ವಿಷಯದ ವಿವರಗಳಿಗೆ ದಾಟಿರಿ

Posts tagged ‘ಅಭಿವೃದ್ಧಿ’

7
ಏಪ್ರಿಲ್

‘ನಿಧಿ’ಗಿಂತ ‘ದನಿ’ನೀಡುವ ಸಂಸದರು ಬೇಕು – ಸಂಸದರ ಕಾರ್ಯಕ್ಷೇತ್ರದ ಅರಿವೂ ಇರಬೇಕು!

– ತುರುವೇಕೆರೆ ಪ್ರಸಾದ್

ಉತ್ತರಕನ್ನಡದ ಸಂಸದರಾದ ಅನಂತ್ ಕುಮಾರ್ ಹೆಗಡೆ ಮಾತನಾಡಿದರೆ ವಿವಾದವಾಗುತ್ತದೆ ಎಂದು ತಿಳಿದವರೇ ಹೆಚ್ಚು. ಹೆಗಡೆಯವರು ನಮ್ಮ ಸಂಸ್ಕೃತಿ, ಪರಂಪರೆ, ಸಂವಿಧಾನ ಹಾಗೂ ಸಂಸದರ ಜವಾಬ್ಧಾರಿಗಳ ಬಗ್ಗೆ ಪಾಂಡಿತ್ಯಪೂರ್ಣವಾಗಿ, ತರ್ಕಬದ್ಧವಾಗಿ ಮಾತನಾಡಬಲ್ಲರು ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಇತ್ತೀಚೆಗೆ ಅನಂತಕುಮಾರ ಹೆಗಡೆಯವರು ಸಂಸದರ ಜವಾಬ್ಧಾರಿಗಳ ಬಗ್ಗೆ ಮಾತಾಡಿರುವ ಒಂದು ಪುಟ್ಟ ವೀಡಿಯೋ ನೋಡಿದೆ. ಆ ಪುಟ್ಟ ವೀಡಿಯೋದಲ್ಲಿ ಹೆಗಡೆಯವರು ಸಂಸದರ ಕಾರ್ಯವ್ಯಾಪ್ತಿಯ ಬಗ್ಗೆ ಬಹಳ ಅದ್ಭುತವಾಗಿ ಮಾತನಾಡಿದ್ದಾರೆ. ಅಭಿವೃದ್ಧಿಯ ಅತ್ಯಂತ ಮಾರ್ಮಿಕ ವಿಶ್ಲೇಷಣೆ ಮಾಡಿದ್ದಾರೆ. ಅವರ ಪ್ರಕಾರ ಅಭಿವೃದ್ಧಿಯೆಂದರೆ ಕೇವಲ ಕಾಮಗಾರಿಗಳಲ್ಲ, ಕಾಮಗಾರಿಗಳು ಕೇವಲ ಅಭಿವೃದ್ಧಿಯ ಒಂದು ಭಾಗವಷ್ಟೇ. ಸಮುದಾಯ ಹಾಗೂ ದೇಶದ ಅಭಿವೃದ್ಧಿಯಲ್ಲಿ ನಾಲ್ಕು ವಿಧಗಳಿವೆ. ಮೂಲಭೂತ ಅಭಿವೃದ್ಧಿ, ಸಾಂಸ್ಕøತಿಕ ಅಭಿವೃದ್ಧಿ,ಸಾಮಾಜಿಕ ಅಭಿವೃದ್ಧಿ ಮತ್ತು ಆರ್ಥಿಕ ಅಭಿವೃದ್ಧಿ. ಅಭಿವೃದ್ಧಿ ನಿರಂತರ ಪ್ರಕ್ರಿಯೆ, ಅದಕ್ಕೆ ಅಂತ್ಯವಿಲ್ಲ. ಕಾಮಗಾರಿಗೆ ಮಾತ್ರ ಅಂತ್ಯವಿದೆ. ಜನಸಾಮಾನ್ಯರಿಗೆ ಮೂಲಭೂತ ಅಭಿವೃದ್ಧಿಯಷ್ಟೇ ಕಾಣುತ್ತದೆ. ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ದಿಗೆ ಅವರು ಹೆಚ್ಚು ಒತ್ತು ಕೊಡುವುದಿಲ್ಲ. ಸಮುದಾಯದ ಅಭಿವೃದ್ದಿಯ ಅಂತರಾಳ ಅಡಗಿರುವುದು ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ! ಇದರ ಒಂದು ಭಾಗ ಮಾತ್ರ ಮೂಲಭೂತ ಅಭಿವೃದ್ಧಿ. ಇದು ಅವರ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆ.ಕೇಂದ್ರ ಯಾವ ಮೂಲಭೂತ ಅಭಿವೃದ್ಧಿಗೆ ಒತ್ತು ಕೊಡಬೇಕು? ಒಂದು ಗ್ರಾಮೀಣ ಕಾಮಗಾರಿಗೆ ಗ್ರಾ.ಪಂ. ಜಿ.ಪಂ ಸದಸ್ಯರಷ್ಟೇ ಮಹತ್ವವನ್ನು ಸಂಸದರೂ ಕೊಡಬೇಕಾ?ಆ ಮಟ್ಟದಲ್ಲಿ ರಾಜಕಾರಣವನ್ನು ಒಬ್ಬ ಸಂಸದ ಮಾಡಬಾರದು.ಸಂಸದರ ಕಾರ್ಯವ್ಯಾಪ್ತಿಯ ಅರಿವೇ ಇಲ್ಲದೆ ಅತ್ಯಂತ ಕೆಳಹಂತಕ್ಕೆ ಇಳಿದು ರಾಜಕಾರಣ ಮಾಡುವುದು ಮತ್ತು ಹಾಗೆ ನಿರೀಕ್ಷಿಸುವುದು ದುರ್ದೈವ ಎನ್ನುತ್ತಾರೆ.

ಮತ್ತಷ್ಟು ಓದು »

17
ಆಕ್ಟೋ

ಪರಿಸರ ಶಿಕ್ಷಣ: ಸಾಧನೆ ಮತ್ತು ಸವಾಲುಗಳು

– ಕಲ್ಗುಂಡಿ ನವೀನ್
ಬೆಂಗಳೂರು
ದೂರವಾಣಿ: 944 89 05214

curriculumಇಂದು ಪರಿಸರ, ಪರಿಸರ ಮಾಲೀನ್ಯ ಎಂದರೆ ಅದನ್ನು ವಿವರಿಸಲು ಹೆಚ್ಚು ಶ್ರಮಪಡಬೇಕಿಲ್ಲ. ಆ ಕುರಿತಾದ ಜಾಗೃತಿ ಜನಸಾಮಾನ್ಯರಲ್ಲಿ ಇದೆ. ಇದೊಂದು ತೀರಾ ಇತ್ತೀಚಿನ ಸಂತೋಷದಾಯಕ ಬೆಳವಣಿಗೆ ಎಂದರೆ ಪರಿಸರ ಕುರಿತಾದ ಸಕಾರಾತ್ಮಕ ನಿಲುವು. ಹಿಂದೆ ಪರಿಸರ ಎಂಜಿನಿಯರ್‍ ಒಬ್ಬರು ಹೇಳುತ್ತಿದ್ದರು: “..ನಾವು ಪರಿಸರದ ಪರವಾಗಿ ಮಾತನಾಡಿದರೆ, ನಮ್ಮನ್ನು ಕರುಣೆಯಿಂದ ನೋಡಲಾಗುತ್ತಿತ್ತು” ಎಂದು! ಇಂದು ಆ ಸ್ಥಿತಿ ಖಂಡಿತಾ ಇಲ್ಲ.  ಈ ಜಾಗೃತಿ ಹದಗೆಡುತ್ತಿರುವ ನಮ್ಮ ಪರಿಸರ ವ್ಯವಸ್ಥೆಯನ್ನು ಸರಿಪಡಿಸುವಷ್ಟು ದೃಢವಾಗಿದೆಯೇ ಎಂಬ ಪ್ರಶ್ನೆ ಬೇರೆ! ಆದರೆ ಆ ಜಾಗೃತಿ ಮೂಡಿರುವುದು ಗಮನಾರ್ಹ ಮತ್ತು ಸಂತೋಷದಾಯಕ ಅಂಶ. ಮತ್ತಷ್ಟು ಓದು »

4
ಮೇ

‘ಕುಮಾರ’ ಮುಖ್ಯಮಂತ್ರಿ ಗಾದಿಗೆ! ‘ಮೋದಿ’ ಪ್ರಧಾನಿ ಹುದ್ದೆಗೆ!

– ಗೋಪಾಲಕೃಷ್ಣ

KMಅಭಿವೃದ್ಧಿಯೇ ಮಾತನಾಡುವುದಾದರೆ; ‘ಕುಮಾರಣ್ಣ’ ಮುಖ್ಯಮಂತ್ರಿ ಗಾದಿಗೆ! ‘ಮೋದಿಜಿ’ ಪ್ರಧಾನಿ ಹುದ್ದೆಗೆ!

ಅರವತ್ತಾರು ವಸಂತಗಳ ಬಂಧಮುಕ್ತ ಬದುಕು.ಈ ನಡುವೆ ದೇಶ ಕಂಡದ್ದು 13 ಮಂದಿ ಪ್ರಧಾನಮಂತ್ರಿಗಳನ್ನು. ರಾಜ್ಯವನ್ನಾಳಿದ್ದು 21 ಮುಖ್ಯಮಂತ್ರಿಗಳು.  ಇವರೆಲ್ಲರಲ್ಲಿಯೂ; ದೇಶದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ, ಪಿ.ವಿ.ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿಯವರನ್ನು ಮತ್ತೆ ಮತ್ತೆ ನೆನದರೆ, ರಾಜ್ಯದಲ್ಲಿ ದೇವರಾಜ ಅರಸು ಅವರ ಸಾಮಾಜಿಕ ಪರಿಕಲ್ಪನೆ, ರಾಮಕೃಷ್ಣ ಹೆಗಡೆ ಅವಧಿಯ ಜನಪರ ಕಾರ್ಯಕ್ರಮಗಳು, ಎಸ್.ಎಂ.ಕೃಷ್ಣ ಅವರ ಲಯ ತಪ್ಪದ ಆಡಳಿತ, ಹೆಚ್.ಡಿ.ಕುಮಾರಸ್ವಾಮಿಯವರ ಇಪ್ಪತ್ತೇ ತಿಂಗಳ ಆಡಳಿತವನ್ನು ಮಾತ್ರ ಇಂದಿಗೂ ಮೆಲುಕು ಹಾಕುವಂತಾಗಿದೆ.

ಭಾರತದ ಜನಸಂಖ್ಯೆ 121 ಕೋಟಿಯನ್ನು ದಾಟಿರಬಹುದು.  ನಾವು ಆಯ್ಕೆ ಮಾಡುವ ಜನಪ್ರತಿನಿಧಿಗಳು ಸುಮಾರು 5400 ಮಂದಿಯಷ್ಟೇ.  ಆದರೆ, ಇಷ್ಟು ಜನ ಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನರ ಆಶಯಗಳಿಗೆ ತಕ್ಕಂತೆ ನಡೆಯುವುದು ಅಪರೂಪ.  ಅವರುಗಳ ನಿಷ್ಠೆಯೇನಿದ್ದರೂ ದೇಶವಾದರೆ ಪ್ರಧಾನಿಗೆ! ರಾಜ್ಯವಾದರೆ ಮುಖ್ಯಮಂತ್ರಿಗೆ ಮೀಸಲು ಎಂಬಂತಿರುತ್ತದೆ.  ಸಂವಿಧಾನದ ಪ್ರಕಾರ ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿಯನ್ನು ಶಾಸಕರು, ಲೋಕಸಭಾ ಸದಸ್ಯರು ಆಯ್ಕೆ ಮಾಡಬೇಕು.  ಆ ಪರಿಪಾಠ ಮುರಿದು ಬಿದ್ದು ಎಷ್ಟೋ ವರ್ಷಗಳು ಆಗಿವೆ.  ಈಗೇನಿದ್ದರೂ ಚುನಾವಣಾ ಪೂರ್ವದಲ್ಲಿಯೇ ನಾಯಕನ ಆಯ್ಕೆ ಇಲ್ಲವೇ ಹೈಕಮಾಂಡ್ ಹೇಳಿದವರು ಅತ್ಯುನ್ನತ ಹುದ್ದೆಯಲ್ಲಿ ಕೂರುತ್ತಾರೆ.

ಮತ್ತಷ್ಟು ಓದು »