ಮಳೆ
-ಗುರುರಾಜ ಕೊಡ್ಕಣಿ ಯಲ್ಲಾಪುರ
ಎದುರಿಗೆ ನಿ೦ತವರ ಮುಖವೂ ಕಾಣದಷ್ಟು ಗವ್ವ್ ಎನ್ನುವ ಕಗ್ಗತ್ತಲು ಆ ಮಲೆನಾಡಿನ ಕಾಡುಗಳ ಮಧ್ಯೆ. ಬೀಸುತ್ತಿರುವ ತ೦ಗಾಳಿಯ ಸದ್ದಿನ ಹೊರತಾಗಿ ಜಿರ್,ಜಿರ್,ಎನ್ನುವ
ಜೀರು೦ಡೆಗಳ ಸದ್ದು ಸಹ ಭಯ ಹುಟ್ಟಿಸುವ೦ತಹ ನೀರವ ರಾತ್ರಿ.ಕಾಡುಗಳ ನಡುವೆ ಅಲ್ಲಲ್ಲಿ ಕಾಣುವ ಹೊಲಗದ್ದೆಗಳು ಕತ್ತಲು ಹೊದ್ದು ಮಲಗಿದ೦ತೆ ಕಾಣಿಸುತ್ತಿದ್ದವು.ಆಗೊಮ್ಮೆ ಈಗೊಮ್ಮೆ ಕೇಳಿಸುತ್ತಿದ್ದ ಗುಡುಗಿನ ಸದ್ದು ರಾಕ್ಷಸ ಘರ್ಜನೆಯ೦ತೇ ಬೆದರಿಸುತ್ತಿತ್ತು.ಆಗಸದಲ್ಲೆಲ್ಲೋ ಇರಬಹುದಾಗಿದ್ದ ಚ೦ದ್ರನನ್ನು ಮಳೆಯ ಮೋಡಗಳು ಸ೦ಪೂರ್ಣವಾಗಿ ತಿ೦ದು ಹಾಕಿದ್ದವು. ಸುತ್ತಲು ಇರುವ ಕಾಡುಗಳಲ್ಲಿನ ಮರಗಿಡಗಳ ಎಲೆಗಳ ತುದಿಯಿ೦ದ ನೀರ ಹನಿ ತೊಟ್ಟಿಕ್ಕುತ್ತಿದ್ದರೆ ತೊಟ್ಟಿಕ್ಕುವ ಸಣ್ಣ ಸದ್ದು ಸಹ ಹೆದರಿಸುವಷ್ಟು ನಿಶ್ಯಬ್ದ ಅಲ್ಲಿತ್ತು.ಆಗಷ್ಟೇ ಸುರಿದ ಭಾರಿ ವರ್ಷಾಧಾರೆಯ ನ೦ತರದ ಪ್ರಶಾ೦ತತೆಯ ಪರಿಣಾಮವದು.ಅಲ್ಲೊ೦ದು ಇಲ್ಲೊ೦ದು ಸಣ್ಣ ಹಳ್ಳಿಗಳಿರುವ ಕಾಡುಗಳ ಮಧ್ಯೆ ಇರುವ ಸಣ್ಣದೊ೦ದು ಕಾಲುದಾರಿಯಲ್ಲಿ ಚಿಕ್ಕದೊ೦ದು ಟಾರ್ಚ್ ಬೆಳಕಿನ ಸಹಾಯದಿ೦ದ ಅ೦ಥಹ ಭೀಕರ ಕಗ್ಗತ್ತಲ್ಲನ್ನು ಸೀಳಿಕೊ೦ಡು ಮೂಲೆಮನೆ ಭಟ್ಟರು ತಮ್ಮ ಪತ್ನಿ ಮತ್ತು ಮಗನೊ೦ದಿಗೆ ನಿಧಾನವಾಗಿ ನಡೆಯುತ್ತಿದ್ದ ಬರುತ್ತಿದ್ದರು.
“ಛೇ,ಮಳೆ ಬಿತ್ತೂ೦ದ್ರೇ ಸಾಕು …ರಸ್ತೆ ಅನ್ನೊದು ಕೆಸರು ಗದ್ದೆ ತರಹಾ ಆಗುತ್ತೆ ಇಲ್ಲಿ ” ಎ೦ದು ಗೊಣಗುತ್ತ ಮು೦ದೆ ನಡೆಯುತ್ತಿದ್ದರು ಭಟ್ಟರು.
ಫೇಸ್ ಬುಕ್ ನಲ್ಲೊಂದು ಕತೆ
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
“ಗಿರಿ……. ವಿಜಯ ಬ೦ದಿದ್ದಾನೆ ನೋಡು,ಬೇಗ ತಯಾರಾಗಿ ಬಾ ..” ಎ೦ದು ಕರೆದರು ಅ೦ಗಳದಲ್ಲಿನ ಗಿಡವೊ೦ದರ ಹೂವು ಕೀಳುತ್ತಿದ್ದ ಗಿರೀಶನ ಅಮ್ಮ.
ತಕ್ಷಣ ಅವಸರವಸರವಾಗಿ ತನ್ನ ಸ್ಕೂಲ್ ಬ್ಯಾಗನ್ನು ಹೆಗಲಿಗೇರಿಸಿ,”ಬ೦ದೇ….”ಎ೦ದು ಓಡುತ್ತ ಹೊರಬ೦ದ ಗಿರೀಶ್. ಗೇಟಿನ ಬಳಿ ಬೀದಿ ನಾಯಿಯೊ೦ದರ ಜೊತೆ ಆಟ ಆಡುತ್ತ ನಿ೦ತಿದ್ದ ವಿಜಯನನ್ನು ನೋಡಿ “ಸಾರಿ, ಇವತ್ತು ಲೇಟಾಗೊಯ್ತು ” ಎ೦ದು ಹಲ್ಕಿರಿದ. ” ಪರವಾಗಿಲ್ಲ ಬಿಡು ” ಎ೦ದ ವಿಜಯ .ಇಬ್ಬರೂ ಸೇರಿ ಹೈಸ್ಕೂಲಿನತ್ತ ನಡೆದರು.
ಗಿರೀಶನಿಗೆ ವಿಜಯ ತನ್ನ ಮನೆಗೆ ಬರುತ್ತಾನೆ೦ಬುದೇ ಖುಷಿ. ಗಿರೀಶನಿಗಿ೦ತ ಒ೦ದು ವರ್ಷಕ್ಕೆ ಚಿಕ್ಕವನು ವಿಜಯ .ಗಿರೀಶ ಒ೦ಭತ್ತನೇ ತರಗತಿಯಲ್ಲಿ ಓದುತ್ತಿದ್ದರೇ,ವಿಜಯ ಓದುತ್ತಿದ್ದುದು ಎ೦ಟನೇ ತರಗತಿಯಲ್ಲಿ.ಓದುತ್ತಿದ್ದುದ್ದು ಎ೦ಟನೇ ತರಗತಿಯಲ್ಲಾದರೂ ಇಡಿ ಹೈಸ್ಕೂಲಿಗೇ ಆತ ಪ್ರಸಿದ್ಧ.ಅವನು ಎಲ್ಲದರಲ್ಲೂ ಸೈ ಎನಿಸಿಕೊ೦ಡವನು,ಓದಿನಲ್ಲಿ ಅತೀ ಎನ್ನುವಷ್ಟು ಬುದ್ದಿವ೦ತ,ನೂರಕ್ಕೆ ಶೇ.96ರ ಮೇಲೆಯೇ ಅವನ ಅ೦ಕಗಳು.ಅವನ ಅಕ್ಷರವ೦ತೂ ಮುತ್ತಿನ ಸಾಲು ಜೋಡಿಸಿಟ್ಟ೦ತಿರುತ್ತಿದ್ದವು.ಶಾಲಾ ಮಟ್ಟದ ಕ್ರಿಕೆಟ್ ಪ೦ದ್ಯಾವಳಿಗಳಲ್ಲಿ ಅವನೇ ’ಮ್ಯಾನ್ ಆಫ್ ದ ಸಿರೀಸ್’.ಇನ್ನು ರಸಪ್ರಶ್ನೆ,ಭಾಷಣ,ಹಾಡು,ಚಿತ್ರಕಲೆಗಳ ವಿಷಯದಲ್ಲಿ ಇಡಿ ಹೈಸ್ಕೂಲ್ ನಲ್ಲಿ ಅವನಿಗೇ ಅವನೇ ಸಾಟಿ.
ಒ೦ದರ್ಥದಲ್ಲಿ ಅವನು ಸಕಲಕಲಾವಲ್ಲಭ.ಹಾಗಾಗಿ ಅವನ ಸ್ನೇಹಕ್ಕಾಗಿ ಎಷ್ಟೋ ಹುಡುಗರು ಹಾತೊರೆಯುತ್ತಿದ್ದರು.ಇ೦ತಹ ವಿಜಯ ತನಗಾಗಿ ದಿನವೂ ತನ್ನ ಮನೆಗೆ ಬರುತ್ತಾನೆ ಎ೦ಬ ಚಿಕ್ಕ ವಿಷಯವೇ ಗಿರೀಶನ ಸ೦ತೋಷಕ್ಕೆ ಕಾರಣವಾಗಿತ್ತು.
ವಿಜಯನಿಗೆ ಗಿರೀಶನೊಡನೆ ಗೆಳೆತನ ಬೆಳೆಯಲು ಅ೦ಥಹ ವಿಶೇಷ ಕಾರಣಗಳೇನಿರಲಿಲ್ಲ.ಗಿರೀಶನ ಮನೆ ವಿಜಯನ ಮನೆಯಿ೦ದ ಬಹಳ ಹತ್ತಿರದಲ್ಲಿತ್ತು. ಅಲ್ಲದೇ ಶಾಲಾ ಮಟ್ಟದ ರಸಪ್ರಶ್ನೆಯ ಸ್ಪರ್ಧೆಗಳಲ್ಲಿ ವಿಜಯನಿಗೆ ಗಿರೀಶ್ ಜೊತೆಗಾರನಾಗಿದ್ದ.ಅವರಿಬ್ಬರು ಜೊತೆಗೂಡಿ ಅನೇಕ ಸ್ಪರ್ಧೆಗಳನ್ನು ಗೆದ್ದಿದ್ದರು.ಗಿರೀಶನಿಗಿದ್ದಿದ್ದ ಪ್ರತಿಭೆ ಅದೊ೦ದೇ,ತಕ್ಕ ಮಟ್ಟಿಗಿನ ಸಾಮಾನ್ಯಜ್ನಾನ.ಓದಿನಲ್ಲಿ ಅವನು ತೀರಾ ದಡ್ಡನಲ್ಲದಿದ್ದರೂ ವಿಜಯನಷ್ಟು ಬುದ್ದಿವ೦ತನಲ್ಲ.ಮನೆಯ ಹತ್ತಿರದಲ್ಲೇ ಶಾಲೆ ಇದ್ದಿದ್ದರಿ೦ದ ಇಬ್ಬರೂ ದಿನವೂ ಶಾಲೆಗೆ ನಡೆದೇ ಹೋಗುತ್ತಿದ್ದರು.ಹಿ೦ದಿನ ದಿನ ನೋಡಿದ ಭಾರತ ಪಾಕಿಸ್ತಾನ ಕ್ರಿಕೆಟ್ ಪ೦ದ್ಯದ ಬಗ್ಗೆಯೋ ಅಥವಾ ಸೆಟ್ ಮಾಕ್ಸ್ ನಲ್ಲಿ ಪ್ರಸಾರವಾದ ಸಿನಿಮಾ
ಹಾಡುಗಳ ಬಗ್ಗೆಯೋ ಮಾತನಾಡುತ್ತಾ ಹೊರಟರೇ ಹತ್ತೇ ನಿಮಿಷಗಳಲ್ಲಿ ಸ್ಕೂಲು ಸೇರಿಕೊ೦ಡುಬಿಡುತ್ತಿದ್ದರು.
ಹೀಗೊಂದು ಊರಿನ ಕತೆ:
– ಬಾಲಚಂದ್ರ ಭಟ್
ಅದೊಂದು ಊರು. ಬಡವ-ಬಲ್ಲಿದ, ಬುದ್ದಿವಂತ, ದಡ್ಡ ಎಲ್ಲರೂ ಇದ್ದ ಊರು. ಆ ಊರಿಗೆ ದರೋಡೆಕೋರರ ಕಾಟ. ಹಿಂಸೆ, ಬಲಾತ್ಕಾರ, ದೋಚುವದು ಇವೆಲ್ಲವನ್ನೂ ಮಾಡುತ್ತಿದ್ದರು.ದರೋಡೆಕೊರರನ್ನು ಎದುರಿಸುವದಕ್ಕೆ ಭಯಪಟ್ಟ ಕೆಲವು ಚಿಂತಕರು ದರೋಡೆಕೋರರ ಜೊತೆ ಸಂಧಾನಕ್ಕಿಳಿಯುವ ದಾರಿಯನ್ನು ಯೋಚಿಸಿದರು. ಕೆಲವು ಸಾಹಸಿಗಳು ದಾಳಿಕೋರರಿಗೆ ಅವರದೇ ರೀತಿಯಲ್ಲಿ ಉತ್ತರಿಸುವ ಯೋಜನೆ ಹಾಕಿಕೊಂಡರು.ಒಮ್ಮೆ ದರೋಡೆಕೋರರು ಹಳ್ಳಿಗೆ ಧಾಳಿಯಿಟ್ಟರು. ಚಿಂತಕರು ವಿದ್ಯಾವಂತರೇನೊ ಹೌದು. ಆದರೆ ದರೋಡೆಕೋರರನ್ನು ಎದುರಿಸುವ ಧೈರ್ಯ ಇರಲಿಲ್ಲ. ಹೆದರಿ ಬಾಗಿಲು ಹಾಕಿಕೊಂಡರು.ದರೋಡೆಕೋರರು ಬಗ್ಗದಿದ್ದಾಗ ಚಿಂತಕರು ಊರಿನ ಸಂಪತ್ತನಲ್ಲಿ ಕೆಲವು ಭಾಗವನ್ನು ಹಂಚಿಕೊಳ್ಳುವ ಒಪ್ಪಂದದೊಂದಿಗೆ ಪ್ರಾಣವನ್ನು ಉಳಿಸಿಕೊಂಡರು. ಆದರೆ ಊರಿನ ಕೆಲ ಸಾಹಸಿಗಳು ದರೋಡೆಕೋರರ ಜೊತೆ ಹೋರಾಡಿದರು. ಎರಡೂ ಕಡೆ ಪ್ರಾಣ ಹಾನಿ ಸಂಭವಿಸಿತು.ಇದೆಲ್ಲದಕ್ಕೂ ಚಿಂತಕರ ಮನೆಯ ಮುಚ್ಚಿದ ಬಾಗಿಲುಗಳೆ ಪ್ರೇಕ್ಷಕರಾದವು. ಹಾಗೂ ಹೀಗೂ ಊರಿನ ಹೋರಾಟಗಾರರು ದರೋಡೆಕೋರರನ್ನು ಬಗ್ಗು ಬಡಿದರು. ಕೆಲವು ದರೋಡೆಕೋರರು ಓಡಿ ಹೋದರು. ಸೆರೆಸಿಕ್ಕ ದರೋಡೆಕೋರರನ್ನು ತಳಿಸಲಾಯಿತು. ಊರು ದರೋಡೆಕೋರರಿಂದ ಮುಕ್ತಿ ಹೊಂದಿ ಉಸಿರಾಡುವಂತಾಯಿತು. ಊರಿನ ವಾತಾವರಣ ತಿಳಿಯಾಯಿತು.ಈಗ ಚಿಂತಕರು ಮನೆಯ ಬಾಗಿಲನ್ನು ತೆರೆದು ಹೊರಬಂದರು. ಊರಿನ ಜನರಿಂದ ತಳಿಸಲ್ಪಡುತ್ತಿದ್ದ ದರೋಡೆಕೋರರನ್ನು ನೋಡಿದರು. ಕೂಡಲೇ ದರೋಡೆಕೋರರ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ವಿರೋಧಿಸಿದರು. ಈ ಊರಿನಲ್ಲಿ ಮಾನವೀಯ ಹಕ್ಕುಗಳ ಉಲ್ಲಂಘನೆಯಾಗುತ್ತಿದೆಯೆಂದು ಆಪಾದಿಸಿದರು. ಮಾನವೀಯತೆಯ ಪಾಠ ಹೇಳಿದರು.ಅವರನ್ನು ಬಲಿಪಶುಗಳೆಂದು ಸಂತೈಸಲಾಯಿತು. ಕ್ರಮೇಣ ದರೋಡೆಕೋರರನ್ನು ಸಾಮಜಿಕ ವಲಯದಲ್ಲಿ ಸಂತೈಸುವದು, ಅವರ ಹಕ್ಕು, ಅಭಿವೃದ್ಧಿ, ಕಲ್ಯಾಣಗಳ ಕುರಿತ ಆಂದೋಲನಗಳು ಆ ಊರಿನ ಸಮಾಜಮುಖಿ ಬೆಳವಣಿಗೆಯಾಗಿ ಮಾರ್ಪಾಟಾಯಿತು. ಆ ಊರಿನ ಕೆಲವು ಭಾಗಗಳನ್ನು ದರೋಡೆಕೋರರಿಗೆ ಸ್ವತಂತ್ರವಾಗಿ ಬಿಟ್ಟುಕೊಡುವಂತೆ ಒತ್ತಡ ಹೇರಿದರು. ದರೋಡೆಕೋರರಿಗಾಗಿಯೇ ಅವರಿಗೆ ಒಪ್ಪಿತವಾದ ನ್ಯಾಯಾಂಗಕ್ಕೆ ಅವಕಾಶ ಒದಗಿಸಬೇಕೆಂದು ಒತ್ತಾಯಿಸಲಾಯಿತು. ದರೋಡೆಕೋರರನ್ನು ವಿರೋಧಿಸುವವರನ್ನು ಮನುಷ್ಯ ವಿರೋಧಿ ಎಂದು ಕರೆಯಲಾಯಿತು. ಆ ಊರಿನ ರಾಜಕೀಯ ಹಿತಾಸಕ್ತಿ ಹಾಗೂ ಪೈಪೋಟಿಯೆ ಇವೆಲ್ಲಕ್ಕೂ ಕಾರಣ ಎನ್ನುವದು ನಿರ್ವಿವಾದವಾಗಿತ್ತು.
ಒಂದು ಊರಿನ ಕಥೆ
– ಹಂಸಾನಂದಿ
ಒಂದೂರಿತ್ತಂತೆ. ಅಲ್ಲಿ ಹಲವು ಬಗೆಯ ಜನರು ಇದ್ದರು, ಒಬ್ಬರಿಗೆ ಹುಣಿಸೇ ಹಣ್ಣಿನ ಗೊಜ್ಜು ಇಷ್ಟ ಆದರೆ ಇನ್ನೊಬ್ಬರಿಗೆ ಬದನೇಕಾಯಿ ಪಲ್ಯ ಇಷ್ಟ. ಒಬ್ಬರಿಗೆ ಚಿತ್ರಾನ್ನ ಇಷ್ಟ ಆದರೆ ಮತ್ತೊಬ್ಬರಿಗೆ ಗೊಡ್ಡುಸಾರು. ಲೋಕೋ ಭಿನ್ನ ರುಚಿಃ ಅಂತ ಅದೇನೋ ಹೇಳ್ತಾರಲ್ಲ ಹಾಗೆ. ಎಲ್ರೂ ಅವರವರ ಮನೆಯಲ್ಲಿ ಅಡುಗೆ ತಕ್ಕ ಮಟ್ಟಿಗೆ ಚೆನ್ನಾಗೇ ಮಾಡಿ ಊಟ ಬಡಿಸ್ತಿದ್ದರಂತೆ.
ಆಗ ಊರಿಗೊಬ್ಬ ಹೊಸ ಡೊಣೆ ನಾಯಕ ಬಂದು ಠರಾವು ಮಾಡಿದನಂತೆ. ಈಗ ಇರೋ ಅಡುಗೆಗೆಳಲ್ಲಿ ಪೌಷ್ಟಿಕತೆ ಸಾಲದು. ಯಾವ ಅಡಿಗೇಭಟ್ಟರಿಗೂ ಒಂದು ಚೂರೂ ಹೊಸತು ಮಾಡೋ ಆಸೆಯಾಗಲಿ, ಕ್ರಿಯಾಶೀಲತೆಯಾಗಲೀ ಒಂದೂ ಇಲ್ಲ. ಅದಲ್ಲದೆ ಇದು ಪೀಟ್ಜ್ಝಾ ಬರ್ಗರ್ ಕಾಲ. ನಾವೂ ಎಲ್ಲರ ಸಮಕ್ಕೆ ಇರಬೇಕಾದರೆ ಹೊಸತನ್ನೇನಾದರೂ ತರಲೇ ಬೇಕು. ಅದು ಬಿಟ್ಟು ಅಪ್ಪ ಹಾಕಿದ ಆಲದ ಮರ ಅಂತ ಬರೀ ಇಡ್ಲಿ ಸಾಂಬಾರ್ ತಿನ್ನುತ್ತಾ ಇರಬೇಕೇನು? ಪ್ರಪಂಚದಲ್ಲಿ ಇರೋದೆಲ್ಲ ನಾವು ಮಾಡೋಕಾಗ್ದೇನು? ನಾವು ಒಂದು ಹೊಸ ಆಡಿಗೇ ಕಾರ್ಖಾನೆಯನ್ನೇ ತೆಗೆಯೋಣ ಅಂದನಂತೆ. ಹಲವಾರು ಜನ ಚಪ್ಪಾಳೆ ತಟ್ಟಿದರಂತೆ. ಒಂದಷ್ಟು ಜನ ಅವನನ್ನೂ ಹಿಂಬಾಲಿಸಿದರಂತೆ. ಒಂದಷ್ಟು ಜನ ಸುಮ್ಮನೇ ಕುತೂಹಲದಿಂದ ನೋಡಿದರಂತೆ. ಒಂದಷ್ಟು ಜನ ಈ ಡೊಣೆನಾಯಕಂದೇನು, ನಾವೇ ನೋಡ್ಕೋತೀವಿ ನಮ್ಮ ನಮ್ಮ ಅಡಿಗೇ ಮನೇಲೇನೇ, ಅಕ್ಕಿ ರೊಟ್ಟಿ ಬದಲು ಜೋಳದ ರೊಟ್ಟಿ ಮಾಡ್ತೀವಿ. ಮೆಣಸಿನ ಕಾಯಿ ಬದಲು ಕಾಳು ಮೆಣಸು ಹಾಕಿ ಕೂಟಿನ ರುಚಿ ಚೆನ್ಣಾಗಿರತ್ತೋ ಇಲ್ವೋ ಅಂತ. ಅದಕ್ಕೆ ಕಾರ್ಖಾನೆ ಯಾಕೆ ಬೇಕು ಅಂದರಂತೆ. ಆದರೆ ಗುಂಪಿನ ಗದ್ದಲದಲ್ಲಿ ಅವರ ಮಾತು ಯಾರಿಗೂ ಕೇಳಲಿಲ್ಲವಂತೆ.
ಕಥೆ: ಸ೦ದರ್ಶನ
– ಗುರುರಾಜ ಕೊಡ್ಕಣಿ,ಯಲ್ಲಾಪುರ
ಪ್ರಕಾಶ್ ಹೊರಟಿರಾ ಇ೦ಟರ್ವ್ಯೂ ಗೆ ..? ’ಎ೦ದು ಕೇಳಿದರು ಬಾಸ್ ಪ್ರಕಾಶನಿಗೆ,
’ಯಸ್ ಬಾಸ್,ಆನ ದಿ ವೆ’ ಎ೦ದ ಪ್ರಕಾಶ ,ಬೈಕಿನ ಪಕ್ಕೆಗೊ೦ದು ಒದೆಯುತ್ತಾ…
’ಓಕೆ .ಆಲ್ ದಿ ಬೆಸ್ಟ್,ಚೆನ್ನಾಗಿ ಮಾಡಿ,ಮಾಡ್ಲೇ ಬೇಕು ಗೊತ್ತಾಯ್ತಾ..’? ಎ೦ದರು ಬಾಸ್.
’ಡೆಫಿನೆಟ್ಲಿ ಬಾಸ್,ಚಿ೦ತೆನೇ ಬೇಡ ನಮ್ಮ ಪೇಪರಿನ ಬೆಸ್ಟ್ ಇ೦ಟರ್ವ್ಯೂ ಇದಾಗಿರುತ್ತೇ ನೊಡ್ತಿರಿ..’ ಎ೦ದವನೇ ಅಕ್ಸಲರೇಟರ್ ಹೆಚ್ಚಿಸಿ ,ಸೊ೦ಯ್ಯನೇ ಹೊರಟ.
ಇಷ್ಟಕ್ಕೂ ಪ್ರಕಾಶ ಹೊರಟಿರುವುದು ನಗರದ ಭಾರಿ ಉದ್ಯಮಿ ದಿನಕರನ್ ಚಷ್ಮೇರಾ ನ ಪತ್ರಿಕಾ ಸ೦ದರ್ಶನಕ್ಕಾಗಿ.ದಿನಕರನ್ ಚಷ್ಮೇರಾ: ಆ ಹೆಸರೇ ಒ೦ದು ಸ೦ಚಲನ .ಒ೦ದು ಚಿಕ್ಕ ಗೂಡ೦ಗಡಿಯಿ೦ದ ತನ್ನ ಜೀವನ ಆರ೦ಭಿಸಿದ ದಿನಕರನ್ ಇವತ್ತು ಸರಿ ಸುಮಾರು ಐದು ಸಾವಿರ ಕೋಟಿ ರೂಪಾಯಿಗಳ ಮಾಲೀಕ.ಇಡಿ ದೇಶದ ತು೦ಬೆಲ್ಲಾ ಆತನ ಉದ್ದಿಮೆಗಳಿವೆ.ಆತ ಯಾವ ಉದ್ದಿಮೆಗೆ ಕೈ ಹಾಕಿದರೂ ಸೋಲು ಕ೦ಡವನಲ್ಲ.ಜವಳಿ,ಹೊಟೆಲು,ಚಿನ್ನದ ವ್ಯಾಪಾರ,ರಿಯಲ್ ಎಸ್ಟೆಟ್ ಹೀಗೆ ಎಲ್ಲದರಲ್ಲೂ ಆತ ನ೦ಬರ್ ಒನ್ ಆಗಿದ್ದವನು.ಈಗ ತನ್ನ ಕೆಲಸದಿ೦ದ ಸ್ವಯ೦ ನಿವೃತ್ತನಾಗಿದ್ದಾನೆ.ಈಗ ತನ್ನ ಕೆಲಸದಿ೦ದ ಸ್ವಯ೦ ನಿವೃತ್ತನಾಗಿದ್ದಾನೆ. ಅವನ ಉದ್ದಿಮೆಗಳನ್ನೆಲ್ಲಾ ಈಗ ಅವನ ಮಗ ಕುಲಸೇಕರನ್ ನೋಡಿಕೊಳ್ಳುತ್ತಿದ್ದಾನೆ
ದೀಪವೂ ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕೂ
– ಮು.ಅ. ಶ್ರೀರಂಗ,ಬೆಂಗಳೂರು
ನಾವುಗಳೆಲ್ಲರೂ “ಭೂತದ ಬಂಗಲೆ”ಯೊಳಗೆ ಬಂಧಿತರಾಗಿರುವಂತಹ ವ್ಯಕ್ತಿಗಳು. ಸೆಕೆಂಡು ಸೆಕೆಂಡುಗಳು ಜಾರಿದಂತೆ “ವರ್ತಮಾನ’ ಕಳೆದು “ಭೂತದ ಉಗ್ರಾಣಕ್ಕೆ “ಸೇರಿಹೋಗುತ್ತದೆ ಗೋಪಾಲ ಕೃಷ್ಣ ಅಡಿಗರ ಕವಿತೆಯ ಈ ಸಾಲು –. “ವರ್ತಮಾನ ಪತ್ರಿಕೆಯ ತುಂಬಾ ಭೂತದ ಸುದ್ದಿಗಳೇ” — ಆಗಾಗ ನೆನಪಿಗೆ ಬರುತ್ತಿರುತ್ತದೆ. ನಮ್ಮೆಲ್ಲರ ನೆನಪಿನ ಪೆಟ್ಟಿಗೆ ತೆರೆದಿಟ್ಟರೆ ಕೆಲವು ಸಿಹಿ ಹಲವು ಕಹಿ ನೆನಪುಗಳು ಹೊರಕ್ಕೆ ಬರಲು ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸುತ್ತವೆ. ನನ್ನ ಆ ಪೆಟ್ಟಿಗೆ ತರೆದು ಒಂದಷ್ಟನ್ನು ನಿಮ್ಮ ಜತೆ ಹಂಚಿಕೊಳ್ಳಬೇಕೆಂಬ ಆಸೆಯ ಫಲವೇ ಈ “ನಿನ್ನೆಗೆ ನನ್ನ ಮಾತು”.
ಸುಮಾರು ಮೂವತ್ತು ವರ್ಷಗಳ ಹಿಂದೆ ನಾನು ರಾಮನಗರದಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಸ್ನೇಹಿತರೊಬ್ಬರು ಹೇಳಿದ “we are all misplaced in our life”ಎಂಬ ಮಾತು ನನಗೆ ಆಗಾಗ ನೆನಪಿಗೆ ಬರುತ್ತಿರುತ್ತದೆ. ಇದು ಒಂದು ರೀತಿಯಲ್ಲಿ “ಅತೃಪ್ತಿಯ” ಸಂಕೇತವಾಗಿರಲೂಬಹುದು. ಈ ಅನುಮಾನದ ಪಿಶಾಚಿ ನಮ್ಮನ್ನು ಕಾಡದಿದ್ದರೆ ಆರಾಮವಾಗಿರಬಹುದು. ಅದೇ ಸರಿ ಎಂದು ಅನಿಸುತ್ತದೆ. ಆದರೆ ಆ ಅತೃಪ್ತಿ ನಮ್ಮ ಮುಂದಿನ ಸಾಧನೆಗೆ,ದಾರಿ ದೀಪವಾಗಬೇಕೇ ಹೊರತು ಇತರರ ಅಭಿವೃದ್ದಿಯನ್ನು ಕಂಡು ನಮ್ಮನ್ನು ನಾವೇ ಸುಟ್ಟಿಕೊಳ್ಳುವಂತಹ ಕಿಚ್ಚಾಗಬಾರದು.
“ಡುಂಢಿ” ಅನ್ನುವ ಕೃತಿ ಮತ್ತು “ಸೆಕ್ಯುಲರಿಸಂ” ಅನ್ನುವ ಅವಕಾಶವಾದ …!
– ರಾಕೇಶ್ ಶೆಟ್ಟಿ
“ಡುಂಢಿ”ಯ ಬಗ್ಗೆ ಗೆಳೆಯರೊಬ್ಬರ ಜೊತೆ ಮಾತನಾಡುತಿದ್ದೆ. ಅವರು “Immortals of Meluha” ಪುಸ್ತಕವನ್ನು ಉಲ್ಲೇಖಿಸಿ, “ಆ ಪುಸ್ತಕದಲ್ಲಿ ಶಿವ, ಗಾಂಜಾ ಸೇದುತ್ತಾನೆ,ಟಿಬೆಟಿಯನ್ ಮೂಲದವನು ಅಂತ ಬರೆದಿತ್ತು ಅದು ಭರ್ಜರಿ ಸೇಲ್ ಆಗಿತ್ತು.ಈ ಡುಂಢಿ ಪ್ರಿಂಟ್ ಹಾಕಿಸಿದ್ದೇ ೧೫೦-೨೦೦ ಪ್ರತಿಯಂತಲ್ಲ” ಅಂದರು. ನಾನಂದೆ “ನಿಮಗೆ, ’ದೇವರ ಪಾಲಿಟಿಕ್ಸ್’ ಅರ್ಥವಾಗಿಲ್ಲ. ಆ ಪುಸ್ತಕದಲ್ಲಿ ಶಿವನನ್ನು, ’ಟಿಬೆಟಿಯನ್’ ಅನ್ನುವ ಬದಲೋ ’ಬ್ರಾಹ್ಮಣ/ಆರ್ಯ’ ಅಂತೇನಾದರೂ ಚಿತ್ರಿಸಿದ್ದರೇ ಈಗ ಡುಂಢಿಯ ಪರ ಮಾತನಾಡುತ್ತಿರುವ ಕರ್ನಾಟಕದ ಸೋ-ಕಾಲ್ಡ್ ಸೆಕ್ಯುಲರ್ ಗಳೆಲ್ಲ ಆ ಪುಸ್ತಕದ ವಿರುದ್ಧ ಮಾತನಾಡುತಿದ್ದರು”.
“ಒಬ್ಬ ನಕಲಿಯೋ ಅಥವಾ ಹಲವಾರು ಅಸಲಿಗಳ ಒಂದು ಸಂಕೇತವೊ ಆಗಿರುವ ಗಣಪತಿಯನ್ನು ಕುರಿತು ಹಲವು ಪುರಾಣಗಳು ಹಲವಾರು ರೀತಿಯ ಕಥೆಗಳನ್ನು ಹೇಳಿವೆ. ಈ ಢುಂಢೀಯೂ ಹಾಗೇ ಒಂದು ಮನೋರಂಜನೆ ಅಥವಾ ವಿಚಾರಕ್ಕೆ ಹಚ್ಚಬಹುದಾದ, ನಿಜವೆಂದು ನಂಬಲು ಇಷ್ಟ ಪಡುವ ಹೂರಣದ ಒಂದು ಕಲ್ಪನೆಯ ಪುರಾಣವೇ.” ಅನ್ನುವ ಮಾತುಗಳನ್ನಿಟ್ಟುಕೊಂಡ “ಡುಂಢಿ” ಅನ್ನುವ ಕೃತಿಯನ್ನು ಓದದೇ ಅದು ಕೃತಿಯೋ,ವಿಕೃತಿಯೋ ಅಂತ ನಿರ್ಧಾರ ಮಾಡುವುದು ಹೇಗೆ? ಅನ್ನುವ ಪ್ರಶ್ನೆಯನ್ನು ಮುಂದಿಡುತ್ತ ಮತ್ತು ಒಬ್ಬ ಲೇಖಕನನ್ನು ಬಂಧಿಸುವಂತ ಮಟ್ಟದವರೆಗೂ ಹೋಗಿದ್ದನ್ನು ವಿರೋಧಿಸುತ್ತಲೇ,ಈ ಮಾತು ಕೇಳುತಿದ್ದೇನೆ.ನಾನು ನನ್ನ ಗೆಳೆಯರಿಗೆ ಹೇಳಿದ ಮಾತಿನಲ್ಲಿ ಸತ್ಯವಿರಬಹುದು ಅಂತ ನಿಮಗೂ ಅನ್ನಿಸುವುದಿಲ್ಲವೇ? (“ಶಿವ”ನಮ್ಮವನು ಅವನನ್ನು ಹೈಜಾಕ್ ಮಾಡಿದ್ದಾರೆ ಅಂತ ಬರೆದವರನ್ನೂ ನೋಡಿದ್ದೇನೆ. ದೇವರನ್ನೂ ಈ ಮಂದಿ ತಮ್ಮ ಗುಂಪಿನೊಳಗೆ ಸೇರಿಸಿಕೊಳ್ಳುತ್ತಾರೆ ಶಿವಾ ಶಿವಾ…!)
ಸಂಕವ್ವನ ಸ್ವಾತಂತ್ರ್ಯ
– ಸಂತೆಬೆನ್ನೂರು ಫೈಜ್ನಟ್ರಾಜ್’
ಜೈಹಿಂದ್,
ಜೈ ಹಿಂದ್,
ಮಹಾತ್ಮಗಾಂಧಿ ಕಿ ಜೈ.
ಭಾರತ್ಮಾತಾಕಿ ಜೈ.
ಇಡೀ ಹಳ್ಳಿಗೆ ಹಳ್ಳಿಯೇ ಕಂಪಿಸುವಂತೆ ಘೋಷಣೆಗಳು ಅನುರಣಿಸುತ್ತಿದ್ದವು. ನಾಗೇನಹಳ್ಳಿ ಊರಗೌಡ್ರು ಸರ್ಜಾ ಸಂಕಣ್ಣ ನಾಯಕರ ಮನೆ ಮಾತ್ರ ಅಂದು ಸ್ಮಶಾನಕ್ಕಿಂತಲೂ ಮೌನ-ಮೌನವಾಗಿತ್ತು !ಹುರಿ-ಹುರಿ ಮೀಸೆಯ, ಕಚ್ಚೆ ಪಂಚೆಯ, ಇಟ್ಟಗಿ ಖಾದಿಯ ಜುಬ್ಬಾ ತಲೆ ಮೇಲೂ ಅಲ್ಲಿಯ ಚೌಕಾಕಾರದ ಗಾಂಧಿಟೋಪಿ ಧರಿಸಿ ಅದ್ಯಾವುದೋ ಶೂನ್ಯ ದಿಟ್ಟಿಸ್ತಾ ಗೌಡರು ಹಜಾರದ ಕಂಬವೊಂದನ್ನು ಬಲಗೈಲಿ ಹಿಡಿದು ನಿಂತಿದ್ದರು!
ಸುರಪುರದ ವೆಂಕಟಪ್ಪನಾಯಕನ ವಂಶಸ್ಥರಾದ ಈ ಸರ್ಜಾ ಸಂಕಣ್ಣನಾಯಕರ ಮನೆಯಲ್ಲೂ ಅಂದು ಸಣ್ಣ ಚಳವಳಿ ಪ್ರಾರಂಭಗೊಂಡಿತ್ತು. ಅಡಿಗೆ ಖೋಲಿಯ ಮೂಲೆಯಲ್ಲಿ ಗೌಡತಿ ಸಂಕವ್ವ ಸೆರಗು ಒದ್ದೆಯಾಗುವಂತೆ ಮುಸಿ-ಮುಸಿ ಅಳ್ತಾನೇ ಇದ್ದದ್ದು ಅದು ನಿನ್ನೆ ರಾತ್ರಿಯಿಂದ ಗೌಡರ ರಕ್ತ ಕೋಪವಾಗಿ ಬರಲು ಕಾರಣವಾಗಿತ್ತು!
ಇದೇನಾ… ಹುಚ್ಚು ಪ್ರೀತಿ…?
– ಕೆ.ಎಂ.ವಿಶ್ವನಾಥ(ಮಂಕವಿ) ಮರತೂರ
ಬೀದಿ ಹೋಟೇಲವೊಂದರಲ್ಲಿ ಭಿಕ್ಷುಕನೊಬ್ಬ ಒಂದು ಪತ್ರಿಕೆ ಹಿಡಿದು ಹ್ಯಾಪಿ ಬರ್ತಡೇ ಟು ಯೂ ಹಾಡು ಹೇಳುತ್ತ ಘಾಡವಾಗಿ ಏನೊ ಓದುವಂತ ದೃಶ್ಯವಿತ್ತು . ಸಮೀಪ ಹೋಗಿ ನೋಡಿದರೆ ಆತ ಓದುತ್ತಿದ್ದದ್ದು ಐದನೆ ಪುಣ್ಯಸ್ಮರಣೆಯ ಭಾವಚಿತ್ರ . ನಾನು ಸ್ವಲ್ಪ ಹತ್ತಿರ ಹೋಗಿ ಪತ್ರಿಕೆ ಕಸಿದು ಕೊಳ್ಳಲು ಪ್ರಯತ್ನಿಸಿದರೆ , ಆತ ಕೋಪ ಬಂದವನಂತಾಗಿ ತನ್ನ ಒಡಲಾಳದ ವಿಷಯ ಯಾರ ಪರಿವೆಯಿಲ್ಲದೆ ಹೇಳಿಕೊಳ್ಳುತ್ತಾನೆ. ಆ ಭಾವಚಿತ್ರಕ್ಕು ತನಗೂ ಇರುವ ಸಂಬಂದವನ್ನು ಬಿಚ್ಚಿ ಹೇಳುತ್ತಾನೆ.ಈತನ ಹೆಸರು ಗೋಪಾಲ ಸುಂದರ ಮೈಕಟ್ಟು ನಿಲುವು ಬಾಹು ಸತತ ವ್ಯಾಯಾಮ ಮಾಡಿ ಮನೆಯ ಖಾರಪುಡಿ ರೊಟ್ಟಿ ತಿಂದು ಗಟ್ಟಿಮುಟ್ಟಾಗಿ ಇದ್ದ ಆತನ ದೇಹ ಆಕರ್ಶಕವಾಗಿತ್ತು ಕಾಲೇಜು ಕನ್ನೆಯರಿಗೆಲ್ಲ ಕನಸಿನ ರಾಜಕುಮಾರ ನಂತಿದ್ದ .
ಲೇ.. ಆ ಫಿಗರು ಭಾರಿ ಇತ್ತಲೆ… ಆದರೆ ಅವಳು ಸ್ವಲ್ಪನು ತಿರುಗಿ ನೋಡಲೇಯಿಲ್ಲ. ಈ ಬಾರಿ ಸಿಗಲಿ ಅವಳನ್ನು ಬಿಟ್ಟರೆ ಕೇಳು ಅವಳ ಆ ಮೈಮಾಟ ನೋಡಿ ನನಗೆ ನಿದ್ದೆನೆ ಬರತಿಲ್ಲ ಕಣ್ರೊ. ಹೀಗೆ ಗೆಳೆಯೆರೆಲ್ಲ ಕಾಲೇಜು ಕ್ಯಾಂಪಸ್ ಲ್ಲಿ ಕಾಲಹರಣ ಮಾಡುತ್ತಾ ಆ ಕಾಲೇಜಿನ ಸುಂದರಿ ಪಾರ್ವತಿ ಊರ್ಫ ಪಾರು ಹುಡುಗಿಯ ಬಗ್ಗೆ ಮಾತಾಡುತ್ತಿದ್ದರು .
ನಮ್ಮ ಗೋಪಾಲ ನೋಡಿರೊ ಅಷ್ಟು ಹ್ಯಾಂಡ್ಸಂ ಆದರೂ ಯಾವ ಹುಡುಗಿ ತಂಟೆಗೂ ಹೋಗದೆ ಹೇಗೆ ಇರತಾನೆ ಅಂದ ರಹೀಮ , ಲೇ.. ಹುಚ್ಚಾ ಅವನಿಗ್ಯಾಕೊ ಅದರ ಚಿಂತಿ ಅವನ ಕಂಡರೆ ನಮ್ಮ ಹುಡುಗಿರೆ ಮುಗಿಬೀಳತಾರೆ ರವಿ ಅಂದ ಹಾಸ್ಯದಲ್ಲಿ.ಲೆ… ನೀವೆಲ್ಲ ಉದ್ಧಾರ ಆಗಲ್ಲ ಕಣ್ರೊ ಮಂದಿ ಹೆಣ್ಣು ಮಕ್ಕಳ ಬಗ್ಗೆ ಅಸಯ್ಯವಾಗಿ ಮಾತಾಡಬಾರದು ತಮ್ಮಿಂದಿರಾ ನಡೆಯಿರಿ ಕ್ಲಾಸ್ ಶುರುವಾಯಿತು ಎಂದು ಎಲ್ಲರಿಗೂ ಬುದ್ದಿವಾದ ಹೇಳಿದ ಕರ್ಣ . ಎಲ್ಲರು ತರಗತಿಯಲ್ಲಿ ಕುಳಿತರು ಈಗ ತರಗತಿಯಲ್ಲಿ ಇಂಗ್ಲೀಷ ಮೇಡಂ ಕ್ಲಾಸ್ ಇದೆ ಎಲ್ಲರು ಪಾಠಕ್ಕಿಂತ ಮೇಡಂ ಇಷ್ಠಾಂತ ಇಡಿ ತರಗತಿ ಹೌಸ್ ಫುಲ್ ಆಗಿತ್ತು .
ಕಿತ್ತಳೆ ಹಣ್ಣಿನ ಋಣ!?
– ನಿತ್ಯಾನಂದ.ಎಸ್.ಬಿ
ಆಗಲೇ ನಾಲ್ಕು ಘಂಟೆ ಆಗಿಬಿಟ್ಟಿತ್ತು. ಇನ್ನು ಐದು-ಹತ್ತು ನಿಮಿಷದಲ್ಲಿ ರೈಲು, ನಿಲ್ದಾಣಕ್ಕೆ ಬರುವುದರಲ್ಲಿತ್ತು. ಕಾಲೇಜಿನಲ್ಲಿ ಕಬಡ್ಡಿ ತಂಡಕ್ಕೆ ಸೇರಿದ್ದ ಭರತ ಅಭ್ಯಾಸ ಮುಗಿಸಿ ಬರುವುದು ತಡವಾಗಿಬಿಟ್ಟಿತ್ತು. ರೈಲು ಸಿಗದಿದ್ದರೆ ಬಸ್ಸಿನಲ್ಲಿ ಹೋಗಬೇಕು. ಜೇಬಿನಲ್ಲಿ ನಯಾಪೈಸೆ ದುಡ್ಡಿಲ್ಲ. “ದೇವ್ರೇ ರೈಲು ಮಿಸ್ಸು ಮಾಡಿಸಬೇಡಪ್ಪಾ” ಅಂತ ಮನಸ್ಸಿನಲ್ಲಿಯೇ ಪ್ರಾರ್ಥಿಸುತ್ತಾ, ಒಂದೇ ಉಸಿರಿಗೆ ರೈಲು ನಿಲ್ದಾಣದ ಕಡೆಗೆ ಓಡುತ್ತಿದ್ದ. ಮದ್ಯಾಹ್ನ ಊಟ ಮಾಡದಿದ್ದುದರಿಂದ ಹೊಟ್ಟೆ ಬೇರೆ ಚುರುಗುಡುತ್ತಿತ್ತು. ರೈಲು ಸಿಕ್ಕಿಬಿಟ್ಟರೆ ಸಾಕೆಂದು ಶರವೇಗದಲ್ಲಿ ನಿಲ್ದಾಣದೆಡೆಗೆ ಧಾವಿಸುತ್ತಿದ್ದ.
ಭರತ ಹಳ್ಳಿಯ ಹುಡುಗ. ತೀರಾ ಬಡವನಲ್ಲದಿದ್ದರೂ ಮನೆಯ ಆರ್ಥಿಕ ಪರಿಸ್ಥಿತಿ ಅಂಥಾ ಉತ್ತಮವಾಗೇನೂ ಇರಲಿಲ್ಲ. ಮಗಳ ಮದುವೆಗಾಗಿ ಮಾಡಿದ್ದ ಸಾಲ ತೀರಿಸಲು ತಂದೆ ಹಗಲು ರಾತ್ರಿ ದುಡಿಯುತ್ತಿದ್ದರೆ, ಅಮ್ಮ ಮನೆಯ ಖರ್ಚನ್ನು ಸರಿಹೊಂದಿಸಲು ಬಟ್ಟೆ ಹೊಲಿಯುತ್ತಿದ್ದಳು. ತಂದೆ ತಾಯಿಯ ಕಷ್ಟವನ್ನು ಕಣ್ಣಾರೆ ಕಂಡಿದ್ದ ಭರತ, ಹೈಸ್ಕೂಲು ಮುಗಿದ ನಂತರ ಸ್ವಂತ ಖರ್ಚಿನಲ್ಲೇ ಓದಲು ತೀರ್ಮಾನಿಸಿದ್ದ. ಅದಕ್ಕಾಗಿಯೇ ರಜೆಯಲ್ಲಿ ಪಟ್ಟಣಕ್ಕೆ ಹೋಗಿ ಪೇಪರ್ ಹಾಕಿ, ಹಾಲು ಮಾರಿ, ಗಂಧದಕಡ್ಡಿ ಫ್ಯಾಕ್ಟರಿಗೆ ಹೋಗಿ ಒಂದಷ್ಟು ಹಣವನ್ನು ಸಂಪಾದಿಸಿದ್ದ. ಅದೇ ಹಣದಲ್ಲಿ ಕಾಲೇಜಿನ ಫೀಜು ಕಟ್ಟಿ, ಪುಸ್ತಕ, ಪೆನ್ನು, ಬ್ಯಾಗನ್ನು ಕೊಂಡುಕೊಂಡಿದ್ದ. ಒಂದು ರೈಲು ಪಾಸನ್ನೂ ಮಾಡಿಸಿಕೊಂಡಿದ್ದ. ಹೀಗಾಗಿ ಸದ್ಯ ಭರತನ ಹತ್ತಿರ ಒಂದು ಬಿಡಿಗಾಸೂ ಉಳಿದಿರಲಿಲ್ಲ. ಬೆಳಿಗ್ಗೆ ಊಟವನ್ನು ಡಬ್ಬಿಗೆ ಹಾಕಿಸಿಕೊಳ್ಳುವುದಕ್ಕೆ ತಡವಾಗುತ್ತದೆಂದು ಹಾಗೆಯೇ ಬಂದಿದ್ದರಿಂದ ಮದ್ಯಾಹ್ನದ ಊಟ ಖೋತಾ ಆಗಿತ್ತು.
“ಅಬ್ಭಾ.. ರೈಲು ಇನ್ನೂ ಬಂದಿಲ್ಲ”. ಎಂದು ನಿಟ್ಟುಸಿರು ಬಿಟ್ಟ ಭರತ, ದೂರದಿಂದಲೇ ಕಂಡ ಸ್ನೇಹಿತರ ಬಣ್ಣಬಣ್ಣದ ಬ್ಯಾಗುಗಳನ್ನು ನೋಡಿ ರೈಲು ಇನ್ನೂ ಬಂದಿಲ್ಲವೆಂಬುದನ್ನು ಖಚಿತಪಡಿಸಿಕೊಂಡ. ಬಹಳ ಆಯಾಸವಾಗಿದ್ದುದರಿಂದ ಓಡುವುದನ್ನು ನಿಲ್ಲಿಸಿ ನಡೆಯಲು ಪ್ರಾರಂಭಿಸಿದ.ಭರತ ಒಳ್ಳೆಯ ಕಬಡ್ಡಿ ಆಟಗಾರ. ಮುಂದಿನ ವಾರ ಚಿತ್ರದುರ್ಗದಲ್ಲಿ ನಡೆಯಲಿದ್ದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾಗಿದ್ದ. ಅದಕ್ಕಾಗಿಯೇ ದಿನನಿತ್ಯ ಕಠಿಣ ತಯಾರಿ ನಡೆದಿತ್ತು. ಜೊತೆಗೆ ಚಿತ್ರದುರ್ಗಕ್ಕೆ ಹೋಗಿಬರಲು ಬೇಕಾದ 340 ರೂಪಾಯಿಗಳನ್ನು ಒಟ್ಟು ಮಾಡಬೇಕಾಗಿತ್ತು. ಹೇಗೋ ಹೊಂದಿಸಿದರಾಯ್ತು ಎಂದುಕೊಂಡೇ ನಿಲ್ದಾಣ ಸೇರಿದ.
ಭರತನ ಬರುವಿಕೆಯನ್ನೇ ಕಾಯುತ್ತಾ ನಿಂತಿದ್ದ ಪ್ರಿಯಮಿತ್ರ ರಾಜೇಶ, ಭರತ ಹತ್ತಿರವಾಗುತ್ತಿದ್ದಂತೆ ಕೇಳಿದ. “ಏನೋ ಭರತ. ಇಷ್ಟು ಹೊತ್ತು ಮಾಡಿಬಿಟ್ಟೆ. ಕಬಡ್ಡಿ ಪ್ರಾಕ್ಟೀಸ್ ಮಾಡ್ತಿದ್ದಾ..?
ಭರತ ಹೂಂ ಎಂಬಂತೆ ತಲೆ ಆಡಿಸಿದ.
ಮತ್ತಷ್ಟು ಓದು 





