ಕನ್ನಡಕ್ಕಿಂತ ತಮಿಳು ಯಾವುದರಲ್ಲಿ ಮುಂದಿದೆ?
ಆತನಿಗೆ ಮದುವೆಯ ಮೊದಲೆ ಗೊತ್ತಿತು!?
ಯಾವುದೇ ತೊಂದರೆಯಿಲ್ಲದೆ ಸುಂದರವಾಗಿ ಜೀವನಮಾಡುತ್ತಿದ್ದ ವಿದ್ಯಾವಂತಳಾದ ಆಕೆಯ ಬಾಳಿನಲ್ಲಿ ಮದುವೆಯ ಸಂದರ್ಭವೊಂದು ಬಂದಿತು. ದೂರದ ಮುಂಬೈಯಿಂದ ಯುವಕನೊರ್ವ ಆಕೆಯನ್ನು ನೋಡಲು ಬಂದ. ಆ ವರನಿಗೆ ವಧು ಇಷ್ಟವಾದಳು. ಮುಂಬೈಯಲ್ಲಿರುವ ಹುಡುಗ, ಒಳ್ಳೆಯ ಸಂಪಾದನೆ, ಸುಂದರ, ಇದೆಲ್ಲವನ್ನು ಕಂಡ ವಧುವಿನ ಕಡೆಯವರಿಗೂ ವರ ಇಷ್ಟವಾದನು. ವರನ ಕಡೆಯವರು ಆತುರದಲ್ಲಿ ಮದುವೆಯನ್ನು ಪಿಕ್ಸ್ ಮಾಡಿದರು. ಮದುವೆಯೂ ಆಯಿತು. ಮದುವೆಯಾಗಿ ಮೊದಲ ಮಗುವಾಗುವ ಸಮಯದಲ್ಲಿ ಆಕೆಗೆ ತಿಳಿಯಿತು ನನಗೆ ಎಚ್ಐವಿ ಬಂದಿದೆ ಎಂದು. ಇದನ್ನು ಆಕೆಯ ಗಂಡ ಉಡುಗೊರೆಯಾಗಿ ನೀಡಿದ್ದ ಆತನಿಗೆ ಮದುವೆಗೆ ಮೊದಲೇ ಈ ರೋಗವಿದ್ದರೂ ಅದನ್ನು ಎಲ್ಲರೂ ಸೇರಿ ಮುಚ್ಚಿ ಹಾಕಿ ಆಕೆಯ ಜೀವನದಲ್ಲಿ ಆಟವಾಡಿದ್ದರು. ಆದರೆ ಸಂಘಟನೆಯ ಸಹಾಯ ಪಡೆದು ಎಆರ್ಟಿ ಚಿಕಿತ್ಸೆಯನ್ನು ಪಡೆದು ಎಲ್ಲರಂತೆ ಬದುಕುತ್ತಿದ್ದಾಳೆ. ನೋಡಿ ಈ ಮಾತನ್ನು ಎಚ್ಐವಿ ಪೀಡಿತೆಯಾದ ಅಮಾಯಕ ಹೆಣ್ಣುಮಗಳೊಬ್ಬಳು ಹೇಳುತ್ತಿರುವಂತಹದ್ದು. ಈ ರೀತಿ ಮೋಸವನ್ನು ಹೋಗುವುದಕ್ಕೆ ಮೊದಲು ವಿವಾಹ ಸಂಬಂಧವನ್ನು ಮಾಡುವಾಗ ನೀವೆಲ್ಲ ಸ್ವಲ್ಪ ಯೋಚನೆಮಾಡಿ ನಿರ್ಧಾರ ತೆಗೆದುಕೊಳ್ಳಿ. ಆವಾಗ ಮುಂದೆ ಪರಿತಪಿಸುವ ಅಗತ್ಯ ಬರಲ್ಲ. ಆ ಮಾತು ಆಗಿರಲಿ ಈಗ ಎಚ್ಐವಿ ಬಂದವರು ಏನು ಮಾಡುವುದು ಎಂಬುದರ ಬಗ್ಗೆ ಸ್ವಲ್ಪ ಗಮನಹರಿಸೋಣ. ಮತ್ತಷ್ಟು ಓದು 
ಹಳ್ಳಿಗರೇ ಕರೆಂಟ್ ಉಳಿಸಿ, ಎಂಜಿ ರೋಡಿಗೆ ಲೈಟ್ ಹಾಕಬೇಕು
ಪ್ರಪಂಚ ಹೀಗೆನೇ!
ಯಾರು ಪಾಲಿಸ್ತಾರೋ ಅವರ ಮೇಲೆಯೇ ಎಲ್ಲವನ್ನು ಹೇರಿ ಅರಾಮದಲ್ಲಿ ಇದ್ದು ಬಿಡುತ್ತೆ. ‘ಉಳಿಸಿ’ ಅಂತ ಸರ್ಕಾರ ಯಾವುದಾದ್ರು ಅಭಿಯಾನ ಮಾಡಿದ್ರೆ ಅದರ ಟಾರ್ಗೆಟ್ ಮಧ್ಯಮ ಇಲ್ಲವೇ ಕೆಳವರ್ಗವೇ ಆಗಿರುತ್ತೆ. ಅದು ನೀರುಳಿಸಿ ಎಂಬುದೋ, ಪೆಟ್ರೋಲ್ ಉಳಿಸಿ ಅಂತಲೋ, ಕಡೆಗೆ ವಿದ್ಯುತ್ ಉಳಿಸಿ ಅಂತಾನೋ ಇರಬಹುದು. ಇಲ್ಲಿ ‘ಉಳಿಸಬೇಕಾದವರು’ ಯಾವುದನ್ನು ಕಡಿಮೆ ಪಡೆಯುತ್ತಿರುತ್ತಾರೋ ಅವರೇ! ವಿಚಿತ್ರ, ಆದ್ರೂ ಸತ್ಯ.
ಉದಾಹರಣೆಗೆ ನೀರು ಉಳಿಸಿ-ಮಿತವಾಗಿ ಬಳಸಿ ಅಂತ ಹೇಳಲಾಗುತ್ತೆ. ಆದ್ರೆ ಅದನ್ನು ಪಾಲಿಸಬೇಕಾದ ಜನತೆಗೆ ವಾರಕ್ಕೆ ಒಮ್ಮೆಯೋ ಎರಡು ಬಾರಿಯೋ ನೀರು ಬಂದ್ರೆ ಅದೇ ಹೆಚ್ಚು. ಒಮ್ಮೆ ಎಲ್ಲಿಯಾದ್ರೂ ಈ ಜನರು ಈ ನಿಯಮಗಳನ್ನು ಪಾಲಿಸುವಲ್ಲಿ ಸೋತರೆ ನಾವೆಲ್ಲ ಬೊಬ್ಬೆ ಹಾಕಿ ಬಿಡ್ತೇವೆ. ಅದ್ರೆ ಆ ಬೊಬ್ಬೆಯಲ್ಲಿ ಸತ್ಯವೊಂದು ಮುಚ್ಚಿ ಹೋಗಿರುತ್ತೆ. ಒಬ್ಬ ಶ್ರೀಮಂತನ ಮನೆಯ ಟಾಯ್ಲೆಟ್ ನಲ್ಲಿ ಬಳಕೆಯಾಗುವ ನೀರಿನಷ್ಟು ಸಾಮಾನ್ಯ ಜನರ ಕುಡಿಯುವ ನೀರು ಶುದ್ಧವಾಗಿರಲ್ಲ.
ಅಜಕ್ಕಳರಿಗೇಕೆ ಈ ಅಸಹನೆ?
(ಡಾ.ಅಜಕ್ಕಳ ಗಿರೀಶ್ ಭಟ್ ಅವರ ಲೇಖನಕ್ಕೆ ಶುಭಶ್ರೀಯವರ ಉತ್ತರ ಇಲ್ಲಿದೆ – ನಿಲುಮೆ)
– ಶುಭಶ್ರೀ
ಈ ಪುಸ್ತಕವನ್ನು ಬರೆದಿರುವ ಡಾ. ಅಜಕ್ಕಳ ಗಿರೀಶ್ ಭಟ್ಟರು ತಾವು ಬರೆದ ಪುಸ್ತಕಕ್ಕೆ ಇಟ್ಟಿರುವ ಹೆಸರೇ ಶ್ರೀಯುತರ ಉದ್ದೇಶವು ತಾತ್ವಿಕ ನಿಲುವನ್ನು ಪ್ರತಿಪಾದಿಸುವುದಾಗಲೀ, ವಾದವೊಂದನ್ನು ಆರೋಗ್ಯಕರವಾಗಿನಡೆಸುವುದಾಗಲೀ ಅಲ್ಲವೆಂದೂ ವ್ಯಕ್ತಿಯ ತೇಜೋವಧೆಯನ್ನು ಮಾಡುವುದಕ್ಕಾಗಿ ಮಾತ್ರವೇ ಎಂದೂ ವೇದ್ಯವಾಗುವುದಿಲ್ಲವೇ? ಇಲ್ಲದಿದ್ದರೆ “ಕನ್ನಡಕ್ಕೇಕೆ ಕತ್ತರಿ?” ಎನ್ನುವ ಹೆಸರು ಸಾಕಾಗುತ್ತಿತ್ತು.
“ಶಂಕರಬಟ್ಟರಕತ್ತರಿ” ಎಂದು ಬರೆದಿರುವ ಉದ್ದೇಶವೇ ಡಾ. ಡಿ ಎನ್ ಎಸ್ ಅವರನ್ನು ಏಕಾಂಗಿ ಎಂದು ಬಿಂಬಿಸುವ ದುರುದ್ದೇಶದಿಂದ ಅಲ್ಲವೇ? ಪುಸ್ತಕದ ಹೆಸರಿನ ಬಗ್ಗೆ ಆಕ್ಷೇಪಾ ಯಾಕೆಂದರೆ ಅದರಲ್ಲಿ ಶಂಕರಭಟ್ಟರನ್ನು ಹಳಿಯುವ ಉಮ್ಮೇದಿಯೊಂದೇ ಕಾಣುತ್ತಿರುವುದು. ಡಾ. ಡಿ ಎನ್ ಶಂಕರಭಟ್ಟರ ವಿಚಾರಗಳ ಬಗ್ಗೆ ನಡುನಡುವೆ ತಮ್ಮ ವಾದಕ್ಕೆ ಅನುಕೂಲವಾಗುವಂತಹ ಸಾಲುಗಳನ್ನು ಮಾತ್ರಾ ಎತ್ತಿಕೊಂಡು ತಮಗೆ ತೋಚಿದಂತೆ ವಿಶ್ಲೇಷಿಸಿರುವಂತೆ ಕಾಣುತ್ತಿದೆ. ಯಾಕೆಂದರೆ ಅಚ್ಚಕನ್ನಡ ವರ್ಣಮಾಲೆಯೆಂದು ಅನೇಕ ಕಡೆ, ಬಹಳಷ್ಟು ಹಿಂದೆಯೇ ಈ ಮಹಾಪ್ರಾಣ ಬಿಟ್ಟ ವರ್ಣಮಾಲೆ ಪ್ರಕಟವಾಗಿದೆಯಲ್ಲವೇ?
ಮೂಲತಃ ಶಂಕರಭಟ್ಟರ ನಿಲುವುಗಳನ್ನು ಖಂಡಿಸುತ್ತಾ ಇವುಗಳನ್ನು ಒಪ್ಪಿರುವ ಯಾವ ಭಾಷಾ ವಿಜ್ಞಾನಿಯೂ ಇಲ್ಲವೆನ್ನುವಂತೆ ಕೆಲವರು ಬರೆದಿರುವುದು ಸರಿಯಲ್ಲ. ಕರ್ನಾಟಕದ ಬಹುತೇಕ ಭಾಷಾ ವಿಜ್ಞಾನಿಗಳು ಇಂದು ಡಾ.ಡಿ ಎನ್ ಎಸ್ ಅವರ ನಿಲುವುಗಳ ಬಗ್ಗೆ –ಅವುಗಳಲ್ಲಿ ಒಪ್ಪಿತವಾಗುವುವೆಷ್ಟು? ಆಗದವೆಷ್ಟು?ಎಂದೆಲ್ಲಾ ಚರ್ಚೆ ನಡೆಸಿದ್ದಾರೆ. ಹಾಂ… ಅದೂ ಭಾಷಾ ವಿಜ್ಞಾನದ ನೆಲೆಯಲ್ಲಿ. ಇವತ್ತಿನ ದಿವಸ ಕರ್ನಾಟಕದಲ್ಲಿ ಭಾಷಾವಿಜ್ಞಾನಿಗಳಲ್ಲಿ ದೊಡ್ಡ ಹೆಸರು ಡಾ. ಕೆ ವಿ ನಾರಾಯಣ, ಡಾ. ಸಿ ಎಸ್ ರಾಮಚಂದ್ರ, ಡಾ. ಮಲ್ಲಿಕಾರ್ಜುನ್ಮೇಟಿ… ಮತ್ತಷ್ಟು ಓದು 
ನಮ್ಮ ನೆಲದಲ್ಲಿ ನಿಮ್ಮನ್ನು ಗೆಲಲು ನಾ ಬಿಡೆ!
– ಆಸು ಹೆಗ್ಡೆ
ನಿನ್ನೆಯ ಸುದ್ದಿ ರಾತ್ರಿ ಮೊಹಾಲಿಯಲ್ಲಿ
ಸುರಿಯುತ್ತಾ ಇತ್ತಂತೆ ತುಂತುರು ಮಳೆ
ಇಂದು ಅಲ್ಲಿ ಕಂಡು ಬರಲಿ ಬರಿ ನಮ್ಮ
ದಾಂಡಿಗರ ಓಟಗಳ ಭರ್ಜರಿ ಸುರಿಮಳೆ
ಕನ್ನಡನಾಡಿನ ಏಳಿಗೆ ಹೊಸದೊಂದು ಶಾಲೆಯಿಂದಲೇ ಆಗಬಲ್ಲುದು…!
– ಬನವಾಸಿ ಬಳಗ
ಕನ್ನಡದ ಸೊಲ್ಲರಿಮೆಯನ್ನು (ವ್ಯಾಕರಣವನ್ನು) ಮತ್ತು ಸ್ವರೂಪವನ್ನು ಅರ್ಥಮಾಡಿಕೊಳ್ಳುವುದರಲ್ಲಿ ವೈಜ್ಞಾನಿಕ ಮನೋಭಾವದ ಕನ್ನಡಿಗರೆಲ್ಲರ ಮನಸ್ಸನ್ನು ಗೆದ್ದಿರುವ ಶ್ರೀ. ಡಿ.ಎನ್. ಶಂಕರಭಟ್ಟರ
ಕೊಡುಗೆ ಬಹಳ ಮುಖ್ಯವಾದದ್ದು. ಭಟ್ಟರ “ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ”, “ಮಾತಿನ ಒಳಗುಟ್ಟು”, “ಕನ್ನಡ ನುಡಿ ನಡೆದುಬಂದ ದಾರಿ” ಮುಂತಾದ ಹೊತ್ತಿಗೆಗಳು ಜನರಲ್ಲಿ ಕನ್ನಡದ ಬಗೆಗಿರುವ ತಪ್ಪು ತಿಳುವಳಿಕೆಯನ್ನು ಸುಟ್ಟು ಹಾಕುತ್ತವೆ. ಈ ಕ್ಷೇತ್ರದಲ್ಲಿ ಬಹುಕಾಲದಿಂದ ಕನ್ನಡದ ಭಾಷಾವಿಜ್ಞಾನಿಗಳು ಮತ್ತು ವ್ಯಾಕರಣಕಾರರು ಮಾಡಿಕೊಂಡು ಬಂದಿರುವ ತಪ್ಪುಗಳನ್ನು ಭಟ್ಟರು ಖಡಾಖಂಡಿತವಾಗಿ ತೋರಿಸಿಕೊಟ್ಟಿರುವುದರಿಂದ (ಮತ್ತು ಇನ್ನೂ ಮುಂದೆ ಬರುವ ಹೊತ್ತಿಗೆಗಳಲ್ಲಿ ತೋರಿಸಿಕೊಡಲಿರುವುದರಿಂದ) ಹಳೆ-ಶಾಲೆಗೆ ಅಂಟಿಕೊಂಡಿರುವ ಕೆಲವರ ಕಾಲ್ಕೆಳಗಿನ ನೆಲವೇ ಕುಸಿದಂತಾಗಿ, ಭಟ್ಟರನ್ನೂ ಮತ್ತವರ ತತ್ವಗಳನ್ನೂ ಕಟುವಾಗಿ ವಿರೋಧಿಸುವುದನ್ನೇ ಒಂದು ಹವ್ಯಾಸವಾಗಿಸಿಕೊಂಡಿದ್ದಾರೆ! ತಮಾಷೆಯೇನೆಂದರೆ ಇವರಾರ ವಿರೋಧವೂ ಭಟ್ಟರ ವೈಜ್ಞಾನಿಕತೆಯ ಮಟ್ಟಕ್ಕೆ ಏರದೆ ಬರೀ ಅವರನ್ನು ವೈಯಕ್ತಿಕವಾಗಿ ಮೂದಲಿಸುವುದರಿಂದ ಹಿಡಿದು, ಸಂಸ್ಕೃತದ ಪಂಡಿತರಾದ ಅವರೇ ಸಂಸ್ಕೃತದ್ವೇಷಿಗಳೆಂದು ಮೂದಲಿಸುವವರೆಗೆ, ಎಪ್ಪತ್ತೈದು ವರ್ಷದ ಮುದುಕರಾದ ಭಟ್ಟರು ರಾಜಕೀಯ ಲಾಭಕ್ಕಾಗಿ ಇದನ್ನು ಮಾಡುತ್ತಿದ್ದಾರೆ ಎನ್ನುವ ಸೊಂಟದ ಕೆಳಗಿನ ಆರೋಪದವರೆಗೆ ಮಾತ್ರ ತಲುಪುತ್ತವೆ! ಈ ಅವೈಜ್ಞಾನಿಕತೆಯೇ ಕನ್ನಡದ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದರಲ್ಲಿ ಕನ್ನಡಿಗರನ್ನು ಸೋಲಿಸಿರುವುದರಿಂದ ಇದನ್ನು ಕಿತ್ತೊಗೆಯದೆ ಬೇರೆ ದಾರಿಯಿಲ್ಲ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ ೩ರ ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ “ಕೂಡಲಸಂಗಮ ದೇವನ ಕನ್ನಡ” ಎಂಬ ಬರಹದಲ್ಲಿ ಶ್ರೀ ಕೆ.ವಿ. ತಿರುಮಲೇಶ್ ಅವರು ಅದೇ ಅವೈಜ್ಞಾನಿಕತೆಯನ್ನು ಓದುಗರ ಮುಂದಿಟ್ಟು ನಮ್ಮ ಈ ಮರುವುತ್ತರವನ್ನು ತಾವೇ ಬರಮಾಡಿಕೊಂಡಿದ್ದಾರೆ. ತಿರುಮಲೇಶರ ಬರಹದಲ್ಲಿ ಆ ಹಳೆ-ಶಾಲೆಯ ಅವೈಜ್ಞಾನಿಕತೆಯು ಮೈದಳೆದು ಬಂದಿರುವುದರಿಂದ ನಮ್ಮ ಈ ಉತ್ತರವು ಅವರಿಗೊಬ್ಬರಿಗೇ ಅಲ್ಲದೆ ಆ ಹಳೆ-ಶಾಲೆಯವರೆಲ್ಲರಿಗೂ ಒಪ್ಪುತ್ತದೆ.
ಬನ್ನಿ ತುಳುವಿನಲ್ಲಿ ಮಾತಾಡುವ…!
– ನಿಲುಮೆ
ಪಂಚ ದ್ರಾವಿಡ ಭಾಷೆಗಳಲ್ಲೊಂದಾದ ತುಳುವನ್ನ ಕರ್ನಾಟಕದ ಕರಾವಳಿಯಿಂದ ಹಿಡಿದು ನಮ್ಮ ಕಾಸರಗೋಡಿನಲ್ಲೂ ಮಾತಾಡುತ್ತಾರೆ.ಅಲ್ಲಷ್ಟೇ ಯಾಕೆ ಕರ್ನಾಟಕದ ಮೂಲೆ ಮೂಲೆಯಲ್ಲಿ ನೆಲೆ ನಿಂತ ತುಳುವರು,ಹೊರ ರಾಜ್ಯದಲ್ಲಿ,ಹೊರ ದೇಶದಲ್ಲೂ ಮಾತಾಡುತ್ತಾರೆ.
’ತುಳು ಮಹಾಭಾರತ’ದ ಕಾಲ ೧೩ನೇ ಶತಮಾನ,’ತುಳು ದೇವಿ ಮಹಾತ್ಮೆ’ಯ ಕಾಲ ೧೫ನೇ ಶತಮಾನ.ಹಾಗೆಯೇ ’ತುಳು ಭಾಗವತ’ ’ಕಾವೇರಿ’ ಬಂದಿದ್ದು ೧೭ನೇ ಶತಮಾನದಲ್ಲಿ!
‘A comparative Grammar of the Dravidian or South Indian Family of Languages’ ಅನ್ನು ಬರೆದ ರೆವ್.ಕ್ಲಾಡ್ವೆಲ್ ಅವರು ’ದ್ರಾವಿಡ ಭಾಷೆಗಳಲ್ಲಿ ಸದೃಡವಾಗಿ ಬೆಳೆದು ನಿಂತ ಭಾಷೆ ತುಳು’ ಅಂದಿದ್ರು.
ವಿದ್ವಾಂಸರಿಂದ ಹೀಗೆಲ್ಲ ಹೊಗಳಿಸಿಕೊಂಡ ತುಳುವಿಗೊಂಡು ಲಿಪಿ ಇರಲಿಲ್ವಾ? ಬಾಲ್ಯದಲ್ಲಿ ನಮಗೆ ಸಹಜವಾಗಿ ಮೂಡುತಿದ್ದ ಪ್ರಶ್ನೆಯದು.ಅಪ್ಪ-ಅಮ್ಮರನ್ನ ’ತುಳುವನ್ನ ಬರೆಯಲು ಸಾಧ್ಯವಿಲ್ವಾ?’ ಅಂತ ಕೇಳಿದರೆ.’ತುಳುವಿಗೆ ತನ್ನದೇ ಆದ ಲಿಪಿ ಇಲ್ಲ ಮಗ,ಆದರೆ ಮಲಯಾಳಂ ಲಿಪಿ ಬಳಸಿ ತುಳುವನ್ನ ಬರೆಯುತ್ತಾರೆ ಅಂತಿದ್ರು ಅಮ್ಮ.ಬೆಳೆಯುತ್ತ ಬೆಳೆಯುತ್ತ ಅರಿವಿಗೆ ಬಂದಿದ್ದೇನೆಂದರೆ ಅಸಲಿಗೆ ಮಲಯಾಳಂ ಅನ್ನು ತುಳು ಲಿಪಿ ಬಳಸಿ ಬರೆಯುತ್ತಾರೆ ಅನ್ನುವುದು!
ಎಂಡೋಸಲ್ಫನ್ ತಯಾರಕರ ದೇಶ ಸೇವೆ ಮುಖವಾಡ
– ಗೋವಿಂದ್ ಭಟ್
ಎಂಡೋಸಲ್ಫನ್ ತಯಾರಕರ ಹೊಸ ವರಸೆ ಗಾಬರಿಯಾಗುತ್ತದೆ. ಅವರೀಗ ಯುರೋಪಿನ ವಿಷ ತಯಾರಕರು ಎಂಡೋಸಲ್ಫನ್ ಬಹಿಷ್ಕಾರ ಚಳುವಳಿಯ ಹಿಂದಿದ್ದಾರೆ ಎಂದು ಆಪಾದಿಸುತ್ತಿದ್ದಾರೆ. ಬಾರತದ ತಯಾರಕರು ಜೀವ ಉಳಿಸುವ ಔಷದಿಯಲ್ಲಿ ಮೂಲವಸ್ತುಗಳ ಹೆಸರಿನಲ್ಲಿ ತಯಾರಿಸಿ ಕಡಿಮೆ ಬೆಲೆಯಲ್ಲಿ ಮಾರಿದ್ದು ಹಾಗೂ ಸಮಾಜ ಇವರಿಗೆ ಬೆಂಬಲಿಸಿದ್ದು ಈಗ ಇತಿಹಾಸ. ಈಗ ಈ ಕೀಟನಾಶಕ ವನ್ನೂ generic ಅನ್ನೋ ಮುಖವಾಡದ ಹವಣಿಕೆಯಲ್ಲಿದ್ದಾರೆ. ನಾವು ಕಡಿಮೆ ಬೆಲೆಯಲ್ಲಿ ಎಂಡೋಸಲ್ಫನ್ ತಯಾರು ಮಾಡಿ ಮಾರುವುದು ಬಾರತದ ರೈತರ ಉದ್ದಾರ ಮಾಡುವುದನ್ನು ಯುರೊಪಿಯನರು ಸಹಿಸುತ್ತಿಲ್ಲ. ನಾವು ಬಾಗಿಲು ಹಾಕಿದರೆ ಯುರೋಪಿನ ತಯಾರಕರು ಇದಕ್ಕಿಂತ ಹಲವು ಪಾಲು ದುಬಾರಿಯ ಮಾಲುಗಳನ್ನು ಬಾರತದ ರೈತರು ಅವಲಂಬಿಸಬೇಕಾಗುತ್ತದೆ.ಡಾ.ಅಬ್ದುಲ್ ಕಲಾಂರನ್ನ ನಿನ್ನೆ ಸಾಯಿಸುವವರಿದ್ದರು!
-ರಾಕೇಶ್ ಶೆಟ್ಟಿ
ನನ್ನ ಶಾಲೆಯ ದಿನಗಳವು ಆಗಿನ್ನೂ ಶಂಕರ್ ನಾಗ್ ಅಪಘಾತದಲ್ಲಿ ನಮ್ಮಿಂದ ದೂರವಗಿದ್ದರು,ಅದೇ ಸಮಯದಲ್ಲಿ ಕಿಡಿಗೇಡಿಗಳು ವಿಷ್ಣು ಇನ್ನಿಲ್ಲ ಅಂತ ಸುದ್ದಿ ಹಬ್ಬಿಸಿದ್ದರು.ಕಡೆಗದು ಟುಸ್ಸ್ ಪಟಾಕಿಯಾಗಿತ್ತು.ಈ ರೀತಿಯ ಸುದ್ದಿಗಳನ್ನ ಕೇಳಿ ಕೇಳಿ,ಕಡೆಗೆ ನಿಜವಾಗಿ ವಿಷ್ಣು ನಮ್ಮನ್ನ ಅಗಲಿದ ದಿನ,ಬೆಳ್ಳಂ ಬೆಳಿಗ್ಗೆ ಗೆಳೆಯ ಶ್ರೀಕಾಂತ ಬಂದು ವಿಷ್ಣು ಹೊದ್ರಂತೆ ಅಂದಾಗ, ’ಜೊತೆಗ್ ನೀನೂ ಹೋಗಲೆ’ ಅಂತ ಬೈದು ಕಳಿಸಿದ್ದೆ.ಆದರೆ ನಿಜ ಅಂತ ಗೊತ್ತಾದಗ ಮನಸ್ಸು ಕಳವಳಗೊಂಡಿತ್ತು.
ಈ ಗಾಳಿ ಸುದ್ದಿಗಳೇ ಹಾಗೆ ಅಲ್ವಾ? ನಿಜ ಸುದ್ದಿಗಳಿಗೊಂದು ಗುದ್ದು ನೀಡಿ ಹೊರಟು ನಿಲ್ಲುತ್ತವೆ! ಕಳೆದವಾರ ತಾನೆ ಆಫ಼ೀಸಿನಲ್ಲಿ ಕುಳಿತಿದ್ದವನಿಗೆ ಅತ್ತಿಗೆ ಕರೆ ಮಾಡಿ ಜಪಾನ್ ಮುಳುಗುತ್ತಿದೆ ನೋಡು ಅಂದಾಗಲು ನಂಬಲಿಕ್ಕಾಗಲಿಲ್ಲ.ಆದರೆ ಅದೂ ನಿಜವಾಗಿತ್ತು 😦
ಮತ್ತೆ ನಿನ್ನೆ ಮಧ್ಯಾನ ಗೆಳೆಯ ಸಾತ್ವಿಕ್ ಕರೆ ಮಾಡಿ ’ವಿಷ್ಯ ಗೊತ್ತಾಯ್ತ?’ ಅಂದ್ರು. ’ಏನ್ರಿ’ ಕೇಳ್ದೆ. ’ಅಬ್ದುಲ್ ಕಲಾಂ ಹೋಗ್ಬಿಟ್ರಂತೆ’ ಅನ್ನೋದಾ!…’ನೋಡಿ confirm ಮಾಡಿ ಹೇಳ್ರಿ’ ಅಂದ್ರು.’ಹೌದಾ!?’ ಅಂತ ತಡಬಡಾಯಿಸಿ ಗೂಗಲ್ ದೇವರಲ್ಲಿ ಪ್ರಶ್ನೆ ಹಾಕಿದರೆ ಮೊದಲ ಸುದ್ದಿ ಇದ್ದದ್ದು ’Abdul Kalam’s Advisor Dr.Hafiz Saleh Muhammad Alladin died’ ಅಂತ.ನಾನೋ ಗಾಬರಿಯಲ್ಲಿ ಅದನ್ನ ಅಬ್ದುಲ್ ಕಲಾಮ್ ಅವರೇ ಹೋಗ್ಬಿಟ್ರು ಅಂತಲೇ ಓದಿ ಕೊಂಡು, ಆಫ಼ಿಸಿನಲ್ಲೂ ಕಲಾಂ ಹೋಗ್ಬಿಟ್ರು ಅಂದು,ಕಡೆಗೆ ಇನ್ನೊಮ್ಮೆ ಶಾಂತನಾಗಿ ನೋಡಿ. ’ಹೇ,ಇಲ್ಲಾ ರೀ,ಯಾವನೋ ಕಿಡಿಗೇಡಿ ಸುದ್ದಿ ಮಾಡಿದ್ದಾನೆ’ ಅಂದೆ.
ಮತ್ತಷ್ಟು ಓದು 
ಸುನಾಮಿ ಕಾವು – ಮಾಧ್ಯಮಗಳಿಗೆ ಮೇವು
ತಲೆಕೆಟ್ಟ ಮಾಧ್ಯಮಗಳ ಮಾತಿಗೆ ಹೆದರಿ ಕಂಗಾಲಾದವರು, ಮತ್ತೆ ಮತ್ತೆ ಮುರ್ಖರಾಗುವವರು ಅದೇ ಸಾಮಾನ್ಯ ಜನ.
ಮಾರ್ಚ್ ೧೯ ರಂದು ಸುಪರ್ ಮೂನ್ ಪ್ರಭಾವದಿಂದ ಸಮುದ್ರ ಉಕ್ಕಿ ಹರಿದು ಇಡೀ ಮಂಗಳೂರಿಗೆ ಮಂಗಳೂರೇ ಮುಳುಗಿ ಹೋಗುತ್ತೆ ಅಂತ ಯಾವಾಗ ಟೀವಿಯಲ್ಲಿ ಸುದ್ದಿ ಬಂತೋ ಪರವೂರಗಳಿಂದ ಬಂದು ಇಲ್ಲಿ ಕೆಲಸ ಮಾಡ್ತಾ ಇರೋ ಜನ ಬೆವತು ಹೋದರು. ಮೊದಲೇ ಇಲ್ಲಿನ ಪ್ರಕೃತಿಯ ಸರಿಯಾದ ಅಂದಾಜಿಲ್ಲದ ಜನರಂತೂ ನಿಜಕ್ಕೂ ಒಂದು ಕ್ಷಣ ಅವಕ್ಕಾದರು. ಅವರವರ ಮನೆಗಳಿಂದ ಪೋನಿನ ಮೇಲೆ ಪೋನ್ ಬರತೊಡಗಿದವು. ಎಲ್ಲರದ್ದೂ ಒಂದೇ ಮಾತು ಈ ಕ್ಷಣವೇ ಅಲ್ಲಿಂದ ಹೊರಟು ಬಾ ಅಂತ.
ಹೆದರಿದವರ ಮೇಲೆ ಹಾವು ಎಸೆದಂತೆ ಜಪಾನಿನಲ್ಲಿ ಎದ್ದ ಸುನಾಮಿ ಇನ್ನಷ್ಟು ಹೆದರಿಕೆ ಹುಟ್ಟಿಸಿತು. ಇದರೆಲ್ಲರ ಪರಿಣಾಮ ದೂರದ ಊರಿಗೆ ಹೋಗೋ ಎಲ್ಲ ಬಸ್ಸುಗಳು ಬಸುರಿಯಂತೆ ತುಂಬಿ ಹೋದವು. ರಾತ್ರೋ ರಾತ್ರಿ ಖಾಸಗಿ ಬಸ್ಸಿನವರು ಪ್ರಯಾಣ ದರವನ್ನು ಹೆಚ್ಚಿಸಿ ಉರಿಯುವ ಮನೆಯಲ್ಲಿ ಗಳ ಹಿರಿಯುವ ಕೆಲಸ ಮಾಡಿದರು. ಒಂದಕ್ಕೆ ಎರಡು ನೀಡಿ ತಮ್ಮ ಊರಿಗೆ ಹೊರಟು ನಿಂತಿತು ಜನತೆ. ೫೦ ಜನರು ಇರಬೇಕಾದ ಬಸ್ಸಿಲ್ಲಿ ೬೦-೭೦ ಜನ ಪ್ರಯಾಣ ಮಾಡಿದರು.
ಮಕ್ಕಳು, ಮರಿ, ಹೆಂಗಸರು, ಗಂಡಸರು ಎಂಬ ಬೇಧಭಾವವಿಲ್ಲದೇ ಹೊರಟೆ ಹೊರಟರು. ಇವರೆಲ್ಲ ಮಾಸಿಕ ಪಗಾರ ಎಣಿಸೋ ಸರ್ಕಾರಿ ಬಾಬುಗಳಲ್ಲ. ದಿನಗೂಲಿಗೆ ದೂರದ ಉತ್ತರ ಕರ್ನಾಟಕದಿಂದ ಬಂದ ಜನ. ಒಪ್ಪತ್ತಿಗೆ ಪರದಾಡುತ್ತಿರುವ ಇವರು, ಪ್ರಕೃತಿಯ ಮುನಿಸಿಗೆ ಒಳಗಾದ ನೆರೆಪೀಡಿತ ಜನ.







![Media_goofup_photo[1]](https://nilume.net/wp-content/uploads/2011/03/media_goofup_photo1.jpg?w=300&h=240)
