ಸಂಸ್ಕೃತಿ ಸಂಕಥನ – 26 – ಭಾರತೀಯರ ನೈತಿಕ ಸ್ವರೂಪ
-ರಮಾನಂದ ಐನಕೈ
ನೈತಿಕತೆ ಅಂದರೆ ಏನು? ಜಗತ್ತಿನ ಎಲ್ಲಾ ಸಂಸ್ಕೃತಿಗಳ ನೈತಿಕ ಪ್ರಜ್ಞೆ ಒಂದೇ ತೆರನಾಗಿದೆಯೇ? ಪ್ರಸ್ತುತ ಭಾರತೀಯ ಸಂದರ್ಭದಲ್ಲಿ ಇಂತಹ ಸೂಕ್ಷ್ಮ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಇದು ಸ್ಪಷ್ಟವಾಗದಿದ್ದರೆ ನಾವು ನಮ್ಮ ಸಂಸ್ಕೃತಿಯನ್ನು ಅರಿತುಕೊಳ್ಳಲು ತೊಡಕಾಗುತ್ತದೆ.
ಯುರೋಪಿಯನ್ನರ ನೈತಿಕ ಪ್ರಜ್ಞೆಗೂ ಭಾರತೀಯರ ನೈತಿಕಪ್ರಜ್ಞೆಗೂ ಅಜಗಜಾಂತರ ವ್ಯತ್ಯಾಸವಿದೆ. ಪಾಶ್ಚಾತ್ಯರು ನೈತಿಕತೆಯನ್ನು ಗ್ರಹಿಸುವ ರೀತಿಯೇ ಬೇರೆ, ನಾವು ನಿರ್ಣಯಿಸುವ ರೀತಿಯೇ ಬೇರೆ. ಭಾರತೀಯ ಪುರಾಣಗಳು ನೈತಿಕತೆಯ ಬುನಾದಿ ಅನ್ನುತ್ತೇವೆ. ನಮ್ಮ ಸಂಸ್ಕೃತಿಯಲ್ಲಿರುವಷ್ಟು ನೀತಿ ಬೇರೆಲ್ಲೂ ಇಲ್ಲ ಅನ್ನುತ್ತೇವೆ. ರಾಮ, ಕೃಷ್ಣ, ಬುದ್ಧ, ಬಸವ, ಸೀತಾ, ತಾರಾ, ಮಂಡೋದರಿ ಮುಂತಾಗಿ ನೈತಿಕ ಆದರ್ಶದ ಮಾಡೆಲ್ಗಳೇ ನಮ್ಮ ಇತಿಹಾಸ ಹಾಗೂ ಪುರಾಣಗಳಲ್ಲಿ ಸಿಗುತ್ತವೆ. ಇಷ್ಟಾಗಿಯೂ ಐರೋಪ್ಯರು ಭಾರತೀಯರನ್ನೇಕೆ ಅನೈತಿಕರು ಅಂದರು?
ಯುರೋಪಿಯನ್ನರು ಭಾರತಕ್ಕೆ ಬಂದಾಗ ಅವರಿಗೆ ಇಲ್ಲಿನ ಸಂಸ್ಕೃತಿ ಅರ್ಥವಾಗಲಿಲ್ಲ. ಇಡೀ ಭಾರತೀಯ ಸಂಸ್ಕೃತಿಗೆ ನೈತಿಕ ತಳಪಾಯವೇ ಇಲ್ಲ ಎಂದು ನಿರ್ಣಯಿಸಿದರು. ಭಾರತೀಯರಿಗೆ ಮೊರಲ್ ಹಾಗೂ ಎಥಿಕ್ಸ್ನ ಕಲ್ಪನೆಯೇ ಇಲ್ಲ. ನಾಗರಿಕತೆಯಿಂದ ಬಹಳ ಹಿಂದುಳಿದಿದ್ದಾರೆ. ಇದೊಂದು ಪತನಗೊಂಡ ಸಂಸ್ಕೃತಿ. ಇಲ್ಲಿನ ಮೂತರ್ಿಪೂಜೆ, ಜಾತಿಪದ್ಧತಿ, ಸಾಮಾಜಿಕ ಆಚರಣೆಗಳೆಲ್ಲವೂ ಅವರಿಗೆ ಅನೈತಿಕ ಆಚರಣೆಗಳಂತೆ ಕಂಡವು. ಭಾರತೀಯರು ಅಪ್ರಾಮಾಣಿಕರು, ಸುಳ್ಳು ಹೇಳುವವರು ಹಾಗೂ ಮೋಸಗಾರರು ಎಂಬುದಾಗಿ ವಣರ್ಿಸಿದರು. ಭಾರತೀಯ ಸಂಸ್ಕೃತಿ ಭ್ರಷ್ಟಗೊಂಡಿದೆ ಎಂದು ವ್ಯಾಖ್ಯಾ ನಿಸಿದರು. ಆದ್ದರಿಂದ ಭಾರತದ ಪುನರುದ್ಧಾರಕ್ಕೆ ಕೈಹಾಕಿದರು. ಈ ಕಾರಣಕ್ಕಾಗೇ ಹಲವು ಕಾನೂನು ಗಳನ್ನು ಮಾಡಿದರು. ಭಾರತದ ಜಾತಿ ವ್ಯವಸ್ಥೆಯನ್ನಂತೂ ಎಥಿಕಲ್ ಭ್ರಷ್ಟಾಚಾರದ ಮೂರ್ತರೂಪ ಎಂದರು. ಭಾರತೀಯರ ಎಥಿಕ್ಸೇ ಅನೈತಿಕವೆಂದು ಜರಿದ ಬಗ್ಗೆ ಸಹಸ್ರ ಉದಾಹರಣೆಗಳಿವೆ.
ಶರಣಾಗತ..!!
ಪ್ರದೀಪ್ ಬಹಳ ದಿನಗಳಾದ ಮೇಲೆ ಪ್ರೀತಂ ನ ಭೇಟಿ ಆಗಿದ್ದ. ಆದರು ಭೇಟಿಯಾಗಿದ್ದ ಜಾಗವಾದರೂ ಯಾವುದು, ಚಾರ್ಮಡಿ ಘಾಟ್. ಘಟ್ಟ ಪ್ರದೇಶದ ತುತ್ತ ತುದಿಯಲ್ಲಿ ಚಾರಣ ಮಾಡುತಿದ್ದ ಪ್ರೀತಂ ಗೆ ಪ್ರದೀಪ್ ಇದ್ದಕಿದ್ದಂತೆ ಕಾಣಿಸಿಕೊಂಡಿದ್ದ. ನೋಡಿದೊಡನೆ ಪ್ರದೀಪ್ ಮತ್ತು ಪ್ರೀತಂ ಇಬ್ಬರು ಸ್ವಲ್ಪ ಗಾಬರಿಯದರು, ಪ್ರದೀಪ್ ಮಗಾ ಪ್ರೀತಂ ಅಂತ ಒಮ್ಮೆಲೇ ಅಪ್ಪಿ ಕೆನ್ನೆಗೊಂದು ಮುತ್ತು ಕೊಟ್ಟಿದ್ದ. ಇಬ್ಬರ ಆನಂದಕ್ಕು ಪಾರವೇ ಇರಲಿಲ್ಲ. ಪ್ರೀತಂ ಇನ್ನೇನು, ಏನು ಮಗಾ ಇಲ್ಲಿ ಅಂತ ಕೇಳಬೇಕು, ಅಷ್ಟರಲ್ಲಿ ಅದೇ ಪ್ರಶ್ನೆಯನ್ನ ಪ್ರದೀಪ್ ಪ್ರೀತಂ ಗೆ ಕೇಳ್ದ. ಚಾರಣ ಮಾಡ್ಕೊಂಡು ತಂಡದ ಜೊತೆ ಬಂದಿದ್ದೆ ದಾರಿ ತಪ್ಪಿ ಬಿಟ್ಟೆ ಮಗಾ ಅಂದ ಪ್ರದೀಪನ ಮಾತು ಕೇಳಿ ನಂದೂ ಅದೇ ಕಥೆ ದಾರಿ ತಪ್ಪಿದ್ದಿನಿ. ಬಾ ಒಟ್ಟಿಗೆ ದಾರಿ ಹುಡುಕೋಣ ಎಂದು ಹೇಳುತ್ತಾ, ಹಳೆಯ ಕಾಲೇಜು ದಿನಗಳನ್ನು ಮೆಲುಕು ಹಾಕುತ್ತ ಕಾಡಿನಲ್ಲಿ ನಡೆದರು.ಪ್ರೀತಂ ಮತ್ತು ಪ್ರದೀಪ್ ಒಂದೇ ಕಾಲೇಜ್ ಒಂದೇ ಕ್ಲಾಸ್ ಒಂದೇ ಬೆಂಚ್, ಹಾಸ್ಟೆಲ್ನಲ್ಲಿ ಸಹ ಒಂದೇ ರೂಂ. ಒಬ್ಬರ ಮಧ್ಯೆ ಒಬ್ಬರಿಗೆ ಗಾಢವಾದ ಸ್ನೇಹವಿತ್ತು, ಪ್ರೀತಂ ನ ತಂದೆ ಒಬ್ಬ ಸರ್ಕಾರೀ ಅಧಿಕಾರಿ. ಮಗನಿಗೆ ದೂರದ ಕಾಲೇಜಿಗೆ ಸೀಟ್ ಸಿಕ್ಕಾಗ ಮಗನ್ನ ಹಾಸ್ಟೆಲ್ ಅಲ್ಲಿ ಇದ್ದು ಓದಲಿ ಅಂತ ಆಸೆಯಿಂದ ಸೇರಿಸಿದ್ದರು. ಹಾಸ್ಟೆಲ್ ಅಲ್ಲಿದ್ದರೆ ಎಲ್ಲ ಜನರ ಮಧ್ಯೆಯೂ ಬೆರೆಯಬಹುದು ಎಲ್ಲರ ಕಷ್ಟ ಸುಖಗಳನ್ನು ತಿಳಿಯಬಹುದು ಎಂಬುದೇ ಅವರ ಅಭಿಪ್ರಾಯ. ಓದಿನಲ್ಲೂ ಪ್ರೀತಂ ಮತ್ತು ಪ್ರದೀಪ್ ಯಾವಾಗಲು ಮುಂದೆ ಇರುತಿದ್ದರು. ಪ್ರೀತಂ ತಂದೆಗೆ ಒಂದು ಆಸೆ, ಮಗ ತನ್ನ ಹೆಸರನ್ನು ಎಲ್ಲು ಬಳಸಿಕೊಳ್ಳಬಾರದೆಂದು. ಅದಕ್ಕೆ ಪ್ರೀತಂ ಬಳಿ ಮಾತು ಸಹ ತೆಗೆದುಕೊಂಡಿದ್ದರು, ಎಂದಿಗೂ ನನ್ನ ಹೆಸರನ್ನು ಕಾಲೇಜ್ ನಲ್ಲಿ ಯಾರಿಗೂ ಹೇಳಬೇಡ ಎಂದು. ಪ್ರೀತಂ ಸಹ ಹಾಗೆ ಇದ್ದ. ಪ್ರೀತಂ ಮತ್ತು ಪ್ರದೀಪ್ ಓದಿನಲ್ಲಿ ಆಟದಲ್ಲಿ ಎಲ್ಲ ಕಡೆಯೂ ಮುಂದುವರೆಯುತ್ತಾ 4ನೆ ಸೆಮಿಸ್ಟರ್ ಮುಗಿಸಿದರು. ಅಷ್ಟರಲ್ಲಿ ಪ್ರದೀಪ್ ನ ತಂದೆ ವಿಧಿಯಾಟಕ್ಕೆ ಸಿಕ್ಕಿ ಅಪಘಾತದಲ್ಲಿ ಮೃತ ಪಟ್ಟಿದ್ದರು. ಮತ್ತಷ್ಟು ಓದು 
ಪ್ರೇಮಿಗಳ ದಿನಕ್ಕೆ ಎರಡು ಪತ್ರಗಳು
-ಮೋಹನ್ ಕೊಳ್ಳೇಗಾಲ
ಯಾಕೋ ಮನಸ್ಸಿಗೆ ಕಿಂಚಿತ್ತೂ ಸಮಧಾನವಿಲ್ಲ. ನಿನ್ನೆಯಿಂದಲೂ ತುಂಬಾ ಜ್ವರ ಇದೆ. ದೇಹ ಒಂದೇ ಸಮನೆ ಕಂಪಿಸುತ್ತಿದೆ. ನಿನ್ನದೇ ನೆನಪು. ಈ ಮನೆಯ ಪ್ರತಿ ಆಟಿಕೆ ಸಾಮಾನುಗಳು ನಿನ್ನ ಮುಖ ತೋರುತ್ತಿವೆ. ಪ್ರತೀ ವಸ್ತುವಿನಲ್ಲೂ ನಿನ್ನ ಆಸೆ, ಕಾತುರ, ಜಿಪುಣತನವೆದ್ದು ಕಾಣುತ್ತಿದೆ. ‘ನಿನ್ನ ಭಾವಚಿತ್ರ ನೋಡಿದಾಗ ದುಖ ಉಮ್ಮಳಿಸಿ ಉಮ್ಮಳಿಸಿ ಬಂದು ಸಾಂತ್ವನದ ಶಕ್ತಿ ಇಲ್ಲದೇ, ಕಣ್ಣೀರ ಕಟ್ಟೆ ಒಡೆದು ಸುಮ್ಮನೇ ಅಳುತ್ತೇನೆ. ನಿನ್ನೆ ಅಪ್ಪ ನಿನ್ನ ಬಾಲ್ಯದ ತುಂಟು ಹಾವಭಾವಗಳ ಫೋಟೋಗಳನ್ನು ನೋಡಿಕೊಂಡು ಅಳುತ್ತಿದ್ದರು. ನೀನು ಕಿಸಕ್ಕೆಂದು ನಕ್ಕಿದ್ದ ಒಂದು ಫೋಟೋ ನೋಡಿಕೊಂಡು ನಕ್ಕು ನಕ್ಕು ಕಣ್ಣೀರು ಸುರಿಸುತ್ತಿದ್ದರು. ನನ್ನ ಮಗಳಷ್ಟು ಚಂದ ಯಾರೂ ಇಲ್ಲ, ಅವಳ ನಗುವಿಗೆ ಸಾಟಿಯೇ ಇಲ್ಲ, ಅವಳ ಮಧುರ ಒಡನಾಡದಲ್ಲಿಯೇ ನಾನು ಇಷ್ಟು ದಿನ ಬದುಕಿದ್ದೆ ಎಂದು ಪೇಚುತ್ತಿದ್ದರು. ಇತ್ತೀಚೆಗಂತೂ ಕುಡಿತ, ಸಿಗರೇಟ್ ಸೇವನೆ ಜಾಸ್ತಿಯಾಗಿದೆ. ಪ್ರಶ್ನೆ ಮಾಡಲು ನೀನೇನು ನನ್ನ ಮಗಳೇ ಎಂದು ನನ್ನ ಮೇಲೆಯೇ ರೇಗುತ್ತಾರೆ. ಒಮ್ಮೊಮ್ಮೆ ನನ್ನ ತೊಡೆಯ ಮೇಲೆ ಮಲಗಿಕೊಂಡು, ನಿನ್ನನ್ನು ಓದಿಸಲು ಅವರು ಪಟ್ಟ ಶ್ರಮ, ಬ್ಯಾಂಕ್ ಲೋನ್, ನಿನ್ನನ್ನು ದೂರದ ಕಾಲೇಜಿಗೆ ಸೇರಿಸುವಾಗ ಅನುಭವಿಸಿದ ಒಳನೋವು, ಜೊತೆಗೆ ಆ ಕಾಲೇಜಿನಲ್ಲಿ ನಿನಗಾಗಿದ್ದ ತೊಂದರೆಗೆ ಪ್ರಾಚಾರ್ಯರೊಡನೆ ರೇಗಿದ್ದು, ಕಾರ್ ಮಾಡಿಕೊಂಡು ಬಂಧುಬಳಗವನ್ನೆಲ್ಲ ಕೂಡಿಸಿಕೊಂಡು ನಿನ್ನನ್ನು ನೋಡಲು ಪರಿಸೆ ಕಟ್ಟಿಕೊಂಡು ಬಂದಿದ್ದು, ಎಲ್ಲವನ್ನೂ ಸಾವಧಾನವಾಗಿ ಹೇಳಿ ನಿರಾಳರಾಗಿ, ಒಮ್ಮೆ ಬದುಕಿನ ಬೇಜವಾಬ್ದಾರಿಯೆಡೆಗೆ ನಗುತ್ತಾರೆ.
ಪ್ರೀತ್ಸೋರ ದಿನ ಪ್ರೀತಿಗಾಗೆ ಇರ್ಲಿ……!!
ಜೊಳ್ಳೇ ಎಲ್ಲ – ಇದು ಸಿದ್ಲಿಂಗು ಸಿನಿಮಾ ಕಣ್ಲಾ
ಫಿಲ್ಮಿ ಪವನ್
ಬಹಳ ದಿನದಿಂದ ಸಿದ್ಲಿಂಗು ನೋಡ್ಬೇಕು ಅಂತ ಕಾದಿದ್ದೆ, ಮೆಜೆಸ್ಟಿಕ್ ತನಕ ಹೋಗಿ ಪಿಕ್ಚರ್ ನೋಡೋ ಅಷ್ಟು ಸಮಯ ಸಿಕ್ಲೆ ಇಲ್ಲ, ಅದಕ್ಕೆ ನಮ್ಮೂರಲ್ಲೇ ಹಾಕಲಿ ಅಂತ ಕಾಯ್ತಾ ಇದ್ದೆ. ಬೆಳಿಗ್ಗೆ ಆಫಿಸ್ ಗೆ ಹೋಗೋವಾಗ ಬ್ಹೊಜಣ್ಣನ ಟೀ ಅಂಗಡಿ ಹತ್ರ ಪೋಸ್ಟರ್ ನೋಡಿ ಸಿಕ್ಕಾಪಟ್ಟೆ ಖುಷಿ ಆಗೋಯ್ತು. ಸಂಜೆ ಏನೇ ಅಗಲಿ ಮಿಸ್ ಮಾಡಬಾರದು ಅಂತ ನಮ್ ಮ್ಯಾನೇಜರ್ ಗೆ ಹೇಳದೇನೆ ಅರ್ಧ ಘಂಟೆ ಮುಂಚೆನೇ escape ಆಗ್ಬಿಟ್ಟೆ. ಆಫಿಸ್ ಗೇಟ್ ಇಂದಾನೆ ದೋಸ್ತ್ ಯಾದವ್ ಗೆ ಫೋನ್ ಹಾಕಿ ಮಗಾ bioscope ಅಂದೆ. ಅವ್ನು ನಾನೆ ಫೋನ್ ಮಡ್ಬೇಕಂದಿದ್ದೆ ಬಾ ಥಿಯೇಟರ್ ಹತ್ರ ಸಿಕ್ತೀನಿ ಅಂದ, ಆಟೋ ಬಸ್ಸು ಎಲ್ಲ ಹಿಡ್ಕೊಂಡು ೫ ನಿಮಿಷ ಮುಂಚೆನೇ ಅರ್ಧ ಪ್ಯಾಕ್ ಕಿಂಗ್ ಮತ್ತೆ ೨೦೦ gm ಚಿಪ್ಸ್ ತೊಗೊಂಡು ಗೇಟ್ ಮುಂದೆ ಹಾಜರ್ ಆದೆ. ಆಗಲೇ ಯಾದವ್ ಟಿಕೆಟ್ ತೊಗೊಂಡಿದ್ದ ಒಳಗೋಗಿ ಮರದ ಬೆಂಚ್ ಮೇಲೆ ಕೂತಿದ್ದೆ ಕೂತಿದ್ದು bioscope ಶುರು ಆಗೋಯ್ತು.
petrOmax ಪುರಾಣ ಹೇಳ್ಕೊಂಡು ಶುರು ಆಗೋ ಕಥೆ, ಪುಟ್ಟ ಹುಡುಗನ ಕಾರ್ ಪ್ರೀತಿ ತೋರುಸ್ತ ಕಾರ್ ಗಾಗಿ classmate ನ dove ಹೊಡೆಯೋ ತನಕ ತಂದು ನಿಲ್ಸುತ್ತೆ, ನಿಜಕ್ಕೂ dove ಹೊಡ್ಯೋದು ಕಾರ್ ಗೋಸ್ಕರ ಆದ್ರು ನಿಜವಾಗೆ ಪ್ರೀತಿ ಮುಡಿರುತ್ತೆ. ಆದ್ರೆ ಆ ಪ್ರೀತಿ ಬಹಳ ದಿನ ಉಳ್ಯಲ್ಲ. ಅದೇ ನೋವಲ್ಲೆ ಬೆಳೆದ ಸಿದ್ಲಿಂಗು ಕಾರ್ ಗೋಸ್ಕರ ಅಂತಾನೆ ಟೀಚರ್ ಹಿಂದಿಂದೆ ತಿರ್ಗಾಡ್ತಾನೆ, ಗಂಡ ಇಲ್ಲದ ಟೀಚರ್ ಸಿದ್ಲಿಂಗು ನ ಆಕಸ್ಮಿಕವಾಗಿ ಉಪಯೋಗಿಸಿಕೊಂಡುಬಿಡುತ್ತಾಳೆ. ಅಷ್ಟರಲ್ಲೇ ಮತ್ತೊಂದು ಆಕಸ್ಮಿಕ, ಸಿದ್ಲಿಂಗು ತಂದೆ ತಾಯಿ ನ ಕಳ್ಕೊತಾನೆ. ಇನ್ನೂ ಓದಿ ದಬ್ಬಕೊದೇನು ಅಂತ ದುಡಿಮೆ ಮಾಡಕ್ಕೆ ಸಿಟಿ ಗೆ ಪ್ರಯಾಣ. ಅಲ್ಲಿಂದ ಕಾರ್ ಪ್ರೀತಿ ಬದುಕಲ್ಲಿ ಎನೆನಲ್ಲ ಮಾಡ್ಸುತ್ತೆ. ಯಾರ ಯಾರನ್ನೆಲ್ಲಾ ಪರಿಚಯ ಮಾಡ್ಸುತ್ತೆ, ಆಕಸ್ಮಿಕಗಳು ಹೇಗೆಲ್ಲ ನಡೆಯುತ್ತೆ ಅನ್ನೋದೇ ಸೀಡ್ಲೆಸ್ಸ್ ಕಡ್ಲೆಕಾಯಿ ಸಿದ್ಲಿಂಗು ಪುರಾಣ.
ಐಶ್ವರ್ಯ ಕಳೆದು ಹೋದಾಗ….!!
ಪುಟ್ಟನಿಗೆ ಕ್ರಿಕೆಟ್ ಎಂದರೆ ಪ್ರಾಣ, ಹರಿದ ಚಡ್ಡಿ ಹಾಕಿಕೊಂಡು ತೂತು ಬನಿಯನ್ನಲ್ಲೇ ಮರದ ತುಂಡೊಂದನ್ನು ಹಿಡಿದು ಆಡಲು ಹೋಗುತಿದ್ದ. ಕೈಗೆ ಸಿಕ್ಕಿದ ಉದ್ದಗಿನ ವಸ್ತುಗಳೆಲ್ಲಾ ಅವನ ಕೈಲಿ ಬ್ಯಾಟ್ ಆಗಿಬಿಡುತಿತ್ತು. ಅದಕ್ಕೆ ಬಹಳಾನೆ ಉದಾಹರಣೆಗಳು. ತೆಂಗಿನ ಮೊಟ್ಟೆ, ಮರದ ರಿಪೀಸು, ಅಷ್ಟೇ ಯಾಕೆ ಅಮ್ಮನ ಮುದ್ದೆ ಕೆಲಕುವ ಕೋಲನ್ನು ಬಿಡುತ್ತಿರಲಿಲ್ಲ. ಪುಟ್ಟನ ಅಪ್ಪ ರೈತ, ಪಾರ್ಟ್ ಟೈಮ್ ಎಲೆಕ್ಟ್ರಿಕ್ ಕೆಲಸ ಸಹ ಮಾಡುತಿದ್ದರು. ಮನೆಲಿ ೨ ಸೀಮೆ ಹಸುಗಳು ಸಹ ಇದ್ದವು, ಅಪ್ಪ ಎಲೆಕ್ಟ್ರಿಕ್ ಕೆಲಸಕ್ಕೆ ಸಾಮಾನ್ಯವಾಗಿ ಸಂಜೆ ಹೋಗುತಿದ್ದರು
ಪುಟ್ಟ ಅಷ್ಟು ಹೊತ್ತಿಗೆ ಶಾಲೆಯಿಂದ ಮನೆಗೆ ಬರುತಿದ್ದ. ಬರುವಾಗಲೇ ಆಟದ ಕನಸು ಹೊತ್ತು ಬರುತಿದ್ದ ಪುಟ್ಟ ಅಪ್ಪ ಲೋ ಮಗ ನಾನು ಕೆಲಸಕ್ಕೆ ಹೋಗ್ತಾ ಇದ್ದೇನೆ ಹಸುಗಳನ್ನ ಚೆನ್ನಾಗಿ ನೋಡ್ಕೋ ಅಂತ ಹೇಳುತಿದ್ದರು. ಅಪ್ಪನ ಮಾತಿಗೆ ಇಲ್ಲ ಎನ್ನದೆ ಮುಖ ಸೊಟ್ಟಗೆ ಮಾಡ್ಕೊಂಡು ಆಯ್ತು ಅಂತಿದ್ದ. ಆಗ ಅಪ್ಪ ಲೋ ಮಗನೆ ನಿಮ್ಮೊಳ್ಳೇದಕ್ಕೆ ಕಣೋ ದುಡೀತಾ ಇರೋದು ಬೇಜಾರು ಮಾಡ್ಕೋಳದೆ ಹೋಗೋ ಅನ್ನೋರು. ಪುಟ್ಟ ಸಹ ಸ್ವಲ್ಪ ಮೂತಿ ಸೊಟ್ಟ ಮಾಡ್ಕೊಂಡು ಹಸು ಮೇಸಕ್ಕೆ ಕೆರೆ ಬಯಲಿಗೆ ಹೋಗ್ತಾ ಇದ್ದ.
ಕೆರೆ ಬಯಲಲ್ಲಿ ಪುಟ್ಟನ ತರಹವೇ ಇನ್ನೂ ಸುಮಾರು ಹುಡುಗರು ಬರುತಿದ್ದರು. ಹಸುಗಳನ್ನು ಬಯಲಲ್ಲಿ ಬಿಟ್ಟು ಎಲ್ಲರೂ ಸೇರಿ ಕಲ್ಲನ್ನು ವಿಕೆಟ್ನಂತೆ ಜೋಡಿಸಿ ತಮ್ಮಲ್ಲೇ ತಂಡಗಳನ್ನಾಗಿ ಮಾಡಿಕೊಂಡು ಸೂರ್ಯ ಬೈದು ಮನೇಗೆ ಹೋಗ್ರೋ ಅನ್ನೋವರೆಗು ಆಡುತಿದ್ದರು. ಪುಟ್ಟ ಒಳ್ಳೆಯ ಬೌಲರ್ ಆಗಿದ್ದ. ಬಹಳ ದೂರದಿಂದ ಓಡಿ ಬರದಿದ್ದರೂ ವೇಗವಾಗಿ ಚೆಂಡು ಎಸೆಯುವ ತಂತ್ರಗಾರಿಕೆ ಅವನಲ್ಲಿತ್ತು. ಆಗಾಗ ಲೆಗ್ ಸ್ಪಿನ್ ಹಾಕುತಿದ್ದ ಇದ್ದಕ್ಕಿದ್ದಂತೆ ಆಫ್ ಸ್ಪಿನ್ ಹಾಕುತಿದ್ದ. ಅವನ ಎಸತದಲ್ಲೇ ವೇಗವಾಗಿ ಸ್ಪಿನ್ ಆಗತಿದ್ದುದ್ದನ್ನು ಆಡಲಾಗದೆ ಬ್ಯಾಟಿಂಗ್ ಮಾಡುತ್ತಿರುವರೆಲ್ಲ ತತ್ತರಿಸುತಿದ್ದರು. ಎಲ್ಲಾ ಆಡಿದ ನಂತರ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹಸುಗಳನ್ನು ಕರೆದುಕೊಂಡು ಮನೆಗೆ ಮರಳುತಿದ್ದರು. ಮತ್ತಷ್ಟು ಓದು 
ಅವನು ಕುತ್ತಿಗೆಗೆ ಚಾಕು ಇಟ್ಟ, ದೇಹ ಹೆಣವಾಗಿತ್ತು :ಆಫ್ರೀಕಾದ ಕ್ಯಾಮರೂನ್ ಲೂಟಿ ಪ್ರಸಂಗ !
-ರವಿ ಮೂರ್ನಾಡು
ಅಲ್ಲೆಲ್ಲೋ ಕೊಲೆಯಾದ ವ್ಯಕ್ತಿಯ ಬಂಧುಗಳು ನ್ಯಾಯಕ್ಕಾಗಿ ಗೋಗರೆಯುತ್ತಿದ್ದರು. ಪತ್ರಿಕಾ ಕಚೇರಿಯಲ್ಲಿ ಕುಳಿತು ಅದು ಅರಿವಿಗೆ ಬಂದಿರಲಿಲ್ಲ. ಪುಸ್ತಕವೊಂದಕ್ಕೆ ಆಸ್ಪತ್ರೆಯ ಶವಾಗಾರದಲ್ಲಿ ಮಲಗಿದ ಹೆಣದ ಟಿಪ್ಪಣಿ ಮಾಡುವಾಗಲೂ ಅದು ಗೊತ್ತಿರಲಿಲ್ಲ. ನನ್ನ ಕುತ್ತಿಗೆಗೆ ಚಾಕು ಇಟ್ಟಾಗ ನಾನೇ ಹೆಣವಾಗಿದ್ದೆ. ಆಫ್ರೀಕಾದ ಕ್ಯಾಮರೂನಿನಲ್ಲಿ ಲೂಟಿಗಾರರು ಸುತ್ತುವರಿದು ವಾಚು-ಮೊಬೈಲು-ಹಣಕ್ಕಾಗಿ ತಡಕಾಡಿ ಮುಗಿಸುವವರೆಗೂ ಜೀವ ಅವರ ಕೈಯಲ್ಲೇ ಇತ್ತು. ಸತ್ತ ದೇಹ ನನ್ನಲ್ಲಿತ್ತು. ಕತ್ತಿನಿಂದ ಚಾಕು ತೆಗೆದದ್ದೇ ತಡ, ಸತ್ತವನು ಎದ್ದು ಕುಳಿತಿದ್ದೆ. ..!
ಇಲ್ಲಿನ ಡ್ವಾಲಾ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 2007 ರಲ್ಲಿ ಕಾಲಿಟ್ಟು ಪಾಸ್ಪೋರ್ಟಿಗೆ ಮುದ್ರೆಯೊತ್ತಿ ಲಗ್ಗೇಜು ವಿಲೇವಾರಿಗೆ ಬರುವಾಗಲೇ ಈರ್ವರು ಹಿಂದೆಯೇ ಬಂದರು. “ ನಾನು ಕಸ್ಟಂ ಅಧಿಕಾರಿ, ನಿಮ್ಮ ಬ್ಯಾಗ್ ಚೆಕ್ ಮಾಡಬೇಕು, ಸ್ವಲ್ಪ ಈ ಕಡೆ ಬನ್ನಿ” ಅಂದರು. ಅರೆ..! ಅಧಿಕಾರಿಯಾಗಿದ್ದರೆ ಮರೆಗೆ ಕರೆಯುವ ಆಲೋಚನೆ ಏನು ಅಂತ ಯೋಚಿಸಿದ್ದೆ. ಇಲ್ಲಿನ ಐದು ಸಾವಿರ ಕ್ಯಾಮರೂನ್ ಫ್ರಾಂಕ್ ಕೊಟ್ಟರೆ ತಕರಾರಿಲ್ಲ ಅಂದರು. ಅಲ್ಲಿಯೇ ನಮ್ಮ ಕಂಪೆನಿಯ ವಾರೀಸುದಾರರು ಮಧ್ಯೆ ಬಂದಿದ್ದರಿಂದ ಆ ಪೀಡನೆಯಿಂದ ಪಾರಾದೆ. ಅಮಾನುಷ ಕೃತ್ಯಗಳ ಹೆಣಗಳ ವಾಸನೆ ನನ್ನ ಮೂಗಿಗೆ ಆಗಲೇ ಬಡಿದಿದೆ. ಹಣ ಕೊಟ್ಟರೆ ಕಾನೂನುಗಳು ಇಲ್ಲಿ ನಮ್ಮ ಕೈಗೆ ಬರುತ್ತವೆ. ಹಾಗಂತ ಹಣಕ್ಕೆ ಬಾಯ್ಬಿಟ್ಟ ನಡೆದಾಡುವ ಹೆಣಗಳೇ ಇಲ್ಲಿನ ಮನುಷ್ಯರು. ಭಾರತದಲ್ಲಿ ಇಂತಹದ್ದು ಬೇಕಾದಷ್ಟು ನಡೆಯುತ್ತವೆ. ಅದನ್ನು ಪ್ರಶ್ನಿಸುವ ಜನರಿದ್ದಾರೆ ಅನ್ನುವ ಸಮಾಧಾನ. ಇಲ್ಲಿ ಕೇಳುವವರು, ಕೊಡುವವರು ಎಲ್ಲರೂ ಕಳ್ಳರೇ ಅಂದಾಗ ಸತ್ಯಕ್ಕೂ ಹಲ್ಲು ಕಿರಿಯಲು ನಾಚಿಕೆ…!
ಸಂಸ್ಕೃತಿ ಸಂಕಥನ – 17 ಜಾತಿ, ರಿಲಿಜನ್ ಹಾಗೂ ಸೆಕ್ಯುಲರಿಸಂ ಭಗವದ್ಗೀತೆ ವಿವಾದ
-ರಮಾನಂದ ಐನಕೈ
ಕೇವಲ ಭಗವದ್ಗೀತೆ ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಸಂಪ್ರ ದಾಯಗಳಿಗೆ ಸಂಬಂಧಪಟ್ಟಂತೆ ಅನೇಕ ಸಂಗತಿ ಗಳು ವಿವಾದಕ್ಕೆ ಕಾರಣವಾಗುತ್ತಿವೆ. ಹಾಗೂ ಇವೆಲ್ಲ ರಾಜಕೀಯ ಸ್ವರೂಪ ಪಡೆದು ಸೆಕ್ಯುಲರ್ ಪ್ರಭುತ್ವ ಸಂದಿಗ್ಧದಲ್ಲಿ ಸಿಲುಕುವಂತಾಗುತ್ತಿದೆ. ಹಾಗಾದರೆ ಈ ದೇಶದಲ್ಲಿ ಏನು ನಡೆಯುತ್ತಿದೆ?
ಭಗವದ್ಗೀತೆ ವಿವಾದಕ್ಕೆ ಸಂಬಂಧಪಟ್ಟಂತೆ ಪತ್ರಿಕೆಗಳಲ್ಲಿ ದಿನನಿತ್ಯ ಹೇಳಿಕೆಗಳು ಬರುತ್ತಲಿವೆ. ಈ ಕುರಿತು ಒಂದು ಅಭಿಪ್ರಾಯ ರೂಪಿಸುವ ಪ್ರಯತ್ನ ನಡೆಯುತ್ತಿದೆ. ಅಂದರೆ ಭಾರತೀಯ ಸಂಸ್ಕೃತಿಯ ಕುರಿತಾದ ಪರಸ್ಪರ ತಪ್ಪು ತಿಳುವಳಿಕೆ ಗಾಗಿ ಭಗವದ್ಗೀತೆಯನ್ನು ಬಹಿರಂಗವಾಗಿ ಹರಾಜಿಗೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಗೀತೆಯಿಂದ ಶೂದ್ರರಿಗೆ ಹಾಗೂ ದಲಿತರಿಗೆ ಭಾರೀ ಅಪಾಯವಿದೆ ಎಂದು ಭಯ ಹುಟ್ಟಿಸಲು ಪ್ರಯತ್ನಿ ಸುತ್ತಿದ್ದಾರೆ. ಇಲ್ಲಿ ಒಂದನ್ನು ಗಮನಿಸಬೇಕು. ಇವೆಲ್ಲ ಸಾಮಾನ್ಯ ಜನರ ಅಥವಾ ಸಮೂಹದ ಅಭಿಪ್ರಾಯಗಳಲ್ಲ. ಆಯಾ ಸಮುದಾಯದ ವಕ್ತಾರರು ಅಥವಾ ಚಿಂತಕರೆನಿಸಿಕೊಂಡವರು ಮಾಧ್ಯಮಗಳ ಮೂಲಕ ಈ ರೀತಿ ಧರ್ಮಯುದ್ಧ ಮಾಡುತ್ತಿದ್ದಾರೆ. ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತಾಗಿದೆ ಪರಿಸ್ಥಿತಿ. ಈ ಪರಿ ಅರೆಬರೆ ಚಿಂತಕರನ್ನು ನೋಡಿದರೆ ಒಂದು ದಿನ ದೇವರ ವಿಗ್ರಹಗಳನ್ನು ಕಿತ್ತು ಕೈಯಲ್ಲಿ ಆಯುಧ ವಾಗಿ ಹಿಡಿದು ಹೊಡೆದುಕೊಂಡರೆ ಅಚ್ಚರಿಯೇ ನಿಲ್ಲ.
ಈ ಪರಿಸ್ಥಿತಿಗೆ ಮುಖ್ಯ ಕಾರಣವೆಂದರೆ ಭಾರತೀಯ ಸಂಸ್ಕೃತಿಯನ್ನು ರಿಲಿಜನ್ ಎಂದು ವ್ಯಾಖ್ಯಾನಿಸಿಕೊಳ್ಳುತ್ತಿರುವುದು. ಯುರೋಪಿ ಯನ್ನರು ಇಡೀ ಭಾರತೀಯ ಸಂಸ್ಕೃತಿಯನ್ನು ಸೇರಿಸಿ ಹಿಂದೂಯಿಸಂ ಎಂದು ಕರೆದು ಅದಕ್ಕೆ ರಿಲಿ ಜನ್ನಿನ ಲಕ್ಷಣ ಸೇರಿಸಲು ಪ್ರಯತ್ನಿಸಿದರು. ಆದ್ದರಿಂದಲೇ ನಾವಿಂದು ಹಿಂದೂಯಿಸಂ ಅಂದರೆ ಇಸ್ಲಾಂ ಹಾಗೂ ಕ್ರಿಶ್ಚಿಯಾನಿಟಿ ಇದ್ದಹಾಗೆ ಒಂದು ಅಖಂಡವಾದ ರಿಲಿಜನ್ ಎಂದು ತಿಳಿದುಕೊಂಡಿ ದ್ದೇವೆ. ಹಾಗಾಗಿ ಹಿಂದೂ ಸಂಪ್ರದಾಯಗಳನ್ನೆಲ್ಲ ರಿಲೀಜಿಯಸ್ ಚಟುವಟಿಕೆಯೆಂಬಂತೆ ಅತ್ಯಂತ ಗುಮಾನಿಯಿಂದ ನೋಡಲಾಗುತ್ತದೆ. ರಿಲಿಜೀ ಯಸ್ ಚಟುವಟಿಕೆಗಳ ಸಾರ್ವಜನೀಕರಣವನ್ನು ಸೆಕ್ಯುಲರ್ ನೀತಿ ಒಪ್ಪುವುದಿಲ್ಲ. ಅದಕ್ಕಾಗಿ ಎಡ ಪಂಥೀಯ ಚಿಂತಕರಿಗೆ ಇಂಥ ಸಾಂಪ್ರದಾಯಿಕ ಆಚರಣೆಗಳೆಲ್ಲ ನಿಷಿದ್ಧ ಹಾಗೂ ಮೌಢ್ಯ.
ಮನದ ಸುಕ್ಕು
ಪವನ್ ಪಾರುಪತ್ತೇದಾರ
ಸುಕ್ಕು ಶುರುವಾಗಿದೆಹೊಳೆಯುವ ಮೊಗವೀಗ ನಿಜ ಬಣ್ಣ ತೆರೆಯುತಿದೆ
ಸುಕ್ಕು ಶುರುವಾಗಿದೆ
ಚಂದನವ ಮೆಲ್ಲಗೆ ಮುಖವೆಲ್ಲ ಹಚ್ಚಿ
ನಿಂಬೆ ರಸದೊಂದಿಗೆ ನಯವಾಗಿ ತೊಳೆದು
ಅರೈಕೆಗಂತ್ಯವೇ ಇಲ್ಲದಂತಾದರು
ಮನದಮೇಲೆ ಸುಕ್ಕು ಶುರುವಾಗಿದೆ ಅಪನಂಬಿಕೆಯ ಸುಕ್ಕು ಅಜ್ಞಾನದ ಸುಕ್ಕು
ಆಸೆಯ ಸುಕ್ಕು ನಿರಾಸೆಯ ಸುಕ್ಕು
ಮುಖದ ನರಗಳನು ಬಿಗಿ ಹಿಡಿದು
ಮನದ ಮೇಲೆ ಗೀಟುಗಳನು ಎಳೆದು
ಗೊತ್ತಿಲ್ಲದಂತೆ ಮೋಸ ಶುರು ಮಾಡಿದೆ
ಸುಕ್ಕು ಶುರುವಾಗಿದೆ ಪ್ರತಿಯೊಂದು ತಪ್ಪಿಗು ಕಾರಣ ಹೇಳಿ
ಪ್ರತಿಯೊಂದು ಮಾತಿಗು ತೇಪೆಯ ಹಚ್ಚಿ
ತನ್ನ ತಾನೇ ಆಡಂಬರಿಸುವ ಆಸೆಯಲಿ ಗೆಳೆಯರ ಬಳಗದ ಮೆಟ್ಟಿ ಮೇಲೇರುತ
ನನ್ನದೇ ಗೆಲುವೆಂದು ಗರ್ವವನು ತೋರುವ
ಸುಕ್ಕು ಶುರುವಾಗಿದೆ ಸುಕ್ಕು ಶುರುವಾಗಿದೆ ಪವನ್ ಪಾರುಪತ್ತೇದಾರ:-
ಸಂಸ್ಕೃತಿ ಸಂಕಥನ – 16 ನೆಹರೂ ಸೆಕ್ಯುಲರಿಸಂ
-ರಮಾನಂದ ಐನಕೈ
ನೆಹರೂರವರು ಸಂಪೂರ್ಣ ಪಾಶ್ಚಾತ್ಯ ಶಿಕ್ಷಣ ಹಾಗೂ ಪ್ರಭಾವದಿಂದ ರೂಪಗೊಂಡವರು. ಹಾಗಾಗಿ ಅವರು ಭಾರತದ ಕುರಿತು ಚಿಂತಿಸುವಾಗ ಪಶ್ಚಿಮದಿಂದ ಪ್ರವೇಶಿಸುತ್ತಾರೆ. ಮೂಲಭೂತವಾಗಿ ನೆಹರೂರವರಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಅಸಡ್ಡೆಯ ಭಾವನೆ ಇದೆ. ಈ ಭಾವನೆ ಪ್ರೊಟೆಸ್ಟಾಂಟ್ ಕ್ರಿಶ್ಚಿಯಾನಿಟಿಯಿಂದ ಬಂದಿದ್ದು. ಹಾಗಾಗಿ ನೆಹರೂ ಸೆಕ್ಯುಲರಿಸಂನಲ್ಲಿ ಪ್ರಭುತ್ವ ಈ ಮೌಢ್ಯವನ್ನು ನಿವಾರಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಅಂದರೆ ಪ್ರಭುತ್ವ ಹೇಗೆ ‘ತಟಸ್ಥ’ ಇದ್ದಂತಾಯಿತು?
ನೆಹರೂ ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ. ಸ್ವಾತಂತ್ರ್ಯ ಹಾಗೂ ಸಮಾನತೆಯ ಬಗ್ಗೆ ಕಸನು ಕಂಡವರು. ಪಂಚವಾರ್ಷಿಕ ಯೋಜನೆಗಳ ಮೂಲಕ ಭಾರತವನ್ನು ಹಂತಹಂತವಾಗಿ ಪ್ರಗತಿಗೆ ತರಲು ಹೆಗಲು ಕೊಟ್ಟವರು. ಭಾರತ ಲಿಬರಲ್ ಸೆಕ್ಯುಲರ್ ರಾಷ್ಟ್ರವಾಗಿ ಪ್ರಗತಿ ಮತ್ತು ಸಮಾ ನತೆಯ ತುತ್ತತುದಿಗೆ ಹೋಗಬೇಕೆಂಬ ದೃಢವಾದ ಸಂಕಲ್ಪ ಹೊಂದಿದವರು. ಹಾಗಾದರೆ ನೆಹರೂರವರ ಪ್ರಕಾರ ಲಿಬರಲ್ ಸೆಕ್ಯುಲರ್ ನೀತಿಯೆಂದರೆ ಏನು? ಅದನ್ನೇ ನೆಹರೂ ಸೆಕ್ಯುಲರ್ ಎನ್ನುವುದು.
ಪ್ರಭುತ್ವ ಎಲ್ಲಾ ರಿಲಿಜನ್ಗಳಿಂದ ತಟಸ್ಥವಾಗಿರ ಬೇಕು ಹಾಗೂ ರಿಲಿಜನ್ನನ್ನು ತನ್ನ ಎಲ್ಲಾ ವ್ಯವಹಾರ ಗಳಿಂದ ಹೊರಗಿಡಬೇಕೆಂದು ನೆಹರೂ ಅಭಿ ಪ್ರಾಯಪಡುತ್ತಾರೆ. ಪ್ರಭುತ್ವ ರಿಲಿಜನ್ನನ್ನು ಪುರಸ್ಕರಿ ಸಿದರೆ ಆ ರಾಷ್ಟ್ರ ಒಂದು ಪ್ರಗತಿಹೀನ ರಾಷ್ಟ್ರವಾಗು ತ್ತದೆ ಎಂಬುದು ಅವರ ದೃಢವಾದ ನಂಬಿಕೆ. ನೆಹರೂ ಸೆಕ್ಯುರಿಸಂನ್ನು ವೈಜ್ಞಾನಿಕ ಸೆಕ್ಯುಲರಿಸಂ ಅಂತಲೂ ಕರೆಯುತ್ತಾರೆ. ಹಾಗಾದರೆ ಈ ವೈಜ್ಞಾನಿಕ ಸೆಕ್ಯುಲರಿಸಂ ಅಂದರೆ ಏನು?







