ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 26, 2016

13

ಕಂಬಳ ಅಮಾನವೀಯ ಆಚರಣೆಯೇ?

‍ನಿಲುಮೆ ಮೂಲಕ
– ನಾಗಶಿಲ್ಪ ಪಿ.ಎಸ್.
%e0%b2%95%e0%b2%82%e0%b2%ac%e0%b2%b3ಕಂಬಳ ಒಂದು ಅಮಾನವೀಯ ಆಚರಣೆಯೇ?
ತುಳುವರ ಸಾಂಪ್ರದಾಯಿಕ ಆಚರಣೆ ಕಂಬಳದ ಕುರಿತು ಒಂದು ಬರಹ, Beauty of Tulunad ಎಂಬ ಫೇಸ್ ಬುಕ್ ಪುಟದಲ್ಲಿ ಪ್ರಕಟವಾಗಿತ್ತು. ಬರಹವು ಕಂಬಳ ಆಚರಣೆಯ ನಿಷೇಧದಿಂದಾಗಿ, ತುಳುನಾಡ ಜನರಿಗೆ ಆಗಿರುವ ನೋವನ್ನು ಬಿತ್ತರಿಸಿತ್ತು. ಕಂಬಳದ ಕುರಿತ ಬರಹವನ್ನು ಓದಿದ ನನಗೆ ಆಚರಣೆಗಳು ನಮ್ಮ ಸಂಪ್ರದಾಯದ ಒಂದು ಭಾಗ ಎನ್ನುವ ಹೇಳಿಕೆ ಮತ್ತೊಮ್ಮೆ ಮನದಟ್ಟಾಯಿತು.
ಕಂಬಳ ನಿಷೇಧ ಯಾಕೆ…?
ಕಂಬಳವು ತುಳುನಾಡ ವಿಶಿಷ್ಟ ಆಚರಣೆಗಳಲ್ಲಿ ಒಂದು. ಇಂತಹ ಕಂಬಳವು ಇಂದು ನಿನ್ನೆಯದಲ್ಲ. ನಮ್ಮ ತಂದೆ-ತಾಯಿಗಳು, ಅಜ್ಜ ಮುತ್ತಜ್ಜಂದಿರು ಆಚರಿಸಿಕೊಂಡು ಬಂದಂತಹ ಒಂದು ಸಂಪ್ರದಾಯ. ಇಂತಹ ಒಂದು ಸಾಂಪ್ರದಾಯಿಕ ಆಚರಣೆಯು ನಮ್ಮಿಂದ ದೂರಾಗಿದೆ. ಆದರೆ ಇಂದಿಗೂ ತುಳುವರ ಜನಮಾನಸದಲ್ಲಿ ಅಚ್ಚಳಿಯದೆಲೇ ಉಳಿದುಕೊಂಡಿದೆ. ಕಂಬಳದಂತೆಯೇ ಉಳಿದ ಸಾಂಪ್ರದಾಯಿಕ ಆಚರಣೆಗಳಿಗೆ ಅಂತ್ಯ ಹಾಡುವ ಪರಿಸ್ಥಿತಿ ಎದುರಾದರೂ ಆಶ್ಚರ್ಯವೇನಿಲ್ಲ. ಕಂಬಳವನ್ನು ನಿಷೇಧಿಸಬೇಕು ಎಂದು ಬಡಬಡಿಸುವವರ ಪ್ರಕಾರ ಮೂಕ ಪ್ರಾಣಿಯಾದ ಕೋಣವನ್ನು ಆಟಕ್ಕೆ ಬಳಸಿಕೊಳ್ಳಲಾಗುತ್ತದೆ, ಆದ್ದರಿಂದ ಇದನ್ನು ನಿಷೇಧಿಸಲೇಬೇಕು ಎನ್ನುವುದು. ಪ್ರಾಣಿ ಹಿಂಸೆ ಮಾಡಬಾರದು ಎನ್ನುವ ವಿರೋಧಿ ಬಣದ ವಾದವನ್ನು ನಾನೂ ಒಪ್ಪುತ್ತೇನೆ. ಆದರೆ ಕಂಬಳದಲ್ಲಿ ಬಳಕೆಯಾಗುವ ಪ್ರಾಣಿಗಳನ್ನು ನೋಡಿದರೆ ಅವುಗಳಿಗೆ ಅದರ ಯಜಮಾನ ಹೊಡೆದು ಬಡಿದು ಹಿಂಸೆ ಮಾಡಿದಂತೆ ತೋರುತ್ತದೆಯೇ? ಪ್ರಾಣಿಗಳನ್ನು ಹೊಡೆದು ಬಡಿದು ಬಗ್ಗಿಸುವುದು ತುಂಬಾ ಕಷ್ಟ. ಅದಕ್ಕೊಂದು ಉದಾಹರಣೆ, ನಾವು ಬೆಂಗಳೂರಿಗೆ ಬಂದು ನೆಲೆ ನಿಂತಾಗ ನನ್ನಮ್ಮನ ಅಳಲು, ಏನೆಂದರೆ ನೋಡುವುದಕ್ಕೂ ಸಹ ಒಂದು ದನ ಕಾಣುವುದಿಲ್ಲವಲ್ಲ ಎಂದು. ಅಕ್ಕ ಪಕ್ಕದ ಬೀದಿಯಲ್ಲಿ ಹೋಗುವಾಗ ದನಗಳನ್ನು ಕಂಡರೆ ಮನೆ ಹತ್ತಿರ ಬರುವುದಿಲ್ಲವಲ್ಲ ಎಂದು ಮಮ್ಮಲ ಮರುಗುತ್ತಿದ್ದರು. ಸ್ವಲ್ಪ ದಿನಗಳ ನಂತರ ಅವುಗಳು ನಮ್ಮ ಮನೆಯ ಕಡೆಯೂ ಪ್ರಯಾಣ ಬೆಳೆಸಿದಾಗ ನನ್ನ ತಾಯಿಗೆ ಇನ್ನಿಲ್ಲದ ಸಂತೋಷ. ನನ್ನ ತಾಯಿ ಕಳೆದ ೪ ವರ್ಷಗಳಿಂದಲೂ ಪ್ರತಿನಿತ್ಯ ದನಗಳಿಗಾಗಿ ಏನನ್ನಾದರೂ ತೆಗೆದಿಡುತ್ತಾರೆ. ಪ್ರಾರಂಭದಲ್ಲಿ ಒಂದಿದ್ದದ್ದು ಇಂದು ೪ ರಿಂದ ೫ ದನಗಳು ನಮ್ಮ ಮನೆಯ ಮುಂದೆ ಬಂದು ನಿಲ್ಲುತ್ತವೆ. ನನ್ನ ತಾಯಿಯವರು ಅವುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಸಹ ಮಾಡಿದ್ದಾರೆ. ಅವುಗಳ ಯಜಮಾನ ಬಂದು, “ಗುದ್ದುತ್ತವೆ, ಜೋಪಾನ” ಎಂದು ಹೇಳಿದಾಗಲೆಲ್ಲಾ ನನ್ನ ತಾಯಿ ಪ್ರೀತಿಯಿಂದ ನೋಡಿಕೊಂಡರೆ ಏನೂ ಮಾಡುವುದಿಲ್ಲವೆಂದು ಹೇಳಿ ಕಳುಹಿಸುತ್ತಾರೆ. ಇವತ್ತಿನವರೆಗೂ ಅವುಗಳೂ ಸಹ ಯಾವ ಸಮಸ್ಯೆಯನ್ನೂ ಮಾಡದೆ ಕೊಟ್ಟಿದ್ದನ್ನು ತಿಂದು ಹೋಗುತ್ತವೆ. ಕಂಬಳದ ವಿಚಾರದಲ್ಲಿಯೂ ಸಹ ಇದು ಅನ್ವಯ. ಕೋಣಗಳನ್ನು ಪ್ರೀತಿಯಿಂದ ಚೆನ್ನಾಗಿ ಸಾಕಿದ್ದಾರೋ ಇಲ್ಲವೋ ಎನ್ನುವುದನ್ನು ಆ ಕೋಣಗಳನ್ನು ನೋಡಿದವರಿಗೆ ತಿಳಿಯುತ್ತದೆ.
ಕಂಬಳದ ವಿರುದ್ದ ಉದ್ದುದ್ದ ಭಾಷಣಗಳನ್ನು ಮಾಡುವ ಪ್ರಾಣಿ ದಯಾಪರರುಗಳು, ಕೋಳಿ ಫಾರಂನ ಎದುರಾಗಲೀ ಅಥವಾ ಮಾಂಸದ ಅಂಗಡಿಯ ಎದುರಾಗಲೀ ಅಥವಾ ದನಗಳನ್ನು ಹೊತ್ತೊಯ್ಯುವವರ ಮನೆಗಳ ಮುಂದೆ ಧರಣಿ ಕುಳಿತಿದ್ದಾಗಲೀ ಅಥವಾ ನಿಷೇಧಿಸಲೇಬೇಕೆಂದು ಪ್ರತಿಭಟನೆ ಮಾಡಿದ್ದಾಗಲೀ ಕಂಡಂತಿಲ್ಲ. ಪ್ರಾಣಿ ದಯಾಪರರ ಪ್ರಕಾರ ಕೋಳಿ ಮತ್ತು ಕುರಿಯ ಮಾಂಸಗಳು ತಿನ್ನುವ ಪದಾರ್ಥಗಳು. ನನಗೂ ಇದರಲ್ಲಿ ಯಾವುದೇ ತಕರಾರಿಲ್ಲ. ಪ್ರತಿದಿನವೂ ಅಭ್ಯಾಸ ಮಾಡಿ, ಕಂಬಳದ ದಿನ ಆಟದಲ್ಲಿ ಪ್ರೀತಿಯಿಂದ ಸಾಕಿದ ಯಜಮಾನನಿಗೆ ಸಹಕರಿಸಿ, ಮನೆಗೆ ಹೋಗುವ ಕೋಣಗಳ ಸ್ಥಿತಿಯು, ಸತ್ತು ಇನ್ನೊಬ್ಬರ ಹೊಟ್ಟೆಯನ್ನು ಸೇರುವ ಕುರಿ ಕೋಳಿ ಅಥವಾ ಗೋವುಗಳಿಗಿಂತಲೂ ಅಮಾನವೀಯವೇ? ಕಂಬಳವನ್ನು ನಿಷೇಧಿಸಲೇಬೇಕು ಎಂದು ತುದಿಗಾಲಿನಲ್ಲಿ ನಿಂತವರಿಗೆ, ಕಂಬಳವು ದನಗಳನ್ನು ಕಸಾಯಿ ಖಾನೆಗೆ ಅಟ್ಟುವುದಕ್ಕಿಂತಲೂ ಬರ್ಬರವಾದ ಕೆಲಸವಾಗಿ ಕಂಡದ್ದಾದರೂ ಹೇಗೆ?
13 ಟಿಪ್ಪಣಿಗಳು Post a comment
  1. Shripad
    ಆಕ್ಟೋ 26 2016

    ಕಂಬಳ ನಿಷೇಧ ಯಾಕೆಂದರೆ…ಕಂಬಳ…ಯೂರೋಪ್ ನಲ್ಲಿಲ್ಲ! ಅವರ ಅರಿವಿನ ಛಾಯಾ ಪ್ರತಿಯಾದ ‘ನಮ್ಮ’ ಸಂವಿಧಾನದಲ್ಲಿ ಅನುಮೋದನೆ ಪಡೆದಿಲ್ಲ ಅಷ್ಟೇ! ಅಂದಹಾಗೆ ನಮ್ಮ ಸಾಂಸ್ಕೃತಿಕ ವೈವಿಧ್ಯ, ಸ್ಥಳೀಯತೆ ಇತ್ಯಾದಿ ಭಾಷಣ ಬಿಗಿಯುವಾಗ ಕಂಬಳದಂಥ ಜನಪದ ಕ್ರೀಡೆಗಳ ಹೆಚ್ಚುಗಾರಿಕೆಯನ್ನು ತಪ್ಪದೇ ಹೇಳುತ್ತೇವೆ…!!

    ಉತ್ತರ
  2. vasu
    ಆಕ್ಟೋ 26 2016

    ಬಕ್ರೀದ್ ಹಬ್ಬದಂದ ಅಮಾಯಕ ಪ್ರಾಣಿಗಳ ಕಗ್ಗೊಲೆಯಾಗುತ್ತದೆ. ಇತ್ತೀಚಿಗೆ ನಡೆದ ಬಕ್ರೀದ್ ನಿಂದ ಡಾಕಾ ನಗರ ರಕ್ತದ ನೀರಿನಲ್ಲಿ ತೇಲಾಡಿತು. ಪ್ರಾಣಿ ದಯಾ ಸಂಘದವರೇ ಆಗಲೀ, ಜಲ್ಲಿಕಟ್ಟು ಮತ್ತು ಕಂಬಳದ ಬಗ್ಗೆ ಆಕ್ರೋಸ ವೈಕ್ತ ಪಡಿಸುವ ನಮ್ಮ ಸುಪ್ರೀಮ ಕೋರ್ಟ್ ಆಗಲಿ ಬಕ್ರೀದ ರಂದು ನಡೆಯುವ ಪ್ರಾಣಿಗಳ ಮಾರಣ ಹೋಮವನ್ನು ತಡೆಯುವ ಪ್ರಯತ್ನ ಮಾಡಿಯಾರೇ? ಇಲ್ಲ. ಏಕೆಂದರೆ ಅದು ಅಲ್ಪಸಂಖ್ಯಾಕ ವರ್ಗದವರಿಗೆ ಸಂಬಂಧಿಸಿದೆಯಾಗಿ ಅದು ಅಮಾನವೀಯವಲ್ಲ. ಮತ್ತು ಅದು ಸಮರ್ಥನೀಯವಾದದ್ದು. ಹೀಗಿದೆ ನಮ್ಮ ದೇಶದಲ್ಲಿ ಒಂದು ವರ್ಗದ ತರ್ಕ!

    ಉತ್ತರ
    • Shripad
      ಆಕ್ಟೋ 26 2016

      ಹೌದು. ಆದರೆ ಇಷ್ಟೇ ಅಲ್ಲ…ನಿತ್ಯ ಹೊಟೇಲುಗಳಲ್ಲಿ, ಮನೆಗಳಲ್ಲಿ, ಹಾದಿಬೀದಿಗಳಲ್ಲಿ ಆಹಾರಕ್ಕಾಗಿ ಪ್ರಾಣಿಗಳ ಹತ್ಯೆ ನಡೆಯುತ್ತಲೇ ಇರುತ್ತದೆ. ಯಾವುದೋ ಹರಕೆ ಹೆಸರಲ್ಲಿ ಪ್ರಾಣಿ ಬಲಿ ನೀಡಿ, ಪ್ರಸಾದವೆಂದು ಸ್ವೀಕರಿಸಿದರೆ…ಅದು ಮೌಢ್ಯವೆನಿಸಿಕೊಳ್ಳುತ್ತದೆ, ನಿಷಿದ್ಧವಾಗುತ್ತದೆ!! ‘ಕಠಿಣ ಕಾನೂನು ಕ್ರಮ’ ಜಾರಿಯಾಗುತ್ತದೆ!!! ಗಟಾರದ ಬಳಿ ಪ್ರಾಣಿ ಹತ್ಯೆ ಓಕೆ…ದೇವರ ಬಳಿ ಯಾಕೆ? ಇದು ನಮ್ಮವರ ತರ್ಕ. ಇಂಥ ಎಡಬಿಡಂಗಿತನಕ್ಕೆ ಕೊನೆಮೊದಲಿಲ್ಲ.

      ಉತ್ತರ
  3. ಶೆಟ್ಟಿನಾಗ ಶೇ.
    ಆಕ್ಟೋ 26 2016

    ಕಂಬಳ ಅವಮಾನವೀಯ ಅಲ್ಲ ಅನ್ನುವವರು ಮುಂದಿನ ವರ್ಷದ ಕಂಬಳದಲ್ಲಿ ಕೋಣಗಳ ಬದಲು ಅಷ್ಟಮಠಗಳ ಗಿಂಡಿಮಾಣಿಗಳನ್ನು ಬಳಸುವ ಪದ್ಧತಿ ಆರಂಭಿಸಲಿ.

    ಉತ್ತರ
    • Shutkar
      ಆಕ್ಟೋ 27 2016

      Shetkar and his Guru Should be Used in next Kambala

      ಉತ್ತರ
      • Shripad
        ಆಕ್ಟೋ 27 2016
      • ಶೆಟ್ಟಿನಾಗ ಶೇ.
        ಆಕ್ಟೋ 27 2016

        ನಮ್ಮ ನಡುವಿನ ಅಭಿನವ ಚನ್ನಬಸವಣ್ಣ ದರ್ಗಾ ಸರ್ ಅವರಿಂದ ಪೇಜಾವರರು ಶಿವದೀಕ್ಷೆ ಪಡೆದು ಜಂಗಮರಾಗಲಿ.

        ಉತ್ತರ
        • sudarshana gururajarao
          ಆಕ್ಟೋ 27 2016

          ಜಂಗಮರಲ್ಲ,ನೀವೆಲ್ಲರೂ ಗಂಜಿಮರು

          ಉತ್ತರ
    • sudarshana gururajarao
      ಆಕ್ಟೋ 27 2016

      ಬಡ್ಡೀ ಹೈದನಾದ ನಾಗನನ್ನೇ ಕಟ್ಟಿ ಎಳೆಯಿರಿ.ಹಾಗೇ ಅವನ ರಂಜಾನ್ ದರ್ಗ ಅನ್ನುವ ಭಂಡ ಗುರುವನ್ನು ದರ ದರನೆ ಎಳೆಯಿರಿ. ನಾಗಶೆಟ್ಟಿಯೆಂಬ ಗಂಜಿಮಾಣಿಯ ಒದರಾಟಕ್ಕೆ ಕಿವಿಗೊಡದಿರಿ.
      ಬಕ್ರೀದ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಸುನ್ನತಿಯ ಭೀತಿಯಿಲ್ಲದೆ ಮಂಡಿಸತಕ್ಕದ್ದು.

      ಉತ್ತರ
      • ಶೆಟ್ಟಿನಾಗ ಶೇ.
        ಆಕ್ಟೋ 28 2016

        ರಾಯರೇ, ಸಪರಿವಾರ ಸಮೇತ ಮಸೀದಿಗೆ ಬನ್ನಿ, ಎಲ್ಲರಿಗೂ ಪುಕ್ಕಟೆ ಸುನ್ನತಿ ಭಾಗ್ಯ ಕೊಡೋಣವಾಗಲಿ.

        ಉತ್ತರ
        • sudarshana gururajarao
          ಆಕ್ಟೋ 28 2016

          ಸುನ್ನಿತಿ ನಿನಗಾಗಿದೆಯೋ? ಎಷ್ಟು ಜೋರಾಗಿ ಬಡ್ಕೊಂಡೆ? ಮುಲ್ಲಾನ ಮುಖದಲ್ಲಿ ಎಂತಹ ಆನಂದ ಭಾವ ಇತ್ತು ಬ್ರದರ್ ಬಸವ. ಹಂಗೇ ಹಿಜಿಡಾ ಮಾಡಿ ಅವರ ಜನಾನಾದಲ್ಲಿ ಕಸ ಬಳಿಯಕ್ಕೆ ಇಟ್ಕಿಂಡಿದಾರಾ ನಿನ್ನ
          ಸಾಬರು ಎಸೆಯುವ ಬಾಡಿನ ತುಂಡು, ಎಂಜಲು ಗಂಜಿ ನಿನ್ನಂತಹ ಬೇಕೂಫರಿಗೆ. ನಮಗಲ್ಲ.

          ಉತ್ತರ
        • sudarshana gururajarao
          ಆಕ್ಟೋ 28 2016

          ಸುನ್ನಿತಿ ನಿನಗಾಗಿದೆಯೋ? ಎಷ್ಟು ಜೋರಾಗಿ ಬಡ್ಕೊಂಡೆ? ಮುಲ್ಲಾನ ಮುಖದಲ್ಲಿ ಎಂತಹ ಆನಂದ ಭಾವ ಇತ್ತು ಬ್ರದರ್ ಬಸವ. ಹಂಗೇ ಹಿಜಿಡಾ ಮಾಡಿ ಅವರ ಜನಾನಾದಲ್ಲಿ ಕಸ ಬಳಿಯಕ್ಕೆ ಇಟ್ಕಿಂಡಿದಾರಾ. ನಿನ್ನ
          ಸಾಬರು ಎಸೆಯುವ ಬಾಡಿನ ತುಂಡು, ಎಂಜಲು ಗಂಜಿ ನಿನ್ನಂತಹ ಬೇಕೂಫರಿಗೆ. ನಮಗಲ್ಲ.

          ಉತ್ತರ
          • sudarshana gururajarao
            ಆಕ್ಟೋ 29 2016

            ಈ ಹೇತ್ಲಾಂಡಿ ನಾಗಸೆಟ್ಟಿ ಕಂಬಳದ ಮೇಲೆ ಕಾಮೆಂಟ್ ಮಾಡ್ತಾನೆ,ಬಕ್ರೀದ್ ಬಗ್ಗೆ ಹೇಳು ಅಂದ್ರೆ ಬಾಯಿ,ಅಂಡು ಎರಡಕ್ಕೂ ಬೆಣೆ ಬಡ್ಕೋತಾನೆ;ಇಲ್ಲಾ ಇವನ ಮುಲ್ಲಾ ಗ್ಯಾಂಗು ಹಿಡಿದು ಬಡಿಯುತ್ತೆ. ಹಂಗೇ ಹಿಜಿಡಾನೂ ಮಾಡಿ ಕಳಿಸುತ್ತೆ. ಅದಕ್ಕೆ ಭಯ ಮುಂಡೇದಕ್ಕೆ. ಇವರು ಜೀವಪರ, ಮುಠ್ಠಾಳ್ರು

            ಉತ್ತರ

Leave a reply to ಶೆಟ್ಟಿನಾಗ ಶೇ. ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments