ಐನೂರಾತೊಂಬತ್ತೇಳು ಅಡಿ ಎತ್ತರದ ಕನಸು ಮತ್ತದರ ಅಗತ್ಯತೆ:
– ರಾಘವೇಂದ್ರ ಸುಬ್ರಹ್ಮಣ್ಯ
ಮಾನವರು ಅನಾದಿಕಾಲದಿಂದಲೂ ದೇವರು, ಪ್ರಾಣಿಗಳು ಹಾಗೂ ಇನ್ನಿತರ ನಿರ್ಜೀವಿ ವಸ್ತುಗಳ ವಿಗ್ರಹ ಹಾಗೂ ಪ್ರತಿಮೆಗಳನ್ನು ಕಟ್ಟುತ್ತಲೇ ಬಂದಿದ್ದಾರೆ. 1939ರಲ್ಲಿ ಜರ್ಮನಿಯ ಗುಹೆಯೊಂದರಲ್ಲಿ ಪತ್ತೆಯಾದ ಜಗತ್ತಿನ ಅತ್ಯಂತ ಪುರಾತನವಾದ ‘ಸಿಂಹಮಾನವ (Lion Man)’ನ ವಿಗ್ರಹ ಸರಿಸುಮಾರು ನಲವತ್ತು ಸಾವಿರ ವರ್ಷಗಳಷ್ಟು ಹಳೆಯದು. ವಿಗ್ರಹ ಹಾಗೂ ಪ್ರತಿಮೆಗಳ ಬಗೆಗಿನ ನಮ್ಮ ಒಲವು ಎಷ್ಟು ಹಳೆಯದು ಎಂದು ಇದರಿಂದಲೇ ತಿಳಿದುಬರುತ್ತದೆ. ಅಂದಿನಿಂದಲೂ ನಾವು ಹಲವಾರು ಕಾರಣಗಳಿಗಾಗಿ ಪ್ರತಿಮೆಗಳನ್ನು ಕಟ್ಟುತ್ತಲೇ ಬಂದಿದ್ದೇವೆ.
ನಾಗರೀಕತೆ ಬೆಳೆದಂತೆ, ಮುಂದುವರೆದಂತೆ ಮಾನವರು ದೇವರಿಗೆ ಮಾತ್ರವಲ್ಲದೆ, ಕೆಲವೊಂದು ಐತಿಹಾಸಿಕ ಘಟನೆಗಳು (ಯುದ್ಧದ ಗೆಲುವು, ಸ್ವಾಂತತ್ರ್ಯ), ಗಣ್ಯವ್ಯಕ್ತಿಗಳು (ಚಿಂತಕರು, ಅತೀಂದ್ರೀಯ ಶಕ್ತಿಯುಳ್ಳವರು) ಹಾಗೂ ಸ್ಮರಣೀಯ ಪ್ರಾಣಿ (ಸ್ಫಿಂಕ್ಸ್, ಬ್ಯಾರಿ ದ ಸೈಂಟ್ ಬರ್ನಾರ್ಡ್)ಗಳ ನೆನಪು ದೀರ್ಘಕಾಲ ಉಳಿಯಲು, ಹಾಗೂ ಆ ನೆನಪುಗಳನ್ನು ಮುಂದಿನ ತಲೆಮಾರಿಗೆ ದಾಟಿಸಲು ಸಹ ಶಿಲ್ಪಕಲಾಕೃತಿಗಳು ಒಂದು ಒಳ್ಳೆಯ ಮಾರ್ಗ ಎಂಬುದನ್ನು ಅರಿತುಕೊಂಡರು. ಆ ಕಾರಣಕ್ಕಾಗಿಯೇ ಝೀಯಸ್ ನ ಮೂರ್ತಿ, ಲಿಬರ್ಟಿ ಪ್ರತಿಮೆ, ಸಾಂಚೀ ಸ್ತೂಪ, ಕಮಕೂರದ ಬುದ್ದ, ಕೋಪನ್ ಹೇಗನ್ನಿನ ಮತ್ಯಕನ್ಯೆ, ರೀಯೋದ ವಿಮೋಚಕ ಕ್ರಿಸ್ತ (ಇತ್ತೀಚಿನ ಉದಾಹರಣೆಯಲ್ಲಿ ಮಾಯಾವತಿ ಹಾಗೂ ಆಕೆಯ ಆನೆಗಳು ) ಮುಂತಾದುವು ಸೃಷ್ಟಿಸಲ್ಪಟ್ಟವು. ಮುಂದೆ ಲೋಹಯುಗದಲ್ಲಿ ಈ ಕಾರ್ಯಕ್ಕಾಗಿ ಕಲ್ಲಿನಬದಲು ಲೋಹವೂ ಉಪಯೋಗವಾಯಿತು. ನಾಗರೀಕತೆಯ ಮಟ್ಟ ಹಾಗೂ ಗಣ್ಯತೆಯ ಮಟ್ಟಕ್ಕನುಗುಣವಾಗಿ ಕಬ್ಬಿಣ, ಕಂಚು, ಉಕ್ಕು, ಹಾಗೂ ಚಿನ್ನ ಈ ಕೆಲಸಕ್ಕಾಗಿ ಬಳಕೆಯಾಗಲಾರಂಭಿಸಿದವು. ಪಿರಮಿಡ್ಡುಗಳಲ್ಲಿ ಫೆರ್ಹೋಗಳ ಪ್ರತಿಮೆಗಳು ಚಿನ್ನದಲ್ಲೂ, ಹಾಗೂ ಸೇವಕರು ಹಾಗೂ ಕಾವಲಿಗಾರರ ಪ್ರತಿಮೆಗಳು ಕಬ್ಬಿಣ/ಕಂಚಿನಲ್ಲಿ ಇರುವುದನ್ನು ನೀವು ಗಮನಿಸರಬಹುದು. ಹಲವಾರು ಬಾರಿ ನಾಗರೀಕತೆಯ ಚಿಂತನೆಗಳನ್ನೂ ಕೂಡ ಶಿಲ್ಪಗಳಲ್ಲಿ ಬೆಸೆಯಲು ಪ್ರಯತ್ನಗಳು ನಡೆದವು. ಉದಾಹರಣೆಗೆ, ಈಸ್ಟರ್ ದ್ವೀಪದಲ್ಲಿರುವ ನೂರಾರು ಮಾನವರೂಪಿ ನಿಗೂಡ ಶಿಲ್ಪಗಳು ಏನನ್ನೋ ಹೇಳಲು ಬಯಸುತ್ತಿವೆ ಎಂದು ನೋಡುಗರಿಗೆ ಅನಿಸಿದರೆ ಆಶ್ಚರ್ಯವೇನಿಲ್ಲ. ಒಟ್ಟಿನಲ್ಲಿ ಇತಿಹಾಸದುದ್ದಕ್ಕೂ ಒಂದು ನಗರದ, ದೇಶದ, ಹಾಗೂ ನಾಗರೀಕತೆಯ ಔನ್ನತ್ಯವನ್ನು ಪ್ರತಿಮೆ ಹಾಗೂ ಕಲಾಕೃತಿಗಳು ಸಾರಲು ಪ್ರಯತ್ನಿಸಿವೆ ಎಂದರೆ ತಪ್ಪೇನಿಲ್ಲ. ಹತ್ತಾರುಸಾವಿರ ವರ್ಷಗಳಿಂದ ಮಾನವರು, ನಾಗರೀಕತೆಗಳು, ದೇಶಗಳು ಹಾಗೂ ಪ್ರದೇಶಗಳು ತಮ್ಮ ಅಸ್ಮಿತೆಯನ್ನು ಕೆಲ ಪ್ರತಿಮೆಗಳ ಮೂಲಕ ಪ್ರಚುರಪಡಿಸಲು ಪ್ರಯತ್ನಿಸಿವೆ.
ಶಾ ಬಾನು,ಫೆಮಿನಿಸಂ,ಸೆಕ್ಯುಲರಿಸಂ ಮತ್ತು ಸಮಾನ ನಾಗರೀಕ ಸಂಹಿತೆ
– ರಾಕೇಶ್ ಶೆಟ್ಟಿ
ದೇಶದಲ್ಲಿರುವ ಷರಿಯತ್ ಕೋರ್ಟುಗಳಿಗೆ ಕಾನೂನು ಮಾನ್ಯತೆಯಿಲ್ಲ.ಫತ್ವಾ ಹೊರಡಿಸುವುದು ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟು ಇತ್ತೀಚೆಗೆ ನೀಡಿದ ತೀರ್ಪು ಮತ್ತೊಮ್ಮೆ “ಸಮಾನ ನಾಗರೀಕ ಸಂಹಿತೆ”ಯ ಜಾರಿಯ ಬಗ್ಗೆ ಚರ್ಚೆ ಶುರುವಾಗುವಂತೆ ಮಾಡಿದೆ. ಸಮಾನ ನಾಗರೀಕ ಸಂಹಿತೆಯ ಜೊತೆ ಜೊತೆಗೆ ಈ ತೀರ್ಪಿನ ಜೊತೆಗೆ ನೆನಪಾಗುವುದು ೮೦ರ ದಶಕದ ’ಶಾ ಬಾನು ಪ್ರಕರಣ’
ಏನಿದು ಶಾ ಬಾನು ಪ್ರಕರಣ : ಇಂದೋರಿನ ವಕೀಲ ಮೊಹಮ್ಮದ್ ಅಹ್ಮದ್ ಖಾನ್ ನ ಪತ್ನಿ ಶಾ ಬಾನು.ಮದುವೆಯಾಗಿ ೧೪ ವರ್ಷಗಳ ನಂತರ ಎರಡನೇ ಮದುವೆಯಾದ ಅಹ್ಮದ್ ಖಾನ್.ಇಬ್ಬರು ಹೆಂಡಿರ ಜೊತೆ ಸಂಸಾರ ನಡೆಸಿ ಕಡೆಗೆ ಕೆಲ ವರ್ಷಗಳ ನಂತರ ಐದು ಮಕ್ಕಳ ತಾಯಿಯಾಗಿದ್ದ ಶಾ ಬಾನುವನ್ನು ಆಕೆಯ ೬೨ನೇ ವಯಸ್ಸಿನಲ್ಲಿ ಆಕೆಯ ಐದು ಮಕ್ಕಳ ಜೊತೆಗೆ ಹೊರಹಾಕಿದ.ಒಪ್ಪಂದದಂತೆ ಮಾಸಿಕ ೨೦೦ ರೂ ಜೀವನಾಂಶವನ್ನು ಆಕೆಗೆ ನೀಡದಿದ್ದರ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಏಪ್ರಿಲ್ ೧೯೭೮ರಲ್ಲಿ ದಾವೆ ಹೂಡುತ್ತಾರೆ ಶಾ ಬಾನು.ಮಾಸಿಕ ೫೦೦ರೂ ಜೀವನಾಂಶ ಬೇಕೆಂದು ಕೇಳಿಕೊಳ್ಳುತ್ತಾರೆ.
ನವೆಂಬರ್ ೧೯೭೮ರಲ್ಲಿ ಖಾನ್ ಶಾ ಬಾನು ಅವರಿಗೆ ತಲಾಖ್ ನೀಡಿ,ಈಗ ಆಕೆ ನನ್ನ ಪತ್ನಿಯಲ್ಲ ಮತ್ತು ಆಕೆಗೆ ಇಸ್ಲಾಮಿಕ್ ಲಾ ಮೂಲಕ ಕೊಡಬೇಕಾದ ೫,೪೦೦ ರೂ ಬಿಟ್ಟರೆ ನಾನು ಇನ್ನಾವುದೇ ಹಣವನ್ನು ಕೊಡಬೇಕಾಗಿಲ್ಲ ಎಂದು ವಾದಿಸುತ್ತಾನೆ ಖಾನ್.ಆಗಸ್ಟ್ ೧೯೭೯ರಲ್ಲಿ ಸ್ಥಳೀಯ ನ್ಯಾಯಾಲಯ ಮಾಸಿಕ ೨೫ರೂ ನೀಡುವಂತೆ ತೀರ್ಪು ಕೊಟ್ಟಿತ್ತು.ಶಾ ಬಾನು ಕೇಸನ್ನು ಹೈಕೋರ್ಟಿಗೆ ಕೊಂಡೊಯ್ದರು.ಅಲ್ಲಿ ಶಾ ಬಾನು ಪರವಾಗಿ ೧೯೮೦ರ ಜುಲೈನಲ್ಲಿ ಬಂದ ತೀರ್ಪು ಮಾಸಿಕ ೧೭೯ ರೂ ನೀಡುವಂತೆ ತೀರ್ಪು ನೀಡುತ್ತದೆ.ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಖಾನ್ ಹೋಗುತ್ತಾನೆ.ಶಾ ಬಾನು ಈಗ ನನ್ನ ಪತ್ನಿಯಲ್ಲ ಇಸ್ಲಾಮಿಕ್ ಕಾನೂನಿಂತೆ ಆಕೆಗೆ ನಾನು ತಲಾಖ್ ನೀಡಿ ಎರಡನೇ ಮದುವೆಯಾಗಿದ್ದೇನೆ ಎನ್ನುತ್ತಾನೆ.
ಇತಿಹಾಸ ಮರು ಕಲಿಸಬೇಕೇ?
-ಅ.ಸು.ರವೀಂದ್ರ,ಶಿವಮೊಗ್ಗ
History Repeats. ಇತಿಹಾಸ ಮರುಕಳಿಸುತ್ತಿದೆ. ಯಾವುದೇ ಮಹತ್ತರ ಘಟನೆ ಪುನರಾವರ್ತನೆಗೊಂಡಾಗ ಮಾಧ್ಯಮಗಳಲ್ಲಿ ಕೇಳಿ ಬರುವ ಪದಗಳಿವು. ಆದರೆ ಈಗಿನ ಚರ್ಚೆಯ ವಿಷಯ ಇತಿಹಾಸವನ್ನು ಮರು `ಕಲಿಸುವ` ಬಗ್ಗೆ. ಕೇಂದ್ರದಲ್ಲಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಭೂತಪೂರ್ವ ಬಹುಮತದೊಂದಿಗೆ ಭಾ.ಜ.ಪ. ಸರ್ಕಾರ ಅಧಿಕಾರಕ್ಕೆ ಬರುತ್ತಲೆ ಸರ್ಕಾರ ತನ್ನ ಗುಪ್ತ ಕಾರ್ಯಸೂಚಿಯ ಪ್ರಕಾರ ಇತಿಹಾಸದ ಪಾಠಗಳನ್ನು ತಿದ್ದಬಹುದೆಂಬ ಹುಯಿಲು ಎಡಪಂಥೀಯ ಹಾಗೂ ಮೆಕಾಲೆ ಗೋತ್ರಜರಿಂದ ಆರಂಭವಾಗಿದೆ. ಎನ್.ಡಿ.ಎ. ಸರ್ಕಾರದ ಅಧಿಕಾರದ ಸಂದರ್ಭದಲ್ಲಿಯೇ ಆಗಿನ ಸಚಿವ ಶ್ರೀ ಮುರಳಿ ಮನೋಹರ ಜೋಷಿಯವರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರಾದರೂ ಹೆಚ್ಚಿನ ಯಶ ಕಂಡಿರಲಿಲ್ಲ. ಆಗ ಹುಸಿ ಜಾತ್ಯಾತೀತ ವಾದದ ಭ್ರಮೆ ನಮ್ಮ ರಾಜಕೀಯ ಕ್ಷೇತ್ರವನ್ನು ಆವರಿಸಿದ್ದ ಕಾಲ. ಮೈತ್ರಿಕೂಟದ ಮಿತ್ರ ಪಕ್ಷಗಳೂ ಈ ವಿಚಾರದಲ್ಲಿ ಭಾ.ಜ.ಪ.ವನ್ನು ಬೆಂಬಲಿಸಲು ತಯಾರಿರಲಿಲ್ಲ. ಬೌದ್ಧಿಕ ಕ್ಷೇತ್ರದಲ್ಲಿ ದಶಮಾನಗಳಿಂದ ಪ್ರತಿಷ್ಠಾಪಿಸಿದ್ದ ವರ್ಗಕ್ಕೆ ಇತಿಹಾಸ, ಪರಂಪರೆ, ಸ್ವಾಭಿಮಾನಿ ರಾಷ್ಟ್ರ ಭಕ್ತಿಯಂತಹ ವಿಷಯಗಳು ಹೇಗೂ ವರ್ಜ್ಯವಾಗಿದ್ದವು. ಇವರ ತಾಳಕ್ಕೆ ಕುಣಿಯುವ ಮಾಧ್ಯಮಗಳು ಶಿಕ್ಷಣವನ್ನು ಕೇಸರೀಕರಣಗೊಳಿಸಲಾಗುತ್ತಿದೆ ಎಂದು ಬೊಬ್ಬೆ ಹಾಕಿ ಈ ವಿಷಯದ ಬಗ್ಗೆ ಅರ್ಥಪೂರ್ಣ ಚರ್ಚೆ ನಡೆಯಲು ಅವಕಾಶವನ್ನೇ ಕೊಡಲಿಲ್ಲ. ಸ್ವಯಂ ಬಹುಮತವಿಲ್ಲದ ಪಕ್ಷ ದಿಟ್ಟ ನಿರ್ಧಾರಗಳನ್ನು ಏಕ ಪಕ್ಷೀಯವಾಗಿ ಕೈಗೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಆದರೆ ಕಳೆದ ಹದಿನೈದು ವರ್ಷಗಳಲ್ಲಿ ಗಂಗೆ ಯಮುನೆಯರಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಈ ಬಾರಿಯ ಚುನಾವಣೆಯಲ್ಲಿ ಸ್ಥಾಪಿತ ಎಲ್ಲಾ ಸೈದ್ಧಾಂತಿಕ ಮಿಥ್ಯೆಗಳನ್ನು ನಿವಾಳಿಸಿ ಮತದಾರ ತೀರ್ಪು ನೀಡಿದ್ದಾನೆ, ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಬದಲಿಸಿ ಹೊಸ ಶಕೆಯನ್ನು ಆರಂಭಿಸುವ ಆಡಳಿತ ಪಕ್ಷದ ಭರವಸೆಗಳನ್ನು ನಂಬಿ ಆದೇಶ ನೀಡಿದ್ದಾನೆ.
ಈಗ ಪ್ರಶ್ನೆ ಎದ್ದಿರುವುದು ನಮಗೆ ಇಂತಹ ಇತಿಹಾಸದ ಪಾಠಗಳ ಪುನರ್ವಿಮರ್ಶೆ ಅಗತ್ಯವಿದೆಯೋ ಇಲ್ಲವೋ ಎಂಬುದು. ಇದೆ ಎಂದಾದಲ್ಲಿ ಹಿಂದಿನ ವ್ಯವಸ್ಥೆಯ ಲೋಪವನ್ನು ಒಫ್ಫಿಕೊಂಡು ಸರಿಪಡಿಸಿಕೊಳ್ಳಬೇಕು. ಇಲ್ಲವೆಂದಾದಲ್ಲಿ ಈವರೆಗೆ ಅನುಸರಿಸಿದ ಕ್ರಮಗಳಿಂದ ನಾವು ಸಾಧಿಸಿರುವುದಾದರೂ ಏನು ಎಂಬುದರ ಮೌಲ್ಯಮಾಪನ ಆಗಬೇಕು. ೧೯೪೭ ರಲ್ಲಿ ಭಾರತ ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಹೊಂದಿದಾಗಲೇ ಇಂತಹ ಕ್ರಮದ ಅಗತ್ಯ ಇತ್ತು. ಆಗ ನಮಗೆ ರಾಜಕೀಯ ಸ್ವಾತಂತ್ರ್ಯವೇನೋ ಸಿಕ್ಕಿತ್ತು. ಆದರೆ ಎರಡು ಶತಮಾನಗಳ ಅವರ ಆಡಳಿತದ ಪ್ರಭಾವದಿಂದಾಗಿ ನಮ್ಮ ವೈಚಾರಿಕ, ಸಾಂಸ್ಕೃತಿಕ ವಿಚಾರಗಳ ದಾಸ್ಯದ ಮನಸ್ಥಿತಿ ಬದಲಾಗಲೇ ಇಲ್ಲ. ಪಂಡಿತ್ ನೆಹರೂರವರು ಮನಸ್ಸು ಮಾಡಿದಲ್ಲಿ ಒಂದು ಸ್ವತಂತ್ರ ಸ್ವಾಭಿಮಾನಿ ರಾಷ್ಟ್ರಕ್ಕೆ ಅಗತ್ಯವಾಗಿದ್ದ, ತನ್ನ ಸಂಸ್ಕೃತಿ ಪರಂಪರೆಯ ಬಗ್ಗೆ ಅಭಿಮಾನವುಳ್ಳ, ಅಂತಹ ಧೀಃಶಕ್ತಿಯನ್ನು ಪ್ರೇರೇಪಿಸಬಲ್ಲ ನವಪೀಳಿಗೆಯನ್ನು ಬೆಳೆಸಬಹುದಿತ್ತು. ಸ್ವಾತಂತ್ರ್ಯ ಪಡೆದ ಘಳಿಗೆಯಲ್ಲಿನ ಜನಮಾನಸದ ಹುಮ್ಮಸ್ಸು, ಮನಸ್ಥಿತಿ, ಅಂತಹ ಕ್ರಮಗಳಿಗೆ ಪೂರಕವಾಗಿ ಸ್ಪಂದಿಸುವುದರಲ್ಲಿ ಅನುಮಾನವಿರಲಿಲ್ಲ. ಅವರ ಅಂದಿನ ಆಡಳಿತಾತ್ಮಕ ಕ್ರಮಗಳು ಪ್ರಜಾ ಸಂಕುಲಕ್ಕೆ ಹೊಟ್ಟೆ ಬಟ್ತೆ ನೀಡುವ ಮಟ್ಟಿಗೆ ಸೀಮಿತವಾಗಿದ್ದವು ಅನ್ನಿಸುತ್ತವೆ. ದೇಶವೊಂದರ ಚುಕ್ಕಾಣಿ ಹಿಡಿದ ನಾಯಕತ್ವಕ್ಕೆ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳಬಲ್ಲ ಯುವಪೀಳಿಗೆಗೆ ಸೂಕ್ತ ಮಾರ್ಗದರ್ಶನ ಮಾಡಬೇಕಾದ ಆದ್ಯತೆಗಳೂ ಇರುತ್ತವೆ ಎಂಬುದನ್ನು ಅಂದಿನ ಸರ್ಕಾರ ಮರೆತಿದ್ದೇ ನಾವು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಅನುಭವಿಸುತ್ತಿರುವ ಅನಾಥ ಪ್ರಜ್ಞೆಗೆ ಕಾರಣವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ.
ಒಳ್ಳೆಯ ದಿನಗಳು ಉಚಿತವಾಗಿ ಬರುವುದಿಲ್ಲ!
– ಅನಿಲ್ ಚಳಗೇರಿ
2014ರ ಚುನಾವಣೆಯಲ್ಲಿ ಬಿಜೆಪಿಯ ಪಂಚ್ ಲೈನ್ ಎನ್ನಬಹುದಾದ “ಅಚ್ಛೆ ದಿನ್ ಅನೆ ವಾಲೆ ಹೈ’ (ಒಳ್ಳೆಯ ದಿನಗಳು ಬರಲಿವೆ) ಸುತ್ತಮುತ್ತಲೂ ಕಳೆದ ಒಂದು ತಿಂಗಳಿಂದ ವಿವಾದವೊಂದು ಸೃಷ್ಟಿಯಾಗಿದೆ. ಮೋದಿಯವರು ಆಡಳಿತ ರೀತಿಯನ್ನು ಬಿಗಿಗೊಳಿಸಿ ಇಡೀ ದೇಶದ ಪರಿಸ್ಥಿತಿಯನ್ನು ಹತೋಟಿಯಲ್ಲಿ ತರಬೇಕಾದಾರೆ ಕೆಲವು ಗಟ್ಟಿ ನಿರ್ಧಾರ(ಸದ್ಯಕ್ಕೆ ನಮಗೆ ಇಷ್ಟವಾಗದಿರುವ) ತೆಗೆದುಕೊಳ್ಳಲೇಬೇಕು. ಕಳೆದ ಒಂದು ದಶಕದಲ್ಲಿ ಯುಪಿಎ ಸರ್ಕಾರ ಮಾಡಿದ ಆವಾಂತರಗಳನ್ನು ಮೊದಲು ಸರಿಪಡಿಸಿ ಆಮೇಲೆ ಅಭಿವೃದ್ಧಿಯ ಕಡೆಗೆ ಹೋಗುವ ಜವಾಬ್ದಾರಿ ಹೊಸ ಸರ್ಕಾರದ ಮೇಲಿದೆ. ಅಷ್ಟಕ್ಕೂ ಈ ಅಭಿವೃದ್ಧಿಯ ಹಾದಿ ಮೊದಲ ದಿನದಿಂದಲೇ ಪ್ರಾರಂಭವಾಗಿದೆ. ಇದನ್ನು ಅಚ್ಛೆ ದಿನ್ ಅಂದರೂ ತಪ್ಪಾಗದು. ಅಷ್ಟಕ್ಕೂ ಮೋದಿಯವರು ಉಚಿತ ದಿನ್ ಎಂದು ಹೇಳಿಲ್ಲ!
ದೆಹಲಿಯಲ್ಲಿನ ವಿದ್ಯುತ್ ಅಭಾವದಿಂದ ಹಿಡಿದು ರೈಲ್ವೆ ದರ ಏರಿಕೆಯವರೆಗಿನ ವಿಷಯವನ್ನು ಹಿಡಿದುಕೊಂಡು ಅಚ್ಛೇ ದಿನ್ ಅಂದರೆ ಇದೇನಾ ಅನ್ನುವಷ್ಟು ಕನ್ಫ್ಯೂಷನ್ ಹುಟ್ಟಿಬಿಟ್ಟಿದೆ. “ಒಮ್ಮಿಂದೊಮ್ಮೇಲೆ ಮಧ್ಯಮ ವರ್ಗದ ವಿರೋಧಿಯಾದರೆ ನರೇಂದ್ರ ಮೋದಿ?” ಎನ್ನುವ ಪ್ರಶ್ನೆಗಳು ನಮ್ಮನ್ನು ಕಾಡುತ್ತಿವೆ. ಯುಪಿಎ ನೀತಿಯಂತೆ ರಾಜಕೀಯ ಹಿತಾಸಕ್ತಿಗೆ ಸರ್ಕಾರದ ಬೊಕ್ಕಸವನ್ನು ಬರಿದಾಗಿಸುವುದು ಸರಿಯೇ? ಎಂದು ನಮ್ಮನ್ನು ನಾವು ಒಮ್ಮೆ ಕೇಳಿಕೊಂಡರೆ ಬಹುಶಃ ನಿಮಿಷಾರ್ಧದಲ್ಲೇ ನಮಗೆ ಉತ್ತರ ಸಿಕ್ಕು ಬಿಡಬಹುದು.
ನಮ್ಮ ಸರ್ಕಾರಗಳಿಗೆ ರೈಲ್ವೆ ಸ್ಟೇಷನ್ ಸ್ವಚ್ಛವಿಡಲು ಏನು ಸಮಸ್ಯೆ? ಸರಿಯಾದ ಸಮಯಕ್ಕೆ ತತ್ಕಾಲ್ ಟಿಕೆಟ್ ಬುಕ್ ಆಗುವದಿಲ್ಲ, ರೈಲ್ವೆ ಪ್ಲಾಟ್ ಫಾರಂ ಸ್ವಚ್ಛವಿರುವುದಿಲ್ಲವೆಂದು ದೂರುತ್ತಾ ಬೇರೆ ದೇಶದ ರೈಲ್ವೆ ವ್ಯವಸ್ಥೆಯನ್ನು ಹೊಗಳುತ್ತೇವೆ. ರೈಲ್ವೆ ಇಲಾಖೆ 26 ಸಾವಿರ ಕೋಟಿಗಳ ನಷ್ಟ ಅನುಭವಿಸುತ್ತಿದೆ, ಪ್ರತಿ ದಿನ 30 ಕೋಟಿಯಷ್ಟು ನಷ್ಟ ಭರಿಸಬೇಕಾಗುತ್ತಿದೆ, ಅದರಲ್ಲೂ ಸರಕು ಸಾಗಣಿಕೆಯಲ್ಲಿ ಸ್ವಲ್ಪ ಲಾಭ ಮಾಡುವದನ್ನು ಬಿಟ್ಟರೆ, ಪ್ರಯಾಣಿಕರ ರೈಲುಗಳಿಂದಲೇ ಅಧಿಕ ನಷ್ಟ ಎದುರಾಗುತ್ತಿದೆ ಎನ್ನುತ್ತದೆ ರೈಲ್ವೆ ಇಲಾಖೆಯ ಅಂಕಿ ಅಂಶಗಳು. ಇಷ್ಟೆಲ್ಲಾ ನಷ್ಟಗಳ ಮಧ್ಯೆ ಸರ್ಕಾರ ಒಳ್ಳೆಯ ರೈಲ್ವೆ ವ್ಯವಸ್ಥೆಯನ್ನು ಕಲ್ಪಿಸಿ ಕೊಡುವದಾದರು ಹೇಗೆ? ಅದಕ್ಕಾಗಿಯೇ ಈ ರೈಲ್ವೆ ದರ ಏರಿಕೆ. ಮುಂಬರುವ ದಿನಗಳಲ್ಲಿ ರೈಲ್ವೆ ಇಲಾಖೆ ತನ್ನ ನಷ್ಟಗಳನ್ನೆಲ್ಲ ಸಂಪೂರ್ಣವಾಗಿ ಕಡಿಮೆ ಮಾಡಿ ಆಮೇಲೆ ನವೀಕರಣದ ಬಗ್ಗೆ ವಿಚಾರ ಮಾಡಬೇಕು, ಫ್ರೀ ಬೀ(ಉಚಿತ ಕೊಡುಗೆಗಳನ್ನು) ಸರ್ಕಾರಗಳು ಕೊಡಬಾರದೆನ್ನುವ ನಾವು ದಿನಕ್ಕೆ 30 ಕೋಟಿ ನಷ್ಟವಾದರೂ ಪರವಾಗಿಲ್ಲ, ನಮ್ಮ ಜೇಬಿಗೆ ಮಾತ್ರ ಕತ್ತರಿ ಬೀಳಬಾರದು ಎನ್ನುತ್ತಿದ್ದೇವೆ! ಅಷ್ಟಕ್ಕೂ, ಒಂದು ಉತ್ತಮ ರೈಲ್ ವ್ಯವಸ್ಥೆಯಿಂದ ಅತೀ ಹೆಚ್ಚು ಲಾಭ ಪಡೆಯುವವರು ಯಾರು? ನಾವೇ ಅಲ್ಲವೇ? ಇಲ್ಲವೆಂದರೆ, ರೈಲ್ವೆ ಇಲಾಖೆಯು ಮುಂದೊಂದು ದಿನ ಏರ್ ಇಂಡಿಯಾ ಥರ ದೊಡ್ಡ ನಷ್ಟಕ್ಕೆ ಒಳಗಾಗಬಹುದು. ಲಾಭಗಳಿಸುವ ರೈಲ್ವೆ ಇಲಾಖೆಯಿಂದ ಮಾತ್ರ ಜಪಾನ್ ಮತ್ತು ಯುರೋಪ್ ರಾಷ್ಟ್ರಗಳಂಥ ರೈಲ್ವೆ ಸಂಪರ್ಕ ಒದಗಿಸಲು ಸಾಧ್ಯ.
ಐಡಿಯಾಲಜಿಯ ಅಪಾಯಗಳು!
– ಡಾ. ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ
ಹದಿನಾರನೆಯ ಲೋಕಸಭಾ ಚುನಾವಣಾ ಫಲಿತಾಂಶ ಬಂದು ತಿಂಗಳಾಗುತ್ತ ಬಂತು. ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ ಎಂಬಂತೆ ಈ ಚುನಾವಣೆ ಕುರಿತ ಚರ್ಚೆ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಏಕೆಂದರೆ ಮಾಧ್ಯಮಗಳು, ಗದ್ದುಗೆಯ ಕನಸು ಕಾಣುತ್ತಿದ್ದ ಗೆದ್ದ-ಸೋತ ಪ್ರಮುಖ ಪಕ್ಷಗಳು, ಯಾರಿಗೂ ಬಹುಮತ ಬರದಿದ್ದರೆ ಆಟವಾಡಿಸುವ ಭ್ರಮೆಯಲ್ಲಿದ್ದ ಪ್ರಾದೇಶಿಕ ಪಕ್ಷಗಳು-ಪುಡಿ ಪಕ್ಷಗಳು, ಒಂದೆರಡು ಸ್ಥಾನಗಳ ಕೊರತೆ ಬಿದ್ದರೆ ಲಾಭ ಮಾಡಿಕೊಳ್ಳುವ ಹವಣಿಕೆಯಲ್ಲಿದ್ದ ಪಕ್ಷೇತರರು, ಇವರೆಲ್ಲರ ಬೆಂಬಲಿಗರು, ಕಾರ್ಯಕರ್ತರು ಹೀಗೆ ಇವರೆಲ್ಲರಿಗೂ ಅನಿರೀಕ್ಷಿತ ಆಘಾತ ನೀಡಿದ ದೇಶದ ಜನಸಾಮಾನ್ಯರು ಇದುವರೆಗಿನ ಚುನಾವಣೆಯಲ್ಲೇ ಸದ್ಯ ಅತ್ಯಂತ ಹೆಚ್ಚು ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಜನತಂತ್ರ ವ್ಯವಸ್ಥೆಯಲ್ಲಿ ಇಂಥ ಬೆಳವಣಿಗೆ ಅಗತ್ಯ. ಆದರೆ ಈ ಚರ್ಚೆಯ ಆಯಾಮಗಳನ್ನು ಗಮನಿಸುವುದು ಒಳಿತು.
ಉಳಿದ ಸಂಗತಿ ಹಾಗಿರಲಿ. ನಮ್ಮ ದೇಶದಲ್ಲಿ ಒಂದು ಎಂಬುದನ್ನು ಜನ ದೇವರಲ್ಲೂ ಇಟ್ಟುಕೊಂಡಿಲ್ಲ. ಅವು ಕೋಟಿ ಲೆಕ್ಕದಲ್ಲಿ ಇವೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ವೈವಿಧ್ಯವಂತೂ ಪ್ರತಿ ಹತ್ತಿಪ್ಪತ್ತು ಕಿ.ಮೀ.ಗೆ ಬದಲಾಗುತ್ತದೆ. ಏಕರೂಪತೆಯನ್ನು ಒಪ್ಪದ, ಆದರೆ ಭಾವನಾತ್ಮಕ ಏಕತೆಗೆ ಮಹತ್ವ ನೀಡುವ ಇಂಥ ದೇಶದಲ್ಲಿ ಯಾವುದೋ ಒಂದು ಐಡಿಯಾಲಜಿ ಸ್ಥಾಪನೆಯಾಗಬೇಕು ಎಂದು ಬಯಸುವುದು ಭ್ರಮೆಯಲ್ಲದೇ ಬೇರಲ್ಲ. ಜನತಂತ್ರ ವ್ಯವಸ್ಥೆ ಇಲ್ಲಿನ ವೈವಿಧ್ಯಕ್ಕೆ ಬೆನ್ನೆಲುಬಾಗಿದೆ. ಹೀಗಾಗಿಯೇ ಒಂದೇ ಐಡಿಯಾಲಜಿ ಹೇರುವ ಯಾರಿಗೇ ಆದರೂ ಜನ ಹೊರಹೋಗುವ ಬಾಗಿಲು ತೋರುತ್ತಾರೆ. ತ್ರಿಪುರಾ, ಪ.ಬಂಗಾಳದಲ್ಲಿ ಮಾರ್ಕ್ಸ್ ವಾದಿಗಳು ಜಾಗಖಾಲಿಮಾಡಿದ್ದು ಹೀಗೆ. ಸ್ವಾತಂತ್ರ್ಯ ಬಂದ ಹತ್ತಿಪ್ಪತ್ತು ವರ್ಷ ದೇಶಾದ್ಯಂತ ಸಾರಾಸಗಟು ಸ್ಥಾನ ಪಡೆಯುತ್ತಿದ್ದ ಕಾಂಗ್ರೆಸ್ ಬೆರಳೆಣಿಕೆ ಸ್ಥಾನ ಪಡೆಯಲೂ ಹೆಣಗಾಡುವ ಸ್ಥಿತಿ ಬಂದಿದ್ದೂ ಹೀಗೆಯೇ. ಹಿಂದೂ, ಮುಸ್ಲಿಂ, ಮಾರ್ಕ್ಸ್, ಮಾವೋ, ನೆಹರೂ ಹೀಗೆ ಒಂದನ್ನೇ ಸ್ಥಾಪಿಸಬಯಸುವ ಎಲ್ಲ ಬಗೆಯ ಮೂಲಭೂತವಾದಿಗಳನ್ನೂ ಜನ ತೂಗುವುದು ಒಂದೇ ತಕ್ಕಡಿಯಲ್ಲಿ.
ಈ ಫಲಿತಾಂಶದಿಂದ ಎಡ ಚಿಂತಕರು ಎಂದು ಗುರುತಿಸಿಕೊಂಡವರ ಸ್ಥಿತಿಯಂತೂ ಚಿಂತಾಜನಕವಾಗಿದೆ. ಪ್ರಚಾರದ ವೇಳೆ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ಕೆಲವರಂತೂ ನಾಪತ್ತೆಯಾಗಿದ್ದಾರೆ. ಇನ್ನು ಕೆಲವರಿಗೆ ಜೀವನವೇ ಸಾಕಾಗಿದೆ. ಎಡಪಂಥೀಯ ಚಿಂತನೆಯಲ್ಲಿ ಗುರುತಿಸಿಕೊಂಡಿದ್ದವರೊಬ್ಬರು ಫಲಿತಾಂಶ ಬಂದ ನಾಲ್ಕು ದಿನಗಳ ನಂತರ ಭೇಟಿಯಾದರು. ಅವರ ಮುಖದಲ್ಲಿ ಯಾವ ಉತ್ಸಾಹವೂ ಇರಲಿಲ್ಲ. ಸೂತಕದ ಕಳೆ. ಏನಾಯ್ತು ಅಂದೆ. ಪ್ರಳಯವೇ ಆಗಿ ಇವರೊಬ್ಬರೇ ಬದುಕಿದ್ದಾಗ ಆಗುವ ಹತಾಶೆ, ಸಂಕಟ, ಆಘಾತಗಳೆಲ್ಲ ಅವರಲ್ಲಿ ಮೈವೆತ್ತಿದ್ದವು. ಯಾಕೆಂದು ಕೇಳಿದರೆ ಮೋದಿ ಪ್ರಧಾನಿಯಾಗ್ತಾರಲ್ಲ, ಬಿಜೆಪಿ ಈ ಪಾಟಿ ಸ್ಥಾನ ಗೆದ್ದುಬಿಟ್ತಲ್ಲ ಅಂತೆಲ್ಲ ಗೋಳು ತೋಡಿಕೊಳ್ಳತೊಡಗಿದರು. ಹೋಗ್ಲಿ ಬಿಡಿ ಸಾರ್, ಜನತಂತ್ರ ವ್ಯವಸ್ಥೆಯಲ್ಲಿ ಒಮ್ಮೆ ಅವರು ಮತ್ತೊಮ್ಮೆ ಮತ್ತೊಬ್ಬರು ಮೇಲೆ ಕೆಳಗೆ ಆಗುವುದು ಸಹಜವಲ್ಲವೇ? ಅದನ್ಯಾಕೆ ಇಷ್ಟು ಸೀರಿಯಸ್ಸಾಗಿ ತಗೋತೀರಿ ಅಂದೆ. ಹಂಗಲ್ಲ ಸಾರ್, ನಿಮಗೆ ಅರ್ಥವಾಗಲ್ಲ, ದೇಶದ ಕತೆ ಏನು ಅಂತೆಲ್ಲ ವರಾತ ಶುರು ಇಟ್ಟುಕೊಂಡರು.
ಬುದ್ಧಿಜೀವಿಗಳೇ, ಕಾದು ನೋಡುವುದಲ್ಲದೆ ನಿಮಗೆ ಅನ್ಯ ಮಾರ್ಗವಿಲ್ಲ!
– ಸಹನಾ ವಿಜಯ್ ಕುಮಾರ್
Action and reaction are equal and opposite. ಕ್ರಿಯೆ ಮತ್ತು ಪ್ರತಿಕ್ರಿಯೆಗಳು ವಿರುದ್ಧ ದಿಕ್ಕಿನಲ್ಲಿದ್ದರೂ ಸಮಬಲದಿಂದಿರುತ್ತವೆ. ಇದು ನ್ಯೂಟನ್ನ ಮೂರನೆಯ ನಿಯಮ. ಸುಮಾರು ಮೂರು ಶತಕಗಳಿಗೂ ಹಿಂದೆ, ಅಂದರೆ ಕ್ರಿ.ಶ. 1687ರಲ್ಲಿ ನ್ಯೂಟನ್ ಜಗತ್ತಿಗೆ ಸಾಬೀತುಪಡಿಸಿದ್ದು. ಈಗ 2014ರಲ್ಲಿ ನಾವು ಭಾರತೀಯರು ಈ ನಿಯಮದ ಸತ್ಯಾಸತ್ಯತೆಯನ್ನು ಮತ್ತೆ ಸಾಬೀತುಪಡಿಸಿದ್ದೇವೆ! ಇಲ್ಲಿ ಕ್ರಿಯೆ – ಚುನಾವಣಾ ಪೂರ್ವದಲ್ಲಿ ಇಡೀ ದೇಶದಲ್ಲಿ ಒಂದು ವ್ಯವಸ್ಥಿತ ಜಾಲವು ಮೋದಿಯವರ ಕುರಿತ ಭಯವನ್ನು ಹುಟ್ಟುಹಾಕಿದ್ದು. ಪ್ರತಿಕ್ರಿಯೆ – ಜನಸಾಮಾನ್ಯರು ಆ ಭಯದ ಹುಟ್ಟಡಗಿಸಿ ಮೋದಿಯವರಿಗೆ ಐತಿಹಾಸಿಕ ವಿಜಯ ದೊರಕಿಸಿಕೊಟ್ಟಿದ್ದು. ಒಂದು ವಿಶೇಷವೆಂದರೆ ಪ್ರತಿಕ್ರಿಯೆಯು ಕ್ರಿಯೆಗಿಂತ ಬಹಳ ಪಟ್ಟು ಹೆಚ್ಚಿದೆ, ತೀಕ್ಷ್ಣವಾಗಿದೆ ಹಾಗೂ ಮುಟ್ಟಿ ನೋಡಿಕೊಳ್ಳುವ ಹಾಗಿದೆ! ಈಗ ನ್ಯೂಟನ್ ಬದುಕಿದ್ದರೆ ಬಹಳ ಖುಷಿಪಡುತ್ತಿದ್ದ!
ಹೀಗೆ ಮಾಡುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿತ್ತು. ಏಕೆಂದರೆ ಈ ಕ್ರಿಯೆಯನ್ನು ಹುಟ್ಟುಹಾಕಿದವರು ಅಂತಿಂಥವರಲ್ಲ, ಮೂರು ವರ್ಗಗಳಾಗಿ ವಿಂಗಡಿಸಬಹುದಾದ ಘಟಾನುಘಟಿಗಳು. ಒಂದು ವರ್ಗ ರಾಜಕಾರಣಿಗಳದ್ದಾದರೆ ಮತ್ತೊಂದು ಸುದ್ದಿ ಮಾಧ್ಯಮಗಳದ್ದು. ಮೂರನೆಯ ಹಾಗೂ ಅತ್ಯಂತ ಕುಲೀನ(?) ವರ್ಗ ಪ್ರಗತಿಪರರು ಹಾಗೂ ಬುದ್ಧಿಜೀವಿಗಳದ್ದು. ರಾಜಕಾರಣಿಗಳು ಸಿದ್ಧಾಂತ ಭೇದ ಮರೆತು ಒಂದಾದರು. ಮೋದಿಯವರನ್ನು ರಾಕ್ಷಸನೆಂದು ಬಿಂಬಿಸಿ ತಮ್ಮ ಕ್ರಿಯೆಗೆ ಮೊದಲಿಟ್ಟುಕೊಂಡರು. ಇನ್ನು ಸುದ್ದಿ ಮಾಧ್ಯಮದವರು ಹಿಂದೆ ಬೀಳುತ್ತಾರೆಯೇ? ಅಪಸ್ಮಾರ ಇರುವವರಿಗಿಂತ ಹೆಚ್ಚಾಗಿ ದೇಹ ಮನಸಿನ ಸ್ಥಿಮಿತ ಕಳೆದುಕೊಂಡು ಆ ಕ್ರಿಯೆಗೆ ಶಕ್ತಿ ಹಾಗೂ ವೇಗ ತುಂಬಿದರು. ಯಾವ ರಾಷ್ಟ್ರೀಯ ಚಾನೆಲ್ ನೋಡಿದರೂ ಮೋದಿ ಎಂಬ ನರಹಂತಕನ ಗೋಧ್ರಾ ಕಥೆಯೇ. ಇನ್ನುಳಿದವರು ಪ್ರಗತಿಪರರು ಹಾಗೂ ಬುದ್ಧಿಜೀವಿಗಳು. ಇದೊಂಥರಾ ವಿಚಿತ್ರ ತಳಿ. ತಮಗೆ ತಲೆಯಿಂದ ಕಾಲಿನವರೆಗೂ ರಕ್ತ ಮಾಂಸಗಳ ಬದಲು ಬುದ್ಧಿಯೇ ತುಂಬಿಕೊಂಡಿದೆಯೆಂಬ ಭ್ರಾಂತಿಯ ಜನ. ಉಳಿದವರು ಕೇವಲವೆಂಬ ಉದ್ಧಟತನ. ಜೊತೆಗೆ ಇವರ ಆವುಟವನ್ನು ಎಲ್ಲರೂ ಸಹಿಸ ಲೇಬೇಕೆಂಬ ತಿಕ್ಕಲುತನ. ಇವರೂ ಗುಂಪುಕಟ್ಟಿಕೊಂಡು ತಮ್ಮ ಕೈಲಾದಷ್ಟು ‘ಭಯೋತ್ಪಾದನೆ'(ಭಯ+ಉತ್ಪಾದನೆ) ಮಾಡಿದರು.
ಈಗ ಇವರೆಲ್ಲರಿಗೂ ತಕ್ಕ ಪ್ರತಿಕ್ರಿಯೆ ನೀಡಿದ್ದೇವೆ ನೋಡಿ, ಬಾಲ ಮುದುರಿಕೊಂಡು ಸುಮ್ಮನಾಗಿದ್ದಾರೆ. ರಾಜಕಾರಣಿಗಳು ಪರಸ್ಪರ ದೋಷಾರೋಪಣೆಯ ಕೆಸರೆರಚಾಟದಲ್ಲಿ ನಿರತರಾಗಿದ್ದಾರೆ. ರಾಜ್ದೀಪ್ ಸರ್ದೇಸಾಯಿ, ಬರ್ಖಾ ದತ್ ಹಾಗೂ ಅರ್ಣಬ್ ಗೋಸ್ವಾಮಿಯರು ಇಂಗು ತಿಂದ ಮಂಗನ ಮುಖ ಮಾಡಿಕೊಂಡು ವಿಧಿಯಿಲ್ಲದೆ ಮೋದಿ ಸರ್ಕಾರದ ಮೊದಲ ದಿಟ್ಟ ಹೆಜ್ಜೆಗಳ ಸಮಾಚಾರ ಬಿತ್ತರಿಸುತ್ತಿದ್ದಾರೆ. ಕಡೇಪಕ್ಷ ಇವರು ಜನರಿಂದ ಓಡಿಹೋಗುತ್ತಿಲ್ಲ. ತಮ್ಮ ಲೆಕ್ಕಾಚಾರ ತಪ್ಪಾದುದನ್ನು ಮುಕ್ತವಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಆದರೆ ಈ ಬುದ್ಧಿಜೀವಿಗಳು ಹಾಗೂ ಪ್ರಗತಿಪರರ ದಂಡಿದೆಯಲ್ಲ, ಇವರ ಪಾಡು ಯಾರಿಗೂ ಬೇಡ. ಅತ್ತ ತಪ್ಪನ್ನು ಒಪ್ಪಿಕೊಳ್ಳಲಾಗದೆ, ಇತ್ತ ಸತ್ಯವನ್ನು ಅಲ್ಲಗಳೆಯಲೂ ಆಗದೆ ಕಾದ ಹೆಂಚಿನ ಮೇಲೆ ಕುಳಿತಂತೆ ಚಡಪಡಿಸುತ್ತಿದ್ದಾರೆ.
ತನ್ನದೇ ಮನಸ್ಸು(ಮಾನಸ), ಶಿರ(ಕೈಲಾಸ)ವನ್ನು ಹೊಂದಿರುವ ತನ್ನ ಮಗುವನ್ನು ಭಾರತ ಮರಳಿ ಪಡೆದೀತೇ?
– ರಾಜೇಶ್ ರಾವ್
“ಅಮೇರಿಕಾದಲ್ಲಿ ನಾವು ಆಶ್ರಯ ಪಡೆದಿದ್ದರೆ ನನ್ನ ಸಂಗಾತಿಗಳೂ ಅಮೇರಿಕರನ್ನರಾಗಿ ನಮ್ಮಲ್ಲೂ ಟಿಬೆಟ್ ತನ ಮಾಯವಾಗುತ್ತಿತ್ತು. ಭಾರತದ ಸಹಿಷ್ಣುತೆಯೇ ಜಗತ್ತಿನಲ್ಲಿ ನಾವು ನಮ್ಮತನವನ್ನು ಉಳಿಸಿಕೊಂಡಿದ್ದೇವೆ”-ದಲಾಯಿ ಲಾಮ. ಹಿಂದೂಗಳ ಸಹಿಷ್ಣುತೆಯ ಮನೋಭಾವನೆಯನ್ನು ವಿಶ್ವವೇ ಕೊಂಡಾಡುತ್ತದೆ. ಆದರೆ ಸಹಿಷ್ಣುಗಳಾಗುವ ಭರದಲ್ಲಿ ನಮ್ಮ ಭದ್ರತೆಗೆ ನಾವೇ ಕೊಳ್ಳಿ ಇಟ್ಟುಕೊಂಡಿರುವುದು ಅಷ್ಟೇ ಸತ್ಯ! ಬಂದವರಿಗೆಲ್ಲರಿಗೂ ಆಶ್ರಯ ಕೊಟ್ಟೆವು. ಕೆಲವರು ನಮ್ಮೊಂದಿಗೆ ಕಲೆತರು, ಕಲಿತರು. ಇನ್ನು ಕೆಲವರು ನಮ್ಮ ಬುಡಕ್ಕೇ ಕೊಳ್ಳಿ ಇಟ್ಟರು,ಇಡುತ್ತಲೇ ಇದ್ದಾರೆ! ಆಶ್ರಯ ಬೇಡಿ ಬಂದ ದಲಾಯಿ ಲಾಮರಿಗೇನೋ ಆಶ್ರಯ ಕೊಟ್ಟೆವು. ಆದರೆ ಭಾರತದ ರತ್ನ ಖಚಿತ ಕಿರೀಟವನ್ನೇ(ಟಿಬೆಟ್) ಕಳೆದುಕೊಂಡು ಬಿಟ್ಟೆವು!
ಸಹಸ್ರಾರು ವರ್ಷಗಳ ಕಾಲ ಭಾರತದ ಭಾಗವಾಗಿದ್ದು ಕೈಲಾಸ ಮಾನಸ ಸರೋವರಗಳನ್ನೊಳಗೊಂಡ ಟಿಬೆಟ್ ಮಂಗೋಲಿಯಾ, ಚೀನಾದ ರಾಜರುಗಳು ಹಾಗೂ ಬ್ರಿಟಿಷರ ಆಕ್ರಮಣಗಳಿಗೆ ತುತ್ತಾಗಿದ್ದರೂ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಂಡಿತ್ತು. ಆದರೆ 1950ರಲ್ಲಿ ಟಿಬೆಟನ್ನು ಚೀನಾ ಆಕ್ರಮಣ ಮಾಡಿದ ನಂತರ ಟಿಬೆಟಿಯನ್ನರು ತಮ್ಮ ಸ್ವಾತಂತ್ರ್ಯ ಸಾರ್ವಭೌಮತೆಗಳನ್ನು ಕಳೆದುಕೊಂಡುಬಿಟ್ಟರು. ಎರಡನೇ ವಿಶ್ವಯುದ್ಧದ ಕಾಲದಲ್ಲಿ ತನಗೆ ಸಮುದ್ರ ತೀರಗಳಿಲ್ಲದ ಹಿನ್ನೆಲೆಯಲ್ಲಿ ಜಪಾನ್ ಒಡ್ಡಿದ ಸವಾಲಿಗೆ ಮುಖಾಮುಖಿಯಾಗಿ ನಿಲ್ಲುವ ಸಂದರ್ಭದಲ್ಲಿ ಭಾರತದಿಂದ ಅವಶ್ಯಕ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ಟಿಬೆಟ್ ಮಾರ್ಗದ ಅನುಮತಿ ಕೇಳಿದಾಗ ಚೀನಾದ ವಿಸ್ತರಣಾವಾದಿ ನೀತಿ ಹಾಗೂ ಗೋಮುಖವ್ಯಾಘ್ರತನವನ್ನು ಅರಿತಿದ್ದ ಟಿಬೆಟ್ ಅನುಮತಿ ನಿರಾಕರಿಸಿತ್ತು.
ಕಳೆದ ಶತಮಾನದ ಆರಂಭದಲ್ಲಿ ಸುಮಾರು 65ಲಕ್ಷದಷ್ಟು ಜನಸಂಖ್ಯೆ ಟಿಬೆಟಿನಲ್ಲಿತ್ತು. ಆದರೆ ಟಿಬೆಟನ್ನು ಆಕ್ರಮಿಸಿದ ಚೀನಾ 15ಲಕ್ಷದಷ್ಟು ಜನರ ಮಾರಣಹೋಮ ನಡೆಸಿತು. ಚೀನಾದ ಪಾಶವೀಯತೆ ಯಾವ ಪರಿ ಇತ್ತೆಂದರೆ ಲಿಥಾಂಗ್ ವಿಹಾರದ ಮೇಲೆ ಬಾಂಬು ಹಾಕಿದಾಗ ವಿಹಾರದೊಳಗಿದ್ದ 6500 ಜನರ ಪೈಕಿ 4500ಕ್ಕೂ ಹೆಚ್ಚು ಜನರು ಹೆಣವಾಗಿ ಬಿದ್ದರು. 1959ರಲ್ಲಿ ದಲಾಯಿ ಲಾಮ ಸ್ವಯಂ ಗಡಿಪಾರಾಗಿ ಭಾರತದ ಆಶ್ರಯ ಪಡೆದರು. ಆದರೆ ಟಿಬೆಟಿಯನ್ನರ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಯಿತು. ಟಿಬೆಟನ್ನರು ದಲಾಯಿ ಲಾಮ ಭಾವಚಿತ್ರ ಇಟ್ಟುಕೊಳ್ಳುವುದು, ಬೌದ್ಧವಿಹಾರಗಳಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸುವುದು ಇವೆಲ್ಲಾ ಚೀನಾ ಆಕ್ರಮಿತ ಟಿಬೆಟಿನಲ್ಲಿ ಅಪರಾಧಗಳಾಗಿವೆ. ಟಿಬೆಟಿನಲ್ಲೇ ಇರುವ ಮಾನಸ ಸರೋವರ ಕೈಲಾಸಗ ಪರ್ವತಗಳಿಗೆ ಹೋಗಬೇಕಾದರೂ ಟಿಬೆಟಿಯನ್ನರು ಚೀನಾ ಸರಕಾರದ ಅನುಮತಿ ಪಡೆಯಬೇಕು. TAR ಮಾನ್ಯ ಮಾಡಿರುವ ಧಾರ್ಮಿಕ ಉತ್ಸವಗಳನ್ನು ಮಾತ್ರ ಟಿಬೆಟನ್ನರು ಆಚರಿಸಬೇಕು. ಬೌದ್ಧ ಸನ್ಯಾಸಿಗಳು ಇತರ ವಿಹಾರಗಳಿಗೆ ಭೇಟಿ ನೀಡುವಂತಿಲ್ಲ. ಚೀನಾ ಸರಕಾರ ನಿಗದಿಪಡಿಸಿರುವಷ್ಟೇ ಸಂಖ್ಯೆಯ ಸನ್ಯಾಸಿಗಳು ವಿಹಾರಗಳಲ್ಲಿರಬೇಕು. ಅಲ್ಲದೆ ಅವುಗಳಲ್ಲಿ ಕಡ್ಡಾಯವಾಗಿ ‘ದೇಶಭಕ್ತಿ ಶಿಕ್ಷಣದ’ ತರಗತಿ, ಚೀನಾದ ಆಡಳಿತ ಸಾಧನೆ ಕಂಠಪಾಠ ಮಾಡುವ ತರಗತಿಗಳಿಗೆ ಹಾಜರಾಗುವುದು, “ವಿಶಾಲ ತಾಯ್ನಾಡಿಗೆ” ಗೌರವ ಅರ್ಪಿಸುವ ಪ್ರಮಾಣ ಮಾಡುವುದು ಕಡ್ಡಾಯ. ಪ್ರವಾಸಿಗರು ಸ್ಥಳೀಯ ಟಿಬೆಟನ್ನರೊಂದಿಗೆ ಮಾತಾಡುವುದಾಗಲೀ, ಟಿಬೆಟ್ ಕಾಲೊನಿಗಳಿಗೆ ಹೋಗುವುದಾಗಲೀ ನಿಷಿದ್ದ! ಚೀನಾ ವಿರೋಧಿ ಚಟುವಟಿಕೆಗಳನ್ನು ನಡೆಸುವವರನ್ನು ಅವರ ಕುಟುಂಬದವರೇ ಸಾರ್ವಜನಿಕವಾಗಿ ಕಲ್ಲೆಸೆಯುವಂತಹ ಶಿಕ್ಷೆ ನೀಡಲಾಗುತ್ತದೆ. ಅಲ್ಲದೆ ಅಣ್ವಸ್ತ್ರ ಪರೀಕ್ಷೆಗೂ ಟಿಬೆಟ್ ನೆಲವನ್ನು ಬಳಸಲಾಗುತ್ತಿದೆ.
ಮತ್ತಷ್ಟು ಓದು 
“ಮಹಾನ್” ಇತಿಹಾಸಕಾರರೆಂಬ “ಮಹಾತ್ಮ”ರ ಸನ್ನಿಧಿಯಲ್ಲಿ….
– ರಾಘವೇಂದ್ರ ಅಡಿಗ ಎಚ್ಚೆನ್
ಕೆಲತಿಂಗಳ ಹಿಂದೆ ಬೆಂಗಳೂರಿನ ಟೀಚರ್ಸ್ ಕಾಲೇಜು ಸಭಾಂಗಣದಲ್ಲಿ ಒಂದು ಅಪರೂಪದ ಪುಸ್ತಕಗಳ ಬಿಡುಗಡೆ ಸಮಾರಂಭ ಏರ್ಪಾಡಾಗಿತ್ತು. ಕನ್ನಡದ ಖ್ಯಾತ ಲೇಖಕರಾದ ಡಾ. ಎಸ್.ಎಲ್. ಭೈರಪ್ಪನವರು ಭಾಗವಹಿಸಿದ್ದ ಆ ಕಾರ್ಯಕ್ರಾಮಕ್ಕೆ ಬಹಳ ನಿರೀಕ್ಷೆಗಳನ್ನಿಟ್ಟುಕೊಂಡು ನನ್ನಂತಹ ಸಾಕಷ್ಟು ಜನರು ಬಂದಿದ್ದರು. ಅಸಲಿಗೆ ಅಲ್ಲಿ ಬಿಡುಗಡೆಯಾಗುತ್ತಿದ್ದ ಪುಸ್ತಕಳು ಸಹ ಅಷ್ಟೇ ಕುತೂಹಲ ಹುಟ್ಟಿಸುವಂತಿದ್ದವು. ಸ್ವತಂತ್ರ ಭಾರತದ ಖ್ಯಾತ ಪತ್ರಿಕಾ ಬರಹಗಾರ, ಸಂಶೋಧಕ ಅರುಣ್ ಶೌರಿಯವರ ಪುಸ್ತಕದ ಬಿಡುಗಡೆ ಕಾರ್ಯಕ್ರಾಮವದಾಗಿತ್ತು.
ಅರುಣ್ ಶೌರಿ ಅವರೊಬ್ಬ ಪತ್ರಕರ್ತ, ಪತ್ರಿಕಾ ಸಂಪಾದಕ, ಧೀಮಂತ ರಾಜಕಾರಣಿ, ಸತ್ಯನಿಷ್ಟ ಬರಹಗಾರರಾಗಿ ಭಾರತದಾದ್ಯಂತ ಹೆಸರು ಮಾಡಿದವರು. ಕೇಂದ್ರದಲ್ಲಿ ಎನ್.ಡಿ.ಎ. ಸರ್ಕಾರವಿದ್ದ ಸಂದರ್ಭದಲ್ಲಿ ಸಮಾಚಾರ ಮತ್ತು ಪ್ರಸಾರ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಶೌರಿಯವರು ಸರ್ಕಾರಿ ಕೆಲಸ ಹಾಗೂ ಪತ್ರಿಕಾ ರಂಗ ಎರಡರಲ್ಲಿಯೂ ಒಳ್ಳೆಯ ಹೆಸರನ್ನು ಗಳಿಸಿಕೊಂಡಿರುವವರು.ಭಾರತದ ಪ್ರಸಿದ್ದ ಆಂಗ್ಲ ದೈನಿಕ “ಇಂಡಿಯನ್ ಎಕ್ಸ್ ಪ್ರೆಸ್”ನಲ್ಲಿ ಸಾಕಷ್ಟು ವರ್ಷ ಕೆಲಸ ಮಾಡಿದ್ದ ಶೌರಿಯವರು ಆ ಸಮಯದಲ್ಲಿ ಸಾಕಷ್ಟು ಭ್ರಷ್ಟಾಚರಗಳನ್ನು, ಹಗರಣಗಳನ್ನೂ ಬೆಳಕಿಗೆ ತಂದಿದ್ದರು. ಇವರ ಕೆಲಸ, ಸಮಾಜ ಸೇವೆಗೆ ಮೆಚ್ಚಿ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ, ದಾದಾಭಾಯಿ ನವರೋಜಿ ಪುರಸ್ಕಾರ, ಫ್ರೀಡಮ್ ಟು ಪಬ್ಲಿಷ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.
ಮೊದಲಿನಿಂದಲೂ ಅಧ್ಯಯನ, ಸಂಶೊಧನೆಗಳಲ್ಲಿ ಆಸಕ್ತಿ ತಳೆದಿದ್ದ ಅರುಣ್ ಶೌರಿಯವರು ತಾವೇ ಖುದ್ದಾಗಿ ಸಾಕಷ್ಟು ಪುಸ್ತಕಗಳನ್ನು ರಚಿಸಿದ್ದಾರೆ. “The Only Fatherland’’, “The World of Fatwas’’, “Eminent Historians’’, “ Does He know a Mother’s Heart?’’ ಇವೇ ಮೊದಲಾದ ಕೃತಿಗಳನ್ನು ರಚಿಸಿರುವ ಶೌರಿ ಈ ಒಂದೊಂದರಲ್ಲಿಯೂ ಸಾಕಷ್ಟು ಮಾಹಿತಿಯನ್ನು ಓದುಗರೊಡನೆ ಹಂಚಿಕೊಂಡಿದ್ದಾರೆ.ಅರುಣ್ ಶೌರಿಯವರ ಬರಹಗಳನ್ನು ಅರ್ಥ ಮಾಡಿಕೊಳ್ಳುವುದು ತುಸು ತ್ರಾಸದಾಯಕವದ ಕೆಲಸ.ಅವರಷ್ಟು ಚಿಂತನೆಗೆ ಹಚ್ಚುವ ಬರಹಗಾರರು ಮತ್ತೊಬ್ಬರು ಸಿಕ್ಕುವುದು ತೀರಾ ಅಪರೂಪವೆನ್ನಬೇಕು. ಅಂತಹಾ ಶೌರಿಯವರ ಪುಸ್ತಕವೊಂದು ಕನ್ನಡಕ್ಕೆ ಬಂದಿದೆ.ಅರುಣ್ ಶೌರಿಯವರ “Eminent Historians’’ಕೃತಿಯನ್ನು “ಮಹಾನ್” ಇತಿಹಾಸಕಾರರು ಎನ್ನುವ ಹೆಸರಿನಲ್ಲಿ ಮಂಜುನಾಥ ಅಜ್ಜಂಪುರರವರು ಕನ್ನದಕ್ಕೆ ಅನುವಾದಿಸಿ ನಮ್ಮ ಕೈಗಿತ್ತಿದ್ದಾರೆ. ಇತಿಹಾಸದ ಬಗ್ಗೆ ಆಸಕ್ತಿ ಇರುವ ಪ್ರತಿಯೊಬ್ಬರಿಗೂ ಇಷ್ಟವಾಗುವ ಕೃತಿ ಇದು ಎಂದರೆ ತಪ್ಪಾಗಲಾರದು.
ಚುನಾವಣೆ 2014: ಯುಪಿಎ ಸೋಲಿಗೆ ಕಾರಣಗಳೇನು?
– ತುರುವೇಕೆರೆ ಪ್ರಸಾದ್
ಲೋಕಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ನಿಜವಾಗಿದ್ದು ಅದರಂತೆ ಬಿಜೆಪಿ ಮತ್ತು ಅದರ ಮಿತ್ರಪಕ್ಕಗಳನ್ನೊಳಗೊಂಡ ಎನ್ಡಿಎ ಕಳೆದ 25 ವರ್ಷಗಳಲ್ಲೇ ಐತಿಹಾಸಿಕ ಎನ್ನಬಹುದಾದ ಭಾರೀ ಗೆಲುವು ದಾಖಲಿಸಿದೆ. ಯುಪಿಎ ನೂರರ ಗಡಿ ಮುಟ್ಟಲಾಗದೆ ದಯನೀಯ ಸೋಲು ಕಂಡಿದೆ. ಯುಪಿಎ ವೈಫಲ್ಯಕ್ಕೆ ಕಾರಣವಾದ ಹಲವು ಅಂಶಗಳಿವೆ. ಅವುಗಳಲ್ಲಿ ಮಿತಿ ಮೀರಿದ ಭ್ರಷ್ಟಾಚಾರ, ಸಾಲು ಸಾಲು ಹಗರಣಗಳು, ಹಣದುಬ್ಬರ, ಬೆಲೆಯೇರಿಕೆ ಇವು ಪ್ರಮುಖ ಕಾರಣಗಳು. ಯುಪಿಎ ಸರ್ಕಾರದ ವೈಫಲ್ಯಕ್ಕೆ ಕಾರಣವಾದ ಅಂಕಿ-ಅಂಶಗಳನ್ನು ಖ್ಯಾತ ಪತ್ರಕರ್ತ ಸೆನ್ಗುಪ್ತ ಪಟ್ಟಿ ಮಾಡಿದ್ದಾರೆ. ಅವುಗಳ ಸಾರಾಂಶ ಈ ಕೆಳಕಂಡಂತಿದೆ
• ಯುಪಿಎ ಆಢಿತಾವಧಿಯಲ್ಲಿ ನಡೆದ 1.76 ಲಕ್ಷ ಕೋಟಿಯ 2ಜಿ ಹಗರಣ, 1.85 ಲಕ್ಷ ಕೋಟಿಯ ಕಲ್ಲಿದ್ದಲು ಹಂಚಿಕೆ ಹಗರಣ, ರೂ.3600 ಕೋಟಿಯ ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಹಗರಣ, 90 ಕೋಟಿ ಹಣ ದುರುಪಯೋಗದ ಕಾಮನ್ವೆಲ್ತ್ ಕ್ರೀಡಾಕೂಟದ ಹಗರಣ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಶನ್ನಿಂದ 5000 ಕೋಟಿ ದುರುಪಯೋಗದ ಆರೋಪ ಹೊತ್ತಿರುವ ಮಾಯಾವತಿ ಸರ್ಕಾರದ ಹಗರಣ- ಇವನ್ನು ಜನ ಎಂದಿಗೂ ಕ್ಷಮಿಸುವುದಿಲ್ಲ ಎಂಬುದನ್ನು ಈ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ.
• 2011ರಲ್ಲಿ ಸುಮಾರು 4 ಲಕ್ಷ ಕೋಟಿ ಕಪ್ಪು ಹಣ ಭಾರತದಿಂದ ಆಚೆ ಸಾಗಿಸಲಾಗಿದೆ. ಇದು 2010ರ ಶೇ.24ರಷ್ಟು ಹೆಚ್ಚು. ಪ್ರತಿ ವರ್ಷ ಇದು ಅವ್ಯಾಹತವಾಗಿ ನಡೆದು ಬಂದಿದೆ. ಆದರೆ ಸ್ವಿಸ್ ಬ್ಯಾಂಕ್ನಲ್ಲಿದೆ ಎಂದು ಹೇಳಾಗಿರುವ 1456 ಬಿಲಿಯನ್ ಡಾಲರ್ ಹಣ ಹಿಂದೆ ಪಡೆಯಲು ಯುಪಿಎ ಸರ್ಕಾರ ಯಾವ ಗಂಭೀರ ಪ್ರಯತ್ನವನ್ನೂ ಮಾಡಲಿಲ್ಲ.
• ಯುಪಿಎ ಸರ್ಕಾರದ ಮಹದಾಕಾಂಕ್ಷಿ ಯೋಜನೆ ಎನಿಸಿದ ಉದ್ಯೋಗ ಖಾತ್ರಿ ಯೋಜನೆಯಡಿ ಯುಪಿಎ ಸರ್ಕಾರ 1.9ಲಕ್ಷ ಕೋಟಿ ಹಣ ವೆಚ್ಚ ಮಾಡಿದೆ. ಆದರೆ ಶೇ.31 ಗ್ರಾ.ಪಂಚಾಯ್ತಿಗಳಿಗೆ ಈ ಹಣ ಹೇಗೆ ವಿನಿಯೋಗಿಸಬೇಕು ಎಂಬುದೇ ಗೊತ್ತಿಲ್ಲ, ರಾಜ್ಯದಲ್ಲಿನ ಹಳೆ ಉಳಿಕೆ, ಬಳಕೆಯ ಲೆಕ್ಕವೇ ಇಡದೆ ಕಳೆದ 3 ವರ್ಷಗಳಿಂದ ಒಟ್ಟಾರೆ 11549 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. 4.33 ಲಕ್ಷ ಜಾಬ್ ಕಾರ್ಡ್ಗಳಿಗೆ ಭಾವಚಿತ್ರವೇ ಇಲ್ಲ, ಗ್ರಾಮೀಣ ಪ್ರದೇಶದಲ್ಲಿ ಕೇವಲ ಶೇ.20 ಹಣವನ್ನು ಮಾತ್ರ ಉದ್ದೇಶಿತ ಯೋಜನೆಗಳಿಗೆ ಬಳಸಲಾಗಿದ್ದು ವ್ಯಾಪಕ ಅವ್ಯವಹಾರ ನಡೆದಿದೆ ಎಂದು ಸಿಎಜಿ ಆಕ್ಷೇಪಿಸಿದೆ.
ರಾಜಕೀಯದ ‘ಬಂಡವಾಳ’
– ಸಂದೀಪ ಫಡ್ಕೆ, ಮುಂಡಾಜೆ
ಅಧಿಕಾರದ ಚುಕ್ಕಾಣಿ ಹಿಡಿಯಲು, ರಾಜಕೀಯ ಪಕ್ಷಗಳಿಗೆ ಜನರ ಬೆಂಬಲ ಅವಶ್ಯಕ. ವಿವಿಧ ಆಶೋತ್ತರಗಳನ್ನು ಈಡೇರಿಸುವ ವಾಗ್ದಾನ ಮಾಡುವ ಇವರಿಗೆ, ಕಿಂಚಿತ್ತು ಸಹಾಯ ಮಾಡುವ ಅವಕಾಶ ನಮ್ಮ ಸಂವಿಧಾನ ಕೊಟ್ಟಿದೆ. ಪ್ರಜಾಪ್ರಭುತ್ವದ ದೃಷ್ಟಿಯಿಂದಲೂ, ನಾಗರಿಕರ ಹಕ್ಕು ಕೇವಲ ಮತದಾನಕಷ್ಟೇ ಸೀಮಿತವಾಗಬಾರದು. ಹಾಗಾಗಿ ಅರ್ಹ ವ್ಯಕ್ತಿ ಯಾ ಪಕ್ಷಕ್ಕೆ ದೇಣಿಗೆಯ ರೂಪದಲ್ಲಿ ಹಣದ ನೆರವನ್ನು ನೀಡಬಹುದು. ಆದರೆ, ಇತ್ತೀಚೆಗೆ ಸಂತ್ರಸ್ತರ ಪರಿಹಾರ ನಿಧಿಗೆ ಅಥವಾ ಸಮಾಜ ಸೇವೆಗೆ ಸಂದಾಯವಾಗುವ ಹಣಕ್ಕಿಂತ ಹೆಚ್ಚು ರಾಜಕೀಯ ಪಕ್ಷಗಳ ಪಾಲಾಗುತ್ತಿದೆ. ಸ್ವಾರ್ಥ ರಕ್ಷಣೆಗಾಗಿ, ಬೃಹತ್ ಉದ್ದಿಮೆದಾರರ ಕಪಿಮುಷ್ಠಿಯಲ್ಲಿ ಪಕ್ಷಗಳು ನಲುಗುತ್ತಿವೆ. ಇದರ ಇನ್ನೊಂದು ಮುಖವೆಂಬಂತೆ ಅಭ್ಯರ್ಥಿ ಯಾ ಪಕ್ಷಕ್ಕೆ ಹಣದ ಹೊಳೆ ಹರಿಯುತ್ತಿದೆ.
ಸ್ವಾತಂತ್ರ್ಯ ಪೂರ್ವದಲ್ಲೂ, ಉದ್ಯಮರಂಗ ಚುನಾವಣೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿತ್ತು. ಸದಸ್ಯತ್ವ ಶುಲ್ಕ ಮತ್ತು ವೈಯುಕ್ತಿಕ ದೇಣಿಗೆಯಿಂದ ಚುನಾವಣೆಯ ವೆಚ್ಚ ಭರಿಸಲು ಪಕ್ಷಗಳಿಗೆ ಸಾಧ್ಯವಾಗದೇ ಇದ್ದುದ್ದು ಇದಕ್ಕೆ ಪ್ರಮುಖ ಕಾರಣ. ಕಾಲಕ್ರಮೇಣ ಚುನಾವಣೆಯ ಸಿದ್ಧತೆ ಮತ್ತು ಕಾರ್ಯಗತಗೊಳಿಸುವುದು ದುಬಾರಿಯಾಗುತ್ತಾ ಹೋಯಿತು. 2009ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗೆ ಸರ್ಕಾರ ಸುಮಾರು 1120 ಕೋಟಿ ರೂಪಾಯಿ ವ್ಯಯಿಸಿದೆ. ಅಲ್ಲದೇ, ವಿವಿಧ ಅಭ್ಯರ್ಥಿ ಮತ್ತು ಪಕ್ಷಗಳು ಒಟ್ಟು ಸುಮಾರು 14 ಸಾವಿರ ಕೋಟಿ ಖರ್ಚು ಮಾಡಿರುವುದು ಅಂದಾಜಿಸಲಾಗಿದೆ. ಹೀಗಾಗಿ, ರಾಜಕೀಯ ಪಕ್ಷಗಳು ಹೆಚ್ಚಿನ ಹಣವನ್ನು ಕಂಪನಿಗಳಿಂದ ಪಡೆಯುತ್ತಿವೆ. ಈ ಸಲುವಾಗಿ, 1960ರಲ್ಲಿ ಕಂಪನಿ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಕಂಪನಿಗಳು ನಿಗದಿತ ಮೊತ್ತದಷ್ಟು ಹಣವನ್ನು ಪಕ್ಷಗಳಿಗೆ ನೀಡಬಹುದೆಂದು ಕಾಯ್ದೆ ಉಲ್ಲೇಖಿಸಿತ್ತು. ಆದರೆ ಇದು ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ಕೆಂಗಣ್ಣಿಗೆ ಗುರಿಯಾಯಿತು. ಸರ್ಕಾರ ಕೇವಲ ತನಗೆ ಸಹಕರಿಸಿದ ಬೃಹತ್ ಉದ್ದಿಮೆದಾರರ ಹಿತ ಕಾಪಾಡುವಲ್ಲಿ ಶಾಮೀಲಾಯಿತು. ಹೀಗೆ ಟೀಕೆಗೊಳಪಟ್ಟ ಕಾಯ್ದೆಗೆ 1969ರಲ್ಲಿ ತಿದ್ದುಪಡಿ ತರಲಾಯಿತು. ಈ ತಿದ್ದುಪಡಿ, ರಾಜಕೀಯ ಪಕ್ಷಗಳಿಗೆ ಹಣ ಪೂರೈಸುವುದು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಿತು. ಆದರೆ, ಈ ‘ದೇಣಿಗೆ’ಯಿಂದ ಪಕ್ಷ ಮತ್ತು ಕಂಪನಿಗಳಿಗೆ ಪ್ರಯೋಜನವಿತ್ತು. ಆದ್ದರಿಂದ, ಅಕ್ರಮವಾಗಿ ಹಣ ರವಾನಿಸುವ ಚಟುವಟಿಕೆಗಳು ಶುರುವಾದವು. 1985ರಲ್ಲಿ ಮತ್ತೊಂದು ತಿದ್ದುಪಡಿ ತರಲಾಯಿತಾದರೂ ಪರಿಣಾಮ ಬೀರಲಿಲ್ಲ.




