ನಿಮ್ಮ ನಿಲುಮೆಗೆ ಒಂದು ವರ್ಷ- ಹರಸ ಬನ್ನಿ, ಹಾರೈಸಬನ್ನಿ
ವರ್ಷವಾಗಿದ್ದು ತಿಳಿಯಲೇ ಇಲ್ಲ ನೋಡಿ.ಹೌದು ನಮ್ಮ-ನಿಮ್ಮ ’ನಿಲುಮೆ’ಗೆ ವರ್ಷದ ಸಂಭ್ರಮ :). ’ಕನಸು-ಕನವರಿಕೆ’ಯಾಗಿ ಶುರುವಾದ ನಿಲುಮೆ ’ಎಲ್ಲ ತತ್ವದ ಎಲ್ಲೇ ಮೀರಿ’ ನಿಲ್ಲಲ್ಲಿ ಅನ್ನುವ ನಮ್ಮ ಆಶಯಕ್ಕೆ ವರುಷವಾಗಿದೆ. ಈ ಸಂಭ್ರಮಕ್ಕೆ ನಮ್ಮ ಎಲ್ಲ ಬರಹಗಾರರು, ಓದುಗರು ಕಾರಣಕರ್ತರು. ಅವರಿಲ್ಲದಯೇ ನಾವಾದರೂ ಏನು ಮಾಡಲಿಕ್ಕಾಗುತಿತ್ತು ಅಲ್ಲವೇ?
“ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದ ಎಲ್ಲೆ ಮೀರಿ
ನಿರ್ದಿಗಂತವಾಗಿ ಏರಿ
ಓ ನನ್ನ ಚೇತನ ಆಗು ನೀ ಅನಿಕೇತನ…
ರಸ ಋಷಿ ಕುವೆಂಪು ಅವರ ಈ ನುಡಿಗಳೆ ನಮಗೆ ಸ್ಪೂರ್ತಿ. ಯಾವುದೇ ಜಾತಿ, ಮತ, ತತ್ವಗಳಿಗೆ ಗಂಟು ಬೀಳದೆ, ಎಡ-ಬಲ ಪಂಥೀಯರ ನಡುವೆ ಸಿಕ್ಕಿಕೊಳ್ಳದೆ, ಯಾವುದೇ ಮತ್ತು ಯಾರದೇ ಮರ್ಜಿಗೇ ಬೀಳದೆ ಅನ್ನಿಸಿದ್ದನ್ನು ನೇರವಾಗಿ ಹೇಳುವ, ಆ ಮೂಲಕ ಯಾವ ಗುಂಪಿಗೂ ಸೇರದೆಯೆ ಸ್ವತಂತ್ರವಾಗಿ ಯೋಚಿಸುವ ಬಯಕೆ ನಮ್ಮದು. ಅಷ್ಟಕ್ಕೂ ’ಸತ್ಯ’ ಅನ್ನುವುದು ಎಡ-ಬಲ ಪಂಥದ ಆಸ್ತಿಯೇನು ಅಲ್ಲವಲ್ಲ. ಅದು ಈ ಇಬ್ಬರ ನಡುವೆಯು ಸಿಲುಕದೆ ತನ್ನ ಪಾಡಿಗದು ಯಾವುದೋ ಮೂಲೆಯಲ್ಲಿ ನಿರ್ಲಿಪ್ತವಾಗಿರುತ್ತದೆ. ಅದನ್ನ ಹುಡುಕುವ ಮುಗ್ಧ ಆಸೆ ನಮ್ಮದು.ನೊಂದ ಜೀವಗಳಿಗೆ ದನಿಯಾಗುವ ಬಯಕೆ ನಮ್ಮದು. ಮತ್ತಷ್ಟು ಓದು 




