ವಿಷಯದ ವಿವರಗಳಿಗೆ ದಾಟಿರಿ

Posts from the ‘ಸಂಸ್ಕೃತಿ’ Category

20
ಏಪ್ರಿಲ್

ಚನ್ನೆಮಣೆ..

– ಕಾಂತಿ ಹೆಗ್ಡೆ

ಖಾಲಿ ಮನೆ, ಒಂದು, ಎರಡು, ಮೂರು, ನಾಲ್ಕು. ಮತ್ತೆ ಖಾಲಿ ಮನೆ, ಒಂದು, ಎರಡು, ಮೂರು, ನಾಲ್ಕು… ಹೀಗೆ ಸಾಗುತ್ತದೆ ಚನ್ನೆಮನೆ ಆಟ. ಎರಡು ಆಟಗಾರರು, ಪ್ರತಿಯೊಬ್ಬರಿಗೂ ೭ ಮನೆಗಳು. ಪ್ರತೀ ಮನೆಗಳಲ್ಲೂ ೪ ಕಾಳುಗಳು. ಮೊದಲು ಆಟ ಶುರುಮಾಡಿದವ ತನ್ನ ೭ ಮನೆಗಳಲ್ಲಿ ಯಾವುದಾದರೊಂದು ಮನೆಯನ್ನು ಆಯ್ದುಕೊಂಡು ಅದರಲ್ಲಿರುವ ೪ ಕಾಳುಗಳನ್ನು ತನ್ನ ಹಾಗೂ ತನ್ನ ಸಹ ಆಟಗಾರನ ಮನೆಗಳಿಗೆ ಹಂಚುತ್ತಾ ಹೋಗಬೇಕು.

ಹೀಗೆ ಹಂಚುತ್ತಾ ಹೋಗುವಾಗ ಮತ್ತೆ ೪ ಕಾಳುಗಳು ಒಟ್ಟುಗೂಡಿದರೆ ಮನೆಯಲ್ಲಿ ಕರು ಹಾಕಿತೆಂದೂ, ಆ ಕರು ಮನೆಯ ಯಜಮಾನನ (ಆ ೭ ಮನೆಯ ಆಟಗಾರ ಮನೆ ಒಡೆಯ) ಸ್ವತ್ತೆಂದೂ, ಅವನು ಅದನ್ನು ತೆಗೆದಿರಿಸಿಕೊಳ್ಳುತ್ತಾನೆ. ಒಬ್ಬನ ಆಟ ಮುಗಿಯುವುದು ಆತನ ಕೈಯಲ್ಲಿರುವ ಕಾಳುಗಳು ಖಾಲಿಯಾಗಿ, ಮುಂದೆ ಕಾಳಿರದ ಬರಿಯ ಖಾಲಿ ಮನೆಗಳು ಸಿಕ್ಕಾಗ….
ಹೀಗೆ ಚದುರಿಸಿ ಹಂಚುವ, ಕೂಡಿಸುವ ಆಟದಲ್ಲಿ ಯಾರಾದರೊಬ್ಬರು ಗೆಲ್ಲುತಾರೆ(ಹೆಚ್ಹು ಕಾಳನ್ನು ಕೂಡಿ ಹಾಕಿದವನು).

ಬದಲಾಗುತ್ತಿರುವ ಕಾಲಘಟ್ಟದಲ್ಲಿ ಬಹುಷಃ ಈ ರೀತಿಯ ಆಟಗಳು ಕಣ್ಮರೆಯಾಗುತ್ತಿವೆ. ಮೊದಲೆಲ್ಲ ಬೇಸಿಗೆ ಬಂತೆಂದರೆ ಅಮ್ಮ “ಬಿಸ್ಲಲ್ಲಿ ಆಡಕ್ಕೆ ಹೋಗಡ, ಮನೆ ಒಳಗೆ ಕೂತ್ಗಂಡು ಎಂತಾರು ಆಡು” ಎಂದು ನನ್ನ ಆಡುವ ಬಯಕೆಗೆ ಕಡಿವಾಣ ಹಾಕುತ್ತಿದ್ದರು.

ಮತ್ತಷ್ಟು ಓದು »

19
ಏಪ್ರಿಲ್

ಹಸಿರುಕಾನನದ ಮಗಳೀಕೆ ಗೌರಾದೇವಿ…..

– ಚಿತ್ರ ಸಂತೋಷ್

ಉತ್ತರ ಖಾಂಡದ ರೇನಿ ಗ್ರಾಮದಲ್ಲಿ  ಮರಗಳನ್ನು ಕಡಿಯಲು ಬಂದ ಅಧಿಕಾರಿಗಳ ವಿರುದ್ಧ ಬಂಡೆದ್ದವಳು ಗೌರಾದೇವಿ. ಬುಡಕಟ್ಟು ಜನರಿಗೆ ದಟ್ಟಾರಣ್ಯಗಳೇ ತವರು. ಕಾಡಿಗೂ-ನಮಗೂ ಇರುವುದು ಅಮ್ಮ-ಮಕ್ಕಳ ಸಂಬಂಧ.ಬದುಕಿದರೆ ನಮಗೆ ಆಸರೆ ನೀಡಿದ ಈ ಹಸಿರು ಕಾಡುಗಳಿಗಾಗಿ ಬದುಕಿ …ಎಂದು ಹಳ್ಳಿ ಮನೆಗಳ ಜಗುಲಿಯಲ್ಲಿ ಕುಳಿತು ಜಾಗೃತಿಯ ಕಹಳೆ ವೊಳಗಿಸಿದವಳು ಇವಳೇ ಗೌರಾದೇವಿ. ದೇಶದ್ಯಾಂತ ಪರಿಸರ ಕ್ರಾಂತಿ ಮಾಡಿದ ಚಿಪ್ಕೋ ಚಳವಳಿನ್ನು ಹುಟ್ಟು ಹಾಕಿದ್ದೇ ಇವಳು. ಇಂಥ ಗೌರಾದೇವಿಯನ್ನು ಗೌರವದಿಂದ ನೆನೆಯುವ ಕೆಲಸವನ್ನು ನಾವು ಮಾಡಬೇಕಿದೆ.

“ಸಹೋದರರೇ  ಈ ಅರಣ್ಯ ಪ್ರದೇಶ ನಮ್ಮ ಜೀವಮೂಲ. ನಮ್ಮ ಹುಟ್ಟಿನಿಂದ ಸಾವಿನ ತನಕದ ಜೀವನ ಬಂಡಿಗೆ ಸಾಥ್ ನೀಡುವುದು ಇದೇ ಹಸಿರು ಕಾನನ. ಈ ‘ರಮೆಯೇ ನಮ್ಮಮ್ಮ. ನೀವು ನಿಮ್ಮ ಹರಿತವಾದ ಗರಗಸವನ್ನು ನಮ್ಮಮ್ಮನ ಕರುಳಿಗೆ ಇಡುವ ವೊದಲು ನನ್ನ ಎದೆಗೆ ಹಿಡಿ”

ಬಹುಶಃ ಚಿಪ್ಕೋ ಚಳವಳಿ ಹುಟ್ಟುವ ವೊದಲು ಓರ್ವ ಬುಡಕಟ್ಟು ಮಹಿಳೆ ಉತ್ತರ ಖಾಂಡದ ಆ ಬೃಹತ್ ಅರಣ್ಯದಲ್ಲಿ ಈ ರೀತಿ ಮರಗಳನ್ನು ತಬ್ಬಿಕೊಂಡು ಸರ್ಕಾರದ ಅಕಾರಿಗಳ ಎದುರು ಈ ರೀತಿ ಅಳಲು ತೋಡಿಕೊಂಡಿದ್ದು ಬಹಳಷ್ಟು ಜನರಿಗೆ ನೆನಪು ಇರಲಿಕ್ಕಿಲ್ಲ. ಚಿಪ್ಕೋ ಚಳವಳಿ ಕುರಿತು ಮಾತೆತ್ತಿದ್ದರೆ ತಕ್ಷಣಕ್ಕೆ ನೆನಪಿಗೆ ಬರುವುದು ಸುಂದರ್ ಲಾಲ್ ಬಹುಗುಣ ಎಂಬ ಮಹಾನ್ ವ್ಯಕ್ತಿ. ಆದರೆ, ಇವರಿಗಿಂತಲೂ ವೊದಲು ಅಲ್ಲಿ ಮಹಿಳೆಯೊಬ್ಬಳ ದನಿಯಿತ್ತು,  ದೇಶದಾದ್ಯಂತ ಬೃಹತ್ ಪರಿಸರ ಕ್ರಾಂತಿಗೆ ಮುನ್ನುಡಿಯಾದ ಆ ಚಳವಳಿಯ ಹಿಂದೆ ಅನಕ್ಷರಸ್ಥೆ ಮಹಿಳೆಯ ಶ್ರಮ ಇತ್ತು, ಕಣ್ಣೀರಿತ್ತು, ಜಾಗೃತಿಯ ಕಹಳೆಯಿತ್ತು.

ಅವಳ ಹೆಸರು ಗೌರಾದೇವಿ.

ಮತ್ತಷ್ಟು ಓದು »

16
ಏಪ್ರಿಲ್

ಗುಲ್ಬರ್ಗ ಜಿಲ್ಲೆ ಯಾವುದೇ ಕಲೆ/ಕಲಾವಿದರೂ ಇಲ್ಲದಂತಹಾ ಮರುಭೂಮಿಯೇ?

– ಅರುಣ್ ಜಾವಗಲ್

ಕಳೆದ ಕೆಲವು ದಿನಗಳಿಂದ ಕರ್ನಾಟಕ ಸರಕಾರ ಹಲವಾರು ಜಿಲ್ಲೆಗಳಲ್ಲಿ ಉತ್ಸವಗಳನ್ನ ನಡೆಸುತ್ತಿದೆ.ಈ ಕಾರ್ಯಕ್ರಮಗಳು ಕರ್ನಾಟಕದ ಜನರ ತೆರಿಗೆ ಹಣದಲ್ಲಿ ನಡೆಯುತ್ತವೆ. ಈ ಕಾರ್ಯಕ್ರಮಗಳಲ್ಲಿ ಮುಖ್ಯವಾಗಿ ಆಯಾ ಜಿಲ್ಲೆಯ ಮತ್ತು ನಮ್ಮ ನಾಡಿನ ಕಲಾವಿದರ ಕಾರ್ಯಕ್ರಮಗಳಿಗೆ ಅವಕಾಶವಿರಬೇಕು.ಆದರೆ ಆ ಪ್ರದೇಶದ ಮತ್ತು ನಮ್ಮ ನಾಡಿನ ಇತರೇ ಕಲಾವಿದರನ್ನ ಮರೆತಿರುವ ಸರಕಾರ ಹೊರ ರಾಜ್ಯದಿಂದ ಕಲಾವಿದರನ್ನ ಕರೆಸಿ ಉತ್ಸವಗಳನ್ನ ನಡೆಸುತ್ತಿದೆ.

ಕೆಲವು ದಿನಗಳ ಹಿಂದೆ ನಡೆದ ಬೀದರ್ ಉತ್ಸವದಲ್ಲಿ ಶೇಕಡಾ 90% ರಷ್ಟು ಕಾರ್ಯಕ್ರಮ ನಡೆಸಿಕೊಟ್ಟವರು ಬೀದರ್ ಜಿಲ್ಲೆಗಾಗಲೀ ಅಥವಾ ನಮ್ಮ ನಾಡಿಗೆ ಯಾವುದೇ  ಸಂಭಂದವಿಲ್ಲದವರು.ಇದೀಗ ಇದೇ ತಿಂಗಳ 15 ರಿಂದ 17 ರ ವರೆಗೆ ಕರ್ನಾಟಕ ಸರಕಾರ ಗುಲ್ಬರ್ಗ ಉತ್ಸವವನ್ನ ಆಯೋಜಿಸಿದೆ.ಯಾವುದೇ ಅನುಮಾನವಿಲ್ಲದಂತೆ ಈ ಕಾರ್ಯಕ್ರಮಕ್ಕೂ ಸಹ ಪರಭಾಷಿಕರಿಗೆ ಬಹುಪರಾಕ್ ಹೇಳಲಾಗಿದೆ.

ಮತ್ತಷ್ಟು ಓದು »

14
ಏಪ್ರಿಲ್

ಅಗೋಚರ….!

– ಜಿ.ವಿ ಜಯಶ್ರೀ

ಹೆಚ್ಚಾಗಿ ಪವಾಡಗಳು… ಪುರುಷರು… ಮಾಯಾ-ಮಂತ್ರ, ಭವಿಷ್ಯ ಮನುಷ್ಯರಿಗೆ ಇಷ್ಟ. ಯಾವ ಭಾಷೆಯಲ್ಲಿ ನೋಡಿದರು ಇಂತಹ ವಿಷಯಗಳಿಗೆ ಸಂಬಂಧಿಸಿದ ಕಥೆಗಳು , ಧಾರಾವಾಹಿಗಳು ಇದ್ದೆ ಇರುತ್ತದೆ. ಅದೊಂತರ ಸೀರಿಯಸ್ ವಿಷಯದ ಚರ್ಚೆ ಮಧ್ಯೆ ಸಣ್ಣ ಜಾಹಿರಾತು ಇದ್ದಂತೆ. ಬೇಕಾದವರು ನೋಡಬಹುದು ಬೇಡದೆ ಇದ್ದವರು ಬಿಸಾಡ ಬಹುದು.

ಹೆಚ್ಚು ಜನಪ್ರಿಯ ವ್ಯಕ್ತಿಗಳಲ್ಲಿ ಸಾಧು ಸಂತರು, ಬಾಬಗಳು ಸೇರುತ್ತಾರೆ. ಕಳೆದವಾರ ಅಣ್ಣ ಹಜಾರೆ ಅವರ ವಿಷಯದ ಜೊತೆಗೆ ಹೆಚ್ಚು ಚಾಲ್ತಿಯಲ್ಲಿ ಕಂಡ ಸಂಗತಿ ಪುಟ್ಟಪರ್ತಿ ಸಾಯಿ ಬಾಬ. ಅತ್ಯಂತ ಜನಪ್ರಿಯ ಬಾಬ ಅವರು, ಜೊತೆಗೆ ಅತ್ಯಂತ ವಿವಾದಿತ ಬಾಬ.

ಬಹುಸಂಖ್ಯಾತ ಉತ್ತರ ಭಾರತೀಯರು ಅವರ ಮನೆಯಲ್ಲಿ  ಇರುವ ಒಂದು ಚಂಬು ಪಕ್ಕದ ಮನೆಗೆ ಕೊಡಬೇಕಾದ್ರೂ ಸಾಯಿ ಬಾಬ ಅನುಮತಿ ಕೇಳ್ತಾರೆ ,ತಮಾಷೆ ಅಲ್ಲ ಕಣ್ರೀ ಅಷ್ಟೊಂದು ನಂಬಿಕೆ .ಏನೇ ಸಂಗತಿಗಳು ಇರಲಿ ಅವರು ಅತ್ಯಂತ ಹೆಚ್ಚು ಗಮನ ಸೆಳೆಯುವುದು ಸಮಾಜಮುಖಿ ಕೆಲಸಗಳಿಂದ.ಭಜನ್ ಮಾಡುವಾಗ ಸದಾ ಶಾಂತ ಸ್ಥಿತಿಯಲ್ಲಿರುವ ವದನ, ಆ ಮೌನ ಎಲ್ಲವೂ ಹೆಚ್ಚು ಆಕರ್ಷಣೆಯ  ಅಂಶ. ಅವರ ಭಜನ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರು ಸಂತೋಷದಿಂದ ಹೊರ ಬರುತ್ತಾರೆ.

ಮತ್ತಷ್ಟು ಓದು »

14
ಏಪ್ರಿಲ್

ಮೊದಲ ಬಾನಯಾನ : ಚಳಿಯಲ್ಲೂ ಬೆವೆತಿತ್ತು ಮನಸ್ಸು..!

– ಪ್ರಶಾಂತ್ ಯಳವಾರಮಠ

ನನ್ನ ಮುಂದಿನ ಪುಟ್ಟ ಸ್ಕ್ರೀನ್ ಮೇಲೆ ಚಲಿಸ್ತಾ ಇರೋ ವೇಗ ೭೫೦ ಮೈಲ್ಸ್/ಗಂಟೆಗೆ ಅಂತ ಮತ್ತು ಹೊರಗಡೆಯ ತಾಪಮಾನ -೬೩’ಸೆ ಅಂತ ತೋರಿಸ್ತಾ ಇದೆ !!! ನನ್ನ ಹೆಂಡತಿ ಹೇಳಿದಹಾಗೆ ಟೇಕ್ ಆಫ್ ಆಗುವಾಗ ಕಣ್ಣು ಮುಚ್ಚಿಕೊಂಡು ಕುಳಿತಿದ್ದ ನಾನು ಕಣ್ಬಿಟ್ಟಾಗ ಕಂಡ ಮಾಹಿತಿ ಇದು! ಏರ್ ಫ್ರಾನ್ಸ್ ವಿಮಾನದಲ್ಲಿ ಅದೂ ಮೊಟ್ಟಮೊದಲಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಾ ಇರೋ ನನ್ನ ಹುಚ್ಚು ಮನಸ್ಸಿನಲ್ಲಿ ಸಾವಿರಾರು ಕೆಟ್ಟ ಯೋಚನೆಗಳು ಬಂದು ಮನಸ್ಸು ತನ್ನಷ್ಟಕ್ಕೆ ತಾನೆ ಭಯಬೀತಗೊಂಡಿತ್ತು. ಇದರಿಂದ ಅತ್ತಿಂದಿತ್ತ ನೋಡುತ್ತಾ ಪಕ್ಕದಲ್ಲಿ ಯಾವುದೇ ಫೀಲಿಂಗ್ಸ್ ಗಳು ಇರದೇ ಕುಳಿತುಕೊಂಡಿರುವ ಅಜ್ಜಿಯೊಬ್ಬಳನ್ನು ನೋಡಿ ಧೈರ್ಯತಂದುಕೊಳ್ಳಲು ಪ್ರಯತ್ನಿಸಿದೆ, ನಾನು ಮೊದಲ ಬಾರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೇನೆ ಅದಕ್ಕೆ ಹೀಗೆಲ್ಲ ಅನಿಸುತ್ತಾ ಇದೆ ಅಂಥ ನನ್ನಷ್ಟಕ್ಕೆ ನಾನೆ ಗೊಂದಲಗಳಿಂದ ಕೂಡಿದ ಮನಸ್ಸಿಗೆ ಸಮಾಧಾನ ಹೇಳುತ್ತಾ ಇದ್ದೆ.

ಇವುಗಳ ಮದ್ದೆ ತಮ್ಮ ನಾಜೂಕಾದ ನಡಿಗೆಗಳಿಂದ ಮುಖದಲ್ಲಿ ತುಂಬು ಮುಗುಳ್ನಗೆಗಳನ್ನು ತುಂಬಿಕೊಂಡ ಗಗನಸಖಿಯರು ಅತ್ತಿಂದಿತ್ತ ಓಡಾಡ್ತಾ ಇದ್ದಾರೆ ಎಷ್ಟೋ ಜನ ಕೆಂಪು ಮುಖಗಳ ವಿದೇಶಿಯರು ತಮ್ಮ ಮಾತೃಭಾಷೆ ಫ್ರೆಂಚ್ ನಲ್ಲಿ ಮಾತಾಡುತ್ತ, ನಗುತ್ತಾ ನಿರ್ಭೀತರಾಗಿ ಹರಟುತ್ತಿದ್ದಾರೆ. ವಿಮಾನದಲ್ಲಿ ಆಗ್ತಾ ಇರೋ ಈ ಎಲ್ಲ ಆಗುಹೋಗುಗಳಿಂದ ನನಗು ಸ್ವಲ್ಪ ಸಮಾಧಾನವಾಗಿ ಮನಸ್ಸು ಹಗುರವಾಯಿತು.

ಮತ್ತಷ್ಟು ಓದು »

7
ಏಪ್ರಿಲ್

ರಾಜು ಪ್ರಿಯಾಂಕಳಾಗಿ ಬದಲಾದ ರೀತಿ…!

-ನಾಗರಾಜ್, ಬೆಂಗಳೂರು

ಆರ್. ಜೆ. ಪ್ರಿಯಾಂಕಳ ಸಾಧನೆ

ನಮಸ್ಕಾರ ಕೇಳುಗರೇ ನೀವು ಕೇಳ್ತಾ ಇದ್ದೀರಾ ೯೦.೪ ಕಂಪನಾಂಕಗಳಲ್ಲಿ ರೇಡಿಯೊ ಆಕ್ಟೀವ್. ಇದೇನಪ್ಪ ನ್ಯೂಸ್ ಲೆಟರ್‌ನಲ್ಲಿ ರೇಡಿಯೋ ಸ್ಟೈಲ್ ಅಂತಾ ಇದ್ದೀರಾ ಇಲ್ಲ ರೀ ಇದು ನಮ್ಮ ನಿಮ್ಮೆಲ್ಲರ ನೆಚ್ಚಿನ ಹುಡುಗಿ ರೇಡಿಯೋ ಜಾಕಿ ಪ್ರಿಯಾಂಕ ಸ್ಟೈಲ್. ಇದ್ಯಾರು ಪ್ರಿಯಾಂಕ ಅಂತ ಯೋಚಿಸ್ತಾ ಇದ್ದಿರಾ ? ಅವರೇ ರೀ ನೆನ್ನೆ ಮೊನ್ನೆ ತನಕ ಲೈಂಕಿಕ ವೃತ್ತಿಯನ್ನು ಮಾಡುತ್ತಿದ್ದ ಟ್ರಾನ್ಸ್ ಜೆಂಡರ್ ಪ್ರಿಯಾಂಕ.

ರಾಜು ಪ್ರಿಯಾಂಕಳಾಗಿ ಬದಲಾದ ರೀತಿ
ಪ್ರಿಯಾಂಕಳ ಮೊದಲ ಹೆಸರು ರಾಜು ಓದಿದ್ದು ೯ನೇ ತರಗತಿ ಮಾತ್ರ ತಾನು ೯ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡ್ತಾ ಇರುವಾಗ ಎಲ್ಲರಂತೆ ತನ್ನಲ್ಲಿ ಅನೇಕ ಬದಲಾವಣೆಗಳು ಆಗತೊಡಗಿದವು ತನಗೆ ಹುಡುಗಿಯ ಆವಭಾವ ಉಂಟಾಗುತ್ತಿತ್ತು. ಬೆರಳುಗಳಿಗೆ ನೈಲ್ ಪಾಲೀಷ್ ಹಾಕಿಕೊಳ್ಳುವುದು ಲಿಪ್‌ಸ್ಟೀಕ್ ಹಚ್ಚಿಕೊಳ್ಳಬೇಕು ಹೀಗೆ ಅನೇಕ ರೀತಿಯಾಗಿ ಹುಡುಗಿಯರ ಥರಾ ಮೇಕಪ್ ಮಾಡಿಕೊಳ್ಳತೊಡಗಿದ ಜೊತೆಗೆ ತನ್ನ ಕೈಲಿ ಹುಡುಗರು ಮಾಡುವ ಸಾಮಾನ್ಯ ಕೆಲಸಗಳನ್ನು ಮಾಡುವುದು ಕಷ್ಟವೆನಿಸಿತು. ಅದೇ ರಂಗೋಲಿ ಹಾಕು, ಪಾತ್ರೆ ತೊಳಿ, ಮನೆ ಒರೆಸು,  ಬಟ್ಟೆ ಒಗಿ ಅಂದ್ರೆ ಎಲ್ಲಿಲ್ಲದ ಸಂತೋಷ. ಹೀಗೆ ರಾಜುವಿನಲ್ಲಿನ ಬದಲಾವಣೆಗಳನ್ನು ಕಂಡ ಸ್ನೇಹಿತರು ಹಿಯಾಳಿಸತೊಡಗಿದರು, ಶಿಕ್ಷಕರು ಸಹ ಕೀಳಾಗಿ ಕಂಡರು ಅಂತೂ ಇಂತು ೯ನೇ ತರಗತಿಯಲ್ಲಿ ಓದುತ್ತಿದ್ದ ರಾಜು ತನ್ನ ಪೋಷಕರ ಬಳಿ ತನ್ನಲ್ಲಾಗುತ್ತಿರುವ ಬದಲಾವಣೆಗಳು, ಆಸೆಗಳು ಎಲ್ಲವನ್ನೂ ಎಲೆ ಎಲೆಯಾಗಿ ಬಿಚ್ಚಿಟ್ಟ ಆದ್ರೆ ಇದಕ್ಕೆ ಪೋಷಕರ ಬೆಂಬಲ ಸಿಗಲಿಲ್ಲ. ಇದನ್ನು ಅರಿತ ೧೪ ವರ್ಷದ ರಾಜು ೯ನೇ ತರಗತಿಗೆ ಮದ್ಯದಲ್ಲೇ ತಿಲಾಂಜಲಿ ಆಡಿ ಮನೆ ಬಿಟ್ಟು ತನ್ನದೇ ಪ್ರಪಂಚಕ್ಕೆ ಓಡಿ ಹೋದ ಮತ್ತಷ್ಟು ಓದು »

6
ಏಪ್ರಿಲ್

ಇಗೋ,ಇದರಲ್ಲಿ ಮುಂದಿದೆ…

– ಕಿರಣ ಬಾಟ್ನಿ, ಬನವಾಸಿ ಬಳಗ

’ನಿಲುಮೆ’ಯಲ್ಲಿ ಕನ್ನಡದ ಸೊಲ್ಲರಿಮೆಯ ಬಗ್ಗೆ ಚರ್ಚೆಯಾಗುತ್ತಿರುವುದು ಒಳ್ಳೆಯ ಸಂಗತಿ. ಅಕ್ಟೋಬರ್ ೨೦೦೮ರಲ್ಲಿ ನಾನು ಬರೆದ ಒಂದು ಬರಹವನ್ನು ಬನವಾಸಿ ಬಳಗದ ಗೆಳೆಯರಾದ ಶ್ರೀ ಆನಂದ್ ಜೋಶಿಯವರು ಈ ಚರ್ಚೆಗೆ ಸರಿಹೊಂದುತ್ತದೆ ಎಂದು ಪ್ರಕಟಣೆಗೆ ಕಳುಹಿಸಿ ಅದು ಪ್ರಕಟಿಸಲಾಗಿ, ಆ ಬರಹದಲ್ಲಿ ಬಂದ ಕೆಲವು ವಿಶಯಗಳ ಬಗ್ಗೆ, ಮತ್ತು ಬನವಾಸಿ ಬಳಗದ ನಿಲುವುಗಳ ಬಗ್ಗೆ ತಮ್ಮ ೪/೪/೨೦೧೧ರ ಬರಹದಲ್ಲಿ ಶ್ರೀ. ಅಜಕ್ಕಳ ಗಿರೀಶ ಬಟ್ಟರು ಪ್ರತಿಕ್ರಿಯೆ ನೀಡಿರುವುದರಿಂದ ಈ ಬರಹವನ್ನು ಬರೆಯುತ್ತಿದ್ದೇನೆ.

ಆ ಬರಹದಲ್ಲಿ ಗಿರೀಶಬಟ್ಟರನ್ನು ಕುರಿತು ನಾನು ಯಾವ ಮಾತನ್ನೂ ಆಡಿಲ್ಲ; ಅದನ್ನು ಬರೆದಾಗ ಅವರು ತಮ್ಮ ಹೊತ್ತಗೆಯನ್ನು ಪ್ರಕಟಿಸಿದ್ದರ ನೆನಪಿಲ್ಲ, ಅವರ ಹೆಸರೂ ನನಗಾಗ ಗೊತ್ತಿರಲಿಲ್ಲ. ಆದುದರಿಂದ ಆ ಬರಹದಲ್ಲಿ ಶಂಕರಬಟ್ಟರಿಗೆ ಗಿರೀಶಬಟ್ಟರು ಕೊಟ್ಟಿರುವ ಉತ್ತರಗಳ ವೈಗ್ನಾನಿಕತೆ-ಅವೈಗ್ನಾನಿಕತೆಗಳ ಬಗ್ಗೆ ನಾನು ಮಾತನಾಡಿರಲು ಸಾದ್ಯವೇ ಇರಲಿಲ್ಲ. ಆದರೆ ಶ್ರೀ. ಕೆ. ವಿ. ತಿರುಮಲೇಶರ ಒಂದು ಬರಹವನ್ನು ಕುರಿತು ಆ ಮಾತುಗಳನ್ನು ಆಡಿದ್ದು ನಿಜ, ಅವರು ಪ್ರತಿನಿದಿಸುವ ’ಹಳೆ-ಶಾಲೆ’ಯವರೆಲ್ಲರನ್ನೂ ಕುರಿತು ಆ ಮಾತುಗಳನ್ನು ಆಡಿದ್ದು ನಿಜ. ಈಗ ಗಿರೀಶಬಟ್ಟರಿಗೆ ಆ ಮಾತುಗಳು ತಮ್ಮನ್ನು ಕುರಿತೇ ಆಡಿದ್ದು ಎಂದು ಅನಿಸಿರುವುದರಲ್ಲಿ ಹಳೆಯ ಬರಹವನ್ನು ಹೊಸ ಚರ್ಚೆಯೊಂದರಲ್ಲಿ ಪ್ರಕಟಿಸಿದ್ದು ಒಂದು ಕಾರಣವಾದರೆ, ಮತ್ತೊಂದು ಕಾರಣ ನಿಜಕ್ಕೂ ಗಿರೀಶಬಟ್ಟರು ಆ ’ಹಳೆ-ಶಾಲೆ’ಗೇ ಸೇರುತ್ತಾರೆ ಎನ್ನುವುದು. ಮೊದಲನೆಯ ಕಾರಣಕ್ಕೆ ಬನವಾಸಿ ಬಳಗದ ಪರವಾಗಿ ನಾನು ಗಿರೀಶಬಟ್ಟರಲ್ಲಿ ಕ್ಶಮೆ ಕೇಳಿಕೊಳ್ಳುತ್ತ, ಎರಡನೆಯ ಕಾರಣದಿಂದ ಪ್ರೇರಿತರಾಗಿ ಅವರು ತಮ್ಮ ೪/೪/೨೦೧೧ರ ಬರಹದಲ್ಲಿ ಅದೇ ಹಳೆಯ ವಾದವನ್ನು ಮಂಡಿಸಿರುವುದರಿಂದ ಅದಕ್ಕೆ ಇಲ್ಲಿ ಮರುವುತ್ತರ.

ಮತ್ತಷ್ಟು ಓದು »

4
ಏಪ್ರಿಲ್

ಕನ್ನಡಕ್ಕಿಂತ ತಮಿಳು ಯಾವುದರಲ್ಲಿ ಮುಂದಿದೆ?

ಅಜಕ್ಕಳ ಗಿರೀಶ್ ಭಟ್

ಕನ್ನಡದ ಬಗ್ಗೆ ಚರ್ಚೆಯಾಗುತ್ತಿರುವುದು ಸಂತೋಷ. ಬನವಾಸಿ ಬಳಗ ಹಾಗೂ ಶುಭಶ್ರೀಯವರ ಲೇಖನಗಳನ್ನು ಓದಿದೆ. ಈಗಾಗಲೇ ನಾನು ಹಿಂದಿನ ಒಂದು ಪ್ರತಿಕ್ರಿಯೆಯಲ್ಲಿ ಬರೆದಿರುವಂತೆ, ಅಲ್ಲಿ ಎತ್ತಲಾಗಿರುವ ಹಲವು ಅಂಶಗಳು ನನ್ನ ಪುಸ್ತಕದಲ್ಲಿ ಪ್ರಸ್ತಾಪವಾಗಿವೆ. ಆದರೂ ಕೆಲವು ನಿರ್ದಿಷ್ಟ ಪ್ರಶ್ನೆಗಳನ್ನು ನಾನು ಇಲ್ಲಿ ಮತ್ತೆ ಎತ್ತಿಕೊಳ್ಳಬಯಸುತ್ತೇನೆ. ಶಂಕರ ಭಟ್ಟರ ಸಿದ್ಧಾಂತಗಳ ಬಗ್ಗೆ ನಾನು ಬರೆದುದನ್ನು ವೈಜ್ಞಾನಿಕವಲ್ಲ, ವೈಯಕ್ತಿಕ ದಾಳಿ ಅಂತೆಲ್ಲ ಕರೆಯಲಾಗಿದೆ. ವಾದದ ವಿಷಯಗಳ ಬಗ್ಗೆ ಹೇಳುವುದಕ್ಕಿಂತ, ಶಂಕರ ಭಟ್ಟರ ವಾದಗಳ ಕುರಿತು ನಾನು ಬರೆದ ಹೊತ್ತಗೆಯ ಶೀರ್ಷಿಕೆಯ ಬಗ್ಗೆಯೇ ಹೆಚ್ಚು ಒತ್ತು ಕೊಟ್ಟು ಬರೆದಿದ್ದಾರೆ. ಇರಲಿ. ಇದು ಅಷ್ಟು ಮುಖ್ಯ ಅಂತ ನನಗೆ ಅನ್ನಿಸದಿದ್ದರೂ ಈ ಶೀರ್ಷಿಕೆಯ ಬಗ್ಗೆ ಆರೋಪವನ್ನು ಮತ್ತೆ ಮತ್ತೆ ಮಾಡಲಾಗಿರುವುದರಿಂದ ಸಮರ್ಥನೆ ನೀಡುವೆ. ಮೊದಲೇ ಸ್ಪಷ್ಟಪಡಿಸುತ್ತೇನೆ,ನನಗೆ ಆ ಹಿರಿಯ ಭಾಷಾವಿದ್ವಾಂಸರ ಬಗ್ಗೆ ತುಂಬ ಗೌರವ ಉಂಟು. ವೈಯಕ್ತಿಕ ದ್ವೇಷವಾಗಲೀ ಅಸೂಯೆಯಾಗಲೀ ಇಲ್ಲ ! ಇನ್ನು, ಶೀರ್ಷಿಕೆಯಲ್ಲಿ ಅವರ ಹೆಸರು ಯಾಕೆ ತರಬೇಕಿತ್ತು? ಅವರು ಏಕಾಂಗಿ ಎಂದು ಬಿಂಬಿಸುವ ಯತ್ನವೇ? ಇತ್ಯಾದಿ ಪ್ರಶ್ನೆಗಳೂ ಬಂದಿವೆ.
ಮೊದಲನೆಯದಾಗಿ ತಾವು ಹೇಳಿದ ಹಾಗೆ ವ್ಯಾಪಕವಾಗಿ ಹೊತ್ತಗೆಗಳನ್ನು ಬರೆಯುತ್ತಿರುವವರು ಅವರೊಬ್ಬರೇ. ಅವರನ್ನು ಬೆಂಬಲಿಸಿದ ವಿವಿಧ ವಿ.ವಿ.ಗಳ ಮುಖ್ಯಸ್ಥರು ಅಥವಾ ಇನ್ನಾರಾದರೂ (ಶುಭಶ್ರೀಯವರೂ ಸೇರಿದಂತೆ) ಬರೆಯಲಾರಂಭಿಸಿಲ್ಲ. ಇನ್ನು ಆರಂಭಿಸಲೂಬಹುದು. ಆರಂಭಿಸಿದರೆ ನನ್ನ ಆಕ್ಷೇಪವಿಲ್ಲ, ದುಖವೂ ಇಲ್ಲ. ಯಾರಾದರೂ ಬರೆದರೆ ನಾನು ಓದುವುದಿಲ್ಲ ಅಂತ ಶಪಥ ಕೂಡ ಮಾಡೊಲ್ಲ. ಯಾಕೆಂದರೆ ಓದದಿದ್ದರೆ ಓದದವರಿಗೆ ನಷ್ಟ ಅಂತ ನನಗೊತ್ತು. ಒಟ್ಟಿನಲ್ಲಿ ಈಗ ಸದ್ಯಕ್ಕೆ ನಿಜವಾಗಿ ಕತ್ತರಿ ಪ್ರಯೋಗ ಮಾಡಿದವರು ಅವರೊಬ್ಬರೇ.
1
ಏಪ್ರಿಲ್

ಸುದ್ದಿ ‘ಮೋಹ’ದ ಪತ್ರಿಕೆಗಳ ಬಗ್ಗೆ…..

ಅರೆಹೊಳೆ ಸದಾಶಿವರಾಯರು

ಕಟೀಲು ದೇವಳಕ್ಕೆ ಶಿಲ್ಪಾ ಶೆಟ್ಟಿ ಬಂದರು!. ಇದು ನಮ್ಮ ಪತ್ರಿಕೆಗಳ ಮಟ್ಟಿಗೆ ಬಹು ಮುಖ್ಯ ಸುದ್ದಿಯಾಯಿತು! ಆಶ್ಚರ್ಯವೆಂದರೆ, ನಮ್ಮ ಪತ್ರಿಕೆಗಳು ಇದನ್ನು ಮುಖ ಪುಟದಲ್ಲಿ ಪ್ರಕಟಿಸಿ ಕೃತಾರ್ಥವಾದುವು. ಆಕೆ ತನ್ನದೇ ಹುಟ್ಟೂರಿಗೆ ಬಂದದ್ದು, ತನ್ನ ಅಜ್ಜಿಮನೆಯಲ್ಲಿ ಓಡಾಡಿದ್ದು, ಕೋಳಿ ಸುಕ್ಕಾ ತಿಂದದ್ದು…..ಎಲ್ಲವು ಸುದ್ದಿಯಾಯಿತು. ಮತ್ತೂ ಒಂದು ವಿಶೇಷ ಸುದ್ದಿ ಎಂದರೆ ಕಟೀಲು ಕ್ಷೇತ್ರವೇ ಈಕೆಯ ಭೇಟಿಯಿಂದ ಪವಿತ್ರವಾಯಿತೇನೋ ಎಂಬಷ್ಟೂ ಸುದ್ದಿಯನ್ನು ಆಕೆ ವಿಮಾನದಲ್ಲಿ ಬಂದಿಳಿದಿದ್ದರಿಂದ, ಮರಳಿ ವಿಮಾನವೇರುವ ತನಕ ಬರೆಯಲಾಯಿತು. ಎಲ್ಲಾ ಪತ್ರಿಕೆಗಳ ಒಬ್ಬೊಬ್ಬ ಪತ್ರಕರ್ತನೂ ಅಷ್ಟು ಹೊತ್ತಿನ ಮಟ್ಟಿಗೆ ಆಕೆಯ ಸಂಸಾರದ ಹಿಂದಿದ್ದ.!

ಈ ಕ್ಷಣದಲ್ಲಿ ನನಗೊಂದು ವಿಷಯ ನೆನಪಿಗೆ ಬರುತ್ತದೆ. ಇತ್ತೀಚೆಗೆ ನಾವು ಒಂದು ಸಮ್ಮೇಳನವನ್ನು ಆಯೋಜಿಸಿದ್ದೆವು. ಅದರ ಉದ್ಘಾಟನಾ ಸಮಾರಂಭದ ವರದಿ ಸವಿಸ್ತಾರವಾಗಿ ಪ್ರಕಟವಾಯಿತು. ಉದ್ಘಾಟನೆ ಮುಗಿಯುತ್ತಲೇ, ಒಂದು ಮಗು ವಾಮಾಚಾರಕ್ಕೆ ಬಲಿಯಾದ ಘಟನೆ ಬಹಿರಂಗ ಗೊಂಡಿತು. ಅದೇ ಸಂಜೆ ನಮ್ಮ ಸಮ್ಮೇಳನದ ಸಮಾರೋಪವೂ ನಡೆಯುತ್ತಿತ್ತು. ಆದರೆ ಸಂಜೆ ಒಬ್ಬನೇ ಒಬ್ಬ ಪತ್ರಕರ್ತನೂ ಅಲ್ಲಿರಲಿಲ್ಲ. ಅಲ್ಲಿನ ಯಾವ ವರದಿಯೂ ದಾಖಲಾಗಲಿಲ್ಲ.  ಸಮ್ಮೇಳನದಲ್ಲಿಯೇ ತಲ್ಲೀನರಾಗಿದ್ದ ನಮಗೆ ಇದೇಕೆ ಎಂದು ಆಶ್ಚರ್ಯವಾಯಿತು. ನಂತರ,   ನಮಗೆ ಆ ವಾಮಾಚಾರದ ಘಟನೆಯಿಂದ ಸಂಭ್ರಮದ ಘಟನೆಯನ್ನೂ ಮರೆಯುವಷ್ಟು ಘಾಸಿಯಾಯಿತು-ಖೇದವಾಯಿತು. ಮತ್ತಷ್ಟು ಓದು »

31
ಮಾರ್ಚ್

ಹಳ್ಳಿಗರೇ ಕರೆಂಟ್ ಉಳಿಸಿ, ಎಂಜಿ ರೋಡಿಗೆ ಲೈಟ್ ಹಾಕಬೇಕು

ಸಾತ್ವಿಕ್ ಎನ್ ವಿ

ಪ್ರಪಂಚ ಹೀಗೆನೇ!
ಯಾರು ಪಾಲಿಸ್ತಾರೋ ಅವರ ಮೇಲೆಯೇ ಎಲ್ಲವನ್ನು ಹೇರಿ ಅರಾಮದಲ್ಲಿ ಇದ್ದು ಬಿಡುತ್ತೆ. ‘ಉಳಿಸಿ’ ಅಂತ ಸರ್ಕಾರ ಯಾವುದಾದ್ರು ಅಭಿಯಾನ ಮಾಡಿದ್ರೆ ಅದರ ಟಾರ್ಗೆಟ್ ಮಧ್ಯಮ ಇಲ್ಲವೇ ಕೆಳವರ್ಗವೇ ಆಗಿರುತ್ತೆ. ಅದು ನೀರುಳಿಸಿ ಎಂಬುದೋ, ಪೆಟ್ರೋಲ್ ಉಳಿಸಿ ಅಂತಲೋ, ಕಡೆಗೆ ವಿದ್ಯುತ್ ಉಳಿಸಿ ಅಂತಾನೋ ಇರಬಹುದು. ಇಲ್ಲಿ ‘ಉಳಿಸಬೇಕಾದವರು’ ಯಾವುದನ್ನು ಕಡಿಮೆ ಪಡೆಯುತ್ತಿರುತ್ತಾರೋ ಅವರೇ! ವಿಚಿತ್ರ, ಆದ್ರೂ ಸತ್ಯ.
ಉದಾಹರಣೆಗೆ ನೀರು ಉಳಿಸಿ-ಮಿತವಾಗಿ ಬಳಸಿ ಅಂತ ಹೇಳಲಾಗುತ್ತೆ. ಆದ್ರೆ ಅದನ್ನು ಪಾಲಿಸಬೇಕಾದ ಜನತೆಗೆ ವಾರಕ್ಕೆ ಒಮ್ಮೆಯೋ ಎರಡು ಬಾರಿಯೋ ನೀರು ಬಂದ್ರೆ ಅದೇ ಹೆಚ್ಚು. ಒಮ್ಮೆ ಎಲ್ಲಿಯಾದ್ರೂ ಈ ಜನರು ಈ ನಿಯಮಗಳನ್ನು ಪಾಲಿಸುವಲ್ಲಿ ಸೋತರೆ ನಾವೆಲ್ಲ ಬೊಬ್ಬೆ ಹಾಕಿ ಬಿಡ್ತೇವೆ. ಅದ್ರೆ ಆ ಬೊಬ್ಬೆಯಲ್ಲಿ ಸತ್ಯವೊಂದು ಮುಚ್ಚಿ ಹೋಗಿರುತ್ತೆ. ಒಬ್ಬ ಶ್ರೀಮಂತನ ಮನೆಯ ಟಾಯ್ಲೆಟ್ ನಲ್ಲಿ ಬಳಕೆಯಾಗುವ ನೀರಿನಷ್ಟು ಸಾಮಾನ್ಯ ಜನರ ಕುಡಿಯುವ ನೀರು ಶುದ್ಧವಾಗಿರಲ್ಲ.

ಮತ್ತಷ್ಟು ಓದು »