ವಿಷಯದ ವಿವರಗಳಿಗೆ ದಾಟಿರಿ

Posts tagged ‘ಡಾ. ಕೃಷ್ಣಾನಂದ ಕಾಮತ್’

22
ಆಕ್ಟೋ

ಡಾ. ಸೂರ್ಯನಾಥ ಕಾಮತ್ ಸಂದರ್ಶನ

ಸಂದರ್ಶಕ: ವಿಕಾಸ್ ಕಾಮತ್
ಕನ್ನಡಕ್ಕೆ: ರೋಹಿತ್ ಚಕ್ರತೀರ್ಥ

ಡಾ. ಸೂರ್ಯನಾಥ ಕಾಮತ್ಕರ್ನಾಟಕದ ಅತ್ಯಂತ ಪ್ರಮುಖ ಇತಿಹಾಸತಜ್ಞ ಡಾ ಸೂರ್ಯನಾಥ ಕಾಮತ್ ಇನ್ನಿಲ್ಲ. ಕರ್ನಾಟಕದ ಸಮಗ್ರ ಇತಿಹಾಸವನ್ನು ಕಟ್ಟಿಕೊಡುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದವರು ಕಾಮತರು. ಕರ್ನಾಟಕ ರಾಜ್ಯ ಗೆಝೆಟಿಯರ್‍ನ ಅಧ್ಯಕ್ಷರೂ ಆಗಿದ್ದವರು. ಡಾ. ಕಲ್ಬುರ್ಗಿಯವರ ನಂತರ ಕರ್ನಾಟಕ, ತನ್ನ ಬಹುಪ್ರಮುಖ ಪ್ರಾಜ್ಞನೊಬ್ಬನನ್ನು ಕಳೆದುಕೊಂಡಿದೆ. ಕಳೆದ ಹಲವು ತಿಂಗಳುಗಳಿಂದ ವೃದ್ಧಾಪ್ಯಸಹಜ ಸಮಸ್ಯೆಗಳಿಂದ ಕಾಮತರು ಬಳಲುತ್ತಿದ್ದರು.

ಇಲ್ಲಿ ಪ್ರಕಟವಾಗಿರುವ ಸಂದರ್ಶನ ನಡೆದದ್ದು 2000ನೇ ಇಸವಿಯ ಡಿಸೆಂಬರ್ ಇಪ್ಪತ್ತೊಂದರಂದು. ಕೀಟವಿಜ್ಞಾನಿ ಮತ್ತು ಕನ್ನಡದ ವಿಜ್ಞಾನ ಲೇಖಕರಾಗಿದ್ದ ಡಾ. ಕೃಷ್ಣಾನಂದ ಕಾಮತ ಹಾಗೂ ಇತಿಹಾಸ ತಜ್ಞೆ – ಲೇಖಕಿ ಡಾ. ಜ್ಯೋತ್ಸ್ನಾ ಕಾಮತರ ಪುತ್ರ ವಿಕಾಸ್ ಕಾಮತ್ ನಡೆಸಿದ ಸಂದರ್ಶನ ಇದು. ಸೂರ್ಯನಾಥ ಕಾಮತರು ಕೃಷ್ಣಾನಂದ ಕಾಮತರ ಸಂಬಂಧಿಯಲ್ಲದಿದ್ದರೂ ಅದಕ್ಕೂ ಮೀರಿದ ಬಾಂಧವ್ಯವನ್ನಿಟ್ಟುಕೊಂಡಿದ್ದರು. ಒಂದು ಕಾಲದಲ್ಲಿ ಪತ್ರಕರ್ತರು ಮತ್ತು ಓದುಗರು ಈ ಇಬ್ಬರು ಕಾಮತರ ನಡುವೆ ಗೊಂದಲ ಮಾಡಿಕೊಳ್ಳುವುದು ಸಾಮಾನ್ಯವಾಗಿತ್ತು. ಈ ಗೊಂದಲಗಳ ಬಗ್ಗೆ ಜ್ಯೋತ್ಸ್ನಾ ಕಾಮತರು ಒಂದು ಹಾಸ್ಯಲೇಖವನ್ನೂ ಬರೆದದ್ದುಂಟು. ಜ್ಯೋತ್ಸ್ನಾ ಅವರು ಇತಿಹಾಸ ಸಂಶೋಧನೆಯಲ್ಲಿ ಸಾಕಷ್ಟು ಕೆಲಸ ಮಾಡಲಿಕ್ಕೂ ಸೂರ್ಯನಾಥ ಕಾಮತರ ಒತ್ತಾಸೆ, ಸಹಾಯ ಇದ್ದವು.

***

ವಿಕಾಸ್: ಹಲವು ಸಂದರ್ಭಗಳಲ್ಲಿ ಜನ ನಿಮ್ಮನ್ನು ನನ್ನ ತಾಯಿಯ ಪತಿ ಎಂದೇ ಮಿಸ್ಟೇಕ್ ಮಾಡಿಕೊಂಡಿದ್ದಾರೆ. ಯಾಕೆಂದರೆ ನನ್ನ ತಂದೆಯವರ ಹೆಸರು (ಡಾ. ಕೃಷ್ಣಾನಂದ ಕಾಮತ) ಮತ್ತು ನಿಮ್ಮ ಹೆಸರಿನ ಸಾಮ್ಯ ಜನರಿಗೆ ಗೊಂದಲ ಮೂಡಿಸಿದೆ. ಆಗೆಲ್ಲ ಜನರಿಗೆ, ನೀವಿಬ್ಬರೂ ಬೇರೆಬೇರೆ ವ್ಯಕ್ತಿಗಳು; ಸಂಬಂಧಿಕರಲ್ಲ ಎಂದು ತಿಳಿಹೇಳುವುದೇ ನನಗೆ ದೊಡ್ಡ ಕೆಲಸವಾಗಿಬಿಡುತ್ತದೆ. ಈ ಬಗೆಯ ಅನುಭವ ನಿಮಗೇನಾದರೂ ಆಗಿದ್ದುಂಟಾ?

ಸೂರ್ಯನಾಥ ಕಾಮತ್: (ನಗುತ್ತ) ನಿಮ್ಮ ತಾಯಿ (ಜ್ಯೋತ್ಸ್ನಾ ಕಾಮತ) ಈ ಗೊಂದಲದ ಪ್ರಸಂಗಗಳ ಬಗ್ಗೆಯೇ ಒಮ್ಮೆ ಹಾಸ್ಯ ಲೇಖನವೊಂದನ್ನು ಬರೆದದ್ದುಂಟು. ನಿಮ್ಮ ತಂದೆ, “ಅದ್ಯಾಕೆ ಎಲ್ಲರೂ ನನ್ನನ್ನು ಸೂರ್ಯನಾಥ ಕಾಮತ ಅಂತ ಮಿಸ್ಟೇಕ್ ಮಾಡಿಕೊಳ್ತಾರೆ. ಆದರೆ ಅವರನ್ನು ಕೃಷ್ಣಾನಂದ ಅಂತ ಯಾಕೆ ಯಾರೂ ಮಿಸ್ಟೇಕ್ ಮಾಡಿಕೊಳ್ಳೋದಿಲ್ಲ? ಈ ತೊಂದರೆ ನನಗೆ ಮಾತ್ರ ಬರುವುದು ನ್ಯಾಯವಾ?” ಅಂತ ಕೇಳ್ತಿದ್ದರು. ಅವರೊಮ್ಮೆ ಹಾಗೆ ನನ್ನಲ್ಲಿ ಹೇಳಿ ಒಂದೇ ವಾರದಲ್ಲಿ ನನಗೊಂದು ಪತ್ರ ಬಂತು ರಾಜ್ಯದ ಗಝೆಟಿಯರ್ ಡಿಪಾರ್ಟ್‍ಮೆಂಟಿಂದ. ಅದರಲ್ಲಿ ಡಾ. ಕೃಷ್ಣಾನಂದ ಕಾಮತ, ನಿರ್ದೇಶಕರು, ಕರ್ನಾಟಕ ರಾಜ್ಯ ಗೆಝೆಟಿಯರ್ ಅಂತ ಬರೆದಿದ್ರು ವಿಳಾಸಾನ!

ವಿಕಾಸ್: ನೀವು ಒಬ್ಬ ಶಿಕ್ಷಕನಾಗಿ, ಪತ್ರಕರ್ತನಾಗಿ, ಕಾದಂಬರಿಕಾರನಾಗಿ ಕೆಲಸ ಮಾಡಿದಿರಿ. ಇತಿಹಾಸವನ್ನು ಅಧ್ಯಯನ ಮಾಡಿದಿರಿ. ಮಿಥಿಕ್ ಸೊಸೈಟಿಯಂಥ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಪ್ರಮುಖರು ನೀವು. ದೊಡ್ಡದೊಡ್ಡ ಸರಕಾರೀ ಸಂಸ್ಥೆಗಳನ್ನು, ಇಲಾಖೆಗಳನ್ನು ಮುನ್ನಡೆಸಿದಿರಿ. ಈಗಂತೂ ದೇಶದ ಅತ್ಯಂತ ದೊಡ್ಡ ಸರಸ್ವತೀ ಭಂಡಾರವನ್ನು (ರಾಜಾರಾಮ್ ಮೋಹನ್ ರಾಯ್ ಲೈಬ್ರರಿ, ಕೋಲ್ಕತ) ನಿರ್ದೇಶಕರಾಗಿ ಮುನ್ನಡೆಸುತ್ತಿದ್ದೀರಿ. ನಿಮ್ಮ ಈ ಎಲ್ಲ ಸಾಧನೆಗಳಿಗೆ ಪ್ರೇರಕಶಕ್ತಿ ಯಾವುದು?
ಮತ್ತಷ್ಟು ಓದು »