ವಿಷಯದ ವಿವರಗಳಿಗೆ ದಾಟಿರಿ

Posts from the ‘ಸಂಸ್ಕೃತಿ’ Category

14
ಡಿಸೆ

ಮೆಸೇಜೆಂಬ ಅಂಚೆ

-ಪ್ರಶಸ್ತಿ.ಪಿ

ನಮ್ಮ ಗುಂಡಣ್ಣ ಏನೋ ಬರೀತ ಕುತ್ಕಂಡಿದ್ದಾಗ ಅವ್ನ ಗೆಳೆಯರೆಲ್ಲ ಒಬ್ಬೊಬ್ರಾಗಿ ಅಲ್ಲಿ ಬಂದು ಸೇರ್ಕಂಡ್ರು. ಅವ್ನ ಬರೆಯೋ ಪ್ಯಾಡೂ ಕಸ್ಕಂಡು ಅದ್ರ ತಲೆಬರಹ ಓದಿದ ಟಾಂಗ್ ತಿಪ್ಪ ಅಲಿಯಾಸ ತಿಪ್ಪೇಶಿ.. “ಮೆಸೇಜೆಂಬ ಅಂಚೆ” .. ಎಂತ ಮಾರಾಯ ಪಂಚೆ ಅಂದ್ಯ? ಅದು ನನ್ನ ಮೆಚ್ಚಿನ ಉಡುಪು ಗುತ್ತುಂಟಾ ಅಂತ ಬಂದ ಮಂಗಳೂರು ಮಂಜ ಅಲಿಯಾಸ್ ಮಂಜುನಾಥ. ಪಂಚೆ ಅಲ್ಲ ಮುಂಜು ಅವ್ರೆ ಅಂಚೆ.. ಪೋಸ್ಟು ಅಲ್ವಾ ಮಿಸ್ಟರ್ ರೌಂಡ್ ಅಂತ ಬಂದ್ಳು ಇಳಾ ಅಲಿಯಾಸ್ ಇಳಾದೇವಿ. ಸಂದೇಶ ಹಾಕದು ಜಂಗಮದಾಗೆ, ಅಂಚೆ ಹಾಕದು ಡಬ್ದಾಗೆ. ಅದುಕ್ಕೂ ಇದುಕ್ಕೂ ಎಂತ ಸಂಬಂಧ ಗುಂಡು ಅಂದ್ಲು ಸರಿತಾ. ಹೌದು ಕಣ್ಲಾ, ಏನೂ ತಿಳ್ಯಾಕಿಲ್ಲ, ನೀನೇ ಬುಡ್ಸಿ ಹೇಳಪಾ ಸಾಯಿತಿ ಅಂತ ಕಾಲೆಳೆದ ತಿಪ್ಪೇಶಿ.

ಏ ಥೋ, ಸಾಯಿತಿ ಅಲ್ಲೋ , ಸಾಹಿತಿ.. “ಕೋಣಂಗೆ ಕಿನ್ನರಿ ನಾದನೇ ತಿಳ್ಯಕ್ಕಿಲ್ಲ” ಅಂತ ಹಾಡಕ್ಕೆ ಶುರು ಹಚ್ಕಂಡ ಗುಂಡ..ಎಲ್ಲಾ ನಗಕಿಡಿದ್ರು.  ಕದ್ದಿರೋ ಟ್ಯೂನಿಗೆ ಗೊತ್ತಿರೋ ಗಾದೆ ಸೇರ್ಸಿ ಹೊಸ್ಯೋ ಬದ್ಲು ನೀನು ಬರ್ದಿದ್ದಲಿ ಹೊಸದೇನಿದೆ ಹೇಳು ಅಂದ ತಿಪ್ಪ ಸ್ವಲ್ಪ ಬೇಜಾರಾಗಿ. ಮುಂಚೆ ಎಲ್ಲ ಅಂಚೆ ಕಳಿಸ್ತಿದ್ವಿ, ಈಗ ಮೆಸೇಜು ಅಷ್ಟೆಯ ಬೇರೆಲ್ಲಾ ಅಲ್ಲಿದ್ದಿದ್ದೇ ಇಲ್ಲಿ, ಇಲ್ಲಿದ್ದದ್ದೇ ಅಲ್ಲಿ ಅಂದ ಗುಂಡ. ಮಾರ್ರೆ ವೇದಾಂತ ತರ ಹೇಳೋದು ಬಿಟ್ಟು ಸ್ವಲ್ಪ ಬಿಡ್ಸಿ ಹೇಳೂಕಾತ್ತ ? ಅಂದ ಮಂಜ. ಸರಿತಾ, ಇಳಾನೂ ಅದೇ ಸರಿ ಅನ್ನೋ ತರ ಹೂಂ ಅಂದ್ರು..

ವಿಳಾಸ ಸರಿ ಇದ್ರೂ ಅಂಚೆ ಕಳ್ಸಿದ್ದು ಕಳ್ದೇ ಹೋಗ್ತಿತ್ತು ಕೆಲೋ ಸಲ.ಅದೇ ತರ ಸಂದೇಶಗಳ “ಕಳಿಸುವಿಕೆ ವಿಫಲ” ಎಂಬ Delivery Report ಉ ಅಂದ ಗುಂಡ. ಎಲ್ಲರಿಗೂ ಒಂದ್ಸಲ ಕತ್ಲಲ್ಲಿ ಬಲ್ಬು ಹತ್ಕಂಡಗಾಯ್ತು. ಗುಂಡನ ಮುಖದಲ್ಲಿ ಈಗ ನಗು ಮೂಡಿತು.. ಮುಂದುವರ್ಸಿದ ಹಾಗೆ.

ಮತ್ತಷ್ಟು ಓದು »

13
ಡಿಸೆ

ಈ ‘ದಿನಾಚರಣೆ’ಗಳು ಲೇಖನ, ರಾಲಿಗಳಿಗೆ ಮಾತ್ರ ಸೀಮಿತ ಯಾಕೆ?

-ರಶ್ಮಿ. ಕಾಸರಗೋಡು

2011 ಕ್ಯಾಲೆಂಡರ್ ವರ್ಷ ಮುಗಿಯುತ್ತಾ ಬಂದಿದೆ. ಹಳೆಯ ಕ್ಯಾಲೆಂಡರ್್ನ್ನು ಬದಲಿಸಿ ಹೊಸ ಕ್ಯಾಲೆಂಡರ್್ಗೆ ಜಾಗ ಕಲ್ಪಿಸುವ ಹೊಸ ವರ್ಷಕ್ಕೆ ದಿನ ಎಣಿಕೆ ಆರಂಭವಾಗಿದೆ. ಹೌದು, ಮನೆಯಲ್ಲಿ ಹೊಸ ಕ್ಯಾಲೆಂಡರ್ ನೇತು ಹಾಕುವಾಗ “ವರ್ಷ ಎಷ್ಟು ಬೇಗ ಕಳೆದು ಹೋಯಿತಲ್ವಾ..ಗೊತ್ತೇ ಆಗಿಲ್ಲ” ಎಂಬ ಉದ್ಗಾರ ಸರ್ವೇ ಸಾಮಾನ್ಯ. ನಾವು ಚಿಕ್ಕವರಿರುವಾಗ ಅಂದ್ರೆ ಶಾಲೆಗೆ ಹೋಗುವ ಸಮಯದಲ್ಲಿ ಮನೆಗೆ ಹೊಸ ಕ್ಯಾಲೆಂಡರ್ ತಂದ ಕೂಡಲೇ ಅದರಲ್ಲಿನ ಕೆಂಪು ಬಣ್ಣದ ದಿನಾಂಕ ಎಷ್ಟು ಇದೆ ಅಂತಾ ಲೆಕ್ಕ ಹಾಕುತ್ತಿದ್ದೆವು. ಶಾಲೆಗೆ ಎಷ್ಟು ದಿನ ರಜೆ ಸಿಗುತ್ತೆ? ಎಂಹ ಕುತೂಹಲ ನಮ್ಮಲ್ಲಿ. ಕೆಲವೊಮ್ಮೆ ಸಾರ್ವಜನಿಕ ರಜಾದಿನಗಳು ಶನಿವಾರ, ಭಾನುವಾರ ಬಂದರೆ ಒಂದು ರಜೆ ನಷ್ಟವಾಯಿತಲ್ಲಾ ಅಂತಾ ಬೇಸರವೂ ಆಗುತ್ತಿತ್ತು. ಹಾಗಂತ ಕ್ಯಾಲೆಂಡರ್್ನಲ್ಲಿ ರಜೆ ಇರುವ ದಿನಗಳು ಸೇರಿ ಇನ್ನೂ ಹೆಚ್ಚಿನ ರಜೆಗಳು (ಕೇರಳದಲ್ಲಿ ಬಂದ್ ಸರ್ವೇ ಸಾಮಾನ್ಯ ಇಂತಿರುವಾಗ ಅಲ್ಲೂ ಒಂದೆರಡು ರಜೆ, ಅದರೆಡೆಯಲ್ಲಿ ಭಾರೀ ಮಳೆ, ಯಾವುದಾದರೂ ಮಹಾನ್ ವ್ಯಕ್ತಿಗಳು ಸಾವನ್ನಪ್ಪಿದರೆ ಸಿಗುವ ಶೋಕ ರಜೆ, ಓಣಂ, ಕ್ರಿಸ್್ಮಸ್ ಮೊದಲಾದ ಹಬ್ಬಗಳಿಗೆ ಸಿಗುವ 10 ದಿನಗಳ ರಜೆ) ಸಿಕ್ಕಿದರೂ ಶಾಲಾ ದಿನಗಳಲ್ಲಿ ಅದೂ ಕಮ್ಮಿಯೇ.

ಮತ್ತಷ್ಟು ಓದು »

13
ಡಿಸೆ

ದೇವರು, ಧರ್ಮ ಮತ್ತು ಮತ

–  ಗೋವಿಂದ ರಾವ್ ವಿ ಅಡಮನೆ

ನಿಮಗೆ ದೇವರ ಅಸ್ತಿತ್ವದಲ್ಲಿ ನಂಬಿಕೆ ಇದೆಯೇ? ಎಂಬ ಬ್ಲಾಗಿನಲ್ಲಿ ನನ್ನ ದೃಷ್ಟಿಯಲ್ಲಿ ದೇವರು ಎಂದರೇನು ಎಂಬುದನ್ನು ವಿವರಿಸುತ್ತಾ – ನಾನು ನಂಬಿರುವ ‘ವಿಚಿತ್ರತೆ’ ದೇವರು ಬೇಕಾಬಿಟ್ಟಿಯಾಗಿ ಕಾರ್ಯಮಾಡುವಂತಿಲ್ಲ. ಅರ್ಥಾತ್, ಅದು ‘ಸರ್ವಶಕ್ತ’ವಲ್ಲ. ಎಂದೇ, ಅದನ್ನು ಓಲೈಸಲೂ ಸಾಧ್ಯವಿಲ್ಲ. ಅದು ಕರುಣಾಮಯಿಯೂ ಅಲ್ಲ, ನಿರ್ದಯಿಯೂ ಅಲ್ಲ. ಅರ್ಥಾತ್, ಜೀವಿಸಹಜವಾದ ಸಂವೇದನೆಗಳೇ ಆಗಲಿ, ಭಾವೋದ್ವೇಗಳೇ ಆಗಲಿ, ಜನನ-ಮರಣಗಳೇ ಆಗಲಿ ಇಲ್ಲದಿರುವ ಸ್ಥಿತಿ ಈ ‘ವಿಚಿತ್ರತೆ’. ಎಂದೇ, ಅದು ನಿರ್ವಿಕಾರ. ವಿಶ್ವದಲ್ಲಿ ಜರಗುವ ಪ್ರತಿಯೊಂದು ವಿದ್ಯಮಾನವೂ ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿದ್ದ ಮೂಲ ನಿಯಮದ ಮತ್ತು ಅದರ ಅನುನಿಯಮಗಳಿಗೆ ಅನುಗುಣವಾಗಿಯೇ ಜರಗುತ್ತದೆ ಎಂಬುದು ನನ್ನ ನಂಬಿಕೆ ಎಂದು ಈಗಾಗಲೇ ಘೋಷಿಸಿದ್ದೇನೆ. ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿರುವ ಮೂಲ ಮತ್ತು ಅನುನಿಯಮಗಳನ್ನು ತಿಳಿದು ಅವಕ್ಕೆ ಅನುಗುಣವಾಗಿ ವರ್ತಿಸುವುದೇ ‘ಧರ್ಮ’ ಎಂಬುದು ನನ್ನ ನಿಲುವು – ಎಂದು ಹೇಳಿದ್ದೆ. ಈ ಬ್ಲಾಗಿನಲ್ಲಿ ಅದೇ ವಿಚಾರಧಾರೆಯನ್ನು ಮುಂದುವರಿಸುತ್ತಾ ನನ್ನ ದೃಷ್ಟಿಯಲ್ಲಿ ಧರ್ಮ ಎಂದರೇನು ಎಂಬುದನ್ನು ತಿಳಿಸಲು ಪ್ರಯತ್ನಿಸುತ್ತೇನೆ. ಮೇಲ್ನೋಟಕ್ಕೆ ಸರಳವಾಗಿ ಗೋಚರಿಸುವ – ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿರುವ ಮೂಲ ಮತ್ತು ಅನುನಿಯಮಗಳನ್ನು ತಿಳಿದು ಅವಕ್ಕೆ ಅನುಗುಣವಾಗಿ ವರ್ತಿಸುವುದೇ ‘ಧರ್ಮ’- ಎಂಬ ವ್ಯಾಖ್ಯಾನ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೂಲ ಮತ್ತು ಅನುನಿಯಮಗಳೇನು ಎಂಬುದನ್ನು ತಿಳಿಸುವುದಿಲ್ಲ. ಬಹುಶಃ ಎಲ್ಲರೂ ಒಪ್ಪುವ ರೀತಿಯಲ್ಲಿ ಇವನ್ನು ತಿಳಿಸುವ ಸಾಮರ್ಥ್ಯ ಯಾರಿಗೂ ಇಲ್ಲವೋ ಏನೋ. ಎಂದೇ, ಈ ದಿಶೆಯಲ್ಲಿ ಪ್ರಯತ್ನಿಸಿದವರ ಪೈಕಿ ಯಾರಿಗೂ ಸರ್ವಮಾನ್ಯತೆ ದೊರೆತಿಲ್ಲ. ದೊರೆತಿದ್ದಿದ್ದರೆ ಇಂದು ನಮಗೆ ಗೋಚರಿಸುತ್ತಿರುವ ‘ಧರ್ಮಯುದ್ಧ’ಗಳು ನಡೆಯುತ್ತಲೇ ಇರಲಿಲ್ಲ, ‘ಮತಾಂತರ’ದ ಪ್ರಶ್ನೆ ಉದ್ಭವಿಸುತ್ತಲೇ ಇರಲಿಲ್ಲ.

ಮತ್ತಷ್ಟು ಓದು »

12
ಡಿಸೆ

ಮಡೆಸ್ನಾನ ನಿಲ್ಲಬೇಕಾಗಿರುವುದು ಮಾನವೀಯತೆಗಾಗಿ,ಜಾತಿಗಾಗಿಯಲ್ಲ

– ರಾಕೇಶ್ ಶೆಟ್ಟಿ

ಇದನ್ನ ಈ ದೇಶದ ಕರ್ಮ ಅಂತಲೇ ಅನ್ನಬೇಕೇನೋ,  ಅಂದುಕೊಂಡಂತೆ ‘ಮಡೆ ಸ್ನಾನ’ದ ‘ಮಡೆ'(ಮಡೆ=ಎಂಜಲು) ಉರುಳದವರ ಮೇಲೆಯೂ ಬೀಳುತ್ತಿದೆ.ಇಷ್ಟು ದಿನ ಉರುಳಾಡಿದ್ದು ಮನುಷ್ಯರಾದರೆ ಈಗ ಸಮಸ್ತ ಜಾತಿಗಳು ಬಿದ್ದು ಉರುಳಾಡುತ್ತಿವೆ.ಮಡೆ ಸ್ನಾನವನ್ನು ವಿರೋಧಿಸಿ ನಾನು ಈ ಹಿಂದೆ ಬರೆದ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ‘ಅದು ಬ್ರಾಹ್ಮಣರ ಎಂಜಲೆಲೆ’ ಅನ್ನುವ ಕಾರಣಕ್ಕೆ ವಿರೋಧಿಸುತಿದ್ದಿರ ಅನ್ನುವಂತಹ ಪ್ರತಿಕ್ರಿಯೆಗಳು ಬ್ಲಾಗಿನಲ್ಲಿ/ಮಿಂಚೆಗಳ ಮೂಲಕ ಬಂದಿವೆ. ನನ್ನ ಲೇಖನದಲ್ಲೂ ಒಂದು ಮಾತನ್ನು ಸ್ಪಷ್ಟವಾಗಿ ಹೇಳಿದ್ದೆ, ಅದ್ಯಾವ ಜಾತಿಯವರು ತಿಂದು ಮತ್ತಿನ್ಯಾವಾ  ಜಾತಿಯವ ಅದರ ಮೇಲೆ ಉರುಳಾಡುವುದು ಅಷ್ಟೇ ಅಸಹ್ಯಕರ’  ಅಂತ.

ಅಂದರೆ,ಅದು ಕುಕ್ಕೆಯ ಮಡೆ ಸ್ನಾನವಿರಲಿ ಅಥವಾ ತುರುವೇಕೆರೆಯ ಮಡೆಸ್ನಾನವಿರಲಿ ಎರಡೂ ಅಸಹ್ಯಕರವೇ, ಎರಡೂ ಖಂಡನೀಯವೇ.ಮಡೆ ಸ್ನಾನದ ಪರ-ವಿರೋಧ ಮಾತನಾಡುವವರು ನೆನಪಿಡಬೇಕಾದದ್ದು ‘ಈ ಮಡೆಸ್ನಾನ ನಿಲ್ಲಬೇಕಾಗಿರುವುದು ಮಾನವೀಯತೆಗಾಗಿ ಹೊರತು ಜಾತಿಗಾಗಿಯಲ್ಲ’ ಅನ್ನುವುದು.

ಮತ್ತಷ್ಟು ಓದು »

12
ಡಿಸೆ

ನಾವು ನಿಜಕ್ಕೂ ತಾಂತ್ರಿಕತೆಯನ್ನು ಬಳಸ್ತಾ ಇದೇವ?

-ಮುರಳಿಧರ ದೇವ್
ಬೆಂಗಳೂರನ್ನು ವಿಶ್ವದಾದ್ಯಂತ ತಾಂತ್ರಿಕತೆಯಲ್ಲಿ ಮುಂದಿರುವ ನಗರವೆಂದು ಗುರುತಿಸಲಾಗುತ್ತೆ, ಅಲ್ಲದೆ ಜಗತ್ತಿನ ಬಹುತೇಕ ಕಂಪನಿಗಳು ನಮ್ಮ ಬೆಂಗಳೂರಿನಲ್ಲಿ ಅವರ ಒಂದು ವಿಭಾಗ ಅಥವಾ ಬ್ರ್ಯಾಂಚ್ ಇರಬೇಕೆಂದು ಬಯಸುತ್ತವೆ. ಬಹುತೇಕ ಸಾಫ್ಟವೇರ್ ಅನ್ನು ಅಭಿವೃದ್ದಿ ಪಡಿಸೋದರಲ್ಲೂ ಬೆಂಗಳೂರಿಗರು ಮುಂದಿದ್ದಾರೆ. ಆದರೆ ನಮ್ಮದೇ ರಾಜ್ಯದಲ್ಲಿ ಈ ತಾಂತ್ರಿಕತೆಯನ್ನು ಉಪಯೋಗ ಪಡೆಯೋದರಲ್ಲಿ ತುಂಬಾ ಹಿಂದೆ ಉಳಿದಿದಿವಿ ಅಂತ ಅನ್ಸುತ್ತೆ. ಬೆಂಗಳೂರಿನ ಬಹುತೇಕ ಬಿ.ಎಂ.ಟಿ.ಸಿ. ಬಸ್ಸುಗಳಲ್ಲಿ ಕೆಲ ದಿನಗಳಿಂದ ಬಸ್ ನಂಬರ್, ಮಾರ್ಗ ಇತ್ಯಾದಿಗಳನ್ನು ತೋರಿಸಲು ಎಲ್.ಇ.ಡಿ. ಗಳನ್ನೂ ಬಳಸ್ತಾ ಇದಾರೆ. ಇದರಿಂದ ಕೇವಲ ಕೆಲ ನಿಮಿಷದಲ್ಲೇ ರೂಟನ್ನು ಚಾಲಕರು ಬದಲಾಯಿಸಬಹುದು. ಆದರೆ ಮಾರ್ಗ ಇತ್ಯಾದಿ ತೋರಿಸುವಾಗ ಹೆಚ್ಚಾಗಿ ಇಂಗ್ಲಿಷ್ ಕಾಣ್ತಾ ಇದೆ, ಹಾಗಂತ ಕನ್ನಡ ಇಲ್ಲ ಅಂತೇನು ಅಲ್ಲ, ಮಾಹಿತಿ ಇಂಗ್ಲಿಷ್ನಲ್ಲಿ ೫ ಸೆಕೆಂಡ್ಸ್ ಬಂದ್ರೆ ಕನ್ನಡದಲ್ಲಿ ಕೇವಲ ೨ಡೇ ಸೆಕಂಡ್ ಬರುತ್ತೆ. ಇದನ್ನು ಪ್ರಶ್ನಿಸೋಕೆ ಹೋದರೆ ತಾಂತ್ರಿಕತೆ ಇರೋದೇ ಹೀಗೆ ಅಂತ ಸಿದ್ದ ಉತ್ತರ ಸಿಗುತ್ತೆ. ಅಲ್ಲದೆ ಟಿಕೆಟನ್ನು ಮುದ್ರಿಸೋ ಯಂತ್ರದಿಂದ ಟಿಕೆಟ್ ಪಡೆದರೆ ಅದರಲ್ಲಿ ಬಿ.ಎಂ.ಟಿ.ಸಿ. ಅಂತ ಬಿಟ್ರೆ ಬೇರೆಲ್ಲೂ ಕನ್ನಡ ಅನ್ನೋ ಪದಾನೆ ಇಲ್ಲ. ಎಲ್ಲಿಂದ, ಎಲ್ಲಿಗೆ, ಮಾರ್ಗ ಯಾವುದು ಎಲ್ಲ ಇಂಗ್ಲಿಷ್ನಲ್ಲೇ ಇರುತ್ತದೆ. ಇದಕ್ಕೂ ಅದೇ ಸಿದ್ದ ತಾಂತ್ರಿಕತೆಯ ಕಾರಣ ಕೊಡ್ತಾರೆ ಅಧಿಕಾರಿಗಳು. ಅಥವಾ ಕನ್ನಡದಲ್ಲಿ ಟಿಕೆಟ್ ಮುದ್ರಿಸೋಕೆ ಟಿಕೆಟ್ನಲ್ಲಿ ಸ್ಥಳದ ಅಭಾವ ಅಂತ ಹೇಳ್ತಾರೆ. ನಿಜಕ್ಕೂ ತಾಂತ್ರಿಕತೆಯಲ್ಲಿ ಇದು ಸಾಧ್ಯವಿಲ್ಲ ಅಂತ ನಂಬೋಣ ಅಂದ್ರೆ ಬೇರೆ ರಾಜ್ಯಗಳಲ್ಲಿ ಈ ಪರಿಸ್ಥೀತಿಯಿಲ್ಲ. ಮತ್ತಷ್ಟು ಓದು »
9
ಡಿಸೆ

ಇಂತಹ ಘಟನೆ ಇನ್ಯಾವ ನಾಡಿನಲ್ಲಿ ನಡೆದೀತು.

– ಸಂತೋಷ್ ಪೂಜಾರಿ

ಸಾರ್ವಜನಿಕ ಕಾರ್ಯಕ್ರಮಲ್ಲಿ ಭಾಗವಹಿಸುವ ಆಸಕ್ತಿ ಅಷ್ಟಕಷ್ಟೆ.ತನಗೆ ಯಾರಾದರೂ ಸನ್ಮಾನ ಮಾಡಿದರೇ ಆ ಬಗ್ಗೆ ಅಸಮಧಾನ ವ್ಯಕ್ತಪಡಿಸುತ್ತಿದ್ದ ಭಾರತದ ಪ್ರಪ್ರಥಮ ಮಹಾ ದಂಡನಾಯಕನಾದ ಫೀಲ್ಡ್ ಮಾರ್ಶಲ್ ಕಾರ್ಯಪ್ಪನವರ ಪ್ರತಿಮೆಗೆ ದಿನಾಂಕ ೧೪/೧೧/೨೦೧೧ ರಂದು ಒದಗಿದ ಸ್ಥಿತಿಯಿಂದಾಗಿ ಭಾರತದ ಸೇನಾ ಜಿಲ್ಲೆಯ ವೀರ ಪರಂಪರೆಯ ಜನರು ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ.

 

ಕೊಡಂದೇರ ಮಾದಪ್ಪ  ಕಾರ್ಯಪ್ಪ ೨೮ ಜನರು ೧೮೯೯ ರಂದು ಕೊಡಗಿನ  ಶನಿವಾರ ಸಂತೆಯಲ್ಲಿ ಜನ್ಮತಾಳಿದ ಇವರು ತಮ್ಮ ಪ್ರಾಥಮಿಕ ಹಾಗೂ ಪ್ರೌಡ ವಿಧ್ಯಾಭ್ಯಾಸವು ಮಡಿಕೇರಿಯಲ್ಲಿ ಮುಗಿಸಿ ಕಾಲೇಜು ವಿಧ್ಯಾಭ್ಯಾಸವನ್ನು ಚೆನೈನಲ್ಲಿ ಮುಗಿಸಿತ್ತಾರೆ. ತಮ್ಮ ಕಾಲೇಜು ದಿನಗಳಲ್ಲಿ ಉತ್ತಮ ಕ್ರಿಢಾಪಟುವಾಗಿದ್ದ ಇವರು ಉತ್ತಮ ಹಾಕಿ ಮತ್ತು ಟೆನ್ನಿಸ್ ಆಟಗಾರರಾಗಿದ್ದರು. ನಂತರದಲ್ಲಿ  ಸೈನಿಕ ಸೇರಿದ ಈ ವೀರ ಸೇನಾನಿ ನಂತರ ತಮ್ಮ ಪ್ರಾಮಾಣಿಕತೆ ಶಿಸ್ತು ಹಾಗೂ ತನ್ನ ಕೆಲಸದಿಂದ ಭಾರತ ಮೊದಲ ಮಹಾ ದಂಡನಾಯಕರಾಗಿ ಕಾರ್ಯ ನಿರ್ವಯಿಸಿದ್ದಾರೆ.

ಎರಡನೆ ಪ್ರಪಂಚ ಯುದ್ದದಲ್ಲಿ ಪಾಲ್ಗೊಂಡಿದ್ದ ಎವರು ನಂತರ ೧೯೪೭ ರ ಭಾರತ ಮತ್ತು ಪಾಕಿಸ್ತಾನದ ಯುದ್ಧದಲ್ಲಿ ಭಾರತೀಯ ಸೈನ್ಯವನ್ನು ಮುಂದುವರೆಸಿದರು ಭಾರತದ ಸ್ವತಂತ್ರ ಬಂದ ನಂತರ ಅದರ ಬೆನ್ನ ಹಿಂದೆ ಇಡಿ ಭಾರತಕ್ಕೆ ಆಪತ್ತು ತಂದುಕೊಡುವ ನಮ್ಮ ಬೆನ್ನಿಗೆ ಚೂರಿ ಹಾಕಿದ ಪಾಕಿಸ್ತಾನದ ವಿರುದ್ದ ಯುದ್ದ ಮಾಡಬೇಕಾಯಿತು.ಸ್ವತಂತ್ರ ಭಾರತದ ಮಹಾ ಸೇನಾನಿಯಾದ ಕಾರ್ಯಪ್ಪನವರಿಗೆ ಸ್ವತಂತ್ರ ಬಂದ ತಕ್ಷಣ ಅದರ ಬೆನ್ನಲ್ಲೇ ಮತ್ತೊಂದು ಯುದ್ದವನ್ನು ಎದುರಿಸುವುದು ಮಹಾನ್ ಕಠಿಣ ಸವಾಲಾಗಿತ್ತು ಭಾರತದ ಸ್ವತಂತ್ರ ಆಗ ತಾನೆ ಸಿಕ್ಕ ಕಾರಣ ಸೈನಿಕರಲ್ಲಿ ಶಿಸ್ತು, ಯುದ್ದ ಸಲಕರಣೆಗಳ ಅಲಭ್ಯತೆ ಸೈನಿಕರ ದಕ್ಷತೆ ಇವೆಲ್ಲದರ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾಯಿತು. ಆದರೆ ಈಗಾಗಲೆ ಎರಡನೇ ಪ್ರಪಂಚ ಯುದ್ದದಲ್ಲಿ ಪಾಲ್ಗೊಂಡ ಅನುಭವವಿದ್ದ ಕಾರ್ಯಪ್ಪನವರಿಗೆ ಸೈನ್ಯವನ್ನು ಮುನ್ನೆಡೆಸುವುದು ಕಠಿಣವಾಗಲಿಲ್ಲ ಅವರು ಅದನ್ನು ಯಶಸ್ವಿಯಾಗಿ ನಿರ್ವಯಿಸಿದರು ಕೊಡ ಯಾವ ದೇಶ ನಮ್ಮ ಜೊತೆಗೆ ಯುದ್ದವನ್ನು ಮಾಡಿ ನಮ್ಮ ಸರ್ವನಾಶ ಮಾಡುವುದರ ಪಣ ತೊಟ್ಟಿತೊ, ಅದೇ ದೇಶ ಮತ್ತೆ ತನ್ನ ಪ್ರಾಣ ಭಿಕ್ಷೆಯನ್ನು ಬೇಡುವ ತರ ಕಾರ್ಯಪ್ಪನವರು ನಮ್ಮ ಹೋರಾಟಾವನ್ನು ಸಂಘಟಿಸಿದರು ಅದು ಅತ್ಯಂತ ಸಣ್ಣದಿನದ ಅಂತರದಲ್ಲಿ ಸುಲಭ ಜಯ ಸಾಧಿಸಿದರು ಭಾರತೀಯರಿಗೆ ಆ ವಿಜಯ ತಂದು ಕೊಟ್ಟಾ ಆತ್ಮ ವಿಶ್ವಾಸ ಇದೆಯಲ್ಲ ಅದು ವರ್ಣಿಸಲು ಸಾದ್ಯವಿಲ್ಲ ಆಲ್ಲಿಂದ ಮುಂದೆ ಭಾರತೀಯರು ಯಾವುದೇ ಯುದ್ದಕ್ಕೆ ಎದರಲಿಲ್ಲ. ಅದೇ ಭಾರಿ ಬೇರೆ ಬೇರೆ ದೇಶಗಳು  ನಮ್ಮ ಮೇಲೆ ಯುದಕ್ಕೆ ಬಂದರೂ ಮೊದಲ ಜಯದ ನೆನಪಿನೊಂದಿಗೆ ಇಂದು ನಮ್ಮ ಸೈನಿಕರು ಯುದ್ದಕ್ಕೆ ತೆರಳುತ್ತಾರೆ.ಅದಕ್ಕೆ ಕಾರಣಿಭೊತರಾಗಿದ್ದ ನಮ್ಮ ಕೊಡಗಿನ ಹೆಮ್ಮೆಯ ಕುಲಪುತ್ರ ಫೀಲ್ಡ್ ಮಾರ್ಶಲ್ ಕಾರ್ಯಪ್ಪ ಅವರು ಭಾರತೀಯ ಸೇನೆಗೆ ಮಾಡಿದ ಸೇವೆಯನ್ನು ಮನ್ಗಂಡು ೧೯೯೬ ರಲ್ಲಿ ಮಡಿಕೇರಿಯಲ್ಲಿ ಸುದರ್ಶನ ವೃತ್ತದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಲಾಯಿತು.

ಮತ್ತಷ್ಟು ಓದು »

9
ಡಿಸೆ

ಈ ದೌರ್ಜನ್ಯಗಳಿಗೆ ಕೊನೆ ಎಂದು?

-ವಿಜಯೇಂದ್ರ

ದನಗಳನ್ನು ಕ್ಯಾಂಟರ್‌ನಲ್ಲಿ ಸಾಗಿಸುತ್ತಿದ್ದಲೆನ್ನಲಾದ ಕೃಷ್ಣಪ್ಪ ಎಂಬ ದಲಿತನನ್ನು ಪ್ರಾಣಿ ದಯಾ ಸಂಘಕ್ಕೆ  ಸೇರಿದವರು ಎನ್ನಲಾದ ಹಲವರು ತಡೆದು ಹೊಡೆದು ಸಾವಿಗೀಡು ಮಾಡಿದರು ಎಂದು ಸುದ್ದಿ ಇತ್ತೀಚೆಗಷ್ಟೇ ಗ್ರಾಮೀಣ ಬೆಂಗಳೂರು ವಿಭಾಗದಿಂದ ವರದಿಯಾಗಿದೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಸ್ಥಳೀಯ ಪೊಲೀಸರು ಪ್ರಯತ್ನಿಸಿದ್ದು ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಸ್ವ್ವಾತಂತ್ರ್ಯ ಬಂದ ಆರು ದಶಕಗಳ ಅನಂತರವೂ ಭಾರತದಲ್ಲಿ ಒಂದು ವರ್ಗದ ಜನತೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಕ್ಷುಲ್ಲಕ ಕಾರಣಗಳಿಗಾಗಿ ಅವರ ಮೇಲೆ ಅತ್ಯಾಚಾರ, ಹಲ್ಲೆ, ಮಾನಭಂಗಗಳಂತಹ ಗಂಭೀರ ಅಫರಾದಗಳನ್ನು ಎಸಗಲಾಗುತ್ತಿದೆ.

೫೦೦೦ ವರ್ಷಗಳ ಕಾಲ ವರ್ಣಾಶ್ರಮ ಪದ್ದತಿಯನ್ನು ಭಾರತ ಅನುಸರಿಸಿಕೊಂಡು ಬಂದ ಫಲವಾಗಿ ಹುಟ್ಟಿಕೊಂಡ ಅಸ್ಪೃಶ್ಯ ಜಾತಿ ಮತ್ತು ವರ್ಗಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಗಿನ್ನೀಸ್ ಧಾಖಲೆಯನ್ನು ಮೀರಿಸುತ್ತದೆ ಎಂದರೆ ತಪ್ಪ್ಪಾಗಲಾರದು.

ಯಾವುದೇ ಧರ್ಮ ಜಾತಿ ಆಧರಿತ ತಾರತಮ್ಯ ಕಾನೂನು ಬಾಹಿರ ಎಂದು ಸಂವಿಧಾನದ ಕಲಂಗಳಲ್ಲಿ ಸಾರಿ ಹೇಳಿದರೂ ಸಮಾಜದ ಒಂದು ಪ್ರಮುಖ ಭಾಗದ ಜನರನ್ನು ನಾವು ನಿರ್ಲಕ್ಷಿಸಿದ್ದೇವೆ. ಅನುಚ್ಚೇದ ೧೭ ರಲ್ಲಿ ಅಸ್ಪೃಶ್ಯ ಆಚರಣೆ ನಿಷೇದವೆಂದು ಸ್ಪಷ್ಟಪಡಿಸಿದ್ದರೂ, ರಾಷ್ಟ್ರದ ಎಲ್ಲಾ ಕಡೆ ದಲಿತರ ಮೇಲೆ ಕೊಲೆ, ಅತ್ಯಾಚಾರ. ದೌರ್ಜನ್ಯ, ಬಹಿಷ್ಕಾರಗಳಂತಹ ಅನಿಷ್ಟ ಕ್ರೂರ ಪದ್ದತಿಗಳು ಮುಂದುವರಿದೇ ಇದೆ. ಮತ್ತಷ್ಟು ಓದು »

9
ಡಿಸೆ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 14- ಮೈಸೂರಿನವರ ಮನಸೆಳೆದ ಕಲೆ

ನಮ್ಮವನೇ ಆದ ನಾರಾಯಣನ ಮನೆಯಲ್ಲಿ ನಾನು, ಶ್ರೀ ಗೋಪಾಲಕೃಷ್ಣ ಭೇಟಿಯಾದೆವು. ವಿಷಯ ವಿವರ ಚರ್ಚಿಸಿಯಾಯಿತು. ಆದರೂ ಯಕ್ಷಗಾನದ ಪರಿಚಯವಿಲ್ಲದ ಮೈಸೂರು ನಗರಕ್ಕೆ ಮೇಳದ ಜನರನ್ನು ಕಟ್ಟಿಕೊಂಡು ಹೋಗುವುದೆಂದರೆ? ಎಂಬ ಸ್ವರವೆತ್ತಿದೆ. ಕೊನೆಗೆ ಹೇಸಿಗೆ ಕೆಲಸವೆಂದು ಆಗಬಾರದಲ್ಲ ಎಂದೆ.

“ಮೈಸೂರಿನವರು ಎಂದರೆ ಯುರೋಪಿನವರಲ್ಲ. ಅವರೂ ಕನ್ನಡಿಗರೇ. ನಿಮ್ಮ ಕಲೆಯ ಬಗ್ಗೆ ನಿಮಗೇ ಅಳುಕು ಇದೆ ಎಂದಾದರೆ ಪ್ರದರ್ಶನ ವಿಫಲವಾದೀತು. ವಿಶ್ವಾಸವಿದ್ದರೆ ಸಫಲಗೊಂಡೀತು. ಹೊರಡಿ” ಎಂದ. ನಮ್ಮ ಧರ್ಮಸ್ಥಳ ಮೇಳದಲ್ಲೇ ಮೊದಲು ಹಾಸ್ಯಗಾರನಾಗಿ ನನ್ನಿಂದಲೇ ತರಬೇತಿ ಪಡೆದು, ಆಗಲಷ್ಟೇ ಮೂಲ್ಕಿ ಮೇಳವನ್ನು ಆಡಳಿತಕ್ಕಾಗಿ ವಹಿಸಿಕೊಂಡಿದ್ದ ನಾರಾಯಣನೂ “ನಿಮ್ಮ ಜವಾಬ್ದಾರಿಯಲ್ಲಾದರೆ ಹೋಗೋಣ ಮಾವ. ವೇಷಭೂಷಣ ಸಾಮಗ್ರಿಗಳನ್ನು ಮೂಲ್ಕಿಯಿಂದ ಕೇಳಿ ತರಬಹುದು” ಎಂದು ತಿಳಿಸಿದ.

“ಸಂಭಾವನೆ ಎಷ್ಟು ಸಿಗುತ್ತದೆ?” ಎಂದು ಸಹಜವಾಗಿ ಪ್ರಶ್ನಿಸಿದೆ.

“ಬರಿಯ ನೂರು (ಒಂದು ನೂರು) ರೂಪಾಯಿಗಳು ಮಾತ್ರ. ನಿಮ್ಮ ವ್ಯಾನಿನ ಪೆಟ್ರೋಲ್ ಮತ್ತು ಎರಡು ದಿನದ ಕಾಫಿಯ ವೆಚ್ಚಕ್ಕೆ ಸಾಲಬಹುದಷ್ಟೆ. ಅಲ್ಲಿನ ಊಟ-ವಸತಿಗಳ ವೆಚ್ಚಕ್ಕಾಗಿ ಅಲ್ಲಿನ ಪರಿಚಿತರು ಕೆಲವರಿಂದ ವಂತಿಗೆ ಎತ್ತಿದ್ದೇನೆ” ಎಂದು ಹೇಳಿದ ಗೋಪಾಲಕೃಷ್ಣನನ್ನು ಏನೆಂದು ಕರೆಯಲೂ ಶಬ್ದ ಸಾಲದು ಎನ್ನಿಸಿತು.
ಮತ್ತಷ್ಟು ಓದು »

8
ಡಿಸೆ

ಗಾಂಧಿಬಂದ ವಿವಾದ : ಆತ್ಮಾವಲೋಕನೆಗೆ ಸುಸಂದರ್ಭ

-ಪ್ರವೀಣ್. ಟಿ. ಎಲ್

ನಾಗವೇಣಿಯವರ ‘ಗಾಂಧಿಬಂದ’ ಎಂಬ ಕಾದಂಬರಿಯ ಕುರಿತು ಬೇರೆ ಬೇರೆ ಪತ್ರಿಕೆಗಳಲ್ಲಿ ಇಂದು ವಿವಾದ ನಡೆಯುತ್ತಿದೆ. ಇದಕ್ಕೆ ರಾಜೇಂದ್ರ ಚೆನ್ನಿಯವರು 1-12-2011 ರಂದು ತಮ್ಮ ಪತ್ರಿಕೆಯಲ್ಲಿ   ಗಾಂಧಿ ಬಂದ’ ಕೃತಿಯ ನಿಷೇಧಕ್ಕೆ ಒತ್ತಾಯ ತರವಲ್ಲ ಎಂಬ ಶೀರ್ಷಿಕೆಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯದ ಹಿನ್ನೆಲೆಯಲ್ಲಿ ನನ್ನ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಅದು ‘ಜಾತಿ ಸಂಸ್ಥೆಗಳು’ ವಿಶ್ವವಿದ್ಯಾನಿಲಯಗಳ ಮೇಲೆ ತರುತ್ತಿರುವ ‘ಅನೈತಿಕ ಒತ್ತಡ’ವಾಗಿದ್ದು, ಅವುಗಳನ್ನು ‘ಲಕ್ಷ’ಕ್ಕೆ ತೆಗೆದುಕೊಳ್ಳಬಾರದೆಂಬ ವಾದವನ್ನು ಮುಂದಿಟ್ಟರು. ಹಾಗೂ ಅವರ ವಾದವು  ಮೇಲ್ನೋಟಕ್ಕೆ ಸಮಂಜಸವಾಗಿ ಕಾಣುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಇದು ಜಾತಿ ಸಂಸ್ಥೆಗಳ ರಾಜಕೀಯ ಎಂಬುದನ್ನು ಗುರುತಿಸಿದಾಗ ಈ ರಾಜಕೀಯದಲ್ಲಿ ಸಾಹಿತ್ಯವು ತಟಸ್ಥ ಪಕ್ಷವಾಗಿ ತನ್ನನ್ನು ಉಳಿಸಿಕೊಂಡಿದೆಯೆ? ಎಂಬ ಪ್ರಶ್ನೆ ಏಳುತ್ತದೆ.

ತಮಗೆ ಪಥ್ಯವಾಗದ ಯಾವುದೋ ವಿಚಾರವನ್ನು ಮಂಡಿಸಿದೆ ಎನ್ನುವ ಕಾರಣಕ್ಕಾಗಿ ಗ್ರಂಥಗಳನ್ನೇ ನಿಷೇಧಿಸಬೇಕೆಂಬ ಹಾಗೂ ಸಂಶೋಧನೆಗಳನ್ನೇ ನಿಲ್ಲಿಸಬೇಕೆಂದು ಒತ್ತಡ ತರುವ ಪೃವೃತ್ತಿಯು ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂಬುದು ವಿಷಾದಕರ  ಸಂಗತಿ ಹಾಗೂ ಖಂಡನೀಯ. ಇದು ನಮ್ಮ ಸಂಸ್ಕೃತಿಗೆ ತೀರ ಅಸಹಜವಾದ ಒಂದು ಬೆಳವಣಿಗೆ ಎಂಬುದರಲ್ಲಿ ಸಂದೇಹವಿಲ್ಲ. ಏಕೆಂದರೆ ಕೆಲವು ಜಾತಿಯ ಪಾತ್ರಗಳನ್ನು ಹಿಯ್ಯಾಳಿಸುವ, ವ್ಯಂಗ್ಯವಾಡುವ ಹಲವಾರು ಪ್ರದರ್ಶನ ಕಲೆಗಳು ಇಂದಿಗೂ ಯಾವ ‘ಜಾತಿಸಂಸ್ಥೆಗಳ’ ಕೆಂಗಣ್ಣಿಗೂ ಗುರಿಯಾಗದೇ ಮುಂದುವರೆದುಕೊಂಡು ಬರುತ್ತಿರುವುದನ್ನು ನಮ್ಮ ಸಮಾಜದಲ್ಲಿ ನೋಡಲು ಸಾಧ್ಯವಾಗುತ್ತಿದೆ. ಉದಾಹರಣೆಗೆ ಜಾನಪದೀಯ ಕಲೆಗಳಾದ, ‘ಯಕ್ಷಗಾನ’, ‘ತಾಳಮದ್ದಳೆ’, ‘ಶನಿಮಹಾತ್ಮನ ಆಟ’ ಇವುಗಳ ಸಂದರ್ಭದಲ್ಲಿ ಬ್ರಾಹ್ಮಣರಾದಿಯಾಗಿ ಎಷ್ಟೋ ಜಾತಿಗಳ ಪಾತ್ರಗಳನ್ನು(ಮಾಣಿಭಟ್ಟ, ಇತ್ಯಾದಿ) ಹಾಸ್ಯಕ್ಕೆ, ವಿಡಂಬಿಸುವುದಕ್ಕಾಗಿ ಸೃಷ್ಟಿಸಲಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಅದೇ ಜಾತಿಯ ಜನರು ಅಂತಹ ಪ್ರದರ್ಶನಗಳನ್ನು ನೋಡಿ ಸಂತೋಷವನ್ನು ಪಡುತ್ತಾರೆ, ಕಲಾವಿದನ ಪ್ರತಿಭೆಯನ್ನು ಮೆಚ್ಚಿ ಹೊಗಳುತ್ತಾರೆ. ಜೊತೆಗೆ ಅಂತಹ  ಪ್ರದರ್ಶನಗಳು ಪದೇ ಪದೇ ತಮ್ಮ ಊರುಗಳಲ್ಲಿ ನಡೆಯುವಂತೆ ಅಲ್ಲಿನ ಜನರು ಮತ್ತು ಈ ‘ಜಾತಿಸಂಸ್ಥೆಗಳೇ’ ನೋಡಿಕೊಳ್ಳುತ್ತವೆ. ಈ ಸಾಂಪ್ರದಯಿಕ ಕಲೆಯ ಸಂದರ್ಭದಲ್ಲಿ ಕಾಣದ ಪೃವೃತ್ತಿಯು ಆಧುನಿಕ ಸಾಹಿತ್ಯದ ಸಂದರ್ಭದಲ್ಲೇಕೆ ಹುಟ್ಟಿಕೊಳ್ಳಬೇಕು? ಆಧುನಿಕ ಸಾಹಿತ್ಯದ ಸಂದರ್ಭದಲ್ಲೂ ಕೂಡ ಚೆನ್ನಿಯವರು ಹೇಳುವಂತೆ ಈ ಪೃವೃತ್ತಿಯು ಜಾತಿ ರಾಜಕೀಯ ಸಂಸ್ಥೆಗಳಿಂದ ಪ್ರಚೋದಿತವಾದುದನ್ನೇ ಕಾಣುತ್ತೇವೆಯೇ ವಿನಃ ಸಾಮಾನ್ಯ ಓದುಗರಿಂದಲ್ಲ. ಹಾಗಾಗಿ ಈ ಪೃವೃತ್ತಿಗೂ ನಮ್ಮ ಸಾಂಪ್ರದಾಯಿಕ ಸಮಾಜಕ್ಕೂ ಸಂಬಂಧವಿಲ್ಲ ಎಂಬುದು ಸ್ಪಷ್ಟ. ಇದೊಂದು ಭಿನ್ನವಾದ  ಸಾಮಾಜಿಕ ವಾಸ್ತವದಲ್ಲಿ ಹುಟ್ಟಿಕೊಂಡ ಸಮಸ್ಯೆಯಾಗಿದೆ. ಮತ್ತಷ್ಟು ಓದು »

8
ಡಿಸೆ

ಸಂಸ್ಕೃತಿ ಸಂಕಥನ – ೧೩ ಬಾಲಗಂಗಾಧರರ ಸೂಕ್ಷ್ಮದರ್ಶಕದಲ್ಲಿ ಕೋಲಾರದ ಘಟನೆ

– ರಮಾನಂದ ಐನಕೈ

ಇತ್ತೀಚೆಗೆ ಕೋಲಾರದ ಭಗವದ್ಗೀತಾ ಅಭಿಯಾನದ ಸಂದರ್ಭದಲ್ಲಿ ಸ್ವರ್ಣವಲ್ಲೀ ಸ್ವಾಮೀಜಿಯವರಿಗೆ ಹಾಗೂ ಭಗವದ್ಗೀತೆಗೆ ಅವಮಾನ ಮಾಡಿದ ಘಟನೆಯ ಹಿಂದೆ ಅನೇಕ ತಪ್ಪು ತಿಳುವಳಿಕೆಗಳು ಕೆಲಸ ಮಾಡಿವೆ. ಮೇಲ್ನೋಟಕ್ಕೆ ನೋಡಿದರೆ ಇದೊಂದು ರಾಜಕೀಯ ಚದುರಂಗದಾಟ ಎಂಬುದು ಸ್ಪಷ್ಟ. ಹಿಂದೆ ಇದೇ ಭಗವದ್ಗೀತಾ ಅಭಿಯಾನ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಡೆದಿದೆ. ಕಳೆದ ವರ್ಷ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಇಲ್ಲೆಲ್ಲೂ ನಡೆಯದ ಭಯಂಕರ ವಿರೋಧ ಕೋಲಾರದಲ್ಲೇ ಏಕೆ ನಡೆಯಿತು? ಅದನ್ನು ಅರಿತುಕೊಳ್ಳುವ ಅಗತ್ಯ ಇದೆ.

ಕೋಲಾರದಲ್ಲಿ ಕಾರ್ಮಿಕ ವರ್ಗ ಪ್ರಬಲವಾಗಿದೆ. ಹಾಗಾಗಿ ಇಲ್ಲಿ ಕಮ್ಯುನಿಸ್ಟ್ ಪಾರ್ಟಿಯ ಪ್ರಾಬಲ್ಯ ಇದೆ. ಜೊತೆಗೆ ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕಿದ ಕೃಷ್ಣಪ್ಪ ಇದೇ ಜಿಲ್ಲೆಯವರು. ದಲಿತ ಹೋರಾಟವೂ ಈ ಜಿಲ್ಲೆಯಲ್ಲಿ ಹೆಚ್ಚು ಜೀವಂತವಾಗಿದೆ. ಈ ಕಾರಣಕ್ಕಾಗಿ ಅವರು ಭಗವದ್ಗೀತಾ ಅಭಿಯಾನವನ್ನು ಭಾರತೀಯ ಜನತಾ ಪಾರ್ಟಿಯ ಪ್ರೊಪಗಾಂಡಾ ಎಂಬಂತೆ ಗ್ರಹಿಸಿರುವ ಸಾಧ್ಯತೆ ಇದೆ. ಇಂದು ಭಾರತೀಯ ಸಮಾಜಶಾಸ್ತ್ರವನ್ನು ನಿರ್ಣಯಿಸುತ್ತಿರುವುದು ಇಂಥ ತಪ್ಪು ತಿಳುವಳಿಕೆಗಳೆ. ಭಗವದ್ಗೀತೆ ಅಂದರೆ ಬ್ರಾಹ್ಮಣರದ್ದು, ಮೇಲ್ವರ್ಗದ್ದು ಎಂಬ ನಂಬಿಕೆ ಇದೆ. ಇತ್ತೀಚೆಗೆ ಎಸ್.ಎಫ್.ಐ. ರಾಜ್ಯ ಉಪಾಧ್ಯಕ್ಷರ ಸಂದರ್ಶನದಲ್ಲೂ ಇದು ಸ್ಪಷ್ಟವಾಗಿದೆ. ಭಾಜಪಾ ಮೇಲ್ವರ್ಗದವರ ಪಕ್ಷ. ಹಾಗಾಗಿ ಭಗವದ್ಗೀತೆಯ ಪ್ರಚಾರದ ಮೂಲಕ ಪಕ್ಷ ಬಲಪಡಿಸುತ್ತಿದ್ದಾರೆಂಬ ತಿಳುವಳಿಕೆಯೂ ಇರಬಹುದು.

ಮತ್ತಷ್ಟು ಓದು »