ವಿಷಯದ ವಿವರಗಳಿಗೆ ದಾಟಿರಿ

Posts tagged ‘ಈಶಾನ್ಯ ಭಾರತ’

12
ಜೂನ್

ಈಶಾನ್ಯ ಭಾರತದೆಡೆಗೂ ಕ್ಯಾಮೆರಾ ತಿರುಗಿಸಿ ಮಾಧ್ಯಮಗಳೇ

– ವಿದ್ಯಾ ಕಾಶೀಕರ

ಈಶಾನ್ಯ ಭಾರತೀಯರುಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಮುದುವರಿಯುತ್ತಿರುವ ದೇಶದಲ್ಲಿ ಭಾರತ ಒಂದು.ಐತಿಹಾಸಿಕ,ಸಾಂಸ್ಕೃತಿಕ,ಪರಂಪರೆ ಮತ್ತು ಉದಾರ ವ್ಯಕ್ತಿತ್ವಕ್ಕಾಗಿ ಈ ದೇಶ ಯಾವಗಲೂ ಬೇರೆ ದೇಶಗಳಿಂದ ಗೌರವ ಪಡೆದಿದೆ.ವಿಶ್ವಕ್ಕೆ ಶಾಂತಿ,ಸಹಬಾಳ್ವೆಪ್ರಜಾಪ್ರಭುತ್ವವನ್ನು ಅಪ್ಪಿಕೊಂಡು ಬಾಳುತ್ತಿರುವ ಈ ದೇಶವನ್ನು ಎಷ್ಟೆಲ್ಲಾ ಆಕ್ರಮಣ, ದೌರ್ಜನ್ಯಗಳು ನಡೆದರೂ ಮತ್ತೆ ವಿಶ್ವದಲ್ಲಿ ತನ್ನ ಛಾಪನ್ನುಮೂಡಿಸಿದೆ.ಶೋಚನೀಯ ಸಂಗತಿಯೆಂದರೆ, ಯಾವ ಕಾರಣಕ್ಕಾಗಿ ನಾವು ಗೌರವಿಸುವಿಸಲ್ಪಡುತ್ತಿದ್ದೇವೋ ಅದನ್ನು ತೊರೆದು,ಬೇರೊಂದು ಸಂಸ್ಕೃತಿಯೆಡೆಗೆ ಆಕರ್ಷಿತರಾಗಿ ಅಂಧಾನುಕರಣೆ ಮಾಡುವುದಲ್ಲದೇ, ನಮ್ಮ ಮೂಲವನ್ನೇ ಅವಹೇಳನ ಮಾಡುವ ಸ್ಥಿತಿಗೆ ಈಗಿನ ಯುವ ಜನಾಂಗ ತಲುಪಿರುವುದು. ನಮ್ಮ ಜನರ ಭಕ್ತಿಯು ಕೇವಲ ಮಂದಿರ-ಗುಡಿಗಳಲ್ಲಿ ಪ್ರಾರ್ಥಿಸುವಾಗ ಮಾತ್ರ ಉದ್ಭವವಾಗುತ್ತದೆ. ಅಲ್ಲಿಂದ ಹೊರಬಂದ ಮರುಕ್ಷಣದ ಸನ್ನಿವೇಶವೇ ಬೇರೆ.ನೈಜಭಕ್ತಿಯು,ನನ್ನ ದೇಶ, ನನ್ನ ನಾಡು-ಭಾಷೆ, ವಿಷಯಗಳಲ್ಲಿ ವ್ಯಕ್ತವಾಗಬೇಕು. ಮಂದಿರಗಳಲ್ಲಿ ಶುದ್ಧನಾಗಿ ಸೇವೆ ಸಲ್ಲಿಸಿ ,ಮಂದಿರದ ಸುತ್ತ ಹೊಲಸು ಮಾಡಿದರೆ ಮೆಚ್ಚನಾ ಪರಮಾತ್ಮನು, ಹಣ್ಣಿನ ಸಿಪ್ಪೆಯನ್ನೋ, ಇನ್ನಾವುದೋ ತ್ಯಾಜ್ಯವನ್ನೋ ಬೀದಿಯಲ್ಲಿ ಚೆಲ್ಲಿದರೆ, ಮಹಿಳೆಯರೊಂದಿಗೆ  ಅಸಭ್ಯವಾಗಿ ವರ್ತಿಸಿದರೆ, ಅದು ಅನಾಗರೀಕತೆಯ ಪರಮಾವಧಿಯಲ್ಲದೆ ಮತ್ತೇನು?

ಒಮ್ಮಿಂದೊಮ್ಮೆಲೇ ಸಮಾಜದಲ್ಲಿ ಇಂತಹ ಆಚರಣೆಗಳು ಕಾಲಿಡುವುದಿಲ್ಲ. ಇದಕ್ಕೆ, ಮಾಧ್ಯಮಗಳ ಕೊಡುಗೆ ಅಪಾರವಾಗಿದೆ. ಮನೋರಂಜನೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ, ಟಿ.ಆರ್.ಪಿ. ಹೆಚ್ಚಿಸಲು ವಿಧ-ವಿಧದ ಕಾರ್ಯಕ್ರಮಗಳನ್ನು ನೀಡುತ್ತವೆ. ಹಲವು ಮೂಲಭೂತ ಸಮಸ್ಯೆಗಳು ನಮ್ಮ ಸುತ್ತಲೂ ತಲೆ ಎತ್ತಿ ನರ್ತಿಸುತ್ತಿದ್ದರೂ, ಅದನ್ನು ಮೂಲೆಗುಂಪಾಗಿಸಿ,ಮಹಿಳಾ ಸ್ವಾತಂತ್ರದ  ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದವನ್ನು ,ಜಾತಿ,ಧರ್ಮಗಳನ್ನ ನಿಂದಿಸಿದವರನ್ನು ಪುಕ್ಕಟೆ ಪ್ರಚಾರ ಕೊಟ್ಟು, ಬುದ್ದಿಜೀವಿಗಳೆಂದು ನಾಮಕರಣ ಮಾಡಿ ಜನಪ್ರಿಯ ವ್ಯಕ್ತಿಯನ್ನಾಗಿ ಮಾಡುತ್ತವೆ.ಕಟ್ಟಡದ ಆಧಾರವೇ ಕುಸಿಯುತಿರುವಾಗ, ಬಣ್ಣ ಬಳಿದು ಚಂದವಾಗಿಸುವುದು ಸರಿಯೇ?”
ಮತ್ತಷ್ಟು ಓದು »