ವಿಷಯದ ವಿವರಗಳಿಗೆ ದಾಟಿರಿ

Posts from the ‘ಕರ್ನಾಟಕ,ಕನ್ನಡ’ Category

4
ಏಪ್ರಿಲ್

ಕನ್ನಡಕ್ಕಿಂತ ತಮಿಳು ಯಾವುದರಲ್ಲಿ ಮುಂದಿದೆ?

ಅಜಕ್ಕಳ ಗಿರೀಶ್ ಭಟ್

ಕನ್ನಡದ ಬಗ್ಗೆ ಚರ್ಚೆಯಾಗುತ್ತಿರುವುದು ಸಂತೋಷ. ಬನವಾಸಿ ಬಳಗ ಹಾಗೂ ಶುಭಶ್ರೀಯವರ ಲೇಖನಗಳನ್ನು ಓದಿದೆ. ಈಗಾಗಲೇ ನಾನು ಹಿಂದಿನ ಒಂದು ಪ್ರತಿಕ್ರಿಯೆಯಲ್ಲಿ ಬರೆದಿರುವಂತೆ, ಅಲ್ಲಿ ಎತ್ತಲಾಗಿರುವ ಹಲವು ಅಂಶಗಳು ನನ್ನ ಪುಸ್ತಕದಲ್ಲಿ ಪ್ರಸ್ತಾಪವಾಗಿವೆ. ಆದರೂ ಕೆಲವು ನಿರ್ದಿಷ್ಟ ಪ್ರಶ್ನೆಗಳನ್ನು ನಾನು ಇಲ್ಲಿ ಮತ್ತೆ ಎತ್ತಿಕೊಳ್ಳಬಯಸುತ್ತೇನೆ. ಶಂಕರ ಭಟ್ಟರ ಸಿದ್ಧಾಂತಗಳ ಬಗ್ಗೆ ನಾನು ಬರೆದುದನ್ನು ವೈಜ್ಞಾನಿಕವಲ್ಲ, ವೈಯಕ್ತಿಕ ದಾಳಿ ಅಂತೆಲ್ಲ ಕರೆಯಲಾಗಿದೆ. ವಾದದ ವಿಷಯಗಳ ಬಗ್ಗೆ ಹೇಳುವುದಕ್ಕಿಂತ, ಶಂಕರ ಭಟ್ಟರ ವಾದಗಳ ಕುರಿತು ನಾನು ಬರೆದ ಹೊತ್ತಗೆಯ ಶೀರ್ಷಿಕೆಯ ಬಗ್ಗೆಯೇ ಹೆಚ್ಚು ಒತ್ತು ಕೊಟ್ಟು ಬರೆದಿದ್ದಾರೆ. ಇರಲಿ. ಇದು ಅಷ್ಟು ಮುಖ್ಯ ಅಂತ ನನಗೆ ಅನ್ನಿಸದಿದ್ದರೂ ಈ ಶೀರ್ಷಿಕೆಯ ಬಗ್ಗೆ ಆರೋಪವನ್ನು ಮತ್ತೆ ಮತ್ತೆ ಮಾಡಲಾಗಿರುವುದರಿಂದ ಸಮರ್ಥನೆ ನೀಡುವೆ. ಮೊದಲೇ ಸ್ಪಷ್ಟಪಡಿಸುತ್ತೇನೆ,ನನಗೆ ಆ ಹಿರಿಯ ಭಾಷಾವಿದ್ವಾಂಸರ ಬಗ್ಗೆ ತುಂಬ ಗೌರವ ಉಂಟು. ವೈಯಕ್ತಿಕ ದ್ವೇಷವಾಗಲೀ ಅಸೂಯೆಯಾಗಲೀ ಇಲ್ಲ ! ಇನ್ನು, ಶೀರ್ಷಿಕೆಯಲ್ಲಿ ಅವರ ಹೆಸರು ಯಾಕೆ ತರಬೇಕಿತ್ತು? ಅವರು ಏಕಾಂಗಿ ಎಂದು ಬಿಂಬಿಸುವ ಯತ್ನವೇ? ಇತ್ಯಾದಿ ಪ್ರಶ್ನೆಗಳೂ ಬಂದಿವೆ.
ಮೊದಲನೆಯದಾಗಿ ತಾವು ಹೇಳಿದ ಹಾಗೆ ವ್ಯಾಪಕವಾಗಿ ಹೊತ್ತಗೆಗಳನ್ನು ಬರೆಯುತ್ತಿರುವವರು ಅವರೊಬ್ಬರೇ. ಅವರನ್ನು ಬೆಂಬಲಿಸಿದ ವಿವಿಧ ವಿ.ವಿ.ಗಳ ಮುಖ್ಯಸ್ಥರು ಅಥವಾ ಇನ್ನಾರಾದರೂ (ಶುಭಶ್ರೀಯವರೂ ಸೇರಿದಂತೆ) ಬರೆಯಲಾರಂಭಿಸಿಲ್ಲ. ಇನ್ನು ಆರಂಭಿಸಲೂಬಹುದು. ಆರಂಭಿಸಿದರೆ ನನ್ನ ಆಕ್ಷೇಪವಿಲ್ಲ, ದುಖವೂ ಇಲ್ಲ. ಯಾರಾದರೂ ಬರೆದರೆ ನಾನು ಓದುವುದಿಲ್ಲ ಅಂತ ಶಪಥ ಕೂಡ ಮಾಡೊಲ್ಲ. ಯಾಕೆಂದರೆ ಓದದಿದ್ದರೆ ಓದದವರಿಗೆ ನಷ್ಟ ಅಂತ ನನಗೊತ್ತು. ಒಟ್ಟಿನಲ್ಲಿ ಈಗ ಸದ್ಯಕ್ಕೆ ನಿಜವಾಗಿ ಕತ್ತರಿ ಪ್ರಯೋಗ ಮಾಡಿದವರು ಅವರೊಬ್ಬರೇ.
31
ಮಾರ್ಚ್

ಹಳ್ಳಿಗರೇ ಕರೆಂಟ್ ಉಳಿಸಿ, ಎಂಜಿ ರೋಡಿಗೆ ಲೈಟ್ ಹಾಕಬೇಕು

ಸಾತ್ವಿಕ್ ಎನ್ ವಿ

ಪ್ರಪಂಚ ಹೀಗೆನೇ!
ಯಾರು ಪಾಲಿಸ್ತಾರೋ ಅವರ ಮೇಲೆಯೇ ಎಲ್ಲವನ್ನು ಹೇರಿ ಅರಾಮದಲ್ಲಿ ಇದ್ದು ಬಿಡುತ್ತೆ. ‘ಉಳಿಸಿ’ ಅಂತ ಸರ್ಕಾರ ಯಾವುದಾದ್ರು ಅಭಿಯಾನ ಮಾಡಿದ್ರೆ ಅದರ ಟಾರ್ಗೆಟ್ ಮಧ್ಯಮ ಇಲ್ಲವೇ ಕೆಳವರ್ಗವೇ ಆಗಿರುತ್ತೆ. ಅದು ನೀರುಳಿಸಿ ಎಂಬುದೋ, ಪೆಟ್ರೋಲ್ ಉಳಿಸಿ ಅಂತಲೋ, ಕಡೆಗೆ ವಿದ್ಯುತ್ ಉಳಿಸಿ ಅಂತಾನೋ ಇರಬಹುದು. ಇಲ್ಲಿ ‘ಉಳಿಸಬೇಕಾದವರು’ ಯಾವುದನ್ನು ಕಡಿಮೆ ಪಡೆಯುತ್ತಿರುತ್ತಾರೋ ಅವರೇ! ವಿಚಿತ್ರ, ಆದ್ರೂ ಸತ್ಯ.
ಉದಾಹರಣೆಗೆ ನೀರು ಉಳಿಸಿ-ಮಿತವಾಗಿ ಬಳಸಿ ಅಂತ ಹೇಳಲಾಗುತ್ತೆ. ಆದ್ರೆ ಅದನ್ನು ಪಾಲಿಸಬೇಕಾದ ಜನತೆಗೆ ವಾರಕ್ಕೆ ಒಮ್ಮೆಯೋ ಎರಡು ಬಾರಿಯೋ ನೀರು ಬಂದ್ರೆ ಅದೇ ಹೆಚ್ಚು. ಒಮ್ಮೆ ಎಲ್ಲಿಯಾದ್ರೂ ಈ ಜನರು ಈ ನಿಯಮಗಳನ್ನು ಪಾಲಿಸುವಲ್ಲಿ ಸೋತರೆ ನಾವೆಲ್ಲ ಬೊಬ್ಬೆ ಹಾಕಿ ಬಿಡ್ತೇವೆ. ಅದ್ರೆ ಆ ಬೊಬ್ಬೆಯಲ್ಲಿ ಸತ್ಯವೊಂದು ಮುಚ್ಚಿ ಹೋಗಿರುತ್ತೆ. ಒಬ್ಬ ಶ್ರೀಮಂತನ ಮನೆಯ ಟಾಯ್ಲೆಟ್ ನಲ್ಲಿ ಬಳಕೆಯಾಗುವ ನೀರಿನಷ್ಟು ಸಾಮಾನ್ಯ ಜನರ ಕುಡಿಯುವ ನೀರು ಶುದ್ಧವಾಗಿರಲ್ಲ.

ಮತ್ತಷ್ಟು ಓದು »

31
ಮಾರ್ಚ್

ಅಜಕ್ಕಳರಿಗೇಕೆ ಈ ಅಸಹನೆ?

(ಡಾ.ಅಜಕ್ಕಳ ಗಿರೀಶ್ ಭಟ್ ಅವರ ಲೇಖನಕ್ಕೆ ಶುಭಶ್ರೀಯವರ ಉತ್ತರ ಇಲ್ಲಿದೆ – ನಿಲುಮೆ)

– ಶುಭಶ್ರೀ

ಈ ಪುಸ್ತಕವನ್ನು ಬರೆದಿರುವ ಡಾ. ಅಜಕ್ಕಳ ಗಿರೀಶ್ ಭಟ್ಟರು ತಾವು ಬರೆದ ಪುಸ್ತಕಕ್ಕೆ ಇಟ್ಟಿರುವ ಹೆಸರೇ ಶ್ರೀಯುತರ ಉದ್ದೇಶವು ತಾತ್ವಿಕ ನಿಲುವನ್ನು ಪ್ರತಿಪಾದಿಸುವುದಾಗಲೀ, ವಾದವೊಂದನ್ನು ಆರೋಗ್ಯಕರವಾಗಿನಡೆಸುವುದಾಗಲೀ ಅಲ್ಲವೆಂದೂ ವ್ಯಕ್ತಿಯ ತೇಜೋವಧೆಯನ್ನು ಮಾಡುವುದಕ್ಕಾಗಿ ಮಾತ್ರವೇ ಎಂದೂ ವೇದ್ಯವಾಗುವುದಿಲ್ಲವೇ? ಇಲ್ಲದಿದ್ದರೆ “ಕನ್ನಡಕ್ಕೇಕೆ ಕತ್ತರಿ?” ಎನ್ನುವ ಹೆಸರು ಸಾಕಾಗುತ್ತಿತ್ತು.

“ಶಂಕರಬಟ್ಟರಕತ್ತರಿ” ಎಂದು ಬರೆದಿರುವ ಉದ್ದೇಶವೇ ಡಾ. ಡಿ ಎನ್ ಎಸ್ ಅವರನ್ನು ಏಕಾಂಗಿ ಎಂದು ಬಿಂಬಿಸುವ ದುರುದ್ದೇಶದಿಂದ ಅಲ್ಲವೇ? ಪುಸ್ತಕದ ಹೆಸರಿನ ಬಗ್ಗೆ ಆಕ್ಷೇಪಾ ಯಾಕೆಂದರೆ ಅದರಲ್ಲಿ ಶಂಕರಭಟ್ಟರನ್ನು ಹಳಿಯುವ ಉಮ್ಮೇದಿಯೊಂದೇ ಕಾಣುತ್ತಿರುವುದು. ಡಾ. ಡಿ ಎನ್ ಶಂಕರಭಟ್ಟರ ವಿಚಾರಗಳ ಬಗ್ಗೆ ನಡುನಡುವೆ ತಮ್ಮ ವಾದಕ್ಕೆ ಅನುಕೂಲವಾಗುವಂತಹ ಸಾಲುಗಳನ್ನು ಮಾತ್ರಾ ಎತ್ತಿಕೊಂಡು ತಮಗೆ ತೋಚಿದಂತೆ ವಿಶ್ಲೇಷಿಸಿರುವಂತೆ ಕಾಣುತ್ತಿದೆ. ಯಾಕೆಂದರೆ ಅಚ್ಚಕನ್ನಡ ವರ್ಣಮಾಲೆಯೆಂದು ಅನೇಕ ಕಡೆ, ಬಹಳಷ್ಟು ಹಿಂದೆಯೇ ಈ ಮಹಾಪ್ರಾಣ ಬಿಟ್ಟ ವರ್ಣಮಾಲೆ ಪ್ರಕಟವಾಗಿದೆಯಲ್ಲವೇ?

ಮೂಲತಃ ಶಂಕರಭಟ್ಟರ ನಿಲುವುಗಳನ್ನು ಖಂಡಿಸುತ್ತಾ ಇವುಗಳನ್ನು ಒಪ್ಪಿರುವ ಯಾವ ಭಾಷಾ ವಿಜ್ಞಾನಿಯೂ ಇಲ್ಲವೆನ್ನುವಂತೆ ಕೆಲವರು ಬರೆದಿರುವುದು ಸರಿಯಲ್ಲ. ಕರ್ನಾಟಕದ ಬಹುತೇಕ ಭಾಷಾ ವಿಜ್ಞಾನಿಗಳು ಇಂದು ಡಾ.ಡಿ ಎನ್ ಎಸ್ ಅವರ ನಿಲುವುಗಳ ಬಗ್ಗೆ –ಅವುಗಳಲ್ಲಿ ಒಪ್ಪಿತವಾಗುವುವೆಷ್ಟು? ಆಗದವೆಷ್ಟು?ಎಂದೆಲ್ಲಾ ಚರ್ಚೆ ನಡೆಸಿದ್ದಾರೆ. ಹಾಂ… ಅದೂ ಭಾಷಾ ವಿಜ್ಞಾನದ ನೆಲೆಯಲ್ಲಿ.  ಇವತ್ತಿನ ದಿವಸ ಕರ್ನಾಟಕದಲ್ಲಿ ಭಾಷಾವಿಜ್ಞಾನಿಗಳಲ್ಲಿ ದೊಡ್ಡ ಹೆಸರು ಡಾ. ಕೆ ವಿ ನಾರಾಯಣ, ಡಾ. ಸಿ ಎಸ್ ರಾಮಚಂದ್ರ,  ಡಾ. ಮಲ್ಲಿಕಾರ್ಜುನ್‍ಮೇಟಿ… ಮತ್ತಷ್ಟು ಓದು »

29
ಮಾರ್ಚ್

ಕನ್ನಡನಾಡಿನ ಏಳಿಗೆ ಹೊಸದೊಂದು ಶಾಲೆಯಿಂದಲೇ ಆಗಬಲ್ಲುದು…!

– ಬನವಾಸಿ ಬಳಗ

ಕನ್ನಡದ ಸೊಲ್ಲರಿಮೆಯನ್ನು (ವ್ಯಾಕರಣವನ್ನು) ಮತ್ತು ಸ್ವರೂಪವನ್ನು ಅರ್ಥಮಾಡಿಕೊಳ್ಳುವುದರಲ್ಲಿ ವೈಜ್ಞಾನಿಕ ಮನೋಭಾವದ ಕನ್ನಡಿಗರೆಲ್ಲರ ಮನಸ್ಸನ್ನು ಗೆದ್ದಿರುವ ಶ್ರೀ. ಡಿ.ಎನ್. ಶಂಕರಭಟ್ಟರ ಕೊಡುಗೆ ಬಹಳ ಮುಖ್ಯವಾದದ್ದು. ಭಟ್ಟರ “ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ”, “ಮಾತಿನ ಒಳಗುಟ್ಟು”, “ಕನ್ನಡ ನುಡಿ ನಡೆದುಬಂದ ದಾರಿ” ಮುಂತಾದ ಹೊತ್ತಿಗೆಗಳು ಜನರಲ್ಲಿ ಕನ್ನಡದ ಬಗೆಗಿರುವ ತಪ್ಪು ತಿಳುವಳಿಕೆಯನ್ನು ಸುಟ್ಟು ಹಾಕುತ್ತವೆ. ಈ ಕ್ಷೇತ್ರದಲ್ಲಿ ಬಹುಕಾಲದಿಂದ ಕನ್ನಡದ ಭಾಷಾವಿಜ್ಞಾನಿಗಳು ಮತ್ತು ವ್ಯಾಕರಣಕಾರರು ಮಾಡಿಕೊಂಡು ಬಂದಿರುವ ತಪ್ಪುಗಳನ್ನು ಭಟ್ಟರು ಖಡಾಖಂಡಿತವಾಗಿ ತೋರಿಸಿಕೊಟ್ಟಿರುವುದರಿಂದ (ಮತ್ತು ಇನ್ನೂ ಮುಂದೆ ಬರುವ ಹೊತ್ತಿಗೆಗಳಲ್ಲಿ ತೋರಿಸಿಕೊಡಲಿರುವುದರಿಂದ) ಹಳೆ-ಶಾಲೆಗೆ ಅಂಟಿಕೊಂಡಿರುವ ಕೆಲವರ ಕಾಲ್ಕೆಳಗಿನ ನೆಲವೇ ಕುಸಿದಂತಾಗಿ, ಭಟ್ಟರನ್ನೂ ಮತ್ತವರ ತತ್ವಗಳನ್ನೂ ಕಟುವಾಗಿ ವಿರೋಧಿಸುವುದನ್ನೇ ಒಂದು ಹವ್ಯಾಸವಾಗಿಸಿಕೊಂಡಿದ್ದಾರೆ! ತಮಾಷೆಯೇನೆಂದರೆ ಇವರಾರ ವಿರೋಧವೂ ಭಟ್ಟರ ವೈಜ್ಞಾನಿಕತೆಯ ಮಟ್ಟಕ್ಕೆ ಏರದೆ ಬರೀ ಅವರನ್ನು ವೈಯಕ್ತಿಕವಾಗಿ ಮೂದಲಿಸುವುದರಿಂದ ಹಿಡಿದು, ಸಂಸ್ಕೃತದ ಪಂಡಿತರಾದ ಅವರೇ ಸಂಸ್ಕೃತದ್ವೇಷಿಗಳೆಂದು ಮೂದಲಿಸುವವರೆಗೆ, ಎಪ್ಪತ್ತೈದು ವರ್ಷದ ಮುದುಕರಾದ ಭಟ್ಟರು ರಾಜಕೀಯ ಲಾಭಕ್ಕಾಗಿ ಇದನ್ನು ಮಾಡುತ್ತಿದ್ದಾರೆ ಎನ್ನುವ ಸೊಂಟದ ಕೆಳಗಿನ ಆರೋಪದವರೆಗೆ ಮಾತ್ರ ತಲುಪುತ್ತವೆ! ಈ ಅವೈಜ್ಞಾನಿಕತೆಯೇ ಕನ್ನಡದ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದರಲ್ಲಿ ಕನ್ನಡಿಗರನ್ನು ಸೋಲಿಸಿರುವುದರಿಂದ ಇದನ್ನು ಕಿತ್ತೊಗೆಯದೆ ಬೇರೆ ದಾರಿಯಿಲ್ಲ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ ೩ರ ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ “ಕೂಡಲಸಂಗಮ ದೇವನ ಕನ್ನಡ” ಎಂಬ ಬರಹದಲ್ಲಿ ಶ್ರೀ ಕೆ.ವಿ. ತಿರುಮಲೇಶ್ ಅವರು ಅದೇ ಅವೈಜ್ಞಾನಿಕತೆಯನ್ನು ಓದುಗರ ಮುಂದಿಟ್ಟು ನಮ್ಮ ಈ ಮರುವುತ್ತರವನ್ನು ತಾವೇ ಬರಮಾಡಿಕೊಂಡಿದ್ದಾರೆ. ತಿರುಮಲೇಶರ ಬರಹದಲ್ಲಿ ಆ ಹಳೆ-ಶಾಲೆಯ ಅವೈಜ್ಞಾನಿಕತೆಯು ಮೈದಳೆದು ಬಂದಿರುವುದರಿಂದ ನಮ್ಮ ಈ ಉತ್ತರವು ಅವರಿಗೊಬ್ಬರಿಗೇ ಅಲ್ಲದೆ ಆ ಹಳೆ-ಶಾಲೆಯವರೆಲ್ಲರಿಗೂ ಒಪ್ಪುತ್ತದೆ.

ಮತ್ತಷ್ಟು ಓದು »

25
ಮಾರ್ಚ್

ಬನ್ನಿ ತುಳುವಿನಲ್ಲಿ ಮಾತಾಡುವ…!

– ನಿಲುಮೆ

ಪಂಚ ದ್ರಾವಿಡ ಭಾಷೆಗಳಲ್ಲೊಂದಾದ ತುಳುವನ್ನ ಕರ್ನಾಟಕದ ಕರಾವಳಿಯಿಂದ ಹಿಡಿದು ನಮ್ಮ ಕಾಸರಗೋಡಿನಲ್ಲೂ ಮಾತಾಡುತ್ತಾರೆ.ಅಲ್ಲಷ್ಟೇ ಯಾಕೆ ಕರ್ನಾಟಕದ ಮೂಲೆ ಮೂಲೆಯಲ್ಲಿ ನೆಲೆ ನಿಂತ ತುಳುವರು,ಹೊರ ರಾಜ್ಯದಲ್ಲಿ,ಹೊರ ದೇಶದಲ್ಲೂ ಮಾತಾಡುತ್ತಾರೆ.

’ತುಳು ಮಹಾಭಾರತ’ದ ಕಾಲ ೧೩ನೇ ಶತಮಾನ,’ತುಳು ದೇವಿ ಮಹಾತ್ಮೆ’ಯ ಕಾಲ ೧೫ನೇ ಶತಮಾನ.ಹಾಗೆಯೇ ’ತುಳು ಭಾಗವತ’ ’ಕಾವೇರಿ’ ಬಂದಿದ್ದು ೧೭ನೇ ಶತಮಾನದಲ್ಲಿ!

‘A comparative Grammar of the Dravidian or South Indian Family of Languages’ ಅನ್ನು ಬರೆದ ರೆವ್.ಕ್ಲಾಡ್ವೆಲ್ ಅವರು ’ದ್ರಾವಿಡ ಭಾಷೆಗಳಲ್ಲಿ ಸದೃಡವಾಗಿ ಬೆಳೆದು ನಿಂತ ಭಾಷೆ ತುಳು’ ಅಂದಿದ್ರು.

ವಿದ್ವಾಂಸರಿಂದ ಹೀಗೆಲ್ಲ ಹೊಗಳಿಸಿಕೊಂಡ ತುಳುವಿಗೊಂಡು ಲಿಪಿ ಇರಲಿಲ್ವಾ? ಬಾಲ್ಯದಲ್ಲಿ ನಮಗೆ ಸಹಜವಾಗಿ ಮೂಡುತಿದ್ದ ಪ್ರಶ್ನೆಯದು.ಅಪ್ಪ-ಅಮ್ಮರನ್ನ ’ತುಳುವನ್ನ ಬರೆಯಲು ಸಾಧ್ಯವಿಲ್ವಾ?’ ಅಂತ ಕೇಳಿದರೆ.’ತುಳುವಿಗೆ ತನ್ನದೇ ಆದ ಲಿಪಿ ಇಲ್ಲ ಮಗ,ಆದರೆ ಮಲಯಾಳಂ ಲಿಪಿ ಬಳಸಿ ತುಳುವನ್ನ ಬರೆಯುತ್ತಾರೆ ಅಂತಿದ್ರು ಅಮ್ಮ.ಬೆಳೆಯುತ್ತ ಬೆಳೆಯುತ್ತ ಅರಿವಿಗೆ ಬಂದಿದ್ದೇನೆಂದರೆ ಅಸಲಿಗೆ ಮಲಯಾಳಂ ಅನ್ನು ತುಳು ಲಿಪಿ ಬಳಸಿ ಬರೆಯುತ್ತಾರೆ ಅನ್ನುವುದು!

ಮತ್ತಷ್ಟು ಓದು »

24
ಮಾರ್ಚ್

ಎಂಡೋಸಲ್ಫನ್ ತಯಾರಕರ ದೇಶ ಸೇವೆ ಮುಖವಾಡ

– ಗೋವಿಂದ್ ಭಟ್

ಎಂಡೋಸಲ್ಫನ್   ತಯಾರಕರ  ಹೊಸ ವರಸೆ   ಗಾಬರಿಯಾಗುತ್ತದೆ.  ಅವರೀಗ  ಯುರೋಪಿನ   ವಿಷ ತಯಾರಕರು  ಎಂಡೋಸಲ್ಫನ್  ಬಹಿಷ್ಕಾರ  ಚಳುವಳಿಯ ಹಿಂದಿದ್ದಾರೆ ಎಂದು  ಆಪಾದಿಸುತ್ತಿದ್ದಾರೆ. ಬಾರತದ  ತಯಾರಕರು   ಜೀವ  ಉಳಿಸುವ  ಔಷದಿಯಲ್ಲಿ  ಮೂಲವಸ್ತುಗಳ  ಹೆಸರಿನಲ್ಲಿ ತಯಾರಿಸಿ  ಕಡಿಮೆ  ಬೆಲೆಯಲ್ಲಿ ಮಾರಿದ್ದು  ಹಾಗೂ   ಸಮಾಜ    ಇವರಿಗೆ  ಬೆಂಬಲಿಸಿದ್ದು   ಈಗ   ಇತಿಹಾಸ.     ಈಗ  ಈ  ಕೀಟನಾಶಕ ವನ್ನೂ     generic ಅನ್ನೋ  ಮುಖವಾಡದ    ಹವಣಿಕೆಯಲ್ಲಿದ್ದಾರೆ.   ನಾವು ಕಡಿಮೆ  ಬೆಲೆಯಲ್ಲಿ ಎಂಡೋಸಲ್ಫನ್   ತಯಾರು ಮಾಡಿ ಮಾರುವುದು  ಬಾರತದ  ರೈತರ  ಉದ್ದಾರ  ಮಾಡುವುದನ್ನು    ಯುರೊಪಿಯನರು    ಸಹಿಸುತ್ತಿಲ್ಲ.  ನಾವು    ಬಾಗಿಲು  ಹಾಕಿದರೆ  ಯುರೋಪಿನ  ತಯಾರಕರು  ಇದಕ್ಕಿಂತ  ಹಲವು ಪಾಲು ದುಬಾರಿಯ  ಮಾಲುಗಳನ್ನು  ಬಾರತದ  ರೈತರು  ಅವಲಂಬಿಸಬೇಕಾಗುತ್ತದೆ.
ನಾವಂತೂ  ಐವತ್ತೈದು ವರ್ಷಗಳಿಂದ  ಬಳಸುತ್ತಿರುವ  ಈ  ಕೀಟನಾಶಕವನ್ನು ತಿಂದರೆ  ಈಗಲೂ  ಕೀಟಗಳು  ಸಾಯುತ್ತವೆ  ಎನ್ನುವ  ಭ್ರಮೆಯನ್ನು  ಉಳಿಸಿಕೊಂಡಿದ್ದೇವೆ. ನಾನು  ವಾಸಿಸುವ  ಜಾಗದಿಂದ  ಕೇರಳದ  ಪಡ್ರೆ ಮತ್ತು  ಕರ್ನಾಟಕದ  ಕೊಕ್ಕಡ  ಎರಡೂ  ಮೂವತ್ತು ಕಿಮಿ ಒಳಗಿದೆ.  ಹಾಗಾಗಿ  ಇವರ ಮಾತಿಗೆ ಮರುಳಾಗುವುದು  ಕಷ್ಟವಾದರೂ  ಇದರಲ್ಲಿ ನಿಜ ಇರಬಹುದೋ  ಗೊಂದಲ  ಉಂಟುಮಾಡುತ್ತದೆ. ಹಾಗೆ  ಈ  ಎಂಡೊ ವಿರೋದಿಗಳು ಕೊಕ್ಕಡ  ಮತ್ತು   ಪಡ್ರೆ ಹಾಗೂ  ಸುತ್ತಲಿನ  ಗ್ರಾಮಸ್ಥರೋ  ಯುರೋಪಿನ   ಗುಮ್ಮನೋ ??   ದೂರ  ಇರುವವರಿಗೆ  ಆಫ್ರಿಕದಲ್ಲಿ  ಎಂಬಂತೆ  ಇದೊಂದು  ಸುದ್ದಿಯಷ್ಟೇ
22
ಮಾರ್ಚ್

ಸುನಾಮಿ ಕಾವು – ಮಾಧ್ಯಮಗಳಿಗೆ ಮೇವು

ಸಾತ್ವಿಕ್ ಎನ್ ವಿ

ತಲೆಕೆಟ್ಟ ಮಾಧ್ಯಮಗಳ ಮಾತಿಗೆ ಹೆದರಿ ಕಂಗಾಲಾದವರು, ಮತ್ತೆ ಮತ್ತೆ ಮುರ್ಖರಾಗುವವರು ಅದೇ ಸಾಮಾನ್ಯ ಜನ.
ಮಾರ್ಚ್ ೧೯ ರಂದು ಸುಪರ್ ಮೂನ್ ಪ್ರಭಾವದಿಂದ ಸಮುದ್ರ ಉಕ್ಕಿ ಹರಿದು ಇಡೀ  ಮಂಗಳೂರಿಗೆ ಮಂಗಳೂರೇ  ಮುಳುಗಿ ಹೋಗುತ್ತೆ ಅಂತ ಯಾವಾಗ ಟೀವಿಯಲ್ಲಿ ಸುದ್ದಿ ಬಂತೋ ಪರವೂರಗಳಿಂದ ಬಂದು ಇಲ್ಲಿ ಕೆಲಸ ಮಾಡ್ತಾ ಇರೋ ಜನ ಬೆವತು ಹೋದರು. ಮೊದಲೇ ಇಲ್ಲಿನ ಪ್ರಕೃತಿಯ ಸರಿಯಾದ ಅಂದಾಜಿಲ್ಲದ ಜನರಂತೂ ನಿಜಕ್ಕೂ ಒಂದು ಕ್ಷಣ ಅವಕ್ಕಾದರು. ಅವರವರ ಮನೆಗಳಿಂದ ಪೋನಿನ ಮೇಲೆ ಪೋನ್ ಬರತೊಡಗಿದವು. ಎಲ್ಲರದ್ದೂ ಒಂದೇ ಮಾತು ಈ ಕ್ಷಣವೇ ಅಲ್ಲಿಂದ ಹೊರಟು ಬಾ ಅಂತ.
ಹೆದರಿದವರ ಮೇಲೆ ಹಾವು ಎಸೆದಂತೆ ಜಪಾನಿನಲ್ಲಿ ಎದ್ದ ಸುನಾಮಿ ಇನ್ನಷ್ಟು ಹೆದರಿಕೆ ಹುಟ್ಟಿಸಿತು. ಇದರೆಲ್ಲರ ಪರಿಣಾಮ ದೂರದ ಊರಿಗೆ ಹೋಗೋ ಎಲ್ಲ ಬಸ್ಸುಗಳು ಬಸುರಿಯಂತೆ ತುಂಬಿ ಹೋದವು. ರಾತ್ರೋ ರಾತ್ರಿ ಖಾಸಗಿ ಬಸ್ಸಿನವರು ಪ್ರಯಾಣ ದರವನ್ನು ಹೆಚ್ಚಿಸಿ ಉರಿಯುವ ಮನೆಯಲ್ಲಿ ಗಳ ಹಿರಿಯುವ ಕೆಲಸ ಮಾಡಿದರು. ಒಂದಕ್ಕೆ ಎರಡು ನೀಡಿ ತಮ್ಮ ಊರಿಗೆ ಹೊರಟು ನಿಂತಿತು ಜನತೆ. ೫೦ ಜನರು ಇರಬೇಕಾದ ಬಸ್ಸಿಲ್ಲಿ ೬೦-೭೦ ಜನ ಪ್ರಯಾಣ ಮಾಡಿದರು.
ಮಕ್ಕಳು, ಮರಿ, ಹೆಂಗಸರು, ಗಂಡಸರು ಎಂಬ ಬೇಧಭಾವವಿಲ್ಲದೇ ಹೊರಟೆ ಹೊರಟರು. ಇವರೆಲ್ಲ ಮಾಸಿಕ ಪಗಾರ ಎಣಿಸೋ ಸರ್ಕಾರಿ ಬಾಬುಗಳಲ್ಲ. ದಿನಗೂಲಿಗೆ ದೂರದ ಉತ್ತರ ಕರ್ನಾಟಕದಿಂದ ಬಂದ ಜನ. ಒಪ್ಪತ್ತಿಗೆ ಪರದಾಡುತ್ತಿರುವ ಇವರು, ಪ್ರಕೃತಿಯ ಮುನಿಸಿಗೆ ಒಳಗಾದ ನೆರೆಪೀಡಿತ ಜನ.

ಮತ್ತಷ್ಟು ಓದು »

21
ಮಾರ್ಚ್

ಪಕ್ಷಗಳ ಆಟಕ್ಕೆ ಜನರ ಹಣವೇಕೆ ಬಲಿ?

– ರಾಕೇಶ್ ಶೆಟ್ಟಿ

ಮತ್ತೆ ೩ ಕ್ಷೇತ್ರಗಳಲ್ಲಿ ಉಪಚುನಾವಣೆ ಬಂದು ನಿಂತಿದೆ.ಮೊದಲೆಲ್ಲ ಜನಪ್ರತಿನಿಧಿಗಳ ಮರಣದಿಂದಾಗಿಯೇ ಉಪಚುನಾವಣೆಗಳು ನಡೆಯುತಿದ್ವು.ಅದರ ನಡುವೆ ನಮ್ಮ ಚುನಾವಣ ಆಯೋಗದ ತಲೆ ಕೆಟ್ಟ ಒಂದು ಕಾನೂನು ಇದ್ಯಲ್ಲ : ’ಒಂದೇ ಕಾಲದಲ್ಲಿ ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದು’ ಅಂತ.ಅದೂ ಕೂಡ ಕೆಲವೊಮ್ಮೆ ಉಪಚುನಾವಣೆಗೆ ಕಾರಣವಾಗಿದ್ದಿದೆ.ಉದಾಹರಣೆಗೆ ಸೋನಿಯ ಮೇಡಂ ಬಳ್ಳಾರಿಲಿ ಗೆದ್ದು ’ಕೈ’ ಎತ್ತಿ ಹೊರಟಿದ್ದು ಗೊತ್ತಿದೆ ಅಲ್ವಾ?

ನಮ್ ದೇವೆಗೌಡ್ರು ಪ್ರಧಾನಿ ಕುರ್ಚಿಯಿಂದ ಇಳಿದು ಬಂದ್ಮೇಲೆ ಎದುರಿಸಿದ ಲೋಕಸಭಾಚುನಾವಣೆಯಲ್ಲಿ ಹಾಸನದಿಂದ ಸ್ಪರ್ಧಿಸಿ ಸೋತು,ಆ ನಂತರ ಕನಕಪುರದಲ್ಲಿ ನಡೆದ ಉಪಲೋಕಸಭೆ ಚುನಾವಣೆಯಲ್ಲಿ ಗೆದ್ದು ಬಂದಿದ್ರು.ಆ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ಮತ್ತೆ ಕನಕಪುರ ಎರಡೂ ಕ್ಷೇತ್ರದಿಂದ ಸ್ಪರ್ಧಿಸಿದ್ರು.ಒಂದು ವೇಳೆ ಎರಡೂ ಕಡೆ ಗೆದ್ದಿದ್ರೆ ಹಾಸನ ಕೈ ಬಿಡ್ತಾ ಇದ್ರೂ ಅಂತ ಆಗ ಜನ ಮಾತಡಿಕೊಳ್ತಾ ಇದ್ರು.ದೇವರ ದಯೆ ಹಾಸನದಲ್ಲಿ ಮಾತ್ರ ಗೆದ್ರು! 🙂

ದೇವರ ದಯೆ ಅಂತ್ಯಾಕ್ ಹೇಳ್ದೆ ಅಂದ್ರೆ, ಹೀಗೆ ಎರಡೂ ಕಡೆ ನಿಂತೂ ಎರಡೂ ಕಡೆ ಗೆದ್ರೆ, ಅವ್ರು ಒಂದು ಕ್ಷೇತ್ರವನ್ನ ಬಿಟ್ಟುಕೊಡಲೇಬೇಕಲ್ವಾ? ಆಗ ತೆರವಾದ ಸ್ಥಾನಕ್ಕೆ ಮತ್ತೊಮ್ಮೆ ಉಪಚುನಾವಣೆ ಬಂದು ನಿಲ್ಲುತ್ತೆ. ಮತ್ತೆ ನಮ್ಮ ಜನರು ಬೆವರು ಸುರಿಸಿದ ತೆರಿಗೆ ಹಣ ಪೋಲು ಆಗೋದಿಲ್ವಾ?

ಈ ಬಾರಿಯ ಬಿಜೆಪಿ ಸರ್ಕಾರ ಬಂದು ಆಪರೇಶನ್ ಕಮಲ ಅಂತ ಹೇಳಿಕೊಂಡು ಮಾಡಿದ್ದು ಜನರ ತೆರಿಗೆ ಹಣದ ಆಪರೇಶನ್ ಅಲ್ವಾ?… ಈ ಮಧ್ಯೆ ಕುಮಾರಸ್ವಾಮಿಯವ್ರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂ.ಪಿ ಆದ್ರು,ಈಗ ಮತ್ತೆ ಚನ್ನಪಟ್ಟಣ ಉಪಚುನಾವಣೆಗೆ ನಿಲ್ತಾ ಇದ್ದರೆ.ಅಲ್ಲಿ ಗೆದ್ರೆ ಮತ್ತೆ ಲೋಕಸಭೆಯ ಸ್ಥಾನಕ್ಕೆ ಉಪಚುನಾವಣೆ ನಡಿಬೇಕಲ್ವಾ?…

ಮತ್ತಷ್ಟು ಓದು »

18
ಮಾರ್ಚ್

‘ಕುಂದನಗರಿ’ಯ ಸಮ್ಮೇಳನದ ನೆನಪುಗಳು…!

– ಅರೆಹೊಳೆ ಸದಾಶಿವ ರಾವ್

ಹಾಗೆ ನೋಡಿದರೆ ಬೆಳಗಾವಿಗೆ ನಾನು ಎರಡು ತಿಂಗಳಿಗೊಮ್ಮೆ ಹೋಗುತ್ತಿರುತ್ತೇನೆ. ಹಾಗಾಗಿ ಸಂಪೂರ್ಣ ಅಲ್ಲದಿದ್ದರೂ ಬೆಳಗಾವಿಯ ರಸ್ತೆ ಮತ್ತದರ ದುರವಸ್ತೆಗಳನ್ನು ಆಗಾಗ ಗಮನಿಸಿದ್ದೇನೆ. ಇವತ್ತು ಬೆಳಗಾವಿ ಏನಾದರೂ ನಮ್ಮ ಪ್ರಭುಗಳ ಗಮನ ಸೆಳೆದಿದ್ದರೆ, ಅದಕ್ಕೆ ಮರಾಠಿಗರು ಖಂಡಿತಕ್ಕೂ ಕಾರಣರು! ಏಕೆಂದರೆ ಬೆಳಗಾವಿ ತಮ್ಮದು ಎಂಬ ವಿವಾದವನ್ನು ಸದಾ ಜೀವಂತವಾಗಿಟ್ಟುಕೊಂಡಿರುವವರು ಮರಾಠಿಗರು. ಈ ಹಿನ್ನೆಲೆಯಲ್ಲಿ ನಮ್ಮ ಪ್ರಭುತ್ವ, ಬೆಳಗಾವಿಯನ್ನು ಒಂದು ಕಣ್ಣಿಟ್ಟು ನೋಡುತ್ತಲೇ ಇರುತ್ತದೆ! ಅದಿಲ್ಲವಾಗಿದ್ದರೆ ಬಹುಶ: ಈ ಕುಂದನಗರಿಯೂ  ಉತ್ತರ ಕರ್ನಾಟಕದ ಇತರ ಜಿಲ್ಲೆ-ಪಟ್ಟಣಗಳಂತೆ ನಿರ್ಲಕ್ಷ್ಯದ ಬೇಗುದಿಯಲ್ಲಿ ಕಾಲ ತಳ್ಳುತ್ತಲೇ ಇರುತ್ತಿತ್ತೇನೋ!.

ಅದಿರಲಿ, ಈಗ ವಿಷಯ ಅದಲ್ಲ. ಇಪ್ಪತ್ತೈದು ವರ್ಷಗಳ ನಂತರ ಈ ಕುಂದ ನಗರಿಯಲ್ಲಿ ಎರಡನೆಯ ವಿಶ್ವ ಕನ್ನಡ ಸಮ್ಮೇಳನ ನಡೆಯಿತಲ್ಲ; ಒಂದು ಅಪೂರ್ವ ಅವಕಾಶವೆಂಬಂತೆ, ನಾನೂ ಅದರಲ್ಲಿ ಭಾಗವಹಿಸುವ ಉದ್ದೇಶದಿಂದ ಹೋಗಿದ್ದೆ. ಸಮ್ಮೇಳನದ ಬಗ್ಗೆ, ಅಲ್ಲಿ ಮುಳುಗಿ ಹೋದ ೩೭ಕೋಟಿ ರೂಪಾಯಿಗಳ ಬಗ್ಗೆ ಮಾಧ್ಯಮಗಳು ಮಾತಾಡುತ್ತಲೇ ಇರುವುದನ್ನು ಕೇಳಿದ್ದೀರಿ. ನಾನು ಗಮನಿಸಿದ ಒಂದು ಅಂಶವೆಂದರೆ, ಬೆಳಗಾವಿಗೆ ಕಾಲಿಟ್ಟರೆ ಪ್ರತೀ ರಸ್ತೆಗಳೂ ರಿಪೇರಿಯಾಗಿರುವುದು ಬಿಟ್ಟರೆ, ಪಟ್ಟಣ ಸಿಂಗಾರಗೊಂಡಿರುವುದು ಮಾತ್ರ ಕಣ್ಣಿಗೆ ಕಾಣುತ್ತದೆ.  ಮತ್ತೆ ಈ ಮೂವತ್ತೇಳು ಕೋಟಿ ಎಲ್ಲಿಗೆ ಹೋಗಿದೆ ಎಂಬುದಕ್ಕೆ ಹುಟುಕಾಡಿದರೂ ಏನೂ ಸಿಗುವುದಿಲ್ಲ.

ಇನ್ನು ಕನ್ನಡ ವೆಂದರೆ ಏನು? ಅದರ ಉಳಿವು-ಅಳಿವು  ಎಂದರೆ ಏನು ಎಂಬುದೂ ಪ್ರಶ್ನೆಯಾಗಿ ಕಾಡಿದ್ದು ಸುಳ್ಳಲ್ಲ! ಈ ರೀತಿಯ ದ್ವಂದ್ವಕ್ಕೂ ಕಾರಣವಿದೆ. ಇದು ವಿಶ್ವ ಕನ್ನಡ ಸಮ್ಮೇಳನ. ಬೆಳಗಾವಿಯ ನಗರದ ಪ್ರತೀ ಗೋಡೆಯ ಮೇಲೂ ಕನ್ನಡ ಉಳಿಸಿ-ಬೆಳೆಸಿ ಎಂಬ ಉದ್ಘೋಷವೇ ಕಾಣುತ್ತಿತ್ತು. ಆದರೆ ಇಡೀ ಮೂರುದಿನ ನಡೆದ ಸಮ್ಮೇಳನದಲ್ಲಿ ಈ ಹಿನ್ನೆಲೆಯಲ್ಲಿ ಏನಾದರೂ ಕ್ರಮಗಳನ್ನು ಸರಕಾರ ಆಗಲೀ, ಸಮ್ಮೇಳನ ಸಮಿತಿಯಾಗಿಯಾಗಲೀ ಕೈಗೊಂಡ ಬಗ್ಗೆ ವರದಿಯಾಗಿಲ್ಲ. ಅದೂ ಅಲ್ಲದೇ ಇದೇ ರೀತಿಯ ಸಮ್ಮೇಳನವನ್ನು ಐದು ವರ್ಷಗಳಿಗೊಮ್ಮೆ ನಡೆಸುವ ತೀರ್ಮಾನವನ್ನು ‘ಬಹುಜನರ’ ಬೇಡಿಕೆಯ ಮೇರೆಗೆ ಮುಖ್ಯಮಂತ್ರಿಗಳು ಕೈಗೊಂಡರು. ಅದು ಒಂದು ರೀತಿಯಲ್ಲಿ ಸಂತಸದ ವಿಚಾರವೇ ಸರಿ…..ಆದರೆ…? ಮತ್ತಷ್ಟು ಓದು »

17
ಮಾರ್ಚ್

‘ದುರ್ಗಾಸ್ತಮಾನ’ ಮತ್ತು ‘ಗಂಡುಗಲಿ ಮದಕರಿ ನಾಯಕ’

–  ಶ್ಯಾಮಲ ಜನಾರ್ದನನ್

ದುರ್ಗಾಸ್ತಮಾನದ ಮುನ್ನುಡಿಯಲ್ಲೇ ಲೇಖಕ ದಿವಂಗತ ಶ್ರೀ ತರಾಸು ಬರೆದಿರುವ “ಚಿತ್ರದುರ್ಗ ಎಂದರೆ ತಮ್ಮ ಕರುಳಿಗೆ ಕಟ್ಟಿಕೊಂಡು ಬೆಳೆದ ಜೀವಂತ ವಸ್ತು – ಮದಕರಿ ನಾಯಕ ಒಬ್ಬ ಅರಸನಲ್ಲ ಜೀವಂತ ಆಪ್ತನೆಂಟ. ಚಿತ್ರದುರ್ಗ – ಮದಕರಿನಾಯಕ ಬೇರೆ ಬೇರೆಯಲ್ಲ ಒಂದೇ ಎಂಬ ಅವಿನಾಭಾವ, ದುರ್ಗ ಎಂದರೆ ಮದಕರಿ, ಮದಕರಿ ಎಂದರೆ ದುರ್ಗ ” ಎಂಬ ಮಾತುಗಳು ಅತ್ಯಂತ ಪ್ರಭಾವೀ ವಾಕ್ಯಗಳಾಗಿ, ನಾವು ಪುಸ್ತಕ ಓದಲು ತೊಡಗುವ ಮೊದಲೇ ನಮ್ಮ ಮನಸ್ಸನ್ನು ದುರ್ಗ-ಮದಕರಿ ಎಂಬ ಮೋಡಿಯಲ್ಲಿ ಸಿಲುಕಿಸುತ್ತದೆ.

ನಾಯಕವಂಶದಲ್ಲಿ ಹಲವಾರು ಮದಕರಿನಾಯಕರುಗಳಿದ್ದರೂ, ಜನತೆ ಈಗಲೂ ತುಂಬಾ ಅಭಿಮಾನದಿಂದ ದುರ್ಗ – ಮದಕರಿ ಎಂದರೆ ನೆನಪಿಸಿಕೊಳ್ಳುವುದು, ಈ ಕಥೆಯ ನಾಯಕ, ಕೊನೆಯ ಪಾಳೆಯಗಾರ / ಅರಸ ಚಿಕ್ಕ ಮದಕರಿನಾಯಕರನ್ನೇ !! ಈ ನಮ್ಮ ಅಭಿಮಾನಕ್ಕೆ ಕಾರಣನಾದ ಮದಕರಿನಾಯಕ ಅತಿ ಸಾಹಸಿ, ಅತಿಕ್ರೂರಿ, ಅತಿಮದಾಂಧ, ಅತಿಕಾಮಿ ಮತ್ತು ದೈವಕೃಪೆ, ಗುರುವಿನ ಅನುಗ್ರಹ ಎರಡನ್ನೂ ಕಳೆದುಕೊಂಡಿದ್ದ ನತದೃಷ್ಟ ಎಂದು ಚಿತ್ರದುರ್ಗ ಸಂಸ್ಥಾನದ ಚಪ್ಪೇ ಚಾವಡಿ ದಳವಾಯಿಗಳ ನೇರ ವಂಶಸ್ಥರಾದ, ಭದ್ರಾವತಿಯ ಉಕ್ಕಿನ ಕಾರ್ಖಾನೆಯ ನಿವೃತ್ತ ವರ್ಕ್ಸ್ ಮ್ಯಾನೇಜರ್ ಶ್ರೀ ಸಿ ಪರಶುರಾಮನಾಯಕ್ ರವರು ಹೇಳಿದ್ದನ್ನೂ, ಈ ಕೃತಿ “ದುರ್ಗಾಸ್ತಮಾನ” ಬರೆಯಲು ಸ್ಫೂರ್ತಿಯಾದದ್ದನ್ನೂ ಲೇಖಕರು ಸ್ಮರಿಸಿದ್ದಾರೆ.

ದುರ್ಗಾಸ್ತಮಾನವನ್ನು ಅನೇಕ ಸಂಶೋಧನೆಗಳು, ಮುದ್ರಣ ರೂಪದಲ್ಲಿ ಪ್ರಕಟವಾಗಿಲ್ಲದ ಶ್ರೀ ಚಿಕ್ಕೇರೂರು ಗೋವಿಂದಾಚಾರ್ಯರು ಬರೆದ ಹರಪನಹಳ್ಳಿ ಪಾಳೆಯಗಾರರ ಚರಿತ್ರೆಯ ಹಸ್ತಪ್ರತಿಯನ್ನು ಆಧರಿಸಿ ಬರೆಯಲಾಗಿದೆ. ಚಿತ್ರದುರ್ಗದ ಇತಿಹಾಸಕ್ಕೆ ಸಂಬಂಧಪಟ್ಟ ಮತ್ತು ಲಭ್ಯವಿದ್ದ ಎಲ್ಲಾ ದಾಖಲೆಗಳನ್ನೂ ಚೆನ್ನಾಗಿ ಅಧ್ಯಯನ ಮಾಡಿದ ನಂತರವೇ ಶ್ರೀ ತರಾಸುರವರು ಕಾದಂಬರಿ ಬರೆದಿದ್ದಾರೆ.

ತರಾಸುರವರು, ಅತ್ಯಂತ ಕಾಳಜಿಯಿಂದ, ಎಲ್ಲಾ ಅಧ್ಯಯನಗಳನ್ನೂ ಮಾಡಿ, ಸಂಗ್ರಹಕ್ಕೆಲ್ಲಾ ಆಧಾರ ತೋರಿಸಿಯೇ ದುರ್ಗಾಸ್ತಮಾನದಲ್ಲಿ ದೊರೆ ಮದಕರಿ ನಾಯಕನನ್ನು ಮೆಚ್ಚಬೇಕಾದ ಶೂರ ಎಂದೇ ಚಿತ್ರಿಸಿದ್ದಾರೆ. ದುರಂತ ಕಾದಂಬರಿಗೆ ಅರ್ಹನಾದ ಧೀರೋದ್ಧಾತ ನಾಯಕ ಎನ್ನುವಂತೆಯೂ ಚಿತ್ರಿಸಿದ್ದಾರೆ. ತನ್ನ ದುರ್ಗದ ಜನರೇ ತನಗೆ ದ್ರೋಹ ಮಾಡಿ, ಹೈದರಾಲಿಯ ಸೇನೆ ಕೋಟೆ ಮುತ್ತಿದಾಗ, ವೀರಾವೇಶದಿಂದ ಕಾದಾಡುತ್ತಾ, ಕೊನೆಯ ಉಸಿರು, ಒಡಲು ಬಿಡುವ ಮುನ್ನ ಮದಕರಿ, ಹೈದರನ ಧ್ವಜ ಸ್ಥಂಭವನ್ನು ಹೊಡೆದುರಿಳಿಸಿದ್ದನ್ನು ಓದುವಾಗ, ರೋಮಾಂಚನದಿಂದ ಮೈ ನವಿರೇಳುತ್ತದೆ. ಹೈದರಾಲಿಯ ಕಡೆಯವರ ಹತ್ತಾರು ಗುಂಡುಗಳು ಮದಕರಿಯನ್ನು ಹೊಡೆದುರುಳಿಸಿದಾಗ, ದುರ್ಗದ ಗಂಡುಗಲಿ ವೀರ ಮದಕರಿನಾಯಕ ತನ್ನ ಪ್ರಾಣಪ್ರಿಯವಾದ ದುರ್ಗದ ಮಣ್ಣಿಗೆ ರಕ್ತ ತರ್ಪಣ ನೀಡುತ್ತಾ, ಕೋಟೆಯ ಮೇಲಿಂದ ಕೆಳಗುರುಳುತ್ತಾನೆ. ಮತ್ತೇಳುವುದಿಲ್ಲ – ಅಲ್ಲಿಗೆ ದುರ್ಗದ ಇತಿಹಾಸದಲ್ಲಿ ಪ್ರಜ್ವಲಿಸುವ ಸೂರ್ಯ ಅಸ್ತನಾಗಿದ್ದ, ದುರ್ಗಾಸ್ತಮಾನವಾಗಿ ಹೋಗುತ್ತದೆ, ಆ ಕ್ಷಣ.

ಮತ್ತಷ್ಟು ಓದು »