ಸಂಸ್ಕೃತಿ ಸಂಕಥನ – 26 – ಭಾರತೀಯರ ನೈತಿಕ ಸ್ವರೂಪ
-ರಮಾನಂದ ಐನಕೈ
ನೈತಿಕತೆ ಅಂದರೆ ಏನು? ಜಗತ್ತಿನ ಎಲ್ಲಾ ಸಂಸ್ಕೃತಿಗಳ ನೈತಿಕ ಪ್ರಜ್ಞೆ ಒಂದೇ ತೆರನಾಗಿದೆಯೇ? ಪ್ರಸ್ತುತ ಭಾರತೀಯ ಸಂದರ್ಭದಲ್ಲಿ ಇಂತಹ ಸೂಕ್ಷ್ಮ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಇದು ಸ್ಪಷ್ಟವಾಗದಿದ್ದರೆ ನಾವು ನಮ್ಮ ಸಂಸ್ಕೃತಿಯನ್ನು ಅರಿತುಕೊಳ್ಳಲು ತೊಡಕಾಗುತ್ತದೆ.
ಯುರೋಪಿಯನ್ನರ ನೈತಿಕ ಪ್ರಜ್ಞೆಗೂ ಭಾರತೀಯರ ನೈತಿಕಪ್ರಜ್ಞೆಗೂ ಅಜಗಜಾಂತರ ವ್ಯತ್ಯಾಸವಿದೆ. ಪಾಶ್ಚಾತ್ಯರು ನೈತಿಕತೆಯನ್ನು ಗ್ರಹಿಸುವ ರೀತಿಯೇ ಬೇರೆ, ನಾವು ನಿರ್ಣಯಿಸುವ ರೀತಿಯೇ ಬೇರೆ. ಭಾರತೀಯ ಪುರಾಣಗಳು ನೈತಿಕತೆಯ ಬುನಾದಿ ಅನ್ನುತ್ತೇವೆ. ನಮ್ಮ ಸಂಸ್ಕೃತಿಯಲ್ಲಿರುವಷ್ಟು ನೀತಿ ಬೇರೆಲ್ಲೂ ಇಲ್ಲ ಅನ್ನುತ್ತೇವೆ. ರಾಮ, ಕೃಷ್ಣ, ಬುದ್ಧ, ಬಸವ, ಸೀತಾ, ತಾರಾ, ಮಂಡೋದರಿ ಮುಂತಾಗಿ ನೈತಿಕ ಆದರ್ಶದ ಮಾಡೆಲ್ಗಳೇ ನಮ್ಮ ಇತಿಹಾಸ ಹಾಗೂ ಪುರಾಣಗಳಲ್ಲಿ ಸಿಗುತ್ತವೆ. ಇಷ್ಟಾಗಿಯೂ ಐರೋಪ್ಯರು ಭಾರತೀಯರನ್ನೇಕೆ ಅನೈತಿಕರು ಅಂದರು?
ಯುರೋಪಿಯನ್ನರು ಭಾರತಕ್ಕೆ ಬಂದಾಗ ಅವರಿಗೆ ಇಲ್ಲಿನ ಸಂಸ್ಕೃತಿ ಅರ್ಥವಾಗಲಿಲ್ಲ. ಇಡೀ ಭಾರತೀಯ ಸಂಸ್ಕೃತಿಗೆ ನೈತಿಕ ತಳಪಾಯವೇ ಇಲ್ಲ ಎಂದು ನಿರ್ಣಯಿಸಿದರು. ಭಾರತೀಯರಿಗೆ ಮೊರಲ್ ಹಾಗೂ ಎಥಿಕ್ಸ್ನ ಕಲ್ಪನೆಯೇ ಇಲ್ಲ. ನಾಗರಿಕತೆಯಿಂದ ಬಹಳ ಹಿಂದುಳಿದಿದ್ದಾರೆ. ಇದೊಂದು ಪತನಗೊಂಡ ಸಂಸ್ಕೃತಿ. ಇಲ್ಲಿನ ಮೂತರ್ಿಪೂಜೆ, ಜಾತಿಪದ್ಧತಿ, ಸಾಮಾಜಿಕ ಆಚರಣೆಗಳೆಲ್ಲವೂ ಅವರಿಗೆ ಅನೈತಿಕ ಆಚರಣೆಗಳಂತೆ ಕಂಡವು. ಭಾರತೀಯರು ಅಪ್ರಾಮಾಣಿಕರು, ಸುಳ್ಳು ಹೇಳುವವರು ಹಾಗೂ ಮೋಸಗಾರರು ಎಂಬುದಾಗಿ ವಣರ್ಿಸಿದರು. ಭಾರತೀಯ ಸಂಸ್ಕೃತಿ ಭ್ರಷ್ಟಗೊಂಡಿದೆ ಎಂದು ವ್ಯಾಖ್ಯಾ ನಿಸಿದರು. ಆದ್ದರಿಂದ ಭಾರತದ ಪುನರುದ್ಧಾರಕ್ಕೆ ಕೈಹಾಕಿದರು. ಈ ಕಾರಣಕ್ಕಾಗೇ ಹಲವು ಕಾನೂನು ಗಳನ್ನು ಮಾಡಿದರು. ಭಾರತದ ಜಾತಿ ವ್ಯವಸ್ಥೆಯನ್ನಂತೂ ಎಥಿಕಲ್ ಭ್ರಷ್ಟಾಚಾರದ ಮೂರ್ತರೂಪ ಎಂದರು. ಭಾರತೀಯರ ಎಥಿಕ್ಸೇ ಅನೈತಿಕವೆಂದು ಜರಿದ ಬಗ್ಗೆ ಸಹಸ್ರ ಉದಾಹರಣೆಗಳಿವೆ.
ಗೂಗಲ್ ಸರ್ಚ್ ಫಲಿತಾಂಶಗಳು ನಿಮ್ಮ ಮೊಬೈಲಿನಲ್ಲಿ
-ಆದೇಶ್ ಕುಮಾರ್
ಈಗ ನೀವು ಗೂಗಲ್ ಸರ್ಚ್ ಫಲಿತಾಂಶಗಳನ್ನು ನಿಮ್ಮ ಮೊಬೈಲಿನಲ್ಲೇ ಯಾವುದೇ ಅಂತರ್ಜಾಲ ಸಂಪರ್ಕವಿಲ್ಲದೇ ಪಡೆಯಬಹುದು.
ನೀವು ಮಾಡಬೆಕಾಗಿರುವುದು ಇಷ್ಟೆ. ಕೇವಲ ನೀವು ಹುಡುಕಬೇಕೆಂದಿರುವ ಪದವನ್ನು ಅಥವಾ ವಿಷಯವನ್ನು +919773300000 ಗೆ ಸಂದೇಶ ಕಳುಹಿಸಿ. ನಿಮಗೆ ನೀವು ಹುಡುಕುತ್ತಿರುವ ಪದಗಳ ಫಲಿತಾಂಶ ಗೂಗಲ್ ನಿಂದ ಸಂದೇಶದ ಮೂಲಕ ಬರುತ್ತದೆ. ಇದು ಗೂಗಲ್ ನ ಹೊಸದಾದ ಉಚಿತವಾದ ಸೇವೆ.
ಚಿತ್ರಕೃಪೆ : evolvor.com
ಬಿಲ್ವಪತ್ರೆ- ಮರ, ಪತ್ರೆ, ಹಣ್ಣು-ಕಾಯಿ….ಹೂ
-ಸುಗುಣ ಮಹೇಶ್
ಅಟಲ್ ಜಿ ನಮಗೆಷ್ಟು ಗೊತ್ತು?
-ನಾಗರಾಜ್ ಎಂ ಎಂ
ಸ್ನೇಹಿತರೇ ಹೇಗಿದ್ದೀರಿ? ಇವತ್ತು ಮತ್ತೆ ಸ್ವಲ್ಪ ಟೈಮ್ ಮಾಡ್ಕೊಳಿ, ಏನಾದ್ರೂ ಹಾಗೆ ಮಾತಾಡೋಣ ಅಲ್ವಾ? ನೀವೇ ನೋಡಿದ್ದೀರಲ್ಲ ಇತ್ತೀಚೆಗೆ ಟಿವಿ ಚಾನಲ್ ಗಳನ್ನ ನೋಡೋಕೆ ಆಗದೆ ಇರೋವಷ್ಟರಮಟ್ಟಿಗೆ ನಮ್ಮ ಮಾನ್ಯ ಮಂತ್ರಿಗಳು, ರಾಜಕಾರಣಿಗಳು ಹೊಲಸು ಮಾಡೋದನ್ನ, ಇನ್ನೂ ಕೆಲವರು ಅದರ ಪರ ವಿರೋಧ ಮಾತಾಡಿ ಮಜಾ ಕೊಡೋದನ್ನ!! ಅಲ್ವೇ? ಆದರೆ ನಿಷ್ಟಾವಂತರಾಗಿ ದೇಶಕ್ಕಾಗಿ ದೇಶದ ಪ್ರಗತಿಗಾಗಿ ಹೋರಾಡಿದ ಎಷ್ಟೋ ಜನರಿದ್ದಾರೆ ಅವರಲ್ಲಿ ಒಬ್ಬರು ಹಾಗೂ ಮುಖ್ಯವಾದವರು ಮಾನ್ಯ ಅಟಲ್ ಬಿಹಾರಿ ವಾಜಪೇಯಿಯವರು…….. ಅವರ ಬಗ್ಗೆ ನಮಗೆ ಎಷ್ಟು ಗೊತ್ತು? ತಿಳಿಯುವ ಸಣ್ಣ ಪ್ರಯತ್ನ ಮಾಡೋಣ ಬನ್ನಿ.
ಅಟಲ್ ಅವರು ಹುಟ್ಟಿದ್ದು ಕ್ರಿಸ್ ಮಸ್ ದಿನದಂದು ಅದು 1924 ರಲ್ಲಿ ಕೃಷ್ಣ ದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ಅವರಿಗೆ, ಮಧ್ಯ ಪ್ರದೇಶದ ಗ್ವಾಲಿಯರ್ ಹತ್ತಿರದ ಶಿಂದೆ ಕಿ ಚವ್ವಾಣಿ ಅನ್ನೋ ಹಳ್ಳಿಯಲ್ಲಿ, ತಂದೆ ಒಬ್ಬ ಕವಿ ಹಾಗೆ ಸಾಮಾನ್ಯ ಶಾಲೆಯ ಮೇಷ್ಟ್ರು……. ಹಾಗೆ ಅಟಲ್ ಅವರ ಅಜ್ಜ ಪಂಡಿತ್ ಶ್ಯಾಮ್ ಲಾಲ್ ವಾಜಪೇಯಿಯವರು. ಅಟಲ್ ಅವರ ಪದವಿಯನ್ನ ವಿಕ್ಟೋರಿಯಾ ಕಾಲೇಜಿನಿಂದ (ಈಗ ಲಕ್ಷ್ಮಿ ಬಾಯಿ ಕಾಲೇಜು) ಪಡೆದರು. ಹಿಂದಿ, ಇಂಗ್ಲೀಷ್ ಹಾಗೂ ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಗಳಿಸಿದ ಅಟಲ್ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನ ಕಾನ್ಪುರದ ಡಿ. ಎ. ವಿ ಕಾಲೇಜಿನಿಂದ ಪಡೆದರು. ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್. ಎಸ್. ಎಸ್ )ವನ್ನು ಸೇರಿದರು. ವೀರ ಅರ್ಜುನ ಹಾಗೂ ಪಾಂಚಜನ್ಯ ಅನ್ನುವ ಎರಡು ಪತ್ರಿಕೆಗಳಿಗೆ ಪತ್ರಕರ್ತರಾಗಿ ಕವಿಯಾಗಿ ಸೇವೆ ಸಲ್ಲಿಸಿದರು….. ನಿಮಗೆ ಗೊತ್ತ? ಭಾರತದ ಅವಿವಾಹಿತ ಪ್ರದಾನ ಮಂತ್ರಿ ಕೇವಲ ಅಟಲ್ ಜಿ ಮಾತ್ರ…..!!
ಅಟಲ್ ಅವರ ಮೊದಲ ರಾಜಕೀಯ ಜೀವನ ಶುರುವಾಗಿದ್ದು 1942 ರಲ್ಲಿ ಕ್ವಿಟ್ ಇಂಡಿಯ (ಬ್ರಿಟಿಷರೇ ಬಾರತ ಬಿಟ್ಟು ತೊಲಗಿ) ಚಳುವಳಿಯಲ್ಲೀ ಭಾಗವಹಿಸುವ ಮೂಲಕ, ನಂತರ 23 ದಿನಗಳ ಕಾಲ ಜೈಲು ವಾಸ ಅನುಭವಿಸ ಬೇಕಾಯಿತು, 1953 ರಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪರಿಚಯ ಭಾರತೀಯ ಜನ ಸಂಘದ ಮೂಲಕ ಆಯಿತು. 1957 ರಲ್ಲಿ ಮೊದಲ ಬಾರಿಗೆ ಲೋಕ ಸಭೆಯ ಸದಸ್ಯರಾಗಿ ಆಯ್ಕೆ ಆದರು. ನಂತರದ ದಿನಗಳಲ್ಲಿ ಇವರ ಚತುರತೆಯನ್ನ ಕಂಡ ನೆಹರು ಜಿ ಹೇಳಿದ್ರಂತೆ, ಈ ವ್ಯಕ್ತಿ ಮುಂದೆ ಪ್ರದಾನಿ ಆಗ್ತಾರೆ ಅಂತ. ಅವರ ಅಸಾಮಾನ್ಯ ಬುದ್ದಿವಂತಿಕೆಯಿಂದಾಗಿ ಎಷ್ಟರ ಮಟ್ಟಿಗೆ ಬೆಳೆದರು ಎಂದರೆ ಜನ ಸಾಮಾನ್ಯರಲ್ಲಿ ಭಾರತೀಯ ಜನ ಸಂಘ ಅನ್ನುವ ಹೆಸರೇ ಕೇಳದ ಪಕ್ಷವನ್ನ ಬುಡದಿಂದ ಕಟ್ಟಿ ಬೆಳಸಿದರು ಅದಕ್ಕೆ ಸಾಥ್ ಕೊಟ್ಟವರು ಲಾಲ್ ಕೃಷ್ಣ ಅಡ್ವಾಣಿ, ನಾನಾಜಿ ದೇಶಮುಖ್ ಹಾಗೂ ಬಾಲರಾಜ್ ಮಧೋಕ್ ಅವರು.
ಇದು ಭರತವರ್ಷ : ಆ ಹೆಣ್ಣು ಮಗಳ ಹೋರಾಟಕ್ಕೆ ಅಂತ್ಯ ಇದೆಯಾ???
– ರಾಕೇಶ್ ಶೆಟ್ಟಿ
‘ರಸಋಷಿಯ ರಮ್ಯಲೋಕದೆಡೆಗೆ’
-ಹೃದಯ ಶಿವ
ಕನ್ನಡ ಸಾಹಿತ್ಯ ಜಗತ್ತಿನ ಮೇರು ಶೃಂಗದಲ್ಲಿ ಶಾಶ್ವತವಾಗಿ ನಿಂತಿರುವ ರಾಷ್ಟ್ರಕವಿ ಕುವೆಂಪುರವರ ಹೆಸರನ್ನು ಕೇಳದ ಕನ್ನಡಿಗ ಬಹುಷಃ ಇರಲಾರ. ಬಾಲ್ಯದಲ್ಲಿ ಆಂಗ್ಲ ಸಾಹಿತ್ಯದ ವ್ಯಾಮೋಹಕ್ಕೊಳಗಾಗಿ ಹಲವು ಆಂಗ್ಲ ಕವಿತೆಗಳನ್ನು ಬರೆದರೂ ಕ್ರಮೇಣ ಕನ್ನಡ ಸಾಹಿತ್ಯ ಕೃಷಿಗೆ ಕೈ ಹಾಕಿ ಇಂದು ಕನ್ನಡ, ಕರ್ನಾಟಕದಷ್ಟೇ ಚಿರಾಯುವಾಗಿರುವ ಪುಟ್ಟಪ್ಪನವರು ೧೯೦೪ರಲ್ಲಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ ಎಂಬ ಗ್ರಾಮದಲ್ಲಿ ಹುಟ್ಟಿದರು. ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ಮಲೆನಾಡಿನೊಂದಿಗೆ ಆಟವಾಡುತ್ತ, ಮೋಹಕ ಮಂಜನೊಂದಿಗೆ ಮಾತಿಗಿಳಿಯುತ ಬೆಳೆದ ಇವರು ಮೂಲತಃ ನಿಸರ್ಗದ ಆರಾಧಕರಾಗಿದ್ದರು. ಪ್ರೌಢರಾಗುತ್ತಾ ಹೃದಯ ಆರ್ದ್ರಗೊಳ್ಳುತ್ತಿದ್ದಂತೆಯೇ ಮೆದುಳ ಬತ್ತಳಿಕೆಯಲ್ಲಿ ತುಂಬಿಕೊಂಡ ಕಲ್ಪನೆಯ ಸೂಕ್ಷ್ಮತೆಗಳು ಅಕ್ಷರ ರೂಪ ಪಡೆಯುತ್ತಾ ಸಾಗಿ ಕೊನೆಗೆ ಬ್ರಹದಾಕಾರದ ಹೆಮ್ಮರವಾಗಿದ್ದು ಈಗ ಜಗಜ್ಜ್ರಾಹೀರಾಗಿದೆ.
ಕೊಳಲು, ಪಾಂಚಜನ್ಯ, ಅಗ್ನಿಹಂಸ, ಕುಟೀ ಚಕ, ಮಂತ್ರಾಕ್ಷತೆ, ವಿಭೂತಿ ಪೂಜೆ, ಕದರಡಕೆ, ಮರಿ ವಿಜ್ಞಾನಿ, ದ್ರೌಪತಿಯ ಶ್ರೀಮುಡಿ, ರಕ್ತಾಕ್ಷಿ, ಶ್ಮಶಾನ ಕುರುಕ್ಷೇಂತ್ರಂ, ಮಹಾರಾತ್ರಿ ಸೇರಿದಂತೆ ಇನ್ನು ಅನೇಕ ಕೃತಿಗಳನ್ನು ರಚಿಸಿದ ಕುವೆಂಪು ಅವರಿಗೆ ಒಲಿಯದ ಪ್ರಶಸ್ತಿ, ಪುರಸ್ಕಾರಗಳಿಲ್ಲ. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕಾಗಿ ಜ್ಞಾನಪೀಠ ಲಭಿಸಿದ್ದು ಜೊತೆಗೆ ಪಂಪ ಪ್ರಶಸ್ತಿ, ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನಗಳೊಂದಿಗೆ ಹಲವು ವಿಶ್ವ ವಿದ್ಯಾನಿಲಯಗಳ ಗೌರವ ಡಾಕ್ಟರೇಟ್ಗಳು ಬಂದಿವೆ. ಅಧ್ಯಾಪಕರಾಗಿದ್ದುಕೊಂಡೇ ಎಲ್ಲಾ ಪ್ರಕಾರದ ಸಾಹಿತ್ಯ ರಚನೆಯಲ್ಲಿ ಸೈ ಎನಿಸಿಕೊಂಡ ಇವರು ಬರೆದ ಮಲೆಗಳಲ್ಲಿ ಮದುಮಗಳು ಹಾಗೂ ಕಾನೂರು ಹೆಗ್ಗಡತಿ ಎಂಬೆರಡು ಕಾದಂಬರಿಗಳು ಮಲೆನಾಡಿನ ಚಿತ್ರಣ, ಜೀವನವನ್ನು ವಿಸ್ತಾರವಾಗಿ ಬಿಚ್ಚಿಟ್ಟ ಮಹಾಗ್ರಂಥಗಳೇ ಸರಿ. ಈ ಮೇರು ಕವಿಯ ಲೇಖನಿಯಿಂದ ಮೂಡಿ ಬಂದ ತೆರೆದಿದೆ ಓ ಬಾ ಅತಿಥಿ ಭಾವಗೀತೆಯು ನಿರ್ದೇಶಕದ್ವಯರಾದ ದೊರೈ – ಭಗವಾನ್ ನಿರ್ದೇಶನದ ’ಹೊಸಬೆಳಕು’ ಚಿತ್ರದಲ್ಲಿ ದೃಶ್ಯರೂಪ ಪಡೆದುದ್ದು ನಮ್ಮೆಲ್ಲರ ಸೌಭಾಗ್ಯ.
ಮೊಬೈಲ್ನಲ್ಲಿ ಕನ್ನಡ ವಿಕಿಪೀಡಿಯ
-ಓಂಶಿವಪ್ರಕಾಶ್
ವಿಕಿಪೀಡಿಯವನ್ನು ಇಂಟರ್ನೆಟ್ ಬ್ರೌಸರ್ನಲ್ಲಿ ನೋಡಿದವರಿಗೆ ತಮ್ಮ ಮೊಬೈಲ್ ನಲ್ಲೂ ಅದನ್ನು ಕಾಣಬೇಕು ಎಂದು ಬಹಳ ಬಾರಿ ಅನಿಸಿರಬಹುದು. ಸ್ವಲ್ಪ ದಿನಗಳ ಹಿಂದಿನವರೆಗೆ ಕನ್ನಡ ಅಕ್ಷರಗಳು ಮೂಡುವಂತಹ ಮೊಬೈಲ್ ಕೊರತೆಯಿಂದಾಗಿ ಇದು ಸಾಧ್ಯವಾಗದಿರಲಿಕ್ಕೂ ಸಾಕು. ಸ್ಯಾಮ್ಸಂಗ್ನ ಏಸ್ ಮತ್ತಿತರ ಆಡ್ರಾಂಯ್ಡ್ ಫೋನುಗಳು ಇತರ ಭಾರತೀಯ ಭಾಷೆಗಳ ಜೊತೆಗೆ ಕನ್ನಡವೂ ಮೊಬೈಲ್ ಪರದೆಯ ಮೇಲೆ ಮೂಡುವಂತೆ ಮಾಡಿರುವುದರಿಂದ ಕನ್ನಡದ ವೆಬ್ಸೈಟ್ ಇತ್ಯಾದಿಗಳು ಈಗ ಅಂಗೈ ಅಗಲದ ಮೊಬೈಲ್ ಪರದೆಯಲ್ಲಿ ರಾರಾಜಿಸುತ್ತಿವೆ.
ಇದಾದ ನಂತರವೂ ವಿಕಿಪೀಡಿಯ ಕನ್ನಡ (http://kn.wikipedia.org) ಪುಟವನ್ನು ತೆರೆದಾಗ ವಿಕಿಪೀಡಿಯ ಮೊಬೈಲ್ ಪುಟವನ್ನು ಮರೆ ಮಾಡಿ, ಎಂದಿನ ಆವೃತ್ತಿಯಲ್ಲಿ ಈ ಪುಟ ನೋಡಿ ಎಂಬ ಮಾಹಿತಿ ಮಾತ್ರ ನಮಗೆ ದೊರಕುತ್ತಿತ್ತು. ಈಗ ಅದಕ್ಕೆ ಕೊನೆ. ಕನ್ನಡ ವಿಕಿಪೀಡಿಯದ ಮೊಬೈಲ್ ಪುಟ ಈಗ ಲಭ್ಯವಿದೆ. ಖುದ್ದಾಗಿ ಇದನ್ನು ಸರಿ ಪಡಿಸಬೇಕು ಎಂದು ಕೊಂಡಿದ್ದು ವಿಕಿಪೀಡಿಯದ ಇನ್ನೊಬ್ಬ ಗೆಳೆಯ ಹರೀಶ್ ಎಂ.ಜಿ ಗೆ ಹೇಗೆ ಕೇಳಿಸಿತೋ ತಿಳಿಯದು.
‘ಗಾಂಧಿ ಬಂದ’ : ಬ್ರಾಹ್ಮಣ’ನನ್ನು ಅಪಮಾನಿಸದೇ ಓರ್ವ ಸೃಜನಶೀಲ ಲೇಖಕನಾಗುವುದಾದರೂ ಹೇಗೆ ಸಾಧ್ಯ?
-ಡಾ| ಜಿ. ಭಾಸ್ಕರ ಮಯ್ಯ
ಇಂದಿನ ಕನ್ನಡದ ಸಾಹಿತ್ಯವಿಮರ್ಶೆ ಒಂದು ವಿಚಿತ್ರ ಪೂರ್ವಗ್ರಹದಿಂದ ಪೀಡಿತವಾಗಿದೆ. ಹಸಿವಿನಿಂದ ಸಾಯುತ್ತಿರುವ ಲಕ್ಷಾಂತರ ಗತಿಹೀನ ಜನರ ಬವಣೆಯ ಬಗೆಗಾಗಲಿ, ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ಕಠೋರ ನೀತಿಗಳಿಂದಾಗಿ ಈ ಭಾರತವು ಇಥಿಯೋಪಿಯಾ, ಸೂಡಾನಿನಂತೆ ನಾಶವಾಗುತ್ತಿರುವ ಬಗೆಗಾಗಲಿ ಯಾವುದೇ ಸಂಕಟ ಅಥವಾ ನೋವು ನಮ್ಮ ಇಂದಿನ ಸೃಜನಶೀಲ ಲೇಖಕರಿಗಾಗಲೀ ವಿಮರ್ಶಕರಿಗಾಗಲೀ ಕಾಣಿಸುವುದಿಲ್ಲ. ಹಾಡಿದ್ದನ್ನೇ ಹಾಡುವ ಕಿಸುಬಾಯಿ ದಾಸನ ಹಾಗೆ ಇವರಿಗೆ ಕಾಣಿಸುತ್ತಿರುವುದು – ಮನುವಾದಿ, ಪುರೋಹಿತಶಾಹಿ, ಬ್ರಾಹ್ಮಣವಾದಿ, ಕೋಮುವಾದಿ ಲೇಖಕರು ಹಾಗೂ ಅವರ ‘ಕೊಲೆಗಡುಕ’ ಕಾವ್ಯ! ಕೋಮುವಾದೀ ರಾಜಕಾರಣಕ್ಕೆ ಹೆಚ್ಚೆಂದರೆ 150 ವರ್ಷಗಳ ಇತಿಹಾಸವಿದ್ದರೆ, ಎಲ್ಲಾ ಮತಗಳಲ್ಲೂ ಇರುವ ಪುರೋಹಿತಶಾಹಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇನ್ನು ಮಾರ್ಕ್ಸ್ ಅವರಿಂದ ಮಾರ್ಕ್ಸ್ ವಾದ ಹೊರಹೊಮ್ಮಿ ಬೆಳೆದುಬಂದ ಹಾಗೆ ‘ಮನು’ವಿನಿಂದ ಮನುವಾದವು ಬೆಳೆದು ಬಂದಿದೆಯೆ? ಶ್ರೇಣೀಕೃತ ಜಾತಿವ್ಯವಸ್ಥೆ ಮನುವಿನ ಸೃಷ್ಟಿಯೇ? ಇದಕ್ಕೆ ಸಂಬಂಧಿಸಿದ ‘ಸಮಾಜಶಾಸ್ತ್ರ’ ಇದನ್ನು ಸಮರ್ಥಿಸುತ್ತದೆಯೇ?
ಇದೇ ರೀತಿ ಬ್ರಾಹ್ಮಣಶಾಹಿ ಎಂಬ ಪದವನ್ನು ಸಾಮಂತಶಾಹಿ, ಬಂಡವಾಳಶಾಹಿ ಎಂಬ ಪದಗಳ ಹಾಗೆ ಹೇಗೆ ವಿವರಿಸುವುದು? ಆದರೆ, ಮನುವಾದಿ, ಪುರೋಹಿತಶಾಹಿ, ಬ್ರಾಹ್ಮಣವಾದಿ, ಕೋಮುವಾದಿ ಇತ್ಯಾದಿ ವಿಶೇಷಣಗಳನ್ನು ಯಾವ ಅರ್ಥಪರಿಭೇದವಿಲ್ಲದೇ ಲೀಲಾಜಾಲವಾಗಿ ಬಳಸುತ್ತಾ ಅಂದಿನಿಂದ ಇಂದಿನವರೆಗೆ ಆಗಿ ಹೋದ ಲೇಖಕರುಗಳಲ್ಲಿ ಯಾರು ‘ಬ್ರಾಹ್ಮಣ’ ಜಾತಿಯಲ್ಲಿ ಹುಟ್ಟಿದ್ದಾರೆಂದು ಶೋಧಿಸಿ ಅವರನ್ನು ಕಟೆಕಟೆಯಲ್ಲಿ ನಿಲ್ಲಿಸಿ ಕಲ್ಲು ಹೊಡೆಯುವುದು ಆಧುನಿಕ ಕನ್ನಡ ವಿಮರ್ಶೆಯ ಒಂದು ಅತಿ ಪ್ರಮುಖ ಲಕ್ಷಣ. ಮತ್ತಷ್ಟು ಓದು 
ಎಲ್ಲಿ ಎಲ್ಲಿ ರಾಗಮಾಲೆ ಇರುವನಲ್ಲಿ ಕೇಶವ ಎಲ್ಲಿ ಎಲ್ಲಿ ರಾಸಲೀಲೆ ಅಲ್ಲಿ ಒಲವಿನುತ್ಸವ
(ಆತ್ಮೀಯ ಓದುಗರೆ, ನಮಸ್ಕಾರ.ಸಾಹಿತ್ಯಾಸಕ್ತರಾದ ನಿಮ್ಮೆದುರಲ್ಲಿ ಪ್ರಚಲಿತವಿದ್ಯಮಾನಗಳಿಗೂ ಸ್ಪಂದಿಸುತ್ತಾ ನಾನು ಬಡಿಸುವುದು ’ಅಭಿಗಾರ’ –ಅದು ಪ್ರತೀ ಗುರುವಾರ. ಅಭಿಗಾರ ಎಂದರೆ ಹೆಚ್ಚಿನದಾಗಿ ತುಪ್ಪ ಅಥವಾ ತುಪ್ಪಹಾಕಿದ ಪಾಯಸದ ಗುಟುಕು. ಬಾಳೆಲೆಯ ಬಲಕೆಳಕೊನೆಯಲ್ಲಿ ಬಡಿಸುವ ಅಭಿಗಾರ ಊಟದ ಆರಂಭಕ್ಕೆ ಅನುಕೂಲಕಲ್ಪಿಸುವಂಥದ್ದು. ಗಾರುಬಿದ್ದ ಅನ್ನನಾಳದಲ್ಲಿ ಆಹಾರ ಸರಾಗವಾಗಿ ಇಳಿಯುವದಕ್ಕಾಗಿಯೂ, ಹೊಟ್ಟೆಯೊಳಗಿನ ವಾಯು ಶಮನಕ್ಕಾಗಿಯೂ, ಮೊದಲು ಧಾವಿಸಿ ಜಠರದಲ್ಲಿ ಆಹಾರ ಸ್ವೀಕರಿಸಲು ಬೇಕಾದ ಪೂರ್ವತಯಾರಿ ಮಾಡುವುದೇ ಈ ಅಭಿಗಾರ! ಈ ವಾರ ಮಾತ್ರ ದಿನಮೊದಲಾಗಿ ಅಂದರೆ ಇವತ್ತೇ ನನ್ನ ಆರಂಭಿಕ ಲೇಖನ ಪ್ರಕಟಮಾಡುತ್ತಿದ್ದೇನೆ-ಹೋಳೀ ಹಬ್ಬದ ನಿಮಿತ್ತ. ತಮ್ಮೆಲ್ಲರಿಗೂ ಸ್ವಾಗತವನ್ನು ಬಯಸಿ ವಂದನೆಗಳನ್ನೂ ಸಲ್ಲಿಸಿ ಅಭಿಗಾರಬಡಿಸುತ್ತಿದ್ದೇನೆ, ನಮಸ್ಕಾರಗಳು)
ಹೋಲಿಕಾ-ಕಾಮದಹನ ಎಂದು ಕರೆಯಲ್ಪಡುವ ಹೋಳಿಹಬ್ಬ ನಾಳೆ ಭಾರತಪೂರ್ತಿ ಆಚರಿಸಲ್ಪಡುತ್ತದೆ. ಹಾಗೆ ನೋಡಿದರೆ ಅಂತಹ ವಿಶೇಷ ಪೂಜೆ-ಪುನಸ್ಕಾರಗಳಿಲ್ಲದ ಈ ಹಬ್ಬದ ಮಹತ್ವ ಎಂಥದ್ದು ಎಂಬುದನ್ನು ತಿಳಿಯದೇ ಆಚರಿಸುವವರೂ ಇದ್ದಾರೆ! ಹೋಳಿ ಎಂದರೆ ಬರೇ ರಂಗಿನಾಟವೇ? ಹಾಗಾದರೆ ಅದು ಯಾತಕ್ಕೆ?ಸಂಸ್ಕೃತದ ಪರ್ವ ಎಂಬುದು ಕನ್ನಡದಲ್ಲಿ ಹಬ್ಬ ಎಂದಾಗಿದೆ. ನಮ್ಮ ಪ್ರತಿಯೊಂದೂ ಹಬ್ಬದ ಹಿಂದೆ ಮನೋವೈಜ್ಞಾನಿಕ, ವೈಜ್ಞಾನಿಕ ಕಾರಣಗಳಿವೆ ಎಂಬುದನ್ನು ಅದೆಷ್ಟೋ ಸಂಶೋಧನೆಗಳು ಅದಾಗಲೇ ತಿಳಿಸಿವೆ. ಚಳಿಗಾಲ ಕಳಿದು ಬೇಸಿಗೆ ಕಾಲಿಡುವದರೊಳಗಿನ ಸೇತುವೆಯಂತೇ ಇರುವ ಈ ಕಾಲಘಟ್ಟವನ್ನು ಆಂಗ್ಲರು ’ಸ್ಪ್ರಿಂಗ್ ಸೀಸನ್’ ಎನುತ್ತಾರೆ.
ಬಿಜೆಪಿಯ ಕಮಾಂಡಿಂಗ್ ಲೀಡರ್ಗೊಂದು ಪತ್ರ
-ಅರವಿಂದ್
ನಿಮ್ಮ ಹುಟ್ಟು ಹಬ್ಬಕ್ಕೆ ಕರ್ನಾಟಕದ ಜನತೆಯ ಪರವಾಗಿ ಹಾರ್ದಿಕ ಶುಭಾಶಯಗಳು. ಜೀವನದ ಸಂಜೆಯಲ್ಲಿ ೭೦ ವರ್ಷಗಳನ್ನು ದಾಟಿಹೊರಟಿರುವಿರಿ. ನಿಮ್ಮ ಅನುಭವ ನಿಜಕ್ಕೂ ಅವಿಸ್ಮರಣೀಯವಾದದ್ದೇ. ಮುಖ್ಯಮಂತ್ರಿಯಾಗಿದ್ದಾಗಲೂ ನೀವು ಇಷ್ಟು ವಿಜೃಂಭಣೆಯಿಂದ ಆಚರಿಸಿಕೊಳ್ಳದ ಹುಟ್ಟುಹಬ್ಬ, ಅಧಿಕಾರ ಕಳೆದುಕೊಂಡ ನಂತರ ಆಚರಿಸಿಕೊಂಡದ್ದು ನಿಮ್ಮ ವ್ಯೆರಿಗಳಿಗೆ ಒಂದು ಕಡೆ ನೋವಾದರೆ, ಮತ್ತೊಂದಿಷ್ಟು ಸಂತೋಷ ಸಾರ್. ನೋವು ಯಾಕೆಂದರೆ ನೀವು ೭೦ವರ್ಷವಾದರೂ ಇನ್ನು ಅಧಿಕಾರದ ಆಸೆ ಹೋಗದೇ ಇರೋದು. ಸಂತೋಷ ಏಕೆಂದರೆ ನೀವು ನಿಮ್ಮ ಪ್ರತಿ ಕೆಲಸಗಳಲ್ಲೂ ಅಪವಾದಕ್ಕೀಡಾಗೋದು.
ಒಮ್ಮೆ ಮನಬಿಚ್ಚಿ ಮಾತಾಡಿ ಸಾರ್, ನನ್ನ ಕೆಳಗಿನ ಕೆಲವು ಪ್ರಶ್ನೆಗಳಿಗೆ ಉತ್ತರಿಸೋಕೆ ಸಾಧ್ಯವಾದ್ರೆ ಉತ್ತರಿಸಿ. ಆಗದಿದ್ರೆ ಬಿಡಿ, ನಾವು ನಿಮ್ಮನ್ನು ಒಪ್ಪಿಕೊಂಡಿರುವ ತಪ್ಪಿಗೆ ಈ ಪ್ರಶ್ನೆಗಳ ಪ್ರಶ್ನೆಯೊಳಗೇ ಅಪ್ಪಿಕೊಂಡಿರ್ತೀವಿ.






