ರಾಜ್ಯ ರಾಜಕೀಯ ಗದ್ದಲಕ್ಕೆ ಗುದ್ದು ನೀಡಿದ ಐಟಿ ದಾಳಿ
ಒಂದೆಡೆ ರಾಜ್ಯ ರಾಜಕೀಯದಲ್ಲಿ ಅಭದ್ರತೆ. ಇನ್ನೊಂದೆಡೆ ಸರಕಾರದ ಉಳಿವಿಗಾಗಿ ಅಪರೇಷನ್ ಕಮಲದ ಮೂಲಕ ಇತರ ಪಕ್ಷಗಳ ಶಾಸಕರನ್ನು ದತ್ತು ತೆಗೆದುಕೊಳ್ಳುವ ಹಾವಳಿ. ಇದಕ್ಕಾಗಿ ಕೋಟಿ ಕೋಟಿ ರೂಪಾಯಿಗಳ ವ್ಯಯ. ಇದನ್ನೆಲ್ಲಾ ನೋಡಿ ರೋಸಿ ಹೋಗಿರುವ ಜನತೆಗೆ ರಾಜಕೀಯವೆಂದರೆ ಇದೇನಾ ಎಂಬ ಭಾವನೆ ಹುಟ್ಟಿಕೊಂಡಿದೆ. ಸರಕಾರದ ಉಳಿವಿಗಾಗಿ ಮುಖ್ಯಮಂತ್ರಿಯಾದಿಗಳು ಹಣದ ಮೂಲಕ ಶಾಸಕರನ್ನು ಖರೀದಿಸುವ ಬೆನ್ನಲ್ಲೇ ಆದಾಯ ತೆರಿಗೆ ಇಲಾಖಾಧಿಕಾರಿಗಳು (೩೦೦ ಕ್ಕೂ ಹೆಚ್ಚಿನ ಅಧಿಕಾರಿಗಳಿದ್ದರು) ರಾಜ್ಯದ ಆರುವತ್ತು ಸ್ಥಳಗಳಲ್ಲಿ ಶಾಸಕರ ನಿವಾಸ, ಕಚೇರಿಗೆ ದಾಳಿ ಮಾಡಿದ್ದಾರೆ. ಇದನ್ನು ಬಿಜೆಪಿ ಕಾಂಗ್ರೆಸ್ಸಿಗರ ಪಿತೂರಿ ಎಂದು ದೂರುತ್ತಿದ್ದಾರೆ. ಇಂತಹ ದಾಳಿ ಆದ ಸಂದರ್ಭದಲ್ಲಿ ಇಂತಹ ಆರೋಪಗಳನ್ನು ರಾಜಕೀಯ ಪಕ್ಷಗಳು ಮಾಡುವುದು ಸಾಮಾನ್ಯವಾಗಿಬಿಟ್ಟಿದೆ.
ಇದೇ ರೀತಿ ಈ ಹಿಂದೆ ತಾಜ್ ಕಾರಿಡಾರ್ ಪ್ರಕರಣದಲ್ಲಿ ಮಾಯಾವತಿ ವಿರುದ್ಧ ಅಕ್ರಮ ಸಂಪತ್ತು ಕ್ರೋಡಿಕರಣದ ಆರೋಪಕ್ಕೆ ಸಂಬಂಧಿಸಿ ಮುಲಾಯಂ ಸಿಂಗ್ ಯಾದವ್ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳಲು ಕೇಂದ್ರ ಸರಕಾರ ಸಿಬಿಐಯನ್ನು ದುರುಪಯೋಗಪಡಿಸಿಕೊಂಡಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಐಟಿ ದಾಳಿ ನಡೆದ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟದ ಶಾಸಕರು ಇದೊಂದು ಪಿತೂರಿ, ಷಡ್ಯಂತ್ರ ಎಂದು ಆರೋಪಿಸುವುದು ಎಷ್ಟು ಸರಿ? ಪ್ರಾಮಾಣಿಕತೆಯಿಂದ ಸಂಪತ್ತು ಗಳಿಸಿದ ಶಾಸಕರು ಈ ರೀತಿಯ ಆರೋಪ ಮಾಡಲು ಸಾಧ್ಯವೇ? ನಮ್ಮದು ಪ್ರಾಮಾಣಿಕ ಮಾರ್ಗದಲ್ಲಿ ಸಂಗ್ರಹಿಸಿದ ಹಣ, ಸಂಪತ್ತು ಎಂದು ಹೇಳಿಕೊಳ್ಳುವ ಶಾಸಕರು, ಸಚಿವರು ತಮ್ಮ ತೆರಿಗೆಯ ಪೂರ್ಣ ಪ್ರಮಾಣದ ದಾಖಲೆಗಳನ್ನು ತೆರಿಗೆ ಇಲಾಖಾಧಿಕಾರಿಗಳು ಸಲ್ಲಿಸಲು ಹಿಂದೆಡೆ ಹಾಕುವುದೇಕೆ? ಇದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ. ಕೇವಲ ಅಧಿಕಾರ ಲಾಲಸೆ, ರಾಜಕೀಯದಲ್ಲಿ ಸರ್ವಾಧಿಕಾರಿ ಮೆರೆಯಲು ಕೋಟಿ ಕೋಟಿ ಹಣ ನೀಡಿ, ರಾಜಕೀಯ ಸಿದ್ಧಾಂತಗಳನ್ನು ಅಪಮೌಲ್ಯ ಮಾಡಿ ಇತರ ಪಕ್ಷದ ಶಾಸಕರನ್ನು ಖರೀದಿಸುವುದು ನೈತಿಕತೆಯೇ? ಅಥವಾ ಸಂವಿಧಾನದ ಪರಿಮಿತಿಯಲ್ಲಿ ಬರುವ ಚಟುವಟಿಕೆಯೇ? ಅಲ್ಲ. ಇದೊಂದು ಮಿತಿಮೀರಿದ ಚಟುವಟಿಕೆಯಾಗಿದೆ. ಮತ್ತಷ್ಟು ಓದು 
ಎಂ.ಜಿ.ಎಂ. ಯಕ್ಷಗಾನ ಕೇಂದ್ರದವರು ನಡೆಸಿಕೊಟ್ಟ ಹಿಡಿಂಬಾ ವಿವಾಹ
ಕರುಣಾಕರ ಬಳ್ಕೂರು
ಕೌಟುಂಬಿಕ ಕಲಹ, ಹೆಣ್ಣು, ಮಣ್ಣು, ಹೊನ್ನುಗಾಗಿ ಹೋರಾಟ, ಸರಕಾರದಲ್ಲಿ ಕುರ್ಚಿಗಾಗಿ ಗುದ್ದಾಟ ಎಲ್ಲವು ಒಳಜಗಳ ಮೂಲಕ ತಾನು ಬದುಕಲು ಇನ್ನೊಂದನ್ನು ಆಹುತಿ ಮಾಡುವ ಪ್ರವೃತ್ತಿ ಇಂದು ಜೀವಂತವಾಗಿರುವ ಮೌಲ್ಯಗಳು.
ಒಡಹುಟ್ಟುತಾ ಅಣ್ಣತಮುಂದಿರು, ಬೆಳೆ ಬೆಳೆಯುತ್ತಾ ದಾಯಾದಿಗಳು ಪೂರ್ವಜರು ಮಾಡಿರುವ ಗಾದೆ ನೂರಕ್ಕೆ ನೂರು ಸತ್ಯ ಎನ್ನುವುದುನು ಸಾಕಾರಮಾಡಿದೆ ಕುರು-ಪಾಂಡವರ ನಡುವಿನ ಕುಟುಂಬ ದ್ವೇಷವೇ ಸಾಕ್ಷಿ. ಕೌರವ ಮತ್ತು ಪಾಂಡವರು ಸಮಸ್ತರಾಗಿದ್ದರು ಹಸ್ತಿನಾವತಿಯ ಆಳ್ವಿಕೆಯನ್ನು ನಾವು ಮಾಡಬೇಕು ಎನ್ನುವ ಕೌರವರ ಹೆಬ್ಬಯಕೆ. ಲೋಕ ಅಪವಾದ ಬರಬಾರದು ಎನ್ನುವುದಕ್ಕಾಗಿ ಪಾಂಡವರಿಗೆ ವಾರಾಣವತಿ೦iiನ್ನು ವಹಿಸಿಕೊಡುವುದು. ಮನೆತನದ ಪಟ್ಟಕ್ಕಾಗಿ ಕೌರವರು ಮಾಡುವ ಕುತಂತ್ರದ ರಾಜಕೀಯ. ಮನೆತನದ ಅನ್ನವನ್ನು ಕೌರವರೆ ಉಣ್ಣಬೇಕು ಎನ್ನುವ ಭೀಷ್ಮರ ಅಭಿಮತ.
ರಾಜಕೀಯದ ರಂಗದಲ್ಲಿ ಮನಸ್ಸಿಗೆ ಬಂದಂತೆ ಪಾಂಡವರನ್ನು ಕುಣಿಸುವುದು, ಅರಗಿನ ಮನೆಯನ್ನು ನಿರ್ಮಿಸಿ ಕೊಡುವುದು. ಮತ್ತೆ ಪುರೊಚನನ್ನು ಕಳುಹಿಸಿ ಬೆಂಕೆ ಹಚ್ಚುವುದು, ಭೀಮನಿಗೆ ವಿಧುರನ ಮೂಲಕ ಕೌರವರು ಹೆಣದಿರುವ ರಾಜಕೀ ತಂತ್ರವನ್ನು ಬೇದಿಸುವುದು. ತಾಯಿ, ಅಣ್ಣ ತಮ್ಮಂದಿರನ್ನು ರಕ್ಷಿಸಲು ಸುರಂಗ ಮಾರ್ಗವನ್ನು ನಿರ್ಮಿಸಿವುದು, ಪಾಂಡವರ ಬದಲಿಗೆ ಅಮಾಯಕ ಬ್ರಾಹ್ಮಣ ಕುಟುಂಬ ಅರಗಿಮನೆಯ ಬೆಂಕಿಗೆ ಆಹುತ್ತಿಯಾಗುವುದು. ಸುರಂಗ ಮಾರ್ಗದಲ್ಲಿ ಅರಗಿನ ಮನೆಯಿಂದ ತಪ್ಪಿಸಿಕೊಂಡು ಕಾಡು ಮಾರ್ಗದಲ್ಲಿ ನಡೆದು ಬಸವಳಿದು ಅಲೆದಾಟದಲ್ಲಿ ಕಲ್ಲು-ಮುಳ್ಳಗಳ ಮೇಲೆ ನಡೆದು ಕುಸಿದು ಬೀಳುವುದು. ಕಗ್ಗತ್ತಲ ರಾತ್ರಿಯಲ್ಲಿ ಕಾಡು ಪ್ರಾಣಿ, ರಕ್ಕಸರು ಇರುವ ಸ್ಥಳ, ಆದ್ರೆ ಭೀಮನಿಗೆ ತನ್ನವರನ್ನು ಹೇಗಾದ್ರು ಮಾಡಿ ರಕ್ಷಿಸುವ ಹೊಣೆ ಆ ಕಾರಣಕ್ಕೆ ಮರಗಿಡಗಳ ಸೊಪ್ಪು, ಕಲ್ಲುಬಂಡೆಗಳಿಂದ ಕೋಟೆಯನ್ನು ನಿರ್ಮಿಸಿ ಕಾವಲು ಕಾಯುತ್ತಾನೆ.
ತೀರ್ಪು
ಕರ್ಫ್ಯೂ ವಿಧಿಸಿದ ಬೀದಿ ಬೀದಿಯಲಿ
ಆತಂಕದ ನಡುವೆ
ರಾಮನ ಜಪತಪ
ಪುರಾಣ ಪುಣ್ಯಕತೆಗಳ
ಕೆದಕಿ ಮತ್ತೆ ಮುಂದಿಟ್ಟ
ತ್ರೇತಾ ಯುಗದ
ನಂಬುಕೆಯ ಕಗ್ಗಂಟು.
ಬಿಡಿಸಲಾಗದ ಮಹಾಪುರುಷರದಷ್ಟೇ
ವಾದ ಅಪ್ಪ ಹೇಳಿದ ಕಥೆಯಲಿ
ರಾಮನುಟ್ಟಿದ ‘ಅಯೋಧ್ಯೆಯಲಿ’.
ತಂದೆಗೆ ತಕ್ಕ ಮಗ ‘ರಾಮ’
ಬಿಟ್ಟು ನಡೆದ ಕಾಡಿಗೆ ‘ರಾಜ್ಯವ’
ಮರ್ಯಾದ ಪುರುಷೋತ್ತಮ ‘ಶ್ರೀರಾಮ’
ಅಟ್ಟಿದ ಕಾಡಿಗೆ ಮಡದಿಯ
ಒಡ್ಡಿದ ಅಗ್ನಿಗೆ ತನ್ನೊಡತಿಯ
‘ನಿಷ್ಕರುಣಿ’ ರಾಮ. ಮತ್ತಷ್ಟು ಓದು 
‘ರಾವಣನ ಹೊಸ ಮುಖ ಅನಾವರಣಗೊಳಿಸಿದ ವಿಶಿಷ್ಟ ರಂಗ ಪ್ರಯೋಗ :- ಏಕಾದಶಾನನ ’
ಕರುಣಾಕರ ಬಳ್ಕೂರು
ವೇದವ್ಯಾಸ ರಾಮಾಯಣದ ಸಣ್ಣ ಎಳೆಯೊಂದನ್ನು ತೆಗೆದು ನಾಟಕರಂಗಕ್ಕೆ ಅಳವಡಿಸಿದ ರೀತಿ ಸೃಜನಶೀಲವಾದದ್ದು. ‘ಜಯ ರಾಮ ಜಯ ಜಯ ರಾಮ’ ಎನ್ನುವ ರಾಮ ನಾಮ ಸ್ಮರಣೆಯನ್ನು ಹೊಗಳುತ್ತ ಭಕ್ತರ ಗುಂಪಿನ ಆಗಮನ, ಇಂದು ರಾಮನ ಪಟ್ಟಾಭಿಷೇಕವಂತೆ.., ಭರ್ಜರಿ ಊಟ, ಮನೋರಂಜನೆ ಹಾ.. ಹಾ.. ಎಲ್ಲರ ಮೊಗದಲ್ಲಿಯೂ ಸಂತೋಷದ ಹೂಮಳೆ. ಅಯೋಧ್ಯೆಯ ನಗರಕ್ಕೆ ರಾಜ ಮಹಾರಾಜರು, ಪುರಜನರು, ಬಂಧುಗಳು, ರಾಮನ ಭಕ್ತರು, ಹಿತೈಷಿಗಳು ಹೀಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ದ್ವಾರಪಾಲಕನಂತೂ ಬಂದವರನ್ನು ಸುಧಾರಿಕೆ ಮಾಡುವ ದೊಡ್ಡ ಕೆಲಸವನ್ನು ಲವವಿಕೆಯಿಂದ ನಿಭಾಯಿಸುವುದು ನಾಟಕದ ಆರಂಭಕ್ಕೆ ಮುನ್ನುಡಿಯಾಗಿದೆ.
ಬಂದಿರುವವರ ಕುದುರೆಗಳನ್ನು ಇಲ್ಲಿ ಕಟ್ಟಿ, ಅಲ್ಲಿ ಕಟ್ಟಿ, ದೂರದ ರಾಜರುಗಳಿಗೆ ಉಳಿಯಲು ಅತಿಥಿ ಗೃಹ ಅಲ್ಲಿದೆ, ರಾಮನ ಪಟ್ಟಾಭೀಷೇಕಕ್ಕೆ ಚಿನ್ನ, ಬೆಳ್ಳಿ, ಹಣವನ್ನು ಕಾಣಿಕೆಯಾಗಿ ತಂದವರು ಭಂಡಾರದಲ್ಲಿ ಕೊಟ್ಟು ರಶೀದಿಯನ್ನು ತಪ್ಪದೇ ಪಡೆಯಿರಿ, ಮತ್ತೆ ಊಟ ಮಾಡುವಲ್ಲಿ ನೂಕು ನೂಗ್ಗಲು ಮಾಡದಿರಿ ಎಂದು ಆಗಮಿಸಿರುವ ಸರ್ವರಲ್ಲಿ ಬಿನ್ನೈಸಿಕೊಳ್ಳುತ್ತ ದ್ವಾರಪಾಲಕನು ರಾಮನ ಪಟ್ಟಾಭಿಷೇಕಕ್ಕೆ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಾನೆ.
ಎರಡನೆ ದೃಶ್ಯದಲ್ಲಿ ಕೌಸಲ್ಯೆ ಮತ್ತು ರಾಮನು ಕಷ್ಟ-ಸುಖಗಳ ಬಗ್ಗೆ ಕುಳಿತು ಹರಟೆ ಹೊಡೆಯುತ್ತಾರೆ. ಆಗ ರಾಮ, ರಾಮಣನ ಪರವಹಿಸಿ ಮಾತನಾಡಿದಾಗ ಕೌಸಲ್ಯೆ ಕೆಂಡಮಂಡಲವಾಗಿ ರಾವಣನನ್ನು ದೂಷಿಸುತ್ತಾ ಆಕ್ರೋಶವನ್ನು ವ್ಯಕ್ತಪಡಿಸುತ್ತಾಳೆ. ಆದರೆ ರಾಮ, ರಾವಣನ ಅಂತಃಕರಣವನ್ನು ಮನಸಾರೆ ಮೆಚ್ಚಿ ತನ್ನ ಅನುಭವದ ನುಡಿಗಳನ್ನು ಕೌಸಲ್ಯೆಯಲ್ಲಿ ಬಿಚ್ಚಿಡುತ್ತಾನೆ. ನಾಟಕದ ನಡುವೆಯೇ ಹಿಂದೆ ನಡೆದ ಎಲ್ಲಾ ಘಟನೆಗಳು ರಂಗಮಂಟಪದ ಮೇಲೆ ಒಂದರ ಮೇಲೆ ಒಂದರಂತೆ ಚಿತ್ರ ಪಟಲಗಳ ಮೂಲಕ ಬಂದು ಹೋಗುವಾಗ ರಾಮಾಯಣದ ಕಥೆಯು ಅನಾವರಣಗೊಳ್ಳುತ್ತದೆ. ಇದು ನಿರ್ದೇಶಕರ ಕೈಚಳಕದಿಂದ ವಿನೂತನವಾಗಿ ಮೂಡಿಬಂದಿದೆ. ಮತ್ತಷ್ಟು ಓದು 
ಬದಲಾವಣೆಗೆ ತೆರೆದುಕೊಂಡ ಮನಸ್ಸು:ಆಳ್ವಾಸ್ ನುಡಿಸಿರಿಯ ಉದ್ಘಾಟನಾ ಭಾಷಣದಲ್ಲಿ ಕವಿ ವೆಂಕಟೇಶಮೂರ್ತಿ
ಕನ್ನಡ ಮನಸ್ಸು-ಜೀವನ ಮೌಲ್ಯಗಳು
೧.ಸಾವಿರಾರು ವರ್ಷಗಳಿಂದ ತನ್ನ ಪಾತ್ರವನ್ನು ತಿದ್ದಿಕೊಳ್ಳುತ್ತಾ ಬಂದ ಕನ್ನಡ ಮನಸ್ಸಿನ ಅಭಿವ್ಯಕ್ತಿಯನ್ನು ಅದು ಹಿಂದೆ ಹಿಂದೆ ಉಳಿಸುತ್ತಾ ಹೋದ ನೆನಪುಗಳಲ್ಲಿ ಹುಡುಕಬೇಕಾಗುತ್ತೆ.
೨.ಕಲೆ, ಸಾಹಿತ್ಯ, ವಾಸ್ತು ಮುಂತಾಗಿ ಎಲ್ಲೆಲ್ಲಿ ಕನ್ನಡಿಗನ ಮನಸ್ಸು ನಿರ್ಭಿಡೆಯಿಂದ ಮುಕ್ತ ಅಭಿವ್ಯಕ್ತಿ ಸಾಧಿಸಿದೆಯೋ ಅಲ್ಲಲ್ಲೆಲ್ಲಾ ನಾವು ಕನ್ನಡ ಮನಸ್ಸಿನ ಪಾತ್ರ ನಿರ್ಮಿತಿಯನ್ನು ಗ್ರಹಿಸುತ್ತಾ ಹೋಗಬೇಕಾಗುತ್ತದೆ.
೩. ಮಹತ್ವಾಕಾಂಕ್ಷೆ
ವಿನಯ
ಕೂಡುಬಾಳು
ಬದಲಾವಣೆಗೆ ತೆರೆದುಕೊಂಡ ಮನಸ್ಸು-ಇವು ಕನ್ನಡ ಮನಸ್ಸಿನ ಮುಖ್ಯ ಲಕ್ಷಣಗಳಾಗಿವೆ.
ಅ.ಮಹತ್ವಾಕಾಂಕ್ಷೆ: ಕನ್ನಡ ಸಾಹಿತ್ಯ ಚರಿತ್ರೆ ಗಮನಿಸಿದಾಗ ನಿರಂತರವಾಗಿ ಬೃಹತ್ ಕಾವ್ಯಗಳ ನಿರ್ಮಾಣ ನಡೆಯುತ್ತಾ ಬಂದಿರುವುದನ್ನು ಗಮನಿಸಬಹುದು. ಆದಿಪುರಾಣ, ವಿಕ್ರಮಾರ್ಜುನ ವಿಜಯ, ಕುಮಾರವ್ಯಾಸ ಭಾರತ, ಭರತೇಶವೈಭವ, ಶ್ರೀ ರಾಮಾಯಣ ದರ್ಶನಂ…ಹೀಗೆ. ಇಪ್ಪತ್ತನೇ ಶತಮಾನವನ್ನಷ್ಟೇ ಗಮನಿಸಿದರೂ ಮಹತ್ವಾಕಾಂಕ್ಷೆಯ ಕಾದಂಬರಿಗಳು ನಮ್ಮಲ್ಲಿ ನಿರ್ಮಿತವಾಗಿರುವುದನ್ನು ನೋಡಬಹುದು. ಬೃಹತ್ ಮತ್ತು ಮಹತ್ ಒಮ್ಮೈಗೂಡಬೇಕೆಂಬುದು ಕನ್ನಡ ಮನಸ್ಸಿನ ಯಾವತ್ತಿನ ಅಭಿಲಾಷೆ. ಆಧುನಿಕ ಸಾಹಿತ್ಯದಿಂದಲೂ ಇದಕ್ಕೆ ಅನೇಕ ಉದಾಹರಣೆಗಳನ್ನು ಕೊಡಬಹುದು. ಮತ್ತಷ್ಟು ಓದು 
ಹೊಯಿ ನಮ್ಮ ಕುಂದಾಪ್ರದ ಅಪ್ಪಟ ಹೆಣ್ಣು ಮಗಳಿಗೆ ‘ಆಳ್ವಾಸ್ ನುಡಿಸಿರಿ’ಯ ಅಧ್ಯಕ್ಷಗಿರಿ
ಕರುಣಾಕರ ಬಳ್ಕೂರು
ಹೋಯಿ ನಮ್ಮ ಕುಂದಾಪ್ರದ ಅಪ್ಪಟ ಹೆಣ್ಣು ಮಗಳಿಗೆ ಆಳ್ವಾಸ್ ನುಡಿಸಿರಿಯ ಅಧ್ಯಕ್ಷಗಿರಿ. ಇದ್ ನಮ್ ಊರಿಗೆ ಬಾರಿ ಖುಷಿ ವಿಷಯ ಕಾಣಿ. ಕುಂದಾಪ್ರ ಹೆನ್ಮಗಳ ಸಾಧನೆಗೆ ಕುಂದಾಪ್ರದಲ್ಲಿ ಸಂಭ್ರಮ, ಸಡಗರ ತುಂಬಿ ತುಳುಕುತ್ತಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ವೈದೇಹಿಯವರ ಹೆಸರು ಇಂದು ಅಗ್ರ ಪಂಥಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ತನ್ನದೇ ಆದ ಭಾವನೆಗಳನ್ನು ಬರವಣಿಗೆಯ ಮೂಲಕ ಬರೆಯುತ್ತಾ ಬಂದವರು. ಈಗಲು ಬರೆಯುತ್ತಿರುವವರು. ಮಾತನಾಡುವ ಶೈಲಿಯಲ್ಲಿ ಅಚ್ಚ ಕುಂದಾಪ್ರಗನ್ನಡದ ಸೊಗಡು, ಸಾಹಿತ್ಯದ ಮೆರಗು ಹೀಗೆ ವೈದೇಹಿ ಅಂದ್ರೆ ಎಲ್ಲರಿಗೂ ಮಸ್ತ್ ಖುಷಿ. ಅವರ ಬರವಣಿಗೆಯಲ್ಲಿ ಮಗುವಿನ ಮುಗ್ಧತೆ, ಎಲ್ಲವನ್ನು ಕುತೂಹಲದಿಂದ ನೊಡುವ ಮನಸ್ಸು, ಭಾವ ಪ್ರಧಾನವಾದ ಅವರ ಆಲೋಚನೆಗಳು ಹೀಗೆ ಎಲ್ಲಾವು ವ್ಯಕ್ತಿತ್ವದಲ್ಲಿ ತುಂಬಿಕೊಂಡಿವೆ. ಮಾತಿಗೆ ಸಿಕ್ಕರಂತು ‘ಇಲ್ಕಾಣಿ’ ಎನ್ನುವ ಕುಂದಾಪ್ರ ಭಾಷೆಯ ಸೊಗಡಿನ ನುಡಿಗಳನ್ನು ಅವರ ಬಾಯಿಂದಲೇ ಕೇಳಲು ಎಷ್ಟೊಂದು ಸೊಗಸು.
ನಗುಮೊಗದಿ, ಸರಳ ಸಜ್ಜಿನಿಕೆಯೊಂದಿಗೆ ಅಚ್ಚ ಕುಂದಾಪ್ರ ಕನ್ನಡದಲ್ಲಿ ಮಾತ್ನಾಡಿಲ್ಲಿಕೆ ಕುಳಿತರೆ ಕಷ್ಟ-ಸುಖದ ಸರಮಾಲೆಗಳ ಮಾತಿನ ಮಂಟಪವನ್ನೆ ಕಟ್ಟುವ ಗುಣವರಲ್ಲಿದೆ. ತನ್ನ ಮನಸಿನ ಭಾವನೆಗಳನ್ನು ಯಾರ ಹಂಗಿ ಇಲ್ಲದೆ, ಸಾಹಿತ್ಯದ ಮೂಲಕ ತೆರೆದಿಡುತ್ತಾ ಬಂದಿದ್ದಾರೆ. ಅವರ ಕೃತಿಗಳಲ್ಲಿ ಮಹಿಳಾ ಸಂವೇಧನೆ ಹಾಸುಹೊಕ್ಕಾಗಿರುವುದರಿಂದ ಅವರನ್ನು ಮಹಿಳಾ ಸಾಹಿತ್ಯ ಕೈ ಬೀಸಿಕರೆದಿದೆ. ಮಹಿಳೆಯರಿಗೆ ಕೂಡ ತನ್ನದೇ ಆದ ಖಾಸಗಿ ಬದುಕಿದೆ ಎನ್ನುವುದನ್ನು ಗುರುತಿಸಿದವರು. ಕನಸನ್ನು ಕಾಣುವ ಸ್ವಾತಂತ್ರ್ಯ ಇದೆ ಎನ್ನುವ ಮೂಲಕ ಸ್ತ್ರೀಲೋಕಕ್ಕೆ ತನ್ನನ್ನು ತೆರೆದುಕೊಳ್ಳುವ ಮೂಲಕ ವಿಮರ್ಶಕರ ಪಾಲಿಗೆ ಹಲವು ದಾರಿಗಳನ್ನು ಮಾಡಿಕೊಟ್ಟಿದ್ದಾರೆ.
ವೈದೇಹಿ ಅವರ ಬರವಣಿಯು ಎಲ್ಲರ ಮನಸ್ಸನ್ನು ಗೆಲುವಲ್ಲಿ ಯಶಸ್ವಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕನ್ನಡ ಸಾರಸ್ವತ ಲೋಕದೊಳಗೆ ಹೊಸ ಲೋಕವನ್ನು ಸೃಷ್ಟಿ ಮಾಡಿದ್ದಾರೆ. ‘ಕುಂದಾಪ್ರ’ ಪುಟ್ಟ ಜಗತ್ತನ ಆಚಾರ-ವಿಚಾರ, ಕಲೆ ಸಂಸ್ಕೃತಿ, ಭಾಷೆಗಳೆಲ್ಲವನ್ನೂ ಒಳಗೊಂಡ ಸೂಕ್ಷ್ಮ ಕಸೂತಿ ಎಳೆಗಳ ಹಾಗೆ ಬಿಡಿಸುವ ವೈದೇಹಿಯವರ ಶೈಲಿ ಅನನ್ಯವಾದದ್ದು. ಹಾಗಾಗೀ ಓದುಗರಿಗೆ ಹೊಸಪ್ರಪಂಚವೇ ಸರಿ. ಮತ್ತಷ್ಟು ಓದು 
ಪ್ರಾಮಾಣಿಕ ಐಎಎಸ್ ಅಧಿಕಾರಿ ವಿ.ಪೊನ್ನುರಾಜ್ ಅವರಿಗೊಂದು ಶುಭವಿದಾಯ
ಕರುಣಾಕರ ಬಳ್ಕೂರು
ದಕ್ಷಿಣಕನ್ನಡದ 120ನೇ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು, ಜಿಲ್ಲೆಯ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡಿ ಅಂದಿನಿಂದಲೇ ಮಾದರಿ ಜಿಲ್ಲೆಯನ್ನಾಗಿಸುವ ಕನಸುನ್ನು ಕಂಡವರು ನೀವು, ಅಷ್ಟೇ ಅಲ್ಲ ಆ ಕನಸುನ್ನು ನನಸಾಗಿರುವ ಕೀರ್ತಿಯೂ ನಿಮ್ಮದು.
ಅಧಿಕಾರ ಸ್ವೀಕರಿಸುವಾಗ ದಿನದಿಂದ ನುಡಿದಂತೆ ನಡೆದವರು, ಆ ಮುಖೇನ ದಕ್ಷ, ಪ್ರಾಮಾಣಿಕ ಎನ್ನುವ ಹೆಸರುಗಳು ನಿಮ್ಮಪಾಲಿಗಾಯಿತು. ಕಾರ್ಯ ವೈಖರಿಯಲ್ಲಿ ಸೋಲದೆ ಇಡೀ ಜಿಲ್ಲಾಡಳಿತದ ವ್ಯವಸ್ಥೆಯನ್ನು ಸಮರ್ಪಕವಾಗಿ ನಿಭಾಯಿಸಿದ್ದೀರಿ. ಕಾರ್ಯ ನಿವರ್ಹಹಿಸುವಾಗ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ನೇರ, ದಿಟ್ಟವಾಗಿ ಎದುರಿಸಿದವರು. ಅಕ್ರಮ ಮರಳುಗಾರಿಕೆ ವಿರುದ್ಧ ನಿಯಂತ್ರಣಕ್ಕೆ ಲಾರಿಗಳಿಗೆ ಜಿಪಿಎಸ್ ಯಂತ್ರ ಅಳವಡಿಕೆ, ನಗರದ ಪ್ರಮುಖ ರಸ್ತೆಗಳು ಸೇರಿದಂತೆ, ವಿಟ್ಲ, ಬಿ.ಸಿ ರೋಡ್ ವಿಸ್ತರಣೆ, ಸಂಸದರ/ಶಾಸಕರ ಪ್ರದೇಶಾಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿದ್ದ ಕೋಟ್ಯಂತರ ರೂಪಾಯಿ ಅವ್ಯವಹಾರಕ್ಕೆ ಕಡಿವಾಣ, ಕಳಪೆ ಕಾಮಗಾರಿಯ ಹಣ ಬಾಕಿ ಹೀಗೆ ಅಭಿವೃದ್ಧಿಗೆ ಹಿನ್ನಡೆ ಉಂಟಾದಲ್ಲಿ ಸರ್ಜರಿ ಮಾಡಿ ಕೆಲವರ ನಿದ್ದೆಯನ್ನು ಕೆಡಿಸಿದ್ದೀರಿ. ಇದು ನಿಮ್ಮ ಕಾರ್ಯದಕ್ಷತೆಯ ಹೆಚ್ಚುಗಾರಿಕೆಯೆಂದು ಕರೆಯಬೇಕು. ಶಾಸಕರ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳ ಗುಣಮಟ್ಟ ಪೂರ್ಣ ಖಾರಿ ಪಡಿಸಿಕೊಳ್ಳದೆ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡದೇ ಇರುವುದು, ವಿವಿಧ ಇಲಾಖೆಗಳ ಸಂಪೂರ್ಣ ಗಣಕೀರಣ ಸೇರಿದಂತೆ ಜಿಲ್ಲಾಡಳಿತಕ್ಕೆ ವಿನೂತನವಾಗಿ ತನ್ನ ಕಾರ್ಯ ವೈಖರಿಯ ಮೂಲಕ ಸಾಧಿಸಿ ತೋರಿಸಿದ್ದರ ಫಲವೆಂಬಂತೆ ಸರಕಾರದಿಂದ ಬಹುಮಾನವಾಗಿ ಅವರನ್ನು ವರ್ಗಾವಣೆ ಮಾಡಿರುವುದು ದುರಂತವೇ ಸರಿ. ಎಷ್ಟರ ಮಟ್ಟಿಗೆ ಸರಿ ಎನ್ನುವ ಬಗ್ಗೆ ಜನಪ್ರತಿನಿಧಿಗಳು ಜನತೆಗೆ ಉತ್ತರ ಕೊಡಬೇಕಾಗಿದೆ?. ಮತ್ತಷ್ಟು ಓದು 
ಭಾವನೆಗಳಿಗೆ ಪೆಟ್ಟು ಕೊಟ್ಟು ನೀ ಯಾಕೆ ದೂರಾದೆ ?
ಜಗನ್ನಾಥ್ ಶಿರ್ಲಾಲ್
“ನನಗೆ ನೀನಂದರೆ ತುಂಬಾ ಇಷ್ಟ, ನನಗೆ ನೀನೆ ಬೇಕು ನಿನ್ನಲ್ಲಿ ತುಂಬಾ ಮಾತಾಡಬೇಕು, ನೀನು ಎಲ್ಲೇ ಇದ್ದರೂ ನಾನಲ್ಲೇ ಇರುವೆ, ನಿನ್ನಲ್ಲಿ ಮಾತಾಡದೆ ಒಂದು ಕ್ಷಣವೂ ಇರಲಾರೆ, ನಿನ್ನ ಧ್ವನಿಯನ್ನು ಕೇಳದ ನನ್ನ ಕಿವಿಯು ಬೇರೇನನ್ನು ಆಲಿಸಲ್ಲ ನಿನ್ನ ನೋಡದೆ ನನ್ನ ಕಣ್ಣಿಗೂ ನಿದ್ದೆ ಬರಲ್ಲಾ, ನೀನಂದರೆ ಪ್ರಾಣ, ಹೃದಯದ ಬಡಿತ ” ಎನ್ನುತ್ತಿದ್ದ ನೀನು ಯಾಕೆ ನನ್ನ ಬಿಟ್ಟು ದೂರಾದೆ ?
ಗೆಳೆತಿ ನಾವಿಬ್ಬರು ಆಪ್ತರಾದ ಸಂದರ್ಭ ನೆನಪಿದೆಯ ? ಕಾಲೇಜಿನ ಆ ಮೊದಲ ದಿನ ಹೊಸ ಮುಖಗಳ ಪರಿಚಯದ ಕುತೂಹಲ, ಅನಿರೀಕ್ಸಿತವಾಗಿ ಪಿಳಿಪಿಳಿ ನೋಡ್ದುತ್ತಿದ್ದ ಕಣ್ಣುಗಳು ಅದೇನೋ ಮೋಡಿ ಮಾಡಿದವೋ ನನ್ನನೆ ತಟ್ಟನೆ ನೋಡುವ ನಾಚಿಕೆಯಿಂದ ತಿರುಗುತ್ತಿದ ನೀನು, ಮೊದಮೊದಲು ಪರಸ್ಪರ ಕಣ್ಣಲ್ಲಿ ಕಣ್ಣು ಇಟ್ಟು ನೋಡದೆ ಮಾತಾಡುವ ನಿನ್ನ ಅ ಮಾತುಗಳಿಂದ ನಮ್ಮಿಬ್ಬರನ್ನು ಸೇಹಿತರನ್ನಗಿಸಿದವು. ಪ್ರೀತಿ ಏನೆಂಬುದು ತಿಳಿಯದ ನಮಗೆ, ನಾವು ಕಂಡುಕೊಂಡ ಪ್ರೀತಿ ಬಾವನೆಯ ಮಾತೆ ಪ್ರೀತಿ. ಪ್ರೀತಿ ಹೇಗಿರಬೇಕೆಂದು ತೋರಿಸಿಕೊಟ್ಟ ನಾವು ಹಲವಾರು ನೋವುಗಳನ್ನು ಎದುರಿಸಿದರು ನಾವಿಬ್ಬರು ನೈಜ ಸ್ನಹಿತರಾಗಿದ್ದೆವು . ಸಮಾಜದ ಎಲ್ಲರೆದುರು ನಮ್ಮ ನಡೆ ನುಡಿಗಳನ್ನು ತೋರ್ಪಡಿಸಿ ಕೆಲವೊಬ್ಬರ ಕುರುಡು ಕಣ್ಣಿಗೆ ಮತ್ಸರ ಮಾಡಿದೆವು. ನಮ್ಮಿಬ್ಬರಲ್ಲಿ ಎಷ್ಟೇ ಜಗಳ , ಕೋಪ ತಾಪಗಳಿದ್ದರು ಕ್ಷಣ ಮಾತ್ರದಲ್ಲಿ ಕರಗಿ ಹೋಗಿ ಮನಸಿನೊಡನೆ ಮಾತಾಡುತ್ತಿದ್ದೆವು. ನನ್ನ ಪ್ರತಿ ಉಸಿರಿನಲ್ಲೂ ನಿನ್ನ ನಾಮಂಕುರವಾಗುತ್ತಿತು, ನನ್ನ ಕನಸು ಮನಸಿನಲ್ಲು ನಿನ್ನದೇ ಚಿತ್ರ ಮೂಡುತ್ತಿತ್ತು. ನಾನು ಭಾವನಾತ್ಮಕ ಜೀವಿಯದೆ. ನಿನಗೆ ನೋವಾದರೆ ನನಗು ಸಂಕಟವಾಗುತ್ತಿತು. ಮೌನವಾಗಿರುತಿದ್ದ ನಮ್ಮ ಮನಸುಗಳು ಅಂತರಾಳದಲ್ಲಿ ಮಾತಾಡಿಕೊಲ್ಲುತಿದ್ದವು. ನಾನು ನಿನ್ನನು ತುಂಬಾ ಇಷ್ಟ ಪಡುತಿದ್ದೆ. ಆದರೆ ಇದ್ದಕಿದ್ದ ಹಾಗೆ ನಿನ್ನ ಮನಸ್ಸು ಯಾಕೆ ಬದಲಾಯಿತು? ಯಾಕೆ ಮಾತು ನಿಲ್ಲಿಸಿಬಿಟ್ಟೆ? ನನ್ನ ಮುಖವನ್ನೇ ನೋಡಲು ತಪ್ಪಿಸಿದೆ. ನಾವಿಬ್ಬರು ದೂರ ಇದ್ದ ಕಾರಣ ನನ್ನ ದೂರವಾಣಿ ಕರೆಯನ್ನು ಸ್ವಿಕರಿಸದೇ ನಿರ್ಲಕ್ಸಿದಲ್ಲದೆ… ದ್ವೇಷಿಸಿದೆ…. ಮತ್ತಷ್ಟು ಓದು 
‘ಪುರಭವನದಲ್ಲಿ ಪ್ರೇಕ್ಷಕನಿಗೆ ರಸದೌತಣ, ನಿರುಪಮಾ ರಾಜೇಂದ್ರಾ ಅವರ ಕಥಕ್ ನೃತ್ಯ’
ಕರುಣಾಕರ ಬಳ್ಕೂರು
ಭರತ ಭೂಮಿಯಲ್ಲಿ ಭಾರತೀಯ ಸಂಸ್ಕೃತಿಗೆ ತನ್ನದೇ ಆದ ವಿಶೇಷತೆಯಿದೆ. ಕಲೆ, ಸಾಹಿತ್ಯ, ಅಭಿನಯ, ನೃತ್ಯ, ಸಂಗೀತ ಹೀಗೆ ಎಲ್ಲವು ಮೆಳೈಯಿಸಿದಾಗ ಸುಂದರ ಲೋಕವೊಂದು ಸೃಷ್ಟಿಯಾಗುವುದರಲ್ಲಿ ಎರಡು ಮಾತಿಲ್ಲ. ರಾಜರ ಆಳ್ವಿಕೆಯಲ್ಲಿ ಕಲೆಗೂ ರಾಜರ ಆಸ್ಥಾನದಲ್ಲಿ ರಾಜನ ಪ್ರೋತ್ಸಾಹದೊಂದಿಗೆ ಬಂದಿರವುದನ್ನು ಕಾಣಬಹುದು. ರಾಜರುಗಳನ್ನು ಮೆಚ್ಚಿಸಲು ಮೇಧಾವಿ, ವಿದ್ವುತ್ಗಳನ್ನು ಹೋಂದಿರುವ ಕಲಾವಿದರು ತಮ್ಮ ಕಲಾ ಪ್ರೌಡುಮೆಯನ್ನು ತೋರಿಸುತ್ತಿದ್ದರು. ಭಾರತಿಯ ರಾಜರುಗಳು ಕಲೆಗೆ ನೀಡಿದಷ್ಟೇ ಪ್ರಾಶಸ್ತ್ಯವನ್ನು ಮುಸ್ಲಿಂ ಅರಸುರುಗಳು ನಿಡಿದ್ದಾರೆ. ಮುಸ್ಲಿಂ ಆಳ್ವಿಕೆಯಲ್ಲಿ ಆಸ್ಥಾನದಲ್ಲಿ ತಬಲಗಾರರ ಬಡಿತಕ್ಕೆ ನೃತ್ಯ ಮಾಡುವ ಕಲಾವಿದರು ಇದ್ದರು. ಇರ್ವರ ನಡುವೆಯೂ ಸ್ವರ್ಧೆ ಮಾತ್ರ ಪ್ರಬಲವಾಗಿತು. ಅಲ್ಲಿ ನೊಡುವವರಿಗೆ ಒಂದು ಸುಂದರ ಕಲೆಯನ್ನು ಆಸಾಧ್ವಿಸುವ ಕ್ಷಣ ಅರದಾಗಿತು. ಇಂದು ಕಲೆಗೆ ಯಾವುದೇ ಪ್ರೋತ್ಸಾಹವು ಇಲ್ಲದಿದ್ದರೂ ನಮ್ಮ ನಾಡಿನಲ್ಲಿ ಅದ್ಭುತ ಕಲಾ ತಂಡಗಳು ಇವೆ. ಬನ್ನಿ ಸಂಗೀತ ಭಾರತಿ ಪ್ರತಿಷ್ಠಾನ ಸಂಯೋಜಿಸಿರುವ ಎಂಆರ್ಪಿಎಲ್ ‘ನೂಪುರ ನಿನಾದ’ ಕಾರ್ಯಕ್ರಮ ನೀಡಲು ಬೆಂಗಳೂರಿನ ನಿರುಪಮಾ ಮತ್ತು ರಾಜೇಂದ್ರಾ ಮಂಗಳೂರಿಗೆ ಆಗಮಿಸಿದಾಗ ತೆರೆದಿಟ್ಟ ಮನದಾಳದ ಮಾತುಗಳು ನಿಮಗಾಗಿ.. ಮತ್ತಷ್ಟು ಓದು 











