ಅಮ್ಮ
ಎಚ್. ಆನಂದರಾಮ ಶಾಸ್ತ್ರೀ
ಅಮ್ಮಾ, ನಿನ್ನ ಅನುರಾಗದ ಕಂದ ನಾನು
ಬೇಕೆಂದುದ ಕೊಡುವ ನೀನು ಕಾಮಧೇನು
ನಾ ಮುಟ್ಟುವ ಗುರಿಯ ಮಾರ್ಗದರ್ಶಿ ನೀನು
ತಿಳಿಯದೆನಗೆ ಪಯಣಗತಿಯ ಕಷ್ಟವೇನೂ
ನನಗಾಗಿಯೆ ಮಿಡಿದೆ ಬಹಳ ಕಂಬನಿಯನ್ನು
ನನ್ನೆದುರಿನ ಜೀವಂತ ದೇವಿ ನೀನು
ಕೊಡುವೆ ನನ್ನ ಮಧುರ ನೆನಪುಗಳಲಿ ಪಾಲನು
ಕೊಡಲಾರೆನು ನಿನಗೆ ನಾನು ಇನ್ನೇನನ್ನೂ
ಅಮ್ಮಾ, ನಿನ್ನ ಅನುರಾಗದ ಕಂದ ನಾನು
ನಾನು ನೆರಳು, ಭವ್ಯ ಮೂಲಮೂರ್ತಿ ನೀನು
ಜ೦ಗಮ ಜೋಗಿಯ ಮಾತಿನ ಮ೦ಟಪ
ಚೇತನ್ ಮು೦ಡಾಜೆ
ಪದ್ಯದ ಮಾತು ಬೇರೆ
ಅಥ೯ ಅನ್ನುವುದು ಕವಿತೆಯಲ್ಲಿ ಎಲ್ಲಿರುತ್ತದೆ? ಲಾಕ್ಷಣಿಕರು `ಶಬ್ದಾರ್ಥ ಸಹಿತಮ್ ಕಾವ್ಯ೦’ ಅ೦ತ ಹೇಳಿದ್ದರೂ ಸಹ ಮತ್ತೆ ಮತ್ತೆ ಶಬ್ದ ಮತ್ತು ಅರ್ಥದ ಕುರಿತ ಜಿಜ್ಞಾಸೆ ನಡೆಯುತ್ತಾ ಬ೦ದಿದೆ. ಹೀಗಾಗಿ ಕಾವ್ಯದ ಅರ್ಥ ವಿಸ್ತರಣೆಗೊಳ್ಳುತ್ತಲೂ ಬ೦ದಿದೆ. ಹಾಗಾಗಿ `ಅರ್ಥ’ ಶಬ್ದದಲ್ಲಿದೆಯೇ? ಅಥವಾ ಕವಿತೆಯ ವಿನ್ಯಾಸದಲ್ಲಿದೆಯೇ? ಹಾಗಾಗಿ ಒ೦ದು ಪದ್ಯದ ಅರ್ಥ ಜಿಜ್ಞಾಸೆ ಯಾವ ಬಗೆಯಲ್ಲಿ ಚಾರಿತ್ರಿಕವಾಗಿ ವಿಸ್ತರಣೆಗೊಳ್ಳುತ್ತಾ ಬ೦ದಿದೆ, ಮಾತ್ರವಲ್ಲ ಸ೦ಕುಚಿತಗೊ೦ಡಿದೆ ಎ೦ಬಲ್ಲಿಯೇ ಪದ್ಯದ ಅರ್ಥವಿದೆ. ಹಾಗಾಗಿ ರಾಮಾನುಜನ್ ಹೇಳುವ ಹಾಗೆ `ಪದ್ಯದ ಮಾತು ಬೇರೆ’.
ಈ ಅರ್ಥದ ವಿನ್ಯಾಸವನ್ನು ನಾವು ಹೆಚ್ಚು ಸ್ಪಷ್ಟವಾಗಿ ಅರಿತುಕೊಳ್ಳಲು ಯಕ್ಷಗಾನದ ತಾಳಮದ್ದಳೆಯೆಡೆಗೆ ದೃಷ್ಠಿ ಕೇ೦ದ್ರೀಕರಿಸುವುದು ಒಳಿತು. ತಾಳಮದ್ದಳೆಯಲ್ಲಿ `ಅರ್ಥ’ ಯಾವ ತೆರದಲ್ಲಿ ವಿನ್ಯಾಸಗೊಳ್ಳುತ್ತೆ ಅನ್ನುವುದು ಮುಖ್ಯ. `ತಾಳಮದ್ದಳೆ’ಯನ್ನೇ `ಅರ್ಥಗಾರಿಕೆ’ ಎ೦ಬ ಹೆಸರಿನಿ೦ದ ಕರೆಯುತ್ತಾರೆ. ಹಾಗಾಗಿ ಅರ್ಥಗಾರಿಕೆಯೂ ಒ೦ದು ಕಲೆ. ಈ ಎರಡೂ ನಾಮಕರಣಗಳಿಗೂ ಅ೦ದರೆ ತಾಳಮದ್ದಳೆ ಮತ್ತು ಅರ್ಥಗಾರಿಕೆಯ ನಡುವೆ ಒ೦ದು ಬಗೆಯ ಸ೦ಬ೦ಧ ಇದೆ. ಅ೦ದರೆ ತಾಳ ಮದ್ದಳೆಯ ಭಾಗವತಿಕೆಯ ಸ್ವರಕ್ಕೆ ಪೂರಕವಾಗಿ ಬರುವ೦ತದ್ದು `ಅರ್ಥಗಾರಿಕೆ’. ಈ ಅರ್ಥಕ್ಕೆ ಇಲ್ಲಿ ಒ೦ದು ಚೌಕಟ್ಟು ಇದೆ, ಮಿತಿಯೂ ಇದೆ. ಹಾಗೆಯೇ ಇಲ್ಲಿ ಅರ್ಥ ಹಲವು ವಿನ್ಯಾಸಗಳಲ್ಲಿ ಮಾತಿನ ಚಮತ್ಕಾರಗಳಲ್ಲಿ ಬಿ೦ಬಿತವಾಗುವುದನ್ನು ಗಮನಿಸಬಹುದು. ನಾನು ನನ್ನ ಬಾಲ್ಯದ ದಿನಗಳಿ೦ದಲೂ ಈ ` ತಾಳ ಮದ್ದಳೆ’ಗೆ ಮೋಹಿತನಾಗಿದ್ದವನು. ಒ೦ದೊ೦ದು ಪದ್ಯದ ಗತಿಗೆ ಅನುಸಾರವಾಗಿ ಅದಕ್ಕೆ ತಕ್ಕ ಅರ್ಥಗಾರಿಕೆ ಇದೆ. ಇಲ್ಲಿ ಅರ್ಥಗಾರಿಕೆಯು ಪಾತ್ರಗಳ ಸ೦ವಾದದ ಜತೆಗೆ ಚಲನೆಯನ್ನು ಪಡೆದಿರುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿದುದು ಪಾತ್ರಗಳ ಸ೦ವಾದದ ಮೂಲಕ ಒಡಮೂಡುವ `ಅರ್ಥಗಳು’. ಈ ಅರ್ಥಗಳು ಪದ್ಯದಲ್ಲಿ ಮೂಲದಲ್ಲಿ ಇದ್ದದ್ದೇ ಎ೦ದರೆ ತಕ್ಷಣಕ್ಕೆ ಉತ್ತರ ಕೊಡಬಹುದು ‘ಅಲ್ಲ’! ಹಾಗಾಗಿ ಅರ್ಥ ಅನ್ನುವುದು ಶಬ್ದದ ಒಳಗಿದೆಯೇ ಅಥವಾ ಹೊರಗಿದೆಯೇ? ಮತ್ತಷ್ಟು ಓದು 
ನಿಮಗೂ ನಿಮ್ಮೂರು ನೆನಪಾಗುತ್ತಾ? ಭಾಗ- ೧
ದೀಪಕ್ ಮದೆನಾಡು
ದಕ್ಷಿಣದ ಕಾಶ್ಮೀರ ಮಡಿಕೇರಿಯಿಂದ ೭ ಕಿ.ಮೀ. ದೂರದಲ್ಲಿ ನನ್ನೂರು ಮದೆನಾಡು. ಹೆದ್ದಾರಿ ಕವಲು ಮಣ್ಣಿನ ದಾರಿ ಹಿಡಿದು ಜಾರುಗುಪ್ಪೆಯ ಮೇಲೆ ನಡೆದಂತೆ, ಹಲವು ಮೈಲು ನಡೆದರೆ ಬೆಟ್ಟದ ತುತ್ತ–ತುದಿಯಲ್ಲಿ ಸಿಗುವುದು ನಮ್ಮ ಮನೆ! ಆಗಸವನ್ನೇ ಮರೆಮಾಚುವಂತೆ ಬೆಳೆದ ಮರಗಳು, ಬೆಟ್ಟ–ಗುಡ್ಡಗಳು… ಸುಂಯನೇ ಬೀಸುತಿದ್ದ ತಂಗಾಳಿ ತಂಪಾದ ಹಾಸಿಗೆ ಹಾಸುತ್ತಿತ್ತು. ನಮ್ಮ ಮನೆಯ ಎಡಭಾಗದ ತೋಟದಿಂದ ಹರಿದ ಝರಿಯು ಭೋ..ಎ೦ದು ತನ್ನದೆ ರಾಗ ಹಾಡುತ್ತಿತ್ತು. ಎಷ್ಟೇ ದೂರ ಕಣ್ಣು ಹಾಯಿಸಿದರೂ ಕಾಣಿಸುತ್ತಿದ್ದುದ್ದು ಪ್ರಕೃತಿಯ ಸೊಬಗೇ ಹೊರತು ಮನೆಗಳಲ್ಲ!.
ರಾತ್ರಿ ಗಡದ್ದಾಗಿ ಬಿಸಿ–ಬಿಸಿ ಊಟ ಮಾಡಿ, ಸ್ವಲ್ಪ ತರಲೆ ಮಾಡಿ, ಓಡಿ ಹಾಸಿಗೆ ಮೇಲೆ ಹಾರಿ ಕಂಬಳಿ ಒಳಗೆ ಸೇರಿಕೊಂಡರೇ ಅಮ್ಮನ ಧ್ವನಿ ಕೇಳಿದಾಗಲೇ ಬೆಳಗಾಯಿತೆಂದು ತಿಳಿಯುವುದು!! ಮುಂಜಾನೆ ಅಮ್ಮ ಪ್ರೀತಿಯಿಂದ ಕರೆದರೆ ಮಿಸುಕಾಡದ ದೇಹ ನನ್ನದು. ಅಮ್ಮ ಕರೆದಾಗ ಎಲ್ಲೋ ಕನಸಿನಲ್ಲಿ, ಯಾರೋ ಕರೆದ ಹಾಗೆ ಭಾಸವಾಗುತ್ತಿತ್ತು. ಅಮ್ಮ ಸಿಟ್ಟನಿಂದ ” ಸಟ್ಟುಗ ಕಾಯಿಸಿ ಇಡುತ್ತೇನೆ” ಎ೦ದಾಗ ಸ್ವಲ್ಪ ನಿದ್ರೆ ಬಿಡುತಿತ್ತು. ಕುಂಬಳಕಾಯಿ ಮುಖ ಮಾಡಿಕೊಂಡು ಹಾಸಿಗೆಯಿಂದ ನೇರ ನನ್ನ ಪ್ರಯಾಣ ಒಲೆಯ ಬುಡದೆಡೆಗೆ! ಆರಾಮವಾಗಿ ಬಿಸಿಕಾಯಿಸಿಕೊಂಡು ಮಲಗಿರುತ್ತಿದ್ದ ಬೆಕ್ಕನ್ನು ಸ್ವಲ್ಪ ತಳ್ಳಿ ನಾನು ಕುಳಿತುಕೊಳ್ಳುತ್ತಿದೆ. ಒಲೆಯ ಬಳಿ ಬಿಸಿ ಕಾಯಿಸಿ–ಕಾಯಿಸಿ ಕಾಲಿನ ಚರ್ಮ ಬಿರುಕು ಬಿಟ್ಟಿರುತ್ತಿದ್ದವು. ಅಮ್ಮನ ವಟ–ವಟ ಅಲ್ಲಿಯು ಮು೦ದುವರಿಯುತ್ತಿತ್ತು. ಕಣ್ಣು ಮುಚ್ಚಿಕೊಂಡು ಬಚ್ಚಲು ಮನೆಗೆ ಹೋಗಿ ಹಲ್ಲುಜ್ಜಿ, ಮುಖತೊಳೆದು ಅಮ್ಮ ಹೇಳಿದ ಕೆಲಸ ಮಾಡಿ ಶಾಲೆಗೆ ಹೊರಡಲು ಸಿದ್ದನಾಗುತ್ತಿದ್ದೆ. ಮತ್ತಷ್ಟು ಓದು 
ದಿ ಕಲರ್ ಪರ್ಪಲ್ – ನಾ ನೋಡಿದ ಸಿನೆಮಾ
ಇಂಚರ
ಇತ್ತೀಚೆಗೆ ನೋಡಿದ ಚಿತ್ರ ‘ದಿ ಕಲರ್ ಪರ್ಪಲ್’. ಅಲೈಸ್ ವಾಕರ್ ಎಂಬುವವರ ನಾವೆಲ್ ಆಧಾರಿತವಾದ ಈ ಚಿತ್ರ ತೆರೆಗಂಡಿದ್ದು ೧೯೮೫ ರಲ್ಲಿ. ಇದರ ನಿರ್ದೇಶಕರು ಸ್ಟೀವನ್ ಸ್ಪೀಲ್ ಬರ್ಗ್. ಇದು ಸಿಲಿ ಎಂಬ ಆಫ್ರಿಕನ್ ಅಮೇರಿಕನ್ ಹುಡುಗಿಯ ಕಥೆ. ಕಥೆ ಶುರುವಾಗೋದು ಹೀಗೆ. ಸಿಲಿಯ ತಾಯಿ ಹೆರಿಗೆ ನೋವಿನಲ್ಲಿರುತ್ತಾಳೆ. ಹೆಣ್ಣು ಮಗುವೊಂದು ಜನಿಸುತ್ತದೆ. ತಂದೆ ಆಗ ತಾನೇ ಜನಿಸಿದ ಮಗುವನ್ನು ಹೊರಗೆ ಮಾರಲು ತೆಗೆದುಕೊಂಡು ಹೋಗುತ್ತಾನೆ. ಇದನ್ನೆಲ್ಲಾ ಕಣ್ಣಾರೆ ಕಂಡ ಸಿಲಿ ಗೆ ಎಚ್ಚರಿಕೆ ಕೊಟ್ಟು ಹೋಗುತ್ತಾನೆ. ಸುಮಾರು ೧೯೦೦ ರ ದಶಕದಲ್ಲಿ ಈ ಅಶಿಕ್ಷಿತ ಬಡ ಕಪ್ಪು(ಆಫ್ರಿಕನ್) ಹೆಣ್ಣು ಮಕ್ಕಳ ಶೋಷಣೆ ಹೇಗೆ ನಡೆಯುತ್ತಿತ್ತು? ಗಂಡಸರ ದಬ್ಬಾಳಿಕೆ, ಅಮೇರಿಕನ್ ವೈಟ್ ನವರ ದರ್ಪ, ಅಶಿಕ್ಷಿತ ಕಪ್ಪು ಜನರ ಅದ್ರಲ್ಲೂ ಹೆಣ್ಣುಮಕ್ಕಳ ಅಸಹಾಯಕತೆಯನ್ನು ಚಿತ್ರ ಕಣ್ಣಿಗೆ ಕಟ್ಟುವಂತೆ ತೋರಿಸುತ್ತಾ ಹೋಗುತ್ತದೆ.
ಸಿಲಿಗೆ ೧೪ ವರ್ಷ, ಆಕೆಯ ತಾಯಿ ಹೆತ್ತು, ಹೆತ್ತು ಸುಸ್ತಾದಳೆಂದು, ಸಿಲಿಯ ತಂದೆ, ಸಿಲಿಯ ಮೇಲೆ ಬಲಾತ್ಕಾರ ಮಾಡುತ್ತಾನೆ. ಇದರಿಂದಾಗಿ ಸಿಲಿಗೆ ೨ ಮಕ್ಕಳಾಗುತ್ತವೆ. ಅವರಿಬ್ಬರನ್ನೂ ಮಕ್ಕಳಿಲ್ಲದ ಅಮೇರಿಕನ್ ವೈಟ್ ದಂಪತಿಗಳಿಗೆ ಮಾರಿಬಿಡುತ್ತಾನೆ. ತಾಯಿ ಸಾಯುತ್ತಾಳೆ. ಸಿಲಿ ತನ್ನ ತಂದೆಯ ಹೆಂಡತಿಯಾಗುತ್ತಾಳೆ! ಸಿಲಿಗೊಬ್ಬಳು ಅತ್ಯಂತ ಪ್ರೀತಿ ಪಾತ್ರಳಾದ ತಂಗಿ ನೆಟ್ಟಿ. ಈಕೆಯ ಮೇಲೆ ತಮ್ಮ ತಂದೆಯ ಕಣ್ಣು ಬೀಳದಂತೆ ಕಾಪಾಡುವ ಸಿಲಿ ಆಕೆಯನ್ನು ಶಾಲೆಗೆ ಹೋಗುವಂತೆ ನೋಡಿಕೊಳ್ಳುತ್ತಾಳೆ. ಚರ್ಚ್ ನಲ್ಲಿ ನೆಟ್ಟಿಯನ್ನು ನೋಡಿದ ವಿಧುರನೊಬ್ಬ ಸಿಲಿಯ ತಂದೆಯ ಬಳಿ ಬಂದು ಆಕೆಯನ್ನು ಮದುವೆ ಮಾಡಿಕೊಡಲು ಕೇಳುತ್ತಾನೆ. ಆದರೆ ಸಿಲಿಯ ತಂದೆ ಸಿಲಿಯನ್ನೇ ಮಾಡಿಕೋ ಎಂದು ಹೇಳುತ್ತಾನೆ. ಆಕೆ ಚೆನ್ನಾಗಿಲ್ಲ, ಕಪ್ಪು, ಆಕೆಯ ನಗು ಚೆನ್ನಾಗಿಲ್ಲ, ಆಕೆ ಈಗಾಗಲೇ ಹಾಳಾಗಿದ್ದಾಳೆ, ಇದೆಲ್ಲವೂ ಈ ವಿಧುರನ ಕಂಪ್ಲೇಂಟ್. ಆದರೆ ಅದಕ್ಕೆಲ್ಲವೂ ಸಮಜಾಯಿಶಿ ಕೊಡುತ್ತಾನೆ ಸಿಲಿಯ ತಂದೆ. ವಧು ಪರೀಕ್ಷೆಯಂತೂ ಥೇಟ್ ಪ್ರಾಣಿಗಳ ವ್ಯಾಪಾರದ ಹಾಗೇ ಭಾಸವಾಗುತ್ತದೆ. ಆಕೆಯನ್ನು ತಿರುಗಿಸಿ, ನಡೆಸಿ ತೋರಿಸುವ ತಂದೆ, ಒಪ್ಪಿಕೊಳ್ಳುವ ಈತ. ಸಿಲಿಯ ಮದುವೆಯಾಗುತ್ತದೆ. ಮತ್ತಷ್ಟು ಓದು 
ಉಳ್ಳಾಲದ ದರ್ಗಾ ಒಂದು ಪರಿಚಯ
ಶಿಹಾ ಉಳ್ಳಾಲ್
ಭೂಗರ್ಭ ಶಾಸ್ತ್ರದ ಪ್ರಕಾರ ಭಾರತ ಮತ್ತು ಶ್ರೀಲಂಕೆಗಳು ಒಂದಾಗಿದ್ದುವೆಂದೂ, ಇವೆರಡರ ಮಧ್ಯೆ ಸಮುದ್ರವಿರಲಿಲ್ಲವೆಂದೂ ಶ್ರೀಲಂಕೆಯ ತಲೈಮನ್ನಾರ್ನಿಂದ ರಾಮೇಶ್ವರದವರೆಗೆ ಕಲ್ಲುಗಳು ಇದ್ದು (ಆಡಂಬ್ರಿಜ್) ಇಲ್ಲಿ ಭೂಮಿ ಇದೆಯೆಂಬ ಕುರುಹು ಇದೆ. ಮತ್ತು ತಮಿಳುನಾಡಿನ ರಾಮೇಶ್ವರದಲ್ಲಿ ಸಯ್ಯಿದುನಾ ಆದಂ(ಅ.ಸ)ರ ಮಕ್ಕಳಾದ ಹಝ್ರತ್ ಹಾಬೀಲ್(ರ.ಅ.) ಮತ್ತು ಹಝ್ರತ್ ಖಾಬೀಲ್ (ರ.ಅ.)ಮಕ್ಬರವಿರುತ್ತದೆ. ಪ್ರವಾದಿ ಹಝ್ರತ್ ನೂಹ್ (ಅ.ಸ.)ರವರ ಕಾಲದಲ್ಲಿ (ಕ್ರಿ.ಪೂ.೩೭೮೦)ಬಂದ ಭೀಕರ ಜಲಪ್ರಳಯದಿಂದಾಗಿ ಶ್ರೀಲಂಕೆ, ಭಾರತ ಭೂಖಂಡ ದಿಂದ ಬೇರ್ಪಟ್ಟಿತೆಂದೂ ಭೂಗರ್ಭ ಶಾಸ್ತಜ್ಞರು ಹೇಳಿರುತ್ತಾರೆ. ಹಾಗಾದರೆ ಹಿಂದಿನ ಕಾಲದಲ್ಲಿ ಶ್ರೀಲಂಕೆ ಭಾರತದ ಒಂದು ಭಾಗವಾಗಿತ್ತೆಂದು ಸ್ಪಷ್ಟವಾಗಿ ತಿಳಿಯುತ್ತದೆ. ಪ್ರವಾದಿ ಆದಂ(.ಅ.ಸ)ರವರ ಪಾದಕಮಲಗಳು ಪ್ರಥಮವಾಗಿ ಸ್ಪರ್ಶಿಸಲ್ಪಟ್ಟ ಸ್ಥಳ ಅಂದೂ, ಇಂದೂ ‘ಆದಂಮಲೆ’ಎಂದು ಕರೆಯಲ್ಪಡುವ ಶ್ರೀಲಂಕೆಯ ಆದಂ ಪರ್ವತದಲ್ಲಿ ಎಂದು ಚರಿತ್ರೆ ಉಲ್ಲೇಖಿಸುತ್ತದೆ. ಆ ಪುಣ್ಯ ಮಲೆ ಇಂದು ಜಗತ್ತಿನ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಹಝ್ರತ್ ಆದಂ (ಅ.ಸ.)ರವರು ಆದಂಮಲೆಯ ಮೇಲಿನಿಂದ ಇಳಿದು ಬಂದು ಅದರ ಸುತ್ತಮುತ್ತಲ ಪರಿಸರಗಳಲ್ಲಿ ಸಂಚರಿಸಿದ್ದರು. ಆ ಬಳಿಕ ಅಲ್ಲಾಹನ ಆದೇಶದಂತೆ ಹಝ್ರ್ರತ್ ಆದಮ್ (ಅ.ಸ.) ಭಾರತದ ಮೂಲಕ ಕಾಲ್ನಡಿಗೆಯಲ್ಲೇ ಪವಿತ್ರ ಮಕ್ಕಾದ ಕಡೆಗೆ ಹೊರಟರು. ಮಕ್ಕಾ ತಲುಪಿದ ಅವರು ಮಾನವ ಪಾಪ(ದೋಷ)ಪರಿಹಾರಕ್ಕೆ ಮಲಾಯಿಕರು(ದೇವದೂತ) ಅಂತರೀಕ್ಷದಲ್ಲಿರುವ ಬೈತುಲ್ ಮಅಮೂರ್ ಮಸೀದಿಯ ನೇರಕ್ಕೆ ಭೂಮಿಯಲ್ಲಿ ನಿರ್ಮಿಸಿದ ಕಅಬಾ-ಶರೀಫಿಗೆ ತೆರಳಿ ಅಲ್ಲಾಹನ ಸ್ತುತಿಗೈದು, ತನ್ನ ಪತ್ನಿ ಹವ್ವಾ (ರ.ಅ.) ರನ್ನು ಅರಫಾ ಮೈದಾನದಲ್ಲಿ ಸಂಧಿಸಿದರು. ಅಲ್ಲಿಂದ ಅವರೀರ್ವರೂ ಭಾರತಕ್ಕೆ ಹಿಂತಿರುಗಿ ಇಲ್ಲೇ ವಾಸಿಸತೊಡಗಿದರು.
ಪ್ರವಾದಿ ಸಯ್ಯಿದುನಾ ಆದಂ (ಅ.ಸ.)ರವರನ್ನು ಜಬಲ್ ಖುಬೈಸ್ ಎಂಬ ಬೆಟ್ಟದಲ್ಲಿಯೂ ಹಝ್ರತ್ ಹವ್ವಾ (ರ.ಅ.)ರವರು ಜಿದ್ದಾದಲ್ಲಿ ಅಂತ್ಯವಿಶ್ರಮ ಹೊಂದಿರುತ್ತಾರೆ. ಹಝ್ರತ್ ಆದಂ (ಅ.ಸ.). ಹಾಗೂ ಹಝ್ರತ್ ಹವ್ವಾ (ರ.ಅ.) ದಂಪತಿಗೆ ಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿ ಒಟ್ಟು ೪೦೦ ಮಂದಿ ಸಂತತಿಗಳಿದ್ದರೆಂದೂ ಇಬ್ನ್ ಅಬ್ಬಾಸ್(ರ)ರವರು ವ್ಯಾಖ್ಯಾನಿಸಿದ್ದಾರೆ. ಅವರು ಶ್ರೀಲಂಕೆಯಿಂದ ಮಕ್ಕಾದ ವರೆಗಿನ ಹಲವಾರು ರಾಜ್ಯಗಳಲ್ಲಿ ಜೀವಿಸಿದ್ದರೆಂದೂ ಹೇಳಲಾಗಿದೆ. ಮತ್ತಷ್ಟು ಓದು 
ಪಂಚರಂಗಿ…………. ಲೈಫು ಇಷ್ಟೇನೇ
ರೂಪರಾಜೀವ್
ನಮ್ಮ ಹೊಸ ಚಲನಚಿತ್ರ ‘ಪಂಚರಂಗಿ’ ಭರ್ಜರಿ ಆರಂಭವನ್ನು ಪಡೆದುಕೊಂಡಿತು. ಈ ರೀತಿಯ ಪ್ರಚಂಡ ಆರಂಭದ ಯಶಸ್ಸನ್ನು ನಾನಾಗಲೀ, ನಮ್ಮ ತಂಡವಾಗಲೀ ನಿರೀಕ್ಷಿಸಿಯೇ ಇರಲಿಲ್ಲ! ನಾನು ಪವನ್ ಕುಮಾರ್, ಪಂಚರಂಗಿ ಯ ಕಥೆ, ಚಿತ್ರಕಥೆ ಬರೆದವರಲ್ಲಿ ಒಬ್ಬ! ಜೊತೆಗೆ ಈ ಚಿತ್ರದ ‘ಲಕಿ’ ಪಾತ್ರಧಾರಿ ಕೂಡ ನಾನೇ. ನಾವು ಪಂಚರಂಗಿಯನ್ನು ತೆರೆಗೆ ತರುವ ಮುನ್ನಾ ಏನಾಯಿತು, ಹೇಗಾಯಿತು ಎನ್ನುವುದನ್ನು ನಿಮ್ಮ ಮುಂದಿಡಲು ಇಚ್ಚಿಸುತ್ತೇನೆ.

ಮನಸಾರೆ ಚಿತ್ರವು ಸೆಪ್ಟೆಂಬರ್ ೨೦೦೯ ರಲ್ಲಿ ಬಿಡುಗಡೆಯಾಯಿತು. ಮನಸಾರೆ ಚಿತ್ರದ ಯಶಸ್ಸನ್ನು ಸ್ವಲ್ಪ ಮಟ್ಟಿಗೆ ನಿರೀಕ್ಷಿಸಿದ್ದೆವು ಕೂಡ. ಈ ಚಿತ್ರಕ್ಕೆ ಸುರಿದ ಪ್ರಶಂಸೆಯ ಸುರಿಮಳೆ, ನನಗೆ ಸ್ವರ್ಗಕ್ಕೆ ಮೂರೇ ಗೇಣು ಎಂದಂತೆ ಭಾಸವಾಗಿದ್ದು ಮಾತ್ರ ಸುಳ್ಳಲ್ಲ. ಮನಸಾರೆ ಕಥೆ, ಚಿತ್ರಕಥೆ ಬರೆಯುವಾಗಿನ ಕ್ಷಣಗಳು ನನಗೆ ವೈಯಕ್ತಿಕವಾಗಿ ಅತ್ಯಂತ ಖುಷಿ ಕೊಟ್ಟಂತಹ ಕ್ಷಣಗಳು. ನಾನು ಈ ಚಿತ್ರ ನಿರ್ಮಾಣ ಕಾರ್ಯದಲ್ಲಿ ಅತೀ ಉತ್ಸುಕತೆಯಿಂದ ಭಾಗವಹಿಸಿದ್ದೇನೆ. ಇದರ ಕಥೆ, ಚಿತ್ರಕಥೆಯಲ್ಲಿನ ಕ್ಷಣಕ್ಷಣದ ಬದಲಾವಣೆಗಳು, ಹಾಸ್ಯ ಮಿಶ್ರಿತ ಫಿಲಾಸಫಿ, ಇದೆಲ್ಲವೂ ನನ್ನನ್ನು ಜೀವಂತಿಕೆಯಲ್ಲಿಟ್ಟಿತ್ತು ಎಂದರೆ ತಪ್ಪಾಗಲಾರದು. ಮತ್ತಷ್ಟು ಓದು 
ವೈದೇಹಿಯವರ ಭೇಟಿ ಎಂಬ ಕೌತುಕ
ಸಾತ್ವಿಕ್
’ನನಗೆ ನಿಮ್ಮ ಕೈಯನ್ನೊಮ್ಮೆ ಮುಟ್ಟಬೇಕೆಂಬ ಆಸೆ’ , ಇದು ವೈದೇಹಿಯವರು ತುಂಬಿದ ಸಭೆಯಲ್ಲಿ ತಾರಿಣಿಯವನ್ನು ಕುರಿತು ಹೇಳಿದ ಮಾತು. ಯಾಕೆಂದರೆ ರಾಷ್ಟ್ರಕವಿ ಕುವೆಂಪು ಅವರ ಮಗಳು ತಾರಿಣಿಯವರನ್ನು ಮುಟ್ಟಿದರೆ ಕುವೆಂಪು ಅವರನ್ನೇ ಸ್ಪರ್ಷಿಸಿದಂತೆ ಎಂಬ ಮುಗ್ಧಭಾವ ಅವರ ಮಾತಿನಲ್ಲಿತ್ತು.

(ಚಿತ್ರದಲ್ಲಿ ಕ್ರಮವಾಗಿ ಪ್ರತಾಪಚಂದ್ರಶೆಟ್ಟಿ, ಸಾತ್ವಿಕ್, ಚಂದ್ರಶೇಖರ ಮಂಡೆಕೋಲು ಮತ್ತು ವೈದೇಹಿಯವರು)ಜನಸಾಮಾನ್ಯರಲ್ಲಿ ಇರಬಹುದಾದ ಭಾವುಕ ಆಲೋಚನೆಗಳನ್ನು ಹತ್ತು ಹಲವು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡ ನಂತರವೂ ಉಳಿಸಿಕೊಂಡವರು ವೈದೇಹಿಯವರು. ಇಂಥ ಪ್ರಸಿದ್ಧ ಸಾಹಿತಿ, ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಶ್ರೀಮತಿ ವೈದೇಹಿಯವರನ್ನು ಭೇಟಿಯಾಗಬೇಕೆಂದಾಗ ನಮ್ಮ ಮನಸ್ಸಿನಲ್ಲೂ ಒಂದು ಪುಳಕ. ಅವರು ಎಂದಿನಂತೆಯೇ ತಮ್ಮ ಚೂಟಿಯಾದ ಮಾತುಗಳಿಂದ ನಮ್ಮನ್ನು ಇದಿರುಗೊಂಡರು. ಭೇಟಿಯಾಗಿದ್ದಾಗ ತೆಗೆದ ಫೋಟೋ ಇದು.
ಚಿತ್ರ ಕೃಪೆ : ಎಚ್.ಪಿ. ನಾಡಿಗ್
ಈಗ ಬರೀ ಟ್ಯಾಟ್ಟೋದ ಖಯಾಲಿ..
ಕವಿತಾ ಆನಂದ ಹಳ್ಳಿ

ನಿಮಗೆ `ಬಿಂದಿ’ ಗೊತ್ತು. `ಮದರಂಗಿ’ ಗೊತ್ತು. `ಟ್ಯಾಟ್ಟೋ’ ಗೊತ್ತೆ?. ಗೊತ್ತಿಲ್ಲ ಅನ್ಬೇಡಿ. ಇದು, ಇವತ್ತಿನ ಲೇಟೇಸ್ಟ್ ಫ್ಯಾಷನ್.
ಹೌದು! ಈಗ ನಮ್ಮ ನಡುವೆ ಟ್ಯಾಟ್ಟೋ ಬಂದಿದೆ. ಇದು ಥೇಟ್ ಹಚ್ಚಿ ತರ. ನಮ್ಮ ಯುವ ಸ್ನೇಹಿತರು ಇದಕ್ಕಾಗಿ ಸಜ್ಜಾಗುತ್ತಿದ್ದಾರೆ. ನಮ್ಮ ಯುವಕಲಿಗಳು ಯಾವಾಗಲು ಬಯಸುವುದು ಹೊಸದನ್ನೇ ಅಲ್ವಾ? ಅದಕ್ಕೆ ಟ್ಯಾಟ್ಟೋಗೆ ಈಗ ಭಾರಿ ಬೇಡಿಕೆ ಬಂದಿದೆ. ನಮ್ಮ ಕಾಲೇಜ್ ಹೈದ, ಹೈದೆಯರು ಈಗ ಇದರ ಹಿಂದೆ ಬಿದ್ದಿದ್ದಾರೆ ಗೊತ್ತಾ?
ಏನಿದು ಟ್ಯಾಟ್ಟೋ..
ಚರ್ಮದ ಮೇಲೆ ಹಾಕಿಸಿಕೊಳ್ಳುವ ಗುರುತು, ಬಿಡಿಸಿಕೊಳ್ಳುವ ಚಿತ್ರವೇ ಟ್ಯಾಟ್ಟೋ. ಇದು ಒಂದು ಕಲೆಯೂ ಹೌದು. ಇದನ್ನು ಒಂದ್ಸಾರಿ ಮೈಮೇಲೆ ಹಾಕಿಸಿಕೊಂಡರೆ ಸಾಯೋತನಕ ಜೊತೆಗಿರುತ್ತದೆ. ಬಾಳ ಸಂಗಾತಿಯಂತೆ.
ಇದು, ಮೂಲತಃ ವಿದೇಶದಲ್ಲಿ ಹುಟ್ಟಿಕೊಂಡ ಸಂಸ್ಕೃತಿ. ಈಜೀಪ್ತ್, ಚೀನಾ, ಜಪಾನ್ ದೇಶಗಳಲ್ಲಿ ತುಂಬಾ ಜನಪ್ರೀಯ ಕಲೆಯಾಗಿದ್ದು ಇದೀಗ ನಮ್ಮಲ್ಲಿ ಲಗ್ಗೆ ಇಟ್ಟಿದೆ.
ಹೇಗೆ ಹಾಕುವುದು
ಇದನ್ನು ಮಶೀನ್ದಿಂದ ಹಾಕುತ್ತಾರೆ. ಸೂಜಿ ಹಾಗೂ ಇಂಕ್ (ಮಸಿ)ನ್ನು ಬಳಸುತ್ತಾರೆ. ಕಪ್ಪು, ಕೆಂಪು, ಹಸಿರು, ಲೇಮನ್ ಇನ್ನೂ ವಿವಿಧ ಬಣ್ಣದ ಇಂಕ್ಗಳಿರುತ್ತವೆ. ಈ ಹುಚ್ಚು ಯಾರನ್ನು ಬಿಟ್ಟಿಲ್ಲಾ. ತಮಗೆ ಬೇಕಾದ ಡಿಸೈನ್ ಇಂಟರ್ನೆಟ್ನಲ್ಲಿ ಹುಡುಕಿ, ತಂದು ಹಾಕಿಸಿಕೊಳ್ಳುವರು. ಇಲ್ಲವೇ ಟ್ಯಾಟ್ಟೋ ಡಿಸೈನ್ರ್ಗಳು ತಮ್ಮ ಇಚ್ಚೆಯ ಪ್ರಕಾರ ಹಾಕುವರು.
ಏನು ಮಾಡಬೇಕು
ಇದನ್ನು ಹಾಕಿಸಿಕೊಳ್ಳುವಾಗ ತುಸು ನೋವಾಗುತ್ತದೆ. ಅದು ಆ ಕ್ಷಣ ಮಾತ್ರ. ಹಾಕಿಸಿಕೊಂಡ ಒಂದು ತಿಂಗಳವರೆಗೆ ಅದನ್ನು ಕಾಪಾಡಬೇಕು. ಆ ಜಾಗವನ್ನು ದಿನಕ್ಕೆರಡು ಬಾರಿ ಜಾನ್ಸನ್ಬೇಬಿ ಸೋಪ್ನಿಂದ ತೊಳೆದು ನಂತರ ಮೃದು ಬಟ್ಟೆಯಿಂದ ನಿಧಾನವಾಗಿ ತಟ್ಟಬೇಕು ಹೊರತು, ಒರೆಸಬಾರದು. ಆ ನಂತರ ವ್ಯಾಸಲೀನ್ ಅಥವಾ ಆಯಿಂಟ್ಮೆಂಟ್ನ್ನು ಹಚ್ಚಬೇಕು. ಈ ಕ್ರಮವನ್ನು ಒಂದು ವಾರದವರೆಗೆ ತಪ್ಪದೇ ಪಾಲಿಸಿದಲ್ಲಿ ಅದಕ್ಕೆ ಅದು ಹಾಳಾಗುವುದಿಲ್ಲ. ಮತ್ತಷ್ಟು ಓದು 
ದೇವರು, ಧರ್ಮ ಮತ್ತವನ ಜಾತಿ. – ಸರಣಿ ೨
ಅರವಿಂದ್
![]() |
| ಕ್ರಿ.ಪೂ. ೧೦೦೦ |
ದೇವರು ಹುಟ್ಟಿದ್ದು ಹೇಗೆ ?
ಹಳೆಶಿಲಾಯುಗದ ಕಾಲದಲ್ಲಿ ಮನುಷ್ಯ ತನ್ನ ಹೊಟ್ಟೆಪಾಡಿಗಾಗಿ ಪ್ರಾಣಿಗಳನ್ನು ಕೊಂದು ತಿನ್ನುತ್ತಿದ್ದದ್ದು, ಪಠ್ಯಪುಸ್ತಕಗಳಲ್ಲಿ ಓದಿಯೇ ಇರುತ್ತೀರಿ. ಅದು ಅವನ ಅಂದಿನ ಅವಶ್ಯಕತೆ. ಆದರೆ ಮನುಷ್ಯನಿಗೆ ತನ್ನ ಸುತ್ತಮುತ್ತಲಿನ ನಿಸರ್ಗದ ವ್ಯೆಪರೀತ್ಯಗಳು, ಒಮ್ಮೊಮ್ಮೆ ವಿಚಿತ್ರವಾಗಿ ಉಂಟಾಗುವ ಗುಡುಗು, ಮಿಂಚು, ಭೂಕಂಪ ಅವನನ್ನು ಗೊಂದಲಕ್ಕೀಡು ಮಾಡುತ್ತಿತ್ತೇನೋ ? ಈ ವಿಚಿತ್ರಗಳ ಅನುಭವದಿಂದ ಮನುಷ್ಯ ತನ್ನನ್ನು ಮೀರಿ ಮತ್ತೊಬ್ಬ ಶಕ್ತಿವಂತನಿರಬಹುದು. ಆ ವ್ಯಕ್ತಿ ಇವೆಲ್ಲವನ್ನು ಮಾಡುತ್ತಿರಬಹುದೇನೋ ಎಂಬ ಭ್ರಾಂತಿಗೆ ಬಂದ ? ನಿಸರ್ಗದ ದೃಷ್ಠಿಯಲ್ಲಿ ಮನುಷ್ಯ ಕಂಡ ಪ್ರತಿ ಬದಲಾವಣೆಗಳನ್ನು ನಂತರದ ದಿನಗಳಲ್ಲಿ ದೇವರು ಎಂಬ ಹೆಸರಿನಲ್ಲಿ ಕರೆದಿರಬಹುದು.
ಇಂಥ ದೇವರುಗಳನ್ನು ಕಾಲಕ್ರಮೇಣ ಪ್ರತಿ ಪಂಗಡದಲ್ಲೂ ಅವರ ಕಲ್ಪನೆಯ ಅನುಸಾರ ಮೂರ್ತರೂಪ ಕೊಟ್ಟು, ಆ ಗುಂಪಿನ ನಾಯಕ ತನಗೆ ಏನು ತೋಚುತ್ತಿತ್ತೋ ಹಾಗೆ ಪೂಜೆಯನ್ನೋ ಅಥವಾ ಮತ್ತಿನ್ಯಾವುದೋ ರೀತಿ ಮನವಿಯನ್ನೋ ಮಾಡುತ್ತಿದ್ದುದು ಇನ್ನಿತರ ಸದಸ್ಯರುಗಳಿಗೆ ಅದೇ ಸರಿ ಮತ್ತು ನಾಯಕನ ಮಾತಿನಂತೆ ಮತ್ತವನು ಮಾಡುತ್ತಿದ್ದ ಪೂಜೆಯೆಂಬ ಹೆಸರಿನ ಪ್ರಕಾರವೇ ದೇವರನ್ನು ಒಲಿಸುವುದು ಎಂಬ ಭಾವನೆ ಬಂದಿರಬಹುದು. ಹೀಗೆ ನಡೆಸುವ ಪೂಜೆ-ಪುನಸ್ಕಾರಗಳ ನಂತರ ಅವರ ಕಷ್ಟಗಳು ಆಕಸ್ಮಿಕವಾಗಿ ನಿವಾರಣೆಯಾದಾಗ ದೇವರು ನಮ್ಮ ಇಷ್ಟಾರ್ಥವನ್ನು ಸಿದ್ಧಿಸುವ ವ್ಯಕ್ತಿ ಮತ್ತು ನಾವು ಆ ಕಾಣದ ವ್ಯಕ್ತಿಗೆ ಯಾವತ್ತೂ ಅಭಾರಿಯಾಗಿರಬೇಕೆನ್ನಿಸಿತೇನೋ ? ಮತ್ತಷ್ಟು ಓದು 
ದೇವರು, ಧರ್ಮ ಮತ್ತವನ ಜಾತಿ. – ಸರಣಿ ೧

ಅರವಿಂದ್
ದೇವರು ಎಂಬ ಪದ ಸಾರ್ವಜನಿಕವಾಗಿ ಒಮ್ಮೆ ಚರ್ಚೆಗೆ ಬಂದರೆ ಅಲ್ಲಿ ತನ್ನ ಪರಮ ಪ್ರಿಯ ದೇವರೇ ಶ್ರೇಷ್ಠ. ಮತ್ತೆಲ್ಲವೂ ನಿಕೃಷ್ಟ, ಎಂಬಂತೆ ವಾದ ಮಂಡಿಸುವ ಭಕ್ತ ಸಮೂಹ ಎಲ್ಲಿಲ್ಲ ಹೇಳಿ. ಅದರಲ್ಲೂ ವಾದಿಸುವವ ತಾನು ಪೂಜಿಸುವ ದೇವರು ಹೇಗೆಲ್ಲ ಶ್ರೇಷ್ಠ ಎಂಬುದನ್ನು ಸಾಬೀತುಪಡಿಸಲಿಕ್ಕೆ, ಆ ದೇವರ ಕುರಿತಾದ ಕಥೆಗಳು, ಉಪಮೆಗಳು, ಮತ್ತು ಆಧಾರಗಳು, ಮತ್ಯಾವುದೋ ಮಹಿಮೆ, ಅವತಾರಗಳ ಪಟ್ಟಿಯನ್ನೇ ಕೊಟ್ಟುಬಿಡುತ್ತಾನೆ. ನಿಜಕ್ಕೂ ದೇವರೇ ಕೇಳಿಸಿಕೊಂಡರು (ಇದ್ದಲ್ಲಿ) ಈ ಪರಿಯ ವಿಚಾರಗಳು ಅವನಿಗೂ ತಿಳಿದಿರುತ್ತದೋ ಇಲ್ಲವೋ, ಆದರೆ ಹಟಕ್ಕೆ ಬೀಳುವ ಭಕ್ತ ಅದನ್ನು ಹೇಗಾದರೂ ಸರಿಯೇ ಪ್ರಾಬಲ್ಯಕ್ಕೆ ಕಟ್ಟು ಬೀಳುವ ಹಾಗೆ ವಾದಿಸುತ್ತಾನೆ.
ಅಸಲಿಗೆ ದೇವರಿಗೂ ಧರ್ಮಕ್ಕೂ ವಾದಿಸುವ ವ್ಯಕ್ತಿಗೆ ಅಸಲಿಗೆ ಪ್ರತ್ಯಕ್ಷ ದೇವರೇ ಎದುರಿಗೆ ಬಂದರೂ ನಂಬುವುದಿಲ್ಲ, ಇಂತಹ ಪರಿಸ್ಥಿತಿಯಲ್ಲೂ ದೇವರೆಂಬ ದೇವರೇ ಏನು ಮಾಡಲಾಗದಿರುವಾಗ, ಇಲ್ಲ ಸಲ್ಲದ ವಾದ ವಿವಾದಗಳಲ್ಲಿ ತಲೆತೂರಿಸಿ ತನ್ನ ವಾದಶಕ್ತಿಯಿಂದಲೇ ಮತ್ತೊಬ್ಬನನ್ನು ಮರುಳು ಮಾಡುತ್ತೇನೆಂದು ನಿಂತವನಿಗೆ ಮತ್ತೆಲ್ಲವೂ ಗೌಣ್ಯ.
ಎಲ್ಲರೂ ದೇವರು!!!!!!!!!!! ದೇವರು!!!!!!!!!! ಎನ್ನುವ ಈ ದೇವರು ನಿಜಕ್ಕೂ ಯಾರು ? ಮತ್ತು ಯಾವುದು ?
ದೇವರು ಯಾರು ? ಎಂದರೆ (ಧರ್ಮಗಳ ಬಗ್ಗೆ ಮುಂದೆ ದಿನ ಚರ್ಚೆ ಮಾಡೋಣ) ಹಿಂದೂ ಎಂಬ ಹಣೆಪಟ್ಟಿಯಲ್ಲಿ ಬೆಳೆದವನು ಅಟ್ಟಿ ಲಕ್ಕಮ್ಮನಿಂದ ಹಿಡಿದು ಬ್ರಹ್ಮ, ವಿಷ್ಣು, ಮಹೇಶ್ವರಾದಿಗಳವರೆಗೂ ದೊಡ್ಡ ಪಟ್ಟಿಯನ್ನು ಕೊಡುತ್ತಾನೆ. ಇನ್ನು ಮುಸ್ಲಿಂ ಹಣೆಪಟ್ಟಿಯಡಿ ದೇವರುಗಳ ಸಂಖ್ಯೆ ಚಿಕ್ಕದಾದರೂ ಆತ ಯಾವುದನ್ನೂ ಬಿಡದೆ ತಿಳಿಸುತ್ತಾನೆ. ಇನ್ನು ಕ್ರ್ಯೆಸ್ತ, ಜ್ಯೆನ, ಬೌದ್ದ, ಇನ್ನಿತರ ಹಣೆಪಟ್ಟಿಯಡಿ ಬರುವ ಪ್ರಪಂಚದ ದೇವರುಗಳು ತಮ್ಮವೇ ದೇವರುಗಳ ಪ್ರವರ ನೀಡಿ, ಏನನ್ನೋ ಸಾಧಿಸಿಬಿಟ್ಟನೆಂಬಂತೆ ಒಮ್ಮೆ ಬೀಗುತ್ತಾರೆ.
ದೇವರು ಪರಿಕಲ್ಪನೆಯಲ್ಲಿ ಒಂಥರಾ ರಿಮೋಟ್ ಇದ್ದ ಹಾಗೆ, ಅವನ ಟಿವಿಯಲ್ಲಿ ಬರೋಬ್ಬರಿ ೬೦೦ ಕೋಟಿ ಹೆಚ್ಚು ಚಾನೆಲ್ಗಳು ಅಡಕ. ಹಾಗಿರುವ ದೇವರಿಗೆ ಭಕ್ತನ ಪ್ರತಿ ಹೆಜ್ಜೆಯೂ ಆಲೋಚನೆಗಳು ಮತ್ತವನ ನಡುವಳಿಕೆಗಳು, ಒಳ್ಳೆಯದು ಕೆಟ್ಟದ್ದು ಎಲ್ಲವೂ ತಿಳಿದಿರುವ ದೇವರಿಗೆ, ಈ ಉಪಮೆಗಳು ಯಾವತ್ತೂ ದೇವರ ಅಸ್ತಿತ್ವದಲ್ಲಿದ್ದಾನೆಂಬ ನಂಬಿಕೆಗಷ್ಟೆ ಅರ್ಹ. ನಿಜಕ್ಕೂ ದೇವರು ಎಂಬುದು ಇಂದಿನ ಬಹುಜನರ ಪ್ರಶ್ನಾರ್ಥಕ ಚಿಹ್ನೆ, ಇದರ ಉತ್ತರ ಬಿಡಿಸಲು ಹೋದ ಪ್ರತಿಯೋರ್ವನು ನಿರಾಶೆಯಿಂದ ಪ್ರಯತ್ನ ಬಿಟ್ಟಿರುತ್ತಾನೆ. ಹಾಗಂತ ಎಲ್ಲೂ ದೇವರಿಲ್ಲ ಎಂಬ ಮಾತಿಗೆ ಅವನ ವಿರೋಧ ಇದ್ದೇ ಇರುತ್ತದೆ.








