ಎಲ್ಲದಕ್ಕೂ ಹಿಂದೂಗಳನ್ನು ದೂಷಿಸುವ ಮುನ್ನ …
– ಬೇಲಾಡಿ ದೀಪಕ್ ಶೆಟ್ಟಿ
So called ವಿಚಾರವಾದಿಗಳೇ, ಲಿಬರಲ್ಗಳೇ ದ್ವೇಷ ಮಾಡಬೇಡಿ, ಫೋಭೀಯಾ ಬೆಳೆಸಬೇಡಿ ಅನ್ನುವವರೇ,
ಅರ್ಥ ಮಾಡ್ಕೊಳ್ಳಿ.ನಮ್ಮ ಸಿಟ್ಟು ಇರೋದು ಯಾವುದೇ ಧರ್ಮದ ಮೇಲಲ್ಲ. ಹಾಗಂತ ದ್ವೇಷನೂ ಸಾಧಿಸುತ್ತಿಲ್ಲ, ಫೋಭೀಯಾನೂ ಹುಟ್ಟು ಹಾಕುತ್ತಿಲ್ಲ.
ಅಲ್ಪಸಂಖ್ಯಾತಧರ್ಮದ ಹೆಸರಿನಲ್ಲಿ ಜಾತ್ಯಾತೀತತೆಯ ಸೋಗಿನಲ್ಲಿ, ಬಹುಸಂಖ್ಯಾತರ ಭಾವನೆಗಳಿಗೆ ರಾಷ್ಟ್ರ ಮತ್ತು ಜೀವನ ಪದ್ದತಿಯ ವಿಚಾರಗಳಲ್ಲಿ ನಮ್ಮ ಭಾವನೆಗಳಿಗೆ ಘಾಸಿ ಆದ್ರೂ ಸುಮ್ಮನೆ ಎಷ್ಟು ದಿನ ಅಂತ ತಾಳ್ಮೆಯಿಂದ ಇರೋದು. ಒಂದಲ್ಲ ಒಂದು ದಿನ ಆಕ್ರೋಶದ ಕಟ್ಟೆ ಒಡೆಯಲೇಬೇಕಲ್ಲವೇ.
ಅದೂ ಹೋಗ್ಲಿ, ಆರೈಕೆ ಕೇಂದ್ರದಲ್ಲಿ ಮಲ ವಿಸರ್ಜನೆ, ನರ್ಸ್ಗಳ ಎದುರು ಬಟ್ಟೆ ಬಿಚ್ಚೋದು, ನೋಟಿಗೆ ಬಾಯಲ್ಲಿ ಉಗುಳು ಹಚ್ಚೋದು. ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆ, ಮೊನ್ನೆ ಮೊನ್ನೆ ಪೋಲಿಸರ ಮೇಲೆ ಹಲ್ಲೆ , ಇಡೀ ದೇಶ ಪಕ್ಷಾತೀತವಾಗಿ ಸ್ವಲ್ಪ ವಿಚಾರದಲ್ಲಿ ವ್ಯತ್ಯಾಸ ವಿದ್ದರೂ ಸಾಮೂಹಿಕವಾಗಿ ಹೋರಾಡುವಾಗ,ಇವರ ಈ ಕಿರಿಕ್ಕು. ಎಲ್ಲರಂತೆ ಇರಲು ಏನು ಪ್ರಾಬ್ಲಂ. ಇದೇ ರೀತಿ ಅರಬ್ ದೇಶಗಳಲ್ಲಿ ಮಾಡಿದ್ರೆ ಏನು ಮಾಡ್ತಿದ್ದರು. ಇಲ್ಲಿ ಏನು ಮಾಡಿದ್ರು ನಡೀತಿದೆ ಅನ್ನೋ ಮನೋಭಾವನೆ. ಸರ್ವೇ ಜನೋ ಸುಖಿನೋ ಭವಂತು, ವಸುದೈವ ಕುಟುಂಬಕಂ ಅಂದವರಿಗೆ ಈ ಗತಿ.
ಹಿಂದೂ ಸಂಸ್ಕೃತಿಯ ಕುರಿತು ವಿವೇಕಾನಂದರ ವಿಚಾರಗಳು
– ಪ್ರೊ.ರಾಜಾರಾಮ ಹೆಗಡೆ,
ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ
೧.ವಿವೇಕಾನಂದರ ವಿಚಾರಗಳು: ಜಾತಿ ಪದ್ಧತಿ
೨.ವಿವೇಕಾನಂದರ ವಿಚಾರಗಳು: ಸಮಾಜ ಸುಧಾರಣೆ
೩.ವಿವೇಕಾನಂದರ ವಿಚಾರಗಳ ಐತಿಹಾಸಿಕ ಸಂದರ್ಭ
ವಿವೇಕಾನಂದರ ಗುರಿಯನ್ನು ಒಂದೇ ಸಾಲಿನಲ್ಲಿ ಹೇಳಬಹುದಾದರೆ ‘ಹಿಂದೂ ಸಂಸ್ಕೃತಿಯ ಉದಾತ್ತ ಧ್ಯೇಯಗಳ ಕುರಿತು ಜಾಗೃತಿ ಮೂಡಿಸುವುದು’ ಎನ್ನಬಹುದು. ಆದರೆ ಈ ಒಂದು ಸಾಲೇ ನಮಗಿಂದು ಅರ್ಥವಾಗದ ಸ್ಥಿತಿಗೆ ಬಂದಿದ್ದೇವೆ ಎಂಬುದೊಂದು ವಿಪರ್ಯಾಸ. ಅದಕ್ಕೆ ಕಾರಣ ಕಳೆದ ನೂರು ವರ್ಷಗಳಲ್ಲಿ ಭಾರತೀಯ ರಾಜಕೀಯದಲ್ಲಿ ನಡೆದಿರುವ ಬೆಳವಣಿಗೆಗಳು. ಹಿಂದೂ ಎಂಬ ಶಬ್ದವನ್ನು ಇಂದು ನಿರ್ವಿಕಾರವಾಗಿ, ವಸ್ತುನಿಷ್ಠವಾಗಿ ನೋಡುವುದೇ ನಮಗೆ ಸಾಧ್ಯವಿಲ್ಲದಂತಾಗಿದೆ. ಒಂದೆಡೆ ಹಿಂದುತ್ವದ ರಾಜಕೀಯದಿಂದಾಗಿ ಅದನ್ನು ಭಾವನಾತ್ಮಕವಾಗಿ ಕ್ರೈಸ್ತ, ಇಸ್ಲಾಂ ಎಂಬ ಪ್ರಭೇದಗಳಿಗೆ ಪ್ರತಿಯಾಗಿ ನಮ್ಮೊಂದು ಅಹಂ ಎಂಬಂತೇ ನೋಡುವುದನ್ನು ಕಲಿತಿದ್ದೇವೆ,ಅಥವಾ ಪ್ರಗತಿಪರ ಚಳವಳಿಗಳ ರಾಜಕೀಯದಿಂದಾಗಿ ಅದಕ್ಕೆ ಇಲ್ಲದ ಹಲ್ಲು ಉಗುರುಗಳನ್ನು ಆರೋಪಿಸಿ ಅದರ ಕುರಿತು ಸಂದೇಹ ಹಾಗೂ ಭಯಗಳ ಮೂಲಕ ಪ್ರತಿಕ್ರಿಯಿಸುವುದನ್ನು ಕಲಿತಿದ್ದೇವೆ. ಎರಡೂ ಪಕ್ಷಗಳೂ ಈ ಶಬ್ದಕ್ಕೆ ನಿರ್ದಿಷ್ಟ ರಾಜಕೀಯ ಅರ್ಥಗಳನ್ನು ರೂಢಿಸಿಬಿಟ್ಟಿವೆ. ವಿವೇಕಾನಂದರ ಕುರಿತು ನಮ್ಮ ತಲೆಮಾರಿನವರ ಪ್ರತಿಕ್ರಿಯೆಗಳು ಈ ಅರ್ಥಗಳಿಂದ ಪ್ರಭಾವಿತವಾಗಿವೆ ಎಂಬುದು ಸ್ಪಷ್ಟ.
ವಿವೇಕಾನಂದರ ವಿಚಾರಗಳು: ಜಾತಿ ಪದ್ಧತಿ
– ಪ್ರೊ.ರಾಜಾರಾಮ ಹೆಗಡೆ
ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ
ವಿವೇಕಾನಂದರ ವಿಚಾರಗಳು: ಸಮಾಜ ಸುಧಾರಣೆ
ಸಾಧಾರಣವಾಗಿ ಇಂದು ವಿವೇಕಾನಂದರ ಕುರಿತು ಒಂದು ಅಭಿಪ್ರಾಯ ಚಾಲ್ತಿಯಲ್ಲಿರುವುದು ಕಂಡುಬರುತ್ತದೆ. ಅದೆಂದರೆ ಅವರು ಜಾತಿ ಪದ್ಧತಿಯ ನಿರ್ಮೂಲನೆಗಾಗಿ ಹೋರಾಡಿದರು ಎಂಬುದು. ವಿವೇಕಾನಂದರ ಕುರಿತ ಈ ಚಿತ್ರವು ಇಂದು ಎಷ್ಟು ಗಟ್ಟಿಯಾಗಿದೆಯೆಂದರೆ ಅವರ ಅನುಯಾಯಿಗಳು ಕೂಡ ಅವರ ಕುರಿತು ಮಾತನಾಡುವಾಗ ಈ ಅಂಶವನ್ನೇ ಮೊದಲು ಒತ್ತಿ ಹೇಳುತ್ತಾರೆ. ವಿವೇಕಾನಂದರ ಪ್ರಸ್ತುತತೆಯನ್ನು ಮನದಟ್ಟು ಮಾಡಿ ಕೊಡುವಾಗ ಅವರು ಹಿಂದೂ ಧರ್ಮದ ಶ್ರೇಷ್ಟತೆಯನ್ನು ಎತ್ತಿಹಿಡಿದಿದ್ದರು ಎನ್ನುವುದು ಅನಿವಾರ್ಯ.
ಆ ಅಂಶವನ್ನಿಟ್ಟುಕೊಂಡೇ ಹಿಂದುತ್ವವಾದಿಗಳು ವಿವೇಕಾನಂದರನ್ನು ತಮ್ಮ ಮೂಲಪುರುಷರೆಂಬಂತೆ ಪರಿಗಣಿಸುತ್ತಾರೆ. ಹಾಗಾಗಿ ಬಹುಶಃ ಇಂದಿನ ಸೆಕ್ಯುಲರ್ ಚಿಂತಕರು ಅವರು ಜಾತಿಯ ಕುರಿತು ಮಾಡಿದ ಟೀಕೆಗಳನ್ನು ಪ್ರಧಾನವಾಗಿ ಇಟ್ಟು ಅವರ ವಿಚಾರಗಳನ್ನು ಪ್ರಸ್ತುತ ಪಡಿಸುವ ಉಪಾಯಗಳನ್ನು ಬೆಳೆಸಿರಲೂ ಬಹುದು. ಒಟ್ಟಿನಲ್ಲಿ ವಿವೇಕಾನಂದರ ಸೆಕ್ಯುಲರೀಕರಣದ ಒಂದು ಭಾಗವಾಗಿ ಈ ಅಭಿಪ್ರಾಯವು ಜನಪ್ರಿಯತೆಯನ್ನು ಪಡೆದಿದೆ.
ಕರ್ನಾಟಕದಲ್ಲಿ ಕುವೆಂಪು ಅವರು ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾಗಿದ್ದರು ಹಾಗೂ ಅವರ ಮೂಲಕ ವಿವೇಕಾನಂದರ ವಿಚಾರಗಳು ಶೂದ್ರ ಚಳವಳಿಯ ಒಂದು ಭಾಗವಾಗಿ ಕನ್ನಡ ಚಿಂತಕರಿಗೆ ಪರಿಚಯಿಸಲ್ಪಟ್ಟಿವೆ. ಹಿಂದುತ್ವದವರು ಬ್ರಾಹ್ಮಣರ ವಕ್ತಾರರು ಎಂದು ಈ ಚಿಂತಕರು ಪರಿಗಣಿಸಿರುವುದರಿಂದ ವಿವೇಕಾನಂದರ ಮೂಲ ಆಶಯವನ್ನು ಇವರು ತಿರುಚಬಹುದೆಂಬ ಆತಂಕ ಕೂಡ ಈ ಚಿಂತಕರಲ್ಲಿದೆ. ಹಾಗಾಗಿ ಕುವೆಂಪು ಅವರು ಹಿಂದೂ ಪರಂಪರೆಯ ಶ್ರೇಷ್ಟತೆಯ ಕುರಿತು ವ್ಯಕ್ತಪಡಿಸುವ ಚಿಂತನೆಗಳನ್ನು ಅವರ ಆರಾಧಕರು ಈಗ ಮೂಲೆಗೆ ಹಾಕಿದಂತಿದೆ. ಅವರನ್ನೂ ಕೂಡ ಇಂದಿನ ಪ್ರಗತಿಪರರ ಆಕಾರಕ್ಕೆ ಒಗ್ಗಿಸುವ ಪ್ರಯತ್ನವೇ ಎದ್ದುಕಾಣುವಂತಿದೆ. ಒಟ್ಟಿನಲ್ಲಿ ವಿವೇಕಾನಂದರು ಜಾತಿವಿರೋಧಿ ಎಂಬ ಚಿತ್ರಣವನ್ನು ತಮಗೆ ಬೇಕಾದಂತೆ ಕಲ್ಪಿಸಿಕೊಳ್ಳಲಾಗುತ್ತಿದೆ. ವಿವೇಕಾನಂದರು ಜಾತಿಯ ಕುರಿತು ಏನು ಹೇಳುತ್ತಾರೆ?