ವಿಷಯದ ವಿವರಗಳಿಗೆ ದಾಟಿರಿ

Posts tagged ‘ಸೋಮಯಾಗ’

27
ಮೇ

ಹೋಮ ಹವನ ಸನಾತನ ಧರ್ಮದ ಪ್ರತೀಕ, ಅದರ ತೇಜೋವಧೆ ಡಂಭಾಚಾರಕ

– ಸಂದೀಪ್ ಶರ್ಮಾ .ಎಂ

18C9F35-356x340ಕೆಲ ದಿನಗಳ ಹಿಂದೆ ಬಂಡಾಯ ಸಾಹಿತಿಗಳಾದ ಮಾನ್ಯ ವೇಣುರವರು ಕನ್ನಡದ ದಿನಪತ್ರಿಕೆ “ವಿಶ್ವವಾಣಿ”ಯಲ್ಲಿ ಮತ್ತೂರಿನಲ್ಲಿ ನಡೆದ ಸೋಮಯಾಗದ ಬಗ್ಗೆ ತಮ್ಮ ಕಪೋಲಕಲ್ಪಿತ ನಿಲುವನ್ನು ವ್ಯಕ್ತಪಡಿಸಿದ್ದಾರೆ. ವೇಣುರವರು ವೈಭವದ ಮಾತುಗಳಲ್ಲೇ ಮತ್ತು ತಮ್ಮ ಬರಹಗಳಿಂದ ವಾಚಕವೃಂದವನ್ನು ಆಕರ್ಷಿಸಬಹುದು ಎಂದು ತಿಳಿದಿದ್ದರೆ ಅದು ಅವರ ಭ್ರಮಾಲೋಕದ ಪರಮಾವಧಿ ಎಂದರೆ ತಪ್ಪಾಗಲಾರದು. ಬುದ್ಧುಜೀವಿಗಳ ಮುಖದ ರಾಡಿಯನ್ನು ಇವರು ಒರೆಸಲು ಹರಸಾಹಸ ಪಡುತ್ತಿದ್ದಾರೆ ಹಾಗು ಅವರುಗಳ ಗೊಡ್ಡುತನದ ಧೋರಣೆಗಳನ್ನು ಎತ್ತಿ ಹಿಡಿಯಲು ನೋಡುತ್ತಿದ್ದಾರೆ. ಆದರೆ ವಾಚಕವೃಂದದವರನ್ನು ಬೆಪ್ಪು ಮಾಡಲಿಕ್ಕೆ ಸಾಧ್ಯವಿಲ್ಲವೆಂಬುದು ಅವರಿಗೆ ತಿಳಿದಂತಿಲ್ಲ. ಮತ್ತೂರಿನಲ್ಲಿ ಸಂಸ್ಕೃತ ಭಾಷೆ ಮಾತನಾಡಿದರೆ ಇವರ ಗಂಟು ಏನು ಹೋಗುವುದೋ ಗೊತ್ತಿಲ್ಲ, ಇಲ್ಲಿನವರು ಮಾತನಾಡುವ ಭಾಷೆಗು ಹಾಗು ಅಲ್ಲಿ ನಡೆದ ಯಾಗಕ್ಕೂ ಯಾವ ಬಾದರಾಯಣ ಸಂಬಂಧ. ಸಂಸ್ಕೃತ ಮೃತ ಭಾಷೆ ಎಂದು ತಿಳಿದಿರುವ ಇವರು ಆ ಭಾಷೆಯಿಂದಲೇ ಮಿಕ್ಕೆಲ್ಲ ಭಾಷೆಗಳು ಉದ್ಭವಿಸಿದವು ಎಂಬುದನ್ನು ಇವರು ಮನಗಂಡಂತಿಲ್ಲ. ಸುಮಾರು ಅರವತ್ತು ಲಕ್ಷಕ್ಕೂ ಹೆಚ್ಚು ಜನ ಉಪಯೋಗಿಸುವ ಈ ಭಾಷೆಯು ಹೇಗೆ ಇವರ ಪ್ರಕಾರ ಮೃತವಾಯಿತೋ ಎಂಬುದನ್ನು ಇವರ ಅಧ್ಯಯನ ಹಾಗು ಚಿಂತನೆಯಿಂದ ತಿಳಿದುಕೊಳ್ಳಬೇಕಾಗಿದೆ. ಮತ್ತಷ್ಟು ಓದು »