ವೈಚಾರಿಕತೆಯ ಹೆಸರಿನಲ್ಲಿ ವಸಾಹತುಪ್ರಜ್ಞೆಯನ್ನು ನೆಕ್ಕುತ್ತಿರುವ ಬುದ್ಧಿಜೀವಿಗಳು
– ವಿನಾಯಕ ಹಂಪಿಹೊಳಿ
ವಿಶ್ವವಾಣಿಯಲ್ಲಿ ೮-ಮೇ-೨೦೧೬ ರಂದು ಪ್ರಕಟವಾದ ಕೆ. ಎಸ್. ಭಗವಾನ್ ಅವರ “ಯಜ್ಞದ ಹೆಸರಿನಲ್ಲಿ ಮುಗ್ಧರನ್ನು ಮುಕ್ಕುತ್ತಿರುವ ದೈವಜ್ಞರು” ಎಂಬ ಲೇಖನವು ಎರಡು ಭ್ರಮೆಗಳ ಆಧಾರದ ಮೇಲೆ ನಿಂತಿದೆ. ಮೊದಲನೆಯದು ಮತ್ತೂರಿನಲ್ಲಿ ನಡೆದ ಯಾಗದಲ್ಲಿ ಪ್ರಾಣಿಬಲಿಯು ನಡೆದಿದೆ ಎಂಬ ಭ್ರಮೆ ಮತ್ತು ಎರಡನೆಯದು ಪಾಶ್ಚಿಮಾತ್ಯ ವಿದ್ವಾಂಸರು ವೈದಿಕ ಸಂಪ್ರದಾಯಗಳು ಹೊಂದಿರುವ ಸಾಹಿತ್ಯದ ಕುರಿತು ಕಟ್ಟಿಕೊಟ್ಟ ಚಿತ್ರಣವೇ ಸತ್ಯ ಎಂಬ ಭ್ರಮೆ. ಮತ್ತೂರಿನಲ್ಲಿ ಪ್ರಾಣಿಬಲಿ ನಡೆದಿಲ್ಲ ಎಂಬ ಪ್ರಾಥಮಿಕ ವರದಿಯನ್ನು ಸರ್ಕಾರೀ ಅಧಿಕಾರಿಗಳೇ ನೀಡಿರುವುದರಿಂದ ನೇರವಾಗಿ ಎರಡನೇ ಭ್ರಮೆಗೆ ಬರೋಣ. ಮತ್ತಷ್ಟು ಓದು 




