ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 22, 2014

125

ದೀಪಾವಳಿ ಅಭ್ಯಂಜನ!

‍ನಿಲುಮೆ ಮೂಲಕ

ತುರುವೇಕೆರೆ ಪ್ರಸಾದ್

Deepaಪ್ರತಿವರ್ಷ ದೀಪಾವಳಿ ಬರುತ್ತದೆ, ಹೋಗುತ್ತದೆ. ವರ್ಷದಿಂದ ವರ್ಷಕ್ಕೆ ದೀಪಾವಳಿ ಸಂಭ್ರಮದಲ್ಲಿ ನನ್ನ ಬೆಲೆ ಮಾತ್ರ ನಮ್ಮ ರೂಪಾಯಿ ತರ ಕೆಳಕ್ಕೆ ಕೆಳಕ್ಕೆ ಜಾರುತ್ತಲೇ ಹೋಗುತ್ತಾ ಪಾತಾಳ ಮುಟ್ಟುತ್ತಿದೆ. ಮದುವೆಯಾದ ಹೊಸದರಲ್ಲಿ ಢಂ..ಢಮಾರ್ ಅನ್ನುತ್ತಿದ್ದ ದೀಪಾವಳಿ ಈಗ ಟುಸ್ಸಾಗಿದೆ. ಆಗಿನ ಉಪಚಾರಕ್ಕೂ ಈಗಿನ ಸಂಭ್ರಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹೇಗೆ ಎಂದಿರಾ? ಕೇಳಿ ಹೇಳ್ತೀನಿ..!

ಮದುವೆಯಾದ ಹೊಸದರಲ್ಲಿ ದೀಪಾವಳಿಗೆಂದು ಮಾವನ ಮನೆಗೆ ಹೋದಾಗ ಅದೇನು ಉಪಚಾರ? ಅದೇನು ಗೌರವ..? ಬೆಳಿಗ್ಗೆ ಎದ್ದ ಕೂಡಲೇ ಹೆಂಡತಿ ಟವಲ್ ಹಿಡಿದು ನಗುನಗುತ್ತಾ ಹಿಂದೆಯೇ ಬರುತ್ತಿದ್ದಳು. ಮನೆಯ ಬಾಗಿಲುದ್ದಕ್ಕೂ ಅಕ್ಕ ಪಕ್ಕದಲ್ಲಿಟ್ಟಿರುತ್ತಿದ್ದ ಕೆರಕ( ಸಗಣಿ ಉಂಡೆ) ತುಳಿಯದಂತೆ ಎಚ್ಚರ ವಹಿಸುತ್ತಿದ್ದಳು. ಸಗಣಿಯನ್ನು ಮೈ ಕೈಗೆಲ್ಲಾ ಬಳಿದುಕೊಂಡು ತಟಪಟ ತಟ್ಟುತ್ತಾ ಕೆರಕನ ಸೃಷ್ಟಿಯಲ್ಲಿ ನಿರತರಾಗಿರುತ್ತಿದ್ದ ಚಿಲ್ಟಾರಿಗಳನ್ನು ಏಯ್! ಸ್ವಲ್ಪ ಇರ್ರೋ! ಇವರಿಗೆ ಸಿಡಿಯುತ್ತೆ ಎಂದು ನನ್ನನ್ನು ಸೆರಗಲ್ಲಿ ಮರೆಮಾಡಿಕೊಂಡು ಬಚ್ಚಲಿಗೆ ಕರೆದೊಯ್ಯುತ್ತಿದ್ದಳು. ಒಮ್ಮೆ ಬಾಗಿಲ ಪಕ್ಕ ಇಟ್ಟಿದ್ದ ಇಂತದ್ದೊಂದು ಸಗಣಿ ಉಂಡೆಯನ್ನು ತುಳಿದೇ ಬಿಟ್ಟಿದ್ದೆ. ಆಗಂತೂ ನನ್ನ ಹೆಂಡತಿ ಬಾಂಬ್ ತುಳಿದೆ ಎನ್ನುವಂತೆ ಮನೆಯವರ ಮೇಲೆಲ್ಲಾ ಎಗರಾಡಿ ನನ್ನ ಕಾಲಿಗೆ ಎರಡು ಮೂರು ಟ್ರಿಪ್ ಅಭಿಷೇಕ ಮಾಡಿಸಿ, ಅದಕ್ಕೆ ಘಂ ಎನ್ನುವ ಗಂದದೆಣ್ಣೆ ಪೂಸಿ ಪುಣ್ಯಾಹ ಮಾಡಿ ಸಗಣಿ ವಾಸನೆಯಿಂದ ಮುಕ್ತವಾಗಿಸಿದ್ದಳು.

ಈಗ ಮದುವೆಯಾಗಿ 20 ವರ್ಷಗಳ ನಂತರ ಸೀನೇ ಬೇರೆ! ದೀಪಾವಳಿ ಪ್ರಾರಂಭವಾಗುವುದೇ ನನ್ನ ಸುಗುಣೆ ಹೆಂಡತಿಯ ಸಗಣಿ ಸುಪ್ರಭಾತದಿಂದ! ಏನ್ರೀ! ಇನ್ನು ಮಲಗೇ ಇದೀರಿ? ಸಗಣಿ ಯಾವಾಗ್ರೀ ಹಾಕೋದು?’ ಎಂದು ಕೂಗಿದರೆ ಅಕ್ಕ ಪಕ್ಕದ ಮನೆಯವರು ಏನಂದ್ಕೊಬೇಕು ಹೇಳಿ? ಗಂಡ ಸಗಣಿ ಹಾಕುವ ದನ ಎಂಬ ಸತ್ಯ ಜಗಜ್ಜಾಹೀರಾದರೆ ನನ್ನ ಮರ್ಯಾದೆ ಗತಿ ಏನು ಎಂದು ಇವಳು ಸ್ವಲ್ಪವಾದರೂ ಯೋಚಿಸಿದ್ದಾಳಾ? ನಾನು ಮೇಲೆದ್ದು ಸಗಣಿ ಹಾಕುವ ದನ ಹುಡುಕಿ ಮನೆ ಮನೆ, ಹಟ್ಟಿ ಹಟ್ಟಿ ತಿರುಗಬೇಕಿತ್ತು. ಯಾರದ್ದೋ ಕೊಟ್ಟಿಗೆಯಲ್ಲಿ ಸಗಣಿಗಾಗಿ ಕಾದು ನಿಂತವರ ಹಿಂದೆ ನಿಂತು ದನ ಕೊಟ್ಟಿಗೆಯಲ್ಲಿ ಸಗಣಿ ಹಾಕುವ ತನಕ ಕಾದು ಆ ಸಗಣಿ ಭೂಸ್ಪರ್ಶ ಮಾಡುವ ಮುಂಚೆಯೇ ಡೈವ್ ಹೊಡೆದು ಅದನ್ನು ಅಂಗೈಯಲ್ಲಿ ಹಿಡಿಯಬೇಕಿತ್ತು.ಆಗ ನನಗೆ ಚಿಕ್ಕ ಹುಡುಗನಾಗಿದ್ದಾಗ ಉಡುಸಲಮ್ಮ ಉತ್ಸವದ ಮುಂದೆ ಸೋಮಂಗೆ ಬಾಳೆಹಣ್ಣಿನ ರಸಾಯನ ಮಣೆ ಹಾಕಿದಾಗ ಹುಡುಗರು ಅದಕ್ಕೆ ಮುಗಿ ಬೀಳುತ್ತಿದ್ದುದು ನೆನಪಾಗುತ್ತಿತ್ತು. ದೇವರೇ ಎಂತ ಕಾಲ ಬಂತಪ್ಪ ? ಎಂದು ಸಗಣಿಯನ್ನು ಎರಡೂ ಕೈಲಿ ಹಿಡಿದು ಬರುವಾಗ ದಾರಿಯುದ್ದಕ್ಕೂ ಆಂಟಿಯರು ಕಿಸಕ್ಕನೇ ನಗುತ್ತಿದ್ದರು. ಕೆಲವರಂತೂ ತಲೆಲಿರೋದನ್ನ ಕೈಗೆ ಯಾಕೆ ತಕ್ಕೊಂಡ್ರಿ?’ ಅಂತ ತಮಾಷೆ ಮಾಡಿದ್ದೂ ಇತ್ತು. ಇನ್ನು ಕೆಲವರು ಆಂಟಿಯರು ದಡಾರನೆ ಮನೆಯಿಂದಾಚೆ ಹೊಸಲು ದಾಟಿ ಓಡಿ ಬಂದು ಅಂಕಲ್! ಒಂದು ಗಜುಗ ಸಗಣಿ ಕೊಡ್ತೀರಾ? ನಮ್ಮೆಜಮಾನರು ಸಗಣಿ ಹುಡುಕಿಕೊಂಡು ಎಲ್ಲಿ ಹಾಳಾಗಿ ಹೋದ್ರೋ! ಇನ್ನೂ ಬಂದಿಲ್ಲ ಎಂದು ಸಗಣಿ ಹುಡುಕಲು ಹೋದ ಗಂಡಂದಿರಿಗೆ ಹಿಡಿಶಾಪ ಹಾಕುತ್ತಾ ನನ್ನ ಕೈಯ್ಯಿಂದ, ಮೊರದಿಂದ ಸಗಣಿ ಬಾಚಿಕೊಂಡು ಹೋಗುತ್ತಿದ್ದರು.

ಅವರ ಒನಪು, ಒಯ್ಯಾರದಿಂದ ಏನನ್ನು ಕೇಳಿದಿರೂ ಕೊಟ್ಟು ಬಿಡುತ್ತೇನೆ ಎಂಬ ಮನಸ್ಥಿತಿಯಲ್ಲಿ ಆಫ್ಟರ್ ಆಲ್ ಒಂದು ಗಜುಗ ಸಗಣಿ ಕೊಡಲ್ಲ ಎಂದು ಹೇಗೆ ಹೇಳುವುದು? ಸಗಣಿಗಾಗಿ ಅಂದದ ತರುಣಿಯರನ್ನು ನಿಷ್ಠೂರ ಮಾಡಿಕೊಳ್ಳುವುದಾ ? ಎಷ್ಟಾದರೂ ತಗೊಳ್ಳಲಿ ಎಂದು ಹೆಹೆಹೆ..ಎಂದುಕೊಂಡು ಸುಮ್ಮನಾಗಿ ಬಿಡುತ್ತಿದ್ದೆ. ಮನೆಗೆ ಬಂದ ಕೂಡಲೇ ಹೆಂಡ್ತಿ ಮಾತ್ರ ಏನ್ರೀ? ಈ ಗಜುಗದ ಗಾತ್ರದ ಸಗಣಿ ತರೋಕೆ ಒಂದು ಗಂಟೆ ಹೋಗಿದ್ರಾ? ಇಷ್ಟು ಹೊತ್ತು ಏನ್ರೀ ಮಾಡ್ತಿದ್ರಿ? ನೀವೇ ಸಗಣಿ ಹಾಕಿಸಿ ಎಲ್ರಿಗೂ ಹಂಚಿ ಬಂದಿರೋ ತರ ಇದೀರಿ..ಎಂದು ಮೂದಲಿಸಿಹೂ ! ಹೊತ್ತಾಯ್ತು, ಮಕ್ಕಳು ಸ್ನಾನ ಮಾಡಿ ಬರೋ ಹೊತ್ತಿಗೆ ಮೊದ್ಲು ಕೆರಕ ಹಾಕಿ ಎಂದು ಅಪ್ಪಣೆ ಕೊಟ್ಟು ಸಗಣಿ ಮುಂದೆ ನನ್ನ ಕೂರಿಸಿ ಜಾಗ ಕಾಲಿ ಮಾಡುತ್ತಿದ್ದಳು. ನಾನು ಆ ಸಗಣಿಯನ್ನು ಮೈ ಕೈಗೆಲ್ಲಾ ಬಳಿದುಕೊಂಡು ಸಗಣಿ ಉಂಡೆ ಮಾಡಿ ಅದಕ್ಕೆ ರಾಗಿ, ಜೊಳ, ಹುಚ್ಚಳ್ಳು ಹೂವು ಸಿಕ್ಕಿಸಿ ಎಲ್ಲಾ ಬಾಗಿಲಿಗೆ ಎರಡೆರಡು ಕೆರೆಕದ ಉಂಡೆ ಇಟ್ಟು ಬರುವ ಹೊತ್ತಿಗೆ ಸಾಕು ಸಾಕಾಗಿ ಹೋಗುತ್ತಿತ್ತು.ಕೆರಕ ಮಾಡಲು ಹೋಗಿ ನಾನು ಮಹಾನ್ ಪೆಕರನಾಗುತ್ತಿದ್ದೆ.

            ಈಗ ಎರಡು ವರ್ಷಗಳಿಂದ ಈ ಸಗಣಿಗಾಗಿ ಅಲೆಯುವುದು ತಪ್ಪಿದೆ. ನಾನು ಕಂಡ ಕಂಡ ಹೆಂಗಸರಿಗೆ ಸಗಣಿ ದಾನ ಮಾಡುತ್ತೇನೆಂಬ ಹೊಟ್ಟೆ ಉರಿಯಿಂದ ನನ್ನ ಹೆಂಡತಿ ಹಾಲಿಗೆ ವರ್ತನೆ ಮಾಡಿಕೊಂಡಂತೆ ಸಗಣಿಗೂ ವರ್ತನೆ ಮಾಡಿಕೊಂಡಿದ್ದಾಳೆ. ಪ್ರತಿ ದೀಪಾವಳಿಗೆ ಗೌಳಿಗ ಸೋಮ ಒಂದು ಕಾನ್‍ಸ್ಟಿಪೇಶನ್ ಎಮ್ಮೆ ತಂದು ಮನೆ ಮುಂದೆ ಎರಡು ಹಿಕ್ಕೆ ಸಗಣಿ ಹಾಕಿಸಿ ಹೋಗುತ್ತಾನೆ. ಹಾಗಾಗಿ ಸಗಣಿ ಹಿಡಿದು ಬೀದಿಯ ಆಂಟಿಯರಿಗೆಲ್ಲಾ ಹಂಚುವ ಥ್ರಿಲ್ ಇಲ್ಲದಾಗಿದೆ. ಇದಲ್ಲದೆ ಗೌರಮ್ಮಜ್ಜಿ ತರ್ಲೆಕ್ಯಾತನಹಳ್ಳಿಯಿಂದ ಬಂದಾಗ ಉಂಡ ಜಾಗದಲ್ಲಿ ಸಗಣಿ ಗೋಮೆ ಮಾಡದಿದ್ದರೆ ನಮ್ಮನ್ನು ತಗಣಿಗಿಂತ ಕಡೆಯಾಗಿ ನೋಡಿ ನಮ್ಮ ಜನ್ಮ ಜಾಲಾಡಿ ಬಿಡುತ್ತದೆ. ಹಾಗಾಗಿ ಅಜ್ಜಿ ವಕ್ಕರಿಸಿದ ಸಂದರ್ಭದಲ್ಲೂ ಸೋಮ ಎಮ್ಮೆ ಹಿಡಿದು ತಂದು ಸಗಣಿ ಹಾಕಿಸಿಹೋಗುತ್ತಾನೆ. ಇನ್ನೂ ಮುಂದೆ ಆ ಸಗಣಿಯೂ ಸಿಗದಾಗಿ ಅದನ್ನೂ ಯಾವುದಾದರೊಂದು ಕಂಪನಿ ಪೇಟೆಂಟ್ ಪಡೆಯಬಹುದು. ಮಾಲ್‍ನಿಂದ ಪ್ಯಾಕೆಟ್‍ನಲ್ಲಿ 50 ಗ್ರಾಂ, 100 ಗ್ರಾಂ ಸಗಣಿ ಕೊಂಡುತಂದು ಹಬ್ಬ ಮಾಡುವ ಕಾಲವೂ ಬರಬಹುದು. ಅಥವಾ ಯಾರಾದರೂ ಎಂಎನ್‍ಸಿಯವರು ನೇರವಾಗಿ ಹೈಟೆಕ್ ಕೆರಕಗಳನ್ನೇ ಮಾಡಿ ನಮ್ಮ ಮನೆಗೆ ಸಪ್ಲೈ ಮಾಡುವ ಕಾಲ ಬಂದರೂ ಅಚ್ಛರಿ ಇಲ್ಲ. ಆಗ ನನಗೆ ಈ ಸಗಣಿಯೊಡನೆ ಸರಸ ತಪ್ಪಿದರೂ ತಪ್ಪೀತೇನೋ?

            ಇದು ಕೆರಕದ ವಿಷಯ ಆಯಿತು. ಇನ್ನು ಸ್ನಾನದ ವಿಷಯಕ್ಕೆ ಬಂದರೆ ಅದು ಇನ್ನೂ ಸ್ವಾರಸ್ಯಕರವಾದದ್ದು. ಕಾಲೇಜು ದಿನಗಳಲ್ಲಿ ನಾನು ಹಾಸ್ಟೆಲ್‍ನಲ್ಲಿದ್ದಾಗ ತಿಂಗಳುಗಟ್ಟಲೆ ಸ್ನಾನವನ್ನೇ ಮಾಡಿದವನಲ್ಲ! ಸ್ಪೇನ್‍ನ ಮಹಾರಾಣಿ ಇಸ್‍ಬೇಲಾ, ಜೋಸೆಫಿನ್ ಮುಂತಾದವರೇ ವರುಷಗಟ್ಟಲೆ ಸ್ನಾನ ಮಾಡದಿದ್ದಾಗ ನನ್ನದೇನು ಬಿಡಿ.ಆದರೆ ಇಂತಹ ಒಂದು ಗಿನ್ನಿಸ್ ದಾಖಲೆಯನ್ನು ನನ್ನ ಹೆಂಡತಿ ಮುರಿದುಬಿಟ್ಟಳು. ಮೊದಲ ವರ್ಷದ ದೀಪಾವಳಿಗೆಂದು ಮಾವನ ಮನೆಗೆ ಹೋದಾಗ ನನ್ನ ಹೆಂಡತಿ ನನ್ನನ್ನು ಹರಳೆಣ್ಣೆಯಲ್ಲಿ ನೆನೆಹಾಕಿ, ಬಚ್ಚಲಲ್ಲಿ ಕೆಡವಿ, ಹಂಡೆಗಟ್ಟಲೆ ಸುಡು ಸುಡು ನೀರು ಹುಯ್ದು ಮಗಚು ಕಾಯಲ್ಲಿ ಕೆರೆದು,ಗುಂಜು ಹಾಕಿ ತಿಕ್ಕಿ, ನನ್ನ ಜನಿವಾರ ಕಾಣುವಂತೆ ಉತ್ಖನನ ಮಾಡಿ ಜನುಮ ಜನುಮದ ಕೊಳೆಯನ್ನು ತೊಳೆದಿದ್ದಳು. ಈ ಮಹಾಮಜ್ಜನ ಆದ ಮೇಲೆ ನನಗೆ ಉಪಚಾರವೋ ಉಪಚಾರ! ಗಂಟಲಿಗೆ ಕಹಿ ಕಷಾಯ ಹುಯಿದು ಹಾಸಿಗೆಯಲ್ಲಿ ಕೆಡವಿ ದೊಡ್ಡ ಕಂಬಳಿ ಕವುಚಿದ್ದಳು. ಇಂತಹ ಉಪಚಾರ ಒಂದೆರಡು ವರ್ಷಕ್ಕೇ ಬರಕಾಸ್ತಾಯ್ತು. ಈಗ ನಾನು ಯಾರಿಗೂ ಲೆಕ್ಕಕ್ಕೇ ಇಲ್ಲ. ಸಗಣಿ ಲೇಪನ ಮಾಡಿಕೊಂಡು ಗಬ್ಬುನಾರುವ ನನಗೆ ಹಿಂದೆಂದಿಗಿಂತ ಹೆಚ್ಚು ಸ್ನಾನದ ಅಗತ್ಯವಿದೆ ಎಂದು ಇವರ್ಯಾರಿಗೂ ಅನಿಸಿಯೇ ಇಲ್ಲ.ನಿಮಗೇನ್ರೀ? ಅರ್ಜೆಂಟ್? ಯಾವ ಸಾಮ್ರಾಜ್ಯ ಆಳಕ್ಕೆ ಹೋಗಬೇಕು? ಸ್ವಲ್ಪ ಇರಿ ಎಂದು ನನ್ನನ್ನು ಒತ್ತರಿಸಿ ವೈಟಿಂಗ್ ಲಿಸ್ಟ್‍ನಲ್ಲಿ ನಿಲ್ಲಿಸಿ ಹೆಂಡತಿ, ಮಕ್ಕಳು ಮನೆಗೆ ಹಬ್ಬಕ್ಕೆ ವಕ್ಕರಿಸಿದ ಅತಿಥಿಗಳೆಲ್ಲಾ ಒಬ್ಬೊಬ್ಬರಾಗಿ ಬಿಂದಿಗೆಗಟ್ಟಲೆ ನೀರು ಹುಯಿದುಕೊಂಡು ಅಭ್ಯಂಜನ ಮಾಡುತ್ತಾರೆ. ನಾನು ಸ್ನಾನದ ಶಾಸ್ತ್ರ ಮಾಡಲು ಬಚ್ಚಲಿಗೆ ಇಳಿಯುವ ವೇಳೆಗೆ ಬಿಸಿ ನೀರು ಕಾಲಿಯಾಗಿರುತ್ತದೆ. ಟ್ಯಾಂಕಿಗೆ ನೀರು ಪಂಪ್ ಮಾಡೋಣವೆಂದರೆ ಕರೆಂಟ್ ಕೈ ಕೊಟ್ಟಿರುತ್ತದೆ. ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತೀ! ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ಎಂದು ಮಂತ್ರ ಹೇಳಿಕೊಂಡು ಬೋಡು ತಲೆಗೆ ಉದ್ದರಣೆ ನೀರು ಪ್ರೋಕ್ಷಣೆ ಮಾಡಿಕೊಂಡು ಗತ ಸ್ನಾನ ವೈಭವನ್ನು ನೆನೆಯುತ್ತಾ, ಹಳಹಳಿಯುತ್ತಾ ಸ್ನಾನದ ಶಾಸ್ತ್ರ ಮುಗಿಸಿದ್ದಿದೆ.

            ಇನ್ನು ಊಟದ ವಿಚಾರವಂತೂ ಹೇಳುವ ಹಾಗೇ ಇಲ್ಲ. ಹಿಂದೆಲ್ಲಾ ಮಾವನ ಮನೆಯಲ್ಲಿ ನನಗೆ ಮಣೆ ಹಾಕಿ ಕೂರಿಸಿ ಬಗೆ ಬಗೆಯ ಭಕ್ಷ್ಯ ಬೋಜ್ಯಗಳನ್ನು ತಯಾರಿಸಿ ಭವ್ಯ ಉಪಚಾರ ಮಾಡಿ ತಿನ್ನಿಸುತ್ತಿದ್ದರು.ಒಂದೆಡೆ ಅತ್ತೆ, ಒಂದೆಡೆ ಹೆಂಡತಿ ಹೀಗೆ ಮನೆಯವರೆಲ್ಲಾ ಸುತ್ತ ನೆರೆದು ಹೋಳಿಗೆ ತಿನ್ನಿ ಅಳಿಯಂದ್ರೇ!ಇನ್ನೊಂದು ಲೋಟ ಕೀರು ಕುಡೀರಿ ರೀ ಸ್ವಲ್ಪ ಫೀರೈಸ್ ಹಾಕಿಸ್ಕೊಳಿ ಅಯ್ಯಯ್ಯೋ! ಮೊಸರನ್ನ ತಿನ್ನದೇ ಏಳ್ತಿದೀರಲ್ಲ ಎಂದು ನನ್ನನ್ನು ಹಿಡಿದುಕೊಂಡು ಗಂಟಲೊಳಗೆ ತುರುಕಿ ಹೊಟ್ಟೆಯುಬ್ಬರಿಸಿ ನರಳುವಂತೆ ಮಾಡುತ್ತಿದ್ದರು. ಈಗ ಎಲೆ ಮುಂದೆ ಕುಳಿತರೆ ನೂರೆಂಟು ರಗಳೆ! ಶುಗರ್ ಇದೆ ಎಂದು ಸ್ವೀಟ್ ಕಟ್! ಬಿಪಿ ಇದೆ ಎಂದು ಬೋಂಡ, ವಡೆ ಕಟ್! ದಪ್ಪಗಿದ್ದೇನೆಂದು ತುಪ್ಪಕ್ಕೆ ಕೊಕ್! ಗ್ಯಾಸ್ಟ್ರಿಕ್ ಇದೆ ಎಂದು ಮೇಲೋಗರ, ಸಂಡಿಗೆ ಪೇಣಿ, ಬಾಳಕಕ್ಕೂ ಖೋತಾ! ನೀರು ಮಜ್ಜಿಗೆ ಹಾಕಿ ಮೇಲೆಬ್ಬಿಸಿಬಿಡುತ್ತಾಳೆ. ಇಂತ ಚೆಂದಕ್ಕೆ ಹಬ್ಬದ ಊಟಕ್ಕಾದರೂ ಏಕೆ ಕೂರಬೇಕು ಎಂದು ಪೇಚಾಡಿದ್ದಿದೆ. ಇದೆಲ್ಲಾ ಹಾಳಾಗಲಿ ಎಂದರೆ, ಎಲ್ಲಾ ಉಂಡು ಎದ್ದು ಹೋದ ಮೇಲೆ ಎಂಜೆಲೆಲೆ ಎತ್ತಿ ಹಾಕುವ ಡ್ಯೂಟಿ ಬೇರೆ ನನ್ನ ಮೇಲೇ ಬೀಳುತ್ತದಲ್ಲ, ಇದಕ್ಕೇನು ಹೇಳುವುದು?

            ಇಷ್ಟಕ್ಕೇ ಹಬ್ಬ ಮುಗಿಯುವುದಿಲ್ಲ. ಕೊನೆಯದೊಂದು ಡಮಾರ್ ಪ್ರಸಂಗ ಸಂಜೆಗೆ ಬಾಕಿ ಇರುತ್ತದೆ. ಅದೇ ಪಟಾಕಿ ಹಚ್ಚುವುದು. ಚಿಕ್ಕಂದಿನಲ್ಲಿ ಕತ್ತೆ ಬಾಲಕ್ಕೆ ಡಬ್ಬ ಕಟ್ಟಿ ಪಟಾಕಿ ಹಚ್ಚಿ ಪರಾಕ್ರಮ ಮೆರೆದವನು ನಾನು! ಮದುವೆಯಾದ ಹೊಸದರಲ್ಲಿ ನಾನೇ ಡಬ್ಬಗಟ್ಟಲೆ ಪಟಾಕಿ ತೆಗೆದುಕೊಂಡು ಹೋಗುತ್ತಿದ್ದೆ.ಆಗ ಗಡಾಬಾಜ್ ಹಚ್ಚುವುದು, ರಾಕೆಟ್ ಹಾರಿಸುವುದು, ಬಾಂಬ್ ಸಿಡಿಸುವುದು ನನ್ನ ಪೌರುಷದ ಸಂಕೇತವಾಗಿತ್ತು. ಈಗ ಯಾರೊಬ್ಬರೂ ಒಂದು ಚಿಂಕುಳ್ಳಿ ಕಾಗೆ ಪಟಾಕಿ ಹಚ್ಚಲೂ ನನ್ನನ್ನು ಬಿಡುವುದಿಲ್ಲ. ನಿಮಗೆ ಕಣ್ ಕಾಣಲ್ಲ, ಕೈ ನಡುಗುತ್ತೆ ಎಂದು ಸಬೂಬು ಹೇಳಿ ಕೈಗೊಂದು ಹನುಮಂತನ ಬಾಲ ಹಚ್ಚಿ ಬೆರ್ಚಪ್ಪನಂತೆ ನಿಲ್ಲಿಸಿ ಗಹಗಹಿಸುತ್ತಾರೆ. ಮನೆ ಮಂದಿಯೆಲ್ಲಾ ಪಟಾಕಿ ಹಚ್ಚಿ ಕೇಕೆ ಹಾಕುವ ಅಬ್ಬರಕ್ಕೆ ನಮ್ಮನೆ ನಾಯಿ ಪಿಂಟು ಕುಯ್‍ಗುಟ್ಟಿ ಚೈನ್ ಕಿತ್ತುಕೊಂಡು ಹೋಗುತ್ತದೆ. ಆಗ ಅದನ್ನು ಹುಡುಕಿಕೊಂಡು ಬರುವ ನಾಯಿಪಾಡೂ ನನ್ನದೇ! ದಾರಿಯುದ್ದಕ್ಕೂ ಎಲ್ಲರೂ ಪಟಾಕಿ ಸಿಡಿಸುವವರೇ! ಕೆಲವು ಹುಡುಗು ಮುಂಡೇವು ಕೈಲೇ ಬಾಂಬ್ ಹಚ್ಚಿ ನನ್ನ ಮೇಲೆ ಎಸೆದು ಬಿಡುತ್ತವೆ. ನಾನು ಹೆದರಿಕೊಂಡು ಓಡಿದ್ದೇ ಓಡಿದ್ದು. ನನ್ನ ಕತೆಯೇ ಹೀಗಾದ ಮೇಲೆ ಪಿಂಟುವಿನ ಕತೆ ಇನ್ನು ಹೇಗಿರಬೇಡ? ಪಿಂಟು ಹೆದರಿಕೊಂಡು ಕಂಡ ಕಂಡ ಮನೆ ಮುಂದೆ ಸೂಸೂ ಮಾಡಿಕೊಳ್ಳುತ್ತಾ, ಇನ್ನೂ ತಾಳದಾದಾಗ ರಂಗೋಲಿ ಮೇಲೇ ನಂಬರ್ ಟೂನೂ ಮಾಡುತ್ತಾ ಅಲ್ಲಿಂದಿಲ್ಲಿಗೆ ನೆಗೆದಾಡುತ್ತದೆ. ಬೆಳಿಗ್ಗೆ ಕೆರಕ ಹಾಕಲು ಸಗಣಿ ಪಡೆದಿದ್ದ ಆಂಟಿಯರೇ ನನಗೆ ಹಿಡಿಶಾಪ ಹಾಕುವಾಗ ಆ ವಾಮನ ಬಂದು ನನ್ನನ್ನು ಪಾತಾಳಕ್ಕೆ ತುಳಿಯಬಾರದಾ ಎನಿಸುತ್ತದೆ. ಮಕ್ಕಳ ಕಾಲಕ್ಕೇ ಹೀಗೆ! ಇನ್ನು ಮೊಮ್ಮಕ್ಕಳ ಕಾಲಕ್ಕೆ ದೀಪಾವಳಿ ಎಲ್ಲಾ ರೀತಿಯಲ್ಲಿ ಪೂರಾ ದಿವಾಳಿಯೇ ಸರಿ!

ಚಿತ್ರಕೃಪೆ : http://www.dreamstime.com     
125 ಟಿಪ್ಪಣಿಗಳು Post a comment
  1. Nagshetty Shetkar
    ಆಕ್ಟೋ 22 2014

    ಈ ಬಾರಿಯ ನುಡಿಸಿರಿಯಲ್ಲಿ ದಲಿತ ಕವಿ ಸಿದ್ದಲಿಂಗಯ್ಯನವರು ದೀಪಾವಳಿ ಎಂಬ ವೈದಿಕ ಹಬ್ಬದ ವಿರುದ್ಧ ಜನರನ್ನು ಎಚ್ಚರಿಸುವ ಭಾಷಣ ಮಾಡುತ್ತಾರೆ ಎಂದು ಆಶಿಸೋಣ. ಹಿಂದೆ ನುಡಿಸಿರಿಯಲ್ಲಿ ಬರಗೂರು ಅವರು ವಿಜಯದಶಮಿ ಬಗ್ಗೆ ಎತ್ತಿದ ಪ್ರಶ್ನೆಗಳು ಸಿದ್ದಲಿಂಗಯ್ಯನವರಿಗೆ ಪ್ರೇರಣೆ ನೀಡತಕ್ಕದ್ದು.

    ಬಷೀರ್: “ನುಡಿಸಿರಿಯಲ್ಲಿ ಈ ಹಿಂದೆ ಬರಗೂರು ರಾಮಚಂದ್ರಪ್ಪ ಅವರು ಭಾಗವಹಿಸಿ ಆಡಿದ ಮಾತುಗಳನ್ನು ನಾನು ಕೇಳಿದ್ದೇನೆ. ಕನ್ನಡದ ಸಂಸ್ಕೃತಿ ದುರ್ಯೋಧನ ಸಂಸ್ಕೃತಿ ಎಂದು, ಸ್ನೇಹ, ಛಲ, ಶೌರ್ಯಗಳನ್ನು ಹೊಸ ಪರಿಭಾಷೆಯಲ್ಲಿ ಅವರು ವಿವರಿಸಿದ್ದರು. ಹಾಗೆಯೇ ದಸರಾ ಸಮಾರಂಭವನ್ನು ಉದ್ಘಾಟಿಸಿ ಅವರು ಆಡಿದ ಮಾತುಗಳನ್ನೂ ಕೇಳಿದ್ದೇನೆ. ಅಲ್ಲಿ ಸೇರಿದ ಅಷ್ಟೂ ಜನರನ್ನು ದಂಗುಬಡಿಸುವಂತೆ, ಹಿಂಸೆಯ ಮೌಲ್ಯವನ್ನು ಪ್ರತಿಪಾದಿಸುವ ವಿಜಯದಶಮಿ ಆಚರಣೆಯ ಬಗ್ಗೆಯೇ ಪ್ರಶ್ನೆ ಎತ್ತಿದ್ದರು. ಈ ಮಾತುಗಳನ್ನು ವಿಚಾರವಾದಿಗಳ ವೇದಿಕೆಯಲ್ಲಿ ನಿಂತು ಆಡುವುದಕ್ಕಿಂತ, ಪುರೋಹಿತ ಶಾಹಿಗಳ ವೇದಿಕೆಯಲ್ಲಿ ನಿಂತು ಆಡುವುದಕ್ಕೆ ಹೆಚ್ಚು ಧೈರ್ಯಬೇಕು. ಶಕ್ತಿ ಬೇಕು. ವೈದಿಕ ಮೌಲ್ಯಗಳನ್ನು ನಂಬಿದವರು, ಆ ನಂಬಿಕೆಗೆ ಮೋಸ ಹೋದವರು ಸಹಿತ ಲಕ್ಷೋಪಲಕ್ಷ ಜನರು ಸೇರಿದ ವೇದಿಕೆಯಲ್ಲಿ ನಿಂತು ಇಂತಹ ಮಾತುಗಳನ್ನು ಆಡಿದರೆ ಅವು ಹೆಚ್ಚು ಪ್ರಯೋಜನಕಾರಿ. ಈ ಮಾತುಗಳಿಂದ ಬೆರಳೆಣಿಕೆಯ ಜನರು ಪ್ರಭಾವಿತರಾದರೂ ಸಾಕು, ಅದು ಮುಂದಿನ ದಿನಗಳಲ್ಲಿ ವೈಚಾರಿಕತೆಗೆ ಹೊಸ ದಿಕ್ಕನ್ನು ನೀಡಬಹುದು. ಆದರೆ ವಿಚಾರವಾದಿಗಳದ್ದು ಇತ್ತೀಚಿನ ದಿನಗಳಲ್ಲಿ ಬೆಕ್ಕಿನ ಬಿಡಾರವಾಗುತ್ತಿದೆ. ತಮ್ಮ್ನ ಸುತ್ತ ತಾವೇ ಬೇಲಿಯನ್ನು ಕಟ್ಟಿ, ಗೆರೆಗಳನ್ನು ಹಾಕಿಕೊಂಡು ಬಹುದೊಡ್ಡ ಸಂಖ್ಯೆಯ ಜನರನ್ನು ತನ್ನ ವಿಚಾರಗಳಿಂದ ದೂರವಿಡುತ್ತಿದ್ದಾರೆ. ತನ್ನ ವಿಚಾರಗಳನ್ನು ಹಂಚಿಕೊಳ್ಳಲು ಎಲ್ಲ ಮಾಧ್ಯಮಗಳನ್ನೂ ಶಕ್ತವಾಗಿ ಬಳಸಿಕೊಳ್ಳುತ್ತಾ, ಹೆಚ್ಚು ಹೆಚ್ಚು ಜನರನ್ನು ತಲುಪಬೇಕಾದವರು, ಇದು ಯಾರ ಪತ್ರಿಕೆ, ಇದು ಯಾರ ವೇದಿಕೆ ಎಂದು ಮೂಸಿ ನೋಡುತ್ತಾ, ಹೊಸ ರೂಪದ ಅಸ್ಪಶ್ಯತೆಯೊಂದನ್ನು ಹುಟ್ಟು ಹಾಕುತ್ತಿದ್ದಾರೆ. ಇದರ ಸಂಪೂರ್ಣ ಲಾಭವನ್ನು ವೈದಿಕಶಾಹಿ, ಪುರೋಹಿತಶಾಹಿ ಶಕ್ತಿಗಳು ತಮ್ಮದಾಗಿಸಿಕೊಳ್ಳುತ್ತಿವೆ.

    ಹಾಗೆ ನೋಡಿದರೆ ಇಂದು ವೈದಿಕರು, ಉದ್ಯಮಿಗಳು ಆಕ್ರಮಿಸಿಕೊಳ್ಳದ ಒಂದೇ ಒಂದು ವೇದಿಕೆ ನಮ್ಮಲ್ಲಿಲ್ಲ. ಕನ್ನಡಸಾಹಿತ್ಯ ಪರಿಷತ್ ಹಮ್ಮಿಕೊಳ್ಳುವ ಸಾಹಿತ್ಯ ಸಮ್ಮೇಳನಗಳೂ ಇಂದು ವೈದಿಕ ಸಮ್ಮೇಳನಗಳಾಗಿ ಪರಿವರ್ತನೆಯಾಗುತ್ತಿವೆ.”

    ಉತ್ತರ
  2. sathya
    ಆಕ್ಟೋ 22 2014

    NIMAGE YAVUDADRONDU KARNAKKE VAIDIKARIGE ANNADIDDARE TINDA ANNA JIRNAVAGODILLA ALLAVE SHETTARE

    ಉತ್ತರ
    • Nagshetty Shetkar
      ಆಕ್ಟೋ 22 2014

      ನುಡಿಸಿರಿಯ ಮುಂದಿನ ಆವೃತ್ತಿಗಳಿಗೆ ದರ್ಗಾ ಸರ್ ಅವರನ್ನು ಆಯ್ಕೆ ಮಾಡಿ ಆಹ್ವಾನಿಸಿದರೆ ಅವರು ಬರಗೂರು ಹಾಗೂ ಸಿದ್ದಲಿಂಗಯ್ಯನವರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ವೈದಿಕಶಾಹಿಗಳ ವೇದಿಕೆಯಲ್ಲೇ ವೈದಿಕತೆಯನ್ನು ಧಿಕ್ಕರಿಸಿ ವೈಚಾರಿಕ ಅವೈದಿಕ ಕ್ರಾಂತಿಯ ಬೀಜವನ್ನು ಬಿತ್ತಬಲ್ಲರು ಅಂತ ನನ್ನ ಅನ್ನಿಸಿಕೆ. ಆದರೆ ನುಡಿಸಿರಿಯ ಆಯೋಜಕರಿಗೆ ಮುಸ್ಲಿಂ ಒಬ್ಬನನ್ನು ವೇದಿಕೆ ಮೇಲೆ ಕೂರಿಸಲು ಧೈರ್ಯ ಸಾಲದು!

      ಉತ್ತರ
      • ರಂಜನಾ ರಾಮ್ ದುರ್ಗ
        ಆಕ್ಟೋ 22 2014

        ದೀಪಾವಳಿ ಹಬ್ಬದ ಶುಭಾಶಯಗಳು ಸಹೋದರ ಶೆಟ್ಕರ್ 🙂

        ಉತ್ತರ
        • Nagshetty Shetkar
          ಆಕ್ಟೋ 22 2014

          ದರ್ಗಾ ಸರ್ ಅವರನ್ನು ಮುಸ್ಲಿಂ ಎಂಬ ಕಾರಣಕ್ಕೆ ನುಡಿಸಿರಿಗೆ ಆಹ್ವಾನಿಸಿ ಸನ್ಮಾನ ಮಾಡದೇ ಇರುವುದೂ ಕೂಡ “ಹೊಸ ರೂಪದ ಅಸ್ಪಶ್ಯತೆ” ಅಂತ ಹೇಳಬಹುದು.

          ಉತ್ತರ
          • Nagshetty Shetkar
            ಆಕ್ಟೋ 22 2014

            ದರ್ಗಾ ಸರ್ ಅವರು ಎಂದೂ ವೈದಿಕರಿಂದ ಮನ್ನಣೆಯನ್ನು ಬಯಸಿದವರಲ್ಲ. ಅವರದ್ದು ಬಸವ ಮಾರ್ಗ. ಗೆಳೆಯ ನಾಗರಾಜ್ ಹೆತ್ತೂರ್ ಬರೆದ ಈ ಪದ್ಯ ಮಾರ್ಮಿಕವಾಗಿದೆ.

            ರಾತ್ರಿ ಕನಸೊಂದನ್ನು ಕಂಡೆ
            ಆರ್ ಎಸ್ ಎಸ್ ಬೈಟಕ್ ನಲ್ಲಿ
            ಖಾಕಿ ಚಡ್ಡಿ ಹಾಕಿ ಕುಳಿತಿದ್ದರು
            ವಾರ್ತಾ ಭಾರತಿಯ ನಮ್ಮ ಬಿಎಂ ಬಶೀರ್
            ಸುತ್ತಲೂ ಭರ್ಜಿ ಹಿಡಿದ
            ಚಡ್ಡಿಗಳು
            ತ್ರಿಶೂಲಗಳು
            ಮೊದಲೇ ಹೆದರಿದ್ದೆ
            ಉಚ್ಚೆ ಹೂಯ್ದುಕೊಳ್ಳುವುದೊಂದೇ ಬಾಕಿ

            ಸಾವರಿಸಿಕೊಂಡೆ ಕಣುಜ್ಜಿಕೊಂಡು ನೋಡಿದೆ
            ಹೌದು ಅವರೇ ಅಲ್ಲವೇ..
            ಸಾರ್ ನೀವು ಇಲ್ಲಿ..
            ಓದುಗನೆ ,
            ನಾವು ನಮ್ಮ ತಲ್ಲಣಗಳನ್ನು ಹೇಳಬೇಕಿರುವುದು ಇಲ್ಲಿಯೇ
            ಮುಸ್ಲಿಂ ಸಮುದಾಯದ ತಲ್ಲಣಗಳನ್ನು ಹೇಳಲು
            ಬಂದಿದ್ದೇನೆ
            ನೋಡಲ್ಲಿ ನಿಮ್ಮ ಸಿದ್ದಲಿಂಗಯ್ಯನವರೂ ಬಂದಿದ್ದಾರೆ
            ಅಸ್ಪೃಶ್ಯತೆ ತೊಲಗಿಸಿ ಎಂದು ಹೇಳಲು ಬಂದಿದ್ದಾರೆ
            ಹೋಗಿ ಮಾತನಾಡಿಸು
            ಸಿದ್ದಲಿಂಗಯ್ಯನವರ ಹತ್ತಿರ ಹೋದೆ
            ಏನು ಸಾರ್ ನೀವಿಲ್ಲಿ…?
            ಆಳ್ವಾಸ್ ಗೆ ಹೋಗಾಗಿದೆ ಇದರಲ್ಲೇನಿದೆ ವಿಶೇಷ..
            ಚಡ್ಡಿ ತುಂಬಾ ಚೆನ್ನಾಗಿ ಕಾಣುತ್ತದೆ ಸಾರ್..!
            ಹೌದಾ..? ನಗು
            ಇದನ್ನು ಹಾಕಲು ಇಷ್ಟು ದಿನ ಬೇಕಾಯ್ತು ಕಂದ
            ನಾನು ಬರೆದಿದ್ದನಲ್ಲ ಗುಡಿಸಲುಗಳಲ್ಲಿ ನನ್ನ ಬದುಕಿನ ಬಗ್ಗೆ
            ಊರುಕೇರಿಯ ಬಗ್ಗೆ
            ಅದಕ್ಕಿಂತಲೂ ಸುಖವಿದೆ ಈ ಚಡ್ಡಿಯಲ್ಲಿ
            ಬೇಕಿದ್ದರೆ ನೀನು ಹಾಕಿಕೋ
            ಯುವ ಪ್ರತಿಭೆ ಎಂದು ಹೇಳಿ ಮಾತನಾಡಲು
            ಅವಕಾಶ ಕೊಡಿಸುತ್ತೇನೆ
            ಏನ್ ಸಾರ್ ನೀವೇ ಹಿಂಗಂದ್ರೆ…?
            ನೋಡಿ ನಾಗರಾಜ್
            ಗುಜಡಿ ಅಂಗಡಿಲಿ
            ಒಂದು ಲೇಖನ ಬಂದಿದೆ ಅದನ್ನು ಓದಿ
            ನಾನು ಅವರ ಲೇಖನ ಓದಿದ ನಂತರ
            ಸಂಪೂರ್ಣ ಬದಲಾಗಿದ್ದೇನೆ
            ಇನ್ನು ಮುಂದೆ ನಮ್ಮ ವಿಚಾರಗಳನ್ನು ಹೇಳಲು
            ವಿಶ್ವ ಹಿಂದೂ ಪರಿಷತ್, ಆರ್ ಎಸ್ ಎಸ್ , ಭಜರಂಗದಳದ
            ಸಭೆಗಳಿಗೆ ಸಕ್ರೀಯವಾಗಿ ತೊಡಗಿಸಲು ತೀರ್ಮಾನಿಸಿದ್ದೇನೆ
            ಅಖಿಲ ಭಾರತ ಮಟ್ಟದಲ್ಲಿ ಭಾಗವತ್, ಮೋದಿ ಜೊತೆ ಮಾತುಕತೆ ನಡೆದಿದೆ
            ಮುಂದೆ ಅಲ್ಲಿ ಸಕ್ರೀಯನಾಗುತ್ತೇನೆ
            ಮತ್ಯಾಕೆ ಇನ್ನೂ ಸರದಿಯಲ್ಲೇ ನಿಂತಿದ್ದೀರಿ..?
            ಇರಪ್ಪಾ ಹೋಮ-ಹವನ ಮುಗಿದಿಲ್ಲ ಎಂದರು
            ಸರತಿ ಒಂದು ಕಿ.ಮೀ ಇತ್ತು
            `ಚಪ್ಪಲಿ ಬಿಟ್ಟು ಒಳಗೆ ಬರ್ರಿ’
            ಇಲ್ಲಿ ಎಲ್ಲರೂ ಸಮಾನರು
            ಬಶೀರ್ ಅವರನ್ನು
            ಭರ್ಜಿ ತೋರಿಸಿ ಗದರಿದ್ದು ಕೇಳಿಸಿತು
            ಬೆಚ್ಚಿ ಬಿದ್ದೆ ತಾಯಿ ಎಬೋಲಮ್ಮ ನೆನಪಾದಳು
            -ಜೈ ಭೀಮ್

            ಉತ್ತರ
            • ರಂಜನಾ ರಾಮ್ ದುರ್ಗ
              ಆಕ್ಟೋ 22 2014

              ದೀಪಾವಳಿ ಹಬ್ಬದ ಶುಭಾಶಯಗಳು ಸಹೋದರ ಶೆಟ್ಕರ್ 🙂

              ಉತ್ತರ
            • ವಿಜಯ್ ಪೈ
              ಆಕ್ಟೋ 24 2014

              ಆಮೇಲೆ ನಿಮ್ಮ ಗೆಳೆಯ ಎದ್ದರೊ ಇಲ್ಲವೊ ಕನಸಿನಿಂದ?? ಈಗ ನೀವು ಮಲಗಿ..ಕನಸು ಬಿದ್ದು..’ಸ್ವಂತ’ವನ್ನುವೆಂತದ್ದಾದರೂ ಬರೆಯಲು ಸಿಗಬಹುದು!! 🙂

              ಉತ್ತರ
            • ಆಕ್ಟೋ 28 2014

              ಇದೂ ಪದ್ಯವಾ!!???
              ಅದ್ಯಾವ ಅಕ್ಷರಗೇಡಿ ಬರೆದದ್ದು!?
              ಈ ತರಾ ಬರೆಯುವವರನ್ನೇ ವಿಚಾರವಾದಿ ಅನ್ನೋದಾ!?
              .
              .
              .
              ಇಷ್ಟೆಲ್ಲದರ ನಡುವೆ ಕೊನೆಗೂ ಉಳಿಯುವ ಪ್ರಶ್ನೆ ಒಂದೇ……ಈ ಶೆಟ್ಕರ್ ಈ ಜನ್ಮದಲ್ಲಿ ಸುಧಾರಿಸ್ತಾನಾ!? 😦

              ಉತ್ತರ
              • Nagshetty Shetkar
                ಆಕ್ಟೋ 28 2014

                ಹಾಸನ ಜಿಲ್ಲೆಯ ದಲಿತ ಸಾಹಿತ್ಯ ಸಂಘದ ಪ್ರಗತಿಪರ ಚಟುವಟಿಕೆಗಳ ಮೂಲಕ ಮುಂಚೂಣಿಗೆ ಬಂದಿರುವ ಉದಯೋನ್ಮುಖ ಯುವ ಕವಿ ಹೆತ್ತೂರ್ ನಾಗರಾಜ ಬರೆದ ಒಡಲಾಳದ ಧ್ವನಿ ಇದು. ಅವರನ್ನು ಅಕ್ಷರಗೇಡಿ ಎಂದು ಕರೆಯುವವರು ಮೊದಲು ನಾಲ್ಕು ಸಾಲು ರಚಿಸಿ ತೋರಿಸಲಿ, ಆಮೇಲೆ ದಲಿತ ನಿಂದನೆ ಮುಂದುವರೆಸಲಿ ನೋಡೋಣ.

                ಉತ್ತರ
          • ವಿಜಯ್ ಪೈ
            ಆಕ್ಟೋ 24 2014

            ಒಳ್ಳೆ ಗಂಜಿ ಗಿರಾಕಿಗಳು!!..ಯಾವುದಾದರೂ ಕೋಟಾದಡಿಯಲ್ಲಿ ಒಂದು ಸನ್ಮಾನ..ಒಂದಿಷ್ಟು ಕಾಸು..ಒಂದು ವೇದಿಕೆ..ಮಾತನಾಡಲೊಂದು ಮೈಕು ಇಷ್ಟು ಸಿಕ್ಕರೆ ಸಾಕು!!

            ಉತ್ತರ
            • Nagshetty Shetkar
              ಆಕ್ಟೋ 24 2014

              ಹೌದು, ನಿಮ್ಮ ಸಿ ಎಸ ಎಲ್ ಸಿ ಯ ಸಂಶೋಧಕರ ಬಗ್ಗೆ ನೀವು ಹೇಳಿದ್ದು ಎಲ್ಲವೂ ಅನ್ವಯಿಸುತ್ತದೆ.

              ಉತ್ತರ
              • ರಂಜನಾ ರಾಮ್ ದುರ್ಗಾ
                ಆಕ್ಟೋ 27 2014

                ಸಹೋದರ ಶೆಟ್ಕರ್ ,ನೀವು ರಂಜಾನ್ ಮತ್ತು ಬಕ್ರೀದ್ ಹಬ್ಬಗಳನ್ನು ಮಾತ್ರ ಆಚರಿಸುವಿರೇನು? ನಾನು ಪ್ರೀತಿಯಿಂದ ನಿಮಗೆ ದೀಪಾವಳಿಯ ಶುಭಕೋರಿದರೂ ನೀವು ಸುಮ್ಮನಿದ್ದುದ್ದು ಸರಿಯೇನು?
                ಹೇಳಿ ಸಹೋದರರೇ,ಹೇಳಿ

                ಉತ್ತರ
                • Nagshetty Shetkar
                  ಆಕ್ಟೋ 27 2014

                  ಸಹೋದರಿ ರಂಜನಾ, ನಿಮ್ಮ ಪ್ರೀತಿಗೆ ನಾನು ಆಭಾರಿ. ನಿಮಗೆ ಒಳ್ಳೆಯದಾಗಲಿ.

                  ಉತ್ತರ
            • M A Sriranga
              ಆಕ್ಟೋ 24 2014

              ಈ ಸಲದ ನುಡಿಸಿರಿ ಸಮ್ಮೇಳನದಲ್ಲಿ ದಲಿತಕವಿ ಎಂದೇ ಹೆಸರಾದ ಸಿದ್ದಲಿಂಗಯ್ಯನವರು ಭಾಗವಹಿಸುತ್ತಿರುವುದು ಕೆಲವು ಪ್ರಗತಿಪರರಿಗೆ, ವೈದಿಕಶಾಹಿ ವಿರೋಧಿಗಳಿಗೆ,, ಪುರೋಹಿತಶಾಹಿ ವಿರೋಧಿಗಳಿಗೆ ,ಮನುವಿರೋಧಿಶಾಹಿಗಳಿಗೆ ನುಂಗಲಾರದ ತುತ್ತಾಗಿದೆ. ಆದರೂ ಆ ಶಾಹಿಗಳ ವೇದಿಕೆಯಿಂದಲೇ ಅಖಿಲ ಕರ್ನಾಟಕದ ಜನಗಳನ್ನು ಎಚ್ಚರಿಸುವ ಭಾಷಣವನ್ನು ಸಿದ್ದಲಿಂಗಯ್ಯನವರು ಮಾಡಲಿದ್ದಾರೆ ಎಂದು ಆಶಿಸುವ ಲೇಖನ ‘ಗುಜರಿ ಅಂಗಡಿ’ ಬ್ಲಾಗ್ ನಲ್ಲಿ ಪ್ರಕಟವಾಗಿದೆ. ಅದರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸಿದ್ದಲಿಂಗಯ್ಯನವರು ‘ಇಕ್ರಲಾ ವದೀರ್ಲಾ ….’ಇಂದ ಸಾಕಷ್ಟು ದೂರ ಸಾಗಿ ಬಂದಿದ್ದಾರೆ. ಅವರ ಊರು ಕೇರಿ ಭಾಗ ೧ ಮತ್ತು ೨ ಓದಿದರೆ ಸಾಕು. ಅದರಲ್ಲಿ ಯಾವ ರೋಷಾವೇಶ,ಅನಗತ್ಯ ಕೂಗಾಟ ಕಿರುಚಾಟ ಇಲ್ಲ. ಸಾಕಷ್ಟು ಮಾಗಿದ್ದಾರೆ. ಜೀವನವನ್ನು ನೋಡುವ ದೃಷ್ಟಿ ಬದಲಾಗಿದೆ. ಇದೇ ಕಾರಣಕ್ಕೆ ಅವರ ಪ್ರಗತಿಪರ ಗೆಳೆಯರಿಗೆ “ಏನೋ ಒಂಥರಾ , ಏಕೋ ಈ ಥರಾ” ಎನಿಸುತ್ತಿದೆ. ಪ್ರಗತಿಪರ ಎಂಬ ಹೆಸರಿಟ್ಟುಕೊಂಡು ಒಬ್ಬ ಮನುಷ್ಯನಲ್ಲಿ ಬದಲಾವಣೆಯನ್ನೇ ಸಹಿಸದ ಆ ಗೆಳೆಯರು ಅದು ಯಾವ ಸೀಮೆ ಪ್ರಗತಿಪರರೋ ತಿಳಿಯದಾಗಿದೆ.

              ಉತ್ತರ
              • Nagshetty Shetkar
                ಆಕ್ಟೋ 25 2014

                ಎಲ್ಲಾ ಬದಲಾವಣೆಗಳು ಪ್ರಗತಿಪರ ಅಂತ ಹೇಳಲು ಆಗುವುದಿಲ್ಲ. ದಲಿತರಲ್ಲಿ ಕೆಲವರು ಪೇಜಾವರ ಅವರಿಂದ ವಿಷ್ಣು ದೀಕ್ಷೆ ತೆಗೆದುಕೊಂಡಿದ್ದಾರೆ. ಅದು ಒಳ್ಳೆಯ ಬದಲಾವಣೆಯೇ?

                ಉತ್ತರ
                • ಮಾರ್ಕ್ಸ್ ಮಂಜು
                  ಆಕ್ಟೋ 28 2014

                  ಎಲ್ಲರೂ ಮಹರ್ಷಿ ಮಾರ್ಕ್ಸ್ ದೀಕ್ಷೆ ತೆಗೆದುಕೊಂಡು ಅವರ ಸನ್ನಿಧಾನಕ್ಕೆ ಬಂದು ಸರ್ವಸಮಾನತೆಯ ಸಮಾಜ ನಿರ್ಮಾಣ ಮಾಡಬೇಕಾಗಿದೆ

                  ಉತ್ತರ
                  • Nagshetty Shetkar
                    ಆಕ್ಟೋ 28 2014

                    ದೀಕ್ಷೆಯು ಕೂಡ ವೈದಿಕ ಪರಿಕಲ್ಪನೆಯೇ ಆಗಿದೆ. ಆದುದರಿಂದ ಮಂಜು ಅವರ ಸಲಹೆಯು ಅಸಂಗತವಾಗಿದೆ.

                    ಉತ್ತರ
                    • ಮಾರ್ಕ್ಸ್ ಮಂಜು
                      ಆಕ್ಟೋ 28 2014

                      ಮಾರ್ಕ್ಸ್ ವಿರೋಧಿಯಾದ ನಿಮ್ಮ ಪ್ರತಿಕ್ರಿಯೆಗಳೂ ಬಂಡವಾಳಶಾಹಿ ಪ್ರೇರಿತವಾಗಿವೆ Mr.Nagshetty Shetkar.ನೀವು ಪುರಾತನ ವೈದಿಕ ವೈಭವದ ವಕ್ತಾರರಾಗಿದ್ದೀರಿ

  3. ಆಕ್ಟೋ 23 2014

    ರಾಮನಿರ್ದಂದು ರಾವಣನೊಬ್ಬನಿರ್ದನಲ
    ಭೀಮನಿರ್ದಂದು ದುಃಶಾಸನನೋರ್ವನ್
    ಈ ಮಹಿಯೊಳನ್ಯಾಯಕಾರಿ ಇಲ್ಲದುದೆಂದು
    ರಾಮ ಭಟನಾಗು ನೀಂ ಮಂಕಿತಿಮ್ಮ ||

    ನಮ್ಮ ಶೇಟ್ಕರ್ ಸಾಹೇಬರು, ರಾಮನನ್ನು ವೈದಿಕನನ್ನಾಗಿ ಮಾಡಿ, ರಾವಣನ ಪಕ್ಷ ಸೇರಲು ಸಿದ್ಧವಾಗುತ್ತಾರೆ.
    ಅವರಿಗೆ ವ್ಯಕ್ತಿಯ ಗುಣಕ್ಕಿಂತ ಜಾತಿಯೇ ಮುಖ್ಯ.
    ವಿಜಯದಶಮಿ, ದೀಪಾವಳಿ ಎಂದ ಕೂಡಲೇ ಅದರ ಹಿಂದಿರುವ ಮೌಲ್ಯಗಳಿಗಿಂತ, ಅದನ್ನಾಚರಿಸುವವರು ಹಿಂದುಗಳು, ಅರ್ಥಾತ್ ಬ್ರಾಹ್ಮಣರು, ಅರ್ಥಾತ್ ಮುಸಲ್ಮಾನರಲ್ಲದವರು. ಹೀಗಾಗಿ, ಅದನ್ನು ತುಳಿದು ಇಲ್ಲವಾಗಿಸಬೇಕು ಎನ್ನುವುದೇ ಹೇತ್ಕರ್ ಸಂಪ್ರದಾಯ ಎಂದರಿತಿರುವ ಹೇತ್ಕರ ಮಹೋದಯರು, ಭಾರತೀಯ ಮೌಲ್ಯಗಳ ಕುರಿತಾಗಿ, ಹಬ್ಬ-ಸಂಸ್ಕೃತಿಗಳ ಕುರಿತಾಗಿ ಬೇರೇನು ತಾನೇ ಹೇಳ್ಯಾರು?

    ದೀಪಾವಳಿ ಎನ್ನುವುದು ಬೆಳಕಿನ ಹಬ್ಬ. ಅದು ಹಿಂದು ಹಬ್ಬವಾದ್ದರಿಂದ ‘ಬೆಳಕು’ ಎನ್ನುವುದು ವೈದಿಕ ಸಂಸ್ಕೃತಿ ಎಂದು ಹೇಳಿ, ‘ಕತ್ತಲ’ನ್ನೇ ಹಿಡಿಯುವರು ಹೇತ್ಕರರು.

    ಸಂತೋಷದ ಸಂಗತಿಯೆಂದರೆ, ಹೇತ್ಕರರೇ ತೋಡಿಕೊಂಡಿರುವಂತೆ, ಪ್ರಗತಿವಾದಿಗಳ ಗುಂಪೂ ಇಂದು ‘ರಾಷ್ಟ್ರೀಯತೆ’ಯ ‘ಬೆಳಕಿ’ನತ್ತ ಬರುತ್ತಿದೆ.

    “ಆಕಾಶವೇ ತಲೆಯ ಮೇಲೆ ಕಳಚಿ ಬೀಳುತ್ತದೆ” ಎಂದು ಹೆದರುವ ಹೇತ್ಕರ್ ತರಹದವರಿಗೆ ‘ನೆಲವನ್ನು ಅಗೆದು, ತಮ್ಮ ತಲೆಯನ್ನು ಅದರಲ್ಲಿ ಹುದುಗಿಸಿ, ಮೇಲೆ ಬೀಳುವ ಆಕಾಶದಿಂದ ತಲೆಯನ್ನು ಕಾಪಾಡಿಕೊಳ್ಳುವ’ ಪ್ರಯತ್ನ ಬಿಟ್ಟು ಬೇರೇನೂ ದಾರಿ ಕಾಣದು!!

    ಉತ್ತರ
  4. Nagshetty Shetkar
    ಆಕ್ಟೋ 23 2014

    ಹಬ್ಬದ ದಿನ ಎಂತಹ ಮಾತು ಆಡ್ತೀರಿ ನೀವು ಎಸ ಎಸ ಏನ್ ಕೆ?!!

    ಉತ್ತರ
    • ಆಕ್ಟೋ 23 2014

      ಸ್ವಾಮಿ ಶೇಟ್ಕರರೇ,

      ಭಾರತೀಯರೆಲ್ಲರಿಗೂ ದೀಪಾವಳಿ ಬಹಳ ಸಂಭ್ರಮದ ಹಬ್ಬ.
      ಇಂತಹ ಶುಭ ಸಂದರ್ಭದಲ್ಲಿ, ದೀಪಾವಳಿಯ ಹೆಸರಿಗೆ ನಿಮ್ಮ ಜಾತೀಯತೆಯ ಮಸಿ ಬಳಿದು, ಕಾಲು ಕೆರೆದುಕೊಂಡು ಜಗಳಕ್ಕೆ ಬಂದದ್ದು ಯಾರು?
      ನೀವಂದದ್ದನ್ನು ಒಮ್ಮೆ ಓದಿಕೊಳ್ಳಿ ಅಥವಾ ನಿಮ್ಮ ದರ್ಗಾ ಸಾಹೇಬರಿಗೆ ಓದಿ ಅರ್ಥ ತಿಳಿಸಲು ಹೇಳಿ.
      ಆ ನಂತರ ನಾನು ನಿಮಗೆ ಹೇಳಿದ್ದು ಸರಿಯಾಗಿದೆ ಎನ್ನುವುದು ಮನವರಿಕೆಯಾಗುತ್ತದೆ.

      ದೀಪಾವಳಿ, ದಸರಾದಂತಹ ಹಬ್ಬದಲ್ಲೂ ಜಾತಿ ನೋಡುವ ನಿಮ್ಮಂತಹವರಿಗೆ ಬೇರೆ ಭಾಷೆ ಅರ್ಥವಾಗದಿದ್ದರೆ……!

      ಉತ್ತರ
      • Nagshetty Shetkar
        ಆಕ್ಟೋ 24 2014

        “ಭಾರತೀಯರೆಲ್ಲರಿಗೂ ದೀಪಾವಳಿ ಬಹಳ ಸಂಭ್ರಮದ ಹಬ್ಬ.”

        ದೀಪಾವಳಿಯು ಒಂದು ವೈದಿಕ ಹಬ್ಬ. ಬಲಿ ಪಾಡ್ಯಮಿಯು ಬ್ರಾಹ್ಮಣ್ಯದ ವಿಜಯದ ಸಂಕೇತ ರೂಪದ ಆಚರಣೆ ಎಂಬುದು ಜಗದ್ವಿದಿತ. ವೈದಿಕರಿಗೆ ತಾವು ಮಾತ್ರ ಭಾರತೀಯರು ಮಿಕ್ಕವರೆಲ್ಲ ಆಕ್ರಮಣಕಾರರು ಅಥವಾ ದಸ್ಯುಗಳು ಎಂಬ ಭಾವನೆ ಇದೆ. ಆದುದರಿಂದ ವೈದಿಕ ಹಬ್ಬವಾದ ದೀಪಾವಳಿಯನ್ನು ಭಾರತೀಯರೆಲ್ಲರ ಹಬ್ಬ ಎಂದು ಜನರಲೈಸ್ ಮಾಡುತ್ತಾರೆ.

        ಉತ್ತರ
        • valavi
          ಆಕ್ಟೋ 26 2014

          [[ಬಲಿ ಪಾಡ್ಯಮಿಯು ಬ್ರಾಹ್ಮಣ್ಯದ ವಿಜಯದ ಸಂಕೇತ ರೂಪದ ಆಚರಣೆ ಎಂಬುದು ಜಗದ್ವಿದಿತ]] ಶೆಟ್ಕರ್ ಅವರೆ ಬಲಿ ಪಾಡ್ಯ ಅದು ಹೇಗೆ ಬ್ರಾಹ್ಮಣರ ವಿಜಯದ ಹಬ್ಬವಾಗುತ್ತದೆ ವಿವರಿಸುತ್ತೀರಾ? ಏಕೆಂದರೆ ಬಲಿ ಒಬ್ಬ ಬ್ರಾಹ್ಮಣ. ಹೇಗೆಂದರೆ ಕಶ್ಯಪ ಬ್ರಹ್ಮನ ಮಗ ಹಿರಣ್ಯಕಶಿಪು. ಅವನ ಮಗ ಪ್ರಲ್ಹಾದ ಅವನ ಮಗ ವಿರೋಚನ. ಅವನ ಮಗ ಬಲಿ. ಅಂದ ಮೇಲೆ ಬಲಿ ಬ್ರಾಹ್ಮಣನಲ್ಲವೆ? ಅಂದ ಮೇಲೆ ಬ್ರಾಹ್ಮಣನೊಬ್ಬನನ್ನು ಪಾತಾಳಕ್ಕೆ ಮೆಟ್ಟಿದರೆ ಅದು ಬ್ರಾಹ್ಮಣ್ಯದ ವಿಜಯದ ಹಬ್ಬ ಹೇಗೆ ? ಎಲ್ಲರಿಗೂ ದೀಪಾವಳಿ ಆಚರಿಸಲೇ ಬೇಕೆಂದು ವೈದಿಕರು ಎಲ್ಲಿ ಹೇಳಿ ಕೊಟ್ಟಿದ್ದಾರೆ? ಉಳಿದವರು ಆಚರಣೆ ನಿಲ್ಲಿಸಿ ತಮ್ಮದೇ ಆದ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಿದರೆ ವೈದಿಕರು ಅಂಥವರ ವಿರುದ್ಧ ಫತ್ವಾ ಹೊರಡಿಸುತ್ತಾರಾ? ಅತಥವಾ ಅಂಥವರ ತಲೆ ಕೈ ಕಾಲು ಕಡಿಯಲು ಹಣವನ್ನು ಬಿಡ್ ಇಡುತ್ತಾರಾ? ಹಾಗೆಂದಾದರೂ ಎಲ್ಲಾದರೂ ನಡೆದಿದೆಯೇ? ನಾನು ಕೆಳಗೆ ಎತ್ತಿದ ಪ್ರಶ್ನೆಗೆ ನೀವು ಉತ್ತರಿಸಿಲ್ಲ. ಕೇವಲ ನುಣುಚಿಕೊಂಡಿದ್ದೀರಿ. ಹಾಗೇ ನಿಮಗೊಂದು ಮುಖ್ಯವಾದ ಪ್ರಶ್ನೆ ಏನಂದರೆ ಇಡೀ ಭಾರತೀಯರೆಲ್ಲಾ ಆಚರಿಸುವ ವೈದಿಕೇತರ ಹಬ್ಬವಾವುದು ತಿಳಿಸುವಿರಾ? ದಯವಿಟ್ಟು ನುಣುಚಿಕೊಳ್ಳದೇ ದರ್ಗಾ ಸರ್ ತರದೇ ವಚನ, ಲಿಂಗಾಯತಗಳನ್ನು ಹೇಳಿ ಹಾದಿ ತಪ್ಪಿಸದೇ ಚರ್ಚೆ ಹಳ್ಳ ಹಿಡಿಸದೇ ಉತ್ತರಿಸುವಿರಾ? ಪ್ಲೀಜ್.

          ಉತ್ತರ
          • Nagshetty Shetkar
            ಆಕ್ಟೋ 26 2014

            ವಲವಿ ಅವರೇ, ದಲಿತರು ಬಲಿ ದಮನ ಮಿಥ್ ಅನ್ನು ನೋಡುವ ರೀತಿ ನಿಮಗೆ ತಿಳಿದಿಲ್ಲ (ಎಷ್ಟಾದರೂ ನೀವು ವೈದಿಕರು!). ನೋಡಿ:

            _https://www.facebook.com/DalitCameraThroughUnTouchableEyes/posts/426706277388299
            “The myth of Bali strikes a chord with the marginalised of Kerala, who rereads Bali as a Dalit who is subjugated and dispossessed of his land like them. If Mahatma Jotiba Phule used the term Dalit to denote the suppressed and broken people of his land, he also reread Bali as the king of the indigenous people who were usurped of their land by the invading Aryans. Thus Vishnu, in the form of the Brahmin Vamana, came to represent the usurper of the land of the indigenous people. ”

            ನೋಡಿ:
            _http://www.youtube.com/watch?v=WDVKOlzSuc8
            _http://www.youtube.com/watch?v=hf2W_R0je4I
            _http://www.youtube.com/watch?v=FHqWmrscbU0

            ಉತ್ತರ
            • ಆಕ್ಟೋ 27 2014

              [[usurped of their land by the invading Aryans]]
              ಸ್ವಾಮೀ ಹೇತ್ಕರರೇ,
              ನೀವಿನ್ನೂ ಬ್ರಿಟಿಷರು ತಮ್ಮ ಸ್ವಾರ್ಥಕ್ಕಾಗಿ ಬರೆಸಿದ ಗೊಡ್ಡು ಕತೆಗಳನ್ನೇ ‘ಇತಿಹಾಸ’ ಎಂದು ಗಟ್ಟಿಯಾಗಿ ನಂಬಿಕೊಂಡು ಉರು ಹೊಡೆಯುತ್ತಿರುವಂತಿದೆ.
              ‘ಆರ್ಯ’ ಎನ್ನುವುದು ಜನಾಂಗವಾಚಕವಲ್ಲ ಎನ್ನುವುದು ಸಾಕ್ಷಿ ಆಧಾರಗಳ ಸಹಿತ ರುಜುವಾತಾಗಿದೆ.
              ಹೀಗಾಗಿ, ‘ಆರ್ಯ ಆಕ್ರಮಣ’ ಎನ್ನುವುದೇ ಒಂದು ಸುಳ್ಳು ಕತೆ.
              ಇನ್ನು, ಆ ಕತೆಯನ್ನೇ ನಿಜವೆಂದು ನಂಬಿ ಕಟ್ಟಿರುವ ಅಂತೆ-ಕಂತೆಗಳೆಲ್ಲವೂ ಮರಳ ಮೇಲೆ ಕಟ್ಟಿರುವ ಮರಳ ಮೆನೆಯಂತೆ – ಸತ್ಯದ ಅಲೆಯಲ್ಲಿ ಅವೆಲ್ಲವೂ ಕೊಚ್ಚಿ ಹೋಗಿವೆ.
              ಆರ್ಯರ ಆಕ್ರಮಣವೇ ಇಲ್ಲವೆಂದ ಮೇಲೆ, ದ್ರಾವಿಡ ಎನ್ನುವುದೂ ಜನಾಂಗವಲ್ಲ ಮತ್ತು ಅವರನ್ನು ‘ಇಲ್ಲದ’ ಆರ್ಯರು ತುಳಿಯಲು ಸಾಧ್ಯವಿಲ್ಲ…….!
              ನಿಮ್ಮ ದರ್ಗಾ ಅವರಿಗೆ ಹೇಳಿ ಹೊಸ ಕತೆ ಬರೆಸಿಕೊಂಡು ಬನ್ನಿ.

              Youtube ಕೊಂಡಿಗಳನ್ನು ಕೊಟ್ಟು ಬಿಟ್ಟರೆ ನೀವು ಹೇಳಿದ್ದೆಲ್ಲ ನಿಜವೆಂದು ನಂಬಿಬಿಡುತ್ತಾರೆಂಬ ಭ್ರಮೆ ಬೇರೆ ನಿಮಗೆ.
              ಸ್ವಾಮಿ ಹೇತ್ಕರರೇ, ಇಷ್ಟು ದಿನ ನಿಮ್ಮ ಮಾರ್ಕ್ಸಿಸ್ಟರು ಕಾಂಗ್ರೆಸ್ಸಿಗರ (ನೆಹರು ಮತ್ತವರ ಸಂತಾನಗಳು) ಜೊತೆ ಸೇರಿ ಮನಸ್ಸಿಗೆ ತೋಚಿದಂತೆ ಮತ್ತು ತಮ್ಮ ಸ್ವಾರ್ಥಕ್ಕೆ ಅನುಕೂಲವಾಗುವಂತೆ ಇತಿಹಾಸ ಬರೆಸಿಕೊಂಡಿದ್ದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಇನ್ಮುಂದೆ ನಿಮ್ಮ ಆಟ ನಡೆಯುವುದಿಲ್ಲ. ನೀವು ಇತಿಹಾಸದಲ್ಲಿ ತುರುಕಿರುವ ಅಂತೆ-ಕಂತೆಗಳನ್ನೆಲ್ಲಾ ತೊಳೆದು ಹಾಕಿ, ಇತಿ-ಹ-ಅಸ ಎನ್ನುವ ಹೆಸರಿಗೆ ತಕ್ಕಂತೆ ಸತ್ಯವಾದದ್ದು ಮಾತ್ರ ಇತಿಹಾಸವಾಗಿ ಉಳಿಯುತ್ತದೆ.
              ಮಾರ್ಕ್ಸಿಸ್ಟರು ಬೇಕಾದರೆ ನಿಮ್ಮ ಕಟ್ಟು ಕತೆಗಳನ್ನು ನಿಮ್ಮ ರಷ್ಯಾದಲ್ಲೋ, ಚೀನಾದಲ್ಲೋ ಮುಂದುವರೆಸಿಕೊಳ್ಳಬಹುದು (ಅಲ್ಲಿನ ಜನ ಬಿಟ್ಟರೆ ;))!

              ಉತ್ತರ
              • Nagshetty Shetkar
                ಆಕ್ಟೋ 28 2014

                “ಇನ್ಮುಂದೆ ನಿಮ್ಮ ಆಟ ನಡೆಯುವುದಿಲ್ಲ.”

                ಆಚಾರ್ಯ ಅನಂತಮೂರ್ತಿಯವರು ನಮೋ ಆಡಳಿತದ ಭಾರತದಲ್ಲಿ ತಾನು ಇರಬಯಸುವುದಿಲ್ಲ ಎಂದದ್ದು ಇದೇ ಕಾರಣಕ್ಕೆ. ಅಧಿಕಾರಕ್ಕೆ ಬಂದು ಇನ್ನೂ ಆರು ತಿಂಗಳಾಗಿಲ್ಲ, ಆಗಲೇ ನಮೋ ಸೈನಿಕರು ಬೆದರಿಕೆ ನೀಡುತ್ತಿದ್ದಾರೆ. ನೆಹರೂ ಪ್ರಣೀತ ಪ್ರಜಾಸತ್ತಾತ್ಮಕ ವ್ಯವಸ್ಥೆಯ ತಳಪಾಯಕ್ಕೆ ಆಘಾತ ನೀಡುವ ಬೆಳವಣಿಗೆ ಇದು.

                ಉತ್ತರ
  5. M A Sriranga
    ಆಕ್ಟೋ 23 2014

    ಈ ಹಿಂದೆ ಬರಗೂರು ರಾಮಚಂದ್ರಪ್ಪನವರು ‘ವಿಜಯದಶಮಿ’ಯ ಆಚರಣೆಯ ನಿರರ್ಥಕತೆಯನ್ನು ಪುರೋಹಿತಶಾಹಿ,ವೈದಿಕಶಾಹಿ ವೇದಿಕೆಯಿಂದಲೇ ಹೇಳಿದ್ದರೂ ಸಹ ಜನಗಳು ಪ್ರತಿವರ್ಷ ಅದನ್ನು ಆಚರಿಸುತ್ತಲೇ ಇದ್ದಾರೆ. ಈ ಸಲವೂ ದಸರಾ ಹಬ್ಬವನ್ನು ಮೈಸೂರಿನಲ್ಲಿ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲೇ ಇನ್ನೊಬ್ಬ ವಿಚಾರವಾದಿ,ಪ್ರಗತಿಪರ ಚಿಂತಕ,ಬುದ್ಧಿಜೀವಿ ಗಿರೀಶ್ ಕಾರ್ನಾಡರು ಉದ್ಘಾಟಿಸಿದರು. ಮುಂದಿನ ವರ್ಷ ಇನ್ನೊಬ್ಬರು ವಿಚಾರಾವಾದಿ,ಚಿಂತಕರು …. ಹೀಗೆ ಈ ಪಟ್ಟಿ ಮುಂದುವರಿಯುತ್ತಾ ಹೋಗುತ್ತದೆ. ಈಗ ‘ನುಡಿ ಸಿರಿ’ಯಲ್ಲಿ ಸಿದ್ದಲಿಂಗಯ್ಯನವರು ದೀಪಾವಳಿ,ಮುಂದೆ ಬರಲಿರುವ ಸಂಕ್ರಾತಿ,ಉಗಾದಿ …….. ಇವೆಲ್ಲದರ ಆಚರಣೆಯ ನಿರರ್ಥಕತೆಯನ್ನು ಬಣ್ಣಿಸಬಹುದು. ಆದರೂ ಜನಗಳು ಆ ಹಬ್ಬವನ್ನು ಆಚರಿಸುವುದನ್ನು ಬಿಡುವುದಿಲ್ಲವಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರು ಆ ವೇದಿಕೆಯಲ್ಲಿ ಭಾಷಣ ಮಾಡಿದಾಕ್ಷಣ ಏನೋ ಆಗಿ ಬಿಡುತ್ತದೆ ಎಂಬ ಮಾತುಗಳೇ ಹಾಸ್ಯಾಸ್ಪದವಾಗಬುದು. ಈ ಹಿಂದೆ ಬರಗೂರು ಮತ್ತು ಸಿದ್ದಲಿಂಗಯ್ಯನವರು ಕರ್ನಾಟಕ ಸರ್ಕಾರದ ಕೃಪಾ ಪೋಷಿತ ನಾಟಕ ಮಂಡಳಿಯ ಸದಸ್ಯರಾಗಿದ್ದವರು. ಅಲ್ಲಿ ಮಾತಾಡಲು ಸಾಕಷ್ಟು ಅವಕಾಶಗಳು,ವೇದಿಕೆಗಳೂ ಇದ್ದವು. ಆದರೂ ಜನಗಳು ಬದಲಾಗಲೇ ಇಲ್ಲ!!!. ಇದು ನಿರಂತರ ಸತ್ಯ. ಯಾವ ವೇದಿಕೆ ಎಂಬುದಲ್ಲ. —–ಎಂ ಎ ಶ್ರೀರಂಗ ಬೆಂಗಳೂರು

    ಉತ್ತರ
    • Nagshetty Shetkar
      ಆಕ್ಟೋ 24 2014

      ವೈದಿಕತೆಯ ಕಬಂಧ ಬಾಹುಗಳಿಂದ ಬಿಡುಗಡೆ ಪಡೆದು ಜನರು ಬದಲಾಗಲು ಅವರಿಗೆ ಅವಕಾಶ ನೀಡಬೇಕು. ಸರಕಾರವು ಮೂಢ ನಂಬಿಕೆ ನಿಷೇಧ ಕಾನೂನನ್ನು ಪಾಸು ಮಾಡಿ ಮುಂದಿನ ಐದು ವರ್ಷಗಳ ಕಾಲ ದಸರಾ ಹಬ್ಬವನ್ನು ಮೈಸೂರಿನಲ್ಲಿ ನಿಷೇಧಿಸಲಿ. ಮತ್ತು ದರ್ಗಾ ಸರ್ ಅವರ ನೇತೃತ್ವದಲ್ಲಿ ವಚನ ವಿಜ್ಞಾನ ಹಬ್ಬವನ್ನು ದಸರಾ ಸಮಯದಲ್ಲಿ ಪ್ರತಿ ವರ್ಷವೂ ಆಯೋಜಿಸಲಿ. ಆಗ ಜನ ವೈದಿಕ ಹಬ್ಬಗಳಿಂದ ದೂರವಾಗುತ್ತಾರೆ ಹಾಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುತ್ತಾರೆ.

      ಉತ್ತರ
      • M A Sriranga
        ಆಕ್ಟೋ 24 2014

        ಶೆಟ್ಕರ್ ಅವರೇ— ಎಲ್ಲಾ ಸಮಿತಿಗಳಿಗೆ, ವೈಚಾರಿಕ-ವಚನ-ವೈಜ್ಞಾನಿಕ ಸಮಿತಿಗೆ,ಭಾಷಣಕ್ಕೆ ದರ್ಗಾ ಸರ್ ಅವರೇ ಏಕೆ ಬೇಕು? ಕರ್ನಾಟಕದಲ್ಲಿ ವಚನ ಸಾಹಿತ್ಯದ ಬಗ್ಗೆ ಮಾತಾಡಲು ಬೇರೆ ಯಾರೂ ಇಲ್ಲವೇ? ಕಲ್ಬುರ್ಗಿ, ಎಚ್ ಎಸ್ ಶಿವಪ್ರಕಾಶ್, ಬಂಜಗೆರೆ ಜಯಪ್ರಕಾಶ್ ಇವರೆಲ್ಲಾ ವಚನಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿಲ್ಲವೇ?

        ಉತ್ತರ
        • Nagshetty Shetkar
          ಆಕ್ಟೋ 24 2014

          ಸೂಫಿ + ಶರಣ + ಸಮಾಜವಾದಿ = ದರ್ಗಾ ಸರ್.

          ಉತ್ತರ
  6. valavi
    ಆಕ್ಟೋ 24 2014

    ಮಾನ್ಯ ಪ್ರಸಾದರೆ ಬಿಡುವಿಲ್ಲದ ಹಬ್ಬಗಳ ಸಾಲಿನಲ್ಲಿ ಮನೆಯ ಕೆಲಸಗಳನ್ನು ಮಾಡಿ ಸುಸ್ತೋಸುಸ್ತಾದ ನನ್ನಂಥ ಗ್ರಹಿಣಿ ನಿಮ್ಮ ವಿಚಾರ ಪೂರಿತ ಹಾಗೂ ವಿಶೇಷವಾಗಿ ಹಾಸ್ಯಮಯ ಶೈಲಿಯಲ್ಲಿ ಬರೆದ ಸುಂದರ ಲೇಖನ ಓದಿ ಒಂದರಗಳಿಗೆ ನನ್ನ ಸುಸ್ತನ್ನು ಮರೆತು ಹೆ ಹೆ ಹೆ ಎಂದು ನಗಲು ಸಹಾಯ ಮಾಡಿದ್ದಕ್ಕೆ ಅಭಿನಂದನೆಗಳು ಸರ್. ಮುಂದೆಯೂ ನಿಮ್ಮಿಂದ ನಗೆಲೇಖನಗಳು ಬರುತ್ತಿರಲೆಂದು ಆಶಿಸುವೆ.

    ಉತ್ತರ
    • Nagshetty Shetkar
      ಆಕ್ಟೋ 24 2014

      ನಿಮ್ಮಂತಹ ಸುಶಿಕ್ಷಿತ ಉದ್ಯೋಗನಿರತ ಸಬಲೀಕೃತ ಮಹಿಳೆ ಕೂಡ ವೈದಿಕ ಹಬ್ಬಗಳ ದಿನಗಳಂದು ‘ಗ್ರಹಿಣಿ’ ರೂಪದಲ್ಲಿ ಮನೆಯ ಕೆಲಸಗಳನ್ನು ಮಾಡಿ ಮಾಡಿ ಸುಸ್ತೋಸುಸ್ತಾಗುವುದು ಬೇಸರದ ಸಂಗತಿ. ಸ್ತ್ರೀ ಶೋಷಣೆಯೇ ವೈದಿಕ ಹಬ್ಬಗಳ ಮೂಲ ಉದ್ದೇಶವಿರಬಹುದೇ?

      ಉತ್ತರ
      • ಆಕ್ಟೋ 24 2014

        ಸ್ವಾಮಿ ಹೇತ್ಕರರೇ,
        ನಿಮ್ಮ ದರ್ಗಾ ಸರ್ ಅವರಿಗೆ ಹೇಳಿ, ‘ಬುರಖಾ’ದೊಳಗೆ ಬಂಧಿಯಾಗಿರುವ ಮುಸಲ್ಮಾನ ಮಹಿಳೆಯರಿಗೆ ಮುಕ್ತಿ ಕೊಡಿಸಿ, ಅವರೂ ಉಳಿದ ಮಹಿಳೆಯರಂತೆ ನಾಗರೀಕರಾಗಿ ಮುಖ ತೋರಿಸಿಕೊಂಡು ಮಾನವಂತರಾಗಿ ಬದುಕುವಂತೆ ಮಾಡುವುದು ಹೇಗೆಂದು ಮೊದಲು ಯೋಚಿಸಿ.
        ಮುಸಲ್ಮಾನ ಹೆಣ್ಣು ಮಕ್ಕಳನ್ನು ‘ತಲಾಕ್’ನಂತಹ ಮಧ್ಯಕಾಲೀನ ಅನಾಗರೀಕ ಹೇಯ ಶರಿಯಾ ಕಾನೂನಿನಿಂದ ಪಾರು ಮಾಡುವುದು ಹೇಗೆಂಬ ಕುರಿತಾಗಿ ನಿಮ್ಮ ದರ್ಗಾ ಸರ್ ಏನು ಹೇಳುತ್ತಾರೆ ಕೇಳಿ ನೋಡಿ.
        ಮುಸಲ್ಮಾನ ಮಕ್ಕಳನ್ನು ‘ಮದರಸಾ’ಗಳಿಂದ ಮುಕ್ತಿಗೊಳಿಸಿ, ಅವರಿಗೂ ನಾಗರಿಕ ಶಿಕ್ಷಣ ಸಿಗುವಂತೆ ಮಾಡಿ, ಅವರೂ ನಾಗರಿಕರಾಗಿ ಬದುಕುವಂತೆ ಮಾಡುವುದು ಹೇಗೆಂದು ಯೋಚಿಸಿ.

        ಉತ್ತರ
        • Nagshetty Shetkar
          ಆಕ್ಟೋ 24 2014

          ನಾನು ವಲವಿ ಅವರಿಗೆ ಪ್ರಶ್ನೆ ಕೇಳಿದರೆ ನೀವೇಕೆ ತೊಣಚಿ ಮುಟ್ಟಿದವರ ಹಾಗೆ ಕುಣಿಯುತ್ತಿದ್ದೀರಿ?!! ದರ್ಗಾ ಸರ್ ಅವರನ್ನೇಕೆ ಬಲವಂತದಿಂದ ಈ ಚರ್ಚೆಗೆ ಕರೆದು ತರುತ್ತಿದ್ದೀರಿ? ದರ್ಗಾ ಸರ್ ಅವರೆಲ್ಲಿ ಬೂರ್ಖ ಧರಿಸುವುದನ್ನು ಸಮರ್ಥಿಸಿಕೊಂಡಿದ್ದಾರೆ? ದರ್ಗಾ ಸರ್ ಅವರಿಗೆ ಅಕ್ಕ ಮಹಾದೇವಿಯೇ ಆದರ್ಶ. ಆಕೆ ಬೂರ್ಖ ಧರಿಸಿದ್ದನ್ನು ನೀವು ಕೇಳಿದ್ದೀರಾ??

          ಉತ್ತರ
          • ಆಕ್ಟೋ 24 2014

            ರಂಜಾನ್ ದರ್ಗಾ ಅವರ ಹೆಸರನ್ನು ಈ ಚರ್ಚೆಯಲ್ಲಿ ಮೊದಲು ಪ್ರಸ್ತಾಪಿಸಿದ್ದು ಯಾರೆಂದು ಓದಿ ನೋಡಿ. ಆ ನಂತರ, ಅವರ ಹೆಸರನ್ನು ನಾನೇಕೆ ಪ್ರಸ್ತಾಪಿಸಿದ್ದೇನೆ ಎನ್ನುವುದು ತಿಳಿಯುತ್ತದೆ.

            ಹಿಂದುಗಳಲ್ಲಿರುವ ಹುಳುಕುಗಳನ್ನು ಸರಿಪಡಿಸಲು ಅನೇಕರು ಪ್ರಯತ್ನಿಸಿದ್ದಾರೆ, ಪ್ರಯತ್ನಿಸುತ್ತಲೂ ಇದ್ದಾರೆ. ಹಿಂದುಗಳೇ ಹಿಂದು ಸಮಾಜವನ್ನು ಸರಿಪಡಿಸಿಕೊಳ್ಳುತ್ತಾರೆ. ಹಿಂದು ಸಮಾಜವು ಸುಧಾರಣೆಗೆ ತೆರೆದುಕೊಂಡಿದೆ. ನಿಮಗೆ ಅದರ ಉಸಾಬರಿ ಬೇಕಿಲ್ಲ.

            ನೀವು ಮತ್ತು ನಿಮ್ಮ ದರ್ಗಾ ಅವರು ‘ನಿಮ್ಮ’ ಮುಸಲ್ಮಾನ ಸಮಾಜದ ಸುಧಾರಣೆ ಮಾಡಿಕೊಳ್ಳಿ ಮತ್ತು ನಂತರವೇ ಹಿಂದು ಸಮಾಜದ ಕುರಿತಾಗಿ ಮಾತನಾಡಿ.

            ತಮ್ಮ ಸಮಾಜದ ಕುರಿತಾಗಿ ಚಿಂತಿಸದ, ತಮ್ಮ ಸಮಾಜವನ್ನು ಸುಧಾರಿಸಿದ, ತಮ್ಮ ಸಮಾಜದ ‘ಬುರಖಾಧಾರಿ ಮಹಿಳೆಯರ’, ‘ಮದರಸಾಗಳಲ್ಲಿ ಸಿಲುಕಿಕಂಡಿರುವ ಮಕ್ಕಳ’ ಕುರಿತಾಗಿ ಯೋಚಿಸದ ದರ್ಗಾ ಅವರಿಗೆ ಸಾಮಾಜಿಕ ಕಳಕಳಿ ಇಲ್ಲವೆಂದೇ ಹೇಳಬೇಕು!

            ಉತ್ತರ
            • Nagshetty Shetkar
              ಆಕ್ಟೋ 24 2014

              ದರ್ಗಾ ಸರ್ ಅವರು ನಮ್ಮ ನಡುವಿನ ಶರಣ, ಕ್ರಾಂತಿಕಾರಿ, ಕಾಯಕ ಯೋಗಿ. ಅವರ ಬಗ್ಗೆ ತುಚ್ಚವಾಗಿ ಮಾತನಾಡಿ ನಿಮ್ಮ ಬಗ್ಗೆ ಇರುವ ಅಲ್ಪ ಸ್ವಲ್ಪ ಗೌರವವನ್ನೂ ಕಳೆದುಕೊಳ್ಳಬೇಡಿ.

              ಮುಸಲ್ಮಾನ ಸಮುದಾಯದಲ್ಲಿ ಎಲ್ಲಾ ಸರಿ ಇದೆ ಅಂತ ದರ್ಗಾ ಸರ್ ಎಲ್ಲಿಯೂ ಹೇಳಿಲ್ಲ. ಭಾರತದ ಮುಸಲ್ಮಾನ ಸಮುದಾಯವು ಶತ ಶತಮಾನಗಳಿಂದ ವಂಚಿತ ಸಮುದಾಯವಾಗಿದೆ ಎಂಬುದನ್ನು ನೀವು ಮರೆತಿದ್ದೀರಿ. ವಂಚಿತ ಸಮುದಾಯಗಳು ಸುಧಾರಣೆಗೊಳ್ಳಲು ಅವುಗಳಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸಕೊಡತಕ್ಕದ್ದು. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮುಸಲ್ಮಾನರಿಗೆ ಕನಿಷ್ಠ ೨೦% ಮೀಸಲಾತಿ ಕೊಟ್ಟರೆ ಮದರಸ ಶಿಕ್ಷಣವನ್ನು ಬಿಟ್ಟು ಆಧುನಿಕ ಶಿಕ್ಷಣದತ್ತ ಮುಸಲ್ಮಾನರು ದಾಪುಗಾಲು ಇಡುತ್ತಾರೆ.

              ಉತ್ತರ
              • ವಿಜಯ್ ಪೈ
                ಆಕ್ಟೋ 24 2014

                ಶತಮಾನದ ಪುಂಗಿದಾಸ!! :p

                ಉತ್ತರ
                • Nagshetty Shetkar
                  ಆಕ್ಟೋ 24 2014

                  ತಳವರ್ಗದವರನ್ನು ನಾನ ವಿಧದಲ್ಲಿ ಹೀಯಾಳಿಸುವುದು ವೈದಿಕರ ಲಕ್ಷಣ.

                  ಉತ್ತರ
              • ಆಕ್ಟೋ 24 2014

                ‘ನಿಮ್ಮ’ ದರ್ಗಾ ಸರ್ ‘ನಿಮಗೆ’ ಮಹಾಪುರುಷರಿರಬಹುದು, ‘ನಮಗಲ್ಲ’.
                ಅವರನ್ನು ತಲೆಯ ಮೇಲೇ ಎತ್ತಿಕೊಂಡು ಓಡಾಡಿ, ಮೆರವಣಿಗೆ ಮಾಡು ಕುಣಿದಾಡಿ ಅಥವಾ ನಿಮಗೆ ಬೇಕಾದ ‘ಸನ್ಮಾನ’ ಮಾಡಿಕೊಳ್ಳಿ.
                ಗೌರವ ಎನ್ನುವುದು ಭಿಕ್ಷೆ ಬೇಡಿ ಬರುವಂತಹುದಲ್ಲ, ಅದನ್ನು ಸಂಪಾದಿಸಬೇಕು.
                ನಿಮ್ಮ ದರ್ಗಾ ಸರ್^ಗೆ ಜನ ಗೌರವ ಕೊಡದಿದ್ದರೆ, ಜನರನ್ನು ಬೇಡಿಕೊಂಡು ಅಥವಾ ಹೆದರಿಸಿ ಸಂಪಾದಿಸಬಹುದೆಂದು ನೀವು ಭಾವಿಸಿದ್ದರೆ ಅದು ನಿಮ್ಮ ಮೂರ್ಖತನ.

                [[ಮುಸಲ್ಮಾನ ಸಮುದಾಯದಲ್ಲಿ ಎಲ್ಲಾ ಸರಿ ಇದೆ ಅಂತ ದರ್ಗಾ ಸರ್ ಎಲ್ಲಿಯೂ ಹೇಳಿಲ್ಲ.]]
                ಹಾಗಿದ್ದ ಮೇಲೆ, ಅವರು ‘ತಮ್ಮ’ ಸಮಾಜದ ಸುಧಾರಣೆಗೆ ಏನಾದರೂ ಮಾಡಬೇಕಾದ್ದು ಅವರ ಕರ್ತವ್ಯವಲ್ಲವೇ?
                ಅದನ್ನು ಅವರು ಮಾಡದಿದ್ದರೆ ಕರ್ತವ್ಯದಿಂದ ವಿಮುಖರಾದಂತೆ ಅಲ್ಲವೇ!?
                ಮೊದಲು ತನ್ನ ಮನೆ ಸರಿ ಮಾಡಿಕೊಂಡ ನಂತರ ಬೀದಿಯ, ಊರಿನ, ದೇಶದ ಉಸಾಬರಿ.
                ನಿಮ್ಮ ದರ್ಗಾ ಸರ್ ಅವರು ‘ತಮ್ಮ’ ಮುಸಲ್ಮಾನ ಸಮಾಜದ ಉದ್ದಾರ ಮಾಡದಿದ್ದರೆ, ಅವರಿಗೆ ಉಳಿದವರು ಯಾಕಾದರೂ ಬೆಲೆ ಕೊಡಬೇಕು?

                [[ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮುಸಲ್ಮಾನರಿಗೆ ಕನಿಷ್ಠ ೨೦% ಮೀಸಲಾತಿ ಕೊಟ್ಟರೆ…..]]
                ಮೀಸಲಾತಿ ಕೊಡುವುದರಿಂದ ಜನ ಮುಂದುವರೆಯಲು ಸಾಧ್ಯವಿಲ್ಲ ಎನ್ನುವುದು ಕಳೆದ 75 ವರ್ಷಗಳಲ್ಲಿ ನಿರೂಪಣೆಯಾಗಿದೆ.
                ‘ಸುಧಾರಣೆ’ ಎನ್ನುವುದು ಸಮಾಜದ ಒಳಗಿನಿಂದ ಬರಬೇಕು ಮತ್ತು ಸಮಾಜವು ಸುಧಾರಣೆಗೆ ತನ್ನನ್ನು ತಾನು ತೆರೆದುಕೊಳ್ಳಬೇಕು.
                ಮುಸಲ್ಮಾನ ಸಮಾಜದ ಸುಧಾರಣೆಗೆ, ಅದರ ಸಮಾಜಕ್ಕೆ ಸೇರಿದ ದರ್ಗಾ ಸರ್ ಅಂತಹವರು ಕಾರ್ಯಕ್ರಮ ಹಾಕಿಕೊಳ್ಳಬೇಕು.
                ಸರಕಾರ ಮೀಸಲಾತಿ ಕೊಡಲಿ ಎಂದು ಕಾದು ಕುಳಿತರೆ ಏನೂ ಸಾಧನೆಯಾಗುವುದಿಲ್ಲ, ಮೀಸಲಾತಿಯಿಂದ ಏನೂ ಉಪಯೋಗಾವಾಗುವುದಿಲ್ಲ.

                ಉತ್ತರ
                • Nagshetty Shetkar
                  ಆಕ್ಟೋ 24 2014

                  ಮೀಸಲಾತಿ ಅಂದರೆ ಹೇಗೆ ವೈದಿಕವೀರರ ಬೆನ್ನ ಹುರಿಯಲ್ಲಿ ನಡುಕ ಶುರುವಾಗುತ್ತದೆ ನೋಡಿ! ಹೇ ಹೇ!

                  ಉತ್ತರ
                  • SOMASHEKAR
                    ಆಗಸ್ಟ್ 24 2015

                    Family planning ಮಾಡಿ,
                    ಬಡತನ ತನ್ನಷ್ಟಕ್ಕೆ ತಾನು ದೂರವಾಗುತ್ತೆ.
                    Government hospital ಗೆ ಹೋದ್ರೆ ಮುಸ್ಲಿಮರೆ ತುಂಬಿರ್ತಾರೆ,
                    ನಿಮ್ಮನ್ನ ಅಲ್ಪಸಂಖ್ಯಾತರು ಅಂಥಾ ಹೇಳೋ ಮುಟ್ಟಾಳ ಯಾರ್ರೀ?
                    ಸಿಟಿ ಮಾರ್ಕೆಟ್, ನಗರ ಪ್ರದೇಶಗಳಲ್ಲೆಲ್ಲಾ ನಿಮ್ಮದೇ ಹವಾ ಹೆಚ್ಚಾಗಿದೆ.
                    ಯಾರು ನಿಮ್ಮನ್ನ ಶೋಷಿತರು ಎಂದು ಹೇಳುತ್ತಿರುವವರು?
                    ದಿನಾ ಆರೋತ್ತು, ಬೆಳ್ ಬೆಳಿಗ್ಗೆ ಅಲ್ಲಾ ಅಲ್ಲಾ ಅನ್ನೋ ಕರ್ಕಶ ಧ್ವನಿಯಲ್ಲಿ ಕಿರುಚಾಡುತ್ತಿದ್ದರೆ
                    ಯಾರಿಗೆ ತಾನೇ ಸಿಟ್ಟು ಬರುವುದಿಲ್ಲ?
                    ಸಮಾಜದ ಸ್ವಾಸ್ತ್ಯನ್ನು ಹಾಳು ಮಾಡುತ್ತಿರುವ
                    ಈ ಮನುಕುಲ ವಿರೋಧಿ, ಜೀವ ವಿರೋಧಿ ಇಸ್ಲಾಂ ಧರ್ಮವನ್ನು ಬಿಟ್ಟು ಮನುಷ್ಯನಾಗಿ ಬಾಳಿ.

                    ಈ ಇಸ್ಲಾಂ ಧರ್ಮವು ಭಯೋತ್ಪಾದಕರ ವಿರುದ್ಧ ಎಂದಿಗೂ ಹೋರಾಡುವುದಿಲ್ಲ,
                    ಏಕೆಂದರೆ ಇಸ್ಲಾಂ ಧರ್ಮಕ್ಕಾಗಿ ಬದುಕುವುದೇ ಮುಕ್ತಿ ಪಡೆಯುವ ಏಕೈಕ ಮಾರ್ಗ ವೆಂದು ಕಟ್ಟುನಿಟ್ಟಾಗಿ ಬೋಧಿಸಲಾಗಿದೆ.
                    ಹಿಂದೂ ಧರ್ಮದ ನಾಶಕ್ಕಾಗಿಯೇ ಹುಟ್ಟಿರುವ ಧರ್ಮ ಇಸ್ಲಾಂ.
                    ಹಿಂದೂ ಧರ್ಮದಲ್ಲಿನ ಗೋಹತ್ಯೆ ನಿಷೇಧವನ್ನು ಒಪ್ಪಿಕೊಳ್ಳದ್ದರಿಂದ ಇಸ್ಲಾಂ ಧರ್ಮ ಹುಟ್ಟಿಕೊಂಡಿತು. ಗೋಮಾಂಸ ಭಕ್ಷಕರನ್ನು ಹಿಂದೂ ಸಮಾಜ ಸಂಪೂರ್ಣವಾಗಿ ತ್ಯಜಿಸಿದ್ದರಿಂದ, ಒಂದು ಬಾರಿ ಭಕ್ಷಿಸಿದ ಮೇಲೆ ಆ ಜನ್ಮವೇ
                    ವ್ಯರ್ಥವಾಯಿತು/ಕಲುಷಿತವಾಯಿತು /ಅಪವಿತ್ರವಾಯಿತು
                    ಎಂದು ಹೇಳಿ ಸಾಮಾಜಿಕ ಬಹಿಷ್ಕಾರ ಹಾಕಿದ ಪರಿಣಾಮ
                    ಆ ಗುಂಪು ಪ್ರತ್ಯೇಕ ಧರ್ಮವನ್ನು,
                    ಸಂಪ್ರದಾಯವನ್ನು/ಸಂಸ್ಕೃತಿಯನ್ನು/ಜನಾಂಗವನ್ನು/ಭಾಷೆಯನ್ನೂ/ಜೀವನ ಶೈಲಿಯನ್ನು
                    ರಚಿಸಿಕೊಂಡಿತು/ಬೆಳೆಸಿಕೊಂಡಿತು/ಪ್ರಚಾರ ಮಾಡಿತು.

                    ಹಿಂದೂವಾಗಲೀ, ಮುಸ್ಲಿಂ ಆಗಲೀ
                    ಧಾರ್ಮಿಕ ಆಚರಣೆಗಳನ್ನು ಬಿಟ್ಟು
                    ಮಾನವೀಯ ಗುಣಗಳನ್ನು ಅಳವಡಿಸಿಕೊಂಡು
                    ವೈಚಾರಿಕ/ವೈಜ್ಞಾನಿಕ/ನೈತಿಕ/ಸಾಂವಿಧಾನಿಕ
                    ಜೀವನ ನಡೆಸುವವರು ಅತ್ಯಂತ ಹೆಚ್ಚಿನ ಸುಖಿಗಳು ಎಂಬುದನ್ನು ಮನಗಾಣಿರಿ.

                    no HINDU & MUSLIMS
                    without U & I

                    be INDIAN
                    not RELIGION.

                    ಉತ್ತರ
                • Nagshetty Shetkar
                  ಆಕ್ಟೋ 24 2014

                  ದರ್ಗಾ ಸರ್ ಅವರು ಪುರುಷರೋ ಮಹಾಪುರುಷರೋ ಎಂಬುದರ ನಿಷ್ಕರ್ಷವನ್ನು ಚರಿತ್ರೆ ಮಾಡುತ್ತದೆ ನಿಸ್ಸಂಶಯವಾಗಿ. ನಿಮಗೆ ಆ ಜವಾಬ್ದಾರಿಯನ್ನು ನಾವು ಕೊಟ್ಟಿಲ್ಲ.

                  ಉತ್ತರ
                  • Naani
                    ಆಕ್ಟೋ 25 2014

                    ಆತ್ಮರತಿ ಪ್ರಿಯ!!! ಅದೇನು ತನ್ನನ್ನೇ ಮಹಾಪುರುಷ … ಮಹಾಪುರುಷ … ಅಂತ ಬಡಾಯಿ ಕೊಚ್ಕೊಳ್ಳೋದೋ!

                    ಹೇಳೋದು ಲಿಂಗಾಯತ ಧರ್ಮದ ಉದ್ದಾರದ ಮಾತುಗಳು, ಆದರೆ ಮೀಸಲಾತಿ ಕೇಳೋದು ಮುಸ್ಲೀಮರಿಗೆ !!! ಇದರಲ್ಲೇ ಲಿಂಗಾಯತದ ಹೆಸರಲ್ಲಿ ತನ್ನ ಇಸ್ಲಾಂನ /ಮುಸ್ಲೀಮರಿಗೆ ಲಾಬ ಮಾಡಿಕೊಡುವ ದರ್ಗಾ ಮತ್ತು ಅವರ ಶಿಷ್ಯರ ಹಿಡನ್ ಅಜೆಂಡಾ!! 🙂 ಲಿಂಗಾಯತರು ಈ ಕಡೆ ಬಂದು ನೋಡ್ರಪ್ಪ!!! ಈ ಹೈಜಾಕ್ ಪ್ರವೀಣರ ಕರಾಮತ್ತನ್ನು!!

                    ಉತ್ತರ
                    • Nagshetty Shetkar
                      ಆಕ್ಟೋ 25 2014

                      ಮುಸಲ್ಮಾನರು ಉದ್ಧಾರವಾಗುವುದು ನಿಮಗೆ ಬೇಡವೇ?

                    • Naani
                      ಆಕ್ಟೋ 25 2014

                      ಲಿಂಗಾತರ ಕಥೆ ಹೈಜಾಕ್ ಮಾಡಕೊಂಡು ಅದರ ಮುಖವಾಡದ ಹಿನ್ನೆಲೆಯಲ್ಲಿ ನಿಮ್ಮ ಕುಲದವರ ಉದ್ದಾರದ ಉದ್ದೇಶ ಮಡಕ್ಕೊಂಡಿರೋದು ಕ್ರಿಮಿನಲ್ ಅಜೆಂಡಾ ಅಷ್ಟೆ! ಅದಕ್ಕೆ ಇಸ್ಲಾಂ/ ಮುಸ್ಲೀಮರ ಸೋಸಣೆಯ ಕಥೆ ಹೊಸೆದುಕೋ ಬಹುದಲ್ಲ. ಲಿಂಗಾಯತಧರ್ಮೋದ್ದಾರದ ನಾಟಕ ಯಾಕೆ? ಮಿ. ಅಸೋಕ್ ಕೆಟ್ಟ….. ಸ್ವಲ್ಲ ನಿಮ್ಮ ಸ್ನೇಹಿತರ ಇಸ್ಲಾಮಿಕ್ ಹಿಡನ್ ಅಜೆಂಡಾ ಇಲ್ಲಿ ಬಂದು ನೋಡಿ ನಿಮ್ಕ ಕುಲಬಾಂದವರನ್ನು ಇಂತವರಿಂದ ರಕ್ಷಿಸಿಕೊಳ್ಳಿ. ಇನ್ನಾದರೂ ಇಂತವರು ವಚನಶರಣರನ್ನು ಅರ್ಥೈಸುವ ಅಥಾರಿಟಿ ಎನ್ನುವ ಭ್ರಮೆಯಿಂದ ಹೊರಬನ್ನಿ! ! ದಿನದಿನಕ್ಕೆ ಈವಯ್ಯನ ಬಣ್ಣ ಬಯಲಾಗ್ತಿರೋದು ಬೋ ಸಂತೋಸ!

                    • Nagshetty Shetkar
                      ಆಕ್ಟೋ 25 2014

                      ಮುಸಲ್ಮಾನರು ಉದ್ಧಾರವಾಗಲು ಮೀಸಲಾತಿ ಅನಿವಾರ್ಯ ಅಂತ ಸಾಚಾರ್ ಕಮಿಟಿ ಹೇಳಿದೆ.

              • SOMASHEKAR
                ಆಗಸ್ಟ್ 24 2015

                ಟಿಪ್ಪು ಸುಲ್ತಾನನು ಹಿಂದೂಗಳ ಮೇಲೆ
                ನಡೆಸಿದ ಕಲ್ಪನಾತೀತ ಭೀಕರ ಅತ್ಯಾಚಾರಗಳು

                1. ಟಿಪ್ಪು ಸುಲ್ತಾನನು ದಕ್ಷಿಣ ಭಾರತದಲ್ಲಿನ ಮೈಸೂರು ರಾಜ್ಯದ ಅಧಿಕಾರ ಗಳಿಸಿದ ತಕ್ಷಣ ಮೂಲ ಹಿಂದೂ ರಾಜರ ಹೆಸರು-ಊರುಗಳನ್ನು ಅಳಿಸಿ ಹಾಕಿದನು. ಮೈಸೂರನ್ನು ಇಸ್ಲಾಮೀ ರಾಜ್ಯವೆಂದು ಘೋಷಿಸಿದನು.

                2. ಟಿಪ್ಪು ಸುಲ್ತಾನನು ದಕ್ಷಿಣಭಾರತದಲ್ಲಿ ೮ ಸಾವಿರಕ್ಕೂ ಹೆಚ್ಚು ಹಿಂದೂ ದೇವಸ್ಥಾನ ಗಳನ್ನು ಕೆಡವಿ ಆ ಸ್ಥಳಗಳಲ್ಲಿ ಮಸೀದಿಗಳನ್ನು ಕಟ್ಟಿದನು.

                3. ಕ್ರಿ.ಶ. 1934 ರಲ್ಲಿ ಪದ್ಮನಾಭ ಮೆನನ ಎಂಬ ಇತಿಹಾಸಕಾರರು ಹೇಳಿದಂತೆ ಟಿಪ್ಪು ರಾಜ್ಯದಲ್ಲಿ ಪ್ರಜೆಗಳ ಮುಂದೆ ಎರಡೇ ಪರ್ಯಾಯಗಳನ್ನು ಇಟ್ಟಿದ್ದನು. ಒಂದು ಕುರಾನ್ ಹಾಗೂ ಎರಡನೆಯದು ಖಡ್ಗ !

                4. ಟಿಪ್ಪು ಒಂದು ಲಕ್ಷ ಹಿಂದೂ ಸ್ತ್ರಿ-ಪುರುಷರನ್ನು ಬಲವಂತವಾಗಿ ಮತಾಂತರಿಸಿ ಮುಸಲ್ಮಾನರನ್ನಾಗಿಸಿದನು. ಟಿಪ್ಪುವಿನ ಈ ಅತ್ಯಾಚಾರವನ್ನು ವಿರೋಧಿಸುವ ಸಾಮರ್ಥ್ಯ ಇಲ್ಲದಿರುವುದರಿಂದ ಸಾವಿರಾರು ಹಿಂದೂ ಸ್ತ್ರೀ-ಪುರುಷರು ತಮ್ಮ ಮಕ್ಕಳೊಂದಿಗೆ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳ ಪವಿತ್ರ ಪ್ರವಾಹದಲ್ಲಿ ಜಲಸಮಾಧಿ ಮಾಡಿಕೊಂಡರು. ನೂರಾರು ಹಿಂದೂ ಸ್ತ್ರೀ-ಪುರುಷರು ಅಗ್ನಿ ಪ್ರವೇಶ ಮಾಡಿದರು; ಆದರೆ ತಮ್ಮ ಪವಿತ್ರ ಹಿಂದೂ ಧರ್ಮವನ್ನು ಬಿಟ್ಟು ಮುಸಲ್ಮಾನ ಧರ್ಮವನ್ನು ಸ್ವೀಕರಿಸಲಿಲ್ಲ.

                5. ಟಿಪ್ಪು ಸುಲ್ತಾನನು ಸಶಸ್ತ್ರ ಆಕ್ರಮಣ ಮಾಡಿ 24 ಘಂಟೆಗಳಲ್ಲಿ 50ಸಾವಿರ ಹಿಂದೂಗಳನ್ನು ಮುಸಲ್ಮಾನರನ್ನಾಗಿಸಿದನು. ಈ ಮೊದಲಿನ ಯಾವುದೇ ಮುಸಲ್ಮಾನ ಸುಲ್ತಾನರಿಗೆ ಸಾಧ್ಯವಾಗದ್ದನ್ನು ಟಿಪ್ಪು ಸುಲ್ತಾನನು ಮಾಡಿದನು.

                6. ಟಿಪ್ಪುವಿನ ದೌರ್ಜನ್ಯಕ್ಕೊಳಗಾದ ರಾಜ್ಯದಲ್ಲಿ ಯುವತಿಯರಿಗೆ ಅಮಾನವೀಯ ತೊಂದರೆಗಳನ್ನು ಕೊಟ್ಟು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಯಿತು. ಸುಂದರ ಹಾಗೂ ಯುವ ರಾಜಸ್ತ್ರೀಯರನ್ನು ಟಿಪ್ಪು ತನ್ನ ಜನಾನಖಾನೆಯಲ್ಲಿ ಬಂಧಿಸಿಟ್ಟನು.

                7. ಟಿಪ್ಪು ತನ್ನ ಸೇನಾಪತಿಗೆ ಬರೆದ ಪತ್ರವು ಇಂದಿಗೂ ಲಂಡನ್ನಿನ ವಸ್ತು ಸಂಗ್ರಹಾಲಯದಲ್ಲಿದೆ. ಅದರಲ್ಲಿ ಟಿಪ್ಪು ಸುಲ್ತಾನನು ಯಾರಿಗೆ ದೈವದ ಮೇಲೆ ನಂಬಿಕೆ ಇಲ್ಲದ ಎಲ್ಲ ಕಾಫೀರರನ್ನು ಹಿಡಿದು ಕೊಲ್ಲಬೇಕು, ಎಂದು ಹೇಳಿದ್ದಾನೆ.

                8. 22.3.1759 ರಂದು ಕಡಂಗೇರಿ ಅಬ್ದುಲ್ ಖಾದಿ ಎಂಬ ಸೇನಾಪತಿಗೆ ಟಿಪ್ಪು ಸುಲ್ತಾನ ಬರೆದ ಪತ್ರದಲ್ಲಿ, 12ಸಾವಿರ ನಾಸ್ತಿಕರನ್ನು ಇಸ್ಲಾಮ ಧರ್ಮಕ್ಕೆ ಮತಾಂತರಿಸಲಾಗಿದೆ. ನಂಬೂದ್ರಿ, ನಾಯರ ಎಂಬ ಭೇದವನ್ನು ಮಾಡದೇ ಎಲ್ಲರನ್ನು ಮತಾಂತರಿಸಬೇಕು, ಎಂಬ ಆದೇಶವನ್ನು ನೀಡಿದ್ದನು. ಹಾಗೆಯೇ ಯಾರು ಮತಾಂತರ ಆಗುವುದಿಲ್ಲವೋ, ಅವರನ್ನು ಸಾಯಿಸ ಬೇಕು’, ಎಂದು ಬರೆಯಲಾಗಿತ್ತು.

                9. ಟಿಪ್ಪುವಿನ ಕತ್ತಿಯ ಮೇಲೆ ಈ ವಿಜಯಿ ಕತ್ತಿಯು ಕಾಫೀರರನ್ನು ಸಾಯಿಸಲು ಗರ್ಜಿಸುತ್ತದೆ, ಎಂದು ಬರೆಯಲಾಗಿದೆ.

                10. ಕೊಡಗು ಹಾಗೂ ಮಲಬಾರ ಪ್ರಾಂತದಲ್ಲಿ ಟಿಪ್ಪು ಸೈನ್ಯದ ಗುಂಪುಗಳನ್ನು ಮಾಡಿ ಗುತ್ತಿಪೂರದಲ್ಲಿನ ನಾಯರ್ ಜನರಿಗೆ ಮುತ್ತಿಗೆ ಹಾಕಿದನು. ಅಲ್ಲಿ ಹೆಂಗಸರು ಮಕ್ಕಳು ಸೇರಿ ಒಟ್ಟು 2 ಸಾವಿರ ನಾಯರ್ ಜನರಿದ್ದರು. ಉಪವಾಸದ ಕಷ್ಟದಿಂದಾಗಿ ಅವರು ಶರಣಾದರು. ಆಗ ಟಿಪ್ಪು ಅವರಿಗೆ ನಾಯರರು ತಾವಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಬೇಕು ಇಲ್ಲದಿದ್ದರೆ ಬಲವಂತ ವಾಗಿ ನಿಮಗೆ ಮುಸಲ್ಮಾನ ಧರ್ಮದ ದೀಕ್ಷೆಯನ್ನು ಕೊಡಲಾಗುವುದು ಎಂದು ಹೇಳಿದನು. ಹೆದರಿದ ನಾಯರರು ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಒಪ್ಪಿದರು. ಮೊದಲಿಗೆ ಪುರುಷರ ಸುನ್ನತ್ ಮಾಡಲಾಯಿತು, ನಂತರ ಸ್ತ್ರೀ-ಪುರುಷ ಎಲ್ಲರಿಗೂ ಗೋಮಾಂಸವನ್ನು ತಿನ್ನಲು ಹೇಳಿ ಮತಾಂತರವನ್ನು ಮಾಡಲಾಯಿತು.

                11. 1788 ರಲ್ಲಿ ಕಲ್ಲಿಕೋಟೆಯಲ್ಲಿ 200 ಜನ ಬ್ರಾಹ್ಮಣರನ್ನು ಮತಾಂತರಿಸಿ ಮುಸಲ್ಮಾನರನ್ನಾಗಿ ಮಾಡಲಾಯಿತು.

                12. ತಿರುವಂಕೂರಿನ ಹಿಂದೂ ರಾಜನ ಕೊಲೆ ಮಾಡಿ ಟಿಪ್ಪು ಅವನ ಶವವನ್ನು ಆನೆಯ ಕಾಲಿಗೆ ಕಟ್ಟಿ ಮೆರವಣಿಗೆ ತೆಗೆದನು ಹಾಗೂ ಇನ್ನೂ 15-20 ಶವಗಳೊಂದಿಗೆ ಅದನ್ನು ಒಂದು ಮರಕ್ಕೆ ನೇತಾಡಿಸಿದನು.

                13. ತ್ರಿಚೂರ್‌ನ ಹಿಂದೂ ದೇವಾಲಯದಲ್ಲಿ ಟಿಪ್ಪುನ ಸೇನಾಪತಿ ವಸತಿ ಮಾಡಿದನು ಮತ್ತು ದೇವಾಲಯದಲ್ಲಿಯೇ ಗೋಹತ್ಯೆಯನ್ನು ಮಾಡಲಾಯಿತು.

                14. ಋಗ್ವೇದವನ್ನು ಕಲಿಸಲು ಪ್ರಸಿದ್ಧವಾಗಿರುವ ತಿರುನಾವಾಯ ಮಂದಿರವನ್ನೂ ನಾಶ ಮಾಡಲಾಯಿತು.

                15. ಟಿಪ್ಪು ಕೋಝೀಕೋಡ ನಗರವನ್ನು ಸಂಪೂರ್ಣ ನಾಶಮಾಡಲು ಆದೇಶವನ್ನು ನೀಡಿದ್ದನು.

                16. ಟಿಪ್ಪುನ ತಂದೆ ಹೈದರ ಅಲಿ ಗುರುವಾಯೂರ್ ಶ್ರೀಕೃಷ್ಣಮಂದಿರದ ಮೇಲೆ 1766 ರಲ್ಲಿ ಆಕ್ರಮಣ ಮಾಡಿದ್ದನು. ಅವನ ಹೆಜ್ಜೆಯಮೇಲೆ ಹೆಜ್ಜೆಯನ್ನಿಟ್ಟು ಟಿಪ್ಪು ಮಮ್ಮಿಯೂರ ಶಿವಮಂದಿರ ಹಾಗೂ ಇನ್ನೂ ಎರಡು ಶ್ರೀಕೃಷ್ಣಮಂದಿರಗಳನ್ನು ನಾಶಗೊಳಿ ಸಿದ ನಂತರ ಗುರುವಾಯೂರ ಮಂದಿರದ ಮೇಲೆ ಆಕ್ರಮಣವನ್ನು ಮಾಡಿ ಆ ಮಂದಿರವನ್ನು ನಾಶಮಾಡಿದ್ದನು.

                17. ಅಂಗಾಡಿಪ್ಪುರಮ್‌ನಲ್ಲಿನ ೪ ಸಾವಿರ ವರ್ಷಗಳ ಹಿಂದಿನ ನರಸಿಂಹಮೂರ್ತಿ ಮಂದಿರವನ್ನು ಟಿಪ್ಪುವಿನ ಸೈನ್ಯವು ನಾಶ ಮಾಡಿತು. 1946 ರಲ್ಲಿ ಈ ಮಂದಿರವನ್ನು ಪುನಃ ಕಟ್ಟಿದ ನಂತರ ಮತಾಂಧರು ಅದನ್ನು ಮತ್ತೆ ನಾಶ ಮಾಡಿದರು.

                18. ಕೇರಳದಲ್ಲಿನ ಕಣ್ಣೂರ ಜಿಲ್ಲೆ ಯಲ್ಲಿಯ ಕತಿರೂರ್‌ನಲ್ಲಿರುವ ಮಸೀದಿಯು ಮಂದಿರದಂತೆಯೇ ಇದೆ. ಟಿಪ್ಪು ಮಂದಿರವನ್ನು ನಾಶಮಾಡಿ ಆ ಜಾಗದಲ್ಲಿ ಈ ಮಸೀದಿಯನ್ನು ಕಟ್ಟಿದ್ದನು, ಎಂದು ಇತಿಹಾಸ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

                19. ಮಣಿಯೂರ ಮಸೀದಿಯು ಒಂದು ಕಾಲದಲ್ಲಿ ಹಿಂದೂಗಳ ಮಂದಿರವಾಗಿತ್ತು, ಎಂದು ಮಲಬಾರಿನ ಇತಿಹಾಸದಲ್ಲಿ ಬರೆಯಲಾಗಿದೆ. ಟಿಪ್ಪುವಿನ ಮಲಬಾರನ ಮೇಲಿನ ಆಕ್ರಮಣದ ನಂತರ ಅದು ಮಸೀದಿಯಾಗಿ ರೂಪಾಂತರವಾಯಿತು, ಎಂದು ಸ್ಥಳೀಯರ ಅಭಿಪ್ರಾಯವಿದೆ.

                20. ಮಸೀದಿಗಳನ್ನು ಕಟ್ಟುವ ಹಿಂಸಕ ಪದ್ಧತಿ : ಟಿಪ್ಪುವಿನ ಜನರು ಗೋಹತ್ಯೆ ಮಾಡುತ್ತಿದ್ದರು. ಇಷ್ಟೇ ಅಲ್ಲ, ಹಿಂದೂಗಳ ಗಾಯದ ಮೇಲೆ ಬರೆ ಎಳೆಯಲು ಮಂದಿರಗಳಲ್ಲಿನ ಮೂರ್ತಿಗಳನ್ನು ಒಡೆದು ಆ ಜಾಗದಲ್ಲಿ ಗೋಹತ್ಯೆ ಮಾಡುತ್ತಿದ್ದರು ಹಾಗೂ ನಂತರ ಅಲ್ಲಿ ಮಸೀದಿಯನ್ನು ಕಟ್ಟುತ್ತಿದ್ದರು. ಶ್ರದ್ಧಾವಂತ ಮತ್ತು ಶಾಂತಿಯ ಪೂಜಕರೆಂದು ಅನಿಸಿಕೊಳ್ಳುವ ಮುಸಲ್ಮಾನರಿಗೆ ಮೂರ್ತಿಗಳ ಮೇಲೆ ಕಾಲಿಟ್ಟು ನಮಾಜಿಗೆ ಹೋಗಲು ಬರಬೇಕೆಂದು ಬಹಳಷ್ಟು ಸಲ ಮೂರ್ತಿಗಳ ತುಂಡುಗಳನ್ನು ಮಾಡಿ ಅವುಗಳಿಂದ ಮಸೀದಿಯ ಮೆಟ್ಟಿಲುಗಳನ್ನು ತಯಾರಿಸುತ್ತಿದ್ದರು.

                21. ಮಲಬಾರದಲ್ಲಿನ ಹಿಂದೂಗಳು ಟಿಪ್ಪುನ ಆಕ್ರಮಣದಿಂದ ತ್ರಿಪ್ರಯಾರ ಮಂದಿರದಲ್ಲಿನ ಮೂರ್ತಿಗಳನ್ನು ಉಳಿಸಲು ಅವುಗಳನ್ನು ಕೂಡಲೇ ತೆಗೆದು ಬೇರೆ ಕಡೆಗೆ ಇಟ್ಟರು. ಟಿಪ್ಪು ಮಲಬಾರ ಪ್ರಾಂತವನ್ನು ಬಿಟ್ಟನಂತರ ೧೭೯೦ ರ ಕೊನೆಯಲ್ಲಿ ಈ ಮೂರ್ತಿಗಳನ್ನು ಮೂಲಸ್ಥಾನದಲ್ಲಿ ಪುನಃ ಸ್ಥಾಪನೆ ಮಾಡಲಾಯಿತು.

                22. ಮಂದಿರಗಳನ್ನು ಒಡೆಯುವುದನ್ನು ತಡೆಯುವ ಬಗ್ಗೆ ಕ್ರೂರಕರ್ಮಿ, ಜಿಹಾದಿ ಟಿಪ್ಪು ಕೊಟ್ಟಿರುವ ಮತಾಂಧ ಹಾಗೂ ಅಹಂಕಾರದ ಉತ್ತರ !

                ಟಿಪ್ಪು ಸುಲ್ತಾನನ ಕೆಲವು ವೈಯಕ್ತಿಕ ಬರಹಗಳಲ್ಲಿ ಒಂದು ಘಟನೆಯ ಬಗ್ಗೆ ಹೀಗೆ ಬರೆದಿದೆ….

                ಕಣ್ಣೂರಿನಲ್ಲಿನ ಚಿರಕ್ಕಲ ರಾಜನು ಮಂದಿರಗಳನ್ನು ಒಡೆಯುವುದನ್ನು ನಿಲ್ಲಿಸಲು ಟಿಪ್ಪುನಿಗೆ ೪ ಲಕ್ಷ ಚಿನ್ನ ಹಾಗೂ ಬೆಳ್ಳಿಯನ್ನು ಕೊಡಬಯಸಿದನು. ಆಗ ಆ ಜಿಹಾದಿ ಟಿಪ್ಪು ಅವರಿಗೆ ಹೀಗೆ ಉತ್ತರ ನೀಡಿದನು, ಸಂಪೂರ್ಣ ವಿಶ್ವವನ್ನೇ ನನಗೆ ಕೊಟ್ಟರೂ, ನಾನು ಹಿಂದೂಗಳ ಮಂದಿರಗಳನ್ನು ಒಡೆಯುವುದನ್ನು ನಿಲ್ಲಿಸುವುದಿಲ್ಲ.

                (ಆಧಾರ : ಸರದಾರ ಪಣಿಕ್ಕರ ಇವರ ಗ್ರಂಥ ಫ್ರೀಡಮ್ ಸ್ಟ್ರಗಲ್) ಇದೇ ಆಗಿತ್ತು, ಅವನ ಅಂದರೆ ಇಸ್ಲಾಮಿಕ ಸುಲ್ತಾನನ ನಿಜಸ್ವರೂಪ !

                ಟಿಪ್ಪು ಮಾಡಿದ ಜಿಹಾದಿ ಆಕ್ರಮಣದಲ್ಲಿ ಮಲಬಾರ ಭಾಗದಲ್ಲಿನ ಶೇ.೮೦ಕ್ಕಿಂತ ಹೆಚ್ಚು ಮಂದಿರಗಳನ್ನು ಧ್ವಂಸಗೊಳಿಸಲಾಯಿತು. 
                (ಅಷ್ಟಕ್ಕೂ ಟಿಪ್ಪು ಆಂಗ್ಲರೊಂದಿಗೆ ಹೋರಾಡಿದ್ದು ತನ್ನ ರಾಜ್ಯ ಉಳಿಸಿಕೊಳ್ಳಲು ! ಇಂತಹ ಟಿಪ್ಪುವಿಗೆ ಸ್ವಾತಂತ್ರ್ಯ ಸೇನಾನಿ ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ.)

                (ದೈನಿಕ ಸನಾತನ ಪ್ರಭಾತ (3.4.2014)). Kannada sanatan Prabhat

                ಉತ್ತರ
  7. valavi
    ಆಕ್ಟೋ 24 2014

    ಗೃಹಿಣಿ ಆಗಬೇಕಿತ್ತು. ತಪ್ಪಾಗಿದೆ. ಕ್ಷಮಿಸಿ.

    ಉತ್ತರ
  8. valavi
    ಆಕ್ಟೋ 24 2014

    ಶೆಟ್ಕರ್ ಅವರೆ ನಾನು ನನ್ನ ಮನೆ ಕೆಲಸ ಮಾಡಿದ್ದೇನೆ. ಅಲ್ಲದೆ ನನ್ನಂತೆ ನನ್ನ ಮಗ ಮತ್ತು ಮನೆಯವರೂ ಮಾಡಿದ್ದಾರೆ ಇಲ್ಲಿ ಶೋಷಣೆ ಎಲ್ಲಿಂದ ಬಂತು? ಯಾಕಾಗಿ ಬಂತು? ಎಲ್ಲರೂ ಹಂಚಿಕೊಂಡು ಮಾಡಿದಾಗಲೇ ಮನೆ ನೋಡುವಂತಿರುತ್ತದಲ್ಲವೆ? ಉದ್ಯೋಗದಲ್ಲಿರುವ ಸುಶಿಕ್ಷಿತ ಮಹಿಳೆ ಕೆಲ್ಸ ಮಾಡಬಾರದು. ಅದು ಶೋಷಣೆಯಾಗುತ್ತೆ ಎಂದು ಎಲ್ಲಿ ಹೇಳಿದೆ? ಇನ್ನು ವೈದಿಕ ಹಬ್ಬ ಎನ್ನುತ್ತೀರಲ್ಲಾ? ಅದು ಹೇಗೆ ದೀಪಾವಳಿ ವೈದಿಕರ ಹಬ್ಬವಾಗುತ್ತದೆ? ಸತ್ತಿರುವ ನರಕನಾಗಲಿ ಸಾಯಿಸಿರುವ ಕೃಷ್ಣನಾಗಲೀ ವೈದಿಕರಲ್ಲ. ಇನ್ನು ಪಾತಾಳಕ್ಕೆ ತಳ್ಳಲ್ಪಟ್ಟ ಬಲಿ ಬ್ರಾಹ್ಮಣ. ಇಲ್ಲಿ ತಮ್ಮವನನ್ನು ಪಾತಾಳಕ್ಕೆ ಮೆಟ್ಟಿದರೂ ವೈದಿಕರು ಆ ದಿನವನ್ನು ಸಂಭ್ರಮದಿಂದ ಆಚರಿಸುವದು ನೋಡಿದರೆ ನೀವು ಖುಷಿ ಪಡಬೇಕು. ಏಕೆಂದರೆ ವೈದಿಕರಲ್ಲಿ ಸ್ವಜಾತಿ ಮಮಕಾರವಿಲ್ಲದ್ದು ನೋಡಿ. ಇನ್ನ ಕೆಲವರು ಶ್ರೀರಾಮ ರಾವಣನನ್ನು ಕೊಂದು ಅಯೋಧ್ಯೆಗೆ ಹಿಂದಿರುಗಿದ ಹಬ್ಬವಾಗಿ ಕೂಡ ದೀಪಾವಳಿ ಆಚರಿಸುತ್ತಾರಂತೆ. ಇಲ್ಲಿ ಸಹ ವೈದಿಕರು ತಮ್ಮವನೊಬ್ಬನನ್ನು ರಾಮ ಕೊಂದಿದ್ದರೂ ಆ ದಿನವನ್ನು ಸಂಭ್ರಮದಿಂದ ಆಚರಿಸುವದು ನೋಡಿದರೆ ವೈದಿಕರಲ್ಲಿ ಸ್ವಜಾತಿ ಪಕ್ಷಪಾತವಿಲ್ಲವೆಂದೇ ಅರ್ಥವಲ್ಲವೆ? ಇನ್ನು ವೈದಿಕರು ಭಾರತದಲ್ಲಿ ಇರುವದೇ 3 % ಅವರು ಹೇಳಿದರೆ ಅವರ ತಾಳಕ್ಕೆ 97% ಜನ ಕುಣಿಯುತ್ತೀರೆಂದರೆ ನಿಮ್ಮ ಬುದ್ದಿಗೆ ಏನನ್ನಬೇಕು? ಯಾಕೆ ಈ 3% ಜನರ ಅಡಿಯಾಳು 97% ಆದಿರಿ? ನಿಮ್ಮನ್ನು ನೀವು ಕುರಿಗಳೆಂದೂ ಇನ್ನೂ ಸಹ ಕುರಿಗಳಾಗೇ ಇದ್ದೇವೆ. ಮುಂದೂ ಸಹ ಹಾಗೆ ಇರುತ್ತೇವೆಂದುಕೊಳ್ಳುತ್ತೀರಲ್ಲಾ ನಿಮ್ಮ ಬುದ್ದಿಗೆ ಏನು ಹೇಳಬೇಕು? ವೈದಿಕರನ್ನು ತೆಗಳುವ ಭರದಲ್ಲಿ ನಿಮ್ಮನ್ನು ನೀವು ಬುದ್ದಿಮಾಂಧ್ಯರೆಂದು ಒಪ್ಪಿಕೊಳ್ಳುತ್ತಿರುವಿರಲ್ಲಾ ಇದಕ್ಕೆ ಏನು ಹೇಳಬೇಕು? ಎಳ್ಳಷ್ಟೂ ಶಕ್ತಿ ಇಲ್ಲದ ತೋಳ್ಬಲವಿಲ್ಲದ ಜನಸಂಖ್ಯೆಯಲ್ಲೂ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ವೈದಿಕರನ್ನು ಎಲ್ಲರೂ ಸೇರಿ ಹೊಸಕಿ ಹಾಕಿಬಿಟ್ಟರಾಗುತ್ತಿರಲಿಲ್ಲವೆ? ಇಂದಿನ ಶೋಷಣೆ ಇಲ್ಲದ ಸಮಾಜ ನಿರ್ಮಾಣ ಮಾಡಲು ಅತ್ಯಂತ ಸುಲಭವಾಗುತ್ತಿತ್ತು. ಇರಲಿ ದೀಪಾವಳಿಯನ್ನು ಭಾರತದಲ್ಲಿ ಅಷ್ಟ್ ಅಲ್ಲ ಮಲೇಷ್ಯ ಸಿಂಗಾಪೂರ ಬರ್ಮಾ ಇನ್ನೂ ಅನೇಕ ಕಡೆಗಳಲ್ಲಿ ಆಚರಿಸುತ್ತಾರಲ್ಲಾ ಅಲ್ಲಿಯೂ ಭಾರತದ ಪುರೋಹಿತರೇ ಹೇಳಿಕೊಟ್ಟು ಆಚರಣೆಗೆ ಹಚ್ಚಿದ್ದಾರೋ?:) 🙂 🙂 🙂

    ಉತ್ತರ
    • Nagshetty Shetkar
      ಆಕ್ಟೋ 25 2014

      ಇಲ್ಲಿ ನಿಮ್ಮ ಸ್ವಂತ ಚಿಂತನೆ ಎಲ್ಲಿದೆ? ಬಾಲು ಅವರ ಗುಂಪು ಹೇಳಿದ್ದನ್ನೇ ಕಂಠ ಪಾಠ ಮಾಡಿ ನಮಗೆ ಒಪ್ಪಿಸುತ್ತಿದ್ದೀರಿ! ಅಷ್ಟೇ!

      ಉತ್ತರ
      • ರಂಜನಾ ರಾಮ್ ದುರ್ಗಾ
        ಆಕ್ಟೋ 28 2014

        ಸಹೋದರಿ ವಲವಿಯವರ ಪ್ರಶ್ನೆಗಳು ಸಮಂಜಸವಾಗಿವೆ ಅಲ್ಲವೇ ಶೆಟ್ಕರ್ ಸಹೋದರರೇ?

        ಉತ್ತರ
  9. Naani
    ಆಕ್ಟೋ 25 2014

    ಹೆಹೇ ! ಕಿಸ್ಬಾಯಿದಾಸರ ಸ್ವಂತ ಚಿಂತನೆಯ ಪಾಠ ನೋಡ್ರಪ್ರ! ಒಂದು ಚಿಂತನೆ ಹೇಗೆ ಇಂತಹ ಗಂಜಿಕೇಂದ್ರದ ಖಾಯಂ ಗಿರಾಕಿಗಳ ಬಂಡವಾಳ ಬಯಲು ಮಾಡಲು ಶಕ್ತಿ ಕೊಡ್ತಿದೆ ನೋಡಿ.. ಈತ ಒರಿಜಿನಲ್ ಚಿಂತಕನ ತುಂಡು ಇವರ ಪ್ರಕಾರ ಮಾರ್ಕ್ಸ್ ನ ಚಿಂತನೆಯನ್ನು ಆದರಿಸಿ ಬೇರೆಯವರು ವಿಚಾರ ಮಾಡೋದೆ ತಪ್ಪು! ತನ್ನ ಅಜ್ಞಾನದ ವಾದಗಳ ಬಣ್ಣ ಬಯಲುಮಾಡುವ ಪ್ರಶ್ನೆಗಳಿಗೆ ಉತ್ತರಿಸಲಾಗದಿದ್ದರೆ ನಿಮ್ಮದು ಒರಿಜನಲ್ ಚಿಂತನೆಯಲ್ಲಾ ಎಂದು ಹಂಗಿಸಿ ಮುಖಮುಚ್ಚಿಕೊಳ್ಳಲು ಈತರದ ಮಖೇಡಿಗಳ ಮಾತ್ರ ಹೀಗೆಲ್ಲಾ ನಾಟಕವಾಡಬಲ್ಲರು. 🙂 ಛೆ ಛೆ ಛೆ ಎಂತಹ ದುರವಸ್ಥೆ ಈ ಗಂಜಿಕೇಂದ್ರದ ಚಿಂತಕರುಗಳಗೆ!!!

    ಉತ್ತರ
    • Nagshetty Shetkar
      ಆಕ್ಟೋ 25 2014

      ನಾನು ಹೇಳುವ ಸತ್ಯ ನಿಮಗೆ ಕಹಿಯಾಗಿ ಕಂಡಿದ್ದರೆ ಆಶ್ಚರ್ಯವೇನಿಲ್ಲ.

      ಉತ್ತರ
      • Naani
        ಆಕ್ಟೋ 25 2014

        ಈ ಸತ್ಯಹರಿಶ್ಚಂದ್ರನ ತುಂಡಿಗೆ ನಾನು ಹೇಳಿದ ಸತ್ಯ ಸಿಹಿಯಾಗಿದೆಯಲ್ಲಾ! ಅಷ್ಟೇ ಸಾಕು! 🙂

        ಉತ್ತರ
  10. Nagshetty Shetkar
    ಆಕ್ಟೋ 26 2014

    “ವಚನಶರಣರನ್ನು ಅರ್ಥೈಸುವ ಅಥಾರಿಟಿ”

    that’s right. Only someone with the scholarship, sincerity, dedication, and insight like Darga sir can be called authority on Vachanas. Pseudo scholars who count jati/kula in vachanas are considered as pig-heads.

    ಉತ್ತರ
    • Nagshetty Shetkar
      ಆಕ್ಟೋ 26 2014

      +1

      ಥ್ಯಾಂಕ್ಸ್ ಅಶೂ!

      ಉತ್ತರ
    • Nagshetty Shetkar
      ಆಕ್ಟೋ 26 2014

      ” ಕರ್ನಾಟಕದಲ್ಲಿ ವಚನ ಸಾಹಿತ್ಯದ ಬಗ್ಗೆ ಮಾತಾಡಲು ದರ್ಗಾ ಸರ್ ಅವರೇ ಏಕೆ ಬೇಕು? ಬೇರೆ ಯಾರೂ ಇಲ್ಲವೇ?

      ಶ್ರೀರಂಗ ಅವರೇ, ದರ್ಗಾ ಸರ್ ಅವರು ಇಂದು ವಚನ ಸಾಹಿತ್ಯದ ಮೇಲಿನ ನಂಬರ್ ೧ ವಿದ್ವಾಂಸ ಎಂದು ವಿಶ್ವವಿಖ್ಯಾತಿ ಪಡೆದು ವಿದ್ವತ್ ಲೋಕದ ಗೌರವಕ್ಕೆ ಪಾತ್ರರಾಗಿದ್ದಾರೆ. ತಮ್ಮ ನಿಷ್ಠೆ, ವಿದ್ವತ್ತು, ಪರಿಶ್ರಮ, ಹೊಳಹು, ಒಳನೋಟ, ಸಾಧನೆಗಳಿಂದ ಬಸವಧರ್ಮಿಗಳ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಬ್ರಾಹ್ಮಣ್ಯದ ವಿರುದ್ಧ ಜೀವನಪರ್ಯಂತ ಹೋರಾಟ ನಡೆಸಿಸಿ ಸಮಾನತೆಯ ಕನಸನ್ನು ಜನಸಾಮಾನ್ಯರಲ್ಲಿ ಬೆಳೆಸಿದ್ದಾರೆ. ತಮ್ಮ ಜೀವಪರ ನಿಲುವುಗಳಿಂದ ಹಾಗೂ ತತ್ವಬದ್ಧ ಹೋರಾಟಗಳಿಂದ ಪುರೋಹಿತಶಾಹಿಗಳ ಸಿಂಹ ಸ್ವಪ್ನವಾಗಿದ್ದಾರೆ. ವಚನ ಸಾಹಿತ್ಯದ ಬಗ್ಗೆ ದರ್ಗಾ ಸರ್ ಅವರ ಭಾಷಣ ಕೇಳಲು ದೇಶ ವಿದೇಶಗಳಲ್ಲಿ ಜನ ಹಾತೊರೆಯುತ್ತಿದ್ದಾರೆ. ಮಾರ್ಕ್ಸ್ ವಾದ ಹಾಗೂ ಬಸವಾದ್ವೈತಗಳನ್ನು ಬೆರೆಸಿ ಸಮಕಾಲೀನ ತಲ್ಲಣಗಳ ಬಗ್ಗೆ ದರ್ಗಾ ಸರ್ ಮಾತನಾಡುವುದನ್ನು ಕೇಳುವುದೇ ಒಂದು ದೊಡ್ಡ ಸುಖ!

      ಉತ್ತರ
  11. Naani
    ಆಕ್ಟೋ 26 2014

    ಆಹಾ ! ಎಂತಹ ಪ್ರಹಸನ, ! ಧನ್ಯೋಸ್ಮಿ! 🙂

    ಉತ್ತರ
    • Shripad
      ಆಕ್ಟೋ 26 2014

      ಕನ್ನಡದಲ್ಲಿ ಸಾಹಿತ್ಯ ಚರಿತ್ರೆಯಲ್ಲಿ ಮುಖ್ಯವಾಗಿ ಕಾಣಿಸುವುದು ಒಕ್ಕಲು ಸಾಹಿತ್ಯ. ಜೈನ, ವೀರಶೈವ ಮತ್ತು ವೈಷ್ಣವ ಮತಗಳ ಹೆಚ್ಚುಗಾರಿಕೆಯನ್ನು ಪ್ರತಿಪಾದಿಸುವ ಕೃತಿಗಳೇ ಎದ್ದುಕಾಣುತ್ತವೆ. ಕನ್ನಡ ಜನಪದ ಮಹಾಕಾವ್ಯಗಳಾದ ಮಹದೇಶ್ವರ, ಮಂಟೇಸ್ವಾಮಿ, ಜುಂಜಪ್ಪ ಮೊದಲಾದವೂ ಜನರನ್ನು ಒಕ್ಕಲು ಮಾಡಿಕೊಳ್ಳುವ ಉದ್ದೇಶದವೇ. ಇವುಗಳಲ್ಲಿ ಈ ಪ್ರವೃತ್ತಿ ಪ್ರತ್ಯಕ್ಷವಾಗಿದ್ದರೆ ಈಗೀಗ ಇದು ಪರೋಕ್ಷವಾಗಿ ಕಾಣಿಸುತ್ತದೆ. ಪಂಥ, ಸಿದ್ಧಾಂತಗಳ ಪ್ರತಿಪಾದನೆಯ ಮೂಲಕ ಹಿಂಬಾಲಕರನ್ನು ಕಟ್ಟಿಕೊಳ್ಳುವುದು ಒಕ್ಕಲು ಬೆಳೆಸಿಕೊಳ್ಳುವುದು ಇಂದಿನ ಪ್ರಮುಖ ಲಕ್ಷಣ.
      ಇದೇ ರೀತಿ ದರ್ಗಾ ಒಕ್ಕಲು ಕೂಡ ಅಸ್ತಿತ್ವಕ್ಕೆ ಹೆಣಗುತ್ತಿದೆ. ದುರಂತ ಅಂದರೆ ಇದಕ್ಕೆ ಇರುವ ಕಟ್ಟಾ ಅನುಯಾಯಿ ಒಬ್ಬರೇ!

      ಉತ್ತರ
      • Nagshetty Shetkar
        ಆಕ್ಟೋ 26 2014

        “Conscious Hindus should start Dharmayuddha against Hindutva through spreading humanism.’ Vsudhaiva kutumabakam’ (Entire World is a Family) is the real message of Hindu Religion. Conscious Muslims should start Jihad against terrorists and fundamentalists who are creating hell in India in the name of Islam. ‘Sari Duniya Khudaka Kumbha Hai’ (Entire World is the Family of the Allah)

        Our duty is to make people realize this reality and live happily with the sense of Universal cooperation.”

        _https://acrazymindseye.wordpress.com/2010/11/03/dharmayuddha-and-jihad/

        ಉತ್ತರ
        • Shripad
          ಆಕ್ಟೋ 26 2014

          ನಮ್ಮ ದೇಶದಲ್ಲಿ ಒಕ್ಕಲುಗಳಿವೆ, ಸಂಪ್ರದಾಯ, ವ್ರತ, ಆಚರಣೆಗಳನ್ನು ಅನುಸರಿಸುವ ಜನ ಸಮುದಾಯಗಳಿವೆ. ಒಂದಕ್ಕಿಂತ ಒಂದು ಭಿನ್ನ, ಅನನ್ಯ. ಇವೆಲ್ಲ ಒಂದೇ ಅಲ್ಲ. ಹೀಗಾಗಿ ಈ ಹಿಂದೂ ಅಂದರೆ ಯಾರು ಎಂಬುದನ್ನು ಮೊದಲು ಸ್ಪಷ್ಟಪಡಿಸಿ. ಆಮೇಲೆ ನಿಮ್ಮ ಕಾಪಿ ಪೇಸ್ಟ್ ನತ್ತ ಸಾಧ್ಯವಾದರೆ ಕಣ್ಣಾಡಿಸೋಣ.

          ಉತ್ತರ
          • Nagshetty Shetkar
            ಆಕ್ಟೋ 26 2014

            Darga sir isn’t paid by kuvempu varsity or foreign fund to answer all your stupid questions. He is in great demand all over world where basavadharmis are living. He is great inspiration for younger generations even among NRIs. You people are Hindutva fossils. Enlightened youth will fight dharma yuddha and nullify Hindutva.

            ಉತ್ತರ
            • Naani
              ಆಕ್ಟೋ 26 2014

              “Darga sir isn’t paid by kuvempu varsity or foreign fund to answer all your stupid questions.” ಹ್ಹ ಹ್ಹ ಹ್ಹ … ಶ್ರೀಪಾದರೇ ನೀವು ದರ್ಗಾರಿಗೆ ಯಾವಾಗ ಪ್ರಶ್ನೆ ಕೇಳಿದಿರಿ? ಈ ಶೆಟ್ಕರ್ ಗೆ ಕೇಳಿದ ಪ್ರಶ್ನೆಗೆ ದರ್ಗಾಗೆ ಕೇಳಿರುವಂತೆ ಭಾವಿಸಿಕೊಂಡುಬಿಟ್ಟಿದೆ ತಲೆ ಇಲ್ಲದೆ ಶೆಟ್ಕರ್ ಹೆಸರಲ್ಲಿ ರುವ ದರ್ಗಾ!!!! ಹ್ಹ ಹ್ಹ ಹ್ಹ!!! ಹೀಗೆ ಪೆದ್ದು ಪೆದ್ದಾಗಿ ಬರಕೊಂಡು ಸಿಕ್ಕಾಕ್ಕೊಳ್ತಿರೊ ಇದಕ್ಕೆ ಪ್ರಚಾರ ಕೊಡ್ಲಿಕ್ಕೆ ಯಾರೂ ಇಲ್ಲಾ ಅಂತ ಪಾಪ ತಾನೇ ತನ್ನನ್ನ ಇಂದ್ರ-ಚಂದ್ರ ಅಂತ ಸ್ವರತಿಯಲ್ಲಿ ತೊಡಗಿಕೊಂಡಿದೆ! ಇಂತಹ ಹೀನಾಯ ಸ್ಥಿತಿ ನನ್ನ ಶತ್ರುಗೂ ಬೇಡ! 🙂

              ಉತ್ತರ
            • Shripad
              ಆಕ್ಟೋ 26 2014

              ಕೇಳಿದ್ದೊಂದು ಬಿಟ್ಟು ಮತ್ತೆಲ್ಲದಕ್ಕೂ ನಿಮ್ಮ ಸಿದ್ಧ ಉತ್ತರ ಇರುತ್ತದೆ ನೋಡಿ.ನಾವು ಜನತಂತ್ರದಲ್ಲಿ ನಂಬಿಕೆ ಇಟ್ಟವರು. ಹೀಗಾಗಿ ಸಂವಾದ, ಚರ್ಚೆಯ ಮೂಲಕ ಎಲ್ಲವೂ ಬಗೆಹರಿಯುತ್ತದೆಂಬ ನಂಬಿಕೆಯೂ ಇದೆ. ಯುದ್ಧ, ಕ್ರುಸೇಡ್ ಇವೆಲ್ಲ ನಕ್ಸಲರಿಗೂ ಭಯೋತ್ಪಾದಕರಿಗೂ ಅನ್ವಯಿಸುವ ಮಾತುಗಳು. ನಾಗರಿಕರಿಗೆ ಇವೆಲ್ಲ ಆಗಿಬರುವುದಿಲ್ಲ. ಅವೆಲ್ಲ ನಿಮ್ಮ ಜೊತೆಗೇ ಇರಲಿ. ಹಿಂದೂ ಅಂದರೇನು ಉತ್ತರಿಸಿ. ಅರೆಬರೆ ಮಾರ್ಕ್ಸ್ ವಾದ, ಅರೆಬರೆ ವಚನ, ಅರೆಬರೆ ಕುರ್ ಆನ್ ಇನ್ನೊಂದಿಷ್ಟು ಡಬ್ಬಾ ವಿಚಾರವಾದ ಇವನ್ನೆಲ್ಲ ಓದಿಕೊಂಡು ಚಿತ್ರಾನ್ನದಂತಾದ ತಲೆಗೆ(ಹೈಬ್ರೀಡ್ ತಲೆ!) ನೇರ ಪ್ರಶ್ನೆಗಳೇ ತೊಣಚಿ ಆಡಿಸುತ್ತವೆ!!

              ಉತ್ತರ
              • Nagshetty Shetkar
                ಆಕ್ಟೋ 26 2014

                All questions answered here: _http://www.youtube.com/watch?v=sAS6V7DlAX4

                ಉತ್ತರ
        • Godbole
          ಆಕ್ಟೋ 26 2014

          “ವಸುಧೈವ ಕುಟುಂಬಕಂ” is not the same as “ಇಡೀ ವಿಶ್ವವೇ ಅಲ್ಲಾನ ಕುಟುಂಬ”! ದರ್ಗಾ ಸಾಬಿಯು ಇಡೀ ಪ್ರಪಂಚವನ್ನೇ ಸಾಬರಾಗಿಸುವ ಉದ್ದೇಶದಿಂದ ಅಲ್ಲಾನನ್ನು ನಂಬದವರ ಮೇಲೂ ಅಲ್ಲಾನನ್ನು ಹೇರುತ್ತಿದ್ದಾನೆ ಅಂತ ಕಾಣಿಸುತ್ತದೆ. ನಾಳೆ ಈತ ಇಷ್ಟಲಿಂಗ ಅಂದರೆ ಅಲ್ಲಾ ಅಂತ ಅಂದರೂ ಆಶ್ಚರ್ಯವಿಲ್ಲ! ಇವನನ್ನು ಬಸವಭಕ್ತ ಎಂದು ನಂಬಿ ವಿದೇಶಗಳಿಗೆ ಕರೆಸಿ ಭಾಷಣ ಮಾಡಿಸುವ ಅಮಾಯಕ ಲಿಂಗಾಯತರ ಬಗ್ಗೆ ಕನಿಕರ ಮೂಡುತ್ತಿದೆ!

          ಉತ್ತರ
          • shripad
            ಆಕ್ಟೋ 28 2014

            ಅದು ಹಂಗಲ್ಲಾರೀ. ಮುಸ್ಲಿಂ ಆಗಿದ್ದುಕೊಂಡು ವೀರಶೈವದ ಬಗ್ಗೆ ಮಾತಾಡುವುದು ಅಂದರೇನು? ಇದು ವೀರಶೈವರಿಗೆ ಅಡ್ವಾಂಟೇಜ್ ಸಿಕ್ಕಂತೆ ಅಲ್ಲವೇ? ಹೀಗಾಗಿ ಜೆ ಎಸ್ ಎಸ್ ನವರು ಪ್ರಚಾರೋಪನ್ಯಾಸಕ್ಕೆ ಅವರನ್ನು ಆಯ್ದು ಸ್ಪಾನ್ಸರ್ ಮಾಡ್ತಾರೆ. ಹಾಗಂತ ದರ್ಗಾರೇನೂ ಯಾವುದೇ ವೀರಶೈವ ಮಠದಿಂದ ಲಿಂಗದೀಕ್ಷೆ ಪಡೆದುಕೊಂಡಂತಿಲ್ಲ. ಅವರಿಗೆ ಇದೊಂದು ಪ್ಯಾಶನ್ ಅಷ್ಟೇ. ಕುರ್ ಆನ್ ಕುರಿತು ಮಾತಾಡಲು ದರ್ಗಾರನ್ನು ಯಾವ ಮುಸ್ಲಿಂ ಸಂಘದವರೂ ಎಲ್ಲಿಯೂ ಕರೆಸುವುದಿಲ್ಲ ಎಂಬುದನ್ನು ಗಮನಿಸಿ. ಇದೊಂದು ತಮಾಷೆ ಅಲ್ಲವೇ?

            ಉತ್ತರ
            • Nagshetty Shetkar
              ಆಕ್ಟೋ 28 2014

              ವಚನ ಸಾಹಿತ್ಯ ಯಾವುದೇ ಜಾತಿ ಕುಲ ಮತ ಮಠಗಳ ಖಾಸಗಿ ಆಸ್ತಿಯೇನಲ್ಲ. ಮುಸ್ಲಿಂ ಆದವನು ವಚನಗಳ ಅಧ್ಯಯನ ನಡೆಸಕೂಡದು ಅವುಗಳಿಂದ ಪ್ರೇರಣೆ ಪಡೆಯಕೂಡದು ಅಂತ ನಿಯಮವೇನಿಲ್ಲ. ಆಸಕ್ತಿ ಪ್ರಾಮಾಣಿಕವಾಗಿರಬೇಕಷ್ಟೇ. ಶರಣರಿಗೆ ಸೂಫಿಗಳಿಗೆ ಜಾತಿ ಮತ ಕುಲಗಳ ಹಂಗಿಲ್ಲ. ಇಡೀ ಪ್ರಪಂಚವೇ ಅಲ್ಲಾನ ಕುಟುಂಬ ಎಂದ ಮೇಲೆ ಜಾತಿ ಕುಲ ಮತಗಳಿಗೆ ಏನು ಅರ್ಥ ಇದೆ? ಹೃದಯ ವಿಶಾಲವಾಗದ ಹೊರತು ನಿಮಗೆ ಇದೆಲ್ಲ ಅರ್ಥವಾಗಲ್ಲ.

              ಉತ್ತರ
      • Nagshetty Shetkar
        ಆಕ್ಟೋ 26 2014

        “ಇದಕ್ಕೆ ಇರುವ ಕಟ್ಟಾ ಅನುಯಾಯಿ ಒಬ್ಬರೇ!”

        _http://www.youtube.com/watch?v=xPC2eJywgHA

        ಉತ್ತರ
        • Nagshetty Shetkar
          ಆಕ್ಟೋ 26 2014

          _http://www.youtube.com/watch?v=9wKbYYA1aP0

          ಉತ್ತರ
          • Nagshetty Shetkar
            ಆಕ್ಟೋ 26 2014

            _http://www.youtube.com/watch?v=sAS6V7DlAX4

            ಉತ್ತರ
            • Nagshetty Shetkar
              ಆಕ್ಟೋ 26 2014

              _http://www.youtube.com/user/ramjandarga

              ಉತ್ತರ
              • ಆಕ್ಟೋ 28 2014

                ಯಜಮಾನ್ರೇ,

                ಯೂಟ್ಯೂಬ್ ಅನ್ನು ಏನಾದ್ರೂ ಕೊಂಡುಕೊಂಡ್ರಾ!? ಒಂದರ ಹಿಂದೊಂದು ಲಿಂಕ್ ಒಗೀತಾ ಇದ್ದೀರಲ್ಲಾ!

                ಮಂಡಿಸಲು ‘ನಿಮ್ಮ ಸ್ವಂತದ್ದು’ ಅನ್ನೋದು ಏನೂ ಇಲ್ಲವೇ, ನಿಮ್ಮ ಹತ್ರ!? ಇದಕ್ಕೇ ಇರಬೇಕು ನಿಮ್ಮನ್ನು ಗಂಜಿಕೇಂದ್ರದ ಗಿರಾಕಿ ಅನ್ನೋದು. ಮಾತೆತ್ತಿದರೆ ಲಿಂಕು, ಉಸಿರೆತ್ತಿದರೆ ರಂಜಾನ್ ದರ್ಗಾ! ಇಷ್ಟೇ ಆಯ್ತಲ್ರೀ ನಿಮ್ದು!!?

                ಉತ್ತರ
                • Nagshetty Shetkar
                  ಆಕ್ಟೋ 28 2014

                  ನಾನೊಬ್ಬ ಶರಣ, ನಿಮ್ಮ ಹಾಗೆ ಪುಂಡು ಪೋಕರಿ ಅಲ್ಲ. ವೈಯಕ್ತಿಕ ಹಲ್ಲೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ತಾತ್ವಿಕ ಜಿಜ್ಞಾಸೆ ನಡೆಸುವುದಿದ್ದರೆ ಮಾತ್ರ ನನ್ನ ಪ್ರತಿಕ್ರಿಯೆ.

                  ಉತ್ತರ
                  • ಆಕ್ಟೋ 28 2014

                    ತಾತ್ವಿಕ ಜಿಜ್ಞಾಸೆ!? ಅದೂ ನಿಮ್ಮೊಂದಿಗೆ!? ನನಗೇನು ತಲೆಕೆಟ್ಟಿದೆಯೇ!? ನಿಮ್ಮಂತಹ ತತ್ವಾಂಧರೊಡನೆ ಜಿಜ್ಞಾಸೆ ನಡೆಸಿ ನನ್ನ ಮಾನಸಿಕ ಸ್ವಾಸ್ಥ್ಯ ಕೆಡಿಸಿಕೊಳ್ಳಲು ನನಗಿಷ್ಟವಿಲ್ಲ.

                    ಇಷ್ಟಕ್ಕೂ ವೈಯುಕ್ತಿಕ ಹಲ್ಲೆ ಎಲ್ಲಿ ನಡೆದಿದೆ? “ನಿಮ್ಮ ಸ್ವಂತದ್ದು ಏನಾದರೂ ಇದೆಯೇ?” ಎಂದು ನಾನು ಕೇಳಿದ್ದು. ಅಂದಮೇಲೆ ‘ನಿಮ್ಮಲ್ಲಿ ನಿಜವಾಗಿಯೂ ಸ್ವಂತದ್ದೇನಾದರೂ ಇದೆಯೇ!?’ ಎಂದು ತಾತ್ವಿಕ ಜಿಜ್ಞಾಸೆ ನಡೆಸಬೇಕಾದ ಅಗತ್ಯತೆ ನಿಮ್ಮದು.

                    Ball is in your court. Play it, rather ranting like a kid who lost his candy.

                    ಉತ್ತರ
                    • Nagshetty Shetkar
                      ಆಕ್ಟೋ 28 2014

                      ಶರಣರನ್ನು ಚಾಲೆಂಜ್ ಮಾಡುವ ಹುಂಬ ಬುದ್ಧಿ ಬಿಡಿ. ನಿಮ್ಮೊಡನೆ ಬಾಲಾಡಲು ದರ್ಗಾ ಸರ್ ಅವರು ಕೆಲಸವಿಲ್ಲದೇ ಖಾಲಿ ಕುಳಿತಿದ್ದಾರೆಯೇ?? ವಚನಗಳ ನಿರಂತರ ಅಧ್ಯಯನ ನಡೆಸುವುದರಲ್ಲಿ ಅವರು ಮುಳುಗಿದ್ದಾರೆ. ಸಮಕಾಲಿನ ತಲ್ಲಣಗಳ ಬಗ್ಗೆ ವಚನ ಅಧ್ಯಯನದ ಮೂಲಕ ಹೊಸ ಹೊಸ ಹೊಳಹನ್ನು ಕೊಡುವ ದರ್ಗಾ ಸರ್ ಅವರಿಗೆ ನಾವೆಲ್ಲೆರೂ ಕೃತಜ್ಞತೆ ಸಲ್ಲಿಸೋಣ.

                    • ಆಕ್ಟೋ 28 2014

                      ಕಣ್ಣುಬಿಟ್ಟು ಇನ್ನೊಮ್ಮೆ ಓದಿ ನನ್ನ ಕಮೆಂಟನ್ನು. ಅರ್ಥವಾಗದಿಲ್ಲಿ ಕೇಳಿ ತಿಳಿದುಕೊಳ್ಳಿ. ಈ ರೀತಿ ಮೂರ್ಖತನದ ಉತ್ತರಕೊಟ್ಟು ನಗೆಪಾಟಲಿಗೀಡಾಗಬೇಡಿ.

                      ತಮಗೆ ಮಾತು ಅರ್ಥವಾಗುವುದಿಲ್ಲವೋ ಅಥವಾ ವ್ಯಾಕರಣ ಅರ್ಥವಾಗುವುದಿಲ್ಲವೋ!? ನನ್ನ ಸವಾಲು ನಿಮಗೆ. ದರ್ಗಾರನ್ನು ಇಲ್ಲಿ ಕರೆದದ್ಯಾರು!?

                      ನೀವಂದಿದ್ದು ಸರಿ, ಮಾಮೂಲು ವ್ಯಾಕರಣದ ಮಾತುಕಥೆಗಳನ್ನು ಅರ್ಥೈಸಿಕೊಳ್ಳಲಾಗದ ‘ನಿಮ್ಮಂತಹ’ ಶರಣರನ್ನು ಚಾಲೆಂಜ್ ಮಾಡುವುದು ಹುಂಬತನವೇ 🙂 🙂

                    • Nagshetty Shetkar
                      ಆಕ್ಟೋ 28 2014

                      “ಸಮಕಾಲಿನ ತಲ್ಲಣಗಳ ಬಗ್ಗೆ ವಚನ ಅಧ್ಯಯನದ ಮೂಲಕ ಹೊಸ ಹೊಸ ಹೊಳಹನ್ನು ಕೊಡುವ ದರ್ಗಾ ಸರ್ ಅವರಿಗೆ ನಾವೆಲ್ಲೆರೂ ಕೃತಜ್ಞತೆ ಸಲ್ಲಿಸೋಣ.”

                      +1

                    • ಆಕ್ಟೋ 28 2014

                      ಆ ಹೊಳಹಿನೊಂದಿಗೆ ನಿಮ್ಮಂತಹ ಹುಳುಕುಗಳನ್ನೂ ಸೃಷ್ಟಿಸಿದ ಆ ದರ್ಗಾ ಅವರಿಗೊಂದು ದೀರ್ಘದಂಡಾವಧಿ ಕೃತಘ್ನತೆಯನ್ನೂ ಸಲ್ಲಿಸೋಣ.
                      ಸ್ವಂತಿಕೆಯೇ ಇಲ್ಲದ ನಿಮ್ಮಂತ ಶರಣರಿಗೆ ಶರಣೋ ಶರಣು.

                      +420

                    • Naani
                      ಆಕ್ಟೋ 28 2014

                      ಶೆಟ್ಕರಂಗೆ ಪ್ರಶ್ನೆ ಕೇಳಿದರೆ ದರ್ಗಾಗೆ ಕೇಳಿದ್ದು ಅನ್ನೋತರ ಈ ಪೆದ್ದಣ್ಣ ಹೇಳ್ತಿರಬೇಕಾದ್ರೆನೇ ಗೊತ್ತಾಗ್ತಿಲ್ವಾ! ತಾನು ದರ್ಗಾನೇ ಈ ಹೆಸರಲ್ಲಿ ಮಾತಾಡ್ತಿರೋದು ಅಂತ!!! ನಾಚಿಕೆ ಮಾನ ಮರ್ಯಾದೆ ಎಲ್ಲಾ ಬಿಟ್ಟು ತನ್ನನ್ನೇ ತಾನು ಹೊಗಳುಕೊಳ್ತಿದೆಯಲ್ಲಾ ಈ ಬುರ್ಗಾ!!!! ಛೇ ಛೇ ಛೇ!!!

                    • Nagshetty Shetkar
                      ಆಕ್ಟೋ 28 2014

                      ಒಬ್ಬ ವ್ಯಕ್ತಿ ಅತ್ಯಂತ ಪ್ರಾಮಾಣಿಕನಾಗಿ ಪತ್ರಕರ್ತ ವೃತ್ತಿ ನಡೆಸಿ ಮಾರ್ಕ್ಸ್ ವಾದದ ಥಿಯರಿ ಅಷ್ಟೇ ಅಲ್ಲ ಅಪ್ಲಿಕೇಶನ್ ಅಲ್ಲೂ ಪರಿಣತಿ ಪಡೆದು ನಾಡಿನ ಶೋಷಿತರ ಅವಮಾನಿತರ ಅಭ್ಯುದಯದ ಉದ್ದೇಶದಿಂದ ವಚನ ಸಾಹಿತ್ಯದ ಅಧ್ಯಯನ ಕೂಡ ಮಾಡಿ ಪಡೆದ ಹೊಳಹೂಗಳನ್ನು ಜಾತಿ ಮತ ಕುಲವೆನಿಸದೆ ಎಲ್ಲರೊಂದಿಗೆ ಹಂಚಿಕೊಂಡು ನಿಸ್ಸ್ವಾರ್ಥ ಸೇವೆ ನಡೆಸುತ್ತಾ ಬದುಕುತ್ತಿದ್ದಾನೆ. ಅಂತಹ ಆದರ್ಶಪ್ರಾಯ ವ್ಯಕ್ತಿತ್ವವನ್ನು ಕಂಡು ಪ್ರೇರಣೆ ಪಡೆದು ಮೌಲ್ಯಯುಕ್ತ ಜೀವನ ನಡೆಸುವ ಬದಲು ಅವನ ಬಗ್ಗೆ ಕೀಳು ಮಾತುಗಳನ್ನು ಆಡುತ್ತಾ ನಿಂದನೆಯಲ್ಲೇ ಸಾರ್ಥಕ್ಯವನ್ನು ಕಾಣುತ್ತಿದ್ದೀರಲ್ಲ, ನಿಮ್ಮ ಸಮಸ್ಯೆ ಏನು? ವೈ ದಿಸ್ ಹೇಟ್ರೆಡ್?

                    • ಆಕ್ಟೋ 28 2014

                      ಅವರ ಬಗ್ಗೆ ತಮಗೇ ಮರ್ಯಾದೆ ಇದ್ದಂತಿಲ್ಲ! ಅವರನ್ನು ಏಕವಚನದಲ್ಲಿ ಸಂಭೋಧಿಸುತ್ತಿದ್ದೀರ. ಅಂತಾದ್ರಲ್ಲಿ ನಮಗೇಕೆ ಹೇಟ್ರೆಡ್ ಬಗ್ಗೆ ಪ್ರಶ್ನಿಸುತ್ತಿದ್ದೀರ!?

                    • Nagshetty Shetkar
                      ಆಕ್ಟೋ 28 2014

                      ವಿತ್ತಂಡ ವಾದ.

                    • ಆಕ್ಟೋ 31 2014

                      Loosers’s words

                    • Nagshetty Shetkar
                      ನವೆಂ 1 2014

                      ಲೂಸರ್ ಯಾರು? ನಿಮಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆಯೇ?

                    • ನವೆಂ 1 2014

                      ಖಂಡಿತಾ ಇಲ್ಲ. ಚರ್ಚೆ ಮಾಡಲಾಗದೆ ವಿತ್ತಂಡ ವಾದ ಎನ್ನುವವರಿಗೆ ಖಂಡಿತಾ ಸಿಗುವ ಚಾನ್ಸು ಇದೆ.

                    • Nagshetty Shetkar
                      ನವೆಂ 1 2014

                      “ಅವರ ಬಗ್ಗೆ ತಮಗೇ ಮರ್ಯಾದೆ ಇದ್ದಂತಿಲ್ಲ! ಅವರನ್ನು ಏಕವಚನದಲ್ಲಿ ಸಂಭೋಧಿಸುತ್ತಿದ್ದೀರ. ಅಂತಾದ್ರಲ್ಲಿ ನಮಗೇಕೆ ಹೇಟ್ರೆಡ್ ಬಗ್ಗೆ ಪ್ರಶ್ನಿಸುತ್ತಿದ್ದೀರ!?” ಅಂತ ವಿತ್ತಂಡ ವಾದ ಮಾಡುವ ನೀವು ಲೂಸರ್ ಅಲ್ಲದೆ ಮತ್ತೇನು??? ಗಾಜಿನ ಮನೆಯಲ್ಲಿದ್ದುಕೊಂಡು ಕಲ್ಲು ಹೊಡೆಯುವ ಹುಂಬತನವೇಕೆ?

                    • ನವೆಂ 1 2014

                      ತಮ್ಮ ಸ್ವಂತದ್ದೊಂದು ವಿಚಾರದ ಮನೆಯೂ ಇಲ್ಲದೆ, ದರ್ಗಾ ಮನೆಯಲ್ಲೂ ತಲೆ ಹುದುಗಿಸಿಕೊಂಡಿರುವ ನಿಮಗೆ ಗಾಜಿನ ಮನೆಯ ಚಿಂತೆಯೇಕೆ.

                      ನಿಮಗೆ ವಾದ ಮಾಡೋಕೆ ಕಲಿಸಿಕೊಟ್ಟಿದ್ದು ಯಾರು ಮಾರಾಯ್ರೆ!? ಲೂಸರ್ ಅನ್ನೋ ಪದ ಬಳಸಿದ್ದು ನಾನು. ಅದಕ್ಯಾಕೆ ಕ್ರೆಡಿಟ್ಟು ತಗೊಳ್ತೀರಿ.

  12. ಮಾರ್ಕ್ಸ್ ಮಂಜು
    ಆಕ್ಟೋ 29 2014

    Mr.Nagshetty Shetkar, is your Darga a marxist, if not y ru saying ‘ಒಬ್ಬ ವ್ಯಕ್ತಿ ಅತ್ಯಂತ ಪ್ರಾಮಾಣಿಕನಾಗಿ ಪತ್ರಕರ್ತ ವೃತ್ತಿ ನಡೆಸಿ ಮಾರ್ಕ್ಸ್ ವಾದದ ಥಿಯರಿ ಅಷ್ಟೇ ಅಲ್ಲ ಅಪ್ಲಿಕೇಶನ್ ಅಲ್ಲೂ ಪರಿಣತಿ ಪಡೆದು …’ bla bla

    ಉತ್ತರ
    • Nagshetty Shetkar
      ಆಕ್ಟೋ 29 2014

      ದರ್ಗಾ ಸರ್ ಅವರು ಏನು ಅಂತ ಒಂದೆರಡು ವಾಕ್ಯಗಳಲ್ಲಿ ನಿಮಗೆ ಹೇಳುವುದು ಕಷ್ಟ. ಅವರೊಬ್ಬ ಅನನ್ಯ ವ್ಯಕ್ತಿ. ಸರಳಾತಿ ಸರಳ ವಿರಳಾತಿ ವಿರಳ. ಇಂತಹ ವ್ಯಕ್ತಿ ನಮ್ಮ ನಡುವೆ ಇದ್ದರು ಅಂತ ಮುಂದೊಂದು ದಿನ ನೀವು ನಾವು ಎಲ್ಲರೂ ಪುಲಕಿತರಾಗಿ ನೆನಪಿಸಿಕೊಳ್ಳುತ್ತೇವೆ. ಅವರು ಜೀವಪರತೆಯ ಸಾರವೇ ಆಗಿದ್ದಾರೆ ಅಂದರೆ ಅತಿಶಯ ಎನಿಸದು.

      ಉತ್ತರ
      • ಮಾರ್ಕ್ಸ್ ಮಂಜು
        ಆಕ್ಟೋ 30 2014

        “ಅವರೊಬ್ಬ ಅನನ್ಯ ವ್ಯಕ್ತಿ. ಸರಳಾತಿ ಸರಳ ವಿರಳಾತಿ ವಿರಳ” Is he not a Normal human being like Me, U and others Mr.Nagshetty Shetkar? or Is he Greater than my ಮಹರ್ಷಿ ಮಾರ್ಕ್ಸ್? My question was very clear, ‘is your Darga a marxist?’ . ವೈದಿಕರ ಪುರಾಣದಂತೆ ವೈಭವೀಕರಿಸುವುದನ್ನು ನಿಲ್ಲಿಸಿ

        ಉತ್ತರ
        • shripad
          ಆಕ್ಟೋ 30 2014

          ಮಾರ್ಕ್ಸ್ ಮಂಜು ಅವರೇ ಮತ್ತೆ ಅದೇ ತಪ್ಪು ಮಾಡ್ತಿದ್ದೀರಿ. ವೈದಿಕವನ್ನು ತೆಗಳುವ ನಿಮಗೆ ವೈದಿಕ ಪದವಾದ ಮಹರ್ಷಿ ಎಂಬುದರ ಮೇಲೇಕೆ ವ್ಯಾಮೋಹ? ದೇವನೂರರು ಒಳ್ಳೆಯದು ಎಲ್ಲಿದ್ದರೂ ಬರಲಿ ಎನ್ನುವವರು. ನಿಮ್ಮಂತಲ್ಲ. ಅವರು ಹೇಳಿದ್ದಾರೆಂದು ಬರೀ ಅಷ್ಟನ್ನೇ ಹಿಡಿದು ಕೂತಿದ್ದೀರಲ್ಲಾ? ವೇದಗಳನ್ನು ರಚಿಸಿದವರೆಲ್ಲ ಮಹರ್ಷಿಗಳು ಸಾರ್. ಅದು ಪಕ್ಕಾ ವೈದಿಕ ಪದ. ನಿಮಗೆ ದೇವನೂರರಂತೆ ವಿಶಾಲ ಮನಸ್ಸಿದ್ದರೆ ಮಾತ್ರ ಆ ಪದ ಬಳಸುವುದರಲ್ಲಿ ಅರ್ಥವಿದೆ. ಒಂದೆಡೆ ವೇದಗಳನ್ನು ತೆಗಳುವುದು ಅದನ್ನು ತೆಗಳಲೂ ಅದರದ್ದೇ ಪರಿಕಲ್ಪನೆಗಳನ್ನು ಬಳಸಿಕೊಳ್ಳುವುದು ಯಾವ ನ್ಯಾಯ? ತಾಕತ್ತಿದ್ದರೆ ಅದಕ್ಕೂ ಅದ್ಭುತ ಎನಿಸುವ ಪದ ಹುಟ್ಟಿಸಿಕೊಳ್ಳಿ, ಬಳಸಿಕೊಳ್ಳಿ. ಮೆಚ್ಚೋಣ. ಶರಣ, ಜಂಗಮ, ಷಟ್ ಸ್ಥಲ, ಗುರು, ಪ್ರಸಾದ, ಅಷ್ಟಾವರಣ ಮೊದಲಾದವೂ ವೈದಿಕ ಮೂಲದ ಸಂಸ್ಕೃತದವು. ಅವರಿಗೂ ಬೇರೆ ಪದಗಳು ಸಿಗಲಿಲ್ಲ ನೋಡಿ. ವ್ಯಂಗ್ಯ ಅಲ್ಲವೇ?

          ಉತ್ತರ
          • ಮಾರ್ಕ್ಸ್ ಮಂಜು
            ಆಕ್ಟೋ 30 2014

            Mr.Shripad,please don’t portray me as ವೈದಿಕ ವಿರೋಧಿ.I have only told that.ವೈದಿಕರ ಪುರಾಣದಂತೆ ವೈಭವೀಕರಿಸುವುದನ್ನು ನಿಲ್ಲಿಸಿ.Does that sounds like scolding.is it not true that ಪುರಾಣಗಳು ವೈಭವೀಕರಿಸಿ ಹೇಳಲ್ಪಡುತ್ತವೆ.And also you can’t compare my heart with Devanuru. I am little younger than him

            ಉತ್ತರ
            • Shripad
              ನವೆಂ 1 2014

              ಪುರಾಣಗಳಲ್ಲಿ ವೈಭವ ಇರಲೇಬೇಕು ಸ್ವಾಮಿ. ಅವು ವರದಿಗಳಲ್ಲ, ಯೂರೋಪಿನವರು ನಿರೀಕ್ಷಿಸುವ ಚರಿತ್ರೆಯ ವಿವರಗಳೂ ಅಲ್ಲ. ಅವು ಕಥಾನಕಗಳು. ಮಹಾಕಾವ್ಯಗಳೂ ಅಷ್ಟೆ. ಇವನ್ನೆಲ್ಲ ವಾಸ್ತವದೊಂದಿಗೆ ಇಟ್ಟು ನೋಡಿದರೆ ಅವು ರಸಹೀನವೇ, ಅರ್ಥಹೀನವೇ. ಹನುಮಂತ ನೂರು ಯೋಜನ ಹಾರಿದನಂತೆ! (ಒಂದು ಯೋಜನ=ಸು.೪೦ ಮೈಲಿ) ಉದ್ದ ಜಿಗಿತದಲ್ಲಿ ೮.೯೫ ಮೀಟರೇ (ಸು. ೨೯ ಅಡಿ) ವಿಶ್ವದಾಖಲೆ. ಹಾಗಾಗಿ ಹನುಮಂತ ಅಷ್ಟು ದೂರ ಜಿಗಿದದ್ದು ಬುಲ್ ಶಿಟ್ ಅನ್ನಿ! ಇಷ್ಟೇ ತಾನೆ ನಿಮ್ಮ ತರ್ಕ?

              ಉತ್ತರ
        • Nagshetty Shetkar
          ನವೆಂ 1 2014

          ಮಾರ್ಕ್ಸ್ ಇಂದು ಬದುಕಿದ್ದರೆ ದರ್ಗಾ ಸರ್ ಅವರನ್ನು ತುಂಬಾ ಮೆಚ್ಚಿಕೊಳ್ಳುತ್ತಿದ್ದ ಹಾಗೂ ಬಸವ ಧರ್ಮಡ ಅನುಯಾಯಿ ಆಗುತ್ತಿದ್ದ. ಅನುಮಾನವೇ ಇಲ್ಲ ಮಿ. ಮಂಜು.

          ಉತ್ತರ
          • shripad
            ನವೆಂ 3 2014

            …ಹಾಗೆಯೇ ಲಿಂಗ ಕಟ್ಟಿ ಇದು ಸಮಾನತೆಯ ಲಿಂಗ. ನೀನೀಗ ಶರಣ. ಇನ್ನು ನೀನು ಷಟ್ಸ್ಥಲ, ಅಷ್ಟಾವರಣಗಳನ್ನು ಕಡ್ಡಾಯವಾಗಿ ಆಚರಿಸತಕ್ಕದ್ದು. ಜಂಗಮಪೂಜೆಯ ಅನಂತರ ಪ್ರಸಾದ ಸ್ವೀಕರಿಸಬೇಕು. ಶರಣ, ಜಂಗಮವಲ್ಲದವರನ್ನು ಹೇಗೆ ನೋಡಬೇಕು ಎಂಬುದನ್ನು ಈಗ ಅರ್ಥಮಾಡಿಕೋ ಎಂದು ಹೇಳುತ್ತಿದ್ದಂತೆ ದಾಸ್ ಕ್ಯಾಪಿಟಲ್ ಎತ್ತಿಕೊಂಡು ಓಡಿಹೋಗುತ್ತಿದ್ದ!

            ಉತ್ತರ
          • ಮಾರ್ಕ್ಸ್ ಮಂಜು
            ನವೆಂ 3 2014

            Mr.Nagshetty Shetkar, ಮಹರ್ಷಿ ಮಾರ್ಕ್ಸ್ ಬಸವ ಧರ್ಮದ ಅನುಯಾಯಿಗುವುದು ಇರಲಿ.
            First tell me Whether your sir has changed his Dharma to Basava Dharma?

            ಉತ್ತರ
            • Shripad
              ನವೆಂ 3 2014

              “ಶರಣರಿಗೆ ಧರ್ಮವಿಲ್ಲ, ಜಾತಿ ಇಲ್ಲ. ಅವರು ಎಲ್ಲರಿಂದಲೂ ಅತೀತರು. ಈ ಪ್ರಶ್ನೆಯಿಂದ ಮೊದಲೇ ಅತೀತರು. ನೀವು ಕಟ್ಟಾ ಶರಣರಿಗೆ ಹೀಗೆಲ್ಲ ಮತಾಂತರದ, ಧರ್ಮಾಂತರದ ತರಲೆ ಪ್ರಶ್ನೆ ಕೇಳಬಾರದು. ಇದಕ್ಕೆಲ್ಲ ಉತ್ತರಿಸಲು ನಮಗೆ ಸಮಯವಿಲ್ಲ. ದರ್ಗಾ ಒಬ್ಬ ಪಕ್ಕಾ ಶರಣ, ಕಟ್ಟಾ ಮುಸ್ಲಿಂ, ಒಬ್ಬ ಅಪೂರ್ವ ಮಾರ್ಕ್ಸ್ ವಾದಿ, ಸಮಾಜವಾದಿ, ಮಹಾ ಮಾನವತಾವಾದಿ, ಚಿಂತಕ, ಅಣುವಿಜ್ನಾನಿ, ದೃಷ್ಟಾರ, ವೈದ್ಯ, ಕಾರ್ಮಿಕ ಶ್ರೇಷ್ಠ…ಇನ್ನೂ ಏನೇನು ಬೇಕೋ ಎಲ್ಲಾ ಆಗಿದ್ದಾರೆ. ಅವರು ದಿವ್ಯರು, ಭವ್ಯರು…”

              ಉತ್ತರ
              • Nagshetty Shetkar
                ನವೆಂ 4 2014

                ಶ್ರೀಪಾದ ಅವರೇ, ದರ್ಗಾ ಸರ್ ಅವರು ನಮ್ಮ ಕಾಲದ ಅನನ್ಯ ಚೇತನ. ಅವರು ಬಂಡಾಯ ಕವಿ ಎಂದೂ ಹೆಸರುವಾಸಿ ಆಗಿದ್ದಾರೆ. ನವೆಂಬರ್ ೫ ರಂದು ಧಾರವಾಡ ಜಿಲ್ಲಾ ಕವಿ ಘೋಷ್ಟಿಯನ್ನು ದರ್ಗಾ ಸರ್ ಅವರು ಬಂಡಾಯ ಕವಿಯ ರೂಪದಲ್ಲಿ ಉದ್ಘಾಟಿಸಲಿದ್ದಾರೆ. ಅವಕಾಶವಿದ್ದರೆ ಈ ವಿದ್ವತ್ ಸಭೆಗೆ ಬನ್ನಿ. ಮಾಹಿತಿಗೆ ನೋಡಿ: _http://bit.ly/13Cfa4N

                ಉತ್ತರ
                • Shripad
                  ನವೆಂ 4 2014

                  ದರ್ಗಾ ಧಾರವಾಡವಷ್ಟೇ ಅಲ್ಲ, ಎಲ್ಲೆಲ್ಲೂ ಹೋಗಬಲ್ಲವರು. ಅವರು ಸರ್ವಾಂತರ್ಯಾಮಿ. ಅವರೊಬ್ಬ ಅಪ್ಪಟ ರೈತ, ಮಹಾನ್ ಪತ್ರಕರ್ತ, ಮಹಾನ್ ಸಂಶೋಧಕ, ವಂಶವಾಹಿತಜ್ನ, ಕುಲಶಾಸ್ತ್ರಜ್ನ, ರಾಜಕೀಯ ಚಿಂತಕ, ಸಮಾಜ ವಿಜ್ನಾನಿ, ಮನೋವಿಜ್ನಾನಿ, ಶರಣ ಶ್ರೇಷ್ಠ, ಅವತಾರ ಪುರುಷ..! ಮತ್ತೇನಾದರೂ ಉಳಿದಿದ್ದರೆ ನೀವೇ ಸೇರಿಸಿಕೊಳ್ಳಿ.

                  ಉತ್ತರ
              • ನವೆಂ 4 2014

                ಲಿಂಗಾಯಿತ ಮತದ ಮೇಲೆ ಸಂಶೋಧನೆ ಮಾಡಿ, ಲಿಂಗಾಯತರಿಗೇ ಲಿಂಗವೆಂದೇನೆಂದು ತಿಳಿಸಿಕೊಟ್ಟ ಮುಸಲ್ಮಾನ ಕುಲತಿಲಕ, ಈಗ ಕಾವ್ಯಘೋಷ್ಟಿ ಕೂಡ ಉದ್ಘಾಟಿಸಲಿದ್ದಾರೋ!?

                ಇದ್ಯಾರೋ ಸಕಲಕಲಾವಲ್ಲಭ ಮಹಾನ್ ಅವತಾರಪುರುಷನೇ ಇರಬೇಕು. ಶೆಟ್ಕರ್ ಅಂತಾ ಶೆಟ್ಕರ್ ಅನ್ನೇ ಮಂಕುಬೂದಿ ಎರಚಿಸಿಕೊಂಡಿದ್ದಾರೆಂದರೆ……ಈ ದರ್ಗಾ ಸಾಮಾನ್ಯರಲ್ಲ. ಇವರನ್ನು ಭೇಟಿಯಾಗಲೇಬೇಕು. ಧಾರವಾಡದ ವಿಳಾಸ ಕೊಡ್ತೀರಾ ಶೆಟ್ಕರ್!?

                ಉತ್ತರ
            • Nagshetty Shetkar
              ನವೆಂ 4 2014

              ಟೋಟಲ್ ಮುಖೇಡಿಗಳಾದ ಮಾರ್ಕ್ಸ್ ಮಂಜು ನಾಣಿ ಸಹನಾ ಮೊದಲಾದ ಫೇಕ್ ಐಡಿ ವೀರರೆಲ್ಲ ಧಾರವಾಡದ ಕಾವ್ಯ ಘೋಷ್ಟಿಗೆ ಬಂದು ಎಲ್ಲಾ ಪ್ರಶ್ನೆಗಳನ್ನು ಸಾರ್ವಜನಿಕರ ಸಮ್ಮುಖದಲ್ಲಿ ಕೇಳಲಿ, ಧೈರ್ಯವಿದ್ದರೆ.

              ಉತ್ತರ
              • ಮಾರ್ಕ್ಸ್ ಮಂಜು
                ನವೆಂ 4 2014

                ಧಮಕಿಗಳಿಗೆ ಬೆಚ್ಛಿಬಿದ್ದು ಸಿದ್ಧಾಂತ ಭ್ರಷ್ಟರಾಗಲು ನಾನು ಬೂರ್ಜ್ವಾ ಅಲ್ಲವೇ ಹೊರತು ಕಾಮ್ರೇಡ್ ಮಾರ್ಕ್ಸ್ ಮಂಜುವೇ ಆಗಿರುವೆನು.So stop threatening a Comred Mr.Nagshetty Shetkar and First tell me Whether your sir has changed his Dharma to Basava Dharma?

                ಉತ್ತರ
              • Naani
                ನವೆಂ 4 2014

                ಏ ಮಿ. ಹೇಟ್ಕರ್/ದರ್ಗಾ…. ಕಾವ್ಯ ಘೋಷ್ಟಿ ಗೆ ಬಂವರು ಕವನ ವಾಚಿಸೋ ಕೆಲ್ಸನಾದ್ರೂ ನೆಟ್ಟಗೆ ಮಾಡೋಕೆ ಬಿಡು! ಇಲ್ಲಿ ಕೇಳೋ ಪ್ರಶ್ನೆಗಳಿಗೇ ಉತ್ತರ ಗೊತ್ತಿಲ್ಲ! ಆದ್ರೂ ಉತ್ತರಕುಮಾರನ ಪೌರುಷ ಬೇರೆ! ಇಲ್ಲಿ ಮಾಡಕ್ಕೆ ಕೆಲ್ಸಇಲ್ಲಿ ಬಿಟ್ಟಿ ಬಿದ್ದಿದ್ದಾರ ? ಮೊದ್ಲು ನಿಮ್ ದರ್ಗಾ ಲಿಂಗಾಯತವನ್ನು ಸ್ವೀಕರಿಸಕ್ಕೆ ಹೇಳು ನಂತರ ಪೌರುಷ ಕೊಚ್ಕೊಳ್ವಂತೆ! 🙂

                ಉತ್ತರ
                • Nagshetty Shetkar
                  ನವೆಂ 5 2014

                  ಏಕ ವಚನ ಏಕೆ? ನಾನು ತಮ್ಮನ್ನು ಎಂದಾದರೂ ಏಕ ವಚನದಲ್ಲಿ ಸಂಬೋಧಿಸಿದ್ದೆನೆಯೇ?

                  ಉತ್ತರ
                  • ಮಾರ್ಕ್ಸ್ ಮಂಜು
                    ನವೆಂ 5 2014

                    I am not interested in any ಏಕ ವಚನ or ಬಹು ವಚನ. I am interested only in ಮಹರ್ಷಿ ಮಾರ್ಕ್ಸ್ ವಚನ

                    ಉತ್ತರ
                    • Nagshetty Shetkar
                      ನವೆಂ 6 2014

                      He he! Question was for Nani! Reply is by Manju!! Both are clearly same person. What a joker this person is.

                    • Naani
                      ನವೆಂ 6 2014

                      ಲೂಸು ಲೂಸಾಗಿ ಖುಷಿ ಪಡೋದನ್ನು ನೋಡು!! ಸ್ವಲ್ಪ ನನ್ನ ಕಮೆಂಟಿನ ಮೇಲೆ ನೋಡು ಮಂಜುರದ್ದೂ ಇದೆ. ನಿಮ್ ತರ ಸಾವಿರಸಾರಿ ‘ಒಂದ್ಸಾರಿ ಹೇಳಿಕೆ ಅದಕ್ಕೆ +1 ಒತ್ತೋದು’ ಮತ್ತು ನಿಂಗೆ ಕೇಳಿದ ಪ್ರಶ್ನೆಗೇ “ದರ್ಗಾ ಸರ್ ಗೆ” ಪುರಸೋತ್ತಿಲ್ಲ ಅಂತ ಪುಂಗಿ ಊದಿ ಇಲ್ಲಿ ಶೆಟ್ಕರನ ಹೆಸರಲ್ಲಿ ಬರೀತಿರೋದು ದರ್ಗಾನೇ ಅಂತ ಜಗಜ್ಜಾಹಿರು ಮಾಡ್ಕೊಂಡಿರೋರು ಬಹುಷಃ ಇನ್ನಾರೂ ಸಿಗಲಿಕ್ಕಿಲ್ಲ.!!!

  13. naani
    ನವೆಂ 3 2014

    ಮಾರ್ಕ್ಸ್ ಮಂಜು ಅವರೆ ನೀವೂ ಅದೇ ಪ್ರಶ್ನೆ ಕೇಳಿ ಅವರ ತಲೆ ತಿನ್ನುತ್ತಿದ್ದೀರಲ್ಲಾ? ಈಗಾಗಲೇ ನಿಲುಮೆಯ ಎಲ್ಲಾ ಕಮೆಂಟಿಗರೂ ಈ ಪ್ರಶ್ನೆ ಕೇಳಿ ಕೇಳೀ ತಲೆ ತಿಂದಿದ್ದಾರೆ ಅವರು ಅಂದರೆ ಶೆಟ್ಟರು ನಿಮಗೆ ಬೇರೆ ಕೆಲಸ ವಿಲ್ಲವೆ? ನನಗೆ ನಿಮ್ಮ ಜೊತೆ ವಾದಿಸಲು ಸಮಯವಿಲ್ಲ. ನನಗೆ ತುಂಬಾ ಕೆಲಸಗಳಿವೆ ಇತ್ಯಾದಿ ಹೇಳಿ ನುಣುಚಿಕೊಳ್ಳುತ್ತಲೇ ಇದ್ದಾರೆ. ನಮ್ಮ ಉತ್ತರ ಕರ್ನಾಟಕದ ಕಡೆ ಹೀಗಾದಾಗ ಅದೇ ….. ಅದೇ ಕಟಿಗಿ ಎಂದು ಅನ್ನುತ್ತಾರೆ. 🙂 🙂 🙂 🙂 🙂

    ಉತ್ತರ
  14. ಮಾರ್ಕ್ಸ್ ಮಂಜು
    ನವೆಂ 6 2014

    Mr.Shetkar, I shall appreciate your sense humour later.But before that answer my question and don’t escape like a ಬೂರ್ಜ್ವಾ
    Tell me Whether your sir has changed his Dharma to Basava Dharma?

    ಉತ್ತರ
    • Nagshetty Shetkar
      ನವೆಂ 6 2014

      ಮಾರ್ಕ್ಸ್ ಮಂಜು ಅವರೇ, ದರ್ಗಾ ಸರ್ ಅವರು ನಮ್ಮ ಕಾಲದ ಚನ್ನಬಸವಣ್ಣ ಎಂಬುದು ಅನೇಕ ಬಸವಜ್ಞಾನಿಗಳು ಅಭಿಪ್ರಾಯವಾಗಿದೆ. ಬಸವಾದ್ವೈತದ ಆಧುನಿಕ ಅಧ್ವರ್ಯುಗಳಲ್ಲಿ ನಮ್ಮ ದರ್ಗಾ ಸರ್ ಅಗ್ರಗಣಿ. ಅವರ ಬಸವನಿಷ್ಠೆ ಬಗ್ಗೆ ಯಾವ ಅನುಮಾನವೂ ಬೇಡ. ದರ್ಗಾ ಸರ್ ಅವರ ಬಗ್ಗೆ ಗೌರವ ಬಿಟ್ಟು ಮಾತನಾಡುವ ಧಾರ್ಷ್ಟ್ಯ ತೋರಿಸಬೇಡಿ. ದರ್ಗಾ ಸರ್ ಅವರ ಬಸವನಿಷ್ಠೆ ಬಗ್ಗೆ ಪ್ರಶ್ನೆ ಕೇಳಲು ನಿಮಗೆ ಯೋಗ್ಯತೆ ಇದೆಯೇ? ಮಾರ್ಕ್ಸ್ ಅನ್ನು ನೆಪ ಮಾಡಿಕೊಂಡು ಕಪಿಚೇಷ್ಟೆ ಮಾಡುತ್ತಾ ಸಮಯ ವ್ಯಯ ಮಾಡುವ ನೀವೆಲ್ಲಿ ನಾಡಿನ ಮೇಲ್ಪಂಕ್ತಿಯ ಬಂಡಾಯ ಕವಿಯಾಗಿ ಧಾರವಾಡ ಜಿಲ್ಲಾ ಕವಿ ಘೋಷ್ಟಿಯನ್ನು ಉದ್ಘಾಟಿಸಿದ ದರ್ಗಾ ಸರ್ ಎಲ್ಲಿ?! ನಿಮ್ಮ ಉದ್ಧಟತನವನ್ನು ಹೆಚ್ಚು ಕಾಲ ಸಹಿಸಲಾಗುವುದಿಲ್ಲ. ನಿಮ್ಮ ವರ್ತನೆಯನ್ನು ತಿದ್ದಿಕೊಂಡು ನಾಗರಿಕರಾಗಿ.

      ಉತ್ತರ
      • ಮಾರ್ಕ್ಸ್ ಮಂಜು
        ನವೆಂ 6 2014

        What I understood from your Novel like comment is that your sir has not changed his dharma.If he hasn’t changed then how can you say “ಮಾರ್ಕ್ಸ್ ಇಂದು ಬದುಕಿದ್ದರೆ ದರ್ಗಾ ಸರ್ ಅವರನ್ನು ತುಂಬಾ ಮೆಚ್ಚಿಕೊಳ್ಳುತ್ತಿದ್ದ ಹಾಗೂ ಬಸವ ಧರ್ಮಡ ಅನುಯಾಯಿ ಆಗುತ್ತಿದ್ದ. ಅನುಮಾನವೇ ಇಲ್ಲ ಮಿ. ಮಂಜು.” Mr.Nagshetty Shetkar? Take back your words if you can’t follow what you say.

        If his ideology is some ಬಸವಾದ್ವೈತ that’s ok. Anything without ಮಹರ್ಷಿ ಮಾರ್ಕ್ಸ್ is of disinterest to me.

        ಉತ್ತರ
        • Nagshetty Shetkar
          ನವೆಂ 7 2014

          ಮಾನ್ಯರೇ, ತಮಗೆ ನಾಡಿನ ದೀನದಲಿತರ ಶೋಷಿತರ ಮಹಿಳೆಯರ ಅಲ್ಪಸಂಖ್ಯಾತರ ಅಭ್ಯುದಯಕ್ಕಿಂತ ಮಾರ್ಕ್ಸ್ ಜಪ ಮಾಡುವುದೇ ಹೆಚ್ಚು ಮುಖ್ಯವಾಗಿದ್ದರೆ ದಯವಿಟ್ಟು ನಿಮ್ಮ ಆ ಮಹರ್ಷಿಯ ಸಮಾಧಿ ಹೊಕ್ಕಿ ಅಲ್ಲೇ ಜಪ ಮಾಡಿ.

          ಉತ್ತರ
          • ಮಾರ್ಕ್ಸ್ ಮಂಜು
            ನವೆಂ 7 2014

            by saying “ನಿಮ್ಮ ಆ ಮಹರ್ಷಿಯ ಸಮಾಧಿ ಹೊಕ್ಕಿ ಅಲ್ಲೇ ಜಪ ಮಾಡಿ” you proved that you are ಮಾರ್ಕ್ಸ್ ವಿರೋಧಿ. ಸಮಾಧಿ ಸೇರಿರುವುದು ನಿಮ್ಮ ಮೌಢ್ಯವಾಗಿದೆ Mr.Nagshetty Shetkar.ಮೊದಲಿಗೆ ಮಾರ್ಕ್ಸ್ ಬಸವಾದ್ವೈತ ಎನ್ನುವ ಸಿದ್ಧಾಂತ ಎಂದವರು ಈಗ ಬಸವಾದ್ವೈತ ಮಾತ್ರ ಮಾಡಿರುವುದೇ ನಿಮ್ಮ ಮಾರ್ಕ್ಸ್ ವಿರೋಧಿ ಧೋರಣೆಯ ಕುರುಹಾಗಿದೆ

            ಉತ್ತರ
            • shripad
              ನವೆಂ 7 2014

              ಅನೇಕ ಅರೆ ಬರೆಗಳನ್ನು ಓದಿ, ಕಟ್ ಪೇಸ್ಟ್ ಮಾಡಿಕೊಂಡು ಚಿತ್ರಾನ್ನವಾದ ತಲೆ ಅದು ಮಂಜು ಅವರೇ. ಕೆಲವೊಮ್ಮೆ ಮಾರ್ಕ್ಸ್, ಮಗದೊಮ್ಮೆ ಬಸವ, ಇನ್ನೊಮ್ಮೆ ಸಮಾಜವಾದ, ಮತ್ತೊಮ್ಮೆ ವಿಚಾರವಾದ… ಒಮ್ಮೆ ಬಸವಾದ್ವೈತ, ಇನ್ನೊಮ್ಮೆ ದರ್ಗಾದ್ವೈತ (ಶರಣ ಮತ್ತು ಅಲ್ಲಾರಲ್ಲಿ ಅಭೇದವಿದೆ ಎನ್ನುತ್ತ ಅಲ್ಲಾಗೇ ಅಂಟಿಕೊಳ್ಳುವ, ಆದರೂ ಜಾತಿ, ಮತಗಳನ್ನು ಮೀರಿದಂತೆ ಕಾಣಿಸಿಕೊಳ್ಳುವ ಹೊಸ ಸಿದ್ಧಾಂತ!)…ಯಾಕೆ ಕೇಳ್ತೀರಿ?

              ಉತ್ತರ
            • Nagshetty Shetkar
              ನವೆಂ 7 2014

              @Moderator: please ban this nuisance character manju with fake id. He derailing debates.

              ಉತ್ತರ
              • ಮಾರ್ಕ್ಸ್ ಮಂಜು
                ನವೆಂ 10 2014

                Stop complaining to moderator and face my question like a comred Mr.Nagshetty Shetkar.People here know that who is derailing debates here

                ಉತ್ತರ
  15. ನವೆಂ 7 2014

    ಅಬ್ಭಾ! ಎಂತಹ ವಿಶಾಲ ಮನಸ್ಸು!? ಎಷ್ಟು ಅತ್ಯುನ್ನತ ವಿಚಾರ!?
    ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಅದೆಷ್ಟು ಆಗ್ರಹ!!? ಎಂತಹ ಧೀಮಂತ ಪ್ರಗತಿಪರ ವಿಚಾರವಾದಿ!!!!?

    ಶೇಟ್ಕರರೇ, ನಿಜಕ್ಕೂ ನೀವೊಬ್ಬ ಕಾಯಕಯೋಗಿ, ಅಪ್ರತಿಮ ಪ್ರಗತಿಪರ ವಿಚಾರವಾದಿ ಚಿಂತಕ……
    ನೀವು ನಿಜಕ್ಕೂ ಇರಬೇಕಾದುದು ಇಲ್ಲಲ್ಲ…..ನೀವಿರಬೇಕಾದ್ದು ಆಫ್ಘಾನಿಸ್ತಾನ, ಇರಾನ್ ದೇಶ, ಚೀನಾ ದೇಶ, ಸೌದಿ ಅರೇಬಿಯಾ ದೇಶ ಅಥವಾ ಹಿಟ್ಲರನ ಜರ್ಮನಿಯಲ್ಲಿ.

    ನಿಮ್ಮಂತಹ ಅತ್ಯುನ್ನತ ವಿಚಾರವಾದಿಯನ್ನು ಪ್ರಶ್ನಿಸುವುದೆಂದರೇನು, ರೇಗಿಸುವುದೆಂದರೇನು? ಇಷ್ಟೆಲ್ಲಾ ಆದಮೇಲೂ ಆ ಲೇಖಕರನ್ನು ನಿಶೇಧಿಸಿಲ್ಲವೆಂದರೆ, ಇಲ್ಲಿ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಬೆಲೆಯೇ ಇಲ್ಲ ಎಂದಲ್ಲವೇ ಅರ್ಥ!?

    ನಿಮ್ಮ ವಿಚಾರ ಉಳಿದು ಮಿಕ್ಕೆಲ್ಲ ವಿಚಾರವನ್ನೂ ನಿಶೇಧಿಸಬೇಕು, ಹತ್ತಿಕ್ಕಬೇಕು, ವಿರೋಧಿಗಳನ್ನು ಧೂಳಿಪಟ ಮಾಡಿಬಿಡಬೇಕು ಎಂದು ನಿಮಗನ್ನಿಸುತ್ತಿದೆ ಎಂದರೆ, ನೀವು ಬಹಳ ಉನ್ನತ ಮಟ್ಟಕ್ಕೇರಿ ಬಿಟ್ಟಿದ್ದೀರಿ ಎಂದೇ ಅರ್ಥ – ಹಿಟ್ಲರ್, ಲೆನಿನ್, ಸ್ಟಾಲಿನ್, ಮಾವೋ, ಇದಿ ಅಮೀನ್, ಇತ್ಯಾದಿಗಳ ಸಾಲಿನಲ್ಲಿ ನೀವಿದ್ದೀರಿ.

    ನಿಮ್ಮ ‘ದರ್ಗಾ ವಿಚಾರ’ ಎಲ್ಲರಿಗೂ ತಿಳಿಸಿಕೊಟ್ಟು, ಬೇರಾವ ವಿಚಾರವನ್ನೂ ನೀವು ಒಂದಿನಿತೂ ಸಹಿಸುವುದಿಲ್ಲ ಎಂಬುದನ್ನು ನೀವು ಇಷ್ಟು ಬೇಗ ಬಹಿರಂಗ ಪಡಿಸಿದ್ದಕ್ಕೆ ನಿಮಗೆ ಬಹಳ ಧನ್ಯವಾದಗಳು. 😉

    ಈಗ ನಮಗೆಲ್ಲರಿಗೂ ‘ದರ್ಗಾ ವಿಚಾರ’, ‘ಕಾಯಕ ಯೋಗ’, ‘ಬಸವಾದ್ವೈತ’, ‘ಬಸವ ತತ್ತ್ವ’, ‘ಪ್ರಗತಿಪರ ವಿಚಾರ’, ‘ಮಾರ್ಕ್ಸ್ ವಾದ’, ‘ಹೇತ್ಕರ್ ವಾದ’, ಇತ್ಯಾದಿಗಳೆಲ್ಲವೂ ಒಂದೇ ಸಲಕ್ಕೆ ಅರ್ಥವಾಗಿಬಿಟ್ಟವು!
    ನಿಮ್ಮ ಸಾಮರ್ಥ್ಯದ ವಿಶ್ವರೂಪ ಮಾಡಿಸಿದ್ದಕ್ಕೆ ಮತ್ತೊಮ್ಮೆ ನಿಮಗೆ ಧನ್ಯವಾದಗಳು. 😉

    ಉತ್ತರ
    • Nagshetty Shetkar
      ನವೆಂ 7 2014

      “ನಿಜಕ್ಕೂ ನೀವೊಬ್ಬ ಕಾಯಕಯೋಗಿ, ಅಪ್ರತಿಮ ಪ್ರಗತಿಪರ ವಿಚಾರವಾದಿ ಚಿಂತಕ…”

      +1

      “ನಿಮ್ಮ ವಿಚಾರ ಉಳಿದು ಮಿಕ್ಕೆಲ್ಲ ವಿಚಾರವನ್ನೂ ನಿಶೇಧಿಸಬೇಕು, ಹತ್ತಿಕ್ಕಬೇಕು, ವಿರೋಧಿಗಳನ್ನು ಧೂಳಿಪಟ ಮಾಡಿಬಿಡಬೇಕು ಎಂದು ನಿಮಗನ್ನಿಸುತ್ತಿದೆ”

      -1

      ಉತ್ತಮ ವಿಚಾರಗಳು ಬಲಪಂಥೀಯರಿಂದ ಬಂದರೂ ನಾನು ಅವನ್ನು ಸ್ವೀಕರಿಸುತ್ತೇನೆ. ಮಾರ್ಕ್ಸ್ ಹೆಸರಿನಲ್ಲಿ ಅಸಂಬದ್ಧ ಪ್ರಲಾಪ ಮಾಡಿ ವಿಚಾರ ವಿನಿಮಯಕ್ಕೆ ಧಕ್ಕೆ ಉಂಟು ಮಾಡುವುದನ್ನು ಪ್ರತಿರೋಧಿಸುತ್ತೇನೆ.

      ಉತ್ತರ
      • ನವೆಂ 10 2014

        +1 and -1, put together it makes a perfect sense of what you are Mr. Shetkar……a zero (0) 🙂

        Thanks for blurting out the truth 😛

        ಉತ್ತರ
        • Nagshetty Shetkar
          ನವೆಂ 10 2014

          ಪ್ರಗತಿಪರರನ್ನು ಲೇವಡಿ ಮಾಡುವುದೇ ನಿಮ್ಮಂತಹ ನಮೋ ಸೇನೆಯ ಕಪಿಗಳ ಕೆಲಸ. ಎಷ್ಟು ಕಾಸು ಸಿಕ್ಕಿದೆ ಈ ಕೆಲಸಕ್ಕೆ ನಿಮಗೆ?

          ಉತ್ತರ
          • ನವೆಂ 10 2014

            ಲೇವಡಿಯೇ!!?? ಆ ಅಗತ್ಯ ನಿಮಗಿದೆಯೇ? ನಿಮ್ಮ ಅತಾರ್ಕಿಕ ಬರಹಗಳೇ ಅದಾಗಲೇ ನಿಮ್ಮನ್ನು ಲೇವಡಿ ಮಾಡುತ್ತಿಲ್ಲವೇ!!!?

            ನಮೋಸೇನೆಯೆಲ್ಲಿಂದ ಬಂತು ಈಗ!!? ನಿಮಗೆ ತಿಳಿಹೇಳುವವರಿಗೆಲ್ಲಾ ನಮೋ ಸಂಪರ್ಕವಿದೆಯೆಂದುಕೊಳ್ಳುವ ನಿಮ್ಮ ಮ್ಯಾಕ್ಬೆತ್ ಸಿಂಡ್ರೋಮಿನಿಂದ ದಯವಿಟ್ಟು ಹೊರಬನ್ನಿ.

            ಇನ್ನು ಕಾಸಿನ ವಿಷಯಕ್ಕೆ ಬಂದರೆ, ದರ್ಗಾ ಬಗ್ಗೆ ಪ್ರಚಾರ ಮಾಡಲು ನಿಮಗೆಷ್ಟು ಸಿಕ್ಕಿದೆಯೋ ಅಷ್ಟೇ ನನಗೂ ಸಿಕ್ಕಿದೆಯೆಂದುಕೊಳ್ಳಿ.

            ಉತ್ತರ
            • Nagshetty Shetkar
              ನವೆಂ 10 2014

              ದರ್ಗಾ ಸರ್ ಕಂಡರೆ ನಿಮಗೇಕೆ ಈ ಪಾಟಿ ಉರಿ? ವೈದಿಕಶಾಹಿ ವಿರುದ್ಧ ಅವರು ಸಮರ ಸಾರಿದ್ದಾರೆಂದು ಅವರ ಬಗ್ಗೆ ಇಷ್ಟೊಂದು ನಂಜಿನ ಭಾವವೇ? ಸಮಾನತೆಯ ಕಹಳೆಯನ್ನು ಓದುತ್ತಿದ್ದಾರೆ ಎಂದು ಅವರ ಬಗ್ಗೆ ದ್ವೇಷವೇ? ಶರಣರ ತತ್ವಸುಧೆಯನ್ನು ಸಮಕಾಲೀನ ತಲ್ಲಣಗಳ ಅರ್ಥೈಸುವಿಕೆಗೆ ಬಳಸಿದ್ದಾರೆಂದು ಅಸೂಯೆಯೇ? ಅಪ್ರತಿಮ ಬಂಡಾಯ ಕವಿಯಾಗಿ ವೈದಿಕ ಪ್ರತಿಮೆಗಳನ್ನು ನಿರಾಕರಿಸಿದ್ದಾರೆಂದು ಬೇಸರವೇ? ಜನಸಾಮಾನ್ಯರು ಮೆಚ್ಚುವ ಭಾಷಣಕಾರನಾಗಿ ವಿಶ್ವಕನ್ನಡಿಗರ ಅಭಿಮಾನಕ್ಕೆ ಪಾತ್ರರಾಗಿದ್ದಾರೆಂದು ಕ್ರೋಧವೇ? ಕೋಮುವಾದದ ಜಾತಿವಾದದ ಪ್ರಮುಖ ಟೀಕಾಕಾರನಾಗಿ ಭಾವೈಕ್ಯತೆಯನ್ನು ಎತ್ತಿಹಿಡಿದಿದ್ದಾರೆ ಎಂದು ವ್ಯಥೆಯೇ? ಹೇಳಿ ಏನು ನಿಮ್ಮ ಪ್ರಾಬ್ಲಂ ಅಂತ.

              ಉತ್ತರ
              • ಮಾರ್ಕ್ಸ್ ಮಂಜು
                ನವೆಂ 11 2014

                -2

                ಕೆಲಸಕ್ಕೆ ಬಾರದ ಬೂರ್ಜ್ವಾ ವೈಭವೀಕರಣ

                ಉತ್ತರ

Leave a reply to Nagshetty Shetkar ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments