ವಿಕೃತ ಮನಸ್ಸಿನ ಬುದ್ಧಿಗೇಡಿ ಜೀವಿಗಳಿಗೆ ಸ್ವದೇಶಾಭಿಮಾನ ಬರಲೇ ಇಲ್ಲ…
ಶಿವಾನಂದ ಶಿವಲಿಂಗ ಸೈದಾಪೂರ. ಎಂ.ಎ. ವಿದ್ಯಾರ್ಥಿ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ.
“ಇದುವರೆಗೂ ಎಡಬಿಡಂಗಿಗಳು ಬರೆದದ್ದೇ ಇತಿಹಾಸ, ಹೇಳಿದ್ದೇ ಸತ್ಯಾಂಶ ಆಗಿ ಬಿಟ್ಟಿದೆ. ವಿಶ್ವವಿದ್ಯಾಲಯ, ಕಾಲೇಜು ಕ್ಯಾಂಪಸ್ಗಳಲ್ಲಿನ ಬೌದ್ಧಿಕ ಸ್ವಚ್ಚತೆಗೂ ಕೂಡ ಇಂದು ‘ಸ್ವಚ್ಛ ಭಾರತ ಅಭಿಯಾನ’ ನಡೆಯಬೇಕಿದೆ”.
ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ನಮ್ಮ ವಿಕೃತ ಮನಸ್ಸಿನ ಬುದ್ಧಿಗೇಡಿ ಜೀವಿಗಳಿಗೆ ಸ್ವದೇಶಭಿಮಾನ ಬರಲೇ ಇಲ್ಲ. ಮುಖ್ಯವಾಗಿ ಮೂರು ಸಲ ನೇರವಾಗಿ ಸೋತು, ಲೆಕ್ಕವಿಲ್ಲದಷ್ಟು ಸಾರಿ ಹಿಂದಿನಿಂದ ಚುರಿ ಹಾಕಲು ಬಂದು ಚಿಂದಿ ಚಿಂದಿಯಾದ ಪಾಕಿಸ್ತಾನದ ಬಗ್ಗೆ ಆಗಾಗ ಒಲವು ತೋರಿಸುತ್ತಿರುವ ಬುದ್ಧಿಜೀವಿಗಳ ಮನಸ್ಥಿತಿ ಈ ಜನ್ಮದಲ್ಲಿ ಸರಿ ಹೋಗುವುದಿಲ್ಲ ಎಂಬುವುದಕ್ಕೆ ಮತ್ತೆ ಅರುಂಧತಿ ರಾಯ್ ಸಾಬೀತು ಮಾಡಿದ್ದಾಳೆ. ಈ ಹಿಂದೆ ಒಮ್ಮೆ ಕಾಶ್ಮೀರದ ಬಗ್ಗೆ ಮಾತನಾಡುತ್ತ “ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಆಗಿರಲಿಲ್ಲ” ಎಂದು ತನ್ನ ಮಾನಸಿಕ ಅಸ್ವಸ್ತತೆಯನ್ನು ಪ್ರದರ್ಶಿಸಿದಳೇ ಹೊರತು, ಪಾಕಿಸ್ತಾನ ಯಾವುದರ ಅವಿಭಾಜ್ಯ ಅಂಗವೆಂದು ಹೇಳಲಿಲ್ಲ. ಈಗ ಏಳು ಲಕ್ಷ ಸೈನಿಕರ ಬದಲು ಎಪ್ಪತ್ತು ಲಕ್ಷ ನೇಮಿಸಿದರೂ ಪ್ರತ್ಯೇಕವಾದಿಗಳನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. ದಿನಗಳೆದಂತೆ ಅತಿ ಬುದ್ಧಿವಂತಿಕೆ ಪ್ರದರ್ಶಿಸಲು ಹೊರಟು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ನಗೆಪಾಟಲಿಗೆ ಒಳಗಾಗುತ್ತಿದ್ದಾಳೆ. ಪದೆ ಪದೇ ಪಾಕಿಸ್ತಾನಿಯರನ್ನು ಸಮರ್ಥಿಸುವ ಈಕೆಗೆ ಸಾವಿರಾರು ವರ್ಷದ ಹಿಂದೆ ಈ ಹಿಂದೂ ದೇಶ (ಭಾರತ)ವು ಎಷ್ಟು ವಿಸ್ತೀರ್ಣಗೊಂಡಿತ್ತೆಂಬ ಸಾಮಾನ್ಯ ಜ್ಞಾನವು ಈಕೆಗೆ ಇದ್ದಂತಿಲ್ಲ. ಪಾಕಿಸ್ತಾನದ ಬಗ್ಗೆ ಮಾತನಾಡುವ ಈಕೆಗೆ ಪಾಕಿಸ್ತಾನ, ಅಪಘಾನಿಸ್ತಾನಗಳ ಮೂಲ ನಿವಾಸಿಗಳು ಯಾರು ಎಂಬುದನ್ನು ಒಮ್ಮೆಯೂ ಹೇಳಿಲ್ಲ. ನಿರಂತರವಾಗಿ ಈಕೆ ಪಾಕಿಸ್ತಾನದ ಪ್ರಜೆಯಂತೆ ವರ್ತಿಸುತ್ತ ಬಂದಿದ್ದಾಳೆ. ಮತ್ತಷ್ಟು ಓದು
ಎಳ್ಳಷ್ಟೂ ಒಳ್ಳೆಯದನ್ನು ಮಾಡದ ಇವರು ಹಿಮಾಲಯದಷ್ಟು ಕೆಟ್ಟದನ್ನೆ ಮಾಡುತ್ತಿದ್ದಾರೆ!!!
– ಶಿವಾನಂದ ಶಿವಲಿಂಗ ಸೈದಾಪೂರ (ಎಂ.ಎ. ವಿದ್ಯಾರ್ಥಿ)
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ
ಎಬಿವಿಪಿಯ ರಾಜ್ಯ ಕಾರ್ಯಕಾರಣಿ ಸದಸ್ಯರು
ಇವರು ಬುದ್ದಿ ಜೀವಿಗಳೊ ಇಲ್ಲ ಬೌದ್ಧಿಕ ಭಯೋತ್ಪಾದಕರೊ..?
ಬುದ್ದಿ ಜೀವಿ ಎನ್ನಿಸಿಕೊಂಡವರು ಯಾವಾಗಲೂ ಭಾಜಪವನ್ನು ಓಪ್ಪಿಕೊಳ್ಳುವುದಿಲ್ಲವೆಂಬುವುದು ತೆರೆದ ಸತ್ಯ. ನಿರಂತರವಾಗಿ ಅದನ್ನು ತೆಗಳುವುದರಲ್ಲಿಯೇ ಕಾಲ ಕಳೆಯುತ್ತಾರೆಂಬುವುದು ವಾಸ್ತವಿಕ ಸತ್ಯ. ಚುನಾವಣೆಗಳಲ್ಲಿ ಭಾಜಪ ಯಾವಾಗ ಎದುರಾಳಿಗಳನ್ನು ಹೀನಾಯವಾಗಿ ಸೋಲಿಸಿ ಕೇಂದ್ರದ ಚುಕ್ಕಾಣಿ ಹಿಡಿಯಿತೋ ಅದಾಗಲೇ ವಿವಿಧ ಬಗೆಯ ಸೊಗಲಾಡಿತನದ ನಾಟಕಗಳು ಪ್ರದರ್ಶನವಾಗತೊಡಗಿದವು. ಆರಂಭದಲ್ಲಿ ಖರೀದಿಸಿದ ಪ್ರಶಸ್ತಿ ವಾಪಸಿಕರಣದ ಜೊತೆಗೆ ಅಸಹಿಷ್ಣುತೆಯ ಆಟ ಆರಂಭಿಸಿ ಜೆ.ಎನ್.ಯು, ಹೈದರಾಬಾದ್ ವಿವಿಗಳತ್ತ ಸುತ್ತ ಹಾಯ್ದವು. Surgical strike ಬಗ್ಗೆ ಸಂಶಯ ವ್ಯಕ್ತ ಪಡಿಸಿ, Demonetisation ವಿರೋಧಿಸಿದರು. ಆಶ್ಚರ್ಯದ ಸಂಗತಿ ಎಂದರೆ ವಿರೋಧಿಸಿ ವೀಡಿಯೊ ಹೇಳಿಕೆ ನೀಡಿರುವ ಕುಖ್ಯಾತ ವಿಚಾರವಾದಿಯೊಬ್ಬರ ಮನೆಯಲ್ಲಿ ಕೆಲವೆ ದಿನದಲ್ಲಿ ಗರಿ ಗರಿ ಹೊಸ ನೋಟಿನ ಸುರುಳಿಗಳೆ ಸಿಕ್ಕವು. ಅದು ಬೇರೆ ವಿಷಯ. ಮತ್ತಷ್ಟು ಓದು
ಸೈದ್ಧಾಂತಿಕ ಸಂಘರ್ಷದಡಿಯಲ್ಲಿ ಸಾಹಿತ್ಯಿಕ ಭಯೋತ್ಪಾದನೆ..?
– ಸಂತೋಷಕುಮಾರ ಮೆಹೆಂದಳೆ.
( ಇವತ್ತು ಅರ್ಜೆಂಟಿಗೆ ಬಿದ್ದು ಸ್ಟೇಟಸ್ ಅಪ್ಡೇಟ್ ಮಾಡುವವರು ಅದನ್ನು ಪೂರೈಸಿ ಎದ್ದು ಹೋಗಿಬಿಡುತ್ತಿದ್ದಾರೆ. ಕೆಲವರಿಗದು ತಮ್ಮ ಟಿ.ಆರ್.ಪಿ. ಯ ಮಾನದಂಡವೂ ಆಗಿರುವುದರಿಂದ ಲಿಂಗ, ಧರ್ಮ ಸೇರಿದಂತೆ ವರ್ಗಬೇಧದ ವ್ಯತ್ಯಾಸವಿಲ್ಲದೆ, ಕಾಮ, ಕರ್ಮಗಳ ಅಭ್ಯಂತರವಿಲ್ಲದೆ ನಾಲ್ಕು ಸಾಲು ಬರೆಯುತ್ತಾರೆ ಇಲ್ಲಾ ಜಗತ್ತಿನ ಯಾವ ಮೂಲೆಯದ್ದೋ ಶೇರು ಮಾಡಿ ಚು.. ಚು.. ಎಂದು ಹಲ್ಲಿ ಲೊಚಗುಟ್ಟಿದಂತೆ ತಾವೊಂದೆರಡು ಸಾಲು ಸೇರಿಸಿಬಿಡುತ್ತಾರೆ. ಆದರೆ ಅದರ ಕೆಳಗೆ ಮುಖ ಮೂತಿ, ಪರಿಚಯವೇ ಇಲ್ಲದವರೂ, ಜಾತಿ ಪಂಥದ ಹೊರತಾಗಿ ಪರಮ ದ್ವೇಷಿಗಳಾಗಿ ಬದಲಾಗಿ, ನಿರಂತರ ಸಂಘರ್ಷಗಳಿಗಿಳಿದು ಉಳಿದುಬಿಡುತ್ತಾರಲ್ಲ ಅದರ ಹೊಣೆಗಾರಿಕೆ ಯಾರದ್ದು…? ) ಮತ್ತಷ್ಟು ಓದು