“ಕೊಟ್ಟಕುದುರೆಯನೇರಲರಿಯದೆ…” ಪುಸ್ತಕ ದೊರೆಯುವ ಮಾಹಿತಿ
೨೦೧೩ರಲ್ಲಿ ನಡೆದ “ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ”ಯ ಚರ್ಚೆ,ರಾಜ್ಯದ ಪ್ರಗತಿಪರರ ನಿದ್ದೆಗೆಡಿಸಿದ್ದು ಸುಳ್ಳಲ್ಲ.ಮೊದಲಿಗೆ ಈ ಜನರು ಪತ್ರಿಕೆಯಲ್ಲಿ ಚರ್ಚೆಯೇ ಆಗದಂತೆ ತಡೆಯಲು ಪ್ರಯತ್ನಿಸಿದರು.ಅದೂ ಸಫಲವಾಗದಿದ್ದಾಗ,ಯಾವ CSLC ಎಂಬ ಸಂಶೋಧನಾ ಕೇಂದ್ರದಿಂದಾಗಿ ಈ ಚರ್ಚೆ ಶುರುವಾಯಿತೋ,ಆ ಕೇಂದ್ರವನ್ನೇ ಮುಚ್ಚಿಸುವ ಮೂಲಕ ಗೆದ್ದೆವೆಂದು ಬೀಗಿದರು ಈ ಬುದ್ಧಿಜೀವಿಗಳು. ಪಾಪ! ಸೂರ್ಯನಿಗೆ ಅಡ್ಡಲಾಗಿ ಕೊಡೆಹಿಡಿದು ಭೂಮಿಗೆ ಬೆಳಕು ಬರದಂತೆ ತಡೆದೆವು ಎಂಬ “ಬುದ್ಧಿಜೀವಿಗಳ ಮೌಢ್ಯ”! ಸಂಶೋಧನಾ ಕೇಂದ್ರ ಮುಚ್ಚಿಸಿದರೂ,ಚಿಂತನೆಯನ್ನು ನಿಲ್ಲಿಸಲು ಸಾಧ್ಯವಿಲ್ಲವೆಂದು ಅವರಿಗೆ ಅರಿವಾಗಲೇ ಇಲ್ಲ.ಅರಿವಾಗಿದ್ದರೆ ಅವರು ನಿಲುಮೆಯ ಮೇಲೆ ಮುಗಿಬೀಳುತ್ತಲಿರಲಿಲ್ಲ.
ಈ ಜನರು ಅಷ್ಟೆಲ್ಲಾ ಹರಸಾಹಸ ಪಟ್ಟು ನಿಲ್ಲಿಸಿದ್ದ ಆ ಚರ್ಚೆ ಮತ್ತು ವಚನ ಸಾಹಿತ್ಯಗಳು ನಿಜವಾಗಿ ಏನು ಹೇಳುತ್ತವೆ ಎಂಬುದರ ಕುರಿತ ನಿಲುಮೆ ಪ್ರಕಾಶನದ ಪುಸ್ತಕವೇ “ಕೊಟ್ಟ ಕುದುರೆಯನೇರಲರಿಯದೆ…”
ವಚನಸಾಹಿತ್ಯಗಳ ಕುರಿತು ನಮ್ಮ ಗೌರವವನ್ನು ಇನ್ನಷ್ಟು ಹೆಚ್ಚಿಸುವ,ವಚನಗಳ ಹಿರಿಮೆಯನ್ನು ಜಗತ್ತಿಗೆ ಸಾರುವ ಪುಸ್ತಕ.
mybookadda.in ನಲ್ಲಿ ಪುಸ್ತಕ ಆನ್ಲ್ಲೈನಲ್ಲಿ ಲಭ್ಯವಿದೆ.ಕೊಂಡು ಓದಿ