ವಿಷಯದ ವಿವರಗಳಿಗೆ ದಾಟಿರಿ

Posts tagged ‘ಬ್ರಾಹ್ಮಣ್ಯ’

23
ಸೆಪ್ಟೆಂ

ಪುರೋಹಿತಶಾಹಿ ಎಂದರೆ ಬರೀ ಬ್ರಾಹ್ಮಣರಾ?

– ತುರುವೇಕೆರೆ ಪ್ರಸಾದ್

ಗಂಗಾ ಪೂಜೆಪುರೋಹಿತಶಾಹಿ ಎಂದರೆ ಧರ್ಮ, ದೇವರು  ಮತ್ತು ಮಹಾತ್ಮರನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಇತರೆ ವರ್ಗಗಳನ್ನು ಅಕ್ಷರ  ಹಾಗೂ ಇನ್ನಿತರ ಸಾಮಾಜಿಕ ಅವಕಾಶಗಳಿಂದ ವಂಚಿಸಿದ  ಒಂದು ಪ್ರಭಾವಶಾಲಿ ವರ್ಗ! ಈ ಪುರೋಹಿತಶಾಹಿ ವ್ಯವಸ್ಥೆಯನ್ನು ತನ್ನ ಅನುಕೂಲಕ್ಕೆ ಹಾಗೂ ಸ್ವಾರ್ಥಕ್ಕೆ ತಿರುಗಿಸಿಕೊಂಡು ಸಮಾಜದ ದುರ್ಬಲ ವರ್ಗಗಳನ್ನು ಶೋಷಿಸುತ್ತದೆ ಎಂಬ ಆರೋಪವನ್ನು ಶತಶತಮಾನಗಳಿಂದ ಮಾಡಿಕೊಂಡು ಬರಲಾಗಿದೆ. ಇವುಗಳಲ್ಲಿ ಮುಖ್ಯವಾದವುಗಳು ಹೀಗಿವೆ.

ಪುರೋಹಿತ ಶಾಹಿ ಅರಿವು ಮತ್ತು ಜ್ಞಾನವನ್ನು ತನ್ನ ಖಾಸಗಿ ಸೊತ್ತು ಎಂದು ಭಾವಿಸಿ  ಸಮಾಜದ ಹಿಂದುಳಿದ ವರ್ಗಗಳಿಗೆ ವಿದ್ಯೆಯನ್ನು ಕಲಿಯಲು ಅವಕಾಶ ನೀಡದೆ ವಂಚಿಸಿತು. ರಾಜಾಶಾಹಿ ಜೊತೆ ಕೈ ಜೋಡಿಸಿ ಹಿಂದುಳಿದವರು  ಸಾಮಾಜಿಕ ಸ್ಥಾನಮಾನ ಪಡೆಯದಂತೆ ನಿರ್ಬಂಧಿಸಿತು. ವ್ಯವಸ್ಥೆ ಮತ್ತು ಸಮುದಾಯದಲ್ಲಿ ತರತಮ ಭಾವನೆಗಳನ್ನು ಸೃಷ್ಟಿಸಿ ಸಮಾಜದಲ್ಲಿ ವರ್ಗ ಸಂಘರ್ಷಕ್ಕೆ ಕಾರಣವಾಯಿತು. ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಅರಾಜಕತೆಗೆ ಕಾರಣವಾಯಿತು. ಶುದ್ಧ ರೂಪದಲ್ಲಿದ್ದ ಧರ್ಮ ಪುರೋಹಿತ ಶಾಹಿಯಿಂದ ಭ್ರಷ್ಟವಾಯಿತು.ದೇವರು ಮತ್ತು ಧರ್ಮದ ಏಕಸ್ವಾಮ್ಯವನ್ನು ತಮ್ಮದಾಗಿಸಿಕೊಂಡು ದೇವರು, ಧರ್ಮದ ಏಜೆಂಟರಾಗಿ  ಜನರನ್ನು ಮೂಡನಂಬಿಕೆಯ ಕೂಪಕ್ಕೆ ತಳ್ಳಿತು. ಸ್ವತಃ ದುಡಿಮೆ ಮಾಡದೆ ದಾನ ಧರ್ಮದ ಹೆಸರಿನಲ್ಲಿ ಜನರಿಂದ ಆಹಾರ,ವಸ್ತ್ರ ದ್ರವ್ಯಾದಿಳನ್ನು ಕಿತ್ತು ಜೀವನ ನಡೆಸಿತು. ಊಳಿಗಮಾನ್ಯ ಪದ್ಧತಿಯನ್ನು ಜೀವಂತವಿರಿಸಿ ಸಮಾಜದ ಕೆಳಸ್ತರದ ಜನರ ದುಡಿಮೆಯಲ್ಲಿ ಕೂತು ತಿಂದು ಶ್ರಮಸಂಸ್ಕøತಿಯನ್ನು ಧಿಕ್ಕರಿಸಿತು. ನಾವು ಆಸ್ತಿವಂತರು,ನಾವು ಆಳುವವರು,ನಮ್ಮ ಸೇವೆ ಮಾಡಲು, ಬೇಕಾದುದನ್ನೆಲ್ಲಾ ಉತ್ಪತ್ತಿ ಮಾಡಿ ಕೊಡುವವರು ಶೂದ್ರರು ಎಂದು ಪರಿಭಾವಿಸಿ ನಿಕೃಷ್ಟವಾಗಿ ನಡೆದುಕೊಂಡಿತು.

ವಸಾಹತುಶಾಹಿ ವ್ಯವಸ್ಥೆಯೊಂದಿಗೆ ಈ ಪುರೋಹಿತಶಾಹಿ ಶಾಮೀಲಾಗಿ ಅಲ್ಲಿನ ಪ್ರಿಸ್ಟ್ಲಿ ಹುಡ್ ಸಂಸ್ಕøತಿಯನ್ನು ಇಲ್ಲಿನ ವ್ಯವಸ್ಥೆಯ ಅವಿಭಾಜ್ಯ ಅಂಗ ಎನ್ನುವಂತೆ ನೋಡಿಕೊಂಡಿತು. ಭಾರತದ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರಿಗೂ ಈ ಪುರೋಹಿತಶಾಹಿ ಸನ್ಯಾಸಿ ದೀಕ್ಷೆ ಕೊಡಲು ತಿರಸ್ಕರಿಸಿತು. ಬ್ರಾಹ್ಮಣ್ಯವನ್ನು ತೊರೆದು ಹೋದ ರಾಮಕೃಷ್ಣ ಪರಮಹಂಸರೇ ಕೊನೆಗೆ ವಿವೇಕಾನಂದರಿಗೆ ಸನ್ಯಾಸ ದೀಕ್ಷೆ ಕೊಟ್ಟರು. ಪುರೋಹಿತಶಾಹಿ ಜಾತಿ ಪದ್ದತಿಯನ್ನು ವಿರೋಧಿಸಿದ ಬಸವಣ್ಣನವರನ್ನು ನಂದಿ ಅವತಾರ ಎಂದು ಬಿಂಬಿಸಿ ಪೂಜೆ ಮಾಡುವಂತೆ ಮಾಡಲಾಗಿದೆ.ದೇವರ ಅಸ್ತಿತ್ವವನ್ನು ವೇದಗಳ ಶ್ರೇಷ್ಠತೆಯನ್ನು ನಿರಾಕರಿಸಿದ ಬುದ್ಧನನ್ನೇ ಅವತಾರ ಪುರುಷ ಎಂದು ಬಿಂಬಿಸಲಾಯಿತು. ಹೀಗೆ ಪುರೋಹಿತಶಾಹಿಯ ಮೇಲೆ ಆರೋಪಪಟ್ಟಿ ಸಾಗುತ್ತದೆ..!

ಮತ್ತಷ್ಟು ಓದು »