ವಿಷಯದ ವಿವರಗಳಿಗೆ ದಾಟಿರಿ

Posts tagged ‘ಬಡತನ’

30
ಮೇ

ಪ್ಯಾಸೆಂಜರ್ ರೈಲು ….

– ಫಣೀಶ್ ದುದ್ದ

india_power_outage_07ಅದೆಷ್ಟೋ ಬಾರಿ ನಾವು ರೈಲ್ವೆ ಸ್ಟೇಷನ್ನಲ್ಲೋ, ಬಸ್ ಸ್ಟಾಂಡಿನಲ್ಲೋ, ” ಸಾರ್, ನನ್ನ ಪರ್ಸ್ ಕಳೆದು ಹೋಗಿದೆ.. ನಾನು ಆ ಊರಿಗೆ ಹೋಗಬೇಕು.. ಈ ಊರಿಗೆ ಹೋಗಬೇಕು.. ನನ್ನ ಹತ್ತಿರ ಹತ್ತೇ ರೂಪಾಯಿ ಇರುವುದು.. ನಮ್ಮೂರಿಗೆ ಇಪ್ಪತ್ತು ರೂಪಾಯಿ ಚಾರ್ಜು… ಹತ್ತು ರೂಪಾಯಿ ಇದ್ರೆ ಕೊಡ್ತೀರಾ.?” ಎಂದು ಕೇಳುವವರು ದಿನ ಬೆಳಗಾದರೆ ಸಿಗುತ್ತಾರೆ. ಕೆಲವರು,” ಹತ್ತು ರೂಪಾಯಿ ತಾನೆ, “ಟೀ”ಗೋ, ಸಿಗರೇಟಿಗೋ ಕಳೆಯುವ ಬದಲು ಇವರಿಗೆ ಕೊಟ್ಟರೆ ಉಪಯೋಗವಗುತ್ತದಲ್ಲ ಎಂದು ಹತ್ತೋ, ಇಪ್ಪತ್ತೋ ಕೈಗಿಟ್ಟು ಹೋಗುವವರಿದ್ದಾರೆ. ಇನ್ನು ಕೆಲವರು, “ನಿಮ್ಮಂತವರನ್ನು ಬೇಕಾದಷ್ಟು ಜನರನ್ನು ನೋಡಿದ್ದೀನಿ, ಮೈ ಬಗ್ಗಿಸಿ ದುಡಿಯುವುದು ಬಿಟ್ಟು ಬರಿ ಸುಳ್ಳು ಹೇಳ್ತೀರಾ… ಸುಮ್ನೆ ಹೋಗಿ” ಎಂದು ಬಾಯಿಗೆ ಬಂದಂತೆ ಬೈದು ಹೋಗಿ ಬಿಡುತ್ತಾರೆ. ಆದರೆ ನಾವ್ಯಾರು ಅದರ ಹಿಂದಿರುವ ಸತ್ಯಾಸತ್ಯತೆಗಳನ್ನು ತಿಳಿಯುವ ಗೋಜಿಗೇ ಹೋಗಿರುವುದಿಲ್ಲ… ಮನಬಂದಂತೆ ಬೈದು ಹೋದ ಮೇಲೂ ಕೆಲವರು ಮನದಲ್ಲೇ ಬೇಸರ ಮಾಡಿಕೊಳ್ಳುವುದೂ ಉಂಟು,” ಅಯ್ಯೋ, ನಿಜವಾಗಿ ಅವನಿಗೆ ಹಣ ಬೇಕಾಗಿತ್ತೋ ಏನೋ..ಛೇ..ಹತ್ತು ರೂಪಾಯಿ ಕೊಟ್ಟಿದ್ದರೆ ನನ್ನ ಗಂಟೇನೂ ಹೋಗುತ್ತಿರಲಿಲ್ಲ”ಎಂದು. ಮತ್ತಷ್ಟು ಓದು »

8
ಆಕ್ಟೋ

ತುತ್ತನ್ನು ನಿರ್ಲಕ್ಷಿಸುವ ಮುನ್ನ

– ನವೀನ್ ನಾಯಕ್

Dont Waste Food      ಭಾರತ ಬದಲಾಗುತಿದೆ, ಇದನ್ನು ನಮ್ಮ ಮುಖ್ಯಮಂತ್ರಿಯಿಂದ ಹಿಡಿದು ಪ್ರಧಾನ ಮಂತ್ರಿಯವರೆಗೆ ಎಲ್ಲರೂ ದಿನಕೊಮ್ಮೆ ಮಂತ್ರದಂತೆ ಪಟಿಸುತಿದ್ದಾರೆ. ಇದರಿಂದ ನಮ್ಮ ಕಂಗಳು ಬದಲಾವಣೆಯ ಸಮಯ ಹತ್ತಿರ ಬರುತಿದೆ ಎಂದು ಹೊಸ ಕನಸು ಕಾಣತೊಡಗಿದೆ. ಇಂಥ ಸಮಯದಲ್ಲಿ ವಾಸ್ತವವನ್ನು ವಿಶ್ವಸಂಸ್ಥೆ ಬಯಲಿಗೆಳೆದು ನಮ್ಮ ಸರಕಾರ ನಡೆಸುತ್ತಿರುವವರ ಮುಖವಾಡವನ್ನು ಕಳಚಿದೆ. ವಿಶ್ವಸಂಸ್ಥೆ ನಡೆಸಿರುವ ಸಮೀಕ್ಷೆಯನ್ನು ಗಮನಿಸಿದರೆ ಭಾರತದ ಬದಲಾವಣೆಯು ಮುಂದುವರೆಯುವದು ಬಿಟ್ಟು ಹಿಮ್ಮುಖವಾಗಿ ನಡೆಯತೊಡಗಿದೆ.ಈ ಅನಿಸಿಕೆ ಏಕೆಂದರೆ ಅದರ ಸಮೀಕ್ಷೆಯ ವರದಿಯನ್ನು ನೋಡಿ.

ವಿಶ್ವಸಂಸ್ಥೆ;- ವಿಶ್ವದಲ್ಲಿ 120 ಕೋಟಿ ಜನ ಇನ್ನೂ ಕಿತ್ತು ತಿನ್ನುವ ಬಡತನದ ಬೇಗೆಯಲ್ಲಿ ದಿನವನ್ನು ಕಳೆಯುತಿದ್ದಾರೆ. ಅದರಲ್ಲಿ ಮೂರನೆಯ ಒಂದರಷ್ಟು ಅಂದರೆ 33% (39 ಕೋಟಿ 60 ಲಕ್ಷ ಜನ) ಭಾರತೀಯರಾಗಿದ್ದಾರೆ. ಇವರು ದಿನವೊಂದಕ್ಕೆ ಸುಮಾರು 65 ರುಪಾಯಿಗಳಿಗಿಂತಲೂ ಕಡಿಮೆ ಹಣದಲ್ಲಿ ಜೀವನ ದೂಡುತಿದ್ದಾರೆ. ಅವರದೇ ವರದಿ ಪ್ರಕಾರ 1981 ರಿಂದ 2010ರ ನಡುವೆ ವಿಶ್ವದ ಬಡತನದ ಪ್ರಮಾಣ ಸುಮಾರು ಅರ್ಧದಷ್ಟು ಇಳಿಕೆಯಾಗಿದೆ ಮತ್ತು ಇದಕ್ಕೆ ವಿರುದ್ಧವಾಗಿ ಅಭಿವೃದ್ಧಿಶೀಲ ಹಾಗು ಬಡರಾಷ್ಟ್ರಗಳಲ್ಲಿ

ಮತ್ತಷ್ಟು ಓದು »