ಪ್ರಗತಿಪರರ ಈ ವಿತಂಡ ಹೋರಾಟ ಹಿಂದೂಗಳ ಆಚರಣೆಗಳ ಮೇಲೆಯೇ ಏಕೆ..?
– ನಮೋ ಹಿಂದುಸ್ಥಾನಿ
ಓದಿದ್ದೇವೆ ಎನ್ನುವ ಹಮ್ಮುಬಿಮ್ಮಿನ ಮೂಲಕ, ಕೈಯ್ಯಲೊಂದಿಷ್ಟು ಅವಾರ್ಡಗಳು, ಕುತ್ತಿಗೆಮೇಲೆ ಒಂದಿಷ್ಟು ಬೋರ್ಡ್ ಗಳು, ಹೀಗೆ ಹಲಾವಾರು ರೀತಿಯಲ್ಲಿ ಕಾಣಿಸಿಕೊಳ್ಳುವ ಈ ಪ್ರಗತಿಪರರು ಲಗ್ಗೆ ಇಡುವುದೇ ಪುರಾತನ ಹಿಂದೂ ಆಚರಣೆಗಳು ಮೇಲೆ.
ಮೊದಲೆಲ್ಲ ಟೀಕಿಸುತ್ತಿದ್ದವರು, ಇಂದು ಬರಬರುತ್ತ ಇವರ ಅಟಾಟೋಪಗಳು ಹಿಂದೂ ಸಂಪ್ರದಾಯದ ಮೇಲೆ ಬಿದ್ದಿದೆ. ಕಾಲ ಬದಲಾಗುತ್ತಿದೆ ಎಲ್ಲರು ವಿದ್ಯಾವಂತರಾದೆವೆಂದು ಪಾಶ್ಚಾತ್ಯ ಶೈಲಿಯ ವಿದೇಶಿಗರ ಉಡುಗೆ ತೊಡುಗೆಗೆ ಮಾರುಹೋಗಿ ಹಿಂದುತ್ವವನ್ನೇ ಬಿಟ್ಟು ಬಿಡುವ ಕೊನೆ ಪರಿಸ್ಥಿತಿಯ ಕಡೆ ಪಯಣವೇ ಇವರ ಈ ಹಿಂದೂ ವಿರೋಧಿ ರೀತಿ-ನೀತಿ ರುಜುವಾತುಗಳು. ಮತ್ತಷ್ಟು ಓದು 
ಅರ್ಝಿ ಹುಕುಮತ್-ಇ-ಹಿಂದ್ ಆಜಾದ್: ಸ್ವತಂತ್ರ ಭಾರತದ ಪ್ರಾಂತೀಯ ಸರಕಾರಕ್ಕೆ 75..!
– ಶ್ರೇಯಾಂಕ ಎಸ್ ರಾನಡೆ.
‘ಬೋಸ್ ಹಾಗೂ ಐಎನ್ಎ ಪ್ರತಿನಿಧಿಗಳನ್ನು “ದೇಶಭಕ್ತರಲ್ಲೇ ಶ್ರೇಷ್ಠರು” ಎಂದು ಬ್ರಿಟಿಷ್ರಾಜ್ ಪರಿಗಣಿಸಿತು’- ಎಡ್ವಡ್ಸ್ ಮೈಕಲ್, ದಿ ಲಾಸ್ಟ್ ಇಯರ್ಸ್ ಆಫ್ ಬ್ರಿಟಿಷ್ ಇಂಡಿಯಾ, ಕ್ಲೀವ್ಲ್ಯಾಂಡ್ ಪ್ರಕಾಶನ, 1964, ಪುಟ: 93.
ಅಕ್ಟೋಬರ್ 21, 1943, ಭಾರತ ಬ್ರಿಟಿಷರಿಂದ ದಾಸ್ಯದ ಮುಕ್ತಿಗಾಗಿ ಸ್ವಾತಂತ್ರ್ಯದ ಪ್ರಾಪ್ತಿಗಾಗಿ ಕೊನೆಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ತುದಿಗಾಲಲ್ಲಿ ನಿಂತಿದ್ದ ಸಂದರ್ಭ. ಒಂದೆಡೆ ಗಾಂಧೀಜಿಯೇ ಸ್ವಾತಂತ್ರ್ಯ ದೊರಕಲು ಹಳೆಯ ಮಾರ್ಗಗಳಿಗೆ ಶುಭವಿದಾಯ ಹೇಳಿ, 1942ರಲ್ಲಿ “ಮಾಡು ಇಲ್ಲವೆ ಮಡಿ: ಭಾರತ ಬಿಟ್ಟು ತೊಲಗಿ” ಆಂದೋಲನಕ್ಕೆ ಕರೆ ನೀಡಿದ್ದರೆ, ಮತ್ತೊಂದೆಡೆ ಅದಕ್ಕೆ ಪರೋಕ್ಷ ಉತ್ತೇಜನ ಮತ್ತು ಅಂತಹ ಹೋರಾಟಕ್ಕೆ ಅನಿವಾರ್ಯತೆಯನ್ನು ಸೃಷ್ಟಿಸುವ ಪ್ರಕ್ರಿಯೆ ವಿದೇಶಿ ನೆಲದಲ್ಲಿ ನೆಲೆಸಿದ್ದ ಭಾರತೀಯ ಹೋರಾಟಗಾರರಿಂದ ನಡೆಯುತ್ತಿತ್ತು. ಮತ್ತಷ್ಟು ಓದು 
ರಾಫೆಲ್ : ಇಲ್ಲದ ಹಗರಣ ಸೃಷ್ಟಿಸಲು ಹೊರಟ ರಾಹುಲ್
– ರಾಕೇಶ್ ಶೆಟ್ಟಿ
ರಾಫೆಲ್ ಬಗ್ಗೆ ಈ ಹಿಂದೆಯೇ ಬರೆದಿದ್ದ ಲೇಖನದಲ್ಲಿ ದೇಸಿ ಗೊಬೆಲ್ಸ್ ರಾಹುಲ್ ಆಂಡ್ ಕಂಪೆನಿ ಯಾವ ರೀತಿಯಲ್ಲಿ, ಹಿಟ್ಲರ್ ಸರ್ಕಾರದ Goebbels Theoryಯನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ವಿವರಿಸಿದ್ದೆ.ಕಳೆದ ಕೆಲವು ತಿಂಗಳಿನಿಂದ ರಾಫೆಲ್ ಕುರಿತು ಜನರ ಮನದಲ್ಲಿ ಅನುಮಾನ ಮೂಡಿಸುವಂತೆಯೇ ಆಗೀಗ ಮಾತನಾಡುತ್ತಿದ್ದ ಕಾಂಗ್ರೆಸ್ ಈಗ ಪದೇ ಪದೇ ರಾಫೆಲ್ ಒಪ್ಪಂದದಲ್ಲಿ ಹಗರಣ ನಡೆದಿದೆಯೆಂದು ಬೊಬ್ಬೆ ಹೊಡೆಯುತ್ತಿದೆ.ಕರ್ನಾಟಕದಲ್ಲಂತೂ ಪ್ರತಿ ಜಿಲ್ಲೆಯಲ್ಲೂ ಈ ಬಗ್ಗೆ ಪ್ರತಿಭಟನೆಯನ್ನು ಕಾಂಗ್ರೆಸ್ ನಡೆಸುತ್ತಿದೆ. ಮಂಗಳೂರಿನಲ್ಲಿ ನಡೆದ ರಾಫೆಲ್ ಪ್ರತಿಭಟನೆಯ ವಿಡಿಯೋ ತುಣುಕೊಂದು, ಕಾಂಗ್ರೆಸ್ ಎಂಬ ಪುರಾತನ ಪಕ್ಷದ ದೈನೇಸಿ ಸ್ಥಿತಿಗೆ ಕೈಗನ್ನಡಿ ಹಿಡಿದಂತಿತ್ತು. ಪ್ರತಿಭಟನೆಗೆ ಬಂದ ಅರ್ಧದಷ್ಟು ಕಾರ್ಯಕರ್ತರಿಗೆ ಯಾವ ವಿಷಯಕ್ಕಾಗಿ ಪ್ರತಿಭಟನೆ ಎಂದೇ ಗೊತ್ತಿರಲಿಲ್ಲ.ಕೆಲವರು ಪೆಟ್ರೋಲ್,ಡೀಸೆಲ್ ಬೆಲೆ ಇಳಿಸಬೇಕು ಎಂದರೆ,ಇನ್ನು ಕೆಲವರು ಬಾಯಿಗೆ ಬಂದಷ್ಟು ಅಂಕಿ ಸಂಖ್ಯೆಯಲ್ಲಿ ಹಗರಣವಾಗಿದೆ ಎನ್ನುತ್ತಿದ್ದರು. ಕೆಲವರಿಗೆ ರಾಫೆಲ್ ಎಂದರೇನು ಎನ್ನುವುದೂ ಗೊತ್ತಿಲ್ಲ ಆದರೂ ಪ್ರತಿಭಟಿಸಬೇಕು.ಯಾಕೆ? ಯಾಕೆಂದರೆ ಆರೋಪ ಮಾಡುತ್ತಿರುವುದು ಮೋದಿಯ ಮೇಲಲ್ಲವೇ ಅದಕ್ಕಾಗಿ.
HAL ಅನ್ನು ಬಿಟ್ಟು ರಿಲಯನ್ಸ್ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಮೋದಿ ಸರ್ಕಾರ ಜನರಿಗೆ ಮೋಸ ಮಾಡಿದೆ ಎನ್ನುವ ಬಗ್ಗೆಯೇ ಹೆಚ್ಚು ಮಾತನಾಡಲಾಗುತ್ತಿದೆ. ಮೋದಿ ಅಧಿಕಾರಕ್ಕೆ ಬಂದರೆ ಅಂಬಾನಿ,ಅದಾನಿಯಂತವರಿಗೆ ಮಾತ್ರ ಲಾಭ ಎಂದು ಗಂಜಿಗಿರಾಕಿಗಳು ಚುನಾವಣೆಗೆ ಮೊದಲು ಕುಯ್ಯಿಗುಡುತ್ತಿದ್ದರು. ಈಗ ಈ ಒಪ್ಪಂದವನ್ನಿಡಿದು ನೋಡಿ ಹೇಳಿರ್ಲಿಲ್ವಾ ಎನ್ನುತ್ತಿದ್ದಾರೆ. ದಸಾಲ್ಟ್ ಹಾಗೂ ರಿಲಯನ್ಸ್ ಒಪ್ಪಂದದ ಬಗ್ಗೆ ಮಾತನಾಡುವ ಮೊದಲು,ದೇಶದ ರಕ್ಷಣಾ ಉದ್ಯಮದಲ್ಲಿ ಈಗಾಗಲೇ ಇರುವ ಖಾಸಗಿ ಕಂಪೆನಿಗಳ ಬಗ್ಗೆಯೂ ಒಮ್ಮೆ ನೋಡಿಬಿಡೋಣ. ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ ಹಾಗೂ ಚಿನುಕ್ ಹೆವಿ ಲಿಫ್ಟ್ ಹೆಲಿಕಾಪ್ಟರ್ ಗಾಗಿ ಅಮೆರಿಕಾದ ಜೊತೆಗೆ ನಡೆದ ಒಪ್ಪಂದದಲ್ಲಿ ಇಂಡಿಯನ್ ಆಫ್ಸೆಟ್ ಪಾಲುದಾರರನ್ನಾಗಿ ಬೋಯಿಂಗ್ ಆರಿಸಿಕೊಂಡಿದ್ದು ಟಾಟಾ ಅಡ್ವಾನ್ಡ್ಸ್ ಸಿಸ್ಟಮ್,ಡೈನಮೆಟಿಕ್ ಟೆಕ್ನಲಾಜಿಸ್ ಮತ್ತಿತ್ತರರನ್ನು.
ರಾಫೆಲ್ ಒಪ್ಪಂದ ಹೇಗೆ ಭಾರತ-ಫ್ರಾನ್ಸ್ ಸರ್ಕಾರಗಳ ನಡುವೆ ನಡೆದಿದೆಯೋ ಅದೇ ರೀತಿಯಲ್ಲಿ ಭಾರತ-ಅಮೆರಿಕಾದ ನಡುವೆ M777 ULH ಆರ್ಟಿಲರಿಗಳ ಒಪ್ಪಂದವಾಗಿತ್ತು. ೧೪೫ರಲ್ಲಿ ೨೫ಗನ್ ಗಳನ್ನು ಅದರ ಉತ್ಪಾದಕ ಸಂಸ್ಥೆ ಬಿಇಎಸ್ ಸಿಸ್ಟಮ್ ಪೂರೈಸಿದರೆ, ಇನ್ನುಳಿದ ೧೨೦ನ್ನು ಭಾರತದಲ್ಲಿ ಜೋಡಣೆ ಮಾಡಲು ಒಪ್ಪಂದವಾಗಿತ್ತು. ಈ ಒಪ್ಪಂದದಲ್ಲಿ ಆಫ್ ಸೆಟ್ ಪಾಲುದಾರನನ್ನಾಗಿ ಬಿಇಎಸ್ ಸಿಸ್ಟಮ್ ಆರಿಸಿಕೊಂಡಿದ್ದು ಮಹಿಂದ್ರಾ ಡಿಫೆನ್ಸ್ ಅನ್ನು.
ದೇಶ ವಿಭಜನೆಯ ಕಾರ್ಯಕ್ರಮದ ಹೆಸರು ದ್ರಾವಿಡ ಸಮ್ಮೇಳನ
– ರಾಕೇಶ್ ಶೆಟ್ಟಿ
“ಯಾವುದರ ಉದ್ದೇಶ Constructive ಆಗಿರುತ್ತದೆಯೋ ಅಂತಹದ್ದು ಮಾತ್ರ ಈ ನೆಲದಲ್ಲಿ ಉಳಿಯುತ್ತದೆ. Destructive ಉದ್ದೇಶವಿರುವಂತವು ಒಂದಷ್ಟು ದಿನ ವಿಜೃಂಭಿಸಿದರೂ ಅಂತಿಮವಾಗಿ ಅವು ಇಲ್ಲಿಂದ ನಾಮಾವಶೇಷವಾಗುತ್ತವೆ”. ಭಾರತದಿಂದ ಬೌದ್ಧ ಮತವೇಕೆ ಹೊರಗೆ ಹೋಗಬೇಕಾಯಿತು ಎಂದು ಶಿಷ್ಯನೊಬ್ಬ ಕೇಳಿದ ಪ್ರಶ್ನೆಗೆ ಈ ಅರ್ಥದಲ್ಲಿ ಸ್ವಾಮಿ ವಿವೇಕಾನಂದರು ಉತ್ತರಿಸುತ್ತಾರೆ. ಅವರು ಹೇಳಿದ ಮಾತು ಎಷ್ಟು ಸತ್ಯವೆನ್ನಲು ಪಕ್ಕದ ತಮಿಳುನಾಡಿನಲ್ಲಿ ಶುರುವಾಗಿದ್ದ ದ್ರಾವಿಡ ಚಳವಳಿ ಎಂಬ ಅತಿರೇಕವು ಇಂದು ಕೊನೆಯುಸಿರುಳೆಯುತ್ತಿರುವುದೇ ಉದಾಹರಣೆ. ಕನ್ನಡ ಮನೆ ಭಾಷೆಯಾಗಿದ್ದ ರಾಮಸ್ವಾಮಿ ಅವರಿಂದ ಶುರುವಾದ ಈ ದ್ರಾವಿಡ ಚಳವಳಿಯ ಬೇರಿನಲ್ಲೇ ದ್ವೇಷದ ವಿಷ ತುಂಬಿಕೊಂಡಿತ್ತು.
ಹಾವು-ಹಾರವ ಎದುರಾದರೇ ಮೊದಲು ಹಾರವನನ್ನು ಕೊಲ್ಲು ನಂತರ ಹಾವನ್ನು ಎನ್ನುವ ವಿಷ ಚಿಂತನೆಯಿಂದ ಹುಟ್ಟಿಕೊಂಡ ಚಳವಳಿ ಹೇಗೆ ತಾನೇ ಇರಲು ಸಾಧ್ಯ? ದೇವರ ವಿಗ್ರಹಗಳನ್ನು ಹೊರಗೆ ಎಳೆದು ತಂದು ಚಪ್ಪಲಿ ಹಾರ ಹಾಕಿದರು. ಬ್ರಾಹ್ಮಣರ ಜುಟ್ಟು-ಜನಿವಾರಗಳನ್ನು ಕಿತ್ತುಹಾಕಿ ಎಂದು ಬೊಬ್ಬಿಟ್ಟರು.ತಮಿಳನ್ನು ಸಂಸ್ಕೃತದಿಂದ ಶುದ್ಧ ಮಾಡಬೇಕು ಎನ್ನುತ್ತಾ ತಮಿಳು ನಾಡನ್ನು ,ತಮಿಳರನ್ನು ಒಂದು ದ್ವೀಪವನ್ನಾಗಿ ಮಾಡಿಕೊಂಡರು. ಜೀವನವಿಡೀ ನಕಾರಾತ್ಮಕ ಚಿಂತನೆಯನ್ನೇ ಹೇಳಿಕೊಂಡು ಬಂದು,ತಮಿಳರಿಂದ ಪೆರಿಯಾರ್ ಎಂದು ಕರೆಸಿಕೊಂಡ ರಾಮಸ್ವಾಮಿಯವರ ಸಂಗ,ಅವರ ಒಂದು ಕಾಲದ ಶಿಷ್ಯರಿಗೆ ಸಾಕಾಯಿತು. ಅವರಿಂದ ಕಳಚಿಕೊಂಡು ಡಿಎಂಕೆ ಸ್ಥಾಪನೆಯಾಯಿತು. ಅದೇ ಡಿಎಂಕೆಯ ಒಡಲಿನಿಂದ ಎಐಡಿಎಂಕೆ ಹುಟ್ಟಿಕೊಂಡಿತು. ಮುಂದೆ ಅರ್ಧ ದಶಕಗಳಿಗೂ ಹೆಚ್ಚು ಕಾಲ ದ್ರಾವಿಡ ರಾಜಕೀಯವೆಂಬ ಹೆಸರಿನ ಹೂವನ್ನೇ ತಮಿಳರ ಕಿವಿಗೆ ಮುಡಿಸಿ ಅಧಿಕಾರ ನಡೆಸಿದ್ದು ಇವೆರಡು ಪಕ್ಷಗಳೇ. ಅದರಲ್ಲೂ ಕರುಣಾನಿಧಿಯವರ ಕುಟುಂಬವಂತೂ ದೇಶಕ್ಕೆ ಅಮರಿಕೊಂಡ ನೆಹರೂ ಕುಟುಂಬದಂತೆಯೇ ಆಗಿ ಹೋಗಿತ್ತು. ದೊಡ್ಡ ಮಗನ ಕೋಟೆ ಮಧುರೈನಲ್ಲಿ,ಚಿಕ್ಕ ಮಗನ ರಾಜ್ಯಭಾರ ಚೆನ್ನೈನಲ್ಲಿ ಮತ್ತೊಬ್ಬ ಮಡದಿಯ ಮಗನದು ಕೊಂಗನಾಡು,ಹೀಗೆ ತುಂಡು ರಾಜರ ಕಾಲದ ಪಾಳೆಯಪಟ್ಟುಗಳಂತಹ ರಾಜಕೀಯವದು.ಇಂತಹ ರಾಜಕೀಯ ಅತಿರೇಕಗಳು ಮತ್ತು ನಕಾರಾತ್ಮಕ ಚಳವಳಿಯ ಪರಿಣಾಮ ಹೇಗಿರುತ್ತದೆ ಎನ್ನುವುದನ್ನು ಜಯಲಲಿತಾ ಸಾವು ಮೊದಲ ಬಾರಿಗೆ ತೋರಿಸಿಕೊಟ್ಟಿತು. ತಮ್ಮ ತಮಿಳು ದ್ವೀಪದಲ್ಲೇ ಕುಳಿತು ಅಮ್ಮಾ ಅಮ್ಮಾ ಎನ್ನುತ್ತ ಆಕೆಯ ಪಾದಾರವಿಂದಗಳಿಗೆ ಸಾಷ್ಟಾಂಗ ನಮಸ್ಕಾರ ಹಾಕುತ್ತಿದ್ದವರೇ ಪಕ್ಷವನ್ನು ಮೂರು ಹೋಳಾಗಿಸಿದರು.
ಅಜಾತ ಶತ್ರುವಿನ ನೆಪದಲ್ಲಿ ಆಂಧ್ರದ ಬೃಹಸ್ಪತಿಯ ನೆನೆಯುತ್ತ…
– ರಾಕೇಶ್ ಶೆಟ್ಟಿ
ಬದುಕಲಿಕ್ಕೆಂದೇ ದಿನ ಸಾಯುವವರು,ಬೇಗ ಸತ್ತರೆ ಸಾಕೆಂದು ಬದುಕುವವರ ನಡುವೆ, ಸತ್ತು ಬದುಕುವುದು ಹೇಗೆ ಎಂದು ತೋರಿಸಿಕೊಟ್ಟ ಪುಣ್ಯಾತ್ಮರಿಗೆ ಈ ದೇಶದಲ್ಲಿ ಕೊರತೆಯಿಲ್ಲ. ಅದು ಹದಿಹರೆಯದಲ್ಲೇ ನೇಣಿಗೆ ಕೊರಳೊಡ್ಡಿ ಬ್ರಿಟಿಷರ ನಿದ್ದೆಗೆಡಿಸಿದ ಭಗತನಿರಬಹುದು,ಮೈ ಆಜಾದ್ ಹೂಂ ,ಆಜಾದ್ ಹೀ ರಹೂಂಗ ಎಂದು ಬ್ರಿಟಿಷರ ಕೈಗೆ ಕಡೆಯವರೆಗೂ ಸಿಗದೇ ಹುತಾತ್ಮರಾದ ಚಂದ್ರ ಶೇಖರ್ ಆಜಾದ್ ಅವರಿರಬಹುದು,ದೇಶ ಬಿಟ್ಟು ಪರದೇಶದಲ್ಲೊಂದು ಸೈನ್ಯ ಕಟ್ಟಿ ಭಾರತವನ್ನು ದಾಸ್ಯ ಮುಕ್ತ ಮಾಡುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನಿಗೂಢ ಕಣ್ಮರೆಯಿರಬಹುದು (ಅವರು ವಿಮಾನಾಪಘಾತದಲ್ಲಿ ಸಾಯಲಿಲ್ಲವೆಂದೇ ಬಲವಾಗಿ ನಂಬುವವನು ನಾನು), ೬೫ರ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿ,ಗಾಂಧಿಯವ ಥಿಯರಿಗಳನ್ನೇ,ವಾಸ್ತವದಲ್ಲಿ ಪಾಲಿಸುವಂತೆ ಬದುಕಿದ ಸಂತ ಲಾಲ್ ಬಹಾದ್ದೂರ್ ಶಾಸ್ತ್ರಿಗಳಿರಬಹುದು,ನೆಹರೂ ಕಾಲದ ಅಡಾಲೆದ್ದು ಹೋದ ಭಾರತದ ಅರ್ಥ ವ್ಯವಸ್ಥೆಯನ್ನು ಬದಲಿಸಿ ಭಾರತದ ಆರ್ಥಿಕ ಪಥವನ್ನೇ ಬದಲಿಸಿ ನಿಲ್ಲಿಸಿದ ಪಿವಿ ನರಸಿಂಹರಾವ್ ಅವರಿರಬಹುದು,ಸ್ವಾತಂತ್ರ್ಯ ಬಂದಾಗಿನಿಂದ ಅದೇ ಕಿತ್ತು ಹೋದ,ಡಾಂಬರು ಕಾಣದ ರಸ್ತೆಗಳನ್ನು ಸುವರ್ಣ ಚತುಷ್ಪತ,ಪ್ರಧಾನ್ ಮಂತ್ರಿ ಗ್ರಾಮೀಣ್ ಸಡಕ್ ಯೋಜನೆಗಳ ಮೂಲಕ ರಾವ್ ಅವರು ಹಾಕಿಕೊಟ್ಟ ಆರ್ಥಿಕ ತಳಹದಿಯ ಮೇಲೆ ನವಭಾರತ ನಿರ್ಮಾಣಕ್ಕೆ ಶರವೇಗ ನೀಡಿದ ಕವಿಹೃದಯಿ ಅಟಲ್ ಬಿಹಾರಿ ವಾಜಪೇಯಿಯವರಿರಬಹುದು… ಹೀಗೆ ಸತ್ತು ಬದುಕುವುದು ಹೇಗೆಂದು ಹೇಳಿಕೊಟ್ಟವರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ರಾಜಕಾರಣಿಯೊಬ್ಬ ಸತ್ತರೆ ಜನ ಸಾಮಾನ್ಯನೊಬ್ಬನಿಗೆ ತನ್ನದೇ ಕುಟುಂಬದ ಸದಸ್ಯನೊಬ್ಬ ಹೊರಟು ಬಿಟ್ಟನಲ್ಲ ಎನ್ನುವಷ್ಟು ದುಃಖವಾಗುತ್ತದೆಯೆಂದರೇ ಅದು ನಿಜಕ್ಕೂ ಬದುಕಿನ ಸಾರ್ಥಕತೆಯೇ ಸರಿ. ಕವಿ ಹೃದಯದ,ವಾಗ್ದೇವಿಯ ವರಪುತ್ರನಂತೆ ಮಂತ್ರಮುಗ್ಧ ವಾಗ್ಮಿಯಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಅಂತಹದ್ದೊಂದು ಬದುಕನ್ನು ಬದುಕಿ ಉದಾಹರಣೆಯಾಗಿ ಇಲ್ಲಿಂದ ಮುಂದಕ್ಕೆ ಹೊರಟಿದ್ದಾರೆ. ಆಗಸ್ಟ್ ೧೭ರ ಎಲ್ಲಾ ಪತ್ರಿಕೆ,ಚಾನೆಲ್ಲುಗಳ ತುಂಬಾ ವಾಜಪೇಯಿಯವರ ಜೀವನ ಚರಿತ್ರೆ, ಭಾಷಣಗಳು,ವ್ಯಕ್ತಿಚಿತ್ರಣ ತುಂಬಿ ಹೋಗಿತ್ತು.ಈಗಾಗಲೇ ವಾಜಪೇಯಿಯವರ ಬಗ್ಗೆ ಹಲವಾರು ಲೇಖನಗಳು ಬಂದಿವೆ,ಇನ್ನು ಅವರ ಬಗ್ಗೆ ಬರೆಯಲಿಕ್ಕೆ ಉಳಿದಿರುವುದಾದರೂ ಏನು ಅನ್ನಿಸುತ್ತದೆ.ಆದರೆ ಮಹಾನ್ ವ್ಯಕ್ತಿಗಳು ಬದುಕಿದ್ದಾಗ ಮಾತ್ರವಲ್ಲ,ಮರಣದಲ್ಲೂ ಸಂದೇಶಗಳನ್ನು ಬಿಟ್ಟು ಹೋಗುತ್ತಾರೆ ಅಥವಾ ಅವರ ಶಿಷ್ಯರು ಆ ಕೆಲಸವನ್ನು ಮಾಡುತ್ತಾರೆ. ವಾಜಪೇಯಿಯವರ ಅಂತಿಮ ಯಾತ್ರೆ ಅಂತಹದ್ದೊಂದು ಗಟ್ಟಿಯಾದ ಸಂದೇಶವನ್ನು ದೆಹಲಿ ರಾಜಕಾರಣದಲ್ಲಿ ಘಂಟಾಘೋಷವಾಗಿ ಮೊಳಗಿಸಿದೆ. ಅಂತಿಮ ಯಾತ್ರೆಯ ಐದು ಕಿಲೋಮಿಟರ್ರುಗಳನ್ನು ಪ್ರಧಾನಿ ನರೇಂದ್ರ ಮೋದಿ,ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ನಡೆದುಕೊಂಡೇ ಸಾಗಿದರು. ರಸ್ತೆಯ ತುಂಬೆಲ್ಲಾ ಜನಸಾಗರ ಸೇರಿತ್ತು. ರಾಜೀವ್ ಗಾಂಧೀಯವರ ಅವರ ಹತ್ಯೆಯಾಗಿ ಅಂತಿಮ ಯಾತ್ರೆ ನಡೆದಾಗ ಸೇರಿದ್ದು ಬಿಟ್ಟರೆ ದೆಹಲಿ ಮತ್ತೆ ಇಷ್ಟು ಜನರನ್ನು ನೋಡಿದ್ದು ಈಗಲೇ ಎನ್ನುವ ಮಾತುಗಳು ಕೇಳಿಬಂದವು.ನಿಜವಾಗಿಯೂ ದೆಹಲಿಗೆ ೧೪ ವರ್ಷಗಳ ಹಿಂದೆಯೇ ಅಂತಹದ್ದೊಂದು ದಿನ ಬಂದಿತ್ತು.ಅದು ಪಿ.ವಿ ನರಸಿಂಹರಾವ್ ಅವರು ಮರಣ ಹೊಂದಿದ್ದ ದಿನ. ನೆಹರೂ ಕಾಲದ ಹಳಿತಪ್ಪಿ ಅಡಾಲೆದ್ದು ಹೋಗಿದ್ದ ಅರ್ಥಿಕ ನೀತಿಯನ್ನೇ ೯೦ರ ದಶಕದವರೆಗೂ ನಡೆಸಿಕೊಂಡು ಭಾರತವನ್ನು ಜಗತ್ತಿನ ಬಲಾಢ್ಯ ರಾಷ್ಟ್ರಗಳ ಮುಂದೆ ಮಂಡಿಯೂರಿ ದೈನೇಸಿ ಸ್ಥಿಯಲ್ಲಿ ಕುಳಿತಿರುವಂತೆ ಮಾಡಲಾಗಿತ್ತಲ್ಲ,ಆ ಸ್ಥಿತಿಯನ್ನು ಬದಲಿಸಿ ಭಾರತದ ನವ ಆರ್ಥಿಕತೆಯಾ ರೂವಾರಿ,ಆಂಧ್ರದ ಜನರ ಪ್ರೀತಿಯ ಬೃಹಸ್ಪತಿ,ಮಾಜಿ ಪ್ರಧಾನಿ ಪಿ.ವಿ ನರಸಿಂಹರಾವ್ ಅವರು ೨೦೦೪ರಲ್ಲಿ ತಮ್ಮ ದೇಹವನ್ನು ತ್ಯಜಿಸಿದರು. ಆದರೆ,ದೇಶದ ಜನರಿಗೆ ಅಂತಹದ್ದೇನೂ ನಡೆಯಲೇ ಇಲ್ಲ,ಅಸಲಿಗೆ ಆ ವ್ಯಕ್ತಿಯ ಸಾವು ಒಂದು ಸುದ್ದಿಯೇ ಅಲ್ಲವೆನ್ನುವಂತೆ ಮಾಡಿಸುವಲ್ಲಿ ನೆಹರೂ ಪರಿವಾರ ಮತ್ತು ಅವರ ಸಾಕು ನಾಯಿಗಳಂತೆ ವರ್ತಿಸುವವರು ಮಾಡಿದ್ದರು.
ಬಾಂಗ್ಲಾ ಬಾಂಬ್ ಮತ್ತು ಬೇಜವಾಬ್ದಾರಿ ರಾಜಕಾರಣಿಗಳು
– ರಾಕೇಶ್ ಶೆಟ್ಟಿ
ಬಂಗಾಳಿಗಳ ಬಗ್ಗೆ ಯೋಚಿಸುವಾಗ ಕನಿಕರವಾಗುತ್ತದೆ.ಸ್ವಾತಂತ್ರ್ಯಾ ನಂತರದ ಬರೋಬ್ಬರಿ ಮೂವತ್ತು ವರ್ಷವನ್ನು ಕಾಂಗ್ರೆಸ್ (INC ಮತ್ತು ಬಂಗಾಳಿ ಕಾಂಗ್ರೆಸ್) ಕೈಗೆ ಕೊಟ್ಟು ಪೆಟ್ಟು ತಿಂದು ನಂತರದ ಮೂವತ್ತೇಳು ವರ್ಷಗಳನ್ನು ಕಮ್ಯುನಿಸ್ಟರ ಕೈಯಲಿಟ್ಟು ಹೈರಾಣಾಗಿ ಕಡೆಗೆ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಪಕ್ಷದ ಕೈಗೆ ರಾಜ್ಯದ ಚುಕ್ಕಾಣಿಯನ್ನು ಕೊಟ್ಟರೂ ಅವರ ಕಷ್ಟಗಳು ಮಾತ್ರ ತೀರಲೇ ಇಲ್ಲ ಬದಲಾಗಿ ಹೆಚ್ಚಾಗುತ್ತಲೇ ಹೋದವು. ಅಯೋಗ್ಯರನ್ನೇ ಆರಿಸಿಕೂರಿಸಿದರೆ ಸಮಸ್ಯೆ ಉಲ್ಬಣವಾಗದೇ ಪರಿಹಾರವಾಗಲು ಸಾಧ್ಯವೇ? “ಊದೋದು ಬಿಟ್ಟು ಬಾರ್ಸೋದ್ ತಗೊಂಡರು” ಎನ್ನುವಂತಹ ಪರಿಸ್ಥಿತಿ ಪಶ್ಚಿಮ ಬಂಗಾಳ ರಾಜ್ಯಕ್ಕೆ ಅನ್ವಯವಾಗುತ್ತದೆ.
ಕಮ್ಯುನಿಸ್ಟರ ಹಿಂಸಾಚಾರ,ಓಲೈಕೆಯ ರಾಜಕಾರಣವನ್ನು ವಿರೋಧಿಸುತ್ತಲೇ ರಾಜಕೀಯ ಅಧಿಕಾರಕ್ಕೇರಿದ ಮಮತಾ ಬ್ಯಾನರ್ಜಿ,೨೦೧೧ರಲ್ಲಿ ಅಧಿಕಾರಕ್ಕೇರಿದ ನಂತರ ಅಳವಡಿಸಿಕೊಂಡಿದ್ದು ಕಮ್ಯುನಿಸ್ಟರ ಹಿಂಸಾಚಾರ,ಓಲೈಕೆಯ ರಾಜಕಾರಣವನ್ನೇ. ಆದರೆ ಕಮ್ಯುನಿಸ್ಟರು ತೀರಾ ಮಮತಾ ಬ್ಯಾನರ್ಜಿಯಷ್ಟು ಕ್ರಿಮಿನಲ್ ಎಲಿಮೆಂಟುಗಳನ್ನು ಸಾಬರನ್ನು ಈ ಮಟ್ಟಕ್ಕೆ ಓಲೈಸುತ್ತಿರಲಿಲ್ಲ ಎನ್ನುತ್ತಾರೆ ಬೆಂಗಾಲಿ ಗೆಳೆಯರು. ಅಧಿಕಾರವನ್ನು ಉಳಿಸಿಕೊಳ್ಳಲಿಕ್ಕಾಗಿ ಮಮತಾ ಯಾವುದೇ ಮಟ್ಟಕ್ಕಾದರೂ ಇಳಿಯಬಲ್ಲರು ಅದು ಮುಂದೆ ದೇಶವನ್ನೇ ಮತ್ತೊಮ್ಮೆ ವಿಭಜನೆಯ ಹಂತಕ್ಕೆ ತಂದಿಡುವಂತದ್ದಾದರೂ ಆಕೆಗದು ಸಮ್ಮತವೇ ಎನಿಸುತ್ತದೆ.ದೇಶಕಂಡ ಅತ್ಯಂತ ಬೇಜವಾಬ್ದಾರಿ ಮತ್ತು ಅಪಾಯಕಾರಿ ರಾಜಕಾರಣಿಗಳ ಪಟ್ಟಿಯಲ್ಲಿ ಸದ್ಯಕ್ಕೆ ಈಕೆಯದ್ದೇ ಅಗ್ರಸ್ಥಾನ.ಅಸ್ಸಾಂ ರಾಜ್ಯದಲ್ಲಿ, ಸುಪ್ರೀಂ ಕೋರ್ಟ್ ಕಣ್ಗಾವಲಿನಲ್ಲಿ ನಡೆಯುತ್ತಿರುವ National Register of Citizens (NRC)ಯ ಅಂತಿಮ ಕರಡು ಪಟ್ಟಿಯ ವಿಷಯದಲ್ಲಿ ಈಕೆ ಮಾಡುತ್ತಿರುವ ಕೊಳಕು ರಾಜಕೀಯ ನೋಡಿದರೆ ಅಧಿಕಾರಕ್ಕೋಸ್ಕರ ದೇಶವನ್ನೇ ಇಬ್ಭಾಗ ಮಾಡಿಸಿದ ನೆಹರೂ-ಜಿನ್ನಾ ಜೋಡಿಯ ಆತ್ಮವೇನಾದರೂ ಈಕೆಯ ಮೇಲೆ ಆವಾಹನೆಯಾಗಿರಬಹುದೇ ಎನ್ನುವ ಅನುಮಾನ ಮೂಡುತ್ತದೆ.
ದೇಶಕಟ್ಟುವ ಫ್ಯಾಂಟಸಿ..
– ಸುಜಿತ್ ಕುಮಾರ್
ಇತಿಹಾಸದ ಕಾಲಘಟ್ಟದಲ್ಲಿ ಐವತ್ತು ವರ್ಷಗಳ ಸಮಯ ತೀರಾ ಚಿಕ್ಕದು. ಅರ್ಧ ತಲೆಮಾರಿನ ಈ ಐದು ದಶಕಗಳಲ್ಲಿ ಹೆಚ್ಚೆಂದರೆ ಏನೆಲ್ಲಾ ಜರುಗಬಹುದು ? ಸಾಮಾಜಿಕ ಬೆಳವಣಿಗೆಯ ದೃಷ್ಟಿಯಲ್ಲಿ ನೋಡುವುದಾದರೆ ದಾರಿಕಾಣದ ಹಳ್ಳಿಗಳಿಗೆ ರಸ್ತೆಗಳ ಮೇಣವೊಂದಿಷ್ಟು ಅಂಟಿಕೊಳ್ಳಬಹುದು, ಸೂರು ಕಾಣದ ತಲೆಗಳ ಮೇಲೆ ಸ್ವಂತ ಮನೆಯೊಂದರ ನೆರಳು ಮೂಡಬಹುದು, ಬೆಳಕು ಕಾಣದ ಮನೆಗಳು ಎಲ್ ಇ ಡಿ ಬಲ್ಬುಗಳ ಕಾಂತಿಯಿಂದ ಮಿನುಗಬಹುದು ಅಥವಾ ಅಷ್ಟೂ ಸರ್ಕಾರೀ ಸ್ಕೂಲುಗಳ ಜಾಗದಲ್ಲಿ ತಕಿದಿಮಿತ ಕುಣಿಯುವ ಕಷ್ಟಪಟ್ಟು ಇಷ್ಟಪಡುವ ಪ್ರೈವೇಟ್ ಸ್ಕೂಲುಗಳು ತಲೆಯೆತ್ತಬಹುದು, ಎಲ್ಲವೂ ಗೂಗಲ್ ಇಂಟರ್ನೆಟ್ಮಯವಾಗುವ ಹಾದಿಯಲ್ಲಿ ಮಾನವ ಓದು ಬರಹಗಳನ್ನೇ ಮರೆತು ಕೇವಲ ಮಾಂಸದ ಮುದ್ದೆಯಂತಾಗಲೂಬಹುದು. ಒಟ್ಟಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸರ್ವೋತೋಮುಖ ಅಭಿವೃದ್ಧಿ ಎಂದರೆ ಇವಿಷ್ಟೇ ಎಂದರೂ ಅದು ಉತ್ಪ್ರೇಕ್ಷೆಯಾಗದು! ಆದರೆ ಅಲ್ಲೊಂದು ದೇಶವಿತ್ತು. ದೇಶವೆನ್ನುವುದಕ್ಕಿಂತ ಮರಳುಗಾಡಿನ ರಾಶಿ ರಾಶಿ ಗುಡ್ಡೆಗಳ ಪ್ರದೇಶವೆನ್ನಬಹುದು. ಸುಟ್ಟು ಕರಕಲಾಗುವ ಉರಿಬಿಸಿಲಿಗೆ ಅಲ್ಲಿ ಮಾನವರಾಗಲಿ ಕನಿಷ್ಠ ಒಂದೆರೆಡು ಪ್ರಾಣಿಗಳೂ ಕಾಣಲು ಸಿಗುತ್ತಿರಲಿಲ್ಲ. ನಮ್ಮ ರಾಜ್ಯಕ್ಕಿಂತಲೂ ಸಣ್ಣದಾದ ಆ ಭೂಪ್ರದೇಶ ಅಕ್ಷರ ಸಹ ಮರಳುಗಾಡಿನ ಆಗರ. ಅಲ್ಲೊಂದು ಇಲ್ಲೊಂದು ಗುಂಪು ಜನಗಳು ನೇಸರರಾಜನೊಟ್ಟಿಗೆ ಸೆಣೆಸುತ್ತಾ ವಾಸಿಸುತ್ತಿದ್ದದ್ದು ಬಿಟ್ಟರೆ ಉಳಿದಷ್ಟೂ ಜಾಗ ಬಟಬಯಲಿನ ಜನವಿರಳ ಪ್ರದೇಶವಾಗಿತ್ತು. ದಿನಕ್ಕೊಂದು ಮುಡಿಯಷ್ಟು ಅನ್ನವನ್ನು ಬಿಟ್ಟರೆ ಖರ್ಜೂರದ ಹಣ್ಣುಗಳೇ ಇವರಿಗೆ ಮೂರೊತ್ತಿನ ಆಹಾರ! ವರ್ಷಕೊಮ್ಮೆ ಅಥವಾ ಕೆಲವೊಮ್ಮೆ ಒಮ್ಮೆಯೂ ಬಾರದ ಮಳೆರಾಯನನ್ನು ಇಲ್ಲಿ ಒಂದು ನರಪಿಳ್ಳೆಯೂ ನಂಬಿ ಬದುಕುತ್ತಿರಲಿಲ್ಲ. ಇನ್ನು ನೀರನಂತೂ ಕೇಳಬೇಕೆ, ಅದು ಜಗತ್ತಿನ ಅತಿ ಕೊನೆಯ ಹನಿಯೋ ಎಂಬಂತೆ ಕಾಪಾಡಿಕೊಂಡು ಬರುತ್ತಿದ್ದರು. ಅದೆಷ್ಟೇ ಬಾಯಾರಿದರೂ ದಿನಕೊಂದು ಸಣ್ಣ ಲೋಟದ ನೀರನಷ್ಟೇ ಕುಡಿಯಲು ಶಕ್ತರಾಗಿದ್ದರು! ಇಂತಹ ಬರಬಿದ್ದ ಮರಳು ರಾಶಿಯಲ್ಲಿ ಮೇಲೆ ಹೇಳಿದ ಐವತ್ತು ವರ್ಷಗಳಲ್ಲೇ ಏನೆಲ್ಲಾ ಜರುಗಿರಬಹದು ? ಹಳ್ಳಿಯೊಂದು, ಊರೊಂದು ಹುಟ್ಟಿರಬಹುದು. ಹುಟ್ಟಿದರೂ ಈ ಬೆಂಕಿಯ ನೆಲದಲ್ಲಿ ಜೀವ ಪಣಕ್ಕಿಟ್ಟು ಬದುಕುವುದಕ್ಕಿಂತ ಮೂರ್ಖತನ ಮತ್ತೊಂದಿರದು. ಅಥವಾ ಅಕ್ಕಪಕ್ಕದ ಯಾವುದಾದರೊಂದು ಸದೃಢ ದೇಶ ನ್ಯೂಕ್ಲಿಯರ್ ಪ್ಲಾಂಟ್ಗಳನ್ನೋ ಅಥವಾ ಪವನಶಕ್ತಿ ಕೇಂದ್ರಗಳನ್ನೂ ನಿರ್ಮಿಸಿದ್ದಿರಬಹುದು. ಅಥವಾ ಇದ್ದ ಮೂರು ಮತ್ತೊಂದು ಕುಟುಂಬಗಳೂ ಕಣ್ಮರೆಯಾಗಿ ಕೇವಲ ಬಿಸಿಲಿನ ಮೊರೆತವೇ ಸರ್ವವ್ಯಾಪ್ತಿಯಾಗಿದ್ದಿರಬಹುದು, ಅಲ್ಲವೇ?
ಬಿಲ್ಲಕುಲ್ ಇಲ್ಲ! ಮತ್ತಷ್ಟು ಓದು 
ರಾಫೆಲ್ ಯುದ್ಧ ವಿಮಾನದ ಸತ್ಯಾಸತ್ಯತೆಗಳು
– ರಾಕೇಶ್ ಶೆಟ್ಟಿ
ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ಮುಗಿದ ನಂತರ ಕೇಂದ್ರದ ರಾಜಕೀಯ ವಲಯದಲ್ಲಿ ಅತಿಹೆಚ್ಚು ಸದ್ದು ಮಾಡುತ್ತಿರುವುದು ರಾಫೆಲ್ ಯುದ್ಧ ವಿಮಾನ ಖರೀದಿಯ ವಿವಾದ.ಕಳೆದ ವಾರದ ಅಂಕಣದಲ್ಲಿ ಸಂಸದ ರಾಹುಲ್ ಗಾಂಧೀ ಸಂಸತ್ತಿನಲ್ಲಿ ರಾಫೆಲ್ ಬಗ್ಗೆ ಮಾತನಾಡಿದ್ದನ್ನು ಅದಕ್ಕೆ ಭಾರತ ಹಾಗೂ ಫ್ರಾನ್ಸ್ ಸರ್ಕಾರ ನೀಡಿದ ಸ್ಪಷ್ಟಿಕರಣದ ಬಗ್ಗೆ ಹೇಳಿದ್ದೆ.
ಇದೆಲ್ಲದರ ಮೂಲವಿರುವುದು ೨೦೦೧ರಲ್ಲಿ ಭಾರತೀಯ ವಾಯುಪಡೆ (IAF) ತನಗೆ ೧೨೬ ಮೀಡಿಯಂ ಮಲ್ಟಿ ರೋಲ್ ಕಂಬ್ಯಾಟ್ ಯುದ್ಧ ವಿಮಾನಗಳ ಅವಶ್ಯಕತೆಯಿದೆ ಎನ್ನುವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದಾಗ. ಸಾಧಾರಣವಾಗಿ IAF ಬಳಿ ಕಡಿಮೆಯೆಂದರೂ ೪೫ ಸ್ಕ್ವಾಡ್ರನ್ಸ್ ನಷ್ಟು ಯುದ್ಧವಿಮಾನಗಳು ಇರಬೇಕು ಅಥವಾ ಕನಿಷ್ಟವೆಂದರೂ ೩೯ಸ್ಕ್ವಾಡ್ರನ್ಸ್ ನಷ್ಟು ಇರಬೇಕು ಎನ್ನುವ ನಿಯಮವಿದೆ.ನಮ್ಮ ಬಳಿಯಿದ್ದ ಮಿಗ್ ೨೧ ಮತ್ತು ಮಿಗ್ ೨೭ರ ಜೀವಿತಾವಧಿಗಳು ಮುಗಿಯುತ್ತ ಬಂದಿದ್ದವು ಮೇಲಾಗಿ,ಆ ಯುದ್ಧ ವಿಮಾನಗಳ ಮಿತಿಯನ್ನು ಕಾರ್ಗಿಲ್ ಯುದ್ಧ ಮನಗಾಣಿಸಿತ್ತು ಕೂಡ. ಈ ಹಿನ್ನೆಲೆಯಲ್ಲಿ ಇಂತಹದ್ದೊಂದು ಬೇಡಿಕೆ IAF ನಿಂದ ಬಂದಿತ್ತು. ೨೦೦೭ರಲ್ಲಿ ಈ ಕುರಿತು RFP (request for proposals) ಸಲ್ಲಿಸಿತ್ತು. ೬ ಶಸ್ತ್ರಾಸ್ತ್ರ ತಯಾರಿಕಾ ಕಂಪೆನಿಗಳು ಬಿಡ್ ಸಲ್ಲಿಸಿದ್ದವು. ತೀವ್ರತರನಾದ ಪರೀಕ್ಷೆಗಳ ಮೂಲಕ ಅಂತಿಮವಾಗಿ ರಾಫೆಲ್ ಮತ್ತು ಯುರೋ ಫೈಟರ್ ಟೈಫೂನ್ ವಿಮಾನಗಳು ಅಂತಿಮ ಸುತ್ತಿನಲ್ಲಿ ಉಳಿದಿದ್ದವು.ಇದರಲ್ಲಿ ಅಂತಿಮವಾಗಿ ಆಯ್ಕೆಯಾಗಿದ್ದು ರಾಫೆಲ್.ಇಷ್ಟೆಲ್ಲಾ ಆಗುವಾಗ ೨೦೧೨ ಬಂದಿತ್ತು. ಸರಿ ಸುಮಾರು ಹನ್ನೊಂದು ವರ್ಷಗಳು ವರದಿ,ಪ್ರಪೋಸಲ್ ಹಾಗೂ ಯುದ್ಧ ವಿಮಾನದ ಆಯ್ಕೆಯಲ್ಲಿಯೇ ಕಳೆದು ಹೋಗಿತ್ತು. ಹಾಗೂ ಹೀಗೂ ರಾಫೆಲ್ ಖರೀದಿಯ ಕುರಿತ ವ್ಯಾವಹಾರಿಕ ಚರ್ಚೆಗಳು ಶುರುವಾಗಿದ್ದು ೩೧ ಜನವರಿ ೨೦೧೨ ರ ನಂತರ.
ಕಾರ್ಗಿಲ್ ವಿಜಯೋತ್ಸವ ಕಲಿಸಿದ ಪಾಠಗಳು
– ಅಜಿತ್ ಶೆಟ್ಟಿ ಹೆರಂಜೆ
ಇಂದು ಕಾರ್ಗಿಲ್ ವಿಜಯ ದಿವಸದ ವರ್ಷಾಚರಣೆಯನ್ನು ನಾವು ದೇಶದಾದ್ಯಂತ ಮಾಡುತ್ತಿದ್ದೇವೆ. 1999ಮೇ ತಿಂಗಳಲ್ಲಿ ಪ್ರಾರಂಭವಾದ ಈ ಯುದ್ಧ ಸುಮಾರು 3 ತಿಂಗಳುಗಳ ಕಾಲ ನಡದು 27 ನೆ ಜುಲೈ 1999 ಕ್ಕೆ ಮುಕ್ತಾಯಗೊಂಡಿತು. ಈ ಭೀಷಣ ಯುದ್ಧದಲ್ಲಿ ಭಾರತ ಒಟ್ಟು ತನ್ನ 724 ವೀರ ಸೈನಿಕರನ್ನು ಕಳೆದುಕೊಂಡಿತು. ಈ ಯುದ್ಧಕ್ಕೆ ಪ್ರತಿ ದಿನ ಸರ್ಕಾರಕ್ಕೆ 10 ರಿಂದ 15 ಕೋಟಿಯಷ್ಟು ವೆಚ್ಚವಾಗಿತ್ತು. ಹಾಗಿದ್ದಾಗ ಈ ಯುದ್ಧಕ್ಕೆ ಸರ್ಕಾರ ಖರ್ಚು ಮಾಡಿದ ಒಟ್ಟು ವೆಚ್ಚ ನೀವೇ ಅಂದಾಜಿಸಿ. ಈ ಯುದ್ಧ ನಮಗೆ ಕಲಿಸಿದ ಪಾಠ ಅನೇಕ. ಅದರಲ್ಲೂ 21ನೆ ಶತಮಾನದ ಹೊಸ್ತಿಲಿನಲ್ಲಿ ನಡೆದ ಈ ಯುದ್ಧ, ಯಾವುದೇ ಯುದ್ಧವನ್ನು ಗೆಲ್ಲಲು ಕೇವಲ ಸೈನ್ಯ ಶಕ್ತಿ ಅಷ್ಟೇ ಅಲ್ಲ ಅತ್ಯಾಧುನಿಕ ತಂತ್ರಜ್ಞಾನವೂ ಅತ್ಯಂತ ಆವಶ್ಯಕ ಎನ್ನುವ ಪಾಠವನ್ನು ನಮ್ಮ ದೇಶ ರಾಜಕೀಯ ನಾಯಕರಿಗೆ ಕನ್ನಡಿ ತೋರಿಸಿ ಕೆನ್ನೆಗೆ ಬಾರಿಸಿ ಹೇಳಿತು.ಕಾರ್ಗಿಲ್ ಯುದ್ಧ ನಮಗೆ ಕಲಿಸಿದ ಮತ್ತು ನಾವು ಅದರಿಂದ ಕಲಿತ ಪಾಠವೇನು.? ಬನ್ನಿ ತಿಳಿಯೋಣ.
ಸಾಮಾನ್ಯವಾಗಿ ಯುದ್ಧವನ್ನು ಗೆಲ್ಲಬೇಕಾದರೆ ವೈರಿ ಪಡೆಯನ್ನು ಕಟ್ಟಿ ಹಾಕಿ ಅವರ ಬಗ್ಗೆ ಇಂಚಿಂಚು ಮಾಹಿತಿ ಕಲೆ ಹಾಕಿದಮೇಲೆ, ವೈರಿಗಳ ವಿರುದ್ಧ ಯಾವ ರೂಪದ ಕಾರ್ಯಾಚರಣೆ ಮಾಡಬೇಕು, ಅದಕ್ಕೆ ಬೇಕಾಗಿರುವ ಸೈನ್ಯದ ಸಂಖ್ಯೆ ಅವರಿಗೆ ಬೇಕಾದ ಶಸ್ತ್ರಾಸ್ತ್ರಗಳು ಇತ್ಯಾದಿಗಳನ್ನು ನಿರ್ಧರಿಸಿದಮೇಲಷ್ಟೇ ಯುದ್ಧ ತಂತ್ರ ರೂಪಿಸುವುದು. ದುರಾದೃಷ್ಟವಶಾತ್ ಕಾರ್ಗಿಲ್ ಯುದ್ಧ ಆರಂಭವಾಗಿ ಅದನ್ನು ಬಹುತೇಕ ಮುಗಿಸುವ ತನಕ ನಮಗೆ ನಿಖರವಾಗಿ ಶತ್ರುಗಳು ಯಾರು ಅವರು ನಿಜವಾಗಿಯೂ ಪಾಕಿಸ್ತಾನ ಹೇಳಿದಂತೆ ಕಾಶ್ಮೀರಿ ಪ್ರತ್ಯೇಕತಾವಾದಿ ಉಗ್ರಾವಾದಿಗಳೋ ಅಥವಾ ಪಾಕಿಸ್ತಾನದ ಸೈನಿಕರೋ ಅನ್ನುವುದು ಮತ್ತು ಈ ವೈರಿ ಪಡೆಯ ಸಂಖ್ಯೆ ಎಷ್ಟು ಇವರು ಅಡಗಿರುವ ಆಯಕಟ್ಟಿನ ಸ್ಥಳಗಳು ಯಾವುದು, ಅವರಲ್ಲಿ ಎಷ್ಟು ಮದ್ದು ಗುಂಡುಗಳ ದಾಸ್ತಾನುಗಳಿವೆ. ಅವರಲ್ಲಿ ಇರೋ ಶಸ್ತ್ರಾಸ್ತ್ರಗಳ ಬಗ್ಗೆ ಯಾವುದೆ ಸ್ಪಷ್ಟ ಮಾಹಿತಿಗಳಿಲ್ಲದೆ ಕೇವಲ ಒಂದು ಅಂದಾಜಿನ ಮೆಲೆ ಯುದ್ದ ಮಾಡಿದ್ದೆವು. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಕುರುಡ ಆನೆಯನ್ನು ವರ್ಣಿಸಿದಂತೆ, ನಮಗೆ ಅಂದು ಕಾರ್ಗಿಲ್ ಒಳಗೆ ನುಸುಳಿ ಬಂದ ಪಾಕಿಸ್ತಾನದ ನುಸುಳುಕೋರರ ಬಗ್ಗೆ ಇದ್ದ ಮಾಹಿತಿ.
ಮೇ ೩, ೧೯೯೯ ರಂದು ತಾಂಶಿ ನಾಮ್ ಗ್ಯಾಲ್ ಎನ್ನುವ ಸ್ಥಳೀಯ ಕುರುಬ, ಬಂಜೂ ಟಾಪ್ ನಲ್ಲಿ ಕೆಲವು ಉಗ್ರರ ಚಟುವಟಿಕೆ ಬಗ್ಗೆ ಮಾಹಿತಿ ಕೊಟ್ಟ ನಂತರ ಯುದ್ಧ ಶುರುವಾಯಿತು. ಕಾರ್ಗಿಲ್ ಯುದ್ಧ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಮಯ ಭಾರತೀಯ ಸೈನ್ಯ ಸುಮಾರು ೬೦%ದಷ್ಟು ಯುದ್ಧವನ್ನು ಪೂರೈಸಿದ ಸಮಯ. ಅಂತಹ ಸಂದರ್ಭದಲ್ಲಿ ಭಾರತೀಯ ಸೈನ್ಯದ ಓರ್ವ ಅಧಿಕಾರಿ ಕಾರ್ಗಿಲ್ ಪರ್ವತ ಶ್ರೇಣಿಯ ಉಗ್ರರ ಗುಂಡಿಗೆ ಹುತಾತ್ಮನಾಗುವ ಮುಂಚೆ ತಮ್ಮ ಮೇಲಧಿಕಾರಿಗೆ ಕಾಗದ ಬರೆದು ಹೇಳುತ್ತಾ, “ನಾವು ಯಾರೊಡನೆ ಯುದ್ಧ ಮಾಡುತ್ತಿದ್ದೇವೆ ಎನ್ನುವುದೇ ನಮಗೆ ಗೊತ್ತಿಲ್ಲ. ಇದು ನಮ್ಮನ್ನ ಪ್ರಪಾತದತ್ತ ಕೊಂಡೊಯ್ಯುಯುತ್ತಿದೆ”.. ಎಂದು ಹೇಳಿದ್ದರು.ಇದು ಕಾರ್ಗಿಲ್ ಯುದ್ಧದಲ್ಲಿ ಸೈನ್ಯಕ್ಕೆ ಸರ್ಕಾರಕ್ಕೆ ಇದ್ದ ಕ್ಲಾರಿಟಿ.ಇದೇ ಕಾರಣಕ್ಕೆ ನಾವು ಕ್ಯಾಪ್ಟನ್ ಸೌರಬ್ ಕಾಲಿಯ, ಕ್ಯಾಪ್ಟನ್ ವಿಕ್ರಮ್ ಭಾತ್ರ ಕ್ಯಾಪ್ಟನ್ ಅಹುಜಾ ಮುಂತಾದವರು ಸೇರಿದಂತೆ ಸುಮಾರು 724 ಮಂದಿ ಸೈನಿಕರನ್ನು ಕಳೆದುಕೊಳ್ಳಬೇಕಾಯಿತು. ಕ್ಯಾಪ್ಟನ್ ನಚಿಕೆತ್ ಪಾಕಿಸ್ತಾನದಲ್ಲಿ ಯುದ್ಧ ಕೈದಿಯಾಗಿ ಪಡಬಾರದ ಕಷ್ಟ ಸಹಿಸಬೇಕಾಗಿ ಬಂತು. ಇದು ಅಂದಿನ ಸರ್ಕಾರ ಮತ್ತು ಸೈನ್ಯದ ಕಾರ್ಯವಿಮುಖತೆ ಯಿಂದ ಆದ ಘಟನೆಯಲ್ಲ. ಬದಲಾಗಿ ಹಿಂದಿನ ಸರ್ಕಾರಗಳ ಅವರು ಆಡಳಿತದ ಸಮಯದಲ್ಲಿ ಅಂದಿನ ಯದ್ದಗಳು ಕಲಿಸಿದ ಪಾಠವನ್ನು ಕಲಿಯದೆ,ಕರ್ತವ್ಯ ವಿಮುಖರಾಗಿದ್ದು ಕಾರಣ.ಅಂದು ನಮ್ಮಲ್ಲಿ ತಂತ್ರಜ್ಞಾನದ ಮುಖಾಂತರ ವೈರಿಪಡೆಯ ಗತಿವಿಧಿ,ಸಂಖ್ಯೆ ಮತ್ತು ಅವರು ಹೊಂದಿರುವ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ತಿಳಿಯುವ,ಗುಪ್ತಚಾರಿಕೆ ಮಾಡುವ ಯಾವುದೇ ವ್ಯವಸ್ಥೆ, ಸಾಧನ ಸಲಕರಣೆಗಳು ಇರಲಿಲ್ಲ.ಇಂತಹಾ ಉಪಯುಕ್ತ ಮಾಹಿತಿ ಕೊಡುವ ಬೇಹುಗಾರಿಕ ಉಪಗ್ರಹಗಳು ಇರಲಿಲ್ಲ..!! ಕಾರ್ಗಿಲ್ ಯುದ್ಧದಲ್ಲಿ ನಾವು ಬಹುತೇಕ ಸೈನಿಕರನ್ನು ಪಾಕಿಸ್ತಾನದ ಸೈನ್ಯದ ವಿರುದ್ದ ನೇರ ಯದ್ದದಲ್ಲಿ ಕಳೆದುಕೊಂಡದ್ದಲ್ಲ. ಬದಲಿಗೆ ವೈರಿಗಳ ಬಗ್ಗೆ ಮಾಹಿತಿ ಕಲೆಹಾಕುವ ಸಂದರ್ಭದಲ್ಲಿ ಕಳೆದುಕೊಂಡದ್ದು.ಈ ರೀತಿ ಇಪ್ಪತ್ತೊಂದನೇ ಶತಮಾನದಲ್ಲಿ ಮಾಹಿತಿ ತಂತ್ರಜ್ಞಾನ ಎಷ್ಟು ಅವಶ್ಯಕ ಎನ್ನುವುದು ಕಾರ್ಗಿಲ್ ಯದ್ದ ಕಲಿಸಿದ ಮೊತ್ತಮೊದಲ ಪಾಠ..!!
ಹಿಟ್ಲರನ ಗೊಬೆಲ್ಸ್ ಮತ್ತು ಕಾಂಗ್ರೆಸ್ಸಿನ ರಾಹುಲ್
– ರಾಕೇಶ್ ಶೆಟ್ಟಿ
ಮೆಗಾಸೀರಿಯಲ್ಲುಗಳನ್ನೂ ಮೀರಿಸುವಷ್ಟು ಬೋರ್ ಹೊಡೆಸುವಂತಹ ಬಹಳಷ್ಟು ಕಾಮಿಡಿ ಶೋಗಳು ಈಗ ವಿವಿಧ ಚಾನೆಲ್ಲುಗಳಲ್ಲಿ ಬರುತ್ತವೆ. ಈ ಕಾಮಿಡಿ ಶೋಗಳಲ್ಲಿ ಮಾಡುವ ಕಾಮಿಡಿಗೆ,ಕಾರ್ಯಕ್ರಮದ ಪೇಯ್ಡ್ ತೀರ್ಪುಗಾರರು,ಸ್ಪರ್ಧಿಗಳು ಹಾಗೂ ಸ್ಟುಡಿಯೋದಲ್ಲಿ ಕುಳಿತವರನ್ನು ಹೊರತುಪಡಿಸಿ, ಟಿವಿಯಲ್ಲಿ ಇವರ ಕಾಮಿಡಿ ನೋಡುವ ಪ್ರೇಕ್ಷಕರ ಮುಖದಲ್ಲಿ ನಗು ಬಾರದಿರುವುದು,ಈ ಕಾಮಿಡಿ ಶೋಗಳ ಸ್ಪೆಷಾಲಿಟಿ.ಕಳೆದ ಶುಕ್ರವಾರ, ಚಾನೆಲ್ಲುಗಳಲ್ಲಿನ ಇಂತಹ ಕಳಪೆ ಕಾಮಿಡಿ ಶೋಗಳು ಟಿಆರ್ಪಿ ಕಳೆದುಕೊಂಡಿದ್ದವು.ಅಸಲಿ ಕಾಮಿಡಿಯೆಂದರೇನು ಎನ್ನುವುದನ್ನು ಲೋಕಸಸಭಾ ಚಾನೆಲ್ಲಿನಲ್ಲಿ ಶ್ರೀಮಾನ್ ರಾಹುಲ್ ಗಾಂಧಿಯವರು ತಮ್ಮ ಭಾಷಣದ ಮೂಲಕ ತೋರಿಸುತ್ತಿದ್ದರು. ನಕಲಿ ಅಪ್ಪುಗೆ-ಕ್ಲಾಸ್ ರೂಮಿನ ಪಡ್ಡೆ ಹುಡುಗನಂತೆ ಕಣ್ಣು ಹೊಡೆಯುವ ಚೇಷ್ಟೆಗಳೆಲ್ಲ ಬಹುಶಃ ಲೋಕಸಭಾ ಚಾನೆಲ್ಲಿನಲ್ಲೂ ಮೊದಲಬಾರಿಗೆ ಕಂಡ ದೃಶ್ಯಗಳು. ಗಂಜಿಗಿರಾಕಿಗಳು ಬರೆದುಕೊಟ್ಟ ನಾಟಕೀಯ ಸ್ಕ್ರಿಪ್ಟ್ ಮೂಲಕ ಜನರಲ್ಲಿ ನಗುಬುಗ್ಗೆ ಹರಿಸಿದ್ದೇ ರಾಹುಲ್ ಹೆಚ್ಚುಗಾರಿಕೆ.
ಲೋಕಸಭೆಯಲ್ಲಿ ನರೇಂದ್ರ ಮೋದಿಯವರ ಸರ್ಕಾರದ ವಿರುದ್ಧ, ಒಂದು ಕಾಲದ ಮಿತ್ರ ಪಕ್ಷ ಟಿಡಿಪಿ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಅಧ್ಯಕ್ಷ,ಸಂಸದ ರಾಹುಲ್ ಗಾಂಧೀ ಹೆಚ್ಚು ಕಡಿಮೆ ಒಂದುಗಂಟೆಗಳ ಕಾಲ ಮಾತನಾಡಿದರು. ರಾಜಕೀಯಕ್ಕೆ ಬಂದು ೧೩ ವರ್ಷಗಳಾದ ನಂತರ ಬರೆದುಕೊಟ್ಟ ಭಾಷಣವನ್ನು ಓದಿಕೊಂಡು ತುಸು ಗಂಭೀರವಾಗಿ ಅವರು ಮಾತನಾಡಿದ್ದು ಬಹುಶಃ ಇದೇ ಮೊದಲು. ಆತ ಮಾತನಾಡುವ ಶೈಲಿ ಬದಲಾಗಿದೆ,ಎದ್ದು ಕಾಣುತ್ತಿದ್ದ ಆತ್ಮವಿಶ್ವಾಸದ ಕೊರತೆಯನ್ನು ದನಿಯನ್ನು ಬದಲಿಸಿಕೊಳ್ಳುವ ಮತ್ತು ಆಕ್ರಾಮಕ ಶೈಲಿಯಿಂದ ಮುಚ್ಚಿಡಲು ಪ್ರಯತ್ನಿಸುತ್ತಿರುವಂತೆ ತೋರಿತು and Ofcourse ರಾಹುಲ್ ಭಾಷಣವೆಂದ ಮೇಲೆ ಇರಲೇಬೇಕಿದ್ದ ತಪ್ಪುಗಳು ಅಲ್ಲಿದ್ದವು. ಆದರೆ ಒಂದುಗಂಟೆಯ ಕಾಲದ ಈ ಭಾಷಣ ಅದೇ ತಲೆಮಾಸಿದ ಹಳಸಲು ಸುಳ್ಳಿನ ಕಂತೆಗಳಲ್ಲದೇ ಅದರಲ್ಲೇನು ವಿಷಯ ಇರಲಿಲ್ಲ.ಅದೂ ಈ ಮೊದಲಿನಿಂದಲೂ ರಾಹುಲ್ ಮತ್ತವರ ಕಾಂಗ್ರೆಸ್ ಪಕ್ಷ ಹೋದಲ್ಲಿ ಬಂದಲ್ಲಿ ನರೇಂದ್ರ ಮೋದಿವಯವರ ವಿರುದ್ಧ ಮಾಡುತ್ತಿರುವ ಸುಳ್ಳು ಆಪಾದನೆಗಳ ದೋಷಾರೋಪಣ ಪಟ್ಟಿಯನ್ನೇ ರಾಹುಲ್ ಮತ್ತೆ ಲೋಕಸಭೆಯಲ್ಲಿ ರಿಪೀಟ್ ಟೆಲಿಕಾಸ್ಟ್ ಮಾಡಿಸಿದರೇ ಹೊರತು ಅದರಲ್ಲಿ ನಯಾ ಪೈಸೆಯ ಹೊಸತನವಾಗಲಿ, ವೈಚಾರಿಕತೆಯಾಗಲಿ,ಸತ್ಯವಾಗಲಿ ಇರಲೇ ಇಲ್ಲ.ಕೆಲವು ದಿನಗಳ ಹಿಂದಿನ ಅಂಕಣದಲ್ಲಿ ‘ಗಂಜಿಗಿರಾಕಿಗಳೆಂಬ ಗೊಬೆಲ್ಸ್ ಗಳು” ಅಂತೊಂದು ಅಂಕಣವನ್ನು ಬರೆದಿದ್ದೆ. ಮೊನ್ನೆಯ ರಾಹುಲ್ ಭಾಷಣ ಕೇಳಿದ ನಂತರ ಈ ಗೊಬೆಲ್ಸ್ ತಂತ್ರವೇ ಕಾಂಗ್ರೆಸ್ಸಿನ ಚುನಾವಣಾ ಸ್ಟಾಟರ್ಜಿಯೆಂದು ಎಂದು ಊಹಿಸಬಹುದು. ಮತ್ತಷ್ಟು ಓದು 




