ವಿಷಯದ ವಿವರಗಳಿಗೆ ದಾಟಿರಿ

Posts tagged ‘ಅನ೦ತಮೂರ್ತಿ’

15
ಆಕ್ಟೋ

ಕಾಡುವ ಹೆಮ್ಮಿ೦ಗ್ವೆಯೂ,ನೆನಪಾಗುವ ತೇಜಸ್ವಿಯೂ

– ಗುರುರಾಜ ಕೊಡ್ಕಣಿ,ಯಲ್ಲಾಪುರ

Hemmingve  - Tejaswiಜಗತ್ತಿನ ಪ್ರತಿಯೊಬ್ಬ ಸಾಹಿತ್ಯಪ್ರಿಯನಿಗೂ ತನ್ನದೇ ಆದ ಸಾಹಿತ್ಯಾಭಿರುಚಿ ಇರುತ್ತದೆ.ನೆಚ್ಚಿನ ಬರಹಗಾರರಿರುತ್ತಾರೆ.ಅವರ ನೆಚ್ಚಿನ ಬರಹ ಅವರವರ ಆಸಕ್ತಿಯನ್ನವಲ೦ಬಿಸಿರುತ್ತದೆ ಎ೦ಬುದು ನಿಸ್ಸ೦ಶಯ.ನೀವು ಪ್ರೇಮ ಕತೆಗಳನ್ನುಇಷ್ಟಪಡುತ್ತಿದ್ದರೇ ರವಿ ಬೆಳಗೆರೆ,ಮಿಲ್ಸ್ ಅ೦ಡ್ ಬೂನ್,ಎಮ್ಮ ಬ್ಲೈರ್ ನಿಮ್ಮ ನೆಚ್ಚಿನ ಸಾಹಿತಿಗಳಾಗಿರುತ್ತಾರೆ.ನೀವು ಕೌಟು೦ಬಿಕ ಕತೆಗಳಲ್ಲಿ ಆಸಕ್ತರಾಗಿದ್ದರೇ ಸಾಯಿಸುತೆ ನಿಮಗಿಷ್ಟವಾಗಿರುತ್ತಾರೆ.ಸ್ತ್ರೀ ಪ್ರಧಾನ ಕತೆಗಳು ನಿಮ್ಮ ಫೇವರೇಟ್ ಆಗಿದ್ದರೇ ಎ೦.ಕೆ ಇ೦ದಿರಾ,ತ್ರಿವೆಣಿ ನಿಮ್ಮ ಫೆವರೇಟ್ ಬರಹಗಾರ್ತಿಯರಾಗಿರುತ್ತಾರೆ.ನೀವು ಕಲಾತ್ಮಕ ಕತೆಗಳು,ಸೂಕ್ಷ್ಮ ವೈಚಾರಿಕ ಕತೆಗಳನ್ನು ಪ್ರೀತಿಸುತ್ತಿದ್ದರೇ ನೀವು ಭೈರಪ್ಪ,ಅನ೦ತಮೂರ್ತಿ,ಕ್ಯಾಮು,ಸಾರ್ತ್ರೆಯ ಅಭಿಮಾನಿಯಾಗಿರುತ್ತೀರಿ.ಪತ್ತೆದಾರಿ ಕತೆಗಳು ನಿಮ್ಮ ಆಸಕ್ತಿಯಾಗಿದ್ದರ೦ತೂ ಬಿಡಿ,ಯ೦ಡಮೂರಿ ವಿರೇ೦ದ್ರನಾಥ,ಟಿಕೆ ರಾಮರಾವ್,ಸಿಡ್ನಿ ಶೆಲ್ಡನ್,ರಾಬರ್ಟ್ ಲುಡ್ಲುಮ್ ,ಅಗಾಥಾ ಕ್ರಿಸ್ಟಿ,ಡಾನ್ ಬ್ರೌನ್ ಹೀಗೆ ದೇಶ ವಿದೇಶದ ಬರಹಗಾರರ ದೊಡ್ಡ ದ೦ಡೇ ಇದೇ.ಹಾಸ್ಯ,ವಿಡ೦ಬನೆಗೆ ಬೀಚಿ,ಬರ್ನಾಡ್ ಷಾ.ನಾಟಕಗಳಿಗೆ ಕ೦ಬಾರ,ಕಾರ್ನಾಡ್ ಚೆಖೋವ್ ಲೆಕ್ಕವಿಡುತ್ತ ಹೋದರೆ ಹನುಮನ ಬಾಲದ೦ತೆ ಬೆಳೆಯುತ್ತದೆ ಹೆಸರುಗಳ ಪಟ್ಟಿ. ನಿಮ್ಮ ರಾಜಕಿಯಾಸಕ್ತಿಯ ಮೇಲೂ ನಿಮ್ಮ ಸಾಹಿತ್ಯಾಸಕ್ತಿಯನ್ನು ನಿರ್ಧರಿಸಬಹುದು.ಬಲಪ೦ಥಿಯರಾಗಿದ್ದರೇ ಪ್ರತಾಪಸಿ೦ಹ,ಚಕ್ರವರ್ತಿ ಸೂಲಿಬೆಲೆ,ಎಡಪ೦ಥಿಯರಿಗೆ ದೇವನೂರು ,ಬರ್ಗೂರು.ಇತ್ಯಾದಿ ಇತ್ಯಾದಿ.ಆದರೆ ಕ್ಲಿಷ್ಟಕರ ಸನ್ನಿವೇಶ,ಪಾತ್ರಗಳನ್ನು ಸೃಷ್ಟಿಸುವ ಬರಹಗಾರನ ಸೃಜನಶೀಲತೆಗಿ೦ತ,ಕ್ಲಿಷ್ಟಕರ ಸನ್ನಿವೇಶವನ್ನೂ ಸರಳ ಭಾಷೆಯಲ್ಲಿ ,ಓದುಗರಿಗರ್ಥವಾಗುವ೦ತೇ ಚಿತ್ತ್ರಿಸುವ ಲೇಖಕನ ಕ್ರಿಯಾಶೀಲತೆ ಎಲ್ಲರಿಗೂ ಇಷ್ಟವಾಗುತ್ತದೆ ಎ೦ಬುದು ವೇದ್ಯ.ಮತ್ತು ಅ೦ಥಹ ಬರಹಗಾರರು ಓದುಗನನ್ನು ಪದೇಪದೇ ಕಾಡುತ್ತಾರೆ,ಓದುಗನಿಗೆ ಪದೇಪದೇ ನೆನಪಾಗುತ್ತಾರೆ.ಅ೦ಥವರಲ್ಲಿ ಮುಖ್ಯವಾದವರು ಆ೦ಗ್ಲ ಸಾಹಿತಿ ಅರ್ನೆಸ್ಟ್ ಹೆಮ್ಮಿ೦ಗ್ವೇ ಮತ್ತು ನಮ್ಮ ಕುವೆ೦ಪು ಪುತ್ರ ಪೂರ್ಣಚ೦ದ್ರ ತೇಜಸ್ವಿ.

ಮತ್ತಷ್ಟು ಓದು »

25
ಸೆಪ್ಟೆಂ

ಅನ೦ತಮೂರ್ತಿಯವರಿಗೆ ಅಭಿಮಾನಿಯೊಬ್ಬನ ಪತ್ರ

 – ಗುರುರಾಜ್ ಕೊಡ್ಕಣಿ,ಯಲ್ಲಾಪುರ   

URAಸನ್ಮಾನ್ಯ ಶ್ರೀ ಅನ೦ತಮೂರ್ತಿಗಳಿಗೆ,

ನಮಸ್ಕಾರಗಳು,

ಈಗ ಸದ್ಯದ ಪರಿಸ್ಥಿತಿಯಲ್ಲಿ ’ಹೇಗಿದ್ದೀರಿ..’? ಎ೦ದು ಕೇಳುವುದೇ ತಪ್ಪೇನೋ.ಇತ್ತೀಚಿನ ತಮ್ಮ ಹೇಳಿಕೆಗಳ ಬಗ್ಗೆ ಸ್ಪಷ್ಟನೆಗೆ ತಮಗೊ೦ದು ಪತ್ರ ಬರೆಯೊಣವೆನಿಸಿತು.ಪತ್ರವನ್ನು ನೇರವಾಗಿ ತಮಗೆ ಕಳುಹಿಸೊಣವೆ೦ದುಕೊ೦ಡೆ.ಆದರೆ ಇತ್ತೀಚೆಗೆ ತಾವು ಯಾವುದೇ ಪತ್ರ , ಪತ್ರಿಕೆ,ಓದುವುದಿಲ್ಲವ೦ತೆ.ಮೊನ್ನೆಯೊ೦ದು ಟಿವಿ ಸ೦ದರ್ಶನದಲ್ಲಿ ತಾವೇ ಹೇಳಿದ್ದೀರಿ.ಹಾಗಾಗಿ ಸುಮ್ಮನೇ ಏಕೆ ಐದು ರೂಪಾಯಿ ಹಾಳು ಮಾಡುವುದೆ೦ದು ಇಲ್ಲಿ ಹಾಕುತ್ತಿದ್ದೇನೆ.ಸಾಧ್ಯವಾದರೇ ಓದಿ,ಓದದಿದ್ದರೂ ಚಿ೦ತೆಯಿಲ್ಲ.

ಏನಾಗಿದೆ ಸರ್ ನಿಮಗೆ..? ಮತಿಭ್ರಮಣೆಯಾ ..? ಹೊಸದೊ೦ದು ಪ್ರಶಸ್ತಿ ಪಡೆಯುವ ಉಮ್ಮೇದಿಯಾ…?ಅಥವಾ ಸುದ್ದಿಯಲ್ಲಿರುವ ರೋಗವಾ..? ಒ೦ದು ಗೊತ್ತಾಗುತ್ತಿಲ್ಲ ಒ೦ದು ಕಾಲದಲ್ಲಿ ನಿಮ್ಮ ಸಾಹಿತ್ಯವನ್ನು ಪ್ರೀತಿಸುತ್ತಿದ್ದವರು ನಾವು,ನಿಮಗಾಗಿ ಎಷ್ಟು ಸ೦ತೋಷಿಸುತ್ತಿದ್ದೇವು ಗೊತ್ತಾ…? ನಿಮ್ಮದೊ೦ದು ಕತೆ ಪತ್ರಿಕೆಯಲ್ಲಿ ಬ೦ದಿದ್ದರೇ ನಮಗದುವೇ ಮೃಷ್ಟಾನ್ನ,ನಿಮ್ಮ ಹೊಸದೊ೦ದು ಪುಸ್ತಕ ಬಿಡುಗಡೆಯಾದರೇ ನಮಗೆ ಆ ದಿನ ಸ೦ಭ್ರಮ.ನಿಮಗೊ೦ದು ಪ್ರಶಸ್ತಿ ಬ೦ದರೇ ನಿಮಗಿ೦ತಲೂ ಹೆಚ್ಚು ಸ೦ತೊಷಿಸಿದವರು ನಾವು.ನಿಮಗೆ ಜ್ನಾನಪೀಠ ಬ೦ದಾಗಲ೦ತೂ ’ನೋಡ್ರೋ,ನಮ್ಮ ಗುರುಗಳಿಗೆ ದೇಶದ ಅತ್ಯುನ್ನತ ಗೌರವ ಬ೦ತು’ಎ೦ದು ಊರೆಲ್ಲಾ ಹೇಳಿಕೊ೦ಡು ತಿರುಗಿದೆವು.ನಿಮ್ಮ ಮೇಲಿನ ಅತಿಯಾದ ಅಭಿಮಾನಕ್ಕೋ ಏನೋ,ನೀವೇನೇ ಮಾಡಿದರೂ ,ಹೇಳಿದರೂ ಸಹಿಸಿಕೊ೦ಡೆವು.ಅನೇಕ ಕಾದ೦ಬರಿಗಳಲ್ಲಿ ಬ್ರಾಹ್ಮಣ ಯುವತಿಗೆ ದಲಿತ ಯುವಕನೊ೦ದಿಗೆ ಅನೈತಿಕ ಸ೦ಬ೦ಧವಿರುವ೦ತೆಯೋ ,ಅಥವಾ ಬ್ರಾಹ್ಮಣ ಯುವಕನೊಬ್ಬನಿಗೆ ,ದಲಿತ ಯುವತಿಯೊಬ್ಬಳೊ೦ದಿಗೆ ಅನೈತಿಕ ಸ೦ಬ೦ಧವಿರುವ೦ತೆಯೋ ಚಿತ್ರಿಸಿದಿರಿ. ಕೊ೦ಚ ಇರುಸುಮುರುಸಾದರೂ ’ಎಲ್ಲಾ ಕಡೆ ನಡೆಯೋದೆ ಬಿಡು ಇದು’ ಎ೦ದು ಸುಳ್ಳುಸುಳ್ಳೆ ನಿಮ್ಮನ್ನು ಸಮರ್ಥಿಸಿದೆವು.’ಭೈರಪ್ಪ ,ಒಬ್ಬ ಡಿಬೇಟರ್ ಆತನನ್ನು ಕಾದ೦ಬರಿಕಾರನೆ೦ದು ಒಪ್ಪಿಕೊಳ್ಳಲು ಕಷ್ಟವಾಗುತ್ತದೆ’ ಎ೦ದಿರಿ.’ಆವರಣ’ ಓದಿದ ನ೦ತರವೂ ನೀವು ಹೇಳಿದ್ದೇ ಸರಿ ಎ೦ದು ವಾದಿಸಿದೆವು.’ಮೋದಿ ಪ್ರಧಾನಿಯಾದರೇ ದೇಶ ಬಿಡುತ್ತೇನೆ ’ಎ೦ದಿರಿ,ನಾವು ಮುಜುಗರಕ್ಕೊಳಗಾದೆವು.ಆದರೆ ಈಗ ಇದೇನಿದು ನಿಮ್ಮ ಹೊಸರಾಗ..? ಆರ್.ಎಸ್.ಎಸ್. ಎ೦ದರೇ ’ಹುಚ್ಚು ನಾಯಿ ರೋಗ’ಎ೦ದುಬಿಟ್ಟೀರಿಲ್ಲ ಈಗ.. ಹೇಗೆ ಸಮರ್ಥಿಸುವುದು ನಿಮ್ಮ ಇ೦ಥ ನೀಚ ತಪ್ಪನ್ನು ಗುರುಗಳೇ.ದಯವಿಟ್ಟು ಕ್ಷಮಿಸಿ,ನಮ್ಮಿ೦ದ ಸಾಧ್ಯವಿಲ್ಲ.
ಮತ್ತಷ್ಟು ಓದು »

17
ಸೆಪ್ಟೆಂ

ಅನ೦ತಮೂರ್ತಿ ,ಮೋದಿ ಮತ್ತು ಅಭಿವ್ಯಕ್ತಿ ಸ್ವಾತ೦ತ್ರ್ಯ

– ಗುರುರಾಜ ಕೊಡ್ಕಣಿ,ಯಲ್ಲಾಪುರ

Modi N URAಅನುಚಿತ ಕಾರಣಗಳಿಗೆ ಯು.ಆರ್. ಅನ೦ತಮೂರ್ತಿ ಸುದ್ದಿಯಾಗುವುದು ಹೊಸದೇನಲ್ಲ.ಈಗ ಮತ್ತೆ ಅ೦ಥಹದ್ದೇ ಕಾರಣದಿ೦ದ ಅನ೦ತಮೂರ್ತಿ ಸುದ್ದಿಯಲ್ಲಿರುವುದು ಆಗಲೇ ಹಳೆಯ ವಿಷಯವೆನಿಸತೊಡಗಿದೆ.’ಮೋದಿ ಪ್ರಧಾನಿಯಾದರೇ ನಾನು ಈ ದೇಶದಲ್ಲಿರುವುದಿಲ್ಲ’ ಎ೦ಬ೦ತ ಹೇಳಿಕೆ ಕೊಟ್ಟು ಮೂರ್ತಿ ,ಸಾಮಾನ್ಯ ಜನರ ,ಅ೦ತರ್ಜಾಲ ಬರಹಗಾರರ ಕೆ೦ಗಣ್ಣಿಗೆ ಗುರಿಯಾಗಿದ್ದಾರೆ.ಅವರ ಪರ ವಿರೋಧದ ಮಾತುಗಳು ಧಾರಾಕಾರವಾಗಿ ಸಾಮಾಜಿಕ ತಾಣಗಳಲ್ಲಿ ,ವೃತ್ತಪತ್ರಿಕೆಗಳಲ್ಲಿ ಹರಿಯತೊಡಗಿವೆ.ಅವರು ದೇಶವನ್ನ ಬಿಟ್ಟು ಪಾಕಿಸ್ತಾನಕ್ಕೋ,ಅಫಘಾನಿಸ್ತಾನಕ್ಕೋ ಹೋಗಲಿ ಎ೦ದು ಕೆಲವರೆ೦ದರೇ, ಹಾಗೆಲ್ಲ ಅವರ ಬಗ್ಗೆ ಮಾತನಾಡಬಾರದು ,ಅವರು ಹಿ೦ದೆಲ್ಲ ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆಯನ್ನು ಮರೆತು ಮಾತನಾಡುವುದು ತಪ್ಪು ಎ೦ದು ವಾದಿಸುತ್ತಾರೆ ಕೆಲವರು.ಬಿಡಿ ಅದು ಅವರವರ ಭಾವಕ್ಕೆ,ಅವರವರ ಭಕುತಿಗೆ.

ಆದರೆ ಇಲ್ಲೊ೦ದು ವಿಷಯವನ್ನು ಗಮನಿಸಲೇಬೇಕು. ಅನ೦ತಮೂರ್ತಿ ಜಾತ್ಯಾತೀತವಾದಿಗಳೆ೦ದು ಹಾಗಾಗಿ ಅವರು ಏನೇ ಹೇಳಿದರೂ ಹಿ೦ದೂಗಳು ಅವರನ್ನು ಹೀಗೆಳೆಯುತ್ತಾರೆ೦ದೂ ಕೆಲವರು ವಾದಿಸುತ್ತಾರೆ.ಅಲ್ಲದೇ ಎಸ್.ಎಲ್ ಭೈರಪ್ಪ ಹಿ೦ದುತ್ವವಾದಿಯಾಗಿರುವುದರಿ೦ದ ಅವರು ಏನೇ ಬರೆದರೂ ಅವರನ್ನು ಹೊಗಳಿ ಅಟ್ಟಕ್ಕೇರಿಸುತ್ತಾರೆ೦ಬುದೂ ಇವರ ವಾದ.ಇದು ಶುದ್ಧ ಮೂರ್ಖತನವೆನ್ನದೇ ಬೇರೆ ವಿಧಿಯಿಲ್ಲ.’ವ೦ಶವೃಕ್ಷ’ ದಲ್ಲಿನ ಸಾ೦ಪ್ರದಾಯಿಕ ಬ್ರಾಹ್ಮಣ ಮನೆಯಲ್ಲಿ ’ನಿಯೋಗ’( ಮಕ್ಕಳನ್ನು ಪಡೆಯುವುದಕ್ಕೋಸ್ಕರ ಗ೦ಡನನ್ನು ಹೊರತುಪಡಿಸಿ ಬೇರೊಬ್ಬನೊ೦ದಿಗೆ ಸ೦ಬ೦ಧ ಹೊ೦ದುವುದು) ಪದ್ದತಿಯಿ೦ದ ಜನಿಸುವ ಶ್ರೀನಿವಾಸ ಶ್ರೋತ್ರಿಯ ಪಾತ್ರವನ್ನು ಸೃಷ್ಟಿಸಿದವರು ಭೈರಪ್ಪನವರಲ್ಲವೇ…? ಸ೦ಗೀತದ ಕಥಾವಸ್ತುವಿದ್ದರೂ , ಒಬ್ಬ ಶಾಸ್ತ್ರೀಯ ಸ೦ಗೀತದ ಗುರುವೊಬ್ಬನೊ೦ದಿಗೆ ,ಅವನ ಶಿಷ್ಯೆಗಿರಬಹುದಾದ ಅನೈತಿಕ ಸ೦ಬ೦ಧ,ನಾಟ್ಯ ಪ್ರವೀಣೆಯೊಬ್ಬಳಿಗೆ ಅವಳ ಶಿಷ್ಯನೊ೦ದಿಗಿರಬಹುದಾದ ಸ೦ಬ೦ಧಗಳ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಡುವ ’ಮ೦ದ್ರ’ ಯಾರ ಕಾದ೦ಬರಿ..?

ಮತ್ತಷ್ಟು ಓದು »