ಸಿದ್ಧಗಂಗಾ ಶ್ರೀಗಳಿಗೇಕಿಲ್ಲ ಭಾರತರತ್ನ?
– ರಾಕೇಶ್ ಶೆಟ್ಟಿ
“ಮೂರು ಬಿಟ್ಟೋರು ಊರಿಗೇ ದೊಡ್ಡೋರು” ಅನ್ನೋ. ಗಾದೆ ಮಾತು ಯಾರಿಗಾದರೂ ಸೂಕ್ತವಾಗಿ ಅನ್ವಯವಾಗುವುದಿದ್ದರೆ ಅದು ಕಾಂಗ್ರೆಸ್ ಪಕ್ಷ ಹಾಗೂ ಅದನ್ನು ಬೆಂಬಲಿಸುವ ಗಂಜಿಗಿರಾಕಿಗಳಿಗೆ. ಕಾರಣವೇನು ಗೊತ್ತೇ, ತನ್ನ ಪಕ್ಷದ ಇತಿಹಾಸದಲ್ಲಿ ಮಾಡಲಾಗಿರುವ ಅನ್ಯಾಯಗಳ ಪಟ್ಟಿ ಅಕ್ಷಯಪಾತ್ರೆಯಂತದ್ದು ಎನ್ನುವುದು ಗೊತ್ತಿದ್ದರೂ ಬೇರೆ ಪಕ್ಷಗಳನ್ನು ಟೀಕಿಸಲು ಹೊರಟಾಗ ಕಾಂಗೈ ನಾಯಕರು ನಾಚಿಕೆ ಬಿಟ್ಟು ನಿಲ್ಲುತ್ತಾರೆ. ಇದಕ್ಕೆ ಇತ್ತೀಚಿನ ಉದಾಹರಣೆ, ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡದಿರುವ ವಿವಾದ.
ಇವತ್ತಿಗೆ ಸಿದ್ದರಾಮಯ್ಯನವರಿಂದ ಹಿಡಿದು ಕಾಂಗಿ ಮರಿಪುಢಾರಿಗಳೆಲ್ಲ ಬಿಜೆಪಿಯನ್ನು ಈ ಬಗ್ಗೆ ಪ್ರಶ್ನಿಸುತ್ತಿವೆ.ಆದರೆ,ಹಾಗೆ ಪ್ರಶ್ನಿಸುವ ಭರದಲ್ಲಿ ದೇಶದ ಉನ್ನತ-ಅತ್ಯುನ್ನತ ಪ್ರಶಸ್ತಿಗಳ ಮಾನವನ್ನು ಮೂರು ಬಿಟ್ಟವರ ಪಕ್ಷ ಹೇಗೆ ಕಳೆದಿದೆ ಎನ್ನುವುದನ್ನು ಇವರು ಮರೆತಿರುವಂತಿದೆ.