ವಿಷಯದ ವಿವರಗಳಿಗೆ ದಾಟಿರಿ

Posts tagged ‘ನೆಹರೂ’

15
ಏಪ್ರಿಲ್

ನೆಹರೂ ಎಂಬ ಸ್ವಾರ್ಥ ರಾಜಕಾರಣಿ ಮತ್ತು ನೇತಾಜಿ ಎಂಬ ಸ್ವಾತಂತ್ರ್ಯ ಸೇನಾನಿ

– ರಾಕೇಶ್ ಶೆಟ್ಟಿ

Mission Netaji

“ಸುಭಾಷ್ ಸೈನ್ಯವೇನಾದರೂ ಭಾರತಕ್ಕೆ ಬಂದರೆ ನಾನು ಕತ್ತಿ ಹಿಡಿದು ಹೋರಾಡುತ್ತೇನೆ”. ಹೀಗೆ ಹೇಳಿದ ಕಠಾರಿವೀರ ಯಾವುದೋ ಬ್ರಿಟಿಷನಲ್ಲ.ಗಾಂಧಿ ಪಕ್ಷದೊಳಗಿನ ಬ್ರಿಟಿಷ್ ಶ್ರೀಮಾನ್ ಚಾಚಾ ನೆಹರೂ.ಅಷ್ಟಕ್ಕೂ ನೆಹರೂವನ್ನು “ಗಾಂಧಿ ಪಕ್ಷದೊಳಗಿನ ಬ್ರಿಟಿಷ್” ಎಂದು ನಾನು ಕರೆಯುತ್ತಿಲ್ಲ.ಖುದ್ದು ನೆಹರೂ ಅವರ ಅಮೇರಿಕಾದ ಗೆಳೆಯನಾಗಿದ್ದ ಜಾನ್ ಕೆನೆತ್ ಗಾಲ್ಬ್ರೈತ್ ಬಳಿ “ಭಾರತವನ್ನು ಆಳುವ ಕಡೆಯ ಬ್ರಿಟಿಷ್ ನಾನೇ” ಎಂದು ಹೇಳಿಕೊಂಡಿದ್ದರು. (ಈ ಜಾನ್ ಎಂತ ಮಹಾನುಭಾವನೆಂದರೆ, ಭಾರತವು ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿದ್ದು ಪುಣ್ಯ ಎನ್ನುವಂತ ಮನಸ್ಥಿತಿಯವ)

ಗಾಂಧಿ ಪಕ್ಷದೊಳಗಿನ ಬ್ರಿಟಿಷ್ ಎನ್ನಲಿಕ್ಕೆ ಇನ್ನೊಂದು ಸತ್ಯವೂ ಈಗ ಬಹಿರಂಗವಾಗಿದೆ.ಭಾರತವು ಸ್ವತಂತ್ರವಾಗಿ, ಸುಮಾರು ೨೦ ವರ್ಷಗಳ ಕಾಲ ನೇತಾಜಿ ಕುಟುಂಬದ ಮೇಲೆ ಶ್ರೀಮಾನ್ ನೆಹರೂ ಅವರ ಘನ ಸರ್ಕಾರ “ಗೂಢಚಾರಿಕೆ”ಯನ್ನು ಮಾಡಿದೇ ಎಂಬುದೇ ಆ ಸತ್ಯ.ಅದೂ ಬ್ರಿಟಿಷರ MI15 ಎಂಬ ಗೂಢಚಾರ ಸಂಸ್ಥೆಯೊಂದಿಗೆ ಸೇರಿಕೊಂಡು! ಹೀಗಿರುವಾಗ ನೆಹರೂ ತನ್ನನ್ನು ತಾನು “I am the last Englishman to rule in India.” ಎಂದಿದ್ದು ಸರಿಯಾಗಿಯೇ ಇದೆ ಅಲ್ಲವೇ? ಅಷ್ಟಕ್ಕೂ ಬ್ರಿಟಿಷರಿಗೆ ನೇತಾಜಿಯವರ ಮೇಲೆ ಗೂಢಚಾರಿಕೆ ಮಾಡಲಿಕ್ಕೆ ಕಾರಣಗಳಿದ್ದವು.ಆದರೆ ನೆಹರೂ ಮಹಾಶಯರಿಗೇನಿತ್ತು ಅಂತ ಕಾರಣ? “ಅಭದ್ರತೆ” ಭಾವವೇ?ನೇತಾಜಿಯವರು ತೈಪೆಯ ವಿಮಾನಾಪಘಾತದಲ್ಲಿ ಮರಣಹೊಂದಿದರು ಎಂದು ಸೃಷ್ಟಿಸಲಾಗಿದ್ದ ಸುದ್ದಿಯನ್ನು ಇತರರಂತೆ ನೆಹರೂ ಸಹ ನಂಬಿರಲಿಲ್ಲ.ಒಂದು ವೇಳೆ ಸ್ವತಂತ್ರ ಭಾರತಕ್ಕೆ ನೇತಾಜಿ ಕಾಲಿಟ್ಟರೆ,ಗಾಂಧೀಜಿಯ ಮರಣದ ನಂತರ ಏಕಮೇವಾದ್ವೀತಿಯನಂತಿರುವ ತನ್ನ ಕುರ್ಚಿ ಉಳಿಯುವುದಿಲ್ಲವೆಂಬ ಘೋರ ಸತ್ಯ ತಿಳಿದಿದ್ದರಿಂದಲೇ? ನೆಹರೂವಿಗೆ,ನೇತಾಜಿಯವರ ಮೇಲೆ ಅಂತದ್ದೊಂದು ಅಭದ್ರತೆ,ಈರ್ಷ್ಯೆ ಇರಲಿಲ್ಲವೆಂದಾದರೇ, ಬ್ರಿಟನ್ ಪ್ರಧಾನಿಯಾಗಿದ್ದ ಕ್ಲೆಮೆಂಟ್ ಆಟ್ಲಿಯವರಿಗೆ,ಸುಭಾಷ್ ರಷ್ಯಾದಲ್ಲಿ ಇರುವ ಬಗ್ಗೆ ಮತ್ತು ರಷ್ಯಾ ಮಿತ್ರಪಡೆಗಳಿಗೆ ನಂಬಿಕೆ ದ್ರೋಹ ಮಾಡಿದಂತೆ ಎಂಬಂತ ಸಾಲುಗಳಿರುವ ಪತ್ರವೊಂದನ್ನು ಬರೆದಿದ್ದರು ಎನ್ನುವುದು ಸುಳ್ಳೇ? ಅದೆಲ್ಲಾ ಬಿಡಿ.ಸ್ವಾತಂತ್ರ್ಯ ಸಿಕ್ಕ ನಂತರ ಐ.ಎನ್.ಎ ಸೈನಿಕರನ್ನು ನೆಹರೂ ನಡೆಸಿಕೊಂಡ ರೀತಿ ನೋಡಿ.ಆ ಸೈನಿಕರಿಗೆ ಭಾರತೀಯ ಸೈನ್ಯದಲ್ಲಿ ಕಾಲಿಡಲು ಬಿಡಲಿಲ್ಲ.ಪಿಂಚಣಿಗಾಗಿ ಆ ಸೈನಿಕರು ೧೯೭೭ರವರೆಗೂ ಕಾಯಬೇಕಾಯಿತು! ಆಜಾದ್ ಹಿಂದ್ ಸೈನಿಕರು ಭಾರತೀಯ ಸೇನೆ ಸೇರಿಕೊಂಡ ಮೇಲೆ ನೇತಾಜಿ ಪ್ರತ್ಯಕ್ಷವಾದರೇ,ಸೈನ್ಯ ಅವರ ಪರ ನಿಂತೀತೂ ಎಂಬ ಭಯವಿತ್ತೇ? ನೆಹರೂ ಅವರ ಈ ನಡೆಗಳನ್ನೆಲ್ಲ ಹೇಗೆ ಅರ್ಥೈಸಿಕೊಳ್ಳಬೇಕು?

ಮತ್ತಷ್ಟು ಓದು »

7
ಏಪ್ರಿಲ್

ನಾಡು-ನುಡಿ : ಮರುಚಿಂತನೆ – ನೆಹರು ಸೆಕ್ಯುಲರಿಸಂ ಯಾರ ವಾರಸುದಾರ?

ಪ್ರೊ.ರಾಜಾರಾಮ್ ಹೆಗಡೆ

ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ

ನೆಹರೂನೆಹರು ಅವರು ಮಹಾತ್ಮಾ ಗಾಂಧಿಯವರ ಪಟ್ಟದ ಶಿಷ್ಯ. ಅಷ್ಟಾಗಿಯೂ ನೆಹರೂ ಅವರ ನೀತಿಗಳು ಹಾಗೂ ಕಾರ್ಯಕ್ರಮಗಳು ದೇಶವನ್ನು ಗಾಂಧಿವಾದದ ವಿರುದ್ಧ ದಿಶೆಗೆ ಒಯ್ದವು ಎಂಬುದಾಗಿ ವಿದ್ವಾಂಸರ ಅಂಬೋಣ. ಉದಾಹರಣೆಗೆ ಗಾಂಧಿಯವರ ಗ್ರಾಮ ಸ್ವರಾಜ್ಯ ಕಲ್ಪನೆ, ಆಧುನೀಕರಣದ ಕುರಿತ ವಿರೋಧ, ಇವೆಲ್ಲವೂ ನೆಹರೂ ಯುಗದ ನಂತರ ರಾಜಕಾರಣದ ಕಸದ ಬುಟ್ಟಿ ಸೇರಿದ್ದು ಈಗ ಇತಿಹಾಸವಾಗಿದೆ. ಹಾಗಾಗಿ ಯಾರೂ ಈ ವಿಷಯದಲ್ಲಿ ನೆಹರೂ ಅವರು ಗಾಂಧಿಯವರ ಶಿಷ್ಯತ್ವವನ್ನು ಪೂರೈಸಿದರು ಎನ್ನುವ ಸಾಹಸಕ್ಕೆ ಹೋಗಲಾರರು. ಆದರೆ ಅಷ್ಟಾಗಿಯೂ ಕೂಡ ನೆಹರೂ ಅವರು ಗಾಂಧಿಯವರ ಶಿಷ್ಯರಾಗಿ ಉಳಿದುಕೊಳ್ಳುವುದು ಸೆಕ್ಯುಲರ್ ನೀತಿಯಲ್ಲಿ ಎಂಬುದು ನೆಹರೂ ಅವರ ಪರ ವಿರೋಧಿಗಳಿಬ್ಬರಲ್ಲೂ ಮನೆಮಾಡಿರುವ ಅನ್ನಿಸಿಕೆ. ಭಾರತದಲ್ಲಿ ಹಿಂದುತ್ವವಾದಿಗಳನ್ನು ನಿಯಂತ್ರಿಸುವ ಹಾಗೂ ಅಲ್ಪಸಂಖ್ಯಾತರ ಹಿತವನ್ನು ರಕ್ಷಿಸುವ ಕುರಿತಂತೆ ತಮ್ಮ ಗುರುವಿನ ಆಲೋಚನೆಗಳನ್ನು ನೆಹರೂ ಕಾರ್ಯರೂಪಕ್ಕೆ ಸಮರ್ಥವಾಗಿ ಇಳಿಸಿದವರು ಎಂಬುದರಲ್ಲಿ ಇಂದು ಯಾರಿಗಾದರೂ ಸಂದೇಹವಿದೆ ಎನ್ನಿಸುವುದಿಲ್ಲ. ಈ ಮೇಲಿನ ಕೊನೆಯ ಅಂಶವನ್ನು ಮಾತ್ರ ಕಾಂಗ್ರೆಸ್ಸು ಒತ್ತಿ ಹೇಳಿ ತಾನು ಗಾಂಧೀಜಿಯವರ ನಿಜವಾದ ವಾರಸುದಾರ ಎನ್ನುತ್ತ ಬಂದಿದೆ. ಆದರೆ ನೆಹರು ಸೆಕ್ಯುಲರಿಸಂಗೆ ಗಾಂಧಿಯವರ ವಾರಸುದಾರಿಕೆ ಎಷ್ಟಿದೆ?

ಇಂದು ಗಾಂಧೀ ಸೆಕ್ಯುಲರಿಸಂ ಅಂತ ಪ್ರತ್ಯೇಕವಾಗಿ ಯಾವುದೂ ಕಣ್ಣಿಗೆ ಕಾಣುವುದಿಲ್ಲ. ನೆಹರು ಸೆಕ್ಯುಲರಿಸಮ್ಮಿನ ಇಂದಿನ ವಾರಸುದಾರರ ಚಿಂತನೆಗೂ ಗಾಂಧೀ ಚಿಂತನೆಗೂ ಇರುವ ಬಿರುಕುಗಳನ್ನು ಗಮನಿಸಿದರೆ ಈ ವಾರಸುದಾರಿಕೆಯ ಸ್ವರೂಪವು ಸ್ಪಷ್ಟವಾಗಬಹುದು. ನೆಹರೂ ಕಾಲದಲ್ಲಿ ಪ್ರಚಲಿತದಲ್ಲಿ ಬಂದ ಸೆಕ್ಯುಲರಿಸಂಗೆ ಅಲ್ಪಸಂಖ್ಯಾತರ ಓಲೈಕೆಯ ರಾಜಕೀಯವನ್ನು ಬಿಟ್ಟರೆ ಅದರಲ್ಲಿ ಸೆಕ್ಯುಲರ್ ಆದದ್ದು ಏನೂ ಕಾಣಿಸುವುದಿಲ್ಲ. ಹಾಗೂ ಹಿಂದೂ ಸಂಪ್ರದಾಯಗಳ ಕುರಿತು ಜಿಗುಪ್ಸೆ, ಅವಹೇಳನವೂ ಕೂಡ ಈ ಸೆಕ್ಯುಲರಿಸಂನ ಒಂದು ಲಕ್ಷಣ. ಅಂದರೆ ಹಿಂದೂ ಪರಂಪರೆಯು ಅನೈತಿಕ ಸಮಾಜ ವ್ಯವಸ್ಥೆಯನ್ನು, ಅರ್ಥಾತ್ ಜಾತಿವ್ಯವಸ್ಥೆಯನ್ನು ಎತ್ತಿ ಹಿಡಿಯುತ್ತದೆ, ಸಮಸ್ತ ಸಂಸ್ಕೃತ ಗ್ರಂಥಗಳೆಲ್ಲವೂ ಬ್ರಾಹ್ಮಣೇತರರ ಶೋಷಣೆಗಾಗಿಯೇ ರಚನೆಯಾಗಿವೆ, ಈ ಸಮಾಜವನ್ನು ಆದಷ್ಟೂ ಹಿಂದೂ ಸಂಪ್ರದಾಯಗಳ ಹಿಡಿತದಿಂದ ಹೊರತಂದ ಹೊರತೂ ಅದರ ಉದ್ಧಾರ ಸಾಧ್ಯವಿಲ್ಲ ಎನ್ನುವುದೇ ಇಂದಿನ ಸೆಕ್ಯುಲರಿಸಂ ಆಗಿದೆ. ಈ ಸೆಕ್ಯುಲರಿಸಂ ಪ್ರಕಾರ ಹಿಂದೂ ಸಂಪ್ರದಾಯಗಳಲ್ಲಿನ ಮೌಢ್ಯದ ನಿರ್ಮೂಲನೆಗಾಗಿ ಕಾನೂನುಗಳನ್ನು ಮಾಡುವುದೇ ಮುಖ್ಯ ಕಾರ್ಯಕ್ರಮ. 

ಮತ್ತಷ್ಟು ಓದು »

15
ಜನ

ವಿಧಿ 370 – ಚರ್ಚೆ

– ಪ್ರವೀಣ್ ಪಟವರ್ಧನ್

Jammu Kashmir- Debate on Article 370ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು ಜಮ್ಮುವಿನಲ್ಲಿ ನಡೆದ ಇತ್ತೀಚೆಗಿನ ಸಮಾವೇಶದಲ್ಲಿ ನಮ್ಮ ದೇಶದ ಮೊದಲ ಪ್ರಧಾನ ಮಂತ್ರಿಯವರ ನಿಲುವನ್ನು ಪ್ರಶ್ನಿಸಿದ್ದಾರೆ. ಡಾ|| ಶ್ಯಾಮಾ ಪ್ರಸಾದ್ ಮುಖರ್ಜೀ ಯವರ ಜಮ್ಮು ಕಾಶ್ಮೀರದಲ್ಲಿನ ಹೋರಾಟವನ್ನು, ಬಲಿದಾನವನ್ನು (ನಿಗೂಢ ಸಾವು ಎಂದರೆ ತಪ್ಪಾಗಲಾರದು) ನೆನಪಿಸಿಕೊಂಡಿದ್ದಾರೆ. ಭಾರತ ಸಂವಿಧಾನದ ವಿಧಿ 370 (Article 370) ಯನ್ನು ಚರ್ಚಿಸಬೇಕೆಂದು ಕೇಳಿಕೊಂಡಿದ್ದಾರೆ. ಸಹಜವಾಗಿಯೇ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಬೆಂಬಲಿಸುವ ಕೆಲ ಮಾಧ್ಯಮ ವರ್ಗದವರು ಮೋದಿಯ ಭಾಷಣವನ್ನು ಆಕ್ಷೇಪಿಸಿದ್ದಾರೆ.ಕಾರಣ ಮಾಜಿ ಪ್ರಧಾನಿ ನೆಹರೂರಿಗೆ ಅವಮಾನವಾಯ್ತೆಂದೋ, ಅಥವಾ ನೆಹರೂರವರು ಕಾಶ್ಮೀರದಲ್ಲಿ ಗೊಂದಲ ಸೃಷ್ಟಿಸಿದ್ದನ್ನು ಒಪ್ಪಿಕೊಳ್ಳಲಾಗದೆಂದೋ ಗೊತ್ತಿಲ್ಲ. ಹಿಂದೊಮ್ಮೆ ಸರ್ದಾರ್ ವಲ್ಲಭ ಭಾಯಿ ಪಟೇಲ್, ನೆಹರೂರ ತುಲನೆ ಮಾಡಿದ್ದ ಮೋದಿಯನ್ನು ಆಕ್ಷೇಪಿಸಿದ್ದು ಸ್ಮರಿಸಬಹುದು. ನೆಹರೂ ರವರು ಅಪ್ರತಿಮ ದೇಶಭಕ್ತ, ದ್ರಷ್ಟಾರ; ಅವರ ಬಗ್ಗೆ ಲಘುವಾಗಿ ಮಾತನಾಡಿದ್ದು  ಮೋದಿಯವರ ತಪ್ಪು ಎಂದು ಅವರು ಸಮರ್ಥಿಸಿಕೊಂಡರೆ ಅದಕ್ಕಿಂತ ದೊಡ್ಡ ಹಾಸ್ಯ ಮತ್ತೊಂದಿರಲಿಕ್ಕಿಲ್ಲ.

ಮೊದಲನೆಯದಾಗಿ ನೆಹರೂ ಭಾರತದ ಜೊತೆಗಿನ ಕಾಶ್ಮೀರದ ವಿಲೀನವನ್ನು ಗೊಂದಲಕ್ಕೆ ಮಾರ್ಪಾಟು ಮಾಡಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಈಗಾಗಲೇ ಹಲವಾರು ಲೇಖಕರು, ಚಿಂತಕರು ತೋರಿಸಿಕೊಟ್ಟಿದ್ದಾರೆ. ಇನ್ನು ನೆಹರೂ ದೇಶಭಕ್ತರು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ದೇಶಕ್ಕೆ ಬ್ರಿಟಿಷರಿಂದ ಬಿಡುಗಡೆ ತಂದುಕೊಟ್ಟವರಲ್ಲಿ ಅಗ್ರಗಣ್ಯರು – ಹಾಗಾಗಿ ನೆಹರೂ ರವರನ್ನು ದೂಷಿಸಬಾರದು ಎಂದಾದರೆ – ಅದೂ ಒಪ್ಪಿಕೊಳ್ಳುವ ಮಾತಲ್ಲವೇ ಅಲ್ಲ. ಒಬ್ಬರ ನಿಲುವನ್ನು ಪ್ರಶ್ನಿಸುವ, ತೆಗೆದುಕೊಂಡ ನಿಷ್ಕರ್ಷೆಯಿಂದ ದೇಶಕ್ಕೇ ಮಾರಕವಾದಾಗಲೂ ನಿಲುವನ್ನು ಪ್ರಷ್ನಿಸಬಾರದು ಎನ್ನುವುದು ಮೂರ್ಖತನದ ಪರಮಾವಧಿ. ಈ ದೇಶದ ಸಾಮಾನ್ಯ ಪ್ರಜೆಗೂ ಆ ಹಕ್ಕು ಇದ್ದೇ ಇರುತ್ತದೆ. ಅದೇ ರೀತಿಯಲ್ಲಿ, ಕೆಲ ವರ್ಷಗಳ ನಂತರ ಮೋದಿಯವರು ತೆಗೆದುಕೊಂಡ ಯವುದೋ ನಿಲುವು ತಪ್ಪೆಂದು ಜನರು ಮೋದಿಯವರ ನಿರ್ಧಾರವನ್ನು ಟೀಕಿಸಬಹುದಲ್ಲವೇ?

ಮತ್ತಷ್ಟು ಓದು »

15
ನವೆಂ

ಗಾ೦ಧಿ ಹ೦ತಕ ಗೋಡ್ಸೆ ಮತ್ತು ಆರ್.ಎಸ್.ಎಸ್ ಎನ್ನುವ ಭಯೋತ್ಪಾಧಕ ಸ೦ಘಟನೆ ..!!!

– ಗುರುರಾಜ್ ಕೊಡ್ಕಣಿ

Godse-Gandhijiಆತ ಹೇಳುತ್ತಲೇ ಹೋದ .’ನೀವು ಏನೇ ಹೇಳಿ ಸರ್,ಆರ್.ಎಸ್.ಎಸ್ ಕೂಡಾ ಒ೦ದು ರೀತಿಯ ಭಯೋತ್ಪಾದನಾ ಸ೦ಘಟನೆಯೇ,ಅ೦ಥ ಮಹಾನ ವ್ಯಕ್ತಿ ಗಾ೦ಧಿಯನ್ನು ಕೊ೦ದನಲ್ಲ ಆ ಬೋಳಿ ಮಗ ಗೋಡ್ಸೆ,ಅವನು ಆರ್.ಎಸ್.ಎಸ್ ನವನೇ.ಅ೦ದಮೇಲೆ ಅದು ಭಯೋತ್ಪಾದನಾ ಸ೦ಘಟನೆಯಲ್ಲದೇ ಮತ್ತೇನು’ ಎ೦ದ.ಆತ ನನಗೆ ಪರಿಚಿತ.ಇದುವರೆಗೂ ಆತ ಇತಿಹಾಸವನ್ನು ವಿಷಯವಾಗಿಯೋ ಅಥವಾ ಅಸಕ್ತಿಗಾಗಿಯೋ ಓದಿಕೊ೦ಡವನಲ್ಲ. ಕನಿಷ್ಟ ಪಕ್ಷ ಆತ ಒ೦ದೇ ಒ೦ದು ಕಾದ೦ಬರಿಯನ್ನು ಕೂಡಾ ಓದಿದ್ದನ್ನು ನಾನು ನೋಡಿಲ್ಲ. ಆತನಿಗೆ ’ಆರ್.ಎಸ್.ಎಸ್’ನ ವಿಸ್ತೃತ ರೂಪವಾದರೂ ತಿಳಿದಿದಿಯೋ ನನಗೆ ಅನುಮಾನ.ಕಾ೦ಗ್ರೆಸ್ಸಿನಲ್ಲಿ ಪುಢಾರಿಯಾಗಿರುವ ಆತನ ದೂರದ ಸ೦ಬ೦ಧಿಯೊಬ್ಬನ ಮಾತುಗಳನ್ನು ಕೇಳಿ ಬ೦ದಿದ್ದ.ಅದನ್ನೇ ನನ್ನ ಮು೦ದೇ ಒದರುತ್ತಿದ್ದ.ಇನ್ನು ಈತನಿಗೆ ಆರ್.ಎಸ್.ಎಸ್.ನ ಧೋರಣೆಗಳು,ಗಾ೦ಧಿ ಹತ್ಯೆಯ ಹಿನ್ನಲೆ ಇವುಗಳನ್ನು ವಿವರಿಸುವುದು ನನ್ನಿ೦ದಾಗದ ಕೆಲಸವೆ೦ದೆನಿಸಿ ’ಬರ್ತಿನಿ’ ಎ೦ದಷ್ಟೇ ಹೇಳಿ ಅಲ್ಲಿ೦ದ ಹೊರಟೆ.

ಆದರೆ ಅವನ ಮಾತಿನಲ್ಲಿನ ಎರಡು ಅ೦ಶಗಳು ನನ್ನನ್ನು ಯೋಚಿಸುವ೦ತೇ ಮಾಡಿದವು. ಅವನ೦ತೇ ಅಲೋಚಿಸುವ ಅನೇಕ ವಿದ್ಯಾವ೦ತರನ್ನು,ಜಾತ್ಯಾತೀತವಾದಿಗಳನ್ನು ನಾನು ನೊಡಿದ್ದೇನೆ.ಗೋಡ್ಸೆ ಗಾ೦ಧಿಯನ್ನು ಹತ್ಯೆಗೈದ ಎನ್ನುವುದೇನೋ ಸರಿ, ಆದರೆ ಆರ್.ಎಸ್.ಎಸ್ ಭಯೋತ್ಪಾಧನಾ ಸ೦ಘಟನೆಯಾಗಿದ್ದು ಯಾವಾಗ..? ಗೊಡ್ಸೆ ಕೆಲಕಾಲ ಆರ್.ಎಸ್.ಎಸ್ ನ ಸದಸ್ಯನಾಗಿದ್ದ ಎ೦ಬುದನ್ನೂ ಒಪ್ಪಿಕೊಳ್ಳೋಣ.ಅ೦ದ ಮಾತ್ರಕ್ಕೆ ಅರ್.ಎಸ್.ಎಸ್ ಭಯೋತ್ಪಾದನಾ ಸ೦ಘಟನೆಯಾಗಿಬಿಡಬೇಕೇ..? ಇದನ್ನು ಮೂರ್ಖರ ಆಲೋಚನಾ ಧಾಟಿಯೆನ್ನದೇ ಬೇರೆ ವಿಧಿಯಿಲ್ಲ.ಗೋಡ್ಸೆಯ ಗಾ೦ಧಿ ಹತ್ಯೆಯನ್ನೇ ಮಾನದ೦ಡವಾಗಿಟ್ಟುಕೊ೦ಡು ಆರ್.ಎಸ್.ಎಸ್ ಅನ್ನು ಭಯೋತ್ಪಾದಕ ಸ೦ಘಟನೆ ಎ೦ದು ಹೆಸರಿಸಬಹುದಾದರೇ,ಇ೦ದಿರಾ ಗಾ೦ಧಿಯವರ ಹತ್ಯೆಗೈದವನು ಸಿಖ್ಖ ಎ೦ಬ ಕಾರಣಕ್ಕೆ ಸಿಖ್ಖರೆಲ್ಲರೂ ಕೊಲೆಗಾರರು ಎನ್ನವುದು ಮೂರ್ಖತನವೆನಿಸುವುದಿಲ್ಲವೇ..? ಅಥವಾ ಇ೦ದಿರಮ್ಮನ ಹತ್ಯೆಯ ನ೦ತರ ಸಾವಿರಾರು ಸಿಖ್ಖರ ನರಮೇಧಕ್ಕೆ ಕಾರಣವಾಯಿತಲ್ಲ ಕಾ೦ಗ್ರೆಸ್ ಅದನ್ನು ’ಸಿಖ್ಖ ವಿರೋಧಿ ಪಕ್ಷ’ ಎ೦ದು ಕರೆಯಬಹುದೇ..?

ಮತ್ತಷ್ಟು ಓದು »

14
ನವೆಂ

ಚಾಚಾ… Oh My God… !!!

– ಅಶ್ವಿನ್ ಅಮೀನ್

Neharu Gandhijiನವೆಂಬರ್ 14. ನೆಹರೂ ಜನ್ಮ ದಿನ. ನಾವು ಶಾಲಾ ದಿನಗಳಲ್ಲಿರುವಾಗ ನಮಗೆಲ್ಲ ಖುಷಿಯ ದಿನ..  ಕಾರಣ ಅಂದು ನಮ್ಮ ದಿನ.. ಮಕ್ಕಳ ದಿನ.. ಮನೋರಂಜನಾ ಕಾರ್ಯಕ್ರಮಗಳು, ಆಟೋಟ, ಸಿಹಿ ತಿಂಡಿ, ಅರ್ಧ ದಿವಸ ರಜಾ ಬೇರೆ.. !! ಆಹಾ ಮಕ್ಕಳಿಗೆ ಅದೇ ಚಂದ.. ಅಂದು ನಾವೆಲ್ಲಾ ‘ಚಾಚಾ…’ ಎನ್ನುತ್ತಾ ಶಿಕ್ಷಕರು ಕೊಟ್ಟ ಸಿಹಿ ತಿನ್ನುತ್ತಾ ಖುಷಿಪಡುತ್ತಿದ್ದೆವು.

ಆದರೆ…

ಆ ಸಿಹಿ ತಿನ್ನುತ್ತಿದ್ದ ಬಾಯಿ ಯಾಕೋ ಇಂದು ಕಹಿಯೆನಿಸುತ್ತಿದೆ.ಮತ್ತೆ ‘ಚಾಚಾ…’ ಎಂದು ಕೂಗಲು ಮನಸ್ಸೇ ಬರುತ್ತಿಲ್ಲ. ನೆಹರೂ ಹೆಸರು ಕೇಳಿದರೇನೇ ಏನೋ ಒಂದು ಆಕ್ರೋಶ, ಅಸಹ್ಯತನ…!ಅಂತಹ ಒಬ್ಬ ದುರ್ಬಲ ಪ್ರಧಾನಿಯನ್ನು ಭಾರತ ಹೊಂದಿತ್ತಾ ಎಂಬ ಬಗ್ಗೆ ಅನುಮಾನ.ಖಂಡಿತಾ ನಾನು ಬದಲಾಗಿಲ್ಲ.ನಾನು ಈಗಲೂ ಅದೇ ದೇಶ ಪ್ರೇಮಿ.ಆದರೆ ನನ್ನ ಜ್ಞಾನ ಬದಲಾಯಿತು.ನನ್ನ ಮುಂದಿದ್ದ ಸುಳ್ಳಿನ ಇತಿಹಾಸ ಕರಗುತ್ತಾ ಹೋದಂತೆ ನೆಹರೂ ಬಗೆಗಿನ ತೆರೆಮರೆಯ ರಹಸ್ಯಗಳು ಒಂದೊಂದಾಗಿ ಗೋಚರಿಸತೊಡಗಿದವು.ಆ ತೆರೆಯ ಹಿಂದೆ ಕಂಡದ್ದೆಲ್ಲ ಸ್ವಾರ್ಥದ,ನಾಚಿಕೆಗೇಡಿನ,ಅಸಹ್ಯಕರ,ಹೇಡಿ ಹಾಗೂ  ಮೂರ್ಖತನದ ಪರಮಾವಧಿ…!

ಕಾಂಗ್ರೆಸ್ಸಿನ ಆಗಿನ ಅಧ್ಯಕ್ಷ ಮೋತಿಲಾಲರು ತನ್ನ ಮಗ ನೆಹರೂರವರನ್ನು ತನ್ನ ನಂತರ ಕಾಂಗ್ರೆಸ್ಸ್ ಅಧ್ಯಕ್ಷ ಪಟ್ಟಕ್ಕೇರಿಸಲು ಗಾಂಧೀಯ ಬೆನ್ನು ಬಿದ್ದಿದ್ದ ಕಾಲವದು.ಹಲವು ವರ್ಷಗಳ ಒತ್ತಡದ ನಂತರ ಗಾಂಧೀ ಮೊತಿಲಾಲರ ಹಠಕ್ಕೆ ಬಗ್ಗಲೇಬೇಕಾಯಿತು. ಉಕ್ಕಿನ ಮನುಷ್ಯ ವಲ್ಲಭ ಭಾಯಿ ಪಟೇಲರಿಗೆ ಬಹುಮತ ಇದ್ದ ಹೊರತಾಗಿಯೂ ಪಟೇಲ್ ಅವರನ್ನು ತಣ್ಣಗಾಗಿಸಿ ನೆಹರೂರವರನ್ನು ಕಾಂಗ್ರೆಸ್ಸ್ ಅಧ್ಯಕ್ಷ ಗಾದಿಯಲ್ಲಿ ಕೂರಿಸಿಯೇ ಬಿಟ್ಟರು.

ಮತ್ತಷ್ಟು ಓದು »

5
ಆಕ್ಟೋ

ಮಿ.ರಾಹುಲ್,ಹಿರೋಯಿಸಂ ಅನ್ನುವುದು ಸಿನೆಮಾಗಳಲ್ಲೇ ಚೆನ್ನ

– ರಾಕೇಶ್ ಶೆಟ್ಟಿ

Rahul Gandhiಕಾಂಗ್ರೆಸ್ಸಿನ ನಾಯಕರಾಗಿದ್ದಂತಹ ಅರ್ಜುನ್ ಸಿಂಗ್ ಅವರ ಆತ್ಮಕತೆ ‘A Grain of Sand in the Hourglass of Time’ ಯಲ್ಲಿ ಒಂದು ಪ್ರಸಂಗವನ್ನು ದಾಖಲಿಸಿದ್ದಾರೆ ಅನ್ನುವ ವರದಿಯೊಂದು ಕಳೆದ ವರ್ಷ ಪತ್ರಿಕೆಗಳಲ್ಲಿ ಬಂದಿತ್ತು.ಅಲ್ಲಿ ಅವರು ಆಗಿನ್ನೂ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರದಿದ್ದ ಸೋನಿಯಾ ಅವರನ್ನು ಪಕ್ಷಕ್ಕೆ ಕರೆ ತಂದು ಅಧ್ಯಕ್ಷೆಯ ಪಟ್ಟಕಟ್ಟುವ ಬಗ್ಗೆ ಮಾಜಿ ಪ್ರಧಾನಿ ಪಿ.ವಿ ನರಸಿಂಹರಾವ್ ಅವರ ಬಳಿ ಮಾತನಾಡಲು ಸೀತರಾಂ ಕೇಸರಿ ಮತ್ತಿತ್ತರರೊಂದಿಗೆ ಹೋಗಿರುತ್ತಾರೆ. ಸೋನಿಯಾರನ್ನು ಅಧ್ಯಕ್ಷೆಯನ್ನಾಗಿ ಮಾಡುವ ಇವರ ಮಾತನ್ನು ಕೇಳಿ ಕ್ಷಣಕಾಲ ಸುಮ್ಮನಿದ್ದ ಪಿವಿಎನ್ ಒಮ್ಮೆಲೇ ” ರೈಲಿನ ಕಂಪಾರ್ಟ್-ಮೆಂಟ್ ಗಳನ್ನು ಇಂಜಿನ್ನಿಗೆ ಜೋಡಿಸಿದಂತೆ,ಕಾಂಗ್ರೆಸ್ಸ್ ಅನ್ನು ನೆಹರೂ ಕುಟುಂಬಕ್ಕೆ ಜೋತು ಬೀಳಿಸುವುದೇಕೆ? ಬೇರೆ ದಾರಿಗಳಿಲ್ಲವೇ ನಮ್ಮ ಮುಂದೆ?” ಅಂತ ಸಿಡುಕುತ್ತಾರೆ. ಕಾಂಗ್ರೆಸ್ಸಿನಂತ ಲಕೋಟೆ ಪಕ್ಷದಲ್ಲಿ ಪಿವಿಎನ್ ಮತ್ತು ಸೀತರಾಂ ಕೇಸರಿಯವರನ್ನು ಆಮೇಲೆ ಹೇಗೆ ನಡೆಸಿಕೊಳ್ಳಲಾಯಿತು ಅನ್ನುವುದೆಲ್ಲ ಮತ್ತೆ ಬಿಡಿಸಿ ಹೇಳಬೇಕಿಲ್ಲ.

೧೨೮ ವರ್ಷಗಳ ಇತಿಹಾಸ ಹೊಂದಿರೋ ಈ ರಾಷ್ಟ್ರೀಯ ಪಕ್ಷಕ್ಕೆ “ನೆಹರೂ ಕುಟುಂಬ”ದ ಬೋಗಿಯನ್ನು ಮೊದಲಿಗೆ ಜೋಡಿಸಿದ್ದು ಮಹಾತ್ಮ ಗಾಂಧೀಜಿ.ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಸರ್ದಾರ್ ವಲ್ಲಭಾಯ್ ಪಟೇಲ್ ಅಂತ ದಿಗ್ಗಜರನ್ನೆಲ್ಲ ಬದಿಗೆ ಸರಿಸಿ ಜವಹರಲಾಲ್ ನೆಹರೂ ಅವರನ್ನು ಗಾಂಧೀಜಿ ಮುನ್ನೆಲೆಗೆ ತಂದ ಹಿನ್ನೆಲೆಯೇನು ಅನ್ನುವುದರ ಬಗ್ಗೆ ಇವತ್ತಿಗೂ ಬೇರೆ ಬೇರೆ ಕತೆಗಳಿವೆ.ನೆಹರೂ ನಂತರ ಬಂದ ಇಂದಿರಾ ಅವರು ನೆಹರೂಗಿಂತ ಉತ್ತಮವಾಗಿ ದೇಶವನ್ನು ಮುನ್ನಡೆಸಿದರೂ, ಸುಲಭವಾಗಿ ದಕ್ಕಿದ್ದಂತಹ ಪ್ರಧಾನಿ ಹುದ್ದೆ ಅವರೊಳಗಿನ ಸರ್ವಾಧಿಕಾರಿಯನ್ನು ಜಾಗೃತಗೊಳಿಸಿ ಈ ದೇಶದ ಪ್ರಜಾಪ್ರಭುತ್ವದ ಇತಿಹಾಸದ ಕಪ್ಪುಚುಕ್ಕೆ “ಎಮರ್ಜೆನ್ಸಿ”ಯ ದಿನಗಳಿಗೆ ಕಾರಣವಾಯಿತು. (ಆದರೆ ಕರ್ನಾಟಕದ ಕೆಲವು ಬುದ್ಧಿಜೀವಿಗಳಿಗೆ ಈಗಲೂ ಕಾಂಗ್ರೆಸ್ಸ್ ಪ್ರಜಾಪ್ರಭುತ್ವದ ರಕ್ಷಕನಂತೆ,”ಬತ್ತಲಾರದ ಗಂಗೆ” ಕಾಣುತ್ತದೆ…! ) ಇಂದಿರಾ ಹಂತಕರ ಗುಂಡಿಗೆ ಬಲಿಯಾದ ನಂತರ ಕಾಂಗ್ರೆಸ್ಸ್ ರೈಲಿನ ಬೋಗಿಗೆ ’ರಾಜೀವ್’ ಜೋಡಣೆಯಾದರು.
ಮತ್ತಷ್ಟು ಓದು »

31
ಜುಲೈ

ಅವಮಾನಿಸಲು ಕರೆಸಿದವರು ಬಿರುದುಕೊಟ್ಟು ಕಳುಹಿಸಿದರು

– ಸಂತೋಷ್ ತಮ್ಮಯ್ಯ

Milkha Singh೧೯೪೭. ಹಳೆಯ ದೆಹಲಿಯ ಪುರಾನಾ ಕಿಲಾ. ದೇಶಕ್ಕೆ ಸ್ವಾತಂತ್ರ್ಯ ಬಂದು ಅತ್ತ ಲಾಲ್ ಕಿಲಾದಲ್ಲಿ ತಿರಂಗಾ ಹಾರಿ ಜನರು ಕುಣಿಯುತ್ತಿದ್ದರೆ  ಪುರಾನಾ ಕಿಲಾಕ್ಕೆ ಆ ಭಾಗ್ಯವಿರಲಿಲ್ಲ. ಏಕೆಂದರೆ ಅದೇ ಹೊತ್ತಿಗೆ ದೇಶವೂ ತುಂಡಾಗಿ, ಪಾಕಿಸ್ಥಾನದಿಂದ ರಾಶಿರಾಶಿ ಹೆಣಗಳೂ , ಹಿಂಡುಹಿಂಡಾಗಿ ನಿರ್ವಸಿತರೂ ದಿಕ್ಕಿಲ್ಲದೆ ಬರುತ್ತಿದ್ದರು. ಆಗ ಅವರಿಗೆಲ್ಲಾ ತಾತ್ಕಾಲಿಕ ನೆಲೆಯನ್ನು ಕೊಟ್ಟಿದ್ದು ಈ ಪುರಾನಾ ಕಿಲಾ. ಹಳೆಯ ಕೋಟೆ. ಧ್ವಜ ಹಾರದ ಕೋಟೆ. ಹಾರಿಸಿದರೂ ಯಾರೂ ಸಂತೋಷ ಪಡದಿರುವಂಥ ಕೋಟೆ. ದೂರದ ಮುಲ್ತಾನ್, ಸಿಂಧ್, ಪಂಜಾಬ್‌ಗಳಿಂದ ಬಂದವರೆಲ್ಲಾ ಅಲ್ಲಿ ನೆರೆದು ಬೇರೆಯೇ ಆದ ಒಂದು ಭಾರತ ಅಲ್ಲಿ ನಿರ್ಮಾಣವಾಗಿತ್ತು. ಪುನರ್ವಸತಿ ಆಗುವವರೆಗೆ ಅವರಿಗೆಲ್ಲಾ ಅದೇ ಮನೆ. ಅದೇ ನೆಲೆ. ಅಂಥ ಒಂದು ದಿನ ಸಂಘಟನೆಯೊಂದು ನಿರ್ವಸಿತರಿಗೆ ಆಹಾರದ ಪೊಟ್ಟಣಗಳನ್ನು ವಿತರಣೆ ಮಾಡುತ್ತಿತ್ತು. ಅಲ್ಲಿ ಹನ್ನೆರಡು ವರ್ಷದ ಬಾಲಕ ಜನರ ನಡುವೆ ನುಸುಳುತ್ತಿದ್ದ. ದೊಡ್ಡ ಕೈಗಳ ಮಧ್ಯೆ ಸಣ್ಣ ಕೈಗೆ ಪೊಟ್ಟಣಗಳು ಎಟುಕುತ್ತಿರಲಿಲ್ಲ. ದೊಡ್ಡ ಕೈಗಳು ಸಂತ್ರಪ್ತವಾದ ಮೇಲೆ ಹಸಿದಿದ್ದ ಆ ಬಾಲಕನಿಗೂ ಆಹಾರದ ಪೊಟ್ಟಣ ಸಿಕ್ಕಿತ್ತು.

ಆ ಬಾಲಕ ಮುಂದೆ ಫ್ಲೈಯಿಂಗ್ ಸಿಕ್ಖ್ ಎಂದೇ ಹೆಸರಾದ ಖ್ಯಾತ ಅಥ್ಲೆಟ್ ಮಿಲ್ಖಾ ಸಿಂಗ್. ಪುರಾನಾ ಕಿಲಾದಲ್ಲಿ ಆಹಾರದ ಪೊಟ್ಟಣವನ್ನು ವಿತರಿಸಿದ ಆ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಂದರೆ ಆರೆಸ್ಸೆಸ್ಸ್. ಆ ಬಾಲಕ ಫ್ಲೈಯಿಂಗ್ ಸಿಕ್ಖ್ ಆಗುವಲ್ಲಿ ಆ ಆಹಾರ ಪೊಟ್ಟಣದ ಪಾತ್ರವೂ ಇದೆ. ಯಾರೂ ಹೇಳದಿದ್ದರೂ, ಯಾರೂ ಬರೆಯದಿದ್ದರೂ, ಯಾರೂ ತೋರಿಸದಿದ್ದರೂ ಅದರ ಪಾತ್ರವನ್ನು, ಅಂದಿನ ಸತ್ಯವನ್ನು ಅಲ್ಲಗೆಳೆಯಲಾಗದು. ದೇಶವಿಭಜನೆಯ ಮಹಾದುರಂತದ ಒಂದು ಉಳಿಕೆ, ಒಂದು ಚಿಹ್ನೆ, ಒಂದು ಜೀವಂತ ಸ್ಮಾರಕವಾದವರು ಸರ್ದಾರ್ ಮಿಲ್ಖಾ ಸಿಂಗ್. ದೇಶ ವಿಭಜನೆಯ ಹೊತ್ತಲ್ಲಿ ಪಾಕಿಸ್ಥಾನದಿಂದ ಓಡಿ ಭಾರತಕ್ಕೆ ಬಂದವರಿಗೆಲ್ಲಾ ಲಾಲ್ ಕೃಷ್ಣ ಅಧ್ವಾನಿ, ಸರ್ದಾರ್ ಮನಮೋಹನ ಸಿಂಗರಾಗುವ ಅದೃಷ್ಟವಿರಲಿಲ್ಲ. ಅಂಥವರಲ್ಲಿ ಮಿಲ್ಖಾ ಸಿಂಗ್‌ರಂಥವರೇ ಹೆಚ್ಚಿದ್ದರೆಂಬುದು ಇತಿಹಾಸದ ವಾಸ್ತವ. ಅದು ತಿಳಿಯುವುದು ಮಿಲ್ಖಾ ಸಿಂಗನ The Race of my life ನಂಥ ಆತ್ಮ ಕಥೆಗಳಿಂದ.

ಮತ್ತಷ್ಟು ಓದು »

5
ಜೂನ್

ಚೀನಿಗಳೊಂದಿಗಿನ ಯುದ್ಧ ಸೈನಿಕ ಕಾರ್ಯಾಚರಣೆಯೇ ಆಗಬೇಕಿಲ್ಲ

– ರಾಕೇಶ್ ಶೆಟ್ಟಿ

chini yuddhaಮೂರುವರೆ ವರ್ಷಗಳ ಹಿಂದಿನ ಮಾತು.ಬಹುಷಃ ೨೦೦೯ರ ನವೆಂಬರ್ ತಿಂಗಳಿರಬಹುದು.ಪ್ರಧಾನಿ ಮ(ಮೌ?)ನಮೋಹನ್ ಸಿಂಗ್ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವ ಕಾರ್ಯಕ್ರಮವಿತ್ತು.ಅದನ್ನು ಚೀನಾ ಖಡಕ್ ಆಗಿ ವಿರೋಧಿಸಿ, ’ನೀವು ಭಾರತೀಯರು ೧೯೬೨ ರ ಅನುಭವವನ್ನ ಮರೆತಿದ್ದಿರ!’ ಅಂತ ಬಹಿರಂಗವಾಗೇ ಹೇಳುವ ದಾರ್ಷ್ಟ್ಯ ತೋರಿತ್ತು.ಅಂದು ಅದು ಕ್ಯಾತೆ ತೆಗೆದಿದ್ದು ’ತವಾಂಗ್’ ನ ಕುರಿತಾಗಿ.

ಚೀನಿಗಳ ಬೆದರಿಕೆ ಬಗ್ಗೆ ಮಾತಡುವುದಕ್ಕಿಂತ ಮೊದಲು, ಏನಿದು ‘ತವಾಂಗ್’ ಅದಕ್ಕಾಗಿ ಯಾಕಿಷ್ಟು ಕಿತ್ತಾಟ? ಇದು ಯಾರಿಗೆ ಸೇರಿದ್ದು? ಭಾರತೀಯರಿಗೋ? ಚೀನಿಗಳಿಗೋ? ಈ ಮೊದಲು ಇದು ಯಾರಿಗೆ ಸೇರಿತ್ತು? ಅಂತ ನೋಡ ಹೊರಟರೆ, ಐತಿಹಾಸಿಕಾವಾಗಿ ಅಂದರೆ ೧೯೧೪ರಲ್ಲಿ ಬ್ರಿಟಿಷರು ಮೆಕ್-ಮಹೂನ್  ರೇಖೆಯನ್ನ ಗುರುತಿಸುವವರೆಗೂ ಅದು ಆಗಿನ ‘ಟಿಬೆಟ್’ ಗೆ ಸೇರಿತ್ತು. ೧೯೧೪ರಲ್ಲಿ ತವಾಂಗ್ ಅನ್ನು ೧೩ನೆ ಲಾಮ ಭಾರತಕ್ಕೆ ಬಿಟ್ಟು ಕೊಟ್ಟರು.ಆ ನಂತರ ಬಂದ ೧೪ನೆ ಅಂದರೆ ಈಗಿನ ‘ದಲೈ ಲಾಮ’ ಕೂಡ ತವಾಂಗ್ ಅನ್ನು ಭಾರತದ ಅಂಗವೆಂದೇ ಮಾನ್ಯ ಮಾಡಿದರು.

ಆದರೆ ೧೯೫೦ ರ ದಶಕದಲ್ಲಿ ಚೀನಿಗಳು ‘ಟಿಬೆಟ್’ ಅನ್ನು ಆಕ್ರಮಿಸಿಕೊಂಡರಲ್ಲ. ಈಗ ಅವರು ಹೇಳುವುದು , ‘ಒಂದು ಕಾಲದಲ್ಲಿ ತವಾಂಗ್ ಟಿಬೆಟ್ಗೆ ಸೇರಿತ್ತು, ಈಗ ಟಿಬೆಟ್ ನಮಗೆ ಸೇರಿದೆ, ಹಾಗಾಗಿ ಈ ತವಾಂಗ್ ನಮಗೆ ಸೇರಬೇಕು’ ಅಂತ (ಅದರ ಜೊತೆಗೆ ಇರಲಿ ಅಂತ ಇಡಿ ಅರುಣಾಚಲ ಪ್ರದೇಶವನ್ನು ಕೊಡಿ ಅನ್ನುತಿದ್ದಾರೆ).

ಮತ್ತಷ್ಟು ಓದು »

30
ಮೇ

ಸಾವರ್ಕರ್ ಮತ್ತು ನೆಹರೂ : ಹೋಲಿಸಬಾರದ ವ್ಯಕ್ತಿಗಳು

– ಚಕ್ರವರ್ತಿ ಸೂಲಿಬೆಲೆ

NS(ಮೇ ೨೮) ಸಾವರ್ಕರ್ ಜನ್ಮ ದಿನ. ಈ ಸಂಧರ್ಭದಲ್ಲಿ ಭಾರತದ ದಿಕ್ಕು ಬದಲಿಸಿದ ಇಬ್ಬರು ವ್ಯಕ್ತಿಗಳ ತುಲನಾತ್ಮಕ ಬರಹ ಇಲ್ಲಿದೆ. ಯಾರು ಯಾವ ಬಗೆಯಲ್ಲಿ ದಿಕ್ಕು ಬದಲಿಸಿದರು ಅಥವಾ ತಪ್ಪಿಸಿದರು ಎನ್ನುವುದು ಓದುಗರ ವಿವೇಚನೆಗೆ ಬಿಟ್ಟಿದ್ದು…

ಇತಿಹಾಸದ ಪುಟಗಳು ಅದೆಷ್ಟು ಬೇಗ ಹಿಂದೆ ಹಿಂದೆ ಹೋಗಿಬಿಡುತ್ತವಲ್ಲ! ಒಂದು ಪುಟವನ್ನು ತಿರುವಿಹಾಕಿದಂತೆ ಆ ಪುಟದಲ್ಲಿರುವ ಸಂಗತಿಗಳನ್ನೆಲ್ಲಾ ಮರೆತುಬಿಟ್ಟರೆ ಮುಗಿದೇಹೋಯಿತು. ನೆನಪಿಟ್ಟುಕೊಂಡು ಮುಂದಡಿ ಇಡುವವ ಮಾತ್ರ ವಿಜಯಿಯಾದಾನು. ನಮ್ಮ ಇತಿಹಾಸ ಒಂಥರಾ ಸೆಮಿಸ್ಟರ್ ಪದ್ಧತಿಯ ಶಿಕ್ಷಣದಂತಾಗಿಬಿಟ್ಟಿದೆ. ಈ ಸೆಮಿಸ್ಟರ್ ನಲ್ಲಿ ಕಲಿತದ್ದು ಮುಂದಿನ ಬಾರಿಗೆ ಬೇಕಾಗಲಾರದು. ಸದ್ಯಕ್ಕೆ ಸಾವರ್ಕರ್ ಭಾರತೀಯರ ಪಾಲಿಗೆ ಹಾಗೆಯೇ ಆಗಿಬಿಟ್ಟಿದ್ದಾರೆ. ಅವರು ಹುಟ್ಟಿ125 ವರ್ಷ ಕಳೆಯುವುದರೊಳಗಾಗಿ ಅವರು ಸಮಾಜದ ಕಣ್ಣಿಂದ ದೂರವೇ ಆಗಿಬಿಟ್ಟಿದ್ದಾರೆ. ಯಾವ ರಾಷ್ಟ್ರದ ಏಕತೆ- ಅಖಂಡತೆಗಾಗಿ; ಯಾವ ಪರಿಪೂರ್ಣ ಸಮಾಜದ ಪರಿಪೂರ್ಣ ಉನ್ನತಿಗಾಗಿ ತಮ್ಮ ಜೀವನವನ್ನೇ ತೇಯ್ದುಬಿಟ್ಟರೋ ಆ ವ್ಯಕ್ತಿ ಅದೇ ದೇಶದ ಸ್ಮೃತಿಯಿಂದ ದೂರವಾಗೋದು ದುರಂತವೇ ಸರಿ.

ಹಾಗೆ ನೋಡಿದರೆ ಕಳೆದ ಶತಕದ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬೌದ್ಧಿಕವಾಗಿ ಹಾಗೆಯೇ ಪ್ರತ್ಯಕ್ಷವಾಗಿ ಪಾಲ್ಗೊಂಡ ಅಪರೂಪದ ಸಾಹಸಿ ಸಾವರ್ಕರರೇ ಎಂಬುದರಲ್ಲಿ ಅನುಮಾನವಿಲ್ಲ. ಸಿಕ್ಕಸಿಕ್ಕಲ್ಲಿ ಗುಂಡು ಹೊಡೆದು ಅದನ್ನೇ ಕ್ರಾಂತಿ ಎನ್ನುತ್ತಿರಲಿಲ್ಲ ಸಾವರ್ಕರ್. ಅವರ ಪ್ರತಿಯೊಂದು ಕೆಲಸದ ಹಿಂದೆ ಬೆಟ್ಟದಷ್ಟು ಚಿಂತನೆ, ಫಲಿತಾಂಶದ ನಂತರದ ಪರಿಸ್ಥಿತಿಯ ಕುರಿತು ಮುಂದಾಲೋಚನೆ- ಎಲ್ಲವೂ ಇರುತ್ತಿತ್ತು. ಅವರು ಲೇಖನಿ ಹಿಡಿದರೆ ಆ ಕಾಲಘಟ್ಟದ ಮಹಾಮಹಿಮ ಲೆಖಕರನ್ನೂ ಮೀರಿಸುವಷ್ಟು ಪ್ರತಿಭಾವಂತ. ಪಿಸ್ತೂಲು ಹಿಡಿದರೆ, ಎದುರಾಳಿಗಳ ರಕ್ತವೇ ತಣ್ಣಗಾಗುವಷ್ಟು ಕೆಚ್ಚೆದೆ. ಮಾತಿಗೆ ನಿಂತರೆ ಮೈಯೆಲ್ಲ ಕಿವಿಯಾಗಿ ಕೇಳಬೇಕೆನ್ನಿಸುವ ಮಧುರ ದನಿ, ಅಸ್ಖಲಿತ ವಿಚಾರಗಳ ಧಾರಾಪ್ರವಾಹ. ಬಿಡಿ. ಅಂತಹ ವ್ಯಕ್ತಿ ಯುಗಕ್ಕೊಬ್ಬರೇ!

ಮತ್ತಷ್ಟು ಓದು »

22
ಜನ

ರಾಜರಿಲ್ಲದ ರಾಜ್ಯದಲ್ಲಿ ವಂಶಾಡಳಿತದ ಪೋಷಣೆ

-ಗೋಪಾಲ ಕೃಷ್ಣ

vamshadalitaರಾಜಪ್ರಭುತ್ವದ ನೆರಳು ಮಾಸುವ ಮುನ್ನವೇ, ಕುಟುಂಬ ರಾಜಕಾರಣ ತಲೆ ಎತ್ತುತ್ತಿದೆ. ಪ್ರಜಾಪ್ರಭುತ್ವದ ಹರೆಯದಲ್ಲೇ ಆಶಯಗಳು ಸತ್ತು ಬೀಳುತ್ತಿವೆ.  ಜನಸೇವೆಯೆಂಬ ಟೊಳ್ಳು ಕುದುರೆಗೆ ಹಣ, ಹೆಣ್ಣು, ಅಧಿಕಾರದ ಲೇಪನ ಹಚ್ಚಿ ಹಾದಿ ತಪ್ಪಿಸಲಾಗುತ್ತಿದೆ.  ದೇಶ ವಿಭಜನೆಯ ನಂತರ, ಧರ್ಮದ ಮೂಲಕ ವಿಭಜನೆ, ಇದೀಗ ಜಾತಿ ಜಾತಿಗಳ ನಡುವೆ ವಿಭಜಿಸಿ, ಸಾಮರಸ್ಯದ ಬದಲಿಗೆ ಸಂಘರ್ಷದ ಬೋಧನೆ ನಡೆಯುತ್ತಿದೆ.ಕಾಲು ಮುರಿದ ಕಾರ್ಯಾಂಗ,ಸವೆದು ಹೋದ ಶಾಸಕಾಂಗಗಳ ಮಧ್ಯೆ ಆಮ್ ಆದ್ಮಿ ಕಂಗಾಲಾಗಿದ್ದಾನೆ.

ಇಲ್ಲಿ ದೂರುವುದಾದರೂ ಯಾರನ್ನು? ಸಂತತಿ ರಾಜಕಾರಣದ ಉನ್ನತೀಕರಣಕ್ಕೆ ನೀರು-ಗೊಬ್ಬರ ಹಾಕಿ ಬೆಳೆಸುತ್ತಿರುವಾಗ ವಂಶಾಡಳಿತದ ಫಲ ದೊರೆಯದೆ ಮತ್ತಿನ್ನೇನು ಸಿಕ್ಕೀತು…..? ನಾಗರೀಕ, ಜ್ಞಾನಸಂಪನ್ನ ಸಮಾಜದಲ್ಲಿಯೇ ಜನತಂತ್ರ ವ್ಯವಸ್ಥೆಗೆ ಧಕ್ಕೆಯಾದರೆ, ಪ್ರಜಾಪ್ರಭುತ್ವಕ್ಕೆ ಉಳಿಗಾಲವುಂಟೇ?ಉದಾತ್ತ ಭಾರತ ಸಂಸ್ಕೃತಿಯನ್ನು ಬಿಟ್ಟು, ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋದ ಯುವ ಜನತೆಯಿಂದ ಸಮೃದ್ಧ ರಾಷ್ಟ್ರ ನಿರ್ಮಾಣವನ್ನು ಬಯಸಲಾದೀತೆ? ತಪ್ಪು-ಒಪ್ಪುಗಳಿಗೆ ನಮ್ಮ ಮನಸ್ಸುಗಳು ಒಗ್ಗೂಡದಿರುವಾಗ, ಚಾರಿತ್ರ್ಯವಂತ ಸಮಾಜದ ನಿರೀಕ್ಷೆ ನಮ್ಮ ಭ್ರಮೆಯಲ್ಲವೇ?
ಮತ್ತಷ್ಟು ಓದು »