ವಿಷಯದ ವಿವರಗಳಿಗೆ ದಾಟಿರಿ

Archive for

28
ಫೆಬ್ರ

ರಾಮಾಯಣ-ಮಹಾಭಾರತವನ್ನ ಕನ್ನಡಿಗ್ರು ನೋಡ್ಬಾರ್ದಾ?

– ರಾಕೇಶ್ ಶೆಟ್ಟಿ

ಭಾನುವಾರ ಬೆಳಿಗ್ಗೆಯಾಗುವುದನ್ನೆ ಕಾಯುತಿದ್ದ ದಿನಗಳವು,ಆ ೪೫ ನಿಮಿಷಗಳು ರಸ್ತೆ ಬಿಕೋ ಅನ್ನುತಿತ್ತು.ಆಗ ನಮ್ಮ್ ಇಡಿ ಊರಿಗೆ ಇದ್ದಿದ್ದು ಮೇಷ್ಟ್ರ ಮನೆಯ ಟೀವಿ ಮಾತ್ರ ಅಲ್ಲಿ ಹೋಗಿ ಕೂತು …ಪರದೆಯಲ್ಲಿ ’ಕರ್ಮಣ್ಯೆ ವಾದಿಕಾ…’ ದನಿ ಕೇಳುತಿದ್ದಂತೆ ಕಣ್ಣು ಬಿಟ್ಟಂತೆ ನೋಡುತ್ತ ಕೂರುತಿದ್ದೆ.ಹೌದು ನಾನು ಮಾತಾಡುತ್ತಿರುವುದು ’ಮಹಾಭಾರತ’ ಧಾರವಾಹಿಯ ಬಗ್ಗೆ.ಅದರಲ್ಲಿ ಮಧ್ಯೆ ಬರುವ ಹಾಡುಗಳು, ಆ ಯುದ್ಧದ ದೃಶ್ಯಗಳನ್ನ ನೋಡುವುದೇ ಹಬ್ಬ,ಭಾಷೆ ಅರ್ಥವಾಗದಿದ್ದರೂ ನೋಡುತಿದ್ದೆ,ನೋಡಲೆಬೇಕಿತ್ತು!

ಯಾಕಂದ್ರೆ ಗೊತ್ತಲ್ಲ ನಮ್ಮ್ ಕನ್ನಡ ಚಿತ್ರರಂಗದವರ ’ಡಬ್ಬಿಂಗ್ ನಿಷೇಧ’ ನೀತಿ.ಈ ಹಿಂದೊಮ್ಮೆ ಇದರ ಬಗ್ಗೆ ಬರೆದಿದ್ದೆ, ಮತ್ತೆ ಬರೆಯುವಂತೆ ಮಾಡಿದ್ದು ಈ ಬಾರಿಯ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕೈಗೊಂಡ ಡಬ್ಬಿಂಗ್ ವಿರೋಧಿ ನಿರ್ಣಯ.ಒಂದು ವೇದಿಕೆಯಲ್ಲಿ ವಿರುದ್ಧ ನಿಲುವು ತಳೆದರೆ ಮತ್ತೊಂದು ವೇದಿಕೆಯಲ್ಲಿ ಹಿರಿಯ ನಟಿ,ಚತುರ್ಭಾಷಾ ತಾರೆ ಬಿ.ಸರೋಜಾದೇವಿಯವ್ರು “ಚಲನಚಿತ್ರ ಹಾಗೂ ಕಿರುತೆರೆ” ಗೋಷ್ಠಿಯ ಅಧ್ಯಕ್ಷ ಭಾಷಣದಲ್ಲಿ ಅದೂ “ಡಬ್ಬಿಂಗ್ ವಿರೋಧ ಮತ್ತು ರಾಜಕೀಯ ಶಕ್ತಿಯಾಗಿ ಕನ್ನಡ-ಕನ್ನಡಿಗ” ಎಂಬ ಕೃತಿಯನ್ನು ಬಿಡುಗಡೆ ಮಾಡಿ ಡಬ್ಬಿಂಗ್ ಪರವಾಗಿ ಮಾತಾಡಿ,ಇತ್ತೀಚೆಗೆ ಡಬ್ಬಿಂಗ್ ನಮ್ಮ ಹಕ್ಕು ಅಂತ ಹೇಳಿಕೊಂಡು ಪತ್ರಿಕೆಗಳಿಗೆ ಬರೆಯುತ್ತ ಬಂದ ಗೆಳೆಯರ ಮಾತನ್ನ ಅನುಮೋದಿಸಿದ್ದಾರೆ.

ಮತ್ತಷ್ಟು ಓದು »