ವಿಷಯದ ವಿವರಗಳಿಗೆ ದಾಟಿರಿ

Posts tagged ‘ಪಾಕಿಸ್ತಾನ’

15
ಡಿಸೆ

ಮೋದಿಯ ಅಂತರಂಗಲ್ಲಿರುವ ಮಾಧವ; ಮಹಾಭಾರತದಲ್ಲಿ ಭೀಷ್ಮ ಮಾಡಿದ ತಪ್ಪನ್ನು ಈ ಭಾರತದಲ್ಲಿ ಮೋದಿಯಿಂದ ಆಗಲು ಬಿಡಲಿಲ್ಲ!


– ಅಜಿತ್ ಶೆಟ್ಟಿ ಹೆರಂಜೆ

ಕುರುಕ್ಷೇತ್ರದಲ್ಲಿ ಭೀಷ್ಮ ಪಿತಾಮಹರು ಕೌರವರ ಪಕ್ಷದಿಂದ ಯುದ್ಧ ಮಾಡುತ್ತಾರೆ. ಕಾರಣ ಅವರು ತೆಗೆದುಕೊಂಡ ಭೀಷಣ ಪ್ರತಿಜ್ಞೆ. ಭೀಷ್ಮರಿಗೂ ಇದರ ಬಗ್ಗೆ ಹೆಮ್ಮೆ ಇತ್ತು. ಆದರೆ ಅವರಿಗೆ ತಮ್ಮ ಬಗ್ಗೆ ಇದ್ದ ಈ ಅಭಿಮಾನದ ಭ್ರಮನಿರಸನವಾಗಿದ್ದು ಧರ್ಮಕ್ಷೇತ್ರ ಕುರುಕ್ಷೇತ್ರದಲ್ಲಿ. ಭೀಷ್ಮರು ಮಹಾಭಾರತ ಕಾಲದಲ್ಲಿ ಅತ್ಯಂತ ಪರಾಕ್ರಮಿ ಮತ್ತು ಶಕ್ತಿಶಾಲಿ ಯೋಧ. ಅವರನ್ನು ಸೋಲಿಸುವ ಒಬ್ಬನೇ ಒಬ್ಬ ಯೋಧ ಇಡೀ ಆರ್ಯವರ್ತದಲ್ಲಿ ಇರಲಿಲ್ಲ. ಆ ಕಾರಣಕ್ಕೆ ಹಸ್ತಿನಾವತಿಯ ಗೃಹ ಕಲಹದ ನಡುವೆಯೋ ಬೇರೆ ರಾಜರು ಹಸ್ತಿನಾವತಿಯ ಮೇಲೆ ಆಕ್ರಮಣ ಮಾಡಲಿಲ್ಲ. ಹದಿನೆಂಟು ದಿನದ ಮಹಾಭಾರತದ ಯುದ್ಧದಲ್ಲಿ 10 ದಿನ ಭೀಷ್ಮರು ಯುದ್ಧ ಮಾಡುತ್ತಾರೆ. ಆ ಹತ್ತೂ ದಿನ ಅವರು ಪಾಂಡವರ ಸೈನ್ಯವನ್ನು ಧ್ವಂಸ ಮಾಡುತ್ತಾರೆ. ಇನ್ನು ಇವರು ಬದುಕುಳಿದರೆ ಪಾಂಡವರ ಜಯ ಅಸಾಧ್ಯ ಎಂದು ಅರಿತ ಕೃಷ್ಣ, ಭೀಷ್ಮರಿಗೆ ಒಂದೋ ಯುದ್ಧಭೂಮಿಯ ತ್ಯಾಗ ಮಾಡಿ, ಇಲ್ಲಾ ನಾನೇ ನಿಮ್ಮನ್ನು ವಧಿಸುತ್ತೇನೆ ಎಂದವನೇ ಚಕ್ರಧಾರಿಯಾಗಿ ರಣರಂಗದಲ್ಲಿ ಶಸ್ತ್ರ ಹಿಡಿಯುವುದಿಲ್ಲ ಎನ್ನುವ ತನ್ನ ಪ್ರತಿಜ್ಞೆಯನ್ನ ತಾನೇ ಮುರಿಯುತ್ತಾನೆ. ಆಗ ಅರ್ಜುನ, ಮಾಧವ ಲೋಕ ನಿನ್ನನ್ನು ವಚನ ಭ್ರಷ್ಟ ಎಂದು ಆಡಿಕೊಳ್ಳುತ್ತದೆ ಅಂದಾಗ, ಕೃಷ್ಣ “ನನಗೆ ಲೋಕ ಹಿತ ಮುಖ್ಯವೇ ಹೊರತು ನನ್ನ ವೈಯಕ್ತಿಕ ಪ್ರತಿಷ್ಠೆಗಳಲ್ಲ. ಒಂದೋ ನೀನು ಭೀಷ್ಮರನ್ನು ಕೊಲ್ಲು, ಇಲ್ಲವಾದರೆ ನಾನು ಕೊಲ್ಲುತ್ತೇನೆ” ಎನ್ನುತ್ತಾನೆ. ಆಗ ಕೃಷ್ಣ ಮತ್ತು ಭೀಷ್ಮರಲ್ಲಿ ಒಂದಷ್ಟು ಧರ್ಮಸೂಕ್ಷ್ಮಗಳ ಚರ್ಚೆ ನಡೆಯುತ್ತದೆ. “ನಾನು ಕೊಟ್ಟ ವಚನವನ್ನು ಸದಾ ನಿಭಾಯಿಸುತ್ತಲೇ ಬಂದೆ. ಎಷ್ಟೇ ಕಷ್ಟವಾದರೂ ನಾನು ನನ್ನ ಪ್ರತಿಜ್ಞೆಯ ಭಂಗ ಮಾಡಲ್ಲಿಲ್ಲ. ಆ ಮೂಲಕ ಸದಾ ಧರ್ಮದ ಮಾರ್ಗದಲ್ಲಿ ನನ್ನ ಜೀವನದ ಉದ್ದಕ್ಕೂ ನಡೆದೆ” ಎನ್ನುತ್ತಾರೆ ಭೀಷ್ಮರು. ಆಗ ಕೃಷ್ಣ “ದೃತರಾಷ್ಟ್ರನಂತಹ ಒಬ್ಬ ಅಪಾತ್ರ ಹಸ್ತಿನಾವತಿಯ ಸಿಂಹಾಸನ ಏರುವುದರಿಂದ ಹಿಡಿದು ಇವತ್ತಿನ ಈ ಭಾರತ ಯುದ್ಧದ ಎಲ್ಲಾ ಅಧರ್ಮಕ್ಕೆ ನಿನ್ನ ಪ್ರತಿಜ್ಞೆಯೇ ಕಾರಣ. ಭಗವಂತ ನಿನ್ನ ಸರ್ವಶಕ್ತನನ್ನಾಗಿ ಮಾಡಿದ್ದ, ನಿನ್ನಲ್ಲಿ ಧರ್ಮ ಜ್ಞಾನ ಇತ್ತು, ಬಾಹುಬಲ ಇತ್ತು. ಈ ಮೂಲಕ ನೀನು ನಿನ್ನ ಪ್ರಜಾ ವರ್ಗದ ಹಿತವನ್ನು ಕಾಪಾಡಬೇಕಿತ್ತು. ಆದರೆ ನಿನ್ನ ಜೀವನದ ಉದ್ದಕ್ಕೂ ಆದ ಅಧರ್ಮಗಳನ್ನು ನೋಡಿ ಅದನ್ನ ತಡೆಯುವ ಸಾಮರ್ಥ್ಯವಿದ್ದರೂ ನಿನ್ನ ಪ್ರತಿಜ್ಞೆಗೆ ಕಟ್ಟುಬಿದ್ದು ಎಲ್ಲವನ್ನೂ ಆಗಲು ಬಿಟ್ಟೆ. ಲೋಕ ಹಿತಕ್ಕೆ ಉಪಯೋಗವಾಗದ ನಿನ್ನ ಸಾಮರ್ಥ್ಯ ಇದ್ದರೆಷ್ಟು ಬಿಟ್ಟರೆಷ್ಟು? ಇದು ನೀನು ಭಗವಂತನಿಗೂ ಮಾಡುವ ಅವಮಾನವಲ್ಲವೇ? ನೀನು ಸದಾ ನಿನ್ನ ಪ್ರತಿಜ್ಞೆಗಾಗಿ ಬದುಕಿದೆಯೇ ಹೊರತು,ಸಮಾಜಕ್ಕಾಗಿ ನಿನ್ನ ಸ್ವಜನರ ಕಲ್ಯಾಣಕ್ಕಾಗಿ ಬದುಕಲೇ ಇಲ್ಲ. ಅದರಿಂದ ಆದ ಅನಾಹುತಗಳು ಅನರ್ಥಗಳೆ ಹೆಚ್ಚು. ಭೀಮನಿಗೆ ವಿಷಪ್ರಾಶನ ಆದಾಗ, ಪಾಂಡವರಿಗೆ ಹಸ್ತಿನಾವತಿಯ ಅಧಿಕಾರ ಸಿಗದಿದ್ದಾಗ, ಅರಗಿನ ಮನೆಯಲ್ಲಿ ಪಾಂಡವರನ್ನು ಸುಡುವ ಯೋಜನೆ ಆದಾಗ, ಮೋಸದ ದ್ಯೂತ ಆಗುವಾಗ, ದ್ರೌಪದಿ ವಸ್ತ್ರಾಪಹರಣ ಆಗುವಾಗ, ಈಗ ಧರ್ಮ ಸ್ಥಾಪನೆಯ ಕಾರಣಕ್ಕೆ ಭಾರತ ಯುದ್ಧ ಆಗುತ್ತಿರುವಾಗಲೂ ನಿನ್ನ ಸಾಮರ್ಥ್ಯವನ್ನು ನಿನ್ನ ಪ್ರತಿಜ್ಞೆಯನ್ನು ಕಾಪಾಡಲು ವಿನಿಯೋಗ ಮಾಡುತ್ತಿರುವೆಯೇ ಹೊರತು ಧರ್ಮದ ರಕ್ಷಣೆಗೆ ನೀನು ಏನೂ ಮಾಡುತ್ತಿಲ್ಲ. ನಿಯತಿ ಕಾರ್ಯಕ್ಕೆ ಅಡ್ಡಿಯಾಗಿ ನಿಂತಿದ್ದೆ. ನನಗೆ ಧರ್ಮ ಸ್ಥಾಪನೆ ಮುಖ್ಯವೇ ಹೊರತು ನನ್ನ ಸ್ವಪ್ರತಿಷ್ಟೆ ಅಲ್ಲ. ಲೋಕ ಕಲ್ಯಾಣಕ್ಕೆ ಇಂತಹ ಸಾವಿರ ಅಪರಾಧಗಳನ್ನು ಬೇಕಿದ್ದರೆ ಸಹಿಸಿಕೊಳ್ಳಬಲ್ಲೆ. ನಾವು ಯಾವುದೋ ಕಾಲಘಟ್ಟದಲ್ಲಿ ಆ ಪರಿಸ್ಥಿಗೆ ಅನುಗುಣವಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿರಬಹುದು. ಆದರೆ ಬದಲಾದ ಸನ್ನಿವೇಶದಲ್ಲಿ ಅದೇ ನಿರ್ಣಯಗಳು ಸಮಾಜದ ಹಿತಕ್ಕೆ ಧಕ್ಕೆ ಆಗುವಂತಿದ್ದರೆ ಅಥವಾ ಅದನ್ನೇ ಕಾರಣ ಮಾಡಿ ದುಷ್ಟರು ಸಮಾಜದಲ್ಲಿ ಅಧರ್ಮ ಮಾಡುತ್ತಿದ್ದಾರೆ ಅಂದಾಗ ಸ್ವಪ್ರತಿಷ್ಟೆಯನ್ನು ಬಿಟ್ಟು ಸಮಾಜದ ಹಿತಕ್ಕಾಗಿ ಅಂತಹ ನಿರ್ಣಯಗಳ ಕೈಬಿಡಬೇಕು. ಅದೇ ಧರ್ಮ!” ಎಂದ ಕೃಷ್ಣ, ಜೀವನಪೂರ್ತಿ ತನ್ನ ಪ್ರತಿಜ್ಞೆಗಾಗಿ ಬದುಕಿದ ಭಿಷ್ಮರನ್ನು ವಧಿಸಲು, ಆ ಮೂಲಕ ಧರ್ಮ ಸ್ಥಾಪನೆ ಮಾಡಲು ತಾನು ಮಾಡಿದ ಪ್ರತಿಜ್ಜೆಯನ್ನೇ ಮುರಿಯಲು ಮುಂದಾಗುತ್ತಾನೆ.

ಪ್ರಧಾನಿ ಮೋದಿ ನವೆಂಬರ್‌ 19ರ ಬೆಳಿಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ ತಾವು ರೈತರ ಹಿತಕಾಯುವ ಉದ್ದೇಶದಿಂದ ಒಂದು ವರ್ಷ ಮೂರು ತಿಂಗಳ ಹಿಂದೆ ಜಾರಿಗೆ ತಂದಿದ್ದ ತ್ರಿವಳಿ ಕೃಷಿ ಸುಧಾರಣಾ ಮಸೂದೆಯನ್ನು ವಾಪಾಸು ಪಡೆಯುವುದಾಗಿ ಘೊಷಣೆ ಮಾಡಿದರು. ಈ ಮೂರು ಕೃಷಿ ಸುಧಾರಾಣಾ ಮಸೂದೆಗಳು ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯಂತ ಕ್ರಾಂತಿಕಾರಿ ಸುಧಾರಣೆಗಳಾಗಿದ್ದವು. ಕರ್ನಾಟಕದ ರೈತ ಹೋರಾಟದ ಪಿತಾಮಹಾ ಎಂದೇ ಖ್ಯಾತಿಯಾಗಿದ್ದ ಪ್ರೊ.ನಂಜುಂಡ ಸ್ವಾಮಿಯಿಂದ ಹಿಡಿದು ಉತ್ತರ ಭಾರತದಲ್ಲಿ ರೈತ ಕ್ರಾಂತಿಯ ಹರಿಕಾರ ಚೌಧರಿ ಚರಣ್‌ಸಿಂಗ್ ಆದಿಯಾಗಿ ದಶಕಗಳಿಂದ ಇಟ್ಟ ಬೇಡಿಕೆಗಳು ಅಕ್ಷರಶಃ ಈ ಕಾಯಿದೆಯ ಮುಖಾಂತರ ಅನುಷ್ಠಾನಕ್ಕೆ ಬಂದವು. ಕೇವಲ ದೇಶದ ರೈತ ಹೋರಾಟಗಳು ಮಾತ್ರವಲ್ಲ, ಭಾರತದ ಎಲ್ಲಾ ರಾಜಕೀಯ ಪಕ್ಷಗಳು ಅವರುಗಳು ವಿರೋಧ ಪಕ್ಷದಲ್ಲಿ ಇದ್ದಾಗ ರೈತರ ಇದೇ ಬೇಡಿಕೆಗಳನ್ನು ಮುಂದಿಟ್ಟು ಆಳುವ ಸರಕಾರಗಳ ವಿರುದ್ಧ ಪ್ರತಿಭಟನೆಗೂ ಕೂತಿದ್ದವು. ಅದೆಲ್ಲವನ್ನು ಅಕ್ಷರಶಃ ಅನುಷ್ಟಾನಕ್ಕೆ ತರುವ ಕಾಯಿದೆಯನ್ನು ಮೋದಿ ಸರಕಾರ ಕಳೆದ ವರ್ಷ‌ ಸೆಪ್ಟಂಬರ್‌ ತಿಂಗಳಿನಲ್ಲಿ ತಂದಿತು. ಮಧ್ಯವರ್ತಿಗಳ ಕಪಿಮುಷ್ಠಿಯಿಂದ ರೈತರನ್ನು ಮುಕ್ತಗೊಳಿಸಿ, ರೈತರು ತಾವು ಉತ್ಪಾದಿಸಿದ ಬೆಳೆಗೆ ತಾವೇ ಬೆಲೆ ನಿಗದಿಪಡಿಸಿ ದೇಶದ ಯಾವುದೇ ಭಾಗದಲ್ಲಿ ಮಾರಾಟ ಮಾಡುವ ಸ್ವಾತಂತ್ರ್ಯದ ಜೊತೆಗೆ ವಾಣಿಜ್ಯಕ್ಕೆ ಖಾಸಗೀ ಕಂಪೆನಿಗಳ ಜೊತೆ ಒಡಂಬಡಿಕೆ ಮಾಡಿಕೊಂಡು ಕಾನೂನಿನ ರಕ್ಷಣೆಯೊಂದಿಗೆ ಕೃಷಿ ಮಾಡುವ ಅವಕಾಶವನ್ನೂ ಈ ಕಾಯಿದೆ ರೈತರಿಗೆ ಕೊಟ್ಟಿತು. ದುರಂತ ಅಂದರೆ ಮೋದಿ ಕಳೆದ 7 ವರ್ಷಗಳಿದೆ ಕೇವಲ ವಿರೋಧಿಸುವ ಕಾರಣಕ್ಕೆ ವಿರೋಧ ಮಾಡುತ್ತಿದ್ದ ಎಲ್ಲಾ ವಿರೋಧ ಪಕ್ಷಗಳು ಹಿಂದೆ ತಾವೇ ಧರಣಿ ಕೂತು ಜಾರಿಯಾಗಲೇಬೇಕು ಎಂದ ಕಾನೂನು ಜಾರಿಗೆ ಬಂದಾಗ ಅದನ್ನ ಸ್ವಾಗತಿಸುವ ಬದಲು ವಿರೋಧಿಸಲು ಮುಂದಾದರು. ಕೇಂದ್ರ ಸರಕಾರ ಈ ರೈತ ಸಂಘಟನೆಗಳ ಜತೆಗೆ ಸುಮಾರು 12 ಸುತ್ತಿನ ಮಾತುಕತೆ ನಡೆಸಿದರೂ ಅವರು ತಮ್ಮ ವಿತಂಡವಾದದ ಪಟ್ಟನ್ನು ಸಡಿಸಲೇ ಇಲ್ಲ. ರೈತ ಮಸೂದೆ ಕಾಯಿದೆಯ ಯಾವ ಅಂಶದಲ್ಲಿ ನಿಮಗೆ ಸಮಸ್ಯೆ ಇದೆ ಚರ್ಚಿಸೋಣ ಎಂದರೆ ಅದಕ್ಕೂ ಅವರು ಸಿದ್ದರಿರಲಿಲ್ಲ.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದ ಮತ್ತು ಅದಕ್ಕೂ ಪೂರ್ವದ ಬ್ರಿಟಿಷ್‌ ಆಳ್ವಿಕೆಯ ಕಾಲದಲ್ಲಿ ಕೂಡ ಆಳುವ ಸರಕಾರಗಳು ಎಲ್ಲಾ ನಿಲುವುಗಳು ಬಹುತೇಕ ರೈತ ವಿರೋಧಿಗಳೇ ಆಗಿದ್ದವು. 2ನೇ ವಿಶ್ವ ಯುದ್ಧದ ಕಾಲದಲ್ಲಿ ಬ್ರಿಟಿಷ್‌ ಸರಕಾರ ತಂದ ಎಪಿಎಮ್‌ಸಿ ಕಾಯಿದೆ ಭಾರತದಲ್ಲಿ ಕೃತಕ ಅಹಾರ ಧಾನ್ಯಗಳ ಅಭಾವ ಸೃಷ್ಟಿ ಮಾಡಿತು. ಬಂಗಾಳದಲ್ಲಿ 40 ಲಕ್ಷಕ್ಕೂ ಹೆಚ್ಚು ಜನ ಹಸಿವಿನಿಂದ ಸತ್ತರು. ಅಲ್ಲಿಂದ ಪ್ರಾರಂಭವಾಗಿ 2020ರ ಕೃಷಿ ಸುಧಾರಣಾ ನೀತಿ ಬರುವ ತನಕ ಭಾರತದ ರೈತನ ಬದುಕು ಸುಧಾರಿಸುವ ಯಾವುದೇ ನೀತಿಗಳು ಜಾರಿಯಾಗಲೇ ಇಲ್ಲ. ಈ ಕಾರಣಕ್ಕೆ ರೈತರು ಸರಕಾರದ ವಿರುದ್ಧ ನಿರಂತರವಾಗಿ ಪ್ರತಿಭಟಿಸುತ್ತ ಬಂದ. ರೈತನ ಮನಸ್ಸಿನಲ್ಲಿ ಸರಕಾರಗಳು ರೈತವಿ ರೋಧಿಗಳು ಅನ್ನುವ ಭಾವನೆ ಅಚ್ಚೊತ್ತಿತು. ನಮ್ಮ ದೇಶದ ಎಡಪಂಥೀಯ ಪಕ್ಷಗಳಿಗೆ ಇಂತಹಾ ಮನಃಸ್ಥಿತಿಯ ರೈತ ಸಮುದಾಯಗಳನ್ನು ತಮ್ಮತ್ತ ಸೆಳೆದುಕೊಳ್ಳುವುದು ಕಷ್ಟವಾಗಲಿಲ್ಲ. ಇಂತವರ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ದೇಶದೊಳಗೆ ಹಲವಾರು ವಿಧ್ವಂಸಕ ಕೆಲಸಗಳನ್ನು ಮಾಡುತ್ತಲೇ ಬಂದರು. ಈ ದೇಶದಲ್ಲಿ ರೈತನನ್ನು ಅನ್ನದಾತ ಎಂದೇ ಕಾಣುತ್ತೇವೆ ಮತ್ತು ಸರಕಾರಗಳು ಇವರ ಹೋರಾಟ, ಪ್ರತಿಭಟನೆ ಎಲ್ಲದರ ಬಗ್ಗೆಯ ಹೆಚ್ಚು ಸಹಿಷ್ಣುಗಳಾಗಿರುತ್ತಿದ್ದವು. ರೈತರನ್ನು ಬಳಸಿಕೊಂಡು ಪ್ರತಿಭಟನೆ ಮಾಡಿದರೆ ಸರಕಾರಗಳು ನಮ್ಮನ್ನು ಏನೂ ಮಾಡಲಾರವು. ಒಂದೊಮ್ಮೆ ಅವುಗಳನ್ನು ಬಲಪೂರ್ವವಾಗಿ ಹತ್ತಿಕ್ಕಲು ಸರಕಾರ ಮುಂದಾದರೆ ಅಂತಹಾ ಘಟನೆಗಳನ್ನು ಸಮಾಜ ಯಾವತ್ತೂ ಸಹಿಸಿಕೊಂಡಿರಲಿಲ್ಲ ಅನ್ನುವುದರ ಅರಿವು ಅವರಿಗಿತ್ತು. ಕರ್ನಾಟಕದಲ್ಲಿ 1980ರ ನರಗುಂದ-ನವಲಗುಂದದಲ್ಲಿ ಆದ ರೈತ ಬಂಡಾಯದಲ್ಲಿ ಅಂದಿನ ಸರಕಾರ ತಾಳ್ಮೆ ಕಳೆದುಕೊಂಡ ಮಾಡಿದ ಗೋಲಿಬಾರ್‌ ಮುಂದಿನ ದಿನಗಳಲ್ಲಿ ಗುಂಡೂರಾವ್‌ ಅವರ ಸರಕಾರವನ್ನೇ ಬಲಿತೆಗೆದುಕೊಂಡಿತ್ತು. ಇದೆಲ್ಲದರಿಂದ ಹುಟ್ಟಿದ ಅನೇಕ ರೈತ ಸಂಘಟನೆಗಳು, ಒಂದಷ್ಟು ನಾಯಕರು, ಉದಾಹರಣೆಗೆ ಪ್ರೊ. ನಂಜುಂಡ್‌ಸ್ವಾಮಿ, ಚೌಧರಿ ಚರಣ ಸಿಂಗ್‌, ಟಿಕಾಯತ್‌ ಅಂತವರು ರೈತರ ನೈಜ ಕಾಳಜಿಯನ್ನು ತೋರಿದರಾದರೂ, ಅವರ ನಂತರ ಬಂದವರೆಲ್ಲರೂ ರೈತ ಹೋರಾಟದ ನೆಪದಲ್ಲಿ ತಮ್ಮ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರಗಳಿಗೆ ರೈತ ಹೋರಾಟಗಳನ್ನು ಬಳಸತೊಡಗಿದರು. ರೈತರೂ ತಮಗೆ ಅರಿವಿಲ್ಲದೇ ಈ ವೀಷ ವರ್ತುಲದಲ್ಲಿ ಸಿಕ್ಕಿಕೊಂಡರು. ಇಂತಹಾ ರಾಜಕೀಯ ಸ್ವಾರ್ಥ ಭರಿತ ಹೋರಾಟದ ಉಗ್ರ ಸ್ವರೂಪವೇ ದೆಹಲಿಯಲ್ಲಿ ರಾಕೇಶ್‌ ಸಿಂಗ್‌ ಟಿಕಾಯತ್‌ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆಯುತ್ತಿರುವುದು.

ಕಾಯಿದೆ ಜಾರಿಯಾದಾಗಿನಿಂದ ಇಲ್ಲಿಯ ತನಕ ಮಧ್ಯವರ್ತಿಗಳೂ ಒಂದಿಷ್ಟು ಅಮಾಯಕ ರೈತರನ್ನು ಮುಂದಿಟ್ಟು ದೆಹಲಿ ಪರಿಸರದಲ್ಲಿ ಈ ಕಾಯಿದೆಯನ್ನು, ರೈತ ವಿರೋಧಿ ಪ್ರತಿಭಟನೆಯನ್ನಾಗಿ ಮಾಡಲು ಪ್ರಾರಂಭಿದರು. ಹೀಗೆ ಪ್ರಾರಂಭವಾದ ಪ್ರತಿಭಟನೆ ಆರಂಭದಲ್ಲಿ ಇಂದೊದು ಪ್ರತಿಕ್ರಿಯೆ ಅಷ್ಟೇ ಎಂದು ಭಾವಿಸಲಾಗಿತ್ತು. ನಂತರದ ದಿನಗಳಲ್ಲಿ ಆದ ಬೆಳವಣಿಗೆಯಿಂದ ಇದು ದೆಹಲಿಯ CAA ಪ್ರತಿಭಟನೆಯ ಮುಂದುವರಿದ ಭಾಗವಾಗಿದ್ದು. ಇದು ಸಂಪೂರ್ಣ ಪೂರ್ವಯೋಜಿತ ಮತ್ತು ಪೂರ್ವ ನಿರ್ಧಾರಿತ ಅನ್ನುವುದು ಅರಿಯಲು ಬಹಳ ಕಾಲ ಬೇಕಾಗಿರಲಿಲ್ಲ. ದೇಶದ ಹಿತ ದೃಷ್ಟಿಯಿಂದ ಮೋದಿ ಸರಕಾರ ಕೈಗೊಂಡ ಅನೇಕ ನಿರ್ಧಾರಗಳು ಇಷ್ಟು ದಿನ ಭಾರತದ ಆಂತರಿಕ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದ ಅನೇಕ ಸಂಘಟನೆಗಳು ಎನ್‌ಜಿಓಗಳ ಪ್ರಭಾವಗಳನ್ನು ಹತ್ತಿಕ್ಕಿತ್ತು. ವಿದೇಶಗಳಿಂದ ಇಂತಹ ಸಂಘಟನೆಗಳಿಗೆ ಲೆಕ್ಕವಿಲ್ಲದಷ್ಟು ಬರುತ್ತಿದ್ದ ಕೋಟ್ಯಂತರ ರುಪಾಯಿ ವಿದೇಶಿ ಅನುಧಾನಗಳನ್ನು ಮೋದಿಯರು 2020ರಲ್ಲಿ ತಂದ FCRA ತಿದ್ದುಪಡಿ ಕಾಯಿದೆಯಿಂದಾಗಿ ಸರಕಾರಿ ನಿಯಂತ್ರಣಕ್ಕೆ ಬಂದಿತು. ಇದೆಲ್ಲದರ ಜೊತೆಗೆ ಜಾಗತಿಕ ರಾಜಕಾರಣದಲ್ಲಿ ಮೋದಿಯವರ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಯಾವ ವ್ಯಕ್ತಿಗೆ ಅಮೇರಿಕಾ ವಿಸಾ ಕೊಡಬಾರದು ಎಂದು ಅಮೇರಿಕಾದ ಸರಕಾರದ ಮಂದೆ ಮಂಡಿಯೂರಿ ಗೋಗರೆದರೂ ಅದೇ ವ್ಯಕ್ತಿ ಈಗ ಅವರ ಕಣ್ಣಮುಂದೆ ವಿಶ್ವದ ಅತ್ಯಂತ ಪ್ರಭಾವಿ ನಾಯಕನಾಗಿ ಬೆಳದಿದ್ದ. ಹೀಗೆ ದೇದೀಪ್ಯಮಾನವಾಗಿ ಬೆಳಗುತ್ತಿದ್ದ ಮೋದಿ ಮತ್ತು ಭಾರತದ ವರ್ಚಸ್ಸಿಗೆ ಹೇಗಾದರೂ ಮಾಡಿ ಧಕ್ಕೆ ತರಬೇಕಾಗಿತ್ತು. ಭಾರತದ 5G ಇಂಟರ್ನೆಟ್‌ ಸಂಪರ್ಕದ ಗುತ್ತಿಗೆ ಚೀನಾದ ಹ್ವುವೆ ಕಂಪೆನಿಯ ಬದಲು ಭಾರತದ ಜಿಯೋದ ಪಾಲಾಗಿತ್ತು. ಇದರಿಂದ ಚೀನಾಕ್ಕೆ ಜಾಗತಿಕ ಮಟ್ಟದಲ್ಲಿ ಅವಮಾನದ ಜೊತೆಗೆ ಭಾರಿ ಆರ್ಥಿಕ ನಷ್ಟವೂ ಆಗಿತ್ತು. ಅದಕ್ಕೆ ಮೋದಿಯನ್ನು ಹಣಿಯಲು ರೈತ ಕಾಯಿದೆಯನ್ನು ಬಳಸಿಕೊಂಡರು. ಇವರ ಸ್ವಾರ್ಥ ರಾಜಕಾರಣಕ್ಕೆ ಅಮಾಯಕ ರೈತರು ದಾಳವೂ ಆದರು, ಗುರಾಣಿಯೂ ಆದರು. ಈ ಕಾಯಿದೆಯಿಂದ ಪೆಟ್ಟು ಬಿದ್ದದ್ದು ಎಪಿಎಮ್‌ಸಿಯ ಮಧ್ಯವರ್ತಿಗಗಳಿಗೆ, ಅವರು ಹೇಗೆ ಸುಮ್ಮನಿರಲು ಸಾಧ್ಯ? ಆ ಕಾರಣಕ್ಕೆ NDA ಒಕ್ಕೂಟದ ಮಿತ್ರ ಪಕ್ಷವಾಗಿದ್ದ ಶಿರೋಮಣಿ ಅಕಾಲಿ ದಳ ಈ ಕಾಯಿದೆಯನ್ನು ವಿರೋಧಿಸಿ ಸರಕಾರದಿಂದ ಹೊರನಡೆಯಿತು. ಪಂಜಾಬಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಏಕಸ್ವಾಮ್ಯ ಅವರಲ್ಲಿತ್ತು, ಕೇವಲ ದಲ್ಲಾಳಿಕೆಯಲ್ಲಿ ವಾರ್ಷಿಕ ಸುಮಾರು 400 ಕೋಟಿ ಕಮಿಶನ್‌ ಗಳಿಸುತ್ತಿದ್ದರು. ಈ ವ್ಯವಸ್ಥೆಯನ್ನು ಕಾಪಿಡಲೆಂದೇ ರಾಜಕಾರಣಕ್ಕೆ ಬಂದವರು, ಅದರ ಬುಡಕ್ಕೆ ಪೆಟ್ಟುಬಿದ್ದಾಗ ಸಹಿಸಿಕೊಂಡಾರೋ? ಖಂಡಿತಾ ಇಲ್ಲ. ಪಂಜಾಬಿನ ರೈತರನ್ನು ಕೇಂದ್ರ ಸರಕಾರದ ವಿರುದ್ದ ಎತ್ತಿ ಕಟ್ಟಿದರು. ಇವರ ಜೊತೆಗೆ ಮೋದಿಯಿಂದ ನೊಂದ, ಮೋದಿಯ ಕಾರಣಕ್ಕೆ ತಮ್ಮ ಅಸ್ತಿತ್ವ ಕಳೆದಕೊಳ್ಳುತ್ತಿರುವ ಅಷ್ಟೂ ಸಂಘಟನೆಗಳು, ವ್ಯಕ್ತಿಗಳು ಒಟ್ಟಿಗೆ ಸೇರಿ ರೈತರನ್ನು ಮುಂದೆ ಬಿಟ್ಟು ವ್ಯವಸ್ಥಿತ ಪ್ರತಿಭಟನೆಗೆ ಮುಂದಾದರು. ಇವರ ಉದ್ದೇಶ ಇದ್ದದ್ದು ಇಷ್ಟೆ ಮೋದಿಯವರಿಗೆ ನರ ಹಂತಕ ಎಂಬ ಹಣೆಪಟ್ಟಿ ಕಟ್ಟಬೇಕು, ಮೋದಿಯನ್ನು ರೈತ ವಿರೋಧಿ, ರೈತ ಹಂತಕ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಬೇಕು. ಮೋದಿಯನ್ನು ಈ ವ್ಯೂಹದಲ್ಲಿ ಕೆಡವಬೇಕು ಎನ್ನುವ ಕಾರಣಕ್ಕೆ ರೈತ ಹೋರಾಟದ ಹೆಸರಿನಲ್ಲಿ ಆಡಬಾರದ ಆಟಗಳೆನ್ನಲ್ಲಾ ಆಡಿದರು. ಇಲ್ಲದೇ ಹೋದರೆ ಪಂಜಾಬಿನಲ್ಲಿ ಕೃಷಿ ಮಸೂದೆಯ ವಿರುದ್ಧ ಹೋರಾಟ ಮಾಡುತ್ತಿದ್ದ ರೈತರು ರಾಜ್ಯಾದ್ಯಂತ ಜಿಯೋ ಕಂಪನಿಯ ಮೊಬೈಲ್‌ ಟವರ್‌ ಕೆಡೆಯುವ ಆವಶ್ಯಕತೆ ಏನಿತ್ತು? ಈ ರೈತ ಮಸೂದೆಯ ಹೋರಾಟಕ್ಕೂ ಜೀಯೋ ಕಂಪನಿಯ ಮೊಬೈಲ್‌ ಟವರಿಗೂ ಏನು ಸಂಬಂಧ? ಇವರು 1500 ಮೋಬೈಲ್ ಟವರ್‌ಗಳನ್ನು ದ್ವಂಸಮಾಡಿದರು. ಜನವರಿ 26 2021ರಂದು ದೆಹಲಿಯ ಕೆಂಪುಕೋಟೆಗೆ ನುಗ್ಗಿ ಅಲ್ಲಿ ಭಾರತದ ತ್ರಿವರ್ಣ ಬದಲು ಬೇರೆ ದ್ವಜ ಹಾರಿಸಿದರು. ಈ ಗಲಾಟೆಯಲ್ಲಿ ರೈತರು ತಮ್ಮ ಟ್ರಾಕ್ಟರ್ ಗಳಿಗೆ ಆರ್ಮರ್‌ ಪ್ಲೇಟ್‌ ಹಾಕಿಸಿಕೊಂಡು ಅದನ್ನು ಯೋದ್ಧ ಟ್ಯಾಂಕುಗಳಂತೆ ದೆಹಲಿ ಬೀದಿಬೀದಿಗಳಲ್ಲಿ ಓಡಿಸಿ ದಾಂಧಲೆ ಮಾಡಿದರು. ಈ ಗಲಾಟೆಯಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಪೋಲೀಸರಿಗೆ ಗಾಯವಾದವು, ಕೋವಿಡ್‌ ಸಮಯದಲ್ಲೂ ರೋಗ ಸಂಕ್ರಮಣ ಆಗಬೇಕು ಎಂಬ ದುರದ್ದೇಶದಿಂದಲೇ ಲಸಿಕೆ ಹಾಕಿಸಲು ಬಿಡಲಿಲ್ಲ, ಜೊತೆಗೆ ಲಸಿಕೆಯ ಬಗ್ಗೆ ಅಪಪ್ರಚಾರವನ್ನೂ ಮಾಡಿದರು. ಸಿಂಘೂ ಗಡಿ ಪ್ರದೇಶದಲ್ಲಿ ವಾಸವಿದ್ದ ಹಳ್ಳಿಯ ಜನರು ಇವರ ಮೇಲೆ ಅತ್ಯಾಚಾರ ದರೋಡೆಯಂತಹ ಗಂಬೀರ ಆರೋಪ ಮಾಡಿದರು. ಇದೆಲ್ಲಕ್ಕಿಂತ ಮುಖ್ಯವಾಗಿ ಪಂಜಾಬಿನ ಸಿಕ್ಖರೇ ಹೆಚ್ಚಿದ್ದ ಪ್ರತಿಭಟನೆಯಲ್ಲಿ ಖಲಿಸ್ಥಾನಿಯ ಉಗ್ರರೂ ಸೇರಿಕೊಂಡರು. ಕೆಂಪು ಕೋಟೆಯಲ್ಲಿ ತ್ರಿವರ್ಣಧ್ವಜ ತೆಗೆದು ಮತೀಯ ದ್ವಜ ಹಾರಿಸಿದ ದೀಪ್‌ ಸಿದ್ದುವನ್ನು ಬಂಧಿಸಿದ ಪೋಲಿಸರಿಗೆ, ಈತನಿಗೆ ಖಲಿಸ್ಥಾನಿ ಉಗ್ರ ಸಂಘಟನೆಯ ಭಾಗಾವಗಿರುವ SFJ (Sikhs for Justice) ಎಂಬ ಗುಂಪಿನ ನಡುವೆ ಸಂಪರ್ಕ ಇರುವುದು ತಿಳಿಯಿತು. ಕಳೆದ ಒಂದು ವರ್ಷದಿಂದ ಭಾರತ ಪಾಕಿಸ್ಥಾನ ಗಡಿಯಲ್ಲಿ ಅದರಲ್ಲೂ ಪಂಜಾಬಿನ ಗಡಿ ಪ್ರದೇಶದಲ್ಲಿ ಪಾಕಿಸ್ಥಾನದಿಂದ ಡ್ರೋನ್‌ಗಳು ದೇಶದ ಗಡಿ ಪ್ರವೇಶಿಸಿ ಅದರ ಮುಖಾಂತರ ಶಸ್ತ್ರಾಸ್ತ್ರ, ಡ್ರಗ್‌ಗಳನ್ನು ರವಾನಿಸುವವ ಕೆಲಸ ಹೆಚ್ಚಾಗತೊಡಗಿತು. ಎಲ್ಲಿಯ ತನಕ ಪಂಜಾಬಿನ ಆಡಳಿತದ ಚುಕ್ಕಾಣಿ ಕ್ಯಾಪ್ಟನ್‌ ಅಮರಿಂದರ್ ಅವರ ಬಳಿ ಇತ್ತೋ ಅವರು ರೈತ ಹೋರಾಟ ಮತ್ತು ದೇಶದ ಭದ್ರತೆಯ ನಡುವೆ ಎಲ್ಲೂ ಹೊಂದಾಣಿಕೆಮಾಡಿಕೊಳ್ಳದೆ ಒಂದು ಹಂತದ ತನಕವಷ್ಟೇ ಈ ರೈತ ಹೋರಾಟಕ್ಕೆ ಬೆಂಬಲ ಕೊಡುತ್ತಿದ್ದರು.

ಅಫ್ಘಾನಿಸ್ಥಾದಲ್ಲಿ ತಾಲಿಬಾನಿನ ಆಡಳಿತ ಪ್ರಾರಂಭವಾದ ಮೇಲಂತೂ ಭಾರತದ ಗಡಿಯೊಳಗೆ ದ್ರೋಣ್‌ ಮುಖಾಂತರ ಮಾದಕ ವಸ್ತುಗಳನ್ನು ಕಳಿಸುವ ಪ್ರಮಾಣ ಇನ್ನೂ ಹೆಚ್ಚಾಯಿತು. ಕ್ಯಾಪ್ಟನ್‌ ಅಮರಿಂದರ್‌ ಸಿಂಗ್ ಇರುವ ತನಕ ಇದರ ಬಗ್ಗೆ ರಾಜ್ಯ ಪೊಲೀಸರಿಗೆ ಸಿಗುತ್ತಿದ್ದ ಗುಪ್ತಚರ ಮಾಹಿತಿ ಎಲ್ಲವೂ ಅವರು ಕೆಂದ್ರದ ಜೊತೆ ಹಂಚಿಕೊಳ್ಳುತ್ತಿದ್ದರು. ಯಾವಾಗ ಅವರು ರಾಜಿನಾಮೆ ಕೊಟ್ಟು ಹೊರೆನೆಡದು ಚರಣ್ಜಿತ್ ಸಿಂಗ್ ಚನ್ನಿ ಮುಖ್ಯಮಂತ್ರಿಯಾದರೋ, ಎಲ್ಲವೂ ಬದಲಾಯಿತು. ಗಡಿಯಾಚೆ ಭಾರತದ ವಿರುದ್ಧ ಚೀನಾ ಮತ್ತು ಪಾಕಿಸ್ಥಾನ ಯುದ್ಧದ ತಯಾರಿ ಹೆಚ್ಚಿಸುತ್ತಲೆ ಇದ್ದವು. ಗಡಿಯೊಳಗೆ ಪಾಕಿಸ್ಥಾನ ಡ್ರೋಣ್‌ ಮುಖಾಂತರ ವಿಧ್ವಂಸಕ ಚಟುವಟಿಕೆ ನಡೆಸುವುದು ಹೆಚ್ಚಾಯಿತು. ಇವುಗಳ ತೀವ್ರತೆ ಮನಗೊಂಡ ಕೇಂದ್ರ ಸರಕಾರ ಗುಜರಾತಿನಿಂದ ಬಂಗಾಳದ ತನಕ ದೇಶದ ಅಂತಾರಾಷ್ಟ್ರೀಯ ಗಡಿಯಿಂದ ೫೦ ಕಿಮಿ ಒಳಗಿನ ತನಕ ಯಾವುದೇ ಕಾನೂನು ಸುವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾದರೂ ಅದನ್ನು ಅಲ್ಲಿಯ ಸ್ಥಳಿಯ ಪೊಲೀಸರ ಬದಲು ಗಡಿ ನಿಯಂತ್ರಣ ಪಡೆಯ ಅಧಿಕಾರಿಗಳು ನಿಭಾಯಿಸಬೇಕು ಎಂಬ ಆದೇಶ ಹೊರಡಿಸಿತು. ಇದನ್ನು ಪಂಜಾಬಿನ ಚನ್ನಿ ಸರಕಾರ ಸದನದಲ್ಲಿ ಒಂದು ನಿಲುವಳಿ ಜಾರಿಗೆ ತಂದು ವಿರೋಧಿಸಿತು. ಖಲಿಸ್ಥಾನಿ ಉಗ್ರ ಸಂಘಟನೆಯನ್ನು ಒಬ್ಬಂಟಿಯಾಗಿ ಬಲಪ್ರಯೋಗ ಮುಖಾಂತರ ನಿಭಾಯಿಸಬಹುದು. ಆದರೆ ಅದು ಯಾವಾಗ ರೈತ ಹೋರಾಟದ ಮುಖವಾಡ ಹಾಕುತ್ತದೆಯೋ ಅದನ್ನು ಬಲಪ್ರಯೋಗದ ಮುಖಾಂತರ ಹತ್ತಿಕ್ಕುವುದು ಕಷ್ಟವಾಗುತ್ತದೆ. ಇದರ ಜೊತೆಗೆ ದೇಶದ ನ್ಯಾಯಾಂಗ ವ್ಯವಸ್ಥೆ ಕೂಡ ಇಂತಹಾ ಹೋರಾಟಗಳಿಗೆ ಬೆಂಬಲ ಕೊಡಲು ಪ್ರಾರಂಭ ಮಾಡಿತು. ಕೆಲವೊಮ್ಮೆ ನ್ಯಾಯಾಲಯಗಳು ತೆಗೆದುಕೊಳ್ಳುವ ನಿಲುವುಗಳು ಭಾರತದ ಪ್ರಭುತ್ವದ ಬಗ್ಗೆ ಇರುವ ಬದ್ಧತೆಯನ್ನೇ ಪ್ರಶ್ನೆ ಮಾಡುವಂತೆ ಇರುತ್ತದೆ. ಚೀನಾ ಉತ್ತರದ್ ಖಂಡ್‌ ರಾಜ್ಯದ ಗಡಿಭಾಗದಲ್ಲಿ ತನ್ನ ಸೇನಾ ಜಮಾವಣೆ ಹೆಚ್ಚಿಸುತ್ತಿದೆ. ಅದಕ್ಕೆ ಪ್ರತಿಯಾಗಿ ಭಾರತದ ಸೈನ್ಯ ಕೂಡಾ ತನ್ನ ಸೈನ್ಯ ಜಮಾವಣೆ ಜೊತೆಗೆ ಯುದ್ದೋಪಕರಣಗಳನ್ನು ಸಾಗಿಸಲು ಅಗಲವಾದ ರಸ್ತೆ ಮಾಡಬೇಕಿತ್ತು.

ಸರಕಾರ ಈ ಕೆಲಸವನ್ನು ಕೈಗೆತ್ತಿಕೊಂಡಾಗ Citizen for GreenDoon ಎನ್ನುವ NGO ಒಂದು ಅಲ್ಲಿಯ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದನ್ನು ಹಾಕಿ ರಸ್ತೆ ಅಗಲೀಕರಣ, ಹಿಮಾಲಯದ ಪರಿಸರ ನಾಶಕ್ಕೆ ಎಡೆಮಾಡಿಕೊಡುತ್ತದೆ ಎಂದರು. ನ್ಯಾಯಾಲಯ ಈ ಅರ್ಜಿಯನ್ನು ಪರಿಗಣಿಸಿ ವಿಚಾರಣೆ ಪ್ರಾರಂಭಿಸಿ ದೇಶದ ಭದ್ರತೆಗೆ ಸಂಭಂದ ಪಟ್ಟ ಪ್ರಮುಖ ರಸ್ತೆ ನಿರ್ಮಾಣ ಕಾರ್ಯಕ್ಕೆ ತಡೆ ಒಡ್ಡಿದೆ. ಇತ್ತೀಚೆಗೆ ಕೇಂದ್ರ ಸರಕಾರ ಸಲ್ಲಿಸಿದ ಅಫಿಡವಿಟ್ಟನಲ್ಲಿ ಅಲ್ಲಿ ರಸ್ತೆಗಳು ಸುಮಾರು ೫ ಮೀ ಅಗಲವಿದ್ದು ಅದರಲ್ಲಿ ಸೈನ್ಯಕ್ಕೆ ಅತಿ ಭಾರಿ ವಾಹನಗಳನ್ನ ಬ್ರಹ್ಮೋಸ್‌ ಕ್ಷಿಪಣಿ ವಾಹಕಗಳನ್ನು ಸಾಗಿಸಲು ಆಗುವುದಿಲ್ಲ, ಆ ಕಾರಣಕ್ಕೆ ರಸ್ತೆಯನ್ನು ಕನಿಷ್ಟ ೮ ಮೀ ಅಗಲ ಮಾಡಬೇಕು ಎಂದಿತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯ ಮೂರ್ತಿಗಳು “ದೇಶದ ಭದ್ರತೆ ಅಗತ್ಯ. ಆದರೆ ಪ್ರಕೃತಿ ನಾಶ ಮಾಡಿ ದೇಶದ ಗಡಿ ಕಾಯಬೇಕಾ?” ಎಂದು ತಮ್ಮ ತೀರ್ಪಿನಲ್ಲಿ ಹೇಳಿದರು. ನ್ಯಾಯಾಲಯಗಳು ದೇಶದ ಭದ್ರತೆಯ ವಿಷಯದಲ್ಲೂ ಇಂತಹ ಅಭಿಪ್ರಾಯ ವ್ಯಕ್ತಪಡಿಸಿದಾಗ ಇವುಗಳ ಮೇಲೆ ಹೇಗೆ ವಿಶ್ವಾಸವಿಟ್ಟು ದೇಶ ನಡೆಸಬೇಕು? ಇಂತಹಾ ನ್ಯಾಯಾಲಯಗಳು, ರೈತರ ಮುಖವಾಡ ಹಾಕಿದ ಖಲಿಸ್ಥಾನಿ ಉಗ್ರರು, ಇಂತಹ ಉಗ್ರರಿಗೆ ಪರೋಕ್ಷ ಬೆಂಬಲ ಕೊಡುತ್ತಿರುವ ಪಂಜಾಬಿನ ಚನ್ನಿ ಸರಕಾರ ಇವೆಲ್ಲದರ ಲಾಭ ಪಡೆದು ಭಾರತದೊಳಗೆ ಅರಾಜಕತೆ ಸೃಷ್ಟಿಸಲು ಕಾಯುತ್ತಿರುವ ಟೂಲ್‌ ಕಿಟ್‌ ಗ್ಯಾಂಗ್‌, ಜೊತೆಗೆ ಭಾರತದ ಗಡಿಯಾಚಗೆ ಯುದ್ದ ದಾಳಿ ಮಾಡಲು ಕಾದು ಕೂತಿರುವ ಪಾಕಿಸ್ಥಾನ ಮತ್ತು ಚೀನಾ.

ಈ ಇಷ್ಟು ಸಮಸ್ಯೆಗಳನ್ನು ಪರಿಗಣಿಸಿ ಮೋದಿಯವರು ನಾನು ರೈತರಿಗೋಸ್ಕರ ಕಾಯಿದೆ ಜಾರಿಗೆ ತಂದೆ, ಈಗ ದೇಶಕ್ಕೋಸ್ಕರ ಹಿಂಪಡೆಯುತ್ತಿದ್ದೇವೆ ಅಂದಿದ್ದು ಈ ಕಾರಣಕ್ಕೆ. ನೇರವಾಗಿ ದಾಳಿಮಾಡುವ ಶತ್ರು ದೇಶಗಳನ್ನು ಮಣಿಸಬಹುದು ಆದರೆ ಆಂತರಿಕ ಶತ್ರುಗಳ ಜೊತೆ ಕಷ್ಟ. ಈ ಆಂತರಿಕ ಶತ್ರುಗಳ ದುಷ್ಟಕೂಟಗಳು ಒಟ್ಟಾಗಿರುವ ಕಾರಣ ರೈತ ಮಸೂದೆ, ರೈತರು ಅನ್ನು ಕಾರಣಕ್ಕೆ ದೇಶದ ಜನತೆ ಕೂಡ ಭಾವನಾತ್ಮಕವಾಗಿ ಅವರ ಜೊತೆ ಕೊಂಚ ವಾಲಿದ್ದಾರೆ. ಭಾರತದ ಪ್ರಥಮ ಸೇನಾ ಮುಖ್ಯಸ್ಥ ( CDS) ಜನರಲ್‌ ಬಿಪಿನ ರಾವತ್‌ ಹೇಳಿದ 2.5 ಫ್ರಂಟ್‌ ಯುದ್ದದ್ದಲ್ಲಿ .5 ಫ್ರಂಟ್‌ ಇದೇ ದೇಶದೊಳಗಿರುವ ಹಿತ ಶತ್ರುಗಳು. ಹಾಗಾಗಿ ಎಲ್ಲದಕ್ಕೂ ಮೂಲವಾದ ರೈತ ಕಾಯಿದೆಯನ್ನೇ ಹಿಂಪಡೆದರೆ ಎಲ್ಲ ಸಮಸ್ಯೆಗಳಿಗೆ ಮಂಗಳ ಹಾಡಿದಂತೆ ಎಂದು ಮನಗೊಂಡ ಸರಕಾರ ಈ ರೈತ ಕಾಯಿದೆಯನ್ನುಹಿಂಪಡೆಯಿತು.

ಈಗ ಮೋದಿ ತನ್ನವರಿಂದಲೇ ಟೀಕಾ ಪ್ರಹಾರಕ್ಕೆ ಗುರಿಯಾದರು. ಮೋದಿ ಹೀಗೆ ಮಾಡಬಾರದಿತ್ತು, ಮೋದಿ ಸೋತರು. ಸುಗ್ರೀವಾಜ್ಞೆಯ ಮುಖಾಂತರ ಜಾರಿಗೆ ತಂದ ಕಾಯಿದೆ, ರೈತರಿಗೆ ಇಷ್ಟು ಅನುಕೂಲ ಮಾಡಿಕೊಡುವ ಕಾಯಿದೆ ಮೋದಿ ಏಕಾಏಕಿ ಹಿಂತೆಗೆದುಕೊಂಡದ್ದು ಸರಿಯಲ್ಲ. ಇದನ್ನು ಜನ ಮೋದಿ ಸರಕಾರದ ದುರ್ಭಲತೆ ಎಂದು ಭಾವಿಸುತ್ತಾರೆ. ಇವತ್ತು ರೈತ ಮಸೂದೆಗೆ ಬಗ್ಗಿದರೆ ನಾಳೆ CAA ಬಗ್ಗೆ ಗಲಾಟೆ ಮಾಡುತ್ತಾರೆ, ತ್ರಿವಳಿ ತಲಾಕ್‌ ಬಗ್ಗೆ ಗಲಾಟೆ ಮಾಡುತ್ತಾರೆ. ಕಾಶ್ಮೀರದ ಕುರಿತು ಧರಣಿ ಕೂರುತ್ತಾರೆ. ನೀವೇ ಎದೆ ತಟ್ಟಿ ತೆಗೆದುಕೊಂಡ ನಿರ್ಣಯ ಈಗ ನೀವೇ ಹಿಂಪಡೆದುದು ದುರ್ಬಲತೆಯ ಲಕ್ಷಣ. ಯುದ್ಧರಂಗದಿಂದ ಪಲಾಯನ ಮಾಡಿದರು ಎಂಬಿತ್ಯಾದಿ ಟೀಕೆಗಳು ಕಳೆದ ಹಲವು ದಿನಗಳಿಂದ ಕೇಳುತ್ತಲೇ ಇದ್ದೇವೆ. ಹಾಗಿದ್ದರೆ ಇವರು ಹೇಳುತ್ತಿರುವುದು ಸರಿಯಾ ಎಂಬ ಪ್ರಶ್ನೆಗೆ ಒಂದಷ್ಟು ಉತ್ತರಗಳೂ ಸಿಗಲಾರಂಭಿಸಿದವು. ಮೋದಿಯವರು ರೈತಮಸೂದೆ ಕಾಯಿದೆಯನ್ನು ವಾಪಾಸು ಮಾಡಿದಾಗ ಈ ರೈತ ಹೋರಾಟಗಾರರು ಕೊಂಚ ವಿಚಲಿತರಾದಂತೆ ಕಂಡರು. ನಾವು ಸಂಸತ್ತಿನಲ್ಲಿ ಕಾಯಿದೆ ವಾಪಾಸು ತೆಗೆಯದ ಹೊರತು ಹೋರಾಟ ಮುಗಿಸುವುದಿಲ್ಲ ಅಂದರು. ಅದೂ ಆಯಿತು. ನಂತರ ತಮ್ಮ ಉಳಿದ ಬೇಡಿಕೆಗೆಗಳನ್ನೂ ಈಡೇರಿಸಿದರೇ ಮಾತ್ರ ಹೋರಾಟದಿಂದ ವಾಪಾಸು ಹೋಗುವುದಾಗಿ ಹೇಳಿದಾಗ ಅಮಿತ ಶಾವರು ಮದ್ಯ ಪ್ರವೇಶಿಸಿ.

ನಕಲೀ ಹೋರಾಟಗಾರಾರ ಮಧ್ಯೆ ಇದ್ದ ಒಂದಷ್ಟು ಅಸಲೀ ಹೋರಾಟಗಾರರ ಮನ ವಲಿಸಿ ಪ್ರತಿಭಟನೆಯನ್ನು ನಿಲ್ಲಿಸುವಲ್ಲಿ ಸಫಲರಾದರು. ಇದರಿಂದ ವಿಚಲಿತರಾದ ನಕಲಿ ಹೋರಾಟಗಾರರೂ ತಮ್‌ ಹೋರಾಟದ ನಾಟಕ ಮುಂದುವರಿಸಲೂ ಆಗದೆ ಇತ್ತ ಅದನ್ನು ನಿಲ್ಲಿಸಲೂ ಆಗದೆ ಒದ್ದಾಡುತ್ತಿರುವುದು ಎಲ್ಲರಿಗೂ ತೋರುತ್ತಿದೆ. ಯಾವಾಗ ಈ ಹೋರಾಟ ರೈತ ಆಶಯಗಳನ್ನು ಬಿಟ್ಟು ಇನ್ನಾವುದೇ ದಿಕ್ಕಿಗೆ ಇವರ ಹೋರಾಟಗಳು ತಿರುಗಿದರೂ ದೇಶದ ಜನರ ಭಾವನೆ ಇವರ ವಿರುದ್ದವಾಗಿಯೇ ಇರುತ್ತದೆ. ಮತ್ತು ಅಂತಹ ಹೋರಾಟಗಳನ್ನು ಹತ್ತಿಕ್ಕುವುದು ಸರಕಾರಕ್ಕೆ ಕಷ್ಟದ ಕೆಲಸವೂ ಅಲ್ಲ. ಅದು ಈ ಸಂಘಟನೆಗಳಿಗೂ ಗೊತ್ತು. ಇನ್ನು ಮೋದಿಯವರು ಅವರದ್ದೇ ನಿರ್ಧಾರಗಳಿಂದ ಹಿಂದೆ ಸರಿದಿದ್ದು ಸರಿ ಅಲ್ಲ, ಒಬ್ಬ ಬಲಿಷ್ಟ ನಾಯಕನ ಲಕ್ಷಣ ಅಲ್ಲ, ಒಮ್ಮೆ ನಿರ್ಧಾರ ತೆಗೆದುಕೊಂಡ ನಂತರ ಅದರಿಂದ ಹಿಂದೆ ಸರಿಯಬಾರದು ಅನ್ನುವವರಿಗೆ ನಾನು ಹೇಳುವುದು ಇಷ್ಟೆ. ಮೋದಿಯ ಅಂತರಂಗಲ್ಲಿದ್ದ ಮಾಧವ ಮಹಾಭಾರತದಲ್ಲಿ ಭೀಷ್ಮ ಮಾಡಿದ ತಪ್ಪನ್ನು ಈ ಭಾರತದಲ್ಲಿ ಮೋದಿಯಿಂದ ಆಗಲು ಬಿಡಲಿಲ್ಲ!

22
ಫೆಬ್ರ

ಪುಲ್ವಾಮ ದಾಳಿ: ಭಾರತ ಕಲಿತ ಪಾಠ

– ವರುಣ್ ಕುಮಾರ್

Pulwama-attack-5ಫೆಬ್ರವರಿ ೧೪ನೇ ತಾರೀಖು ಭಾರತದ ಸೈನಿಕರ ಪಾಲಿಗೆ ಅತ್ಯಂತ ಕರಾಳ ದಿನ. ಕಳೆದ ದಶಕದಲ್ಲಿಯೇ ನಡೆದ ಅತ್ಯಂತ ಘೋರ ಉಗ್ರರ ದಾಳಿ ಅಮಾಯಕ ಸೈನಿಕರ ಸಾವಿಗೆ ಕಾರಣವಾಗಿ ಇಡೀ ದೇಶವೇ ಮಮ್ಮಲ ಮರುಗಿತು. ಪ್ರಪಂಚದೆಲ್ಲೆಡೆಯಿಂದ ಈ ಘಟನೆಯ ಬಗ್ಗೆ ಖಂಡನೆ ವ್ಯಕ್ತವಾಗಿ ಭಾರತದ ಜೊತೆ ನಾವಿದ್ದೇವೆ ಎಂಬ ಸಂದೇಶವನ್ನು ರವಾನಿಸಿ ಬೆಂಬಲವನ್ನು ವ್ಯಕ್ತಪಡಿಸಿದರು. ಈ ದಾಳಿಯ ಬಳಿಕ ಭಾರತದಲ್ಲಿ ನಡೆದ ಬೆಳವಣಿಗೆಗಳ ಹಾಗೂ ಈ ದಾಳಿಯಿಂದ ಭಾರತ ಕಲಿಯಬೇಕಾದ ಪಾಠಗಳೇನು ಎಂಬುದಾಗಿ ವಿಶ್ಲೇಷಿಸೋಣ.

ಭಾರತದೊಳಗಿನ ಉಗ್ರರು:

ಹೌದಲ್ಲವೇ, ನಮಗೆ ಈ ಉಗ್ರರದಾಳಿಯ ಬಳಿಕ ಹಲವಾರು ಉಗ್ರರು ನಮ್ಮ‌ ದೇಶದೊಳಗೆ ಅಣಬೆಗಳಂತೆ ಹುಟ್ಟಿಕೊಳ್ಳತೊಡಗಿದರು. ಪಾಕಿಸ್ತಾನ್ ಜಿಂದಾಬಾದ್, ಇದು ನಿಜವಾದ ಸರ್ಜಿಕಲ್ ಸ್ಟ್ರೈಕ್ ಇತ್ಯಾದಿ ಬರಹಗಳನ್ನು ಒಳಗೊಂಡ ಅನೇಕ ದೇಶದ್ರೋಹಿ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ‌ ಹಾಕಲಾರಂಭಿಸಿದರು. ಪಂಜಾಬ್ ಎಂದಿಗೂ ದೇಶಪ್ರೇಮಿಗಳನ್ನು ಕೊಟ್ಟಂತಹ ರಾಜ್ಯ ಆದರೆ ಅದೇ ರಾಜ್ಯದ ಸಚಿವನಾದ ಸಿಧುರವರು ಪಾಕಿಸ್ತಾನದ ಜೊತೆ ಮಾತುಕತೆ ಭಾರತ ಮುಂದಾಗಬೇಕು ಎಂದು ಸಲಹೆ ನೀಡಿದರು. ಇದರ ಬೆನ್ನಿಗೆ ಸಮಯಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ ಪ್ರಕಾಶ್ ರೈ ಒಂದು ಹಂತದಲ್ಲಿ ಭಾರತದ ಜೊತೆ ನಾವಿದ್ದೇವೆ ಎಂದು ಬೆಂಬಲ‌ ನೀಡಿದರು. ಆದರೆ ಮರುದಿನ ಬಿಜೆಪಿಯ ಬಗ್ಗೆ ಮೋದಿಯವರ ಬಗ್ಗೆ ಟೀಕಿಸಿ ಘಟನೆಯನ್ನು ರಾಜಕೀಯಗೊಳಿಸಿದರು. ಕಮಲ್ ಹಾಸನ್ ಅಂತಹ ಸ್ವಯಂಘೋಷಿತ ನಾಯಕರು ಸೈನಿಕರು ಸಾಯಲೆಂದೇ‌ ಸೇನೆಗೆ ಸೇರುತ್ತಾರೆ ಎಂದು ಹೇಳಿಕೆಗಳನ್ನು ಕೊಟ್ಟಾಗ ಇದು ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ಯಾವ ರೀತಿ ನೋವಾಗಬಹುದು ಎಂಬ ಕಾಳಜಿಯಿಲ್ಲದೆ ಮಾತನಾಡಿದರು. ಮತ್ತಷ್ಟು ಓದು »

28
ಮೇ

ರಾಝೀ..

– ಅನಘಾ ನಾಗಭೂಷಣ

ಭಾರತೀಯ ಗುಪ್ತಚರ ದಳದ ಆಫೀಸರುಗಳು, ಗೂಢಚಾರಿಗಳ(spy) ಬಗ್ಗೆ ಸಾಕಷ್ಟು ಸಿನಿಮಾಗಳು ಬಂದಿವೆಯಾದರೂ ಇತ್ತೀಚೆಗೆ ಬಿಡುಗಡೆಯಾಗಿ ದೇಶಾದ್ಯಂತ ಜನಮೆಚ್ಚುಗೆ ಗಳಿಸಿದ್ದು ಸಲ್ಮಾನ್ ಖಾನನ ಟೈಗರ್ ಸಿನಿಮಾಗಳು, ಅಕ್ಷಯ್ ಕುಮಾರನ ಬೇಬಿ ಮತ್ತು ಆಲಿಯಾ ಭಟ್ ಳ ರಾಝೀ…

ಇವತ್ತು ರಾಝೀ ಸಿನಿಮಾ ನೋಡಿದೆ.. ನೈಜ ಘಟನೆಗಳಿಂದ ಸ್ಫೂರ್ತಿ ಪಡೆದು ಹರಿಂದರ್ ಎಸ್. ಸಿಕ್ಕಾ ಅವರು 2008ರಲ್ಲಿ ಬರೆದಿದ್ದ ‘Calling Sehmat’ ಎಂಬ ಕಾದಂಬರಿಯನ್ನಾಧರಿಸಿರುವ ಈ ಚಿತ್ರ ವಾಸ್ತವಕ್ಕೆ ಹತ್ತಿರವಾಗಿ, ಮನಮುಟ್ಟುವಂತಿದೆ.. ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ ಸಿನಿಮಾಗಳ ಬಗ್ಗೆ ನನಗೆ ಅಂಥಾ ಒಳ್ಳೆ ಅಭಿಪ್ರಾಯವೇನೂ ಇಲ್ಲವಾದರೂ ಬೇಬಿ ಇಷ್ಟವಾಗಿತ್ತು.. ಆದರೆ ವಸ್ತುನಿಷ್ಠತೆಯ ದೃಷ್ಟಿಯಿಂದ ನೋಡುವಾಗ ರಾಝೀ ಗೆ ಮೊದಲ ಸ್ಥಾನ.. ಈ ಚಿತ್ರದ ಮುಖ್ಯಪಾತ್ರ ಸಹಮತ್ ಸಯ್ಯದ್ ಳಾಗಿ ನಟಿಸಿರುವ ಆಲಿಯಾ ಭಟ್ ನಿಜಕ್ಕೂ ಅಭಿನಂದನಾರ್ಹಳು! ಹೈವೇ, ಉಡ್ತಾ ಪಂಜಾಬ್ ನಂತರ ಪ್ರಬುದ್ಧವೂ, ಸವಾಲೂ ಎನಿಸುವಂಥ ಪಾತ್ರವನ್ನ ಇದರಲ್ಲಿ ಅತ್ಯಂತ ಸಮರ್ಥವಾಗಿ ನಿರ್ವಹಿಸಿದ್ದಾಳಾಕೆ.. ಟೈಗರ್, ಬೇಬಿಗಳಲ್ಲಿರುವಂತೆ ಅತಿಮಾನುಷವೆನಿಸುವ ಯಾವುದೇ ಸ್ಟಂಟ್ಸ್, ಫೈಟಿಂಗ್, ಅನಾವಶ್ಯಕ ಹಾಡುಗಳು, ಹೀರೋಯಿಸಂ ಇವೇನೂ ಇಲ್ಲದೇ ರಾಝೀ ಸಹಜವಾಗಿ ಮೂಡಿಬಂದಿದೆ.. ಮತ್ತಷ್ಟು ಓದು »

26
ಜುಲೈ

ಕಾರ್ಗಿಲ್ ಕದನ; ಕಡಲಲ್ಲಿ ಐಎನ್ ಎಸ್ ತಾರಾಗಿರಿ ಕಲರವ

– ಸಂತೋಷ್ ತಮ್ಮಯ್ಯ

ವಿಜಯ ಎಂಬುದೇ ಹಾಗೆ. ಅದಕ್ಕೆ ನಾನಾ ಅರ್ಥಗಳು. ನಾನಾ ಮಜಲುಗಳು. ಅದು ಕಂಡಷ್ಟೇ ಅಲ್ಲ. ವಿಜಯ ಯಾರಿಗೂ ಪುಕ್ಕಟೆಯಾಗಿ ಒಲಿದಿಲ್ಲ. ಜಿದ್ದಿಗೆ ಬೀಳದೆ ಅದು ದಕ್ಕುವುದೂ ಇಲ್ಲ. ಅದರ ಹಿಂದೋಡಿದವರನ್ನು ವಿಜಯ ಪಾತಾಳಕ್ಕೆ ತಳ್ಳಿದ, ಹೇಳಹೆಸರಿಲ್ಲದಂತೆ ಮಾಡಿದ ಉದಾಹರಣೆಗಳಿವೆ. ತಾನೊಲಿಯಲು ನೆಲವನ್ನೂ ಹದಗೊಳಿಸಿ, ಮಾಯಾಮೃಗದಂತೆ ದಿಕ್ಕುತಪ್ಪಿಸಿ ಪರೀಕ್ಷೆಗೊಳಪಡಿಸಿ ಎಲ್ಲವನ್ನೂ ತೂಕಕಿಟ್ಟ ನಂತರ ವಿಜಯ ಒಲಿಯುತ್ತದೆ. ಹಾಗಾಗಿ ವಿಜಯಕ್ಕೆ ಮೆಟ್ಟಿಲುಗಳು ಹೆಚ್ಚು. ಎತ್ತರವೂ ಜಾಸ್ತಿ.

ವಿಜಯವೆಂಬುದು ಯಜ್ಞದಂತೆ. ಅದು ಹವಿಸ್ಸನ್ನು ಬೇಡುತ್ತದೆ. ತನ್ನ ಹಾದಿಯಲ್ಲಿ ನೋವನ್ನೂ ಕೊಡುತ್ತದೆ. ಇನ್ನೇನು ಸಿಕ್ಕೇ ಬಿಟ್ಟಿತು ಎಂಬಷ್ಟರಲ್ಲಿ ಸಕಾಲವಲ್ಲ ಎಂಬಂತೆ ಮುಂದೋಡುತ್ತದೆ. ವಿಜಯವೆಂಬುದು ಮಾಯೆಯೂ ಹೌದು. ಅದು ರುಚಿ ಹಿಡಿಸುತ್ತದೆ, ಮೋಹಗೊಳಿಸುತ್ತದೆ. ಆದರೆ ಮೋಹದಿಂದಲೇ ವಿಜಯ ಒಲಿಯದು. ಒಲಿದ ವಿಜಯ ಪಡೆದವನನ್ನ್ನೇ ಒರೆಗೆ ಹಚ್ಚುತ್ತದೆ. ಗೆಲುವಿನಿಂದ ಆರ್ಭಟಿಸಿದವನನ್ನು ಕಾಲ ಕೆಳಗೆ ಹೊಸಕಿಹಾಕುತ್ತದೆ. ಆದರೆ ಪ್ರಾಯಾಸದಿಂದ ವಿಜಯಿಯಾದವನನ್ನು, ವಿಜಯದ ತತ್ವವನ್ನು ಕಾಪಿಟ್ಟುಕೊಂಡವನನ್ನು ವಿಜಯವೇ ಆರಾಧಿಸುತ್ತದೆ. ಬಹುಕಾಲ ಆ ವಿಜಯವನ್ನು ಲೋಕ ನೆನಪಿಟ್ಟುಕೊಂಡಿರುತ್ತದೆ.

ಮತ್ತಷ್ಟು ಓದು »

19
ಮೇ

ಕೈ ಜಾರುತ್ತಿರುವ ಜಮ್ಮುಕಾಶ್ಮೀರ ; ನೆನಪಾಗುವ ಜಗಮೋಹನ್

– ರಾಕೇಶ್ ಶೆಟ್ಟಿ

ಕಳೆದ 5 ತಿಂಗಳಿನಲ್ಲಿ ಸೇನೆಯ ಮೇಲೆ 7 ದಾಳಿಗಳು ; ಮೇ 2ನೇ ತಾರೀಖು ಇಬ್ಬರು ಭಾರತೀಯ ಯೋಧರ ತಲೆಕಡಿಯಲಾಯಿತು;2 ಬ್ಯಾಂಕುಗಳ ದರೋಡೆ,ಹತ್ಯೆಗಳು; ರಾಜ್ಯ ಸರ್ಕಾರವೇ ಭದ್ರತಾ ದೃಷ್ಟಿಯಿಂದ 40 ಬ್ಯಾಂಕುಗಳಲ್ಲಿ ನಗದು ವ್ಯವಹಾರ ಮಾಡದಂತೆ ಸೂಚಿಸಿದ್ದು; ಸಹೋದರಿಯ ಮದುವೆಗೆಂದು ರಜೆಯಲ್ಲಿ ಮನೆಗೆ ಬಂದಿದ್ದ ಯೋಧನನ್ನು ಅಪಹರಿಸಿ,ಚಿತ್ರಹಿಂಸೆ ನೀಡಿ ಹತ್ಯೆ;ಹುತಾತ್ಮ ಯೋಧನ ಶವಯಾತ್ರೆಯಲ್ಲಿ ಕಲ್ಲು ತೂರಾಟ;ಎನ್ಕೌಂಟರಿನಲ್ಲಿ ಸತ್ತ ಉಗ್ರನ ಶವಯಾತ್ರೆಯಲ್ಲಿ ಪ್ರತ್ಯಕ್ಷವಾದ ಉಗ್ರರಿಂದ ಗಾಳಿಯಲ್ಲಿ ಗುಂಡು,ಪ್ರತೀಕಾರದ ಕೂಗು;ಆಡಳಿತಾರೂಢ ಪಿಡಿಪಿ ಪಕ್ಷದ ಪುಲ್ವಾಮ ಜಿಲ್ಲಾಧ್ಯಕ್ಷನನ್ನು ಗುಂಡಿಕ್ಕಿ ಕೊಲ್ಲಲಾಯಿತು.

ಇವೆಲ್ಲ ಘನಂಧಾರಿ ಸಾಧನೆಗಳಾಗಿರುವುದು ಆಗುತ್ತಿರುವುದು ಜಮ್ಮುಕಾಶ್ಮೀರ ರಾಜ್ಯದಲ್ಲಿ.ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಉಗ್ರ ಬರ್ಹಾನ್ ವನಿಯ ಹತ್ಯೆಯ ನಂತರ ಭುಗಿಲೆದ್ದ ಹಿಂಸಾಚಾರ, Demonetization ಮತ್ತು ಸರ್ಜಿಕಲ್ ಸ್ಟ್ರೈಕ್ ನಂತರ ತಾತ್ಕಾಲಿಕವಾಗಿ ತಣ್ಣಗಾಗಿತ್ತಾದರೂ ಈಗ ಭೀಕರ ಹಂತಕ್ಕೆ ಹೊರಟಿರುವಂತೆ ತೋರುತ್ತಿದೆ.ಜಮ್ಮುಕಾಶ್ಮೀರ ರಾಜ್ಯದಿಂದ ಈಗ ಬರುತ್ತಿರುವ ಸುದ್ದಿಗಳು 90ರ ದಶಕವನ್ನು ಮತ್ತೊಮ್ಮೆ ನೆನಪಿಸುತ್ತಿರುವುದು ಸುಳ್ಳಲ್ಲ. 90ರ ದಶಕದಲ್ಲೂ ಹೀಗೆ ಕಾನೂನು-ಸುವ್ಯವಸ್ಥೆಯೆನ್ನುವುದು ಹಾಳು ಬಿದ್ದು ಹೋಗಿತ್ತು.ಆಗಲೂ ಹೀಗೆ ಉಗ್ರಗಾಮಿಗಳು ಕಾಶ್ಮೀರಿಗಳ ಮನೆಬಾಗಿಲು ತಟ್ಟುತ್ತಿದ್ದರು,ಅನಾಮತ್ತಾಗಿ ಮನೆಯಿಂದ ಎತ್ತಾಕಿಕೊಂಡು ಹೋಗಿ ಚಿತ್ರಹಿಂಸೆ ಕೊಟ್ಟು ಕೊಲ್ಲುತ್ತಿದ್ದರು.ಈಗ ಹೊತ್ತಿ ಉರಿಯುತ್ತಿರುವ ದಕ್ಷಿಣ ಕಾಶ್ಮೀರದ ಸ್ಥಿತಿ ಮತ್ತೆ 90ರ ದಶಕಕ್ಕೆ ಹೊರಳಿ ನಿಂತಂತಿದೆ.

ಮತ್ತಷ್ಟು ಓದು »

9
ನವೆಂ

ಯಾರಿಗೂ ಬೇಡವಾದ ಪಾತಕಿ.. ದಾವೂದ್..!

– ಸಂತೋಷಕುಮಾರ ಮೆಹೆಂದಳೆ.

314922-dawood700( ಮೈಗಿಷ್ಟು ಪುಕ್ಕಟ್ಟೆ ಅನ್ನ, ತಂತಮ್ಮ ಮೋಜು ಮಸ್ತಿಯ ಚಟಕ್ಕಿಷ್ಟು ಯಾರದ್ದೋ ತಲೆ ಒಡೆದ ದುಡ್ಡು.. ಅದಕ್ಕೆ ಸರಿಯಾಗಿ ಮೆರೆಯೋದಕ್ಕೆ ಪಾಪಿಲೋಕದ ಕಡುಗತ್ತಲೆಯ ಸಾಮ್ರಾಜ್ಯ. ಕೊನೆಗೆ ಇದೆಲ್ಲದರಿಂದ ತಲೆ ತಪ್ಪಿಸಿಕೊಂಡು ಬದುಕಿಕೊಳ್ಳಲು ತೀರ ಪರಮ ನಿರ್ಲಜ್ಯ ಪಾಕಿಸ್ತಾನ. ಇಷ್ಟನ್ನಿಟ್ಟುಕೊಂಡು ಕತ್ತಲ ಲೋಕವನ್ನು ಆಳುತ್ತೇನೆಂದು ಹೊರಟು ಬಿಡುವವರು ತಮ್ಮ ಕೊನೆಯ ಕಾಲಾವಧಿಯುದ್ದಕ್ಕೂ ಇದೆಲ್ಲಾ ಶಾಶ್ವತ ಎಂದೇ ತಿಳಿದಿರುತ್ತಾರೆ. ದುರಾದೃಷ್ಟ ಮತ್ತು ನೂರಾರು ಹೆಣ್ಣುಮಕ್ಕಳ ಶಾಪ ಅವರನ್ನು ಜೀವಂತ ನರಕಕ್ಕೆ ನೂಕುತ್ತದೆ ಎನ್ನುವುದಕ್ಕೆ ಅಷ್ಟೆ ಉದಾಃ ಗಳು ನಮ್ಮ ಮುಂದಿವೆ. ಆದರೂ ಪಾತಕ ಲೋಕದ ಪಾತಕಿಗಳು ಬುದ್ಧಿ ಕಲಿತದ್ದೇ ಇಲ್ಲ. ಅದರಲ್ಲೂ ಪಾಕಿಸ್ತಾನದ ಕೊಚ್ಚೆಯಲ್ಲಿ ಹೊರಳುವ ಕ್ರಿಮಿಗಳಿಗೆ ಬುದ್ಧಿ ಮತ್ತು ವಿವೇಚನಾ ಶಕ್ತಿ ಬಿಟ್ಟು ಬೇರೆಲ್ಲ ಬೆಳೆಯುತ್ತದೆ. ಅದೇ ವಿನಾಶಕ್ಕೂ ಕಾರಣವಾಗುತ್ತದೆ. ಇಂಥ ಕೊಚ್ಚೆಯಂತಿರುವ ಕಥಾನಕದ ಕೊನೆಯ ತುಂಡು, ಅರೆಜೀವವಾಗಿರುವ ಪಾತಕಿ ತನಗೇ ತಾನೇ ಡಾನ್ ಎಂದು ಕರೆದುಕೊಂಡ ದಾವೂದ್ ಇಬ್ರಾಹಿಂ ಯಾವ ನೆಲಕ್ಕೆ ದ್ರೋಹ ಬಗೆದಿದ್ದನೋ ಅಲ್ಲಿವತ್ತು ಕಾಲೂರುವ ಬಗ್ಗೆ ಚಡಪಡಿಸುತ್ತಿದ್ದಾನೆ. ಆದರೆ ಊರಲು ಒಂದು ಕಾಲೇ ಉಳಿದಿಲ್ಲ. ಬದುಕಿನ ವಿಪರ್ಯಾಸ ಅಂದರೆ ಇದೇ ಅಲ್ಲವೇ..?) ಮತ್ತಷ್ಟು ಓದು »

23
ಸೆಪ್ಟೆಂ

ಜಮ್ಮು-ಕಾಶ್ಮೀರ (ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ ತಲ್ಲಣಗಳು)

ನಿಲುಮೆ ತಂಡವು, ಮಂಗಳೂರಿನಲ್ಲಿ ( 18.09.2016 ) ರಂದು ನಡೆಸಿದ ‘ಕಾಶ್ಮೀರದ ಕುರಿತು ವಿಚಾರ ಸಂಕಿರಣ’  ಕಾರ್ಯಕ್ರಮದಲ್ಲಿ  ಚಕ್ರವರ್ತಿ ಸೂಲಿಬೆಲೆಯವರ ಮಾತುಗಳನ್ನು ರೂಪಲಕ್ಷ್ಮೀಯರವರು ಅಕ್ಷರ ರೂಪಕ್ಕಿಳಿಸಿದ್ದಾರೆ. ಅಂದಿನ ಕಾರ್ಯಕ್ರಮದ ವಿಚಾರಗಳು ಈಗ ನಿಲುಮೆಯ ಓದುಗರ ಮುಂದೆ..

ಚಕ್ರವರ್ತಿ ಸೂಲಿಬೆಲೆಯವರ ಭಾಷಣದ ಮುಖ್ಯಾಂಶಗಳು.

14088692_10154596775090649_5386569408904041755_nವರ್ಷಕೊಮ್ಮೆ ನಾನು ಜಮ್ಮು, ಕಾಶ್ಮೀರಕ್ಕೆ ಹೋಗೋದ್ರಿಂದ, ಅಲ್ಲಿ ನಾನು ನೋಡಿರುವ ಆಧಾರದ ಮೇಲೆ, ನನ್ನ ವಿಚಾರಗಳನ್ನು ಹೇಳ್ತೀನಿ. ಪ್ರೊಫೆಸರ್ ಪ್ರೇಮ್ ಶೇಖರ್ ಅವರು ಆಗಲೇ ಹೇಳಿದ ಪ್ರಕಾರ, ಕಾಶ್ಮೀರದಲ್ಲಿ ಮೂರು ತರಹದ ಜನಾಂಗಗಳಿವೆ. ೧. ಹಿಂದು, ೨. ಮುಸ್ಲಿಮ್ ಮತ್ತು ೩. ಬುದ್ದಿಸ್ಟ್ – ಲಡಾಕ್ ನಲ್ಲಿರುವಂತಹವರು. ಆದರೆ ಮುಸ್ಲಿಮರು ಹೇಳೋದು – ಕಾಶ್ಮೀರದಲ್ಲಿ ನಾಲ್ಕು ತರಹದ ಜನರಿದ್ದಾರೆ. ೧. ಹಿಂದೂ, ೨. ಮುಸ್ಲಿಮ್ – ಸುನ್ನಿ ಮತ್ತು ಶಿಯಾ ೩. ಲಡಾಕ್. ಪ್ರೇಮ್ ಶೇಖರ್ ಸರ್ ಹೇಳಿದ ಹಾಗೆಯೇ ಇನ್ನು ಮುಂದೆ ಕಾರ್ಗಿಲ್ ನ ಸುದ್ಧಿಗೆ ಪಾಕಿಸ್ತಾನ್ ಬರೋಲ್ಲ. ಯಾಕೆಂದರೆ ಕಾರ್ಗಿಲ್ ನಲ್ಲಿ ಹೆಚ್ಚಾಗಿರುವ ಮುಸ್ಲಿಮರು – ಶಿಯಾ ಪಂಗಡದವರು. ಪಾಕಿಸ್ತಾನದಲ್ಲಿರುವ ಮುಸ್ಲಿಮರು – ಸುನ್ನಿ ಪಂಗಡದವರು. ಕಾಶ್ಮೀರದ ಕಣಿವೆಯಲ್ಲಿರೋ ಮುಸ್ಲಿಮರು, ಪಾಕಿಸ್ತಾನದ ಮುಸ್ಲಿಮರನ್ನು ತಮ್ಮ ಮುಸಲ್ಮಾನರು ಅಂತಂದುಕೊಳ್ತಾರೆ. ಆದರೆ ಕಾರ್ಗಿಲ್ ನ ಶಿಯಾದವರಿಗೆ ಚೆನ್ನಾಗಿ ಗೊತ್ತು. ತಾವೇನಾದರೂ ಪಾಕಿಸ್ತಾನಕ್ಕೆ ಹೋದರೆ, ಇದುವರೆವಿಗೂ ಕಣಿವೆಯಲ್ಲಾದ ಅತ್ಯಾಚಾರಗಳು, ದೌರ್ಜನ್ಯಗಳನ್ನು, ಈ ಪಾಕಿಸ್ತಾನದ ಸುನ್ನಿಗಳು ತಮ್ಮ ಮೇಲೆಯೇ ನಡೆಸುತ್ತಾರೆ. ಆ ಭಯದಿಂದ ಕಾರ್ಗಿಲ್ ನ ಮುಸ್ಲಿಮರು, ಏನೇ ಆದರೂ ನಾವು ಭಾರತದಲ್ಲೇ ಇರ್ತೀವಿ. ಪಾಕಿಸ್ತಾನಕ್ಕೆ ಸೇರೋಲ್ಲ ಅಂತಾ ಹೇಳ್ತಾರೆ. ಮತ್ತಷ್ಟು ಓದು »

10
ಸೆಪ್ಟೆಂ

ಜಮ್ಮು-ಕಾಶ್ಮೀರ (ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ ತಲ್ಲಣಗಳು)

ನಿಲುಮೆ ತಂಡ ನಡೆಸಿದ ಕಾಶ್ಮೀರದ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪ್ರೊ.ಪ್ರೇಮಶೇಖರವರ ಮಾತುಗಳನ್ನು ಶೋಭ ರಾವ್ ರವರು ಅಕ್ಷರ ರೂಪಕ್ಕಿಳಿಸಿದ್ದಾರೆ. ಅಂದಿನ ಕಾರ್ಯಕ್ರಮದ ವಿಚಾರಗಳು ಈಗ ನಿಲುಮೆಯ ಓದುಗರ ಮುಂದೆ..

14088692_10154596775090649_5386569408904041755_nಕಾಶ್ಮೀರದ ಬಗ್ಗೆ ಇಂದು ಹಲವಾರು ಜನ ತಮ್ಮ ಅಲ್ಪಜ್ಞಾನದಿಂದ ಹಲವಾರು ತರಹ ಮಾತಾಡುತ್ತಾರೆ. ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. ದುರಂತವೆಂದರೆ ಅದನ್ನು ಕೇಳಲು ಕೂಡ ಬಹಳಷ್ಟು ಜನರಿದ್ದಾರೆ. ನಾವು ಅವರ ಬಳಿ ಹೋಗಿ ಬೀದಿ ಜಗಳ ಮಾಡಬೇಕಿಲ್ಲ. ವಸ್ತುನಿಷ್ಠ ಚರ್ಚೆಯನ್ನು ಏರ್ಪಡಿಸಿ ನಿಜಸಂಗತಿಗಳನ್ನ ತಿಳಿಸಿದರೆ ಸಾಕು. ಕಾಶ್ಮೀರ ನಮ್ಮದೂ ಎಂದು ಭಾರತವೂ ಹೇಳುತ್ತೆ, ಪಾಕಿಸ್ತಾನವೂ ಹೇಳುತ್ತೆ. ನಾವು ಇವೆರೆಡಕ್ಕೂ ಸೇರಿಲ್ಲ ಎಂದು ಮತ್ತೊಂದು ಗುಂಪು ಕೂಡ ಹೇಳುತ್ತೆ. ಇದೇ ಕಾಶ್ಮೀರದ ನಿಜವಾದ ಸಮಸ್ಯೆ. ಮತ್ತಷ್ಟು ಓದು »

28
ಜೂನ್

ಗಾಂಧಿ ತಾತಾ ಯಾಕಾಗಿ ಹೀಗೆಲ್ಲಾ ಮಾಡಿದಿರಿ?

– ಶ್ರೀಕಾಂತ್ ಆಚಾರ್ಯ

mahatma_gandhiನೇರಾ ನೇರಾ ವಿಷಯಕ್ಕೆ ಬರುತ್ತೀನಿ. ಕೆಲವಷ್ಟು ವಿಷಯಗಳಲ್ಲಿ ಗಾಂಧೀ ತಾತಾ ತುಂಬಾ ಇಷ್ಟವಾಗಿ ಬಿಡುತ್ತಾರೆ. ಆದರೆ ಉಳಿದ ಕೆಲವು ವಿಷಯಗಳಲ್ಲಿ ನನಗೆ ಗಾಂಧೀಜಿಯ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿಲ್ಲ. ಅಷ್ಟಕ್ಕೂ ನನ್ನ ಅಭಿಪ್ರಾಯ ಇಲ್ಲಾರಿಗೂ ಅನಿವಾರ್ಯವಲ್ಲ ಬಿಡಿ. ಹೇಳಿದ್ದೆಲ್ಲವನ್ನ ಸುಖಾಸುಮ್ಮನೆ ನಂಬಿ ಬಿಡಿ ಅಂತ ನಿಮ್ಮಲ್ಲಿ ಅಂಗಾಲಾಚುವುದೂ ಇಲ್ಲ. ಸಮಾನ ಮನಸ್ಕರಿದ್ದರೆ ಓದಿಕೊಳ್ಳಬಹುದು. ಹೌದು ಅಂತನ್ನಿಸಿದರೆ ಮಾತ್ರ ತಾಕಲಾಟಕ್ಕೆ ಎಡತಾಕುತ್ತೀರಿ. ಯೋಚನೆಗೆ ಬೀಳುತ್ತೀರಿ. ಅಖಂಡ ಭಾರತದ ಕೋಟ್ಯಾಂತರ ಜನರ ಹೃದಯ ಹೊಕ್ಕಿ ಕುಳಿತ ಗಾಂಧೀಜಿಯನ್ನ ಕೆಲವೊಂದು ಕಾರಣಕ್ಕೆ ದ್ವೇಷಿಸುತ್ತಿದ್ದೀನಿ ಅಂದರೆ ಬಹುಷಃ ನೀವೂ ತಕರಾರು ಮಾಡಲಿಕ್ಕಿಲ್ಲ(ವಿಷಯ ಬಲ್ಲವರಿಗೆ ಮಾತ್ರ) ಅಲ್ಲವಾ? ಮತ್ತಷ್ಟು ಓದು »

14
ಜನ

ಬೊಳುವಾರರ “ಮುಸ್ಲಿಮನಾಗಿರುವುದೆಂದರೆ…” ಲೇಖನದ ಸುತ್ತ ಒಂದು ಚರ್ಚೆ- ಭಾಗ೨

ಬೊಳುವಾರರ “ಮುಸ್ಲಿಮನಾಗಿರುವುದೆಂದರೆ…” ಲೇಖನದ ಸುತ್ತ ಒಂದು ಚರ್ಚೆ ಭಾಗ೧

– ಪ್ರೇಮಶೇಖರ

ಶ್ರೀಯುತ ದಿನೇಶ್ ಅಮೀನ್,

ಮುಸ್ಲಿಮನಾಗಿರುವುದೆಂದರೆ.. ಬೊಳುವಾರುನಿಮ್ಮ ಉತ್ತರದ ಮೊದಲೆರಡು ಕಂತುಗಳನ್ನು ಓದಿ, ಅವುಗಳಲ್ಲಿನ ಕೊಂಕು ಮತ್ತಿತರ ನಕಾರಾತ್ಮಕ ಅಂಶಗಳನ್ನು ನಿರ್ಲಕ್ಷಿಸಿ, ಅವುಗಳಲ್ಲಿರುವ ವೈಚಾರಿಕತೆಯನ್ನಷ್ಟೇ ಗಮನಕ್ಕೆ ತೆಗೆದುಕೊಂಡೆ. ನಿಮ್ಮ ಮಾತುಗಳಿಗೆ ರೋಹಿತ್ ಚಕ್ರತೀರ್ಥರು ಸಮರ್ಪಕವಾಗಿಯೇ ಉತ್ತರಿಸಿದ್ದಾರೆ. ಆದಾಗ್ಯೂ, ನಿಮಗೆ ಉತ್ತರಿಸಬೇಕಾದ್ದು ನನ್ನ ಜವಾಬ್ಧಾರಿ ಎಂಬ ಅರಿವಿನಿಂದ ದೀರ್ಘ ವಿವರಣೆಗಳುಳ್ಳ ಪ್ರತಿಕ್ರಿಯೆಯನ್ನು ಸಿದ್ಧಪಡಿಸಿದ್ದೆ. ಇಸ್ಲಾಂ ಏಶಿಯಾ, ಯೂರೋಪ್ ಮತ್ತು ಆಫ್ರಿಕಾಗಳ ಬಹುಪಾಲು ನಾಡುಗಳಿಗೆ ಪ್ರಸರಿಸಿದ್ದು ಆಕ್ರಮಣದ ಮೂಲಕ ಎಂದು ಹೇಳಲು ಬಳಸಿದ ‘ಕತ್ತಿಯ ಮೂಲಕ’ ಎಂಬ ಮಾತನ್ನು ನೀವು ತಿಳಿದೋ ತಿಳಿಯದೆಯೋ ಅಪಾರ್ಥ ಮಾಡಿಕೊಂಡು ಕತ್ತಿಯ ಉಗಮದ ಬಗ್ಗೆ ಮಾತೆತ್ತಿ ಇಡೀ ಚರ್ಚೆಯನ್ನು ದಾರಿ ತಪ್ಪಿಸಲು ಹೋದ ನಿಮ್ಮ ವಾದಸರಣಿ; ಹಿಂದೂ-ಮುಸ್ಲಿಂ ಎಂದು ಧಾರ್ಮಿಕ ಸಂಘರ್ಷದ ಬಗ್ಗೆ ಹೇಳುತ್ತಲೇ ಹಠಾತ್ತಾಗಿ ಕಾಂಗ್ರೆಸ್-ಬಿಜೆಪಿ (ಗುಜರಾತ್ ೨೦೦೨-ದೆಹಲಿ ೧೯೮೪) ಎಂದು ರಾಜಕೀಯ ಆಯಾಮಕ್ಕೆ ಜಿಗಿಯುವ ನಿಮ್ಮ ಗೊಂದಲಮಯ ಚಿಂತನಾಧಾಟಿ; ರಕ್ತಪಾತಕ್ಕೆ ಸಂಬಂಧಿಸಿದಂತೆ ಹಿಂದೂಗಳ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದ ಬಗ್ಗೆ ಪಕ್ಷಪಾತಿ ನಿಲುವು ತೋರುವ ನಿಮ್ಮ ವಿರೋಧಾಭಾಸಪೂರ್ಣ, ಅತಾರ್ಕಿಕ ನಡೆಗಳು- ಎಲ್ಲವುಗಳತ್ತ ಸೂಕ್ತ ಉದಾಹರಣೆಗಳ ಮೂಲಕ ನಿಮ್ಮ ಗಮನ ಸೆಳೆಯಲು ಪ್ರಯತ್ನಿಸಿದ್ದೆ. ಅದು ನಮ್ಮ ನಾಡಿನ ಇತಿಹಾಸದ ಬಗ್ಗೆ, ವರ್ತಮಾನದ ಬಗ್ಗೆ ಒಂದು ಆರೋಗ್ಯಕರ ಚರ್ಚೆಗೆ ಅವಕಾಶ ಮಾಡಿಕೊಡುತ್ತದೆಂದು ನಂಬಿದ್ದೆ. ಆದರೆ ನಿಮ್ಮ ನಾಲ್ಕನೆಯ ಕಂತನ್ನು ಓದಿದ ನಂತರ ನಿಮ್ಮೊಂದಿಗೆ ನಾಗರಿಕ ವಿಧಾನದಲ್ಲಿ ಸಂವಾದ ನಡೆಸುವುದು ಸಾಧ್ಯವಿಲ್ಲ ಎಂದರಿವಾಯಿತು. ಇಷ್ಟಾಗಿಯೂ, ಸುಮ್ಮನುಳಿದುಬಿಡುವುದೂ ಸರಿಯೆನಿಸಲಿಲ್ಲ. ಹೀಗಾಗಿ ಆ ದೀರ್ಘ, ವಿವರಣಾತ್ಮಕ ಉತ್ತರವನ್ನು ಬದಿಗಿರಿಸಿ ಒಂದೆರಡು ಮೂಲಭೂತ ಪ್ರಶ್ನೆಗಳನ್ನಷ್ಟೇ ಎತ್ತಿಕೊಂಡು ಆ ಬಗ್ಗೆ ಸಂಕ್ಷಿಪ್ತವಾಗಿ ನಿಮಗೆ ಕೆಲವು ಮಾತುಗಳನ್ನು ಹೇಳಲು ಇಲ್ಲಿ ಪ್ರಯತ್ನಿಸಿದ್ದೇನೆ. ಇವುಗಳಲ್ಲಿ ಹೆಚ್ಚಿನವು ನಾನು ಸ್ವಂತ ಅಧ್ಯಯನ, ಅವಲೋಕನ, ಚಿಂತನೆಯ ಮೂಲಕ ಗಳಿಸಿದವುಗಳಾದ್ದರಿಂದ ನಿಮಗೆ ಬೇರೆಲ್ಲೂ ಸಿಗಲಾರವು. “ನಾನು ಲೇಖಕನ ವ್ಯಕ್ತಿತ್ವವನ್ನು ಆತನ ಲೇಖನಗಳ ಮೂಲಕವೇ ಅರ್ಥಮಾಡಿಕೊಳ್ಳುತ್ತಾ ಬಂದವನು” ಎಂದು ವಾರದ ಹಿಂದೆ ಘೋಷಿಸಿದ ನೀವು ನಿಮ್ಮ ಮಾತಿಗೆ ಸತ್ಯವಾಗಿ ನಡೆದುಕೊಂಡಿದ್ದರೆ ಇದನ್ನೆಲ್ಲಾ ಹೇಳಬೇಕಾದ ಅಗತ್ಯ ನನಗೆ ಬರುತ್ತಲೇ ಇರಲಿಲ್ಲ.

ಮೊದಲಿಗೆ ಒಂದು ಸ್ಪಷ್ಟೀಕರಣ- ಮಾನವರೆಲ್ಲರೂ ಸಮಾನರು ಎಂಬ ಧೃಡನಂಬಿಕೆಯ ತಳಹದಿಯ ಮೇಲೆ ಗಟ್ಟಿಯಾಗಿ ನಿಂತು ಎಲ್ಲ ಬಗೆಯ ಹಿಂಸೆ, ಶೋಷಣೆ, ತಾರತಮ್ಯಗಳನ್ನು ತಿರಸ್ಕರಿಸುವುದು ನನ್ನ ಜೀವನಮೌಲ್ಯ. ವಿಮರ್ಶೆಯನ್ನು ಸ್ವಾಗತಿಸುವ ಧರ್ಮದ ವಿರುದ್ಧ ಪುಂಖಾನುಪುಂಖ ಹೇಳಿಕೆ ನೀಡುವ, ವಿಮರ್ಶೆಗೆ ಬದಲಾಗಿ ತಲೆದಂಡ ಕೇಳುವ ಧರ್ಮದ ಬಗ್ಗೆ ಜಾಣಮೌನ ವಹಿಸುವ ಚತುರಮತಿ ಬುದ್ಧಿಜೀವಿ ನಾನಲ್ಲ. ಅಲ್ಲದೇ, ಹಣ, ಪ್ರಶಸ್ತಿ, ಸ್ಥಾನಮಾನಗಳ ಹುಚ್ಚೂ ನನಗಿಲ್ಲ.

ಮತ್ತಷ್ಟು ಓದು »