…ಆದರೆ ಒಂದೊಂದ್ ಸಲ ಅದು ಕೇಳಿಸೋದೇ ಇನ್ನೊಂದು ಥರ !!!
– ಅಭಿನಂದನ್.ಎಸ್
ಮೊನ್ನೆ ಟ್ರೈನಿನಲ್ಲಿ ಶಿವಮೊಗ್ಗಕ್ಕೆ ಹೋಗ್ತಾ ಇದ್ದೆ. ಮುಂಜಾನೆ ಮಂಪರು..ಯಥಾ ಪ್ರಕಾರ ಮಲಗಿದ್ದೆ.
“ಮಲ್ಗೋರ್ರಿ..ಮಲ್ಗೋರ್ರಿ….!” ಅಂತ ಕೂಗಿಕೊಂಡು ಹೋದ ನಾಸಿಕ ವಾಣಿಯೊಂದು ಮಲಗಿದ್ದ ನನ್ನನ್ನು ಎಬ್ಬಿಸಿತು. ಯಾರಪ್ಪ pirvate ಆಗಿ ಮಲ್ಗಿರೋದನ್ನ public ಮಾಡ್ತಿದಾರೆ ಅಂತ ಕಣ್ಣು ತೆಗೆದು ನೋಡಿದಾಗ ಗೊತ್ತಾಯ್ತು, ಮಲ್ಲಿಗೆ ಹೂವು ಮಾರುವವ ಅವನ ಸಂಕ್ಷಿಪ್ತ, ಕ್ಷಿಪ್ರ, ಗೌಪ್ಯ ಶೈಲಿಯಲ್ಲಿ, “ಮಲ್ಲಿಗೆ ಹೂವು ರೀ, ಮಲ್ಲಿಗೆ ಹೂವು ರೀ….” ಅಂತಿದ್ರು ಅಂತ. ಅವರ speed ಗೆ ಒದ್ದಾಡಿ ಹೋಗಿ, ಬಾಯಿಂದ ಹೊರಗೆ ಬೀಳೋ ಹೊತ್ತಿಗೆ ಅದು “ಮಲ್ಗೋರ್ರಿ” ಆಗೋಗಿತ್ತು.
ಈ ಆಸಾಮಿ ಎಷ್ಟೋ ಪರವಾಗಿಲ್ಲ. ನಮ್ಮ ಮನೆ ಹತ್ತಿರ ಹೂವು ಮಾರುವವ ಏನು ಹೇಳುತ್ತಾರೋ ಇದುವರೆಗೂ ನಂಗೆ ಗೊತ್ತಾಗಿಲ್ಲ. ಒಟ್ಟಿನಲ್ಲಿ “ನಾನು ಹೂವು ಮಾರುತ್ತಿದ್ದೀನಿ” ಅನ್ನೋದನ್ನ ಅವ ಭಾರೀ effective ಆಗಿ ವರ್ಷಗಳಿಂದ communicate ಮಾಡುತ್ತಾ ಬಂದಿದ್ದಾರೆ…ಅದೂ ಅವರದೇ ಬಾಯಿಂದ.
ಇನ್ನು ಎಳನೀರಿನ ಗತಿಯಂತೂ ಬ್ಯಾಡ್ವೇ ಬ್ಯಾಡ. “ಎನ್ನೀರ್ರು”, “ನ್ನೀರ್ರು”, “ಈರ್ರು”, “…ರ್ರು”…ಅದಕ್ಕೇ ಒಂದು ತತ್ಸಮ ತದ್ಭವ ಗ್ರಂಥ ಬರೀಬೋದೇನೋ.
ಬಸ್ಸಿನಲ್ಲಿ ಕಂಡಕ್ಟರ್ರು “ಓಲ್ಡೈನ್” ಅಂತಿದ್ದಿದ್ದು ನನಗೆ ಚಿಕ್ಕಂದಿನಲ್ಲಿ ಸುಮಾರು ವರ್ಷಗಳ ಕಾಲ ತಲೆ ಕೆಡೆಸಿತ್ತು, ಅದ್ಯಾವ ಭಾಷೆಯಲ್ಲಿ ಅದರ ಅರ್ಥ ಎನು ಅಂತ. ಯಾರೋ ಪುಣ್ಯಾತ್ಮೆ sophisticated ಅಜ್ಜಿ ಒಂದು ದಿನ ಸ್ಟಾಪಿನಲ್ಲಿ ನಿಲ್ಲಿಸದೆ ಮುಂದೆ ಹೋಗುತ್ತಿದ್ದ ಬಸ್ಸಿನಿಂದ ಇಳೀಬೇಕಾದ್ರೆ ದಯನೀಯವಾಗಿ “HOLD ON PLEASE” ಅಂತ ಕೂಗಿದಾಗ್ಲೇ ಗೊತ್ತಾಗಿದ್ದು , ಓಲ್ಡೈನ್ ಎಲ್ಲಿಂದ ದಾರಿ ತಪ್ಪಿ ಬಂತು ಅಂತ.
ರೈಲು, ಬಸ್ಸು ಸ್ಟೇಷನ್ನುಗಳಲ್ಲಿ ಇಡ್ಲೀನ ಹೇಗೆಲ್ಲಾ ಚಿತ್ರಾನ್ನ ಮಾಡಲ್ಲ. “ಯಾರ್ರೀಡ್ಲಿ?”, “ಯಾರ್ಗಿಡ್ಲಿ?”, “ಎಲ್ರೀಡ್ಲಿ?”…
ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನುವುದು ಯಾರ ಸ್ವತ್ತು ಅನಂತ ಮೂರ್ತಿಗಳೇ?
– ನವೀನ್ ನಾಯಕ್
ಮೊನ್ನೆ ಮೊನ್ನೆ ನಡೆದ ಒಂದು ಕಾರ್ಯಕ್ರಮದಲ್ಲಿ ಅನಂತ ಮೂರ್ತಿಯವರು ” ನರೇಂದ್ರ ಮೋದಿ ಪ್ರಧಾನಿಯಾಗುವ ದೇಶದಲ್ಲಿ ನಾನು ಬದುಕಿರಲು ಇಷ್ಟಪಡುವುದಿಲ್ಲ ” ಎಂಬ ಹೇಳಿಕೆ ನೀಡಿ ಮೋದಿ ಅಭಿಮಾನಿಗಳ ವಿರೋಧಕ್ಕೆ ಗುರಿಯಾಗಿದ್ದರು.ತದನಂತರ ನಡೆದ ಸಂದರ್ಶನದಲ್ಲಿ ಅನಂತ ಮೂರ್ತಿಯವರು ” ಮೋದಿ ಪ್ರಧಾನಿಯಾಗಬಾರದೆಂದು ” ಎಂಬ ಉದ್ದೇಶದಿಂದ ಹಾಗೆ ಹೇಳಿದೆ. ಯೌವನದಲ್ಲಿಯಾಗಿದ್ದರೆ ಮೋದಿ ಪ್ರಧಾನಿಯಾಗಗೊಡವುದಿಲ್ಲ ಅಂತ ಹೇಳುತ್ತಿದ್ದೆ ಈಗ ವಯಸ್ಸಾಗಿದೆ ಅದಕ್ಕೆ ಹಾಗೆ ಹೇಳಿದೆ,ನನ್ನ ನಿಲುವೊಂದೆ ಮೋದಿ ಈ ದೇಶದ ಪ್ರಧಾನಿಯಾಗಬಾರದು. ಇದರರ್ಥ ಮೋದಿ ಪ್ರಧಾನಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆಂದು ಅರ್ಥವಲ್ಲ ವೆಂದು ಸಮಜಾಯಿಸಿ ನೀಡಿದರು.
ಹಾಗೆ ಮೋದಿ ಅಭಿಮಾನಿಗಳು ನೀಡುತ್ತಿರುವ ಉತ್ತರ ಮತ್ತು ಅವರು ಪ್ರತಿಕ್ರಿಯಿಸುತ್ತಿರುವ ರೀತಿ ನೋಡಿದರೆ ಅಧಿಕಾರವಿಲ್ಲದೇನೇ ಹೀಗೆ ಇನ್ನು ಮೋದಿ ಅಧಿಕಾರವಹಿಸಿಕೊಂಡ ಮೇಲೆ ಅಭಿವ್ಯಕ್ತಿ ಸ್ವಾತಂತ್ರ್ಯಇರೋದೇ ಇಲ್ಲ, ಇದು ನಿಜವಾದ ಅಪಾಯವೆಂದಿದ್ದಾರೆ. ಅದೇ ಸಂದರ್ಶನದಲ್ಲಿ ಪ್ರಜಾಪ್ರಭುತ್ವವಾದಿಗೆ ಪ್ರಜಾಪ್ರಭುತ್ವವನ್ನು ಸಂಶಯದಿಂದ ನೋಡುವ ಶಕ್ತಿಯಿರಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳನ್ನು ಮರುಳು ಮಾಡುವ ವಿಧಾನದಿಂದ ಆಯ್ಕೆಯಾಗಿ ಬರುವವರನ್ನು ವಿರೋಧಿಸುವ ಗುಣವನ್ನು ಬೆಳೆಸಿಕೊಳ್ಳಬೇಕು.
ಅನಂತ ಮೂರ್ತಿಯವರಿಗೆ ಮಾತ್ರವೇ ಅಥವಾ ಅವರನ್ನು ಬೆಂಬಲಿಸುವವರಿಗೆ ಮಾತ್ರವೇ ಇರುವುದಾ ಆಭಿವ್ಯಕ್ತಿ ಸ್ವಾತಂತ್ರ್ಯ? ಇಲ್ಲಿ ಒಬ್ಬರ ಉದ್ದೇಶ ಮಾತ್ರ ಸ್ಪಷ್ಟಪಡಿಸಿಕೊಂಡರೆ ಅದು ಫ್ಯಾಸಿಸ್ಷ್ ಧೋರಣೆಯಾಗುತ್ತದೆ. ಕೇವಲ ಅನಂತಮೂರ್ತಿಯವರ ಹೇಳಿಕೆಗೆ ಅಥವ ಅವರನ್ನು ಸಮರ್ಥಿಸುವ ಹಿಂಬಾಲಕರಿಗೆ ಮಾತ್ರವಾ ಹಿಂದೆ ಉದ್ದೇಶವಿರುವುದು. ಆ ಹೇಳಿಕೆಯನ್ನು ಟೀಕಿಸುವವರಿಗೆ ಉದ್ದೇಶವಿಲ್ಲವೇ. ಅನಂತಮೂರ್ತಿಯವರು ನಾನು ಮೋದಿ ಪ್ರಧಾನಿಯಾದರೆ ಬದುಕಿರಲು ಇಷ್ಟಪಡುವುದಿಲ್ಲ ಎಂಬ ಹೇಳಿಕೆಗೆ ಅದಕ್ಕೆ ವಿರೋಧವಾಗಿ ನೀವು ಸಾಯಿರಿ ಎಂಬ ಹೇಳಿಕೆಯನ್ನು ಮೋದಿ ಅಭಿಮಾನಿಗಳು ಕೊಟ್ಟಿದ್ದಾರೆ. ಇಲ್ಲಿ ಮೋದಿ ಅಭಿಮಾನಿಗಳು ಕತ್ತಿ ಕುಡಾರಿ ಹಿಡಿದುಕೊಂಡು ಅನಂತಮೂರ್ತಿಯವರ ಹಿಂದೆ ಬಿದ್ದಿದ್ದಾರಾ, ಇಲ್ಲವಲ್ಲ. ಅವರ ಹೇಳಿಕೆಗೆ ಇದು ವಿರೋಧವಾಗುತ್ತೆ ವಿನಃ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದಿಲ್ಲ. ಹೇಳಿಕೆಯ ಹಿಂದಿರುವ ಉದ್ದೇಶ ಎರಡೂ ಕಡೆ ಗಮನಿಸುವುದು ಉತ್ತಮ.
ಸಿರಿಯಾದಲ್ಲಿ ಶಬ್ದವಿಲ್ಲದ ಯುದ್ಧವಂತೂ ನಡೆಯಲಿದೆ
– ಎಸ್.ಸುನಿಲ್ ಕುಮಾರ್
ರಾಷ್ಟೀಯ ಪ್ರಧಾನ ಕಾರ್ಯದರ್ಶಿ, YOUTH FOR NATION
ಈ ಬಾರಿ ಸಿರಿಯಾ ಮೇಲೆ ಕ್ಷಿಪಣಿ ಯುದ್ಧವೇರ್ಪಟ್ಟರೂ, ಕ್ಷಿಪಣಿ ಬಳಸದೇ ಇದ್ದರೂ ಸೈಬರ್ ಯುದ್ಧವಂತೂ ನಿಶ್ಚಿತವಾಗಿ ನಡೆಯಲಿದೆ. ಇದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ. ಯಾರ ಸಮ್ಮತಿಗೂ ಕಾಯಬೇಕಿಲ್ಲ. ಏಕೆಂದರೆ ಇದೊಂದು ಮಾಯಾಯುದ್ಧ. ಇಲ್ಲಿ ಶತ್ರು ಎಲ್ಲಿರುವನು ಎಂದು ತಿಳಿಯುವುದೇ ಇಲ್ಲ. ದಾಳಿ ನಡೆಯುವುದೆ ಗೊತ್ತಾಗುವುದಿಲ್ಲ, ದಾಳಿ ಎಂದು ಶುರುವಾತು, ಎಲ್ಲಿ ಮುಗಿತು ಒಂದೂ ತಿಳಿಯುವುದಿಲ್ಲ. ತಿಳಿಯುವುದೊಂದೆ ಅದರಿಂದಾಗುವ ಹಾನಿ ಮಾತ್ರ, ಸೈಬರ್ ಯುದ್ಧದ ಪರಿಣಾಮ ಅತ್ಯಂತ ಅಪಾಯಕಾರಿ.
ಜೂನ್ ೨೦೧೦ ರಲ್ಲಿ ಇರಾನಿನ ಅಣುಸ್ಥಾವರಗಳು ಸ್ಟಕ್ಸ್ನೆಟ್ ಎಂಬ ಕಂಪ್ಯೂಟರ್ ವೈರಸ್ ದಾಳಿಂದ ನಿಷ್ಕ್ರಿಯಗೊಳ್ಳುತ್ತದೆ. ನಿರ್ದಿಷ್ಟವಾಗಿ ಅಣುಸ್ಥಾವರದ ಸೆಂಟ್ರಿಫ್ಯೂಜ್ಗಳನ್ನೆ ಗುರಿಯಾಗಿರಿಸಿ ಇರಾನಿನ ಅಣುಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಕುಂಠಿತಗೊಳಿಸಿದ ಸ್ಟಕ್ಸ್ನೆಟ್ ಅಮೆರಿಕಾ ಮತ್ತು ಇಸ್ರೇಲ್ ಸೇರಿ ಇರಾನಿನ ವಿರುದ್ಧ ಬಳಸಲು ತಯಾರಿಸಿದ ಸೈಬರ್ ಅಸ್ತ್ರ ಎಂದು ಜೂನ್ ೧. ೨೦೧೨ ರಂದು “ನ್ಯೂಯಾರ್ಕ್ ಟೈಮ್ಸ್” ವರದಿ ಮಾಡುತ್ತದೆ. ಹಾಗೆಯೆ ಈ ಕಾರ್ಯಾಚರಣೆಯ ಹೆಸರು “ಆಪರೇಷನ್ ಒಲಂಪಿಕ್ ಗೇಮ್ಸ್” ಎಂಬುದನ್ನು ಉಲ್ಲೇಖಿಸುತ್ತದೆ.
ದೇಶವೊಂದು ಯಾವುದೇ ಸೈನಿಕರನ್ನು ಕಳುಹಿಸದೆ, ವಾಯುಪಡೆ ನೌಕಾಪಡೆಗಳನ್ನು ನಿಯೋಜಿಸದೆ ಗುಂಡಿನ ಆರ್ಭಟವೂ ಇಲ್ಲದೆ ಹೇಗೆ ಯುದ್ಧ ಮಾಡಬಹುದು ಹಾಗೂ ಇದರಿಂದ ಹೇಗೆ ಶತ್ರು ರಾಷ್ಟ್ರವನ್ನು ಹಣೆಯಬಹುದೆಂಬ ಪಾಠವನ್ನು ಅಮೆರಿಕಾ ಮತ್ತು ಇಸ್ರೇಲ್ ಜಗತ್ತಿಗೆ ಹೇಳಿಕೊಟ್ಟವು.
ಅನಂತ ಮುಖದ ಮೂರ್ತಿಯವರ ಕಾಲ್ಪನಿಕ ಸಂದರ್ಶನ
– ಮು ಅ ಶ್ರೀರಂಗ ಬೆಂಗಳೂರು
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ನಮ್ಮ ಹೆಮ್ಮೆಯ ಯು ಆರ್ ಅನಂತಮೂರ್ತಿಯವರು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರ ಬಗ್ಗೆ ಲೇಖನವೊಂದನ್ನು ಬರೆಯುವುದಕ್ಕಿಂತ ಒಂದು ಕಾಲ್ಪನಿಕ ಸಂದರ್ಶನದ ಮೂಲಕ ಅವರ ನಡೆ-ನುಡಿಗಳನ್ನು ತಿಳಿದುಕೊಳ್ಳಬಹುದು ಎಂದು ಅನಿಸಿತು. ಅನಂತಮೂರ್ತಿಯವರದ್ದು ಸಮ್ಮೋಹಕವಾದ ರೂಪ;ಅವರ ಭಾಷಣದ ಶೈಲಿ ಅನನ್ಯ. ಆ ಮಾತಿನ ಶೈಲಿಯನ್ನು ಜ್ಞಾಪಿಸಿಕೊಂಡು ಈ ಕಾಲ್ಪನಿಕ ಸಂದರ್ಶನವನ್ನು ಓದಿದರೆ ನಿಮಗೆ ಆಪ್ತವೆನಿಸಬಹುದು. ಒಮ್ಮೆ ಪ್ರಯತ್ನಿಸಿ.
ಪ್ರಶ್ನೆ: ನಿಮ್ಮನ್ನು ಗುಲ್ಬರ್ಗ ಕೇಂದ್ರಿಯ ವಿ. ವಿ. ಕುಲಪತಿಗಳನ್ನಾಗಿ ಈಗಾಗಲೇ ಕೆಂದ್ರ ಸರ್ಕಾರ ನೇಮಿಸಿದೆ. ಇದಕ್ಕೂ ಮತ್ತು ಹಿಂದೆ ನಡೆದ ಅಸ್ಸಾಂ ಹಾಗು ಮುಂಬೈ ಗಲಭೆಗಳ ಬಗ್ಗೆ ತಾವು ಇದುವರೆಗೂ ಏನೂ ಹೇಳಿಕೆ ನೀಡದೆ ಇರುವುದಕ್ಕೂ ಏನಾದರು ಸಂಬಂಧ,ಹಿಡನ್ ಅಜೆಂಡಾ ಉಂಟೆ? ಜತೆಗೆ ಇತ್ತೀಚಿನ ಉತ್ತರ ಪ್ರದೇಶದ ಗಲಭೆಗಳ ಬಗ್ಗೆಯೂ ತಾವು ಪ್ರತಿಕ್ರಿಯಿಸಿಲ್ಲ ಏಕೆ?
ಅನಂತಮೂರ್ತಿ: ನೋಡಿ ಇದಕ್ಕೆ ಹಿಡನ್ ಅಜೆಂಡಾ ಎಂಬ ಪದದ ಪ್ರಯೋಗ ಸರಿಯಲ್ಲ. ಈ ಪ್ರಶ್ನೆಗೆ ನಾನು ಎರಡು ಆಯಾಮಗಳ ಮೂಲಕ ಉತ್ತರಿಸಲು ಪ್ರಯತ್ನಿಸುತ್ತೇನೆ. ಮೊದಲನೆಯದಾಗಿ ನಾನು ಮತ್ತು ನನ್ನ ವಿಚಾರವಾದಿ ಗೆಳೆಯರು ನಂಬಿರುವ ಸೆಕ್ಯುಲರಿಸಂ ಪ್ರಕಾರ ನಾವು ಅಂದರೆ ಬಹುಸಂಖ್ಯಾತರು ಯಾವಾಗಲು ಅಲ್ಪಸಂಖ್ಯಾತರ ಭಾವನೆಗಳಿಗೆ ಬೆಲೆ ಕೊಡಬೇಕು. ಗಾಂಧೀಜಿಯವರು ಹೇಳಿದ್ದೂ ಇದನ್ನೇ. ನಮ್ಮ ಪ್ರಜಾತಂತ್ರದ ತಳಪಾಯ ನಿಂತಿರುವುದು ನಮ್ಮ ಹಿರಿಯರ ಈ ಆಶಯಕ್ಕೆ ನಾವು ಧಕ್ಕೆ ಬಾರದಂತೆ ನಡೆದುಕೊಳ್ಳುವುದರಲ್ಲಿ ಮಾತ್ರ. ಈ ಕಾರಣದಿಂದ ನಾನು ಮತ್ತು ನನ್ನ ವಿಚಾರವಾದಿ ಗೆಳೆಯರು ತಾವು ಹೇಳಿದ ಆ ಎರಡೂ ಘಟನೆಗಳ ಬಗ್ಗೆ (ಅದು ಗಲಭೆಯಲ್ಲ) ಮೌನವಹಿಸಿದ್ದು. ಇನ್ನು ಎರಡನೇ ಆಯಾಮವೆಂದರೆ ನಾನು ಈ ನನ್ನ ೮೦ರ ವಯಸ್ಸಿನಲ್ಲಿ ಕುಲಪತಿಯಾಗಲು ಒಪ್ಪಿಕೊಂಡಿರುವುದಕ್ಕೆ ನನಗೆ “ಕುರ್ಚಿ”ಯ ವ್ಯಾಮೋಹ ಕಾರಣವೆಂದು ಅಲ್ಲಲ್ಲಿ ಕೆಲವರು ಅಂದು ಕೊಂಡಿರಬಹುದು. ಆದರೆ ಅವರು ಮರೆತಿರಬಹುದಾದ ಒಂದು ಸಂಗತಿಯೆಂದರೆ ನಾನು ಕುಲಪತಿಯಾಗಿರುವುದು ನಮ್ಮ ಸುವರ್ಣ ಕರ್ನಾಟಕದ ಒಂದು ಕೇಂದ್ರಿಯ ವಿ ವಿ ಗೆ. ಕುಲಪತಿಯಾಗಿ ಅಲ್ಲಿ ನನಗೆ ದೊರಕಬಹುದಾದಂತಹ ಅಧಿಕಾರ ಏನಿದೆ ಅದರಿಂದ ಆ ಪ್ರದೇಶದಲ್ಲಿ ಶೈಕ್ಷಣಿಕವಾಗಿ ಬದಲಾವಣೆಯ ಒಂದು ವಾತಾವರಣ ನಿರ್ಮಿಸಲು ಪ್ರಯತ್ನಿಸುವ ಆಸೆ ಇದೆ. ಅದರ ರೂಪ-ರೇಷೆಗಳ ಬಗ್ಗೆ ನಾನು ಗಾಢವಾಗಿ ಯೋಚಿಸುತ್ತಿದ್ದೆ. ನಾನು “ಮೌನಿ”ಯಾಗಿರಲು ಇದೂ ಒಂದು ಕಾರಣವಾಗಿರಬಹುದು. ಇನ್ನು ಉತ್ತರ ಪ್ರದೇಶದ ಘಟನೆಗಳ ಬಗ್ಗೆ “ಸದ್ಯದ”ಪರಿಸ್ಥಿತಿಯಲ್ಲಿ ಯಾವ ರೀತಿ ಪ್ರತಿಕ್ರಿಯಿಸಿದರೆ ಅದು ಸೆಕ್ಯುಲರ್ ಅನಿಸಿಕೊಳ್ಳಬಹುದುದೆಂದು ಯೋಚಿಸುತ್ತಿದ್ದೇನೆ.
ಅನ೦ತಮೂರ್ತಿ ,ಮೋದಿ ಮತ್ತು ಅಭಿವ್ಯಕ್ತಿ ಸ್ವಾತ೦ತ್ರ್ಯ
– ಗುರುರಾಜ ಕೊಡ್ಕಣಿ,ಯಲ್ಲಾಪುರ
ಅನುಚಿತ ಕಾರಣಗಳಿಗೆ ಯು.ಆರ್. ಅನ೦ತಮೂರ್ತಿ ಸುದ್ದಿಯಾಗುವುದು ಹೊಸದೇನಲ್ಲ.ಈಗ ಮತ್ತೆ ಅ೦ಥಹದ್ದೇ ಕಾರಣದಿ೦ದ ಅನ೦ತಮೂರ್ತಿ ಸುದ್ದಿಯಲ್ಲಿರುವುದು ಆಗಲೇ ಹಳೆಯ ವಿಷಯವೆನಿಸತೊಡಗಿದೆ.’ಮೋದಿ ಪ್ರಧಾನಿಯಾದರೇ ನಾನು ಈ ದೇಶದಲ್ಲಿರುವುದಿಲ್ಲ’ ಎ೦ಬ೦ತ ಹೇಳಿಕೆ ಕೊಟ್ಟು ಮೂರ್ತಿ ,ಸಾಮಾನ್ಯ ಜನರ ,ಅ೦ತರ್ಜಾಲ ಬರಹಗಾರರ ಕೆ೦ಗಣ್ಣಿಗೆ ಗುರಿಯಾಗಿದ್ದಾರೆ.ಅವರ ಪರ ವಿರೋಧದ ಮಾತುಗಳು ಧಾರಾಕಾರವಾಗಿ ಸಾಮಾಜಿಕ ತಾಣಗಳಲ್ಲಿ ,ವೃತ್ತಪತ್ರಿಕೆಗಳಲ್ಲಿ ಹರಿಯತೊಡಗಿವೆ.ಅವರು ದೇಶವನ್ನ ಬಿಟ್ಟು ಪಾಕಿಸ್ತಾನಕ್ಕೋ,ಅಫಘಾನಿಸ್ತಾನಕ್ಕೋ ಹೋಗಲಿ ಎ೦ದು ಕೆಲವರೆ೦ದರೇ, ಹಾಗೆಲ್ಲ ಅವರ ಬಗ್ಗೆ ಮಾತನಾಡಬಾರದು ,ಅವರು ಹಿ೦ದೆಲ್ಲ ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆಯನ್ನು ಮರೆತು ಮಾತನಾಡುವುದು ತಪ್ಪು ಎ೦ದು ವಾದಿಸುತ್ತಾರೆ ಕೆಲವರು.ಬಿಡಿ ಅದು ಅವರವರ ಭಾವಕ್ಕೆ,ಅವರವರ ಭಕುತಿಗೆ.
ಆದರೆ ಇಲ್ಲೊ೦ದು ವಿಷಯವನ್ನು ಗಮನಿಸಲೇಬೇಕು. ಅನ೦ತಮೂರ್ತಿ ಜಾತ್ಯಾತೀತವಾದಿಗಳೆ೦ದು ಹಾಗಾಗಿ ಅವರು ಏನೇ ಹೇಳಿದರೂ ಹಿ೦ದೂಗಳು ಅವರನ್ನು ಹೀಗೆಳೆಯುತ್ತಾರೆ೦ದೂ ಕೆಲವರು ವಾದಿಸುತ್ತಾರೆ.ಅಲ್ಲದೇ ಎಸ್.ಎಲ್ ಭೈರಪ್ಪ ಹಿ೦ದುತ್ವವಾದಿಯಾಗಿರುವುದರಿ೦ದ ಅವರು ಏನೇ ಬರೆದರೂ ಅವರನ್ನು ಹೊಗಳಿ ಅಟ್ಟಕ್ಕೇರಿಸುತ್ತಾರೆ೦ಬುದೂ ಇವರ ವಾದ.ಇದು ಶುದ್ಧ ಮೂರ್ಖತನವೆನ್ನದೇ ಬೇರೆ ವಿಧಿಯಿಲ್ಲ.’ವ೦ಶವೃಕ್ಷ’ ದಲ್ಲಿನ ಸಾ೦ಪ್ರದಾಯಿಕ ಬ್ರಾಹ್ಮಣ ಮನೆಯಲ್ಲಿ ’ನಿಯೋಗ’( ಮಕ್ಕಳನ್ನು ಪಡೆಯುವುದಕ್ಕೋಸ್ಕರ ಗ೦ಡನನ್ನು ಹೊರತುಪಡಿಸಿ ಬೇರೊಬ್ಬನೊ೦ದಿಗೆ ಸ೦ಬ೦ಧ ಹೊ೦ದುವುದು) ಪದ್ದತಿಯಿ೦ದ ಜನಿಸುವ ಶ್ರೀನಿವಾಸ ಶ್ರೋತ್ರಿಯ ಪಾತ್ರವನ್ನು ಸೃಷ್ಟಿಸಿದವರು ಭೈರಪ್ಪನವರಲ್ಲವೇ…? ಸ೦ಗೀತದ ಕಥಾವಸ್ತುವಿದ್ದರೂ , ಒಬ್ಬ ಶಾಸ್ತ್ರೀಯ ಸ೦ಗೀತದ ಗುರುವೊಬ್ಬನೊ೦ದಿಗೆ ,ಅವನ ಶಿಷ್ಯೆಗಿರಬಹುದಾದ ಅನೈತಿಕ ಸ೦ಬ೦ಧ,ನಾಟ್ಯ ಪ್ರವೀಣೆಯೊಬ್ಬಳಿಗೆ ಅವಳ ಶಿಷ್ಯನೊ೦ದಿಗಿರಬಹುದಾದ ಸ೦ಬ೦ಧಗಳ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಡುವ ’ಮ೦ದ್ರ’ ಯಾರ ಕಾದ೦ಬರಿ..?
‘ನಕ್ಸಲ್ ವರಸೆ’ ಮತ್ತು ‘ಹೆಗ್ಗುರುತು’ ಕಥಾ ಸಂಕಲನಗಳನ್ನು ಕುರಿತಂತೆ … ಭಾಗ ೨
–ಮು. ಅ. ಶ್ರೀರಂಗ,ಬೆಂಗಳೂರು
“ಹೆಗ್ಗುರುತು”ಗೆ ಪ್ರವೇಶ ರೂಪದಲ್ಲಿ ಮುನ್ನುಡಿ ಬರೆದಿರುವ ಮಲ್ಲಿಕಾರ್ಜುನ ಹೀರೆಮಠರು ಆ ಕತೆಗಳ ಸಾರಾಂಶ / ತಾತ್ಪರ್ಯ/ ಭಾಷ್ಯ ಹೀಗೆ ಬರೆದಿರುವುದರಿಂದ ಅದರಲ್ಲಿ ಚರ್ಚಿಸುವ ಅಂಶಗಳು ಅಷ್ಟಾಗಿ ಇಲ್ಲ. “ನಿಜಕವಲು”ಜತೆಗೆ ಸ್ತ್ರ್ರೀ ವಾದಿಗಳೂ ಸೇರಿದಂತೆ ಹಲವರ ಕೋಪಕ್ಕೆ ಕಾರಣವಾದ ಭೈರಪ್ಪನವರ “ಕವಲು”ಕಾದಂಬರಿಯನ್ನು ಹೋಲಿಸಿದ್ದಾರೆ. ಈ ತೌಲನಿಕ ಅಧ್ಯಯನ ಹೇಗೆ ಸಾಧ್ಯವೋ ತಿಳಿಯದಾಗಿದೆ. ಕವಲು ಮತ್ತು ನಿಜಕವಲುವಿನ ನೆಲೆಗಳೇ ಬೇರೆ ಬೇರೆ. ಕಾನೂನಿಗೂ ನ್ಯಾಯ-ನೀತಿಗೂ ನಡುವೆ ಇರುವ ಕಂದರ ಕವಲುವಿನ ಮುಖ್ಯ ಸಮಸ್ಯೆ. ಒಂದು ಒಳ್ಳೆಯ ಉದ್ದೇಶಕ್ಕಾಗಿ,ಜನ ಹಿತಕ್ಕಾಗಿ ಮಾಡಿದ ಕಾನೂನನ್ನೇ ಅದಕ್ಕೆ ವಿರುದ್ದವಾಗಿಯು ಉಪಯೋಗಿಸಿದಾಗ ಏನಾಗಬಹುದು ಎಂಬುದರಕದೆಗೆ ನಮ್ಮ ಗಮನವನ್ನು ಸೆಳೆಯುವುದು ಆ ಕಾದಂಬರಿಯ ಉದ್ದೇಶ. ದಾಂಪತ್ಯದಲ್ಲಿ ಹೊಂದಾಣಿಕೆ ಎಂಬುದು ಕೇವಲ ಗಂಡಸಿಗೆ ಮಾತ್ರ ಸೇರಿದ್ದಲ್ಲ;ಹೆಣ್ಣಿಗೂ ಆ ಕರ್ತವ್ಯದಲ್ಲಿ ಪಾಲಿದೆ. ತೀರ ಸಹಿಸಲು ಆಸಾಧ್ಯವಾದಾಗ ಬಿಡುಗಡೆ ಪಡೆಯುವುದರಲ್ಲಿ ತಪ್ಪೇನಿಲ್ಲ. ಇದನ್ನು ಭೈರಪ್ಪನವರು ವಿರೋಧಿಸುತ್ತಾರೆ ಎಂದು ಊಹಿಸುವುದು ತಪ್ಪಾಗುತ್ತದೆ.”ನಿಜ ಕವಲು”ವಿನಲ್ಲಿ ಬರುವ ಮಹಿಳಾ ಕಂಡಕ್ಟರ್ ರೀತಿಯಲ್ಲೇ ಇತರೆ ಉದ್ಯೋಗಸ್ಥ ಮಹಿಳೆಯರೂ ಸಹ ಒಂದಲ್ಲ ಒಂದು ವಿಧದಲ್ಲಿ ಸನ್ನಿವೇಶದಲ್ಲಿ :ವಾರೆ ನೋಟ”ಕ್ಕೆ ತುತ್ತಾಗ ಬಹುದಾದಂತಹವರೆ.”ಚಿಕ್ಕತಾಯಿ”ಕತೆ ಇದಕ್ಕೆ ಉದಾಹರಣೆ. ಕೊನೆಯಲ್ಲಿ ಅದು ಬೇರೆ ತಿರುವು ಪಡೆದರು ಸಹ ಪ್ರಾರಂಭದ ಹಂತಗಳನ್ನು ಮರೆಯಬಾರದಲ್ಲವೆ ಹೀಗಾಗಿ ದುಡಿಯುವ ಆಧುನಿಕ ಮಹಿಳೆಯ ಬಗ್ಗೆ ಭೈರಪ್ಪನವರದ್ದು “ವಾರೆ ನೋಟ”ಎಂಬ ಹಿರೇಮಠರ ಅಭಿಪ್ರಾಯ ಸರಿಯಿಲ್ಲ. ಜತೆಗೆ ಆಧುನಿಕ ಉದ್ಯೋಗಸ್ಥ ಮಹಿಳೆಯಿಂದಾಗಿ ನಮ್ಮ ಸನಾತನ ಸಂಸ್ಕೃತಿ ಕವಲು ದಾರಿ ಹಿಡಿದು ಹಾಳಾಗುತ್ತಿದೆ ಎಂಬ ಆತಂಕ ಭೈರಪ್ಪನವರನ್ನು ಕಾಡುತ್ತಿದೆ ಎಂಬ ಹಿರೇಮಠರ ಆರೋಪದಲ್ಲೂ ಹುರುಳಿಲ್ಲ. ಸನಾತನ ಸಂಸ್ಕೃತಿ ನಂಬಿಕೆಗಳಿಗೆ ಮುಜುಗುರ ತಂದಂತಹ “ಪರ್ವ”(ಮಹಾಭಾರತವನ್ನು”ಆಧರಿಸಿದ್ದು) ಕಾದಂಬರಿಯನ್ನು ಬರೆದ ಭೈರಪ್ಪನವರನ್ನು “ಸನಾತನ ಮಠದ ಸ್ವಾಮಿಗಳ ಪೀಠ”ದಲ್ಲಿ ಕೂರಿಸುವುದು ಕುಚೋದ್ಯವಾಗಬಹುದು. ಅಷ್ಟೆ.
‘ನಕ್ಸಲ್ ವರಸೆ’ ಮತ್ತು ‘ಹೆಗ್ಗುರುತು’ ಕಥಾ ಸಂಕಲನಗಳನ್ನು ಕುರಿತಂತೆ … ಭಾಗ ೧
-ಮು. ಅ. ಶ್ರೀರಂಗ,ಬೆಂಗಳೂರು
ಕಥಾಸಂಕಲನಗಳು, ಕಾದಂಬರಿಗಳು, ಕವನಸಂಕಲನಗಳು … ಹೀಗೆ ಸಾಹಿತ್ಯದ ಯಾವುದೇ ಪ್ರಕಾರವಿರಲಿ ಅವುಗಳಿಗೆ ಮುನ್ನುಡಿಗಳು ಸಾಮಾನ್ಯವಾಗಿ ಇರುತ್ತವೆ.ಈ ಮುನ್ನುಡಿಗಳು ಕೆಲವೊಮ್ಮೆ ಸ್ನೇಹದ ಕುರುಹಾಗಿರಬಹುದು, ಅಥವಾ ಉದಯೋನ್ಮುಖರನ್ನು ಪ್ರೋತ್ಸಾಹಿಸುವ, ಅವರಲ್ಲಿ ಧೈರ್ಯ ತುಂಬುವ ಆಶೀರ್ವಚನಗಳಾಗಿರಬಹುದು. ಇನ್ನು ಕೆಲವು ಪರಸ್ಪರ ಸಹಕಾರದ (ಅವರದ್ದಕ್ಕೆ ಇವರು ಇವರದ್ದಕ್ಕೆ ಅವರು) ಸ್ವರೂಪದ್ದೂ ಆಗಿರುವುದುಂಟು.
ಕೆ.ಸತ್ಯನಾರಾಯಣರ ಇತ್ತೀಚಿನ ಸಣ್ಣ ಕಥೆಗಳ ಸಂಕಲನ ‘ನಕ್ಸಲ್ ವರಸೆ’ (ಪ್ರಕಾಶಕರು : ಅಕ್ಷರಪ್ರಕಾಶನ ಹೆಗ್ಗೋಡು , ೨೦೧೦)ಗೆ ಮುನ್ನುಡಿ ಬರೆದಿರುವ ಕೆ.ಫಣಿರಾಜ್ ಮತ್ತು ‘ಹೆಗ್ಗುರುತು’ (ಮನೋಹರ ಗ್ರಂಥಮಾಲ , ಧಾರವಾಡ ,೨೦೧೨)ಗೆ ಪ್ರವೇಶ ರೂಪದಲ್ಲಿ ಮುನ್ನುಡಿ ಬರೆದಿರುವ ಮಲ್ಲಿಕಾರ್ಜುನ ಹಿರೆಮಠರದ್ದು ಮೇಲೆ ಹೇಳಿದ್ದ ಪ್ರಭೇಧಗಳಿಗೆ ಸೇರುವಂಥಹದಲ್ಲ.
ಫಣಿರಾಜರು ತಮ್ಮ ಮುನ್ನುಡಿಯಲ್ಲಿ ಸತ್ಯನಾರಾಯಣರ ಕಥೆಗಳ ಹಿನ್ನಲೆಯಲ್ಲಿ ಸಧ್ಯದ ಕೆಲವೊಂದು ವಾದ-ವಿವಾದಗಳ್ಳನ್ನು ಚರ್ಚಿಸಿರುವುದರಿಂದ ಆಸಕ್ತಿದಾಯಕವಾಗಿದೆ.ಹಿರೇಮಠರದ್ದು ಕಥೆಗಳ ಸಾರಾಂಶ ಅವುಗಳ ಬಗ್ಗೆ ಅವರ ಒಂದೆರೆಡು ಅಭಿಪ್ರಾಯಗಳು/ಅನಿಸಿಕೆಗಳಿಗೆ ಸೀಮಿತವಾಗಿದೆ.ಕಥೆಗಳ ಬಗ್ಗೆ ನೇರವಾಗಿ ಬರೆಯದೆ ಮುನ್ನುಡಿಗಳನ್ನು ಕುರಿತಂತೆ ಚರ್ಚಿಸುವುದಕ್ಕೆ ಒಂದು ಕಾರಣವಿದೆ.ಮುನ್ನುಡಿಗಳೂ ಒಂದು ರೀತಿಯ ವಿಮರ್ಶೆ ಆಗಿರುವುದರಿಂದ ಅದರ ನಿಲುವುಗಳ,ತೀರ್ಮಾನಗಳ ಬಗ್ಗೆ ಮಾತನಾಡುವುದೂ ಸಹ ಪರೋಕ್ಷವಾಗಿ ಆ ಕಥೆಗಳನ್ನು ಕುರಿತಂತೆ ಓದುಗನಾಗಿ ನನ್ನ ಅಭಿಪ್ರಾಯಗಳೂ ಆಗಿರುವ ಸಾಧ್ಯತೆಗಳಿವೆ
ಧಿಡೀರ್ ಖ್ಯಾತಿ(?)
– ಡಾ. ಜ್ಞಾನದೇವ್ ಮೊಳಕಾಲ್ಮುರು
ನೀನೊಬ್ಬ ಅನಾಮಧೇಯ ಈ ನಾಡಿನಲ್ಲಿ. ನಿನ್ನ ಹಿ೦ದಿನ ಚರಿತ್ರೆ ನಮಗೆ ಬೇಕಿಲ್ಲ.
ನಿನಗೆ ಧಿಡೀರ್ ಖ್ಯಾತಿ, ಹೆಸರು ಬೇಕಾ? ಬುದ್ದಿಜೀವಿ, ಸೆಕ್ಯುಲಾರ್ ಎ೦ಬ ಮಾಡರ್ನ್ ವಿಶೇಷಣ ಬೇಕಾ?
ಸೋ ಕಾಲ್ಡ್ ಈ ನಾಡಿನ ಬುದ್ಧಿಜೀವಿಗಳ ಜ್ಞಾನಪೀಠಿಗಳ ಸೆಕ್ಯುಲರ್ವಾದಿಗಳ, ಪ್ರಗತಿಪರರ ಸಖ್ಯ, ಸಪೋರ್ಟ್, ಐಡೆ೦ಟಿಟಿ, ಭೇಷ್ ಬೇಕಾ?
ಈ ನಾಡಿನ ಪ್ರಬಲ ಮಾಧ್ಯಮ ಟಿವಿ, ಪತ್ರಿಕೆಯಲ್ಲಿ ಹೆಡ್ ಲೈನ್ಸ್ ಕುದುರಿಸಿಕೊಳ್ಳುವ ಬಯಕೆ ಇದೆಯಾ?
ಟಿವಿ ಪತ್ರಿಕೆಯಲ್ಲಿ ಸ೦ದರ್ಶನ, ಸ೦ವಾದ ಗೋಷ್ಠಿಯಲ್ಲಿ ರಾರಾಜಿಸಬಹುದು ಎ೦ಬ ಅದಮ್ಯ ಕನಸು ಇದೆಯಾ?
ಗುಡ್..
ಇದಕ್ಕೆಲ್ಲಾ ಹೆಚ್ಚು ಶ್ರಮ ಪಡಬೇಕಿಲ್ಲ, ಹೆಚ್ಚು ಹಣದ ಅಗತ್ಯವೂ ಇಲ್ಲ.
ಜಸ್ಟ್ ಇಷ್ಟನ್ನು ಮಾಡು..
ಹಿ೦ದೂ ಧರ್ಮದ, ಹಿ೦ದೂ ಸ೦ಸ್ಕೃತಿಯ, ಹಿ೦ದೂ ಮಹಾಕಾವ್ಯಗಳ, ಪುರಾಣಗಳ, ಹಿ೦ದೂ ದೇವತೆಗಳನ್ನು ಸ್ವಲ್ಪ ಲೇವಡಿ ಮಾಡಿದರೆ ಸಾಕು, ಜಾಸ್ತಿಯಾದರೆ ಇನ್ನೂ ಜಾಸ್ತಿ ಖ್ಯಾತಿ!
ಅದು ಸ೦ಶೋಧನೆ(?)ಯ ಹೆಸರಿನಲ್ಲಿರಬಹುದು ಅಥವಾ ಅಭಿವ್ಯಕ್ತಿ ಸ್ವಾತ೦ತ್ರ್ಯದ ಹೆಸರಲ್ಲಿರಬಹುದು, ಅಥವಾ ಪ್ರಗತಿಪರ ಧೋರಣೆಯ ಸಾಹಿತ್ಯದ ಹೆಸರಲ್ಲಿರಬಹುದು ಅಥವಾ ನೀನು ಸೃಷ್ಟಿಸುವ ಸುಳ್ಳು ಸುಳ್ಳು ಜೊಳ್ಳು ಜೊಳ್ಳಿನ ಸೃಜನಶೀಲತೆಯ ಹೆಸರಲ್ಲಿರಬಹುದು..
Dont Worry..
ಮತ್ತಷ್ಟು ಓದು 
“ಡುಂಢಿ” ಅನ್ನುವ ಕೃತಿ ಮತ್ತು “ಸೆಕ್ಯುಲರಿಸಂ” ಅನ್ನುವ ಅವಕಾಶವಾದ …!
– ರಾಕೇಶ್ ಶೆಟ್ಟಿ
“ಡುಂಢಿ”ಯ ಬಗ್ಗೆ ಗೆಳೆಯರೊಬ್ಬರ ಜೊತೆ ಮಾತನಾಡುತಿದ್ದೆ. ಅವರು “Immortals of Meluha” ಪುಸ್ತಕವನ್ನು ಉಲ್ಲೇಖಿಸಿ, “ಆ ಪುಸ್ತಕದಲ್ಲಿ ಶಿವ, ಗಾಂಜಾ ಸೇದುತ್ತಾನೆ,ಟಿಬೆಟಿಯನ್ ಮೂಲದವನು ಅಂತ ಬರೆದಿತ್ತು ಅದು ಭರ್ಜರಿ ಸೇಲ್ ಆಗಿತ್ತು.ಈ ಡುಂಢಿ ಪ್ರಿಂಟ್ ಹಾಕಿಸಿದ್ದೇ ೧೫೦-೨೦೦ ಪ್ರತಿಯಂತಲ್ಲ” ಅಂದರು. ನಾನಂದೆ “ನಿಮಗೆ, ’ದೇವರ ಪಾಲಿಟಿಕ್ಸ್’ ಅರ್ಥವಾಗಿಲ್ಲ. ಆ ಪುಸ್ತಕದಲ್ಲಿ ಶಿವನನ್ನು, ’ಟಿಬೆಟಿಯನ್’ ಅನ್ನುವ ಬದಲೋ ’ಬ್ರಾಹ್ಮಣ/ಆರ್ಯ’ ಅಂತೇನಾದರೂ ಚಿತ್ರಿಸಿದ್ದರೇ ಈಗ ಡುಂಢಿಯ ಪರ ಮಾತನಾಡುತ್ತಿರುವ ಕರ್ನಾಟಕದ ಸೋ-ಕಾಲ್ಡ್ ಸೆಕ್ಯುಲರ್ ಗಳೆಲ್ಲ ಆ ಪುಸ್ತಕದ ವಿರುದ್ಧ ಮಾತನಾಡುತಿದ್ದರು”.
“ಒಬ್ಬ ನಕಲಿಯೋ ಅಥವಾ ಹಲವಾರು ಅಸಲಿಗಳ ಒಂದು ಸಂಕೇತವೊ ಆಗಿರುವ ಗಣಪತಿಯನ್ನು ಕುರಿತು ಹಲವು ಪುರಾಣಗಳು ಹಲವಾರು ರೀತಿಯ ಕಥೆಗಳನ್ನು ಹೇಳಿವೆ. ಈ ಢುಂಢೀಯೂ ಹಾಗೇ ಒಂದು ಮನೋರಂಜನೆ ಅಥವಾ ವಿಚಾರಕ್ಕೆ ಹಚ್ಚಬಹುದಾದ, ನಿಜವೆಂದು ನಂಬಲು ಇಷ್ಟ ಪಡುವ ಹೂರಣದ ಒಂದು ಕಲ್ಪನೆಯ ಪುರಾಣವೇ.” ಅನ್ನುವ ಮಾತುಗಳನ್ನಿಟ್ಟುಕೊಂಡ “ಡುಂಢಿ” ಅನ್ನುವ ಕೃತಿಯನ್ನು ಓದದೇ ಅದು ಕೃತಿಯೋ,ವಿಕೃತಿಯೋ ಅಂತ ನಿರ್ಧಾರ ಮಾಡುವುದು ಹೇಗೆ? ಅನ್ನುವ ಪ್ರಶ್ನೆಯನ್ನು ಮುಂದಿಡುತ್ತ ಮತ್ತು ಒಬ್ಬ ಲೇಖಕನನ್ನು ಬಂಧಿಸುವಂತ ಮಟ್ಟದವರೆಗೂ ಹೋಗಿದ್ದನ್ನು ವಿರೋಧಿಸುತ್ತಲೇ,ಈ ಮಾತು ಕೇಳುತಿದ್ದೇನೆ.ನಾನು ನನ್ನ ಗೆಳೆಯರಿಗೆ ಹೇಳಿದ ಮಾತಿನಲ್ಲಿ ಸತ್ಯವಿರಬಹುದು ಅಂತ ನಿಮಗೂ ಅನ್ನಿಸುವುದಿಲ್ಲವೇ? (“ಶಿವ”ನಮ್ಮವನು ಅವನನ್ನು ಹೈಜಾಕ್ ಮಾಡಿದ್ದಾರೆ ಅಂತ ಬರೆದವರನ್ನೂ ನೋಡಿದ್ದೇನೆ. ದೇವರನ್ನೂ ಈ ಮಂದಿ ತಮ್ಮ ಗುಂಪಿನೊಳಗೆ ಸೇರಿಸಿಕೊಳ್ಳುತ್ತಾರೆ ಶಿವಾ ಶಿವಾ…!)
ರೂಪಾಯಿ,ಪೆಟ್ರೋಲ್ ಮತ್ತು ಸ್ವದೇಶಿ
– ಪ್ರಶಸ್ತಿ.ಪಿ ಶಿವಮೊಗ್ಗ
ರೂಪಾಯಿ ಮೌಲ್ಯ ಅಪಮೌಲ್ಯ ಆಗ್ತಾ ಆಗ್ತಾ ಅದ್ರ ಬೆಲೆ ಅರವತ್ತೆಂಟು ದಾಟಾಯ್ತು.. ಇನ್ನಾದ್ರೂ ನಾವು ಎಚ್ಚೆತ್ತಿಲ್ಲ. ಮನೆಗೊಂದು ಕಾರು, ತೆಲೆಗೊಂದು ಬೈಕು ಅಂತ ಜುಂ ಜಾಮಾಗಿರೋ ನಾವು ನಮ್ಮೀ ವೈಭವದಿಂದಲೇ ಪೆಟ್ರೋಲ್ ದರ ಗಗನಕ್ಕೇರಿರೋದು ಅಂತಲೂ ತಿಳೀತಿಲ್ಲ. ಪೆಟ್ರೋಲ್ ಬೆಲೆ ಏನಾದ್ರಾಗ್ಲಿ, ಅದ್ರಿಂದ ಡಾಲರ್ ದರ ಅರವತ್ತಲ್ಲ ನೂರು ಮುಟ್ಟಿದ್ರೂ ನಮಗೇನು ಅಂದ್ರಾ ? ಡಾಲರ್ ದರ ಹೆಚ್ಚಾದಷ್ಟೂ ಟೆಕ್ಕಿಗಳಿಗೆ, ರಫ್ತು ಮಾಡೋರಿಗೆ ಲಾಭವೇ ಅಲ್ವಾ ? ದೇಶಕ್ಕೇನಾದ್ರೆ ನಮಗೇನು ಅಂದ್ರಾ ? !! ರಫ್ತೆಂದರೆ ಚೀನಾದಂತೆ ಬೇಕಾಬಿಟ್ಟಿ ವ್ಯವಹಾರವಲ್ಲ, ಅಗ್ಗದ ದರದಲ್ಲಿ ಚೀನಾದವ್ರೂ ಎಲ್ಲಾ ಕಡೆ ಕಸದಂತೆ ತಂದು ಎಲ್ಲಾ ದೇಶಗಳಲ್ಲಿ, ಭಾರತಕ್ಕೂ ತಂದು ಸುರಿತಿರುವಾಗ, ಕೂಲಿಯಿಂದ ಹಿಡಿದು ಕಚ್ಚಾವಸ್ತುಗಳವರೆಗೆ ಎಲ್ಲದರ ಬೆಲೆ ಏರಿದ್ರೂ ಗುಣಮಟ್ಟ ಕಾದುಕೊಳ್ಳೋ ಅನಿವಾರ್ಯತೆಯಿರೋ ಭಾರತೀಯ ರಫ್ತು ಉದ್ಯಮಕ್ಕೂ ಹೊಡೆತ ಬೀಳುತ್ತಿದೆ ಅದ್ರ ಮದ್ಯ ಕೊಕ್ಕೆ ತೆಗೆಯೋ ಹೊರದೇಶಗಳ ನೂರಾರು ಕಾನೂನುಗಳು ಬೇರೆ…ಅದೆಲ್ಲಾ ದೊಡ್ಡ ತಲೆ ನೋವು ಅಂದ್ರಾ ? ಸರಿ,ಹೋಗ್ಲಿ ಬಿಡಿ.ಅದಿರ್ಲಿ, ಪೆಟ್ರೋಲ್ ಬೆಲೆ ಏರ್ತಾ ಇದ್ರೂ ರೂಪಾಯಿ ಬೆಲೆ ಇಳಿತಾ ಇದ್ರೂ ಘನ ಸರ್ಕಾರ ಏನು ಮಾಡ್ತಾ ಇದೆ ಅಂತ ಬೊಬ್ಬೆ ಹಾಕೋ ಬದ್ಲು ಆ ಸಮಯದಲ್ಲಿ ನಮ್ಮಿಂದ ಏನಾದ್ರೂ ಮಾಡ್ಬಹುದಾ ಅಂತ್ಯಾಕೆ ಯೋಚ್ನೆ ಮಾಡ್ಬಾರ್ದು ?




