ವಿಷಯದ ವಿವರಗಳಿಗೆ ದಾಟಿರಿ

Posts tagged ‘The Battle for Sanskrit’

7
ಜೂನ್

ಸಂಸ್ಕೃತಕ್ಕಾಗಿ ಯುದ್ಧ

– ಪ್ರವೀಣ ಜಿ ಹೆಗ್ಡೆ

“ಅಮೆರಿಕನ್ ಓರಿಯಂಟಲಿಸ್ಮ್” ಅಥವಾ ಅಮೇರಿಕಾ ಚಿಂತನಾ ವಿಧಾನ/ರೀತಿ , ಇದು ಅಮೇರಿಕಾದ ಇತಿಹಾಸದಿಂದ ಹುಟ್ಟಿರುವಂಥದ್ದು. ಯೂರೋಪಿನಿಂದ ಅಮೆರಿಕಾಕ್ಕೆ ವಲಸೆ ಹೋದ ಬಿಳಿಯರು , ಅಲ್ಲಿಯ ಮೂಲ ನಿವಾಸಿಗಳ ಜೊತೆ ಕಾದಾಡಿ ಹಿಂಸೆಯ ಮೂಲಕ, ಇಲ್ಲವೇ ಅವರ ಜೊತೆಗಿದ್ದಂತೆ ವರ್ತಿಸಿ ಆಂತರಿಕವಾಗಿ ನಿಶ್ಯಕ್ತಿಗೊಳಿಸುವ ಮೂಲಕ ತಮ್ಮ ಅಧಿಪತ್ಯವನ್ನು ಅಮೇರಿಕಾದಲ್ಲಿ ಸ್ಥಾಪಿಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಈ ಪಾಶ್ಚಾತ್ಯ ದೃಷ್ಟಿಯ ಚೌಕಟ್ಟನ್ನೇ ಉಪಯೋಗಿಸಿ ,ಪಾಶ್ಚಾತ್ಯವಲ್ಲದ ಸಂಸ್ಕೃತಿಗಳನ್ನೂ ಅಧ್ಯಯಿಸುವುದು ಸಾಮಾನ್ಯವಾಗಿ ಜಗತ್ತಿನಾದ್ಯಂತ ರೂಢಿಯಲ್ಲಿರುವ ವಿಷಯ. ಆದರೆ ಇಲ್ಲೊಂದು ಅತ್ಯಂತ ಗಮನಾರ್ಹವಾದ ವಿಷಯವಿದೆ, ಅದ್ಯಾವುದೆಂದರೆ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ಹೆಚ್ಚಾಗುತ್ತಿರುವ ಅಮೇರಿಕಾ ಪ್ರಣೀತ ಅಧ್ಯಯನದ ಪ್ರಾಬಲ್ಯ. ಅದರಲ್ಲಿಯೂ ಗಮನಿಸಲೇಬೇಕಾದ ಅತೀ ಎಚ್ಚರಿಕೆಯ ಮತ್ತು ಸೂಕ್ಷ್ಮ ವಿಷಯವೇನೆಂದರೆ,ಅವರುಗಳು ಮೇಲು ಮೇಲೆ ಭಾರತದ ಸಂಸ್ಕೃತಿಯ ಹಿತೈಷಿ ಎನ್ನುವಂತೆ ವರ್ತಿಸಿದರೂ, ಭಾರತದ ಪೂಜ್ಯ ,ಪವಿತ್ರ ಸಂಪ್ರದಾಯಗಳ ಮತ್ತು ಸನಾತನ ಧರ್ಮದ ಬಗೆಗೆ ಅವರಿಗಿರುವ ಕನಿಷ್ಠ ಗೌರವ ಮತ್ತು ಕಾಳಜಿ.

ರಾಜೀವ ಮಲ್ಹೋತ್ರ ಅವರು ತಮ್ಮ ಪುಸ್ತಕದಲ್ಲಿ “ಅಮೇರಿಕಾ ಚಿಂತನಾ ರೀತಿ” ಎಂಬುದು ಏನು, ಅದು ಭಾರತೀಯ ಸಂಸ್ಕೃತಿಯ ಅಧ್ಯಯನದಲ್ಲಿ ಯಾವರೀತಿಯಲ್ಲಿ ಉಪಯೋಗಿಸಲ್ಪಡುತ್ತಿದೆ ? ಎನ್ನುವುದನ್ನು ಅತಿ ಸ್ಪಷ್ಟವಾಗಿ ವಿವರಿಸಿದ್ದಾರೆ. ಪುಸ್ತಕದ ತಲೆ ಬರಹ ಹೇಳುವಂತೆ,ಸಂಸ್ಕೃತ ರಾಜಕೀಯ ಸಾಧನವೋ ಅಥವಾ ಪವಿತ್ರವೋ ? ಶೋಷಣೆಯೋ ಅಥವಾ ವಿಮೊಚನೆಯೋ?ಸತ್ತಿಹುದೋ ಅಥವಾ ಬದುಕಿಹುದೋ?

ಮಲ್ಹೋತ್ರರವರು, ಅಮೇರಿಕಾ ಶಿಕ್ಷಣದಲ್ಲಿ ಬೇರೂರಿರುವ ಹೊಸ ರೀತಿಯ “ಓರಿಯಂಟಲಿಸ್ಮ್“ ಅಥವಾ ಚಿಂತನಾ ವಿಧಾನ/ರೀತಿಯ ಬಗೆಗೆ ಬರೆದಿರುವ ಅತೀ ಪ್ರಮುಖರು. ಅಮೆರಿಕಾ ದೇಶವು ಜಗತ್ತಿನ ದೊಡ್ಡಣ್ಣನಾಗಿ, ಎಲ್ಲ ಕ್ಷೇತ್ರಗಳಲ್ಲಿಯೂ ಹಿಡಿತ ಸಾಧಿಸುವುದರೊಂದಿಗೆ, ಹಿಂದಿನಿಂದ ನಡೆದುಕೊಂಡು ಬಂದಿದ್ದ ಯೂರೋಪ್ ಕೇಂದ್ರಿತವಾಗಿದ್ದ ಭಾರತೀಯ ಧರ್ಮ, ಸಂಸ್ಕೃತಿಗಳ ಅಧ್ಯಯನವು ಈಗ ಅಪ್ರಸ್ತುತವಾಗಿ, ಅದರ ಸ್ಥಾನವನ್ನು ಅಮೇರಿಕ ಕೇಂದ್ರಿತ ಭಾರತದ ಅಧ್ಯಯನ ಆಕ್ರಮಿಸಿಕೊಂಡಿದೆ.

ಅಮೇರಿಕಾದ ಅಧ್ಯಯನ ಮಾಡುವ “ಚಿಂತನಾ ವಿಧಾನ” ಭಾರತೀಯ ಸಂಸ್ಕೃತಿಗೆ ಹೇಗೆ ಅಪಾಯಕಾರಿ ?

ಮತ್ತಷ್ಟು ಓದು »

24
ಫೆಬ್ರ

ಇಲ್ಲಿ ಅಸಹಿಷ್ಣುತೆಯಿದೆ!

Dedicated to our purva paksha and uttara- paksha debating tradition. With gratitude to the purva-pakshins (opponents) I have learned from. May we engage in this intellectual yajna, with mutual respect.

-ನವೀನ ಗಂಗೋತ್ರಿ

ದಿ ಬ್ಯಾಟಲ್ ಫಾರ್ ಸಂಸ್ಕೃತ್ರಾಜೀವ್ ಮಲ್ಹೋತ್ರಾ ತಮ್ಮ ಇತ್ತೀಚಿನ ಹೊಸ ಪುಸ್ತಕ, ‘ದಿ ಬ್ಯಾಟಲ್ ಫಾರ್ ಸಂಸ್ಕೃತ್’ ನ ಅರ್ಪಣೆಯಲ್ಲಿ ಈ ರೀತಿ ಬರೆಯುತ್ತಾರೆ. ಈ ನೆಲದಲ್ಲಿ ಒಂದು ಕಾಲಕ್ಕೆ ಉತ್ತುಂಗ ತಲುಪಿದ್ದ ಮತ್ತು ಮಹತ್ತರ ಗೌರವಕ್ಕೆ ಪಾತ್ರವಾಗಿದ್ದ ’ವಾಕ್ಯಾರ್ಥ’ ಪರಂಪರೆ ಅಥವಾ ವಾದ ಪ್ರತಿವಾದದ ಸಂಸ್ಕೃತಿಯ ಕುರಿತು ಆ ಪುಸ್ತಕ ಧ್ವನಿಯೆತ್ತುತ್ತದೆ. ಹಾಗೆ ದನಿಯಾಗಲೇ ಬೇಕಾದ ಕಾಲಖಂಡದಲ್ಲಿ ನಾವಿದ್ದೇವೆಂಬುದು ವಿಷಯ.

ನಮ್ಮ ವೇದಗಳು, ಸ್ಮೃತಿಗಳು, ನಮ್ಮ ಕಥೆ, ಪುರಾಣ, ಕಾವ್ಯ, ಶಾಸ್ತ್ರ, ಕಲಾಪ್ರಕಾರ ಮತ್ತು ಸಮಾಜದ ವ್ಯವಸ್ಥೆಯನ್ನೆಲ್ಲ ನಾವು ಸರಿಯಾಗಿ ಅರ್ಥ ಮಾಡಿಕೊಳ್ಳುವ ಅಗತ್ಯವೇ ಇಲ್ಲ ಅನ್ನುವ ಭರದಲ್ಲಿ ನಾವಿದ್ದರೆ ನಮ್ಮದೆಲ್ಲವನ್ನೂ ತಮ್ಮ ಸಮಾಜ ಮತ್ತು ತಮ್ ತಮ್ಮ ನಾಗರಿಗಕತೆಯ ಅರಿವಿನ ಪರಿಧಿಯಲ್ಲಿ ಅರ್ಥವಿಸಿಕೊಂಡು ವ್ಯಾಖ್ಯಾನ ಬರೆಯುವ ಹುಕಿಯೊಂದು ಪಶ್ಚಿಮ ರಾಷ್ಟ್ರಗಳ ವಿದ್ವಾಂಸರಲ್ಲಿ ಬಹುಕಾಲದಿಂದ ಚಾಲ್ತಿಯಲ್ಲಿದೆ. ಭಾರತದ ಬಗ್ಗೆ ತಿಳಿದುಕೊಳ್ಳುವ ಅಗತ್ಯ ನಮಗೆ ಕಾಣಿಸಿದಾಗೆಲ್ಲ ಈ ಪಶ್ಚಿಮದ ವಿದ್ವಾಂಸರು ಬರೆದದ್ದನ್ನು ಓದದೇ ಇರಲು ಸಾಧ್ಯವೇ ಇಲ್ಲ ಅನ್ನುವಷ್ಟು ಸಂಗತಿಗಳನ್ನೀಗಾಗಲೇ ಅವರು ಬರೆದಾಗಿದೆ. ಜಗತ್ತು ಮುನ್ನೂರರವತ್ತು ಡಿಗ್ರಿ ತೆರೆದುಕೊಳ್ಳುತ್ತಿರುವ ಹೊತ್ತಿನಲ್ಲಿ ನಮ್ಮ ಕುರಿತಾಗಿ ಜಗತ್ತಿನೆಲ್ಲ ಮೂಲೆಗಳಿಂದ ಬರುವ ಚಿಂತನೆಗಳಿಗೆ ನಾವು ಕಿವಿಯಾಗಲೇ ಬೇಕಾಗುತ್ತದೆನ್ನಿ. ಆದರೆ ಅದೇ ಹೊತ್ತಿನಲ್ಲಿ ನಮ್ಮ ಕುರಿತಾದ ವಿಮರ್ಶೆಗಳಿಗೆ ಉತ್ತರವನ್ನು ಕಂಡುಕೊಳ್ಳುವುದೂ ಮತ್ತು ಅವರ ಕುರಿತಾದ ಆಮೂಲಾಗ್ರ ಅಧ್ಯಯನಮಾಡುವುದೂ ನಮಗೆ ಮುಖ್ಯವಾಗಬೇಕಿತ್ತು. ದುರದೃಷ್ಟವಶಾತ್ ನಾವು ಆ ಹಾದಿಯಲ್ಲಿ ತುಂಬಾ ತುಂಬಾ ಹಿಂದಿದ್ದೇವೆ. ಭಾರತೀಯವಲ್ಲದ ಆಬ್ರಹಾಮಿಕ್ ರಿಲಿಜನ್ನುಗಳ ಒಳಸುಳಿ ಮತ್ತು ಹುಳುಕುಗಳ ಬಗ್ಗೆ ತಾತ್ತ್ವಿಕವಾದ ಮರುಪ್ರಶ್ನೆಯನ್ನು ಹುಟ್ಟುಹಾಕುವುದಂತಿರಲಿ, ನಮ್ಮ ಕುರಿತಾಗಿಯೂ ಸರಿಯಾದ ಅವಗಾಹನೆಯೇ ಇಲ್ಲದಂಥಾ ಸ್ಥಿತಿಯಲ್ಲಿ  ನಾವಿದ್ದೇವೆ.

’ದಿ ಬ್ಯಾಟಲ್ ಫಾರ್ ಸಂಸ್ಕೃತ್’- ಪುಸ್ತಕವು ಬರಿಯ ಸಂಸ್ಕೃತ ಭಾಷೆಯೊಂದರ ಬಗ್ಗೆ ಮಾತ್ರವೇ ಕಾಳಜಿಯ ದನಿಯೆತ್ತದೆ, ಸಮಗ್ರವಾಗಿ ನಮ್ಮ ಚಿಂತನ ಪರಂಪರೆಯ ಸಧ್ಯದ ಅವಸ್ಥೆಯನ್ನೂ ಚರ್ಚಿಸುತ್ತದೆ. ಅದನ್ನು ಕಳಕೊಂಡ ನಾವು ಇವತ್ತಿಗೆದುರಿಸುತ್ತಿರುವ ಬೌದ್ಧಿಕ ಅಪಾಯಗಳನ್ನು ವಿಶ್ಲೇಷಿಸುತ್ತದೆ. ನಮ್ಮ ಸುತ್ತಲೂ ಸುದ್ದಿ ಮಾಡುವ ಕನ್ನಡದ ಬೌದ್ಧಿಕ ಲೋಕವನ್ನು ಪ್ರಸ್ತುತ ಪುಸ್ತಕದ ಹಿನ್ನೆಲೆಯಲ್ಲಿ ನೋಡೋಣ.

ಮತ್ತಷ್ಟು ಓದು »