ವಿಷಯದ ವಿವರಗಳಿಗೆ ದಾಟಿರಿ

Archive for

23
ಫೆಬ್ರ

ವೋಟ್ ಬ್ಯಾಂಕ್ ಜಪ – ಕಾನೂನು ಸುವ್ಯವಸ್ಥೆ ನೆಪ !

– ರಾಕೇಶ್ ಶೆಟ್ಟಿ
ಈ ಲೇಖನವನ್ನ ಬರೆದಿದ್ದು ಕಳೆದ ವರ್ಷ ರಾಜೀವ್ ಗಾಂಧೀಯವ್ರ ಹುತಾತ್ಮರಾದ ದಿನದಂದು,ಆದರೆ ಇಂದಿಗೂ ಇದು ಪ್ರಸ್ತುತವೇ,ಬಹುಶಃ ಈ ಕಾಂಗ್ರೆಸ್ಸ್ ಸರ್ಕಾರ ಈ ಅವಧಿ ಮುಗಿದ ಮೇಲೂ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ್ರೆ ಇನ್ನ ೬-೭ ವರ್ಷ ಈ ಲೇಖನ ಪ್ರಸ್ತುತವೇ! ಯಾವ್ದಪ್ಪ ಇದು ಅಂತ ವಿಷ್ಯಾ ಅಂತೀರಾ,ಅದೇ ಸ್ವಾಮಿ ಅಫ಼್ಜಲ್ ಗುರು ಅನ್ನೋ ಉಗ್ರಗಾಮಿಯನ್ನ ಗಲ್ಲಿಗೇರಿಸೊದು.ಮೊನ್ನೆ ಕಸಬ್ಗೆ ಹೈ-ಕೊರ್ಟ್ ಗಲ್ಲು ಶಿಕ್ಷೆ ನೀಡಿದೆ ಅಂದಾಗ ನನಗೆ ಮತ್ತೆ ಮತ್ತೆ ನೆನಪಾಗಿದ್ದು ಅಫ಼್ಜಲ್! (ಹಳೇ ಲೇಖನದಲ್ಲಿ ಕಸಬ್ ಇರಲಿಲ್ಲ ಈಗ ಅವನು ಸೇರಿಕೊಂಡಿದ್ದಾನೆ.ಮತ್ತೆ ಇದೇ ಲೇಖನವನ್ನ ಪ್ರಕಟಿಸುವ ದಿನ ಬಾರದಿರಲಿ 😦 )

ಇಂದು ರಾಜೀವ್ ಗಾಂಧೀ ಹುತಾತ್ಮರಾದ ದಿನ.ಆದರೆ ನನಗೆ ಈಗ ನೆನಪಾಗುತ್ತಿರುವವರು ಅವರಮ್ಮ ಇಂದಿರಾ.’ಇಂದಿರಾ ಗಾಂಧಿ!’ ಬಹುಷಃ ಸ್ವತಂತ್ರ ಭಾರತದ ಇತಿಹಾಸದಲ್ಲಿ ದೇಶದ ರಕ್ಷಣೆಯ ವಿಷಯದಲ್ಲಿ ಯಾವ ರಾಜಿ ಮಾಡಿಕೊಳ್ಳದೆ ಮುನ್ನುಗ್ಗುತಿದ್ದ ಅವರಂತ ಇನ್ನೊಬ್ಬ ಪ್ರಧಾನಿ ಈ ದೇಶಕ್ಕೆ ಮತ್ತಿನ್ಯಾರು ಸಿಕ್ಕಿಲ್ಲ ಅಂದರೆ ಅದು ಉತ್ಪ್ರೇಕ್ಷೆಯಾಗಲಾರದು!

ಮತ್ತಷ್ಟು ಓದು »

23
ಫೆಬ್ರ

ವಂಚನೆಗೆ ಮತ್ತೊಂದು ಹೆಸರು “ಅವಳು”

ಪಿಸಿಬಿ ಪುತ್ತೂರು

ಅವಳ ಹೆಸರು ನಯನ(ಹೆಸರು ಬದಲಾಯಿಸಲಾಗಿಲ್ಲ). ನನ್ನ ಸ್ನೇಹಿತನೊಬ್ಬ ಆಕೆಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ. ಅವಳು ಇರೋದು ಬೆಂಗಳೂರಿನಲ್ಲಿ. ಆತ ದಕ್ಷಿಣ ಕನ್ನಡ ಜಿಲ್ಲೆಯಲ್ಲೊಂದು ಊರಿನಲ್ಲಿ. ತಕ್ಕಮಟ್ಟಿಗೆ ಸ್ಥಿತಿವಂತ. ಅದಕ್ಕೆ ಇರಬೇಕು. ಅವಳು ಅವನನ್ನು ಆಯ್ಕೆ ಮಾಡಿಕೊಂಡದ್ದು. ಸಿಕ್ಕಾಪಟ್ಟೆ ಪ್ರೀತಿಸುತ್ತಿದ್ದ. ನಾನು ಕಾಲ್ ಮಾಡಿದಾಗ ಏನು ಮಾಡ್ತಾ ಇದ್ದಿ ಅಂತ ಕೇಳಿದಾಗ “ಅವಳ ಫೋಟೊ ನೋಡ್ತಾ ಇದ್ದಿನಿ” ಅಂತ ನಗುತ್ತಿದ್ದ. ಅವನದ್ದು ಮಗುವಿನ ಮನಸ್ಸು. ಅವಳು ಸೆಟ್ ಆದಾಗಲೇ ಮದುವೆ, ಭವಿಷ್ಯ ಎಲ್ಲ ಯೋಚಿಸಿದ್ದ. ಮುಂದಿನ ವರ್ಷವೇ ಮದುವೆಯಾಗ್ತಿನಿ ಅಂತ ಮಾತುಕೊಟ್ಟಿದ್ದ.

ಅದು ಆತನ ಮೊದಲ ಪ್ರೀತಿ. ದಿನಕ್ಕೆ ಕಮ್ಮಿ ಎಂದರೂ 5-6 ಬಾರಿ ಫೋನ್ ಮಾಡಿ ಮಾತನಾಡುತ್ತಿದ್ದರು. ಇತ್ತೀಚೆಗೊಮ್ಮೆ ಭೇಟಿಯೂ ಆಗಿದ್ದರು. ಇವರಿಬ್ಬರ ಪರಿಚಯವಾದದ್ದು ಅವನ ಊರಿನವಳೊಬ್ಬಳ ಸಹಾಯದಿಂದ. ಆಕೆಯ ನೆರೆಮನೆಯ ಹುಡುಗನಾದ್ದರಿಂದ ಒಂದಿಷ್ಟು ಸಲುಗೆ ಜಾಸ್ತಿಯಿತ್ತು. ನನಗೆ ಲವ್ ಸ್ಟೋರಿ ಕೇಳುವುದಕ್ಕೆ ತುಂಬಾ ಇಷ್ಟ. ಅವನು ದಿನಾ ನಂಗೆ ರಿಪೋರ್ಟ್ ಮಾಡುತ್ತಿದ್ದ. ಆದರೆ ಮೊನ್ನೆ “ಅವಳನ್ನು ಬಿಟ್ಟು ಬಿಡು” ಅಂದೆ. ಅವನು ಓಕೆ ಅಂದ.

ಮತ್ತಷ್ಟು ಓದು »