ವಿಷಯದ ವಿವರಗಳಿಗೆ ದಾಟಿರಿ

Posts from the ‘ಪ್ರಚಲಿತ’ Category

25
ಫೆಬ್ರ

ನಮ್ಮ ದೇಶದ ಕಥೆ ಇಷ್ಟೇ ಕಣರೋಪ್ಪು!!!

– ಮಧು ಚಂದ್ರ , ಭದ್ರಾವತಿ

AbdulKalamಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಮ್ ಯಾರಿಗೆ ಗೊತ್ತಿಲ್ಲ ಹೇಳಿ , ನಮ್ಮ ದೇಶದ ಮಾಜಿ ರಾಷ್ಟ್ರಪತಿ ಹಾಗು ಕ್ಷಿಪಣಿ ಗಳ ಜನಕ ಎಂದೇ ಪ್ರಸಿದ್ಧರು.

ಕಲಾಂ ಅವರು ಇಸ್ರೋ ಸಂಸ್ಥೆಯ ಉಪಗ್ರಹ ಉಡಾವಣ ವಾಹನಗಳ ಯೋಜನೆಯ ಕಾರ್ಯದಲ್ಲಿ ತೊಡಗಿದ್ದಾಗ, ಅವರಿಗೆ ಬೆರಿಲಿಯಮ್ ಡಯಾ ಫಾರ್ಮ್ಗಳ ಅವಶ್ಯಕತೆ ಇತ್ತು. ಬೇರಿಲಿಂ ಡಯಾ ಫಾರ್ಮ್ಗಳನ್ನು ವಿಮಾನ, ರಾಕೆಟ್ ಹಾಗು ಕ್ಷಿಪಣಿಗಳ ಭ್ರಮಣ ದಿಕ್ಸೂಚಿಗಳಲ್ಲಿ ಬಳಸುತ್ತಾರೆ. ಭ್ರಮಣ ದಿಕ್ಸೂಚಿಗಳಿಂದ ವಿಮಾನ , ರಾಕೆಟ್ ಹಾಗು ಕ್ಷಿಪಣಿಗಳು ನೆಲದ ಮೇಲೆ ಎಷ್ಟು ಎತ್ತರದಲ್ಲಿ ಹಾರುತ್ತಿವೆ ಎಂದು ಸೂಚಿಸುತ್ತವೆ.

ಅಂದು ನಮ್ಮ ದೇಶದಲ್ಲಿ ಉತ್ಪಾದನೆ ಮಾಡಲು ಯಾವುದೇ ಉದ್ಯಮಗಳು ಇಲ್ಲದೆ ಇರುವುದರಿಂದ , ಇದನ್ನು ಅಮೇರಿಕದಿಂದ ಅಮದು ಮಾಡಿಕೊಳ್ಳುತ್ತಿದ್ದರು . ಇಸ್ರೋದಿಂದ ನಮ್ಮ ಯೋಜನೆಗೆ ನಮಗೆ ಇಷ್ಟು ಡಯಾ ಫಾರ್ಮ್ಗಳು ಬೇಕು ಎಂದು ಅಮೆರಿಕಕ್ಕೆ ಬೇಡಿಕೆ ಇಟ್ಟರು.

ಮೂರು ತಿಂಗಳ ನಂತರ ಅಮೆರಿಕವು, ಭಾರತವು ಖಂಡಾಂತರ ಕ್ಷಿಪಣಿಗಳ ಅಭಿರುದ್ದಿಯಲ್ಲಿ ಬೇರಿಲಿಂ ಡಯಾ ಫಾರ್ಮ್ಗಳನ್ನು ಬಳಸುತ್ತಾರೆ ಎಂದು ಬೇಡಿಕೆ ಪೂರೈಸಲು ನಿರಾಕರಿಸಿತು.

ಮತ್ತಷ್ಟು ಓದು »

19
ಫೆಬ್ರ

ಕಾನೂನಿನ ಶಂಖದಿಂದ ಪರಿಹಾರದ ತೀರ್ಥ ಬರುತ್ತದೆಯೇ?

– ರಾಕೇಶ್ ಶೆಟ್ಟಿ

Mala Horuvuduಇತ್ತೀಚೆಗೆ ಪ್ರಕಟವಾದ ಸುದ್ದಿಗಳಲ್ಲಿ ಬಹುವಾಗಿ ಕಾಡಿದ್ದು,ವಿಜಯವಾಣಿಯಲ್ಲಿ ಜನವರಿ ೨೯ರಂದು ಮತ್ತೆ ಫೆಬ್ರವರಿ ೫ರಂದು ಪ್ರಕಟವಾದ ೨ ಸುದ್ದಿಗಳು.ಒಂದು ಸಿಲಿಕಾನ್ ಸಿಟಿ ಬೆಂಗಳೂರಿನ ಪಕ್ಕದಲ್ಲೇ ಇರುವ ಆನೇಕಲ್ ಪುರಸಭೆ ವ್ಯಾಪ್ತಿಯಲ್ಲಿ ವರದಿಯಾದ ಮಲಹೊರುವ ಪ್ರಕರಣ ಮತ್ತು ಇನ್ನೊಂದು ಮಂಡ್ಯದ ಕಾಂಗ್ರೆಸ್ಸ್ ಕಛೇರಿಗೆ ಸಂಬಂಧಿಸಿದ ಮ್ಯಾನ್ ಹೋಲ್ ಅನ್ನು ಪೌರಕಾರ್ಮಿಕನೊಬ್ಬ ಬರಿಗೈಯಿಂದ ಸ್ವಚ್ಚ ಮಾಡುತಿದ್ದ ವರದಿ.

ಆನೇಕಲ್ಲಿನ ಪ್ರಕರಣ ವರದಿಯಾದ ಮೇಲೆ ಸರ್ಕಾರ ಎಚ್ಚೆತ್ತುಕೊಂಡು, ‘ಮಲಹೊರುವಂತೆ ಪ್ರೇರೆಪಿಸಿದ’ ಮತ್ತು ‘ಜಾತಿನಿಂದನೆ’ಯ (ಇದರಲ್ಲಿ ಜಾತಿ ನಿಂದನೆಯಾಗಿದ್ದು ಹೇಗೆ ಅನ್ನುವುದು ತಿಳಿಯಲಿಲ್ಲ) ಆರೋಪದ ಮೇಲೆ ಒಬ್ಬರನ್ನು ಬಂಧಿಸಿದ ಫಾಲೋ-ಅಪ್ ಸುದ್ದಿಯೂ ಪತ್ರಿಕೆಯಲ್ಲಿ ಬಂದಿತ್ತು. ಆದರೆ,ಸರಿಯಾದ ಒಳಚರಂಡಿ ವ್ಯವಸ್ಥೆಯನ್ನು ರೂಪಿಸದ ಸರ್ಕಾರ ಇಂತ ಪ್ರಕರಣದಲ್ಲಿ ಮೊದಲ ಆರೋಪಿಯಾಗಬೇಕೆ ಅಥವಾ ವ್ಯವಸ್ಥೆಯ ನಿರ್ಲಕ್ಷ್ಯದ ಅನಿವಾರ್ಯತೆಗೆ ಬಿದ್ದು,ಕಾರ್ಮಿಕರಿಂದ ಮಲಹೊರಿಸುವ ಸ್ಥಿತಿಗೆ ಬಂದು ನಿಲ್ಲುವವರು ಆರೋಪಿಗಳಾಗಬೇಕೆ?

ಅತ್ಯಾಧುನಿಕ ಉಪಕರಣಗಳು ಆಯಾ ಪಾಲಿಕೆ/ನಗರಸಭೆ/ಪುರಸಭೆ/ಗ್ರಾಮಪಂಚಾಯಿತಿ ಗಳಲ್ಲಿ ಲಭ್ಯವಿದ್ದೂ ಮತ್ತು ಅವುಗಳನ್ನು ಬಳಸುವ ಬಗ್ಗೆ ಜನರಿಗೆ ಅರಿವು ಮೂಡಿಸಿ,ಅವು ಸುಲಭವಾಗಿ ದಕ್ಕುವಂತೆ ಸರ್ಕಾರ ಮಾಡಿದ್ದರೆ,ಒಬ್ಬರು ಜೈಲಿಗೆ ಹೋಗುವುದನ್ನು ತಪ್ಪಿಸಬಹುದಿತ್ತಲ್ಲವೇ?

ಮತ್ತಷ್ಟು ಓದು »

17
ಫೆಬ್ರ

ಪೆಪ್ಪರ್ ಸ್ಪ್ರೇ ಮತ್ತು ಕಾಂಗ್ರೆಸ್ಸ್

– ಪ್ರಸನ್ನ,ಬೆಂಗಳೂರು

Pepper Spray in Parlimentಇತ್ತೀಚೆಗೆ ಸಂಸತ್ತಿನಲ್ಲಿ ನಡೆದ ಪ್ರಸಂಗವನ್ನು ಎಲ್ಲ ಮಾಧ್ಯಮಗಳು ಒಕ್ಕೊರಲಿನಿಂದ ಪೆಪ್ಪರ್ ಸ್ಪ್ರೇಯಷ್ಟೇ ಖಾರವಾದ ಮತ್ತು ಚಾಕುವಿನಷ್ಟೇ ಹರಿತವಾದ ಶಬ್ದಗಳಲ್ಲಿ ಖಂಡಿಸಿವೆ. ಆದರೆ ಈ ಘಟನೆಗೆ ಕಾರಣಾರು? ಎಂಬುದನ್ನು ಎಲ್ಲಿಯಾದರೂ ವಿಶ್ಲೇಷಣೆಗೊಳಪಡಿಸಿವೆಯೆ?

ನಮ್ಮ ನ್ಯಾಯಾಲಯಗಳೂ ಕೂಡ ಎಲ್ಲ ಪ್ರಕರಣಗಳಲ್ಲೂ ಉತ್ತೇಜನಕಾರಿ ಮತ್ತು ಅಪರಾಧಕ್ಕೆ ಕಾರಣವಾಗುವ ಪ್ರಚೋದನಾಕಾರಿ ಅಂಶಗಳನ್ನು ಹುಡುಕಲು ಪ್ರಯತ್ನಿಸುತ್ತದೆ. ಬಲವಾದ ಕಾರಣವಿಲ್ಲದೆ ನಡೆದ ಪ್ರಕರಣಗಳನ್ನು ನ್ಯಾಯಾಲಯ ಹೆಚ್ಚು ಕಠಿಣ ಶಿಕ್ಷೆಗೆ ಗುರಿ ಪಡಿಸಲು ಹೋಗುವುದಿಲ್ಲ. ಕೆಲವೊಮ್ಮೆ ಕಾರಣವಿಲ್ಲದೆ ಜರುಗುವ ಅಪರಾಧಗಳನ್ನು ಕೇವಲ ಕಣ್ತಪ್ಪಿನಿಂದಾದ ಅನಾಹುತಗಳೆಂದೆ ಪರಿಗಣಿಸಿದ ಉದಾಹರಣೆಗಳಿವೆ.

೨೦೦೪ ರಲ್ಲಿ ಕೇವಲ ಪ್ರಾದೇಶಿಕ ಪಕ್ಷಗಳ ವೈಫಲ್ಯದಿಂದ ಚುಕ್ಕಾಣಿ ಹಿಡಿದ ಸರಕಾರದ ನಡವಳಿಕೆಗಳನ್ನು ಒಮ್ಮೆ ಸಿಂಹಾವಲೋಕನ ಮಾಡಿ ನೋಡಿ. ಇಂದಿನ ಸಂಸದರ ನಡವಳಿಕೆಗೆ ಒಂದು ಸಣ್ಣ ಕಾರಣದ ಎಳೆ ಕಾಣಿಸಿಕೊಳ್ಳುತ್ತದೆ. ಅದು ಹೇಗೋ ಹಿಂದಿನ ಸರಕಾರದ ಆರ್ಥಿಕ ನೀತಿಗಳಿಂದ ಮೊದಲ ಮೂರು ವರ್ಷ ತಳ್ಳಿದ ಈ ಸರಕಾರ, ಯುಪಿಎ-೧ರ ಕೊನೆಯ ೨ ವರ್ಷಗಳಲ್ಲಿ ನಡೆಸಿದ ಹಗರಣಗಳು ಹೊರ ಬರುವಷ್ಟರಲ್ಲಿ ಎರಡನೇ ಬಾರಿ ಚುನಾವಣೆ ಗೆದ್ದಿತ್ತು. ಅದರಲ್ಲೂ ನಮ್ಮ ಮೂಕ ಪ್ರಧಾನಿಯವರು ನಾವು ಚುನಾವಣೆ ಗೆದ್ದಿದ್ದೇವೆ ಹಾಗಾಗಿ ನಾವು ಮಾಡಿದ್ದೆಲ್ಲ ಸರಿ ೫ ವರ್ಷ ನಮಗೆ ಅಧಿಕಾರ ಕೊಟ್ಟಿದ್ದಾರೆ ನಾವು ಯಾರಿಗೂ ಉತ್ತರದಾಯಿಗಳಲ್ಲ ಎನ್ನುವಂತೆ ಹೇಳಿಕೆಗಳನ್ನು ಕೊಟ್ಟು ಅಂತೆಯೇ ನಡೆದು ಕೊಂಡರು.
ಮತ್ತಷ್ಟು ಓದು »

29
ಜನ

ಜನ ಮನ್ನಣೆ

– ಮಧು ಚಂದ್ರ, ಭದ್ರಾವತಿ 

Image

ಇಂದು ಅತ್ಯಂತ ಪ್ರಸ್ತುತದಲ್ಲಿರುವ ಪದ ಎಂದರೆ ” ಜನ ಮನ್ನಣೆ “. ಅದಕ್ಕಾಗಿ ನಾವು ಏನೆಲ್ಲಾ ಮಾಡುತ್ತೇವೆ. ದಾನ ಮಾಡಿದಾಗ ನಮ್ಮ ಹೆಸರು, ಶಂಕು ಸ್ಥಾಪನೆ ಮಾಡಿದಾಗ ನಮ್ಮ ಹೆಸರು( ಕಾಮಗಾರಿ ಆಗುತ್ತೋ ಇಲ್ಲವೋ), ಕಂಡ ಕಂಡಲೆಲ್ಲ ಹೆಸರು ರಾರಜಿಸುವುದಕ್ಕೆ ಏನೆಲ್ಲಾ ಮಾಡಬಹುದು ಎಲ್ಲಾ ಮಾಡುತ್ತೇವೆ. ಆದರೆ ಅದನ್ನು ಇಂದಿನ ಮಾನವ ಕೇವಲ ಕ್ಷಣಕ್ಕೆ ಮಾತ್ರ ಪರಿಗಣಿಸಿ ನಂತರ ಕಡೆಗಣಿಸುತ್ತಾನೆ. ಅವರಾರು ತಮ್ಮ ಹೆಸರನ್ನು ಕಡೆಯವರೆಗೂ ಉಳಿಸಿಕೊಂಡು ಮನ್ನಣೆ ಪಡೆಯಲು ಸಾಧ್ಯವಾಗದೆ ಅಳಿದು ಹೋಗುತ್ತಾರೆ .ಇಂದು ಸೇವಾ ಮನೋಭಾವವಿಲ್ಲದ ದಾನ ಕೇವಲ ಪ್ರಚಾರಕ್ಕೆ ಮಾತ್ರ ನಿಮಿತ್ತ. ಅಂದರೆ ದಾನಿಗಳು ಇರುವವರೆಗೂ ಮಾತ್ರ, ಅವರಳಿದ ಮೇಲೆ ಅವು ಸಹ ಅಳಿಯುತ್ತದೆ. ಅವು ಎಂದೂ ಜನರ ಮನದಲ್ಲಿ ಉಳಿಯುವುದೇ ಇಲ್ಲ. ಸ್ವಾರ್ಥದ ಸೇವೆ ಎಲ್ಲಿಯೂ ಸಲ್ಲುವುದಿಲ್ಲ. ನಿಸ್ವಾರ್ಥ ಸೇವೆ ಇಂದು ಕಣ್ಮರೆಯಾಗುತ್ತಿದೆ. ನಿಸ್ವಾರ್ಥ ಸೇವೆ ಎನ್ನುವುದು ಎಂದೆಂದಿಗೂ ಶಾಶ್ವತ ಎನ್ನುವುದಕ್ಕೆ ಒಂದು ಚಿಕ್ಕ ಉದಾಹರಣೆ ನಿಮ್ಮ ಮುಂದೆ ನೀಡುತ್ತಿದ್ದೇನೆ. ಆಮೇಲೆ ಸೇವೆ ಎನ್ನುವ ಪದಕ್ಕೆ ಸಮಾನಾರ್ಥಕ ಪದ ನೀವೇ ನಿರ್ಧರಿಸಿ.

ಕನ್ನಂಬಾಡಿ ಆಣೆಕಟ್ಟು ನಿರ್ಮಾಣವಾದ ನಂತರ ಪ್ರತಿದಿನವೂ ದೇಶ ವಿದೇಶಗಳಿಂದ ಜನರು ಭೇಟಿ ನೀಡುತ್ತಿದ್ದರು. ಅ ಸಮಯದಲ್ಲಿ ಕನ್ನಂಬಾಡಿ ಕಟ್ಟೆಯ ನಿರ್ಮಾತರ ಹೆಸರಿನ ಫಲಕಗಳು, ಗುರುತುಗಳು ಸಹ ಇರಲಿಲ್ಲ. ಓಮ್ಮೆ ಆಂಧ್ರದ ಹಳ್ಳಿಯ ರೈತನೊಬ್ಬ ಕನ್ನಂಬಾಡಿ ಆಣೆಕಟ್ಟನ್ನು ಸಂದರ್ಶಿಸಿದನು. ಅಲ್ಲಿದ್ದ ಕಾವೇರಿಯ ಮೂರ್ತಿಗೆ ನಮಸ್ಕರಿಸಿ ಅಣೆಕಟ್ಟಿನ ಸೊಬಗನ್ನು ಸವಿಯುತ್ತಿದ್ದನು. ಹೀಗಿರುವಾಗ ಅಲ್ಲಿಗೆ ಬಂದ ಹಿರಿಯರೊಬ್ಬರು ಅಲ್ಲೇ ಇದ್ದ ಮಕ್ಕಳ ಹತ್ತಿರ ರೈತನಿಗೆ ” ಕನ್ನಂಬಾಡಿ ಆಣೆಕಟ್ಟು ನಿರ್ಮಿಸಿದವರು ಯಾರು ಗೊತ್ತೇ? ” ಎಂದು ಕೇಳಲು ಹೇಳಿದರು.

ಅಗ ರೈತನು ” ಏಮಂಡಿ, ಆ ಮಹಾನುಭಾವಲು ವಿಶ್ವೇಶ್ವರಯ್ಯಗಾರು ಚೆಸಿಂದಿಕಾದ ” (‘ ಏನು ಸ್ವಾಮಿ , ಆ ಮಹಾನುಭಾವ ವಿಶ್ವೇಶ್ವರಯ್ಯನವರು ಕಟ್ಟಿಸಿದ್ದಲ್ಲವೇ ? ‘) ಎಂದು ಉತ್ತರಿಸಿದನು.

ನಿಜವಾದ ಸೇವೆಗೆ ಶಿಲೆಯ ಮೇಲಿನ ಶಾಸನವಾಗಲಿ, ಫ್ಲೆಕ್ಸ್ ಬ್ಯಾನರ್ ಅಗಲಿ ಬೇಕಿಲ್ಲ. ಸೇವೆಯು ನಿರಂತರವಾಗಿ ತಲುಪುವ ಹಾಗಿರಬೇಕು. ಅಗ ಮಾತ್ರ ಜನಮನ್ನಣೆ ಪಡೆದು ಚಿರಸ್ಥಾಯಿಯಾಗಿರುತ್ತದೆ. ನಮ್ಮವರು ಇದರಿಂದ ಕಲಿಯುವುದು ಯಾವಾಗ ಎಂದು ನೀವೇ ಹೇಳಬೇಕು.

***********************************************************************
ಚಿತ್ರ ಕೃಪೆ : ಅಂತರ್ಜಾಲ

23
ಜನ

ಬೇಕಾಗಿರುವುದು ರಾಜಕೀಯ ಅಸ್ತಿತ್ವವೇ ವಿನಃ ಕೇವಲ ಭ್ರಷ್ಟಚಾರ ನಿಗ್ರಹವಲ್ಲ

– ನವೀನ್ ನಾಯಕ್          

AAPಅಣ್ಣಾ ನೇತೃತ್ವದ ಜನಲೋಕಪಾಲ ಹೋರಾಟದಿಂದ ಪ್ರಸಿದ್ದರಾದ ಅರವಿಂದ್ ಕೇಜ್ರಿವಾಲ್ ದೆಹಲಿ ಗದ್ದುಗೆಗೇರಿ ಬದಲಾವಣೆಯ ಪರ್ವ ತರಲು ಹೊರಟಿದ್ದಾರೆ. ಸರಕಾರ ರಚಿಸಲು ಜನರ ಅಭಿಪ್ರಾಯ ಸಂಗ್ರಹಿಸಿದ ಕಾರಣಕ್ಕೆ ಹಗಲು ರಾತ್ರಿ ಮಾಧ್ಯಮಗಳು ತಲೆದೂಗಿದ್ದೇ ತೂಗಿದ್ದು. ಎಲ್ಲಾ ಮಾಧ್ಯಮಗಳಲ್ಲಿ ಒಂದೇ ಕೂಗು. ಇದೇ ನೈಜ ಪ್ರಜಾಪ್ರಭುತ್ವ!. ಈ ಮಾಧ್ಯಮಗಳ ಕಣ್ಣಿಗೆ ಮೂರು ರಾಜ್ಯಗಳಲ್ಲಿ ಭರ್ಜರಿ ಜಯಗಳಿಸಿದ ಮತ್ತು ದೆಹಲಿಯಲ್ಲಿ ಮೊದಲ ಸ್ಥಾನ ಪಡೆದ ಬಿಜೆಪಿ ನೈಜ ಪ್ರಜಾಪ್ರಭುತ್ವದಲ್ಲಿ ಗೆದ್ದಿದ್ದಲ್ಲ ! ಪಕ್ಷ ಕಟ್ಟಿ ಒಂದು ವರ್ಷದಲ್ಲೇ ಎರಡನೆಯ ಸ್ಥಾನಕ್ಕೆ ಬರುವುದು ಅಚ್ಚರಿಯೇ, ಅವರ ಪ್ರಯತ್ನಕ್ಕೆ ನಾವು ಶಹಭಾಸ್ ಹೇಳಲೇ ಬೇಕು. ದೇಶದ ಭವಿಷ್ಯಕ್ಕೆ ಉತ್ತಮ ಆಡಳಿತ ನೀಡಲು ಆಪ್ ಪಕ್ಷವೇ ಮುಂಚೂಣಿಗೆ ಬರಬೇಕೆಂಬ ನಿರ್ಧಾರವನ್ನು ಕೇಜ್ರಿವಾಲ್ ಯಶಸ್ವಿಯಾಗಿ ಯುವಕರ ಮನಸ್ಸಲ್ಲಿ ತುಂಬಿದ್ದರು. ರಾಜಕೀಯ ಮಾಡುವುದು ಹೇಗೆ ಅಂತ ನಾವು ಕಲಿಸುತ್ತೇವೆ, ನಮಗೆ ಕೆಂಪು ಗೂಟದ ಕಾರು ಬೇಕಿಲ್ಲ, ನಮಗೆ ಭದ್ರತೆ ಬೇಕಿಲ್ಲ, ಸರಕಾರಿ ಭವ್ಯ ಮನೆಯೂ ಬೇಕಿಲ್ಲ ಹೀಗೆ ಒಂದರ ಮೇಲೊಂದಂತೆ ಘೋಷಿಸತೊಡಗಿದರು. ಯುವಕರ ಉತ್ಸಾಹ ಇಮ್ಮಡಿಯಾಗಿತ್ತು. ತಮ್ಮ ನಾಯಕನಿಗೆ ಈ ಜಗದಲ್ಲಿ ಬೇರಾರು ಸರಿಸಾಟಿ ಇಲ್ಲವೆಂಬತೆ ವರ್ತಿಸತೊಡಗಿದರು. ಅಣ್ಣಾ ಹಜಾರೆಯವರು ಯಾವಾಗ ತನ್ನ ಹೆಸರನ್ನು ರಾಜಕೀಯಕ್ಕೆ ದುರುಪಯೋಗ ಪಡಿಸಿಕೊಳ್ಳಬೇಡಿ ಎಂದರೋ ಕೇಜ್ರಿವಾಲ್ ಅಭಿಮಾನಿಗಳು ಬುಸುಗುಡತೊಡಗಿದರು. ಸಾಲದೇ ಐಎಸಿ ಚಳುವಳಿಯ ಹಣದ ಲೆಕ್ಕ ಕೇಳಿದರೋ ಎಲ್ಲ ಅಭಿಮಾನಿಗಳು ಸಿಡಿದೆದ್ದರು. ಅಣ್ಣಾ ಮುದುಕರಾಗಿದ್ದಾರೆ ಹುಚ್ಚರಂತೆ ವರ್ತಿಸುತಿದ್ದಾರೆ ಎಂಬ ಕ್ಷುಲ್ಲಕ ಮಾತುಗಳನ್ನು ಸಾಮಾಜಿಕ ತಾಣದ ತುಂಬ ಪಸರಿಸತೊಡಗಿದರು. ಯಾರ ಏಳಿಗೆಗೆ ಯಾರು ಕಾರಣರಾಗಿದ್ದರೋ ಅವರು ಮದುಕರಾಗಿದ್ದರು ಹುಚ್ಚರಾಗಿದ್ದರು.

ಮತ್ತಷ್ಟು ಓದು »

22
ಜನ

ನಾಯಕತ್ವದ ಬೆಲೆ

– ಮಧು ಚಂದ್ರ ಎಚ್ ಬಿ ಭದ್ರಾವತಿ

2007041912020501ಇತ್ತೀಚೆಗೆ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ  ವಿಧಾನ ಸಭೆಯ ಅಧಿವೇಶನ ನಡೆಯುತ್ತಿದ್ದ ಸಂಧರ್ಭದಲ್ಲಿ , ಸುವರ್ಣ ವಿಧಾನ ಸೌಧದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ರೈತ ವಿಠ್ಠಲ ಭೀಮಪ್ಪ ಅರಭಾವಿ ಆತ್ಮಹತ್ಯೆ ಮಾಡಿ ಕೊಂಡಿದ್ದು ನಿಮಗೆಲ್ಲ ತಿಳಿದೇ ಇದೆ. ಕಾರಣ ಸಹ ನಿಮಗೆ    ತಿಳಿದೇ ಇದೆ ಸರ್ಕಾರ ರೈತರ ಹೋರಾಟಕ್ಕೆ ಸೂಕ್ತ ಪರಿಹಾರ ಹುಡುಕದೆ , ಸ್ಪಂದಿಸಲು ವಿಳಂಬ ಮಾಡಿತು.ಅದಕ್ಕೆ ಸರ್ಕಾರ  ತೆತ್ತ ಬೆಲೆ ನೇಗಿಲ ಯೋಗಿಯ ಆತ್ಮಹತ್ಯೆ. ಇದು ಕೇವಲ ನಮ್ಮ ರಾಜ್ಯದಲ್ಲಿ ಅಲ್ಲ ಮಾನವರಿರುವ ಪ್ರತಿಯೊಂದು ಸ್ಥಳದಲ್ಲಿ ಸಮಸ್ಯೆ ಇದ್ದೆ ಇದೆ.

ನಮ್ಮಲ್ಲಿ ಸಮಸ್ಯೆಯನ್ನು ಅರಿತು, ಸ್ಪಂದಿಸಿ ಸೂಕ್ತ ಪರಿಹಾರ ಕಂಡು ಹಿಡಿಯುವ ಮಾರ್ಗ ಹುಡುಕುವುದು ದೊಡ್ಡದೊಂದು ಅನಾಹುತವಾದ ಮೇಲೆಯೇ.ಇದಕ್ಕೆ ಎಲ್ಲ ಕಾರ್ಯಕ್ಷೇತ್ರಗಳು, ವರ್ಗ ಮತ್ತು ಪರಿವಾರಗಳು ಬರುತ್ತವೆ. ಇದ್ದಕ್ಕೆ ಮುಖ್ಯ ಕಾರಣ  ನಾಯಕನ ದೂರ ದೃಷ್ಟಿ ಹಾಗು ಸಮಸ್ಯೆ ಬಗೆಹರಿಸುವ ಕಲೆಯ ಕೊರತೆ ಎನ್ನಬಹುದು. ಇಂದು ಕೇವಲ ಅಧಿಕಾರ ಸಿಕ್ಕರೆ ಸಾಕು ಎನ್ನುವ ನಾಯಕರು ಇರುವಾಗ ಇವೆಲ್ಲವೂ ದೂರದ ಮಾತೆ ಸರಿ.

16
ಜನ

ಉದಾರತೆಗೊಂದು ಉದಾಹರಣೆ

– ಮಧು ಚಂದ್ರ ಎಚ್.ಬಿ , ಭದ್ರಾವತಿ

ಉದಾರತೆಗೊಂದು ಉದಾಹರಣೆ

ಉದಾರತೆಗೊಂದು ಉದಾಹರಣೆ

ವ್ಯಾಪಾರಿ ಮನೋಭಾವ ಇಂದಿನ ನಮ್ಮ ನಿಮ್ಮೆಲ್ಲರಲ್ಲಿ ಕಂಡುಬರುವ ಅತಿ ಪ್ರಮುಖ ಅಂಶ. ಏನಾದರೂ ಮಾಡಿ ಅವರಿಂದ ಅಥವಾ ಅದರಿಂದ ಹೆಚ್ಚು ಲಾಭ ಪಡೆಯಬೇಕು ಎನ್ನುವ ಮನೋಭಾವ ಇಂದು ಮನುಷ್ಯನ ವ್ಯಕ್ತಿತ್ವವನ್ನೇ ಮಾರಿ ಕೊಳ್ಳುವ ಹಾಗೆ ಮಾಡಿದೆ. ಇದರಿಂದ ಯೋಗ್ಯವಾದುದು ಸಹ ಅಯೋಗ್ಯವೆನಿಸಿಕೊಳ್ಳುತ್ತಿದೆ. ಹತ್ತಿಪ್ಪತ್ತು ವರ್ಷಗಳಿಂದ ಇಚೆ ಮಣ್ಣು, ನೀರು, ಗಾಳಿ ಮಾರಿ ಹಣ ಮಾಡಿಕೊಳ್ಳುವ ದಂಧೆ ಆರಂಭವಾಗಿ ಈಗ ವಿಷಮ ಪರಿಸ್ಥಿತಿಯಲ್ಲಿದೆ.ಇವೆಲ್ಲವೂ ಪ್ರಕೃತಿಯಲ್ಲಿ ಸಿಗುವ ಎಲ್ಲರ ಆಜನ್ಮ ಸಿದ್ಧ ಹಕ್ಕುಗಳು ಆದರು ಹಣ ಕೊಟ್ಟು ಪಡೆಯುವ ಪರಿಸ್ಥಿತಿಯೊದಗಿದೆ ನಮಗೆ. ಇದಕ್ಕೆ ಶಿಕ್ಷಣವೂ ಸಹ ಸೇರ್ಪಡೆಯಾಗಿದ್ದು ನಮ್ಮ ದೌರ್ಭಾಗ್ಯವೇ ಸರಿ. ಉತ್ತಮ ಶಿಕ್ಷಣ ಕೊಡುತ್ತೇವೆಂದು ಹೇಳಿ ಹಣ ಸುಲಿಗೆ ಮಾಡುವ ಶಿಕ್ಷಣ ಸಂಸ್ಥೆಗಳು ಅನೇಕ, ಆದರೆ ಅವರು ಕೊಡುವ ಗುಣಮಟ್ಟವು ಸಹ ಅಷ್ಟಕಷ್ಟೇ. ಅನಗತ್ಯವಾಗಿ ನೆರೆಯ ಶಿಕ್ಷಣ ಸಂಸ್ಥೆ ಒಂದು ರೂಪಾಯಿ ಹೆಚ್ಚಿಗೆ ಹಣ ಕೇಳುವುದು ಗೊತ್ತಾದರೆ ಮೊತ್ತೊಂದು ಸಂಸ್ಥೆ ಸಹ ಹೆಚ್ಚಿಗೆ ಹಣ ಕೇಳುತ್ತದೆ. ಕಡೆಗೆ ಉತ್ತಮ ನಾಗರಿಕರನ್ನು ಸೃಷ್ಟಿ ಮಾಡಬೇಕಾದ ಸಂಸ್ಥೆಗಳು ಸೃಷ್ಟಿ ಮಾಡುವುದು ಹೆಚ್ಚು ಹಣ ಕೀಳುವ ವ್ಯಾಪಾರಿ ಮನೋಭಾವದ ವೃತ್ತಿ ಪರರನ್ನೇ ಹೊರತು ಸಜ್ಜನರನ್ನು ಅಲ್ಲ. ಅದ್ದರಿಂದ ಎಲ್ಲರೂ ಉದಾರ ಮನೋಭಾವ ಬೆಳಸಿಕೊಳ್ಳುವ ಅವಶ್ಯಕತೆಯಿದೆ ಇಲ್ಲದಿದ್ದರೆ ಮಾನವ ಜನಾಂಗವೆಲ್ಲಾ ಪರಸ್ಪರ ಕಿತ್ತಾಡುವ ಸಮಯ ಈಗಾಗಲೇ ಬಂದಿದೆ. ಉದಾರ ಮನೋಭಾವಕ್ಕೆ ನಮ್ಮ ಹಿರಿಯರು ಮಾದರಿ ಎನ್ನುವುದಕ್ಕೆ ಒಂದು ನಿದರ್ಶನ ಇಲ್ಲಿದೆ.

ಹಿಂದೆ ಶೇಷಾದ್ರಿ ಅಯ್ಯರ್ ಅವರು ಮೈಸೂರಿನ ದಿವಾನರಾಗಿದ್ದ ಕಾಲ.

ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಒಮ್ಮೆ ಬ್ರಿಟೀಶ್ ರೆಸಿಡೆಂಟ್ ಲಿ ವಾರ್ನೆರ್ ಭೇಟಿ ಕೊಟ್ಟಿದ್ದ. ಅವನು ಅಲ್ಲಿ ನಡೆಯುತ್ತಿದ್ದ ತರಗತಿಗೆ ಭೇಟಿಕೊಟ್ಟು. ಅಲ್ಲಿರುವ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳುತ್ತಿದ್ದ. ಹೀಗೆ ಅಲ್ಲಿದ್ದ ಒಬ್ಬ ಹುಡುಗನನ್ನು ಕುರಿತು

ಮತ್ತಷ್ಟು ಓದು »

15
ಜನ

ವಿಧಿ 370 – ಚರ್ಚೆ

– ಪ್ರವೀಣ್ ಪಟವರ್ಧನ್

Jammu Kashmir- Debate on Article 370ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು ಜಮ್ಮುವಿನಲ್ಲಿ ನಡೆದ ಇತ್ತೀಚೆಗಿನ ಸಮಾವೇಶದಲ್ಲಿ ನಮ್ಮ ದೇಶದ ಮೊದಲ ಪ್ರಧಾನ ಮಂತ್ರಿಯವರ ನಿಲುವನ್ನು ಪ್ರಶ್ನಿಸಿದ್ದಾರೆ. ಡಾ|| ಶ್ಯಾಮಾ ಪ್ರಸಾದ್ ಮುಖರ್ಜೀ ಯವರ ಜಮ್ಮು ಕಾಶ್ಮೀರದಲ್ಲಿನ ಹೋರಾಟವನ್ನು, ಬಲಿದಾನವನ್ನು (ನಿಗೂಢ ಸಾವು ಎಂದರೆ ತಪ್ಪಾಗಲಾರದು) ನೆನಪಿಸಿಕೊಂಡಿದ್ದಾರೆ. ಭಾರತ ಸಂವಿಧಾನದ ವಿಧಿ 370 (Article 370) ಯನ್ನು ಚರ್ಚಿಸಬೇಕೆಂದು ಕೇಳಿಕೊಂಡಿದ್ದಾರೆ. ಸಹಜವಾಗಿಯೇ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಬೆಂಬಲಿಸುವ ಕೆಲ ಮಾಧ್ಯಮ ವರ್ಗದವರು ಮೋದಿಯ ಭಾಷಣವನ್ನು ಆಕ್ಷೇಪಿಸಿದ್ದಾರೆ.ಕಾರಣ ಮಾಜಿ ಪ್ರಧಾನಿ ನೆಹರೂರಿಗೆ ಅವಮಾನವಾಯ್ತೆಂದೋ, ಅಥವಾ ನೆಹರೂರವರು ಕಾಶ್ಮೀರದಲ್ಲಿ ಗೊಂದಲ ಸೃಷ್ಟಿಸಿದ್ದನ್ನು ಒಪ್ಪಿಕೊಳ್ಳಲಾಗದೆಂದೋ ಗೊತ್ತಿಲ್ಲ. ಹಿಂದೊಮ್ಮೆ ಸರ್ದಾರ್ ವಲ್ಲಭ ಭಾಯಿ ಪಟೇಲ್, ನೆಹರೂರ ತುಲನೆ ಮಾಡಿದ್ದ ಮೋದಿಯನ್ನು ಆಕ್ಷೇಪಿಸಿದ್ದು ಸ್ಮರಿಸಬಹುದು. ನೆಹರೂ ರವರು ಅಪ್ರತಿಮ ದೇಶಭಕ್ತ, ದ್ರಷ್ಟಾರ; ಅವರ ಬಗ್ಗೆ ಲಘುವಾಗಿ ಮಾತನಾಡಿದ್ದು  ಮೋದಿಯವರ ತಪ್ಪು ಎಂದು ಅವರು ಸಮರ್ಥಿಸಿಕೊಂಡರೆ ಅದಕ್ಕಿಂತ ದೊಡ್ಡ ಹಾಸ್ಯ ಮತ್ತೊಂದಿರಲಿಕ್ಕಿಲ್ಲ.

ಮೊದಲನೆಯದಾಗಿ ನೆಹರೂ ಭಾರತದ ಜೊತೆಗಿನ ಕಾಶ್ಮೀರದ ವಿಲೀನವನ್ನು ಗೊಂದಲಕ್ಕೆ ಮಾರ್ಪಾಟು ಮಾಡಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಈಗಾಗಲೇ ಹಲವಾರು ಲೇಖಕರು, ಚಿಂತಕರು ತೋರಿಸಿಕೊಟ್ಟಿದ್ದಾರೆ. ಇನ್ನು ನೆಹರೂ ದೇಶಭಕ್ತರು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ದೇಶಕ್ಕೆ ಬ್ರಿಟಿಷರಿಂದ ಬಿಡುಗಡೆ ತಂದುಕೊಟ್ಟವರಲ್ಲಿ ಅಗ್ರಗಣ್ಯರು – ಹಾಗಾಗಿ ನೆಹರೂ ರವರನ್ನು ದೂಷಿಸಬಾರದು ಎಂದಾದರೆ – ಅದೂ ಒಪ್ಪಿಕೊಳ್ಳುವ ಮಾತಲ್ಲವೇ ಅಲ್ಲ. ಒಬ್ಬರ ನಿಲುವನ್ನು ಪ್ರಶ್ನಿಸುವ, ತೆಗೆದುಕೊಂಡ ನಿಷ್ಕರ್ಷೆಯಿಂದ ದೇಶಕ್ಕೇ ಮಾರಕವಾದಾಗಲೂ ನಿಲುವನ್ನು ಪ್ರಷ್ನಿಸಬಾರದು ಎನ್ನುವುದು ಮೂರ್ಖತನದ ಪರಮಾವಧಿ. ಈ ದೇಶದ ಸಾಮಾನ್ಯ ಪ್ರಜೆಗೂ ಆ ಹಕ್ಕು ಇದ್ದೇ ಇರುತ್ತದೆ. ಅದೇ ರೀತಿಯಲ್ಲಿ, ಕೆಲ ವರ್ಷಗಳ ನಂತರ ಮೋದಿಯವರು ತೆಗೆದುಕೊಂಡ ಯವುದೋ ನಿಲುವು ತಪ್ಪೆಂದು ಜನರು ಮೋದಿಯವರ ನಿರ್ಧಾರವನ್ನು ಟೀಕಿಸಬಹುದಲ್ಲವೇ?

ಮತ್ತಷ್ಟು ಓದು »

7
ಜನ

ಆರ್ವೇಲ್ ನ ಕಾದ೦ಬರಿ ’ಎನಿಮಲ್ ಫಾರ್ಮ್’ನೊಳಗೊ೦ದು ಪ್ರಸ್ತುತ ಭಾರತವನ್ನು ಕಾಣುತ್ತ…

– ಗುರುರಾಜ್ ಕೊಡ್ಕಣಿ

Animal Farmಅದು ಇ೦ಗ್ಲೆ೦ಡಿನ ಒ೦ದು ತೋಟ.ಒ೦ದು ದಿನ ಅಲ್ಲಿನ ಹಿರಿಯ ಹ೦ದಿಯೊ೦ದು ತೋಟದಲ್ಲಿನ ಎಲ್ಲಾ ಪ್ರಾಣಿಗಳನ್ನು ಸೇರಿಸಿ ಗುಪ್ತ ಸಭೆಯೊ೦ದನ್ನು ಆಯೋಜಿಸುತ್ತದೆ.ಪ್ರಾಣಿಗಳ ಮೇಲೆ ಮನುಷ್ಯನ ದೌರ್ಜನ್ಯ, ದಬ್ಬಾಳಿಕೆಗಳನ್ನು ಪರಿಪರಿಯಾಗಿ ವರ್ಣಿಸುತ್ತಾ,ತಮ್ಮ ಮೇಲಿನ ದೌರ್ಜನ್ಯಗಳು ಕೊನೆಗಾಣಬೇಕಾದರೇ ಸ್ವಾತ೦ತ್ರ್ಯವೊ೦ದೇ ದಾರಿ ಎ೦ದು ಸಾರುತ್ತಾ,’ಇ೦ಗ್ಲೆ೦ಡಿನ ಪಶುಗಳು’ ಎ೦ಬ ಕ್ರಾ೦ತಿಗೀತೆಯೊ೦ದನ್ನು ಹಾಡಿ ಪ್ರಾಣಿಗಳನ್ನು ಕ್ರಾ೦ತಿಯತ್ತ ಉತ್ತೇಜಿಸುತ್ತದೆ.ಉತ್ತೇಜಿತ ಪ್ರಾಣಿಗಳು ಒ೦ದು ಅನೀರಿಕ್ಷಿತ ಸ೦ದರ್ಭದಲ್ಲಿ ತೋಟದ ಮಾಲೀಕನ ಮೇಲೆ ತಿರುಗಿ ಬೀಳುವ ಮೂಲಕ,ಅವನನ್ನು ತೋಟದಿ೦ದ ಓಡಿಸಿ ಸ್ವಾತ೦ತ್ರ್ಯವನ್ನು ಪಡೆದುಕೊ೦ಡು ಬಿಡುತ್ತವೆ.ತೋಟದ ಹೆಸರನ್ನು ’ಪ್ರಾಣಿಗಳ ತೋಟ’ ಎ೦ದು ಬದಲಾಯಿಸುವ ಪ್ರಾಣಿಗಳ ನಾಯಕತ್ವವನ್ನು ’ಸ್ನೋಬಾಲ್’ ಮತ್ತು ’ನೆಪೋಲಿಯನ್’ ಎ೦ಬ ಎರಡು ಬುದ್ದಿವ೦ತ ಹ೦ದಿಗಳು ವಹಿಸಿಕೊಳ್ಳುತ್ತವೆ.ಸ್ನೋಬಾಲ್ ಪ್ರಾಣಿಗಳಿಗೆ ಓದು ಬರಹ ಹೇಳಿಕೊಡುವ ಜವಾಬ್ದಾರಿ ವಹಿಸಿಕೊ೦ಡರೇ,ನೆಪೋಲಿಯನ್ ಪಶುತ್ವದ ಮೂಲತತ್ವಗಳನ್ನು ಪ್ರಾಣಿಗಳಿಗೆ ಹೇಳಿಕೊಡಲಾರ೦ಭಿಸುತ್ತದೆ. ’ಎಲ್ಲ ಪ್ರಾಣಿಗಳೂ ಸಮಾನ’ ಎನ್ನುವ ಧ್ಯೇಯವಾಕ್ಯದಡಿ ಈ ಪ್ರಾಣಿ ಸಾಮ್ರಾಜ್ಯ ನಡೆಯುತ್ತಿರುತ್ತದೆ

ಮೊದಮೊದಲು ಎಲ್ಲವೂ ಸರಿಯಿರುತ್ತದಾದರೂ ಕೆಲಕಾಲದ ನ೦ತರ ಪ್ರಾಣಿಗಳ ನಾಯಕತ್ವದ ಗುರುತರ ಜವಾಬ್ದಾರಿ ತಮ್ಮ ಮೇಲಿರುವುದರಿ೦ದ ತಮ್ಮ ಆರೋಗ್ಯಕ್ಕೆ ಮುಖ್ಯವೆ೦ಬ ಕಾರಣಕ್ಕೆ ತೋಟದಲ್ಲಿ ಉತ್ಪತ್ತಿಯಾಗುವ ಹಾಲು ಮತ್ತೀತರ ಪೌಷ್ಠಿಕ ಆಹಾರಗಳನ್ನು ಪ್ರಾಣಿಗಳ ಮುಖ್ಯಸ್ಥರಾದ ಹ೦ದಿಗಳು ತಮಗಾಗಿ ಮಾತ್ರ ಮೀಸಲಿಡಲು ತೀರ್ಮಾನಿಸುತ್ತವೆ.ನಾಯಕರುಗಳಾದ ನೆಪೋಲಿಯನ್ ಮತ್ತು ಸ್ನೋಬಾಲ್ ನಡುವೆ ಭಿನ್ನಾಬಿಪ್ರಾಯದ ಕ೦ದಕವೇರ್ಪಡುತ್ತದೆ.ಪ್ರಾಣಿಗಳ ಏಳಿಗೆಗಾಗಿ ಗಾಳಿಗೋಪುರವೊ೦ದನ್ನು ನಿರ್ಮಿಸಬೇಕೆ೦ಬ ತನ್ನ ಯೋಜನೆಯನ್ನು ಸ್ನೋಬಾಲ್ ವಿವರಿಸಿದಾಗ,ನೆಪೋಲಿಯನ್ ಸ್ನೋಬಾಲ್ ನನ್ನು ತಾನು ಸಾಕಿದ ಗುಪ್ತ ನಾಯಿಗಳ ಸಹಾಯದಿ೦ದ ಬೆದರಿಸಿ, ತೋಟದಿ೦ದ ಓಡಿಸಿ ತೋಟಕ್ಕೆ ತಾನು ಏಕೈಕ ನಾಯಕನಾಗುತ್ತದೆ.

ಮತ್ತಷ್ಟು ಓದು »

6
ಜನ

ಬೆನ್ನಿ ಹಿನ್ ಕಂಡರೆ ಪ್ರಗತಿಪರರಿಗೇಕೆ ಅಷ್ಟೊಂದು ಭಯ!?

– ನರೇಂದ್ರ ಕುಮಾರ್ ಎಸ್.ಎಸ್

ಬೆನ್ನಿ ಹಿನ್ಬೆನ್ನಿ ಹಿನ್ ಮತ್ತೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. 2005ರಲ್ಲಿ ಬೆನ್ನಿ ಹಿನ್ ಬೆಂಗಳೂರಿಗೆ ಆಗಮಿಸಿದ್ದಾಗ ಬಹಳ ವಿರೋಧ ವ್ಯಕ್ತವಾಗಿತ್ತು. ಆದರೆ, ರಾಜ್ಯ ಸರಕಾರದ ಸಹಕಾರದಿಂದಾಗಿ, ಆತನ “ಕಣ್ ಕಟ್ ಪ್ರದರ್ಶನ ಮತ್ತು ಮತಾಂತರ” ನಿರಾತಂಕವಾಗಿ ನಡೆಯಿತು. ಆ ನಂತರ ಆನೇಕ ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಿಂದ ಹೊರಗುಳಿಯಬೇಕಾಯಿತು (ಆತನ ಕಣ್ ಕಟ್ನ ಪ್ರಭಾವವೂ ಇರಬಹುದೇ?). ಇದೀಗ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಮತ್ತು ಕೂಡಲೇ “ಬೆನ್ನಿ ಹಿನ್ ಅವರ ಕಣ್ ಕಟ್ ಕಾರ್ಯಕ್ರಮ” ಆಯೋಜಿತವಾಗಿದೆ! ಇದು ಕೇವಲ ಕಾಕತಾಳೀಯವಿರಲಾರದು ಅಲ್ಲವೇ!?

ಬೆನ್ನಿ ಹಿನ್ ಇಸ್ರೇಲಿನ ಜೆರೂಸೆಲಂನಲ್ಲಿ ಜನಿಸಿ, ಮುಂದೆ ಅಮೆರಿಕದ ಪ್ರಜೆಯಾದರು. ಅವರೊಬ್ಬ ಕ್ರೈಸ್ತ ಮತ ಪ್ರಚಾರಕ. ಅವರು ಹೋದಲ್ಲೆಲ್ಲಾ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಾರೆ. ತನ್ನ ಸಭೆಗಳಲ್ಲಿ ಹಾಜರಿದ್ದು, ತನ್ನೊಡನೆ ಪ್ರಾರ್ಥನೆ ಮಾಡಿದವರಿಗೆ ಮತ್ತು ತನ್ನನ್ನು ಸ್ಪರ್ಶಿಸಿದವರಿಗೆ ಯಾವುದೇ ರೋಗವಿದ್ದರೂ ಗುಣವಾಗುತ್ತದೆ, ಎಂದು ಅವರು ಹೇಳಿಕೊಳ್ಳುತ್ತಾರೆ. “ಕ್ಯಾನ್ಸರ್/ ಏಡ್ಸ್ ನಂತಹ ಕಾಯಿಲೆಗಳನ್ನೂ ಕೇವಲ ಸ್ಪರ್ಶದ ಮೂಲಕವೇ ವಾಸಿ ಮಾಡುತ್ತೇನೆ” ಎಂದು ಹೇಳಿ ಜನರನ್ನು ಯಾಮಾರಿಸಲು ಪ್ರಯತ್ನಿಸುತ್ತಾರೆ! 3 ರಿಂದ 5 ದಿನಗಳ ಕಾಲ ನಡೆಯುವ ಇವರ ಕಾರ್ಯಕ್ರಮಗಳಲ್ಲಿ, ಕೊನೆಯ ದಿನಗಳು ಹತ್ತಿರ ಬಂದಂತೆ, ವೇದಿಕೆಯ ಮೇಲೆ ನಡೆಯುವ ನಾಟಕವೂ ಹೆಚ್ಚುತ್ತದೆ. ಇದ್ದಕ್ಕಿದ್ದಂತೆ ಮೈಮೇಲೆ ಏನೋ ಬಂದಂತೆ, ಕಣ್ಣೀರು ಸುರಿಸುತ್ತಾ ಕೆಲವರು ನುಗ್ಗುತ್ತಾರೆ. ತಮಗೆ ಯಾವುದೇ ಔಷಧದಿಂದಲೂ ಗುಣವಾಗದ ಖಾಯಿಲೆಯಿತ್ತು ಮತ್ತು ಇಲ್ಲಿ ಪ್ರಾರ್ಥಿಸಿದ ನಂತರ ಖಾಯಿಲೆ ವಾಸಿಯಾಗಿಬಿಟ್ಟಿತು; ಬೆನ್ನಿ ಹಿನ್ ಅವರೇ ಪ್ರತ್ಯಕ್ಷ ದೇವರು; ಎಂದೆಲ್ಲಾ ಕುಣಿದಾಡುತ್ತಾರೆ. ಇದೆಲ್ಲಾ ಪೂರ್ವನಿಯೋಜಿತ ನಾಟಕ ಎಂಬುದು ಹಲವು ಬಾರಿ ನಿರೂಪಿತವಾಗಿದ್ದರೂ, ಮುಂದಿನ ಬಾರಿಯೂ ಇದೇ ರೀತಿಯ ನಾಟಕ ಇದ್ದೇ ಇರುತ್ತದೆ. ಈ ರೀತಿಯ ನಾಟಕ ನಡೆಯದಿದ್ದರೆ, ಇವರ ಸಭೆಗೆ ಜನರೇ ಬರುವುದಿಲ್ಲವಲ್ಲ; ಹೀಗಾಗಿ ನಾಟಕ ನಿಲ್ಲಿಸುವಂತಿಲ್ಲ!

ಮತ್ತಷ್ಟು ಓದು »