ವಿಷಯದ ವಿವರಗಳಿಗೆ ದಾಟಿರಿ

Posts from the ‘ಡಿ.ಕೆ ರವಿ’ Category

24
ಮಾರ್ಚ್

ಅಂದು “ಕೈ” ಗೆ ಜೈ ಎಂದ ಬುದ್ಧಿಜೀವಿಗಳು ಎಲ್ಲಿ ಅಡಗಿದ್ದಾರೆ?

– ರಾಕೇಶ್ ಶೆಟ್ಟಿ

Intelectuals“ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನಮ್ಮ ಸಂಪೂರ್ಣ ಬೆಂಬಲವಿದೆ.ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳವಿದೆ.ಆದರೆ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನಕ್ಕೆ ಬದ್ಧವಾಗಿ ಆಡಳಿತ ನಡೆಸುವ ಹಿನ್ನೆಲೆ ಆ ಪಕ್ಷಕ್ಕಿದೆ. ಇಂತಹ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯ ಅಭಿವೃದ್ಧಿ ಕಾಣಲು ಸಾಧ್ಯ.ಬಿಜೆಪಿಯ ದುರಾಡಳಿತ ಹಾಗೂ ನೈಸರ್ಗಿಕ ಸಂಪನ್ಮೂಲ ಲೂಟಿಗೆ ಬ್ರೇಕ್ ಹಾಕಿ ಕೋಮುವಾದಿ ಶಕ್ತಿಗಳ ನಿರ್ಮೂಲನೆಗೆ ಪರ್ಯಾಯವಾಗಿ ಉಳಿದಿರುವ ಶಕ್ತಿ ಕಾಂಗ್ರೆಸ್ ಮಾತ್ರ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಒಕ್ಕೊರಲ ನಿರ್ಧಾರ ಕೈಗೊಂಡಿದ್ದೇವೆ … “ ಎಂಬಂತಹ ಸಾಲುಗಳಿದ್ದ ಪತ್ರವೊಂದನ್ನು ಕಳೆದ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯ ಸಮಯದಲ್ಲಿ ಬರೆದು ದಿ.ಯು.ಆರ್. ಅನಂತ ಮೂರ್ತಿ, ಕೆ.ಮರುಳಸಿದ್ದಪ್ಪ ಪ್ರೊ.ಎಸ್.ಜಿ. ಸಿದ್ಧರಾಮಯ್ಯ, ಡಾ.ಬಂಜಗೆರೆ ಜಯಪ್ರಕಾಶ್,ಮಾವಳ್ಳಿಶಂಕರ್,ಪ್ರೊ.ರವಿವರ್ಮಕುಮಾರ್ ಮುಂತಾದ ಕೆಲ ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಕಾಂಗ್ರೆಸ್ಸಿಗೆ ಬೆಂಬಲ ಸೂಚಿಸಿದ್ದವರು.’ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡುವ ನಿಟ್ಟಿನಲ್ಲಿ ಯು.ಆರ್.ಅನಂತಮೂರ್ತಿ ಸೇರಿದಂತೆ ಕೆಲ ಸಾಹಿತಿಗಳು ಕಾಂಗ್ರೆಸ್ ಬೆಂಬಲಿಸಿದ್ದಾರೆ.ಇದಕ್ಕೆನನ್ನ ಸಹಮತವಿದೆ’ ಎಂದು ಹಿರಿಯ ಸಾಹಿತಿ ಚಂಪಾ ಅವರೂ ಹೇಳಿದ್ದರು.

ಆ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬಂದು,ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದರು.ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಂಡ ನಂತರ,ಅಂದು ಬೆಂಬಲ ಪತ್ರದಲ್ಲಿ ಹೇಳಿದ್ದಂತೆ “ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನಕ್ಕೆ ಬದ್ಧವಾಗಿ ಆಡಳಿತವನ್ನು ಕಾಂಗ್ರೆಸ್ಸ್ ಸರ್ಕಾರ ನಡೆಸಿದೆಯಾ ಮಾನ್ಯ ಸಾಹಿತಿಗಳೇ-ಬುದ್ಧಿಜೀವಿಗಳೇ? ಬಹಳಷ್ಟು ಹಿಂದೆಯೇನು ಹೋಗುವುದು ಬೇಡ.ರಾಜ್ಯದಲ್ಲಿ ಸದ್ಯಕ್ಕೆ ನಡೆಯುತ್ತಿರು ವಿದ್ಯಾಮಾನವನ್ನೇ ತೆಗೆದುಕೊಳ್ಳೋಣ.

ಮತ್ತಷ್ಟು ಓದು »

23
ಮಾರ್ಚ್

ಸರ್ವಾಧಿಕಾರಿಗಳನ್ನೂ ಜನಶಕ್ತಿ ಮುಗಿಸಿಹಾಕಿದೆ, ನೆನಪಿರಲಿ!

– ರೋಹಿತ್ ಚಕ್ರತೀರ್ಥ

ಡಿ.ಕೆ ರವಿಮಹಾಭಾರತದಲ್ಲಿ ಬರುವ ಪ್ರಸಂಗ ಇದು. ಭೀಷ್ಮರ ಸೇನಾಧಿಪತ್ಯವನ್ನು ಕೊನೆಗಾಣಿಸಿ ಅವರನ್ನು ಪಾಂಡವರು ಶರತಲ್ಪದಲ್ಲಿ ಮಲಗುವಂತೆ ಮಾಡಿದ ಮೇಲೆ, ದುರ್ಯೋಧನ, ದ್ರೋಣನಿಗೆ ಸೇನೆಯ ಅಧಿಪತ್ಯ ವಹಿಸುತ್ತಾನೆ. ದ್ರೋಣ ಆದದ್ದಾಗಲಿ, ದೊಡ್ಡ ಮಿಕವನ್ನೇ ಬಲೆಗೆ ಕೆಡವಬೇಕು ಎಂದು ಯೋಚಿಸಿ ಚಕ್ರವ್ಯೂಹದ ರಚನೆ ಮಾಡುತ್ತಾನೆ. ಈ ವ್ಯೂಹಕ್ಕೆ ಅರ್ಜುನನಲ್ಲದೆ ಮತ್ಯಾರೂ ಎಂಟೆದೆಯಿಂದ ನುಗ್ಗುವುದಿಲ್ಲ; ಅವನೊಮ್ಮೆ ಒಳಬಂದರೆ ಸಾಕು ಒಂದೆರಡು ದಿನದ ಮಟ್ಟಿಗೆ ಅವನನ್ನು ಓಡಾಡಿಸಿ ಸುಸ್ತುಹೊಡೆಸಬಹುದು ಎನ್ನುವುದು ದ್ರೋಣನ ಲೆಕ್ಕಾಚಾರ. ಆದರೆ, ಅರ್ಜುನ ಸಂಶಪ್ತಕರೊಂದಿಗೆ ಹೋರಾಡಲು ಹೋದದ್ದರಿಂದ ಅವನ ಮಗ ಅಭಿಮನ್ಯು ಈ ಚಕ್ರವ್ಯೂಹದೊಳಕ್ಕೆ ನುಗ್ಗುತ್ತಾನೆ. ಆಗ ಅವನಿಗಿನ್ನೂ ಹದಿನಾರರ ಹರೆಯ. ವ್ಯೂಹವನ್ನು ಭೇದಿಸುವುದು ಹೇಗೆಂದು ತಿಳಿದಿದೆಯೇ ಹೊರತು ಹೊರಬರುವ ತಂತ್ರ ಅವನ ಕೈಯಲ್ಲಿಲ್ಲ. ಆದರೂ ಒಂದು ಕೈ ನೋಡೇಬಿಡಬೇಕು ಎಂಬ ಭಂಡಧೈರ್ಯದಲ್ಲಿ ನುಗ್ಗಿದ ಕೂಸು ಅದು. ಚಕ್ರವ್ಯೂಹವನ್ನು ಹೊಕ್ಕಮೇಲೆಯೇ ಅವನಿಗೆ ನಿಜಸ್ಥಿತಿಯ ಅರಿವಾಗುವುದು. ವ್ಯೂಹದ ರಚನೆ ಹೇಗಿರುತ್ತದೆಂದರೆ, ಎಷ್ಟೇ ಹೊತ್ತು ಕಾದಾಡಿದರೂ ಆ ಸೈನಿಕರು ವೃತ್ತಾಕಾರದಲ್ಲಿ ಸುತ್ತುತ್ತಿರುವುದರಿಂದ ಯುದ್ಧ ನಿಲ್ಲುವ ಪ್ರಶ್ನೆಯೇ ಇಲ್ಲ! ಅಭಿಮನ್ಯು ಎಲ್ಲರನ್ನೂ ಕೊಂದು ಹೊರಬರುವ ಯೋಚನೆಯನ್ನು ಬಿಟ್ಟೇಬಿಡಬೇಕು!

ಮತ್ತಷ್ಟು ಓದು »

20
ಮಾರ್ಚ್

ನಮಗೆ ಪೋಲಿಸರ ಮೇಲೆ ನಂಬಿಕೆಯಿದೆ; ನಿಮ್ಮ ಸರ್ಕಾರದ ಮೇಲಿಲ್ಲ ಸಿ.ಎಂ.ಸಿದ್ಧರಾಮಯ್ಯನವರೇ

– ರಾಕೇಶ್ ಶೆಟ್ಟಿ

DK Ravi N Siddaramayyaಸದನದಲ್ಲಿ ತನ್ನ ಹಟಮಾರಿ ಧೋರಣೆಯನ್ನು ಬಿಡದಿದ್ದ ಸರ್ಕಾರ,ನಿನ್ನೆಯ ಸಂಪುಟ ಸಭೆಯ ನಂತರವಾದರೂ ಬುದ್ಧಿ ಕಲಿತೀತು ಎಂಬ ಸಣ್ಣದೊಂದು ಆಸೆಯಿತ್ತು. ಆದರೆ,ಸಂಪುಟ ಸಭೆ ಮುಗಿದ ನಂತರ ಗೃಹ ಸಚಿವ ಜಾರ್ಜ್ ಸಾಹೇಬರು “ಸಿಬಿಐ ತನಿಖೆಯಿಲ್ಲ” ಎಂಬ ತಮ್ಮ ಹಳೇ ರಾಗವನ್ನೇ ಹಾಡಿದ್ದರು.ಇವತ್ತು ಸಂಜೆಯ ವೇಳೆಗೆ ಸಿಬಿಐ ತನಿಖೆಗೆ ಸೋಮವಾರ ಒಪ್ಪಿಸುತ್ತಾರೆ ಎಂಬ ಸುದ್ದಿಯೇನೋ ಹರಿದಾಡುತ್ತಿದೆ.ದಕ್ಷ ಯುವ ಅಧಿಕಾರಿಯ ಅಸಹಜ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸಿ ಎಂಬುದು ಕೇವಲ ವಿರೋಧ ಪಕ್ಷಗಳ ಬೇಡಿಕೆಯಲ್ಲ ಮಿ.ಸಿ.ಎಂ ಸಿದ್ದರಾಮಯ್ಯನವರೇ. ಈ ಪ್ರಕರಣ ಬೆಳಕಿಗೆ ಬಂದ ತಕ್ಷಣ ಡಿ.ಕೆ ರವಿಯವರ ಬಗ್ಗೆ ತಿಳಿದುಕೊಂಡಿದ್ದ ಜನ ಸಾಮಾನ್ಯರು ಸಹ ಅದೇ ಬೇಡಿಕೆಯನ್ನಿಟ್ಟಿದ್ದರು. ಆದರೆ,ಇನ್ನು ಐದು ವರ್ಷ ಸರ್ಕಾರವನ್ನು ಯಾರೂ ಏನು ಮಾಡಲಾರರು ಎಂಬ ಧೋರಣೆಯಿರಬೇಕು ನಿಮ್ಮದು. ಪ್ರಜಾಪ್ರಭುತ್ವವೆಂದರೆ, ಪ್ರಭುಗಳು ಹೇಳಿದಂತೆ ಪ್ರಜೆಗಳು ಕೇಳಬೇಕು ಎಂಬುದು ಬಹುಷಃ ನಿಮ್ಮ ನಿಲುವಾಗಿರಬೇಕು.ಇಲ್ಲವಾಗಿದ್ದರೆ ನೀವು ಇಡೀ ರಾಜ್ಯದ ಜನತೆಯ ಬೇಡಿಕೆಯನ್ನು ಹೀಗೆ ಧಿಕ್ಕರಿಸುತ್ತಿರಲಿಲ್ಲ.ನಿಮಗೆ ಮತ್ತು ನಿಮ್ಮ ಪಕ್ಷಕ್ಕೇ ಮತ ನೀಡಿದ “ಪ್ರಜೆ” ಸೋತಿದ್ದಾನೆ ಸಿದ್ದರಾಮಯ್ಯನವರೇ.ಇನ್ನು ಮುಂದೆ ದಯವಿಟ್ಟು ಪ್ರಜಾಪ್ರಭುತ್ವದ ಬಗ್ಗೆ ನಮಗೆ ಲೆಕ್ಚರ್ ಮಾಡಲು ಬರಬೇಡಿ.

ಸಿಬಿಐ ತನಿಖೆಗೊಪ್ಪಿಸಿ ಎಂದ ತಕ್ಷಣವೇ,”ನಮ್ಮ ರಾಜ್ಯದ ಪೋಲಿಸರ ಶಕ್ತಿಯ ಬಗ್ಗೆ ಅನುಮಾನವೇ? ರಾಜ್ಯ ಪೋಲಿಸರ ಮೇಲೆ ನಂಬಿಕೆಯಿಡಿ” ಎಂದೆಲ್ಲಾ ಸಿನೆಮಾ ಡೈಲಾಗ್ ಹೇಳಬೇಡಿ ಮಿಸ್ಟರ್ ಸಿ.ಎಂ.ಸಿದ್ಧರಾಮಯ್ಯನವರೇ.ನಮಗೆ ಪೋಲಿಸರ ಮೇಲೆ ನಂಬಿಕೆಯಿದೆ; ನಿಮ್ಮ ಸರ್ಕಾರದ ಮೇಲೆ ನಂಬಿಕೆಯಿಲ್ಲ.ಅಷ್ಟಕ್ಕೂ ನಿಮ್ಮ ಮೇಲೆ ನಿಮ್ಮ ಸರ್ಕಾರದ ಮೇಲೆ ನಾವು ನಂಬಿಕೆಯಿಡುವುದಾದರೂ ಹೇಗೆ ಹೇಳಿ? ಡಿ.ಕೆ ರವಿಯಂತ ದಕ್ಷ ಅಧಿಕಾರಿಗಳಿಗೆ ಮಾತ್ರ ನಿಮ್ಮ ಘನ ಸರ್ಕಾರದಲ್ಲಿ ತೊಂದರೆಗಳಾಗಿಲ್ಲ.ಆ ಪಟ್ಟಿಗೆ ಸಾಲು ಸಾಲು ಅಧಿಕಾರಿಗಳು ಸೇರಿಕೊಳ್ಳುತ್ತಾರೆ.
ಮತ್ತಷ್ಟು ಓದು »

20
ಮಾರ್ಚ್

ಈ ಸಾವು ನಿಮ್ಮಲ್ಲಿ ವಿಷಾದ ಹುಟ್ಟಿಸಬೇಕಿತ್ತು

– ರೋಹಿತ್ ಚಕ್ರತೀರ್ಥ

DK Ravis Parentsಬಹಳ ಹಿಂದೆ ಓದಿದ ಸಾಲು ಅದು. ಒಬ್ಬಳು ಹೆಣ್ಣಿನ ಹತ್ಯೆಯಾಗಿದೆ. ಅದನ್ನು ಯಾರ್ಯಾರು ಯಾವ್ಯಾವ ಬಗೆಯಲ್ಲಿ ಬಳಸಿಕೊಳ್ಳಬಹುದು ಎನ್ನುವ ಬಗ್ಗೆ ಒಬ್ಬೊಬ್ಬರೂ ತಮ್ಮ ಮೂಗಿನ ನೇರಕ್ಕೆ ಸಲಹೆಗಳನ್ನು ಕೊಡುತ್ತಾ ಹೋಗುತ್ತಾರೆ. ಅವೆಲ್ಲ ಮಾತುಗಳು ನಿಂತ ಮೇಲೆ ರಾಜ್ಯದ ಮುಖ್ಯಮಂತ್ರಿ – ಇಷ್ಟೆಲ್ಲಾ ಹೇಳಿದಿರಿ, ಆದರೆ ಆಕೆಯ ಸಾವು ನಮ್ಮೊಳಗೆ ವಿಷಾದ ಹುಟ್ಟಿಸಬೇಕಾಗಿತ್ತು ಅಂತ ನಿಮಗ್ಯಾರಿಗೂ ಅನ್ನಿಸಲೇ ಇಲ್ಲವಲ್ಲ – ಎಂದು ಮರುಗುತ್ತಾನೆ. ಅವಸ್ಥೆ ಕಾದಂಬರಿಯಲ್ಲಿ ಬರುವ ಆ ಭಾಗವನ್ನು ಓದುವಾಗ ನನಗೇ ತಿಳಿಯದಂತೆ ಕಣ್ಣೀರಾಗಿಬಿಟ್ಟಿದ್ದೆ. ಹೌದಲ್ಲ, ಒಂದು ಸಾವು ನಮ್ಮನ್ನು ಕಾಡಬೇಕು; ನಮ್ಮ ಅಂತರಾತ್ಮವನ್ನು ಕಲಕಬೇಕು; ಸುತ್ತ ಗವ್ವೆನ್ನುವ ಕತ್ತಲೆ ಮುತ್ತಿದಾಗ ಒಂಟಿ ನಿಂತ ಮೇಣದಬತ್ತಿ ಸದ್ದಿಲ್ಲದೆ ಕರಗಿಹೋದಂತೆ ನಾವೂ ನಿಂತಲ್ಲೇ ಕಲ್ಲಾಗಬೇಕು, ಕರಗಬೇಕು.
ಮತ್ತಷ್ಟು ಓದು »

20
ಮಾರ್ಚ್

ಒಡೆಯನ ನಿಷ್ಠ ‘ಬ್ರೂನಿ’ಯ ಸ್ವಗತ

– ಚಕ್ರವರ್ತಿ ಸೂಲಿಬೆಲೆ

ಮಾನ್ಯ ಮುಖ್ಯಮಂತ್ರಿಗಳಿಗೆ ನಮಸ್ಕಾರ.

DK Ravi IAS_Brooniನನ್ನ ಯಜಮಾನನ ಸಾವಿಗೆ ನಾಲ್ಕು ದಿನ ಕಳೆದೇ ಹೋಯಿತು. ಮೊದಲ ದಿನದಿಂದಲೂ ಇದನ್ನು ಆತ್ಮಹತ್ಯೆಯೆಂದೇ ಸಾಬೀತು ಪಡಿಸಲು ಹೆಣಗಾಡುತ್ತಿದ್ದ ನಿಮಗೂ-ನಿಮ್ಮ ವ್ಯವಸ್ಥೆಗೂ ನಾಲ್ಕು ದಿನವಾದರೇನು? ನಲ್ವತ್ತು ದಿನವಾದರೇನು? ನನಗಿರುವ ನಿಯತ್ತಿನ ಹತ್ತು ಪರ್ಸೆಂಟು ನಿಮ್ಮ ವ್ಯವಸ್ಥೆಗೆ ಇದ್ದಿದ್ದರೆ ಇವತ್ತು ನಮ್ಮ ಯಜಮಾನರು ಸಾಯುವ ಸ್ಥಿತಿ ಬರುತ್ತಿರಲಿಲ್ಲ.

ನಮ್ಮ ಮನೆಗೆ ಬಂದಾಗಲೆಲ್ಲ ಅವರು ಮೊದಲು ನನ್ನತ್ತಲೇ ಬರಬೇಕಿತ್ತು. ಪ್ರೀತಿಯಿಂದ ನೇವರಿಸಿ ನನ್ನೊಡನೆ ಹತ್ತು ನಿಮಿಷ ಆಡಿದ ಮೇಲೆಯೇ ಮನೆಯೊಳಗೆ ಹೋಗುತ್ತಿದ್ದರು. ಅವರು ಮುಟ್ಟುವಾಗ,ಮುದ್ದಿಸುವಾಗ ಅವರೊಬ್ಬ ದೊಡ್ಡ ಅಧಿಕಾರಿ ಅಂತ ನನಗೆಂದೂ ಅನ್ನಿಸಲೇ ಇಲ್ಲ. ಕುಸುಮಕ್ಕ ಆಗಾಗ ದೊಡ್ಡ ಯಜಮಾನರ ಜೊತೆಗೆ ಸಾಹೇಬರ ಕುರಿತಂತೆ ಮಾತನಾಡುವುದನ್ನು ಕೇಳಿ ರೋಮಾಂಚನವಾಗುತ್ತಿದ್ದೆ. ನಿಷ್ಠೆಗೆ ಇನ್ನೊಂದು ಹೆಸರು ಅಂತ ನನಗೆ ಹೇಳುತ್ತಾರೆ ಅನ್ನೋ ಧಿಮಾಕು ನನಗಿತ್ತು. ಆದರೆ ರಾಷ್ಟ್ರನಿಷ್ಠೆಗೆ ನಮ್ಮ ಯಜಮಾನರೇ ನಿಜವಾದ ಸಂಕೇತ ಎನ್ನುವುದು ನನಗೆ ಖಾತ್ರಿಯಾಗಿತ್ತು. ಥೂ! ಬಿಡಿ ವೋಟಿಗಾಗಿ ದೇಶವನ್ನೂ ಮಾರಿಬಿಡುವವರಿಗೆ ರಾಷ್ಟ್ರನಿಷ್ಠೆಯೆಂಬುದೆಲ್ಲ ಹೇಗೆ ಅರ್ಥವಾಗಬೇಕು.
ಮತ್ತಷ್ಟು ಓದು »

19
ಮಾರ್ಚ್

ಡಿ.ಕೆ ರವಿಯವರ ಅಸಹಜ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಸಹಿಸಂಗ್ರಹ ಅಭಿಯಾನ.ನೀವು ಪಾಲ್ಗೊಳ್ಳಿ

https://www.change.org/p/prime-minister-of-india-home-minister-of-india-make-cbi-probe-on-mysterious-death-of-ias-officer-d-k-ravi

DK Ravi

19
ಮಾರ್ಚ್

ಈ ಸಾವು ನ್ಯಾಯವೇ?

– ಶಿವಪ್ರಸಾದ್ ಭಟ್, ಪುತ್ತೂರು

DK Ravi IASಕೊಲೆ, ಆತ್ಮಹತ್ಯೆ, ಆಕ್ಸಿಡೆಂಟ್, ಸಹಜ ಸಾವು ಅಂತ ದಿನಾ ಈ ಜಗತ್ತಿನಲ್ಲಿ ಅದೆಷ್ಟು ಜನ ಸಾಯುತ್ತಾರೋ ಏನೋ? ಯಾರಿಗ್ಗೊತ್ತು? ಅದೆಲ್ಲಾ ಸುದ್ದೀನೇ ಆಗಲ್ಲಾ. ದಿನಾ ಸಾಯೋರಿಗೆ ಅಳೋರು ಯಾರು ಅಲ್ವಾ? ಆದರೆ ಕೆಲವೊಂದು ಸಾವು ತಣ್ಣಗೆ ಸುದ್ದಿ ಮಾಡುತ್ತವೆ. ನಮ್ಮ ಸಂಬಂಧಿಕರಲ್ಲದೇ ಇದ್ದರೂ ಅನುಕಂಪ ಹುಟ್ಟಿಸುತ್ತದೆ. ಕೇಡಿಗರ ಬಗೆಗೆ ಆಕ್ರೋಶವೆಬ್ಬಿಸುತ್ತದೆ.

ಘಟನೆ 1:

ಮಕ್ಕಳ ಭವಿಷ್ಯ ಚೆನ್ನಾಗಿ ರೂಪಿಸಬೇಕೆಂದು ಎಲ್ಲಾ ತಂದೆ ತಾಯಿಗೂ ಆಸೆ ಇರುತ್ತದೆ. ಅದಕ್ಕಾಗಿ ಅವರು ಬೇರೆ ಬೇರೆ ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ಹಾಗೆಯೇ ಈ ತಾಯಿ ತನ್ನ ಮಗಳ ಉಜ್ವಲ ಭವಿಷ್ಯ ರೂಪಿಸುವುದಕ್ಕಾಗಿ ಹಿಡಿದಿದ್ದು ಆಸ್ಟ್ರೇಲಿಯಾದ ಹಾದಿ. ‘ಮೈಂಡ್ ಟ್ರೀ’ ಕಂಪೆನಿಗೆ ದುಡಿಯುತ್ತಿದ್ದ ಪ್ರಭಾ ಅರುಣ್ ಕುಮಾರ್ ಮೂರು ವರ್ಷದಿಂದ ಸರಿಯಾಗಿ ಒಮ್ಮೆಯೂ ಭಾರತಕ್ಕೆ ಬರಲಿಲ್ಲ. ಮಗಳನ್ನು ಮತ್ತು ಗಂಡನನ್ನು ಕಾಣುವುದಕ್ಕಾಗಿ ಒಮ್ಮೆ ಬೆಂಗಳೂರಿಗೆ ಬಂದಿದ್ದೇ ಹೆಚ್ಚು. ಮತ್ತೆ ಬಂದಿದ್ದು ಹೆಣವಾಗಿ!

ಮಂಗಳೂರು ಮೂಲದ ಪ್ರಭಾ ಉದ್ಯೋಗಕ್ಕಾಗಿ ಮೈಂಡ್ ಟ್ರೀ ಅನ್ನೋ ಒಳ್ಳೆಯ ಕಂಪೆನಿಯನ್ನೇ ಆರಿಸಿಕೊಂಡಿದ್ದರು. ಮೂರು ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ ಆಕೆಯ ಜೀವನ ಮೊನ್ನೆ ಮಾರ್ಚ್ ಏಳಕ್ಕೆ ಕೊನೆಯಾಯ್ತು. ಆಫೀಸಿನಿಂದ ಮನೆಗೆ ಬರುತ್ತಿದ್ದ ಆಕೆಯನ್ನು ದುಷ್ಕರ್ಮಿಗಳು ಹಿಗ್ಗಾಮುಗ್ಗ ಹಲ್ಲೆ ಮಾಡಿ ಕೊಂದೇ ಬಿಟ್ಟರು. ಕಾರಣ ಏನು? ಕೊಲೆಗೂ ಆಕೆಗೂ ಏನು ಸಂಬಂಧ? ಕೊಂದವರು ಯಾರು? ದರೋಡೆಕೋರರಾಗಿದ್ದರೆ ದರೋಡೆ ಮಾಡಿ  ಬಿಟ್ಟು ಬಿಡಬಹುದಿತ್ತಲ್ಲಾ? ಉತ್ತಮ ಸಂಪಾದನೆ ಮಾಡಿಕೊಂಡು ತನ್ನವರನ್ನು ಸೇರಿಕೊಂಡು ಉತ್ತಮ ಜೀವನ ರೂಪಿಸುವ ಕನಸು ಹೊತ್ತುಕೊಂಡು ಆಸ್ಟ್ರೇಲಿಯಾದ ವಿಮಾನವೇರಿದ್ದ ಪ್ರಭಾಗೆ ಇಂತಾ ಸಾವಾ? ಆಕೆ ಮಾಡಿರುವ ತಪ್ಪಾದರೂ ಏನು?

ಮತ್ತಷ್ಟು ಓದು »

17
ಮಾರ್ಚ್

ಈ ಸಾವು ನ್ಯಾಯವೇ?

– ರಾಕೇಶ್ ಶೆಟ್ಟಿ

ಡಿ.ಕೆ ರವಿಲ್ಯಾಂಡ್ ಮಾಫಿಯಾ,ಸ್ಯಾಂಡ್ ಮಾಫಿಯಾಗಳ ವಿರುದ್ಧ ಸಮರ ಸಾರಿ,ತನ್ನ ದಕ್ಷತೆಯ ಕಾರಣದಿಂದಲೇ ಕೋಲಾರ ಜಿಲ್ಲಾಧಿಕಾರಿ ಸ್ಥಾನದಿಂದ ಎತ್ತಂಗಡಿ ಮಾಡಿಸಲ್ಪಟ್ಟಿದ್ದ ದಕ್ಷ ಯುವ ಅಧಿಕಾರಿ ಡಿ.ಕೆ ರವಿಯಂತವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ? ನನಗಂತೂ ನಂಬಲಾಗುತ್ತಿಲ್ಲ.ನಿನ್ನೆ ಅವರ ಮರಣದ ಸುದ್ದಿ ತಿಳಿದಾಗಿನಿಂದ ಮನಸ್ಸು ಖಿನ್ನವಾಗಿದೆ.ಸತ್ಯ,ನ್ಯಾಯಕ್ಕಾಗಿ ಹೋರಾಡುವವರು ಹೀಗೆ ದುರಂತ ಅಂತ್ಯ ಕಾಣುತ್ತಾರೆಯೇ? ಅಂತವರ ಕುಟುಂಬದವರಿಗೆ ನೋವು ಕಟ್ಟಿಟ್ಟ ಬುತ್ತಿಯೇ?

ಕೋಲಾರದಿಂದ ರವಿಯವರನ್ನು ವರ್ಗಾವಣೆ ಮಾಡಿದಾಗ ಇಡೀ ಜಿಲ್ಲೆಯೇ ಬಂದ್ ಆಗಿತ್ತು.ಒಂದಿಡಿ ಜಿಲ್ಲೆಯ ಜನರ ಜೊತೆ ಅಧಿಕಾರಿಯೊಬ್ಬ ಬಾಂಧವ್ಯ ಈ ಮಟ್ಟಿಗಿರುವುದು ಇತ್ತೀಚಿನ ದಿನಗಳಲ್ಲಿ ಅಪರೂಪವೇ ಸರಿ.ಕೋಲಾರದಿಂದ ಎತ್ತಂಗಡಿಯಾಗಿ ಬಂದ ಮೇಲಾದರೂ ಈ ಮನುಷ್ಯ ತಣ್ಣಗಾಗುತ್ತಾರೆ ಎಂದುಕೊಂಡಿದ್ದವರಿಗೆ,ರವಿಯವರು ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಹುದ್ದೆ ವಹಿಸಿಕೊಂಡ ಮೇಲೆ ನಡೆಸಿದ ದಾಳಿಗಳು ಮತ್ತೆ ನಿದ್ದೆಗೆಡಿಸಿದ್ದವೇನೋ! ಐದೂವರೆ ತಿಂಗಳ ಹಿಂದೆ ತೆರಿಗೆ ಇಲಾಖೆಗೆ ಬಂದ ರವಿಯವರು ಈ ಕಡಿಮೆ ಅವಧಿಯಲ್ಲಿ ದೊಡ್ಡ ದೊಡ್ಡ ಬಿಲ್ಡರ್ ಗಳ ತೆರಿಗೆ ವಂಚನೆಯನ್ನು ಬಯಲಿಗೆಳೆದಿದ್ದರು.ವೃತ್ತಿಯಲ್ಲಿ ಖಡಕ್ ಆಗಿದ್ದ ರವಿಯವರು ಜನರೊಂದಿಗೆ ಸಾಮಾನ್ಯರಂತೆ ಬೆರೆಯುತಿದ್ದವರು. ಮತ್ತಷ್ಟು ಓದು »