ಮೂರು ಬಿಟ್ಟವರ ನೂರು ಮಾತು
– ಭಾರತೀತನಯ
ಬೆಳಗ್ಗೆದ್ದು ನಿತ್ಯಕರ್ಮಗಳ ಮುಗಿಸಿ ಒಂದು ಕಪ್ ಕಾಫಿ ಅಥವಾ ಟೀ ಕುಡಿದು ಪತ್ರಿಕೆಯ ಕಡೆ ಕಣ್ಣು ಹಾಯಿಸದಿದ್ದರೆ ಏನೋ ಕಳೆದುಕೊಂಡವರ ಹಾಗೆ ಆಗಿಬಿಡುತ್ತೀವಿ. ಜಗತ್ತಿನ ಘಟನೆಗಳು, ರಾಜಕೀಯ, ದೇಶದ ಸಮಸ್ಯೆ, ಅನಾಹುತಗಳು, ಅಂಕಣಗಳು, ಭವಿಷ್ಯ,ಕ್ರೀಡೆಗಳು, ಹೊಸ ಚಲನಚಿತ್ರಗಳಾಗಿರಬಹುದು, ಹೀಗೆ ಹತ್ತು ಹಲವು ವಿಚಾರಗಳಿಗೆ ಪತ್ರಿಕೆಯನ್ನು ಅವಲಂಬಿಸಿರುತ್ತೇವೆ. ಈ ಎಲ್ಲ ವಿಷಯಗಳನ್ನು ಪತ್ರಿಕೆಗಳು ಎರಡು, ಮೂರು ರುಪಾಯಿಯೊಳಗೆ ನಮಗೆ ತಲುಪಿಸಿಬಿಡುತ್ತವೆ. ದೂರ ದರ್ಶನಗಳಲ್ಲಿ ಇಪ್ಪತ್ನಾಲಕು ಗಂಟೆಗಳು ನಿರೂಪಕರು ಗಂಟಲು ಹರಿದುಕೊಂಡು ಬೊಬ್ಬಿಕ್ಕಿದರೂ ನಮಗೆ ಪತ್ರಿಕೆಯ ಮೇಲಿನ ಮೋಹ ಕಡಿಮೆಯಾಗಲಿಲ್ಲ. ಅಷ್ಟು ಗಾಡವಾದ ಸೆಳೆತ ನಮ್ಮ ಮತ್ತು ಪತ್ರಿಕೆಯ ನಡುವಿನದು.ಪೂರ್ವಗ್ರಹಗಳ ಪೀಡಿತರಾಗಿ ಇರುತ್ತಿರಲಿಲ್ಲ. ಪತ್ರಿಕೆಯಲ್ಲಿ ವಿಷಯ ಬಂದಿದೆಯೆಂದರೆ ಅಧಿಕೃತವೆಂದೇ ಭಾವಿಸುತಿದ್ದೆವು.
‘ಹಿಂದು’ ಶಬ್ದ ಕೇಳುತ್ತಲೇ ಇವರೇಕೆ ಹುಯಿಲೆಬ್ಬಿಸುತ್ತಾರೆ?
– ಪ್ರವೀಣ್ ಪಟವರ್ಧನ್
ಕೆಲ ದಿನಗಳ ಹಿಂದಷ್ಟೇ ಬೋಧ್ಗಯಾ ಬಾಂಬ್ ಬ್ಲಾಸ್ಟ್ ಪ್ರಕರಣದ ನಂತರ ನೀಡಿದ್ದ ವಿಚಿತ್ರ- ವಿಕೃತ ಹೇಳಿಕೆಗಳನ್ನು ಆಧರಿಸಿ, ತಮಗೆ ಸಮಯ ಬಂದಾಗಲೆಲ್ಲಾ ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಿ, ಇತರರ (ಉದ್ದೇಶಪೂರ್ವಕವಾಗಿ ಗುಜರಾತಿನ ಮುಖ್ಯಮಂತ್ರಿ ಮೋದಿಯವರ) ತೇಜೋವಧೆ ಮಾಡುವ ಕಾಂಗ್ರೆಸ್ಸಿಗ “ಒಸಾಮಾ ಜೀ” ಎಂದು ಮುಕ್ತ ಮನಸ್ಸಿನಿಂದ ಮರ್ಯಾದೆ ನೀಡಿದ ಖ್ಯಾತಿಯ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯಸಿಂಗ್ ಅವರನ್ನು ಕುರಿತು Facebook ಜಾಲತಾಣದಲ್ಲಿ ಒಂದು ವ್ಯಂಗ್ಯ ಚಿತ್ರ ಹರಿದಾಡುತ್ತಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ ವ್ಯಂಗ್ಯಚಿತ್ರದಲ್ಲಿ ಇದ್ದುದು ಇಷ್ಟೇ. “ಟೀವಿಯಲ್ಲಿ ದಿಗ್ವಿಜಯಸಿಂಗ್ ಒಂದು ಪತ್ರಿಕಾ ಹೇಳಿಕೆ ನೀಡುತ್ತಿದ್ದಾಗ ಮನೆಯಲ್ಲಿನ ಸಾಕಿದ ನಾಯಿಗಳು ಟೀವಿ ನೋಡುತ್ತಾ ಬೊಗಳುತ್ತಿವೆ. ಮುಂದೇನೂ ಹೇಳಲಾರೆ. ನೀವೇ ಅರ್ಥ ಮಾಡಿಕೊಳ್ಳಬಲ್ಲಿರಷ್ಟೇ.
ರಾಜಕಾರಣಿಯೆಂದರೆ ಅಲ್ಲಿ ವಾದ-ವಿವಾದಗಳು ಸಾಮಾನ್ಯ. ಈಗಿನ ರಾಜಕಾರಣದಲ್ಲಿ ಜನಪರ ಕೆಲಸ ಮಾಡುವುದಕ್ಕಿಂತ ವಾದಗಳಿಗೆ ಸಿಲುಕಿಕೊಳ್ಳುವುದೇ ಹೆಚ್ಚು. ಒಬ್ಬರ ಮೇಲೋಬ್ಬರ ಕೆಸರೆರಚಾಟ. ವಿರೋಧ ಪಕ್ಷದ ವ್ಯಕ್ತಿಯ ತೇಜೋವಧೆ, ಸುಳ್ಳು ಆರೋಪ, ಅರ್ಥವಿಹೀನ ಹೇಳಿಕೆ ಇವೆಲ್ಲವೂ ಕೆಸರೆರೆಚಾಟದ ವಿವಿಧ ಮುಖಗಳು. ನಿಮ್ಮ ಸರ್ಕಾರ ಹೀಗೆ ಮಾಡಿದ್ದು ಸರಿಯೇ ಎಂಬ ಪ್ರಶ್ನೆಗೆ ಸಿಗುವ ಉತ್ತರ, ನಮ್ಮ ಹಿಂದಿನ ಸರ್ಕಾರ ಇದಕ್ಕಿಂತಲೂ ಕೆಟ್ಟ ಕೆಲಸ ಮಾಡಿತ್ತು ಅದರ ಬಗ್ಗೆ ಮಾತಾಡೋಣವೇ ಎಂದು ಕುಟುಕಿ ತಮ್ಮ ಲೋಪಗಳನ್ನು cover-up ಮಾಡಿಕೊಳ್ಳುವವರೇ ಈ ದಿನ ಹೆಚ್ಚು.
ಕಟ್ಟಡ ವಿನ್ಯಾಸದಲ್ಲಿ ನೈಸರ್ಗಿಕ ಬೆಳಕಿನ ಬಳಕೆ
-ವಿ.ಆರ್ ಭಟ್
ವಾಸ್ತುಶಿಲ್ಪ ಮತ್ತು ಬೆಳಕು ಎಂಬೆರಡು ಪರಿಕಲ್ಪನೆಗಳು ಇತಿಹಾಸಕಾಲದಿಂದಲೂ ಪರಸ್ಪರ ಅವಲಂಬಿತವಾಗಿಯೇ ಇರುವುದನ್ನು ಕಾಣುತ್ತೇವೆ. ಈ ಸಂಬಂಧ ಹೊಸದೇನೂ ಅಲ್ಲ ಮತ್ತು ಹೊಸತಲೆಮಾರಿನ ಸ್ಥಪತಿಗಳು, ವಿನ್ಯಾಸಗಾರರು ಅದನ್ನು ನಿರ್ಲಕ್ಷ್ಯಿಸುವಂತಿಲ್ಲ ಎನ್ನುತ್ತಾರೆ ವಾಸ್ತುವಿನ್ಯಾಸಗಾರ ಪ್ರಶಾಂತ್ ನಂದಿಪ್ರಸಾದ್. ಬೆಳಕಿನ ಕಥೆಯನ್ನು ಅವರ ಬಾಯಲ್ಲೇ ಕೇಳುವುದು ಬಹಳ ಚಂದ:
ವಿದ್ಯುತ್ತಿನಂತಹ ಕೃತ್ರಿಮ ಬೆಳಕಿನ ಮೂಲಗಳು ಬಳಕೆಗೆ ಸಿಗದಿದ್ದ ಕಾರಣ, ಗೋಡೆ ಮತ್ತು ಮುಚ್ಚಿಗೆಗಳಿಂದ ಆವರಿಸಲ್ಪಡುವ ಜಾಗಗಳಲ್ಲಿ ನೈಸರ್ಗಿಕ ಬೆಳಕಿನ ಲಭ್ಯತೆಗಳಿಗೆ ಆದ್ಯತೆಯನ್ನಿತ್ತ ಪ್ರಾಚೀನ ವಾಸ್ತುಶಿಲ್ಪಶಾಸ್ತ್ರದಲ್ಲಿ, ಸ್ಥಾಪತ್ಯ ಮತ್ತು ಬೆಳಕು ಇವೆರಡೂ ಪರಸ್ಪರ ಅಂತರ್ಗತವಾಗಿ ಹೆಜ್ಜೆಹಾಕಿವೆ. ಹೀಗಾಗಿ ವಾಸ್ತುಶಿಲ್ಪಶಾಸ್ತ್ರ ಎಂಬುದು ’ನಾಲ್ಕುಗೋಡೆ ಮತ್ತು ಒಂದು ಛಾವಣಿ’ ಎಂಬುದಕ್ಕಿಂದ ವಿಸ್ತೃತವಾದ ವಿಷಯವಾಗಿದೆ. ಅಂಗಣದ ಭೂಭಾಗದ ತಗ್ಗು ದಿಣ್ಣೆಗಳನ್ನು ಅನುಕೂಲಕ್ಕೆ ತಕ್ಕಂತೇ ಪರಿವರ್ತಿಸಿ, ಕಟ್ಟಡದೊಳಗೆ ಬೆಳಕಿನ ಹರಿವು ಹೆಚ್ಚುವಂತೇ ಮಾಡುವ ಮೂಲಕ ಅಲ್ಲಿನ ನಿವಾಸಿಗಳಿಗೆ ಪುಷ್ಕಳ ಬೆಳಕು ಲಭ್ಯವಾಗುವಂತೇ ನೋಡಿಕೊಳ್ಳುತ್ತಿದ್ದುದು ಅಂದಿನ ಸಂಪ್ರದಾಯ. ಉತ್ತಮ ಬೆಳಕಿನ ಪ್ರವಾಹ ಇರುವ ಕಟ್ಟಡಗಳಲ್ಲಿ ನಾವದನ್ನು ಹೆಚ್ಚಾಗಿ ಗಮನಿಸುವುದೇ ಇಲ್ಲ, ಆದರೂ ಬೆಳಕಿನಿಂದಾಗಿಯೇ ನಾವಲ್ಲಿ ಆಕರ್ಷಿತರಾಗಿರುತ್ತೇವೆ, ಅಲ್ಲಿಯೇ ಇರಲು ಇಷ್ಟಪಡುತ್ತೇವೆ.
ಹಿಂದೂ ಮತ್ತು ಇಸ್ಲಾಂ ವಾಸ್ತುಶಿಲ್ಪ ಶಾಸ್ತ್ರಗಳಲ್ಲಿ, ಅವರ ವಸಾಹತುಗಳುಳ್ಳ ಭೂಖಂಡದ ಕೆಲವು ಪೂಜಾ/ಪ್ರಾರ್ಥನಾ ಪ್ರದೇಶಗಳಲ್ಲಿ, ಬೆಳಕೆಂಬ ಮೂಲವಸ್ತುವಿನ ಬಳಕೆ ಹಲವೆಡೆಗಳಲ್ಲಿ ನಿಯಂತ್ರಣಕ್ಕೆ ಒಳಪಡುತ್ತಿತ್ತು. ವ್ಯವಸ್ಥಾಪನೆಗೊಳಪಟ್ಟ ಪ್ರದೇಶಗಳಲ್ಲಿ ಪದರಗಳನ್ನು ನಿರ್ಮಾಣಮಾಡುವ ಮೂಲಕ ಹೊರಜಗತ್ತಿನ ಗದ್ದಲ, ಧೂಳು ಮತ್ತು ಸುಡುವ ಬಿಸಿಲು ನೇರವಾಗಿ ಒಳಗೆ ಬರದಂತೇ ತಡೆಯಲಾಗುತ್ತಿತ್ತು. ಉದಾಹರಣೆಗೆ: ವಿಶೇಷ ದಿನಗಳಲ್ಲಿ ಸೇರುವ ಜನಸಂದಣಿಯನ್ನು ಗಣನೆಯಲ್ಲಿಟ್ಟುಕೊಂಡು, ಪ್ರಮುಖ ಪೂಜಾಸ್ಥಳ ಮತ್ತು ಬರುವ ಜನರ ಅನುಕೂಲಕ್ಕಾಗಿ ನಿರ್ಮಿಸುವ ಸಭಾಗೃಹ ಇತ್ಯಾದಿಗಳ ನಡುವೆ ಸಾಕಷ್ಟು ಸ್ಥಳಾವಕಾಶ ಇರಿಸಲಾಗುತ್ತಿತ್ತು. ಗರ್ಭಗುಡಿಗಳಲ್ಲಂತೂ ಸೂರ್ಯನ ಬೆಳಕು ಪ್ರವೇಶಿಸದೇ ಇರುವಂತಿದ್ದು, ಅಲ್ಲಿಯೇ ಉರಿಸಲ್ಪಡುವ ಎಣ್ಣೆಯ ದೀಪಗಳಿಂದ ಹೊಮ್ಮುವ ಬೆಳಕು ವಿಗ್ರಹಗಳ ದಿವ್ಯಪ್ರಭಾವಲಯಕ್ಕೆ ಇನ್ನಷ್ಟು ಮೆರುಗು ನೀಡುತ್ತಿದ್ದವು. ವಿನ್ಯಾಸ ಮತ್ತು ಬೆಳಕಿನ ವಿಶಿಷ್ಟ ಬಳಕೆಗಳು ಈಜಿಪ್ಟ್ ನಲ್ಲಿಯೂ ಕಂಡುಬಂದಿದ್ದು, ಅವರ ದೇವಾಲಯಗಳಲ್ಲಿರುವ ಮಾನವ ಶರೀರಕ್ಕಿಂತ ದೊಡ್ಡದಾದ, ಬೃಹದಾಕಾರದ ವಿಗ್ರಹಗಳನ್ನು ದರ್ಶಿಸಲು ಇದೇ ಮಾದರಿಯ ವ್ಯವಸ್ಥೆ ಅಲ್ಲಿತ್ತು.
ದೇವನೂರು ಎಂಬ ಸಂತ ಮತ್ತು ವಿಧ್ವಂಸಕ ಪ್ರಚೋಧನೆ
ಹೃಷೀಕೇಶ್, ಚಿಕ್ಕಮಗಳೂರು
ಬ್ರಾಹ್ಮಣರು ಮತ್ತು ಲಿಂಗಾಯತರ ಟೌನ್ ಶೀಪ್ ಮೇಲೆ ಜೀವಹಾನಿಯಾಗದಂತೆ ಬಾಂಬ್ ಹಾಕಬೇಕೆಂದು ದೇವನೂರು ಫತ್ವಾ ಹೊರಡಿಸಿದ್ದಾರೆಂದು ಬಶೀರ್ ಬಿ ಎಮ್ ರವರು ಫೆಸ್ ಬುಕ್ಕಿನಲ್ಲಿ ಬರೆದುಕೊಂಡಿದ್ದಾರೆ… ದೇವನೂರು ರವರು ಹಾಗೆ ಹೇಳಿರುವುದು ಸತ್ಯವೇ ಆದ ಪಕ್ಷದಲ್ಲಿ ಕೆಳಗಿನ ಗೊಂದಲಗಳು/ಪ್ರಶ್ನೆಗಳು ಏಳುತ್ತವೆ.
೧. ಜೀವಹಾನಿ ಆದರೂ ಆಗದಿದ್ದರೂ ಅಮಾನವೀಯವಾಗಿ ಬಾಂಬ್ ಹಾಕುವಂತೆ ಹೇಳುವುದು ಸಾಧುವೇ? ಹಾಗೇ ಹೇಳಲು ಅವರಿಗೆ ಅಧಿಕಾರ ಕೊಟ್ಟವರು ಯಾರು?
೨.ಗೊಲ್ಲರ ಹಟ್ಟಿ, ಲಂಬಾಣಿ ತಾಂಡ ಹೀಗೆ ಹತ್ತು ಹಲವು ಜಾತಿಗಳು ಪ್ರತ್ಯೇಕವಾಗಿ ಬದುಕುತ್ತಿವೆ, ಅವರೆಲ್ಲಾ ಪ್ರತ್ಯೇಕವಾಗಿ ಬದುಕುತ್ತಿದ್ದಾರೆಂದು,ಅವರ ಮೇಲೂ ಬಾಂಬ್ ಹಾಕಲು ಹೇಳಬಹುದೆ?
೩. ಉದ್ಯೋಗದ ಆಧಾರದ ಮೇಲೆ ಹಲವಾರು ವೃತ್ತಿಪರ ಉದ್ಯೋಗಿಗಳು ಪ್ರತ್ಯೇಕವಾಗಿಯೇ ನೆಲೆಸುತ್ತಾರೆ,ಉದಾಹರಣೆಗೆ ಕ್ವಾಟ್ರಸ್ ನಲ್ಲಿ ನೆಲೆಸುವ ಉದ್ಯೋಗಿಗಳು.ಇಲ್ಲಿಯೂ ಬಾಂಬ್ ಹಾಕಬೇಕೆ?
೪. ಬ್ರಾಹ್ಮಣರ ಮೇಲೆ ಬಾಂಬ್ ಹಾಕುವುದರ ಕುರಿತು ಅವರಿಗೆ ದೊರಕಿರುವ ಕತೆಗಳು ಪ್ರೇರಕವಾಗಿರಬಹುದು,ಆದರೂ ಅವರಿಗೆ ಜೀವಹಾನಿಯಾಗದಂತೆ ಅವರ ಮನೆಗಳ ಮೇಲೆ ಬಾಂಬ್ ಹಾಕಬೇಕು ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ?
೬. ಜನರು ಪ್ರತ್ಯೇಕವಾಗಿಯಾದರೂ ನೆಲೆಸಲಿ ಒಟ್ಟಿಗಾದರೂ ನೆಲೆಸಲಿ ಅದನ್ನು ಧ್ವಂಸ ಮಾಡುವ ಅಧಿಕಾರ ಸಾಹಿತ್ಯ ಬರೆಯುವವರಿಗೆ ನೀಡಿದವರು ಯಾರು?
೭.ಬೇರೆ ಕೋಮುಗಳ ಮೇಲೆ ಬಾಂಬ್ ಹಾಕುವ ವಿಧ್ವಂಸಕ ಹೇಳಿಕೆಯನ್ನು ನೀಡಿದರೆ ನೀಜವಾಗಿಯೂ ಕೋಮುಗಲಭೆಗೆ ಮುನ್ನುಡಿ ಬರೆಯುತ್ತಿರುವವರು ಯಾರು?
೮.ವಚನ ಚಳುವಳಿಯ ಚರ್ಚೆಯ ಸಂದರ್ಭದಲ್ಲಿ ಲಿಂಗಾಯತ ಸಮುದಾಯದ ಕುರಿತು ಒಂದು ಮಾತನ್ನೂ ಎತ್ತದವರು,ಈಗ ಅವರ ವಿರುದ್ದ ಹರಿಹಾಯಲು ಕಾರಣಗಳೇನು?
ಒಟ್ಟಿನಲ್ಲಿ ಬಶೀರ್ ಬಿಎಮ್ ಅವರ ಪೋಸ್ಟ್ ಓದಿದಾಗ ಎದೆ ಜಲ್ ಎಂದಿದೆ.ಏನಾಗುತ್ತಿದೆ ಈ ಸಮಾಜದಲ್ಲಿ? ಜನರು ಬದುಕಲು ಇವರ ಅಪ್ಪಣೆ ಪಡೆಯಬೇಕಾ ಮತ್ತು ಬದುಕುವ ಸ್ವಾತಂತ್ರ ಎಲ್ಲವೂ ಬರೀ ಬೊಗಳೆಯೇ ಎಂದು ಅನ್ನಿಸುತ್ತದೆ. ಆದರೆ ಅದನ್ನು ಪರಾಮರ್ಶೆ ಮಾಡದೆ ಹೆಮ್ಮೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಏನೋ ವೇದವಾಕ್ಯವೇ ಹೇಳಿದ್ದಾರೆಂದು ಹಾಕುವ ಹಿಂಬಾಲಗಳ ತಲೆಯಲ್ಲೇನಿದೆ ಎಂಬುದರ ಕುರಿತು ಗಂಭೀರವಾದ ಅನುಮಾನ ಏಳುತ್ತಿದೆ.
ಪ್ರತ್ಯೇಕ ಟೌನ್ ಶೀಪ್ ಗಳನ್ನು ವಿರೋಧಿಸುವುದು,ಬಿಡುವುದು ಅವರವರಿಗೆ ಬಿಟ್ಟಿದ್ದು ಅದು ತಪ್ಪಲ್ಲ.ನನ್ನ ತಕರಾರಿವುದು ವಿರೋಧಿಸುವ,ವಿರೋಧವನ್ನು ದಾಖಲಿಸುವ ರೀತಿಗೆ. ದೇವನೂರು ಮಹಾದೇವ ರವರು ಯಾವ ಉದ್ದೇಶದಿಂದ ಹೇಳಿದ್ದಾರೋ ತಿಳಿದಿಲ್ಲ, ಆದರೆ ಬಶೀರ್ ಬಿಎಮ್ ರವರು ಅದನ್ನು ಬರೆದಿರುವುದು ಮೇಲೆ ತಿಳಿಸಿದ ಅರ್ಥವನ್ನೇ ಸೂಚಿಸುತ್ತದೆ
ಚಿತ್ರ ಕೃಪೆ : http://avadhimag.com
ಸಿದ್ರಾಮಣ್ಣನ ೧.ರೂ ಅಕ್ಕಿಯ ಸುತ್ತಮುತ್ತ
-ಪ್ರಸನ್ನ,ಬೆಂಗಳೂರು
೧ ರೂ ಅಕ್ಕಿ ಯೋಜನೆಯನ್ನು ಸಮರ್ಥಿಸುತ್ತಾ ಕೆಲವರು ಗ್ಯಾಸ್ ಮತ್ತು ಪೆಟ್ರೋಲ್ ಸಬ್ಸಿಡಿ ಬಗ್ಗೆ ಹೇಳುತ್ತಿದ್ದಾರೆ, ಪೆಟ್ರೋಲ್ ಮೇಲೆ ಶೇ ೪೦ ಕ್ಕೂ ಹೆಚ್ಚು ತೆರಿಗೆಯೂ ಇದೆ ಸಬ್ಸಿಡಿಯೂ ಇದೆ ಎನ್ನುವ ಸಣ್ಣ ಮಾಹಿತಿಯೂ ಇವರಲ್ಲಿ ಇಲ್ಲವೆ? ಬಹುತೇಕ ಮಧ್ಯಮ ವರ್ಗದ ಜನ ದುಡಿದು ಸಂಪಾದಿಸಿದ ಹಣದಲ್ಲಿ ಬದುಕುತ್ತಿದ್ದಾರೆ. ೧ ರೂ ಅಕ್ಕಿಯಂತಹ ಯೋಜನೆಗಳು ಅವನ ಮೇಲೆ ಹೊರೆ ಹೆಚ್ಚಿಗೆ ಮಾಡುತ್ತದೆ ಎನ್ನುವ ಕಾಳಜಿ ಅವನದು.
ಇನ್ನೂ ಕೆಲವರು ಐಟಿ ವಲಯಕ್ಕೆ ಕೊಡುವ ಸಬ್ಸಿಡಿ, ಭೂಮಿಯ ಬಗ್ಗೆ ಸೌಲಭ್ಯಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಈ ವಲಯಗಳು ಸೃಷ್ಠಿಸಿರುವ ಮತ್ತು ಅದರಿಂದ ಒದಗುವ ಉದ್ಯೋಗವಕಾಶ ಅದರಿಂದ ಲಕ್ಷಾಂತರ ಕುಟುಂಬಗಳು ಬದುಕು ಕಟ್ಟಿಕೊಂಡಿರುವುದನ್ನು ಮರೆಯುವುದು ಕೇವಲ ವೋಟ್ ಬ್ಯಾಂಕ್ ರಾಜಕಾರಣದ ಅಥವ ಅಂಧಾಭಿಮಾನದ ಪ್ರತೀಕ. ಸ್ವಂತವಾಗಿ ಉದ್ಯೋಗ ಸೃಷ್ಠಿಸಲಾಗದ ಅಸಹಾಯಕ ಸರ್ಕಾರಗಳು ಈ ವಲಯಕ್ಕೆ ಸೌಕರ್ಯ ಒದಗಿಸಿ ಉದ್ಯೋಗಿಗಳ ತೆರಿಗೆ
ಹಣದಿಂದ ಬೊಕ್ಕಸ ತುಂಬಿಸಿಕೊಳ್ಳುತ್ತಿಲ್ಲವೆ? ಆ ವಲಯದಿಂದ ಆದಾಯವಿಲ್ಲದೆ ಯಾವ ಸರ್ಕಾರವೂ ಕಣ್ಣುಮುಚ್ಚಿ ಸೌಕರ್ಯಗಳನ್ನು ಒದಗಿಸುತ್ತಿಲ್ಲ.
ಪೀಜಿ ಪುರಾಣ
– ಪ್ರಶಸ್ತಿ.ಪಿ, ಸಾಗರ
ಬ: ಬೆಂಗ್ಳೂರು
ಅ: ಓ. ಹೌದಾ.. ಬೆಂಗ್ಳೂರಲ್ಲೇನ್ ಮಾಡ್ಕೊಂಡಿದೀರಿ ?
ಬ:ಪೀಜಿ
ಅ:ಪೀಜಿ ಅಂದ್ರೆ ಪೋಸ್ಟ್ ಗ್ರಾಜುಯೇಷನ್ನಾ ?
ಬ:ಅಲ್ಲ ಮಾರ್ರೆ.ಪೇಯಿಂಗ್ ಗೆಸ್ಟು !:-)
ಈ ಬೆಂದಕಾಳೂರಿಗೆ ಬಂದು ಬಾಳ ಬೇಳೆ ಬೇಯಿಸ್ಕೊಳೋಕೆ ಶುರು ಮಾಡಿದಾಗಿನಿಂದ ಮೇಲಿನ ಪೀಜಿ PJ ಬೇಜಾರ್ ಬರೋವಷ್ಟು ಕಾಮನ್ನಾಗಿ ಹೋಗಿದೆ 😦
ಅಲ್ಲ, ಈ ಕಾಲ ಅನ್ನೋದು ನಮ್ಮ ಕಲ್ಪನೆ, ನಂಬಿಕೆಗಳನ್ನೆಲ್ಲಾ ಎಷ್ಟು ಬದಲಾಯಿಸತ್ತೆ ಅಲ್ವಾ ? ಕೆಲವೊಂದು ಸಲ ನಂಬಿಕೆಗಳನ್ನ ಬುಡಮೇಲೇ ಮಾಡ್ಬಿಡುತ್ತೆ. ನಾವು ಎಷ್ಟೇ ಅಂದ್ಕೊಂಡ್ರೂ ನಮ್ಮ ಮನೆ ಬಿಟ್ಟು ಗೊತ್ತಿರದ ಊರಿಗೆ ಹೋಗಬೇಕಾದ ಸಂದರ್ಭ ಬಂದೇ ಬರತ್ತೆ. ಆ ಊರಲ್ಲಿ ಹತ್ತಿರದ ನೆಂಟ್ರ ಮನೆಯೋ, ಗೆಳೆಯರ ರೂಮೋ ಇದ್ರೆ ಓಕೆ. ಇಲ್ದಿದ್ರೆ ? ! ಹುಡುಗರು ಹೇಗೋ ಒಂದೆರಡು ದಿನ ಏಗಬಹುದು. ಆದ್ರೆ ಹುಡುಗಿಯರು ? ಎಕ್ಸಾಮಿಗೋ, ಇಂಟರ್ವ್ಯೂಗೋ ಯಾವ್ದೋ ಹೊಸ ಊರಿಗೆ ಒಂದೆರಡು ದಿನಗಳ ಮಟಿಗೆ ಹೋದ ಅಕ್ಕಂದಿರು ಯಾವುದೋ ಗೃಹಸ್ಥರ ಮನೆಯಲ್ಲಿ ಉಳ್ಯೋದು. ನೆಂಟರಲ್ಲ, ಪರಿಚಯದವರೂ ಅಲ್ಲ. ಹಾಗಾಗಿ ದುಡ್ಡು ಕೊಟ್ಟು ಉಳ್ಯೋ ಅತಿಥಿ(paying guest) ಅನ್ನೋ ಕಲ್ಪನೆ ಇತ್ತು ಪೀಜಿ ಅಂದ್ರೆ. ಆಮೇಲೆ ಅಕ್ಕಂದಿರೆಲ್ಲಾ ಕೆಲ್ಸ ಅಂತ ಬೆಂಗ್ಳೂರಿಗೆ ಬಂದ ಮೇಲೆ ಪೀಜಿ ಪರಿಕಲ್ಪನೆ ಸ್ವಲ್ಪ ಬದಲಾಯ್ತು. ಒಂದು ಆಂಟಿ ಮನೇಲಿ ಅವ್ರಿಗೆ ಊಟದ, ಇನ್ನಿತರ ಖರ್ಚು ಅಂತ ಕೊಟ್ಟು ಮನೆ ಮಕ್ಕಳಂತೆ ಇರೋದೇ ಪೀಜಿ ಅನ್ನೊವಷ್ಟು ಅಕ್ಕಂದಿರ ಮಾತುಗಳಿಂದ ತಿಳಿದಿದ್ದೆ. ಪೀಜಿ ಅಂದರೆ ಕೆಲದಿನ ಅಂತಿದ್ದ ಪರಿಕಲ್ಪನೆ ಅದು ತಿಂಗಳು, ವರ್ಷಗಳಿಗೂ ಮುಂದುವರಿಯುವ ಮೆಗಾ ಸೀರಿಯಲ್ ಅಂತ ಬದಲಾಯ್ತು.. ಕೇಳೋದಕ್ಕೂ, ಸ್ವತಃ ಅನುಭವಿಸೋದಕ್ಕೂ ಇರೋ ವ್ಯತ್ಯಾಸ, ಬೆಂದಕಾಳೂರಿನ ಪೀಜಿಗಳ ನಿಜರೂಪದ ಝಲಕ್ಗಳು ಸಿಗೋಕೆ ಶುರು ಆದದ್ದು ನಾನು ಸ್ವತಃ ಬೆಂಗಳೂರಿಗೆ ಬಂದಾಗಲೇ.
ಉತ್ತರಾಖಂಡ ಜಲಪ್ರಳಯ ಸಂತ್ರಸ್ತರ ಪರಿಹಾರ ನಿಧಿಗಾಗಿ
ಧಾರವಾಡ: ಉತ್ತರಾಖಂಡ ಜಲಪ್ರಳಯ ಸಂತ್ರಸ್ತರ ಪರಿಹಾರ ನಿಧಿಗೆ ಸಹಾಯ ಧನ ನೀಡುವ ಉದ್ದೇಶದಿಂದ ಮಾಧ್ಯಮ ಛಾಯಾ ಗ್ರಾಹಕರು ಹಾಗೂ ಹವ್ಯಾಸಿ ಛಾಯಾಗ್ರಾಹಕರು ಮತ್ತು ಕಲಾವಿದರ ಸುಂದರವಾದ ಕಲಾಕೃತಿಗಳು ಮತ್ತು ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಳ್ಳಲಾಗಿದೆ. ಸರಕಾರಿ ಚಿತ್ರಕಲಾ ಮಹಾವಿದ್ಯಾಲಯ, ಆರ್ಕೆ ಛಾಯಾ ಫೌಂಡೇಶನ್, ಬಾಲ ನಂದನ ಟ್ರಸ್ಟ್ ಹಾಗೂ ಮಾಸ್ ಮೀಡಿಯಾ ಕಮ್ಯುನಿಕೇಶನ್ಸ್ ಫಾರ್ ರೂರಲ್ ಆಂಡ್ ಅರ್ಬನ್ ಡೆವೆಲಪ್ಮೆಂಟ್ ಸೆಂಟರ್ ಕರ್ನಾಟಕ ಜಂಟಿಯಾಗಿ ಜುಲೈ 20ರಿಂದ 5 ದಿನಗಳ ಕಾಲ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಈ ಹಿನ್ನಲೆಯಲ್ಲಿ ಆಸಕ್ತ ಕಲಾವಿದರು, ಹವ್ಯಾಸಿ ಛಾಯಾ ಗ್ರಾಹಕರು ಜುಲೈ 15ರ ಒಳಗಾಗಿ ತಮ್ಮ ಕಲಾಕೃತಿ ಹಾಗೂ ಛಾಯಾಚಿತ್ರಗಳನ್ನು ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ಮುಖ್ಯಸ್ತರಾದ ಎನ್.ಎಂ.ದಾಟನಾಳ ಇವರಿಗೆ ತಲುಪಿಸಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಮೊ:9341242401, ಪ್ರತಾಪ ಬಹುರೂಪಿ 8095932738 ಗೆ ಸಂಪರ್ಕಿಸಬೇಕೆಂದು ಮಾಸ್ ಮೀಡಿಯಾ ಕಮ್ಯುನಿಕೇಶನ್ಸ್ ಫಾರ್ ರೂರಲ್ ಆಂಡ್ ಅರ್ಬನ್ ಡೆವೆಲಪ್ಮೆಂಟ್ ಸೆಂಟರ್ ಕರ್ನಾಟಕ ಉಪಾಧ್ಯಕ್ಷ ಶಶಿಕಾಂತ್ ದೇವಾಡಿಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಕವ್ವನ ಸ್ವಾತಂತ್ರ್ಯ
– ಸಂತೆಬೆನ್ನೂರು ಫೈಜ್ನಟ್ರಾಜ್’
ಜೈಹಿಂದ್,
ಜೈ ಹಿಂದ್,
ಮಹಾತ್ಮಗಾಂಧಿ ಕಿ ಜೈ.
ಭಾರತ್ಮಾತಾಕಿ ಜೈ.
ಇಡೀ ಹಳ್ಳಿಗೆ ಹಳ್ಳಿಯೇ ಕಂಪಿಸುವಂತೆ ಘೋಷಣೆಗಳು ಅನುರಣಿಸುತ್ತಿದ್ದವು. ನಾಗೇನಹಳ್ಳಿ ಊರಗೌಡ್ರು ಸರ್ಜಾ ಸಂಕಣ್ಣ ನಾಯಕರ ಮನೆ ಮಾತ್ರ ಅಂದು ಸ್ಮಶಾನಕ್ಕಿಂತಲೂ ಮೌನ-ಮೌನವಾಗಿತ್ತು !ಹುರಿ-ಹುರಿ ಮೀಸೆಯ, ಕಚ್ಚೆ ಪಂಚೆಯ, ಇಟ್ಟಗಿ ಖಾದಿಯ ಜುಬ್ಬಾ ತಲೆ ಮೇಲೂ ಅಲ್ಲಿಯ ಚೌಕಾಕಾರದ ಗಾಂಧಿಟೋಪಿ ಧರಿಸಿ ಅದ್ಯಾವುದೋ ಶೂನ್ಯ ದಿಟ್ಟಿಸ್ತಾ ಗೌಡರು ಹಜಾರದ ಕಂಬವೊಂದನ್ನು ಬಲಗೈಲಿ ಹಿಡಿದು ನಿಂತಿದ್ದರು!
ಸುರಪುರದ ವೆಂಕಟಪ್ಪನಾಯಕನ ವಂಶಸ್ಥರಾದ ಈ ಸರ್ಜಾ ಸಂಕಣ್ಣನಾಯಕರ ಮನೆಯಲ್ಲೂ ಅಂದು ಸಣ್ಣ ಚಳವಳಿ ಪ್ರಾರಂಭಗೊಂಡಿತ್ತು. ಅಡಿಗೆ ಖೋಲಿಯ ಮೂಲೆಯಲ್ಲಿ ಗೌಡತಿ ಸಂಕವ್ವ ಸೆರಗು ಒದ್ದೆಯಾಗುವಂತೆ ಮುಸಿ-ಮುಸಿ ಅಳ್ತಾನೇ ಇದ್ದದ್ದು ಅದು ನಿನ್ನೆ ರಾತ್ರಿಯಿಂದ ಗೌಡರ ರಕ್ತ ಕೋಪವಾಗಿ ಬರಲು ಕಾರಣವಾಗಿತ್ತು!
ಉತ್ತರಕುಮಾರರ ‘ಚೋರ್’ದಾಮ್ ಯಾತ್ರೆ!
– ತುರುವೇಕೆರೆ ಪ್ರಸಾದ್
ಸುಂದ್ರಮ್ಮನ ವಠಾರದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಕೈಲಾಸ್ ಟ್ರಾವೆಲ್ಸ್ನಲ್ಲಿ ಚಾರ್ದಾಮ್ ಯಾತ್ರೆಗೆ ಹೋದ ವಠಾರದ ಕಲಿಗಳಾದ ವೆಂಕ, ಸೀನ,ನಾಣಿ ವಾರವಾದರೂ ಪತ್ತೇನೇ ಆಗಿರಲಿಲ್ಲ. ಟಿವಿನಲ್ಲಿ ಅಲ್ಲಿನ ಪ್ರಚಂಡ ಜಲಪ್ರಳಯ ನೋಡಿದ ಮೇಲೆ, ಅಲ್ಲಿಂದ ಬಚಾವ್ ಆಗಿ ಬಂದೋರು ತಮ್ಮ ಥರಗುಟ್ಟುವ ಅನುಭವ ಹೇಳಿದ ಮೇಲೆ ಆ ಮಹಾ ಪ್ರಳಯದಲ್ಲಿ ಈ ಮೂವರೂ ಹರೋ ಹರ ಅಂದು ಕೇದಾರನಾಥನ ಪಾದ ಸೇರ್ಕಂಡಿದಾರೆ ಅಂತ ಗ್ಯಾರೆಂಟಿ ಆಗಿತ್ತು. ಸುಂದ್ರಿಗೆ ಒಳಗೊಳಗೇ ಖುಷಿನೇ ಆಗಿತ್ತು. ಮನೆಹಾಳು ಮುಂಡೇವು! ವಠಾರನೂ ಕಾಲಿ ಮಾಡದೆ,ಇಲ್ಲಿರೋರನ್ನ ನೆಮ್ಮದಿಯಾಗಿ ಇರೋಕೂ ಬಿಡದೆ ದಿನಬೆಳಗಾದರೆ ಪ್ರಾಣ ತಿಂತಿದ್ವು. ಈ ನೆವದಲ್ಲಾದರು ನೆಗದು ಬಿದ್ದು ಸತ್ತವಲ್ಲ!
ಪೀಡೆ ತೊಲಗ್ತು ಅಂತ ನಿರಾಳವಾದ್ಲು. ಮೊದ್ಲೇ ಆಸೆಬುರಕ ಮುಂಡೇವು! ಅರ್ಧದಲ್ಲೇ ಸತ್ತಿವೆ..ಇಷ್ಟು ದಿವಸ ಕಾಡಿದ್ದು ಸಾಲದೆ ಮತ್ತೆಲ್ಲಾದರೂ ಪೀಡೆಯಾಗಿ ಕಾಡಾವು ಎಂದು ಒಂದು ವಡೆ, ಪಾಯಸದ ಊಟ ಹಾಕಿಸಿ ಮೊಸಳೆ ಕಣ್ಣೀರು ಸುರಿಸಿ ಎಳ್ಳು ನೀರು ಬಿಟ್ಟು ಬಿಡಬೇಕು ಅಂತ ತೀರ್ಮಾನ ಮಾಡುದ್ಲು ಸುಂದ್ರಿ. ಅದರಂತೆ ಒಂದು ಸಂತಾಪ ಸೂಚಕ ಸಭೆನೂ ಏರ್ಪಾಡಾಯ್ತು. ಮೂರು ಜನರ ಎಲೆಕ್ಷನ್ ಐಡೆಂಟಿಟಿ ಕಾರ್ಡ್ ಇಟ್ಟು( ದೊಡ್ಡ ಫೋಟೊ ಮಾಡಿಸೋದು ದಂಡ ಅಂತ) ಒಂದೊಂದು ಕಣಗಲೆ, ಚೆಂಡು ಹೂವಿಟ್ಟು ವಠಾರದೋರು ಶೋಕ ಆಚರಿಸುದ್ರು. ಎಲ್ಲಾ ಮೂವರ ( ಇಲ್ಲದ) ಗುಣಗಳ ಗುಣಗಾನ ಮಾಡುದ್ರು.ಇನ್ನೇನು ವಡೆ ಕಡೀಬೇಕು ಅನ್ನುವಷ್ಟರಲ್ಲಿ ವಠಾರದ ಬಾಗಿಲಲ್ಲಿ ನೆರಳು ಕಾಣಿಸ್ಕೊಂತು. ಅತ್ತ ನೋಡುದ್ರೆ ಬಾಗಿಲಲ್ಲಿ ವೆಂಕ, ಸೀನ, ನಾಣಿ ತಟ್ಟಂತ ಪ್ರತ್ಯಕ್ಷ ಆದ್ರು. ಎಲ್ಲಾ ಶಾಕ್ ಆದ್ರು.ಸುಂದ್ರಿ ಅಂತೂ ಧರೆಗಿಳಿದು ಹೋದ್ಲು.ಕೆಲವರಂತೂ ದೆವ್ವ ಅಂತ ಹೆದರಿಕೊಂಡು ಊಟದ ಎಲೆನೂ ಬಿಟ್ಟು ಚಡ್ಡಿಲೇ ಒಂದು ಎರಡು ಮಾಡಿಕೊಂಡು ಓಡಿ ಹೋದ್ರು. ಉತ್ತರಖಂಡ ದುರಂತದಲ್ಲಿ ಮಾಂಸದ ಮುದ್ದೆಯಾಗಿ ಎಲ್ಲೋ ಕೊಚ್ಕಂಡು ಹೋಗಿದಾರೆ ಅಂದ್ಕೊಂಡಿದ್ದ ಈ ಪಾಕಡಾಗಳು ಧಿಡೀರಂತ ಪ್ರತ್ಯಕ್ಷ ಆದರೆ ಹೇಗಾಗಿರಬೇಡ? ಇದ್ದಿದ್ದರಲ್ಲಿ ಸ್ವಲ್ಪ ಧೈರ್ಯ ವಹಿಸಿ ಸುಂದ್ರಿ ಕೇಳುದ್ಲು.
’ಹರಶರಣ ದೆನಿಲೋನ ಹಾದಿಯಲ್ಲಿ’ ಶಿವಪ್ರಕಾಶರ ಲೇಖನಕ್ಕೊಂದು ಪ್ರತಿಕ್ರಿಯೆ
-ಬಾಲಚಂದ್ರ ಭಟ್
ಈ ಲೇಖನ ಪ್ರಜಾವಾಣಿಯಲ್ಲಿ ಪ್ರಕಟವಾದ ಎಚ್.ಎಸ್.ಶಿವಪ್ರಕಾಶರ ಜುಲೈ ೫ ರಂದು ಪ್ರಕಟವಾದ ’ಹರಶರಣ ದೆನಿಲೋನ ಹಾದಿಯಲ್ಲಿ’ ಬರಹಕ್ಕೆ ಪ್ರತಿಕ್ರಿಯೆ. ಬಹಳಷ್ಟು ವಿಷಯಗಳನ್ನು ಲೇಖನದಲ್ಲಿ ಉಲ್ಲೇಖಿಸಿದ್ದನ್ನು ಓದಿದ ನಂತರ ಸ್ವಲ್ಪ ಲೇಖನ ಏನು ಹೇಳಹೊರಟಿದೆಯೆಂಬುದರ ಬಗ್ಗೆ ಗೊಂದಲ ಮೂಡಿತು. ನಾನು ತಿಳಿದುಕೊಂಡಂತೆ ಲೇಖಕರು ಒಟ್ಟಾರೆಯಾಗಿ ಏನು ಹೇಳುತ್ತಾರೆಂದರೆ,
೧. ಆಲೆನ್ ದೆನಿಲೋ ನ ವಿಚಾರಗಳು, ಬಹುತೇಕ ಭಾರತೀಯ ಆಧ್ಯಾತ್ಮಿಕ ಪರಿಕಲ್ಪನೆಗಳಿಗಿಂತ(‘ಕನಿಕರ ಹುಟ್ಟಿಸುವ ಮುಖಮುದ್ರೆಯ ವೇದಾಂತ’) ಭಿನ್ನವಾಗಿತ್ತು, ಹಾಗೂ
೨. ಭಾರತದ ಆಧ್ಯಾತ್ಮಿಕ ವಿಷಯಗಳ ಬಗ್ಗೆ ’ಸ್ಟೀರಿಯೊಟೈಪಡ್ ಪೌರಾತ್ಯ’ ಚಿಂತನೆಗಳಿಂದ, ಹಾಗೂ ವಸಾಹತುಶಾಹಿ ಪರಿಕಲ್ಪನೆಗಳಿಂದ ಹೊರತಾಗಿದ್ದವು.
ಈ ಮೇಲಿನ ಎರಡು ಲೇಖಕರ ಅಭಿಪ್ರಾಯಗಳನ್ನು ಈ ಕೆಳಗಿನಂತೆ ವಿಮರ್ಶಿಸಿದ್ದೇನೆ.ಹಾಗೆಯೆ ಪ್ರಶ್ನೆಗಳ ಮೂಲಕ ನನ್ನಲ್ಲಿನ ಗೊಂದಲಗಳನ್ನ ಪ್ರಸ್ತಾಪಿಸಿದ್ದೇನೆ. ತಪ್ಪಿದ್ದಲ್ಲಿ ಸರಿಪಡಿಸಿ.
೧. ನಾನು ಹಾಗೆ ತಿಳಿದುಕೊಳ್ಳಲು ಕಾರಣ ಶಿವಪ್ರಕಾಶರು ಹೀಗೆ ಉಲ್ಲೇಖಿಸಿರುವದು: “ಕನಿಕರ ಹುಟ್ಟಿಸುವ ಮುಖಮುದ್ರೆಯ ವೇದಾಂತವನ್ನೇ ಭಾರತದ ಸಾರ ಸರ್ವಸ್ವವೆನ್ನುವರು ಆ ಕಾಲದ ಬಹಳ ಮಂದಿ ವಿದ್ವಾಂಸರು. ಅವರಲ್ಲಿ ಬಹುತೇಕ ಪ್ರಭೃತಿಗಳು ಭಾರತೀಯರೆಂದರೆ ಜೀವನೋತ್ಸಾಹ, ರಾಗರತಿಗಳಿಲ್ಲದ ಓಡುಗಾಲ ಯೋಗಿಗಳೆಂದು ಬಗೆದಿದ್ದರು. ಆದರೆ ವಿದ್ವತ್ತು, ರಸಗ್ರಾಹಿತ್ವ ಮತ್ತು ವ್ಯಕ್ತಿಗತ ಆಧ್ಯಾತ್ಮಿಕ ಸಾಧನೆಗಳ ತ್ರಿವೇಣಿಸಂಗಮವಾಗಿದ್ದ ದೆನಿಲೋ ಒತ್ತು ನೀಡಿದ್ದು ಭಾರತೀಯರ ರಸವಿಮುಖಿಯಾದ ಸಮಣಪಂಥೀಯ ಅಧ್ಯಾತ್ಮವಾದಕ್ಕಲ್ಲ, ಐಂದ್ರಿಕ ಜಗತ್ತಿಗೆ ತನ್ನನ್ನು ಪೂರ್ಣವಾಗಿ ತೆರೆದುಕೊಂಡು ಹಾಕುವ ಪ್ರತಿಯೊಂದು ತುತ್ತನ್ನೂ ಬಿಂದುವಾಗಿ ಮಾಡಿಕೊಂಡ ಶೈವ-ಶಾಕ್ತರ ಪೂರ್ಣಾದ್ವೈತಕ್ಕೆ.”








