ವಿಷಯದ ವಿವರಗಳಿಗೆ ದಾಟಿರಿ

Posts tagged ‘ರಾಮಸೇತು’

19
ಮಾರ್ಚ್

ರಾಮಸೇತು ಒಡೆದರೆ ಥೋರಿಯಮ್ ನಿಕ್ಷೇಪಕ್ಕೆ ಎಳ್ಳು ನೀರು…

-ಚಕ್ರವರ್ತಿ ಸೂಲಿಬೆಲೆ

Rama Sethuve1ನಮಗೇ ಅರಿವಿಲ್ಲದೇ ಭಯಾನಕ ಪರಿಸ್ಥಿತಿಯತ್ತ ತೆವಳಿಕೊಂಡು ಹೋಗುತ್ತಿದ್ದೇವೆ! ನಾವು ಬಳಸುವ ಪೆಟ್ರೋಲು – ಡೀಸೆಲ್ಲಿನ ಮುಕ್ಕಾಲು ಭಾಗ ಆಮದು ಮಾಡಿಕೊಳ್ಳುತ್ತಿದ್ದೇವೆ. ಕಳೆದ ವರ್ಷದ ಲೆಕ್ಕಾಚಾರದ ಪ್ರಕಾರ ೧೩೪ ಶತಕೋಟಿ ಡಾಲರುಗಳಷ್ಟು ತೈಲ ಆಮದು ಮಾಡಿಕೊಂಡಿದ್ದೇವೆ. ಆಮದು ಮಿತಿಮೀರಿ ರಫ್ತು ನೆಲ ಕಚ್ಚುತ್ತಿರುವುದರಿಂದ ಡಾಲರಿನೆದುರು ರೂಪಾಯಿ ಸೋಲುತ್ತಲೇ ಸಾಗುತ್ತಿದೆ. ಒಂದಷ್ಟು ಜನಕ್ಕೆ ರೂಪಾಯಿಯ ಅಪಮೌಲ್ಯ ಲಾಭದಾಯಕವೆನಿಸಿದರೂ ಭಾರತದ ದೃಷ್ಟಿಯಿಂದ ಬಲು ಭಯಾನಕ.
ಅದೇಕೋ ನೆಹರೂ ಕಾಲದಿಂದಲೂ ಈ ದೇಶಕ್ಕೆ ದೂರದೃಷ್ಟಿಯ ಕೊರತೆ ಇದೆ. ಮುಂದಿನ ನೂರು ವರ್ಷಗಳಿಗೆ, ಸಾವಿರ ವರ್ಷಗಳಿಗೆ ಯೋಜನೆ ರೂಪಿಸುವ ಪ್ರಯತ್ನಗಳೇ ಇಲ್ಲ. ಅದು ಬಿಡಿ, ಅಂತಾರಾಷ್ಟ್ರೀಯ ಒತ್ತಡಗಳಿಗೆ ಮಣಿದು ಇರುವ ಸಂಪತ್ತನ್ನೂ ನಾಶ ಮಾಡಿಕೋಳ್ಳುವ ಜಾಯಮಾನ ನಮ್ಮದು.

ಎನರ್ಜಿ ಇನ್‌ಫರ್ಮೇಶನ್ ಏಜೆನ್ಸಿಯ ಪ್ರಕಾರ ಅಮೆರಿಕಾ, ಚೀನಾ, ರಷ್ಯಾ ಬಿಟ್ಟರೆ ಹೆಚ್ಚು ತೈಲ ಬಳಸುವ ರಾಷ್ಟ್ರ ನಮ್ಮದೇ. ಉಳಿದ ಮೂರು ರಾಷ್ಟ್ರಗಳೂ ತೈಲ ಹೊರತೆಗೆದು ಸಂಸ್ಕರಿಸಿ ಬಳಸುವಲ್ಲಿ ಸ್ವಾವಲಂಬಿಯಾಗುವತ್ತ, ಅಷ್ಟೇ ಅಲ್ಲ, ತಮ್ಮ ತೈಲ ಕಂಪನಿಗಳನ್ನು ತೈಲ ರಾಷ್ಟ್ರಗಳಿಗೆ ಕಳಿಸುವತ್ತಲೂ ಗಮನ ನೀಡುತಿವೆ. ನಾವು ಮಾತ್ರ ಕಂಡುಹಿಡಿದಿರುವ ತೈಲ ಸಂಪತ್ತನ್ನು ಹೊರತೆಗೆಯಲೂ ಮೀನಾಮೇಷ ಎಣಿಸುತ್ತ ಬಿಲಿಯನ್‌ಗಟ್ಟಲೆ ಡಾಲರುಗಳನ್ನು ವ್ಯರ್ಥ ಮಾಡುತ್ತ, ಕಾಲ ಕಳೆಯುತ್ತಿದ್ದೇವೆ. ಅದೇ ಏಜೆನ್ಸಿಯ ಅಂಕಿ ಅಂಶದ ಪ್ರಕಾರ ೨೦೧೦ರಲ್ಲಿ ನಾವು ಏಳುವರೆ ಲಕ್ಷ ಬ್ಯಾರಲ್‌ನಷ್ಟು ತೈಲವನ್ನು ಪ್ರತಿ ನಿತ್ಯ ಹೊರತೆಗೆದರೆ, ಆ ವರ್ಷ ೩೨ ಲಕ್ಷ ಬ್ಯಾರಲ್‌ನಷ್ಟು ತೈಲವನ್ನು ಪ್ರತಿನಿತ್ಯ ಬಳಸಿದ್ದೇವೆ. ಅಂದಮೇಲೆ ಅಂತಾರಾಷ್ಟ್ರೀಯ ಒತ್ತಡಗಳು ನಮ್ಮ ಮೇಲೆ ಹೇಗಿರಬಹುದೆಂದು ಲೆಕ್ಕ ಹಾಕಿ. ನಮಗೆ ಪೆಟ್ರೋಲು- ಡೀಸೆಲ್ಲು ಕಳಿಸುವುದಿಲ್ಲವೆಂದು ತೈಲ ರಾಷ್ಟ್ರಗಳು ನಿರ್ಬಂಧ ಹೇರಿ ಕುಂತುಬಿಟ್ಟರೆ ನಮ್ಮ ಕಥೆ ಮುಗಿದೇಹೋಯ್ತು. ಹಾಹಾಕಾರ ಉಂಟಾಗಿಬಿಡುತ್ತೆ.

ಮತ್ತಷ್ಟು ಓದು »

26
ಫೆಬ್ರ

ರಾಮಸೇತು: ಭಕ್ತಿ ಭಾವನೆಯ ಜೊತೆಗೆ ಜೀವನೋಪಾಯದ ಪ್ರಶ್ನೆಯೂ ಹೌದು

– ಅಜಿತ್ ಶೆಟ್ಟಿ,ಉಡುಪಿ

Raama Setuveರಾಮಾಯಣ ಮತ್ತು ಮಹಾಭಾರತ ಗ್ರಂಥಗಳು ಹಿಂದೂಗಳಿಗೆ ಧಾರ್ಮಿಕ ಪವಿತ್ರ ಗ್ರಂಥಗಳಾಗಿದ್ದು, ಈ ಎರಡೂ ಕೃತಿಗಳು ಇತಿಹಾಸದ ಕಥೆಗಳಾಗಿವೆ .ಅನಾದಿಕಾಲದಿಂದ ಮಹಾಪಂಡಿತರು, ತಿಳಿದವರು ಇವನ್ನು ಪಂಚಮವೇದವೆಂದು ಕೈ ಮುಗಿಯುತ್ತಾರೆ. ಸಾವಿರಾರು ವರ್ಷಗಳಿಂದ ಭಾರತೀಯರ ಜನಜೀವನದಲ್ಲಿ ಮಿಳಿತವಾಗಿರುವ ಈ ಪವಿತ್ರ ಗ್ರಂಥಗಳ ಯಥಾರ್ಥವೇನು ಎಂದು ಕೇಳಿದರೆ ಏನೂಂತ ಹೇಳಬೇಕು? ಆರ್ಯ-ದ್ರಾವಿಡರು ವೈರಿಗಳೆಂದು ಕಥೆ ಕಲ್ಪಿಸಿ, ರಾಮ ಯಾವ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದನೆಂದು ಸರ್ಟಿಫಿಕೇಟ್ ಕೊಡಿ,ಸಾಕ್ಷಧಾರ ಕೊಡಿ ಎನ್ನುವ ಮೂರ್ಖ ಕರುಣಾನಿಧಿಯಂಥವರಿಗೆ ಏನೆಂದು ಉತ್ತರಿಸಬೇಕು ?

ಮೊದಲು ಹಿಂದೂ ರಾಷ್ಟ್ರ ಅಖಂಡ ಭಾರತದ ಮೇಲೆ ಮಹಮದೀಯರ ಆಕ್ರಮಣವಾಯಿತು . ನಂತರ ವ್ಯವಹಾರಕ್ಕೆ ಬಂದ ಕ್ರೈಸ್ತ ಯುರೋಪಿಯನ್ನರ ಆಕ್ರಮಣ . ಮಹಮದೀಯರು ಹೆದರಿಸಿ ಬೆದರಿಸಿ,ಕೊಲೆ ಸುಲಿಗೆ ಮಾಡುತ್ತ ನಮ್ಮ ಸಂಪತ್ತು ಲೂಟಿ ಹೊಡೆದರು.ಮೋಸದಿಂದ, ವಿಶ್ವಾಸಘಾತುಕ ಕೆಲಸದಿಂದ,ಕುಟಿಲ ತಂತ್ರದಿಂದ ಹಿಂದೂ ದೊರೆಗಳನ್ನು ಸೋಲಿಸಿ,ಪ್ರಜೆಗಳನ್ನು ಹೆದರಿಸಿ,ಒಪ್ಪದವರ ಕೊಲೆ ಮಾಡಿ ಅವರ ಮತ ಪ್ರಚಾರ ಮಾಡಿ ಮತಾಂತರಿಸಿದರು.ಅಲ್ಲಾವುದ್ದೀನ್ ಖಿಲ್ಜಿ, ಔರಂಗಜೇಬ್,ತುಘಲಕ್ ಅವರಿಂದ ಟಿಪ್ಪುವಿನವರೆಗೆ ಎಲ್ಲರೂ ಭಾರತೀಯ ಸಂಸ್ಕೃತಿಯ ಮೇಲೆ ಆಕ್ರಮಣದ ಆಡಳಿತ ನಡೆಸಿದವರೇ. ಅದಕ್ಕೆ ಇರಬೇಕು ವಿಲ್ ದುರಂಟ್ STORY OF CIVILIZATION ಕೃತಿಯಲ್ಲಿ ಭಾರತದ ಮೇಲೆ ನಡೆದ ಇಸ್ಲಾಮಿನ ಆಕ್ರಮಣ ವಿಶ್ವದ ಇತಿಹಾಸದ ಅತ್ಯಂತ ರಕ್ತಸಿಕ್ತ ಅದ್ಯಾಯವೆಂದಿದ್ದು.ಯುರೋಪಿಯನ್ನರು ಭಾರತೀಯರ ಶಕ್ತಿ ಅಡಗಿರುವುದು ಭಾರತೀಯ ಸಂಸ್ಕೃತಿಯಲ್ಲಿ ಎಂದು ಮನಗಂಡು ಹಿಂಸಾ ಮಾರ್ಗವನ್ನು ಬದಿಗಿಟ್ಟು, ಹಿಂದೂ ನಂಬಿಕೆ , ಅಚಾರ ವಿಚಾರ ದೇವರನ್ನು ಪ್ರಶ್ನಿಸುತ್ತಾ,ಲೇವಡಿ ಮಾಡುತ್ತ,ಹಣದ ಆಮಿಷವೊಡ್ಡಿ ಮಿಷನರಿಗಳ ಮೂಲಕ ಉಪಾಯದಿಂದ ಮತಾಂತರದ ಕ್ರೈಸ್ತಿಕರಣಕ್ಕೆ ಮುಂದಾದರು.ಹಿಂದೂ ಧರ್ಮ ಪ್ರಸಾರಕ್ಕೆ ಇಲ್ಲಿತನಕ ಎಲ್ಲಿಯೂ ಹಿಂದೂಗಳು ಯುದ್ದ ಮಾಡಿಲ್ಲ,ಇನ್ನೊಂದು ಧರ್ಮವನ್ನು ನಿಂದಿಸಿಲ್ಲ ತೀರ ವಿಪರೀತವಾಗುತ್ತಿದೆ,ಸ್ವಾಭಿಮಾನಕ್ಕೆ ದಕ್ಕೆಯಾಗುತ್ತಿದೆ ಎಂದೆನಿಸಿದಾಗ ಅದಕ್ಕೆ ಉತ್ತರಿಸಿದ್ದಾರೆ.

ಮತ್ತಷ್ಟು ಓದು »