ವಿಷಯದ ವಿವರಗಳಿಗೆ ದಾಟಿರಿ

Recent Articles

14
ಫೆಬ್ರ

ಒಲವೆಂಬ ವಿಸ್ಮಯ!

ಸುಪ್ರೀತ್.ಕೆ.ಎಸ್

ಈ ಪ್ರೀತಿ ಅಂದರೆ ಏನು?
ಹಾಗಂತ ಕೇಳಿ ನೋಡಿ ಪ್ರೀತಿಯಲ್ಲಿ ಬಿದ್ದವರಿಗೆ ಮಾತನಾಡಲು ಪದಗಳೇ ಸಿಕ್ಕುವುದಿಲ್ಲ. ಎಂದೂ ಪ್ರೀತಿಸಿರದವರಿಗೆ ಮಾತನಾಡಲಿಕ್ಕೆ, ವಾದಿಸುವುದಕ್ಕೆ ಸಾವಿರ ಸಾವಿರ ಸಂಗತಿಗಳು ಸಿಕ್ಕುತ್ತವೆ. ನೂರಾರು ಥಿಯರಿಗಳು ಕೈಗೆ ಎಟುಕುತ್ತವೆ. ಹತ್ತಾರು ಶ್ರೇಷ್ಠ ಚಿಂತಕರು ಹೇಳಿದ ಸಿದ್ಧಾಂತಗಳು ನೆರವಿಗೆ ಬರುತ್ತವೆ. ಆದರೆ ಪ್ರೀತಿಯಲ್ಲಿ ಮುಳುಗಿದವರನ್ನು ಕೇಳಿ, ಅವರಿಗೆ ಮಾತೇ ಬರದು, ಅವರು ಪ್ರೀತಿ ಕೊಡಮಾಡುವ ಮಧುರ ಅನುಭೂತಿಯನ್ನು ಸವಿಯುವುದರಲ್ಲಿ ಮಗ್ನರಾಗಿರುತ್ತಾರೆ, ಮಾತು ಮರೆತಿರುತ್ತಾರೆ.

ಧರ್ಮವೆಂದರೆ ಏನು, ದೇವರು ಇದ್ದಾನಾ? ಅಂತೆಲ್ಲಾ ಕೇಳಿದಾಗ ದೈವತ್ವದ ಅನುಭವವನ್ನು, ತನ್ನನ್ನೇ ತಾನು ಕಳೆದುಕೊಳ್ಳುವ ಮಗ್ನತೆಯನ್ನು ಎಂದೂ ಕಂಡಿರದವ ಮಾತ್ರ ಉಗ್ರವಾಗಿ ವಾದ ಮಾಡಬಲ್ಲ. ದೇವರಿದ್ದಾನೆ, ಅವನನ್ನು ನಂಬದವರು ದುರುಳರು ಎಂದು ಅಬ್ಬರಿಸಬಲ್ಲ. ದೇವರು ಎಂಬುದು ನಮ್ಮ ದೌರ್ಬಲ್ಯ, ನಮಗೆ ನಾವು ಮಾಡಿಕೊಳ್ಳುವ ವಂಚನೆ ಎಂದು ಉಪದೇಶಿಸಬಲ್ಲ. ಆದರೆ ದೇವರನ್ನು ಅನುಭವಿಸಿದವ ಮಾತ್ರ ಯಾವ ಮಾತನ್ನೂ ಆಡದೆ ಮೌನವಾಗಿ ಹಿಮಾಲಯದ ನಿಶ್ಯಬ್ಧ, ನಿರ್ಮಾನುಶ ಗುಹೆಗಳಲ್ಲಿ ಧ್ಯಾನಿಸುತ್ತಿರುತ್ತಾನೆ. ಖಾಲಿಯಾದ ಡಬ್ಬಗಳು ಜೋರಾಗಿ ಸದ್ದು ಮಾಡುತ್ತಾ ಬಡಿದುಕೊಳ್ಳುತ್ತಿರುತ್ತವೆ! ಎಂದಿನಂತೆ!

ಎರಡು ವಿಪರೀತಗಳು

ಪ್ರೀತಿಯ ಅನುಭವವನ್ನು ಹಂಚಿಕೊಳ್ಳುವಾಗ, ಪ್ರೀತಿಯನ್ನು ವ್ಯಾಖ್ಯಾನಿಸಲು ಕೂರುವಾಗ ನಾವು ಎರಡು ವಿಪರೀತಗಳಿಗೆ ಹೋಗುವ ಅಪಾಯವಿರುತ್ತದೆ. ಪ್ರೀತಿಯನ್ನು ತೀರಾ ಭಾವುಕವಾಗಿ ವರ್ಣಿಸುತ್ತಾ, ಪ್ರೀತಿ ಈ ಜಗತ್ತಿನದ್ದೇ ಅಲ್ಲ. ಅದು ಇಂದ್ರಿಯಗಳಿಗೆ ನಿಲುಕದ್ದು, ಅದು ಎಂಥಾ ವಿರೋಧವನ್ನಾದರೂ ಎದುರಿಸಬಲ್ಲದು. ಇಡೀ ಪ್ರಪಂಚವನ್ನೇ ಬೇಕಾದರೂ ಎದುರು ಹಾಕಿಕೊಂಡು ಪ್ರೀತಿ ಬದುಕಬಲ್ಲದು. ಪ್ರೀತಿಗೆ ಹಣ, ಅಂತಸ್ತಿನ ಹಂಗು ಇಲ್ಲ. ಅದು ಮುಖ ನೋಡಿ, ಭವಿಷ್ಯವನ್ನು ಆಲೋಚಿಸಿ ಪ್ರೀತಿಗೆ ಬೀಳಿಸುವುದಿಲ್ಲ. ಪ್ರೀತಿಯೆಂಬುದು ಒಂದು ಪವಾಡ. ನಮ್ಮ ನಿಯಂತ್ರಣವೇ ಇಲ್ಲದ ಆದರೆ ನಮ್ಮೆಲ್ಲರನ್ನೂ ನಿಯಂತ್ರಿಸುವ ಅಗೋಚರವಾದ ಶಕ್ತಿ ಪ್ರೀತಿ. ಪ್ರೀತಿಸಿದವರಿಗೆ ಪ್ರೀತಿಯೇ ದೇವರು. ಪ್ರೀತಿಗಿಂತ ದೊಡ್ಡದು ಅವರಿಗೆ ಬೇರೇನೂ ಕಾಣುವುದಿಲ್ಲ. ನಮ್ಮ ಜೀವನದ ಏಕೈಕ ಗುರಿಯೇ ಪ್ರೀತಿ. ಅಂತೆಲ್ಲಾ ಭಾವುಕವಾಗಿ ಪ್ರೀತಿಯ ಅಗಾಧತೆಯನ್ನು ಮೆರೆಸುವ ಭರದಲ್ಲಿ ವಾಸ್ತವದಿಂದ ದೂರಾಗುವ, ತೀರಾ ಎಮೋಶನಲ್ ಆಗುವ ಅಪಾಯವಿದೆ. ಮತ್ತಷ್ಟು ಓದು »

13
ಫೆಬ್ರ

ನಾನೆಂಬ ಪರಕೀಯ…

ಸಾತ್ವಿಕ್ ಎನ್ ವಿ

ಕಾಲೇಜಿಗೆ ಬರುವವರೆಗೆ ನಾನು ಕಾಸರಗೋಡು ಕರ್ನಾಟಕದಲ್ಲಿದೆ ಎಂದೇ ಭಾವಿಸಿದ್ದೆ. ನಂತರ ಅದು ಕೇರಳದಲ್ಲಿದೆ ಎಂದು ತಿಳಿದ ಬಳಿಕ ಅಲ್ಲಿನ ಕನ್ನಡ-ಕನ್ನಡಿಗರ ಕುರಿತ ಕುತೂಹಲ ಇನ್ನು ಹೆಚ್ಚಿತು. ಕವಿವರ್ಯರ ಕವನಗಳಲ್ಲಿ ಯಾಕೆ ಯಾತನೆಯ ಬಿಂಬಗಳಿವೆ ಎಂಬುದೂ ತಿಳಿಯಿತು. ಕರ್ನಾಟಕವೆಂಬ ಹಸುವಿನಿಂದ ಕಾಸರಗೋಡು ಎಂಬ ಕರುವನ್ನು ಬೇರ್ಪಡಿಸಿ ಕೇರಳ ರಾಜ್ಯಕ್ಕೆ ಸೇರಿಸಲಾಗಿತ್ತು. ಅದೂ ಕನ್ನಡಿಗರ ಉಗ್ರ ಪ್ರತಿಭಟನೆಯ ನಡುವೆ.
ನಾನು ಮಂಗಳೂರು ವಿವಿಗೆ ಎಂ.ಎ ಮಾಡಲು ಸೇರಿದಾಗ ಕಾಸರಗೋಡಿಗೊಮ್ಮೆ ಭೇಟಿ ಕೊಡಬೇಕೆಂಬ ಒತ್ತಾಸೆಗೆ ಪೂರಕವಾಗಿ ಮಂಜೇಶ್ವರದ ಗೋವಿಂದ ಪೈಗಳ ಮನೆಯನ್ನು ನೋಡುವ ಅವಕಾಶ ಸಿಕ್ಕಿತು. ಅಂದು ಭೇಟಿಯಾದ ಹಲವು ಹಿರಿಯರು ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ಇಂಚಿಂಚು ಮನಮುಟ್ಟುವಂತೆ ವಿವರಿಸಿದ್ದರು.  ಕಾಸರಗೋಡನ್ನು ಕೇರಳಕ್ಕೆ ಸೇರಿಸಿಕೊಳ್ಳಲು  ನಡೆಸಿದ ಕುತಂತ್ರ, ಕರ್ನಾಟಕ ಸರ್ಕಾರ ವಾಪಾಸು  ಪಡೆಯಲು ತೋರಿಸುತ್ತಿರುವ ಅನಾದಾರ, ಇವುಗಳು ಕನ್ನಡ ಹೋರಾಟಗಾರರಿಗೆ  ಹುಟ್ಟಿಸಿದ ನಿರಾಶೆಯನ್ನು ಸಾದೋಹರಣವಾಗಿ ವಿವರಿಸಿದ್ದರು. ಇಂಥ ಕಾಸರಗೋಡು ಜಿಲ್ಲೆಯ ಗಡಿಯಾದ ಕರ್ನಾಟಕದ ತಲಪಾಡಿ ಗ್ರಾಮವು  ಮಂಗಳೂರು ವಿಶ್ವವಿದ್ಯಾನಿಲಯದಿಂದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿದೆ. ನಾವು ಆಗಾಗ ವಿವಿ ಗ್ರಂಥಾಲಯದ ಮೊದಲ ಮಹಡಿಯಲ್ಲಿ ನಿಂತು ಮೊಬೈಲ್ ನೆಟ್ವರ್ಕ್ ನೋಡುವುದಿತ್ತು. ಅಲ್ಲಿ ಕೇರಳದ ಹಲವು ನೆಟ್ವರ್ಕ್ ಗಳು ಸಿಗುತ್ತವೆ. ಅಷ್ಟು ಹತ್ತಿರ ಕಾಸರಗೋಡು. ಕನ್ನಡಿಗರ ಮನಸ್ಸಿಗೂ ಕೂಡ. ಮತ್ತಷ್ಟು ಓದು »

11
ಫೆಬ್ರ

ಕನ್ನಡ ಎಲ್ಲಿಂದ ಉಳಿಯಬೇಕು? ನಾವೇಕೆ ಕಲಿಯಬೇಕು?

– ಮಹೇಂದ್ರ ಸಿ.ಕೆ

ಮೊನ್ನೆ ಮೊನ್ನೆ ಸೂರ್ಯ ತನ್ನೆಲ್ಲಾ ಹೊಳಪನ್ನು ಕಳೆದುಕೊಳ್ಳುವ ಹೊತ್ತಿಗೆ ಕನ್ನಡ ಉಳಿಯಬೇಕು,ಇದಕ್ಕಾಗಿ ಶಾಲೆಗಳಲ್ಲಿ ಕನ್ನಡ ಕಡ್ಡಾಯವಾಗಬೇಕು ಎಂಬ ನಿರ್ಣಯದೊದಿಗೆ 77 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ಮುಕ್ತಾಯಕಂಡಿದೆ.ಕನ್ನಡದ ಈ ಚೆಂದದ ಹಬ್ಬದಲ್ಲಿ ಬೆಂಗಳೂರು ಮಿಂದಿದೆ. ರಾಜಧಾನಿಯಲ್ಲಿ ಕನ್ನಡಗಿರಷ್ಟೇ ಇರುವ ಪರಭಾಷಿಕರು ಕೂಡ ಹಬ್ಬ ಕಂಡು ಹುಬ್ಬೇರಿದ್ದಾರೆ;ಸಂತಸ ಪಟ್ಟಿರಬಹುದು.

ಒಂದಿಷ್ಟು ಐಟಿ ಮಂದಿ ಕನ್ನಡ  ಹಬ್ಬದಲ್ಲಿ ಪಾಲ್ಗೊಂಡಿದ್ದು ಕೂಡ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದೆ.ಕನ್ನಡವನ್ನು ಕಂಪ್ಯೂಟರ್ ಯುಗದಲ್ಲಿ  ಉಳಿಸುವ,ಬೆಳೆಸುವ ಕೆಲಸದಲ್ಲಿ ಐಟಿ ಮಂದಿ ಒಂದಿಷ್ಟು ಕೆಲಸ ಮಾಡುತ್ತಿದ್ದಾರೆ.ಆದರೆ ಅದಕ್ಕಿಂತಲೂ ಹೆಚ್ಚು ಕನ್ನಡ ಉಳಿಸುವ ಕೆಲಸದಲ್ಲಿ ತೊಡಗಿರುವವರು ನಮ್ಮ ನಾಡಿನ ಗ್ರಾಮಾಂತರ ಪ್ರದೇಶದ ಕೂಲಿ ಕಾರ್ಮಿಕರು,ರೈತರು.ಆದರೆ ಸಾಹಿತ್ಯ ಸಮ್ಮೇಳನದಲ್ಲಿ ಈ ವರ್ಗದ ಜನರ ಹಿತಾಸಕ್ತಿಗಳ ಕುರಿತು ಯಾವೊತ್ತು ಸೊಲ್ಲೆತ್ತಿಲ್ಲ. ಅತ್ತ ಗುಲ್ಬರ್ಗದಲ್ಲಿ ತೊಗರಿಗೆ ಬೆಲೆ ಸಿಕ್ಕಿಲ್ಲ ಎಂದು ರೈತರು ಸೀಮೆ ಎಣ್ಣೆ ಸುರಿದು ಆತ್ಮಹತ್ಯೆಯ ಯತ್ನ ನಡೆಸಿದ್ದರು.ಸಮ್ಮೇಳನದ ಅದ್ದೂರಿಯಲ್ಲಿ ಕನ್ನಡ ಉಳಿಸುವ ಗಣ್ಯರು ರೈತರನ್ನು ಮರೆತರು.

ತುಮಕೂರು ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಯು.ಆರ್. ಅನಂತಮೂರ್ತಿ ಅವರು ಕನ್ನಡ-ಇಂಗ್ಲೀಷ್  ಅನಸಂಧಾನದ ಮಾತುಗಳನ್ನಾಡಿದರು. ಅಲ್ಲದೇ ಈಚೆಗೆ ಅವರು ಏಕರೂಪಿ ಶಿಕ್ಷಣ ಕುರಿತು ಜೋರು ದನಿಯಲ್ಲಿ ಮಾತನಾಡುತ್ತಿದ್ದಾರೆ. ಈ ದಿನ ಕನ್ನಡ ಮಾತ್ರವಲ್ಲ,ಎಲ್ಲಾ ಪ್ರಾದೇಶಿಕ ಭಾಷೆಗಳಿಗೂ ಬಿಸಿ ತಟ್ಟಿಸಿರುವ ಜಾಗತೀಕರಣದ ಭಾಷೆ ಇಂಗ್ಲೀಷ್ಗೆ  ಸವಾಲು ಹೊಡ್ಡಬೇಕಾದರೆ ಅನಂತಮೂರ್ತಿ ಸಲಹೆ ಜಾರಿಗೆ ಬರಬೇಕಾಗಿದೆ.
ಕನ್ನಡ ಉಳಿಸಿ ಎಂದು ಬೆಂಗಳೂರಿನಲ್ಲಿ ಘೋಷಣೆ ಕೂಗಿದರೆ ಕನ್ನಡ ಉಳಿಯದು.ಕೇವಲ ಕನ್ನಡ ಉಳಿಸಿ..ಉಳಿಸಿ ಎಂದು ಹೇಳುತ್ತಾ ಹಳ್ಳಿ ಮಕ್ಕಳನ್ನು,ರೈತಾಪಿ ವರ್ಗದ ಮಕ್ಕಳನ್ನು ಅತ್ಯುತ್ತಮ ಅವಕಾಶಗಳಿಂದ ವಂಚಿತರಾಗಿಸುವ ಕೆಲಸ ಮಾಡಲಾಗುತ್ತಿದೆ. ಕನ್ನಡ ಕಲಿಯುವುದರಿಂದ ಊಟ,ಉದ್ಯೋಗ ಸಿಗುವುದಿಲ್ಲ ಎಂದಾದರೆ ಅದನ್ನು ಕಲಿತು ಏನು ಉಪಯೋಗ ಎಂಬುದನ್ನು ಕನ್ನಡ ಉಳಿಸುವ ಮಹಾತ್ಮರು ಹೇಳಬೇಕಾಗಿದೆ. ಮತ್ತಷ್ಟು ಓದು »

11
ಫೆಬ್ರ

ಬದುಕು ಬದಲಿಸಬಹುದು!

ಸವಿತ ಎಸ್.ಆರ್

ನಾ ಹತ್ತನೇ ತರಗತಿ ಮುಗಿಸಿದ ನಂತರ ನನ್ನಣ್ಣ ಕೊಟ್ಟ ಪುಟಾಣಿ ಪುಸ್ತಕ “ಬೆಳಕಿನೊಂದು ಕಿರಣ ಮೇಡಂ ಕ್ಯೂರಿ“. ವಿಜ್ಞಾನದ ಬಗ್ಗೆ ಬೆರಗು ಮೂಡಿಸಿ ಹೆಚ್ಚು ಕಲಿಯಲು ಪ್ರೇರೇಪಿಸಿದ ಬರವಣಿಗೆಯದು. ಬರೆದವರು ನೇಮಿ ಚಂದ್ರ. ಆ ಪುಸ್ತಕದ ಮೊದಲ ಪುಟದಲ್ಲಿ ಓದಿದ ಅರ್ಪಣೆಯ ಸಾಲುಗಳು ಈ ದಿನಕ್ಕೂ ನೆನಪಿವೆ…

ಚೆನ್ನಾಗಿ ಓದಮ್ಮ, ರ‍್ಯಾಂಕ್ ಬರಬೇಕು. ಈ ಕಸ ಮುಸುರೆಯಲ್ಲೇನಿದೆ? ಎಂದು ಸದಾ ಹುರಿದುಂಬಿಸಿದ, ಬಯಲು ಸೀಮೆಯ ಹಳ್ಳಿಗಾಡಿನ ಅಪ್ಪಟ ಅನಕ್ಷರಸ್ಥೆ ನನ್ನಮ್ಮನಿಗೆ

ಪುಸ್ತಕ ಮುಗಿಯೊದರೊಳಗೆ ನನ್ನ ಮುಂದಿನ ಓದಿನ ದಾರಿ ಕಾಣಿಸತೊಡಗಿತ್ತು. ಕೊನೆಯ ಪುಟದಲ್ಲಿ ಇದ್ದ ಲೇಖಕರ ಬಗ್ಗೆ ಓದುತ್ತಾ ಹೋದಂತೆ..ಅನ್ನಿಸತೊಡಗಿತ್ತು… ನೇಮಿ ಚಂದ್ರ…ಅಬ್ಬಾ!! ಹೆಣ್ಮಗಳೊಬ್ಬಳು ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಬಹುದೇ….ನಾನೂ ಓದಬಾರದೇಕೆ ಅಂತ ಅವತ್ತೇ ಅನ್ನಿಸಿತ್ತು. ನಂತರ ನನ್ನ ಆಯ್ಕೆ ಕೂಡಾ ಅದೇ ಆಯ್ತು 🙂

ಅಂದಿನಿಂದ ಇಂದಿನವರೆಗೆ ಯಾವಾಗ ಲೈಫು ಡಲ್ ಅನಿಸಿದಾಗಲೆಲ್ಲಾ “ಬೆಳಕಿನೊಂದು ಕಿರಣ” ಪುಸ್ತಕ ಧೈರ್ಯ ತುಂಬಿ ಹೊಸ ಕನಸುಗಳನ್ನ ಕಾಣಲು ಸ್ಫೂರ್ತಿ ನೀಡುತ್ತಿದೆ.

ಮೊನ್ನೆ ಸಪ್ನ ಬುಕ್ ಸ್ಟಾಲಿಗೆ ಹೋದಾಗ ಹಾಗೇ ಕಣ್ಣಾಡಿಸುತ್ತಿರುವಾಗ ಕಂಡದ್ದು “ಬದುಕು ಬದಲಿಸಬಹುದು” – ನೇಮಿಚಂದ್ರ.. ಅರೆ ವಾವ್ ನನ್ನ ನೆಚ್ಚಿನ ಪುಸ್ತಕದ ಲೇಖಕರು…ಕೊನೆಯ ಪುಟದಲ್ಲಿ..ಮೊದಲ ಬಾರಿಗೆ..ಅವರ ಪೋಟೋ ನೋಡಿ ಸಕತ್ ಖುಷಿಯಾಯ್ತು. ಮನೆಗೆ ತಂದ ಪುಸ್ತಕ ಒಂದೆರಡು ದಿನ ಮನಃ ಪೂರ್ತಿಯಾಗಿ ಓದಿದೆ. : )

ಪ್ರತಿ ಪುಟಗಳಲ್ಲಿ ಅದೆಷ್ಟೊಂದು ಕಾನ್ಫಿಡೆನ್ಸ್ ತುಂಬಿದ ಬರಹಗಳು, ಕೆಲವು ಲೇಖನಗಳ ಶೀರ್ಷಿಕೆಗಳು ಹೀಗಿವೆ…

ಸಮಯವಿಲ್ಲವೆ ಹೇಳಿ
ಕನಸು ಕಾಣುವ ಬನ್ನಿ
ಸ್ನೇಹಕ್ಕೆ ಯಾವ ಸರಹದ್ದು
ಸೋಲಿಲ್ಲದ ಮನೆಯ ಸಾಸಿವೆ
ಜಗತ್ತು ಬದಲಾಗಬಹುದು
ಆಯ್ಕೆಯಿದೆ ನಮ್ಮ ಕೈಯಲ್ಲಿದೆ
ಬರೆದಿಡಿ….ಬರೆದಿಡಿ
ಆತ ಕೊಟ್ಟ ವಸ್ತು ಒಡವೆ, ನನಗೆ ಅವಗೆ ಗೊತ್ತು
ಮುಗಿಲು ಕೂಡ ಮಿತಿಯಿಲ್ಲ
ಬದುಕು…ನಿನ್ನಲ್ಲೆಂಥಾ ಮುನಿಸು
ಆದದ್ದೆಲ್ಲಾ ಒಳಿತು ಆಯಿತು
ಕತ್ತಲ ಹಾದಿಯಲ್ಲಿ ದೊಂದಿ ಹಿಡಿದು
ಕಾಸಿಲ್ಲದೆ ಕಲಿಸಿದ್ದು
ದುಡಿಯಬಲ್ಲೆವು ನಾವು
ಚಿಗುರಿಸಿ ಕನಸುಗಳನ್ನು
ಬದುಕು ಬರಿದಾಗದಿರಲಿ
.
.
.
.
.
ಇಷ್ಟು ಚೆಂದದ ಶೀರ್ಷಿಕೆಯ ಲೇಖನಗಳೊಂದಿಗೆ ಲೇಖಕಿಯವರು ನಮ್ಮ ದಿನ ನಿತ್ಯದ ಜೀವನವನ್ನ ಬೇರೆ ಪರಿಮಾಣದಲ್ಲೂ ನೋಡಬಹುದೆಂಬುದನ್ನ…ಕಲಿಸುವಿಕೆ ಪರಿ ಮಾತ್ರ… ತುಂಬಾ ತುಂಬಾ ಇಷ್ಟವಾಯ್ತು.
ನೀವೂ ಕೂಡ ಓದಿ, ಮೆಚ್ಚಿನ ಪುಸ್ತಕಗಳ ಸಾಲಿಗೆ ಈ ಪುಸ್ತಕದ ಹೆಸರು ಸೇರುವುದು ಖಂಡಿತ 🙂

10
ಫೆಬ್ರ

ನಾಸ್ತಿಕನಾಗೋದು ಅಂದ್ರೆ….

ಸಾತ್ವಿಕ್ ಎನ್ ವಿ 

ಅಂದು ಕೊಂಡ ತಕ್ಷಣ ಆಯಿತೆ? ನಾವು ನಮ್ಮೆಲ್ಲ ಕಷ್ಟಗಳನ್ನು ಪರಿಪಾಟಲುಗಳನ್ನು ದೇವರ ತಲೆಗೆ ಹಾಕಿ ಒಂದು ಕ್ಷಣ ನೆಮ್ಮದಿಯ ನಿಟ್ಟುರಸಿರು ಬಿಟ್ಟುಬಿಡುತ್ತೇವೆ. ಆದರೆ ಆ ಅಧಾರದ ಬಗ್ಗೆಯೇ ಅಪನಂಬಿಕೆ ಇರುವ ನಾಸ್ತಿಕರ ಕಥೆಯೇನು? ಒಂದೆಡೆ  ತಲೆಯಲ್ಲಿನ ಒತ್ತಡಗಳನ್ನು ನಿವಾರಿಸಿಕೊಳ್ಳಲು ಇರುವ ಆಧಾರ ತಪ್ಪಿತು. ಮತ್ತೊಂದೆಡೆ  ದೇವರನ್ನು ನಂಬದೇ ಇರುವುದರಿಂದ ಆಗುವ ಭಯಂಕರ ಸಮಸ್ಯೆಗಳ ಬಗ್ಗೆ ಜನರು ಹೇಳುವ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಪುಕ್ಕಲನಾಗಿದ್ದರೆ  ದೇವರೆ ಗತಿ!! ಒಟ್ಟಾರೆ ಸಾಕಷ್ಟು ಮನೋದಾರ್ಢ್ಯವಿಲ್ಲದೆ ನಾಸ್ತಿಕನಾಗಲು ಸಾಧ್ಯವಿಲ್ಲ. ನಾನು ದೇವರನ್ನು ನಂಬುವುದಿಲ್ಲ ಎಂದು ಹೇಳುವುದು ಸುಲಭ. ಆದರೆ ಇಡೀ ಜೀವನವೆಲ್ಲ ಹಾಗೆಯೇ ಬದುಕುವುದು ಇದೆಯಲ್ಲ ಅದು ನಿಜಕ್ಕೂ ಚಾಲೆಂಜಿಂಗ್.
ನಮ್ಮ ‘ಅವಸ್ಥೆಯ’ ಹಿಂದೆ, ನಮ್ಮ ಮನಸ್ಸು ಕೆಲಸ ಮಾಡುತ್ತಿರುತ್ತದೆ. ಈ ಮನಸ್ಸು ತನ್ನ ಒಳಬೇಗುದಿಗಳನ್ನು ಕಡಿಮೆ ಮಾಡಿಕೊಳ್ಳಲು ಹಲವಾರು ಉಪಾಯಗಳನ್ನು ಹುಡುಕಿಕೊಂಡಿರುತ್ತದೆ. ಒಂದರ್ಥದಲ್ಲಿ ಸೇಫ್ಟಿ ವಾಲ್ವ್ ನ ಹಾಗೆ. ಮನುಷ್ಯನಿಗೆ ಆಗಾಗ ಕಾಡುವ ಒಂಟಿತನ, ಬೇಸರ, ಅಭದ್ರತೆ ಇತ್ಯಾದಿಗಳನ್ನು ಪರಿಹಾರ ಮಾಡಿಕೊಳ್ಳಲು ಇರುವ ಏಕೈಕ ಉಪಾಯ ಅದನ್ನು ವರ್ಗಾಯಿಸುವುದು. ಆಗ ಆ ಕ್ಷಣಕ್ಕಾದರೂ ಆ ವಿಷಯದಿಂದ ಮುಕ್ತಿ ಸಿಗುತ್ತದೆ. ಈ ವಿಷಯದಲ್ಲಿ ದೇವರು ದಯಾಮಯಿ. ನಮಗೆ ಯಾವಾಗಲೂ ಇಂಥ ಸಂದರ್ಭದಲ್ಲಿ ಸಹಾಯಕ್ಕೆ ಒದಗಿ ಬರುತ್ತಾನೆ.    ಮತ್ತಷ್ಟು ಓದು »

10
ಫೆಬ್ರ

ಮೀನುಗಳು—ಅಬ್ಬಾ..ಎಂಥ ಮೀನುಗಳು…!!

– ಆಜಾದ್

ಮೀನುಗಳು, ಜಲಕನ್ಯೆಯರು, ಮತ್ಸ್ಯಾವತಾರ ಹೀಗೆ ನಮ್ಮೊಂದಿಗೆ ನಮ್ಮ ಪರಂಪರೆಯೊಂದಿಗೆ ಹಾಸು ಹೊಕ್ಕಾಗಿರುವ ಜೀವಿಗಳು. ಮಾನವನ ಜೀವವಿಕಾಸ ಸರಣಿಯ ಶ್ರಂಖಲೆಯಲ್ಲಿ ಬಹು ಮುಖ್ಯ ಕೊಂಡಿ..ಈ ಮೀನುಗಳು. ಬೆನ್ನುಮೂಳೆಯ ಪ್ರಥಮ ಅವತರಣ ಮೀನಿನಲ್ಲಾಯಿತು. ಅದೇ ಕಾರಣಕ್ಕೆ ಮಾನವ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಮೂಲವನ್ನು ಹುಡುಕಲು ಹೋದರೆ…ಮೀನು ಸಂಶೋಧನಾ ಯೋಗ್ಯ ಎಂದು ಶಾಸ್ತ್ರವೇತ್ತರು ಮೀನನ್ನು ಸಂಶೋಧನೆಗಳಿಗೆ ಬಳಸಲಾಗುತ್ತಿದೆ.

ಇನ್ನು ಮೀನುಗಳ ವಿಕಾಸದಲ್ಲೂ ಬಹು ಮಹತ್ತರ ತಿರುವುಬಂದದ್ದು…ಮೃದ್ವಸ್ಥಿ (ಕಾರ್ಟೀಲೇಜ್..ಮೆದು ಮೂಳೆ) ಮೀನುಗಳ ವಿಕಾಸ ನಂತರ ಸಹಜಸ್ಥಿ (ಟ್ರೂ ಬೋನ್) ಹೊಂದಿದ ಮೀನುಗಳು. ಮುದ್ವಸ್ಠಿ ಮೀನುಗಳು ಎಂದರೆ ಒಡನೆಯೇ ನೆನೆಪಾಗುವುದು ಶಾರ್ಕ್ ಮೀನು. ಬಹುಶಃ ಜಲಜೀವಿಗಳಲ್ಲಿ ವಿಖ್ಯಾತ ಮತ್ತು ಕುಖ್ಯಾತವಾಗಿರುವ ಜೀವಿ ಎಂದರೆ ಶಾರ್ಕ್ ಮೀನು. ಬಹುಪಾಲು ಮೃದ್ವಸ್ಥಿಗಳು ಸಮುದ್ರಗಳಲ್ಲೇ ಕಂಡುಬರುತ್ತವೆ (ಶಾರ್ಕ್ ಗಳ ಬಗ್ಗೆ ಇನ್ನೊಮ್ಮೆ ಬರೆಯುವೆ..). ಶಾರ್ಕ್ ಜಾತಿಗೆ ಸೇರಿದ ಸ್ಕೇಟ್ ಮತ್ತು ರೇ ಮೀನುಗಳೂ ಮೃದ್ವಸ್ಥಿಗಳೇ.

ಇನ್ನು ಸಹಜಸ್ಥಿ ಮೀನುಗಳು, ಕೆರೆ, ಕುಂಟೆ, ಹೊಂಡ, ಕುಂಟೆ, ಸರೋವರ, ನದಿ, ನಾಲೆ, ಜಲಾಶಯ ಅಲ್ಲದೇ ಹಿನ್ನೀರು, ಚೌಳುಪ್ಪುನೀರು, ಸಮುದ್ರ ತಟಗಳು, ಆಳ ಸಮುದ್ರ, ಅಷ್ಟೇ ಏಕೆ…ಹಿಮಾವೃತ ಅಂಟಾರ್ಟಿಕಾದಲ್ಲೂ ಕಂಡುಬರುತ್ತವೆ.

ಇವುಗಳಲ್ಲಿನ ಕೆಲವು ವೈವಿಧ್ಯಗಳ ಸ್ಥೂಲ ಪರಿಚಯವೇ ಈ ಲೇಖನ.

ಚುಕ್ಕೆ ಬಾಲದ ಸಮುದ್ರ ಸಿಂಹ: ಸಮುದ್ರ ಸಿಂಹಗಳು ಬಹು ಮನೋಹಕ ಮೀನುಗಳಲ್ಲಿ ಪ್ರಮುಖವಾದುವು.

ಇವುಗಳ ರೆಕ್ಕೆಮುಳ್ಳು ವಿಷಯುಕ್ತವಾಗಿದ್ದು ಇವುಗಳ ದೇಹವಿನ್ಯಾಸ ಒಂದುರೀತಿಯ ಅಪಾಯ ಸೂಚಕ

ಎಲೆಯಾಕಾರದ ಸಮುದ್ರ ದೈತ್ಯ : ಕಡಲ್ಗುದುರೆಗಳ ಜಾತಿಯ ಮೀನುಗಳಿವು, ತನ್ನ ಪರಿಸರದೊಡನೆ (ಸಮುದ್ರ ಸಸ್ಯಗಳ ಮತ್ತಷ್ಟು ಓದು »

9
ಫೆಬ್ರ

ಆಧುನಿಕತೆಯಲ್ಲಿ ಮರೆಯಾಯ್ತೆ ಮಾನವೀಯತೆ ?

ಚಿತ್ರ

೨ನೇ ಫೆಬ್ರವರಿ ೨೦೧೧ರಂದು ಎಂದಿನಂತೆ ಕಚೇರಿಯಿಂದ ಸರಿಯಾಗಿ ಸಂಜೆ ೬ ಗಂಟೆಗೆ ಮನೆಗೆ ಹೊರಟೆ. ಮೆಟ್ಟಿಲಿಳಿದು, ನನ್ನ ನಾಲ್ಕುಚಕ್ರ ವಾಹನದ ಕಡೆ ಬಂದು ಕಾರ್ ಗ್ಲಾಸ್ಗೆ ನೀರು ಹಾಕ್ತಿದ್ದೆ, ಅಷ್ಟೊತ್ತಿಗೆ ಅಲ್ಲೆ ನಿಂತಿದ್ದ ಒಬ್ಬ ಸೆಕ್ಯುರಿಟಿ, ಮೇಡಂ ಚಕ್ರದ ಏರ್ ಇಳ್ದಿದೆ, ನೋಡಿ ಅಂದ. ನೋಡ್ತೀನಿ, ಏರ್ ಇಳ್ದಿದೆ, ಪಂಚರ್ ಆಗಿರೋಹಾಗಿದೆ, ಏನಪ್ಪ ಮಾಡೋದು ಅಂತ ಯೋಚಿಸ್ತಾ, ನನ್ನ ಸಹುದ್ಯೋಗಿಯೊಬ್ಬರನ್ನ ಕರೆದು, ತೋರಿಸ್ದೆ. ಅವರು ಮೇಡಂ ಇಲ್ಲಿ ಸದ್ಯಕ್ಕೆ ಯಾರು ಸಿಕ್ಕಲ್ಲ, ಸೆಕ್ಯುರಿಟಿಯವರಿಗೆ ತಿಳಿಸಿ ಇಲ್ಲೇ ಪಾರ್ಕ್ ಮಾಡಿಹೋಗಿ, ಬೆಳಿಗ್ಗೆ ಬಂದು ಸರಿ ಮಾಡ್ಸಿ ಅಂದ್ರು. ಸರಿ ಅಂತ ಮನೆಗೆ ಬಸ್ನಲ್ಲೇ ಹೋಗೋಣ (ಆಟೋಗೆ ಯಾಕೆ ಅಷ್ಟೊಂದು ಹಣ ಕೊಡೋದು) ಅಂತ ಶೇಷಾದ್ರಿಪುರಂ ಬಸ್ ನಿಲ್ದಾಣದ ಹತ್ತಿರ ಬಂದು ಶೇಷಾದ್ರಿಪುರಂ ನಿಂದ ಸೆಂಟ್ರಲ್ ಮಾರ್ಗವಾಗಿ ಮಲ್ಲೇಶ್ವರ, ಮತ್ತೀಕೆರೆ, ಬಿಇಎಲ್ ವೃತ್ತಕ್ಕೆ ಹೋಗೋ ಬಸ್ ಹತ್ತಿದೆ (೨೭೩ಸಿ). 
9
ಫೆಬ್ರ

ರಂಗಭೂಮಿಯ ಹಿರಿಯಣ್ಣ ಕುಸ್ತಿಯ ಕಲಿ ಗುಡಿಗೇರಿ ಬಸವರಾಜರಿಗೊಂದು ನಮನ

ನಿಲುಮೆ ತಂಡ
ಹೌದು !! ಕನ್ನಡದ ರಂಗಭೂಮಿಯ ಪಾಲಿಗೆ ದಿನಾಂಕ ೮ ನೇ ಫೆಬ್ರವರಿ ೨೦೧೧ ಮರೆಯಲಾಗದ ಮಾಣಿಕ್ಯವೊಂದು ಕಳೆದುಕೊಂಡ ದಿನ. ಗುಡಿಗೇರಿ ಧಾರವಾಡದಲ್ಲಿನ  ಚಿಕ್ಕ ಹಳ್ಳಿಯಲ್ಲಿ ಚನ್ನಪ್ಪ ಗೌರಮ್ಮನವರ ಸುಪುತ್ರ. ವಿದ್ಯಾಭ್ಯಾಸ ೪ನೇ ತರಗತಿಯವರೆಗಾದರು, ಬಸವರಾಜರ ಬಾಲ್ಯ ಸುಖಪ್ರದವಾಗಿರಲಿಲ್ಲ. ೨ರೂಪಾಯಿಗೆ ಎಮ್ಮೆ ಕಾಯುವ ಕಾಯಕದಲ್ಲಿದ್ದವರು, ಗರಡಿಮನೆಯ ಅವರ ಆಸಕ್ತಿಗೆ ಗುಡಿಗೆರೆಯ ಭೂಪಾಲ ಬಸ್ತಿಯವರ ಸಹಕಾರದಿಂದ ಕೊಲ್ಲಾಪುರದಲ್ಲಿ ಕುಸ್ತಿ ಕಲಿತರು, ದಾವಣಗೆರೆಯಲ್ಲಿ ಟಿಪ್ಪು ಸುಲ್ತಾನ್ ನಾಟಕದ ಪ್ರೇರಣೆಯಿಂದ ತಮ್ಮ ಹದಿನಾಲ್ಕು ವರ್ಷದಲ್ಲೇ “ನಾರಿ ಸಾಹಸ” ನಾಟಕದಲ್ಲಿ ಮಂತ್ರಿ ಪಾತ್ರವನ್ನು ಮೊದಲ ಬಾರಿಗೆ ನಿರ್ವಹಿಸಿದರು, ರಂಗವೇದಿಕೆಯಲ್ಲಿ ಪಾತ್ರ ಹಾಕಿ ನಿಂತರೆ ಅವರ ಪದಪ್ರಾಸಕ್ಕೆ ತಲೆದೂಗದವರೇ ಇಲ್ಲ. ಉತ್ತರ ಕರ್ನಾಟಕದ ಮಂದಿಗೆ ಗುಡಿಗೇರಿ ಬಸವರಾಜರ ನಾಟಕವಿದೆಯೆಂದಾದರೆ ಅದೊಂದು ಹಬ್ಬದ ಸಡಗರ.
9
ಫೆಬ್ರ

ಮದರ್ ತೆರೇಸಾ ಸೋಗುಗಾತಿ ಎಂದವನು ಓಶೋ!!!

ಹೇಮಾ ಪವಾರ್, ಬೆಂಗಳೂರು

ದೂರದ ಅಲ್ಬೇನಿಯಾದಲ್ಲಿ ಹುಟ್ಟಿದ ಅಗ್ನೆಜ್ ಗಾಂಡ್ಜೆ ಬೊಜಾಕ್ಜಿಯು ಎಂಬ ಬಾಲಕಿ ಭಾರತದ ಕೊಳಚೆ ಪ್ರದೇಶಗಳ ರಾಜಧಾನಿ ಎಂದು ಹೆಸರುವಾಸಿಯಾಗಿದ್ದ ಕೊಲ್ಕತ್ತಾಗೆ ಕ್ರೈಸ್ತ ನನ್ ಆಗಿ ಆಗಮಿಸಿ ಕುಷ್ಠರೋಗಿಗಳ, ಅನಾಥ ಮಕ್ಕಳ ಪಾಲಿಗಷ್ಟೇ ಅಲ್ಲದೆ ಇಡೀ ಜಗತ್ತಿಗೆ ಮದರ್ ತೆರೆಸಾ ಎಂದು ಪರಿಚಿತಳಾದಳು. ಭಾರತದ ಕೊಳಚೆ ಪ್ರದೇಶಗಳ ವಾಸಿಗಳ ಏಳ್ಗೆಗಾಗಿ ಶ್ರಮಿಸಿದ್ದಕ್ಕಾಗಿ ನೊಬೆಲ್ ಬಹುಮಾನವನ್ನೂ ಪಡೆದಳು – ಇದಿಷ್ಟು ನಾವು ಆಕೆಯ ಬಗ್ಗೆ ತಿಳಿದ ವಿಚಾರಗಳು. ಆದರೆ ಗಾಂಧಿ ಇಂದ ಬುದ್ದನವರೆಗೂ, ಆಧ್ಯಾತ್ಮದಿಂದ ಲೈಂಗಿಕತೆಯವರೆವಿಗೂ ಎಲ್ಲವನ್ನೂ, ಎಲ್ಲವನ್ನೂ ತನ್ನ ಮಾತುಗಳಲ್ಲಿ ಹಿಡಿದು ಹೊಸ ಅರ್ಥ ಕೊಡುವ ಓಶೋ ರಜನೀಶ್ ಮದರ್ ತೆರೆಸಾ ಬಗ್ಗೆ ಬೇರೆಯದೇ ರೀತಿಯಾದ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ನೊಬೆಲ್ ಪ್ರಶಸ್ತಿಯಿಂದ ಪ್ರಖ್ಯಾತಿಯನ್ನು ಪಡೆದ ತೆರೆಸಾರನ್ನು, ಸೋಗುಗಾರ್ತಿ, ಕಪಟಿ ಹಾಗೂ ಹಿಪೋಕ್ರಿಟ್ ಎಂದು ಕರೆಯುತ್ತಾನೆ. ತನ್ನ ಅಭಿಪ್ರಾಯಗಳು ವಿಪರೀತವಾಗಿರುವಂತೆ ನೋಡಿಕೊಳ್ಳುತ್ತಿದ್ದ ರಜನೀಶನ ಅಭಿಪ್ರಾಯವನ್ನು ಅಕ್ಷರಶಃ ಒಪ್ಪುವುದು ಯಾರಿಗೂ ಸಾಧ್ಯವಿಲ್ಲವಾದರೂ ಆತನ ದೃಷ್ಟಿಕೋನದ ಬೆಳಕಿನಲ್ಲಿ ನಮ್ಮ ತಿಳುವಳಿಕೆಯನ್ನು, ಅಭಿಪ್ರಾಯಗಳನ್ನು ಪುನರ್ವಿಮರ್ಶಿಸಿಕೊಳ್ಳುವುದು ನಮಗೆ ಉಪಯುಕ್ತವಾಗಬಹುದು. ತನ್ನ ಪ್ರವಚನವೊಂದರಲ್ಲಿ ರಜನೀಶ್ ತೆರೆಸಾರನ್ನು ಅವಲೋಕಿಸಿದ ಪರಿ ಇಂತಿದೆ:
ಮತ್ತಷ್ಟು ಓದು »

8
ಫೆಬ್ರ

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ…!

– ಪವನ್ ಎಂ ಟಿ

ಸಾಮೂಹಿಕ ಆತ್ಮಹತ್ಯೆ: ಮಲೆಕುಡಿಯರ ಬೆದರಿಕೆ, ನಿಲ್ಲದ ಮಲೆಕುಡಿಯರ ಮೇಲಿನ ದೌರ್ಜನ್ಯ,

ಬಲಾತ್ಕಾರದಿಂದ ಎಬ್ಬಿಸಿದರೆ ಪ್ರಾಣತ್ಯಾಗ, ಸತ್ತರೂ-ಬದುಕಿದರೂ ಇಲ್ಲಿಯೇ: ಮಲೆಕುಡಿಯರ ಶಪಥ

ಪ್ರಜಾವಾಣಿ ಪತ್ರಿಕೆಯಲ್ಲಿ ಜನವರಿ ತಿಂಗಳ ಕೊನೆಯ ಕೆಲವು ದಿನಗಳಲ್ಲಿ ಬಂದ ಪ್ರಮುಖ ಸುದ್ದಿಗಳು. ಇವೆಲ್ಲಾ ‘ಕಾನೂನು ಪ್ರಕಾರವಾಗಿ ಎತ್ತಂಗಡಿ ಮಾಡಿಸಿದ್ದೇವೆ’ ಎಂದು ಹೇಳುತ್ತಿರುವ ಅಧಿಕಾರಿಗಳ ವಿರುದ್ಧವಾಗಿ ಮನೆ ಕಳೆದುಕೊಂಡ ಸುಲ್ಕೇರಿಯ ಮಲೆಕುಡಿಯರು ದು:ಖಭರಿತ ಅಸಹಾಯಕತೆಯ ದನಿ. ಇಷ್ಟಾದರೂ ಅಲ್ಲಿನ ಕಾಂಗ್ರೆಸ್ ಶಾಸಕರು ‘ಸುಲ್ಕೇರಿ ನಾಯ್ದಿಗುರಿಯಲ್ಲಿ ಒಕ್ಕಲೆಬ್ಬಿಸಿರುವ ಪ್ರಕರಣ ಕಾನೂನು ಪ್ರಕಾರವೇ ನಡೆದಿದೆ. ಸಂಸದರು, ಮಾಜಿ ಶಾಸಕರು ಹಾಗೂ ಬಿಜೆಪಿ ಮುಖಂಡರಿಂದ ನಾನು ಪಾಠ ಕಲಿಯಬೇಕಾಗಿಲ್ಲ. ನಾನು ಘಟನಾ ಸ್ಥಳಕ್ಕೆ ಕಾಲಿಡುವುದಿಲ್ಲ. ತಾಕತ್ತಿದ್ದರೆ ಅವರು ನನ್ನನ್ನು ಅಲ್ಲಿಗೆ ಬರುವಂತೆ ಮಾಡಲಿ’ಎಂದು ಘೋಷಿಸಿದ್ದಾರೆ. (ಪ್ರ.ವಾ) ಮತ್ತಷ್ಟು ಓದು »