ಸಮಸ್ಯೆಯನ್ನು ತೊರಿಸದೇ ಅದಕ್ಕೆ ಜಿಂದಾಬಾದ್ ಅಥವಾ ಮುರ್ದಾಬಾದ್ ಹೇಳಲು ಅದೇನು ಚುನಾವಣೆಯಲ್ಲಿ ನಿಂತಿರುವ ಅಭ್ಯರ್ಥಿಯೇ? ಅದಕ್ಕೆ ಬದಲಾಗಿ ಲೇಖಕರ ವಾದವನ್ನು ಗ್ರಹಿಸಿ ಅದರಲ್ಲೇನಾದರು ಸಮಸ್ಯೆಯಿದ್ದರೆ
    ಚರ್ಚೆಯಲ್ಲಿ ತೋರಿಸಿಕೊಡಿ. ಇದರಿಂದ ನಮಗೂ ಅನುಕೂಲವಾಗುತ್ತದೆ.

    ಉತ್ತರ
  8. chaitra
    ಏಪ್ರಿಲ್ 5 2013

    ಸವಿತಾರವರೆ, ಯಾವುದೆ ವಿಷಯದ ಬಗ್ಗೆ ಪೂರ್ಣ ತಿಳುವಳಿಕೆ ಬೇಕಾದಲ್ಲಿ ಅದರ ಕುರಿತಾಗಿರುವ ಬರವಣಿಗೆಗಳನ್ನು ಅವಲೋಕಿಸಬೇಕು ಹಾಗೂ ತಿಳಿದ ಮಾಹಿತಿಯನ್ನು ಓರೆಗೆ ಹಚ್ಚಿ ನೋಡಬೇಕು. ಆಗ ನಿರ್ದಿಷ್ಟ ವಿಷಯದ ಕುರಿತಾಗಿ ನಾವೇನಾದರು ತಿಳಿಯೋಕೆ ಸಾಧ್ಯವಾಗುತ್ತದೆ. ಆದರೆ ನೀವು ಡಂಕಿನ್ರವರ ಸಂಶೋಧನೆಯ ಕುರಿತಾಗಿ ಎರಡೂ ಕೆಲಸಗಳನ್ನು ಮಾಡದೆ, ಸಂಶೋಧನೆಯನ್ನು ಮತ್ತು ಸಂಶೋಧಕರನ್ನು ಕುರಿತು ಟೀಕಿಸಿರುವುದು ಎಷ್ಟು ಸಮಂಜಸ?

    ಲೇಖಕರು ಹೊತ್ತಿಗೆಯನ್ನು ಓದಿಲ್ಲವೆ? ಎಂದು ಕೇಳುವಲ್ಲಿ ಹರಿಹಾಯುವ ಕೆಲಸವೇನಿದೆ? ಎಂಬುದನ್ನು ದಯವಿಟ್ಟು ತಿಳಿಸಿ ಹಾಗೆಯೆ, ಯಾವುದಾದರು ವಿಷಯವನ್ನು ಸಮರ್ಪಕವಾಗಿ ತಿಳಿಯ ಬೇಕೆಂದರೆ ಯಾವ ಹಾದಿಯನ್ನು ಹಿಡಿಯಬೇಕಂಬುದು ನನಗೆ ತಿಳಿಯುತ್ತಿಲ್ಲ. ನಿಮಗೆ ಗೊತ್ತಿರುವ ಮಾರ್ಗವನ್ನು ದಯವಿಟ್ಟು ಹೇಳುವಿರ?

    ಯಾವುದೊ ಒಂದು ವಿಷಯ ಚರ್ಚೆಗೊಳಪಟ್ಟಿದೆ ಎಂದರೆ ಅದರಿಂದಾಗುವ ಒಳಿತು ಕೆಡಕುಗಳಿಂದಾದ ಪರಿಣಾಮಗಳನ್ನು ಗಮನಿಸಿ ನಾವು ಮಾಡಬೇಕಾದದ್ದು ಏನು ಎಂದು ತಿಳಿದುಕೊಳ್ಳುವ ಬದಲು, ಗೋಳಾಟದ ಫಲ ಮುಂತಾದ ಹೇಳಿಕೆಗಳು ಯಾವ ಲಾಭವನ್ನು ತಂದು ಕೊಡುತ್ತವೆ ಗೊತ್ತಿಲ್ಲ, ಇಂತಹ ಚರ್ಚೆಗಳು ತಿಳಿಯುವ ಮನಸ್ಸುಗಳಿಗೆ ಸಹಾಯವಾಗುತ್ತದೆ ಎಂಬುದು ನನ್ನ ಅನಿಸಿಕೆ.

    ಉತ್ತರ
  9. shiva kumar
    ಏಪ್ರಿಲ್ 5 2013

    ಸವಿತಾ ಬಿ. ಎ. ಅವರೆ,

    ಮನರಂಜನೆ ಎಂದರೇನು? ಯಾರ ಪರವಾಗಿ ಮಾತನಾಡಿದರೆ ಮನರಂಜನೆ ಸಿಗುತ್ತದೆ. ಅಥವಾ ಸಿಗುವುದಿಲ್ಲ? ಯಾರಾರಿಗೆ ಎಲ್ಲೆಲ್ಲಿ ಮನರಂಜನೆ ಸಿಗುತ್ತದೆ? ಮನರಂಜನೆಗೆ ಹತ್ತು ಹಲವು ದಾರಿಗಳಿರಬಹುದೇ? ಮನರಂಜನೆ ಎಂಬುದು ಇಲ್ಲಿನ ಚರ್ಚೆಯ ವಿಷಯವಲ್ಲ. ಇಲ್ನಿ ನಿಮಗೆ ಮನರಂಜನೆಯಾಗಿದ್ದರೆ ಅದು ನಿಮ್ಮ ಅಭಿರುಚಿ. ಈ ರೀತಿ ನೀವು ಹೇಗೆ ಬೇಕಾದರು ಅಭಿಪ್ರಾಯ ಪಡುವ ಅವಕಾಶವಿದೆ. ಆದರೆ ಅದು ನಿಮ್ಮದೇ ಸ್ವಂತ ವಿಚಾರವಾಗುತ್ತದೆಯೇ ವಿನಃ ಸಂಶೋಧನೆಯ ವಾದದ ಚರ್ಚೆಯಾಗುವುದಿಲ್ಲ ಅಲ್ಲವೇ ?

    ಇನ್ನು ಶೇಕಡಾವಾರು ಲೆಕ್ಕಗಳಲ್ಲಿ ಅಳೆಯುವ ಪದ್ಧತಿಯೇ ಪ್ರಶ್ನಾರ್ಹ ಎಂಬ ಪ್ರಶ್ನೆ ಯಾರಿಗೆ? ಎಂಬುದನ್ನು ಸ್ಪಷ್ಟ ಪಡಿಸಿಕೊಳ್ಳಿ. ಏಕೆಂದರೆ, ಇದುವರೆಗೆ ನಮ್ಮ ವಿದ್ವಾಂಸರುಗಳು ವಚನ ಸಾಹಿತ್ಯ ಜಾತಿವ್ಯವಸ್ಥೆಯ ವಿರೋಧಿ ಎನ್ನಲು ಕೆಲವೇ ವಚನಗಳನ್ನು ಆಧರಿಸಿಯೇ ಹೇಳುತ್ತಿದ್ದಾರೆ ಎಂಬುದನ್ನು ಡಂಕಿನ್ ರವರು ಸಾಭಿತು ಪಡಿಸಿದ್ದಾರೆ. ಇವರು ಈ ಕೆಲವೇ ವಚನಗಳನ್ನು ಆಧರಿಸಿ ವಚನಗಳನ್ನು ಜಾತಿವಿರೋಧಿ ಎನ್ನಲು ಸಾಧ್ಯವಿಲ್ಲ. ಏಕೆಂದರೆ ಅದಕ್ಕಿಂತ ಹೆಚ್ಚು ವಚನಗಳು ಬೇರೆಯದೇ ವಿಚಾರಗಳನ್ನು ತಿಳಿಸುತ್ತವೆ ಎಂಬ ವಿಚಾರವನ್ನು ಸೂಚಿಸುತ್ತಿದ್ದಾರೆ.

    ವಿದ್ವಾಂಸರು ವಚನಗಳನ್ನು ಉಲ್ಲೇಖಿಸಿದ್ದಾರೆ ಎಂಬ ಕಾರಣಕ್ಕೆ ಮಾತ್ರ ಅದು ಸಂಶೋಧನೆಯ ಕೇಂದ್ರವಾಗಿಲ್ಲ. “ಇಡೀ ವಚನ ಸಾಹಿತ್ಯ ಜಾತಿವಿರೋಧಿ” ಎಂಬ ವಿದ್ವಾಂಸರ ಈ ಮುಖ್ಯ ಪ್ರತಿಪಾದನೆಯನ್ನೇ ಡಂಕಿನ್ ರವರು ಪ್ರಶ್ನಿಸಿರುವುದು. ಇನ್ನು ಡಂಕಿನ್ ರವರು ವಚನಗಳ ಶೇಕಡಾವಾರು ಅಂಶಗಳನ್ನು ತಮ್ಮ ವಾದಕ್ಕೆ ಎಂಪಿರಿಕಲ್ ಪ್ರಮಾಣಗಳಾಗಿ ನೀಡುತ್ತಾರೆಯೇ ಹೊರತು ಆ ಪ್ರಮಾಣಗಳೇ ಅವರ ವಾದವಲ್ಲ ಎಂಬುದು ಸ್ಪಷ್ಟ. ಈ ರೀತಿ ಪ್ರಮಾಣಗಳನ್ನು ನೀಡಬೇಕಾದುದು ವೈಜ್ಞಾನಿಕ ಸಂಶೋಧನೆಯೊಂದಕ್ಕೆ ಅಗತ್ಯವಾದುದು. ಇಲ್ಲವಾದರೆ ಯಾರೂ ಏನು ಬೇಕಾದರೂ ಮಾತನಾಡಬಹುದಾದ ಸಾಧ್ಯತೆ ಇರುತ್ತದೆ ಅಲ್ಲವೇ?

    ನಿಮ್ಮ ಆಕ್ಷೇಪಣೆಗಳನ್ನು ನೋಡಿದರೆ, ನೀವು ಅವರ ಪ್ರಸ್ತುತ ವಾದವನ್ನು ಪ್ರಶ್ನಿಸುವ ಗೋಜಿಗೇ ಹೋಗಿಲ್ಲ. ಬದಲಿಗೆ ಇವರನ್ನು ಯಾವ ಪಂಥಕ್ಕೆ ಸೇರಿಸಬಹುದು ಎಂಬ ಚಿಂತನೆಯಲ್ಲಿ ತೊಡಗಿಕೊಂಡರೆ ಯಾವುದೇ ಪ್ರಯೋಜನ ವಿಲ್ಲ. ಆದರೆ ಸ್ವತಃ ನೀವೇ ಒಂದು ವರ್ಗವನ್ನು ಗುರಿಯಾಗಿಟ್ಟುಕೊಂಡು ಅವರನ್ನು ಅಪರಾಧಿಗಳು ಎಂದು ಮೊದಲೇ ಭಾವಿಸಿರುವುದರಿಂದ ಈ ರೀತಿ ಸಂಶೋಧನೆಯೊಂದಕ್ಕೆ ಬಲಪಂಥೀಯ ಉದ್ದೇಶವಿದೆ ಎಂದು ಆರೋಪಿಸುತ್ತಿರಿವುದು ಸ್ಪಷ್ಟವಾಗಿಯೇ ಕಾಣುತ್ತದೆ. ಈ ರೀತಿಯ ಆರೋಪ ಪ್ರತ್ಯಾರೋಪಗಳ ಬದಲಿಗೆ ಪ್ರಸ್ತುತ ವಾದದ ಕುರಿತು ಆರೋಗ್ಯಪೂರ್ಣ ಚರ್ಚೆಯಲ್ಲಿ ತೊಡಗಿದರೆ ವಾಸ್ತವಾಂಶ ಕಂಡುಕೊಳ್ಳಬಹುದು.

    ಧನ್ಯವಾದಗಳು…

    ಉತ್ತರ
  10. ಏಪ್ರಿಲ್ 6 2013

    ಇನ್ನು ಜಾತೀಯತೆಯನ್ನು ಸ್ವಾಮಿ ದಯಾನಂದ ಸರಸ್ವತಿ ಸ್ವಾಮಿಗಳು ಯಥೆಚ್ಹವಾಗಿ ತಿರಸ್ಕರಿಸಿದರೂ, ಸೆಕ್ಯುಲರಿಷ್ಟ್ ಗಳು ಅವರನ್ನು ಎಂದೂ ಸ್ವೀಕರಿಸಿಲ್ಲ. ಕಾರಣ, ಅವರ ಪಂಥ ಸಮಾನತೆಯನ್ನು ಎತ್ತಿ ಹಿಡಿದರೂ, ಸೆಕ್ಯುಲರಿಷ್ಟ್ ಅಜೆಂಡಾ ಗಳಿಗೆ ಪೂರಕವಾಗಿರಲಿಲ್ಲ. ದಯಾನಂದರು ವೆದಗಳ ಮೂಲ ಅರ್ಥ ವ್ಯಾಖ್ಯಾನದಿಂದಲೇ ಅದರಲ್ಲಿರುವ ಜಾತ್ಯಾತೀತತೆಯನ್ನು ಸಮರ್ಥಿಸಿದರು. ಸೆಕ್ಯುಲರಿಷ್ಟ್ ಗಳಿಗೆ ಜಾತ್ಯಾತೀತತೆ ಬೇಕಾಗಿಲ್ಲ, ಬದಲಾಗಿ, ಜಾತೀಯತೆಯನ್ನು ಅವರ ಅನಿಸಿಕೆಗಳ, ಲಾಭಕ್ಕೋಸ್ಕರ ಸಮಾಜದಲ್ಲಿ ಸ್ಥಾಪಿಸಬೇಕಷ್ಟೆ.

    ಉತ್ತರ
  11. ಸವಿತಾ ಬಿ ಎ
    ಏಪ್ರಿಲ್ 6 2013

    ನನಗೆ ಉತ್ತರಿಸಲು ಸಮಯ ಮಾಡಿಕೊಂಡ ಎಲ್ಲ ಸಹೃದಯರಿಗೂ ಸಪ್ರೇಮ ವಂದನೆಗಳು.
    ಬ್ರಾಹ್ಮಣ ಎಂದರೆ ಆ ‘ಜಾತಿ’ಯವರು ಎಂದು ಅರ್ಥವಲ್ಲ. ಪುರೋಹಿತಶಾಹಿ ಮನಃಸ್ಥಿತಿಯುಳ್ಳವರು ಎಂದರ್ಥ. ಅದು ಲಿಂಗಾಯತರೇ ಆಗಿರಬಹುದು, ಮುಸ್ಲಿಮರೇ ಆಗಿರಬಹುದು, ಹಿಂದೂಗಳೇ ಆಗಿರಬಹುದು, ಕ್ರಿಶ್ಚಿಯನ್ನರೇ ಆಗಿರಬಹುದು. ಮತ್ತೆ ಪುರೋಹಿತಶಾಹಿ ಎಂಬುದರ ವಿವರಣೆ ಕೊಡಲು ನಾನು ಹೋಗುವುದಿಲ್ಲ.

    ಮೇಲ್ಜಾತಿಯವನೇ ನಮ್ಮನ್ನು ಉದ್ಧಾರ ಮಾಡಿದ ಎಂಬ ಅಹಂ ತೃಪ್ತಿ ಲಿಂಗಾಯತರಿಗೂ ಆಗಬೇಕು, ನಮ್ಮಿಂದಲೇ ಜಗತ್ತು ಉದ್ದಾರವಾಯಿತು ಎಂದು ಹೇಳಿಕೊಳ್ಳುವುದು ಬ್ರಾಹ್ಮಣ (ಜಾತಿ)ರಿಗೆ ಬೇಕು. ಅಲ್ಲಿಗೆ ಹುಟ್ಟಿನಿಂದ ಬ್ರಾಹ್ಮಣ ಬಸವಣ್ಣ ಬೆಳೀತಾ ಲಿಂಗಾಯತನಾದ ಎಂಬ ವಾದ ಮುಂದೆ ಬಂದು ನಿಂತಿತು. ಇಷ್ಟರ ಮಟ್ಟಿಗೆ ಡಂಕಿನರ ವಾದ ಸರಿಯಾಗಿದೆ. ಇರಲಿ.
    ಸಂಶೋಧನೆ ಎಂದರೆ ಕೇವಲ ಅಲ್ಲಗಳೆಯುವುದಲ್ಲ. ಅಲ್ಲಗಳೆದ ಮೇಲೆ ಸರಿಯಾದದ್ದು ಯಾವುದು ಅಥವಾ ಯಾವುದಿರಬಹುದು ಎಂದು ವಿವರಿಸಬೇಕಾಗುತ್ತದೆ. ಜಾತಿವಿರೋಧ ಎಂಬುದು ಶರಣ ಚಳುವಳಿಯ ಉದ್ದೇಶವಲ್ಲದಿದ್ದರೆ ವೇದಗಲನ್ನು ಕಾಳ್ಗಬ್ಬಗಳೆಂದು ಏಕೆ ಕರೆಯುತ್ತಿದ್ದರು? ವಚನಗಳ ಮೂಲಕ ನಿಮ್ಮ ದೇವರನ್ನು ನೀವೆ ನೆನೆಸಿಕೊಳ್ಲಿ ಪುರೋಹಿತರ ರೊಳ್ಳೆ ಬೇಡ ಎಂದು ಬಸವಣ್ಣ ತೆವಲಿಗೆ ಹೇಳಿದ್ದೇ? ನಿಮ್ಮ ಐಡೆಂಟಿಟಿ ನಿಮ್ಮ ವೃತ್ತಿಯಲ್ಲಿದೆ ಅದನ್ನು ಶ್ರೇಷ್ಠವೆಂದುಕೊಳ್ಳಿ ಅಂತ ಯಾಕೆ ಹೇಳಿದ್ದು? ಜಾತಿ ಹುಟ್ಟಿದ್ದೇ ವೃತ್ತಿಯಾಧಾರದ ಮೇಲೆ. ಪುರೊಹಿತರು ಹೇಳುವ ದೇವರಿಗಿಂತ ನಿಮ್ಮ ಕಾಯಕದಲ್ಲಿ ದೇವರನ್ನು ಕಂಡುಕೊಳ್ಳಿ ಎನ್ನುವುದು ಪುರೋಹಿತಶಾಹಿಯನ್ನು ಧಿಕ್ಕರಿಸಿದಂತಲ್ಲವೇ?

    ಮುಕ್ಕಾಲು ಪಾಲು ವಚನಗಳು ಇದೇ ರೀತಿಯಾದ ವಾದಗಳ ಸುತ್ತ ಸುತ್ತುತ್ತವೆ. ಅಧ್ಯಾತ್ಮಿಕ ಚಿಂತನೆಗೆ ಯಾವ ಜಾತಿಯವರೂ ತಮ್ಮ ಆಡುನುಡಿಯಲ್ಲೇ ತೊಡಗಿಕೊಳ್ಳಬಹುದು ಎಂಬ ಆಶಯವೇ ಶರಣ ಚಳುವಳಿಯ ಮೂಲ. ಅಲ್ಲಿಗೆ ಜಾತಿ ಆಧಾರಿತ ಸಾಮಾಜಿಕ ವಿಭಜನೆಗೆ ಚಳುವಳಿ ಸಡ್ಡು ಹೊಡೆದಂತಾಗಲಿಲ್ಲವೇ?

    ವಸಾಹತುಶಾಹಿಯನ್ನು ಸಂತಸಪಡಿಸಲಿಕ್ಕಾಗಿ ವಚನಗಳನ್ನು ಪ್ರಗತಿಪರ ಎಂದು ಬಿಂಬಿಸಲಾಗಿದೆ ಎನ್ನುತ್ತಾರೆ ಝಳಕಿಯವರು. ಇದೇ ಕೆಲಸವನ್ನೇ ಸ್ವಾಮಿ ದಯಾನಂದ ಸರಸ್ವತಿ ಮತ್ತಿತರ ವೇದ ಪ್ರತಿಪಾದಕರು ಮಾಡಿದರು. ವೇದಗಳನ್ನು ವೈಜ್ಞಾನಿಕ, ಪ್ರಗತಿಪರ ಎಂಬಂತೆ ಬಿಂಬಿಸತೊಡಗಿದರು.
    ಶರಣ ಚಳುವಳಿ ಬಸವಣ್ಣನ ಸಾವಿನೊಂದಿಗೆ ನಿಲ್ಲಲಿಲ್ಲ. ಎಲ್ಲೆಡೆ ವ್ಯಾಪಿಸತೊಡಗಿತು. ಪಶ್ಚಿಮಕ್ಕೆ ಚನ್ನಬಸವಣ್ನ ದಕ್ಷಿಣಕ್ಕೆ ಮಹದೆಶ್ವರ, ಮಂಟೇಲಿಂಗ ಸ್ವಾಮಿ, ಪೂರ್ವಕ್ಕೆ ಅಕ್ಕಮಹಾದೇವಿ ಇತ್ಯಾದಿ ಉದಾಹರಣೆ ಕೊಡಬಹುದು. ಝಳಕಿಯವರು ಹೇಳಿದಂತೆ ಶರಣ ಚಳುವಳಿ ನಿಂತುಹೋಗಿದ್ದರೆ ವೀರಶೈವ ಧರ್ಮ ಇಷ್ಟು ಅಗಾಧವಾಗಿ ಬೆಳೆಯುತ್ತಿರಲಿಲ್ಲ. ವಚನಗಳನ್ನು ಮುದ್ರಣ ತಂತ್ರಜ್ಞಾನ ಬಂದ ಮೇಲೆ ಪುನರ್ಮುದ್ರಣ ಮಾಡಿದ್ದೇ ಹೊರತು ಹುಡುಕಿ ಪ್ರತಿಪಾದಿಸಿದ್ದಲ್ಲ. ಇಪ್ಪತ್ತನೆಯ ಶತಮಾನ ಬರುವವರೆಗೆ ವಚನಗಳು ಮುದ್ರಣಗೊಂಡಿರಲಿಲ್ಲ ಅಷ್ಟೇ, ಬಳಕೆಗೆ ದೂರವಾಗಿರಲಿಲ್ಲ.

    ಉತ್ತರ
    • ಏಪ್ರಿಲ್ 6 2013

      ಸವಿತಾರವರ ಉತ್ತರ ಒಂದು ಕುತೂಹಲದ ಸಮಸ್ಯೆಯನ್ನು ಎತ್ತುತ್ತದೆ. ಆದಿ ಶಂಕರರು ತಮ್ಮ ಕೃತಿಯಲ್ಲಿ ‘ಶೂದ್ರ’ ಎಂಬ ಪದವನ್ನು ಬಳಸಿದ್ದು ಒಬ್ಬ ಕ್ಷತ್ರಿಯ ರಾಜನ ಕುರಿತು ಎಂಬುದು ಪದ ಪ್ರಯೋಗದ ಸಂಧರ್ಬ ನೋಡಿದರೆ ತಿಳಿಯುತ್ತದೆ ಎಂದು ಮೊನ್ನೆ ನಾನು ಫೇಸ್ ಬುಕ್ ನಲ್ಲಿ ಹೇಳಿದರೆ ಅದಕ್ಕೆ ಬಹಳ ಪ್ರತಿರೋಧ ಬಂದಿತ್ತು. ಈಗ ಇಲ್ಲಿ “ಬ್ರಾಹ್ಮಣ ಎಂದರೆ ಆ ‘ಜಾತಿ’ಯವರು ಎಂದು ಅರ್ಥವಲ್ಲ. ಪುರೋಹಿತಶಾಹಿ ಮನಃಸ್ಥಿತಿಯುಳ್ಳವರು ಎಂದರ್ಥ. ಅದು ಲಿಂಗಾಯತರೇ ಆಗಿರಬಹುದು, ಮುಸ್ಲಿಮರೇ ಆಗಿರಬಹುದು, ಹಿಂದೂಗಳೇ ಆಗಿರಬಹುದು, ಕ್ರಿಶ್ಚಿಯನ್ನರೇ ಆಗಿರಬಹುದು.” ಎಂದು ಸಲೀಸಾಗಿ ವಾದವನ್ನು ಮಂಡಿಸಿಬಿಟ್ಟಿದ್ದಾರೆ. ಭಾರತದಲ್ಲಿ ಕೆಳಜಾತಿಯ ಹೆಸರನ್ನು ತೆಗೆದು ಬಯ್ಯುವುದು ಜಾತಿ ಶೋಷಣೆ ಎಂದು ಕಾನೂನು ಹೇಳುತ್ತದೆ. ಬ್ರಾಹ್ಮಣ ಎಂಬ ಪದವನ್ನು ಮಾತ್ರ ಹೇಗೆ ಬೇಕಾದರೂ ಬಳಸಿ ಬಿಡಬಹುದು. ಆಮೇಲೆ ಒಂದಷ್ಟು ವಸಾಹತು ಚಿಂತಕರು ಹೇಳಿಕೊಟ್ಟ ಗಿಳಿಪಾಠ ಒಪ್ಪಿಸುವುದು ಇದ್ದೇ ಇದೆಯಲ್ಲಾ. ಶಿಕ್ಷೆಯ ಬದಲು ಅವರಿಗೆ ಪ್ರಗತಿಪರ ಎಂಬ ಪಟ್ಟವೂ ಸಿಗುತ್ತದೆ. ಇನ್ನೂ ಹೆಚ್ಚಿನ ಪ್ರಶ್ನೆ ಕೇಳಿದರೆ ಇದ್ದೇ ಇದಿಯಲ್ಲ ನಮ್ಮ ಸಿದ್ಧ ಉತ್ತರ: “ಮತ್ತೆ ಪುರೋಹಿತಶಾಹಿ ಎಂಬುದರ ವಿವರಣೆ ಕೊಡಲು ನಾನು ಹೋಗುವುದಿಲ್ಲ.”
      ಸಂಶೋಧನೆ ಎಂದರೆ ಕೇವಲ ಅಲ್ಲಗಳೆಯುವುದಲ್ಲ. ನಿಜ. ಆದರೆ ಬರೀ ಅಲ್ಲಗಳೆದದ್ದಕ್ಕೇ ಶಿಲುಬೇಗೆರಿಸಲು ಹೊರಟ ಮಂದಿ “ಸರಿಯಾದದ್ದು ಯಾವುದು ಅಥವಾ ಯಾವುದಿರಬಹುದು ಎಂದು ವಿವರಿಸ” ಹೊರಟರೆ ಏನು ಮಾಡಿಯಾರು? ಅಲ್ಲಿಗೂ, ಇರುವುದು ತಪ್ಪು ಎಂದು ಒಪ್ಪಿಕೊಂಡಮೇಲೆ ಸರಿಯಾದದ್ದು ಯಾವುದು ಎಂದು ಹುಡುಕಿಕೊಳ್ಳುವುದು ಎಲ್ಲರ ಜವಾಬ್ದಾರಿ. ತಪ್ಪು ತೋರಿಸಿಕೊಟ್ಟವನ ಹೆಗಲ ಮೇಲೆ ಎಲ್ಲಾ ಜವಾಬ್ದಾರಿ ಹಾಕಿದರೆ ಉಳಿದ ಚಿಂತಕರ ಅವಶ್ಯಕತೆ ಏನಿದೆ ಈ ಸಮಾಜಕ್ಕೆ. ಅವರೆಲ್ಲ ಮೊದಲು ನಿವೃತ್ತಿ ಘೋಷಿಸಲಿ ನಂತರ ನಾನು ಉಳಿದ ಸಂಶೋಧನೆ ಮಾಡುತ್ತೇನೆ.
      ವೇದಗಳನ್ನು ಜರೆದವರು ಶರಣರು ಮಾತ್ರವಲ್ಲ. ಉಳಿದ ಅಧ್ಯಾತ್ಮಿಕ ಸಾಹಿತ್ಯವನ್ನೂ ಓದಿದರೆ ಇದು ತಿಳಿಯುತ್ತದೆ. ಶಂಕರನಲ್ಲೇ ಇದನ್ನು ಎತ್ತಿ ತೋರಿಸಿದ್ದೇನೆ ಫೆಸ್ ಬುಕ್ ಕಾಮೆಂಟುಗಳಲ್ಲಿ. ಅದನ್ನೂ ಓದದೆ ಬಂದು ವಿಮರ್ಶೆಗೆ ಇಳಿಯುವುದು ಎಷ್ಟರ ಮಟ್ಟಿಗೆ ನ್ಯಾಯ? “ವಚನಗಳ ಮೂಲಕ ನಿಮ್ಮ ದೇವರನ್ನು ನೀವೆ ನೆನೆಸಿಕೊಳ್ಲಿ ಪುರೋಹಿತರ ರೊಳ್ಳೆ ಬೇಡ ಎಂದು ಬಸವಣ್ಣ” ಎಲ್ಲೂ ಹೇಳಿಲ್ಲ. ಅನ್ಯದೆವರನ್ನು ಪೂಜಿಸಬೇಡಿ, ಪೂಜಿಸಿದವ ಹೊಲೆಯನೆಂದು, ಬರಿ ಲಿಂಗವನ್ನು ಮಾತ್ರ ಪೂಜಿಸಿ ಎಂದು ಹಲವಾರು ವಚನಗಳಲ್ಲಿ ಖಂಡಿತಾ ಹೇಳಿದ್ದಾನೆ. ಜಾತಿ ಹುಟ್ಟಿದ್ದೇ ವೃತ್ತಿಯಾಧಾರದ ಮೇಲೆ ಎಂಬುದೂ ಒಂದು ಕಟ್ಟು ಕಥೆ. ನನ್ನ ಜಾತಿ ಕುರಿತ ಪುಸ್ತಕ ಓದಿ ಅದರಲ್ಲಿ ವಿವರಿಸಿದ್ದೇನೆ.
      “ಮುಕ್ಕಾಲು ಪಾಲು ವಚನಗಳು ಇದೇ ರೀತಿಯಾದ ವಾದಗಳ ಸುತ್ತ ಸುತ್ತುತ್ತವೆ”. ಇದೊಂದು ಆಧಾರವಿಲ್ಲದ ವಾದ. ಆಧಾರ ತನ್ನಿ ಮಾತಾಡೋಣ.
      “ಅಧ್ಯಾತ್ಮಿಕ ಚಿಂತನೆಗೆ ಯಾವ ಜಾತಿಯವರೂ ತಮ್ಮ ಆಡುನುಡಿಯಲ್ಲೇ ತೊಡಗಿಕೊಳ್ಳಬಹುದು ಎಂಬ ಆಶಯವೇ ಶರಣ ಚಳುವಳಿಯ ಮೂಲ.” ಭಕ್ತಿಯ ಕುರಿತು ಮಾತನಾಡಿದ ಬಹುತೇಕ ಚಿಂತಕರು ಆಡು ಭಾಷೆಯನ್ನೇ ಬಳಸಿದ್ದು. ಆಡು ಭಾಷೆಯನ್ನೇ ಬಳಸದೆ ಬರೆದ ವಚನಗಳ ಸಂಖ್ಯೆ ಕಡಿಮೆ ಏನಿಲ್ಲ. ಇದು ಏನು ತೋರಿಸುತ್ತೆ ಎಂದರೆ ನೀವು ವಚನಗಳ ಸಂಪುಟಗಳನ್ನು ತೆಗೆದು ನೋಡಿಯೇ ಇಲ್ಲ.

      “ಶರಣ ಚಳುವಳಿ ನಿಂತುಹೋಗಿದೆ ಎಂದು ನಾನು ಎಲ್ಲೂ ಹೇಳಿಲ್ಲ. ಇಲ್ಲಸಲ್ಲದ ವಾದವನ್ನು ನನಗೆ ಆರೋಪಿಸುವ ಮುನ್ನ ಒಮ್ಮೆ ನನ್ನ ಲೇಖನವನ್ನು ನಿಧಾನವಾಗಿ ಓದಿ ನೋಡಿ.
      “ಇಪ್ಪತ್ತನೆಯ ಶತಮಾನ ಬರುವವರೆಗೆ ವಚನಗಳು ಮುದ್ರಣಗೊಂಡಿರಲಿಲ್ಲ ಅಷ್ಟೇ, ಬಳಕೆಗೆ ದೂರವಾಗಿರಲಿಲ್ಲ” ಎಂಬುದನ್ನು ಬರಿ ಹೇಳಿದರೆ ಸಾಲದು. ಅಧಾರ ತಂದು ತೋರಿಸಿ.

      ಉತ್ತರ
      • ಏಪ್ರಿಲ್ 6 2013

        ಶಂಕರರ ಬ್ರಹ್ಮಸೂತ್ರದ ವ್ಯಾಖ್ಯಾನದ ಬಗ್ಗೆ ಹೇಳುವದಾದರೆ, ಬ್ರಹ್ಮಸೂತ್ರವು ಅವರ ಸ್ವಂತ ಕೃತಿಯಲ್ಲ. ಬ್ರಹ್ಮಸೂತ್ರವನ್ನು ಬರೆದವರು ವೆದವ್ಯಾಸರು. ಶಂಕರರು ಅದ್ವೈತ ಸಿದ್ಧಾಂತವನ್ನು ಬ್ರಹ್ಮಸೂತ್ರದ ಮೂಲಕ ನಿರೂಪಿಸುವದಕ್ಕೋಸ್ಕರ ಅದಕ್ಕೆ ಭಾಷ್ಯವನ್ನು ಬರೆದರೆ ಹೊರತು, ಅದು ಶಂಕರರ ಸ್ವಂತ ಅಭಿಮತವಲ್ಲ. ಇನ್ನು ಶಂಕರರು ಯಾವ ರೀತಿಯಲ್ಲಿ ಸಮಾನತೆಯ ಬಗ್ಗೆ ನಿಲುವನ್ನು ಹೊಂದಿದ್ದರು ಎಂಬುದಕ್ಕೆ ಅವರ ’ಮನಿಶಾ ಪಂಚಕ’ವನ್ನು ಓದಬೇಕು. ಅದ್ವೈತ ಮುಖವಾಣಿಯಾದ ಮನಿಷಾ ಪಂಚಕದಲ್ಲಿ ಅವರು ಹೇಳಿದ್ದೇನೆಂದರೆ “ಚಾಂಡಾಲೋಸ್ತು ಸ ತು ದ್ವಿಜೋಸ್ತು ಗುರುರಿತ್ಯೆಷಾ ಮನೀಷಾ ಮಮ” ಅಂದರೆ “ಬ್ರಹ್ಮವೇ ಸತ್ಯವೆಂದರಿತಾತ ಬ್ರಾಹ್ಮಣನಿರಲೀ ಅಥವಾ ಚಾಂಡಾಲನಿರಲಿ ಅವನು ನನಗೆ ಗುರು” ಎಂದರ್ಥ. ಇನ್ನು ಶಂಕರರು ವಿದ್ಯೆಗೆ ಯಾರು ಅರ್ಹರು ಅಂಬುದನ್ನು ವಿವರಿಸುತ್ತಾ, “ಸರ್ವೇಶಾಂಚಾಧಿಕಾರೊ ವಿದ್ಯಾಯಾಂ” ಎಂದು ಹೇಳಿದ್ದಾರಷ್ಟೆ ಅಲ್ಲದೆ ವಿದುರ, ಧರ್ಮವ್ಯಾಧ ರ್ವೈಕ ಇವರ ಉದಾರಣೆಗಳನ್ನು ಕೊಟ್ಟು, ಶೂದ್ರ ಸ್ತ್ರೀ ಸಂಜಾತರಿಗೂ ವಿಧ್ಯಾಧಿಕಾರವನ್ನು ಮಾನ್ಯ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅವರ ಅದ್ವೈತ ಸಿದ್ಧಾಂತವೆ ಎಲ್ಲಾ ಜೀವಾತ್ಮಗಳನ್ನು ಒಂದೆ ಎಂದು ಕಾಣುವಂತಾದ್ದು. ಕೇವಲ ಬ್ರಾಹ್ಮಣರಷ್ಟೆ ಅಲ್ಲದೆ, ಎಲ್ಲಾ ವರ್ಗದವರೂ ಮುಕ್ತಿಯನ್ನು ಹೊಂದಲು ಸಾಧ್ಯವಿದೆ ಎಂದು ಹೇಳಿದವರು ಶಂಕರರು. ಅಷ್ಟೆ ಅಲ್ಲದೆ ಶಾಸ್ತ್ರಗಳನ್ನು ಮಾನ್ಯಮಾಡಿದರೂ ವಿವೇಕ ಚೂಡಾಮಣಿಯಲ್ಲಿ ಶಾಸ್ತ್ರಗಳೂ ಕೂಡ ಸಂಪೂರ್ಣ ಸತ್ಯವಲ್ಲ ಎಂದು ಅರುಹಿದರು.”shaastras are useless till Brahman is known. shaastraas are also useless even after Brahman is known” ಎಂಬ ಅವರ ಈ ನುಡಿ ಅವರು ಬರಿಯ ಶಾಸ್ತ್ರಕ್ಕೆ ಗಂಟು ಬೀಳದೆ ಇದ್ದಿದ್ದನ್ನು ತೊರಿಸುತ್ತದೆ.

        ಉತ್ತರ
  12. ಏಪ್ರಿಲ್ 6 2013

    ವಸ್ತುನಿಷ್ಟ(objective) ಎಂಬುದು ನಮ್ಮ ನಮ್ಮ ವೈಯುಕ್ತಿಕ ಅಭಿಪ್ರಾಯಗಳನ್ನ ಬದಿಗಿಟ್ಟು ನೋಡುವ ಕ್ರಮ. ಅದೊಂದು ವೈಙ್ಞಾನಿಕ ಕ್ರಮ. ಇಲ್ಲದೆ ಹೋದರೆ ಭಾಷಣಗಳು, ಕಲ್ಪಿತ ಕತೆಗಳು ಸತ್ಯವಾಗಿಹೋಗುತ್ತೆ.

    ಪ್ರಜಾವಾಣಿ ಹಾಗು ನಿಲುಮೆಯಲ್ಲಿನ ಪ್ರತಿಕ್ರಿಯೆಗಳನ್ನ ನೋಡುತ್ತ ಬಂದಿದ್ದೇನೆ. ಒಂದು ಸಂಶೋಧನೆಯನ್ನ ತಿರಸ್ಕರಿಸಿ ಎಂದು ಹೇಳಬೇಕೆಂದರೆ ೧. ಆ ಸಂಶೋಧನಾ ವಿದಾನವೆ ತಪ್ಪು ಎಂದು ತೋರಬೇಕು, ಹಾಗೆ ತೋರಿಸಲಿಕ್ಕೆ ಮತ್ತೆ ವೈಙ್ಞಾನಿಕ ಕ್ರಮಗಳನ್ನ ಅಳವಡಿಸಿಕೊಳ್ಳಬೇಕು. ೨. ಸಂಶೋಧನೆಯಿಂದ ಮತ್ತೊಂದು ನಿರ್ಣಯವನ್ನು(ವಿರುದ್ದವಾದದ್ದನ್ನು) ತೋರಿಸಬೇಕು. ಈ ಎರೆಡನ್ನೂ ನನಗನ್ನಿಸಿದ ಮಟ್ಟಿಗೆ ಯಾರೂ ಯಾವ ಲೇಖನದಲ್ಲೂ ಮಾಡಿಲ್ಲ.

    ಎಲ್ಲಾ ಪ್ರತಿಕ್ರಿಯೆಗಳೂ ಭಾಷಣಗಳಂತೆ ಭಾಸವಾಗುತ್ತೆ. To the point ಪ್ರತಿಕ್ರಿಯೆಯೆ ಇಲ್ಲ. ಯಾವುದೇ ವಿಙ್ಣ್ಯಾನದ(ಬೌತಶಾಸ್ತ್ರ)ದ ಲೇಖನಗಳನ್ನ ತಿರಸ್ಕರಿಸಬೇಕು ಎಂದರೆ, ಅದರ ಲೋಪಗಳನ್ನ ತೋರಿಸಬೇಕು ಎಂದರೆ, to the point ಮಾತ್ರ ಮಾತನಾಡಬೇಕು. 1+1=2 ತಪ್ಪು ಎಂದು ಹೇಳಬೇಕೆಂದರೆ, 1 ಎಂಬ ಸಂಖ್ಯಯು ಪಾಶ್ಚಾತ್ಯರದ್ದ, ಪೌರಾತ್ಯರದ್ದ, 1 ಎಂಬ ಸಂಕ್ಯಯು ಯಾವ ಶತಮಾನದಲ್ಲಿ ಯಾರು ಕಂಡುಹಿಡಿದರು ಎಂಬುದರಿಂದ ತಿರಸ್ಕರಿಸಲಿಕ್ಕೆ ಆಗುವುದಿಲ್ಲ.

    ನೋಡಿ, ಸತ್ಯ ಯಾರ ಪರವಾದದ್ದು ಅಲ್ಲ. ಅದು ವಸ್ತುನಿಷ್ಟವಾದದ್ದು. ಒಬ್ಬರ ಪರ ವಿರುದ್ದ ಮಾತನಾಡುವುದು ಸರಿಯಲ್ಲ. ಆ ಇಡೀ ವಸ್ತುವಿನ ಬಗ್ಗೆ ಆ ಸಂಶೋಧನೆಯ ಬಗ್ಗೆ ಅದೇ ಮಟ್ಟದಲ್ಲಿ ಪ್ರತಿಕ್ರಿಯಿಸ ಬೇಕಾಗುತ್ತೆ. ಈ ಇಡೀ ಮಾತುಗಳನ್ನ ಡಂಕಿನ್ ರ ಪೂರ್ಣ ಲೇಖನವನ್ನ ಓದಿದ ನಂತರ ಹೇಳುತ್ತಿದ್ದೇನೆ.

    ಉತ್ತರ
  13. ಏಪ್ರಿಲ್ 6 2013

    ಸವಿತರವರೆ
    ೧. ಸಂಶೋಧನೆಯ ಮೂಲಕ ಇರುವ ಗ್ರಹಿಕೆಯನ್ನು ತಪ್ಪು ಎಂದು ಮಾತ್ರ ತೋರಿಸುವ ಪ್ರಯತ್ನವನ್ನು ಡಂಕಿನ್ ರವರು ಮಾಡಿಲ್ಲ. ಅದರ ಜೊತೆಗೆ ವಚನಗಳ ಕುರಿತ ಮತ್ತೊಂದು ಸಮಗ್ರ ವಿವರಣೆಯನ್ನು ನೀಡಿದ್ದಾರೆ. ಅದನ್ನು ಅವರ ಬರವಣಿಗೆಯಲ್ಲಿ ತೋರಿಸಿದ್ದಾರೆ, ದಯವಿಟ್ಟು ಗಮನಿಸಿ, ಅವಸರಪಟ್ಟು ಕಾಮೆಂಟ್ ಬರೆಯಲು ಅರ್ಧಂಬರ್ದ ಓದಿದರೆ ಈಗಾಗಲೇ ಲೇಖನದಲ್ಲಿ ಸ್ಪಷ್ಟಪಡಿಸಿರುವ ಸಂಗತಿಯ ಕುರಿತು ಮತ್ತೆ ಮತ್ತೆ ಪ್ರಶ್ನೆ ಕೇಳುವಂತೆ ಮಾಡುತ್ತದೆ.

    ೨.ವಚನಕಾರರು ವೇದಗಳನ್ನು ಅಲ್ಲಗಳೆದರೆ ಬ್ರಾಹ್ಮಣರನ್ನು ಅಲ್ಲಗಳೆದರು ಅಥವಾ ಅವರ ಕರ್ಮಠ ಆಚರಣೆಗಳನ್ನು ಅಲ್ಲಗಳೆದರು ಎಂದು ಹೇಳಬಹುದು. ಆದರೆ ಅವರು ಸಮಾಜದಲ್ಲಿರುವ ಜಾತಿಯನ್ನೇ ಅಲ್ಲಗಳೆದರು ಎಂದು ಹೇಳಲು ಅಸಾಧ್ಯ. ಏಕೆಂದರೆ ಸಮಾಜದಲ್ಲಿ ಇರುವ ಹಲವಾರು ಸಮುದಾಯಗಳಂತೆ ಅವರದ್ದೂ ಒಂದು ಅಷ್ಟೆ.ಒಂದೊಮ್ಮೆ ಬ್ರಾಹ್ಮಣರೆ ಇಡೀ ಸಮಾಜವನ್ನು ನಿಯಂತ್ರಿಸುತ್ತಿದ್ದಾರೆ ಎಂದು ಪೂರ್ವಭಾವಿಯಾಗಿ ಕಲ್ಪಿಸಿಕೊಳ್ಳದಿದ್ದರೆ ನಿಮ್ಮ ಪ್ರಶ್ನೆಗೆ ಅರ್ಥವಿರುವುದಿಲ್ಲ. ಹಾಗೆ ಕಲ್ಪಸಿಕೊಂಡು ಕೇಳಿದರೂ ಸಹ ಅದು ವಾಸ್ತವವಲ್ಲ. ಏಕೆಂದರೆ ನೀವು ಮಾಡುವ ಪೂಜೆಗೆ ಯಾವ ದೇವರು ಎಂದು ನಿರ್ಧರಿಸುವುದು ಬ್ರಾಹ್ಮಣರು ಎಂದರೆ ಅದು ನಗೆಪಾಟಲಿನ ವಿಷಯ ಮತ್ತು ಅವಾಸ್ತವಿಕ.

    ಉತ್ತರ
  14. prabhuling
    ಏಪ್ರಿಲ್ 7 2013

    it is nice to see mr. jalaki argumentativeness nature. i read always vachana as cast appositive and progressive. when i started reading prajavani only one sided views are published and i always was looking for other side of coin but paper seemed to injust ice and unfair to you without publishing your response. it seemed to me paper and columnist are preoccupied by ideas and wanted its readers to be like that.
    if numbers of vachana are not consider as evidence it seem to me virasivas sect dangerous which wanted to topple all gods and establish Semitic religion as one basava said narayanu kanu girayanu kane. haruvara kandare hari nama amurayya oluvare kandare bettale aguvarayya.if numbers are not matter only intensity matter we can establish basavanna as dangerous cult man but they do not use single yardstick.
    i do doubt about ur aponant intelligentsia as they are not ready to face to face debate instead of throwing allegation. i like your open mindedness and support you

    ಉತ್ತರ
  15. ಏಪ್ರಿಲ್ 7 2013

    @Dunkin: ಸರ್ ಬೇರೆ ಯಾವ್ದಾದ್ರೂ ಪತ್ರಿಕೆಗೆ ನಿಮ್ಮ ಸಂಶೋಧನಾತ್ಮಕ ಲೆಖನಗಳನ್ನು ಕಳಿಸಬಹುದಿತ್ತಲ್ವಾ? ವಿಜಯ ಕರ್ನಾಟಕ ಪತ್ರಿಕೆಗೆ ಕಳುಹಿಸಿ ನೋಡಿ. ಪ್ರಜಾವಾಣಿ ಹಾಗೂ ವಾರ್ತಾಭಾರತಿ ಪತ್ರಿಕೆ ಬಹಳಷ್ಟು ಪೂರ್ವಗ್ರಹ ಪೀಡಿತ ಬರಹಗಾರರನ್ನು ಸಾಕಿ ಸಲಹಿದೆ. ಲೆಖನಗಳ ತುಂಬ ತಾರ್ಕಿಕ ಮಿಥ್ಯಗಳು, ಜಾತಿ ವೈಷಮ್ಯ ಮತ ವೈಷಮ್ಯಗಳೇ ತುಂಬಿಕೊಂಡಿರುತ್ತವೆ. ಇನ್ನು ಕೆಲವು sly dog ಗಳು ದಲಿತ ಪರ ಮಾತನಾಡುವ ನೆಪದಲ್ಲಿ ತಮ್ಮ ಮನಸ್ಸಿನಲ್ಲಿರುವ ವಿಷವನ್ನು ಕಕ್ಕುತ್ತಾರೆ.

    ಉತ್ತರ
    • ಏಪ್ರಿಲ್ 7 2013

      ಎಲ್ಲಾ ಪತ್ರಿಕೆಗಳಿಗೂ secular ವಾದ ಮಂಡಿಸುವ ಲೇಖನಗಳೇ ಬೇಕು ಬಾಲಚಂದ್ರ ಅವರೇ.

      ಉತ್ತರ
      • prabhuling
        ಏಪ್ರಿಲ್ 8 2013

        sir do not worry when one try to hide the opinion when they are commenting opinion on yours writing. here law of spring works how much you press that much it bounce back. today generation is enough wise to look two side of coin.india had seen two intellectual revolution in 6th century and 8th century result was contradictory first case bhudhism take
        upper hand second time hinduism. now it is third intellectual revolution here internet is platform not news paper. i searched ur article for two day atlast got in facebook link. keep faith in us continue work not being political correctness which is hallmark of scholors

        ಉತ್ತರ
  16. santosh ananad
    ಏಪ್ರಿಲ್ 7 2013

    Vijaya Karnataka and Hosa Digantha are more prejudiced than Praja vani. These are also venomous who always coughs communal hatred and sacerdotalism.

    ಉತ್ತರ
  17. santosh ananad
    ಏಪ್ರಿಲ್ 7 2013

    Mr. Dunkin’s statistical analysis and percentage calculation is ridiculous and he failed to recognize the tone of the Vachanas which is universalism. That is why people from all parts of the country congregated to celebrate the message of universal brotherhood in Kalyana in12th century. If Basava and other vachanakars were not against caste system what was the necessity for them to come to Kalyana? Vachanakaras rebelled against the caste system through spirituality. Equal religious rights to all people irrespective of caste creed gender itself was a befitting reply to the priestly establishments. I have proved on the facebook comment how Shankara derided shudras and treated them as WALKING GRAVEYARDS.

    ಉತ್ತರ
    • ಏಪ್ರಿಲ್ 7 2013

      I thought of you as a good interlocutor. Didn’t know you also belong to the same breed of fb writers who use abusive language and want to score more than discuss. If that is what you want to do then count me out of discussion. Not interested in exchaning some abuses. And the one who quotes a sholka from Shankara and claims to have ‘proved’ something cannot really discuss.

      ಉತ್ತರ
      • santosh ananad
        ಏಪ್ರಿಲ್ 8 2013

        Mr. Dunking what abusive language have I used? Pl clarify this.

        ಉತ್ತರ
  18. santosh ananad
    ಏಪ್ರಿಲ್ 7 2013

    Mr. Balachandra Bhat you asked a question above. i.e. What is the meaning of HOLASU TIMBUVAVANE HOLEYA? Here the word holasu means the money which is not earned by honest means. It means who lives on others’ earnings without doing any work. To endorse this statement you can read Aydakki Lakkamma’s vachana AASE EMBUDU ARASINGALLADE………..

    ಉತ್ತರ
    • ಏಪ್ರಿಲ್ 8 2013

      please, quote vachanas prove your point that one endorses the other. Mr. Dunkin is not only leaning on statistics to prove his point. He also gave account that Vachanas also claimed to brand people as holayas to those who worship different gods other than shiva? how do u conciliate this? To be secularist, you need to analyze based on independent rationalist view than adhering to another biased philosophy(shevaite here).

      ಉತ್ತರ
      • santosh ananad
        ಏಪ್ರಿಲ್ 8 2013

        If your mind is biased everything looks biased. Cant u read the vachana I have quoted above? That vachana itself gives what is holasu according to vachanakaras.What u get without earning is holasu for them.
        Secondly what did u understand by the concept of Shiva used by vachanakaras?

        ಉತ್ತರ
        • ಏಪ್ರಿಲ್ 8 2013

          pls, quote full of both vachanas to prove your point holasu=lobbied money.
          What’s concept of shiva then, if not it’s based on puranic concept of shiva?

          ಉತ್ತರ
        • ಏಪ್ರಿಲ್ 8 2013

          @Santosh: And moreover, please let me know how worshiping other Gods(apart from shiva) is inferior according to so called egalitarian, secularist view of theism. And explain me what is shiva according vachanas that espouses shiva and worshiping of shivalinga? And prove me that’s absolute, rationalistic concept of theism over other doctrines and theologies.

          ಉತ್ತರ
          • santosh ananad
            ಏಪ್ರಿಲ್ 8 2013

            @Bhat first you quote where vachanakars say that those worship other gods as holeyas.

            Secondly you & your team proclaim that vachanas talk only about spirituality not about caste system. Then, don’t know what is Shiva concept in vachanakaras. If you don’t know you better ask Mr.Balu and Mr.Dunkin or anybody and then come for discussion. If they say they too don’t know then surely I will answer.

            ಉತ್ತರ
            • ಏಪ್ರಿಲ್ 8 2013

              Read Mr.Dunkin’s thesis who made research on that. u can get it clarified from him. If that doesnt exist, then u can accuse him.
              Yes vachanas doesnt talk about caste system. And its blame for vaidikism is not with respect to independent egalitarian, socialistic view, that’s self evident. As I already told, if someone blames brahminism, it doesnt mean that he is secularist, unless his assessment is not preoccupied idea or precepts of their own ideology, As Mr. Dunkin and co successfully proved, anti-vaidic verses of vachanas are with respect to precepts of their own ideological adhyaatmik beliefs. That’s not new at all. Shankaracharya also debated with Mandana mishra against ritualistic part of hinduism(purva mimaamsa).

              ಉತ್ತರ
              • santosh anand
                ಏಪ್ರಿಲ್ 15 2013

                If Mr. Dunkin cant see the Vachanas as a medium of social change, then it doesn’t mean nobody can see it. His thesis is his collective opinion. that’s all. One person cant generalize history and heritage in one book.

                ಉತ್ತರ
                • ಏಪ್ರಿಲ್ 16 2013

                  If u see it, make us realize by quoting respective vachanas and historical facts to prove your point. We would be glad to agree. That’s what we are asking. U never came back. Perhaps u want to dwell in your own imagination and just hypothesis. Mr. Dunkin has clearly quoted vachanas and analyzed very convincingly to its objective approach. You are playing behind the bushes, mud-slinging without any substantial evidence and approach.

                  ಉತ್ತರ
  19. prabhuling
    ಏಪ್ರಿಲ್ 7 2013

    @savita words have some truth and substance. we support a man who can throw light on vachana and medieval history come victorious by his logic and reasoning. as huxly said wise is one who cannot take pro and opposite stand look for substance in argument.

    when we say brahman it connotes two things first, the ideal value which are universal and a cast of people believe in orthodoxy.i feel jalaki stood for first one rather than second. even though i am lingayata and basava is my hero does not pain me reading jalaki infact why lingayath have so many cast can be easly explained by jalaki argument unlike argument of kalaburgi as he holds it went anticlockwise in course of time. vachana are not against cast it does not reduces their wisdom and nuggets without that also which have intrinsic value.

    why jalaki argument strong bcs what man think, he talk about much on that only.even, u take jalaki we can easly establish analyzing jalaki writing that he thinks more on vachana than science.which holds good for kalaurgi and vachanakara also.cast is social reality and also expression of his way of life but untouchability is stigma attached to it makes cast so deprived and charmless institution like beautiful girl face pasted with coal powder.

    ಉತ್ತರ
  20. ಬಸವಯ್ಯ
    ಏಪ್ರಿಲ್ 8 2013

    ವಚನಗಳ ಬಗ್ಗೆ ಕನ್ನಡದಲ್ಲಿ ಪ್ರಾರಂಭವಾದ ಚರ್ಚೆ ಇಂಗ್ಲಿಶ್ ನಲ್ಲಿ ಮುಂದುವರಿದಿರುವುದು ನೋಡಿ ಅಚ್ಚರಿಯಾಯಿತು. ಬಸವಣ್ಣ ಮತ್ತು ವಚನಕಾರರು ಮೇಲಿರಿಮೆಯ ಸಂಸ್ಕೃತ, ವೇದ ತಿರಸ್ಖರಿಸಿ ಆಡುಬಾಷೆಯಲ್ಲಿ ವಚನ ಬರೆದು ಜನರಿಗೆ ಹತ್ತಿರವಾದ, ಬೆಳಕು ತಂದ ಎನ್ನುವವರು ಇಂಗ್ಲಿಶ್ ನಲ್ಲಿ ಚರ್ಚೆ ಮಾಡುತ್ತಿರುವುದು ಯಾಕೊ? ಯಾವುದಾದರೂ ವಿದೇಶದವರಿಗೆ ವಚನಗಳ ಬಗ್ಗೆ ತಿಳಿಸಿ ಹೇಳುತ್ತಿದ್ದಿರಾ? ಕನ್ನಡದಲ್ಲಿ ವಚನ ಓದಿ ವಿಶ್ಲೇಶಿಸಬಲ್ಲವರು, ಕನ್ನಡದಲ್ಲಿ ಚರ್ಚೆ ಮಾಡಲಾರರೆ?

    @ಸಂತೋಷ್
    ‘ಹೊಲಸು ತಿಂಬವ ಹೊಲೆಯ’ ದಲ್ಲಿ ಹೊಲಸೆಂದರೆ ಅನ್ಯಾಯದ ಸಂಪಾದನೆ ಎಂದಾದರೆ ಬೃಷ್ಟಾಚಾರ ಆಗ ಕೂಡ ಈಗಿನಷ್ಟೇ ಭರ್ಜರಿಯಾಗಿತ್ತು ಎಂದಾಯಿತು. ಬಸವಣ್ಣ ಹೇಳಿದ ‘ಹೊಲಸು’ ಮಧ್ಯ-ಮಾಂಸ ಯಾಕೆ ಆಗೊಲ್ಲ ಸ್ವಾಮಿ? ಏನಾದರೂ ವಿಶೇಷ ಕಾರಣವಿದೆಯಾ?

    ಉತ್ತರ
    • ಏಪ್ರಿಲ್ 8 2013

      ಯಾರಿಗೆ ಯಾವ ಭಾಷೆ ಬೇಕೋ ಅದರಲ್ಲೇ ಚರ್ಚೆ ಮಾಡಲಿ ಬಿಡಿ. ಭಾಷೆಯನ್ನು ಒಂದು identity ಪ್ರಶ್ನೆ ಮಾಡಿಕೊಳ್ಳುವುದು ಏಕೆ? ಕನ್ನಡ ಓದಲು ಬರುವ ಆದರೆ ಬರೆಯಲು ಬಾರದ ಮಹಾರಾಷ್ಟ್ರದ ಗಡಿ ಭಾಗದ ಕೆಲ ಮಂದಿ ಈ ಹಿಂದೆ ಚರ್ಚೆಗೆ ಬಂದು ಇಂಗ್ಲಿಷ್ ಅನ್ನು ಬಳಸಿದ್ದರು. ಭಾಷೆಯಾವುದಾದರೇನು, ನಮಗೆ ಬೇಕಾಗಿದ್ದು ಆರೋಗ್ಯವಂತ ಚರ್ಚೆ ತಾನೇ.

      ಉತ್ತರ
      • ಬಸವಯ್ಯ
        ಏಪ್ರಿಲ್ 8 2013

        ಡಂಕಿನ್..
        ಸಾಮಾನ್ಯ ಓದುಗರಿಗೆ ಕೂಡ ನಿಮ್ಮ ಸಂಶೋಧನೆಯಲ್ಲಿ ಏನಿದೆ ಎಂದು ತಿಳಿಯಬೇಕು, ಅದರ ಬಗೆಗಿನ ಚರ್ಚೆಯನ್ನು ಅವರು ಓದಬೇಕು. ಆಗಲೇ ನಿಮ್ಮ ಸಂಶೋಧನೆಯ ಪ್ರಯೋಜನ ಎಂದು ನನ್ನ ಭಾವನೆ. ಆದಕ್ಕೆ ಇಲ್ಲಿ ಕನ್ನಡದಲ್ಲಿ ಚರ್ಚೆ ಬೇಕು ಎಂದದ್ದು. ಎರಡನೆಯದಾಗಿ ವಚನಗಳು ಆಡುಬಾಷೆಯಲ್ಲಿದ್ದದ್ದೆ ಬಹು ದೊಡ್ಡ ವಿಚಾರ ಎನ್ನುವವರು, ಇಂಗ್ಲಿಶಿನಲ್ಲಿ ಚರ್ಚೆ ಮಾಡುವುದು ನೋಡಿ ತಮಾಶೆಯೆನಿಸಿತು. ಅಂದಂತೆ ನಾನು ಉಗ್ರ ಬಾಷಾಭಿಮಾನಿಯೇನಲ್ಲ!:)

        ಉತ್ತರ
        • sharu
          ಫೆಬ್ರ 6 2014

          ಬಸವಯ್ಯನವರ ಮಾತು ಸರಿ. ಕನ್ನಡದಲ್ಲಿ ಚರ್ಚೆ ಆದರೆ ನನ್ನಂಥ ಇಂಗ್ಲೀಷಿನ ಜ್ಞಾನವಿಲ್ಲದ ಎಷ್ಟೋ ವ್ಯಕ್ತಿಗಳು ಆ ಚರ್ಚೆ ಓದದೇ ಮುಂದೆ ಸಾಗಬೇಕಾಗುತ್ತದೆ. ಕನ್ನಡದಲ್ಲಿ ಬರೆದರೆ ಹೆಚ್ಚು ಸೂಕ್ತ.

          ಉತ್ತರ
          • sharu
            ಫೆಬ್ರ 6 2014

            ಕನ್ನಡದಲ್ಲಿ ಚರ್ಚೆ ಆದರೆ ನನ್ನಂಥ ಇಂಗ್ಲೀಷಿನ ಜ್ಞಾನವಿಲ್ಲದ ಎಷ್ಟೋ ವ್ಯಕ್ತಿಗಳು ಆ ಚರ್ಚೆ ಓದದೇ ಮುಂದೆ ಸಾಗಬೇಕಾಗುತ್ತದೆ ಇದನ್ನು ಇಂಗ್ಲೀಷಿನಲ್ಲಿ ಚರ್ಚೆ ಆದರೆ ಎಂದು ಓದಿಕೊಳ್ಳಿ.

            ಉತ್ತರ
    • ಬಸವಯ್ಯ
      ಏಪ್ರಿಲ್ 8 2013

      ಆಗ ಸಂಸ್ಕೃತ ಕಲಿತು, ಮಾತನಾಡಿ, ಬರೆದು ಮೇಲಿರಿಮೆ ತೋರಿಸಿದರು..ಆಡುಬಾಷೆಯವರನ್ನು ಕೀಳಾಗಿ ನೋಡಿದರು. ವಚನಗಳು ಈ ಮೇಲಿರಿಮೆಯ ಪುರೋಹಿತಶಾಹಿಯನ್ನು ದಿಕ್ಕರಿಸಿತು ಎಂದೆಲ್ಲ ‘ಪ್ರಜ್ಞಾವಂತ’ ಚಿಂತಕರು ಹೇಳಿದ್ದನ್ನು ಕೇಳಿದ್ದೇವೆ ನಾವು. ಈಗ ಹೇಳಿ ಈ ಚಿಂತಕರಲ್ಲಿ ಅನೇಕರು ದುತ್ತೆಂದು ಕನ್ನಡದವರೊಡನೆ ಇಂಗ್ಲಿಶ್ ನಲ್ಲಿ ಚರ್ಚೆಗೆ ಇಳಿಯುವುದು ಏಕೆ? ಕಲಿತವರು ನಾವು, ಸುಮ್ಮನೆ ಕಾಂಜಿ-ಪಿಂಜಿ ಅಲ್ಲ ಎಂದು ತಿಳಿಸಿಕೊಡುವ ಮೇಲಿರಿಮೆಯೆ? ಈಗ ಇವರಿಗಿರುವಂತೆ ಆಗ ಸಂಸ್ಕೃತ ಬಲ್ಲವರಿಗೆ ಮೇಲಿರಿಮೆ ಇದ್ದಿದ್ದರೆ ಅದು ಮಾತ್ರ ತಪ್ಪಾ? ಅಥವಾ ಆಗ ಆ ಬಾಷೆ ಮಾತನಾಡುವವರಲ್ಲಿ ಬಹುಸಂಖ್ಯಾತರು ಒಂದು ವರ್ಗಕ್ಕೆ ಸೇರಿದ್ದರು ಎನ್ನುವದರಿಂದ ಹುಟ್ಟಿದ ದ್ವೇಶವಾ?

      ಉತ್ತರ
      • ಏಪ್ರಿಲ್ 8 2013

        ‘ಪ್ರಜ್ಞಾವಂತ’ ಚಿಂತಕರು ಬಳಷ್ಟು ಹೇಳುತ್ತಾರೆ. ನಿಜವೆಂದರೆ, ಸಂಸ್ಕೃತ ಎಂದೂ ಆಡು ಭಾಷೆಯಾಗಿರಲಿಲ್ಲ (Sheldon Pollockರ ಕಡೆಯ ಕೃತಿ ಇದಕ್ಕೆ ಸಾಕಷ್ಟು ಪುರಾವೆಗಳನ್ನು ಕೊಡುತ್ತದೆ.) ಅಂತೆಯೇ, ಆಡು ಭಾಷೆಯನ್ನು ಬಳಸಿದವರಲ್ಲಿ ವಚನಕಾರರು ಮೊದಲಿಗರಲ್ಲ, ಒಬ್ಬರೇ ಖಂಡಿತಾ ಅಲ್ಲ. ಬಹಳಷ್ಟು ಭಕ್ತಿ ಕುರಿತ ಬರಹಗಳು ಆಡುಭಾಷೆಯಲ್ಲೆ ಇರುವುದು ಎಂಬ ವಾದವಿದೆ. ಇಲ್ಲಿ ನಾವು ಎತ್ತಬೇಕಾದ ಪ್ರಶ್ನೆ ಇದು: ಯಾವ ಬರಹಗಳಲ್ಲಿ ಭಾರತೀಯರು ಆಡು ಭಾಷೆಯನ್ನು ಬಳಸಿದರು ಮತ್ತು ಎಲ್ಲಿ ಗ್ರಾಂಥಿಕ ಭಾಷೆಯನ್ನು ಬಳಸಿದರು ಮತ್ತು ಏಕೆ?

        ವಚನಗಳೆಲ್ಲವೂ ಆಡು ಭಾಷೆಯಲ್ಲೇ ಬರೆಯಲ್ಪಟ್ಟಿಲ್ಲ. ಅದು ಒಂದು ಆಧಾರ ರಹಿತ ನಂಬಿಕೆ.

        ಉತ್ತರ
        • santosh ananad
          ಏಪ್ರಿಲ್ 8 2013

          Mr. Dunkin regarding your last sentence in the above paragraph what did u mean by saying vachanas are not written in the spoken language of the people?

          ಉತ್ತರ
          • ಏಪ್ರಿಲ್ 8 2013

            ನಾನು ಹೇಳುತ್ತಿರುವುದು, ನಾವು ಅಂದು ಕೊಂಡಂತೆ ಎಲ್ಲಾ ವಚನಗಳನ್ನು ಆಡು ಭಾಷೆಯಲ್ಲೇ ಬರೆಯಲಾಗಿಲ್ಲ. ಉರಿಲಿಂಗ ಪೆದ್ದಿ ಎಷ್ಟೊಂದು ಸಂಸ್ಕೃತವನ್ನು ತಮ್ಮ ವಚನಗಳಲ್ಲಿ ಬಳಸುತ್ತಾರೆ ಎಂದರೆ ಅವರು ಬರೆದದ್ದನ್ನು ‘ಆಡು ಭಾಷೆ’ ಎಂದು ಹೇಳುವುದಕ್ಕೆ ಬರುವುದಿಲ್ಲ.

            ಉತ್ತರ
            • santosh anand
              ಏಪ್ರಿಲ್ 12 2013

              Those are quotations not medium of expression. Its simple

              ಉತ್ತರ
              • ಏಪ್ರಿಲ್ 12 2013

                ಖಂಡಿತಾ. ಆದರೆ ಅರ್ಧ ವಚನದ ತುಂಬಾ ಬರಿಯ ಸಂಸ್ಕೃತ quotationsಗಳಿದ್ದರೆ ಆ ವಚನವನ್ನು ಆಡು ಭಾಷೆಯಲ್ಲಿ ಬರೆಯಲಾಗಿದೆ ಎಂದು ಹೇಳ ಬಹುದೇ! (ಅಂತಹ ಹಲವು ವಚನಗಳನ್ನು ನಾವು ನೋಡಬಹುದು). ಇರಲಿ, ಅದು ನನ್ನ ಅಥವಾ ಇಲ್ಲಿನ ಚರ್ಚೆಯ ವಿಷಯವಲ್ಲ. ಆದರೆ ಒಂದು ವಿಚಾರ ಅರ್ಥವಾಗಿಲ್ಲ. ಶಂಕರ ಶೂದ್ರ ಪದವನ್ನು ಬಳಸಿದ ಎಂದು ನೀವು ತೋರಿಸುವ ಶ್ಲೋಕದಲ್ಲಿ ಶೂದ್ರ ಪದ ಬರುವುದು ಒಂದು quotationನಲ್ಲಿ ಎಂದು ನಾನು ತೋರಿಸಿದಾಗ ನೀವು ಒಪ್ಪಿರಲಿಲ್ಲ ಎಂಬುದು ನೆನಪಿರಬಹುದು ನಿಮಗೆ.

                ಉತ್ತರ
        • sharu
          ಫೆಬ್ರ 6 2014

          ನಿಜವೆಂದರೆ, ಸಂಸ್ಕೃತ ಎಂದೂ ಆಡು ಭಾಷೆಯಾಗಿರಲಿಲ್ಲ (Sheldon Pollockರ ಕಡೆಯ ಕೃತಿ ಇದಕ್ಕೆ ಸಾಕಷ್ಟು ಪುರಾವೆಗಳನ್ನು ಕೊಡುತ್ತದೆ.) ಒಂದು ಭಾಷೆ ಆಡು ಭಾಷೆ ಅಲ್ಲದಿದ್ದರೆ ಅದು ಹುಟ್ಟಿಕೊಳ್ಳುತ್ತದೆ ಹೇಗೆ? ಜನರು ಮಾತೇ ಆಡದಿದ್ದರೆ ಅದನ್ನು ಕೇಳುವದು ಅರ್ಥ ಮಾಡಿಕೊಳ್ಳುವದು ಹೇಗೆ? ವಿದ್ವತ್ ವಲಯದ ಜನರಾದರೂ ಅದನ್ನು ಹೇಗೆ ಅರ್ಥೈಸಿಕೊಂಡರು? ಮಾತೆ ಇಲ್ಲದ ಭಾಷೆಯಲ್ಲಿ ವ್ಯಾಕರಣ ಮುಂತಾದವು ಹುಟ್ಟುತ್ತವಾದರೂ ಹೇಗೆ? ಮೊದಲು ಮಾತು. ಅನಂತರ ನಮ್ಮ ಅನಿಸಿಕೆಗಳ ಅಭಿವ್ಯಕ್ತಿ, ಅನಂತರವ್ಯಾಕರಣ, ಇದು ಭಾಷೆಗೆ ಸಂಬಂಧಿಸಿದ ವಿಚಾರವಲ್ಲವೆ? ಮಾತೆ ಆಡದ ಒಂದು ಭಾಷೆಯನ್ನು ನಮ್ಮ ಅಭಿವ್ಯಕ್ತಿಗಾಗಿ ಬಳಸಿಕೊಳ್ಳುತ್ತಿದ್ದೆವೆಂದರೆ ಯಾಕೋ ನನಗಿದು ಒಪ್ಪುವ ವಿಚಾರವೆಂದು ಅನಿಸುವದಿಲ್ಲ. ಬಹುಶಃ ಇಂಗ್ಲೀಷಿನಂತೆ ಆಗ ಸಂಸ್ಕೃತ ಸರ್ವ ವ್ಯಾಪಿ ಭಾಷೆ ಆಗಿರಬೇಕು. ಇಂಗ್ಲೀಷಿನಲ್ಲಿ ಹೇಳುವದು ಇವತ್ತು ಅನಿವಾರ್ಯ ಮತ್ತು ಬಸವಯ್ಯ ಹೇಳುವಂತೆ ವಿದ್ವತ್ ಪ್ರದರ್ಶನದ ಭಾಷೆಯೂ ಆಗಿರಬಹುದು. ಇಡೀ ವಿಶ್ವದಲ್ಲಿ ಇವತ್ತು ಅನೇಕರ ಮಾತೃ ಭಾಷೆ ಇಂಗ್ಲೀಷ ಅಲ್ಲವೇ ಅಲ್ಲ ಆದರೂ ಅವರು ಇಂಗ್ಲೀಷಿನಲ್ಲಿ ಬರೆಯುವ ಅನಿವಾರ್ಯತೆಯಲ್ಲಿದ್ದಾರೆ. ಹೀಗೆ ಸಂಸ್ಕೃತಕ್ಕೂ ಅಂಥ ಅನಿವಾರ್ಯತೆ ಇದ್ದಿರಬೇಕು. ಇವತ್ತು ಇಂಗ್ಲೀಷ್ ಆಡು ಮಾತು ಆಗಿರಲಿಲ್ಲ ಎಂದು ನೀವು ಹೇಳಬಹುದೆ? ಆದರೆ ಕೆಲವರ ಆಡು ಮಾತು ಖಂಡಿತ ಇಂಗ್ಲೀಷ ಅಲ್ಲವೇ ಅಲ್ಲ. ಎಷ್ತೋ ಸಹಸ್ರ ಮಾನ ವರ್ಷಗಳ ನಂತರ ಇಂಗ್ಲೀಶು ಇಂಗ್ಲೆಂಡದಲ್ಲಿ ಮರೆಯಬಹುದು ಆಗ ಅವರು ಬೇರೆ ಭಾಷೆ ಮಾತನಾಡತೊಡಗಿದರೆ ಇಂಗ್ಲೀಷ್ ಆಡು ಮಾತು ಆಗಿರಲೇ ಇಲ್ಲ ಎನ್ನಲಾದೀತೆ? ಕಾಲನ ಗರ್ಭದಲ್ಲಿ ಏನಾಗಿದೆಯೋ ಏನಾಗುತ್ತದೆಯೋ ಯಾರಿಗೂ ಗೊತ್ತಿಲ್ಲ. ನಿಮ್ಮಂಥ ಕೆಲವರು ಸಂಶೋಧನೆ ಮಾಡಿ ಹೇಳಿದರೂ ಕೂಡ ಇತಿಹಾಸ ದ್ರೌಪದಿ ಇದ್ದಂತೆ. ಅವಳನ್ನು ನಗ್ನಗೊಳಿಸಲಾಗದು. ಅಲ್ಲವೆ??

          ಉತ್ತರ
    • santosh ananad
      ಏಪ್ರಿಲ್ 8 2013

      Mr. Basavaiah I would like to remind u that Mr. Dunkin has written his thesis in English. you first get clarification from him. 2. I don’t know kannada typing. that’s why I converse in English. That’s all.

      ಉತ್ತರ
      • ಬಸವಯ್ಯ
        ಏಪ್ರಿಲ್ 8 2013

        ಡಂಕಿನ್ ಅವರು ಥಿಸಿಸ್ ಇಂಗ್ಲೀಶಿನಲ್ಲಿ ಬರೆದಿರಬಹುದು ಆದರೆ ಇಲ್ಲಿ ಲೇಖನ, ಪೂರ್ಣ ಲೇಖನ, ಚರ್ಚೆ ಕನ್ನಡದಲ್ಲಿಯೇ ಇವೆ. ನಿಲುಮೆ ಕನ್ನಡ ಬ್ಲಾಗ್. ತಮಗೆ ಕನ್ನಡ ಓದಲು/ಬರೆಯಲು ಕೂಡ ಬರುತ್ತೆ (ಯಾಕೆಂದರೆ ನನ್ನ ಕಮೆಂಟ್ ಓದಿ ಅರ್ಥಮಾಡಿಕೊಂಡಿದ್ದೀರಿ). ನಿಮಗೆ ಕನ್ನಡ ಟೈಪ್ ಮಾಡಲು ಬರುವುದಿಲ್ಲವೆಂದರೆ ಗೂಗಲ್ ಟ್ರಾನ್ಸ್ಲಿಟರೇಟ್ ಬಳಸಿ .http://www.google.com/intl/kn/inputtools/cloud/try/. ವಚನಕಾರರಿಗೆ ಸಂತೋಷವಾಗುತ್ತದೆ..ಓದುಗರಾದ ನಮಗೂ ಕೂಡ! 🙂

        ಉತ್ತರ
        • prabhuling
          ಏಪ್ರಿಲ್ 9 2013

          salute to your love for kannada but it is difficult to write in kannada by using translator i try to have kannada software please show kindness to us.truth does not depend upon language it is just medium.

          ಉತ್ತರ
      • ಏಪ್ರಿಲ್ 8 2013

        ಸಂತೋಷ್,
        “ನಿಲುಮೆ” ಕನ್ನಡದ ಬ್ಲಾಗ್. ಡಂಕಿನ್ ಅವರ ಮೂಲ ಲೇಖನವನ್ನು ಅವರು ಇಲ್ಲಿ ಕನ್ನಡದಲ್ಲೇ ಬರೆದುಕೊಟ್ಟಿದ್ದಾರೆ. ಕನ್ನಡದಲ್ಲೇ ಬರೆದರೆ ಇಂಗ್ಲೀಷ್ ಓದಿಸಿಕೊಳ್ಳಲಾಗದವರಿಗೂ ಅನುಕೂಲ

        ಉತ್ತರ
    • santosh ananad
      ಏಪ್ರಿಲ್ 8 2013

      Mr. Basavaiah corruption is as old as civilization. Chanakya talks about corruption. Corruption is always there in the society. Only in degree it differs.

      ಉತ್ತರ
      • ಬಸವಯ್ಯ
        ಏಪ್ರಿಲ್ 8 2013

        ಹೊಲಸು ಎಂಬ ಶಬ್ದ ಅನ್ಯಾಯದ ಹಣ/ಸಂಪಾದನೆ ಎಂಬರ್ಥದಲ್ಲಿ ವಚನಗಳಲ್ಲಿ ಮತ್ತೆಲ್ಲಿ ಬಳಕೆಯಾಗಿದೆ ಎಂದು ಉಲ್ಲೇಖಿಸುವಿರಾ?. ಚಾಣಕ್ಯನ ಕಾಲದಲ್ಲಿ ಆತನಿಗೆ ಹೊಲಸು ಎಂದರೆ ಏನು ಎಂದು ಕೇಳಿದ್ದರೆ ರಾಜನ ಬೊಕ್ಕಸಕ್ಕೆ ತೆರಿಗೆ ತಪ್ಪಿಸುವುದು ಎನ್ನುತ್ತಿದ್ದನೇನೊ!.

        ಉತ್ತರ
        • ಬಸವಯ್ಯ
          ಏಪ್ರಿಲ್ 10 2013

          ನಮ್ಮ ಸಂತೋಷ ಅವರು ಹಿಟ್ ವಿಕೆಟ್ ಆದರೊ, ರಿಟೈರ್ಡ ಹರ್ಟೊ? ಅಥವಾ ‘ಪ್ರಜ್ಞಾವಂತ’ ರಲ್ಲದವರ ಜೊತೆ ವಾದ ಮಾಡಿ ಪ್ರಯೋಜನವಿಲ್ಲ ಎಂದುಕೊಂಡರೊ? 🙂

          ಉತ್ತರ
          • santosh anand
            ಏಪ್ರಿಲ್ 12 2013

            Mr.Basavaiah pl have some common sense that the person may be out of station.I came today I will quote those vachanas. Don’t get retired hurt. I cant stick on to facebook all the time to like u. My hit wicket or retired hurt will come only after yours.You are claiming yourself as PRAJNAVANTA means nobody is there to call you so. very bad.

            ಉತ್ತರ
            • ಬಸವಯ್ಯ
              ಏಪ್ರಿಲ್ 13 2013

              ನಾನು ಮೇಲೆ ಬರೆದಿದ್ದೇ ಎಣೆಸಿ ಎರಡು ವಾಕ್ಯ. ಅದರಲ್ಲಿ ಒಂದನ್ನು ಪೂರ್ತಿ ಉಲ್ಟಾ ಅರ್ಥ ಮಾಡಿಕೊಂಡಿದ್ದೀರಿ. ಮತ್ತೊಂದರಲ್ಲಿ ನಾನು ಎಲ್ಲ ಸಮಯ ಫೇಸ್ಬುಕ್ ಕೆ ಅಂಟಿಕೊಂಡಿರ್ತಿನಿ ಎಂದು ಅಪಾದಿಸಿದ್ದಿರಿ. ವಿಷಯ ಹೀಗೀರುವಾಗ ನೀವು ವಚನಗಳನ್ನು ಓದಿ, ನಂತರ ನಮಗೆ ಅರ್ಥ ಮಾಡಿಸುವುದು..ಹ್ಮ ಬೇಡ ಬಿಡಿ ಸಾರ್..ಕಷ್ಟ ತೆಗೆದುಕೊಳ್ಳಬೇಡಿ..ನಾವೇ ಓದಿ ಅರ್ಥ ಮಾಡ್ಕೊತಿವಿ! 🙂

              ಉತ್ತರ
              • santosh anand
                ಏಪ್ರಿಲ್ 15 2013

                nimage artha agalla bidi…. nimage agodu ella bari apaartha

                ಉತ್ತರ
                • ಬಸವಯ್ಯ
                  ಏಪ್ರಿಲ್ 16 2013

                  ಒಹೊ..ಸಾಹೇಬ್ರು ಕನ್ನಡಿ ಮುಂದೆ ನಿಂತು ಮಾತನಾಡ್ತಾ ಇರೊ ಹಾಗಿದೆ! 🙂

                  ಉತ್ತರ
    • prabhuling
      ಏಪ್ರಿಲ್ 9 2013

      you are right basavayya holasu means here meat only because basavanna is vegetarinian he did not like nonvegearian it can be prove by his own vachan 1) ganda siva baktha hendati mari masaniya bakthe 2) harikege tanda kuri taliru meyitu

      ಉತ್ತರ
  21. Shanmukha
    ಏಪ್ರಿಲ್ 8 2013

    ಪ್ರಜಾವಾಣಿಯ ಇಂದಿನ ಲೇಖನದಲ್ಲಿ ಕಂಬಾರರು ಯಾವುದೇ ನಿಂದನೆಗಳಿಲ್ಲದೆ ತಮ್ಮ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಮಾತ್ರ ವಿವರಿಸಿದ್ದಾರೆ. ಅವರಿಗೆ ಅಭಿನಂದನೆಗಳು. ಇದು ಅವರೊಂದಿಗಿನ ಚರ್ಚೆಯ ಸಾಧ್ಯತೆಯನ್ನು ತೆರೆದಿಟ್ಟಿದೆ. ಅವರ ಲೇಖನದ ಕುರಿತ ನನ್ನ ಅಭಿಪ್ರಾಯಗಳು ಹೀಗಿವೆ:

    1. ಮೊದಲನೆಯದಾಗಿ, ವೈಜ್ಞಾನಿಕ ಚರ್ಚೆಗೆ ಅಪಾಯಕಾರಿಯಾದ insider/outsider ಚರ್ಚೆಯನ್ನು ಮುಂದೊತ್ತಿದ್ದಾರೆ. ಅದರ ಭಾಗವಾಗಿ, ನಾನು ಅತ್ತ ಲಿಂಗಾಯತನೂ ಅಲ್ಲ ಇತ್ತ ಬ್ರಾಹ್ಮಣನೂ ಅಲ್ಲ ಎನ್ನುತ್ತಾರೆ, ನೊಂದ ನೋವನ್ನು ನೋಯದವರೆತ್ತ ಬಲ್ಲರು ಎನ್ನವ ಅಕ್ಕನ ಸಾಲನ್ನು ಬಳಸಿಕೊಳ್ಳುತ್ತಾರೆ. ಅದಾದ ನಂತರ ತಮ್ಮನ್ನು ಈ ಚರ್ಚೆಯಲ್ಲಿ ಭಾಗೀದಾರರೆನಿಸಿಕೊಳ್ಳಲು (insider ಎಂದು ತೋರಿಸಲು) ತನ್ನ ಹಾಗೂ ಗುರಗಳ ಸಾನಿಧ್ಯದ ಸಂಬಂದದ ಮೂಲಕ ವಚನಗಳ ಬಗ್ಗೆ ಮಾತನಾಡುವ ತಮ್ಮ ಅಧಿಕಾರವನ್ನು ಪ್ರತಿಪಾದಿಸಿಕೊಳ್ಳುತ್ತಾರೆ. ಇದು post-modern ಸಾಹಿತ್ಯವಲಯದಲ್ಲಿ ಇತ್ತೀಚೆಗೆ ಬೆಳೆದು ಬರುತ್ತಿರುವ ವಿಜ್ಞಾನ ವಿರೋಧೀ ನಿಲುವು. ಒಂದು ಸಮಸ್ಯೆ/ವಿಚಾರದ ಭಾಗವಾಗಿರದೇ ಆ ವಿಚಾರ/ಸಮಸ್ಯೆ ಓರ್ವನಿಗೆ ಅರ್ಥವಾಗಲಾರದು;ಹಾಗಾಗಿ ಆ ಕುರಿತು ಮಾತನಾಡುವ ಅಧಿಕಾರ ಆತನಿಗಿರುವುದಿಲ್ಲ ಎನ್ನುವಂತಹ ವಾದ. ಇದೊಂದು ರೀತಿಯಲ್ಲಿ ರೋಗಿಯಾಗದೆ ವೈದ್ಯ /ವೈದ್ಯಕೀಯ ವಿಜ್ಞಾನಿ ಯಾಗಲು ಸಾಧ್ಯವಿಲ್ಲ ಎನ್ನುವಂತಹ ವಾದ.

    2. ರಾಜಾರಾಮ ಹೆಗಡೆಯವರು ‘ವಚನಗಳನ್ನು ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಇಟ್ಟು ನೋಡಬೇಕು ಎಂದರೆ ಅದು ಅವರಿಗೆ ‘ಸರಳ ವಿಂಗಡಣೆ’ ಮತ್ತು ‘ಆಧ್ಯಾತ್ಮ ಪರಂಪರೆಗಳ ಒಳ ಭಿನ್ನತೆಗಳ’ ಅರಿವಿರದಿರುವಿಕೆ ಎನಿಸುತ್ತದೆ. ಅದೇ ಅವರಿಗೆ ಇಡೀ ವಚನ ಪರಂಪರೆ ಜಾತಿ (& ಜಾತಿವ್ಯವಸ್ಥೆ) ವಿರೋದೀ ಎಂದಾಗ ಅದು ಸರಳ ವಿಂಗಡಣೆ ಎಂದು ಕಾಣುವುದಿಲ್ಲ. ಹಾಗೆಯೇ, ಕಶೇರುಕ, ಸಸ್ತನಿಗಳು ಎಂದು ವಿಜ್ಞಾನಿಗಳು ವರ್ಗೀಕರಿಸಿದ ತಕ್ಷಣ ಅವುಗಳ ಒಳಗಿರುವ ವರ್ಗೀಕರಣಗಳ ನಿರಾಕರಣೆ ಎಂದು ವಿಜ್ಞಾನ ಎಂದೂ ಭಾವಿಸುವುದಿಲ್ಲ ಎನ್ನುವುದನ್ನು ಇವರು ಪರಿಗಣಿಸುವುದಿಲ್ಲ. ಹೆಗಡೆಯವರು ಹೇಳುವುದೇನು? ಆಧ್ಯಾತ್ಮ ಪರಂಪರೆಯಲ್ಲಿ ಆತ್ಮ ಜ್ಞಾನ ಪ್ರಾಪ್ತಿಗೆ ಹೊರಟಾಗ ಓರ್ವನಿಗೆ ಜಾತಿ-ಕುಲಗಳ ಮೇಲು-ಕೀಳಿನ ಮೇಲರಿಮೆ-ಕೀಳರಿಮೆಗಳು, ಡಾಂಬಿಕ ಆಚರೆಣೆಗಳು, ಶಾಸ್ತ್ರಗಳ ಕರ್ಮಟತೆಗಳು (ಅದರಲ್ಲಿ ವೇದಗಳೂ ಸೇರಿವೆ ಎನ್ನವುದೂ ಮುಖ್ಯ, ಆಧ್ಯಾತ್ಮಿಕ ಪರಂಪರೆ ಅಂದಾಕ್ಷಣ ಅದನ್ನು ವೈದಿಕ ವೆಂದೇ ಏಕೆ ಇವರೆಲ್ಲರೂ ಭಾವಿಸುತ್ತಾರೆ. ಹೇಳಬೇಕೆಂದರೆ ಶಂಕರರೂ ಸೇರಿದಂತೆ ಆಧ್ಯಾತ್ಮಕ್ಕೆ ವೇದಗಳೂ ಒಂದು ಅಡ್ಡಿಯೇ ಎಂದು ಹೇಳಿದ್ದಾರೆ) ಅಡ್ಡಿಯುಂಟು ಮಾಡುತ್ತವೆ. ಅವುಗಳಿಂದ(ಮತ್ತೂ ಇನ್ನೂ ಹಲವುಗಳಿಂದ) ಬಿಡುಗಡೆ ಹೊಂದದೆ ಆಧ್ಯಾತ್ಮ ಸಾಧನೆ ಸಾಧ್ಯವಿಲ್ಲ ಎಂದು ಬಹುತೇಕ ಎಲ್ಲಾ ಆಧ್ಯಾತ್ಮಿಕ (ಅವುಗಳು ಒಳವಿಂಗಡಣೆಗಳು ಎಷ್ಟೇ ಇದ್ದರೂ) ಪರಂಪರೆಗಳೂ ಹೇಳುತ್ತವೆ ಎನ್ನುತ್ತಾರೆ. ಇದನ್ನು ಒಪ್ಪದಿದ್ದರೆ, ಕಂಬಾರರು ಮಾಡ ಬೇಕಿರುವುದೇನೆಂದರೆ ವಚನಕಾರರನ್ನು ಉಳಿದು ಇನ್ನುಳಿದ ಯಾವ ಆಧ್ಯಾತ್ಮಿಕ ಪರಂಪರೆಯೂ ಹೀಗೆ ಹೇಳುವುದಿಲ್ಲ ಎನ್ನವುದನ್ನು ತೋರಿಸಬೇಕು. ಆಗ ರಾಜಾರಾಮ ಹೆಗಡೆಯವರ ವಾದ ತಪ್ಪಾಗುತ್ತದೆ. ಅದಕ್ಕೆ ಬದಲಾಗಿ ವಚನಕಾರರು ಆಗಮಿಕರಲ್ಲ, ಸಮಣರಲ್ಲ ಎಂಬ ವಾದಗಳನ್ನಷ್ಟೇ ಇಡುತ್ತಾರೆ.

    3. ಇನ್ನೂ ವಚನಕಾರರ ವೈದಿಕೇತರ, ವರ್ಣಾಶ್ರಮೇತರ ನೀತಿ ವಸಾಹತು ಪದ್ಧತಿಯ ಹೊತ್ತಿನಲ್ಲಿ ವಿಕೃತವಾದ ಭಾರತೀಯ ಇತಿಹಾಸ ಕಲ್ಪನೆಯ ಭಾಗವೆನ್ನುವುದು ಬಾಲು ತಂಡದ ವಾದವಲ್ಲ. ಈ ತಂಡದ ವಾದ ಸುಸ್ಪಷ್ಟ: ವಚನಗಳು ಜಾತಿ (& ಜಾತಿವ್ಯಸ್ಥೆ) ವಿನಾಶ ಚಳುವಳಿ ಅಲ್ಲ, ಅದೊಂದು ಆಧ್ಯಾತ್ಮಿಕ ಪರಂಪರಯ ಜ್ಞಾನ ಮಾರ್ಗ ಎನ್ನವುದು. ಅದು ವೈಧಿಕ ವಿರೋಧಿಯಾಗಿರಲಿಲ್ಲ;ವರ್ಣಾಶ್ರಮ ನೀತಿಯ ವಿರೋಧಿಯಾಗಿರಲಿಲ್ಲ ಎನ್ನುವ ವಾದ ಈ ತಂಡದ್ದು ಎಂದು ಅವರು ಎಲ್ಲಿಂದ ಹುಡುಕಿಕೊಂಡರೋ ಗೊತ್ತಿಲ್ಲ. (ವರ್ಣ ಮತ್ತು ಜಾತಿ ನಡುವಣ ವ್ಯತ್ಯಾಸವನ್ನು ಈಗಾಗಲೇ ಸಮಾಜಶಾಸ್ತ್ರಜ್ಞರು ವಿವರಿಸಿ ಎರಡೂ ಒಂದೇ ಎಂಬಂತೆ ಮಾತನಾಡುವುದು ಸರಿಯಲ್ಲವೆಂದು ತೋರಿಸಿದ್ದಾರೆ)

    4. ವಚನಕಾರರು ಆಧ್ಯಾತ್ಮ ಪರಂಪರೆಯಲ್ಲಿನ ಮಾರ್ಗದವರು ಎಂದು ಹೇಳಿದರೆ ಲಿಂಗಾಯತ ಗುರುಗಳು, ಮಠಗಳು ಮತ್ತು ಸಮುದಾಯದವರು ಕೆಳಜಾತಿಯವರಿಗೆ ಸಹಾಯ ಮಾಡುವುದಿಲ್ಲ ಎನ್ನುವ ಅರ್ಥ ಹೊರುಡುತ್ತದೆಯೇ? ಕಂಬಾರರು ಏಕೆ ತಮಗೆ ವೀರಶೈವ ಮಠದ ಗುರುಗಳು ಸಹಾಯ ಮಾಡಿದ್ದು ಬಾಲು ತಂಡದ ವಾದಕ್ಕೆ ಟೀಕೆ/ಪ್ರತಿವಾದ ಎನ್ನವುಂತೆ ಬಳಸುತ್ತಾರೆ ನನಗೆ ಅರ್ಥವಾಗಲಿಲ್ಲ. ವೀರಶೈವ ಗುರುಗಳು ಮತ್ತು ಮಠಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಈ ರೀತಿಯ ಕಲ್ಯಾಣ ಕಾರ್ಯಗಳಲ್ಲಿ ತೊಡಗಿರುವುದರಲ್ಲಿ ನಮಗೆ ಖಂಡಿತ ಗೌರವವಿದೆ. ಆದರೆ ವಚನಗಳಲ್ಲಿ ಆಧ್ಯಾತ್ಮ ಸಾಧನೆ ಮಾರ್ಗಗಳಿವೆ ಎಂದರೆ ಈ ಮಹಾಕಾರ್ಯದ ನಿರಾಕರಣೆ ಹೇಗೆ ಆಗುತ್ತದೆ ಎನ್ನುವದಷ್ಟೇ ಗೊತ್ತಾಗುತ್ತಿಲ್ಲ.

    -ಷಣ್ಮುಖ

    ಉತ್ತರ
  22. santosh ananad
    ಏಪ್ರಿಲ್ 8 2013

    Mr.Shanmukha 1. Regarding your first argument, the major defect is your failure to understand that dry logic cannot comprehend the sensibility and inner urge of the writer. First thing you have to understand is literature and philosophy are beyond logic. Logic cant explain the meaning of feelings and urges. What Kambar has used is unique sensibility of feeling. Literature empathizes to human feelings and inner urges.That is why we call it ‘literature’ not as law or science. If you use logic to scan the literature means it is like measuring the fragrance in Celsius. Logic works out well in the court of law not in the literature. A person need not be a patient to be a doctor. (of course all doctors were/are/will be patients one or the other day) But he should understand and empathize the pain of the patient. That is what Dr. Kambar meant in his writing.

    2.In your second argument you feel that all philosophical systems didn’t encourage caste. If somebody says that vachanakars were against caste system, it does not mean that other systems encouraged caste system. Why do feel like that? You apply you logic here.

    3.In your third argument u argue that Vachana Movement was only a philosophical movement. But you & your team have failed recognize the unique synthesis of spirituality with social welfare done by vachanakaras.

    4. In your fourth argument again u didn’t understand the context like u did in the first argument.Through the service motive of Lingayat mutts Dr. Kambar wants to indicate that the heritage of casteless service of vachanakaras has been carried out by Mutts even today. It means what sharanas did in 12th century i.e. equality of all irrespective of their caste gender profession etc. is still alive in Mutts.

    ಉತ್ತರ
  23. Santhosh Kumar PK
    ಏಪ್ರಿಲ್ 8 2013

    ಸಂತೋಷ್ ಆನಂದ್

    ೧. ಸಾಹಿತ್ಯವು ತರ್ಕದ ಹೊರಗೆ ನಿಲ್ಲುತ್ತದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಸಾಹಿತ್ಯ ಭಾವನಾ ಪ್ರಧಾನವಾದುದು ಹಾಗಾಗಿ ಅದು ತರ್ಕಕ್ಕೆ ನಿಲುಕುವುದಿಲ್ಲ ಎಂಬುದು ನಿಮ್ಮ ವಾದ, ಅಷ್ಟೇ ಅಲ್ಲ ಇಡೀ ಸಾಹಿತ್ಯ ವಲಯದ ವಾದವೂ ಕೂಡ ಅದೇ ಆಗಿದೆ. ಆದರೆ ಮನೋವಿಜ್ಷಾನ ಎಂಬ ಜ್ಷಾನಶಾಖೆಯ ಅಸ್ತಿತ್ವದ ಕುರಿತು ನಿಮಗೆ ತಿಳಿದಿರಬಹುದು, ಅದೂ ಸಹ ಕನಸು, ಭಾವನೆ, ಮನಸ್ಸಿನ ದುಗುಡ, ಮುಂತಾದ ಸಂಗತಿಗಳನ್ನು ವೈಜ್ಷಾನಿಕ ಪರಿಭಾಷೆಯಲ್ಲಿಯೇ ತರ್ಕವನ್ನು ಬಳಸಿಕೊಂಡೇ ವಿವರಿಸುತ್ತದೆ. ಆದ್ದರಿಂದ ಭಾವನೆಗಳ ಕುರಿತು ತಾರ್ಕಿಕವಾಗಿ ಮಾತನಾಡಲು ಸಾಧ್ಯವೇ ಇಲ್ಲ ಎನ್ನುವುದು ಅಸಮಂಜಸ. ಇನ್ನು ತತ್ವಶಾಸ್ತ್ರವೂ ಸಹ ತರ್ಕದ ಹೊರಗಿನದು ಎಂಬುದರಲ್ಲಿ ಯಾವುದೇ ಹುರುಳಿಲ್ಲ. ಫಿಲಾಸಪಿ ಆಫ್ ಸೈನ್ಸ್ ನ ಯಾವುದೇ ಪುಸ್ತಕವನ್ನು ತೆಗೆದುಕೊಳ್ಳಿ, ಅವೆಲ್ಲವೂ ಫಿಲಾಸಪಿಯ ಬಗ್ಗೆ ಮಾತನಾಡಿದರೂ ತರ್ಕವನ್ನು ಯಥಾಶಕ್ತಿಯಾಗಿ ಬಳಸಿಕೊಳ್ಳುತ್ತವೆ. ಹಾಗಾಗಿ ಸಾಹಿತ್ಯವು ತರ್ಕವನ್ನು ಬಳಸಿಕೊಂಡಿಲ್ಲ ಎಂದು ಹೇಳಬಹುದೇ ಹೊರತು, ಭಾವನೆಯನ್ನು ತಾರ್ಕಿಕವಾಗಿ ವಿವರಿಸಲು ಸಾಧ್ಯವೇ ಇಲ್ಲ ಎಂದು ಹೇಳಲಾಗದು. ಹಾಗಾಗಿ ಲಾಜಿಕ್ ಒಣ ಅಥವಾ ಶುಷ್ಕವಾದ ಸಂಗತಿ ಎಂದೆನಿಸಲು ಮೇಲಿನ ತಪ್ಪು ಗ್ರಹಿಕೆಯೇ ಕಾರಣ. ಹಾಗೂ ತರ್ಕವೂ ಬೇಡ, ಏನು ಬೇಡ, ನನಗನಿಸಿದ್ದನ್ನು ನಾನು ಹೇಳುತ್ತೇನೆ ಎಂದಾದರೆ ಅವರೊಂದಿಗೆ ಚರ್ಚೆಯೂ ಅಸಾಧ್ಯ ಹಾಗೂ ವಿದ್ಯಮಾನದ ಕುರಿತು ಜ್ಷಾನದ ಬೆಳವಣಿಗೆಯೂ ಅಸಾಧ್ಯ. ಮತ್ತೆ ಲಾಜಿಕ್ ಎಲ್ಲವನ್ನೂ ವಿವರಿಸುತ್ತದೆ ಎಂದು ಷಣ್ಮುಖ ರವರು ಹೇಳುತ್ತಿದ್ದಾರೆ ಎಂಬುದು ತಮ್ಮ ಭಾವನೆ ಇರಬೇಕು. ಆದರೆ ಲಾಜಿಕ್ ಎಲ್ಲವನ್ನು ವಿವರಿಸುವುದಿಲ್ಲ, ಅದು ಅದರಷ್ಟಕ್ಕೆ ಅದು ಏನನ್ನೂ ವಿವರಿಸುವುದಿಲ್ಲ. ಬದಲಿಗೆ ಏನನ್ನಾದರೂ ವಿವರಿಸಲು ಬೇಕಾದರೆ ಟೂಲ್ ಆಗಿ ಕೆಲಸ ಮಾಡುತ್ತದೆ ಅಷ್ಟೆ. ಆದ್ದರಿಂದ ಲಾಜಿಕ್ ಭಾವನೆಯನ್ನು ವಿವರಿಸುವುದಿಲ್ಲ ಎಂಬ ತಮ್ಮ ಹೇಳಿಕೆ ಲಾಜಿಕ್ಸ್ವ ಏನನ್ನೋ ವಿವರಿಸುತ್ತದೆ ಎಂದು ತಾವು ಕಲ್ಪಿಸಿಕೊಂಡಿರುವ ಹಾಗಿದೆ.

    ೨. ಆಧ್ಯಾತ್ಮದ ಪರಂಪರೆಯ ಭಾಗವಾಗಿ ವಚನಗಳನ್ನು ನೋಡಿದರೆ ಭವ ಬಂಧನದಿಂದ ಬಿಡುಗಡೆ ಹೊಂದಬೇಕು ಎಂದು ಹೇಳುತ್ತವೆ ಎಂದಿಟ್ಟುಕೊಳ್ಳಿ. ಇಲ್ಲಿ, ಆ ಬಂಧನ, ಜಾತಿ, ಆಚರಣೆ ಮತ್ತೆನೇನೋ ಆಗಿರಬಹುದು. ಭಕ್ತಿ ಚಳುವಳಿ, ಭೌದ್ಧ ತತ್ವಗಳು ಇವೆಲ್ಲವನ್ನೂ ಅಡ್ಡಿ ಎಂದು ಪರಿಗಣಿಸಿಲ್ಲ, ಕೇವಲ ವಚನಗಳು ಮಾತ್ರ ಐಹಿಕ ಲೋಕದ ಅಡ್ಡಿಗಳ ಬಗ್ಗೆ ಮಾತನಾಡುತ್ತಿವೆ ಎಂದು ತೋರಿಸಿದರೆ ವಚನಗಳು ಆಧ್ಯಾತ್ಮ ಪರಂಪರೆಗೆ ಸೇರಿಲ್ಲ ಇವು ಸಂಪೂರ್ಣವಾಗಿ ಜಾತಿವಿರುದ್ದ ನಡೆದ ಚಳುವಳಿ ಎಂದು ಹೇಳಬಹುದು. ಹಾಗೆ ತೋರಿಸಿದರೆ ಅದನ್ನು ಯಾರಾದರೂ ಒಪ್ಪಬಹುದು.

    ೩. ವಚನಗಳು ಸಮಾಜ ಸುಧಾರಣೆಯನ್ನು ಮಾಡಿವೆ ಎಂದು ಹೇಳುವುದಕ್ಕೂ ಸಮಾಜ ಸುಧಾರಣೆಗಾಗಿಯೇ ವಚನಗಳು ರಚಿತವಾದವು ಎಂದು ಹೇಳುವುದಕ್ಕೂ ವ್ಯತ್ಯಾಸವಿದೆ. ಆಧ್ಯಾತ್ಮದ ಜೊತೆ ಜೊತೆಗೆ ವಚನಗಳು ಸಮಾಜದ ಹುಳುಕುಗಳನ್ನು ಸುಧಾರಿಸಿರುವ ಪ್ರಯತ್ನವನ್ನೂ ಮಾಡಿರಬಹುದು, ಆದರೆ ಆ ಪ್ರಯತ್ನವೂ ಕೂಡ ಆಧ್ಯಾತ್ಮ ಮಾರ್ಗಕ್ಕೆ ಅಡ್ಡಿಯಾಗಿರುವ ಸಂಗತಿಗಳನ್ನು ತೊಡೆದು ಹಾಕುವ ಕುರಿತು ಆಗಿದ್ದವು. ಆದ್ದರಿಂದಲೇ ಆಧ್ಯಾತ್ಮ ಪರಂಪರೆ ಅದರ ಗುರಿಯಾಗಿತ್ತು ಎಂಬುದರಲ್ಲಿ ತಪ್ಪೇನಿದೆ.

    ೪. ನಿಮ್ಮ ನಾಲ್ಕನೆ ಅಂಶವೇನು ಎಂಬುದು ಸ್ಪಷ್ಟವಾಗಲಿಲ್ಲ. ಏಕೆಂದರೆ ಷಣ್ಮುಖ ರವರು ಹೇಳುತ್ತಿರುವುದಕ್ಕೂ ಅವರಿಗೆ ಅರ್ಥವಾಗಿಲ್ಲ ಎಂದು ನೀವು ಹೇಳುತ್ತಿರುವುದಕ್ಕೂ ಎಲ್ಲಿಯ ಸಂಬಂಧ ಗೊತ್ತಾಗುತ್ತಿಲ್ಲ, ಅದನ್ನು ಸಾಧ್ಯವಾದರೆ ಸ್ಪಷ್ಟಪಡಿಸಿ.

    ಲಾಜಿಕ್ ಕುರಿತು
    “In your second argument you feel that all philosophical systems didn’t encourage caste. If somebody says that vachanakars were against caste system, it does not mean that other systems encouraged caste system.” ಇದು ಲಾಜಿಕ್ ಅಲ್ಲವೆ? ಅದನ್ನೆ ಬಳಸಿಕೊಂಡು ನೀವೇಕೆ ವಾದ ಮಾಡುತ್ತೀರಿ ಹಾಗಾದರೆ?

    ಉತ್ತರ
  24. Shanmukha
    ಏಪ್ರಿಲ್ 9 2013

    ಸಂತೋಷ್ ಆನಂದ್ ರವರೇ,
    ಸಾಹಿತಿ/ಸಾಹಿತ್ಯ ವಿಮರ್ಶಕರ ಈ ರೀತಿಯ ದ್ವಂದ್ವನಿಲುವುಗಳು ನಮಗೆ ಅಪರಿಚಿತವೇನಲ್ಲ. ಹೇಳಬೇಕೆಂದರೆ, ಒಂದು ಕಾಲದಲ್ಲಿ ನಾನೂ ಸಹ ‘ಸಾಹಿತ್ಯಿಕ ಪಠ್ಯಗಳನ್ನು ಶುಷ್ಕ ತರ್ಕಗಳಲ್ಲಿ ವಿವರಿಸಲಾಗದು’ ಎನ್ನುವಂತಹ ನಿಲುವಿಗೆ ಅಂಟಿಕೊಂಡಿದ್ದವನೇ. ಆದರೆ ಅದು ಸಾಹಿತ್ಯಿಕ ವಿಚಾರಗಳಿಗೆ ಮಾತ್ರ ಅನ್ಯಯವೇ ಹೊರತು ಸಮಾಜಶಾಸ್ತ್ರೀಯ ಪ್ರತಿಪಾದನೆಗಳಿಗಲ್ಲ. ಕಂಬಾರರು ವಚನಗಳನ್ನು ಬಳಸಿ (ಹೇಳಬೇಕೆಂದರೆ ವಚನಗಳಿಗಿಂತ ಹೆಚ್ಚಾಗಿ ವಿಭಿನ್ನ ಮಾರ್ಗಿಗಳನ್ನು ಮತ್ತು ತಮ್ಮ ಗುರುಗಳ ಸಾಂಗತ್ಯವನ್ನು ಮತ್ತು ಸಹಾಯವನ್ನು ಉಲ್ಲೇಖಿಸಿ) ಸಮಾಜಾಶಾಸ್ತ್ರೀಯ ಪ್ರತಿಪಾದನೆ ಮಾಡಿದಾಗ ಈ ತಾರ್ಕಿಕ ಸಮಸ್ಯೆಗಳಿಗೆ ಉತ್ತರಿಸಲೇ ಬೇಕಾಗುತ್ತದೆ. ಕಂಬಾರರು, ವಚನಗಳಲ್ಲಿನ ಅಲಂಕಾರ, ವ್ಯಾಕರಣ, ಛಂದಸ್ಸು, ಭಾಷಾ ಪ್ರಯೋಗ, ಭಾವ ತೀವ್ರತೆಗಳ ಬಗ್ಗೆ ಚರ್ಚಿಸಿದ್ದರೆ ನಮಗೆ ಈ ವಿಚಾರಗಳ ಬಗ್ಗೆ ಪ್ರೌಶಶಿಕ್ಷಣದ ಮಟ್ಟಕ್ಕಿಂತ ಹೆಚ್ಚಿನ ಜ್ಞಾನವಿಲ್ಲವೆಂದು ಸುಮ್ಮನಿರಬಹುದಿತ್ತು. ಆದರೆ, ಅವರು ಮಾತನಾಡುತ್ತಿದ್ದು ಒಂದು ನಿರ್ಧಿಷ್ಟ ರೀತಿಯ ಸಾಮಾಜಿಕ ರಚನೆಯ ಅಸ್ತಿತ್ವ ಮತ್ತು ಅದರ ವಿರುದ್ದದ ಹೋರಾಟವೇ ವಚನಗಳೆಂಬ ಸಮಾಜಶಾಸ್ರೀಯ ಪ್ರತಿಪಾದನೆಯ ಭಾಗವಾಗಿ. ಹಾಗಾಗಿ ಸಾಮಾಜಿಕ ಸಂಶೋದನೆಯಲ್ಲಿ ತೊಡಿಗಿರುವ ನನ್ನ ತಕರಾರು ಇದಕ್ಕೆ ಮಾತ್ರ ಸಂಬಂದಿಸಿದ್ದು.

    ಡಾ. ಷಣ್ಮುಖ

    ಉತ್ತರ
    • Nagshetty Shetkar
      ಜೂನ್ 22 2014

      ಷಣ್ಮುಖ ಅವರೇ, ನೀವೂ ನಿಮ್ಮ ಸಿ ಎಸ್ ಎಲ್ ಸಿ ಅವರದ್ದು ಮಾತ್ರ ಸಂಶೋಧನೆ ಮಿಕ್ಕವರೆಲ್ಲರದ್ದು ಬೊಗಳೆ ಎಂಬ ಭಂಡ ಧೋರಣೆ ಏಕೆ? ಸಾಮಾಜಿಕ ಸತ್ಯಗಳ ಅನ್ವೇಷಣೆ ಸಾಹಿತ್ಯದ ಅಧ್ಯಯನದ ಮೂಲದ ಸಾಧ್ಯವಿಲ್ಲ ಎಂದು ಏಕೆ ಹಠ ಮಾಡುತ್ತೀರಿ? ಸಾಮಾಜಿಕ ಸತ್ಯಗಳನ್ನು ಅನಾವರಣಗೊಳಿಸುವ ಸಾಹಿತಿಗಳು ನಿಮಗಿಂತ ದೊಡ್ಡ ಸಂಶೋಧಕರೇ ಆಗಿದ್ದಾರೆ. ಉದಾಹರಣೆಗೆ ದರ್ಗಾ ಸರ್ ಅವರು ವಚನಗಳ ಬಗ್ಗೆ ಮಹೋನ್ನತ ಸಂಶೋಧನೆಯನ್ನು ಮಾಡಿದ್ದಾರೆ. ಬ್ರಾಹ್ಮಣರು ಭೂಸುರರೇ ಆಗಿದ್ದರು ಎಂಬ ಸಾಮಾಜಿಕ ಸತ್ಯವನ್ನು ವಚನಗಳ ಅಧ್ಯಯನದ ಮೂಲಕ ಸಾಬೀತು ಪಡಿಸಿದ್ದಾರೆ. ಸತ್ಯ ಕಹಿಯಾದುದರಿಂದ ನೀವುಗಳು ಈ ರೀತಿ ಸಾಹಿತಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದೀರಿ.

      ಉತ್ತರ
      • Naani
        ಜೂನ್ 23 2014

        “ಬ್ರಾಹ್ಮಣರು ಬೂಸರರೆಂಬ ಭಜನೆ ಮಾಡಲು ಹೋಗಿ ಆಮೇಲೆ ಸಮರ್ಥಸಿಕೊಳ್ಳಲು ಒದ್ದಾಡಿ ಧಮ್ಮಯ್ಯ ಬಿಟ್ಟುಬಿಡಿ ಅಂತ ಗೋಳಾಡಿ ಬಿಡಸ್ಕೊಂಡು ನಿಮ್ಮ ದರ್ಗಾ ನೆಮ್ಮದಿಯಿಂದ ನಿಟ್ಟುಸಿರು ಬಿಡ್ತಿರುವಾಗ ಈಗ ಪುನಃ ಅವರನ್ನು ತಂದು ಇಲ್ಲಿ ತಗಲಾಕಿ ಅವರ ಮರ್ಯಾಧಿ ಕಳೆಯುವ ಹಠ ಯಾಕೆ ಶೆಟ್ಕರ್. ನನಗೇನೋ ಅವರ ಶಿಷ್ಯನ ಮುಖವಾಡದಲ್ಲಿರುವ ದರ್ಗಾರ ಮೊದಲ ಶತ್ರು ನೀವೇ ಇರಬೇಕು ಅನ್ನೋ ಗುಮಾನಿ. ದರ್ಗಾರ ಗೋಳಾಟವನ್ನು ಇಲ್ಲಿ ನೋಡಿ: http://goo.gl/M3m1KW. ಸ್ವಲ್ಪ ಅವರ ಬಗ್ಗೆ ಕನಿಕರವನ್ನಾದರೂ ತೋರಿ ಪ್ಲೀಸ್. :

        ಉತ್ತರ
        • Naani
          ಜೂನ್ 23 2014

          ಕೊನೆಗೆ ಬ್ರಾಹ್ಮಣರು=ಭೂಸುರರು ಎನ್ನುವುದನ್ನು ಕ್ರಿಶ್ಚಿಯನ್ ಬಾಷಲ್ ಮಿಷನರಿಯ ಪಾದ್ರಿಯಾಗಿದ್ದ ಕಿಟ್ಟೆಲ್ ನ ನಿಘಂಟಿನಿಂದ ತೆಗೋಂಡಿರುವುದನ್ನು ಅವಧಿಯಲ್ಲಿ ಅವರೇ ಒಪ್ಪಿಕೊಂಡಿದ್ದಾರೆ. “ವಚನಗಳ ಸಂಶೋಧನೆಯಿಂದ ಭ್ರಾಹ್ಮಣರು ಭೂಸುರರಾಗಿದ್ದರು ಎಂಬ ಸಾಮಾಜಿಕ ಸತ್ಯವನ್ನು ದರ್ಗಾ ಸಾಬೀತು ಮಾಡಿದ್ದಾರೆ” ಎನ್ನುವ ಹಸಿ ಸುಳ್ಳನ್ನು ಏಕೆ ಇಲ್ಲಿ ಬಡಬಡಿಸುತ್ತೀರಿ. ದರ್ಗಾ ಬ್ರಾಹ್ಮಣರು ಭೂಸುರರು ಎನ್ನುವುದನ್ನು ವಚನಗಳಿಂದ ಶೋಧಿಸಿ ತೆಗೆದಿದ್ದಲ್ಲ; ಕಿಟ್ಟೆಲ್ ಎನ್ನುವ ಕ್ರಿಶ್ಚಿಯನ್ ಪಾದ್ರಿ ಹೇಳಿದ್ದನ್ನೆ ಸತ್ಯ ಎಂದು ಕಾಪಿ ಹೊಡೆದಿದ್ದು. ಸಂಶೋಧನೆ ಎಂದ್ರೆ ಇದಾ ಶೆಟ್ಕರ್, ಹೋಗಿ ನೀವು ನಿಮ್ಮ ಗುರು ಇಬ್ರೂ ಸಂಶೋಧನೆ ಮಾಡೋದು ಹೇಗೆ ಅಂತ ಕಲೀರಿ. ಇಲ್ಲ ವ್ಯಾಕರಣ ಛಂದಸ್ಸು, ಭಾವತೀವ್ರತೆಗಳ ಪ್ರಾಥಮಿಕ ಶಾಲೆಯಲ್ಲಿ ಉರುಹೊಡೆಸೋ ಕೆಲಸಮಾಡ್ಕೊಂಡಿರಿ. ಕಾಪಿ ಹೊಡೆದಿದ್ದನ್ನೇ “ಸಂಶೋಧನೆಯಲ್ಲಿ ಸಾಭೀತು ಮಾಡಿಬಿಟ್ಟಿದ್ದಾರೆ” ಎನ್ನುವ ಹಾಸ್ಯಾಸ್ಪದ ಹೇಳಿಕೆ ನೀಡಿ ದರ್ಗಾರ ಮಾನ ಕಳೀಬೇಡಿ.

          ಉತ್ತರ
          • Nagshetty Shetkar
            ಜೂನ್ 23 2014

            ಕಿಟ್ಟೆಲ್ ಒಬ್ಬ ಮಹಾನ್ ವ್ಯಕ್ತಿ, ಅಪ್ರತಿಮ ವಿದ್ವಾಂಸ, ಶ್ರೇಷ್ಠ ಮಾನವತಾವಾದಿ. ಅವರನ್ನು “ಕ್ರಿಶ್ಚಿಯನ್ ಪಾದ್ರಿ” ಎಂದು ಪದೇ ಪದೇ ಕರೆಯುವ ಮೂಲಕ ನಿಮ್ಮ ಮತೀಯತೆಯ ನಗ್ನ ದರ್ಶನ ಮಾಡಿದ್ದೀರಿ.

            ಉತ್ತರ
            • Naani
              ಜೂನ್ 24 2014

              ಸಾಹೇಬ್ರೇ, ಪ್ರಶ್ನೆ ಕಿಟ್ಟೆಲ್ ಪಾದ್ರಿಯೇ, ಮಾನವತಾವಾದಿಯೇ ಎನ್ನುವುದಲ್ಲಾ, ನಿಮ್ಮ ಗುರು “ಬ್ರಾಹ್ಮಣರು=ಭೂಸುರರು” ಅನ್ನೋದನ್ನು ವಚನಗಳ ಸಂಶೋಧನೆಯಿಂದ ಸಾಭಿತು ಸಾಭೀತು ಮಾಡಿದ್ದಾರೆಯೇ ಇಲ್ಲ ಈ ಕ್ರಿಶ್ಚಿಯನ್ ಪಾದ್ರಿಗಳಿಂದ ಕಾಪಿ ಮಾಡಿದ್ದಾರೆಯೇ ಎನ್ನುವುದು?

              ಪ್ರವಾದಿಗಳು ಮಹಾತ್ಮರು ಅವರು ಹೇಳುವುದೆಲ್ಲಾ ಸತ್ಯ ಅಂತ ರಿಲಿಜನ್ನಿನ ಹಿಂಬಾಲಕುರು ನಂಬಿರೋಹಾಗೆ ಪಾದ್ರಿಗಳು ಮಾನವತಾವಾದಿಗಳು ಹಾಗಾಗಿ ಅವರು ಹೇಳುವುದೆಲ್ಲಾ ಸತ್ಯ, ಅವರು ಹೇಳಿದ್ದರಿಂದ ನಾನೂ ಅದನ್ನೇ ಒಪ್ಪಿ ಹೇಳುತ್ತಿದ್ದೇನೆ ಎಂದು ನಿಮ್ಮ ಗುರು ಒಪ್ಪಿಕೊಳ್ಳಲಿ. ಸುಮ್ಮನೆ ವಚನಗಳ ಸಂಶೋಧನೆ ಮಾಡಿ ಸಾಭೀತು ಮಾಡಿರುವರೆಂಬ ಪೋಸು ಏಕೆ? ಹಸಿ ಸುಳ್ಳು ಎದ್ದು ಕಾಣುತ್ತಿರುವಾಗ.

              ಹ್ಹ ಹ್ಹ ಹ್ಹ !!! ಕಿಟ್ಟೆಲ್ ಮಹಾನ್ ಮಾನವತಾವಾದಿ ಹಾಗಾಗಿ ಅವರು ಹೇಳಿದ್ದೇ ಸತ್ಯ, ವೈಜ್ಞಾನಿಕ ಅಂತ ನಿಮ್ಮ ದರ್ಗಾಗೆ ಒಪ್ಪಿಕೊಳ್ಳಲಿಕ್ಕೆ ಹೇಳಿ. ನೋಡಿ ಆಮೇಲೆ ಮಜಾ!!

              ಉತ್ತರ
        • Nagshetty Shetkar
          ಜೂನ್ 23 2014

          ನಾವು ಪ್ರಗತಿಪರರು ಮುಖವಾಡ ಧರಿಸುವ ಆಷಾಢಭೂತಿಗಳಲ್ಲ. ನಮ್ಮದೇನಿದ್ದರೂ ನೇರ ನಿಷ್ಟುರ ವರ್ತನೆ. ದರ್ಗಾ ಸರ್ ಅವರ ಸೆಕ್ಯೂಲರ್ ಬದ್ಧತೆ ಬಗ್ಗೆ ನಮಗೆ ಅಚಲ ನಿಷ್ಠೆ ಇದೆ.

          ಉತ್ತರ
          • Naani
            ಜೂನ್ 24 2014

            ನೇಮ ನೇೇರ ನಿಷ್ಟುರ (ಎಡಬಿಡಂಗಿ) ವರ್ತನೆಗಳು ದರ್ಗಾರನ್ನು ಪೇಚಿಗೆ ಸಿಲುಕಿಸಿ ಸಿಕ್ಯುಲರ್ ವ್ಯಾದಿಗೆ ನೂಕುತ್ತಿರುವುದಂತೂ ಸ್ಪಷ್ಟ!!! 🙂

            ಅನಾರಾಗ್ಯದಿಂದ ಈಗಾಗಲೇ ಬಳಲಿ ಬೆಂಡಾಗಿದ್ದ ಅನಂತಮೂರ್ತಿಯನ್ನು ಈ ಕಲ್ಬುರ್ಗಿ ಸಿಕ್ಕಿಹಾಕಿಸಿ ಪೇಚಿಗೆ ಸಿಲುಕಿಸಿದ ಹಾಗೆ ಅವಧಿಯಲ್ಲೇ ಬಳಲಿಬೆಂಡಾಗಿ ಹೋಗಿದ್ದ ದರ್ಗಾರನ್ನು ಇಲ್ಲಿಗೆ ಎಳೆತಂದು ಮರ್ಯಾಧೆ ಕಳಯೋವರೆಗೂ ನೀವು ಬಿಡಂಗಿಲ್ಲ ಅನ್ಸುತ್ತೆ. ಮುಂದುವರಿಸಿ ನಿಮ್ಮ ಪ್ರಯತ್ನನಾ…. ಬರಲಿ ದರ್ಗಾ ಇಲ್ಲಿಗೆ…. 🙂

            ಉತ್ತರ
  25. ಏಪ್ರಿಲ್ 10 2013

    ಇಲ್ಲಿ ಬಸವಣ್ಣನವರ ವಚನಗಳನ್ನು ಓದಬಹುದು – ಹೇಳಿಕೊಟ್ಟ ಮಾತು ಕಟ್ಟಿಕೊಟ್ಟಬುತ್ತಿಗಿಂತ ನಾವೇ ಓದಿಕೊಂಡರೆ ಸರಿಯಾದ ನಿಲುವಿಗೂ ಬರುವುದಕ್ಕೂ ಸರಿಯಾಗುತ್ತೆ: http://www.vicharamantapa.net/content/node/11

    ಉತ್ತರ
    • ಏಪ್ರಿಲ್ 13 2013

      ‘ನಾವೇ ಓದುವುದು’ ಅಂತ ಒಂದು ಇರುವುದಿಲ್ಲ. ಅಂಥದ್ದೊಂದು ಇದ್ದರೂ ಅದು ಎಲ್ಲಕಿಂತ ಸರಿಯಾದದ್ದು ಎನ್ನುವುದಕ್ಕೆ ಬರುವುದಿಲ್ಲ. ಒಂದು ಪಠ್ಯವನ್ನು ಓದುವುದು ನಾವು ಯಾರಿಂದಲೋ ಅಥವಾ ಎಲ್ಲಿಂದಲೂ ಕಲಿತಿರಲೇ ಬೇಕು. ಏಕೆಂದರೆ ಈ ‘ಸಾಮಾನ್ಯ ಜ್ಞಾನ’ ಎನ್ನುವುದರ ಹಿಂದೆಯೂ ಹಲವು ಸಿದ್ಧಾಂತಗಳು ಬಚ್ಚಿಟ್ಟುಕೊಂದಿರುತ್ತವೆ. ಇಲ್ಲ ಅದು ನಾವು ಓದಿದ textbookನಿಂದಲೋ ಅಥವಾ ಅದನ್ನು ಓದಿ ಪಾಠ ಮಾಡಿದ ಯಾವುದೋ ವ್ಯಕ್ತಿಯಿಂದಲೋ ಬಂದಿರುತ್ತದೆ. ಹಾಗೆ ಕಲಿತದ್ದನ್ನು ನಾವು ಸ್ವಪ್ರಯತ್ನದಿಂದ ತಿದ್ದಿಕೊಳ್ಳ ಬಹುದು. ನಿಜ. ಅದೇ ಅಲ್ಲವೇ ತಪಸ್ಸು ಎಂದರೆ. ಆದರೆ ತಪಸ್ಸು ಮಾಡುವ ಶಕ್ತಿ ಇದೆಯಾ ನಮಗಿಂದು ಎನ್ನುವ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಾಗುತ್ತದೆ.

      ಉತ್ತರ
  26. ಏಪ್ರಿಲ್ 10 2013

    ವಚನಗಳ ಕುರಿತ ಬಾಲು ಮತ್ತು ಡಂಕಿನ್ ಅವರ ಲೇಖನಕ್ಕೆ ಪ್ರತಿಕ್ರಿಯೆಗಳನ್ನು ನೀಡುತ್ತಿರುವವರಲ್ಲಿ ಹೆಚ್ಚಿನವರು ಸಾಹಿತ್ಯದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು (ಪ್ರೊಫೆಸರ್ ಗಳು). ಆದರೆ, ಸಮಾಜಶಾಸ್ತ್ರಗಳ ಹಿನ್ನೆಲೆ ಇರುವವರು (ಸಮಾಜಶಾಸ್ತ್ರಜ್ಞರು) ಇಲ್ಲಿಯವರೆಗೆ ಸರಿಯಾದ ರೀತಿಯ ಯಾವುದೇ ಪ್ರತಿಕ್ರಿಯೆಗಳನ್ನು ನೀಡದಿರುವುದನ್ನು ಗಮನಿಸಿದರೆ ಆಶ್ಚರ್ಯವಾಗುತ್ತದೆ. ಏಕೆಂದರೆ, ಈ ಲೇಖನವು ಸಮಾಜಶಾಸ್ತ್ರಗಳಲ್ಲಿ ಸೈದ್ಧಾಂತಿಕ ಹಿನ್ನೆಲೆಯನ್ನು ಇಟ್ಟುಕೊಂಡು ಪುರಾವೆಗಳ ಮೂಲಕ ತರ್ಕಬದ್ಧವಾಗಿರುವ ಊಹಾ-ಸಿದ್ಧಾಂತವನ್ನು ಒಳಗೊಂಡಿದೆ. ಇವರ ಈ ಲೇಖನದಲ್ಲಿ ಮಂಡಿತವಾಗಿರುವ ವಿಷಯವು ಊಹಾ-ಸಿದ್ಧಾಂತವೇ ಅಥವಾ ಐಡಿಯಾಲಜಿಯೇ ಎಂಬುದರ ಬಗ್ಗೆ (ಪ್ರಜಾವಾಣಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡಿದವರಲ್ಲಿ) ಸರಿಯಾದ ಸ್ಪಷ್ಟತೆ ಇಲ್ಲದಿರುವುದು ಇವರಿಗೆ ಪ್ರತಿಕ್ರಿಯೆಗಳನ್ನು ನೋಡಿದರೆ ತಿಳಿಯುತ್ತದೆ. ಬಾಲು ಮತ್ತು ಡಂಕಿನ್ ಅವರು ನೀಡುರಿವುದು ಊಹಾ-ಸಿದ್ಧಾಂತವೇ ಹೊರತು ಐಡಿಯಾಲಜಿ ಅಲ್ಲ. ಸಮಾಜಶಾಸ್ತ್ರಗಳಲ್ಲಿ ಈ ಊಹಾ-ಸಿದ್ಧಾಂತವನ್ನು ಡಿಫೀಟ್ ಮಾಡುವ ಸಾಧ್ಯಗಳು ಇರುತ್ತವೆ. ಇಂತಹ ಸಾಧ್ಯತೆಯನ್ನು ಸರಿಯಾಗಿ ಗ್ರಹಿಸದ (ಪ್ರಜಾವಾಣಿಯಲ್ಲಿ) ಪ್ರತಿಕ್ರಿಯೆಗಳನ್ನು ನೀಡಿದವರು ಬಾಲು ಮತ್ತು ಡಂಕಿನ್ ಅವರು ಮಂಡಿಸಿದ ಊಹಾ-ಸಿದ್ಧಾಂತವನ್ನು ಐಡಿಯಾಲಜಿ ಎಂದು ಭಾವಿಸಿದಂತಿದೆ.

    ಉತ್ತರ
  27. santosh anand
    ಏಪ್ರಿಲ್ 12 2013

    Santoshkumar p k

    1 you said in your first argument that feelings can be measured by logic. I don’t agree with it.Of course logic is a tool but not to analyse feelings its formative process. No science or scientist is able to predict human behavior even now in this advanced age. By simply one cant jump to conclusion.

    2. In your second opinion you failed to visualize that a movement can be both spiritual and social. That was Vachana Movement.

    3.I have use logic to counter your opinion. But I didn’t use it to prove that vachanas were against caste system. I am using logic to those who are unsuccessfully using logic to explain social issues in vachanas.

    4. In the fourth argument Shanmukha said the service done by Lingayat mutts irrespective of caste doesn’t prove that vachanakaras were against caste system. What I said was Lingayat mutts have been carrying forward the heritage of vachanakaras.

    ಉತ್ತರ
    • ಏಪ್ರಿಲ್ 12 2013

      <>
      If you say lingaayit mutts have been carried heritage of vachanakaaras, then it means, u also infer that present caste system prevailed in lingaayits also inherited from vachanakaras only,,ofcourse it’s your own logic 😀

      ಉತ್ತರ
      • santosh anand
        ಏಪ್ರಿಲ್ 15 2013

        Defects of your religion are also carried by your own ancestors and heritage only. ha ha ha

        ಉತ್ತರ
        • ಏಪ್ರಿಲ್ 16 2013

          Address the subject matter of discussion dude. To remind u, your red-herring attempt never helps u to support your argument. 🙂

          ಉತ್ತರ
  28. Shanmukha
    ಏಪ್ರಿಲ್ 13 2013

    Mr. Santosh Anand, Could you see the contradiction in your point 3. and 4? If you don’t. It seem you wanted to do ‘vitanda vaada’. And could you pls. answer Mr. Balachadra bhat’s comment that ‘How could lingayat community inherited jaatis among them?
    I know, you would say that lingayat movement degenerated after some time….. priesthood also developed among them… so, now the heritage is only with some mathas and swamijis and rest of the communities again fall under the clutches of (Vaidic/Brahminical) Caste System….. so the castes are there among lingayats too. ha… ha… this is funny story about all the Adhyatmic movements in India which prevails in standard texts…

    ಉತ್ತರ
    • santosh anand
      ಏಪ್ರಿಲ್ 15 2013

      Mr. Shanmukha you and your co. are doing vitandavada by writing stories as thesis. For your kind information there is no caste system in lingayat Mutts. Instead of involving in serious discussion u r doing vitandavada. Such conspiracies have a long history. This Thesis story is a new addition to that. ha ha ha

      ಉತ್ತರ
  29. ಏಪ್ರಿಲ್ 14 2013

    Mr. Santhosh Anand

    1.Then What the hell psychologist are doing? Why sigmund freud became pioneer? this is not conclusion, if you don’t agree, that is fine, that is left to you, but you have to explain that why human behaviors can not be predictable? If predictability is impossible then psychology is not science at all.

    2. So, then please explain me how vachanas are concerned more about social issues rather than anything else? Logic is not an issue for discussion here, because on the one hand you oppose the logic to explain something, on the other hand you use the logic to explain something.. therefore whether you use it or oppose it, that does not matter for this discussion..

    ಉತ್ತರ
    • santosh anand
      ಏಪ್ರಿಲ್ 15 2013

      Mr. shetty

      1. Regarding your first point pl consult a good psychologist because what all I know from psychology is that much. I don’t the intricacies of the human psychology.

      2. For your second point majority of the vachanas talk about caste system unlike percentage calculation of your friend Dunkin.What I can say is read vachahas. that’s all.

      3. I oppose logic in interpreting literature, philosophy and other humanities. But when some people use logic and purport to prove something I have to use logic to show the hollowness in using logic. Because logic fails itself in the field of literature and humanities.

      ಉತ್ತರ
      • ಏಪ್ರಿಲ್ 16 2013

        u have forgotten philosophy, itself is based on subjective and objective analysis. Philosophy is not like hypothesis made by dumb, illiterate, prejudiced PrajaavaNi writers. First get the a,b,c,d of analysis, arguments, then come for the debate.

        ಉತ್ತರ
      • Kavitha
        ಏಪ್ರಿಲ್ 16 2013

        ಸಂತೋಷ ಆನಂದ,

        ಇಲ್ಲಿಯವರೆಗೂ ತಾವು ನಡೆಸುತ್ತಿರುವ ಚರ್ಚೆಯನ್ನು ಗಮನಿಸುತ್ತಾ ಬಂದಿದ್ದೇನೆ, ತಾವು ಎಲ್ಲಿಯೂ ಕೂಡ ’ಒಂದು ವಚನ’ವನ್ನು (ಏಪ್ರಿಲ್ ೭ ರಂದು ತಾವು ಬರೆದ ಪ್ರತ್ಯುತ್ತರದಲ್ಲಿ ಎರಡು ವಚನಗಳ ಎರಡೇ ವಾಖ್ಯಗಳನ್ನು ಉಲ್ಲೇಖಿಸಿದ್ದನ್ನು ಬಿಟ್ಟರೆ ಎಲ್ಲಿಯೂ ಸಹ ವಚನಗಳ ಸುಳಿವಿಲ್ಲ) ಆಯ್ದುಕೊಂಡು ಅದನ್ನು ವಿಶ್ಲೇಷಿಸಿ ನಿಮ್ಮ ವಾದವನ್ನು ಮಂಡಿಸುತ್ತಿಲ್ಲ/ಬಲಪಡಿಸುತ್ತಿಲ್ಲ. ಬದಲಿಗೆ ಒಂದು ವಿಷಯವನ್ನು ಚರ್ಚಿಸುತ್ತಿರುವಾಗ ಮತ್ತೊಂದು ವಿಷಯವನ್ನು (ಅನವಶ್ಯಕವಾಗಿ)ಎಳೆದು ತರುತ್ತೀರಿ, ಈ ರೀತಿ ಬೇರೆ ಬೇರೆ ವಿಷಯಗಳ ಬೆನ್ನತ್ತಿ ವಿಷಯಾಂತರಿಸಿ ಚರ್ಚೆಯನ್ನು ಮಾಡುತ್ತಿದ್ದೀರಿ. ಇಂಥ ಚರ್ಚೆಯಿಂದ ಏನು ಲಾಭ? ಇಲ್ಲವೇ, ನಿಮ್ಮ ಪ್ರಕಾರ ವಚನಗಳು ಜಾತಿ ವ್ಯವಸ್ಥೆಯ ನಾಶದ ಕುರಿತೇ ಮಾತನಾಡುತ್ತಿವೆ ಎನ್ನುವುದಾದರೆ ವಚನಗಳನ್ನು ಓದಿ ಉದಾಹರಣೆ ಸಮೇತ ವಿಶ್ಲೇಷಿಸಿಕೊಂಡು ವಾದಕ್ಕೆ ಇಳಿಯಿರಿ.
        ಈ ಚರ್ಚೆಯಲ್ಲಿ ಯಾರೂ ಕೂಡ ಅವರವರ ವಾದವೇ ಸರಿ ಎನ್ನುವುದಕ್ಕೆ ಜೋತು ಬಿದ್ದಿಲ್ಲ. ಬದಲಿಗೆ ಹೊಸದಾಗಿ/ಪರ್ಯಾಯವಾಗಿ ಆಲೋಚಿಸುವ ಕುರಿತು ಕಸರತ್ತು ಮಾಡುತ್ತಿದ್ದಾರೆ. ನೀವು ಈ ಕಸರತ್ತಿಗೆ ಕೈ ಹಾಕಬೇಕೆ ಹೊರತು ಫಲರಹಿತ ಚರ್ಚೆಗಲ್ಲ.

        ಉತ್ತರ
  30. ಏಪ್ರಿಲ್ 16 2013

    MR. Santhosh Anand

    Ok, now the floor is yours, prove your argument that “most of the vachanas talk about ‘caste system’. in order to accept your arguments you have to provide substantiated examples rather than giving advice to read the same vachanas which i have been reading so far…So, try to establish your argument..

    You may oppose every thing, so what can i do, interpretations are not like that, because interpretations must consist consistency, coherence and intelligibility..these conditions can not be fulfilled without logic I guess. If you want to interpret by neglecting or opposing above mentioned conditions then we can not discuss properly.

    ಉತ್ತರ
  31. Dr. Praveen T, L
    ಏಪ್ರಿಲ್ 16 2013

    S Anand,
    I can not understand your point at all. I would like to summarize your argument here:
    1. logic fails to understand the literature, philosophy and Humanities.
    2. No one is able to predict human behavior even now in this advanced age. By simply one cant jump to conclusion.
    Implication of your point: Neither logic nor psychology help to understand vachanas and vachanakaras.
    Then the following question arises: how could you (ur co.) come(jump) to the conclusion that “Vachanas are anti-caste system”? Is there any other ‘useful’ method?

    Dr. Praveen

    ಉತ್ತರ
    • ಏಪ್ರಿಲ್ 16 2013

      @Praveen: He and PrajaavaaNi writers never suggest any method to understand vachanas neither they know it. They are clear(!!) in their stance:
      1. Hypothesis is the best method to understand the humanity, literature and philosophy. [As Hypothesis cant be made on basis of logic and reasoning. So their hypothesis itself is irrational.]
      2. And u shouldn’t question their irrational hypothesis, unless otherwise u r anti-Dalit, and casteist.

      ಉತ್ತರ
  32. Gurubasavarya
    ಜೂನ್ 7 2013

    if somebody wants to conclude that vachnas were not against castism just based on percentage of vachanas written condemning brahmins/casts, then one should not forget that shivasharanas aim was not just to oppose cast-based society, but to give an answer to it through a new vision/mission so that people does not be confuse to what to follow. If they had spent their whole life writing against castism, then they were not being remembered now, but used to be just like these days’ anticast slogans which come and go…sharana’s looked society in a newer dimension, they didn’t blended spirituality, society, human relations, so as to keep them intact to go hand in hand. in order to do all these things to form a new society, they need not sped too much of time in condemning castism, but they were to discover nuances to give the human society a new way of life free of biases that were prevailing….

    ಉತ್ತರ
  33. vijay
    ಜೂನ್ 21 2014

    veershaivas holy book is “SIDHANTH SHIKHAMANI”. That is in sanskrit language in original. I think veershaivays should not fight against sanskrit language. lord basaveshwar is only follower of veershaiva. Shri Aadi Renukacharya was founder of veershaiva.

    ಉತ್ತರ
  34. Gurubasavarya
    ಜೂನ್ 24 2014

    Mr. Balagangadhara’s percentage article about Vachanas and Sharanas’ movement seems too narrow for anybody to think and explore the essence and theme and aim of Vachanas…For Shivasharanas, unlike modern thinkers and socialists, there was no single aim to just oppose castism/Brahmin-superior theory, their aim was to give the society a new way, dimension, hope in order to get rid of brutality of priest-cult Brahminism…had they just been kept on opposing Vaidik, cast-biasing societal order, then there would have been no difference between Shivasharanas and modern-day buddhijeevis…Per Mr. Balu, in Vachanas there is not even 1%-2% of vachans that have anything to say against Vaidiks…so he concludes vachanas are not against cast-based vaidik dharma…this logic shows how people are trying to mislead the masses and try to camouflage all the discrimination meted out by purohitashahi Brahmins and to make all the efforts of social reformers to be seen in vaidik angle….Had Mr. Balu’s intention was to bring forward the concept and essentials of Vachana’s, he would not have been came to such silly conclusion, but his intention is to make people get confused and misguide and divert them from being inclined to Shivasharans and make Brahminic castism at best…..This shows his indepth knowledge about the Kalyana Kranthi…..Shivasharana’s aim was to search, explore, and give alternative to the turmoil being faced by the people in society. Had they been kept on just criticizing Vedas, they would have not been having support of people from all walks of life and neither their movement would have been succeeded. But along with criticizing vedas, they became guiding lights for people who were kept in dark for 1000s of years by Purohit Brahmins including other upper cast people (these were also misguided and controlled by Brahmin purohits) in the name of religion, shastras, and smruthis…..They provided an unbiased opportunity to all people, without discrimination, to participate in all form of religious activities without needing to identify their cast and whatever may be their work and also to mingle with each other socially too so that a healthy society be established which was not and is not liked by castist Brahmins till date…Of course, the movement was joined by Brahmins and other upper cast people leaving away their pride of being in upper cast and decided to throw away their earlier identity (along with whom some conspirers too joined to misguide later on) and they identified with sharanas later without any hesitation…All such rationale behind the movement are never purposefully to be noted by people like Mr. Balu to whom, like rss/vhp, defending hindism as it is is very important to maintain castist hierarchy is very essential to maintain the lives of Purohits and to have slaves to feed them

    ಉತ್ತರ
    • Naani
      ಜೂನ್ 24 2014

      ಕನ್ನಡದಲ್ಲಿ ಬರೀರಿ ಸ್ವಾಮಿ ಪಾಮರರಿಗೂ ನಿಮ್ಮ ವಿದ್ವತ್ತು ತಿಳಿಯಲಿ…

      [Had they been kept on just criticizing Vedas, they would have not been having support of people from all walks of life and neither their movement would have been succeeded. ]

      ಇದು ಸಾಮಾಜಿಕ ಚಳುವಳಿನೇ ಆಗಿದ್ದು ಅದು ಯಶಸ್ವಿಯೂ ಆಗಿದ್ದರೆ ಲಿಂಗಾಯಿತರಲ್ಲಿ ಜಾತಿಗಳ ಯಾಕಪ್ಪ ಹೋಗ್ಲಿಲ್ಲ?? ಮೊದಲು ಇರ್ಲಿಲ್ಲ ನಂತ್ರ ಬ್ರಾಹ್ಮಣ್ರ ಕಿತಾಪತಿಯಿಂದ ಅವರಲ್ಲಿ ಜಾತಿ ಹುಟ್ಕೋಂಬಿಡ್ತು ಅನ್ನೋ ಕಿತ್ತೋಗಿರೋ ವಾದ ಮಾಡೋದಾದ್ರೆ ನಂದೊಂದು ಪ್ರಶ್ನೆ: ಈ ಚಳುವಳಿಯಾದ ಎಷ್ಟ ವರ್ಷ (ಶತಮಾನಗಳ) ವರೆಗೆ ಇವರುಗಳಲ್ಲಿ ಜಾತಿನೇ ಇರಲಿಲ್ಲ? ಇನ್ನೊಂದು ಉಪಪ್ರಶ್ನೆ: ಎಷ್ಟು ವರ್ಷದ ನಂತರ ಅಂದರೆ ಯಾವ ಕಾಲದಲ್ಲಿ ಲಿಂಗಾಯಿತರಲ್ಲಿ ಜಾತಿಗಳು ಹುಡ್ಕೊಂತು??? ಇನ್ನೊಂದು ಉಪಉಪಪ್ರಶ್ನೆ: ಲಿಂಗಾಯಿತರಲ್ಲಿ ಇಂತಿಂತ ಗುಂಪು ಇಂತಿಂತ ಜಾತಿ ಅಂತ ಹೆಸರಿಟ್ಟಿದ್ದು ಬ್ರಾಹ್ಮಣ್ರಾ ಇಲ್ಲಾ ಅವರವರೇ ಇಟ್ಕಂಬುಟ್ರಾ??? ಇನ್ನೂ ಹಲವು ಉಪ ಪ್ರಶ್ನೆಗಳಿವೆ ಸದ್ಯಕ್ಕೆ ಇಷ್ಟಕ್ಕೆ ಉತ್ರ ಕೊಡೋ ಕೃಪೆ ಮಾಡಿ. ನಂತರ ಉಳಿದ್ದಕ್ಕೆ ಬರ್ತೀನಿ.

      ಉತ್ತರ

Leave a reply to Kavitha ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments