ವಿಷಯದ ವಿವರಗಳಿಗೆ ದಾಟಿರಿ

Posts from the ‘ವಾಣಿಜ್ಯ’ Category

1
ಜೂನ್

ತೈಲ ಬೆಲೆಯೇರಿಕೆಯೆಂಬ ರಾಜಕೀಯ ದಾಳ

– ಬೇಲಾಡಿ ದೀಪಕ್ ಶೆಟ್ಟಿ, ನ್ಯಾಯವಾದಿಗಳು ಹೈಕೋರ್ಟ್ ಕರ್ನಾಟಕ

ತೈಲ ಬೆಲೆಯೇರಿಕೆ ಎನ್ನುವ ಶಬ್ಧ ಯಾವತ್ತೂ ವಿರೋಧ ಪಕ್ಷಗಳಿಗೆ ನೆಚ್ಚಿನ ಶಬ್ದ. ಅಲ್ಲದೇ ಆಡಳಿತ ಪಕ್ಷವನ್ನು ವಿರೋಧಿಸಲು ಸುವರ್ಣ ಅವಕಾಶ ಮಾಡಿಕೊಡುವ ಸುವರ್ಣ ಶಬ್ದಗಳು. ಅದು ಯಾರೇ ಇರಲಿ ಮತ್ತು ಯಾವುದೇ ಪಕ್ಷವಿರಲಿ . ಬಿಜೆಪಿಯು ಈ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದಲ್ಲಿ ರಸ್ತೆಗಳಲ್ಲಿ ಇಳಿದು ಜನಾಂದೋಲನ ರೂಪಿಸಿ ಹೋರಾಟಕ್ಕೆ ಇಳಿದಿತ್ತು . ಈಗ ಅದನ್ನು ಕಾಂಗ್ರೆಸ್ ಮಾಡುತ್ತಿದೆ. ಆದರೆ ಇವೆರಡರಲ್ಲಿ ಸಾಮಾನ್ಯ ಸಂಗತಿ ಏನೆಂದರೆ ತೆರಿಗೆದಾರರಾದ ಜನಸಾಮಾನ್ಯರು ತಮ್ಮ ಮೇಲಿನ ಹೊರೆಗೆ, ಬದುಕಲು ಪಕ್ಷ ನೋಡದೇ ವಿಷಾಯಾಧಾರಿತ ಬೆಂಬಲ ನೀಡುತ್ತಿರುವುದು.

ಇನ್ನು ಪೆಟ್ರೋಲ್ ಡಿಸೆಲ್ ವಿಷಯಕ್ಕೆ ಬಂದರೆ ಮೋದಿಯವರನ್ನು ಟೀಕಿಸಲು ವಿರೋಧಿಗಳು ಅವರ 2012ನೇ ಇಸವಿಯ ಟ್ವೀಟ್ ಅನ್ನು ಉಲ್ಲೇಖಿಸುತ್ತಾರೆ. ಇವರು ವಿರುದ್ದವಾಗಿ ಕಾಂಗ್ರೆಸ್ ಸಮಯದ ಪಾಲಿಸಿಗಳಿಂದ ಆದ ತೊಂದರೆ ಮತ್ತು ಎಡವಟ್ಟುಗಳನ್ನು ಉಲ್ಲೇಖಿಸುತ್ತಾರೆ. ಎಲ್ಲಾ ಕಡೆ ರಾಜಕೀಯ ಕಾಣುತ್ತದೆಯೇ ವಿನಃ ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ನಾಯಕರಲ್ಲಿ ಪಕ್ಷಾತೀತವಾಗಿ ಇಚ್ಚಾಶಕ್ತಿ ಕೊರತೆ ಎದ್ದು ಕಾಣುತ್ತದೆ.

ಮೋದಿಯವರು ತೈಲವನ್ನು ಜಿ ಎಸ್ ಟಿ ವ್ತಾಪ್ತಿಯಲ್ಲಿ ತಂದರೆ ಇದನ್ನು ಕಾಂಗ್ರೆಸ್ಸಿಗರು ಮತ್ತು ಮಹಾಘಟಬಂಧನದ ಮಹಾನಾಯಕರು ವಿರೋಧ ಮಾಡುತ್ತಾರೆ ಎಂಬುದು ಬಿಜೆಪಿಗರ ವಾದ. ಬಿಜೆಪಿ ನಾತಕರ ಗಮನಕ್ಕೆ ಕಾಂಗ್ರೆಸಿನ ಸರ್ವೋಚ್ಚ ನಾಯಕ ರಾಹುಲ್ ಗಾಂಧಿ 2017 ರಲ್ಲಿಯೇ ತೈಲಗಳನ್ನು ಜಿಎಸ್ಟಿ ಗೆ ತನ್ನಿ ಅಂತ ಆಗ್ರಹಿಸುತ್ತಾರೆ. ಉತ್ತಮ ಆಂಗ್ಲಭಾಷಾ ಸಾಮರ್ಥ್ಯ ಹೊಂದಿದ ಪಂಡಿತರಾದ ಶಶಿತರೂರವರು ಇತ್ತೀಚೆಗೆ ಇದನ್ನು ಸಮರ್ಥಿಸುವ ಟ್ವೀಟ್ ಕೂಡಾ ಮಾಡಿ ಸರ್ಕಾರಕ್ಕೆ ಆಗ್ರಹ ಮಾಡಿರುತ್ತಾರೆ. ಇದರಲ್ಲಿ ಗಮನಾರ್ಹ ಅಂಶ ಏನೆಂದರೆ ಇವರಿಬ್ಬರೂ ಕೇರಳದ ಸಂಸದರು ಮತ್ತು ಕೇರಳದ ಆಶೋತ್ತರಗಳನ್ನು ಸರ್ಕಾರಕ್ಕೆ ತಲುಪಿಸುವವರು. ಒಂದು ವೇಳೆ ಮೋದಿ ಸರ್ಕಾರ ಜಿಎಸ್ಟಿ ತೈಲಗಳಿಗೂ ಅನ್ವಯಿಸಿದಲ್ಲಿ ಇವರ ಬೆಂಬಲ ಇದೆ ಎಂದು ಆಯಿತು. ಇವರು ಮಹಾಘಟಬಂಧನದ ನಾಯಕರಿಗೂ ಅರ್ಥ ಮಾಡಿಸುತ್ತಾರೆ ಮತ್ತು ಕೇರಳದಲ್ಲಿ ಇದರ ಸಮರ್ಪಕ ಜಾರಿಯನ್ನು ಇವರು ವಹಿಸಿಕೊಳ್ಳುತ್ತಾರೆ ಎಂದು ಭಾವಿಸೋಣ. ಆಗ ಇದರ ವಿರುದ್ಧ ಹೊರಾಡಲು ಬಂದರೆ ಜನರೇ ಇವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

ಆದರೆ ಬಿಜೆಪಿ ಮುಖಂಡರಾದ ಸುಶಿಲ್ ಮೋದಿ ಇನ್ನು ಏಳೆಂಟು ವರ್ಷಕ್ಕೆ ಇದು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೇ ವಿತ್ತೀಯ ಮಂತ್ರಿಗಳು ಅಂತಹ ಪ್ರಸ್ತಾಪ ಸದ್ಯ ಸರ್ಕಾರದ ಎದುರಿಗೆ ಇಲ್ಲ ಎಂದಿದ್ದಾರೆ. ಪ್ರಯತ್ನ ಮಾಡದೇ ಅವರು ವಿರೋಧಿಸುತ್ತಾರೆ ಎಂಬುದಕ್ಕೆ ಸುಮ್ಮನಿದ್ದೇವೆ ಎಂಬುದು ಹಾಸ್ಯಾಸ್ಪದ ಅಲ್ಲವೇ. ಕೊನೆಪಕ್ಷ ನಾವು ಇನ್ನು ಮೂರರಿಂದ ಆರು ತಿಂಗಳ ಒಳಗೆ ಸದನದ ಮುಂದಿಟ್ಟು ಜಿ ಎಸ್ಟಿಯನ್ನು ಪೆಟ್ರೋಲ್ ಡೀಸೆಲ್ ಗಳಿಗೆ ಅಸ್ವಯಿಸುತ್ತೇವೆ ಎಂಬ ಹೇಳಿಕೆಯನ್ನಾದರೂ ನೀಡಿ. ಆಗ ವಿರೋಧಪಕ್ಷಗಳು ವಿರೋಧಿಸಲು ಬಂದರೆ ಜನರೇ ನೋಡಿಕೊಳ್ಳುತ್ತಾರೆ. ಯಾಕೆಂದರೆ ಇದರಿಂದ ತುಂಬಾ ಅನುಕೂಲವಾಗುವುದು ಅವರಿಗೆ ತಾನೇ. ಆದ್ದರಿಂದ ವಿರೋಧ ಪಕ್ಷಗಳಲ್ಲಿ ಒಂದು ಮನವಿ, ಬೆಲೆಯೇರಿಕೆ ಬಗ್ಗೆ ಹೊರಳಾಡುವ ಬದಲು ತೈಲೋತ್ಪನ್ನಗಳಿಗೆ ಜಿಎಸ್ಟಿ ಅನ್ವಯಿಸಲು ಹೋರಾಡಿ ಮತ್ತು ಜನಾಂದೋಲನ ರೂಪಿಸಿ.

ಇನ್ನು ಪೆಟ್ರೋಲ್ ಡಿಸೆಲ್ ನಿಂದ ಮಾತ್ರವೇ ಸರ್ಕಾರದ ಬೊಕ್ಕಸ ತುಂಬುವುದು ಎಂಬ ಕಲ್ಪನೆಯ ವಾದ ವಿಚಿತ್ರವಾಗಿ ಕಾಣುತ್ತದೆ. ಒಂದು ಸಣ್ಣ ಬೆಂಕಿಪೆಟ್ಟಿಗೆಯಿಂದ ಎಲ್ಲಾ ವಸ್ತುಗಳಿಗೂ ತೆರಿಗೆ ಇದೆ. ಡೈರೆಕ್ಟ್ ಟ್ಯಾಕ್ಷ್ ಮತ್ತು ಇನ್ಡೈರೆಕ್ಟ್ ಟ್ಯಾಕ್ಸ್ ಎರಡೂ ಟ್ಯಾಕ್ಷೇಷನ್ ಅಳವಡಿಸಿಕೊಂಡಿರುವ ದೇಶ ನಮ್ಮದು. ಸಮಸ್ಯೆ ಇರುವುದು ತೆರಿಗೆ ಸಂಗ್ರಹದಲ್ಲಿ ಅಲ್ಲ ಅದರ ವಿನಿಯೋಗದಲ್ಲಿ. ಮಾಡಿರುವ ಸಾಲಗಳೂ ಕಾರಣ. ಇದಕ್ಕೆ ಸ್ವಾತಂತ್ರ್ಯ ನಂತರದ ಎಲ್ಲಾ ಸರ್ಕಾರಗಳು ಕಾರಣ. ಈ ಹಣದ ಖಜಾನೆಗಳು ರಾಜಕಾರಣಿಗಳ ಮನೆ ತುಂಬಿರೋದು ಒಂದು ಕಾರಣ. ಈ ಕಾರಣಕ್ಕೆ ಇವತ್ತು ಚುನಾವಣೆಗಳಲ್ಲಿ ಖರ್ಚುಗಳು ಕೋಟಿ ಲೆಕ್ಕದಲ್ಲಿ ನಡೆಯುತ್ತಿರುವುದು. ಈಗಿನ ಸರ್ಕಾರ ರಾಜಕೀಯ ನೋಡದೇ ಹಗರಣದ ಲೆಕ್ಕ ಮಾಡಿ ಅವರಿಂದ ವಸೂಲಿಗೆ ಕ್ರಮ ಕೈಗೊಂಡರೆ ಆದೀತು. ನನ್ನ ಪ್ರಕಾರ ಇದು ಪ್ರಾಕ್ಟಿಕಲಿ ಎದೆಗಾರಿಕೆ ತೋರಿಸಿ ಮಾಡಬಹುದಾದ ಕಷ್ಟಸಾಧ್ಯವಾದ ಕೆಲಸ. ನೀವೆ ಆಲೋಚನೆ ಮಾಡಿ ಕಲ್ಲಿದ್ದಲು, ಕಾಮನ್ವೆಲ್ತ್ ಮತ್ತು 2ಜಿ ಹಗರಣದ ಒಟ್ಟು ಮೊತ್ತ ಎಷ್ಟಿರಬಹುದು. ದೇಶದ ರಾಜಕಾರಣಿಗಳು ಲೂಟಿ ಹೊಡೆದಿರುವ ಸಂಪೂರ್ಣ ದುಡ್ಡನ್ನು ಇಲ್ಲಿಯೇ ಬಂಡವಾಳ ಹೂಡಿದ್ದರೆ ಕೊನೆಪಕ್ಷ ಸ್ಥಳಿಯರಿಗೆ ಉದ್ಯೋಗ ಸೃಷ್ಟಿಸಿ ಇಲ್ಲಿಯ ಅಭಿವೃದ್ಧಿ ಮತ್ತು ಆರ್ಥಿಕತೆಗೆ ಇನ್ನೊಂದು ರೀತಿಯಲ್ಲಿಯಾದರೂ ಕೊಡುಗೆ ನೀಡಿದ್ದಾರೆ ಅಂತ ಹೇಳಬಹುದಿತ್ತು. ಬೇನಾಮಿ ಹೆಸರಲ್ಲಿ ವಿದೇಶಗಳಲ್ಲಿ ಮಾಡಿರುವ ಉದ್ದಿಮೆ ಮತ್ತು ಬಂಡವಾಳ ಹೂಡಿಕೆಯನ್ನು ಪತ್ತೆ ಹಚ್ಚಲು ಕೂಡಾ ಸರ್ಕಾರವೇ ವೆಚ್ಚ ಮಾಡಬೇಕಾದ ಸ್ಥಿತಿ.

ಇನ್ನೊಂದು ವಿಪರ್ಯಾಸದ ವಿಷಯವೇನೆಂದರೆ ವಿರೋಧಪಕ್ಷಗಳು ಜನತೆಯ ಹಿತಕ್ಕಾಗಿ ಆಲೋಚಿಸದೇ ವಿರೋಧ ಮಾಡಬೇಕೆಂದು ವಿರೋಧ ಮಾಡುತ್ತಿರುವುದು. ನಾಯಕರು ಮತ್ತು ಕಾರ್ಯಕರ್ತರ ನಡುವೆ ವಿಷಯಾಧಾರಿತ ಗೊಂದಲಗಳಿರುವುದು . ಇದಕ್ಕೆ ಮುಖ್ಯಕಾರಣ ಸಿದ್ದಾಂತ ಹೊಂದಿರುವ ರಾಜಕೀಯ ಪರಿಚಯವಿರದೇ ಇರುವುದು. ಕರ್ನಾಟಕವನ್ನೇ ತೆಗೆದುಕೊಳ್ಳಿ ತೈಲಬೆಲೆ ಏರಿಕೆ ಬಗ್ಗೆ ಜೆಡಿಎಸ್ ಪಕ್ಷ ಹೋರಾಟ ಮಾಡುತ್ತದೆ ಮತ್ತು ಆ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಎಸ್ಟಿಯನ್ನು ಪೇಟ್ರೋಲಿಯಂ ತೈಲೋತ್ಪನ್ನಗಳಿಗೆ ಅನ್ವಯಿಸುವುದನ್ನು ವಿರೋಧಿಸುತ್ತಾರೆ. ಈವಾಗ ಹೇಳಿ ಜಿಎಸ್ಟಿ ಅನ್ವಯಿಸಿದರೆ 28% ಅಂತ ಲೆಕ್ಕ ಹಾಕಿ 10% ಸೆಸ್ ಹಾಕಿದ್ರೂ ಪೆಟ್ರೋಲ್ ಬೆಲೆ 60 ರೂಪಾಯಿ ಅಸುಪಾಸು ಆಗುತ್ತದೆ. ಜನರಿಗೆ ಇದರಿಂದ ಲಾಭ ತಾನೇ. ಜಿಎಸ್ಟಿ ವಿರೋಧಿಸುವ ತಾವು ತಮ್ಮ ಕಾರ್ಯಕರ್ತರಿಗೆ ಪಕ್ಷದ ವತಿಯಿಂದ ಬೆಲೆಯೇರಿಕೆ ಬಗ್ಗೆ ಹೋರಾಡಲು ಹೇಗೆ ನಿರ್ದೇಶನ ನೀಡುತ್ತೀರಿ?

ಇನ್ನು ಅಗತ್ಯವಸ್ತುಗಳ ಬೆಲೆಯೇರಿಕೆ. ಹೌದು ಡಿಸೆಲ್ ಏರಿಕೆಗೆ ಸಾಗಾಟದ ವೆಚ್ಚ ಹೆಚ್ಚು ಆಗಿ ಬೆಲೆ ಏರುತ್ತದೆ ಆದರೆ ಇದೊಂದೇ ಕಾರಣವಲ್ಲ. ಮಧ್ಯವರ್ತಿಗಳು ಸೃಷ್ಟಿಸುವ ಕೃತಕ ಕ್ಷಾಮವೂ ಕಾರಣ. ಒಂದು ರೈತ ಬೆಳೆಗೆ ಬೆಲೆ ಸಿಗುತ್ತಿಲ್ಲ ಅಂತ ರಸ್ತೆಗೆ ಸುರಿಯುತ್ತಿದ್ದಾನೆ. ಅಂದ್ರೆ ಬೆಳೆ ಯೇಥೇಚ್ಚ ಆಗಿ ಬೇಡಿಕೆಗಿಂತ ಸಪ್ಲೈ ಜಾಸ್ತಿ ಆಗಿರಬೇಕು ತಾನೇ. ಅಂದರೆ ಮಾರುಕಟ್ಟೆಯಲ್ಲೂ ಕೂಡಾ ಜನರು ಖರೀದಿಸುವಾಗ ಬೆಲೆ ಕಡಿಮೆ ಇರಬೇಕಲ್ಲ. ಹಾಗಾಗುತ್ತಿಲ್ಲವಲ್ಲ ಯಾಕೆ? ಯಾಕೆಂದರೆ ಮಾರುಕಟ್ಟೆ ಮೇಲೆ ದಲ್ಲಾಳಿಗಳ ಹಿಡಿತ ಇದು ಹೋಗಿ ಮುಕ್ತ ಮಾರುಕಟ್ಟೆ ಬಂದರೆ ಬೇರೆಯವರೂ ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿ ಜಡ್ಡುಗಟ್ಟಿರುವ ಸರ್ಧೆ ನೀಡಿದರೆ ಕೃಷಿಗೆ ಬಂಡವಾಳ ಹರಿದು ಬಂದು ರೈತನಿಗೂ ದುಡ್ಡಿನ ಹರಿವು ಹೆಚ್ಚಾಗಿ ಕೃಷಿ ರಂಗದ ಪುನಶ್ಚೇತನ ಆಗಬಹುದು. ಸ್ಪರ್ಧಾತ್ಮಕ ವ್ಯಾಪಾರ ವ್ಯವಸ್ಥೆ ಹುಟ್ಟಿ ಗ್ರಾಹಕರಿಗೂ ಲಾಭ ಆಗುತ್ತದೆ. ಇದು ಬೆಲೆ ಏರಿಕೆ ಸಮಸ್ಯೆಗಳಲ್ಲಿ ಪರಿಹಾರೋಪಾಯಗಳಲ್ಲಿ ಒಂದಾಗಬಹುದು .

ಈ ವ್ಯವಸ್ಥೆ ಸರಿಪಡಿಸಲು ಕಾನೂನು ತೊಂದ್ರೆ ರಸ್ತೆಗಳಲ್ಲಿ ಇಳಿದು ವಿರೋಧ ಪಕ್ಷಗಳು ತೋರಿದ ವಿರೋಧ ಮತ್ತು ಅಂತಾರಾಷ್ಟ್ರೀಯವಾಗಿ ರಚಿಸಿದೆ ಷಡ್ಯಂತ್ರಗಳು ಹೇಗೆ ಮರೆಯಲು ಸಾಧ್ಯ. ಕಾನೂನು ರಚಿಸುವುದಷ್ಟೇ ಸರ್ಕಾರದ ಕಾರ್ಯ ಅಲ್ಲ ಜನತೆಗೆ ಮನದಟ್ಟು ಮಾಡಿಸಬೇಕು. ಹೀಗಾಗಿ ಅದನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ಮೋದಿ ಸರ್ಕಾರ ಎಡವಿದೆ ಅಂತ ನನ್ನ ಅಭಿಪ್ರಾಯ.

ಇನ್ನು ತೈಲೋತ್ಪನ್ನಗಳ ಮೇಲೆ ಜಿಎಸ್ಟಿ ವಿಧಿಸೋದರಿಂದ ಸರ್ಕಾರದ ವರಮಾನ ಕಡಿಮೆ ಆಗುತ್ತದೆ ಎಂಬ ವಾದ. ಈಗಿರುವ ಪೆಟ್ರೋಲಿಯಂ ತೈಲಗಳ ಟ್ಯಾಕ್ಸ್ ಸರಿ ಸುಮಾರು 100 ರಿಂದ 120% . ಜಿಎಸ್ಟಿ ಆಕ್ಟಿಗೆ ತಿದ್ದುಪಡಿ ತಂದು ತೈಲೋತ್ಪನ್ನಗಳ ಮೇಲೆ ಅತೀ ಹೆಚ್ಚಿನ 28% ಸ್ಲಾಬ್ ಅನ್ನು 30 % ಅಥವಾ 50% ಏರಿಸಲಿ. ತೆರಿಗೆಯ ಆದಾಯ ಕಡಿಮೆಯಾದರೂ ಅದನ್ನು ಬೇರೆ ಮೂಲಗಳಲ್ಲಿ ಹೆಚ್ಚಿಸಲು ನೋಡಲಿ. ಮನುಷ್ಯ ಸಹಜ ಗುಣ ಪ್ರಕಾರ ಆದಾಯ ಕಡಿಮೆಯಾದಾಗ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಲೇಬೇಕು. ಹೀಗೆ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಲಿ, ಬಿಳಿಯಾನೆಗಳ ಸಾಕುವಿಕೆ ಸ್ವಲ್ಪ ಕಡಿಮೆ ಮಾಡಲಿ. ಮೋದಿ ಸರ್ಕಾರ ಈ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಗಮನ ಕೊಟ್ಟಿದೆ ಕೂಡ. ಭಾರತಕ್ಕೆ ಚುನಾವಣೆ ವೆಚ್ಚವೂ ಒಂದು ಅತಿವೆಚ್ಚದ ವಿಷಯವೇ. ಭಾರತೀಯರು ದೇಶದ ಒಂದಲ್ಲ ಒಂದು ಭಾಗದಲ್ಲಿ ಹಬ್ಬದಂತೆ ವರ್ಷಂಪ್ರತಿ ಚುನಾವಣೆ ಮಾಡುತ್ತಿರುತ್ತಾರೆ . ಅದೇ ಒಂದೇ ಖರ್ಚಿನಲ್ಲಿ ಎಲ್ಲಾ ಚುನಾವಣೆಗಳನ್ನು ಒಂದೇ ಸಲ 5 ವರ್ಷಕೊಮ್ಮೆ ನಡೆಸಿದರೆ ಸುಮಾರು ವೆಚ್ಚವನ್ನು ಕಡಿಮೆ ಮಾಡಬಹುದು. ಜಿಎಸ್ಟಿಯನ್ನು ತೈಲೋತ್ಪನ್ನಗಳಿಗೆ ಅನ್ವಯಿಸಿ ಒಂದು ದೇಶ ಒಂದು ಚುನಾವಣೆ ನಡೆಸಿ ಚುನಾವಣಾ ವೆಚ್ಚ ಕಡಿಮೆ ಮಾಡಿ ಸ್ವಲ್ಪ ಮಟ್ಟಿಗೆ ಸರಿದೂಗಿಸಬಹುದಲ್ಲ.

ಈಗ ಜನರಿಗೆ ಪೆಟ್ರೋಲ್ ಮತ್ತು ಡಿಸೇಲ್ ತೆರಿಗೆ ಅರ್ಥವೇ ಆಗುವುದಿಲ್ಲ. ನೀವು ಒಂದು ಬಟ್ಟೆ ತೆಗೆದುಕೊಂಡರೆ , ಅದನ್ನು ತೊಳೆಯುವ ಸೋಪು ತೆಗೆದುಕೊಂಡರೆ ಅಥವಾ ಒಂದು ಪ್ಲೇಟ್ ಇಡ್ಲಿ ತಿಂದರೆ ಕೂಡಾ ಬಿಲ್ಲಿನಲ್ಲಿ ರಾಜ್ಯಕ್ಕೆ ಇಷ್ಟು ತೆರಿಗೆ ಕೊಟ್ಟಿದ್ದಿರಾ ಮತ್ತು ಕೇಂದ್ರಕ್ಕೆ ಇಷ್ಟು ತೆರಿಗೆ ಕೊಟ್ಟಿದ್ದಿರಾ ಅಂತ ತಿಳಿಯುತ್ತೆ. ಆದರೆ ಈ ಪೆಟ್ರೋಲಿನ ವಿಷಯದಲ್ಲಿ ಹಾಗಿಲ್ಲ. ತೆರಿಗೆ ಎಷ್ಟು ನೀಡಿದ್ದೇವೆ ಎಂದು ಬಿಲ್ಲಲ್ಲಿ ತಿಳಿಯೋದೇ ಇಲ್ಲ. ಇದು ವಂಚನೆಯಲ್ಲವೇ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಸೆಸ್ ಗಳು . ಆ ಸೆಸ್ ಗಳ ಬಳಕೆಯನ್ನು ಬೇರೆ ಉದ್ದೇಶಕ್ಕೆ ಮಾಡುವಂತಿಲ್ಲ. ಕೆಲವೊಮ್ಮೆ ಫಂಡಿನ ಬಳಕೆ ಮಾಡಲು ಯಾವುದೊ ಒಂದು ಸಮಾರಂಭ, ಯೋಜನೆಯ ಹೆಸರಿನಲ್ಲಿ ಕೊಟಿ ಕೋಟಿಯಲ್ಲಿ ಬಿಲ್ ಮಾಡಿ ಫಂಡಿನ ವಿನಿಯೋಗ ಮಾಡ್ತಾರೆ. ಕೊನೆಪಕ್ಷ ನಾವು ಯಾವ ಕಾರಣಕ್ಕೆಲ್ಲ ಸೆಸ್ ಕೊಡ್ತಾ ಇದ್ದೇವೆ ಎಂದು ಬಿಲ್ಲಿನಲ್ಲಿ ತಿಳಿಯಬೇಕು ತಾನೇ?

ದುಡ್ಡು ಮಾಡುವ ಇಂತಹ ವಿಷಯಗಳಲ್ಲಿ ಮಾತ್ರ ಪಕ್ಷಾತೀತವಾಗಿ ಒಗ್ಗೂಡುತ್ತಾರೆ. ಯಾವುದೇ ವಿರೋಧ ಪಕ್ಷದ ನಾಯಕನೂ ಈ ವಿಚಾರಗಳನ್ನು ಎತ್ತುವುದಿಲ್ಲ. ಯಾಕೆಂದರೆ ಜನರಿಗೆ ಮಾಹಿತಿ ಕೊಡದೇ ಕತ್ತಲೆಯಲ್ಲಿ ಇಟ್ಟರೆ ಆತನಿಗೆ ತಾನು ನೀಡುತ್ತಿರುವ. ತೆರಿಗೆ ಎಷ್ಟು ಎಂದು ಗೊತ್ತಾಗೋಲ್ಲ ಮತ್ತು ಸರ್ಕಾರವನ್ನು ಮತ್ತು ತನ್ನ ನಾಯಕರನ್ನೂ ಪ್ರಶ್ನಿಸುವ ಗೋಜಿಗೂ ಹೋಗೋದಿಲ್ಲ. ಇದರಿಂದ ವಿರೋಧವನ್ನೂ ಮಾಡುವ ಅವಶ್ಯಕತೆ ಬರೋಲ್ಲ. ಎಲ್ಲರೂ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಹಾಯಾಗಿ ರಾಜ್ಯಭಾರ ಮಾಡಿಕೊಂಡಿರಬಹುದು. ಇದೇ ತೈಲೋತ್ಪನ್ನಗಳ ಜಿ ಎಸ್ಟಿ ಬಂದರೆ ಬಿಲ್ಲಿನಲ್ಲಿ ರಾಜ್ಯಕ್ಕೆ ಇಷ್ಟು ತೆರಿಗೆ ನೀಡಿದೆ ಮತ್ತು ಕೇಂದ್ರಕ್ಕೆ ಇಷ್ಟು ತೆರಿಗೆ ನೀಡಿದೆ ಅಂಥ ಗೊತ್ತಾಗುತ್ತೆ. ಇದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಬೆಟ್ಟು ಮಾಡಿ ತೋರಿಸಿ ಪರಸ್ಪರರ ಮೇಲೆ ಆಪಾದನೆ ಮಾಡಿ ರಾಜಕೀಯ ಮಾಡುವುದೂ ತಪ್ಪುತ್ತದೆ.

ವಿರೋಧ ಪಕ್ಷಗಳು ಸ್ವಲ್ಪ ಇಸ್ರೇಲಿನ ವಿರೋಧ ಪಕ್ಷಗಳನ್ನು ನೋಡಿ ಕಲಿಯಬೇಕು. ನನ್ನ ಹೈಸ್ಕೂಲ್ ಜೀವನದ ಸಂದರ್ಭದಲ್ಲಿ ನಾವು ನೋಡಿದ ಈ ದೇಶದ ಅತ್ಯುತ್ತಮ ಪ್ರಧಾನಿ ನೆಚ್ಚಿನ ನಾಯಕ ಅಟಲ್ ವಾಜಪೇಯಿಯವರ ಮಾತುಗಳಾದ ಸರ್ಕಾರಗಳು ಬರುತ್ತವೆ ಹೋಗುತ್ತವೆ ಆದರೆ ದೇಶ ಉಳಿಯಬೇಕು ಎಂಬ ವಿಚಾರವನ್ನು ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು.

ಹಾಗಂತ ನಾನು ಮೋದಿಯವರು ಎಲ್ಲದರಲ್ಲೂ ಪ್ರಶಂಸನೀಯರು ಅಂತ ಹೇಳಲ್ಲ. ಅವರೇನು ಭಗವಂತರಲ್ಲವಲ್ಲ. ಮಾನವ ಸಹಜ ಇತಿಮಿತಿಗಳು ಇರುತ್ತದೆ. ರಾಜಕೀಯದ ಲೆಕ್ಕಾಚಾರಗಳಿರುತ್ತದೆ. ಆದರೆ ತೈಲದ ವಿಷಯದಲ್ಲಿ ಮತ್ತು ಅದಕ್ಕೆ ಜಿ ಎಸ್ಟಿ ಅನ್ವಯಿಸುವ ವಿಷಯದಲ್ಲಿ ಅವರು ಇಚ್ಚಾಶಕ್ತಿ ಸಾಲದು , ಇನ್ನಷ್ಟು ಎದೆಗಾರಿಕೆ ತೋರಿಸಬೇಕು, ತೋರಿಸುತ್ತಾರೆ ಎಂಬ ಆಶಾಭಾವನೆ ನಮ್ಮದು. ಅಷ್ಟೇ ಅಲ್ಲದೇ ವಿರೋಧಪಕ್ಷಗಳು ಯಾವತ್ತಿನಂತೆಯೇ ವಿನಾ ಕಾರಣ ತೊರಿಸುವ ವಿರೋಧ ತೋರದೇ ಜನಹಿತಕೋಸ್ಕರ ಕೇಂದ್ರ ನಡೆಗೆ ಬೆಂಬಲ ಸೂಚಿಸಿಬೇಕು ಮತ್ತು ಇದು ಜನರು ಈ ವಿಷಯದಲ್ಲಿ ವಿರೋಧ ಪಕ್ಷಗಳಿಂದ ಅಪೇಕ್ಷಿಸುವ ನಡೆ ಕೂಡಾ ಆಗಿರುತ್ತದೆ.

ಚಿತ್ರಕೃಪೆ : Business Today

27
ಏಪ್ರಿಲ್

ಅಂತರರಾಷ್ಟ್ರೀಯ ತೈಲ‌ ಮಾರುಕಟ್ಟೆ, ಭಾರತ‌ ಮತ್ತು ಮೋದಿ – ಭಾಗ 2

– ಪ್ರಶಾಂತ್ ಪದ್ಮನಾಭ

ಭಾಗ 1 – ಜಾಗತಿಕ ಕಚ್ಚಾ ತೈಲದ ಬೆಲೆ ಮೈನಸ್ ಆಗಿರುವುದೇಕೆ? ಅದರ ಅರ್ಥವೇನು?

ಮೊದಲನೇ ಪೋಸ್ಟ್ನಲ್ಲಿ ಕಾಂಮೆಂಟ್ನಲ್ಲಿ ಯಾರೋ ಕೇಳಿದ ಪ್ರಶ್ನೆಗಳು, ಹಾಗು ಅದರ ಉತ್ತರ ಎಲ್ಲರಿಗೂ ತಲುಪಲಿ ಅನ್ನೋ ಉದ್ದೇಶದಿಂದ ಹೊಸ ಪೋಸ್ಟ್ ಹಾಕಿದ್ದೀನಿ. ಮೊದಲ ಪೋಸ್ಟ್ ನ ಉದ್ದೇಶ ಅಮೇರಿಕಾದಲ್ಲಿ WTI ನ ಬೆಲೆ ಹೇಗೆ ನೆಗೆಟಿವ್ ಆಯಿತು, ಹಾಗೆ ಆಗಿದ್ದಿರಿಂದ ಭಾರತದಲ್ಲೂ ಕಮ್ಮಿ ಮಾಡಿಯೆಂದು ಕೇಳುವುದು ಅವಿವೇಕತನ ಎಂಬುದಾಗಿತ್ತು. (ಅಮೇರಿಕಾದಲ್ಲಿ ಮಳೆಯಾದರೆ, ಮೋದಿ‌ ಭಾರತದಲ್ಲಿ‌ ಯಾಕೆ ಕೊಡೆ‌ ಹಿಡಿಯಲ್ಲಿಲ್ಲ ಅಂತ ಕೇಳುವ ಕಾಂಗ್ರೆಸ್ ಗೆ ಬಹುಪರಾಕ್‌ ಹೇಳವ ಮನಸ್ಥಿತಿಗೆ ಉತ್ತರ ಹೇಳುವುದು)

ಇದನ್ನೂ ಕೂಡ ಜಾಸ್ತಿ ಟೆಕ್ನಿಕಲಿಯಾಗಿ ಹೇಳದೆ, ಸರಳ ಭಾಷೆಯಲ್ಲಿ ಹೇಳುವ ಪ್ರಯತ್ನ ಮಾಡಿದ್ದೀನಿ.

ಪ್ರಶ್ನೆ:
1. ಜಗತ್ತಿನ ಕಚ್ಚಾ ತೈಲದ ಕ್ವಾಲಿಟಿ ನಿರ್ಧಾರವಾಗುವುದು 2 ಅಂಶಗಳಿಂದ. Low Sulphur ಕಂಟೆಂಟ್ ಮತ್ತು Low Density (Higher API). ಈ ಎರಡು ಅಂಶಗಳನ್ನ ಪರಿಗಣಿಸಿ Brent ಹಾಗೂ WTI compare ಮಾಡಿದ್ರೆ WTI ಗುಣಮಟ್ಟವೇ ಉತ್ತಮ.
2. ಎರಡನೆಯದು ತೈಲ its self is commodity. ಶೇರು ವ್ಯವಹಾರವನ್ನ ಸರಿಯಾಗಿ ಅರ್ಥ ಮಾಡ್ಕೊಳ್ಳಿ.
3. ಮೂರನೆಯದು WTI ಸೀಮಿತವಾಗಿ ಹೇಳೋದಾದ್ರೆ..ಅಲ್ಲಿರುವ Future Trading Agreement ಇರುವುದು Every 1000 Barrels ಗೆ. ಹಾಗಾಗಿ ಅದು negative Trade ಆದ್ರು ಅದನ್ನ ಕೊಂಡುಕೊಳ್ಳುವುದು ಕಷ್ಟ.
4. ನಾಲ್ಕನೆಯದು ಭಾರತದಲ್ಲಿ Oil rate ಏರಿರಲು ಮಖ್ಯ ಕಾರಣ ನಮ್ಮ Tax ವ್ಯವಸ್ಥೆ.
5. ಅಂತರರಾಷ್ಟೀಯ ಕಚ್ಚಾ ತೈಲದ ವೇಳೆ 20 ಡಾಲರ್ ಪ್ರತಿ ಬ್ಯಾರೆಲ್ ಆಗಿದೆ. ಹಾಗಾದ್ರೆ ಪೆಟ್ರೋಲ್ ಬೆಲೆ ಇನ್ನಷ್ಚು ಇಳಿಯಬೇಕಿತ್ತಲ್ಲವೇ..?

ಉತ್ತರ: ಮತ್ತಷ್ಟು ಓದು »

24
ಏಪ್ರಿಲ್

ಜಾಗತಿಕ ಕಚ್ಚಾ ತೈಲದ ಬೆಲೆ ಮೈನಸ್ ಆಗಿರುವುದೇಕೆ? ಅದರ ಅರ್ಥವೇನು?

– ಪ್ರಶಾಂತ್
ಇಂಟರ್ನ್ಯಾಶನಲ್ ಕ್ರೂಡ್ ಆಯಿಲ್‌ (WTI)  ಬೆಲೆ ಪ್ರತಿ ಬ್ಯಾರೆಲ್ ಗೆ ಮೈನೆಸ್ 40 ಡಾಲರ್ ಆಗಿದ್ದರ ಬಗ್ಗೆ ಕೆಲವು ಮಾಹಿತಿಗಳು ಹಂಚಿಕೊಳ್ಳಲು ಹಾಗೂ ಇದರ ವಿಷಯ ಎಲ್ಲರಿಗು ಸುಲಭವಾಗಿ ಅರ್ಥವಾಗಲಿ ಅನ್ನೋದು ಈ ಪೋಷ್ಟನ ಉದ್ದೇಶ.
ಆಯಿಲ್ ಬೆಲೆ‌ ಅಷ್ಟುಂದು ಕಮ್ಮಿಯಾಗಿದೆಯಂತೆ, ಪಾತಳಕ್ಕೆ ಇಳಿದಿದೆಯಂತೆ, ಹಾಗಾದರೆ  ನಾನು ಕಾರ್ ತೆಗೆದುಕೊಂಡು ಪೆಟ್ರೋಲ್ ಹಾಕಿಸಲು ಹೋದರೆ, ಬಂಕ್ ನವರು ನನಗೇ ದುಡ್ಡು ಕೊಟ್ಟು ಪೆಟ್ರೋಲ್ ಹಾಕುತ್ತಾರೆಯೇ ಎಂದು‌‌‌ ನನ್ನ ಸ್ನೇಹಿತರು ಬಹಳಾ‌‌ ಸೀರಿಯಸ್ ಫೋನ್‌ ಮಾಡಿ ಕೇಳಿದರು..!! ಈ ಪ್ರಶ್ನೆಗೆ ಉತ್ತರ ಹುಡುಕುವ ಜೊತೆಗೆ,‌ ನಾನು ಪೆಟ್ರೋಲಿಯಂ ಕ್ಷೇತ್ರದಲ್ಲಿಯೇ ಕೆಲಸ ಮಾಡುವುದರಿಂದ ಸ್ವಲ್ಪ‌ ವಿವರಣೆಯನ್ನು‌ ಕೊಡುವ ಪ್ರಯತ್ನವನ್ನೂ ಮಾಡುತ್ತಿದ್ದೇನೆ.
ಎಲ್ಲಾದಕ್ಕೂ‌ ಮೊದಲು ಅರ್ಥವಾಗ ಬೇಕಾಗಿರುವುದು ಕ್ರೂಡ್ ಆಯಿಲ್‌‌ ಅಂದರೆ ಏನು ಹಾಗೂ ಅದರ ಗ್ರೇಡಿಂಗ್‌ ಹೇಗೆ‌ ಮಾಡುತ್ತಾರೆ ಎಂಬುದು.. ಸಾವಿರಾರು ವರ್ಷಗಳಿಂದ ಭೂಮಿಯ ‌ಹಾಗೂ ಸಮುದ್ರದ ತಳದಲ್ಲಿ ಪ್ರಾಣಿಗಳ ಮತ್ತು ಗಿಡಗಳ‌ ಪಳೆಯುಳಿಕೆಗಳು,‌ ಕ್ರೂಡ್ ಆಯಿಲ್‌ ಆಗಿ‌ ಪರಿವರ್ತನೆಯಾಗುತ್ತದೆ.. ಅದರಲ್ಲಿ ಇರುವ ಸಲ್ಫರ್ ಅಂಶದಿಂದ ಅದರ ಗ್ರೇಡಿಂಗ್ ನಿರ್ಧಾರವಾಗುತ್ತದೆ.. ಜಾಸ್ತಿ ಅಂಶ ಸಲ್ಫರ್ ಇದ್ದರೆ ಒಳ್ಳೆಯ ಕ್ರೂಡ್ ಆಯಿಲ್ ಯೆಂದು ಪರಿಗಣಿಸುತ್ತಾರೆ.. ಇನ್ನೂ ಸುಲಭವಾಗಿ ಹೇಳಬೇಕೆಂದರೆ ಸಮುದ್ರದಲ್ಲಿ ಸಿಗವ ಆಯಿಲ್ ನಲ್ಲಿ ಸಲ್ಫರ್ ಅಂಶ ಜಾಸ್ತಿ ಇರುತ್ತದೆ.. ಅದರ ಪ್ರಕಾರ ಗ್ರೇಡಿಂಗ್ ನಿರ್ಧಾರವಾಗುತ್ತದೆ.. ನಾನು ಕೆಲಸ ಮಾಡುವ ಯುಕೆಯ ನಾರ್ಥ್ ಸೀ (North sea) ಪ್ರದೇಶದಲ್ಲಿ ಸಿಗುವ ಆಯಿಲ್ಅನ್ನು ಬ್ರೆಂಟ್  ಯೆಂದು ಕರೆಯುತ್ತಾರೆ..ಇದು ಉತ್ಕೃಷ್ಟವಾಗಿರತ್ತದೆ.. ಹಾಗೆಯೇ ಅಮೇರಿಕಾದಲ್ಲಿ ಭೂಮಿಯಿಂದ ತೆಗೆಯುವ ಆಯಿಲ್ ಅನ್ನು WTI (West Texus Intermetiate) ಯೆಂದು ಕರೆಯುತ್ತಾರೆ.. ಹಾಗೂ ಅದು ಸಾಧಾರಣ ಕ್ವಾಲೆಟಿಯ ತೈಲ.. ಅರಬ್ ಪ್ರಾಂತ್ಯದ ಆಯಿಲ್ ಅನ್ನು ಓಪೇಕ್ ಬಾಸ್ಕೇಟ್ (OPEC Basket) ಎಂದು ಕರೆಯುತ್ತಾರೆ.
ಇನ್ನೂ ಆಯಿಲ್ (ತೈಲ) ವ್ಯವಹಾರದಲ್ಲಿ ಎರಡು ರೀತಿ ‌ಇದೆ.. ಶೇರು ಮಾರುಕಟ್ಟೆ ವ್ಯವಹಾರ ಹಾಗು ಕಮಾಡಿಟಿ ವ್ಯವಹಾರ (Commodity trading).  (ಚಿನ್ನದ ವ್ಯವಹಾರದ ರೀತಿಯಲ್ಲಿಯೇ ನಡೆಯವ ವ್ಯವಹಾರ). ಕಮೋಡಿಟಿ ವ್ಯವಹಾರದಲ್ಲಿ ಮತ್ತೊಂದು ವಿಧಾನವಿದೆ, ಅದನ್ನು ಫ್ಯೂಚರ್ ಟ್ರೇಡಿಂಗ್ ಏನ್ನುತ್ತಾರೆ.. ಅಂದರೆ, ಏಪ್ರಿಲ್ ಬೆಲೆಯನ್ನು ಜನವರಿಯಲ್ಲಿಯೇ ನಿರ್ಧರಿಸುವ ವಿಧಾನ.. ಉದಾಹರಣೆಗೆ, ಮಾರುವವರು (Seller) ( ಆಯಿಲ್ ಅನ್ನು ತಗೆಯುವ ಕಂಪನಿ) ಮತ್ತು ಕೊಂಡುಕೊಳ್ಳುವವರು ‌(Buyer) ( ಬಹುತೇಕ ಮಧ್ಯವರ್ತಿಗಳು) ಇಬ್ಬರು ಕುಳಿತುಕೊಂಡು,‌ ಬಹಳ ಸುಧೀರ್ಘವಾಗಿ ಸಮಾಲೋಚಿಸಿ ( ಬಿಗ್ ಡೇಟಾ ಹಾಗೂ‌ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ‌- AI ಸಹಾಯದಿಂದ)  ಪ್ರತಿ ‌ಬ್ಯಾರೆಲ್ಗೇ  25 ಡಾಲರ್ ಎಂದು ಬೆಲೆ ನಿರ್ಧರಿಸುತ್ತಾರೆ.. ಅದಕ್ಕೆ ತಕ್ಕ ಹಾಗೆ ಆಯಿಲ್‌ ಪ್ರೂಡ್ಯೂಸ್ ಆಗುತ್ತದೆ ಹಾಗೂ ಅದನ್ನು‌ ಏಪ್ರಿಲ್‌ ನಲ್ಲಿ ದುಡ್ಡು ಕೊಟ್ಟು ತೆಗೆದುಕೊಂಡು ಹೋಗುವುದು ಆಯಿಲ್‌‌ಅನ್ನು‌ ಕೊಂಡುಕೊಳ್ಳವವನ ಜವಾಬ್ದಾರಿ.. ಆದರೆ ನೆನಪಿಡಿ ಈ ಕ್ರೂಡ್ ಆಯಿಲ್ಅನ್ನು ಸಂಸ್ಕರಿಸದೆ ಅದರಿಂದ ಯಾವ ಲಾಭವು ಆಗುವುದಿಲ್ಲ.. ಈ‌ ರೀತಿ ಕೊಂಡುಕೊಳ್ಳವವರು ಇದನ್ನು ಇನ್ನೂ ಕೆಲವು ದಿನ ಶೇಖರಿಸಿ, ಬೆಲೆ‌‌ ಜಾಸ್ತಿಯಾದಗ, ರಿಫೈನರಿ ಕಂಪನಿಗಳಿಗೆ ಇನ್ನು‌ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ‌ಲಾಭ ಮಾಡಿಕೊಳ್ಳುತ್ತಾರೆ.. ರಿಫೈನರಿಗಳು ಈ ಕ್ರೂಡ್ ಆಯಿಲ್ ಅನ್ನು‌ ಸಂಸ್ಕರಿಸಿ ಡೀಸೆಲ್,‌ ಪೆಟ್ರೋಲ್ ಇತ್ಯಾದಿಗಳನ್ನು‌ ಮಾಡಿ ನಮ್ಮಂಥ‌ ಗ್ರಾಹಕರಿಗೆ ಮಾರುತ್ತಾರೆ..

ಮತ್ತಷ್ಟು ಓದು »

21
ಜನ

ಮೋದಿ ಸಾಲದ ಶೂಲ – ಗಂಜಿಗಿರಾಕಿಗಳ ಕೋಲಾಹಲ

– ರಾಘವೇಂದ್ರ ಸುಬ್ರಹ್ಮಣ್ಯ

ನಿನ್ನೆ-ಮೊನ್ನೆಯಿಂದಾ ನಮ್ಮ ಮಾಧ್ಯಮಗಳದ್ದು ಒಂದೇ ಗಲಾಟೆ, “ಮೋದಿ ಅಧಿಕಾರವಧಿಯಲ್ಲಿ ಭಾರತದ ಸಾಲದ ಹೊರೆ ಬೃಹತ್ ಪ್ರಮಾಣದಲ್ಲಿ ಹೆಚ್ಚಾಗಿದೆ” ಅಂತಾ ಕೂಗಾಡ್ತಿವೆ. ಇಂಡಿಯಾಟುಡೇ “ಮೋದಿ ಸರ್ಕಾರದ ಅಡಿಯಲ್ಲಿ ಕೇಂದ್ರ ಸಾಲವನ್ನು 50% ಏರಿಕೆಯಾಗಿದೆ” ಅಂತಾ ಶುರುಮಾಡಿದ ಈ ಅರಚಾಟದ ಕಸದಂತಾ ಸುದ್ಧಿಯನ್ನು, ಎಕನಾಮಿಕ್ ಟೈಮ್ಸ್ ಕೂಡಾ ತಾನು ಎರವಲು ಪಡೆದ ಹಾಗೇ ಹಂಚಿತು. ಇವರೆಲ್ಲರೂ ಈ ಸುದ್ಧಿಯನ್ನ ಪಡೆದದ್ದೆಲ್ಲೆಂದಾ? ಕಳೆದ ಶುಕ್ರವಾರ ಕೇಂದ್ರ ಹಣಕಾಸು ಸಚಿವಾಲಯದ “ಸರ್ಕಾರೀ ಸಾಲದ ಸ್ಥಿತಿಪತ್ರದ 8 ನೇ ಆವೃತ್ತಿ” ಬಿಡುಗಡೆಯಾಯಿತು. ಅದರಿಂದ ತಮಗೆ ಬೇಕಾದಷ್ಟೇ ಸುದ್ಧಿಯನ್ನ ಈ ಸುದ್ಧಿಮನೆಗಳು ಹೆಕ್ಕಿತೆಗೆದು, ತಮಗೆ ಬೇಕಾದಂತೆ ತಿರುಚಿ, “ಮೋದಿ ಹೇಗೆ ಭಾರತಕ್ಕೆ ಮಾರಕ” ಎನ್ನುವಂತಾ ತಮ್ಮ ಹಳೇ ಕಥೆಗಳ ದೀಪಕ್ಕೆ ಹೊಂದುವಂತಾ ನಿರೂಪಣೆಯ ಬತ್ತಿಯನ್ನ ಹೊಸೆದರು.

ಈ ಸುದ್ಧಿಗಳು ಬಂದದ್ದೇ ತಡ, ಮೋದಿ ವಿರೋಧಿ ಬಳಗಗಳು ತಮ್ಮ ಮನೆ-ಮನಗಳಲ್ಲಿ ಸದಾಕಾಲ ಉರಿಯುತ್ತಿರುವ ಮೋದಿ ದ್ವೇಷದ ಬೆಂಕಿಗೆ ಇನ್ನೂ ಎರಡು ಲೀಟರ್ ಪೆಟ್ರೋಲ್ ಹೆಚ್ಚೇ ಸುರಿದು, ಈ ಸುದ್ಧಿಯನ್ನು ಎಲ್ಲೆಡೆ ಹರಡಲು ಪ್ರಾರಂಭಿಸಿದರು. “ಮೋದಿನಾಮಿಕ್ಸ್ ನೆಲಕಚ್ಚಿದೆ, ದೇಶದಲ್ಲಿ ಕೆಲಸಗಳೇ ಇಲ್ಲ, ಕೈಗಾರಿಕಾ ಉತ್ಪಾದನೆ ಮೇಲೇಳದಂತೆ ಕುಸಿದಿದೆ, ಇಂತಾ ಸಮಯದಲ್ಲಿ ಮೋದಿ ದೇಶಕ್ಕೆ ಇನ್ನೂ 28ಲಕ್ಷ ಕೋಟಿ ಸಾಲ ಹೆಚ್ಚಿಸಿ ನಮ್ಮನ್ನೆಲ್ಲಾ ಕೊಂದೇಬಿಟ್ಟಿದ್ದಾನೆ. ಚುನಾವಣಾ ಜುಮ್ಲಾಗಳ ಕಾಲ ಮುಗಿಯಿತು, 2019ರಲ್ಲಿ ಜನ ಬಿಜೆಪಿಯನ್ನು ಕಿತ್ತೆಯಸಲಿದ್ದಾರೆ” ಅಂತಾ ಒಂದೇ ಸಮವೆ ಕಿರುಚಾಡುತ್ತಿದ್ದಾರೆ.

ಈ ವಿಚಾರವನ್ನು ಎರಡು ರೀತಿಯಲ್ಲಿ ನಿಭಾಯಿಸಬಹುದು. ಒಂದನೇ ದಾರಿ: “ಜನಕ್ಕೆ ಇದೆಲ್ಲಾ ಅರ್ಥವಾಗೇ ಆಗುತ್ತೆ. ಈ ಕಿರುಚಾಟಗಳೆಲ್ಲಾ ಅರ್ಥಹೀನ ಅಂತಾ ಇವತ್ತಲ್ಲಾ ನಾಳೆ ತಿಳಿದುಕೊಂಡು ಇವನ್ನೆಲ್ಲಾ ನಿವಾಳಿಸಿ ಬದಿಗಿಡ್ತಾರೆ” ಅಂತಾ ಸುಮ್ಮನಾಗುವುದು. ಆದರೆ ಇದನ್ನು ಹಿಂಗೇ ಬಿಟ್ಟರೆ, ಏನೂ ಗೊತ್ತಿಲ್ಲದವರೂ ಇದನ್ನೇ ನಿಜವೆಂದು ನಂಬಿ ಕೂತರೇನು ಕಥೆ? ಇಂಗ್ಲೀಷ್ ಪತ್ರಿಕೆಗಳೇನೋ ಗಾಂಧಿ ಪರಿವಾರದ ಸಂಬಳದಲ್ಲಿವೆ. ತೀರಾ ಉದಯವಾಣಿಯವರೂ ಇದನ್ನೇ ಸತ್ಯವೆಂದು ಬಿಂಬಿಸಿ ಸುದ್ಧಿಪ್ರಕಟಿಸುತ್ತಿದ್ದಾರಲ್ಲಾ! ಅದೂ ದೇಶ ಚುನಾವಣೆಯ ಹೊಸ್ತಿಲಲ್ಲಿರುವಾಗ!! ಆ ಅರ್ಥವಾಗುವ “ಇವತ್ತಲ್ಲಾ ನಾಳೆ” ಅನ್ನೋ ಕಾಲ, ಚುನಾವಣೆ ಮುಗಿದಮೇಲೆ ಬಂದರೇನು ಸುಖ!? ನಾವೇ ದೇಶವನ್ನು ಅವಸಾನದೆಡೆಗೆ ತಳ್ಳಿದಂತಾಯ್ತಲ್ಲಾ! ಹೀಗಿದ್ದಾಗ ಎರಡನೇ ದಾರಿಯೇ ಬೇಕು. ಎರಡನೆಯ ದಾರಿ: “ಇದನ್ನು ಸಾಮಾನ್ಯರಿಗೂ ಅರ್ಥವಾಗುವ ಪದಗಳಲ್ಲಿ ಬಿಡಿಸಿ ಬರೆದು, ಸರಿದಾರಿಗೆಳೆಯುವುದು”. ಈ ಲೇಖನ ಆ ಎರಡನೆಯ ದಾರಿ.

  • ಹಾಗಾದರೆ ಹಣಕಾಸು ಸಚಿವಾಲಯದ ಸಾಲಪತ್ರದಲ್ಲಿ ಹೇಳಿರುವ ವಿಚಾರಗಳು ಸುಳ್ಳೇ?
  • ಈ ಪತ್ರಿಕೆಗಳು ಹೇಳುತ್ತಿರುವ ವಿಚಾರಗಳು ಸುಳ್ಳೇ?
  • ಮೋದಿಯನ್ನು ಸಮರ್ಥಿಸುವ ಭರದಲ್ಲಿ, ನಾನು ಈ ದೇಶದ ಮೇಲೆ ಸಾಲವೇ ಇಲ್ಲ ಅಂತಾ ಹೇಳುತ್ತಿದ್ದೇನೆಯೇ?

ಮತ್ತಷ್ಟು ಓದು »

6
ಆಗಸ್ಟ್

IT/ED RAID ಗಳು ಹೇಗೆ ನಡೆಯುತ್ತವೆ?

ಗುಜರಾತಿನ ಶಾಸಕರನ್ನು ಬೆಂಗಳೂರಿನ ರೆಸಾರ್ಟಿನಲ್ಲಿ ತಂದಿಟ್ಟ ೩-೪ ದಿನಗಳ ಒಳಗೆಯೇ,ರಾಜ್ಯ ಸರ್ಕಾರದ ಪವರ್ ಮಿನಿಸ್ಟರ್ ಡಿ.ಕೆ ಶಿವಕುಮಾರ್ ಮೇಲೆ ನಡೆದ ಐಟಿ ದಾಳಿಯನ್ನು,ರಾಜ್ಯ ಸರ್ಕಾರ,ಕಾಂಗ್ರೆಸ್ ,ಕಾಂಗ್ರೆಸ್ ಬೆಂಬಲಿಸುವ ಪತ್ರಕರ್ತ ಮುಖವಾಡಗಳು ಮತ್ತು ಬೆಂಬಲಿಗರೂ ಅದೇ ರಾಗವನ್ನು ಹಾಡಿದರು.ರೇಡ್ ಎಂದರೇನು,ಅದಕ್ಕೆ ಬೇಕಾದ ಪೂರ್ವ ತಯಾರಿಗಳೇನು? ಹೇಗೆ ನಡೆಯುತ್ತದೆ ಎಂಬೆಲ್ಲ ಅಂಶಗಳು ಜನಸಾಮಾನ್ಯರಿಗೆ ತಿಳಿದಿರುವುದಿಲ್ಲ.ಅಂತಹ ಮಾಹಿತಿಯನ್ನು ಒಳಗೊಂಡ ಲೇಖನವಿದು.  

ಜೆಬಿಆರ್ ರಂಗಸ್ವಾಮಿ

IT/ED RAID ಆಗುತ್ತೆ ಅಂದರೆ ಬಲವತ್ತರವಾದ ಸಾಕ್ಷ್ಯಾಧಾರ ಗಳು ಇರಲೇಬೇಕು.ನೂರಿಪ್ಪತ್ತು ನೂರಮೂವತ್ತು ಅಧಿಕಾರಿಗಳು 150 ಕಾರುಗಳಲ್ಲಿ ಸಿಬ್ಬಂದಿಯನ್ನು ತುಂಬಿಕೊಂಡು, ಏಕಕಾಲದಲ್ಲಿ 39 – ರಿಂದ – 64 ಕಡೆ ರೇಡ್ ಮಾಡಲು ಹೊರಟರೆಂದರೆ ತಿಂಗಳೇನು? ವರ್ಷಗಟ್ಟಲೇ ಪೂರ್ವಸಿದ್ಧತೆ ನಡೆದಿರುತ್ತೆ.ಗುಜರಾತಿನ ಗುಜರಿ ಶಾಸಕರ ಸಲುವಾಗಿ ರೇಡ್ ಆಗಿದೆ ; ಪ್ರಜಾತಂತ್ರದ ಕಗ್ಗೊಲೆ ಯಾಗಿದೆ ಎಂಬಂತಹ ಪ್ರಲಾಪಗಳೆಲ್ಲವೂ ಅಜ್ಞಾನಿ ಹೇಳಿಕೆಗಳು ಮಾತ್ರ.ಎಮ್ಮೆ ಗಂಜಲ ಹುಯ್ದರೆ ಇರುವೆ ಕಣ್ಣಿಗೆ ಅದೇ ದೊಡ್ಡ ಜಲಪಾತದಂತೆ ಕಾಣುತ್ತೆ.ಈ ಪುಢಾರಿಗಳು ಪುಟಗೋಸಿ ರೆಸಾರ್ಟ್‌ ರಾಜಕೀಯವನ್ನೇ ಅಂತರಾಷ್ಟ್ರೀಯ ಮಟ್ಟದಷ್ಟು ದೊಡ್ಡದು ಅಂದುಕೊಂಡಿವೆ.

ಇರಲಿ.ಇಂತಹ ರೇಡ್ ಗಳ ಹಿನ್ನೆಲೆ ಹೇಗಿರುತ್ತೆ? ಹೇಗೆ,ಯಾಕೆ,ಯಾವ ಸಂದರ್ಭಗಳಲ್ಲಿ ರೇಡ್ ಮಾಡುತ್ತಾರೆ? ಎಂಬುದರ ವಾಸ್ತವಾಂಶಗಳನ್ನು ನೋಡಿ :

1 ) ರೇಡ್ ಆಗುವವನ ಅನೇಕ ವ್ಯವಹಾರ,ಅವ್ಯವಹಾರ ಕುರಿತಂತೆ ನಾನಾ ಮೂಲಗಳಿಂದ ನಾನಾ ದೂರುಗಳು ಮೊದಲೇ ಬಂದಿರುತ್ತವೆ.ಅವುಗಳ ಸತ್ಯಾಸತ್ಯತೆಗಳ ಬಗ್ಗೆ ಕೂಲಂಕುಷ ಗೋಪ್ಯ ವಿಚಾರಣೆ ತಿಂಗಳುಗಟ್ಟಲೇ ನಡೆದಿರುತ್ತೆ. ಅವುಗಳಲ್ಲಿ ಸತ್ಯಾಂಶ ಇರುವ ಸಂಗತಿಗಳು ಪಟ್ಟಿಯಾಗುತ್ತವೆ.ಇದೊಂದು ದೊಡ್ಡ ಕಸರತ್ತು.ಸಂಗ್ರಹಿಸಿರುವ ಮಾಹಿತಿ ನಿಜವೋ ಅಲ್ಲವೋ ಮತ್ತೆ ಮತ್ತೆ ಖಚಿತ ಪಡಿಸಿಕೊಳ್ಳುತ್ತಾರೆ. (sec 132 IT Act).

2 ) ಎಲ್ಲೆಲ್ಲಿ ರೇಡ್ ಮಾಡಬೇಕೋ ಆಯಾ ಮನೆ,ಜಾಗಗಳ ಪಕ್ಕಾ #ಚಕ್ಕುಬಂದಿ ಪಟ್ಟಿ ತಯಾರಾಗುತ್ತದೆ.ಆ ಮನೆಗೆ ರೇಡ್ ಮಾಡಲು ಎಷ್ಟು ಜನ ಅಧಿಕಾರಿ ಸಿಬ್ಬಂದಿ ನಿಯೋಜಿಸಬೇಕು ಎಂಬುದರ ಯೋಜನೆಯೂ ಸಿದ್ದವಾಗುತ್ತದೆ.

ನೆನಪಿರಲಿ : ಯಾವ ಅಧಿಕಾರಿಯ ನೇತೃತ್ವದಲ್ಲಿ ರೇಡ್ ಆಗುತ್ತದೆಯೋ,ಸ್ವತಃ ಆ ಅಧಿಕಾರಿ ಸಿಬ್ಬಂದಿಗಳಿಗೇ ತಾವು ಎಲ್ಲಿಗೆ,ಯಾರ ಮನೆಗೆ ದಾಳಿ ಇಡುತ್ತೇವೆ ಎಂಬ ವಿಷಯ ಕೊನೆಯತನಕ ತಿಳಿದಿರುವುದಿಲ್ಲ ! ( ನನ್ನದೇ ಅನುಭವ ! )

ಅದು ಅಷ್ಟು ಗೋಪ್ಯ. SECRET! And the Meaning of the secret is SECRET ONLY !

ಮತ್ತಷ್ಟು ಓದು »

25
ನವೆಂ

ನೋಟುಗಳ ಅಮಾನ್ಯೀಕರಣ – ಭಾರತೀಯರ ಪ್ರತಿಸ್ಪಂದನೆ

– ವಿನಾಯಕ ಹಂಪಿಹೊಳಿ

e-commerceಪಾಶ್ಚಿಮಾತ್ಯರಿಂದ ಆಮದು ಮಾಡಿಕೊಂಡಿರುವ “ಸಿಸ್ಟಂ”ಗಳ ಜೊತೆ ನಾವು ಭಾರತೀಯರು ಮುಂಚಿನಿಂದಲೂ ಅಗತ್ಯವಿದ್ದರೆ ಮಾತ್ರ ಹೊಂದಿಸಿಕೊಳ್ಳುವ ಗುಣವನ್ನು ಹೊಂದಿದ್ದೇವೆ. ಇದು ವಾಸ್ತವವಾಗಿ ನಮ್ಮ ತಪ್ಪಲ್ಲ. ಸಿಸ್ಟಂನ ತಪ್ಪೂ ಅಲ್ಲ. ಭಾರತೀಯ ಸಮಾಜಗಳ ಸಂರಚನೆಗೆ ಪಾಶ್ಚಿಮಾತ್ಯರ “ಸಿಸ್ಟಂ” ಸಂಪೂರ್ಣ ಸಾಂಗತ್ಯವನ್ನು ಹೊಂದಿಲ್ಲ. ಯಾವುದೇ ಸಿಸ್ಟಂನ ಜೊತೆಗೆ ನಾವು ವರ್ತಿಸುವ ರೀತಿಯನ್ನು ಗಮನಿಸಿದರೆ ನಮಗಿದು ಅರ್ಥವಾಗುತ್ತದೆ.

ವಿದ್ಯಾರ್ಥಿ ಜೀವನವನ್ನೇ ತೆಗೆದುಕೊಳ್ಳಿ. ಎಜುಕೇಶನ್ ಸಿಸ್ಟಂ ನಡೆಸುವ ಪರೀಕ್ಷೆಗಳ ಜೊತೆಗೆ ನಾವು ಹೇಗೆ ವರ್ತಿಸಿದ್ದೇವೆ? ನೂರು ಜನ ವಿದ್ಯಾರ್ಥಿಗಳಲ್ಲಿ, ಅಂದಂದಿನ ಪಾಠವನ್ನು ಅಂದಂದಿಗೇ ಓದಿಕೊಂಡು, ಪರೀಕ್ಷೆಯ ಸಮಯದಲ್ಲಿ ಕೇವಲ ಕಣ್ಣಾಡಿಸಿಕೊಂಡಿರುವ ವಿದ್ಯಾರ್ಥಿಗಳು, ಕೇವಲ ಬೆರಳೆಣಿಕೆಯಷ್ಟು ಮಾತ್ರ. ಅದು ಬಿಟ್ಟರೆ ಉಳಿದೆಲ್ಲ ವಿದ್ಯಾರ್ಥಿಗಳು ಪರೀಕ್ಷೆ ಸಮೀಪಿಸುತ್ತಿದ್ದಂತೆ, ಅಭ್ಯಾಸದ ವೇಗವನ್ನು ಹೆಚ್ಚಿಸಿಕೊಳ್ಳುವವರೇ. ಶಿಕ್ಷಕರೂ ಹಾಗೆಯೇ. ಮೊದಲಿನ ಪಾಠಗಳನ್ನು ಎಳೆದೂ ಎಳೆದೂ ಕಲಿಸಿ, ಸೆಮಿಸ್ಟರ್ ಮುಗಿಯಲು ಬಂದಂತೆ, ಸ್ಪೆಷಲ್ ಕ್ಲಾಸುಗಳನ್ನು ಇರಿಸಿ, ಕೊನೆಯ ಪಾಠಗಳನ್ನೆಲ್ಲ ಮುಗಿಸುತ್ತಾರೆ. ಮತ್ತಷ್ಟು ಓದು »

20
ಏಪ್ರಿಲ್

ಭವಿಷ್ಯನಿಧಿಯ ಮೇಲೆ ವರ್ತಮಾನದ ಕಣ್ಣೇಕೆ?

ರಾಘವೇಂದ್ರ ಸುಬ್ರಹ್ಮಣ್ಯ

Bangalore PF Protestನಿನ್ನೆ ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರ ನೂತನ ಭವಿಷ್ಯ ನಿಧಿ ನೀತಿ ವಿರೋಧಿಸಿ ನಡೆದ ಪ್ರತಿಭಟನೆ ಮತ್ತದರ ಪರಿಣಾಮಗಳು ಇನ್ನೂ ನಮ್ಮಮುಂದೆಯೇ ಹೊಗೆಸೂಸುತ್ತ ನಿಂತಿವೆ. ಪ್ರತಿಭಟನೆಗೆ ಇಳಿದವರಲ್ಲಿ ಎಷ್ಟು ಜನಕ್ಕೆ ನೂತನ ಭವಿಷ್ಯ ನಿಧಿ(ಪಿಎಫ್) ನೀತಿ ಅಂದರೇನು, ಏನು ಬದಲಾವಣೆ ಆಗಿದೆ? ಅನ್ನೋದು ಹೋಗ್ಲಿ ಪಿಎಫ್ ಅಂದರೆ ಏನು ಅಂತಲೂ ಮಾಹಿತಿಯಿತ್ತೋ ಇಲ್ಲವೋ ಅನ್ನುವಷ್ಟು ಗೊಂದಲ ಶುರುವಾಗಿದೆ. ಪಿಎಫ್ ಯಾಕೆ ಬೇಕು? ಸರ್ಕಾರದ ನೀತಿಯೇನು ಮತ್ತದು ಹೇಗೆ ಬದಲಾಗ್ತಿದೆ ಅಂತಾ ನೋಡುವ ಪ್ರಯತ್ನವೇ ಈ ಲೇಖನ. ಇಲ್ಲಿರುವ ಎಲ್ಲಾ ಅಭಿಪ್ರಾಯ ನನ್ನದು ಮತ್ತು ನನ್ನದು ಮಾತ್ರ. ನಿಲುಮೆ ಇದನ್ನು ಬೆಂಬಲಿಸುತ್ತಿದೆಯೇ ಎಂಬುದು ಪ್ರಶ್ನೆಯೇ ಆಗಬಾರದು.

ಏನಿದು ಪಿಎಫ್? ಮತ್ತಷ್ಟು ಓದು »

27
ಜುಲೈ

ಶೇರು ಮಾರುಕಟ್ಟೆ : ಭಾಗ -೩

– ವೆಂಕಟೇಶ್ ಗುರುರಾಜ್

೧೯೭೭ರಲ್ಲಿ ನೀವು ೧,೦೦೦ ರೂಪಾಯಿಗಳಲ್ಲಿ ಇಂದಿರಾ ವಿಕಾಸ್ ಪತ್ರವನ್ನು ತೆಗೆದುಕೊಂಡು ಇಲ್ಲಿಯವರೆಗೆ ಅಂದರೆ ೨೦೧೨ರವರೆಗೆ ಇಟ್ಟುಕೊಂಡಿದ್ದರೆ ನಿಮ್ಮ ಹಣ ೧೯೮೨ರಲ್ಲಿ ದ್ವಿಗುಣವಾಗಿ ೨,೦೦೦, ೧೯೮೭ರಲ್ಲಿ ೪,೦೦೦, ೧೯೯೨ರಲ್ಲಿ ೮,೦೦೦, ೧೯೯೭ರಲ್ಲಿ ೧೬,೦೦೦, ೨೦೦೨ರಲ್ಲಿ ೩೨,೦೦೦, ೨೦೦೭ರಲ್ಲಿ ೬೪,೦೦೦, ೨೦೧೨ರಲ್ಲಿ ೧,೨೮,೦೦೦ ಸಾವಿರವಾಗುತ್ತಿತ್ತು. (ಸುಮಾರು ೧೪.೨೫% ಬಡ್ಡಿಯಂತೆ.) ೫ ವರ್ಷಗಳಲ್ಲಿ ನಿಮ್ಮ ಹಣ ದ್ವಿಗುಣವಾಗುತ್ತಿತ್ತು. ಮುಂದೆ ಅದನ್ನು ೫  ೧/೨ ವರ್ಷಕ್ಕೆ ಮಾರ್ಪಾಡು ಮಾಡಲಾಯಿತು. (ಇಂದಿರಾ ವಿಕಾಸ್ ಪತ್ರವನ್ನು ೧೯೯೬ನೆ ಇಸವಿಯಲ್ಲಿ ನಿಲ್ಲಿಸಿಬಿಟ್ಟತು ಕೇಂದ್ರ ಸರ್ಕಾರ.) ನೀವು ಅದೇ ಹಣವನ್ನು ಬ್ಯಾಂಕ್ ನಲ್ಲಿ ಇಟ್ಟಿದ್ದರೆ ನಿಮ್ಮ ಹಣ ದ್ವಿಗುಣವಾಗಿ ೧೯೮೪ ಮತ್ತು ೨ ತಿಂಗಳಲ್ಲಿ ೨,೦೦೦, ೧೯೯೧ ಮತ್ತು ೪ ತಿಂಗಳಲ್ಲಿ ೪,೦೦೦, ೧೯೯೮ ಮತ್ತು ೬ ತಿಂಗಳಲ್ಲಿ ೮,೦೦೦, ೨೦೦೫ ಮತ್ತು ೮ ತಿಂಗಳಲ್ಲಿ ೧೬,೦೦೦, ೨೦೧೨ ಮತ್ತು ೧೦ ತಿಂಗಳಲ್ಲಿ ಕೇವಲ ೩೨,೦೦೦ ರೂಪಾಯಿಗಳಾಗುತ್ತಿತ್ತು (ಅದು ಸುಮಾರು ೧೦% ಬಡ್ಡಿಯನ್ನು ನಿಮಗೆ ತಂದುಕೊಡುವಂತಿದ್ದರೆ.) ೭ ವರ್ಷ ೨ ತಿಂಗಳಲ್ಲಿ ನಿಮ್ಮ ಹಣ ದ್ವಿಗುಣವಾಗುತ್ತಿತ್ತು.

ಆದರೆ, ಅದೇ ೧,೦೦೦ ರೂಪಾಯಿಗಳನ್ನು ನೀವು  ೧೯೭೭ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯಲ್ಲಿ ಹೂಡಿದ್ದರೆ ಈಗ ನಿಮ್ಮ ಬಳಿ ೭.೭೮ ಲಕ್ಷ ರೂಪಾಯಿ ಇರುತ್ತಿತ್ತು. ೧೯೭೭ರಲ್ಲಿ ರಿಲಯನ್ಸ್ ಕಂಪನಿಗಳ ೧೦೦ ಶೇರುಗಳ ಬೆಲೆ ೧,೦೦೦ ಇತ್ತು.

ಮತ್ತಷ್ಟು ಓದು »

7
ಜುಲೈ

ಶೇರು ಮಾರುಕಟ್ಟೆ : ಭಾಗ -೨

– ವೆಂಕಟೇಶ್ ಗುರುರಾಜ್

ನಮ್ಮ ದೇಶದ ಗುಜರಾತಿಗಳು ಮತ್ತು ಮಾರ್ವಾಡಿಗಳು ಈ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವುದು ಹೆಚ್ಚಾಗಿ ಕಂಡುಬರುತ್ತದೆ. ನಮ್ಮ ಕನ್ನಡಿಗರು ಹೆಚ್ಚಾಗಿ ಬ್ಯಾಂಕ್/ಅಂಚೆ ಕಛೇರಿ ಗಳಲ್ಲಿ ನಿಶ್ಚಿತ ಠೇವಣಿಗಳಲ್ಲಿ ಹಣ ಇಟ್ಟು ಅವರು ಕೊಡುವ ೧೦-೧೧% ವಾರ್ಷಿಕ ಬಡ್ಡಿಗೆ ತೃಪ್ತಿಪಟ್ಟುಕೊಳ್ಳುತ್ತಾರೆ. ಇನ್ನು ಕೆಲವರು ಚಿನ್ನವನ್ನು ಒಡವೆ ರೂಪದಲ್ಲಿ ಇಟ್ಟುಕೊಂಡು ತಮ್ಮ ಕಷ್ಟ ಕಾಲದಲ್ಲಿ ಉಪಯೋಗಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಭೂಮಿಯ ಮೇಲೆ ಹಣವನ್ನು ವಿನಿಯೋಗಿಸುತ್ತಾರೆ. ಕನ್ನಡಿಗರು ಈ ಶೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವುದು ಬಹಳ ಕಡಿಮೆ. ಒಂದು ಜ್ಞಾನದ ಕೊರತೆಯಾದರೆ, ಮತ್ತೊಂದು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಹೆಚ್ಚಾಗಿ ಕನ್ನಡಿಗರು ಇಷ್ಟಪಡುವುದಿಲ್ಲ. ಆದ ಕಾರಣ ನಮ್ಮಲ್ಲಿ ಈ ಶೇರು ಮಾರುಕಟ್ಟೆಯ ಬಗ್ಗೆ ಕನ್ನಡದಲ್ಲಿ ಬಂದಿರುವ ಪುಸ್ತಕಗಳು ಬಹಳ ಕಡಿಮೆ.  ಕೆಲವು ಪತ್ರಿಕೆಗಳು ಲೇಖನಗಳನ್ನು ಆಗಾಗ ಪ್ರಕಟಿಸುತ್ತವೆ. ಆದರೆ ಅದು ಬಹಳ ಕಡಿಮೆ. ನಮ್ಮ ಕನ್ನಡಿಗರು ಈ ಮಾರುಕಟ್ಟೆಯಿಂದ ದೂರ ಇರಲು ಇದೂ ಸಹ ಒಂದು ಕಾರಣವಿರಬಹುದು. ಆಂಗ್ಲ ಭಾಷೆಯಲ್ಲಿ ಈ ಮಾರುಕಟ್ಟೆಯ ಬಗ್ಗೆ ಸಂಭೃದ್ದ ಮಾಹಿತಿ ಇದೆ. ಗೊಗಲ್ ನಲ್ಲಿಯೂ ಸಹ ಅನೇಕ ಮಾಹಿತಿ ಪಡೆಯಬಹುದು.

ಪ್ರಪಂಚದ ೩ನೇ ಅತೀ ದೊಡ್ಡ ಶ್ರೀಮಂತ ವಾರನ್ ಬಫೆಟ್ ಶೇರು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಹಣ ಸಂಪಾದಿಸಿರುವ ವ್ಯಕ್ತಿ. ಇವರ ಹೂಡಿಕೆ ಕಂಪನಿಯ ಹೆಸರು ” ಬರ್ಕ್ ಶೈರ್  ಹಾಥ್ ವೇ ’ ಇವರು ತಮ್ಮ ೧೩-೧೪ನೇ ವಯಸ್ಸಿನಲ್ಲಿ ಈ ಶೇರು ಮಾರುಕಟ್ಟೆಯ ವ್ಯವಹಾರದಲ್ಲಿ ಇಳಿದು, ” ಬಫೆಟ್ ಲೀ ” ಮುಂತಾದ  ಕೆಲವು ಕಂಪನಿಗಳನ್ನೂ ಸೃಷ್ಟಿಸಿದ್ದಾರೆ. ಭಾರತದಲ್ಲಿ  ಶೇರು ಮಾರುಕಟ್ಟೆಯ ರಾಜನೆಂದು ಪ್ರಸಿದ್ದಿಗೆ ಬಂದವರು ರಾಕೇಶ್ ಜುಂಜುನ್ ವಾಲ. ಇವರು ಅತಿ ದೊಡ್ಡ ಮಾರುಕಟ್ಟೆಯ ವಿಶ್ಲೇಷಕರು ಹಾಗೂ ನಮ್ಮ ಶೇರು ಮಾರುಕಟ್ಟೆಯ ದೊಡ್ದ ಹೂಡಿಕದಾರರಲ್ಲಿ ಒಬ್ಬರು.

ಮತ್ತಷ್ಟು ಓದು »

28
ಜೂನ್

ಶೇರು ಮಾರುಕಟ್ಟೆ : ಭಾಗ -೧

– ವೆಂಕಟೇಶ್ ಗುರುರಾಜ್

ಹಣ ಯಾರಿಗೆ ಬೇಡ? ಮನುಷ್ಯ ಹುಟ್ಟಿದಾಗಿನಿಂದ ಸಾಯುವ ವರೆಗೂ ಮತ್ತು ಅವನು ಸತ್ತಮೇಲೆ ಅವನ ಅಂತ್ಯಕ್ರಿಯಯನ್ನು ಮಾಡುವ ಅವನ ಮನೆಯವರಿಗೂ ಹಣ ಬೇಕೇಬೇಕು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನಾಮಕರಣದಿಂದ ತಿಥಿಯವರೆಗೆ. ನಾವು ನೀವೆಲ್ಲರೂ ನಮ್ಮ ಜೀವಿತ ಅವಧಿಯಲ್ಲಿ ಹಣವನ್ನು ನಮ್ಮ ಇತಿಮಿತಿಯಲ್ಲಿ ಸಂಪಾದಿಸುತ್ತೇವೆ. ಕೆಲವರು ಉದ್ಯೋಗವನ್ನು ಮಾಡಿ, ಮತ್ತೆ ಕೆಲವರು ಸ್ವಂತ ಉದ್ಯೋಗವನ್ನು ಮಾಡಿ, ಮತ್ತೆ ಕೆಲವರು ವ್ಯಾಪಾರ ವಹಿವಾಟು ಮಾಡಿ, ಮತ್ತೆ ಕೆಲವರು ಹಣದಿಂದ ಹಣವನ್ನು ಸಂಪಾದಿಸುತ್ತಾರೆ. ಮೊದಲ ಮೂರು ನಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಕೊನೆಯದಾದ ಹಣದಿಂದ ಹಣವನ್ನು ಸಂಪಾದಿಸುವುದು ಹೇಗೆ ಎಂಬುದರ ಬಗ್ಗೆ ಸ್ವಲ್ಪ ಗಮನ ಕೊಡೋಣ. ಇದನ್ನು ಬಂಡವಾಳ ಹೂಡಿಕೆ ಎಂದೂ ಸಹ ಕರೆಯುತ್ತಾರೆ.  ಬಂಡವಾಳ ಎಂದರೆ ಏನು ಎಂಬುದರ ಬಗ್ಗೆ ಸ್ವಲ್ಪ ಚಿಂತನೆಯನ್ನು ಮಾಡೋಣವೇ?

ಬಂಡವಾಳ ಹೂಡುವುದೆಂದರೆ ಜನಸಾಮಾನ್ಯರಲ್ಲಿ ಅದು ಲಕ್ಷ/ಕೋಟಿಗಳ ರೂಪದಲ್ಲಿ ಇರುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಇದು ಸುಳ್ಳು. ಒಂದು ರೀತಿಯಲ್ಲಿ ಹೇಳಬೇಕೆಂದರೆ ಜನ ಸಾಮಾನ್ಯರೂ ಸಹ ಸ್ವಲ್ಪ ಮಟ್ಟಿನ ಬಂಡವಾಳ ಹೂಡಿಕೆದಾರರೇ. ಕೆಲವರು ತಮ್ಮ ಹೆಚ್ಚುವರಿ ಸಂಪಾದನೆಯನ್ನು ಅಥವಾ ತಮ್ಮ ಉಳಿತಾಯದ ಹಣವನ್ನು ನಿಶ್ಚಿತ ಠೇವಣಿಯಾಗಿ ಬ್ಯಾಂಕ್/ಅಂಚೆ ಕಚೇರಿಯಲ್ಲಿ ಇಟ್ಟು ಅದರಲ್ಲಿ ಬರುವ ಬಡ್ದಿಯನ್ನು ಪಡೆಯುತ್ತಾರೆ. ಇದೂ ಸಹ ನಿಮ್ಮ ಹಣ ವೃದ್ದಿಸುತ್ತದೆ.  ಭೂಮಿಯ ಮೇಲೆ ಹಾಕಿದ ಹಣ ನಿಮ್ಮ ಮೂಲ ಹಣವನ್ನು ಅನೇಕ ಬಾರಿ ವೃದ್ದಿಸುತ್ತದೆ. ಚಿನ್ನ, ಬೆಳ್ಳಿಯ ಮೇಲೆ ಹಾಕಿದ ಹಣ ನಿಮಗೆ ದುಪ್ಪಟ್ಟು, ತಿಪ್ಪಟ್ಟಾಗುತ್ತದೆ. ಶೇರು/ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿದ ಹಣ ನಿಮಗೆ ಲಾಭವನ್ನು ತಂದುಕೊಡುತ್ತದೆ.

ಮತ್ತಷ್ಟು ಓದು »