ವಿಷಯದ ವಿವರಗಳಿಗೆ ದಾಟಿರಿ

Archive for

17
ಆಗಸ್ಟ್

ರಾಮಸ್ವರೂಪ್ – ಭಾರತೀಯ ಚಿಂತನೆಯ ಶತಮಾನದ ಬೆಳಕು

ಡಾ.ರೋಹಿಣಾಕ್ಷ ಶಿರ್ಲಾಲು

ಅನ್ಯಾಕ್ರಮಣದಿಂದ ಸ್ಮೃತಿ ಅಳಿದು ವಿಸ್ಮೃತಿಗೆ ಒಳಗಾಗಿದ್ದ ಭಾರತೀಯ ಮನಸ್ಸುಗಳನ್ನು ಬಿಡುಗಡೆಗೊಳಿಸಲು ಪ್ರಯತ್ನಿಸಿದ ಮಹನೀಯರು, ಬೌದ್ಧಿಕ ದಾಸ್ಯವನ್ನು ಹೋಗಲಾಡಿಸಲು ಅಕ್ಷ ರಶಃ ಹೋರಾಡಿದವರು. ಕಳೆದು ಹೋಗಿದ್ದ ಅಸ್ಮಿತೆಯ ಹುಡುಕಾಟಕ್ಕೆ ಮತ್ತು ಬುದ್ಧಿಗೆ ಹಿಡಿದ ದಾಸ್ಯದ ಮುಸುಕನ್ನು ಸರಿಸಲು ವಿದ್ವತ್ತುಳ್ಳ ಅನೇಕರು ತಮ್ಮ ಬದುಕಿನ ಸಮರ್ಪಣೆಯನ್ನೇ ಮಾಡಿದ್ದಾರೆ. ಬೌದ್ಧಿಕ ಲೋಕದ ಕ್ಷಾತ್ರ ಪ್ರವೃತ್ತಿಯ ಮಹೋನ್ನತರ ಸಾಲಿಗೆ ಸೇರುವ, ಈ ಶತಮಾನದ ಬೆಳಕಾದ ವಿದ್ವಾಂಸರಲ್ಲಿ ರಾಮಸ್ವರೂಪ್‌ ಒಬ್ಬರು. ಭಾರತೀಯ ಮಣ್ಣಿನ ಸತ್ವವನ್ನು ತನ್ನ ಚಿಂತನೆಗಳಲ್ಲಿ ಮೈಗೂಡಿಸಿಕೊಂಡಿದ್ದ ರಾಮಸ್ವರೂಪರು 20ನೇ ಶತಮಾನ ಕಂಡ ಶ್ರೇಷ್ಠ ಚಿಂತಕ ಎಂದರೆ ಅತಿಶಯೋಕ್ತಿಯಲ್ಲ.

1919ರಲ್ಲಿ ಜನಿಸಿದ ರಾಮಸ್ವರೂಪ್‌, ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಜೈಲುವಾಸವನ್ನೂ ಅನುಭವಿಸಿದ್ದರು. ಗಾಂಧಿಯ ಅನುಯಾಯಿಯಾಗಿ ಕಾರ್ಯ ನಿರ್ವಹಿಸಿದ ಇವರು ಕಾರ್ಲ್‌ ಮಾರ್ಕ್ಸ್‌ನ ಚಿಂತನೆಗಳಿಂದ ಪ್ರಭಾವಿತರಾಗಿ ಮಾರ್ಕ್ಸ್‌ವಾದ ಒಂದೇ ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಎಂದು ನಂಬಿದ್ದರು. ಸ್ವಾತಂತ್ರ್ಯಾನಂತರದ ಭಾರತದ ವೈಚಾರಿಕ ವಲಯದಲ್ಲಿ ಕಮ್ಯುನಿಸಂಪ್ರಬಾವಿಯಾಗಿ ನೆಲೆಯಾಗುತ್ತಿದ್ದ ಸಂದರ್ಭದಲ್ಲಿ ಭಾರತೀಯ ಕಮ್ಯುನಿಸ್ಟರ ಬಗ್ಗೆ ರಾಮ ಸ್ವರೂಪರಲ್ಲಿ ಹುಟ್ಟಿದ ಅನುಮಾನಗಳಿಗೆ ಕಮ್ಯುನಿಸ್ಟ್‌ ನಾಯಕತ್ವದಲ್ಲಿ ಉತ್ತರವಿರಲಿಲ್ಲ. ಅಂತಿಮವಾಗಿ ಭಾರತದ ಪ್ರಮುಖ ಕಮ್ಯುನಿಸ್ಟ್‌ ವಿರೋಧಿ ವಿಮರ್ಶಕನಾಗಿ ಬದಲಾಗುತ್ತಾರೆ.

ಮತ್ತಷ್ಟು ಓದು »