ಸ್ಫೂರ್ತಿ ದಾರಿಯ ದೀಪಗಳು
– ಶಮಂತ್ ಬಿ ಎಸ್
‘ಜೀವನವೇ ದುಃಖ’ ಎಂಬ ಬುದ್ಧನ ಮಾತನ್ನು, ನಮ್ಮ ದೇಶವನ್ನು ಪ್ರತಿನಿಧಿಸಿದ ‘ಪ್ಯಾರಾಲಂಪಿಕ್ಗಳು’ ಗಂಭೀರವಾಗಿ ಪರಿಗಣಿಸಲಿಲ್ಲ. ಇವರ ಪ್ರತಿನಿತ್ಯದ ಜೀವನವೇ ಜ್ವಾಲೆಯ ಕೂಪವಾಗಿದ್ದರೂ, ಆತ್ಮಸ್ಥೈರ್ಯವನ್ನು ಮಾತ್ರ ಕಳೆದುಕೊಳ್ಳದಿರುವುದು ನಮ್ಮೆಲ್ಲರಿಗೂ ಸ್ಫೂರ್ತಿಯ ಸರಮಾಲೆಯೇ ಸರಿ. ಇತ್ತೀಚಿಗೆ ಮುಕ್ತಾಯಗೊಂಡ ಪ್ಯಾರಾಲಂಪಿಕ್ಸ್ ಸ್ಪರ್ಧೆಯಲ್ಲಿ ಭಾರತ ೪ ಪದಕಗಳನ್ನು ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ೪೩ನೇ ಸ್ಥಾನವನ್ನು ಪಡೆಯಿತು. ನಮ್ಮ ರಾಷ್ಟ್ರದಲ್ಲಿ ಕ್ರೀಡೆಗೆ ನೀಡುತ್ತಿರುವ ಅಲ್ಪ ಪ್ರೋತ್ಸಾಹಕ್ಕೆ ಹೋಲಿಸಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸ್ಥಾನವನ್ನು ನಾವು ಹೆಮ್ಮೆಯಿಂದಲೇ ಪರಿಗಣಿಸಬೇಕು. ಮತ್ತಷ್ಟು ಓದು