ವಿಷಯದ ವಿವರಗಳಿಗೆ ದಾಟಿರಿ

Posts tagged ‘ಅಜಿತ್ ದೋವಲ್’

9
ಆಕ್ಟೋ

ಪಾಕಿಸ್ತಾನ್, ಹುರಿಯತ್ ಮತ್ತು ನಮ್ಮ ಬುದ್ಧಿಜೀವಿಗಳು!!

– ಪ್ರದೀಪ್ ತ್ಯಾಗರಾಜ

ಎನ್.ಎಸ್.ಎಬಹುಶಃ ಭಾರತದ ಜನ ಸಾಮಾನ್ಯರೆಲ್ಲರೂ ಒಕ್ಕೊರಲಿನಿಂದ ಹೇಳುವ ಮಾತೊಂದೇ, ಅದೇ ಪಾಕಿಸ್ತಾನ್ ಎನ್ನುವುದು ಒಂದು ದೊಡ್ಡ ದುರಂತ. ಈ ಪಾಕಿಸ್ತಾನ ಎಂಬುದು ಒಂದು ಭಿಕ್ಷುಕರ ದೇಶ ಅಂದರೂ ತಪ್ಪಲ್ಲ. ಯಾವುದೇ ದೇಶ ಕೂಡ ಪಾಕಿಸ್ತಾನದೊಂದಿಗೆ ಸಂಬಂಧ ಹೊಂದಿ ಉದ್ಧಾರ ಆದ ಉದಾಹರಣೆಗಳಿಲ್ಲ. ಇಷ್ಟಕ್ಕೂ ಭಯೋತ್ಪಾದನೆಯೊಂದನ್ನು ಬಿಟ್ಟರೆ, ಆ ದೇಶಕ್ಕೆ ತಮ್ಮನ್ನು ಮಾರ್ಕೆಟ್ ಮಾಡಿಕೊಳ್ಳುವಂಥ ಇನ್ನೊಂದು ವಸ್ತುವಿಲ್ಲ. ಈ ದೇಶದ ಪರಿಸ್ಥಿತಿ ಹೇಗಿದೆಯಂದರೆ, ಪ್ರಜಾಪ್ರಭುತ್ವವನ್ನು ಹೇರಿಕೆಯೆಂಬ ರೀತಿ ಒಪ್ಪಿಕೊಳ್ಳುವ ವಿಷಮ ಸ್ಥಿತಿ ತಲುಪಿದ್ದಾರೆ. ಮಾತು ಮಾತಿಗೂ, ಪಶ್ಚಿಮ ರಾಷ್ಟ್ರಗಳ ಬಳಿಹೋಗಿ, ತಮ್ಮ ದೇಶಕ್ಕೆ ಸಹಾಯ ಹಸ್ತ ಚಾಚಿ ಎಂದು ಅಂಗಲಾಚುವುದರಲ್ಲೇ ಇವರು ಬರೋಬ್ಬರಿ ೬೫ ವರ್ಷಗಳನ್ನು ನಮ್ಮ ಭಾರತ ದೇಶದೊಂದಿಗೆ ಸವೆಸಿದ್ದಾರೆ. ನಮ್ಮ ದೇಶದಲ್ಲಿ ರಾಹುಲ್ ಗಾಂಧಿ ಎಂಬೋ ಮಹಾನ್ ಬುದ್ಧಿವಂತನಿಗೆ ಎಷ್ಟು ಮರ್ಯಾದೆ ಇದೆಯೋ, ಅಷ್ಟೇ ಮರ್ಯಾದೆ ಆ ನವಾಜ್ ಷರೀಫ್ ಎಂಬ ವ್ಯಕ್ತಿಗೆ ಪಾಕಿಸ್ತಾನದಲ್ಲಿ ಇದೆ. ಆ ದೇಶದ ನಿಜವಾದ ಆಡಳಿತವಿರುವುದೇ ಅವರ ಸೈನ್ಯಕ್ಕೆ. ೧೯೪೭ ರಿಂದಲೂ ಇದೆ ರೀತಿ ನಡೆದು ಬರುತ್ತಿದೆ. ಈ ಸಂಧರ್ಭದಲ್ಲಿ, ಈ ಹುರಿಯತ್ ಎನ್ನುವ ಸಂಘಟನೆ ಕೂಡ, ತನ್ನ ಬೇಳೆ ಬೇಯಿಸಿಕೊಳ್ಳಲು ಶುರು ಮಾಡಿದೆ. ಇದರ ಪರಿಣಾಮ ಭಾರತ ದೇಶದ ಹಲವಾರು ಬುದ್ಧಿಜೀವಿಗಳು ತಮ್ಮ ಅತಿ-ಬುದ್ಧಿವಂತಿಕೆಯನ್ನು ಪ್ರದರ್ಶಿಸಲು ಮುಂದಾಗಿರುವುದೇ ನಮ್ಮ ದೇಶದ ದುರಂತ.

ಇಷ್ಟೆಲ್ಲಾ ಹುಳುಕು ತುಂಬಿರುವ ಪಾಕಿಸ್ತಾನ ಎಂಬ ದೇಶದ ಬಗ್ಗೆ, ನಮ್ಮ ಬುಜೀಗಳ ಕಲ್ಪನೆ ನಿಜಕ್ಕೂ ಅದ್ಭುತ. ನಿಜಕ್ಕೂ ಆ ದೇಶದೊಂದಿಗೆ ಮಾತುಕತೆ ನಡೆಸಬೇಕಂಬ ಇವರ ಆಲೋಚನೆ ನಿಜಕ್ಕೂ ಆಘಾತಕಾರಿ. ಇಷ್ಟಕ್ಕೂ ಏನೂ ಸರಿಯಿಲ್ಲದ ಆ ದೇಶದ ಜೊತೆ ಮಾತನಾಡಲು ಏನಿದೆ? ಒಂದು ಪ್ರಜಾಪ್ರಭುತ್ವ ಸರ್ಕಾರದ ಮಾತನ್ನು ಕೇಳುವ ತಾಳ್ಮೆಯಾಗಲಿ, ಅಥವಾ ಸಂಯಮವಾಗಲಿ ಇಲ್ಲ. ಒಂದು ಸರ್ಕಾರ ಕೊಟ್ಟ ನಿರ್ಧಿಷ್ಟ ಅಂಶಗಳ ಬಗ್ಗೆ ಮಾತುಕತೆ ನಡೆಸುವಲ್ಲಿ ತಯಾರಿಲ್ಲ.

ಮತ್ತಷ್ಟು ಓದು »