ವಿಷಯದ ವಿವರಗಳಿಗೆ ದಾಟಿರಿ

Posts tagged ‘ಬ್ಯಾಂಕ್’

30
ನವೆಂ

ನೋಟು ರದ್ದತಿಯ ಪೂರ್ವ ತಯಾರಿ ಮತ್ತು ದೂರ ದೃಷ್ಟಿತ್ವ…!

– ಶ್ರೇಯಾಂಕ ಎಸ್ ರಾನಡೆ

untitledಕಳೆದ ೭೦ ವರ್ಷಗಳಲ್ಲಿ ಭಾರತದ ಪ್ರತೀ ಪ್ರಜೆಗೆ ಬ್ಯಾಂಕ್ ಒಂದರಲ್ಲಿ ಖಾತೆ ತೆರೆಯುವಂತಾಗಲು ಹಿಂದಿನ ಸರಕಾರದ ‘ಸ್ವಾಭಿಮಾನ್’ದಂತಹ ಯೋಜನೆಯಿಂದಲೂ ಸಾಧ್ಯವಾಗಲಿಲ್ಲ. ಅದಕ್ಕೆ ಜನಧನ್ ಯೋಜನೆ ಬರಬೇಕಾಯಿತು. ಇದು ಉದ್ಯೋಗ ಖಾತ್ರಿಯಂತಹ ಸರಕಾರದ ೨೬ ಯೋಜನೆಗಳಲ್ಲಿ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆಯಾಗುವುದರಿಂದ ಆನೇಕ ರೀತಿಯ ಸೋರಿಕೆ, ಭ್ರಷ್ಟಾಚಾರ ಹಾಗೂ ದಾಖಲೆಗಳ ಕೊರತೆ ಎಲ್ಲದಕ್ಕೂ ಕಡಿವಾಣ ಹಾಕಿದಂತಾಯಿತು. ಅದಕ್ಕೆ ಪೂರಕವಾಗಿ ಕಳೆದ ವರ್ಷದಿಂದ ಜಾರಿಗೆ ತಂದ “ಜಾಮ್ ಟ್ರಿನಿಟಿ” ಯೋಜನೆ, ಅಂದರೆ ವ್ಯಕ್ತಿಯೊಬ್ಬರ ಜನ್ ಧನ್ ಖಾತೆ- ಆಧಾರ್ ಸಂಖ್ಯೆ-ಮೊಬೈಲ್ ಸಂಖ್ಯೆ. ಇವುಗಳನ್ನು ಬೆಸೆಯುವ ಮಹತ್ವದ ಕಾರ್ಯದಿಂದ ಸೋರಿಕೆ, ನಕಲಿ ಫಲಾನುಭವಿಗಳು, ನಕಲಿ ಖಾತೆಯಿಂದ ನಡೆಸಬಹುದಾದ ಮಾರಕ ವ್ಯವಹಾರಗಳನ್ನು ತಡೆಯಲು ಸಾಧ್ಯವಾಗಲಿದೆ. ಇದನ್ನೇ ಭಾನುವಾರ ಪ್ರಧಾನಿಯವರು ವ್ಯಕ್ತಪಡಿಸಿರುವ ದೂರದೃಷ್ಟಿಯ ಮನಿ ಕಿ ಬಾತ್. ಇಡೀ ದೇಶವೇ ಮೊಬೈಲ್ ಮೂಲಕ ನೋಟು ರಹಿತ ಆರ್ಥಿಕ ವ್ಯವಹಾರದತ್ತ ಸಾಗಬೇಕೆಂಬ ಇಂಗಿತಕ್ಕೆ ಪೂರಕವಾಗಿ ಬಹಳ ಅಚ್ಚುಕಟ್ಟಾಗಿ ಸಜ್ಜುಗೊಳಿಸಿದ ಡಿಜಿಟಲ್ ಬ್ಯಾಂಕಿಂಗ್ ಗೆ ಪೂರ್ವಭೂಮಿಕೆ. ಮತ್ತಷ್ಟು ಓದು »

21
ನವೆಂ

ಸದ್ಯದ ಸನ್ನಿವೇಶದಲ್ಲಿ ನಮ್ಮ ಮಾಧ್ಯಮಗಳ ನಡೆ ಸರಿಯಾಗಿದೆಯೇ..?

– ಮು ಅ ಶ್ರೀರಂಗ

maxresdefaultದಿನ ನಿತ್ಯ ಮಾಮೂಲಾಗಿ ಸಾಗುತ್ತಿದ್ದ ಜೀವನಕ್ಕೆ ಸ್ವಲ್ಪ ತಡೆ ಉಂಟಾದಾಗ ಮನಸ್ಸಿಗೆ ಕಸಿವಿಸಿ ಆಗುವುದು ಸಹಜ. ೫೦೦ ಮತ್ತು ೧೦೦೦ ನೋಟುಗಳ ಚಲಾವಣೆಯ  ನಿಷೇಧದ ಪರಿಣಾಮದಿಂದಲೂ ಹೀಗಾಗಿದೆ. ಬಸ್ಸು, ರೈಲು, ವಿಮಾನ, ನೀರು, ವಿದ್ಯುತ್ತು ಇವುಗಳ ದರ ಇಷ್ಟನೇ ತಾರೀಖಿನಿಂದ ಹೆಚ್ಚಾಗುತ್ತದೆ ಎಂದು ಮುಂಚಿತವಾಗಿ ಘೋಷಣೆ ಮಾಡಿದಂತೆ ನೋಟಿನ ವಿಷಯದಲ್ಲಿ  ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಅದರ ಹಿಂದಿನ ಉದ್ದೇಶವೇ ನಿರರ್ಥಕವಾಗುತ್ತದೆ. ಇದು ಸಾಮಾನ್ಯ ಜ್ಞಾನ. ಆ ಎರಡು ನೋಟುಗಳ ಬದಲಾವಣೆಗಾಗಿ ೫೦ ದಿನಗಳ ಕಾಲಾವಕಾಶವಿದೆ.  ಆದರೆ   ಹೆಚ್ಚಿನ ಪತ್ರಿಕೆ ಮತ್ತು ಟಿ  ವಿ ಸುದ್ದಿ ಮಾಧ್ಯಮಗಳು ನೆಗೆಟಿವ್ ಧೋರಣೆಗೆ ಕೊಟ್ಟಷ್ಟು ಮಹತ್ವವನ್ನು ಧನಾತ್ಮಕ ಸುದ್ದಿಗಳಿಗೆ ಕೊಡದೆ ಇರುವುದು ಸಮಸ್ಯೆಯು ಜಟಿಲವಾಗುತ್ತಿದೆ ಎಂಬ ಭಾವನೆಯನ್ನು ಜನರಲ್ಲಿ ಹರಡುತ್ತಿದೆ. ಮತ್ತಷ್ಟು ಓದು »

4
ಜನ

ಸ್ಥಳೀಯ ಭಾಷೆಗಳ ಬಳಕೆಯ ಬಗೆಗೆ RBI ಹಾಗೂ BCSBI ಏನು ಹೇಳುತ್ತದೆ?

-ರವಿ ಸಾವ್ಕರ್

ಇತ್ತೀಚಿಗೆ ಹಲವಾರು ಕನ್ನಡಿಗ ಗ್ರಾಹಕರು ತಮಗೆ ಬ್ಯಾಂಕ್ ಗಳಲ್ಲಿ ಕನ್ನಡದಲ್ಲಿ ಸೇವೆ ಕೊಡಬೇಕು ಎಂದು ಬ್ಯಾಂಕ್ ಗಳಿಗೆ ದೂರನ್ನು ಕೊಟ್ಟಿದಾರೆ. ಕೆಲವು ಬ್ಯಾಂಕ್ ಗಳು ಗ್ರಾಹಕರ ದೂರಿಗೆ ಸ್ಪಂದಿಸಿ ಕನ್ನಡದಲ್ಲಿ ಸೇವೆ ಕೊಟ್ಟಿದಾರೆ. ಮತ್ತೆ ಕೆಲವರು ಕೊಡುವುದಿಲ್ಲ ಎಂದು ಸಾರಾಸಗಟಾಗಿ ತಿರಸ್ಕರಿಸಿದ ಸಂಗತಿಗಳು ಇದೆ.

RBI ಹಾಗೂ BCSBI ಭಾಷೆಯ ಬಳಕೆಯ ಬಗ್ಗೆ ಏನು ಹೇಳುತ್ತದೆ ಹಾಗೂ ಕನ್ನಡದಲ್ಲಿ ಸೇವೆ ಕೊಡಲು ನಿರಾಕರಿಸಿದರೆ ಬ್ಯಾಂಕ್ ಗಳ ಲೋಕಪಾಲರಿಗೆ(Banking ombudsman) ದೂರು ಕೊಡುವುದು ಹೇಗೆ ಅಂತ ಇಲ್ಲಿ ಕಲೆ ಹಾಕಲಾಗಿದೆ. ಕನ್ನಡದಲ್ಲಿ ಸೇವೆ ಸಿಗದೇ ಹೋದರೆ ಈ ನಿಯಮಗಳನ್ನು ತಿಳಿಸಿ ಬ್ಯಾಂಕ್ ಗಳಿಗೆ ದೂರು ಕೊಡಿ.

ಭಾಷಾ ಆಯಾಮದಲ್ಲಿ RBI ನಿರ್ದೇಶನ ಹೀಗಿದೆ
“In order to ensure that banking facilities percolate to the vast sections of the population,banks should make available all printed material used by retail customers including account opening forms, pay-in-slips, passbooks etc. in trilingual form i.e. English, Hindi and the concerned Regional Language.”
http://rbi.org.in/scripts/BS_ViewMasCirculardetails.aspx?Id=2673&Mode=0
“ಎಲ್ಲ ಜನರಿಗೆ ಉಪಯೋಗ ಆಗುವಂತೆ ಚೆಕ್ಕು, ಪಾಸ್ ಬುಕ್ ಗಳು ಸೇರಿದಂತೆ ಎಲ್ಲ ಮುದ್ರಿತ ಸಾಮಗ್ರಿಗಳನ್ನು (printed material) ಸ್ಥಳೀಯ ಭಾಷೆಗಳಲ್ಲಿಯೂ ಕೊಡಬೇಕು ”

ಭಾಷಾ ಆಯಾಮದಲ್ಲಿ Code of Banks Commitment to Customers ಏನು ಹೇಳುತ್ತದೆ?
“Key commitment of BCSBI is to help You To Understand How Our Financial Products And Services Work By Giving you information about them in any one or more of the following languages – Hindi, English or the appropriate local language

http://www.bcsbi.org.in/pdf/CodeOfBanks_Aug09.pdf ಮತ್ತಷ್ಟು ಓದು »

11
ಮೇ

ಬ್ಯಾಂಕಿನ ಹೆಸರಲ್ಲಿ ಬರೋ ಸಂದೇಶಗಳ ಬಗ್ಗೆ ಎಚ್ಚರ..!!

– ಸತ್ಯ ಚರಣ

ಸಂದೇಶ ನನಗೆ ಬಂದು ಬಿದ್ದಿದ್ದ ಜಾಗವೇ.. ಸ್ಪ್ಯಾಮ್..! ಇದರ ಒಟ್ಟು ಕತೆ ಏನು ಗೊತ್ತಿದ್ದರೂ.. ಒಮ್ಮೆ ನೋಡಿ ಬಿಡೋಣ ಅಂತ ಅನ್ನಿಸಿತ್ತು.. ಹೆಚ್ಚಿನ ವಿಚಾರ, ಇದರ ಬಗ್ಗೆ ತಿಳಿಯುವುದು ಒಳ್ಳೆಯದೇ ಅನ್ನೋ ಉದ್ದೇಶದಿಂದ.. ಈ ಸಂದೇಶವನ್ನ ತೆರೆದು ನೋಡಿದೆ.. ಇದು ಒಂದು ಬ್ಯಾಂಕಿನ ಹೆಸರಿನಲ್ಲಿ ಬಂದ ಸ್ಪ್ಯಾಮ್..!

ಯಾವುದೇ ಸಂದೇಶ, “Netbanking Status”, “Need to update your netbanking account/password” ಅಥವಾ ಇದಕ್ಕೆ ಸಮೀಪದ/ಹೋಲಿಕೆಯ ವಿಷಯಗಳೊಂದಿಗೆ ಬಂದಾಗ, ಅದು ಖಂಡಿತ ಒಂದು “FAKE MAIL” “ಮೋಸದ ಸಂದೇಶ” ಅನ್ನೋದು ಖಚಿತ.. ಇದರ ಬಗ್ಗೆ ನನ್ನಲ್ಲಿದ್ದ ವಿಚಾರಗಳನ್ನ ನಿಮ್ಮೊಂದಿಗೆ ಹಂಚಿಕೊಳ್ಳುವ ಅನ್ನೋ ಯೊಚನೆ ಈ ಬರಹಕ್ಕೆ ಕಾರಣ..

HDFC ಹೆಸರಲ್ಲಿ ಬಂದಿದ್ದ ಮೇಲ್ ಗೂಗಲ್‌ನ ಕೃಪೆಯಿಂದ ಬಂದು ಬಿದ್ದದ್ದು “ಸ್ಪ್ಯಾಮ್ ತೊಟ್ಟಿ”ಯಲ್ಲಿ ಅಂದಾಗಲೇ, ಇದು ಎಡವಟ್ಟಿನ ಸಂದೇಶ ಅಂತ ತಿಳಿದರೂ.. ತೆರೆದು ನೋಡಿದಾಗ ಅದರ ವಿವರ ಇಂತಿತ್ತು..

ಅಬ್ಬಾ..! ಎಷ್ಟು ಹುಷಾರಾಗಿದಾರಪ್ಪ ಈ ಜನ, ಈಗ..! ಅಂತನ್ನಿಸಿತು.. ಯಾಕೆಂದರೆ, ಹಿಂದೊಮ್ಮೆ ಇದೇ ರೀತಿಯಲ್ಲಿ ಸಂದೇಶವೊಂದು ಬಂದಾಗ, ನಾನು ಮೊದಲು ಮಾಡಿದ ಕೆಲಸ.. “Show Details” ಅನ್ನೋ ಆಯ್ಕೆಯನ್ನ ಒತ್ತಿದ್ದು.. ಅಲ್ಲೇ ನನಗೆ ತಿಳಿದಿತ್ತು ಇದು, ಬ್ಯಾಂಕಿನವರ ಸಂದೇಶವಲ್ಲ ಅಂತ..! ಆದರೆ, ಇಲ್ಲಿ ತಿಳಿಯಲು ಸಾಧ್ಯವೇ ಇಲ್ಲ.. ಎಲ್ಲಾ ರೀತಿಯಲ್ಲೂ ಅವರು ಬ್ಯಾಂಕನ್ನ ಹೋಲುವ ರೀತಿಯಲ್ಲಿ ತಯಾರಿ ನಡೆಸಿದ್ದಾರೆ.. (ಕೆಂಪು ರೇಖೆಯೊಂದಿಗಿನ ವೃತ್ತವನ್ನ ಗಮನಿಸಿ)

ಹಾಗಾದರೆ, ಈ ಸಂದೇಶಗಳನ್ನ ಹೇಗಪ್ಪಾ ಪತ್ತೆ ಹಚ್ಚೋದು…?

ಮತ್ತಷ್ಟು ಓದು »