ನಾಳೆ ಬಿಡುಗಡೆಯಾಗಲಿರುವ ನಿಲುಮೆ ಪ್ರಕಾಶನದ ಪುಸ್ತಕಗಳ ಪರಿಚಯ
ಬುದ್ಧಿಜೀವಿಗಳ ಮೂಢನಂಬಿಕೆಗಳು :
ಭಾರತೀಯ ಸಮಾಜದ ಕುರಿತು ಇಂದು ಪ್ರಚಲಿತದಲ್ಲಿರುವ ಥಿಯರಿಗಳು ಕ್ರೈಸ್ತ ಥಿಯಾಲಜಿಯ ಪೂರ್ವಗ್ರಹಗಳೇ ವಿನಃ ನಿಜವಾದ ಥಿಯರಿಗಳಲ್ಲ. ನಿಜವಾದ ಥಿಯರಿಗಳನ್ನು ಕಟ್ಟುವ ಕೆಲಸ ಇನ್ನು ಮುಂದೆ ನಡೆಯಬೇಕಿದೆ. ಈಗ ಸಮಾಜ ವಿಜ್ಞಾನಿಗಳಿಂದ ಆಗಬೇಕಾಗಿರುವ ಕೆಲಸವೆಂದರೆ ನಿಜವಾದ ಸಾಮಾಜಿಕ ಸಿದ್ಧಾಂತಗಳನ್ನು ರೂಪಿಸುವುದು. ಅಂದರೆ ಪಾಶ್ಚಾತ್ಯರು ಪ್ರಾರಂಭಿಸಿದ ಸಮಾಜ ವಿಜ್ಞಾನದ ತಿಳಿವಳಿಕೆಯನ್ನು ನಮ್ಮ ಅನುಭವದ ಬೆಳಕಿನಲ್ಲಿ ಪರಿಷ್ಕರಿಸುತ್ತ ಬೆಳೆಸುವುದು. ಇದೊಂದು ಅಗಾಧವಾದ ಕೆಲಸ ಹಾಗೂ ಅನೇಕ ತಲೆಮಾರುಗಳ ಕೆಲಸ.
ಇಂದು ಸಮಾಜ ವಿಜ್ಞಾನದ ಸತ್ಯಗಳು ಒಬ್ಬನು ಯಾವ ಜಾತಿ, ಲಿಂಗ ಅಥವಾ ಮತಕ್ಕೆ ಸೇರಿದ್ದಾನೆ ಎಂಬುದನ್ನು ಅವಲಂಬಿಸಿ ನಿರ್ಣಯವಾಗುವ ಪರಿಸ್ಥಿತಿ ಇದೆ. ಇದೊಂದು ರೀತಿಯ ಕುರುಡು. ಇದನ್ನೇ ಬುದ್ಧಿಜೀವಿಗಳ ಮೌಢ್ಯ ಎಂದು ಕರೆಯಲು ಬಯಸುತ್ತೇನೆ. ಅಂದರೆ ಇದು ನಿಜವಾಗಿಯೂ ವೈಜ್ಞಾನಿಕ ಚಿಂತನೆಯ ಕುರಿತ ಹಾಗೂ ಸಾಮಾಜಿಕ ಥಿಯರಿಗಳನ್ನು ಕಟ್ಟುವ ಕುರಿತ ಮೌಢ್ಯ. ಇವರೆಲ್ಲ ಭಾರತೀಯ ಸಂಸ್ಕೃತಿಯಲ್ಲಿರುವ ಮೂಢನಂಬಿಕೆಗಳನ್ನು ತೊಡೆಯುವ ಕುರಿತು ಮಾತನಾಡುತ್ತಿದ್ದಾರೆ. ಆದರೆ ಅಂಥ ಭಾರತೀಯ ಸಂಸ್ಕೃತಿ ಹಾಗೂ ಸಮಾಜದ ಕುರಿತ ಇವರ ವಿಚಾರಗಳೇ ಮೂಢನಂಬಿಕೆಗಳ ಸರಣಿಯಾಗಿವೆ ಎಂಬುದು ಒಂದು ವಿಪರ್ಯಾಸ.
ಕೊಟ್ಟಕುದುರೆಯನೇರಲರಿಯದೆ :
ವಚನಗಳು ಜಾತಿ ವಿರೋಧಿ ಚಳವಳಿಯೆಂದು ಒತ್ತಾಯಿಸುವ ಚಿಂತಕರು, ಆಧ್ಯಾತ್ಮ ಸಾಧನೆಯ ಆರಂಭದ ಹಂತದಲ್ಲಿ ಬರುವ ಕೆಲವೇ ಕೆಲವು ವಚನಗಳಲ್ಲಿನ ವಿಚಾರವನ್ನೇ ಇಡಿಯಾಗಿ ವಚನ ಸಂಪ್ರದಾಯಕ್ಕೆ ಆರೋಪಿಸುವ ತಪ್ಪು ಮಾಡುತ್ತಾರೆ. ಷಟ್ ಸ್ಥಲ ಕಲ್ಪನೆಯ ಮೂಲಕ ನೋಡುವುದಾದರೆ, ಅಲ್ಲಮ ಬಸವಣ್ಣನವರಂಥ ಆತ್ಮಜ್ಞಾನಿಗಳನ್ನು ಇವರು ಭಕ್ತಸ್ಥಲ ಮತ್ತು ಮಾಹೇಶ್ವರಸ್ಥಲದ ಆಚೆಗೆ ಹೋಗದ, ಅಂದರೆ ತಮ್ಮ ಭವವೇ ಹಿಂಗಿರದ ಹೊಡೆಯುತ್ತಿರುವ ಸಾಧಾರಣ ಭಕ್ತರು ಎಂಬಂತೆ ಚಿತ್ರಿಸಿ ಅದನ್ನು ಜಗತ್ತಿನಲ್ಲೆಲ್ಲಾ ಸಾರುತ್ತಿದ್ದಾರೆ. ಅಷ್ಟೇ ಅಲ್ಲ ಅದೇ ಅವರ ಹೆಚ್ಚುಗಾರಿಕೆ ಎಂದು ಒತ್ತಾಯಿಸುತ್ತಿದ್ದಾರೆ. ನಮಗೆ ಇಂದು ಯಾವ ಚಿತ್ರಣ ಬೇಕು? ಬಸವಣ್ಣನವರ ಕುರಿತು ಭಾರತೀಯ ಪರಂಪರೆಯು ಒದಗಿಸುವ ಚಿತ್ರಣವೊ ಅಥವಾ ಪಾಶ್ಚಾತ್ಯ ಪರಂಪರೆಯು ಒದಗಿಸುವ ಚಿತ್ರಣವೊ?
ವಚನಗಳ ಈಗಿನ ಓದಿನಲ್ಲಿರುವ ಕೊರತೆಯನ್ನು ತೆಗೆದು ತೋರಿಸಿ ಅವನ್ನು ಸರಿಪಡಿಸುವ ತುರ್ತು ಅಗತ್ಯ ಇಂದು ನಮ್ಮ ಮುಂದಿದೆ.ಈ ಕೃತಿಯಲ್ಲಿರುವ ಲೇಖನಗಳು ಈ ನಿಟ್ಟಿನಲ್ಲಿ ಬಾಲಗಂಗಾಧರರ ಸಂಶೋಧನಾ ತಂಡದ ಅಲ್ಪ ಕಾಣಿಕೆಗಳು. ನಾವು ಬೆಳೆದು ಬಂದ ಸಂಪ್ರದಾಯಗಳು ಸತ್ತ ಪಳೆಯುಳಿಕೆಗಳಲ್ಲ, ಅವನ್ನು ನಮಗೆ ಬೇಕಾದಂತೇ ಬೇಕಾಬಿಟ್ಟಿಯಾಗಿ ಉಪಯೋಗಿಸಿ ಬಿಸಾಡಲು ಬರುವುದಿಲ್ಲ, ಹಾಗೂ 21ನೆಯ ಶತಮಾನದಲ್ಲೂ ಕೂಡ ಅವು ತಮ್ಮ ಸತ್ವವನ್ನು ಹಾಗೂ ಪ್ರಸ್ತುತತೆಯನ್ನು ಉಳಿಸಿಕೊಂಡಿವೆ ಎಂದು ನಮ್ಮಂತೆ ನಂಬುವವರನ್ನು ಉದ್ದೇಶಿಸಿ ಈ ಲೇಖನಗಳನ್ನು ಬರೆಯಲಾಗಿದೆ
ನಮ್ಮ ಪ್ರಕಾಶನದ ಮೊದಲ ಪುಸ್ತಕ, “ಬೌದ್ಧಿಕ ದಾಸ್ಯದಲ್ಲಿ ಭಾರತ” ಪುಸ್ತಕ ದೊರೆಯುವ ಬಗ್ಗೆ ಮಾಹಿತಿ
Scientific thinking. Fight against all sort of superstitions, and effort to take the Society forward started when Swami Dayanand spearheaded Vedic Hinduism as opposed to puranic Hinduism. Firmly rooted in Vedas, he opposed caste system, Idol worship. astrology, pilgrimages and other host of activities which debilitated Hindu society. Swami Dayanand opposed those things which our present intelligentsia is showing as present in Hinduism. Dayanand’s scientific thinking, rational approach to life and spiritual matters, have won the acclaim of honest intellectuals. Rabindranath Tagore who was rooted in Brahmo samaj candidly accepted that Aryasamaj which represented the thinking of Dayanand is the best blend of east and western philosophical thinking and behaviour. Hence, my appeal to the present intellectuals is to study the philosophy of Dayanand in the light of present day advancement and take the country forward by imbibing his teachings. I find that those people who are against the pseudo intellectuals have also failing to point out what is best in our tradition. Merely objecting to the leftist thinking is no good unless you come with alternative.
Looks like you have not studied Heathen in his Blindness book. Your ignorance is quite apparent.