ವಿಷಯದ ವಿವರಗಳಿಗೆ ದಾಟಿರಿ

Posts from the ‘ಪ್ರಚಲಿತ’ Category

15
ನವೆಂ

ಬೈಲೂರ ಬಸ್ಸು ಹತ್ತಿ

ಪ್ರಶಸ್ತಿ.ಪಿ, ಸಾಗರ

ಮನೇಲಿ ಕಾರ್ಯಕ್ರಮ ಇದೆ, ಬರಲೇ ಬೇಕು ಅಂತ ಕರೆದಿದ್ರು ಅನ್ಸತ್ತೆ. ಹನ್ನೊಂದೂಕಾಲಿಗೆ ಹಸಿರು ಬಣ್ಣದ ಬಸ್ಸು ಬರತ್ತೆ , ಅದ್ರಲ್ಲಿ ಬಾ ಅಂತ ಸೂಚನೆ. ಸರಿ, ವಿಶ್ವಾಸದ ಮೇಲೆ ಕರೆದ ಮೇಲೆ ಬಿಡೋಕಾಗತ್ತಾ? ಹೂಂ ಜೈ ಅಂತ ಹನ್ನೊಂದ್ಘಂಟೆಗೇ ಬಸ್ಟಾಂಡಲ್ಲಿ ಹಾಜರು.ಎಲ್ಲಿಳ್ಯದು, ಯಾವ ಬಸ್ಸು ಎಂತನೂ ಗೊತ್ತಿಲ್ಲ. ಫೋನಲ್ಲಿ ಕೇಳಿದ್ದಷ್ಟೆ. ಹೋಗ್ಬೇಕಾಗಿರೋ ಊರ ಹೆಸ್ರನ್ನೇಳಿ ಕಂಡಕ್ಟ್ರಣ್ಣಂಗೆ ಕೇಳ್ದಾಗ “ಬೇಲೂರು ಗಾಡಿ ಬರತ್ತೆ ಹನೊಂದು ಕಾಲಿಗೆ. ಅದ್ರಲ್ಲೋಗಿ” ಅಂದ. ನಾ ಹೋಗ್ಬೇಕಾಗಿದ್ದು ಸೈದೂರು ದಾರಿ. ಬೇಲೂರಿಗೂ ಸೈದೂರಿಗೂ ಎಲ್ಲಿಂದೆಲ್ಲಿ ಸಂಬಂಧ ಅಂತ ಅರ್ಥ ಆಗ್ಲಿಲ್ಲ.ಹಂಗಂತಾ?  ಗಣೇಶ ಸ್ಟೈಲಲ್ಲಿ ತಲೆ ಕೆರ್ಕಳಕೆ ಆಗತ್ತಾ? ಅದೂ ಬಸ್ಟಾಂಡ್ ಬೇರೆ 🙂

ಹನ್ನೊಂದು ಕಾಲಾಯ್ತು. ಬಂದಿರ್ಲಿಲ್ಲ ಬಸ್ಸು. ಬಿಸಿಲು ಬೇರೆ ಏರ್ತಾ ಇತ್ತು. ಬಸ್ಟಾಂಡಲ್ಲೊಂದು ಅಂಗಡಿ ಎದ್ರಿದ್ದ ನೆರಳಲ್ಲಿ ಜಾಗ ಖಾಲಿ ಇತ್ತು. ನಂತರನೇ ನೆರಳನರಸಿ ಸುಮಾರು ಜನ್ರಿದ್ರು ಬಿಡ್ರಿ.. ಕಾದ ತಗಡ ಶೀಟು. ಕೆಳಗೆ ನಾನು. ಕೇಳಬೇಕೆ? ಸೆಖೆ ಹೊಡ್ತ. ಬೆವ್ರೊರ್ಸದು, ಗಡಿಯಾರ ನೋಡದು ಇದೇ ಕೆಲ್ಸ ಆಯ್ತು. ಹನ್ನೊಂದು ಇಪ್ಪತ್ತೈದು. ಅಲ್ಲಿದ್ದೋರಲ್ಲಿ ಅನ್ಸತ್ತೆ ಊರಿಗೋಗೋರೂ ಇದ್ರು ಹೇಳೋದು ಅವರ ಮಾತಿಂದ ಗೊತ್ತಾಯ್ತು. ಇದ್ದಿದ್ರಲ್ಲಿ ಅದೊಂದು ಸಮಾಧಾನ. ಅದೇ ಊರಿಗಂತೂ ಹೋಗ್ತಾರೆ. ಅವ್ರ ಮನೇಗೆ ಹೋಗ್ಬೋದು ಅಂತ ಮನ್ಸು ಹೇಳಕ್ಕಿಡೀತು. ಆದ್ರೂ ಕೇಳಕ್ಕೆ ಬಾಯಿ ಬರ್ಲಿಲ್ಲ. ಫಿಲ್ಮಲ್ಲಿ ಹೀರೋಗೆ ಹೀರೋಯಿನ್ ಎದ್ರು ಮಾತು ಬರಲ್ವಲ ಹಂಗೆ ಅಂದ್ಕಂಡ್ರಾ? ಥೋ..ಅವ್ರೆಲ್ಲಾ ವಯಸ್ಸಾದವ್ರು 🙂 ಮತ್ತಷ್ಟು ಓದು »

14
ನವೆಂ

ಮುಂದಿದೆ ಮಾರಿ ಹಬ್ಬ : ಯಡಿಯೂರಪ್ಪ ಅವರ ಮುಂದಿನ ರಾಜಕೀಯ ನಡೆಯೇನು?

-”ಸಿದ್ಧಾರ್ಥ

೨೪ ದಿನಗಳ ಸೆರೆಮನೆ ವಾಸದ ನಂತರ ಅಂತೂ ಇಂತೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ. ಇದನ್ನೇ ಒಂದು ವಿಜಯೋತ್ಸವವೆಂಬಂತೆ ಅವರ ಬೆಂಬಲಿಗರು ಬಾಣ ಬಿರುಸು, ಪಟಾಕಿಗಳನ್ನು ಸಿಡಿಸಿ ಹರ್ಷಿಸಿದ್ದಾರೆ. ಯಡಿಯೂರಪ್ಪ ಅವರು ದೇಗುಲಗಳ, ಮಠಗಳ ದರ್ಶನ ಕಾರ್ಯದಲ್ಲಿ ಮುಳುಗಿದಂತೆ ನಟಿಸುತ್ತಿದ್ದರು, ಅವರ ಅಂತರ್ಯ್ಯದಲ್ಲಿ ಮುಕ್ಕಾಗಿ ಹೋದ ವೈಬವವನ್ನು, ಅಧಿಕಾರವನ್ನು ಮರಳಿ ಪಡೆಯುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ. ಅದಕ್ಕೆ ಪೂರಕವೆನ್ನುವಂತೆ ಅವರ ಆಪ್ತ ಮಂತ್ರಿಗಳನೇಕರು ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಕಾರಣೀಭೂತರಾದ ಯಡಿಯೂರಪ್ಪನವರೇ ಪಕ್ಷದ ಪ್ರಶ್ನಾತೀತ ನಾಯಕರು ಆದ್ದರಿಂದ ಅವರನ್ನೇ ರಾಜ್ಯದ ಪಕ್ಷಾದ್ಯಕ್ಷರನ್ನಾಗಿ ಮಾಡಿ ಎಂಬ ಬೆದರಿಕೆ ರೂಪದ ಒತ್ತಡವನ್ನು ಹೈಕಮಾಂಡ್‌ಗೆ ರವಾನಿಸಿದ್ದಾರೆ.

ಸೆರಮನೆ ವಾಸ, ಅದೆಷ್ಟೇ ಅಲ್ಪಾವಧಿಯಾದಾಗಿರಲಿ ಅದಷ್ಟೇ ಸುಖ ವೈಬೋಗಗಳಿಂದ ಕೂಡಿರಲಿ, ಮಾನಸಿಕವಾಗಿ ಅದು ಸೆರಮನೆ ವಾಸವೇ. ಪರಿಸ್ಥಿತಿಯ ಶಿಶುವಾಗಿ ತಮ್ಮದಲ್ಲದ ತಪ್ಪಿಗೆ ಸೆರಮನೆ ವಾಸ ಕಂಡ ಯಡಿಯೂರಪ್ಪನವರಿಗೆ ಕಡ್ಡಾಯ ಬಂದನ ಒಂದು ರೀತಿಯಲ್ಲಿ ಪಾಠವಾಗಬೇಕಾಗಿತ್ತು. ಸಾಮಾನ್ಯವಾಗಿ ಸೆರೆಮನೆಯಲ್ಲಿ ಸಿಗುವ ಏಕಾಕಿತನದಲ್ಲಿ ವ್ಯಕ್ತಿಯೊಬ್ಬರ ಮನಸ್ಸು ಹಲವು ಬದಲಾವಣೆಗೆ ಒಳಪಡುತ್ತದೆ. ಸರಿ ತಪ್ಪುಗಳ ವಿಮರ್ಶೆಯ ಆತ್ಮಾವಲೋಕನಕ್ಕೆ ಅದು ಸಕಾಲವಾಗುತ್ತದೆ. ಕೆಲವೊಮ್ಮೆ ಏಕಾಂಗಿ ತನದಲ್ಲಿ ವ್ಯಕ್ತಿಯ ಮನಸ್ಸು, ಪ್ರತಿಭೆ ಅರಳುತ್ತದೆ. ಮತ್ತಷ್ಟು ಓದು »

11
ನವೆಂ

ಲಿಂಗಪರಿವರ್ತನೆ: ಬಡವಾಗುತ್ತಿವೆ ಕಂದಮ್ಮಗಳು!

-ವಿಷ್ಣುಪ್ರಿಯ

ಜೆನಿಟೋಪ್ಲಾಸ್ಟಿ. ಈ ತಂತ್ರಜ್ಞಾನದ ಹಿಂದಿದ್ದ ಉದ್ದೇಶವೂ ಸಹ ಕೆಟ್ಟದಾಗೇನೂ ಇರಲಿಲ್ಲ. ನಪುಂಸಕತೆಯನ್ನು ನಿವಾರಿವಂಥ ಮಹತ್ವದ ಉದ್ದೇಶವನ್ನು ಇಟ್ಟುಕೊಂಡಿದ್ದಂಥ ಈ ತಂತ್ರಜ್ಞಾನ ಧನದಾಹಿ ವೈದ್ಯರ ಕೈಯಲ್ಲಿ ಲಿಂಗಪರಿವರ್ತನೆಯಂಥ ದುರುದ್ದೇಶಕ್ಕೆ ಬಳಕೆಯಾಗುತ್ತಿದೆ ಅಷ್ಟೆ. ಎಂತಹುದ್ದೇ ಅಭಿವೃದ್ಧಿಯಾದರೂ ಅದು ನಿಸರ್ಗವನ್ನು, ಆ ನಿಸರ್ಗದ ಸೃಷ್ಟಿಯನ್ನು ಕಾಪಾಡಿಕೊಂಡು ಬರಬೇಕೇ ಹೊರತು, ಅದನ್ನೇ ಧಿಕ್ಕರಿಸಿ ಮುನ್ನಡೆಯುವಂತಿರಬಾರದು.
ಗರ್ಭಿಣಿಯೊಬ್ಬಳು ಪ್ರಸವಿಸಿದ ತಕ್ಷಣ ಆಕೆಯ ಕಡೆಯವರು ನೋಡುವುದು- ಮಗು ಗಂಡೋ ಹೆಣ್ಣೋ ಎಂದು. ಒಂದು ವೇಳೆ ಮಗು ಹೆಣ್ಣಾಗಿದ್ದರೆ ಮುಗಿಯಿತು ಅದರ ಕಥೆ! ಹೀಗೆಲ್ಲ ಆಗುತ್ತದೆಯೇ ಎಂಬ ಪ್ರಶ್ನೆ ಒಂದಷ್ಟು ವರ್ಗಗಳ ಜನರ ಮನಸ್ಸಿನಲ್ಲಿ ಮೂಡಬಹುದು. ಕಾರಣ- ಮಗು ಗಂಡಾಗಲಿ, ಹೆಣ್ಣಾಗಲಿ… ಸುಸೂತ್ರವಾಗಿ ಆದರೆ ಸಾಕು ಎಂದು ಭಾವಿಸುವ ಜನರಿದ್ದಾರೆ. ಮುಖ್ಯವಾಗಿ ಕರ್ನಾಟಕ ಮತ್ತು ಕೇರಳಗಳಲ್ಲಿ ಹೆಣ್ಣು ಗಂಡೆಂಬ ತಾರತಮ್ಯ ಕಡಿಮೆಯಾಗುತ್ತಿದೆ. ಆದರೆ ಸಂಪೂರ್ಣ ಭಾರತದ ಪರಿಸ್ಥಿತಿ ಹೀಗಿಲ್ಲ. ಗಂಡು ಮಗು ಮಾತ್ರ ನಮಗೆ ಬೇಕು ಎಂದು ಭಾವಿಸುವ ಅದೆಷ್ಟೋ ಜನ ಭಾರತದಲ್ಲಿದ್ದಾರೆ. ಮಗು ಹೆಣ್ಣು ಎಂದಾಕ್ಷಣ ಅದನ್ನು ಒಂದೋ ಸಾಯಿಸಿ ಬಿಡುತ್ತಾರೆ, ಇಲ್ಲವಾದಲ್ಲಿ ಬಿಟ್ಟು ಹೋಗುತ್ತಾರೆ. ಇದು ಹಳೇ ದಿನಗಳ ವಿಚಾರವಾಯಿತು. ಆದರೆ ಯಾವಾಗ ಲಿಂಗಪರಿವರ್ತನೆ ತಂತ್ರಜ್ಞಾನವನ್ನು ವೈದ್ಯಲೋಕ ಬಳಸಿಕೊಳ್ಳಲಾರಂಭಿಸಿತೋ ಅಂದಿನಿಂದ ಹೆಣ್ಣು ಮಗುವಿನ ಹತ್ಯೆ ಕಡಿಮೆಯಾಗಿದೆ. ಹಾಗಂತ ಖುಷಿ ಪಡುವ ಹಾಗಿಲ್ಲ! ಹೆಣ್ಣು ಮಗುವಿನ ಲಿಂಗ ಪರಿವರ್ತನೆ ಮಾಡಿ ಗಂಡಾಗಿಸುತ್ತಾರೆ. ನಮ್ಮ ವಂಶಕ್ಕೊಂದು ಗಂಡು ಮಗು ಬಂತು ಎಂದು ಬೀಗುತ್ತಾರೆ.

ಮತ್ತಷ್ಟು ಓದು »

10
ನವೆಂ

ಸಂಸ್ಕೃತಿ ಸಂಕಥನ – ೧೦: ಪ್ರೊಟೆಸ್ಟಾಂಟರೇಕೆ ಕೆಥೋಲಿಕ್ ಪ್ರೀಸ್ಟ್ಗಳ ಮೇಲೆ ಪ್ರಹಾರಮಾಡಿದರು?

– ರಮಾನಂದ ಐನಕೈ

ಸಂಸ್ಕೃತಿ ಸಂಕಥನ – ೧೦

ಕೆಥೋಲಿಕ್ ಕ್ರಿಶ್ಚಿಯಾನಿಟಿ ರಿಲಿಜನ್ನಿನ ಸೀಮೆ ದಾಟಿ ಅನೈತಿಕವಾಗಿದೆ. ಇದಕ್ಕೆ ಕಾರಣ ಕ್ಯಾಥೋಲಿಕ್ ಪ್ರೀಸ್ಟ್ಗಳು. ಇವರು ದೇವರು ಮತ್ತು ಜನರ ನಡುವೆ ಮಧ್ಯವರ್ತಿಗಳ ಪಾತ್ರವಹಿಸಿ ಜನರ ರಿಲಿಜನ್ನಿನ ಸ್ವಾತಂತ್ರ್ಯ ಹರಣ ಮಾಡಿದ್ದಾರೆ. ಚರ್ಚ್ ಅನ್ನುವ ಸಂಸ್ಥೆಯ ಮೂಲಕ ಅಧಿಕಾರ ಚಲಾಯಿಸುತ್ತ ಸಮಾಜವನ್ನು ಶ್ರೇಣೀಕರಣಗೊಳಿಸುತ್ತಿದ್ದಾರೆ. ಸ್ವಾರ್ಥ ಹಾಗ ಅಧಿಕಾರದಾಹದಿಂದ ಜನರಲ್ಲಿ ತಾರತಮ್ಯ ಹುಟ್ಟುಹಾಕುತ್ತಿದ್ದಾರೆ. ಪ್ರೀಸ್ಟ್ಹುಡ್ಡನ್ನು ಪಾರಂಪರಿಕ ಮಾಡಿಕೊಂಡಿದ್ದಾರೆ. ಹಾಗಾಗಿ ಕ್ಯಾಥೋಲಿಕ್ ಕ್ರಿಶ್ಚಿಯಾನಿಟಿ ಕೂಡಾ ಒಂದು ಸುಳ್ಳು  ರಿಲಿಜನ್ನಿನ ಸ್ವರೂಪ ಪಡೆದುಕೊಂಡಿದೆ. ಇದಕ್ಕೆಲ್ಲ ಮುಖ್ಯ ಕಾರಣ ಕೆಥೋಲಿಕ್ ಪ್ರೀಸ್ಟ್ಗಳು. ಪ್ರೀಸ್ಟ್ಗಳು ನಿಜವಾದ ಕಂತ್ರಿ(ಕನ್ನಿಂಗ್)ಗಳು ಎಂಬುದು  ಪ್ರೊಟೆಸ್ಟಾಂಟ್ ಸುಧಾರಣಾವಾದಿಗಳ  ಉಗ್ರ ಆರೋಪ.

ಭಾರತೀಯ ಸಂಸ್ಕೃತಿಯ ಕುರಿತು ಬರೆಯುತ್ತಿರುವಾಗ ಈ ತಲೆಬರಹದ ಪ್ರಸ್ತುತತೆಯ ಕುರಿತು ಪ್ರಶ್ನೆ ಏಳುವುದು ಸಹಜ. ಆದರೆ ಇದಕ್ಕೆ ಔಚಿತ್ಯ ಇದೆ. ಕಳೆದ ನಾನೂರು ವರ್ಷಗಳಿಂದ ಭಾರ ತೀಯ ಸಂಸ್ಕೃತಿ ಹಲವಾರು ತಪ್ಪು ದೃಷ್ಟಿಕೋನಗಳಿಂದ ಅರ್ಥ ವ್ಯತ್ಯಾಸಗಳನ್ನು ಹೊಂದುತ್ತ ಬಂದಿದೆ. ನಮ್ಮ ಸಮಾಜ ವಿಜ್ಞಾನಗಳೂ ಇದೇ ತಪ್ಪುದಾರಿಯಲ್ಲಿ ಸಾಗಿವೆ. ಹಾಗಾಗಿ ಪ್ರೊ. ಬಾಲ ಗಂಗಾಧರರು ಹೇಳುವ ಪ್ರಕಾರ ಈಗೇನಾದರೂ ನಿಜವಾದ ಭಾರತೀಯ ಸಂಸ್ಕೃತಿಯನ್ನು ಅರಿಯ ಬೇಕೆಂದರೆ ಮೊದಲು ಪ್ರಾಶ್ಚಾತ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅಷ್ಟರಮಟ್ಟಿಗೆ ಪಾಶ್ಚಾತ್ಯ ದೃಷ್ಟಿಕೋನಗಳು ನಮ್ಮ ಸಂಸ್ಕೃತಿಯನ್ನು ವ್ಯಾಖ್ಯಾನಿಸಿವೆ.

ಮತ್ತಷ್ಟು ಓದು »

10
ನವೆಂ

ಬೆಂಗ್ಳೂರಲ್ಲಿ ‘ಸ್ಲಟ್ ವಾಕ್’ ಆವಶ್ಯಕತೆಯಿದೆಯಾ?

-ರಶ್ಮಿ ಕಾಸರಗೋಡು

ಮಾಜದಲ್ಲಿ ಮಹಿಳೆಗೆ ಸ್ವಾತಂತ್ರ್ಯ ಬೇಕೇ ಬೇಕು. ಆ ಸ್ವಾತಂತ್ರ್ಯವನ್ನು ವ್ಯಕ್ತಪಡಿಸಲು ಚಿಕ್ಕದಾದ ಬಟ್ಟೆತೊಟ್ಟು ಅಂಗಾಂಗಳನ್ನು ಪ್ರದರ್ಶಿಸಿ ಬೀದಿಗಿಳಿಯುವ ಆವಶ್ಯಕತೆ ಇದೆಯೇ? ಹೀಗೊಂದು ಪ್ರಶ್ನೆ ಕಾಡಿದ್ದು ಸ್ಲಟ್ ವಾಕ್ ಬಗ್ಗೆ ಕೇಳಿದಾಗಲೇ.

ಸ್ಲಟ್ ವಾಕ್ ‘ (ಅಸಭ್ಯ ನಡೆ)ಯ ಹುಟ್ಟು ಕೆನಡಾದಲ್ಲಾಗಿದ್ದರೂ, ಅದು ಬಹುಬೇಗನೆ ಎಲ್ಲಾ ರಾಷ್ಟ್ರಗಳಲ್ಲೂ ಹರಡಿ ಹೊಸ ದಿಶೆಯನ್ನೇ ಪಡೆದುಕೊಂಡಿದೆ ಎಂದು ಹೇಳಬಹುದು. ಕೆನಡಾದ ಪೊಲೀಸ್ ಅಧಿಕಾರಿಯೊಬ್ಬರು ಅತ್ಯಾಚಾರಕ್ಕೊಳಗಾಗುವುದನ್ನು ತಡೆಯಲು ಮಹಿಳೆಯರು ನೀತಿಗೆಟ್ಟವರಂತೆ ಉಡುಪು ಧರಿಸಕೂಡದುಎಂದು ಸಲಹೆ ನೀಡಿದರು. ಅಷ್ಟಕ್ಕೇ ಜಗತ್ತಿನೆಲ್ಲೆಡೆ ಪ್ರತಿಭಟನೆ ಆರಂಭವಾಗಿಬಿಟ್ಟಿತು. ‘ಸ್ಲಟ್ ಎಂಬ ಪದವನ್ನೇ ಹಿಂತೆಗೆದುಕೊಳ್ಳಬೇಕೆಂದು ಮಹಿಳೆಯರು ಬೀದಿಗಿಳಿದರು. ಚಿಕ್ಕದಾದ ಸ್ಕರ್ಟ್, ಬಿಕಿನಿ ಟಾಪ್, ಸ್ಲೀವ್ ಲೆಸ್, ಬ್ಯಾಕ್ ಲೆಸ್ ಒಟ್ಟಾರೆ ಎಲ್ಲಾ ಲೆಸ್ ಆಗಿರುವ ಉಡುಗೆ ತೊಟ್ಟು ಮಹಿಳಾಮಣಿಗಳು ಪ್ರತಿಭಟನೆ ಮಾಡಿದರು.

ಅತ್ಯಾಚಾರಕ್ಕೆ ಮಹಿಳೆಯರ ಉಡುಗೆ ಮಾತ್ರ ಕಾರಣವೇ? ಎಂಬ ಪ್ರಶ್ನೆ ಅವರದ್ದಾಗಿತ್ತು. ಅದೇ ವೇಳೆ ನಾವು ಪ್ರಚೋದನಾಕಾರಿ ಉಡುಗೆ ತೊಡುವ ಹಕ್ಕುಳ್ಳವರು, ನಾವು ಯಾವುದೇ ರೀತಿಯಲ್ಲಿ ದಿರಿಸು ಧರಿಸಿದರೆ ಏನಿವಾಗ? ಎಂಬ ವಾದವನ್ನು ಅವರು ಉಡುಗೆಗಳೇ ಪ್ರತಿಪಾದಿಸುತ್ತಿದ್ದವು. ಹಾಗಂತ ಈ ಪ್ರತಿಭಟನೆಯಲ್ಲಿ ಭಾಗವಹಿಸಿದವರು ಸಾಮಾನ್ಯ ಮಹಿಳೆಯರಾಗಿರಲಿಲ್ಲ. ಬದಲಾಗಿ ಸ್ವೇಚಾಚಾರ ಬಯಸುವ ಮಹಿಳೆಯರೇ ಆಗಿದ್ದರು ಎಂಬುದು ಗುರುತಿಸಬೇಕಾದ ಅಂಶ.

ಸರಿ, ಪುರುಷನಂತೆ ಮಹಿಳೆಗೂ ಕೂಡಾ ಎಲ್ಲಾ ಹಕ್ಕು, ಸ್ವಾತಂತ್ರ್ಯ ಇದೆ. ಆಕೆ ಪುರುಷರಂತೆಯೇ ಮದ್ಯಪಾನ ಮಾಡಬಹುದು, ಸ್ವಚ್ಛಂದ ಲೈಂಗಿಕತೆಯ ಅಭೀಪ್ಸೆಯನ್ನು ವ್ಯಕ್ತಪಡಿಸಬಹುದು, ತನಗೆ ಬೇಕಾದಂತೆ ವರ್ತಿಸಲು, ದಿರಿಸು ತೊಡಲು ಎಲ್ಲಾ ರೀತಿಯಲ್ಲೂ ಆಕೆ ಅರ್ಹಳೇ. ಆದರೆ ಇದನ್ನು ವ್ಯಕ್ತಪಡಿಸಲು ಬಿಗಿಯಾದ, ತುಂಡು ಬಟ್ಟೆ ತೊಟ್ಟು ಪರೇಡ್ ನಡೆಸಬೇಕಾದ ಆವಶ್ಯಕತೆ ಇದೆಯೇ? ವಿದೇಶಿಗಳ ವಿಷಯ ಬಿಡಿ, ಅದೂ ಭಾರತದಲ್ಲಿ ಇಂತಹ ಸ್ಲಟ್್ವಾಕ್ ಬೇಕೆ? ಈಗಾಗಲೇ ಭಾರತದ ಭೋಪಾಲ್, ನವದೆಹಲಿ, ಮುಂಬೈ ಮುಂತಾದ ನಗರಗಳಲ್ಲಿ ಸ್ಲಟ್ ವಾಕ್ ನಡೆದಿದೆ. ಇದೀಗ ಬೆಂಗಳೂರಿನಲ್ಲಿ ಡಿಸೆಂಬರ್ 5ಕ್ಕೆ ಸ್ಲಟ್ ವಾಕ್ (ಗೆಜ್ಜೆ ಹೆಜ್ಜೆ) ನಡೆಸಲು ಮುಹೂರ್ತ ಇಟ್ಟಾಗಿದೆ.

ಮತ್ತಷ್ಟು ಓದು »

9
ನವೆಂ

ಯಡಿಯೂರಪ್ಪ ರಾಜಕೀಯದಲ್ಲಿ ‘ಮಾಜಿ’ ಆಗಿದ್ದಾರೆಯೇ?

-‘ಸಿದ್ಧಾರ್ಥ

೩೩ ವರ್ಷಗಳ ವೃತ್ತಿ ಜೀವನದಲ್ಲಿ ಅರ್ಧಾಂಶಕ್ಕೂ ಹೆಚ್ಚು ಕಾಲ ಅಧಿಕಾರಕ್ಕೆ ರಾಜಕಾರಣಿಗಳ ಪತ್ರಿಕಾ ಕಾರ್ಯದರ್ಶಿಯಾಗಿ ಆಪ್ತ ಸಿಬ್ಬಂದಿ ವರ್ಗದಲ್ಲಿ ಕೆಲಸ ಮಾಡಿರುವ ನನಗೆ ಅಧಿಕಾರ ತರುವ ಸಂತೋಷ, ಅಧಿಕಾರ ತ್ಯಾಗದಿಂದ ಬರುವ ವಿಷಾದ ಎರಡನ್ನೂ ಅತೀ ಸಂಮೀಪದಿಂದ ನೋಡಿ ಅನುಭವಿಸುವ ಅವಕಾಶ ಸಿಕ್ಕಿದೆ. ಅಧಿಕಾರ ಹೋದ ಕೂಡಲೇ, ಚುನಾವಣೆ ಸೋತ ಕೂಡಲೇ, ಆಕಾಶವೇ ಕಳಚಿ ಬಿದ್ದಂತೆ ಮೂಲೆಗೆ ಬೀಳುವ ರಾಜಕಾರಣಿಗಳನ್ನು, ಹೋದದ್ದು ಅಧಿಕಾರ ತಾನೇ? ಎಂದು sportive DV ಆಗಿ ನಗು ಮುಖ ಧರಿಸುವ ಧುರೀಣರನ್ನು ನೋಡಿದ್ದೇನೆ. ಹೊಟ್ಟೆಯಲ್ಲಿನ ನೋವು, ಮತ್ಸರ, ಈರ್ಷೆಗೆ ಸಿಲುಕಿ ಉತ್ತರಾಧಿಕಾರಿಯ ಪ್ರಮಾಣ ವಚನ ಸಮಾರಂಭಕ್ಕೆ ಗೈರುಹಾಜರಾದ ನಿರ್ಗಮಿತ ಮುಖ್ಯಮಂತ್ರಿಗಳನೇಕರನ್ನು ನೋಡಿದ್ದೇನೆ. ಅಧಿಕಾರ ಗ್ರಹಣದ ನಂತರ ಖುದ್ದಾಗಿ ಕಛೇರಿಗೆ ಕೊಂಡೊಯ್ದು ಪ್ರತಿಷ್ಠಾಪಿಸಿ ಶುಭ ಹಾರೈಸಿ ಹಗುರ ಹೃದಯದೊಂದಿಗೆ ಖಾಸಗಿ ವಾಹನದಲ್ಲಿ ಮನೆಗೆ ತೆರಳಿದ ವಿವೇಕಿಗಳನ್ನು, ಸಾಮಾನ್ಯ ಶಾಸಕರಾಗಿ ಅತೀವ ಉತ್ಸ್ಸಾಹ ದಿಂದ ಶಾಸನ ಸಭೆಗೆ ಮರಳಿ ಕ್ರಿಯಾತ್ಮಕವಾಗಿ ಕಲಾಪಗಳಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡಿದ ಹಿರಿಯರನೇಕರ ಮಾತುಗಳು ನನ್ನ ಕಿವಿಗಳಲ್ಲಿ ಇನ್ನೂ ರಿಂಗಣಿಸುತ್ತಿವೆ.

 

ಇವೆಲ್ಲವೂ ನೆನಪಾದದ್ದು ಯಡಿಯೂರಪ್ಪನವರು ಅಧಿಕಾರ ಕಳೆದುಕೊಂಡ ಮರುಕ್ಷಣವೇ ಅವರ ಮನೆಯ ಮುಂದೆ ತುಂಬಿದ್ದ ಗೋಜುಗೋಜು ಜನ ಜಂಗುಳಿ ಏಕಾಏಕಿ ಮಾಯವಾದಾಗ. ಅಧಿಕಾರ ತರುವ ಜನ ಭಾಹುಳ್ಯವನ್ನು ಅಧಿಕಾರ ನಂತರದ ಜನ ವಿಯೋಗವನ್ನು ಪತ್ರಿಕೆಯೊಂದು ಛಾಯಾಚಿತ್ರಗಳ ಮೂಲಕ ಸಮರ್ಥವಾಗಿ ಪ್ರತಿಬಿಂಬಿಸಿತ್ತು. ಗಾದೆ ಮಾತೇ ಇಲ್ಲವೇ. ನಗುವಾಗ ಎಲ್ಲ ನೆಂಟರು ಅಳುವಾಗ ಯಾರೂ ಇಲ್ಲ.

ಮತ್ತಷ್ಟು ಓದು »

8
ನವೆಂ

ಕರ್ನಾಟಕದಲ್ಲಿ ಬೇಲಿಯೇ ಎದ್ದು ಹೊಲ ಮೈಯುತ್ತಿದೆ ನೋಡ್ರಣ್ಣಾ.!

ಮಹೇಶ್ ಎಂ. ಆರ್.

ನಿಯಮಗಳು ಮಾಡುವುದೇ ಮುರಿಯೋದಕ್ಕೆ ಎಂಬ ಮಾತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಒಪ್ಪುತ್ತದೆ. ಅನೇಕ ಬಾರಿ ಕರ್ನಾಟಕ ಚಲನಚಿತ್ರ ಮಂಡಳಿ ವಿದಿಸಿದ ನಿಯಮಗಳನ್ನು ಪರಬಾಶೆ ಚಿತ್ರಗಳ ವಿತರಕರು ಗಾಳಿಗೆ ತೂರಿರುವುದನ್ನು ನಾವು ಕಾಣಬಹುದು. ಈ ಹಿಂದೆ ಹಿಂದಿಯ ರಾವಣ, ಕೈಟ್ಸ್, ತೆಲುಗಿನ ದೂಕುಡು, ಊಸರವಳ್ಳಿ ಚಿತ್ರ ಬಿಡುಗಡೆ ಸಮಯದಲ್ಲಿ ಈ ನಿಯಮಗಳನ್ನು ಪಾಲಿಸಲಾಗಿಲ್ಲ. ಅದೇ ಪರಿಪಾಠ ಈ ಸಲದ ದೀಪಾವಳಿ ಸಮಯದಲ್ಲೂ ಮುಂದುವರೆದಿದೆ. ಆದರೆ ಈ ಬಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೇ ಮುಂದೆ ನಿಂತು, ತಾನು ಸ್ವತ: ಮಾಡಿದ ನಿಯಮಗಳನ್ನು ಹಿಂದಿಯ ರಾ ವನ್, ತಮಿಳಿನ ವೆಲಾಯುದಂ, ೭ ಅಮ್ ಅರಿವು ಚಿತ್ರಗಳ ಮೂಲಕ ಕಸದ ಬುಟ್ಟಿಗೆ ಎಸೆದಿದೆ. ಮಂಡಳಿಯ ಸಲಹಾ ಸಮಿತಿ ಸದಸ್ಯರು ಈ ಮೂರು ಚಿತ್ರಗಳನ್ನು ಕರ್ನಾಟಕದಲ್ಲಿ ನಿಯಮ ಮೀರಿ ಬಿಡುಗಡೆಗೊಳಿಸಲು ಅನುಮತಿ ನೀಡಿದ್ದಾರೆ ಎಂಬ ಸುದ್ದಿ ಇತ್ತೀಚಿಗೆ ಡೆಕ್ಕನ್ ಹೆರಾಲ್ಡಿನಲ್ಲಿ ಪ್ರಕಟವಾಗಿತ್ತು. (The members of the advisory board of the Karnataka Film Chamber of Commerce (KFCC) have consented to the release of Ra. One, Velayudham, and 7 Aum Arivu during Deepavali this week. And because of this no Kannada films are releasing this week.) ಇದು ಆಶ್ಚರ್ಯವಾದರೂ ಸತ್ಯ. ಕನ್ನಡ ಚಿತ್ರರಂಗದ ಏಳಿಗೆಗೆ ಸಲಹೆಗಳನ್ನು ನೀಡಬೇಕಾದ ಮಂಡಳಿಯ ಸಲಹಾ ಸಮಿತಿ ಸದಸ್ಯರು ಪರಬಾಶೆ ಚಿತ್ರಗಳನ್ನು ನಿಯಮ ಮೀರಿ ಬಿಡುಗಡೆ ಮಾಡುವಂತೆ ಸಲಹೆ ಮಾಡಿದ್ದಾರೆ.! ಕನ್ನಡ ಚಿತ್ರಗಳ ಮಾರುಕಟ್ಟೆ ಬೆಳೆಸುವ ಬಗ್ಗೆ ಸಲಹೆ ನೀಡಬೇಕಾದವರಲ್ಲಿ ಕೆಲವರು ಪರಬಾಶೆ ಚಿತ್ರ ವಿತರಣೆ ಹಕ್ಕನ್ನು ಪಡೆದುಕೊಂಡು, ಕನ್ನಡ ಚಿತ್ರಗಳು ಬಿಡುಗಡೆ ಆಗದ ಹಾಗೆ, ಈಗಾಗಲೇ ಬಿಡುಗಡೆ ಆದ ಚಿತ್ರಗಳಿಗೆ ಚಿತ್ರಮಂದಿರ ಸಿಗದ ಹಾಗೆ ಪರಿಸ್ಥಿತಿ ನಿರ್ಮಿಸಿ ಕನ್ನಡ ಚಿತ್ರರಂಗದ ಬಗೆಗಿನ ತಮ್ಮ ಇಚ್ಚಾಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಇದು ಚಲನಚಿತ್ರ ಮಂಡಳಿಯ ಕರ್ಮಕಾಂಡ.

ಮತ್ತಷ್ಟು ಓದು »

7
ನವೆಂ

“ನನ್ನೂರು ಕೊಳ್ಳೇಗಾಲ …!!! ಹೆದರಿಕೊಳ್ಳಬೇಡಿ… ಮಾಟ-ಮಂತ್ರಕ್ಕೆ ಪ್ರಸಿದ್ಧಿ ಅಲ್ಲ…!”

-ಮೋಹನ್‍ ವಿ.ಬಬ್ಲಿ, ಚಿಕ್ಕಮಗಳೂರು

ಕೊಳ್ಳೇಗಾಲ ಎಂಬ ಹೆಸರು ಕೇಳಿದರೆ ಸಾಕು ಇಡೀ ಕರ್ನಾಟಕವೇ ಬೆಚ್ಚಿಬೀಳುತ್ತದೆ. ‘ಕೊಳ್ಳೇಗಾಲದವರು ನಾವು’ ಎಂದುಬಿಟ್ಟರೆ ಸಾಕು ಸುತ್ತಲಿನವರ ಕಣ್ಣು ಕಿವಿ ಅರಳುತ್ತದೆ. ಕೊಳ್ಳೇಗಾಲದ ಒಂದು ರುಪಾಯಿಯ ಒಂದು ನಿಂಬೇಹಣ್ಣಿಗೆ ಬೇರೆಯ ಕಡೆ ಕಡಿಮೆ ಅಂದರು ಸಾವಿರ ರೂಗಳು! ಅಲ್ಲಿನ ಮಾಟಮಂತ್ರವೇ ಇದಕ್ಕೆಲ್ಲ ಕಾರಣ. ವಾಮಮಾರ್ಗಕ್ಕೆ ಕೊಳ್ಳೇಗಾಲ ಪ್ರಸಿದ್ಧಿ ಎಂಬುದು ಎಲ್ಲರ ಅಂಬೋಣ. ಎಷ್ಟೋ ಜನ ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. 

ನಾನಿರುವ ಚಿಕ್ಕಮಗಳೂರಿನಲ್ಲಿ ಕೊಳ್ಳೆಗಾಲದ ಮಾಂತ್ರಿಕರು ಎಂದುದುರಿಕೊಂಡು ಎಷ್ಟೋ ಜನ ಜೊತಿಷ್ಯಾಲಯಗಳನ್ನು ತೆರೆದಿದ್ದಾರೆ. ಸಿನಿಮಾಗಳಲ್ಲಿಯೂ ಕೂಡ ಹಾಗೆ. ಮಾಟಮಂತ್ರದ ವಿಚಾರ ಬಂದರೆ ಕೊಳ್ಳೇಗಾಲದ ಹೆಸರನ್ನು ಬಿಂಬಿಸುತ್ತಾರೆ. ‘ನೀವು ಮಾಟಮಂತ್ರಕ್ಕೆ ಫೇಮಸ್ ಅಲ್ವಾ’ ಎಂದು ಸಾವಿರಾರು ಜನ ನನ್ನನ್ನು ಕೇಳಿದ್ದಾರೆ. ಮೈಸೂರಿನ ಮಾನಸಗಂಗೋತ್ರಿಯಲ್ಲಿ ಓದುತ್ತಿರುವಾಗ ಎಷ್ಟೋ ಉಪನ್ಯಾಸಕರೂ ಕೂಡ ನನ್ನನ್ನು ಮಾಟ ಮಾಡಿಸಿಕೊಡಿ ಎಂದು ಅಹವಾಲಿಸಿಕೊಂಡಿದ್ದಾರೆ.

ನಿಮ್ಮೆಲ್ಲರ ಪ್ರಶ್ನೆ… ಹಾಗಾದರೆ ಕೊಳ್ಳೇಗಾಲ ಮಾಟಮಂತ್ರಕ್ಕೆ ಫೇಮಸ್ ಅಲ್ವಾ? ಖಂಡತಿವಾಗಿಯೂ ಇಲ್ಲ. ಕೊಳ್ಳೇಗಾಲದಲ್ಲಿ ದೇವಾಂಗ ಬೀದಿ ಎಂಬ ಒಂದು ಬೀದಿ ಇದೆ. ಮಾಟಮಂತ್ರಕ್ಕೆ ಅವರೇ ಪ್ರಸಿದ್ಧಿ. ನಮ್ಮ ಮನೆ ಇರುವುದು ಅದೇ ಬೀದಿಯಲ್ಲಿ! ನಮ್ಮ ಪಕ್ಕದ ಮನೆಯವನೂ ಮಾಟಮಂತ್ರಕ್ಕೆ ಫೇಮಸ್! ( ನಾವು ಇನ್ನು ಫೇಮಸ್ ಆಗಿಲ್ಲ! ). ಇದೇನಿದು, ಮಾಟಮಂತ್ರವೇ ಇಲ್ಲ ಎಂದು ಅದರ ಬಗ್ಗೆಯೇ ಹೇಳುತ್ತಿರುವನಲ್ಲ ಎಂದುಕೊಂಡು ಹುಬ್ಬೇರಿಸಬೇಡಿ. ಹೌದು ಕೊಳ್ಳೇಗಾಲದಲ್ಲಿ ಸರಿಸುಮಾರು ೩೦ ವರ್ಷಗಳ ಹಿಂದೆ ವಾಮಾಚಾರ ಅವ್ಯಾಹತವಾಗಿ ನಡೆಯುತ್ತಿತ್ತು. ನಿಮ್ಮ ಶತ್ರುಗಳ ಪತನಕ್ಕೆ ಸೂತ್ರ ರೂಪಿಸಿಕೊಡುತ್ತಿದ್ದರು. ಮತ್ತಷ್ಟು ಓದು »

7
ನವೆಂ

ಹೈಟೆಕ್ ಬಹಿಷ್ಕಾರ…!

– ರಾಕೇಶ್ ಶೆಟ್ಟಿ

‘ಬೇರೆ ಬೇರೆ ವಿಷಯಗಳಲ್ಲಿ ಒಟ್ಟಿಗೆ ಸೇರಿ ಕೆಲಸ ಮಾಡಿದ ಗೆಳೆಯರು ಈಗ ಜನಲೋಕಪಾಲ ವಿಷಯವಾಗಿ ತಾತ್ವಿಕ ಭಿನ್ನಭಿಪ್ರಾಯಗಳನ್ನು ಇಟ್ಟುಕೊಂಡು ವಿರುದ್ಧವಾಗಿ ಮಾತನಾಡುತ್ತಿರುವುದು ಬೇಸರತರಿಸಿದೆ ‘ ಅಂತ ಆ ಗೆಳೆಯ ಕಳೆದ ಆಗಸ್ಟಿನಲ್ಲಿ ಫೆಸ್ಬುಕ್ಕಿನಲ್ಲಿ ಬರೆದುಕೊಂಡಿದ್ದರು.ಅದಕ್ಕೆ ನಾನು ‘ಸಾಮಾಜಿಕ ಕಳಕಳಿಯಿರುವ ಎಲ್ಲ ಮನಸ್ಸುಗಳು ಅಂತಿಮವಾಗಿ ಬಯಸುವುದು ಒಳ್ಳೆಯ ಸಮಾಜವನ್ನಷ್ಟೇ,ತಾತ್ವಿಕ ಭಿನ್ನಭಿಪ್ರಾಯ್ಗಳನ್ನ ವೈಯುಕ್ತಿಕವಾಗಿ ನೋಡಬೇಡಿ’ ಅನ್ನುವಂತೆ ಬರೆದಿದ್ದೆ.ಅವರೂ ಅದನ್ನ ಇಷ್ಟ ಪಟ್ಟಿದ್ದರು.

ಅದಾಗಿ ಬಹುಷಃ ೩-೪ ದಿನಗಳು ನಾನು ಊರಿನಲ್ಲಿ ಇರಲಿಲ್ಲ,ವಾಪಸ್ಸು ಬಂದವನು ಫೇಸ್ಬುಕ್ ತೆಗೆದಾಗ ಗೊತ್ತಾಗಿದ್ದು , ತಾತ್ವಿಕ ಭಿನ್ನಾಭಿಪ್ರಾಯಗಳನ್ನ ವೈಯುಕ್ತಿಕ ಮಟ್ಟಕ್ಕೆ ಆ ಗೆಳೆಯ ಮಾತ್ರವಲ್ಲದೆ ಅವನ ‘ಬಳಗ’ವೂ ತೆಗೆದುಕೊಂಡು ನನಗೆ ಅವರ ಗೂಗಲ್ ಗುಂಪಿನಿಂದ,ಫೆಸ್ಬುಕ್ಕ್ ಗೆಳೆತನದಿಂದ ‘ಹೈಟೆಕ್ -ಬಹಿಷ್ಕಾರ’ ಹಾಕಿದೆ ಅಂತ…! ಈ ಹೈಟೆಕ್ ಬಹಿಷ್ಕಾರ ಹಾಕಿಸಿಕೊಳ್ಳುವಂತೆ ನಡೆದಿದ್ದಾರೂ ಏನು ಅಂತ ನೋಡ ಹೊರಟರೆ….

ಅಣ್ಣಾ ಹಜ಼ಾರೆ ಜನಲೋಕಪಾಲ ಮಸೂದೆಗಾಗಿ ಜಂತರ್ ಮಂಥರ್ನಲ್ಲಿ ಉಪವಾಸ ಕುಳಿತ ದಿನಗಳಿವೆಯಲ್ಲ ಅವು ಈ ದೇಶದಲ್ಲಿ ಇನ್ನೇನು ಬದಲಾವಣೆ ಸಾಧ್ಯವೇ ಇಲ್ಲ ಅನ್ನುವಂತಿದ್ದ ಜನರ ಮನಸ್ಸಿಗೆ ಆಶಾಭಾವನೆ ಮೂಡಿಸಿದ ದಿನಗಳು.ಆಗ ’ಈ ಹೋರಾಟ ಗೆಲ್ಲಲೇ ಬೇಕು’ ಅಂದವರು ಅದ್ಯಾಕೋ ಮತ್ತೆ ಅಣ್ಣಾ ’ರಾಮ ಲೀಲಾ ಮೈದಾನ’ಕ್ಕೆ ಬಂದು ನಿಂತಾಗ ’ಪ್ರಜಾಪ್ರಭುತ್ವದ ಬುಡಕ್ಕೆ ಬೆಂಕಿ ತಗುಲಿದೆ’ ಅನ್ನಲಾರಂಭಿಸಿದರು.ಆಗಲೇ ಅಣ್ಣಾ ಹೋರಾಟವನ್ನು ಬೆಂಬಲಿಸುತಿದ್ದವರು-ವಿರೋಧಿಸುವ ಗೆಳೆಯರ ನಡುವೆ ತಾತ್ವಿಕ ಭಿನ್ನಾಭಿಪ್ರಾಯಗಳ ಚರ್ಚೆ ಫ಼ೇಸ್ಬುಕ್ಕಿನಲ್ಲಿ ಶುರುವಾಗಿದ್ದು.ಈ ಹೋರಾಟ ಸರಿಯಿಲ್ಲ ಅನ್ನಲು ಅವರುಗಳು ಏನೇನು ಅಂಶ ಮುಂದಿಡುತಿದ್ದರೋ, ಹೋರಾಟ ಹೇಗೆ ಸರಿ ಅಂತ ನಾವುಗಳು ನಮ್ಮ ವಾದ ಮುಂದಿಟ್ಟಿದ್ದೆವು. ಮತ್ತಷ್ಟು ಓದು »

4
ನವೆಂ

“ಫೇಸ್ಬುಕ್‍” ನಿಸ್ತಂತು ಕನ್ನಡ ಸಾಹಿತ್ಯ – ಒಂದು ಇಣುಕು ನೋಟ!

– ರವಿ ಮುರ್ನಾಡು

ನವೆಂಬರ‍್ ತಿಂಗಳು ಬಂತಲ್ಲ…!  ಸಂತಸದ ಸಂಗತಿಯೆಂದರೆ, ಮಾನ್ಯ ಕಂಬಾರರು  ಜ್ಞಾನಪೀಠ ಪ್ರಶಸ್ತಿ ತಂದು,ಈ “ನವೆಂಬರ‍್ ಕನ್ನಡದ ಹಬ್ಬ” ವನ್ನು ಶ್ರೀಮಂತಗೊಳಿಸಿದರು. ಹನ್ನೊಂದು ತಿಂಗಳು ನಿದ್ದೆಗೆ ಬಿದ್ದು, ಒಂದು ತಿಂಗಳು ಭಾರೀ ಪ್ರಚಾರ ಪಡೆದುಕೊಳ್ಳುವ ಈ “ಕನ್ನಡದ ಹಬ್ಬ” ಅಂದಾಗ ಅದರ ಇನ್ನಿಲ್ಲದ ದೌರ್ಬಲ್ಯಗಳು ಬೀದಿಗೆ ಬರುತ್ತವೆ. ಕನ್ನಡದ ಕಾರ್ಯಕ್ರಮಗಳಲ್ಲಿ ವಿದೇಶಿ ಮೇಕಪ್‍ ಮೆತ್ತಿಕೊಂಡು, ಅರೆಬರೆಯ ಫ್ಯಾಷನ್‍ ಷೋ ವೇದಿಕೆಯಲ್ಲಿ ಇಂಗ್ಲೀಷ್‍- ಹಿಂದಿ ಹಾಡಿಗೆ ನೃತ್ಯ ಮಾಡುವ  ಅವೇಶಗಳು ಮೈಮೇಲೆ ಬರುತ್ತವೆ. ರಾಷ್ಟ್ರದಲ್ಲಿ ಸಾಹಿತ್ಯಕ್ಕಾಗಿ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡಿಗರ ಆಡಂಭರ ಇದು !. ಅಭಿಮಾನದ ಬಗ್ಗೆ ಮಾತು ಒಕ್ಕಣಿಸುವಾಗ ಹೊರಗೆಡವಲಾರದ ನೋವು. ದೇಶದ ಇತರ ರಾಜ್ಯಗಳ ಜನರಲ್ಲಿರುವ ಅವರ ಮಣ್ಣಿನ ಭಾಷಾಭಿಮಾನಕ್ಕೆ ಹೋಲಿಸಿದಾಗ, ನಮ್ಮಲ್ಲಿ ಪ್ರಚಾರಕ್ಕೆ ಅಭಿಮಾನದ ಸೋಗು ಹಾಕಿದ ಉದಾಹರಣೆಗಳೇ ಹೆಚ್ಚು. ಒಂದು ಕಡೆ ರಾಜ್ಯದ ಹೃದಯ ಭಾಗಗಳೇ ತಾಯಿ ಭಾಷೆಯನ್ನು ಹರಾಜಿಗಿಟ್ಟಿವೆ. ಇನ್ನೊಂದೆಡೆ ನೆಲ ನಮ್ಮದು ಅಂತ ಕಾಳಗಕ್ಕಿಳಿದು, ಜೈಲೊಳಗೆ ಬಂಧಿಯಾದಂತೆ, ಕನ್ನಡ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತಿದೆ.  ಯಾಕೆ ಹೀಗೆ? ಈ ನವೆಂಬರ‍್ ತಿಂಗಳಲ್ಲಿ ಮಾತ್ರ ಏಕೆ ಕನ್ನಡಕ್ಕೆ ಆವೇಶ..?
ಎಲ್ಲವನ್ನು ಮೌನದ ಕನ್ನಡಿಯಲ್ಲಿ ನೋಡಿದಾಗ ಕನ್ನಡದ ಭಾವಚಿತ್ರ ಒಡೆದ ಗಾಜಿನಂತೆ ನೂರಾರು ಬಿರುಕುಗಳು ಅಟ್ಟಹಾಸಗೈಯ್ಯುತ್ತಿವೆ. ಹೊರ ರಾಜ್ಯಗಳಿಂದ ಉದ್ಯೋಗಕ್ಕಾಗಿ ಬಂದ ಪರಭಾಷಿಗರು ಕನ್ನಡದ ಬಗ್ಗೆ ಹಿಗ್ಗಾಮುಗ್ಗ ಮಾತಾಡಿದರು. ಕನ್ನಡದ ಮನಸ್ಸುಗಳು ನೋವು ಅನುಭವಿಸಿದ್ದು  ಯಾವತ್ತಿಗೂ ಮರೆತಿಲ್ಲ. ಎಲ್ಲಿ ಹೋದವು ಭಾಷಾಭಿವೃದ್ಧಿಗೆ ಸರಕಾರ ತಂದ ನೀತಿಗಳು ?. ಶಾಲಾ-ಕಾಲೇಜುಗಳಲ್ಲಿ ಭಾಷೆಯ ಬಗೆಗಿನ ಲಘು ವಿಚಾರಗಳು ವಿದ್ಯಾರ್ಥಿಗಳಲ್ಲಿ ಅಸಡ್ಡೆಗೆ ದಾರಿ ತೋರಿಸುತ್ತಿದೆ. ಕನ್ನಡ ಸಂಘಟನೆಗಳಲ್ಲಿ ಮುತುವರ್ಜಿ ವಹಿಸಿ ಬೀದಿ-ಬೀದಿಯಲ್ಲಿ ಕನ್ನಡದ ಆವೇಷ ಉಕ್ಕಿಸುವ ಉಮ್ಮಸ್ಸು ಮಂಕಾಗಿದೆ. ಗಣ್ಯ ವ್ಯಕ್ತಿಗಳ ರಣ ಕಹಳೆ ಮೊಳಗಿಸುವ ಕನ್ನಡದ ಬಗೆಗಿನ ಮಾತುಗಳು ಜಡ ಹಿಡಿದು ಮಲಗಿವೆ. ಇದು ಇಂದಿನ ಕನ್ನಡದ ದೌರ್ಬಲ್ಯಗಳಲ್ಲಿ ಮೊದಲು ಕಾಣುವಂತಹದ್ದು. ಆಂಗ್ಲ ಮತ್ತು ಹಿಂದಿ ಭಾಷೆಗಳ ನಡುವೆ ಬೇಧಭಾವ  ಭಿತ್ತಿದ ಹಲವು ಉದಾಹರಣೆಗಳು ಹಲವು ವಿಧದಲ್ಲಿ ಅಭಿಮಾನ ಕುಸಿಯುವಂತೆ ಮಾಡಿದೆ ಅಂತ ಖೇಧ ವ್ಯಕ್ತಪಡಿಸುವುದು ಅನಿರ್ವಾಯ.  ಪ್ರಶಸ್ತಿ ಕೊಡುವುದು ಪ್ರಚಾರಕ್ಕೆ ಅಲ್ಲ. ಅದು ಹೊಣೆಗಾರಿಕೆಯನ್ನು ಹೆಚ್ಚಿಸಲಿಕ್ಕೆ. ಪ್ರಶಸ್ತಿ ಅನ್ನುವ ಪದದ  ಇನ್ನೊಂದು ಅರ್ಥ ಇದು. ಟಿ.ವಿ.ಮಾಧ್ಯಮ, ಆಕಾಶವಾಣಿ ಮಾಧ್ಯಮಗಳಂತೂ ಕನ್ನಡದ ಹೆಸರಿಟ್ಟು ಕನ್ನಡಿಗರನ್ನೇ ಬೀದಿಗೆ ತರುತ್ತಿವೆ. ಇದರ ಬಗ್ಗೆ ಪ್ರಶ್ನಿಸಿದವರಿಗೆ ಕನ್ನಡದ ನೆಲದಲ್ಲೇ ಕನ್ನಡತನದ ಚುಕ್ಕಾಣಿ ಹಿಡಿದವರ ಉತ್ತರ ಮೌನ.

ಮತ್ತಷ್ಟು ಓದು »